Ibbani thabbida ileyali :ಇಬ್ಬನಿ ತಬ್ಬಿದ ಇಳೆಯಲಿ; ಪ್ರೇಮಕಾವ್ಯವನ್ನು ತಬ್ಬಿದ ನಿರ್ದೇಶಕ-ತಬ್ಬಿಬ್ಬಾದ ಪ್ರೇಕ್ಷಕ - Vistara News

ಸ್ಯಾಂಡಲ್ ವುಡ್

Ibbani thabbida ileyali :ಇಬ್ಬನಿ ತಬ್ಬಿದ ಇಳೆಯಲಿ; ಪ್ರೇಮಕಾವ್ಯವನ್ನು ತಬ್ಬಿದ ನಿರ್ದೇಶಕ-ತಬ್ಬಿಬ್ಬಾದ ಪ್ರೇಕ್ಷಕ

Ibbani thabbida ileyali : ಸೆ.5ಕ್ಕೆ ತೆರೆ ಕಂಡ ಇಬ್ಬನಿ ತಬ್ಬಿದ ಇಳೆಯಲಿ ಕನ್ನಡ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ (Film Review) ವ್ಯಕ್ತವಾಗಿದೆ. ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪರ ಮೊದಲ ಪ್ರೇಮಕಾವ್ಯಕ್ಕೆ ಕೆಲವರು ಮನಸೋತರೆ, ಮತ್ತೆ ಹಲವರಿಗೆ ಗೊಂದಲ ಮೂಡಿಸಿದೆ.

VISTARANEWS.COM


on

Ibbani thabbida ileyali Film Review by Shivaraj DNS
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Shivaraj DNS

-ಶಿವರಾಜ್ ಡಿ.ಎನ್.ಎಸ್
ಢಮಾರ್ ಡಿಮೀರ್ ಸಿನಿಮಾ (Ibbani thabbida ileyali) ಇದಲ್ಲ, ಹಸಿಬಿಸಿ ದೃಶ್ಯಗಳು ಇಲ್ಲಿಲ್ಲ. ಇದೊಂದು ಸ್ವಚ್ಛಂದ ಸುಮಧುರ ಪ್ರೇಮಕಾವ್ಯ ಹಾಗಾಗಿ ಇಲ್ಲಿ ಚುಂಬನ ಆಲಿಂಗನವೂ ಇಲ್ಲ. ಕಲರ್‌ ಫುಲ್‌ ದೃಶ್ಯಗಳಿಂದ ಕೂಡಿರುವ ಅದ್ಭುತ ಛಾಯಗ್ರಹಣ, ಉತ್ತಮ ನಟನೆ, ಸಾಹಿತ್ಯ, ಸಂಗೀತ ಎಲ್ಲವೂ ಇದೆ (Film Review) ಆದರೆ.. ಕಥೆ, ಗಟ್ಟಿಕತೆಯಿಲ್ಲ. ನವಯುವಕ ಸಿದ್‌ ಕಥಾನಾಯಕ, ಈ ಪಾತ್ರ ಗಾಳಿ ಬೀಸಿದ ಕಡೆಗೆಲ್ಲ ತೇಲಿ ಹೋಗುವಷ್ಟು ಟೊಳ್ಳು.

ಸಿದ್‌ ಖ್ಯಾತ ಉದ್ಯಮಿ ಅಶೋಕ್ ನಾಚಪ್ಪನವರ ಪುತ್ರ. ಕಾಲೇಜಿನ ಕ್ರಿಕೆಟ್ ತಂಡದ ನಾಯಕ, ತನ್ನದೇ ಸ್ವಾರ್ಟ್‌ ಅಪ್‌ ಕನಸು ಕಾಣುತ್ತಿರುವ ಹುಡುಗ. ಕಾಲೇಜು ಮುಗಿಸುತ್ತಿರುವ ಹುಡುಗಿ‘ರಾಧೆ’ ಇವರಿಬ್ಬರ ಮದುವೆ ನಿಶ್ಚಯ ಆಗಿದೆ ಎನ್ನುವ ದೃಶ್ಯಾವಳಿಯೊಂದಿಗೆ ಸಿನಿಮಾ ತೆರೆದುಕೊಳ್ಳುತ್ತದೆ. ಮನಸ್ಸಿನಲ್ಲಿ ಪ್ರೀತಿ ಇಲ್ಲದೇ ಅದ್ಹೇಗೆ ಮದುವೆಯ ಭವಬಂಧನದ ಸಂಬಂಧ ಹೊಂದಲು ಸಾಧ್ಯ..? ಎನ್ನುವ ತನ್ನ ಅಂತಕರ್ಣ ಅಂತರಾಳದ ವೇದನೆ ಅರಿತು, ಸಿಧ್‌ ರಾಧೆಗೆ ತನ್ನ ನಿರ್ಧಾರ ತಿಳಿಸುತ್ತಾನೆ. ಆದರೆ ಅದನ್ನು ಅಪಾರ್ಥ ಮಾಡಿಕೊಳ್ಳುವ ರಾಧೆ ತಮಾಷೆ ಎಂದುಕೊಳ್ಳುತ್ತಾಳೆ. ಅದಾಗಿಯು ಮುಂದುವರಿದು ಮದುವೆ ಸಮಾರಂಭ ಒಂದು ಹಾಡು ಮುಗಿಸಿಕೊಂಡು ಬಂದು ಮುಂದುವರಿದ ದೃಶ್ಯ ಮಂಟಪದಲ್ಲಿ ಸಿದ್‌ ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ, ತಾನು ಹುಟ್ಟಿದಾಗಿನಿಂದಲೂ ಯಾರಿಗೂ ‘ಏಪ್ರಿಲ್‌ ಪೂಲ್ʼ ಮಾಡುವ ಅಭ್ಯಾಸವಿಲ್ಲ ಎಂದು ತನ್ನ ನಿರ್ಧಾರವನ್ನು ರಾಧೆಯ ಬಳಿ ಎಲ್ಲಾರೆದರು ಹೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಮೇಲೂ ಅವಳು ಓಕೆ ಎಂದರೇ ತಾಳಿಕಟ್ಟಲು ಸಿದ್ಧ ಎನ್ನುವ ನಿರ್ಧಾರ ನಾಯಕ ನಟನದ್ದು. ಸರಿ ಮದುವೆಯೇನೊ ಮುರಿದು ಬೀಳುತ್ತದೆ, ಆದರೂ ಹನಿಮೂನ್‌ಗೆ ಬುಕ್‌ ಮಾಡಿದ್ದ ಹೋಟೆಲ್‌ಗೆ ಇಬ್ಬರೂ ತಲುಪಿರುತ್ತಾರೆ, ಯಾರು? ಮದುವೇ ಮುರಿದು ಬಿದ್ದ ಅದೇ ಹೆಣ್ಣು-ಗಂಡು ಅಲ್ಲಿಗೆ ತಲುಪುತ್ತಾರೆ. ಅದು ಹೇಗೆ ಏನು ಎಂಬುದನ್ನು ಸಿನಿಮಾದಲ್ಲೆ ನೋಡಿ ಅನುಭವಿಸಿ. ಅಲ್ಲಿಗೆ ಕತೆ ಮುಗಿಯಲ್ಲ ಅಲ್ಲಿಂದ ಶುರುವಾಗುತ್ತದೆ. ರಾಧೆಗೆ ಸಿದ್‌ ಇಷ್ಟ ಆದರೆ ಸಿದ್‌ ಮದುವೆ ಮುರಿದುಕೊಂಡು ತನ್ನ ಮೊದಲ ಪ್ರೀತಿಯ ಹುಡುಗಿ ‘ಅನಾಹಿತ’ಳನ್ನು ಹುಡುಕಿ ಹೊರಡುತ್ತಾನೆ. ಚಿತ್ರದಲ್ಲಿ ಬರುವ ಹಾಡು, ಕವಿತೆ, ಒಂದಷ್ಟು ಹೊಸ ರೀತಿಯ ಡ್ರಾಮೆಟಿಕ್ ಸೀನ್ ಇಷ್ಟವಾಗುತ್ತದೆ. ಮೊದಲಾರ್ಧದಲ್ಲಿ ಮೊದಲ ಪ್ರೇಯಸಿಯನ್ನು ಅದ್ಭುತವಾಗಿ ತೋರಿಸುವ ಕಾರಣ ಎರಡನೇ ಭಾಗದಲ್ಲಿ ತಿಳಿಯುತ್ತದೆ. ಇದುವೇ ತ್ರಿಕೋನ ಪ್ರೇಮ ಕತೆ ಈ ಇಬ್ಬನಿ ತಬ್ಬಿದ ಇಳೆಯಲಿ.

Ibbani thabbida ileyali Film Review by Shivaraj DNS
Ibbani thabbida ileyali Film Review by Shivaraj DNS

ಚಿತ್ರದುದ್ದಕ್ಕೂ ಕಥೆ ಮತ್ತೆ ಮತ್ತೆ ನೆನಪಿನ ಹಿಂದೆ ಜಾರುತ್ತದೆ. ಮದುವೆಯಲ್ಲಿ ಮಗುವೊಂದು ಬಳಸುತ್ತಿರುವ ಸಣ್ಣ ಕ್ಯಾಮೆರಾ, ಸಿದಾರ್ಥ್‌ಗೆ ಹಿಂದಿನ ನೆನಪನ್ನು ಕಾಡುತ್ತದೆ. ಪೋಲರಾಯ್ಡ್ ಕ್ಯಾಮೆರಾವನ್ನು ಬಳಸಿದ ಅವನ ತಾಯಿಯನ್ನು ನೆನಪಿಸಿಕೊಳ್ಳುತ್ತಾನೆ. ಸಿದ್ ತನ್ನ ಮನಸ್ಸಿನ ಆಂತರಿಕ ಘರ್ಷಣೆಯಿಂದ ಮದುವೆಯನ್ನು ರದ್ದುಗೊಳಿಸುವುದು. ಕಥೆ ಹಿಂದೆ ಮುಂದೆ ಸಾಗುತ್ತ ಹೋದಂತೆ, ಗೊಂದಲದ ಗೂಡಾಗಿರುವ ಸಿದ್‌ನ ಮನಸ್ಸು ಅನಾಹಿತಾಳ ಗತಕಾಲದ ನೆನಪುಗಳೊಂದಿಗೆ ಜೋತು ಬಿದ್ದಿರುವಂತೆ ಪ್ರೇಕ್ಷಕರಿಗೆ ಅರಿವಾಗುತ್ತದೆ. ಸಿನಿಮಾದಲ್ಲಿ ಕತೆ ಹೇಳಲು ಹೆಚ್ಚು ಫ್ಲಾಶ್ ಬ್ಯಾಕ್ ಬಳಸಲಾಗಿದೆ. ಅದು ಕೆಲವು ಕಡೆ ವರ್ಕ್ ಆಗಿಲ್ಲ. ಚಂದ್ರಜಿತ್ ಬೆಳ್ಳಿಯಪ್ಪ ಅವರ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಆರು ಅಧ್ಯಾಯಗಳಲ್ಲಿ ನಾನ್ ಲೀನಿಯರ್ ಮಾದರಿಯಲ್ಲಿ ಅವುಗಳನ್ನು ಪ್ರಸ್ತುತ ಪಡಿಸಿದ್ದಾರೆ. ಪ್ರೇಕ್ಷಕರಲ್ಲಿ ಇದು ಯಾಕಾಗಿ ಎನ್ನುವುದು ಪ್ರಶ್ನೆ ಮೂಡಿಸುವುದರ ಹೊರತಾಗಿ ಯಾವ ಪರಿಣಾಮವನ್ನು ಬೀರುವುದಿಲ್ಲ. ವಿಹಾನ್ ಗೌಡ, ಮಯುರಿ ನಟರಾಜ್, ಅಂಕಿತ ಅಮರ್, ಗಿರಿಜ ಶೆಟ್ಟಾರ್ ಎಲ್ಲರ ಅಭಿನಯವೂ ಅಚ್ಚುಕಟ್ಟಾಗಿದೆ. ನವಿರಾಧ ಪ್ರೇಮ ಕಾವ್ಯ, ದೃಶ್ಯಗಳು ಹಸಿರು, ಮಳೆ, ಇಬ್ಬನಿ, ಹೂವು-ಹಣ್ಣು, ಗಿಡ-ಬಳ್ಳಿಗಳಿಂದ ಕೂಡಿದ್ದೂ ಸುಂದರ ಎನಿಸುತ್ತದೆ. ಆದರೂ ಏನೋ ಸರಿಯಿಲ್ಲ ಎಂಬ ಗೊಂದಲ ಪ್ರೇಕ್ಷಕರಲ್ಲಿ ಮೂಡುತ್ತದೆ.

ಅವನು ಅವಳನ್ನು ಗಾಢವಾಗಿ ಪ್ರೀತಿಸುತ್ತಾನೆ. ನಿತ್ಯ ನೆನಪಾಗಿ ಕಾಡುವ, ಹಲವು ವರುಷಗಳಿಂದ ನೋಡದೇ ಇರುವ ಅವಳನ್ನು ಹುಡುಕುತ್ತಾನೆ. ಆ ಹುಡುಕಾಟದಲ್ಲಿ ಅಲ್ಲಿಂದ ಮತ್ತೆಲ್ಲಿಗೋ ಸಾಗಿ ಬಂದು ಅವಳ ಮನೆ ತಲುಪಿ ಬೆಲ್‌ ಬಾರಿಸುತ್ತಾನೆ. ಆಕೆಯೇ ಬಂದು ಬಾಗಿಲು ತೆರೆಯುತ್ತಾಳೆ. ಆದರೆ ಒಂದು ಕ್ಷಣ ಅವನು ಅವಳನ್ನು ಗುರುತಿಸಲು ಸಾಧ್ಯವೇ ಆಗುವುದಿಲ್ಲ. ಆಕೆಯನ್ನೇ ದಿಟ್ಟಿಸುತ್ತಾ ನೋಡುವ ನಾಯಕ ಕ್ಷಣಕಾಲ ಚಕಿತನಾಗಿ ಕಣ್ತುಂಬಿಕೊಂಡು ಬೇಸರದಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿ ಬಿಡುತ್ತಾನೆ. ಇಂತಹ ಅನೇಕ ಉದಾಹರಣೆಗಳಿವೆ.

Ibbani thabbida ileyali Film Review by Shivaraj DNS
Ibbani thabbida ileyali Film Review by Shivaraj DNS

ಗಮನ ಸೆಳೆಯುವ ಸಿನಿಮಾ ಟೈಟಲ್‌ ಕೇಳಿದಾಗ ಕನ್ನಡದ ಹಳೆಯ ಚಿತ್ರಗೀತೆಯೊಂದು ನೆನಪಾಗುವುದಷ್ಟೆ ಅಲ್ಲ, ಹಲವು ಕಾರಣಗಳಿಗೆ ಸಿನಿಮಾ ನೋಡುವಾಗ ಅನ್ಯ ಭಾಷೆಯ ಮತ್ತೆರಡು ಹಳೆಯ ಸಿನಿಮಾ ಹಾಗೂ ಕನ್ನಡದ ಇತ್ತೀಚಿನ ಸಪ್ತಸಾಗರ ಚಿತ್ರ ನೆನಪಾಗುತ್ತವೆ. ಅದರ ಹೊರತಾಗಿ ಆ ಸಿನಿಮಾಗಳಿಗೂ ಈ ಸಿನಿಮಾಕ್ಕೂ ಯಾವುದೇ ಸಾಮ್ಯತೆ ಇಲ್ಲ. ಮೊದಲಾರ್ಧ ರಾಧೆಯ ಪಾತ್ರಕ್ಕೆ ಕ್ಲಾಸಿಕಲ್ ಟಚ್ ಕೊಟ್ಟು ಬ್ಯೂಟಿಫುಲ್ ಎನ್ನುವುದರೊಳಗೆ ಅದನ್ನು ತೇಲಿಸಿ, ಮತ್ತೆಲ್ಲೆಲ್ಲೊ ಸುತ್ತಿ ಸುತ್ತಿ ಪ್ರೇಕ್ಷರನ್ನು ಸುಸ್ತು ಮಾಡುತ್ತದೆ. ಯಾವುದೇ ಎಳೆಯಲ್ಲೂ ಪ್ರೇಕ್ಷಕರನ್ನು ಕನೆಕ್ಟ್‌ ಆಗುವುದಿಲ್ಲ. ಸೆಕೆಂಡ್‌ ಆಫ್‌ನಲ್ಲಿ ಸಿದ್‌ ಮತ್ತು ಅನಾಹಿತಳ ನಡುವೆ ಮತ್ತೆ ಚಿಗುರುವ ಸಂಬಂಧ, ಒಡನಾಟ, ನೋವಿದ್ದರೂ ನಲಿವನತ್ತ ಹೆಜ್ಜೆ ಹಿಡುವುದು ಪರಿಪಾಠವಾಗಬೇಕು ಎನ್ನುವ ತತ್ವ ಪ್ರಯೋಗವಾಗಿದ್ದರೂ ಪ್ರಯೋಜನವಾಗಿಲ್ಲ. ಒಟ್ಟಾರೆಯಾಗಿ ಇದೊಂದು ಒಳ್ಳೆಯ ಪ್ರಯತ್ನ ಎನ್ನಬಹುದಾದ ಉತ್ತಮ ನಟನೆ ಅತ್ಯುತ್ತಮ ತಂತ್ರಗಾರಿಕೆಯ ಚಿತ್ರ. ಸಂಭಾಷಣೆಯಲ್ಲಿ ಇರುವಂತೆ ಚಿತ್ರದ ಕಥೆಯಲ್ಲೂ ಹಲವಾರು ಬಾರಿ ಪ್ರೇಕ್ಷರನ್ನು ಗೊಂದಲಗೊಳಿಸುವ ಗೊಂದಲಗಳಿವೆ. ಇದು ಭಾವಪ್ರಧಾನ ಸಿನಿಮಾ ಸರಿ, ಆದರೆ ಅದು ಪ್ರೇಕ್ಷಕರ ಎದೆಯಲ್ಲಿ ಪ್ರಭಾವ ಬೀರುವಂತಿರಬೇಕು ಅಲ್ಲವೇ..? ಮಾಸ್‌ ಸಿನಿಮಾಗಳ ಹಾರಾಟ- ಚೀರಾಟದ ನಡುವೆ ಇದೊಂದು ಆಸ್ವಾಧಿಸುವ ಚಿತ್ರವಾಗುವ ಹಲವು ಸಾಧ್ಯಗಳಿದ್ದರೂ ಸಫಲವಾಗಿಲ್ಲ.

ಅನಿಸಿದ್ದನ್ನು ನೇರವಾಗಿ ತಿಳಿಸಿರುವ ಈ ಉದ್ದೇಶ ಕನ್ನಡ ಚಿತ್ರರಂಗ ಮತ್ತು ಪ್ರೇಕ್ಷಕರು ಒಳ್ಳೆಯ ಸದಭಿರುಚಿ ಸಿನಿಮಾಗಳನ್ನು ಮಾಡುತ್ತ, ನೋಡುತ್ತ ಮುನ್ನುಗುತ್ತಿದ್ದಾರೆ. ಈ ಹೊತ್ತಿನಲ್ಲಿ ಅನ್ಯ ಕಾರಣಗಳಿಗೆ ಇದು ಚೆಂದ, ಭಾವನಾತ್ಮಕ ಸಿನಿಮಾ ಎಂದು ಹೊಗಳಿದರೆ ಅವರನ್ನು ಹಿಂದೆ ಎಳೆದು ಕೂರಿಸಿದಂತೆ. ಹಾಗಾಗಿ ಅದಾಗಬಾರದು ಎನ್ನುವ ವಿಶೇಷ ಕಾಳಜಿ ಮತ್ತು ಸಶಕ್ತ ನಿರ್ದೇಶಕರು, ನಿರ್ಮಾಪಕರ ಮುಂದಿನ ಸಿನಿಮಾ ಒಳ್ಳೆಯದಾಗಿರಲಿ ಎನ್ನುವ ಸದುದ್ದೇಶ ಅಷ್ಟೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Actor Darshan: ನಟ ದರ್ಶನ್‌ ಗ್ಯಾಂಗ್‌ಗೆ ಸೆ.12ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ; ಕೋರ್ಟ್‌ಗೆ ಡಿಜಿಟಲ್‌ ಎವಿಡೆನ್ಸ್‌ ಸಲ್ಲಿಸಿದ ತನಿಖಾಧಿಕಾರಿಗಳು

Actor darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧಿಯಾಗಿರುವ ನಟ ದರ್ಶನ್‌ ಗ್ಯಾಂಗ್‌ನ ನ್ಯಾಯಾಂಗ ಬಂಧನ ಸೆ.9ರಂದು ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಯಿತು. ಸೆಪ್ಟೆಂಬರ್ 12 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.

VISTARANEWS.COM


on

By

actor darshan and gang
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್‌ಗೆ (Actor Darshan)ಸೆಪ್ಟೆಂಬರ್ 12 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ 24ನೇ ಎಸಿಎಂಎಂ ಕೋರ್ಟ್‌ ಆದೇಶ ಹೊರಡಿಸಿದೆ.

ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿನಿಂದ, ಪವಿತ್ರಾಗೌಡ ಮತ್ತಿತರನ್ನು ಪರಪ್ಪನ ಅಗ್ರಹಾರದಿಂದ ಹಾಗೂ ಮೈಸೂರು, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರುಗಿ, ವಿಜಯಪುರದ ಜೈಲಿನಿಂದ ಒಟ್ಟು 17 ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಇದೀಗ ಸೆ.12ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿರುವುದರಿಂದ ದರ್ಶನ್ ಗ್ಯಾಂಗ್‌ಗೆ ಸೆರೆವಾಸ ಮುಂದುವರಿದಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧಿಯಾಗಿರುವ ನಟ ದರ್ಶನ್‌ ಗ್ಯಾಂಗ್‌ನ ನ್ಯಾಯಾಂಗ ಬಂಧನ ಸೆ.9ರಂದು ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಎಲ್ಲ ಆರೋಪಿಗಳ ಹಾಜರಾತಿ ಪಡೆದುಕೊಂಡರು. ಈ ವೇಳೆ ಚಾರ್ಜ್ ಶೀಟ್ ನೀಡಲು ಸರ್ಕಾರಿ ವಕೀಲರು ಕಾಲಾವಕಾಶ ಕೋರಿದರು.

ಆರೋಪಿಗಳ ಪರ ವಕೀಲರಿಗೆ ವೈಯಕ್ತಿಕವಾಗಿ ಚಾರ್ಜ್ ಶೀಟ್‌ ನೀಡಿ ಎಂದು ನ್ಯಾಯಾಧೀಶರು ಸೂಚನೆ ನೀಡಿದರು. ಆರೋಪಿಗಳು ಒಂದೊಂದು ಜೈಲಿನಲ್ಲಿದ್ದಾರೆ, ಹೀಗಾಗಿ ಆರೋಪಿಗಳ ಕೈಗೆ ಚಾರ್ಜ್ ಶೀಟ್ ಸಲ್ಲಿಸಿದರೆ ಜಾಮೀನು ಪ್ರಕ್ರಿಯೆಗೆ ತಡವಾಗುತ್ತದೆ. ಆರೋಪಿಗಳು ವಿಡಿಯೋ ಕಾನ್ಪರೆನ್ಸ್‌ನಲ್ಲಿದ್ದಾರೆ. ಅವರನ್ನು ಕೇಳಿ ಅವರ ಸೂಚನೆ ಮೇರೆಗೆ ಚಾರ್ಜ್ ಶೀಟ್ ನೀಡುವಂತೆ ವಕೀಲರು ಮನವಿ ಮಾಡಿದರು.

ಪುಟ್ಟಸ್ವಾಮಿ ,ನಂದೀಶ್, ರಾಘವೆಂದ್ರ, ಜಗದೀಶ್, ಪವನ್, ಅನುಕುಮಾರ್, ಧನರಾಜ್ ,ರವಿಶಂಕರ್, ವಿನಯ್, ಪ್ರದೂಷ್, ನಾಗರಾಜು ಹಾಗೂ ಲಕ್ಷ್ಮಣ್, ದೀಪಕ್ ಕುಮಾರ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಪರ ವಕೀಲರು ಯಾರೆಂದು ನ್ಯಾಯಾಧೀಶರು ಕೇಳಿದರು. ಈ ವೇಳೆ ನಟ ದರ್ಶನ್‌ ಸಿ.ವಿ. ನಾಗೇಶ್‌ ವಕೀಲರು ಎಂದು ಉತ್ತರಿಸಿದರು. ಇದಕ್ಕೂ ಮೊದಲು ರಿಮ್ಯಾಂಡ್ ಕಾಪಿಯೊಂದಿಗೆ ತನಿಖಾಧಿಕಾರಿ ಎಸಿಪಿ‌ ಚಂದನ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಇದನ್ನೂ ಓದಿ; Actor Darshan : ರೇಣುಕಾಸ್ವಾಮಿಯ ಎದೆ ಮೇಲೆ ಕಾಲಿಟ್ಟು, ಕಿವಿ ಹೊಸಕಿ, ಮರ್ಮಾಂಗ ತುಳಿದ್ರಾ! ನಟ ದರ್ಶನ್‌ ತಪ್ಪೊಪ್ಪಿಗೆ!

ಕೋರ್ಟ್‌ಗೆ ಡಿಜಿಟಲ್‌ ಎವಿಡೆನ್ಸ್‌ ಸಲ್ಲಿಕೆ

ನ್ಯಾಯಾಲಯಕ್ಕೆ ಹಾಜರಾದ ಎಸ್‌ಪಿಪಿ ಪ್ರಸನ್ನ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಎವಿಡೆನ್ಸ್ ಹಾರ್ಡ್ ಡಿಸ್ಕ್ , ಪೆನ್ ಡ್ರೈವ್‌ ಅನ್ನು ಸಲ್ಲಿಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ತನಿಖಾಧಿಕಾರಿ ಎಸಿಪಿ‌ ಚಂದನ್ ಪೆನ್ ಡ್ರೈವ್, ಸಿಡಿ, ಡಿವಿಡಿ, ಹಾರ್ಡ್ ಡಿಸ್ಕ್ ಕಂ ಪೆನ್ ಡ್ರೈವ್ ಸೇರಿ ಒಟ್ಟು 60 ಡಿಜಿಟಲ್ ಎವಿಡೆನ್ಸ್‌ಗಳನ್ನು ಕೋರ್ಟ್‌ಗೆ ಸಲ್ಲಿಸಿದರು.

ಈ ವೇಳೆ ಚಾರ್ಜ್ ಶೀಟ್‌ನ ಆರೋಪಿಗಳ ಪ್ರತಿ ತೆಗೆದುಕೊಂಡು ಬಂದಿದ್ದಾರಾ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದಾಗ, ಎಸ್‌ಪಿಪಿ ಪ್ರಸನ್ನ ಕುಮಾರ್ ಎರಡು ದಿನಗಳಲ್ಲಿ ನೀಡುತ್ತೇವೆ ಎಂದರು. ಆಗ ಆರೋಪಿಗಳ ಪರ ವಕೀಲರು ‌ ಡಿಜಿಟಲ್ ಎವಿಡೆನ್ಸ್ ತಡವಾಗಿ ಬೇಕಾದರೂ ನೀಡಲಿ, ಆದರೆ ಚಾರ್ಜ್ ಶೀಟ್ ಇವತ್ತು ನೀಡಲಿ ಎಂದು ಮನವಿ ಮಾಡಿದರು. ಹೀಗಾಗಿ ಪೇಪರ್ ಚಾರ್ಜ್ ಶೀಟ್ ಅನ್ನು ಇವತ್ತು ನೀಡಿ, ಡಿಜಿಟಲ್ ಎವಿಡೆನ್ಸ್‌ ಅನ್ನು ಎರಡು ವಾರಗಳಲ್ಲಿ ಆರೋಪಿಗಳ ಕಾಪಿ ನೀಡುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್‌ಗೆ ನ್ಯಾಯಾಧೀಶರು ಸೂಚನೆ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Actor Darshan : ರೇಣುಕಾಸ್ವಾಮಿಯ ಎದೆ ಮೇಲೆ ಕಾಲಿಟ್ಟು, ಕಿವಿ ಹೊಸಕಿ, ಮರ್ಮಾಂಗ ತುಳಿದ್ರಾ! ನಟ ದರ್ಶನ್‌ ತಪ್ಪೊಪ್ಪಿಗೆ!

Actor Darshan : ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಪ್ಪೊಪ್ಪಿಗೆ ಮಾಡಿದ್ದಾರೆ. ಜತೆಗೆ ದರ್ಶನ್‌ ಗ್ಯಾಂಗ್‌ ವಿರುದ್ಧ ಸುಮಾರು 11ಸೆಕ್ಷನ್‌ ಅಡಿ ಕೇಸ್‌ ದಾಖಲಿಸಿದ್ದಾರೆ. ಕೊಲೆ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರಿಯುವ ಸಾಧ್ಯತೆ ಇದೆ.

VISTARANEWS.COM


on

By

Actor Darshan
Koo

ಬೆಂಗಳೂರು: ದರ್ಶನ್‌ ಆ್ಯಂಡ್‌ ಗ್ಯಾಂಗ್‌ನಿಂದ (Actor Darshan) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ನಾನೇನು‌ ಮಾಡಿಲ್ಲ ಸರ್,.. ನಮ್ಮ ಹುಡುಗರು ಏನೋ ಮಾಡಿದ್ದಾರೆ ಸರ್ ನನಗೆ ಏನು ಗೊತ್ತಿಲ್ಲ ಎಂದಿದ್ದನಂತೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ದರ್ಶನ್ ತಪ್ಪೊಪ್ಪಿಗೆ ಕುರಿತು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ನಟ ದರ್ಶನ್ ಪ್ರಾರಂಭದ ತನಿಖಾ ಹಂತದಲ್ಲಿ ತಾನೇನು ಮಾಡಿಲ್ಲ ಎನ್ನುತ್ತಿದ್ದರು. ಆದರೆ ಸಾಕ್ಷಿ ಸಮೇತ ಪೊಲೀಸರು ದರ್ಶನ್‌ನ ವಿಚಾರಣೆ ಮಾಡಿದಾಗ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾರೆ. ಶೂ ಕಾಲಿನಲ್ಲಿ ರೇಣುಕಾ ಸ್ವಾಮಿ ಎದೆ ಮೇಲೆ ಕಾಲಿಟ್ಟಿದ್ದಾಗಿ, ಎಡಗಿವಿಯನ್ನು ಹೊಸಕಿದ್ದು ಹಾಗೂ ಮರ್ಮಾಂಗದ ಮೇಲೆ ಕಾಲಿಟ್ಟು ತುಳಿದ ಬಗ್ಗೆ ತಪ್ಪೊಪ್ಪಿಗೆ ಮಾಡಿದ್ದಾರೆ.

ದರ್ಶನ್ ಹೇಳಿಕೆಗೆ ಪೂರಕವಾಗಿ ರೇಣುಕಾಸ್ವಾಮಿ ಪಕ್ಕೆಲಬು ಮುರಿದಿತ್ತು. ವೃಷಣಕ್ಕು ಹಾನಿಯಾಗಿರೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಜತೆಗೆ ರೇಣುಕಾಸ್ವಾಮಿಗೆ ಒಂಟಿ ವೃಷಣವಿರುವ ಇರುವ ಸಂಗತಿಯು ಬೆಳಕಿಗೆ ಬಂದಿದೆ. ಅದನ್ನು ರೇಣುಕಾಸ್ವಾಮಿಯ ತಾಯಿಯೂ ದೃಢಪಡಿಸಿದ್ದಾರೆ. ಹುಟ್ಟಿನಿಂದಲೇ ಒಂಟಿ‌ ವೃಷಣ ವೈಫಲ್ಯದಿಂದ ರೇಣುಕಾಸ್ವಾಮಿ ಜನಿಸಿದ್ದ. ತನಿಖಾಧಿಕಾರಿಗಳು ಎಲ್ಲವನ್ನೂ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ದರ್ಶನ್‌ ಆ್ಯಂಡ್‌ ಗ್ಯಾಂಗ್‌ ವಿರುದ್ಧ 11ಸೆಕ್ಷನ್‌ ಅಡಿ ಕೇಸ್‌

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳ ವಿರುದ್ಧ 11 ಸೆಕ್ಷನ್ ಅಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. 120B, 364, 384,355,302, 201,143,147,148,149,34 ಸೆಕ್ಷನ್ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. 120B ಒಳ ಸಂಚು, 364 ಕಿಡ್ನ್ಯಾಪ್ , 384 ಸುಲಿಗೆ, 355 ಒತ್ತಡ ಹಾಕಿ ಹತ್ಯೆ, 302 ಕೊಲೆ, 201 ಸಾಕ್ಷ್ಯನಾಶ, 143 ಕಾನೂನು ಬಾಹಿರ ಸಭೆ, 147 ಗಲಭೆ, 148, ಮಾರಕಾಸ್ತ್ರ ಬಳಕೆ, 149 ಗುಂಪಿನಲ್ಲಿ ಹಲ್ಲೆ ಮಾಡಿರುವುದು, 34 ಗ್ಯಾಂಗ್‌ನ ಉದ್ದೇಶ ಒಂದೆ ಆಗಿತ್ತು. ಕೋರ್ಟ್‌ನ ಅಧಿಕೃತ ವೆಬ್ ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ: Renuka swamy murder : ಟೀ ಕುಡಿಯಲು ಹೋದವನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್‌

ನ್ಯಾಯಾಂಗ ಬಂಧನ ಮುಂದುವರಿಯುವ ಸಾಧ್ಯತೆ

ನಟ ದರ್ಶನ್ ಪಾಲಿಗೆ ಸೋಮವಾರ ಬಿಗ್ ಡೇ ಆಗುತ್ತಾ. ಯಾಕೆಂದರೆ ಇಂದು ದರ್ಶನ್‌ಗೆ ಸಂಬಂಧಿಸಿದ ಎರಡು ಕೇಸ್‌ಗಳು ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಸೆ.9ರಂದು ದರ್ಶನ್ ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಅಂತ್ಯವಾಗಲಿದೆ. ಜತೆಗೆ ಹೈಕೋರ್ಟ್‌ನಲ್ಲಿ ದರ್ಶನ್ ಊಟದ ಅರ್ಜಿ ವಿಚಾರಣೆಯೂ ನಡೆಯಲಿದೆ. ಇದರೊಟ್ಟಿಗೆ ಜಾಮೀನು ಕೋರಿ ದರ್ಶನ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈ ಮೂರು ವಿಚಾರಗಳಿಂದ ನಟ ದರ್ಶನ್‌ಗೆ ಬಿಗ್ ಡೇ ಆಗಿರಲಿದೆ.

ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯವಾಗಲಿದೆ. ಎಲ್ಲ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ. ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆಗೆ ಪೊಲೀಸರು ಮನವಿ ಮಾಡಲಿದ್ದಾರೆ.

ಬಳ್ಳಾರಿ ಜೈಲಿನಿಂದ ನಟ ದರ್ಶನ್, ಮೈಸೂರು ಜೈಲಿನಿಂದ ಪವನ್, ರಾಘವೇಂದ್ರ, ನಂದೀಶ್ ಹಾಗೂ ಶಿವಮೊಗ್ಗ ಜೈಲಿನಿಂದ ಜಗದೀಶ್- ಲಕ್ಷ್ಮಣ್, ಧಾರವಾಡ ಜೈಲಿನಿಂದ ಧನರಾಜ್, ವಿಜಯಪುರ ಜೈಲಿನಿಂದ ವಿನಯ್ ಸೇರಿದಂತೆ ಕಲಬುರಗಿ ಜೈಲಿನಿಂದ ನಾಗರಾಜ್, ಬೆಳಗಾವಿ ಜೈಲಿನಿಂದ ಪ್ರದೂಷ್, ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾಗೌಡ, ಅನುಕುಮಾರ್, ದೀಪಕ್ ಹಾಜರಾಗಲಿದ್ದಾರೆ.

ಊಟದ ಅರ್ಜಿ ವಿಚಾರಣೆ

ಇನ್ನು ಮನೆ ಊಟ ಕೋರಿ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯಲಿದೆ. ಈಗಾಗಲೇ ದರ್ಶನ್ ಮನೆ ಊಟದ ಮನವಿಗೆ ಅಧಿಕಾರಿಗಳು ಕೊಕ್ಕೆ‌ ಹಾಕಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಂದ ಕೋರ್ಟ್ ಗೆ ವರದಿ ಸಲ್ಲಿಕೆ ಮಾಡಲಿದ್ದಾರೆ.

ಜಾಮೀನು ಅರ್ಜಿ ಸಾಧ್ಯತೆ

ಇಂದು ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಈಗಾಗಲೇ ಪೊಲೀಸರು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಜಾಮೀನು ಕೋರಿ ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Actress Ramya : ಮೋಹಕ ತಾರೆ ನಟಿ ರಮ್ಯಾಗೆ ಕೂಡಿ ಬಂತಾ ಕಂಕಣ ಭಾಗ್ಯ? ನವೆಂಬರ್‌ನಲ್ಲಿ ಮದುವೆ ಫಿಕ್ಸಾ!

Actress Ramya : ಸ್ಯಾಂಡಲ್‌ ಕ್ವೀನ್‌ ರಮ್ಯಾ ಅವರು ಇಷ್ಟರಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ ಅಂತೆ. ವರ ಚೌದ್ರಿ ಫ್ಯಾಮಿಲಿ ಎಂಬುದು ದಟ್ಟವಾಗಿ ಕೇಳಿ ಬರುತ್ತಿದೆ. ಇನ್ನೂ ಈ ಕುರಿತು ನಟಿ ರಮ್ಯಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

VISTARANEWS.COM


on

By

Actress Ramya
Koo

ನಟಿ ರಮ್ಯಾಗೆ (Actress Ramya) ಹೋದಲ್ಲೆಲ್ಲ ಎದುರಾಗುವ ಮೊದಲ ಪ್ರಶ್ನೆ ಮದುವೆ ಯಾವಾಗ ಎನ್ನುವುದು.

Ramya actress
Actress Ramya

ಹಿಂದೊಮ್ಮೆ ಮಂಡ್ಯದಲ್ಲೂ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ ಕೂಡಲೇ, ʻʻದಯವಿಟ್ಟು ನಂಗೊಬ್ಬ ಹುಡುಗನ್ನ ಹುಡುಕಿಕೊಡಿ ಪ್ಲೀಸ್‌ʼʼ ಎಂದಿದ್ದರು. ʻನಾನು ಗೌಡ್ರು ತಾನೇ.. ನಂಗೊಬ್ಬ ಒಳ್ಳೆಯ ಗೌಡ್ರ ಹುಡುಗನ್ನ ಹುಡುಕಿ ಪ್ಲೀಸ್‌. ನನಗೂ ನೋಡಿ ನೋಡಿ ಸಾಕಾಗಿದೆ ಹುಡುಕಿ ನೀವೆʼʼ ಎಂದಿದ್ದರು.

Actress Ramya
Actress Ramya

ಇದೀಗ 42 ವಯಸ್ಸಿಗೆ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಂತಿದೆ. ನವೆಂಬರ್ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಮೋಹಕತಾರೆ ರಮ್ಯಾ ಉದ್ಯಮಿಯೊಬ್ಬರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Actress Ramya
Actress Ramya

ಇಷ್ಟರಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ. ವರ ಚೌದ್ರಿ ಫ್ಯಾಮಿಲಿ ಎಂಬುದು ದಟ್ಟವಾಗಿ ಕೇಳಿ ಬರುತ್ತಿದೆ. ಇನ್ನೂ ಈ ಕುರಿತು ನಟಿ ರಮ್ಯಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಗುಲಾಬಿಗಳ ಜತೆ ಮೋಹಕ ತಾರೆ

Actress Ramya
ಮೋಹಕತಾರೆ ರಮ್ಯಾ (Actress Ramya) ಅವರು ಸುಂದರವಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಗುಲಾಬಿ ಬಣ್ಣದ ಗುಲಾಬಿಗಳ ಸೌಂದರ್ಯವನ್ನು ಸವಿಯುವುದು ಕಾಣಬಹುದು.
ʻʻ2 ದಶಕ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಈಗಲೂ ತನ್ನ ಜೀವನದ ಸಾಮ್ರಾಜ್ಯಕ್ಕೆ ತಾನೆ ರಾಣಿ , ಲವ್ ಯೂ ರಾಣಿʼʼ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.
Actress Ramya
ಈ ಫೋಟೊ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ನೂರಾರು ಮಂದಿ ಇದಕ್ಕೆ ಕಮೆಂಟ್​ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
Actress Ramya
ಫೋಟೊಗಳ ಜತೆ ರಮ್ಯಾ ಅವರು ಒಂದು ಚಂದದ ಕವನ ಹಂಚಿಕೊಂಡಿದ್ದಾರೆ. ಈ ಕವನದಲ್ಲಿ ದೇವರು ಮತ್ತು ಜೀವನದ ಬಗ್ಗೆ ಹೇಳಲಾಗಿದೆ.
Actress Ramya
ಗಾರ್ಡನ್ ಏರಿಯಾದಲ್ಲಿ ವೈಟ್ ಶರ್ಟ್ ಧರಿಸಿ ನಿಂತಿದ್ದ ನಟಿ ಗುಲಾಬಿಗಳಿಗೆ ದೂರದಿಂದಲೇ ಕಿಸ್ ಮಾಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Renuka swamy murder : ಟೀ ಕುಡಿಯಲು ಹೋದವನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್‌

Renuka swamy Murder case : ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ16 ಆರೋಪಿ ಕೇಶವಮೂರ್ತಿ ಸಿಲುಕಿದ್ದೇ ರೋಚಕವಾಗಿದೆ. ಟೀ ಕುಡಿಯೋಕೆ ಹೋದವನು ಕೊನೆಗೆ ಕೊಲೆ ಪ್ರಕರಣದಲ್ಲಿ ಜೈಲು ಸೇರುವಂತಾಗಿದೆ. ಇಷ್ಟಕ್ಕೂ ಆ ದಿನ ಏನೆಲ್ಲ ಆಯಿತು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Renukaswamy murder
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka swamy murder) ಪ್ರಕರಣವನ್ನು ವಿಶೇಷ ಆಸಕ್ತಿ ವಹಿಸಿ ಕಾನೂನು ವ್ಯಾಪ್ತಿಯಲ್ಲಿ ಯಾವ್ಯಾವ ಕೆಲಸಗಳನ್ನು ಮಾಡಬಹುದು ಆ ರೀತಿ ಪೊಲೀಸರು ಕೆಲಸ ಮಾಡಿದ್ದಾರೆ‌. ಇನ್ವೆಷ್ಟಿಗೇಷನ್ ಅಂದರೆ ಇದು ಎಂಬ ರೀತಿಯಲ್ಲಿ ತೋರಿಸಿ ಕೊಟ್ಟಿದ್ದಾರೆ. ಹಾಗೆ ಹಣದಾಸೆಗೆ ಬಿದ್ದವನು ದೊಡ್ಡ ಕೇಸ್‌ನಲ್ಲಿ ಹೇಗೆ ಫಿಟ್ ಆದ ಎಂಬ ಮಾಹಿತಿ ಇಲ್ಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ16 ಆರೋಪಿ ಕೇಶವ ಮೂರ್ತಿ ಕ್ರೈಂ ಸೀನ್‌ನಲ್ಲೇ ಇರಲಿಲ್ಲ. ಆದರೆ ಆತನ ಹಣದಾಸೆ, ಬಡತನವು ಬಹು ದೊಡ್ಡ ಪ್ರಕರಣದ ಆರೋಪಿಯನ್ನಾಗಿಸಿದೆ. ಉತ್ತರಹಳ್ಳಿಯಲ್ಲಿ ಟೀ ಕುಡಿಯುತ್ತಿದ್ದವನು ಕೊಲೆ ಕೇಸಲ್ಲಿ ಭಾಗಿಯಾಗಿದ್ದೇ ರೋಚಕ. ರೇಣುಕಾಸ್ವಾಮಿ ಕೊಲೆಯಾದ ಬಳಿಕ ಈತ ರಾಘವೇಂದ್ರನ ಕಣ್ಣಿಗೆ ಬಿದ್ದಿದ್ದ. ಆಗಲೇ ಕೇಶವಮೂರ್ತಿಯ ಬ್ಯಾಡ್ ಟೈಂ ಶುರುವಾಗಿತ್ತು. ಕ್ರೈಂನಲ್ಲಿ ಭಾಗಿಯಾಗಿಲ್ಲದಿದ್ರೂ ಸಾಕ್ಷಿ ನಾಶದ ಕೇಸ್‌ ಈತನ ಹೆಗಲೇರಿದೆ.

ಚಿತ್ರದುರ್ಗದ ಲಿಂಕ್ ಇರಲಿ ಎಂದು ರಾಘವೇಂದ್ರನನ್ನು ಸರಂಡರ್ ಆಗಲು ಡಿ ಗ್ಯಾಂಗ್ ನಿರ್ಧರಿಸಿತ್ತು. ಮೊದಲು ಆತ ಒಪ್ಪಿರಲಿಲ್ಲ. ಹೀಗಾಗಿ ಕಾರ್ತಿಕ್ ಹಾಗೂ ನಿಖಿಲ್ ನಾವು ಸರಂಡರ್ ಆಗುತ್ತೇವೆ ಎಂದು ಒಪ್ಪಿದ್ದರು. ಈ ವೇಳೆ ಮತ್ತೊಬ್ಬ ಯಾರಾದರೂ ಬೇಕಲ್ಲ ಎಂದು ಹುಡುಕುವಾಗಲೇ ಕಾರ್ತಿಕ್‌ಗೆ ಆತನ ಸ್ನೇಹಿತ ಕೇಶವಮೂರ್ತಿ ಸಿಕ್ಕಿದ್ದ. ಸ್ನೇಹಿತ ಎಂಬ ಕಾರಣಕ್ಕೆ ಕಾರ್ತಿಕ್‌ನನ್ನು ಮಾತನಾಡಿಸಿದ್ದ.

ಈ ವೇಳೆ ಕೇಶವ ಮೂರ್ತಿ ಬಳಿ ಒಂದು ಕೊಲೆಯಾಗಿದೆ. ಸರಂಡರ್ ಆದರೆ ಕೈ ತುಂಬಾ ಹಣ ಕೊಡುತ್ತಾರೆ ಎಂದಿದ್ದ. ಹಣದಾಸೆಗೆ ಬಿದ್ದವನು ಸರಂಡರ್ ಆಗಲು ಒಪ್ಪಿ ಶೆಡ್‌ಗೆ ಹೋಗಿದ್ದ. ನಂತರ ಐದು ಲಕ್ಷ ಅಡ್ವಾನ್ಸ್ ಕೂಡ ಪಡೆದಿದ್ದ. ಆಗಲೇ ಕೇಶವಮೂರ್ತಿಗೆ ದರ್ಶನ್ ಈ ಕೊಲೆಯಲ್ಲಿ ಭಾಗಿಯಾಗಿದ್ದಾನೆಂದು ಗೊತ್ತಾಗಿದ್ದು.

ಮಣ್ಣು ಪರೀಕ್ಷೆ ಮಾಡಿಸಿದ ಪೊಲೀಸರು

ಸದ್ಯ ಆ ಹಣದ ರಿಕವರಿ ಕೂಡ ಆಗಿದೆ. ಇನ್ನು ಇದೇ ತನಿಖೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ಹಿಂದೆ ಕೃತ್ಯ ನಡೆದ ವೇಳೆ ಬಳಕೆಯಾದ ವಸ್ತುಗಳನ್ನು ಪೊಲೀಸರು ರಿಕವರಿ ಮಾಡಿದ್ದರು. ಇದೇ ಮೊದಲ ಬಾರಿಗೆ ಮತ್ತೊಂದು ಪ್ರಯೋಗಕ್ಕೆ ಮುಂದಾಗಿ ಯಶಸ್ವಿಯಾಗಿದೆ. ಕೃತ್ಯ ನಡೆದ ಸಂದರ್ಭದಲ್ಲಿ ದರ್ಶನ್ ಧರಿಸಿದ್ದ ಶೂನಲ್ಲಿದ್ದ ಮಣ್ಣಿನ ವಿವರ ಪಡೆದಿದ್ದರು. ಅದಕ್ಕೆ ಪೂರಕವಾಗಿ ಶೆಡ್‌ನಲ್ಲಿದ್ದ ಮಣ್ಣನ್ನೂ ಎಫ್‌ಎಸ್ಎಲ್ ಗೆ ಕಳಿಸಿದ್ದರು . ಸದ್ಯ ಎರಡು ಕೂಡ ಮ್ಯಾಚ್ ಆಗಿದ್ದು ಅದರ ಬಗ್ಗೆ ಕೂಡ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
kodi swamiji bhavishya
ಹಾಸನ27 seconds ago

Kodi Mutt Swamiji: ಮತ್ತೆ ಪ್ರಕೃತಿ ವಿಕೋಪಗಳು ಸಂಭವಿಸುತ್ತೆ;ಸರ್ಕಾರಕ್ಕೆ ಕಂಟಕನಾ! ಸ್ಫೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ

Ibbani thabbida ileyali Film Review by Shivaraj DNS
ಸ್ಯಾಂಡಲ್ ವುಡ್1 hour ago

Ibbani thabbida ileyali :ಇಬ್ಬನಿ ತಬ್ಬಿದ ಇಳೆಯಲಿ; ಪ್ರೇಮಕಾವ್ಯವನ್ನು ತಬ್ಬಿದ ನಿರ್ದೇಶಕ-ತಬ್ಬಿಬ್ಬಾದ ಪ್ರೇಕ್ಷಕ

CM Siddaramaiah
ಪ್ರಮುಖ ಸುದ್ದಿ2 hours ago

CM Siddaramaiah: ಸಿಎಂ ವಿರುದ್ಧದ ಪ್ರಾಸಿಕ್ಯೂಷನ್;​ ವಾದ-ವಿವಾದ ಆಲಿಸಿ ಸೆ.12ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

murder case
ಬೆಂಗಳೂರು ಗ್ರಾಮಾಂತರ4 hours ago

Murder Case : ಚಾಕುವಿನಿಂದ ಹೆತ್ತವಳ ಕತ್ತು ಸೀಳಿ ಬರ್ಬರವಾಗಿ ಕೊಂದ ಪಾಪಿ ಮಗ

actor darshan and gang
ಬೆಂಗಳೂರು5 hours ago

Actor Darshan: ನಟ ದರ್ಶನ್‌ ಗ್ಯಾಂಗ್‌ಗೆ ಸೆ.12ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ; ಕೋರ್ಟ್‌ಗೆ ಡಿಜಿಟಲ್‌ ಎವಿಡೆನ್ಸ್‌ ಸಲ್ಲಿಸಿದ ತನಿಖಾಧಿಕಾರಿಗಳು

Actor Darshan
ಸಿನಿಮಾ6 hours ago

Actor Darshan : ರೇಣುಕಾಸ್ವಾಮಿಯ ಎದೆ ಮೇಲೆ ಕಾಲಿಟ್ಟು, ಕಿವಿ ಹೊಸಕಿ, ಮರ್ಮಾಂಗ ತುಳಿದ್ರಾ! ನಟ ದರ್ಶನ್‌ ತಪ್ಪೊಪ್ಪಿಗೆ!

Road Accident
ತುಮಕೂರು7 hours ago

Road Accident : ಗಾರ್ಮೆಂಟ್ಸ್ ಬಸ್ ಡಿಕ್ಕಿ ಹೊಡೆದು ತಾಯಿ-ಮಗಳು ಸ್ಥಳದಲ್ಲೇ ದುರ್ಮರಣ

karnataka weather Forecast
ಮಳೆ13 hours ago

Karnataka Weather : ಬೆಂಗಳೂರಲ್ಲಿ ಗುಡುಗು ಸಹಿತ ಮಳೆ; 9 ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ

Dina bhavishya
ಭವಿಷ್ಯ14 hours ago

Dina Bhavishya : ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ತಲೆದೋರಲಿದೆ; ಹೂಡಿಕೆ ವ್ಯವಹಾರಗಳನ್ನು ಮಾಡ್ಬೇಡಿ

Actress Ramya
ಸ್ಯಾಂಡಲ್ ವುಡ್22 hours ago

Actress Ramya : ಮೋಹಕ ತಾರೆ ನಟಿ ರಮ್ಯಾಗೆ ಕೂಡಿ ಬಂತಾ ಕಂಕಣ ಭಾಗ್ಯ? ನವೆಂಬರ್‌ನಲ್ಲಿ ಮದುವೆ ಫಿಕ್ಸಾ!

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 week ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌