Rayara Aradhane 2024: ನಾಳೆಯಿಂದ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ; ಗುರುಗಳ ಜೀವನ ಹೇಗಿತ್ತು, ಸಂದೇಶ ಏನಾಗಿತ್ತು? - Vistara News

ಧಾರ್ಮಿಕ

Rayara Aradhane 2024: ನಾಳೆಯಿಂದ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ; ಗುರುಗಳ ಜೀವನ ಹೇಗಿತ್ತು, ಸಂದೇಶ ಏನಾಗಿತ್ತು?

ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳು ಬೃಂದಾವನವನ್ನು (Rayara Aradhane 2024) ಪ್ರವೇಶಿಸಿರುವ ದಿನವನ್ನು ಆರಾಧನಾ ಮಹೋತ್ಸವವಾಗಿ (Raghavendra Aradhana Mahotsava) ಆಚರಿಸಲಾಗುತ್ತದೆ. ದೇಶ ವಿದೇಶಗಳಲ್ಲಿ ಈ ಬಾರಿ ಗುರುಗಳ 353ನೇ ಆರಾಧನಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಗುರುಗಳ ಆರಾಧನೆಯು ಹೆಚ್ಚಿನ ಮಠಗಳು ಮತ್ತು ಸಂಸ್ಥೆಗಳಲ್ಲಿ ಪೂರ್ವಾರಾಧನೆಯಿಂದ ಪ್ರಾರಂಭವಾಗುತ್ತದೆ. ಆಗಸ್ಟ್ 20ರಂದು ಪೂರ್ವಾರಾಧನೆ, 21ರಂದು ಮಧ್ಯ ಆರಾಧನೆ ಮತ್ತು 22ರಂದು ಉತ್ತರಾರಾಧನೆ ನಡೆಯಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Rayara Aradhane 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂತ್ರಾಲಯ ಗುರು (Mantralaya guru) ರಾಘವೇಂದ್ರ ಸ್ವಾಮಿಗಳ (Rayara Aradhane 2024) 353ನೇ ಆರಾಧನಾ ಮಹೋತ್ಸವ (Raghavendra Aradhana Mahotsava) ಮಂಗಳವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಗುರುಗಳು ಬೃಂದಾವನ ಪ್ರವೇಶಿಸಿದ ಈ ದಿನವನ್ನು ದೇಶ, ವಿದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆಗಸ್ಟ್ 20ರಂದು ಪೂರ್ವಾರಾಧನೆ, 21ರಂದು ಮಧ್ಯ ಆರಾಧನೆ ಮತ್ತು 22ರಂದು ಉತ್ತರಾರಾಧನೆ ನಡೆಯಲಿದೆ.

16ನೇ ಶತಮಾನದ ಸಂತರು ಮತ್ತು ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳು ವೈಷ್ಣವ ಧರ್ಮವನ್ನು ಪ್ರತಿಪಾದಿಸಿದ್ದು, ಮಧ್ವಾಚಾರ್ಯರ ದ್ವೈತ ತತ್ತ್ವವನ್ನು ಜನಪ್ರಿಯಗೊಳಿಸಿದರು. ಗುರುಗಳು ಬೃಂದಾವನ ಪ್ರವೇಶಿಸಿರುವ ಕ್ಷೇತ್ರವಾಗಿರುವ ಮಂತ್ರಾಲಯದಲ್ಲಿ ಗುರುಗಳ ಆರಾಧನೆ ಆಗಸ್ಟ್ 21ರಂದು ನಡೆಯಲಿದೆ.


ಗುರುಗಳ ಆರಾಧನೆ ಎಂದರೇನು?

ರಾಘವೇಂದ್ರ ಸ್ವಾಮಿ ಆರಾಧನೆ ಎಂದರೆ ರಾಯರು ಜೀವಂತವಾಗಿ ಬೃಂದಾವನವನ್ನು ಪ್ರವೇಶಿಸಿರುವ ದಿನ. ದೇಶ ವಿದೇಶಗಳಲ್ಲಿ ಆಚರಿಸಲ್ಪಡುವ ಗುರುಗಳ ಆರಾಧನೆಯು ಹೆಚ್ಚಿನ ಮಠಗಳು ಮತ್ತು ಸಂಸ್ಥೆಗಳಲ್ಲಿ ಪೂರ್ವಾರಾಧನೆಯಿಂದ ಪ್ರಾರಂಭವಾಗುತ್ತದೆ. ಇದನ್ನು ವಾರ್ಷಿಕವಾಗಿ ಶ್ರಾವಣ ಕೃಷ್ಣ ಪಕ್ಷ ದ್ವಿತೀಯ ಅಥವಾ ಕರ್ನಾಟಕದಲ್ಲಿ ಅನುಸರಿಸುವ ಸಾಂಪ್ರದಾಯಿಕ ಹಿಂದೂ ಚಂದ್ರನ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದಲ್ಲಿ ಚಂದ್ರನ ಕ್ಷೀಣಿಸುತ್ತಿರುವ ಎರಡನೇ ದಿನದಂದು ಆಚರಿಸಲಾಗುತ್ತದೆ.

ರಾಘವೇಂದ್ರ ಸ್ವಾಮಿಯು ವಿಷ್ಣುವಿನ ಶ್ರೇಷ್ಠ ಭಕ್ತರಾಗಿದ್ದರು. 1621 ರಿಂದ 1671ರವರೆಗೆ ಅವರು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಶ್ರೀ ಮಠದ ಮುಖ್ಯಸ್ಥರಾಗಿದ್ದರು. ತಮ್ಮ ಜೀವನದಲ್ಲಿ ಹಲವಾರು ಪವಾಡಗಳನ್ನು ನಡೆಸಿರುವ ಅವರು ಮಧ್ವಾಚಾರ್ಯರ ಬೋಧನೆಗಳ ಮೇಲೆ ಹಲವಾರು ಭಜನೆ ಮತ್ತು ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಗುರು ಶ್ರೀ ರಾಘವೇಂದ್ರ ಸ್ವಾಮಿಗಳು 1671 ರಲ್ಲಿ ಸಮಾಧಿಯನ್ನು ಪ್ರವೇಶಿಸದರು. ಆವರ ಸಮಾಧಿ ಸ್ಥಳವನ್ನು ಬೃಂದಾವನ ಎಂದು ಕರೆಯಲಾಗುತ್ತದೆ. ಇದು ಮಂತ್ರಾಲಯದಲ್ಲಿದೆ.


ಗುರುಗಳ ಜನನ ಕಥೆ

ಗುರು ರಾಘವೇಂದ್ರ ಸ್ವಾಮಿಗಳು 1595ರಲ್ಲಿ ತಮಿಳುನಾಡಿನ ಭುವನಗಿರಿಯಲ್ಲಿ ತಿಮ್ಮಣ್ಣ ಭಟ್ಟ ಹಾಗೂ ಗೋಪಿಕಾಂಬೆ ಅವರ ಎರಡನೇ ಮಗನಾಗಿ ಜನಿಸಿದರು. ಇವರ ಮೊದಲ ಹೆಸರು ವೆಂಕಣ್ಣ ಭಟ್ಟ. ಇವರನ್ನು ವೆಂಕಟನಾಥ, ವೆಂಕಟಾಚಾರ್ಯ ಎಂದೂ ಕರೆಯುತ್ತಾರೆ. ಇವರಿಗೆ ಗುರುರಾಜ ಎಂಬ ಹೆಸರಿನ ಸಹೋದರ ಹಾಗೂ ವೆಂಕಟಾಂಬೆ ಎಂಬ ಸಹೋದರಿಯೂ ಇದ್ದರು. ರಾಯರ ತಂದೆ, ತಾಯಿಗೆ ಮಕ್ಕಳಾಗದೇ ಆಗದೇ ಇದ್ದಾಗ ಅವರು ತಿರುಪತಿಗೆ ಹೋಗಿ ದೇವರನ್ನು ಬೇಡಿಕೊಂಡ ಮೇಲೆ ಮಕ್ಕಳು ಜನಿಸಿದರು.

ರಾಘವೇಂದ್ರ ಅವರ ಹುಟ್ಟಿಗೂ ಮೊದಲು ತಿಮ್ಮಣ್ಣ ಭಟ್ಟ ದಂಪತಿ ತಿರುಪತಿಗೆ ತೆರಳಿ ಭಗವಂತನ ಸೇವೆ ಮಾಡುತ್ತಾರೆ. ಆಗ ಅವರ ಕನಸಿನಲ್ಲಿ ಬಂದು ವೆಂಕಟೇಶ, ಒಂದು ಮಹಾನ್ ಆತ್ಮ ಹಾಗೂ ಖ್ಯಾತಿ ಶಿಖರವನ್ನೇರುವ ಮಗನನ್ನು ನೀಡುವುದಾಗಿ ಆಶೀರ್ವದಿಸುತ್ತಾನೆ. ತಿರುಪತಿ ದೇವರ ಅನುಗ್ರಹದಿಂದ ರಾಯರು ಜನಿಸಿದರು ಎನ್ನಲಾಗುತ್ತದೆ.

Raghavendra Aradhana Mahotsava
Raghavendra Aradhana Mahotsava


ಕಡು ಬಡತನದಲ್ಲೇ ಜೀವನ

ವೆಂಕಟನಾಥ (ರಾಘವೇಂದ್ರ) ಅವರಿಗೆ ಸರಸ್ವತಿ ಎಂಬಾಕೆಯೊಂದಿಗೆ ವಿವಾಹವಾಗುತ್ತದೆ. ಇವರಿಗೆ ಒಬ್ಬ ಮಗ ಜನಿಸುತ್ತಾನೆ. ಅವನಿಗೆ ಲಕ್ಷಣರಾಯ ಎಂದು ಹೆಸರಿಡಲಾಗುತ್ತದೆ. ನುರಿತ ಸಂಗೀತಗಾರ ಮತ್ತು ಶ್ರೇಷ್ಠ ವಿದ್ವಾಂಸರೂ ಆಗಿದ್ದ ವೆಂಕಟನಾಥ ಅವರು ತಮ್ಮ ಸೇವೆಗಳಿಗೆ ಎಂದಿಗೂ ಹಣ ಕೇಳುತ್ತಿರಲಿಲ್ಲ. ಇದರಿಂದ ಅವರು ಕಡು ಬಡತನದಲ್ಲೇ ಜೀವನ ಸಾಗಿಸಬೇಕಾಯಿತು. ಆದರೂ ಭಗವಂತನ ಮೇಲೆ ಅಚಲವಾದ ನಂಬಿಕೆ ಇಟ್ಟಿದ್ದರು.

ಬಳಿಕ ಅವರು ಶ್ರೀ ಸುಧೀಂದ್ರ ತೀರ್ಥರ ಆಶ್ರಯ ಪಡೆದರು. ಅವರ ಬಳಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರು.
ಅವರ ಜ್ಞಾನ ಮತ್ತು ವ್ಯಾಕರಣದ ಮೇಲಿನ ಪಾಂಡಿತ್ಯವನ್ನು ನೋಡಿ ಸಂತೋಷಗೊಂಡ ಸುಧೀಂದ್ರ ತೀರ್ಥರು ಅವರಿಗೆ “ಮಹಾಭಾಷ್ಯಾಚಾರ್ಯ” ಎಂಬ ಬಿರುದನ್ನು ನೀಡಿದರು.


ರಾಘವೇಂದ್ರ ಹೆಸರಿನ ವಿಶೇಷ

ಸುಧೀಂದ್ರ ತೀರ್ಥರು ಬೃಂದಾವನ ಪ್ರವೇಶಿಸಿದ ಮೇಲೆ ರಾಯರು ಮಠದ ಮುಖ್ಯಸ್ಥರಾದರು. ಇದಕ್ಕೂ ಮೊದಲು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದ ವೆಂಕಟನಾಥನ ಹೆಸರನ್ನು ರಾಘವೇಂದ್ರ ಎಂದು ಬದಲಾಯಿಸಲಾಗಿತ್ತು.
ರಾಘವೇಂದ್ರ ಎನ್ನುವುದು ಭಗವಾನ್ ರಾಮನ ಹೆಸರು. ಇದರ ಅರ್ಥ ‘ಪಾಪಗಳನ್ನು ನಾಶಪಡಿಸುವ ಮತ್ತು ಬಯಸಿದ ವಸ್ತುಗಳನ್ನು ಕೊಡುವವನು’ ಎಂಬುದಾಗಿದೆ.

ಬೃಂದಾವನ ಪ್ರವೇಶ

ರಾಘವೇಂದ್ರ ಸ್ವಾಮಿಗಳು 1671ರ ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ಜೀವಂತ ಸಮಾಧಿ ಸೇರುತ್ತಾರೆ. ಆ ಕಾರಣದಿಂದ ಪ್ರತಿ ವರ್ಷ ಈ ದಿನದಂದು ರಾಯರ ಆರಾಧನಾ ಮಹೋತ್ಸವವನ್ನು ಆಚರಿಸಲಾಗುತ್ತದೆ.

ಅಂತಿಮ ಸಂದೇಶ

ಸಮಾಧಿ ಪಡೆಯುವ ಮುನ್ನ ಗುರುಗಳು ತಮ್ಮ ನಿತ್ಯದ ವಿಧಿವಿಧಾನಗಳನ್ನು ಅನುಸರಿಸಿ ಭಕ್ತರಿಗೆ ತಮ್ಮ ಕೊನೆಯ ಪ್ರವಚನವನ್ನು ನೀಡಿದರು. ಈ ವೇಳೆ ಅವರು, ನಾನು ನನ್ನ ದೇಹವನ್ನು ಮಾತ್ರ ತ್ಯಜಿಸುತ್ತೇನೆ. ಎಲ್ಲರ ಯೋಗಕ್ಷೇಮವನ್ನು ಕಾಪಾಡಲು ಭೌತಿಕವಾಗಿ ಇರುತ್ತೇನೆ ಎಂದು ಹೇಳಿದ್ದರು.

ಮಂತ್ರಾಲಯದಲ್ಲಿ ಅದ್ಧೂರಿ ಆಚರಣೆ

ಗುರುಗಳ ಆರಾಧನೆಯನ್ನು ಮಂತ್ರಾಲಯದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಹಾ ಆರಾಧನೆ ಎಂದೂ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ, ಮಠದ ಸಂಕೀರ್ಣವನ್ನು ಹಾಗೂ ಮಂತ್ರಾಲಯ ಪಟ್ಟಣವನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಗುರುಗಳ ಮಹಾ ಆರಾಧನೆಯ ಅಂಗವಾಗಿ ನಡೆಯುವ ಮಹಾರಥೋತ್ಸವದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.


ವಿವಿಧ ಆಚರಣೆಗಳು

ಕಲಿಯುಗದ ಕಾಮಧೇನು ಎಂದೇ ಜಗತ್ಪ್ರಸಿದ್ಧಿ ಪಡೆದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ಭಾನುವಾರವೇ ಆರಂಭಗೊಂಡಿದ್ದು, ಆಗಸ್ಟ್ 24ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಯರ ಉತ್ಸವ ಮೂರ್ತಿಯ ಬಲಿ, ರಥೋತ್ಸವ, ಗೋ ಪೂಜೆ, ಗಜಪೂಜೆ ಮತ್ತಿತರ ಪೂಜೆಗಳು ನಡೆಯುತ್ತವೆ. ಇದಕ್ಕೂ ಮೊದಲು ಧ್ವಜಾರೋಹಣ ನಡೆಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಪೂರ್ವ ಆರಾಧನಾ ದಿನದಂದು ಸಿಂಹ ವಾಹನ ಸವಾರಿ, ಮಧ್ಯ ಆರಾಧನಾ ದಿನದಂದು ಮಹಾ ಪಂಚಾಮೃತ ಅಭಿಷೇಕ, ಉತ್ತರ ಆರಾಧನಾ ದಿನದಂದು ಸ್ವರ್ಣ ರಥೋತ್ಸವವನ್ನು ನಡೆಸಲಾಗುತ್ತದೆ. ಮಠವು ಪ್ರತಿ ವರ್ಷ ಸಮಾಜ ಸೇವೆ ಮಾಡಿದ ಗಣ್ಯರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಈ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನೂ ನಡೆಸಲಾಗುತ್ತದೆ.

ಇದನ್ನೂ ಓದಿ: Shravan 2024: ಶ್ರಾವಣ ಸೋಮವಾರದ ವಿಶೇಷತೆಗಳೇನು? ಶಿವನಿಗೆ ಏನು ಅರ್ಪಿಸಬೇಕು? ಏನನ್ನು ಅರ್ಪಿಸಬಾರದು?

ವಿಶೇಷತೆ

ರಾಘವೇಂದ್ರ ಸ್ವಾಮಿಯ ಬೃಂದಾವನಕ್ಕೆ ಪ್ರತಿ ವರ್ಷ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಅಧಿಕಾರಿಗಳು ಅರ್ಪಿಸುವ ಭಗವಾನ್ ವೆಂಕಟೇಶ್ವರ ಸ್ವಾಮಿಯ ಶೇಷವಸ್ತ್ರವನ್ನು ಅರ್ಪಿಸುವುದು ವಾಡಿಕೆಯಾಗಿದೆ. ತಿರುಪತಿ ಬಾಲಾಜಿ ದೇವಸ್ಥಾನದಿಂದ ಅಧಿಕಾರಿಗಳು ಮತ್ತು ಅರ್ಚಕರ ತಂಡ ತಂದ ಶೇಷವಸ್ತ್ರವನ್ನು ಮಠದ ಮುಖ್ಯಸ್ಥರು ಬೃಂದಾವನಕ್ಕೆ ಸ್ವೀಕರಿಸಿ ವಿಶೇಷ ಪಂಚಾಮೃತ ಅಭಿಷೇಕವನ್ನು ಮಾಡುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಭಾರತೀಯ ಸೋದರತೆಯ ಮಹಾ ಪರ್ವ – ರಕ್ಷಾ ಬಂಧನ

ರಾಜಮಾರ್ಗ ಅಂಕಣ: ಹಲವು ನೂಲಿನ ದಾರಗಳನ್ನು ಒಂದೇ ಗಟ್ಟಿ ದಾರದ ಮೂಲಕ ಬಂಧಿಸುವುದೇ ರಕ್ಷೆ. ಅಂದರೆ ಜಾತಿ, ವರ್ಣಬೇಧಗಳನ್ನು ಮೆಟ್ಟಿ ನಿಂತು ಇಡೀ ಹಿಂದೂಸಮಾಜವು ಒಗ್ಗಟ್ಟಾಗಿ ನಿಲ್ಲಬೇಕು ಎನ್ನುವುದು ಈ ರಕ್ಷಾಬಂಧನ ಹಬ್ಬದ ಅಲ್ಟಿಮೇಟ್ ಸಂದೇಶ.

VISTARANEWS.COM


on

raksha bandhan 2024 ರಾಜಮಾರ್ಗ ಅಂಕಣ
Koo

ಅದರ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಆಯಾಮ

:: ರಾಜೇಂದ್ರ ಭಟ್ ಕೆ.

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ನಾಡಿನ ಸಮಸ್ತ ಸೋದರ, ಸೋದರಿಯವರಿಗೆ ರಕ್ಷಾಬಂಧನ (Raksha bandhan) ಹಬ್ಬದ ಶುಭಾಶಯಗಳು. ಶ್ರಾವಣ ಪೌರ್ಣಮಿಯ ಈ ದಿನ ಪ್ರತಿಯೊಬ್ಬ ಸೋದರಿಯೂ ತನ್ನ ಸೋದರನಿಗೆ ರಕ್ಷೆ ಕಟ್ಟಿ ತನ್ನ ಮಾನ, ಪ್ರಾಣ ಮತ್ತು ಸ್ವಾಭಿಮಾನದ ರಕ್ಷಣೆ ಮಾಡು ಅಣ್ಣಾ ಎಂದು ವಿನಂತಿಸುವ ಹಬ್ಬವೇ ರಕ್ಷಾಬಂಧನ (Rakhi Festival 2024). ಅದನ್ನು ನಿಭಾಯಿಸಬೇಕಾದದ್ದು ಪ್ರತಿಯೊಬ್ಬ ಅಣ್ಣನ ಕರ್ತವ್ಯ.

ನಾವು ಆಚರಿಸುವ ಫಾದರ್ಸ್ ಡೇ, ಮದರ್ಸ್ ಡೇ, ಲವರ್ಸ್ ಡೇ ಇವೆಲ್ಲವೂ ಪಾಶ್ಚಾತ್ಯ ಅನುಕರಣೆಯಿಂದ ಬಂದ ಹಬ್ಬಗಳು. ಆದರೆ ರಕ್ಷಾಬಂಧನ (ಅಥವಾ ರಾಖೀ ಹಬ್ಬ) ಅಪ್ಪಟ ಭಾರತೀಯ ಸಂಸ್ಕೃತಿಯ ಹಬ್ಬ ಎಂಬ ಕಾರಣಕ್ಕೆ ಅದು ನಮಗೆ ಹೆಚ್ಚು ಆಪ್ತವಾಗಬೇಕು. ಇಲ್ಲಿ ಸೋದರತೆಯು ರಕ್ತ ಸಂಬಂಧವನ್ನು ಮೀರಿದ್ದು, ಜಾತಿ, ಮತ, ಭಾಷೆ, ರಾಷ್ಟ್ರಗಳ ಸೀಮೆಗಳನ್ನು ಮೀರಿದ್ದು ಎನ್ನುವುದು ನೂರಾರು ಬಾರಿ ಸಾಬೀತಾಗಿದೆ.

ಪುರಾಣಗಳ ಹಿನ್ನೆಲೆ

ಮಹಾಭಾರತದಲ್ಲಿ ಯಾವುದೋ ಸನ್ನಿವೇಶದಲ್ಲಿ ಯುದ್ಧ ಮಾಡುತ್ತಿರುವಾಗ ಕೃಷ್ಣ ದೇವರ ಬೆರಳಿಗೆ ಗಾಯವಾಗಿ ರಕ್ತ ಹರಿಯುತ್ತದೆ. ಆಗ ಸಮೀಪದಲ್ಲಿ ಇದ್ದ ದ್ರೌಪದಿ ಆತಂಕಗೊಂಡು ತನ್ನ ಕೇಸರಿ ಬಣ್ಣದ ಸೀರೆಯ ಸೆರಗನ್ನು ಹರಿದು ಅದನ್ನು ಕೃಷ್ಣ ದೇವರ ಬೆರಳಿಗೆ ಕಟ್ಟಿದ್ದೇ ರಕ್ಷೆ ಆಯಿತು. ಕೃಷ್ಣ ದ್ರೌಪದಿಯನ್ನು ಆ ಕ್ಷಣಕ್ಕೆ ಸೋದರಿಯಾಗಿ ತೆಗೆದುಕೊಳ್ಳುತ್ತಾನೆ. ಮುಂದೆ ಕೌರವನ ಆಸ್ಥಾನದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಪ್ರಸಂಗ ಬಂದಾಗ ಅದೇ ಕೃಷ್ಣನು ದ್ರೌಪದಿಗೆ ಅಕ್ಷಯಾಂಬರವನ್ನು ನೀಡಿ ತನ್ನ
ಸೋದರತ್ವದ ಋಣವನ್ನು ತೀರಿಸಿದನು ಅನ್ನುವುದು ಮಹಾಭಾರತದ ಕಥೆ. ಹಾಗೆಯೇ ಮುಂದೆ ದ್ರೌಪದಿಯು ಆಸೆ ಪಟ್ಟಂತೆ ಕೃಷ್ಣನು ಕುರುಕ್ಷೇತ್ರದ ಯುದ್ಧವನ್ನು ಪೂರ್ತಿ ಮಾಡಿಕೊಟ್ಟದ್ದೂ ತನ್ನ ಸೋದರಿಯ ಮೇಲಿನ ಪ್ರೀತಿಯಿಂದ.

ಬಲಿ ಚಕ್ರವರ್ತಿಗೆ ಲಕ್ಷ್ಮಿದೇವಿಯು ರಕ್ಷೆ ಕಟ್ಟಿದ್ದು ಯಾಕೆ?

ಮಹಾಪರಾಕ್ರಮಿಯಾದ ದಾನವ ಬಲಿ ಚಕ್ರವರ್ತಿಗೆ ಲಕ್ಷ್ಮಿಯು ಕೇಸರಿ ಬಣ್ಣದ ನೂಲಿನ ದಾರವನ್ನು ಕಟ್ಟಿ ಕೈಮುಗಿದು ನಿಲ್ಲುತ್ತಾಳೆ. ಆಗ ಬಲಿಯು ಕರಗಿ ಏನಾಗಬೇಕು ತಂಗಿ? ಎಂದು ಕೇಳುತ್ತಾನೆ. ಆಗ ಲಕ್ಷ್ಮಿಯು ನನ್ನ ಗಂಡ ಮಹಾವಿಷ್ಣುವು ಶಾಪಗ್ರಸ್ತನಾಗಿ ನಿನ್ನ ದ್ವಾರಪಾಲಕ ಆಗಿದ್ದಾನೆ. ಆತನನ್ನು ಬಿಡುಗಡೆ ಮಾಡಿ ಅಣ್ಣ ಎನ್ನುತ್ತಾಳೆ. ಒಂದು ಕ್ಷಣವೂ ವಿಳಂಬ ಮಾಡದೆ ವಿಷ್ಣುವನ್ನು ಬಿಡುಗಡೆ ಮಾಡಿ ಲಕ್ಷ್ಮಿಯ ಜೊತೆಗೆ ವೈಕುಂಠಕ್ಕೆ ಕಳುಹಿಸಿಕೊಟ್ಟನು ಅನ್ನುವುದು ಇನ್ನೊಂದು ಉಲ್ಲೇಖ. ಇಂತಹ ನೂರಾರು ಉಲ್ಲೇಖಗಳು ನಮ್ಮ ಪುರಾಣಗಳಲ್ಲಿ ದೊರೆಯುತ್ತವೆ.

ರಕ್ಷೆಯ ಐತಿಹಾಸಿಕ ಹಿನ್ನೆಲೆ

ಭಾರತದ ಮೇಲೆ ಅಲೆಕ್ಸಾಂಡರ್ ದಂಡೆತ್ತಿ ಬಂದಾಗ ಅಳುಕಿದ್ದು ವಾಯುವ್ಯದ ದೊರೆ ಪುರೂರವನ ಬಲಿಷ್ಠ ಸೇನೆಯನ್ನು ನೋಡಿ. ಆಗ ಅಲೆಕ್ಸಾಂಡರನ ಪತ್ನಿ ರೋಕ್ಸಾನಾ ಪುರೂರವನ ಬಳಿಗೆ ಬಂದು ರಕ್ಷೆಯನ್ನು ಕಟ್ಟಿ ಪತಿಯ ಪ್ರಾಣ ಭಿಕ್ಷೆಯನ್ನು ಬೇಡಿದ್ದಳು. ಮುಂದೆ ಯುದ್ಧ ನಡೆದು ಅಲೆಕ್ಸಾಂಡರ್ ಸೋತು ಧರಾಶಾಯಿಯಾದಾಗ ಅದೇ ಪುರೂರವ ಆತನ ಪ್ರಾಣರಕ್ಷೆ ಮಾಡಿ ತನ್ನ ಸೋದರನ ಕರ್ತವ್ಯವನ್ನು ನಿಭಾಯಿಸಿದ್ದನು!

ಅದೇ ರೀತಿ ರಜಪೂತ ರಾಣಿ ಕರ್ಣಾವತಿಯು ತನ್ನ ಗಂಡನನ್ನು ಕಳೆದುಕೊಂಡರೂ ಧೃತಿಗೆಡದೆ ಮೇವಾಡವನ್ನು ಅಳುತ್ತಿದ್ದಳು. ಆಗ ಗುಜರಾತ್ ದೊರೆ ಬಹಾದ್ದೂರ್ ಶಾ ದುರಾಸೆಯಿಂದ ಮೇವಾಡದ ಮೇಲೆ ದಂಡೆತ್ತಿಕೊಂಡು ಬರುತ್ತಾನೆ. ಆಗ ಅಭಯವನ್ನು ಕೇಳಿ ರಾಣಿಯು ಪತ್ರವನ್ನು ಬರೆದು ರಕ್ಷೆ ಕಳುಹಿಸಿದ್ದು ಮೊಘಲ್ ದೊರೆ ಹುಮಾಯೂನನಿಗೆ. ಅದಕ್ಕೆ ಗೌರವ ಕೊಟ್ಟು ಹುಮಾಯೂನ್ ಆಕೆಯ ರಕ್ಷಣೆಗೆ ಓಡೋಡಿ ಬಂದ ಘಟನೆಯು ಇತಿಹಾಸದಲ್ಲಿ ಇದೆ.

Raksha Bandhan 2024
Raksha Bandhan 2024

ಬಂಗಾಳವನ್ನು ಒಗ್ಗೂಡಿಸಿದ ರಕ್ಷೆ!

1905ರಲ್ಲಿ ಬ್ರಿಟಿಷರು ಬಲಿಷ್ಠ ಬಂಗಾಳ ಪ್ರಾಂತ್ಯವನ್ನು ಒಡೆದು ಭಾರತೀಯರ ಐಕ್ಯತೆಯನ್ನು ಒಡೆದರು. ಆಗ ಹಿಂದೂ ಮುಸಲ್ಮಾನರು ಬೀದಿಗೆ ಇಳಿದು ಪರಸ್ಪರ ರಕ್ತ ಚೆಲ್ಲುವ ಕೆಲಸ ಆರಂಭ ಆಯಿತು. ಆಗ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರರು ಶ್ರಾವಣ ಹುಣ್ಣಿಮೆಯಂದು ಹಿಂದೂ ಮುಸಲ್ಮಾನರು ಪರಸ್ಪರ ರಕ್ಷೆಯನ್ನು ಕಟ್ಟಿ ಸೋದರತೆಯ ಸಂದೇಶವನ್ನು ಸಾರಬೇಕು ಎಂದು ಕರೆನೀಡಿದರು. ಬ್ರಿಟಿಷ್ ಸರಕಾರ ಈ ಆಚರಣೆಯನ್ನು ತಡೆಯಲು ಶತಪ್ರಯತ್ನ ಮಾಡಿದರೂ ಇಡೀ ಬಂಗಾಳ ರಕ್ಷಾಬಂಧನದ ಹಬ್ಬ ಆಚರಣೆ ಮಾಡಿ ಐಕ್ಯತೆಯ ಸಂದೇಶವನ್ನು ಸಾರಿತು!

ಕೇಸರಿ ಬಣ್ಣವು ತ್ಯಾಗದ ಸಂಕೇತ, ರಕ್ಷೆಯು ಐಕ್ಯತೆಯ ಸಂಕೇತ

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಕೇಸರಿ ಬಣ್ಣವು ತ್ಯಾಗ ಮತ್ತು ಬಲಿದಾನದ ಸಂಕೇತ. ಹಿಂದೆ ಋಷಿಮುನಿಗಳು ಧರಿಸುತ್ತಿದದ್ದು ಕಾವಿ ( ಕೇಸರಿ) ಬಣ್ಣದ ದಿರಿಸು. ಅವರು ಮಾಡುತ್ತಿದ್ದ ಯಜ್ಞದ ಅಗ್ನಿಯ ಬಣ್ಣ ಕೇಸರಿ. ಸೂರ್ಯ ಬೆಳಿಗ್ಗೆ ಉದಯಿಸುವಾಗ, ಸಂಜೆ ಮುಳುಗುವಾಗ ಅದೇ ಕೇಸರಿ ಬಣ್ಣವನ್ನು ಪಡೆಯುತ್ತಾನೆ. ಇಲ್ಲಿನ ಮಣ್ಣಿನ ಬಣ್ಣವೂ ಕೇಸರಿ.

ಹಾಗೆಯೇ ಹಲವು ನೂಲಿನ ದಾರಗಳನ್ನು ಒಂದೇ ಗಟ್ಟಿ ದಾರದ ಮೂಲಕ ಬಂಧಿಸುವುದೇ ರಕ್ಷೆ. ಅಂದರೆ ಜಾತಿ, ವರ್ಣಬೇಧಗಳನ್ನು ಮೆಟ್ಟಿ ನಿಂತು ಇಡೀ ಹಿಂದೂಸಮಾಜವು ಒಗ್ಗಟ್ಟಾಗಿ ನಿಲ್ಲಬೇಕು ಎನ್ನುವುದು ಈ ರಕ್ಷಾಬಂಧನ ಹಬ್ಬದ ಅಲ್ಟಿಮೇಟ್ ಸಂದೇಶ.

ಬದಲಾದ ಸಾಮಾಜಿಕ ಘಟ್ಟದಲ್ಲಿ ರಕ್ಷೆ

ಸ್ತ್ರೀಯು ದುರ್ಬಲಳು ಅಥವಾ ಪರಾಧೀನಳು ಎಂದು ಭಾವಿಸಿದ ಕಾಲ ಒಂದಿತ್ತು. ಈಗ ಕಾಲವು ಸಂಪೂರ್ಣ ಬದಲಾವಣೆ ಆಗಿದೆ. ಈಗ ಸ್ತ್ರೀ ಸ್ವಯಂಭೂ ಶಕ್ತಿಸಂಪನ್ನೆಯಾಗಿ ಇರುವ ಈ ಆಧುನಿಕ ಕಾಲದಲ್ಲಿಯೂ ಆಕೆ ತನ್ನ ಮಾನ, ಪ್ರಾಣ, ಸ್ವಾಭಿಮಾನಗಳ ರಕ್ಷಣೆಗಾಗಿ ರಕ್ಷೆಯನ್ನು ಕಟ್ಟುತ್ತಾಳೆ ಎನ್ನುವುದಕ್ಕಿಂತ ಆ ರಕ್ಷೆಯು ಸೋದರರ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸಗಳ ಪ್ರತೀಕವಾಗಿ ಬದಲಾಗಿದೆ. ಪ್ರತೀ ವರ್ಷವೂ ಈ ಹಬ್ಬ ಬಂದಾಗ ತನ್ನ ಅಣ್ಣನನ್ನು (ಇಲ್ಲಿ ಮತ್ತೆ ರಕ್ತಸಂಬಂಧ ಮೀರಿದ್ದು ಕೂಡ ಹೌದು) ಹುಡುಕಿಕೊಂಡು ಬಂದು ರಕ್ಷೆ ಕಟ್ಟಿ ,ಆರತಿ ಎತ್ತಿ, ಸಿಹಿ ತಿನ್ನಿಸಿ ಇಡೀ ವರ್ಷ ಅಣ್ಣಾ ಎಂದು ಬಾಯ್ತುಂಬ ಕರೆಯುವ ತಂಗಿಯರ ಸಂಭ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗೆಯೇ ಅಂಚೆಯ ಮೂಲಕ ರಕ್ಷೆ ಕಳುಹಿಸಿಕೊಟ್ಟು ಕೂಡ ಅಣ್ಣನ ನೆನಪು ಮಾಡುವ ಸೋದರಿಯರು ಇದ್ದಾರೆ.

ಹಾಗೆಯೇ ಅವಳು ನನ್ನ ತಂಗಿ, ಇವಳು ನನ್ನ ತಂಗಿ ಕಣೋ ಎಂದು ಜಂಬದಲ್ಲಿ ಹೇಳಿಕೊಂಡು ಅಂಗೈ ತುಂಬಾ ಕೇಸರಿಯ ರಕ್ಷೆಗಳನ್ನು ಕಟ್ಟಿಕೊಂಡು ಸಂಭ್ರಮಿಸುವ ಅಣ್ಣಂದಿರಿಗೇನೂ ಕಡಿಮೆ ಇಲ್ಲ!

ಬದಲಾದ ಕಾಲಘಟ್ಟದಲ್ಲಿ ಕೂಡ ಈ ರಕ್ಷಾಬಂಧನದ ಹಬ್ಬವು ಹಿಂದೂ ಸಂಸ್ಕೃತಿಯನ್ನು ಜಾಗೃತಿ ಮಾಡುತ್ತದೆ ಎಂಬ ಕಾರಣಕ್ಕೆ ಪ್ರಾಮುಖ್ಯತೆ ಪಡೆಯುತ್ತದೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕನ್ನಡ ಚಿತ್ರರಂಗದ ಬಂಗಾರದ ಹುಡುಗ ರಿಶಬ್ ಶೆಟ್ಟಿ

Continue Reading

Latest

Raksha Bandhan 2024: ಇಂದು ರಕ್ಷಾ ಬಂಧನ; ಈ ಹಬ್ಬದ ವಿಶೇಷವೇನು?

ರಕ್ಷಾ ಬಂಧವನ್ನು ‘ರಾಖಿ ಹಬ್ಬ’, ‘ಅಣ್ಣ ತಂಗಿ’ ಹಬ್ಬ ಎಂದು ಕರೆಯುತ್ತಾರೆ. ರಕ್ಷಾಬಂಧನವು (Raksha Bandhan 2024) ಭಾರತದಲ್ಲಿ ಒಂದು ವಿಶೇಷ ಹಬ್ಬ. ಇದು ಸಹೋದರ ಸಹೋದರಿಯರ ನಡುವಿನ ಬಂಧವನ್ನು ಗಟ್ಟಿಗೊಳಿಸುವಂತಹ ಹಬ್ಬವಾಗಿದೆ. ಈ ಬಾರಿ ರಕ್ಷಾಬಂಧನವನ್ನು ಸೋಮವಾರ, ಆಗಸ್ಟ್ 19ರಂದು ಆಚರಿಸಲಾಗುತ್ತದೆ. ಹಾಗಾಗಿ ಈ ಹಬ್ಬದ ಮುಹೂರ್ತ, ಮಹತ್ವ, ಹಿನ್ನಲೆ ಹಾಗೂ ಆಚರಣೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

VISTARANEWS.COM


on

Raksha Bandhan 2024
Koo


ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವನ್ನು ನೂಲು ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ದಿನ ರಕ್ಷಾಬಂಧನವನ್ನು ಆಚರಿಸುತ್ತಾರೆ. ಈ ರಕ್ಷಾ ಬಂಧವನ್ನು ‘ರಾಖಿ ಹಬ್ಬ’, ‘ಅಣ್ಣ ತಂಗಿ’ ಹಬ್ಬ ಎಂದೂ ಕರೆಯುತ್ತಾರೆ. ರಕ್ಷಾಬಂಧನವು ಭಾರತದಲ್ಲಿ ಒಂದು ವಿಶೇಷ ಹಬ್ಬವಾಗಿದ್ದು, ಇದು ಸಹೋದರ ಸಹೋದರಿಯರ ನಡುವಿನ ಬಂಧವನ್ನು ಗಟ್ಟಿಗೊಳಿಸುವಂತಹ ಹಬ್ಬವಾಗಿದೆ. ಈ ಬಾರಿ ರಕ್ಷಾಬಂಧನವನ್ನು (Raksha Bandhan 2024) ಸೋಮವಾರ, ಆಗಸ್ಟ್ 19ರಂದು ಆಚರಿಸಲಾಗುತ್ತದೆ. ಹಾಗಾಗಿ ಈ ಹಬ್ಬದ ಮುಹೂರ್ತ, ಮಹತ್ವ, ಹಿನ್ನೆಲೆ ಹಾಗೂ ಆಚರಣೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

Raksha Bandhan 2024
Raksha Bandhan 2024

ರಾಖಿ ಕಟ್ಟಲು ಶುಭ ಮುಹೂರ್ತ ಯಾವುದು?

ಸಮಯ ಬಹಳ ಮುಖ್ಯವಾಗುತ್ತದೆ. ಈ ಬಾರಿ ರಾಖಿ ಮುಹೂರ್ತವು ಬೆಳಗ್ಗೆ 5.50ಕ್ಕೆ ಪ್ರಾರಂಭವಾಗಿ ಸಂಜೆ 6:58ವರೆಗೆ ಇರುತ್ತದೆ. ದೇವರ ಆಶೀರ್ವಾದ ಪಡೆಯಲು ಮತ್ತು ನಿಮ್ಮ ಇಷ್ಟಾರ್ಥಗಳು ಈಡೇರಲು ಈ ಸಮಯದಲ್ಲಿ ರಾಖಿ ಕಟ್ಟುವಂತೆ ಪಂಡಿತರು ಸಲಹೆ ನೀಡಿದ್ದಾರೆ.

Raksha Bandhan 2024
Raksha Bandhan 2024

ರಾಖಿ ಹಬ್ಬದ ಹಿನ್ನೆಲೆ ಏನು?

ರಕ್ಷಾ ಬಂಧನವನ್ನು ಪುರಾತನ ಕಾಲದಿಂದಲೂ ಆಚರಿಸುತ್ತ ಬರಲಾಗಿದೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಹಬ್ಬವು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಅದರೊಂದಿಗೆ ಅನೇಕ ದಂತಕಥೆಗಳನ್ನು ಹೊಂದಿದೆ.

Raksha Bandhan 2024
Raksha Bandhan 2024

ರಕ್ಷಾ ಬಂಧನಕ್ಕೆ ಸಂಬಂಧಿಸಿದ ಒಂದು ಜನಪ್ರಿಯ ಕಥೆ ಮಹಾಭಾರತದ ಕೃಷ್ಣ-ದ್ರೌಪದಿಯಿಂದ ಬಂದಿದೆ ಎನ್ನಲಾಗಿದೆ. ಶ್ರೀಕೃಷ್ಣನು ಕಬ್ಬಿನ ತುಂಡನ್ನು ಕತ್ತರಿಸುವಾಗ ಅವನ ಬೆರಳಿಗೆ ಗಾಯವಾಯಿತು. ಆಗ ಪಾಂಡವರ ಪತ್ನಿ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಆತನನ್ನು ರಕ್ಷಿಸಲು ಬೆರಳಿಗೆ ಸುತ್ತಿದಳು. ಆಗ ಕೃಷ್ಣನು ಅವಳಲ್ಲಿ ಸಹೋದರ ಪ್ರೇಮವನ್ನು ಕಂಡು ಅಗತ್ಯದ ಸಮಯದಲ್ಲಿ ಅವಳನ್ನು ಕಾಪಾಡುವುದಾಗಿ ಪ್ರತಿಜ್ಞೆ ಮಾಡಿದನು. ಅದರಂತೆ ರಕ್ಷಾ ಬಂಧನವನ್ನು ಅಣ್ಣ-ತಂಗಿ ಹಬ್ಬವೆಂದು ರಾಖಿ ಕಟ್ಟುವ ಮೂಲಕ ಆಚರಿಸಲಾಗುತ್ತದೆ.

Raksha Bandhan 2024
Raksha Bandhan 2024

ಹಾಗೇ ಇನ್ನೊಂದು ಇತಿಹಾಸದ ಕಥೆಯಲ್ಲಿ ಚಿತ್ತೋರಿನ ರಾಣಿ ಕರ್ಣಾವತಿ ಆಕ್ರಮಣಕಾರರ ವಿರುದ್ಧ ಸಹಾಯವನ್ನು ಕೋರಿ ಚಕ್ರವರ್ತಿ ಹುಮಾಯೂನ್‌ಗೆ ರಾಖಿಯನ್ನು ಕಳುಹಿಸಿದಳು. ಆಗ ಹುಮಾಯೂನ್ ತಕ್ಷಣವೇ ಅವಳ ಸಹಾಯಕ್ಕೆ ಬಂದನು ಎನ್ನಲಾಗಿದೆ. ರಾಖಿ ಮೂಲಕ ಅವರ ನಡುವೆ ಸಹೋದರ ಸಹೋದರಿಯ ಸಂಬಂಧ ಬೆಳೆಯಿತು ಎನ್ನಲಾಗಿದೆ.

Raksha Bandhan 2024
Raksha Bandhan 2024

ರಾಖಿ ಹಬ್ಬದ ಆಚರಣೆ

ರಕ್ಷಾ ಬಂಧನ ಸಹೋದರ-ಸಹೋದರಿಯರ ಪ್ರೀತಿಯ ಹಬ್ಬ. ಈ ದಿನ ಸಹೋದರಿಯರು ತಮ್ಮ ಸಹೋದರ ಒಳ್ಳೆಯದಾಗಲೆಂದು ಹಾರೈಸುತ್ತ ಅವರಿಗೆ ಆರತಿ ಬೆಳಗಿ ಕುಂಕುಮ ಹಚ್ಚಿ ಸಿಹಿ ತಿನ್ನಿಸಿ ಅವರ ಕೈಯ ಮಣಿಕಟ್ಟಿನ ಮೇಲೆ ತಮ್ಮ ಪ್ರೀತಿ ಮತ್ತು ಸ್ನೇಹದ ಸಂಕೇತವಾದ ರಾಖಿಯನ್ನು ಕಟ್ಟಿ ದೀರ್ಘಾಯುಷ್ಯವನ್ನು ಹಾರೈಸಿ ಆಶೀರ್ವಾದ ಪಡೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರ ಸಹೋದರಿಯನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ಅಲ್ಲದೇ ಸಹೋದರರು ತಮ್ಮ ಸಹೋದರಿಯರಿಗೆ ಅವರ ಪ್ರೀತಿಯ ಸಂಕೇತವಾಗಿ ಅವರಿಗಿಷ್ಟವಾದ ಉಡುಗೊರೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಕೊನೆಗೆ ಕುಟುಂಬಗಳೊಂದಿಗೆ ಹಬ್ಬದ ಊಟವನ್ನು ಸವಿಯುತ್ತಾರೆ. ಆದರೆ ಕೆಲವೊಮ್ಮೆ ದೂರ ದೂರ ಇರುವ ಸಹೋದರ ಸಹೋದರಿಯರು ಭೇಟಿ ಆಗಲು ಸಾಧ್ಯವಾಗದಿದ್ದಾಗ ಅವರಿಗೆ ರಾಖಿಯನ್ನು ಕಳುಹಿಸಿಕೊಡುತ್ತಾರೆ.

ರಾಖಿ ಹಬ್ಬದ ಮಹತ್ವ ಏನು?

ರಕ್ಷಾಬಂಧನವು ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ಇದು ಒಡಹುಟ್ಟಿದವರ ನಡುವೆ ಪ್ರೀತಿ ಮತ್ತು ಬೆಂಬಲವನ್ನು ಹೆಚ್ಚಿಸುತ್ತದೆ. ಸಹೋದರಿಯರು ತಮ್ಮ ಸಹೋದರರ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸಿದರೆ ಸಹೋದರರು ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ. ರಕ್ಷಾಬಂಧನ ಯುಗಯುಗಾಂತರಗಳಿಂದ ಬಂದಿರುವ ಒಂದು ಸಾಂಪ್ರದಾಯಿಕ ಹಬ್ಬವಾಗಿದೆ. ಇದು ಕುಟುಂಬದ ನಡುವೆ ಪ್ರೀತಿ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ಮೂಡಿಸುತ್ತದೆ.

ಇದನ್ನೂ ಓದಿ: ಅಪಹರಣಕಾರನಿಂದ ಪುಟ್ಟ ಮಗುವನ್ನು ರಕ್ಷಿಸಿದ ಸಾಕು ನಾಯಿ! ನಾಯಿಯ ಸಾಹಸದ ವಿಡಿಯೊ ನೋಡಿ

ಒಟ್ಟಾರೆ ಈ ವರ್ಷದಲ್ಲಿ ಬರುವ ಈ ರಕ್ಷಾಬಂಧನವನ್ನು ನಿಮ್ಮ ಸಹೋದರ ಸಹೋದರಿಯರ ಜೊತೆ ವಿಜೃಂಭಣೆಯಿಂದ ಆಚರಿಸಿ ನಿಮ್ಮ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿ. ನಿಮ್ಮ ಸಹೋದರ-ಸಹೋದರಿ ಪ್ರೇಮ ದೀರ್ಘಕಾಲದವರೆಗೆ ಒಳ್ಳೆ ರೀತಿಯಲ್ಲಿ ಇರಲೆಂದು ದೇವರಲ್ಲಿ ಪ್ರಾರ್ಥಿಸಿ.

Continue Reading

ಧಾರ್ಮಿಕ

Vastu Tips: ಮಲಗುವ ದಿಕ್ಕು ಸತಿಪತಿ ನಡುವಿನ ವಿರಸಕ್ಕೆ ಕಾರಣ ಆಗಬಹುದು!

ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ವಾಸ್ತು ನಿಯಮಗಳಲ್ಲಿ (Vastu Tips) ಮುಖ್ಯವಾಗಿ ಸತಿಪತಿಯ ಸಂಬಂಧ ಸುಧಾರಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ. ಕೆಲವು ವಾಸ್ತು ದೋಷಗಳು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ದೂರವನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

By

Vastu Tips
Koo

ವಾಸ್ತು ಮನೆಗೆ (vastu for home) ಎಷ್ಟು ಮುಖ್ಯವೋ ಅಷ್ಟೇ ನಮ್ಮ ಆಚಾರ, ವಿಚಾರದಲ್ಲಿ ಕೂಡ ಇರುವುದು ಮುಖ್ಯ. ಹಿರಿಯರು ಹೇಳುತ್ತಾರೆ ಎಂಬ ಮಾತ್ರಕ್ಕೆ ಅನುಸರಿಸುವುದಕ್ಕಿಂತ ಅದರ ಬಗ್ಗೆ ತಿಳಿದುಕೊಂಡು ಪಾಲಿಸುವುದರಲ್ಲಿ ಹೆಚ್ಚು ಅರ್ಥವಿದೆ. ನಮ್ಮ ಆಚಾರ ವಿಚಾರದಲ್ಲಿ ಕೆಲವೊಂದು ಶಿಸ್ತು ಬದ್ದ ನಿಯಮಗಳನ್ನು (Vastu Tips) ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ (positivity) ತುಂಬಿಕೊಳ್ಳುತ್ತದೆ. ಕೆಲವೊಂದು ವಾಸ್ತು ದೋಷಗಳು (Vastu Dosha) ಪರಿಹಾರವಾಗುತ್ತದೆ.

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರವು ಬಹಳ ಮುಖ್ಯವಾಗಿ ಆಚರಣೆಯಲ್ಲಿದೆ. ಯಾಕೆಂದರೆ ಇದು ಭಾರತೀಯರ ಪ್ರಾಚೀನ ವಿಜ್ಞಾನವು ಹೌದು. ಇದನ್ನು ಜೀವನದಲ್ಲಿ ಪಾಲಿಸುವುದರಿಂದ ನಮ್ಮ ಸುತ್ತಮುತ್ತಲಿನ ನಕಾರಾತ್ಮಕತೆಯನ್ನು ದೂರ ಮಾಡಬಹುದು ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬಹುದು.

ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ವಾಸ್ತು ನಿಯಮಗಳಲ್ಲಿ ಮುಖ್ಯವಾಗಿ ಸತಿಪತಿಯ ಸಂಬಂಧ ಸುಧಾರಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ. ಕೆಲವು ವಾಸ್ತು ದೋಷಗಳು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ದೂರವನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ.


ಮಲಗುವ ಕೋಣೆಯ ವ್ಯವಸ್ಥೆ ಮತ್ತು ಮಲಗುವ ದಿಕ್ಕು ಕೂಡ ವೈವಾಹಿಕ ಸಂಬಂಧದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಮಲಗುವ ದಿಕ್ಕು

ಮಲಗುವ ದಿಕ್ಕು ಸತಿ ಪತಿಯ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಮುಖ್ಯಸ್ಥನು ತನ್ನ ತಲೆಯನ್ನು ದಕ್ಷಿಣಕ್ಕೆ ಮುಖ ಮಾಡಿ ಮಲಗಬೇಕು. ಆದರೆ ಪಾದಗಳು ಉತ್ತರದ ಕಡೆಗೆ ಇರಬೇಕು. ಈ ವ್ಯವಸ್ಥೆಯು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

Vastu Tips
Vastu Tips


ಪ್ರಯೋಜನ

ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದು ಸಂಬಂಧಗಳಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಸಂಪತ್ತು ಮತ್ತು ಸಕಾರಾತ್ಮಕತೆಯ ನಿರಂತರ ಹರಿವನ್ನು ಖಾತ್ರಿಗೊಳಿಸುತ್ತದೆ.

ಇದನ್ನೂ ಓದಿ: Mahabharat Story: ಕೌರವರೊಂದಿಗೆ ಸಂಧಾನಕ್ಕೆ ಹೋದ ಶ್ರೀ ಕೃಷ್ಣ ಪಾಂಡವರಿಗಾಗಿ ಕೇಳಿದ 5 ಗ್ರಾಮಗಳು ಈಗ ಎಲ್ಲಿವೆ ಗೊತ್ತೆ?


ಆಧ್ಯಾತ್ಮಿಕ ಮತ್ತು ಲೌಕಿಕ ಆಸನ ವ್ಯವಸ್ಥೆ

ಕುಳಿತುಕೊಳ್ಳುವ ಮತ್ತು ಮಲಗುವ ಸ್ಥಾನಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳಿವೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಹೆಂಡತಿ ತನ್ನ ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳಬೇಕು. ಆಹಾರ ಸೇವನೆ, ಮಲಗುವುದು ಸೇರಿದಂತೆ ದೈನಂದಿನ ಚಟುವಟಿಕೆಗಳಿಗೆ ಪತ್ನಿಯು ಎಡಭಾಗದಲ್ಲಿ ಕುಳಿತುಕೊಳ್ಳಬೇಕು.

ಪ್ರಯೋಜನ ಏನು?

ಇದರಿಂದ ಸಂಬಂಧದಲ್ಲಿ ಹೆಚ್ಚು ವಿಶ್ವಾಸ, ಸತಿಪತಿಯ ನಡುವೆ ಹೊಂದಾಣಿಕೆ ಮನೋಭಾವ, ಸಕಾರಾತ್ಮಕತೆ ವೃದ್ಧಿಯಾಗುವುದು.

Continue Reading

Latest

Shravan 2024: ಶ್ರಾವಣ ಸೋಮವಾರದ ವಿಶೇಷತೆಗಳೇನು? ಶಿವನಿಗೆ ಏನು ಅರ್ಪಿಸಬೇಕು? ಏನನ್ನು ಅರ್ಪಿಸಬಾರದು?

ಶ್ರಾವಣ ಮಾಸದಲ್ಲಿ (Shravan 2024) ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಶ್ರಾವಣ ಮಾಸ ಶಿವನಿಗೆ ಪ್ರಿಯವಾದ ಮಾಸ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಶ್ರಾವಣ ಸೋಮವಾರದ ದಿನ ಶಿವನ ಆರಾಧನೆಯನ್ನು ನಿಯಮದ ಪ್ರಕಾರ ಹೇಗೆ ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Shravan 2024
Koo


ಆಗಸ್ಟ್ 5ರಿಂದ ಶ್ರಾವಣ ಮಾಸ ಪ್ರಾರಂಭವಾಗಿದೆ. ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಶ್ರಾವಣ ಮಾಸ ಕೊನೆಗೊಳ್ಳುತ್ತದೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಮತ್ತು ವಿಶೇಷವಾದ ಮಾಸವಾಗಿದೆ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಶ್ರಾವಣ ಮಾಸ ಶಿವನಿಗೆ ಪ್ರಿಯವಾದ ಮಾಸ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ಪ್ರತಿ ಸೋಮವಾರವನ್ನು (Shravan 2024) ಶ್ರಾವಣ ಸೋಮವಾರ ಎಂದು ಕರೆಯುತ್ತಾರೆ. ಈ ದಿನ ಶಿವನ ಆರಾಧನೆಯನ್ನು ನಿಯಮದ ಪ್ರಕಾರ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

Shravan 2024
Shravan 2024

ಶ್ರಾವಣ ಮಾಸದ ಸೋಮವಾರದಂದು ಮನೆಯನ್ನು ಸ್ವಚ್ಛಗೊಳಿಸಿ ಮಡಿಯುಟ್ಟು ಮನೆಯ ದೇವರ ಕೋಣೆಯಲ್ಲಿ ರಂಗೋಲಿಯನ್ನು ಬಿಡಿಸಿ ಅದರ ಮೇಲೆ ದೀಪವನ್ನು ಹಚ್ಚಿ ಅದರಲ್ಲಿ ಒಂದು ತಟ್ಟೆಯಲ್ಲಿ ಬಿಲ್ವಪತ್ರೆಯ ಮೇಲೆ ಶಿವಲಿಂಗವನ್ನು ಇರಿಸಿ ಮೊದಲಿಗೆ “ಓಂ ನಮಃ ಶಿವಾಯ” ಹೇಳುತ್ತ ಪಂಚಾಮೃತದಿಂದ ಅಭಿಷೇಕ ಮಾಡಬೇಕು.

Shravan 2024
Shravan 2024

ವಿಗ್ರಹ ಇಲ್ಲದವರು ಶಿವನ ಪೋಟೊಗೆ ಬಿಲ್ವಪತ್ರೆ ಅರ್ಪಿಸಿ ಪೂಜೆ ಮಾಡಬಹುದು. ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ನಿಮ್ಮ ಸಮಸ್ಯೆಗಳು ಬಹಳ ಬೇಗನೆ ನಿವಾರಣೆಯಾಗಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ. ಹಾಗೇ ಶಿವನಿಗೆ ಪ್ರಿಯವಾದ ಹೂಗಳಿಂದ ಅಲಂಕಾರ ಮಾಡಿ. ಶಿವನಿಗೆ ಹಾಲು ಹಣ್ಣನ್ನು ಅರ್ಪಿಸಿ. ಹಾಗೇ ಬಿಲ್ವಪತ್ರೆಯ ಮೇಲೆ ಅಕ್ಕಿಹಿಟ್ಟಿನ ದೀಪವನ್ನು ಇರಿಸಿ ದೀಪಾರಾಧನೆ ಮಾಡಿದರೆ ಒಳ್ಳೆಯದು. ದೂಪವನ್ನು ಹಚ್ಚಿ ಅರ್ಚನೆ ಮಾಡಿ “ಓಂ ನಮಃ ಶಿವಾಯ” ಮಂತ್ರವನ್ನು 108 ಬಾರಿ ಪಠಿಸಿದರೆ ಶುಭ ಫಲ ದೊರೆಯುತ್ತದೆ.

ಹಾಗೆಯೇ ಶ್ರಾವಣ ಮಾಸದಲ್ಲಿ ಶಿವನು ಹಾಲಾಹಲ ವಿಷವನ್ನು ಸೇವಿಸಿದ ಕಾರಣ ಆತನ ದೇಹವನ್ನು ತಂಪಾಗಿಸುವಂತಹ ಅಭಿಷೇಕಗಳನ್ನು ಮಾಡಿದರೆ ಶಿವ ಬೇಗನೆ ಒಲಿಯುತ್ತಾನೆ ಎಂಬ ಮಾತಿದೆ. ಹಾಗಾಗಿ ಮನೆಯಲ್ಲಿಯೇ ಶಿವನ ವಿಗ್ರಹಕ್ಕೆ ಅಭಿಷೇಕ ಮಾಡಿ. ಇಲ್ಲವಾದರೆ ಶ್ರಾವಣ ಸೋಮವಾರದಂದು ಶಿವನ ದೇವಾಲಯಕ್ಕೆ ಹೋಗಿ ವಿವಿಧ ರೀತಿಯ ಅಭಿಷೇಕ ಮಾಡಿಸಿದರೆ ಜೀವನದಲ್ಲಿ ಏಳಿಗೆ ಕಾಣಬಹುದು.

Shravan 2024
Shravan 2024

ಶ್ರಾವಣ ಸೋಮವಾರದಂದು ಶಿವನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು? ಯಾವುದನ್ನು ಅರ್ಪಿಸಬಾರದು?
ಶ್ರಾವಣ ಸೋಮವಾರ ಶಿವನಿಗೆ ಹಸಿಹಾಲು, ಗಂಗಾಜಲ, ಬಿಲ್ವಪತ್ರೆ, ಧಾತುರ, ಸಿಹಿತಿಂಡಿಗಳನ್ನು ಅರ್ಪಿಸಿದರೆ ಒಳ್ಳೆಯದು. ಇದರಿಂದ ಶಿವ ಪ್ರಸನ್ನನಾಗಿ ಬೇಡಿದ ವರ ನೀಡುತ್ತಾನೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ:  ಶ್ರಾವಣ ಶನಿವಾರದ ವಿಶೇಷ ಏನು? ಇದನ್ನು ಹೇಗೆ ಆಚರಿಸಿದರೆ ದೋಷ ನಿವಾರಣೆಯಾಗುತ್ತದೆ?

ಆದರೆ ಶಿವನ ಪೂಜೆಯ ವೇಳೆ ತುಳಸಿ ದಳ, ಚಂಪಾ ಅಥವಾ ಕೇದಿಗೆ ಹೂ, ಕತ್ತರಿಸಲ್ಪಟ್ಟ ಮತ್ತು ಕೀಟಗಳಿಂದ ಹಾನಿಗೊಳದಗಾದ ಬಿಲ್ವಪತ್ರೆ, ಅರಿಶಿನ, ಕುಂಕುಮ, ಎಳ್ಳು, ಮುರಿದ ಅಕ್ಕಿ, ಶಂಖನಾದ, ಕೆಂಪು ಹೂಗಳು, ಕಂಚಿನ ಪಾತ್ರೆಯಲ್ಲಿ ಹಾಲನ್ನು ಅರ್ಪಿಸಬೇಡಿ. ಇದು ಶಿವನಿಗೆ ಕೋಪ ತರಿಸುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

Continue Reading
Advertisement
Justice KS Hegde
ಕರ್ನಾಟಕ2 hours ago

Justice KS Hegde: ಜಸ್ಟೀಸ್‌ ಕೆ.ಎಸ್.ಹೆಗ್ಡೆ ಜೀವನ, ಕೊಡುಗೆ ಕುರಿತು ಚಂದನ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮ

Paris Olympics 2024
ಪ್ರಮುಖ ಸುದ್ದಿ3 hours ago

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಚೀನಾದ ಅಥ್ಲೀಟ್​ ಈಗ ರೆಸ್ಟೋರೆಂಟ್​​ನಲ್ಲಿ ವೇಟರ್​!

Sudha Murthy'
ಪ್ರಮುಖ ಸುದ್ದಿ3 hours ago

Sudha Murthy : ವಿವಾದ ಸೃಷ್ಟಿಸಿದ ಸುಧಾ ಮೂರ್ತಿಯವರ ‘ರಕ್ಷಾ ಬಂಧನ’ದ ಕತೆ; ಸ್ಪಷ್ಟನೆ ನೀಡಿದ ಸಂಸದೆ

Zika virus
ಪ್ರಮುಖ ಸುದ್ದಿ3 hours ago

Zika virus : ಮಾರಕ ಜೀಕಾ ವೈರಸ್​ಗೆ ಕರ್ನಾಟಕದಲ್ಲಿ ಮೊದಲ ಬಲಿ; ಶಿವಮೊಗ್ಗದ ವ್ಯಕ್ತಿ ಸಾವು

Israel Attack
ವಿದೇಶ4 hours ago

Israel Attack: ರಹಸ್ಯ ತಾಣದಲ್ಲಿದ್ದ ಹಿಜ್ಬುಲ್ಲಾ ಕಮಾಂಡರ್‌ನನ್ನು ಒಂದು ಫೋನ್ ಕಾಲ್‌ ಮೂಲಕ ಕೊಂದು ಮುಗಿಸಿದ ಇಸ್ರೇಲ್!

Celebrities Rakhi Celebration
ಫ್ಯಾಷನ್4 hours ago

Celebrities Rakhi Celebration: ಫೆಸ್ಟಿವ್‌ ಸೀಸನ್‌ ವೇರ್ಸ್‌ನಲ್ಲಿ ಸೆಲೆಬ್ರೆಟಿಗಳ ರಾಖಿ ಸಂಭ್ರಮ

TRAI New Rules
ಗ್ಯಾಜೆಟ್ಸ್4 hours ago

TRAI New Rules: ನಿಮಗೆ ಗೊತ್ತಿರಲಿ; ಸೆ.1ರಿಂದ ಈ ಸಿಮ್ ಕಾರ್ಡ್‌ಗಳು ಕಪ್ಪು ಪಟ್ಟಿಗೆ!

Raksha Bandhan
ಪ್ರಮುಖ ಸುದ್ದಿ4 hours ago

Raksha Bandhan : ಪುಟಾಣಿ ಗೆಳೆಯರೊಂದಿಗೆ ರಕ್ಷಾ ಬಂಧನ ಆಚರಿಸಿಕೊಂಡ ನರೇಂದ್ರ ಮೋದಿ; ಇಲ್ಲಿವೆ ಚಿತ್ರಗಳು

Rayara Aradhane 2024
ಧಾರ್ಮಿಕ4 hours ago

Rayara Aradhane 2024: ನಾಳೆಯಿಂದ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ; ಗುರುಗಳ ಜೀವನ ಹೇಗಿತ್ತು, ಸಂದೇಶ ಏನಾಗಿತ್ತು?

Actor Chetan Ahimsa
ಕರ್ನಾಟಕ4 hours ago

Chetan Ahimsa: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಟ ಚೇತನ್ ಆಗ್ರಹ; ಆ.28ಕ್ಕೆ ಕಾಂಗ್ರೆಸ್ ಹಠಾವೋ, ದಲಿತ ಬಚಾವೋ ಹೋರಾಟ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌