Renukaswamy Case : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A11, A12 ಆರೋಪಿಗಳ ಜಾಮೀನು ಅರ್ಜಿಯೂ ನಾಳೆಗೆ ಮುಂದೂಡಿಕೆ - Vistara News

ಬೆಂಗಳೂರು

Renukaswamy Case : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A11, A12 ಆರೋಪಿಗಳ ಜಾಮೀನು ಅರ್ಜಿಯೂ ನಾಳೆಗೆ ಮುಂದೂಡಿಕೆ

Renukaswamy Case : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A11, A12 ಆರೋಪಿಗಳ ಜಾಮೀನು ಅರ್ಜಿಯನ್ನು ನಾಳೆ ಬುಧವಾರಕ್ಕೆ ಕೋರ್ಟ್‌ ಮುಂದೂಡಿದೆ.

VISTARANEWS.COM


on

Actor Darshan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಎ11 ಹಾಗೂ ಎ12 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯು ಮಂಗಳವಾರ ನಡೆಯಿತು. ಲಕ್ಷ್ಮಣ್ ಹಾಗೂ ನಾಗರಾಜು ಸಲ್ಲಿದ್ದ ಜಾಮೀನು ಅರ್ಜಿ ವಿಚಾರಣೆ 57ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯಿತು. ನಾಗರಾಜು ನಟ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಲಕ್ಷ್ಮಣ್ ದರ್ಶನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಕ್ತಾಯವಾಗಿದ್ದು, ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಬೇರೆ ಯಾವುದೇ ಕ್ರೈಂಗಳಲ್ಲಿ ಭಾಗಿಯಾಗಿಲ್ಲ. ಜಾಮೀನು ನೀಡಿದರೆ ತಲೆಮರೆಸಿಕೊಳ್ಳುವ ಹುನ್ನಾರವಿಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲರು ವಾದ ಮಂಡಿಸಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆಲೆಬ್ರಿಟಿಗಳು ಇರುವುದರಿಂದ ಸೆನ್ಷೇಷನಲ್ ಆಗಿದೆ. ಜಾಮೀನು ನೀಡುವಾಗ ಆರೋಪಿಗಳು ಪೂರ್ವಗ್ರಹ ಪೀಡಿತ ರಾಗಬಾರದು. ಆರೋಪಿಗಳ ವಿರುದ್ಧ ಕೊಲೆ, ಒಳಸಂಚು ಸಾಮಾನ್ಯ ಉದ್ದೇಶದ ಆರೋಪವಿದೆ. ಜೊತೆಗೆ ಸಾಕ್ಷಿ ನಾಶದ ಆರೋಪವೂ ಇದೆ. ಆರೋಪ ಸಾಬೀತಾಗುವರೆಗೂ ಆರೋಪಿಗಳನ್ನು ಮುಗ್ಧರಾಗಿ ಪರಿಗಣಿಸಬೇಕು.

ಆರೋಪಿಗಳು ಈಗಾಗಲೇ ನಾಲ್ಕು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಲಕ್ಷ್ಮಣ್ ಹಾಗೂ ನಾಗರಾಜ್ ವಿರುದ್ಧ ಅಪರಾಧ ಹಿನ್ನೆಲೆ ಇಲ್ಲ. ಆರೋಪಿಗಳು ಜಾಮೀನು ಪಡೆಯಲು ಟ್ರೈಪಾರ್ಟ್ ಟೆಸ್ಟ್ ಮುಖ್ಯ ಎಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲ ಸಂದೇಶ್ ಚೌಟ ವಾದಿಸಿದರು. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ವಿಚಾರವಾಗಿಯೂ ಉಲ್ಲೇಖ‌ ಮಾಡಿದ ಸಂದೇಶ್ ಚೌಟ, ಈ ಫೋಟೊಗೆ ಸಂಬಂಧಿಸಿದಂತೆ ಮೂರು ಪ್ರಕರಣ ದಾಖಲು ಮಾಡಲಾಗಿದೆ. ನಂತರ ನಮ್ಮ ಕಕ್ಷಿದಾರರನ್ನು ಬೇರೆ ಬೇರೆ ಜೈಲುಗಳಿಗೆ ರವಾನೆ ಮಾಡಲಾಯಿತು. ಅಲ್ಲಿ ನಮ್ಮ ಕಕ್ಷಿದಾರರು ಸಫರ್ ಆಗುತ್ತಿದ್ದಾರೆ.

ಜೈಲಿನಲ್ಲಿ ಸಿಗರೇಟ್ ಸೇದುವುದು ಅಪರಾಧ ಅಲ್ಲ. ಅಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ನೀಡಲು ಜೈಲು ಮ್ಯಾನ್ಯುಲ್ ಸೂಚಿಸುತ್ತದೆ. ಆದರೆ ಇದನ್ನೇ ಮಹಾ ಅಪರಾಧ ಎಂಬಂತೆ ಬಿಂಬಿಸಲಾಗಿದೆ. ಈ ಪ್ರಕರಣದ ಮೂವರು ಆರೋಪಿಗಳ ವಿರುದ್ಧ 201 ಅಡಿಯಲ್ಲಿ ಚಾರ್ಜಸ್ ಮಾಡಲಾಗಿತ್ತು. ಅವರನ್ನು ಇವರೆ ಬಿಡುಗಡೆ ಮಾಡಬಹುದಿತ್ತು. ಆದರೆ ಯಾಕೆ ಜಾಮೀನು ನೀಡಬಹುದಾದ ಪ್ರಕರಣದಲ್ಲಿ, ಮೂರು ತಿಂಗಳಿಗೂ ಅಧಿಕ ಕಾಲ ಯಾಕೆ ಕಂಬಿ ಹಿಂದೆ ಇಡಲಾಗಿತ್ತು. ಜಾಮೀನು ಎಂಬುದು ಎಲ್ಲರ ಹಕ್ಕು. ಇದು ಭಯೋತ್ಪಾದನೆ ಅಲ್ಲ, ದೇಶದ ಭದ್ರತೆಗೆ ಧಕ್ಕೆ ಅಲ್ಲ, ಕ್ರೂರಾತಿ ಕ್ರೂರ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಅಲ್ಲ. ಹೀಗಾಗಿ ಇವರಿಗೆ ಜಾಮೀನು ನೀಡಬೇಕು. ಜಾಮೀನು ಪರಿಗಣನೆಗೆ ಕೋರ್ಟ್ ಎಂಟು ಅಂಶಗಳನ್ನು ಪರಿಗಣಿಸುತ್ತೆ, ಆ ಎಂಟು ಅಂಶಗಳು ಇವೆ. ಹೀಗಾಗಿ ನಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕು.

ಅರ್ಜಿದಾರರ ಸುದೀರ್ಘ ವಾದ ಆಲಿಸಿದ್ದ ನ್ಯಾಯಾಧೀಶರು ಬಳಿಕ ಮಧ್ಯಾಹ್ನ 2.45ಕ್ಕೆ ಮುಂದೂಡಿದ್ದರು. ಮಧ್ಯಾಹ್ನದ ನಂತರ ಲಕ್ಷ್ಮಣ್ ಹಾಗೂ ನಾಗರಾಜ್ ಪರ ಸಂದೇಶ್ ಚೌಟ ವಾದ ಮುಂದುವರಿಸಿದರು. ಪೊಲೀಸರು ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ರಿಮ್ಯಾಂಡ್ ಅರ್ಜಿಯಲ್ಲಿ ಎಲ್ಲಾ ವಿಚಾರಗಳು ಉಲ್ಲೇಖ ಮಾಡಬೇಕಿತ್ತು. ಆದರೆ ಯಾವುದನ್ನೂ ಸರಿಯಾಗಿ ಉಲ್ಲೇಖ ಮಾಡಿಲ್ಲ. ಕೋಕಾ, ಎನ್‌ಐಎ, ಯುಎಪಿಎ ಕಾಯ್ದೆ ಅಡಿಯಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು.

ಆದರೆ ಇವರು ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳನ್ನು ಉಲ್ಲೇಖ ಮಾಡಿಲ್ಲ. ಆದರೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು, ಆದರೆ ಇದ್ಯಾವುದೂ ಆಗಿಲ್ಲ. ಕೋಕಾ ಎನ್‌ಐಎ ಯುಎಪಿಎ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು. ಆದರೆ ಇವರು ಎಲ್ಲಿಯೂ ಯಾವ ರಿಮ್ಯಾಂಡ್ ಅರ್ಜಿಯಲ್ಲೂ ಸಾಕ್ಷಿಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಒಂದು ವೇಳೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು. ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ‌ ಗಾರ್ಡ್ ಈ ಪ್ರಕರಣದ ಐ ವಿಟ್ನೆಸ್ ಆಗಿದ್ದು, ಎಲ್ಲೂ ಸಹ ಆರೋಪಿ‌ ಲಕ್ಷ್ಮಣ್ ಬಗ್ಗೆ ಹೇಳಿಕೆ ನೀಡಿಲ್ಲ. ಅದು 161 ಹೇಳಿಕೆ ಇರಲಿ ಅಥವಾ 164 ಹೇಳಿಕೆ ಇರಲಿ. ಎಲ್ಲಿಯೂ ಆರೋಪಿ ಲಕ್ಷ್ಮಣ್ ಬಗ್ಗ ಹೇಳಿಕೆ ನೀಡಿಲ್ಲ.

ಸಾಕ್ಷಿಗಳ ಹೇಳಿಕೆ ದಾಖಲು‌ ಮಾಡುವಲ್ಲಿಯೂ ಸಾಕಷ್ಟೂ ತಡ ಆಗಿದೆ. ಪ್ರತ್ಯಕ್ಷದರ್ಶಿಗಳಾದ ಕಿರಣ್, ಮಲ್ಲಿಕಾರ್ಜುನ, ವಿಜಯ್ ಕುಮಾರ್ ಜೂನ್ 15 ಕ್ಕೆ ಪಡೆದಿದ್ದಾರೆ. ನಂತರ ಮಧುಸೂಧನ್, ಪುನೀತ್ ಹೇಳಿಕೆ ದಾಖಲಾಗಿದೆ. ಪುನೀತ್‌ ಸ್ಟಾರ್ ವಿಟ್ನೇಸ್ ಆಗಿದ್ದು, ಘಟನಾ ಸ್ಥಳದಲ್ಲಿ ಇದ್ದ ಎಂಬ ಮಾಹಿತಿ ಇದ್ದರೂ ತಡವಾಗಿ ಹೇಳಿಕೆ ದಾಖಲಿಸಿದ್ಯಾಕೆ.? ಎಂದು ಪ್ರಶ್ನಿಸಿದ್ದರು. ಕೃತ್ಯದಲ್ಲಿ ಯಾವುದೇ ಆರೋಪಿ ಡೆಡ್ಲಿ ವೆಪನ್ ಬಳಸಿಲ್ಲ. ಅಲ್ಲದೇ ಸಂಚು ಮಾಡಿ ಯಾವುದೇ ವೆಪನ್ ತಂದಿಲ್ಲ. ನೈಲಾನ್ ಹಗ್ಗ, ಲಾಠಿ & ವಾಟರ್ ಬಾಟೆಲ್ ಅಷ್ಟೇ. ಈ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳ ವಿರುದ್ಧ ನೇರವಾದ ಯಾವುದೇ ಸಾಕ್ಷಿಗಳಿಲ್ಲ. ಹೀಗಾಗಿ ಜಾಮೀನು ನೀಡಬೇಕು ನಾಗರಾಜ್ ಮತ್ತು ಲಕ್ಷ್ಮಣ್ ಪರವಾಗಿ ಸಂದೇಶ್ ಚೌಟ ವಾದಿಸಿದರು.

ಸಾಕ್ಷಿ ಸೃಷ್ಟಿ, ಇರುವ ಸಾಕ್ಷಿ ನಾಶ, ಸಾಕ್ಷಿಗಳ ತತ್ವಿರುದ್ದ ಮಾಹಿತಿ ನೀಡಲಾಗಿದೆ. ಕೇಸ್ ದಾಖಲಿಸುವುದು ತಡ ಆಗಿದೆ. ಮೃತನ ಸಾವಿನ ಸಮಯ ತಿಳಿದಿಲ್ಲ. ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳ ಹೆಸರೆಳಿಲ್ಲ. ಕೇಸ್ ಡೈರಿ ಉಲ್ಲೇಖಿಸದೇ ಇರೋದು, ಪೊಲೀಸರಿಗೆ ಮಾಹಿತಿ ಇದ್ದರೂ ತನಿಖೆ ತಡ, ಕೊಲೆಗೆ ಬಳಕೆ ಮಾಡಿದ್ದರೆ ಎನ್ನಲಾದ ವಸ್ತುಗಳಲ್ಲಿ ರಕ್ತ ಮಾದರಿ ಇಲ್ಲ. ಬಂಧನಕ್ಕೆ ಪೊಲೀಸರು ಕಾರಣ ನೀಡಿಲ್ಲ. ಚಾರ್ಜ್ ಶೀಟ್ ನಲ್ಲಿ ಸಾಕಷ್ಟು ತಪ್ಪುಗಳಿವೆ. ಮಾಡಿರುವ ಆರೋಪ ಸುಳ್ಳು ಎಂಬುದಕ್ಕೆ ಸಾಕ್ಷಿ ಇದೆ. ಹೀಗಾಗಿ ನಾಗರಾಜ್ ಹಾಗೂ ಲಕ್ಷ್ಮಣ್ ಗೆ ಜಾಮೀನು ನೀಡುವಂತೆ ಮನವಿ ಮಾಡಿದರು. ಸುದೀರ್ಘ ವಾದ ಆಲಿಸಿದ ನ್ಯಾಯಾಲಯ ನಾಳೆ ಬುಧವಾರಕ್ಕೆ ಲಕ್ಷ್ಮಣ್ ಹಾಗೂ ನಾಗರಾಜ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Actor Darshan : ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಅ.9ಕ್ಕೆ ಮುಂದೂಡಿಕೆ; ಬೇಲ್‌ ಸಿಗದಿರಲು ಇದೇ ಕಾರಣ

Actor Darshan : ರೇಣುಕಾಸ್ವಾಮಿ ಕೊಲೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ನಡೆಯಿತು. ಸುದೀರ್ಘ ಪ್ರತಿವಾದ ಆಲಿಸಿದ ಕೋರ್ಟ್‌ ಬುಧವಾರಕ್ಕೆ ಮುಂದೂಡಿದೆ.

VISTARANEWS.COM


on

By

Actor Darshan and Gang
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್‌ನಲ್ಲಿ ನಟ ದರ್ಶನ್ (Actor Darshan) ಆ್ಯಂಡ್ ಗ್ಯಾಂಗ್‌ ಜೈಲುಪಾಲಾಗಿದೆ. ಮುಂದೂಡಿಕೆ ಆಗಿದ್ದ ದರ್ಶನ್‌ರ ಜಾಮೀನು ಅರ್ಜಿ ವಿಚಾರಣೆಯು ಮಂಗಳವಾರ ನಡೆಯಿತು. ದರ್ಶನ್ ಜಾಮೀನು ಅರ್ಜಿ ವಿಚಾರಣೆಯಲ್ಲಿ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿ ವಾದ ಆರಂಭಿಸಿದರು. ಬಳಿಕ ಸುದೀರ್ಘ ಆಲಿಸಿದ ಕೋರ್ಟ್‌ ವಿಚಾರಣೆಯನ್ನು ನಾಳೆ ಬುಧವಾರ‌ ಮಧ್ಯಾಹ್ನ 12ಕ್ಕೆ ಮುಂದೂಡಿದೆ. ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗಳಿಗೆ ಎಸ್‌ಪಿಪಿ ಪ್ರಸನ್ನಕುಮಾರ್‌ ಆಕ್ಷೇಪಣೆ ವಾದ ಮುಂದುವರಿಸಲಿದ್ದಾರೆ.

ಆರೋಪಿ ಪವಿತ್ರಗೌಡ ಮಾಡಿರುವ ಕೃತ್ಯದ ಬಗ್ಗೆ ಪ್ರಸನ್ನ ಕುಮಾರ್ ವಾದ ಶುರು ಮಾಡಿದರು. ಫೆಬ್ರವರಿಯಿಂದಲೇ ರೇಣುಕಾಸ್ವಾಮಿ ಬಗ್ಗೆ ಪವಿತ್ರಗೌಡಗೆ ಗೊತ್ತಿತ್ತು. ತನ್ನ ನಂಬರ್ ಕೊಟ್ಟು ಪವನ್ ಮೂಲಕ ಕಮ್ಯುನಿಕೇಷನ್ ಮಾಡಲು ಪವಿತ್ರಗೌಡ ಹೇಳಿದ್ದರು. ರೇಣುಕಾಸ್ವಾಮಿ ಅಶ್ಲೀಲ ಫೋಟೊ ಕಳಿಸಿ ಹೇಗಿದೆ ಎಂದು ಕೇಳಿದ್ದಾನೆ. ಅದನ್ನು ಬ್ಲಾಕ್ ಮಾಡಬಹುದಿತ್ತು ಅಥವಾ ಪೊಲೀಸರಿಗೆ ದೂರು ನೀಡಬಹುದಿತ್ತು. ಪವನ್ ಮೆಸೇಜ್ ಮಾಡಿ ರೇಣುಕಾಸ್ವಾಮಿಗೆ ಮೆಸೇಜ್‌ ಮಾಡಿ ಎಲ್ಲಿದ್ದೀಯಾ ಅಂತ ಮಾತುಕತೆ ಶುರು ಮಾಡಿದ್ದಾನೆ. ಆಗ ರೇಣುಕಾಸ್ವಾಮಿ ಅಪೋಲೋ ಫಾರ್ಮಸಿ ಎಂದು ಹೇಳಿರ್ತಾರೆ. ಅದಕೆ ಪವಿತ್ರಗೌಡ ಎಡಗೈ ತಂಬ್ ಸಿಂಬಲ್ ಕಳಿಸಿರ್ತಾಳೆ. ಅಷ್ಟೇ ಅಲ್ಲದೇ ಅಖಿಲ ಕರ್ನಾಟಕ ದರ್ಶನ್ ಅಭಿಮಾನಿಗಳ ಸೇನಾ ಅಧಕ್ಷರಿಗೆ ಮಾಹಿತಿ ನೀಡುತ್ತಾನೆ. ಆ ಸೇನೆ ಪ್ಯಾರಲಲ್ ಆಗಿ ಕೆಲಸ ಮಾಡಿದೆ.

ಅಡ್ರೆಸ್ ಹೇಳದೆ ರೇಣುಕಾಸ್ವಾಮಿ ಫೋಟೋ‌ ಕಳಿಸಿದ್ದ. ಇತ್ತ ಎ3 ಪವನ್‌ ರೇಣುಕಾಸ್ವಾಮಿಯ ಫೋಟೋವನ್ನು ಸೈಯದ್ ತೌಸಿಪ್‌ ಎಂಬಾತನಿಗೆ ಕಳಿಸಿ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಅಫೋಲೊ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದನಾ ಎಂದು ಹುಡುಕಾಡಿಸಿದ್ದಾನೆ. ಇದೆಲ್ಲ ಹೇಗೆ ಸಾಧ್ಯ ಎಂದು ಸಿಡಿಆರ್ ಸಂಬಂಧ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.

ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳು ಪರಸ್ಪರ ಗೊತ್ತಿರುವವರೆ. ದರ್ಶನ್ ಪರ ವಕೀಲರು ನೇರವಾಗಿ ಕಾಲ್ ಲಿಂಕ್ ಇಲ್ಲ‌ ಎಂದಿದ್ದರು. ಆರೋಪಿಗಳು ಎಷ್ಟು ಬಾರಿ ಫೋನ್ ಸಂಭಾಷಣೆ ನಡೆಸಿದ್ದಾರೆ ಎಂಬ ದಾಖಲೆ ಸಲ್ಲಿಕೆ ಮಾಡಲಾಗಿದೆ. A1,a2,a3 ರಿಂದ A11ರ ಆರೋಪಿ ವರೆಗೆ ಮಾತಾಡಿರುವ ಕಾಲ್ ಡಿಟೇಲ್ಸ್ ಇದೆ. A3,A9 ಹಾಗೂ ಇತರೆ ಆರೋಪಿಗಳು ರೇಣುಕಾಸ್ವಾಮಿ ಜತೆ ನಡೆಸಿರುವ ಫೋನ್‌ ಸಂಭಾಷಣೆಯ ದಾಖಲೆಯೂ ಸಲ್ಲಿಕೆ ಮಾಡಲಾಗಿದೆ. ಈ ಎಲ್ಲಾ ದಾಖಲೆಗಳನ್ನು ನೋಡಿದರೆ ಆರೋಪಿಗಳ ಒಳಸಂಚಿನ ಬಗ್ಗೆ ತಿಳಿಯಬಹುದು. ದರ್ಶನ್ ಸೇನೆಯ ಸದಸ್ಯರು ರೇಣುಕಾಸ್ವಾಮಿಯನ್ನು ಹಿಡಿಯಲು ಹೋಗಿರುತ್ತಾರೆ. ಎಲ್ಲಿದ್ದೀಯ ಎಷ್ಟೊತ್ತಿರ್ತೀಯಾ ಅಂತ ಚಾಟ್ ಮಾಡಿದ್ದಾರೆ. ರೇಣುಕಾಸ್ವಾಮಿ ಸ್ಕೂಟರ್‌ನಲ್ಲಿ ಇದ್ದರೆ, ಆರೋಪಿಗಳು ಆಟೋದಲ್ಲಿ ಇರುತ್ತಾರೆ. A4,A6,A7 ಆರೋಪಿಗಳ ಟವರ್ ಲೋಕೇಷನ್ ಸಿಕ್ಕಿದೆ.

ಜೂನ್ ತನಕ ರೇಣುಕಾಸ್ವಾಮಿ ಗೊತ್ತಿಲ್ಲ ಅಂತಾರೆ, ಫೆ.27 ಕ್ಕೆ ರೇಣುಕಾಸ್ವಾಮಿ ಜತೆ ಚಾಟ್ ಮಾಡಿದ್ದಾರೆ. ಗೌತಮ್ ಹೆಸರಲ್ಲಿ ಪವಿತ್ರಗೌಡಗೆ ಮೆಸೇಜ್ ಬಂದಿದೆ. ರೇಣುಕಾಸ್ವಾಮಿ ಯಾರೆಂದು ಫೆಬ್ರವರಿಯಲ್ಲೇ ಗೊತ್ತಾಗಿದೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿನ ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದಾರೆ. ಬರುವ ಮಾರ್ಗ ಮಧ್ಯೆ ದುರ್ಗಾ ಬಾರ್‌ನಲ್ಲಿ‌ಮದ್ಯ ಖರೀದಿ‌ ಮಾಡಿದ್ದಾರೆ. ಆರೋಪಿಗಳು ಬರುವ ಮಾರ್ಗದಲ್ಲಿ‌ ಸಿಸಿಟಿವಿ ಸೆರೆಯಾಗಿದೆ. ಎ3 ಆರೋಪಿ ಪವನ್ ನಿರ್ದೇಶನದಂತೆ ಜೂನ್ 8 ರಂದು 1.30ಕ್ಕೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದಾರೆ ಎಂದು ರೇಣುಕಾಸ್ವಾಮಿ ಕಾಣುವ ಸಿಸಿಟಿವಿ ಚಿತ್ರವನ್ನು ಸಲ್ಲಿಕೆ ಮಾಡಿ ಪ್ರತಿವಾದ ಮುಂದುವರಿಸಿದರು.

A8 ಕಾರನ್ನು ಡ್ರೈವ್ ಮಾಡುಕೊಂಡು ಶೆಡ್‌ಗೆ ಬಂದಿದ್ದಾನೆ. ಐ ವಿಟ್ನೆಸ್ ಸೆಕ್ಯೂರಿಟಿ ಗಾರ್ಡ್‌ ಅದಕ್ಕೆ ಸಾಕ್ಷಿಯಾಗಿದ್ದಾನೆ. ಅವರು A4 ಗೆ ಶೆಡ್ ಲೊಕೇಷನ್ ಕಳಿಸಿದ್ದಾರೆ. ತನಿಖೆಯನ್ನು ಮಾಧ್ಯಮಗಳಿಗೆ ಲೀಕ್ ಮಾಡಿದ್ದಾರೆ ಎಂದು ದರ್ಶನ್‌ ಪರ ವಕೀಲರು ಹೇಳ್ತಾರೆ, ಆದರೆ ಆರೋಪಿಗಳ ವಕೀಲರೇ ಮೀಡಿಯಾ ಮುಂದೆ ಹೇಳಿಕೆ ನೀಡಿದ್ದಾರೆ.

ರೇಣುಕಾಸ್ವಾಮಿ ಪವಿತ್ರಗೌಡಗೆ ಕಳಿಸಿರುವ ಮೆಸೇಜ್ ತೋರಿಸಿ ಪ್ರತಿವಾದಿಸಿದ ಪ್ರಸನ್ನ ಕುಮಾರ್, ಖುದ್ದು ಪವಿತ್ರಗೌಡ ನಂಬರ್‌ಗೆ ರೇಣುಕಾಸ್ವಾಮಿ ಮಸೇಜ್‌ ಕಳಿಸಿದ್ದಾನೆ. ಬಳಿಕ ಪವನ್ ನಂಬರ್‌ ಅನ್ನು ನನ್ನ ನಂಬರ್ ಅಂತ ಕೊಟ್ಟಿದ್ದಾಳೆ. A3 ಆರೋಪಿಯಿಂದ A9ರವರೆಗಿನ ಆರೋಪಿಗಳು ಮೊದಲೇ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಅದಕ್ಕೆ ಬಸವರಾಜ, ಸೆಕ್ಯುರಿಟಿ ಗಾರ್ಡ್ ನರೇಂದ್ರ ಸಿಂಗ್ ಕೂಡ ಸಾಕ್ಷಿಯಾಗಿದ್ದಾರೆ. 75,76,79,91 ಸಾಕ್ಷಿಗಳು ಶೆಡ್‌ನಲ್ಲಿ‌ಕೆಲಸ‌ ಮಾಡುವ ಕೆಲಸಗಾರರಾಗಿದ್ದಾರೆ. ಆದರೆ ಈ ಸಾಕ್ಷಿಗಳನ್ನು ಪೊಲೀಸರು ಸೃಷ್ಟಿಸಿರುವ ಸಾಕ್ಷಿಗಳು ಎನ್ನುತ್ತಾರೆ.

ಸ್ಟ್ರೋನಿ ಬ್ರೂಕ್‌ನಲ್ಲಿ ಪ್ಲ್ಯಾನ್‌ ಮಾಡಿರುವ ಬಗ್ಗೆಯೂ ಪ್ರಸ್ತಾಪಿಸಿದ ಪ್ರಸನ್ನಕುಮಾರ್‌, ಸ್ಟ್ರೋನಿ ಬ್ರೂಕ್‌ನಲ್ಲಿ ನಟ ದರ್ಶನ್, ವಿನಯ್ ಎಲ್ಲ ಸೇರಿದ್ದರು. ಇದಕ್ಕೆ ನಟ ಚಿಕ್ಕಣ್ಣ, ಯಶಸ್ ಸೂರ್ಯ‌ ಸಾಕ್ಷಿಗಳಿದ್ದಾರೆ. ಎಲ್ಲರೂ ಸೇರಿ ಪಿತೂರಿ ಮಾಡಿದರೂ ಅನ್ನೋದಕ್ಕೆ ಸಾಕ್ಷಿಇದೆ. ಟೆಕ್ನಿಕಲ್ ಹಾಗೂ ಡಿಜಿಟಲ್ ಎವಿಡೆನ್ಸ್ ಸುಳ್ಳು ಹೇಳಲ್ಲ. ಅಷ್ಟೇ ಅಲ್ಲದೇ ಆರೋಪಿಗಳು ಓಡಾಡಿರುವುದುಕ್ಕೆ ಸಾಕ್ಷಿಗಳಿವೆ. ಶೆಡ್ ಮುಂದಿನ ಸಿಟಿ ಟಿವಿಯಲ್ಲಿ ಚಲನವಲನ ಸೆರೆಯಾಗಿದೆ.

8ನೇ ತಾರೀಖು ಕೆಲಸಕ್ಕೆ ಹೋಗಿದ್ದಾಗಿ ಪುನೀತ್ ಹೇಳಿದ್ದಾನೆ. ಸಾಕ್ಷಿಗಳ ಹೇಳಿಕೆ ತಡವಾಗಿ ದಾಖಲಿಸಿರುವುದಕ್ಕೆ ಪ್ರತಿವಾದಿಸಿದ ಪ್ರಸನ್ನಕುಮಾರ್‌, ಮಧ್ಯಾಹ್ನ 1 ಗಂಟೆಗೆ ಶೆಡ್ ಹೋಗಿದ್ದೆ, ಅಲ್ಲಿ A5, A9 ಇದ್ದರು. ಆಮೇಲೆ ಪವನ್ ಹಾಗೂ ಇತರರು ಬಂದರು. ನಂದೀಶ್ ಹಾಗೂ ಧನರಾಜ್ ಶೆಡ್‌ನಲ್ಲಿದ್ದರು ಎಂದು ಪುನೀತ್ ಹೇಳಿಕೆ ನೀಡಿದ್ದಾನೆ. ದರ್ಶನ್ ಮನೆಯಲ್ಲಿ ಕೆಲಸ ಮಾಡುವವರು ಕಾರಿನಲ್ಲಿದ್ದರು. ರೇಣುಕಾಸ್ವಾಮಿಯನ್ನು ಇಟಿಯೋಸ್ ಕಾರಿನಲ್ಲಿ ಕರೆದುಕೊಂಡು ಬಂದರು. ಆತ ನೋಡಲು ಸಣ್ಣಗೆ ಇದ್ದ, ಆತನ ಮೇಲೆ ಒಂದು ಕಟ್ಟಿಗೆಯಿಂದ 10 ನಿಮಿಷ ಬೆನ್ನು, ಕಾಲಿಗೆ ಹೊಡೆದರು. ಯಾರೆಂದು ಕೇಳಿದಾಗ ಪವಿತ್ರಗೌಡ ಅತ್ತಿಗೆಗೆ ಮೆಸೇಜ್ ಮಾಡುತ್ತಿದ್ದವನು ಅಂದರು. ವಿನಯ್ ರೇಣುಕಾಸ್ವಾಮಿಯನ್ನು ನಾಲ್ಕೈದು ಅಡಿ ಎತ್ತಿ ಬಿಸಾಡಿ ಹಲ್ಲೆ ಮಾಡಿದ್ದಾಗಿ ಪುನೀತ್‌ ಹೇಳಿಕೆ ನೀಡಿದ್ದಾನೆ.

ಪೋಸ್ಟ್ ಮಾರ್ಟಮ್ ಬಗ್ಗೆ ಪ್ರತಿವಾದ ಮಾಡಿದ ಎಸ್ ಪಿಪಿ, 10 ನಿಮಿಷಗಳ ಕಾಲ ಹೊಡೆದಿದ್ದಕ್ಕೆ, ಆತ ಸುಸ್ತಾಗಿ ಬಿದ್ದಿದ್ದ. ನಾನು (ಪುನೀತ್‌) ಹೋಗಿ ಕೇಳಿದಾಗ ನಿನಗೆ ಏನೂ ಗೊತ್ತಿಲ್ಲ ಸುಮ್ಮನೆ ಇರು ಎಂದರು. ಆಗ ಪವಿತ್ರಾಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಾನೆ ಎಂದು ಹೇಳಿ ಹಲ್ಲೆ ಮಾಡಿದರು. ನಂದೀಶ್‌ ಎತ್ತಿ ಎತ್ತಿ ಕುಕ್ಕಿ ಹಲ್ಲೆ‌ ಮಾಡಿದ್ದರು. ಆಗ ಧನರಾಜ್ ಎಲೆಕ್ಟ್ರಿಕ್ ಶಾಕ್ ಕೊಡುತ್ತಾನೆ. ಆಗ ವಿನಯ್ ಫೋನ್‌ ನೀಡುವಂತೆ ಹೇಳಿದ್ದು, ಕಣ್ಣು, ಬಾಯಿ ಬಿಟ್ಟುಕೊಂಡಿದ್ದ ರೇಣುಕಾಸ್ವಾಮಿ ಫೋಟೋ ಕಳಿಸಿದೆ. ಆಗ ಯಾರೂ ಹೊಡೆಯಬಾರದು ಎಂದು ಹೇಳು ಎಂದಿದ್ದ ವಿನಯ್, ದರ್ಶನ್ ಬರುತ್ತಾರೆ ಯಾರನ್ನೂ ಬಿಡಬೇಡ ಎಂದಿದ್ದರು. ಆಗ ದರ್ಶನ್, ಪವಿತ್ರಾಗೌಡ, ವಿನಯ್ ಬಂದಿದ್ದರು.

ಕಾರಿನಿಂದ ಇಳಿಯುತ್ತಿದ್ದಂತೆ ರೇಣುಕಾಸ್ವಾಮಿ ಎದೆಗೆ ಒದ್ದಿದ್ದ ದರ್ಶನ್‌

ದರ್ಶನ್ ಕಾರಿನಿಂದ ಇಳಿದವರೆ ರೇಣುಕಾಸ್ವಾಮಿ ಎದೆಗೆ ಕಾಲಿನಿಂದ ಹೊಡೆದರು. ಪವಿತ್ರಾಗೌಡ ಚಪ್ಪಲಿಯಿಂದ‌ ಹೊಡೆದರು. ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತಿಯಾ, ಗೋವಾದಲ್ಲಿ ರೂಂ ಮಾಡುತ್ತೀಯಾ ಎಂದು ಹೇಳಿ ಹೊಡೆದರು. ಕಾರು ಚಾಲಕ ಲಕ್ಷ್ಮಣ್ ಕೂಡ ಹೊಡೆದಿದ್ದ. ಆಗ ದರ್ಶನ್‌ ರೇಣುಕಾಸ್ವಾಮಿಯ ಪ್ಯಾಂಟ್‌ ಅನ್ನು ಬಿಚ್ಚು ಮತ್ತು ಮೆಸೇಜ್ ಓದಿಸು ಎಂದಿದ್ದರು. ಆಗ ಪ್ಯಾಂಟ್ ಬಿಚ್ಚಿಸಿ ಖಾಸಗಿ ಅಂಗಕ್ಕೆ ದರ್ಶನ್ ತುಳಿದರೆ, ವಿನಯ್ ಕಾಲಿನಿಂದ ಹೊಡೆದಿದ್ದರು. ಆಗ ಮತ್ತೆ ದರ್ಶನ್ ಶೂ ಕಾಲಿನಿಂದ ಎದೆಗೆ ಹೊಡೆಯುತ್ತಿದ್ದರು. ನಂತರ ಪವಿತ್ರಾಗೌಡ ಅವರನ್ನು ಮನೆಗೆ ಬಿಟ್ಟು ಬರುವಂತೆ ವಿನಯ್‌ಗೆ ದರ್ಶನ್ ಹೇಳಿದ್ದಾರೆ.

ಮತ್ತೆ ದರ್ಶನ್ ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ. ದರ್ಶನ್ ಹೊರಗೆ ಹೋಗುವಾಗ ಚಿತ್ರದುರ್ಗದಿಂದ ಬಂದ ವ್ಯಕ್ತಿಗಳು ಬಾಸ್ ಬಾಸ್ ಎಂದು ಫೋಟೋ ಕೇಳಿದ್ದಾರೆ. ಫೋಟೋ ತೆಗೆದ ಬಳಿಕ ಹಾಯ್ ಎಂದು ಕಳಿಸಿ ಎಂದು ನನಗೆ ಹೇಳಿದ್ದರು. ಚಿತ್ರದುರ್ಗದಿಂದ ಬಂದವರಿಗೆ ಊಟ ನೀಡುವಂತೆ ಹೇಳಿದ್ದರು. ಆಗ ಚಿತ್ರದುರ್ಗದಿಂದ‌ ಬಂದವ ನೀರು ಕುಡಿಯುತ್ತಿಲ್ಲ ಎಂದು ಹೇಳಿದೆ . ನನಗೆ ಭಯ ಆಯಿತು, ನಾನು ಮನೆಗೆ ಹೋದೆ. ಜಯಣ್ಣಗೆ ಫೋನ್ ಮಾಡಿ ಏನಾಯಿತು ಎಂದು ಹೇಳಿದೆ. ನಂತರ ಮಲೆ‌ಮಾದೇಶ್ವರ ಬೆಟ್ಟಕ್ಕೆ ಹೊರಟಿದ್ದೆ. ಆಗ ವಿನಯ್ ಫೋನ್‌ ಮಾಡಿ ದರ್ಶನ್, ಪವಿತ್ರಾಗೌಡ ಶೆಡ್‌ಗೆ ಬಂದಿದ್ದ ವಿಚಾರ ಯಾರಿಗೂ ಹೇಳದಂತೆ ಹೇಳಿದ್ದರು ಎಂದು ಹೇಳಿಕೆ ನೀಡಿದ್ದಾನೆ.

ಮರಣೋತ್ತರ ಪರೀಕ್ಷೆ ತಡವಾಗಿದ್ದೇಕೆ ಅಂತ ವಾದಿಸಿದ್ದಾರೆ. ದೇಹದ ಹೊರಭಾಗದಲ್ಲಿ 39 ಗಾಯದ ಗುರುತುಗಳಿವೆ, ಏಳು ಕಡೆ ಮೂಳೆ ಮುರಿತವಾಗಿದೆ. ಎಡಗಡೆಯ ರಿಬ್ ಮುರಿದಿದೆ. ಗಂಭೀರ ರಕ್ತಸ್ರಾವವಾಗಿದೆ. ಎಲ್ಲಾ ಗಾಯಗಳು ರೇಣುಕಾಸ್ವಾಮಿ ಸಾವಿನ ಮೊದಲೇ ಆಗಿರುವ ಗಾಯಗಳಾಗಿವೆ. ಸಾವಿನ ಬಳಿಕ ಆದರೆ ಅನುಮಾನ ಇರುತ್ತೆ. ಒಂದೇ ಒಂದು ಗಾಯ ಆಳವಾಗಿದೆ. ಅದು ಶೆಡ್‌ನಲ್ಲಿರುವ ಗಾಡಿಯ ಬಂಪರ್‌ಗೆ ಹೊಡೆದಾಗ ಸಂಭವಿಸಿರುವ ಗಾಯದ ಗುರುತಾಗಿದೆ. ಈ ಸಂಧರ್ಭದಲ್ಲಿ ತೆಗೆದ ಒಂದಷ್ಟು ಫೋಟೊಗಳು ವಿನಯ್ ಮೊಬೈಲ್ ನಲ್ಲಿ ಪತ್ತೆಯಾಗಿವೆ.

ದೇಹದ ಮೇಲಾಗಿರುವ ಗಾಯಗಳಿಗೆ ರೀಸನ್ ನೀಡಲಾಗಿದೆ. ಇನ್ನೂ ಟೈಮ್ ಆಫ್ ಡೆತ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಿವಿ ನಾಗೇಶ್ ಪ್ರಶ್ನೆಗೆ ಉತ್ತರ ನೀಡಿದ ಎಸ್ ಪಿಪಿ ಪ್ರಸನ್ನ ಕುಮಾರ್, ದರ್ಶನ್ ಪ್ಯಾಂಟ್ ಬಿಚ್ಚಲು ಹೇಳಿದಕ್ಕೂ ಸಾಕ್ಷಿ ಇದೆ ಎಂದು ವಾದಿಸಿದರು. ಬಳಿಕ ಸುದೀರ್ಘ ಆಲಿಸಿದ ಕೋರ್ಟ್‌ ವಿಚಾರಣೆಯನ್ನು ನಾಳೆ ಬುಧವಾರ‌ ಮಧ್ಯಾಹ್ನ 12ಕ್ಕೆ ಮುಂದೂಡಿದೆ. ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗಳಿಗೆ ಎಸ್‌ಪಿಪಿ ಪ್ರಸನ್ನಕುಮಾರ್‌ ಆಕ್ಷೇಪಣೆ ವಾದ ಮುಂದುವರಿಸಲಿದ್ದಾರೆ.

A11, A12 ಆರೋಪಿಗಳ ಜಾಮೀನು ಅರ್ಜಿ ಮುಂದೂಡಿಕೆ

ಜತೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ11 ಹಾಗೂ ಎ12 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯು ನಡೆಯಿತು. ಲಕ್ಷ್ಮಣ್ ಹಾಗೂ ನಾಗರಾಜು ಸಲ್ಲಿದ್ದ ಜಾಮೀನು ಅರ್ಜಿ ವಿಚಾರಣೆ 57ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆದಿದೆ. ನಾಗರಾಜು ನಟ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಲಕ್ಷ್ಮಣ್ ದರ್ಶನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಕ್ತಾಯವಾಗಿದ್ದು, ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಬೇರೆ ಯಾವುದೇ ಕ್ರೈಂಗಳಲ್ಲಿ ಭಾಗಿಯಾಗಿಲ್ಲ. ಜಾಮೀನು ನೀಡಿದರೆ ತಲೆಮರೆಸಿಕೊಳ್ಳುವ ಹುನ್ನಾರವಿಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲರು ವಾದ ಮಂಡಿಸಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆಲೆಬ್ರಿಟಿಗಳು ಇರುವುದರಿಂದ ಸೆನ್ಷೇಷನಲ್ ಆಗಿದೆ. ಜಾಮೀನು ನೀಡುವಾಗ ಆರೋಪಿಗಳು ಪೂರ್ವಗ್ರಹ ಪೀಡಿತ ರಾಗಬಾರದು. ಆರೋಪಿಗಳ ವಿರುದ್ಧ ಕೊಲೆ, ಒಳಸಂಚು ಸಾಮಾನ್ಯ ಉದ್ದೇಶದ ಆರೋಪವಿದೆ. ಜೊತೆಗೆ ಸಾಕ್ಷಿ ನಾಶದ ಆರೋಪವೂ ಇದೆ. ಆರೋಪ ಸಾಬೀತಾಗುವರೆಗೂ ಆರೋಪಿಗಳನ್ನು ಮುಗ್ಧರಾಗಿ ಪರಿಗಣಿಸಬೇಕು.

ಆರೋಪಿಗಳು ಈಗಾಗಲೇ ನಾಲ್ಕು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಲಕ್ಷ್ಮಣ್ ಹಾಗೂ ನಾಗರಾಜ್ ವಿರುದ್ಧ ಅಪರಾಧ ಹಿನ್ನೆಲೆ ಇಲ್ಲ. ಆರೋಪಿಗಳು ಜಾಮೀನು ಪಡೆಯಲು ಟ್ರೈಪಾರ್ಟ್ ಟೆಸ್ಟ್ ಮುಖ್ಯ ಎಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲ ಸಂದೇಶ್ ಚೌಟ ವಾದಿಸಿದರು. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ವಿಚಾರವಾಗಿಯೂ ಉಲ್ಲೇಖ‌ ಮಾಡಿದ ಸಂದೇಶ್ ಚೌಟ, ಈ ಫೋಟೊಗೆ ಸಂಬಂಧಿಸಿದಂತೆ ಮೂರು ಪ್ರಕರಣ ದಾಖಲು ಮಾಡಲಾಗಿದೆ. ನಂತರ ನಮ್ಮ ಕಕ್ಷಿದಾರರನ್ನು ಬೇರೆ ಬೇರೆ ಜೈಲುಗಳಿಗೆ ರವಾನೆ ಮಾಡಲಾಯಿತು. ಅಲ್ಲಿ ನಮ್ಮ ಕಕ್ಷಿದಾರರು ಸಫರ್ ಆಗುತ್ತಿದ್ದಾರೆ.

ಜೈಲಿನಲ್ಲಿ ಸಿಗರೇಟ್ ಸೇದುವುದು ಅಪರಾಧ ಅಲ್ಲ. ಅಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ನೀಡಲು ಜೈಲು ಮ್ಯಾನ್ಯುಲ್ ಸೂಚಿಸುತ್ತದೆ. ಆದರೆ ಇದನ್ನೇ ಮಹಾ ಅಪರಾಧ ಎಂಬಂತೆ ಬಿಂಬಿಸಲಾಗಿದೆ. ಈ ಪ್ರಕರಣದ ಮೂವರು ಆರೋಪಿಗಳ ವಿರುದ್ಧ 201 ಅಡಿಯಲ್ಲಿ ಚಾರ್ಜಸ್ ಮಾಡಲಾಗಿತ್ತು. ಅವರನ್ನು ಇವರೆ ಬಿಡುಗಡೆ ಮಾಡಬಹುದಿತ್ತು. ಆದರೆ ಯಾಕೆ ಜಾಮೀನು ನೀಡಬಹುದಾದ ಪ್ರಕರಣದಲ್ಲಿ, ಮೂರು ತಿಂಗಳಿಗೂ ಅಧಿಕ ಕಾಲ ಯಾಕೆ ಕಂಬಿ ಹಿಂದೆ ಇಡಲಾಗಿತ್ತು. ಜಾಮೀನು ಎಂಬುದು ಎಲ್ಲರ ಹಕ್ಕು. ಇದು ಭಯೋತ್ಪಾದನೆ ಅಲ್ಲ, ದೇಶದ ಭದ್ರತೆಗೆ ಧಕ್ಕೆ ಅಲ್ಲ, ಕ್ರೂರಾತಿ ಕ್ರೂರ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಅಲ್ಲ. ಹೀಗಾಗಿ ಇವರಿಗೆ ಜಾಮೀನು ನೀಡಬೇಕು. ಜಾಮೀನು ಪರಿಗಣನೆಗೆ ಕೋರ್ಟ್ ಎಂಟು ಅಂಶಗಳನ್ನು ಪರಿಗಣಿಸುತ್ತೆ, ಆ ಎಂಟು ಅಂಶಗಳು ಇವೆ. ಹೀಗಾಗಿ ನಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕು.

ಅರ್ಜಿದಾರರ ಸುದೀರ್ಘ ವಾದ ಆಲಿಸಿದ್ದ ನ್ಯಾಯಾಧೀಶರು ಬಳಿಕ ಮಧ್ಯಾಹ್ನ 2.45ಕ್ಕೆ ಮುಂದೂಡಿದ್ದರು. ಮಧ್ಯಾಹ್ನದ ನಂತರ ಲಕ್ಷ್ಮಣ್ ಹಾಗೂ ನಾಗರಾಜ್ ಪರ ಸಂದೇಶ್ ಚೌಟ ವಾದ ಮುಂದುವರಿಸಿದರು. ಪೊಲೀಸರು ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ರಿಮ್ಯಾಂಡ್ ಅರ್ಜಿಯಲ್ಲಿ ಎಲ್ಲಾ ವಿಚಾರಗಳು ಉಲ್ಲೇಖ ಮಾಡಬೇಕಿತ್ತು. ಆದರೆ ಯಾವುದನ್ನೂ ಸರಿಯಾಗಿ ಉಲ್ಲೇಖ ಮಾಡಿಲ್ಲ. ಕೋಕಾ, ಎನ್‌ಐಎ, ಯುಎಪಿಎ ಕಾಯ್ದೆ ಅಡಿಯಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು.

ಆದರೆ ಇವರು ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳನ್ನು ಉಲ್ಲೇಖ ಮಾಡಿಲ್ಲ. ಆದರೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು, ಆದರೆ ಇದ್ಯಾವುದೂ ಆಗಿಲ್ಲ. ಕೋಕಾ ಎನ್‌ಐಎ ಯುಎಪಿಎ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು. ಆದರೆ ಇವರು ಎಲ್ಲಿಯೂ ಯಾವ ರಿಮ್ಯಾಂಡ್ ಅರ್ಜಿಯಲ್ಲೂ ಸಾಕ್ಷಿಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಒಂದು ವೇಳೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು. ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ‌ ಗಾರ್ಡ್ ಈ ಪ್ರಕರಣದ ಐ ವಿಟ್ನೆಸ್ ಆಗಿದ್ದು, ಎಲ್ಲೂ ಸಹ ಆರೋಪಿ‌ ಲಕ್ಷ್ಮಣ್ ಬಗ್ಗೆ ಹೇಳಿಕೆ ನೀಡಿಲ್ಲ. ಅದು 161 ಹೇಳಿಕೆ ಇರಲಿ ಅಥವಾ 164 ಹೇಳಿಕೆ ಇರಲಿ. ಎಲ್ಲಿಯೂ ಆರೋಪಿ ಲಕ್ಷ್ಮಣ್ ಬಗ್ಗ ಹೇಳಿಕೆ ನೀಡಿಲ್ಲ.

ಸಾಕ್ಷಿಗಳ ಹೇಳಿಕೆ ದಾಖಲು‌ ಮಾಡುವಲ್ಲಿಯೂ ಸಾಕಷ್ಟೂ ತಡ ಆಗಿದೆ. ಪ್ರತ್ಯಕ್ಷದರ್ಶಿಗಳಾದ ಕಿರಣ್, ಮಲ್ಲಿಕಾರ್ಜುನ, ವಿಜಯ್ ಕುಮಾರ್ ಜೂನ್ 15 ಕ್ಕೆ ಪಡೆದಿದ್ದಾರೆ. ನಂತರ ಮಧುಸೂಧನ್, ಪುನೀತ್ ಹೇಳಿಕೆ ದಾಖಲಾಗಿದೆ. ಪುನೀತ್‌ ಸ್ಟಾರ್ ವಿಟ್ನೇಸ್ ಆಗಿದ್ದು, ಘಟನಾ ಸ್ಥಳದಲ್ಲಿ ಇದ್ದ ಎಂಬ ಮಾಹಿತಿ ಇದ್ದರೂ ತಡವಾಗಿ ಹೇಳಿಕೆ ದಾಖಲಿಸಿದ್ಯಾಕೆ.? ಎಂದು ಪ್ರಶ್ನಿಸಿದ್ದರು. ಕೃತ್ಯದಲ್ಲಿ ಯಾವುದೇ ಆರೋಪಿ ಡೆಡ್ಲಿ ವೆಪನ್ ಬಳಸಿಲ್ಲ. ಅಲ್ಲದೇ ಸಂಚು ಮಾಡಿ ಯಾವುದೇ ವೆಪನ್ ತಂದಿಲ್ಲ. ನೈಲಾನ್ ಹಗ್ಗ, ಲಾಠಿ & ವಾಟರ್ ಬಾಟೆಲ್ ಅಷ್ಟೇ. ಈ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳ ವಿರುದ್ಧ ನೇರವಾದ ಯಾವುದೇ ಸಾಕ್ಷಿಗಳಿಲ್ಲ. ಹೀಗಾಗಿ ಜಾಮೀನು ನೀಡಬೇಕು ನಾಗರಾಜ್ ಮತ್ತು ಲಕ್ಷ್ಮಣ್ ಪರವಾಗಿ ಸಂದೇಶ್ ಚೌಟ ವಾದಿಸಿದರು.

ಸಾಕ್ಷಿ ಸೃಷ್ಟಿ, ಇರುವ ಸಾಕ್ಷಿ ನಾಶ, ಸಾಕ್ಷಿಗಳ ತತ್ವಿರುದ್ದ ಮಾಹಿತಿ ನೀಡಲಾಗಿದೆ. ಕೇಸ್ ದಾಖಲಿಸುವುದು ತಡ ಆಗಿದೆ. ಮೃತನ ಸಾವಿನ ಸಮಯ ತಿಳಿದಿಲ್ಲ. ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳ ಹೆಸರೆಳಿಲ್ಲ. ಕೇಸ್ ಡೈರಿ ಉಲ್ಲೇಖಿಸದೇ ಇರೋದು, ಪೊಲೀಸರಿಗೆ ಮಾಹಿತಿ ಇದ್ದರೂ ತನಿಖೆ ತಡ, ಕೊಲೆಗೆ ಬಳಕೆ ಮಾಡಿದ್ದರೆ ಎನ್ನಲಾದ ವಸ್ತುಗಳಲ್ಲಿ ರಕ್ತ ಮಾದರಿ ಇಲ್ಲ. ಬಂಧನಕ್ಕೆ ಪೊಲೀಸರು ಕಾರಣ ನೀಡಿಲ್ಲ. ಚಾರ್ಜ್ ಶೀಟ್ ನಲ್ಲಿ ಸಾಕಷ್ಟು ತಪ್ಪುಗಳಿವೆ. ಮಾಡಿರುವ ಆರೋಪ ಸುಳ್ಳು ಎಂಬುದಕ್ಕೆ ಸಾಕ್ಷಿ ಇದೆ. ಹೀಗಾಗಿ ನಾಗರಾಜ್ ಹಾಗೂ ಲಕ್ಷ್ಮಣ್ ಗೆ ಜಾಮೀನು ನೀಡುವಂತೆ ಮನವಿ ಮಾಡಿದರು. ಸುದೀರ್ಘ ವಾದ ಆಲಿಸಿದ ನ್ಯಾಯಾಲಯ ನಾಳೆ ಬುಧವಾರಕ್ಕೆ ಲಕ್ಷ್ಮಣ್ ಹಾಗೂ ನಾಗರಾಜ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿತು.

Continue Reading

ಬೆಂಗಳೂರು

Breast cancer : ಸ್ತನದಲ್ಲಿ ಗಂಟಿನ ರೀತಿ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಲೇಬೇಡಿ!

ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಪಿಂಕ್‌ ಸ್ಟ್ರಾಂಗ್‌ ವಾಕಥಾನ್‌ ನಡೆಸಲಾಯಿತು. ಮಹಿಳೆಯರು ಸ್ತನಕ್ಯಾನ್ಸರ್‌ನ ಬಗ್ಗೆ ಜಾಗೃತಿ ಹೊಂದುವುದು ಅವಶ್ಯಕ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

By

Pink Strong walkathon to raise awareness among people about breast cancer
Koo

ಬೆಂಗಳೂರು: ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಸ್ತನ ಕ್ಯಾನ್ಸರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು “ಪಿಂಕ್‌ ಸ್ಟ್ರಾಂಗ್‌” ವಾಕಥಾನ್‌ನನ್ನು ಆಯೋಜಿಸಿತ್ತು. ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯಿಂದ ಪ್ರಾರಂಭಗೊಂಡ ವಾಕಥಾನ್‌ ಗೋಪಾಲನ್‌ ಮಾಲ್‌ವರೆಗೆ ಮುಕ್ತಾಯಗೊಂಡಿತು. ಸುಮಾರು 5 ಕಿ.ಮೀ ದೂರದ ಈ ವಾಕಥಾನ್‌ನಲ್ಲಿ ಸ್ತನಕ್ಯಾನ್ಸರ್‌ನಿಂದ ಗುಣಮುಖರಾದ ರೋಗಿಗಳು ಹಾಗೂ ಅವರ ಕುಟುಂಬಸ್ಥರು, ಸಾರ್ವಜನರಿಕರು ಫೋರ್ಟಿಸ್‌ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸೇರಿದಂತೆ ಒಟ್ಟು 450 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

Pink Strong walkathon to raise awareness among people about breast cancer
Pink Strong walkathon to raise awareness among people about breast cancer

ವಾಕಥಾನ್‌ನಲ್ಲಿ ಭಾಗವಹಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ಇತ್ತೀಚೆಗೆ ಸಾಕಷ್ಟು ಮಹಿಳೆಯರನ್ನು ಬಾಧಿಸುತ್ತಿರುವ ಕಾಯಿಲೆಗಳ ಪೈಕಿ ಸ್ತನಕ್ಯಾನ್ಸರ್‌ ಕೂಡ ಒಂದು. ಹೆಣ್ಣು ಮಕ್ಕಳು, ಮಹಿಳೆಯರು ಸ್ತನಕ್ಯಾನ್ಸರ್‌ ರೋಗ ಲಕ್ಷಣದ ಬಗ್ಗೆ ಮೊದಲೇ ತಿಳಿದಿದ್ದಾಗ ಮಾತ್ರ ಇದರ ನಿರ್ಮೂಲನೆ ಸಾಧ್ಯ. ಆದರೆ ಸಾಕಷ್ಟು ಮಹಿಳೆಯರಿಗೆ ಇದರ ಬಗ್ಗೆ ಜಾಗೃತಿಯ ಕೊರತೆ ಇದೆ. ಮೊದಲು ಸ್ತನ ಕ್ಯಾನ್ಸರ್‌ ರೋಗದ ಬಗ್ಗೆ ಜಾಗೃತಿ ಹೊಂದಿರಬೇಕು, ಫೋರ್ಟಿಸ್‌ ಆಸ್ಪತ್ರೆಯು ಸ್ತನ ಕ್ಯಾನ್ಸರ್‌ ಮಾಸದ ಭಾಗವಾಗಿ ಈ ವಾಕಥಾನ್‌ ನಡೆಸುವ ಮೂಲಕ ಮಹಿಳೆಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

Pink Strong walkathon to raise awareness among people about breast cancer
Pink Strong walkathon to raise awareness among people about breast cancer

ಫೋರ್ಟಿಸ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿಯ ಹಿರಿಯ ಸಲಹೆಗಾರರಾದ ಡಾ, ಮೋನಿಕಾ ಪನ್ಸಾರಿ ಮಾತನಾಡಿ, ಸ್ತನಕ್ಯಾನ್ಸರ್‌ ಹೆಚ್ಚಾಗಿ ಕಡಿಮೆ ವಯಸ್ಸಿನ ಮಹಿಳೆಯರಲ್ಲೇ ಕಾಣಿಸುತ್ತಿದೆ, ಅಧ್ಯಯನಗಳ ಪ್ರಕಾರ ಸುಮಾರು ಶೇ.48 ರಷ್ಟು ರೋಗಿಗಳಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಇರುವುದು ಆಘಾತಕಾರಿ. ಹೀಗಾಗಿ ಹೆಣ್ಣುಮಕ್ಕಳಿಂದಲೇ ಸ್ತನ ಕ್ಯಾನ್ಸರ್‌ನ ಬಗ್ಗೆ ಜಾಗೃತಿ ಮೂಡಿಸುತ್ತಾ ಹೋದರೆ, ಭವಿಷ್ಯದಲ್ಲಿ ಆಗುವ ಅಪಾಯವನ್ನು ತಡೆಗಟ್ಟಬಹುದು. ಸ್ತನ ಕ್ಯಾನ್ಸರ್‌ ಇರುವ ಬಗ್ಗೆ ಮಹಿಳೆಯರೇ ಸ್ವಯಂ ಪರೀಕ್ಷೆ ಮಾಡಿಕೊಳ್ಳಬಹುದು. ಒಂದು ವೇಳೆ ತಮ್ಮ ಸ್ತನದಲ್ಲಿ ಗಂಟಿನ ರೀತಿ ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗಿ ತಪಾಸಣೆಗೆ ಒಳಗಾಗುವುದು ಒಳ್ಳೆಯದು. ಇನ್ನು, ಮಹಿಳೆಯರು ಆರೋಗ್ಯಕರ ಜೀವನ ಶೈಲಿ ರೂಡಿಸಿಕೊಳ್ಳುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

Continue Reading

ಬೆಂಗಳೂರು

Road Accident : ಮಹಿಳೆಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್‌; ಕೆಳಗೆ ಬಿದ್ದವಳ ತಲೆ ಮೇಲೆ ಹರಿದ ಕಾರು

Road Accident : ಬಿಎಂಟಿಸಿ ಬಸ್‌ವೊಂದು ಮಹಿಳೆಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದವಳ ತಲೆ ಮೇಲೆ ಕಾರೊಂದು ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

VISTARANEWS.COM


on

By

Road Accident
Koo

ಬೆಂಗಳೂರು: ಬೆಂಗಳೂರಿನ ಉಲ್ಲಾಳ ಉಪನಗರ ಕೆರೆ ಬಳಿ ಬಿಎಂಟಿಸಿಗೆ (Road Accident) ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಜ್ಞಾನಭಾರತಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಉಲ್ಲಾಳ ಮುಖ್ಯರಸ್ತೆ 100 ಫೀಟ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮೋನಿಕಾ ಮೃತ ದುರ್ದೈವಿ.

ಸೊನ್ನೆನಾಹಳ್ಳಿಯ ಮಾರುತಿ ನಗರದ ನಿವಾಸಿಯಾಗಿದ್ದ ಮೋನಿಕಾ, ರಿಂಗ್ ರೋಡ್‌ನಲ್ಲಿರುವ ಷೋ ರೂಂನಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಜ್ಯೂಪಿಟರ್ ಸ್ಕೂಟರ್‌ನಲ್ಲಿ ಬರುತ್ತಿದ್ದರು. 100 ಫೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಒಂದು ಬದಿಯ ರಸ್ತೆ ಕ್ಲೋಸ್ ಆಗಿತ್ತು. ಕೇವಲ ಒಂದೇ ಬದಿಯ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಈ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಮೋನಿಕಾಗೆ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದಿದ್ದ ಮೋನಿಕಾ ತಲೆ ಮೇಲೆ ಹಿಂಬದಿಯಿಂದ ಬರುತ್ತಿದ್ದ ಕಾರಿನ ಚಕ್ರ ಹತ್ತಿದೆ. ಪರಿಣಾಮ ಮೋನಿಕಾ ತಲೆ ಛಿದ್ರಗೊಂಡಿದೆ. ಆಕೆಯ ತಲೆ ಮೇಲೆ ಕಾರು ಹತ್ತಿದ ಕಾರಣ ಮೋನಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಡ್ಯ ಮೂಲದ ಮೊನಿಕಾ‌ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ಪತಿ ಜತೆಗೆ ಸೊನ್ನೆನಾಹಳ್ಳಿಯ ಮಾರುತಿ ನಗರದಲ್ಲಿ ವಾಸವಾಗಿದ್ದರು.

ಈ ಕುರಿತು ಬಿಎಂಟಿಸಿ ಸ್ಪಷ್ಟನೆ ನಡೆದಿದೆ. ಉಲ್ಲಾಳ ಕೆರೆಯ ಹತ್ತಿರ ದ್ವಿಚಕ್ರ ವಾಹನ ಸವಾರರು ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ವಾಹನ ಚಲಾವಣೆ ಮಾಡಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಬಸ್ಸಿನ ಬಲಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಡಿಕ್ಕಿಯ ಪರಿಣಾಮ, ಮಹಿಳೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಅವರು ಬಿದ್ದಾಗ, ಹಿಂಬದಿಯಿಂದ ಬರುತ್ತಿದ್ದ ಕಾರು ಅವರ ಮೇಲೆ ಹರಿದಿರುತ್ತದೆ .

ತಕ್ಷಣವೇ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಸವಾರರನ್ನು ಆಸ್ಪತ್ರೆಗೆ ಸಾಗಿಸಿದರು, ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡು, ನಂತರ ಚಿಕಿತ್ಸೆಗೊಳಗಾಗಿದ್ದಾಗ ಕೊನೆಯುಸಿರೆಳೆದಿದ್ದಾರೆ. ಈ ದುರ್ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡಲಾಗಿದೆ. ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Continue Reading

ಬೆಂಗಳೂರು

Theft Case : ಪಿಜಿ, ಬ್ಯಾಚುಲರ್‌ ರೂಂಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ ಖದೀಮರು ಲಾಕ್‌

Theft Case : ಬೆಂಗಳೂರಿನ ಪ್ರತ್ಯೇಕ ಕಡೆಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪೊಲೀಸರು ಬೇದಿಸಿದ್ದಾರೆ. ಪಿಜಿ, ಬ್ಯಾಚುಲರ್‌ ರೂಂಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ, ಲ್ಯಾಪ್‌ ಟಾಪ್‌ ಕದಿಯುತ್ತಿದ್ದ ಹಾಗೂ ಚಿನ್ನ ಪಾಲಿಶ್‌ ನೆಪದಲ್ಲಿ ಕನ್ನ ಹಾಕಿದ ಖದೀಮರು ಲಾಕ್‌ ಹಾಕಿದ್ದಾರೆ.

VISTARANEWS.COM


on

By

Theft case
Koo

ಬೆಂಗಳೂರು: ಕ್ರೈಂಗಳು ಹೆಚ್ಚುತ್ತಿರುವ ಬೆನ್ನಲ್ಲೆ ಕಾರ್ಯಾಚರಣೆಗಿಳಿದಿದ್ದ ಬೆಂಗಳೂರು ನಗರ ಪೊಲೀಸರು ಖರ್ತನಾಕ್‌ ಕಳ್ಳರ ಹೆಡೆಮುರಿ ಕಟ್ಟಿ ಜೈಲಿಗೆ ಕಳಿಸಿದ್ದಾರೆ. ಕುಮಾರಸ್ವಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಜಿ ಕಳ್ಳರನ್ನು (Theft Case) ಬಂಧಿಸಿದ್ದಾರೆ. ಬೆಳಗ್ಗೆ ಎದ್ದು ನಾವೆಲ್ಲಾ ಕೆಲಸಕ್ಕೆ ಹೋದಂತೆ ಇವರು ಪಿಜಿಗಳಲ್ಲಿ ಕಳ್ಳತನ ಮಾಡಲು ಹೊರಡುತ್ತಿದ್ದರು. ಪಿಜಿಗಳಲ್ಲಿ ಕದಿಯಲು ಸಾಧ್ಯವಾಗದೆ ಇದ್ದರೆ ಬ್ಯಾಚುಲರ್ ರೂಂಗಳನ್ನು ಹುಡುಕುತ್ತಿದ್ದರು. ಬ್ಯಾಚುಲರ್ಸ್‌ ಪಾಟ್ ಅಥವಾ ಮ್ಯಾಟ್ ಕೆಳಗೆ ಇಡುತ್ತಿದ್ದ ಕೀಗಳನ್ನು ಗಮನಿಸಿ ಆ ರೂಂಗೆ ಕನ್ನ ಹಾಕುತ್ತಿದ್ದರು. ಹೀಗೆ ಲ್ಯಾಪ್ ಟ್ಯಾಪ್, ಮೊಬೈಲ್‌ಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಒಟ್ಟು 23 ಲಕ್ಷ ಮೌಲ್ಯದ 28 ಮೊಬೈಲ್‌ಗಳು, 34 ಲ್ಯಾಪ್ ಟ್ಯಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ ಗ್ಲಾಸ್ ಒಡೆದು ಲ್ಯಾಪ್ ಟಾಪ್ ಕದಿಯುತ್ತಿದ್ದ ಅಣ್ಣ-ತಮ್ಮ

ಇದೂ ಕೂಡ ಲ್ಯಾಪ್ ಟ್ಯಾಪ್ ಕಳ್ಳತನದ ಕೇಸ್‌ಗಳೇ . ಆದರೆ ಇವರು ಸ್ಥಳೀಯರಲ್ಲ . ಸ್ಕೂಟಿ ಮೂಲಕ ತಮಿಳುನಾಡಿನ ಸೇಲಂನಿಂದ ಬರುತ್ತಿದ್ದ ಅಣ್ಣ-ತಮ್ಮ ಲ್ಯಾಪ್ ಟ್ಯಾಪ್ ಕಳ್ಳತನ ಮಾಡಿ ನಂತರ ಅದೇ ಸ್ಕೂಟಿಯಲ್ಲಿ ಎಸ್ಕೇಪ್ ಆಗುತ್ತಿದ್ದರು. ತಮಿಳುನಾಡಿನಲ್ಲಿ ಅರ್ಧ ಬೆಲೆಗೆ ಲ್ಯಾಪ್ ಟಾಪ್ ಮಾರಾಟ ಮಾಡುತ್ತಿದ್ದರು. ಗಂಗಯ್ಯ ಹಾಗು ಸದಾನಾಯ್ಡು ಎಂಬ ಒಡಹುಟ್ಟಿದವರೇ ಕಳ್ಳರು.

ಹಿಂದೊಮ್ಮೆ ಈ ಸಹೋದರರು ಗ್ಯಾಂಗ್ ಕಟ್ಟಿಕೊಂಡು ಲ್ಯಾಪ್ ಟ್ಯಾಪ್ ಕದಿಯುತ್ತಿದ್ದರು. ಒಂದು ಬಾರಿ ಬಂಧನವಾದ ಬಳಿಕ ಆ ಗ್ಯಾಂಗ್ ಸಹವಾಸ ಬಿಟ್ಟು ಹೊರ ಬಂದು ಇಬ್ಬರೇ ಕಳ್ಳತನ ಮಾಡುತ್ತಿದ್ದರು. ಸದ್ಯ ಖಚಿತ ಮಾಹಿತಿ ಮೇರೆಗೆ ಸದಾನಾಯ್ಡುವನ್ನ ತಮಿಳುನಾಡಿನಲ್ಲಿ ಬಂಧನ ಮಾಡಲಾಗಿದ್ದು, ಗಂಗಯ್ಯನಿಗಾಗಿ ಹುಡುಕಾಟ ಮುಂದುವರೆದಿದೆ.

ಚಿನ್ನ ಪಾಲಿಶ್‌ ನೆಪದಲ್ಲಿ ಕನ್ನ

ಹಲಸೂರು ಗೇಟ್ ಪೊಲೀಸರು ಅಂಕುರ್ ಕುಮಾರ್ ಡುಂಗರ್ ವಾಲ ಎಂಬ ಆರೋಪಿಯನ್ನು ಬಂಧನ ಮಾಡಿದ್ದಾರೆ. ಈತ ಮೂಲತಃ ರಾಜಸ್ಥಾನ ನಿವಾಸಿಯಾಗಿದ್ದು, ಚಿನ್ನದ ಪಾಲಿಶ್ ಕೆಲಸ ಮಾಡುತ್ತಿದ್ದ. ಹಲಸೂರ ಗೇಟ್ ನಿವಾಸಿಯಾಗಿರುವ ಅಂಕುರ್ ಅಲ್ಲಿಯೇ ಇದ್ದ ಜ್ಯೂವೆಲರಿ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಹಣದಾಸೆಗೆ ಬಿದ್ದವನು ಚಿನ್ನದ ಗಟ್ಟಿ ಕಳ್ಳತನ ಮಾಡಲು ಮುಂದಾಗಿದ್ದ. ಈ ಹಿನ್ನೆಲೆಯಲ್ಲಿ ಚಿನ್ನದ ಅಂಗಡಿಗಳಿಗೆ ಹೋಗಿ ಚಿನ್ನವನ್ನು ಪಾಲೀಶ್ ಮಾಡಿಕೊಡುವುದಾಗಿ ಚಿನ್ನದ ಗಟ್ಟಿ ಪಡೆದು ಎಸ್ಕೇಪ್ ಆಗಿದ್ದ. ನಗರ್ತ ಪೇಟೆಯ ಚಿನ್ನದ ವ್ಯಾಪಾರಿ ನೀಡಿದ ದೂರಿನ ಅನ್ವಯವಾಗಿ ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ 10 ಲಕ್ಷ ಮೌಲ್ಯದ 387 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಕುಮಾರಸ್ವಾಮಿ , ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor Darshan
ಬೆಂಗಳೂರು38 ನಿಮಿಷಗಳು ago

Renukaswamy Case : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A11, A12 ಆರೋಪಿಗಳ ಜಾಮೀನು ಅರ್ಜಿಯೂ ನಾಳೆಗೆ ಮುಂದೂಡಿಕೆ

Actor Darshan and Gang
ಬೆಂಗಳೂರು52 ನಿಮಿಷಗಳು ago

Actor Darshan : ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಅ.9ಕ್ಕೆ ಮುಂದೂಡಿಕೆ; ಬೇಲ್‌ ಸಿಗದಿರಲು ಇದೇ ಕಾರಣ

Congress alliance wins in Kashmir Haryana poll survey Calculations turned upside down
ದೇಶ2 ಗಂಟೆಗಳು ago

Jammu-Kashmir Election: ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಯ ಕಮಾಲ್, ಚೇತರಿಸಿಕೊಂಡ ಕಮಲ ಪಡೆ; ತಲೆಕೆಳಗಾಯ್ತು ಹರಿಯಾಣ ಚುನಾವಣೆ ಸಮೀಕ್ಷೆ ಲೆಕ್ಕಾಚಾರ

Pink Strong walkathon to raise awareness among people about breast cancer
ಬೆಂಗಳೂರು3 ಗಂಟೆಗಳು ago

Breast cancer : ಸ್ತನದಲ್ಲಿ ಗಂಟಿನ ರೀತಿ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಲೇಬೇಡಿ!

Road Accident
ಬೆಂಗಳೂರು4 ಗಂಟೆಗಳು ago

Road Accident : ಮಹಿಳೆಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್‌; ಕೆಳಗೆ ಬಿದ್ದವಳ ತಲೆ ಮೇಲೆ ಹರಿದ ಕಾರು

Theft case
ಬೆಂಗಳೂರು6 ಗಂಟೆಗಳು ago

Theft Case : ಪಿಜಿ, ಬ್ಯಾಚುಲರ್‌ ರೂಂಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ ಖದೀಮರು ಲಾಕ್‌

Casteist slur case filed against comedian Huli Karthik for insulting Bovi community
ಬೆಂಗಳೂರು7 ಗಂಟೆಗಳು ago

Huli karthik : ಬೋವಿ ಜನಾಂಗಕ್ಕೆ ಅವಮಾನ, ಹಾಸ್ಯ ನಟ ಹುಲಿ ಕಾರ್ತಿಕ್‌ ವಿರುದ್ಧ ಜಾತಿ ನಿಂದನೆ ಕೇಸ್; ಅಂದು ‘ಬಿಗ್ ಬಾಸ್’ ಇಂದು ‘ಅನುಬಂಧ’!

actor darshan
ಬೆಂಗಳೂರು8 ಗಂಟೆಗಳು ago

Actor Darshan : ಕೊನೆಗೂ ಪೊಲೀಸರ ಕೈಸೇರಿದ ದರ್ಶನ್, ಪವಿತ್ರಾಗೌಡರ ಮೊಬೈಲ್ ರಿಪೋರ್ಟ್! ಸಿಕ್ಕಿ ಬಿಡ್ತು ಮಹತ್ವದ ಸಾಕ್ಷ್ಯ?

Karnataka Weather Forecast
ಮಳೆ14 ಗಂಟೆಗಳು ago

Karnataka Weather : ಬಿರುಗಾಳಿಯೊಂದಿಗೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ

Dina Bhavishya
ಭವಿಷ್ಯ14 ಗಂಟೆಗಳು ago

Dina Bhavishya : ಈ ರಾಶಿಯವರು ಅತಿಯಾದ ಉತ್ಸಾಹದಲ್ಲಿ ಅತಿರೇಕದ ಮಾತುಗಳನ್ನಾಡಬೇಡಿ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ5 ದಿನಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌