Viral Video: ತಂದೆಯ ವಿರುದ್ಧ ಎಫ್ಐಆರ್ ದಾಖಲಿಸಿದ 5 ವರ್ಷದ ಬಾಲಕ; ಅಸಲಿ ಕಾರಣವೇನು ಗೊತ್ತಾ? - Vistara News

Latest

Viral Video: ತಂದೆಯ ವಿರುದ್ಧ ಎಫ್ಐಆರ್ ದಾಖಲಿಸಿದ 5 ವರ್ಷದ ಬಾಲಕ; ಅಸಲಿ ಕಾರಣವೇನು ಗೊತ್ತಾ?

Viral Video: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ 5 ವರ್ಷದ ಬಾಲಕನೊಬ್ಬ ತನ್ನ ತಂದೆಯ ವಿರುದ್ಧ ಎಫ್ಐಆರ್ ದಾಖಲಿಸಲು ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಆದರೆ ಕುತೂಹಲಕಾರಿ ಸಂಗತಿಯೆಂದರೆ, ಅವನು ದೂರು ನೀಡಿದ ಕಾರಣ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಏಕೆಂದರೆ ಅವನ ತಂದೆ ನದಿಗೆ ಹೋಗದಂತೆ ಮತ್ತು ರಸ್ತೆಯಲ್ಲಿ ಆಟವಾಡದಂತೆ ತಡೆಯುತ್ತಾರಂತೆ. ಆ ಮುಗ್ಧ ಬಾಲಕ ಪೊಲೀಸ್ ಠಾಣೆಯನ್ನು ತಲುಪಿ ಎಫ್ಐಆರ್ ದಾಖಲಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಒಂದು ಕಾಲದಲ್ಲಿ ಪೊಲೀಸ್, ಪೊಲೀಸ್ ಠಾಣೆ ಎಂದರೆ ಜನರು ಹೆದರುತ್ತಿದ್ದರು. ಯಾಕೆಂದರೆ ಅದು ಅಪರಾಧಿಗಳಿರುವ ಸ್ಥಳ, ಅಲ್ಲಿ ಹೋದರೆ ತಮ್ಮ ಮರ್ಯಾದೆ ಹೋಗುತ್ತದೆ ಎಂದು ಅಂಜುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ದೊಡ್ಡವರು ಬಿಡಿ ಚಿಕ್ಕ ಮಕ್ಕಳು ಸಹ ಪೊಲೀಸರನ್ನು ಕಂಡು ಹೆದರುವುದಿಲ್ಲ. ಹಾಗಾಗಿ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ 5 ವರ್ಷದ ಬಾಲಕನೊಬ್ಬ ತನ್ನ ತಂದೆಯ ವಿರುದ್ಧ ಎಫ್ಐಆರ್ ದಾಖಲಿಸಲು ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಆದರೆ ಕುತೂಹಲಕಾರಿ ಸಂಗತಿಯೆಂದರೆ, ಅವನು ದೂರು ನೀಡಿದ ಕಾರಣ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಏಕೆಂದರೆ ಅವನ ತಂದೆ ನದಿಗೆ ಹೋಗದಂತೆ ಮತ್ತು ರಸ್ತೆಯಲ್ಲಿ ಆಟವಾಡದಂತೆ ತಡೆಯುತ್ತಾರಂತೆ. ಆ ಮುಗ್ಧ ಬಾಲಕ ಪೊಲೀಸ್ ಠಾಣೆಯನ್ನು ತಲುಪಿ ಎಫ್ಐಆರ್ ದಾಖಲಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video)ಆಗಿದೆ.

ವಿಡಿಯೊದಲ್ಲಿ ಮಗು ದೂರು ನೀಡಲು ಪೊಲೀಸ್ ಠಾಣೆಯಲ್ಲಿ ಕುರ್ಚಿಯ ಮೇಲೆ ಕುಳಿತಿದೆ. ಒಬ್ಬ ಪೊಲೀಸ್ ಅಧಿಕಾರಿ ಅವನ ಮುಂದೆ ಕುಳಿತು ಅವನ ಹೆಸರು, ಯಾರ ವಿರುದ್ಧ ದೂರು ನೀಡಲು ಬಯಸುತ್ತಾರೆ ಮತ್ತು ಅಪರಾಧದ ಬಗ್ಗೆ ಕೇಳುತ್ತಾರೆ. ಅಧಿಕಾರಿಗೆ ಉತ್ತರಿಸಿದ ಮಗು ನನ್ನ ಹೆಸರು ಹಸನೈನ್, ತಂದೆ ಇಕ್ಬಾಲ್. ಅವರು ನದಿಗೆ ಹೋಗದಂತೆ ಮತ್ತು ಬೀದಿಯಲ್ಲಿ ಆಡದಂತೆ ತಡೆಯುತ್ತಾರೆ ಎಂದು ವಿವರಿಸುತ್ತದೆ.

ಹಾಗಾಗಿ ತಂದೆ ವಿರುದ್ಧ ತನಿಖೆ ನಡೆಸಿ. ಅವರನ್ನು ಜೈಲಿನೊಳಗೆ ಹಾಕಬೇಕು ಎಂದು ಹೇಳಿದ್ದಾನೆ. ಬಾಲಕನ ಮಾತು ಕೇಳುತ್ತಿದ್ದಂತೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ನಕ್ಕಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಅವನಿಗೆ ಭರವಸೆ ನೀಡಿದರು. ಇದರಿಂದ ಸಂತೋಷದ ಮಗು ಹಿಂತಿರುಗುತ್ತದೆ.

ಬಳಕೆದಾರ ಸುರೇಶ್ ಸಿಂಗ್ ಆಗಸ್ಟ್ 20ರಂದು ಎಕ್ಸ್ ಪ್ಲಾಟ್‍ಫಾರ್ಮ್‍ನಲ್ಲಿ (ಹಿಂದಿನ ಟ್ವಿಟರ್) ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗೇ “ಮಧ್ಯಪ್ರದೇಶದ ಧಾರ್ ನಲ್ಲಿ, 5 ವರ್ಷದ ಮಗು ತನ್ನ ಸ್ವಂತ ತಂದೆಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತಲುಪಿದೆ. ತಂದೆ ಮಗುವನ್ನು ನದಿಯಲ್ಲಿ ಸ್ನಾನ ಮಾಡಲು ಹೋಗದಂತೆ ತಡೆದು ಗದರಿಸಿದರು. ಕೋಪಗೊಂಡ ಮಗು ತಂದೆಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತಲುಪಿತು” ಎಂದು ಅವರು ಹಿಂದಿಯಲ್ಲಿ ಹೀಗೆ ಬರೆದಿದ್ದಾರೆ.

ಇದನ್ನೂ ಓದಿ: ಈಜಲು ಹೋಗಿದ್ದವನ ಶರ್ಟ್‍ನೊಳಗೆ ನುಸುಳಿದ ಬೃಹತ್‌ ಹಾವು! ಮುಂದೇನಾಯ್ತು ನೋಡಿ

ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಬಾಲಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಹೆದರದೆ ಪೊಲೀಸ್ ಠಾಣೆಗೆ ಬಂದು ತನ್ನ ಅಪ್ಪನ ವಿರುದ್ಧ ದೂರು ನೀಡಿದ್ದಾನೆ. ಹಾಗೇ ಕೆಲವರು ಬಾಲಕನ ತೊದಲು ಮಾತನ್ನು ಕೇಳಿ ನಕ್ಕಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Cognizant: ವಾರ್ಷಿಕ ಕೇವಲ 2.5 ಲಕ್ಷ ರೂ . ಸಂಬಳ ಪ್ಯಾಕೇಜ್ ಘೋಷಿಸಿ ಟೀಕೆಗೆ ಗುರಿಯಾದ ಕಾಗ್ನಿಜೆಂಟ್!

ಕಾಗ್ನಿಜೆಂಟ್ (Cognizant) ಇತ್ತೀಚೆಗೆ ಹೊಸ ನೇಮಕಾತಿಗಳ ಬಗ್ಗೆ ಸೂಚನೆ ಹೊರಡಿಸಿತ್ತು. ಫ್ರೆಶರ್ ಗಳಿಗೆ ವಾರ್ಷಿಕ ಕೇವಲ 2.5 ಲಕ್ಷ ರೂ. ಗಳನ್ನು ನೀಡುವ ಖಾಲಿ ಹುದ್ದೆಯನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಿ ಬಳಿಕ ಭಾರೀ ಟೀಕೆಗೆ ಗುರಿಯಾಯಿತು. ಈ ಬಗ್ಗೆ ಕಂಪನಿ ನೀಡಿರುವ ಪ್ರತಿಕ್ರಿಯೆ ಏನು? ಈ ಕುರಿತ ವಿವರಣೆ ಇಲ್ಲಿದೆ.

VISTARANEWS.COM


on

By

Cognizant
Koo

ಕಂಪನಿಗೆ ಹೊಸದಾಗಿ ಸೇರಬಯಸುವವರಿಗೆ ವಾರ್ಷಿಕವಾಗಿ 2.5 ಲಕ್ಷ ರೂ. ವೇತನ ನೀಡುವ ಖಾಲಿ ಹುದ್ದೆಗಳ (vacancy offer) ಬಗ್ಗೆ ಘೋಷಣೆ ಮಾಡಿ ಭಾರೀ ಟೀಕೆಗೆ ಗುರಿಯಾದ ಸಾಫ್ಟ್ ವೇರ್ ಕಂಪನಿ ಕಾಗ್ನಿಜೆಂಟ್ (Cognizant) ಈಗ ಪ್ರತಿಕ್ರಿಯೆಯನ್ನು ನೀಡಿದೆ, ನೇಮಕಾತಿ ಕುರಿತ ಪ್ರಕಟಣೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೊಂಡಿದೆ.

ಕಾಗ್ನಿಜೆಂಟ್ ಇತ್ತೀಚೆಗೆ ಹೊಸ ನೇಮಕಾತಿಗಳ (New recruitment) ಬಗ್ಗೆ ಸೂಚನೆ ಹೊರಡಿಸಿತ್ತು. ಫ್ರೆಶರ್ ಗಳಿಗೆ ವಾರ್ಷಿಕ 2.5 ಲಕ್ಷ ರೂ.ಗಳನ್ನು ನೀಡುವ ಖಾಲಿ ಹುದ್ದೆಯನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಿ ಬಳಿಕ ಭಾರೀ ಟೀಕೆಗೆ ಗುರಿಯಾಯಿತು.

ಮೆಟ್ರೋ ನಗರದಲ್ಲಿ ಇಂತಹ ಸಂಬಳದಲ್ಲಿ ಹೇಗೆ ಬದುಕಲು ಸಾಧ್ಯ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ವರ್ಷ ಕಂಪೆನಿಯ ಸಿಇಒ 186 ಕೋಟಿ ರೂ. ಗಳನ್ನು ಗಳಿಸಿದ್ದಾರೆ. ಹೀಗಿರುವಾಗ 20 ವರ್ಷಗಳಿಂದ ಪ್ರವೇಶ ಹಂತದವರಿಗೆ ವೇತನಗಳು ಏಕೆ ಇನ್ನೂ ಕೆಳ ಮಟ್ಟದಲ್ಲಿಯೇ ಇದೆ ಎಂದು ಅನೇಕ ಪ್ರಶ್ನಿಸಿದ್ದರು. ಇದೀಗ ಕಾಗ್ನಿಜೆಂಟ್ ಅಂತಿಮವಾಗಿ ತನ್ನ ಮೌನವನ್ನು ಮುರಿದಿದೆ.

ಕಾಗ್ನಿಜೆಂಟ್ ತನ್ನ ವಾರ್ಷಿಕ 2.5 ಲಕ್ಷ ರೂ. ಸಂಬಳದ ಕೊಡುಗೆಯ ಕುರಿತಾದ ವಿವಾದದಕ್ಕೆ ಪ್ರತಿಕ್ರಿಯಿಸಿದ್ದು, ಮಾಹಿತಿಯನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಹೇಳಿದೆ.

ಮೂರು ವರ್ಷಗಳ ಪದವಿಪೂರ್ವ, ಪದವಿ ಹೊಂದಿರುವ ಎಂಜಿನಿಯರಿಂಗ್ ಅಲ್ಲದ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಈ ಕಡಿಮೆ ವೇತನ ಪ್ಯಾಕೇಜ್ ಅನ್ನು ನೀಡಲಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕಾಗ್ನಿಜೆಂಟ್ ಈ ಬಗ್ಗೆ ತಿಳಿಸಿದ್ದು, 3 ವರ್ಷಗಳ ಪದವಿಪೂರ್ವ, ಪದವಿಯೊಂದಿಗೆ ಎಂಜಿನಿಯರಿಂಗ್ ಅಲ್ಲದ ಹಿನ್ನೆಲೆಯ ಪ್ರತಿಭೆಗಳಿಗೆ ನಮ್ಮ ಇತ್ತೀಚಿನ ಉದ್ಯೋಗ ಪೋಸ್ಟ್ ಅನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಲಾಗಿದೆ. ವಾರ್ಷಿಕ 2.52 ಲಕ್ಷ ರೂ. ವೇತನ ನೀಡುವ ಈ ಉದ್ಯೋಗ ಜಾಹೀರಾತು 3 ವರ್ಷಗಳ ಎಂಜಿನಿಯರಿಂಗ್ ಪದವಿ ಮಾಡದ ಅಭ್ಯರ್ಥಿಗಳಿಗಾಗಿ ಎಂದು ತಿಳಿಸಿದೆ.


ಎಂಜಿನಿಯರಿಂಗ್ ಪದವೀಧರರಿಗೆ ವೇತನವು ಐಟಿ ಉದ್ಯಮದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿದೆ: ಎಂಜಿನಿಯರಿಂಗ್ ಪದವೀಧರರಿಗೆ ನಾವು ನೀಡುವ ವೇತನವು ಐಟಿ ಸೇವೆಗಳ ಇತರ ಗುಂಪಿನೊಳಗೆ ಹೆಚ್ಚು ಸ್ಪರ್ಧಾತ್ಮಕವಾಗಿದೆ ಎಂದು ಇವಿಪಿ ಮತ್ತು ಕಾಗ್ನಿಜೆಂಟ್ ಅಮೆರಿಕದ ಅಧ್ಯಕ್ಷ ಸೂರ್ಯ ಗುಮ್ಮಡಿ ತಿಳಿಸಿದ್ದಾರೆ.

ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ತನ್ನ ಕೆಲವು ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಳವನ್ನು ಶೇ. 1 ರಷ್ಟು ಕಡಿಮೆಗೊಳಿಸಿದೆ ಮತ್ತು ಅತ್ಯಧಿಕ ಹೆಚ್ಚಳವು ಕೇವಲ ಶೇ. 5 ಆಗಿದೆ ಎಂಬ ವರದಿಗಳು ವಿವಾದವನ್ನು ಹೆಚ್ಚಿಸಿವೆ.
ಕಂಪೆನಿಯು ಈ ಇನ್‌ಕ್ರಿಮೆಂಟ್‌ಗಳನ್ನು ಅಂತಿಮವಾಗಿ ಹೊರತರುವ ಮೊದಲು ನಾಲ್ಕು ತಿಂಗಳವರೆಗೆ ಮುಂದೂಡಿದ ಹಿನ್ನೆಲೆಯಲ್ಲಿ ಈ ಸುದ್ದಿ ಬಂದಿದೆ.

ಇದನ್ನೂ ಓದಿ: Job Alert: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿದೆ ಉದ್ಯೋಗಾವಕಾಶ; 391 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಕಳಪೆ ಸಂಬಳ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಗುಮ್ಮಡಿ, ವೇತನ ಹೆಚ್ಚಳವು ವೈಯಕ್ತಿಕ ಕಾರ್ಯಕ್ಷಮತೆ ಮತ್ತು ಮ್ಯಾಕ್ರೋ ಉದ್ಯಮದ ಡೈನಾಮಿಕ್ಸ್ ಎರಡಕ್ಕೂ ಸಂಬಂಧ ಹೊಂದಿದೆ. ಈ ವರ್ಷ, ಉದ್ಯೋಗಿಗಳಿಗೆ ಇನ್ಕ್ರಿಮೆಂಟ್ ಮತ್ತು ಬೋನಸ್ ಗಳನ್ನು ವಿತರಿಸಿದ ಕೆಲವು ಐಟಿ ಕಂಪೆನಿಗಳಲ್ಲಿ ನಾವು ಒಂದಾಗಿದ್ದೇವೆ. ಕಳೆದ 3 ವರ್ಷಗಳಲ್ಲಿ ಹೆಚ್ಚಿನ ಕಾಗ್ನಿಜೆಂಟ್‌ನ ಉದ್ಯೋಗಿಗಳು 4ನೇ ಬಾರಿಯಾಗಿ ಈ ಬಾರಿಯೂ ವೇತನ ಹೆಚ್ಚಳದ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

Continue Reading

Latest

Viral Video: 8 ವರ್ಷದ ಬಾಲಕಿಯನ್ನು ಎತ್ತಿಕೊಂಡು ಹೋಗಲು ಯತ್ನಿಸಿದ ದೈತ್ಯಾಕಾರದ ಹದ್ದು; ಮೈ ನಡುಗಿಸುವ ವಿಡಿಯೊ

Viral Video: 8 ವರ್ಷದ ಬಾಲಕಿಯ ಮೇಲೆ ದೈತ್ಯಕಾಕಾರ ಗೋಲ್ಡನ್ ಹದ್ದೊಂದು ದಾಳಿ ಮಾಡಿದ ಭಯಾನಕ ವಿಡಿಯೊವೊಂದು ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಗೋಲ್ಡನ್ ಹದ್ದು ಆಕಾಶದಿಂದ ಬಹಳ ವೇಗವಾಗಿ ಕೆಳಗೆ ಬಂದು ಹೊರಗೆ ಆಡುತ್ತಿರುವ ಹುಡುಗಿಯನ್ನು ನೋಡಿ ಅದರ ಚೂಪಾದ ಉಗುರುಗಳನ್ನು ಹೊರಗೆ ಚಾಚುತ್ತಾ ಅವಳನ್ನು ಹಿಡಿಯುವ ಪ್ರಯತ್ನ ಮಾಡುತ್ತದೆ. ಆದರೆ ಆಗ ಅಲ್ಲಿಗೆ ಬಂದ ಕೆಲವರು ಆಕೆಯನ್ನು ಆ ಹದ್ದಿನಿಂದ ರಕ್ಷಿಸಿದ್ದಾರೆ.

VISTARANEWS.COM


on

Viral Video
Koo


ಬೆಂಗಳೂರು: ಸೋಶಿಯಲ್ ಮಿಡಿಯಾದಲ್ಲಿ ಪ್ರತಿದಿನ ಹಲವಾರು ವಿಡಿಯೊಗಳು ಪೋಸ್ಟ್ ಆಗುತ್ತಿರುತ್ತವೆ. ಕೆಲವೊಂದು ವಿಡಿಯೊ ನಮಗೆ ಖುಷಿ ನೀಡಿದರೆ, ಕೆಲವೊಂದು ವಿಡಿಯೊಗಳು ನಮ್ಮ ಮೈ ನಡುಗಿಸುತ್ತವೆ. ಅಂತಹದೊಂದು ವಿಡಿಯೊವನ್ನು ಇನ್ಸ್ಟಾಗ್ರಾಮ್ ಪುಟದಲ್ಲಿ “ಪೇಜ್ಪೋಸ್ಟಿಂಗ್ ಅನಿಮಲ್ ಅಟ್ಯಾಕ್” ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಇದು ಈಗ ವೈರಲ್(Viral Video) ಆಗುತ್ತಿದೆ.

ಅದು 8 ವರ್ಷದ ಬಾಲಕಿ ಮತ್ತು ದೈತ್ಯಕಾಕಾರ ಗೋಲ್ಡನ್ ಹದ್ದಿನ ನಡುವಿನ ಭಯಾನಕ ಘಟನೆಯನ್ನು ತೋರಿಸುತ್ತದೆ. ಆ ಪುಟ್ಟ ಹುಡುಗಿಯನ್ನು ಹಿಡಿಯಲು ಹದ್ದು ಹಾರುತ್ತಾ ಆಕೆಯ ಮೇಲೆ ದಾಳಿ ಮಾಡುವ ಭಯಾನಕ ಪರಿಸ್ಥಿತಿಯನ್ನು ಈ ವಿಡಿಯೊ ವಿವರಿಸುತ್ತದೆ.

ವಿಡಿಯೊದಲ್ಲಿ, ಗೋಲ್ಡನ್ ಹದ್ದು ಆಕಾಶದಿಂದ ಬಹಳ ವೇಗವಾಗಿ ಕೆಳಗೆ ಬಂದು ಹೊರಗೆ ಆಡುತ್ತಿರುವ ಹುಡುಗಿಯನ್ನು ಹಿಡಿಯುವ ಗುರಿಯೊಂದಿಗೆ ಅದರ ಚೂಪಾದ ಉಗುರುಗಳನ್ನು ಹೊರಗೆ ಚಾಚುತ್ತಾ ಅವಳನ್ನು ಹಿಡಿಯುವ ಪ್ರಯತ್ನ ಮಾಡುತ್ತದೆ. ಆದರೆ ಆಗ ಅಲ್ಲಿಗೆ ಬಂದ ಕೆಲವರು ಆಕೆಯನ್ನು ಆ ಹದ್ದಿನಿಂದ ರಕ್ಷಿಸಿದ್ದಾರೆ.
ಗೋಲ್ಡನ್ ಹದ್ದುಗಳು ಪ್ರಪಂಚದಾದ್ಯಂತದ ಅತ್ಯಂತ ದೊಡ್ಡದಾದ ಪಕ್ಷಿಗಳಲ್ಲಿ ಒಂದಾಗಿದೆ. ಇವುಗಳು ಬೃಹತ್ ರೆಕ್ಕೆಗಳನ್ನು ಮತ್ತು ಬೇಟೆಯ ಕೌಶಲ್ಯಗಳನ್ನು ಹೊಂದಿವೆ. ಇವುಗಳ ಇಂತಹ ದಾಳಿಗಳು ಕಂಡುಬರುವುದು ಬಹಳ ಅಪರೂಪ. ಆದರೆ ಅಂತಹ ದೈತ್ಯಕಾರದ ಪಕ್ಷಿಗಳು ಒಡ್ಡಬಹುದಾದ ಅಪಾಯಗಳ ಬಗ್ಗೆ ತಿಳಿದರೆ ಮೈ ನಡುಗುತ್ತದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕೋಲಾಹಲವನ್ನು ಉಂಟುಮಾಡುತ್ತಿದೆ, ಗೋಲ್ಡನ್ ಹದ್ದುಗಳು ತಿರುಗಾಡುವ ಸ್ಥಳಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿವಹಿಸದಿರುವುದನ್ನು ಕಂಡು ಅನೇಕರು ಆಶ್ಚರ್ಯ ಮತ್ತು ಭಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇವರು ವಿಶ್ವದ ಅತ್ಯಂತ ಹಿರಿಯ ಬಸ್ ಚಾಲಕ! ವಯಸ್ಸು ಎಷ್ಟು ನೋಡಿ!

ತಜ್ಞರ ಪ್ರಕಾರ, ಗೋಲ್ಡನ್ ಹದ್ದುಗಳು ಸಾಮಾನ್ಯವಾಗಿ ಸಣ್ಣ ಪ್ರಾಣಿಗಳನ್ನು ಹಿಡಿದು ಆಹಾರವನ್ನು ಪಡೆಯುತ್ತವೆ. ಆದರೆ ಈ ಘಟನೆಯು ಹೆಚ್ಚಾಗಿ ಆ ಪಕ್ಷಿಯು ಹೆಚ್ಚಾಗಿ ನೆಲೆಯಾಗಿರುವ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ ಎಂಬುದಾಗಿ ತಿಳಿಸಿದ್ದಾರೆ.

Continue Reading

ವಾಣಿಜ್ಯ

Reliance Jio: ಜಿಯೋದಲ್ಲಿ ಇನ್ನು 800ಕ್ಕೂ ಹೆಚ್ಚು ಚಾನೆಲ್, 13 ಒಟಿಟಿ ಆ್ಯಪ್‌‌ಗಳು! ಪಡೆಯೋದು ಹೇಗೆ?

ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ (Reliance Jio) ಕಂಪನಿಯು ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದರ ಮೂಲಕ ಒಂದೇ ಜಿಯೋ ಏರ್ ಫೈಬರ್ ಸಂಪರ್ಕದೊಂದಿಗೆ ಎರಡು ಟಿವಿಗಳನ್ನು ಸಂಪರ್ಕಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

VISTARANEWS.COM


on

By

Jio Fiber
Koo

ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ (telecom operator ) ಆಗಿರುವ ರಿಲಯನ್ಸ್ ಜಿಯೋ (Reliance Jio) 2016ಲ್ಲಿ ಪ್ರಾರಂಭವಾದಾಗಿನಿಂದ ತನ್ನ ವ್ಯವಹಾರಗಳನ್ನು ವಿಸ್ತರಿಸುತ್ತಲೇ ಬಂದಿದೆ. ಇದೀಗ ಜಿಯೋ ಫೈಬರ್ (jio fiber) ಮತ್ತು ಜಿಯೋ ಏರ್ ಫೈಬರ್ (jio air fiber) ಮೂಲಕ ತನ್ನ ಫೈಬರ್ ಸೇವೆಗಳ ಸಂಪರ್ಕವನ್ನು ವಿಸ್ತರಿಸುತ್ತಿದೆ.

ಉದ್ಯಮಿ ಮುಕೇಶ್ ಅಂಬಾನಿ (mukesh ambani) ಒಡೆತನದ ಕಂಪೆನಿಯು ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್ (jio tv+ application) ಅನ್ನು ಪರಿಚಯಿಸಿದೆ. ಇದರ ಮೂಲಕ ಒಂದೇ ಜಿಯೋ ಏರ್ ಫೈಬರ್ ಸಂಪರ್ಕದೊಂದಿಗೆ ಎರಡು ಟಿವಿಗಳನ್ನು ಸಂಪರ್ಕಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಈ ಕೊಡುಗೆಯು 10ಕ್ಕಿಂತಲೂ ಹೆಚ್ಚು ಭಾಷೆಗಳು ಮತ್ತು 20ಕ್ಕಿಂತಲೂ ಹೆಚ್ಚು ಪ್ರಕಾರಗಳಲ್ಲಿ 800ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳನ್ನು ಒದಗಿಸುತ್ತದೆ. ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್ ಈಗ ಎಲ್ಲಾ ಪ್ರಮುಖ ಸ್ಮಾರ್ಟ್ ಟಿವಿ ಒಎಸ್‌‌ನಲ್ಲಿ ಉಚಿತ ಡೌನ್‌ಲೋಡ್‌ಗಾಗಿ ಲಭ್ಯವಿದೆ.

ಇತ್ತೀಚಿನ ಕೊಡುಗೆಯ ವೈಶಿಷ್ಟ್ಯದಲ್ಲಿ ಏಕ ಸೈನ್ ಆನ್ ಅನ್ನು ಒಳಗೊಂಡಿವೆ. ಅಂದರೆ ಒಮ್ಮೆ ಸೈನ್ ಇನ್ ಮಾಡಿ ಮತ್ತು ಸಂಪೂರ್ಣ ಜಿಯೋ ಟಿವಿ ಪ್ಲಸ್ ವಿಷಯದ ಕ್ಯಾಟಲಾಗ್ ಅನ್ನು ಪ್ರವೇಶಿಸಬಹುದು. ಸ್ಮಾರ್ಟ್ ಟಿವಿ ರಿಮೋಟ್ ನಲ್ಲಿ ಎಲ್ಲಾ ಜಿಯೋ ಟಿವಿ ಪ್ಲಸ್ ವಿಷಯ ಮತ್ತು ವೈಶಿಷ್ಟ್ಯಗಳು ಲಭ್ಯವಿದೆ.

ಸ್ಮಾರ್ಟ್ ಫಿಲ್ಟರ್ ನಲ್ಲಿ ಭಾಷೆ, ವರ್ಗ ಅಥವಾ ಚಾನೆಲ್ ಸಂಖ್ಯೆಯನ್ನು ಸರಳವಾಗಿ ಕೀ ಮೂಲಕ ಹುಡುಕಬಹುದು. ಸ್ಮಾರ್ಟ್ ಆಧುನಿಕ ಮಾರ್ಗದರ್ಶಿ ಮೂಲಕ 800ಕ್ಕೂ ಅಧಿಕ ಚಾನಲ್‌ಗಳನ್ನು ಬಹಳ ಸುಲಭವಾಗಿ ಅನ್ವೇಷಿಸಬಹುದು. ಬಳಸಲು ಸುಲಭವಾದ ಸ್ಮಾರ್ಟ್ ಫಿಲ್ಟರ್‌ಗಳೊಂದಿಗೆ ಪ್ರೋಗ್ರಾಂ ವೇಳಾಪಟ್ಟಿ ಮಾಡಬಹುದು.

ಪ್ಲೇಬ್ಯಾಕ್ ಮೂಲಕ ವೇಗವನ್ನು ನಿಯಂತ್ರಿಸಿ, ಕ್ಯಾಚ್-ಅಪ್ ಟಿವಿಯಲ್ಲಿ ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ವೈಯಕ್ತಿಕ ಶಿಫಾರಸು, ಮಕ್ಕಳ ಸುರಕ್ಷಿತ ವಿಭಾಗ ಕೂಡ ಇದರಲ್ಲಿ ಲಭ್ಯವಿದೆ.


13 ಒಟಿಟಿ ಅಪ್ಲಿಕೇಶನ್‌ಗಳು

ಬಳಕೆದಾರರು ಚಾನೆಲ್‌ಗಳು ಮತ್ತು ಒಟಿಟಿ ಅಪ್ಲಿಕೇಶನ್‌ಗಳನ್ನು ಸಹ ಪಡೆಯಬಹುದು. ಸಾಮಾನ್ಯ ಮನರಂಜನೆ, ಸುದ್ದಿ, ಕ್ರೀಡೆ, ಸಂಗೀತ, ಮಕ್ಕಳು, ವ್ಯಾಪಾರ ಮತ್ತು ಭಕ್ತಿ ಸೇರಿದಂತೆ 800ಕ್ಕೂ ಡಿಜಿಟಲ್ ಟಿವಿ ಚಾನೆಲ್‌ಗಳು ಇದರಲ್ಲಿ ಲಭ್ಯವಾಗಲಿದೆ. ಜೊತೆಗೆ ಬಳಕೆದಾರರು ಆನಂದಿಸಬಹುದಾದ 13 ಒಟಿಟಿ ಅಪ್ಲಿಕೇಶನ್‌ಗಳಿವೆ.

ಪಡೆಯುವುದು ಹೇಗೆ?

ಜಿಯೋ ಟಿವಿ ಪ್ಲಸ್ ಅನ್ನು ಪಡೆಯಲು ಬಳಕೆದಾರರು ಆಂಡ್ರಾಯ್ಡ್ ಟಿವಿ, ಆಪಲ್ ಟಿವಿ ಅಥವಾ ಅಮೆಜಾನ್ ಫೈರ್ ಟಿವಿ ಸ್ಟಿಕ್ ನ ಆಪ್ ಸ್ಟೋರ್‌ಗಳಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್, ಹಾಟ್ ಸ್ಟಾರ್ , ಝೀ5, ಸೋನಿ ಲೈವ್ ಮತ್ತು ಸನ್ ನೆಕ್ಸ್ಟ್ ಅಪ್ಲಿಕೇಶನ್ ಇದರಲ್ಲಿ ಲಭ್ಯವಾಗಲಿದೆ.

ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಬಳಕೆದಾರರು ಜಿಯೋ ಫೈಬರ್, ಜಿಯೋ ಏರ್ ಫೈಬರ್ ನೊಂದಿಗೆ ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಬಹುದು. ಒಟಿಪಿ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಅನಂತರ ಬಳಕೆದಾರರು ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್ ಅನ್ನು ಆನಂದಿಸಬಹುದು.

ಇದನ್ನೂ ಓದಿ: Reliance Jio: ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದೇ ಸಂಪರ್ಕದಲ್ಲಿ ನೋಡಿ ಎರಡು ಟಿವಿ!

ಯೋಜನೆಗಳು

ಜಿಯೋ ಏರ್ ಫೈಬರ್ ಪೋಸ್ಟ್ ಪೇಯ್ಡ್ 599 ರೂ., 899 ರೂ. ಮತ್ತು ಹೆಚ್ಚು, ಜಿಯೋ ಫೈಬರ್ ಪ್ರಿಪೇಯ್ಡ್ 999 ಮತ್ತು ಹೆಚ್ಚಿನ ದರದಲ್ಲಿ ಲಭ್ಯವಿದೆ.

Continue Reading

Latest

World’s Oldest Bus Driver: ಇವರು ವಿಶ್ವದ ಅತ್ಯಂತ ಹಿರಿಯ ಬಸ್ ಚಾಲಕ! ವಯಸ್ಸು ಎಷ್ಟು ನೋಡಿ!

World’s Oldest Bus Driver: ಅಮೆರಿಕದ ಮಿನ್ನೆಸೋಟದ 94 ವರ್ಷದ ಜಿಮ್ ಒಪೆಗಾರ್ಡ್ ವಿಶ್ವದ ಅತ್ಯಂತ ಹಿರಿಯ ಬಸ್ ಚಾಲಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಕಾಲವನ್ನು ಅವರು ಬಸ್ಸುಗಳನ್ನು ಓಡಿಸುವುದರಲ್ಲೇ ಕಳೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಪ್ರಸ್ತುತ ನಾರ್ತ್ಸ್ಟಾರ್ ಬಸ್‌ಲೈನ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ, ಸ್ಕೂಲ್ ಬಸ್ ಓಡಿಸುವ ಮೂಲಕ ಶಾಲಾ ಮಕ್ಕಳಿಗೆ ನೆರವಾಗುತ್ತಿದ್ದಾರೆ. ಮೂರು ಮೊಮ್ಮಕ್ಕಳನ್ನು ಹೊಂದಿರುವ ಜಿಮ್ ಅವರು ತನ್ನ ಈ ಕೆಲಸವನ್ನು ಖುಷಿಯಿಂದ ನಿರ್ವಹಿಸುತ್ತಿದ್ದಾರೆ.

VISTARANEWS.COM


on

World's Oldest Bus Driver
Koo


ಅಮೆರಿಕದ ಮಿನ್ನೆಸೋಟದ 94 ವರ್ಷದ ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ಹಿರಿಯ ಬಸ್ ಚಾಲಕ (World’s Oldest Bus Driver) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರನ್ನು ಜಿಮ್ ಒಪೆಗಾರ್ಡ್ ಎಂದು ಗುರುತಿಸಲಾಗಿದೆ ಮತ್ತು ಅವರಿಗೆ ಈಗ 94 ವರ್ಷ ವಯಸ್ಸಾಗಿದೆ. ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಕಾಲವನ್ನು ಅವರು ಬಸ್ಸುಗಳನ್ನು ಓಡಿಸುವುದರಲ್ಲೇ ಕಳೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಅವರು 65 ನೇ ವಯಸ್ಸಿನಲ್ಲಿ ನಿವೃತ್ತರಾಗುವ ಮೊದಲು ಸಿಟಿ ಬಸ್ ಚಾಲಕನಾಗಿ 20 ವರ್ಷಗಳ ವೃತ್ತಿಜೀವನವನ್ನು ನಡೆಸಿದರು. ಆದರೆ ನಿವೃತ್ತಿ ನಂತರ ಅವರಿಗೆ ಜೀವನ ಬೋರ್ ಎನಿಸಿದೆ.

ಹಾಗಾಗಿ ಅವರು ಪ್ರಸ್ತುತ ನಾರ್ತ್‍ಸ್ಟಾರ್ ಬಸ್‌ಲೈನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ, ಸ್ಕೂಲ್ ಬಸ್ ಓಡಿಸುವ ಮೂಲಕ ಶಾಲಾ ಮಕ್ಕಳಿಗೆ ನೆರವಾಗುತ್ತಿದ್ದಾರೆ. ಮೂರು ಮೊಮ್ಮಕ್ಕಳನ್ನು ಹೊಂದಿರುವ ಜಿಮ್ ಅವರು ತನ್ನ ಈ ಕೆಲಸವನ್ನು ಖುಷಿಯಿಂದ ನಿರ್ವಹಿಸುತ್ತಿದ್ದಾರೆ, ಏಕೆಂದರೆ ಅದು ಅವರನ್ನು ಕಾರ್ಯನಿರತರಾಗಿರುವಂತೆ ಮಾಡುತ್ತದೆ. ಮತ್ತು ಆಫ್ರಿಕಾದಲ್ಲಿ ತನ್ನ ಮಗಳು ಸ್ಥಾಪಿಸಿದ ಕ್ರೈಸ್ತ ಆಶ್ರಮಕ್ಕೆ ಹಣವನ್ನು ನೀಡಲು ಈ ಕೆಲಸ ನೆರವಾಗುತ್ತದೆ. ಅವರ ಮ್ಯಾನೇಜರ್ ಪ್ರಕಾರ, ಜಿಮ್ ಅವರು ಒಬ್ಬ ಒಳ್ಳೆಯ ಚಾಲಕ. ಅವರು ಅತ್ಯಂತ ಸುರಕ್ಷಿತವಾಗಿ ಬಸ್ ಚಲಾಯಿಸುತ್ತಾರೆ ಮತ್ತು ಎಂದಿಗೂ ತಡಮಾಡುವುದಿಲ್ಲ. ಆದರೆ ಅವರ ವಯಸ್ಸಿನ ಕಾರಣದಿಂದಾಗಿ, ಅವರು ಪ್ರತಿ ವರ್ಷ ದೈಹಿಕ ಪರೀಕ್ಷೆ ಮತ್ತು ಡ್ರೈವಿಂಗ್ ಸಾಮರ್ಥ್ಯದಲ್ಲಿ ಉತ್ತೀರ್ಣರಾಗಬೇಕು ಎಂದು ತಿಳಿಸಿದ್ದಾರೆ. ಅಲ್ಲದೇ ಜಿಮ್ ಅವರು ಆರೋಗ್ಯಕರವಾದ ದೇಹವನ್ನು ಹೊಂದಿದ್ದಾರೆ. ಅವರು ಆರೋಗ್ಯ ಪೂರಕಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಪ್ರತಿದಿನ 45 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ ಎಂದು ಅವರು ಜಿಮ್ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿವೃತ್ತಿಯ ನಂತರ ಜಿಮ್ ಎರಡು ಉದ್ಯೋಗಗಳನ್ನು ನಿರ್ವಹಿಸುತ್ತಾರೆ. ಒಂದು ಇಂಟರ್ ಸಿಟಿ ಕೋಚ್‍ಗಳನ್ನು ಓಡಿಸುವುದು ಮತ್ತು ಇನ್ನೊಂದು ಶಾಲಾ ಬಸ್ ಓಡಿಸುವುದು. ಆದರೆ ಈ ನಡುವೆ ಅವರು ತಮ್ಮ 84ನೇ ವಯಸ್ಸಿನಲ್ಲಿ ಬಿದ್ದು ಕುತ್ತಿಗೆ ಮುರಿತಕ್ಕೆ ಒಳಗಾಗಿದ್ದರು. ನಂತರ ಅವರು ಚೇತರಿಸಿಕೊಳ್ಳಲು ನಾಲ್ಕೂವರೆ ತಿಂಗಳುಗಳನ್ನು ಕಳೆದರು, ಆಮೇಲೆ ಅವರನ್ನು ಇಂಟರ್ ಸಿಟಿ ಕೋಚ್‍ ಕಂಪೆನಿ ಕೈಬಿಟ್ಟ ಕಾರಣ ಶಾಲಾ ಬಸ್ ಚಾಲಕನಾಗಿ ಮಾತ್ರ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. “ನಾನು ಕೆಲಸ ಮಾಡಲು ಇಷ್ಟಪಡುತ್ತೇನೆ, ವಿಶೇಷವಾಗಿ ಶಾಲಾ ಬಸ್ ಓಡಿಸುವುದು ನನಗೆ ತುಂಬಾ ಇಷ್ಟ” ಎಂದು ಜಿಮ್ ಹೇಳಿದ್ದಾರೆ.

ಇದನ್ನೂ ಓದಿ:ಅಶ್ಲೀಲ ಚಿತ್ರ ತೋರಿಸಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷನ ಬಂಧನ

ಜಿಮ್ ಅವರು ಬಸ್ ಡ್ರೈವ್ ಮಾಡುವುದು ಮಾತ್ರವಲ್ಲ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅವರ ಕೆಲಸದ ವೇಳಾಪಟ್ಟಿಯಲ್ಲಿ ಬೆಳಿಗ್ಗೆ ಮೂರು ಗಂಟೆಗಳ ಡ್ರೈವ್ ಮಾಡುವುದು, ನಂತರ ಮೂರು ಗಂಟೆಗಳ ಕಾಲ ವಿರಾಮ ಮಾಡಿ ನಂತರ ಮಧ್ಯಾಹ್ನ ಇನ್ನೂ ನಾಲ್ಕು ಗಂಟೆಗಳ ಡ್ರೈವ್ ಮಾಡುತ್ತಾರೆ. ವಿರಾಮದ ಸಮಯದಲ್ಲಿ, ಅವರು ಹಿರಿಯ ಸಹಕಾರಿ ವಸತಿಯಲ್ಲಿ ಇರುತ್ತಾರೆ.

Continue Reading
Advertisement
Cognizant
ದೇಶ2 mins ago

Cognizant: ವಾರ್ಷಿಕ ಕೇವಲ 2.5 ಲಕ್ಷ ರೂ . ಸಂಬಳ ಪ್ಯಾಕೇಜ್ ಘೋಷಿಸಿ ಟೀಕೆಗೆ ಗುರಿಯಾದ ಕಾಗ್ನಿಜೆಂಟ್!

Viral Video
Latest12 mins ago

Viral Video: 8 ವರ್ಷದ ಬಾಲಕಿಯನ್ನು ಎತ್ತಿಕೊಂಡು ಹೋಗಲು ಯತ್ನಿಸಿದ ದೈತ್ಯಾಕಾರದ ಹದ್ದು; ಮೈ ನಡುಗಿಸುವ ವಿಡಿಯೊ

Fraud Case
ಕರ್ನಾಟಕ13 mins ago

Fraud Case: ಫೇಸ್‌ಬುಕ್ ಸುಂದರಿ ಹಿಂದೆ ಬಿದ್ದು 1.4 ಲಕ್ಷ ಕಳೆದುಕೊಂಡ ಪುರೋಹಿತ!

Pharma Company Blast
ದೇಶ17 mins ago

Pharma Company Blast: ಫಾರ್ಮಾ ಕಂಪನಿಯಲ್ಲಿ ಭಾರೀ ಸ್ಫೋಟ; 18ಕ್ಕೂ ಅಧಿಕ ಮಂದಿ ಜೀವನ್ಮರಣ ಹೋರಾಟ

Virat Kohli
ಕ್ರೀಡೆ19 mins ago

Virat Kohli: ಐಪಿಎಲ್​ನ ನೆಚ್ಚಿನ ಎದುರಾಳಿ ತಂಡವನ್ನು ಹೆಸರಿಸಿದ ವಿರಾಟ್​ ಕೊಹ್ಲಿ

stabbing assault case
ಬೆಂಗಳೂರು23 mins ago

Assault Case: ಗಂಡ- ಹೆಂಡತಿ ನಡುವೆ ಮೂಗು ತೂರಿಸಿದವನಿಗೆ ಚಾಕು ಇರಿತ

Jio Fiber
ವಾಣಿಜ್ಯ47 mins ago

Reliance Jio: ಜಿಯೋದಲ್ಲಿ ಇನ್ನು 800ಕ್ಕೂ ಹೆಚ್ಚು ಚಾನೆಲ್, 13 ಒಟಿಟಿ ಆ್ಯಪ್‌‌ಗಳು! ಪಡೆಯೋದು ಹೇಗೆ?

sexual abuse
ದೇಶ58 mins ago

Sexual abuse: ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಕೇಸ್‌ ತೆಗೆದುಕೊಳ್ಳಲು ವಕೀಲರ ಹಿಂದೇಟು-ಆ.24ರಂದು ಬಂದ್‌ಗೆ ಕರೆ

KL Rahul
ಕ್ರಿಕೆಟ್1 hour ago

KL Rahul: ಆರ್‌ಸಿಬಿ ಸೇರದಂತೆ ಕೆ.ಎಲ್​ ರಾಹುಲ್‌ಗೆ 25 ಕೋಟಿ ಆಫರ್ ಮಾಡಿದ ಫ್ರಾಂಚೈಸಿ!

ಕರ್ನಾಟಕ1 hour ago

CM Siddaramaiah: ಪರಿಸ್ಥಿತಿ ಬಂದ್ರೆ ಮುಲಾಜಿಲ್ಲದೆ ಕುಮಾರಸ್ವಾಮಿಯನ್ನು ಬಂಧಿಸ್ತೀವಿ ಎಂದ ಸಿಎಂ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌