Jote Joteyali | ಧಾರಾವಾಹಿ‌ ಸಕ್ಸೆಸ್‌ಗೆ ನಾನೇ ಕಾರಣ ಎಂದುಕೊಂಡಿಲ್ಲ, ನನಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂದ ಅನಿರುದ್ಧ್‌ - Vistara News

ಕಿರುತೆರೆ

Jote Joteyali | ಧಾರಾವಾಹಿ‌ ಸಕ್ಸೆಸ್‌ಗೆ ನಾನೇ ಕಾರಣ ಎಂದುಕೊಂಡಿಲ್ಲ, ನನಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂದ ಅನಿರುದ್ಧ್‌

ಜೊತೆಜೊತೆಯಲಿ (Jote Joteyali) ಖ್ಯಾತಿಯ ಅನಿರುದ್ಧ್‌ ಭಾನುವಾರ ಮತ್ತೆ ಸುದ್ದಿಗೋಷ್ಠಿ ಕರೆದು ತಮಗೆ ಆದ ಅವಮಾನದ ಬಗ್ಗೆ ಹೇಳಿಕೊಂಡಿದ್ದಾರೆ.

VISTARANEWS.COM


on

Jote Joteyali
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ (Jote Joteyali) ಖ್ಯಾತಿಯ ನಟ ಅನಿರುದ್ಧ್‌ ಅವರನ್ನು ಕಿರುತೆರೆ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಬಹಿಷ್ಕರಿಸಲು ತೀರ್ಮಾನಿಸಿದೆ. ಈ ಕುರಿತು ನಿರ್ಮಾಪಕ ಆರೂರು ಜಗದೀಶ್‌ ಕೂಡ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಭಾನುವಾರ ಮಾಧ್ಯಮದವರೊಂದಿಗೆ ನಟ ಅನಿರುದ್ಧ್‌ ಮಾತನಾಡಿ “ಜೊತೆ ಜೊತೆಯಲಿ ಧಾರಾವಾಹಿ ಯಶಸ್ಸಿಗೆ ನಾನೇ ಕಾರಣ ಎಂದು ನಾನು ಯಾವತ್ತೂ ಅಂದುಕೊಂಡಿಲ್ಲ. ಟೀಮ್‌ ವರ್ಕ್‌ನಿಂದ ಯಶಸ್ಸು ಸಿಕ್ಕಿದೆʼʼ ಎಂದು ಹೇಳಿಕೆ ನೀಡಿದ್ದಾರೆ.

ನಟ ಅನಿರುದ್ಧ್‌ ಮಾತನಾಡಿ ʻʻನಾನು ಎಂದೂ ದುರಹಂಕಾರದಿಂದ ನಡೆದುಕೊಂಡಿಲ್ಲ. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕುಳಿತಿದ್ದ ಹಲವಾರು ಜನ ನನಗೆ ಗೊತ್ತೇ ಇಲ್ಲ. ಸೆಟ್‌ನಲ್ಲಿ ನಾನು ಕೋಪಿಸಿಕೊಂಡಿಲ್ಲ ಎನ್ನಲಾರೆ. ಮನುಷ್ಯ ಅಂದ ಮೇಲೆ ಕೆಲಸದ ವೇಳೆ ಕೋಪಿಸಿಕೊಳ್ಳುವುದು ಸಹಜʼʼ ಎಂದಿದ್ದಾರೆ.

ಇದನ್ನೂ ಓದಿ | Jote Joteyali | 3000 ಕೋಟಿ ಒಡೆಯನನ್ನು ಈ ಥರ ತೋರಿಸೋದಾ? ನಿರ್ದೇಶಕರ ವಿರುದ್ಧ ಅನಿರುದ್ಧ್‌ ಆಕ್ರೋಶ!

“ಈ ಪ್ರಕರಣ ಆದಾಗಿನಿಂದಲೂ ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ. ಹೆದರಬೇಡಿ ಸರ್‌, ನಾವು ನಿಮ್ಮನ್ನು ನಂಬುತ್ತೇವೆ ಎನ್ನುತ್ತಿದ್ದಾರೆ. ನನ್ನ ಕುರಿತು ಸಾಕಷ್ಟು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅದು ನನ್ನ ಯಶಸ್ಸು. ಇನ್‌ಸೆಕ್ಯೂರಿಟಿ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಆ ಕುರಿತು ನಾನು ಖಿನ್ನತೆಗೆ ಒಳಗಾಗುವುದಿಲ್ಲ. ನನಗೆ ಮುಂದೆ ಕೆಲಸ ಸಿಕ್ಕೇ ಸಿಗುತ್ತದೆ. ಅಭಿನಯವೊಂದೇ ನನ್ನ ಕೆಲಸ ಅಲ್ಲ. ನಾನು ಲೇಖನಗಳನ್ನೂ ಬರೆಯುತ್ತೇನೆ. ಹಾಡು ಹಾಡುತ್ತೇನೆ. ಆಫ್ ದಿ ರೆಕಾರ್ಡ್ ನೀವು ಸಹಕಲಾವಿದರನ್ನು ಕೇಳಿ ನಾನು ಹೇಗೆ ಎಂದು. ನಾನು ಕೋಪಿಸಿಕೊಳ್ಳುವುದಕ್ಕೆ ಕಾರಣ ಇದೆʼʼ ಎಂದು ಹೇಳಿದ್ದಾರೆ.

“ನನ್ನ ಜತೆ ಕೂತು ಮಾತನಾಡಿ ಅವರು ಗೊಂದಲ ಬಗೆಹರಿಸಿಕೊಳ್ಳಬಹುದಿತ್ತು. ಯೋಚನೆ ಮಾಡಿ ಸ್ಕ್ರಿಪ್ಟ್‌ ಬರೆಯಿರಿ ಎಂದಿದ್ದೆ. ಸುಮ್ಮನೆ ಆರೋಪಗಳನ್ನು ಮಾಡಬಾರದು. ನಾನು ಕ್ಯಾರವನ್‌ ಇಲ್ಲದೆ ಕಾಡಿನಲ್ಲಿ ಟಾಯ್ಲೆಟ್‌ಗೆ ಹೋಗಿದ್ದೇನೆ. ಹೆಣ್ಣು ಮಕ್ಕಳಿಗೆ ಕೆಟ್ಟ ಜಾಗದಲ್ಲಿ ಬಟ್ಟೆ ಬದಲಾಯಿಸಲು ಹೇಳುತ್ತಿದ್ದರು. ಇದನ್ನು ನಾನು ವಿರೋಧಿಸುತ್ತಿದ್ದೆʼʼ ಎಂದಿದ್ದಾರೆ ಅನಿರುದ್ಧ್.

ನಟ ಅನಿರುದ್ಧ್‌ ಅವರು “ಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ಆರ್ಯವರ್ಧನ್‌ ಪಾತ್ರದ ಮೂಲಕ ಜನಮನ್ನಣೆ ಪಡೆದಿದ್ದರು. ಇದೀಗ ಅವರನ್ನು ಬ್ಯಾನ್‌ ಮಾಡಿರುವುದು ಕಿರುತೆರೆ ವೀಕ್ಷಕ ವಲಯದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ | Jote Joteyali | ಆರ್ಯವರ್ಧನ್‌ ಪಾತ್ರದಲ್ಲಿ ಅನಿರುದ್ಧ್ ಇಲ್ಲದೇ ಸೀರಿಯಲ್‌ ನೋಡೋದಿಲ್ಲ: ಪ್ರೇಕ್ಷಕರ ಮುನಿಸು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Amrithadhare Serial: ಭೂಮಿಗೆ ಒಲವಿನುಸಿರ ಕೊಟ್ಟು ಮರುಜನ್ಮ ನೀಡಿದ ಗೌತಮ್‌!

Amrithadhare Serial: ಈಗ ಭೂಮಿಕಾ ಆಸ್ಪತ್ರೆಯಲ್ಲಿ ಇದ್ದಾಳೆ. ಮರು ಜನ್ಮ ನೀಡಿದ ಗೌತಮ್‌ಗೆ ಥ್ಯಾಂಕ್ಸ್‌ ಹೇಳುತ್ತಾಳೆ. ಈ ಜೋಡಿ ಕಂಡು ಪ್ರೇಕ್ಷಕರು ಕೂಡ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರ ಅಭಿನಯಕ್ಕೂ ಮನಸೋತಿದ್ದಾರೆ. ಎಪಿಸೋಡ್‌ ಕಂಡು ತುಂಬಾ ನೋವು ಮತ್ತೆ ಖುಷಿ ಎರಡು ಒಟ್ಟಿಗೆ ಆಯ್ತು ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

Amrithadhare Serial Fans reaction about goutham Bhoomika
Koo

ಧಾರಾವಾಹಿಯಲ್ಲಿ (Amrithadhare Serial) ಪ್ರೇಕ್ಷಕರು ಹೆಚ್ಚಾಗಿ ನಯಸೋದು ನಾಯಕ ನಾಯಕಿ ಒಂದಾಗಬೇಕು ಎಂದು. ಇದೀಗ ಅಮೃತಧಾರೆ ಸೀರಿಯಲ್​ನಲ್ಲಿಯೂ ಅದೇ ರೀತಿ ಆಗಿದ್ದು, ಭೂಮಿಕಾ ಮತ್ತು ಗೌತಮ್​ ಪಾತ್ರಧಾರಿಗಳ ನಟನೆಗೆ ವೀಕ್ಷಕರು ಕಣ್ಣೀರು ಹಾಕಿ, ನೂರುಕಾಲ ಹೀಗೆ ಚೆನ್ನಾಗಿ ಇರಿ ಎಂದು ಹಾರೈಸಿದ್ದಾರೆ.

ಗೌತಮ್‌ನ ಒಲವಿನ ಮಾತು..ಭೂಮಿಕಾಗೆ ಹೊಸ ಉಸಿರು ನೀಡಿದೆ. ಚಿಕ್ಕಮಗಳೂರಿಗೆ ಗೌತಮ್‌ ಮತ್ತು ಭೂಮಿಕಾ ಹೋಗಿದ್ದರು. ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಜಗಳಕ್ಕೆ ಬಂದಿದ್ದರು. ಆದರೆ ಜಮೀನಿನ ವಿಚಾರ ಗೌತಮ್‌ಗೆ ಗೊತ್ತಿಲ್ಲ. ಇದೇ ನೆಪ ಇಟ್ಟುಕೊಂಡು ಶಕುಂತಲಾ ಇಬ್ಬರನ್ನೂ ಹನಿಮೂನ್‌ಗೆ ಕಳುಹಿಸಿರುತ್ತಾಳೆ. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್​. ಅದೇ ರೀತಿ ಭೂಮಿಕಾ ಕಿಡ್‌ನ್ಯಾಪ್‌ ಆಗಿದ್ದಳು.

ಇದನ್ನೂ ಓದಿ: Amrithadhare Serial Kannada: `ಅಮೃತಧಾರೆ’ಸೆಟ್‌ನಲ್ಲಿ ʻನಾನು ನಂದಿನಿʼ ಸ್ಟೆಪ್‌; ಎಲ್ಲೆಲ್ಲೂ  ವಿಕ್ಕಿಪೀಡಿಯಾ ಸಾಂಗ್‌ ಗುಂಗು!

ಅಂತೂ ಗೌತಮ್‌ ಭೂಮಿಕಾ ಹುಡುಕಿ ತನ್ನ  ಉಸಿರು ತುಂಬಿ ಜೀವ ನೀಡಿದ್ದಾನೆ. ಇದಕ್ಕೂ ಮುಂಚೆ ಜೈದೇವ್‌ನು ಭೂಮಿಕಾ ಮುಗಿಸಿದರೆ ರೌಡಿ ಕೆಂಚನಿಗೆ ಹೆಚ್ಚು ಹಣ ನೀಡುವುದಾಗಿ ಹೇಳಿರುತ್ತಾನೆ. ಆದರೆ ಕೆಂಚ ಇನ್ನಷ್ಟು ಹಣ ಸಿಗಬಹುದು ಎಂದು ನೇರವಾಗಿ ಗೌತಮ್‌ಗೆ ಹಣ ಕೇಳುತ್ತಾನೆ. ಹೀಗಾಗಿ ಭೂಮಿಕಾಳನ್ನು ಅಪಹರಿಸುತ್ತಾನೆ.

ಇದೇ ವೇಳೆ ಭೂಮಿಕಾ ಕಿವಿಯೋಲೆ ಮತ್ತು ಬಳೆಗಳನ್ನು ಎಸೆದು ತನ್ನನ್ನು ಈ ಜಾಗದಿಂದ ಕರೆದುಕೊಂಡು ಹೋಗಿರುವ ಬಗ್ಗೆ ಕುರುಹು ಬಿಟ್ಟಿರುತ್ತಾಳೆ. ಗೌತಮ್​ ಮತ್ತು ಆನಂದ್​ ಅದೇ ದಾರಿಯಲ್ಲಿ ಸಾಗುತ್ತಾರೆ. ಕೆಂಚ ಕೊನೆಗೂ ಸಿಕ್ಕಿ ಬಿದ್ದು ಭೂಮಿಕಾಳನ್ನು ಬಚ್ಚಿಟ್ಟಿರುವ ಬಗ್ಗೆ ಹೇಳುತ್ತಾನೆ. ಗೌತಮ್‌ ನೆಲದ ಒಳಗಿನ ಡ್ರಮ್​ನಿಂದ ಭೂಮಿಕಾಳನ್ನು ಹೊರಕ್ಕೆ ತೆಗೆದು ತನ್ನ ಉಸಿರು ನೀಡುತ್ತಾನೆ.

ಈಗ ಭೂಮಿಕಾ ಆಸ್ಪತ್ರೆಯಲ್ಲಿ ಇದ್ದಾಳೆ. ಮರು ಜನ್ಮ ನೀಡಿದ ಗೌತಮ್‌ಗೆ ಥ್ಯಾಂಕ್ಸ್‌ ಹೇಳುತ್ತಾಳೆ. ಈ ಜೋಡಿ ಕಂಡು ಪ್ರೇಕ್ಷಕರು ಕೂಡ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರ ಅಭಿನಯಕ್ಕೂ ಮನಸೋತಿದ್ದಾರೆ. ಎಪಿಸೋಡ್‌ ಕಂಡು ತುಂಬಾ ನೋವು ಮತ್ತೆ ಖುಷಿ ಎರಡು ಒಟ್ಟಿಗೆ ಆಯ್ತು ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

Continue Reading

ಸಿನಿಮಾ

Munawar Faruqui: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ ಆಸ್ಪತ್ರೆಗೆ ದಾಖಲು

Munawar Faruqui: ಹಿಂದಿಯ ಬಿಗ್ ಬಾಸ್ 17ನೇ (Bigg Boss 17) ಆವೃತ್ತಿಯ ವಿನ್ನರ್ ಆಗಿ ಸ್ಟ್ಯಾಂಡ್‌ ಅಪ್‌ ಕಮೆಡಿಯನ್ ಮುನಾವರ್ ಫಾರೂಖಿ (Munawar Faruqui) ಅವರು ಹೊರ ಹೊಮ್ಮಿದ್ದರು. ಇನ್ನು ಕೆಲವರು ಮುನಾವರ್‌ ಗೆದ್ದ ಬಳಿಕ ಇದು ಫಿಕ್ಸಿಂಗ್‌ ಎಂದು ಆರೋಪ ಕೂಡ ಮಾಡಿದ್ದರು. ಇದೀಗ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

VISTARANEWS.COM


on

Munawar Faruqui hospitalised Bigg Boss 17 winner
Koo

ಬೆಂಗಳೂರು: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ (Munawar Faruqui) ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುನಾವರ್ ಸ್ನೇಹಿತರೊಬ್ಬರು ಮೇ 24ರಂದು ಆಸ್ಪತ್ರೆಯ ಬೆಡ್‌ನಲ್ಲಿ ಮುನಾವರ್‌ ಮಲಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ಮುನಾವರ್ ಅವರ ಸ್ನೇಹಿತ ನಿತಿನ್ ಮೆಂಘಾನಿ ಅವರು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಮುನಾವರ್ ಆಸ್ಪತ್ರೆಯಲ್ಲಿರುವ ಫೋಟೊ ವನ್ನು ಹಂಚಿಕೊಂಡಿದ್ದಾರೆ. ನಿತಿನ್ ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿ, “ನನ್ನ ಸಹೋದರ ಮುನಾವರ್‌ಗೆ ದೇವರು ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ. ಶೀಘ್ರದಲ್ಲೇ ಗುಣಮುಖರಾಗಲಿ.”ಎಂದು ಬರೆದುಕೊಂಡಿದ್ದಾರೆ. ಇನ್ನು ಮುನಾವರ್ ಕೂಡ ರಿಕವರ್‌ ಮೋಡ್‌ ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಮುನಾವರ್‌ ಅವರು ಸಾಕಷ್ಟು ವಿವಾದಾತ್ಮಕ ಸುದ್ದಿಗಳಿಗೆ ಹೆಸರುವಾಸಿ. ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಗೆ ಬಂದಿದ್ದರು ಮುನಾವರ್.

ಇದನ್ನೂ ಓದಿ: Munawar Faruqui: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ ಮೇಲೆ ಮೊಟ್ಟೆ ಎಸೆತ!

ಏ. 10) ಮಧ್ಯರಾತ್ರಿ ಮುಂಬೈನ ಮೊಹಮ್ಮದ್ ಅಲಿ ರಸ್ತೆಯಲ್ಲಿ ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಮೇಲೆ ರೆಸ್ಟೋರೆಂಟ್ ಮಾಲೀಕರು ಮೊಟ್ಟೆ ಎಸೆದಿದ್ದರು. ಆರೋಪಿಗಳು ಮುನಾವರ್ ಫಾರೂಕಿ ಅವರನ್ನು ಮಿನಾರಾ ಮಸೀದಿ ಪ್ರದೇಶದ ತಮ್ಮ ರೆಸ್ಟೋರೆಂಟ್‌ ಇಫ್ತಾರ್‌ಗೆ ಆಹ್ವಾನಿಸಿದ್ದರು. ಆದರೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಹತ್ತಿರದ ಮತ್ತೊಂದು ಉಪಾಹಾರ ಗೃಹಕ್ಕೆ ಹೋಗಿದ್ದರು. ಇದರಿಂದಾಗಿ ಕೋಪಗೊಂಡು ಮುನಾವರ್ ಫಾರೂಕಿ ಮೇಲೆ ಮೇಲೆ ಮೊಟ್ಟೆಗಳನ್ನು ಎಸೆದಿರುವುದಾಗಿ ವರದಿಯಾಗಿತ್ತು. ಘಟನೆಯಲ್ಲಿ ಭಾಗಿಯಾಗಿರುವ ಆರು ಮಂದಿಯ ವಿರುದ್ಧ ಪೈದೋನಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿತ್ತು.

ಹಿಂದಿಯ ಬಿಗ್ ಬಾಸ್ 17ನೇ (Bigg Boss 17) ಆವೃತ್ತಿಯ ವಿನ್ನರ್ ಆಗಿ ಸ್ಟ್ಯಾಂಡ್‌ ಅಪ್‌ ಕಮೆಡಿಯನ್ ಮುನಾವರ್ ಫಾರೂಖಿ (Munawar Faruqui) ಅವರು ಹೊರ ಹೊಮ್ಮಿದ್ದರು. ಇನ್ನು ಕೆಲವರು ಮುನಾವರ್‌ ಗೆದ್ದ ಬಳಿಕ ಇದು ಫಿಕ್ಸಿಂಗ್‌ ಎಂದು ಆರೋಪ ಕೂಡ ಮಾಡಿದ್ದರು. ಈ ಬಗ್ಗೆ ಮುನಾವರ್‌ ಕೂಡ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ʻನಾನು ಫಿಕ್ಸಿಂಗ್​ ವಿನ್ನರ್​ ಆಗಿದ್ದಿದ್ದರೆ ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ ನನಗೆ ಸುಲಭವಾಗಿ ಸಿಗುತ್ತಿತ್ತು. ಇಡೀ ಸೀಸನ್​ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್​ ವಿನ್ನರ್​ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್​ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್​ ಅಲ್ಲ ಎಂಬುದು ಆಗ ಗೊತ್ತಾಗುತ್ತದೆʼʼ ಎಂದಿದ್ದರು.

Continue Reading

ಕಿರುತೆರೆ

Shreerastu Shubhamastu Serial: ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಿಂದ ಹೊರನಡೆದ ನೇತ್ರಾ ಜಾಧವ್: ʻಶಾರ್ವರಿʼ ಪಾತ್ರಕ್ಕೆ ಹೊಸ ಎಂಟ್ರಿ ಯಾರು?

Shreerastu Shubhamastu Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಕನ್ನಡ ಸೀರಿಯಲ್‌ ಸಾಕಷ್ಟು ಪ್ರೇಕ್ಷಕರ ಗಮನ ಸೆಳೆದಿದೆ. ಈ ಸಿರೀಯಲ್‌ನಲ್ಲಿ ಖಳನಾಯಕಿ ಶಾರ್ವರಿ ಪಾತ್ರ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು.ಈಗ ನೇತ್ರಾ ಜಾಧವ್ ಅವರು ಧಾರಾವಾಹಿಯಿಂದ ಹೊರ ನಡೆದಿದ್ದು, ಸದ್ಯ ನಟಿ ಸ್ವಪ್ನ ದೀಕ್ಷಿತ್ ಅವರು ಶಾರ್ವರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

VISTARANEWS.COM


on

Shreerastu Shubhamastu Serial Netra Jadhav out
Koo

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ (Shreerastu Shubhamastu Serial) ಇಷ್ಟು ದಿನಗಳವರೆಗೂ ಶಾರ್ವರಿ ಪಾತ್ರವನ್ನು ನಟಿ ನೇತ್ರಾ ಜಾಧವ್ (Netra Jadhav) ಅವರು ನಡೆಸಿಕೊಡುತ್ತಿದ್ದರು.

ಧಾರಾವಾಹಿಯಲ್ಲಿ ದೆಹಲಿಗೆ ಹೋಗಿ ಬರುತ್ತೇನೆ ಎಂದು ಹೊರಟʻ ಶಾರ್ವರಿʼ, ವಾಪಸ್ ಬಂದಿದ್ದು, ಸ್ವಪ್ನಾ ದೀಕ್ಷಿತ್ ಆಗಿ.

ಈಗ ನೇತ್ರಾ ಜಾಧವ್ ಅವರು ಧಾರಾವಾಹಿಯಿಂದ ಹೊರ ನಡೆದಿದ್ದು, ಸದ್ಯ ನಟಿ ಸ್ವಪ್ನ ದೀಕ್ಷಿತ್ ಅವರು ಶಾರ್ವರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

ರಥ ಸಪ್ತಮಿ, ಸುಂದರಿ, ಸಾಗುತ ದೂರ ದೂರ , ಆಕೃತಿ ಹೀಗೆ ಕನ್ನಡ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು ನೇತ್ರಾ.

ಶ್ರೀರಸ್ತು ಧಾರಾವಾಹಿಯಲ್ಲಿ ಶಾರ್ವರಿ ಪಾತ್ರ ಹೇಗೆಂದರೆ ಮುಂದೆ ಒಳ್ಳೆಯವರಂತೆ ನಟಿಸುತ್ತ, ಒಳಗೊಳಗೆ ಪಿತೂರಿ ಮಾಡುವ ಪಾತ್ರ. ಇಷ್ಟು ದಿನ ಶಾರ್ವರಿ ದೆಹಲಿಯಲ್ಲಿರುವ ತಮ್ಮ ಕಂಪನಿಯಲ್ಲಿ ಸಮಸ್ಯೆ ಆಗಿತ್ತು ಎಂಬ ಕಾರಣಕ್ಕೆ ಮಾಧವ್ ಬದಲು ತಾನು ಹೋಗಿರುತ್ತಾಳೆ. ಇದೀಗ ಮತ್ತೆ ಮನೆಗೆ ವಾಪಸ್‌ ಆಗಿದ್ದಾಳೆ.

Continue Reading

ಕಿರುತೆರೆ

Ninagagi Serial: ‘ಬೃಂದಾವನ’ ಧಾರಾವಾಹಿ ಅಂತ್ಯ; ದಿವ್ಯಾ ಉರುಡುಗ ಜತೆ ‘ನಿನಗಾಗಿ’ ಎಂದ ʻಗಿಣಿರಾಮʼನಟ!

Ninagagi Serial: ‘ನಿನಗಾಗಿ’ ಧಾರಾವಾಹಿ ಮೇ 27ನೇ ತಾರೀಖಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ನಿನಗಾಗಿ ಸೀರಿಯಲ್ ಪ್ರಸಾರವಾಗಲಿದೆ. ಈ ಧಾರಾವಾಹಿಗೆ ಸಂಪೃಥ್ವಿ ನಿರ್ದೇಶನವಿದೆ. ಈ ಹಿಂದೆ ಇವರು ‘ನಮ್ಮನೆ ಯುವರಾಣಿ’, ‘ಹೂಮಳೆ’, ‘ನಮ್ಮ ಲಚ್ಚಿ’ ಸೀರಿಯಲ್ ನಿರ್ದೇಶನ ಮಾಡಿದ್ದರು.

VISTARANEWS.COM


on

Ninagagi Serial Ritvvikk Mathad Divya Uruduga On May 27
Koo

ಬೆಂಗಳೂರು: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಈಗಾಗಲೇ ಬೃಂದಾವನ ಧಾರಾವಾಹಿ ಅಂತ್ಯ ಕಂಡಿದೆ. ಹೊಸದೊಂದು ಧಾರಾವಾಹಿ ಬರುತ್ತಿದೆ. ‘ಗಿಣಿರಾಮ’ ಧಾರಾವಾಹಿಯಲ್ಲಿ (Ninagagi Serial) ಹಳ್ಳಿ ಸೊಗಡಿನ ಪಾತ್ರವನ್ನು ಮಾಡಿದ ನಟ ರಿತ್ವಿಕ್ ಮಠದ್ (Ritvvikk Mathad ) ಹಾಗೂ ನಟಿ ದಿವ್ಯಾ ಉರುಡುಗ (Actress Divya Uruduga) , ‘ನಿನಗಾಗಿ’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿನಗಾಗಿ’ ಧಾರಾವಾಹಿ ಈಗಾಗಲೇ ಪ್ರೋಮೊ ಮೂಲಕ ಬಹಳಷ್ಟು ಸದ್ದು ಮಾಡಿದೆ. ನಟ ರಿತ್ವಿಕ್ ಮಠದ್ ಈ ಧಾರಾವಾಹಿಯಲ್ಲಿ ಬಹಳ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಧಾರಾವಾಹಿಯಲ್ಲಿ ದಿವ್ಯಾ ಅವರು ನಟಿ ಆಗಿದ್ದರೆ, ಹೆಣ್ಣು ಮಗುವಿನ ತಂದೆ ಆಗಿ ಕಾಣಿಸಿಕೊಳ್ಳುವ ನಟ ರಿತ್ವಿಕ್ ಈ ಧಾರಾವಾಹಿಯಲ್ಲಿ ಸಿಂಗಲ್ ಪೇರೆಂಟ್.

ಪ್ರೋಮೊ ನೋಡಿದರೆ ಈ ಬಾರಿ ರಿತ್ವಿಕ್ ಮಠದ್ ನಿರ್ವಹಿಸುತ್ತಿರುವ ಪಾತ್ರ ಬಹಳ ಪ್ರಬುದ್ಧವಾದದ್ದು. ಇವರ ಕಥೆ ಏನು? ಧಾರಾವಾಹಿ ಕಥೆಯ ನಾಯಕಿಗೂ ಈ ನಾಯಕನಿಗೂ ಯಾವ ರೀತಿ ಪರಿಚಯವಾಗುತ್ತೆ ಸಂಬಂಧ ಯಾವ ರೀತಿ ಮುಂದುವರೆಯುತ್ತದೆ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ. ‘ನಿನಗಾಗಿ’ ಧಾರಾವಾಹಿ ಮೇ 27ನೇ ತಾರೀಖಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ನಿನಗಾಗಿ ಸೀರಿಯಲ್ ಪ್ರಸಾರವಾಗಲಿದೆ. ಈ ಧಾರಾವಾಹಿಗೆ ಸಂಪೃಥ್ವಿ ನಿರ್ದೇಶನವಿದೆ. ಈ ಹಿಂದೆ ಇವರು ‘ನಮ್ಮನೆ ಯುವರಾಣಿ’, ‘ಹೂಮಳೆ’, ‘ನಮ್ಮ ಲಚ್ಚಿ’ ಸೀರಿಯಲ್ ನಿರ್ದೇಶನ ಮಾಡಿದ್ದರು.

ಇದನ್ನೂ ಓದಿ: Ninagagi Kannada Serial: ʻನಿನಗಾಗಿʼ ಸೀರಿಯಲ್‌ನಲ್ಲಿ ದಿವ್ಯಾ ಉರುಡುಗ ಜತೆ ‘ಗಿಣಿರಾಮ’ ಧಾರಾವಾಹಿಯ ನಟ ನಟನೆ

ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಕಾಮತ್, ಕಿಶನ್ ಬೆಳಗಲಿ, ಲೋಕೇಶ್, ವಿಜಯ್ ಕೌಂಡಿನ್ಯ, ಸಾನಿಯಾ ಪೊಣ್ಣಮ್ಮ ದೇವಿ, ಸಿರಿ ಸಿಂಚನ ಮುಂತಾದವರಿದ್ದಾರೆ.

Continue Reading
Advertisement
Snake
ಕರ್ನಾಟಕ3 hours ago

Snake: ಸ್ಟ್ಯಾಂಡ್‌ನಲ್ಲಿಟ್ಟಿದ್ದ ಚಪ್ಪಲಿಯೊಳಗೆ ಕೂತಿದ್ದ ಬುಸ್‌ ಬುಸ್‌ ನಾಗಪ್ಪ; ಸ್ವಲ್ಪ ಹುಷಾರಾಗಿರ‍್ರಪ್ಪ! Video ಇಲ್ಲಿದೆ

Varanasi
ದೇಶ5 hours ago

Varanasi: ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಏನಂತಾರೆ? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್‌ ರಿಪೋರ್ಟ್!

Virat kohli
ಕ್ರೀಡೆ5 hours ago

Virat Kohli : ಐಪಿಎಲ್​ 2024ರ ಆರೆಂಜ್ ಕ್ಯಾಪ್ ಗೆದ್ದು ಹೊಸ ದಾಖಲೆ ಬರೆದ ವಿರಾಟ್​ ಕೊಹ್ಲಿ

IPL 2024 Final
ಪ್ರಮುಖ ಸುದ್ದಿ5 hours ago

IPL 2024 Final : 3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್​​; ಹೈದರಾಬಾದ್​ಗೆ ನಿರಾಸೆ

The Kapil Sharma Show
ದೇಶ5 hours ago

Physical Abuse: ಕಪಿಲ್‌ ಶರ್ಮಾ ಶೋನಲ್ಲಿ ಪಾತ್ರ ಕೊಡುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ

IPL 2024
ಕ್ರೀಡೆ5 hours ago

IPL 2024 Final : ಐಪಿಎಲ್ ಫೈನಲ್​​ನಲ್ಲಿ ಕಡಿಮೆ ಸ್ಕೋರ್​ನ ಕಳಪೆ ದಾಖಲೆ ಬರೆದ ಸನ್​ರೈಸರ್ಸ್​ ಹೈದರಾಬಾದ್​​

Hardik Pandya
ಕ್ರೀಡೆ6 hours ago

Hardik Pandya : ಡೈವೋರ್ಸ್​ ಗಾಸಿಪ್​ ನಡುವೆ ಹಾರ್ದಿಕ್ ಪಾಂಡ್ಯ ನಾಪತ್ತೆ!

Rain News
ಕರ್ನಾಟಕ7 hours ago

Rain News: ಮಳೆ ಅವಾಂತರ; ಮನೆಯ ಶೀಟ್‌ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು

Phalody Satta Bazar
ದೇಶ7 hours ago

Phalodi Satta Bazar: ಮೋದಿಗೆ 330 ಸೀಟು ಖಚಿತ ಎಂದ ಸಟ್ಟಾ ಬಜಾರ್‌ ಸಮೀಕ್ಷೆ; ರಾಜ್ಯವಾರು ವರದಿ ಇಲ್ಲಿದೆ

Shivamogga News
ಕರ್ನಾಟಕ7 hours ago

Shivamogga News: ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಹುಚ್ಚಾಟ ಮೆರೆದ ಯುವಕ; ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ10 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು11 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ7 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌