Motivational story | ಅಂಗಡಿ ಮಾಲೀಕ ನೋಡಿದ್ದು ದುಡ್ಡನ್ನಲ್ಲ, ಚಿಪ್ಪಿನೊಳಗೆ ಅಡಗಿದ್ದ ಮಕ್ಕಳ ಮಧುರ ಭಾವವನ್ನು! - Vistara News

ಪ್ರಮುಖ ಸುದ್ದಿ

Motivational story | ಅಂಗಡಿ ಮಾಲೀಕ ನೋಡಿದ್ದು ದುಡ್ಡನ್ನಲ್ಲ, ಚಿಪ್ಪಿನೊಳಗೆ ಅಡಗಿದ್ದ ಮಕ್ಕಳ ಮಧುರ ಭಾವವನ್ನು!

Motivatioonal story| ಆ ಪುಟ್ಟ ಮಕ್ಕಳಿಗೆ ಗೊಂಬೆಯ ಬೆಲೆಯಾಗಲಿ, ಮಹತ್ವವಾಗಲೀ ಗೊತ್ತಿರಲಿಲ್ಲ. ಆದರೆ, ಆ ಅಂಗಡಿ ಮಾಲೀಕನಿಗೆ ಈ ಮಕ್ಕಳ ಪ್ರೀತಿಯ ಬಗ್ಗೆ ಅರ್ಥವಾಗಿತ್ತು. ಹಿರಿಯರು ಅರ್ಥ ಮಾಡಿಕೊಳ್ಳಬೇಕಾದ ಮಕ್ಕಳ ಲೋಕದ ಕಥೆ.

VISTARANEWS.COM


on

dolls shop
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷ್ಣ ಭಟ್‌ ಅಳದಂಗಡಿ-motivational story
ನಾಲ್ಕುವರೆ ವರ್ಷದ ಪುಟ್ಟ ಹುಡುಗ ಮತ್ತು ಮೂರು ವರ್ಷದ ಅವನ ತಂಗಿ ಇಬ್ಬರೂ ಅಪ್ಪ-ಅಮ್ಮನ ಜತೆಗೆ ಒಂದು ಮಾಲ್‍ಗೆ ಬಂದಿದ್ದರು. ಅಪ್ಪ-ಅಮ್ಮ ಏನೋ ಖರೀದಿಯಲ್ಲಿ ಬ್ಯುಸಿ ಇದ್ದಾಗ ಹೊರಗಡೆ ಮಕ್ಕಳು ಆಡಿಕೊಳ್ಳುತ್ತಿದ್ದರು. ಅತ್ತಿತ್ತ ಓಡುತ್ತಿದ್ದಾಗ ಅಣ್ಣನಿಗೆ ತಂಗಿ ಯಾಕೋ ಹಿಂದೆ ಬಿದ್ದಿದ್ದಾಳೆ ಅನಿಸಿತು. ಏನೂ ಅಂತ ಹಿಂದೆ ಬಂದು ನೋಡಿದರೆ ಆಕೆ ಒಂದು ಗೊಂಬೆಗಳ ಅಂಗಡಿಯ ಮುಂದೆ ನಿಂತಿದ್ದಾಳೆ. ಏನನ್ನೋ ಭಾರಿ ಆಸಕ್ತಿಯಿಂದ ನೋಡುತ್ತಿದ್ದಾಳೆ.

ಅಣ್ಣ ಅವಳ ಹತ್ತಿರಕ್ಕೆ ಬಂದು ಕೇಳಿದ: ನಿಂಗೆ ಏನಾದರೂ ಬೇಕಿತ್ತಾ?
ಪುಟ್ಟಹುಡುಗಿ ಕಣ್ಣರಳಿಸಿ, ಕೊರಳು ಕೊಂಕಿಸಿ ಹೇಳಿತು: ನಂಗೆ ಆ ಗೊಂಬೆ ಬೇಕು.
ಅಣ್ಣ ದೊಡ್ಡ ಜನರಂತೆ ಅವಳ ಕೈ ಹಿಡಿದು ಕರೆದುಕೊಂಡು ಹೋದ. ಅವಳು ಕೇಳಿದ ಗೊಂಬೆಯನ್ನು ತೆಗೆದು ಕೈಗೆ ಕೊಟ್ಟ. ಪುಟ್ಟ ಹುಡುಗಿ ತುಂಬ ಖುಷಿಯಾದಳು.

ಅಷ್ಟು ಹೊತ್ತಿಗೆ ಗೊಂಬೆಗಳ ಅಂಗಡಿಯ ಕೆಲಸಗಾರ ಬಂದು `ʻಏ ಗೊಂಬೆ ಕೊಡಿಲ್ಲಿ’ ಎಂದ. ಅವನಿಗೆ ಈ ಮಕ್ಕಳು ಹಣ ಕೊಡದೆ ಗೊಂಬೆಯನ್ನು ಕೊಂಡು ಹೋದರೆ ಎಂಬ ಆತಂಕ. ಅಷ್ಟು ಹೊತ್ತಿಗೆ ಬಾಲಕ ದುಡ್ಡು ಕೊಡುವ ಕೌಂಟರ್ ಬಳಿಗೆ ಹೋಗಿ ʻಈ ಗೊಂಬೆಗೆ ಎಷ್ಟಾಗುತ್ತೆ’ ಅಂತ ಕೇಳಿದ.

ಅಷ್ಟೂ ಹೊತ್ತಿಂದ ಮಕ್ಕಳ ಆಟವನ್ನು, ಬಾಲಕ ತಂಗಿ ಜತೆ ಪ್ರೌಢವಾಗಿ ನಡೆದುಕೊಂಡಿದ್ದನ್ನು ಮಾಲೀಕ ನೋಡಿದ್ದ. ʻಎಷ್ಟು ಕೊಡ್ತೀಯಾ ಕಂದಾ’ ಎಂದು ಕೇಳಿದ ಮಾಲೀಕ.

ಬಾಲಕ ತನ್ನ ಜೇಬಿನಿಂದ ಒಂದೊಂದಾಗಿ ಚಿಪ್ಪುಗಳನ್ನು ತೆಗೆದು ಕೌಂಟರ್ ಮೇಲೆ ಇಡತೊಡಗಿದ. ಅಂಗಡಿ ಮಾಲೀಕ ಚಿಪ್ಪುಗಳೇ ನೋಟು ಎಂಬಂತೆ ಲೆಕ್ಕಮಾಡತೊಡಗಿದ. ಮಧ್ಯೆ ಬಾಲಕನನ್ನೊಮ್ಮೆ ನೋಡಿದ.

ಆಗ ಬಾಲಕ ಚಿಂತೆಯಿಂದ ʻಏನು ಕಡಿಮೆ ಆಯ್ತಾ’ ಎಂದು ಕೇಳಿದ.
ಆಗ ಅಂಗಡಿಯವನು: ಏ ಇಲ್ಲ ಕಂದಾ.. ಜಾಸ್ತೀನೇ ಇದೆ. ನಂಗೆ ನಾಲ್ಕು ಚಿಪ್ಪು ಸಾಕು. ಉಳಿದುದನ್ನು ನೀನೇ ಇಟ್ಟುಕೋ ಎಂದ.
ಹುಡುಗ ಖುಷಿಯಿಂದ ಉಳಿದೆಲ್ಲ ಚಿಪ್ಪುಗಳನ್ನು ಕಿಸೆಗೆ ತುಂಬಿಕೊಂಡ. ತಂಗಿಯನ್ನು ಕೈಯಲ್ಲಿ ಹಿಡಿದುಕೊಂಡು ಹೊರಟ. ಅವಳೋ ಗೊಂಬೆ ಸಿಕ್ಕಿದ ಖುಷಿಯಲ್ಲಿ ಕುಣಿಯುತ್ತಿದ್ದಳು.

ಇದನ್ನೆಲ್ಲ ನೋಡುತ್ತಿದ್ದ ಅಂಗಡಿ ಕಾರ್ಮಿಕನಿಗೆ ಆಶ್ಚರ್ಯ.
ಅವನು ಮಾಲೀಕನನ್ನು ಕೇಳಿದ: ಅಷ್ಟು ದುಬಾರಿ ಗೊಂಬೆಯನ್ನು ಕೇವಲ ಬೆಲೆಯಿಲ್ಲದ ನಾಲ್ಕು ಚಿಪ್ಪುಗಳಿಗೆ ಕೊಟ್ಟು ಬಿಟ್ರಲ್ಲ…

ಅದಕ್ಕೆ ಮಾಲೀಕ ನಗುತ್ತಾ ಹೇಳಿದ: ಹೌದು.. ನಮ್ಮ ಪಾಲಿಗೆ ಇವು ಕೇವಲ ಬೆಲೆ ರಹಿತ ಚಿಪ್ಪುಗಳು. ಆದರೆ, ಆ ಹುಡುಗನಿಗೆ ಇದುವೇ ಅಮೂಲ್ಯ. ಅವನಿಗೆ ಹಣದ ಮೌಲ್ಯ ಗೊತ್ತಿಲ್ಲ. ಹಣ ಎಂದರೇನೆಂದೇ ಗೊತ್ತಿಲ್ಲ. ಆದರೆ ದೊಡ್ಡವನಾದಾಗ ಖಂಡಿತಾ ಗೊತ್ತಾಗುತ್ತದೆ. ಅವನಿಗೆ ಆಗ ಯಾವತ್ತಾದರೊಂದು ದಿನ ಇಲ್ಲಿಗೆ ಬಂದಿದ್ದು, ಗೊಂಬೆ ಖರೀದಿಸಿದ್ದು, ತಂಗಿ ಖುಷಿಯಾದದ್ದು, ದುಡ್ಡಿನ ಬದಲಾಗಿ ಚಿಪ್ಪು ಕೊಟ್ಟದ್ದು ನೆನಪಾಗಿಯೇ ಆಗುತ್ತದೆ. ಆಗ ಅವನಿಗೆ ಜಗತ್ತು ಎಷ್ಟೊಂದು ಪಾಸಿಟಿವ್ ಆಗಿದೆ ಅನ್ನುವ ಅರಿವು ಆಗೇ ಅಗುತ್ತದೆ. ನನಗೆ ಲಾಭ ಆವತ್ತು ಆಗುತ್ತದೆ. ಸಾಕು ನಂಗೆ.

ಅಂಗಡಿ ಕೆಲಸಗಾರ ಹೊರಗೆ ಬಂದು ಮಕ್ಕಳನ್ನೇ ನೋಡಲು ಶುರು ಮಾಡಿದ. ಮನೆಯಲ್ಲಿರುವ ಇಬ್ಬರು ಪುಟ್ಟ ಮಕ್ಕಳು ನೆನಪಾದರು.

ಇದನ್ನೂ ಓದಿ| Motivational story | ಸರಿಯಾದ ಐಡಿಯಾ ಇದ್ರೆ ಬೋಳು ತಲೆಯವರಿಗೂ ಬಾಚಣಿಗೆ ಮಾರಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Sunita Williams: 3ನೇ ಬಾರಿ ಬಾಹ್ಯಾಕಾಶ ಯಾನ ಕೈಗೊಂಡ ಭಾರತ ಮೂಲದ ಸುನೀತಾ ವಿಲಿಯಮ್ಸ್;‌ Video ಇದೆ

Sunita Williams: ಭಾರತದ ಮೂಲದ ಡಾ. ದೀಪಕ್‌ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಈಗ ಮತ್ತೆ ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಂಡಿದ್ದಾರೆ.

VISTARANEWS.COM


on

Sunita Williams
Koo

ವಾಷಿಂಗ್ಟನ್:‌ ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ (Boeing Starliner) ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಆರಂಭಿಸಿದ್ದಾರೆ. ಸುನೀತಾ ವಿಲಿಯಮ್ಸ್‌ ಅವರು ಬಾಹ್ಯಾಕಾಶಯಾನ ಕೈಗೊಳ್ಳುವ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಫ್ಲೊರಿಡಾದಲ್ಲಿರುವ ಕೇಪ್‌ ಕ್ಯಾನವರಲ್‌ ಸ್ಪೇಸ್‌ ಫೋರ್ಸ್‌ ಸೆಂಟರ್‌ನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರು ಒಂದು ವಾರ ಇರಲಿದ್ದಾರೆ. ನಾಸಾ ಬಾಹ್ಯಾಕಾಶ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಆರನೇ ಬಾಹ್ಯಾಕಾಶ ನೌಕೆ ಎಂಬ ಖ್ಯಾತಿಗೆ ಸ್ಟಾರ್‌ಲೈನರ್‌ ಭಾಜನವಾಯಿತು. ಇದಕ್ಕೂ ಮೊದಲು ಮರ್ಕ್ಯುರಿ, ಜೆಮಿನಿ, ಅಪೋಲೊ, ಸ್ಪೇಸ್‌ ಶಟಲ್‌ ಹಾಗೂ ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡಲಾಗಿತ್ತು.

ಸುನೀತಾ ವಿಲಿಯಮ್ಸ್‌ ಹಿನ್ನೆಲೆ

ಭಾರತದ ಮೂಲದ ಡಾ. ದೀಪಕ್‌ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿ ಎಂದೂ ಗುರುತಿಸಲ್ಪಡುತ್ತಿದ್ದಾರೆ.

ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಮಹತ್ವದ ಅಧ್ಯಯನಕ್ಕಾಗಿ ಮಂಗಳವಾರ ಮೂರನೇ ಬಾರಿ ಬಾಹ್ಯಾಕಾಶಕ್ಕೆ ಹಾರಲಿದ್ದ ಸುನೀತಾ ವಿಲಿಯಮ್ಸ್ ಎಲ್ಲ ತಯಾರಿ ಮಾಡಿಕೊಂಡಿದ್ದರು. ʼʼಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆʼʼ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು.

ಗಣೇಶನ ಆರಾಧಕಿ

ʼʼಯಾವುದೇ ಕೆಲಸಕ್ಕೂ ಮೊದಲು ಗಣೇಶನ ಪ್ರಾರ್ಥಿಸುತ್ತೇನೆ. ಸಿದ್ಧಿ ವಿನಾಯಕ ನನ್ನ ಶುಭ ಸಂಕೇತʼʼ ಎಂದು ಅವರು ಈ ಹಿಂದೆ ಹೇಳಿದ್ದರು. ʼʼಬಾಹ್ಯಾಕಾಶ ಪ್ರಯಾಣ ಸೇರಿದಂತೆ ಯಾವುದೇ ಕೆಲಸಕ್ಕೂ ಗಣೇಶನ ಆಶೀರ್ವಾದ ನನಗೆ ಬೇಕು. ಗಣೇಶ ನನ್ನ ಎಲ್ಲ ಕಾರ್ಯಗಳಿಗೆ ಶಕ್ತಿಯಾಗಿದ್ದಾನೆ. ಪ್ರತಿ ಬಾರಿ ನಾನು ಬಾಹ್ಯಾಕಾಶ ಪ್ರಯಾಣದಲ್ಲೂ ಸಣ್ಣ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತೇನೆʼʼ ಎಂದು ಸುನೀತಾ ವಿಲಿಯಮ್ಸ್ ತಿಳಿಸಿದ್ದರು. ಈ ಹಿಂದೆ ಅವರು ಬಾಹ್ಯಾಕಾಶಕ್ಕೆ ಭಗವದ್ಗೀತೆ ಒಯ್ಯುವ ಮೂಲಕ ಭಾರತೀಯರ ಗಮನ ಸೆಳೆದಿದ್ದರು.

ಇದನ್ನೂ ಓದಿ: Gaganyaan : ಗಗನಯಾನ ಪೈಲೆಟ್​ ಪ್ರಶಾಂತ್​ ನಾಯರ್​ ​ಮದುವೆಯಾದ ಕೇರಳದ ನಟಿ ಲೆನಾ

Continue Reading

ಕರ್ನಾಟಕ

Dr C N Manjunath: ಬೆಂಗಳೂರಿನಲ್ಲೇ ಸುರೇಶ್‌ ವಿರುದ್ಧ ಡಾ. ಮಂಜುನಾಥ್‌ಗೆ 2 ಲಕ್ಷ ಮತಗಳ ಲೀಡ್‌! ಕ್ಷೇತ್ರವಾರು ಪಟ್ಟಿ ಇಲ್ಲಿದೆ

Dr C N Manjunath: ಬಿಜೆಪಿ ಅಭ್ಯರ್ಥಿಗೆ (Dr C N Manjunath) ಬೆಂಗಳೂರು ನಗರದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬಹುದು. ಗ್ರಾಮಾಂತರ ಭಾಗದ ಮತದಾರರು ಡಿ ಕೆ ಸುರೇಶ್‌ ಅವರನ್ನು ಬೆಂಬಲಿಸಬಹುದು. ಹಾಗಾಗಿ ಯಾವುದೇ ಅಭ್ಯರ್ಥಿಯ ಗೆಲುವಿನ ಅಂತರ 50 ಸಾವಿರದ ಒಳಗೇ ಇರಬಹುದು ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರ ತಪ್ಪಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಡಿ ಕೆ ಸುರೇಶ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ ಸಿ ಎನ್‌ ಮಂಜುನಾಥ್‌ ಅವರು 2,69,590 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

VISTARANEWS.COM


on

Dr C N Manjunath
Koo

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ (Bangalore Rural Election Result 2024) ಮೂರು ಬಾರಿ ಸಂಸದರಾಗಿ ಭಾರಿ ಅಂತರದಿಂದ ಆಯ್ಕೆಯಾಗಿದ್ದ ಡಿ.ಕೆ. ಸುರೇಶ್‌ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌ ಮಂಜುನಾಥ್‌ (Dr C N Manjunath) ಅವರ ವಿರುದ್ಧ ಭಾರಿ ಅಂತರದಿಂದ ಸೋತಿದ್ದಾರೆ. ವಿಶೇಷ ಅಂದರೆ ಡಿ.ಕೆ. ಸುರೇಶ್‌ ಅವರಿಗೆ ಅವರ ಹುಟ್ಟೂರು ಕನಕಪುರದಲ್ಲಿ ಮಾತ್ರ 25,677 ಮತಗಳ ಲೀಡ್‌ ಸಿಕ್ಕಿದೆ. ರಾಮನಗರದಲ್ಲಿ ಸಿಕ್ಕಿರುವುದು ಕೇವಲ 145 ಮತಗಳ ಮುನ್ನಡೆ.‌ ಇವೆರಡು ಕ್ಷೇತ್ರಗಳನ್ನು ಬಿಟ್ಟರೆ ಉಳಿದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಡಾ. ಸಿ ಎನ್‌ ಮಂಜುನಾಥ್‌ ಅವರಿಗೇ ಲೀಡ್‌ ಸಿಕ್ಕಿದೆ.

ಬಿಜೆಪಿ ಅಭ್ಯರ್ಥಿಗೆ ಬೆಂಗಳೂರು ನಗರದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬಹುದು. ಗ್ರಾಮಾಂತರ ಭಾಗದ ಮತದಾರರು ಡಿ.ಕೆ. ಸುರೇಶ್‌ ಅವರನ್ನು ಬೆಂಬಲಿಸಬಹುದು. ಹಾಗಾಗಿ ಯಾವುದೇ ಅಭ್ಯರ್ಥಿಯ ಗೆಲುವಿನ ಅಂತರ 50 ಸಾವಿರದ ಒಳಗೇ ಇರಬಹುದು ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರ ತಪ್ಪಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ.ಸಿ. ಎನ್‌ ಮಂಜುನಾಥ್‌ ಅವರು 2,69,590 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಇದನ್ನೂ ಓದಿ | Lowest Margin of Wins: ಕೇವಲ 48 ಮತ ಅಂತರದ ಗೆಲುವು! ಕಡಿಮೆ ಅಂತರದಿಂದ ಗೆದ್ದವರ ಪಟ್ಟಿ ಇಲ್ಲಿದೆ

ಬೆಂಗಳೂರು ಹೊರಗಿನ ಮಾಗಡಿ, ಚನ್ನಪಟ್ಟಣ, ಕುಣಿಗಲ್‌, ಆನೇಕಲ್‌ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಡಾ.ಸಿ. ಎನ್‌. ಮಂಜುನಾಥ್‌ ಅವರೇ 25 ರಿಂದ 35 ಸಾವಿರದ ತನಕ ಮುನ್ನಡೆ ಸಾಧಿಸಿದ್ದಾರೆ. ಆದರೆ ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಡಿ.ಕೆ. ಸುರೇಶ್‌ ಅವರಿಗೆ ಭಾರೀ ಹಿನ್ನಡೆಯಾಗಿದೆ. ಡಾ.ಸಿ. ಎನ್‌. ಮಂಜುನಾಥ್‌ ಅವರಿಗೆ ರಾಜರಾಜೇಶ್ವರಿ ನಗರದಲ್ಲಿ 98,997 ಮತಗಳ ಭಾರಿ ಲೀಡ್‌ ಸಿಕ್ಕಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 97,129 ಮತಗಳ ಮುನ್ನಡೆ ಸಿಕ್ಕಿದೆ. ಹೀಗೆ ಬೆಂಗಳೂರು ನಗರದಲ್ಲೇ ಬಿಜೆಪಿ ಅಭ್ಯರ್ಥಿಗೆ ಸುಮಾರು 2 ಲಕ್ಷ ಮತಗಳ ಮುನ್ನಡೆ ಸಿಕ್ಕಂತಾಗಿದೆ. ಇದರ ಪರಿಣಾಮವಾಗಿ ಡಿ.ಕೆ. ಸುರೇಶ್‌ ಅವರು ಭಾರಿ ಅಂತರದಿಂದ ಸೋತಿದ್ದಾರೆ. ಡಾ. ಮಂಜುನಾಥ್‌ ಅವರಿಗೆ ಶೇ.56.2ರಷ್ಟು ಮತಗಳು ಸಿಕ್ಕಿದ್ದರೆ, ಡಿ ಕೆ ಸುರೇಶ್‌ ಅವರಿಗೆ ಶೇ.42.2ರಷ್ಟು ಮತಗಳು ಲಭಿಸಿವೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತಗಳ ವಿಧಾನಸಭೆ ಕ್ಷೇತ್ರವಾರು ಪಟ್ಟಿ ಈ ಕೆಳಗಿನಂತಿದೆ.

ಒಟ್ಟು ಮತ ಗಳಿಕೆ
ಡಾ. ಮಂಜುನಾಥ್: 1078914
ಡಿ.ಕೆ.ಸುರೇಶ್: 809324
ಗೆಲುವಿನ ಅಂತರ: 2,69,590

ರಾಮನಗರ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 91,945
ಡಿ.ಕೆ.ಸುರೇಶ್: 92,090
ಕ್ಷೇತ್ರದ ಲೀಡ್: 145 (ಕಾಂಗ್ರೆಸ್)

ಮಾಗಡಿ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 1,13,911
ಡಿ.ಕೆ.ಸುರೇಶ್: 83,938
ಕ್ಷೇತ್ರದ ಲೀಡ್: 29973(ಬಿಜೆಪಿ)

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್:106971
ಡಿ.ಕೆ.ಸುರೇಶ್: 85357
ಕ್ಷೇತ್ರದ ಲೀಡ್: 21,614 (ಬಿಜೆಪಿ)

ಕನಕಪುರ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 83,303
ಡಿ.ಕೆ.ಸುರೇಶ್: 1,08,980
ಕ್ಷೇತ್ರದ ಲೀಡ್: 25677 (ಕಾಂಗ್ರೆಸ್)

ಕುಣಿಗಲ್ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 97,248
ಡಿ.ಕೆ.ಸುರೇಶ್: 73,410
ಕ್ಷೇತ್ರದ ಲೀಡ್: 23,838 (ಬಿಜೆಪಿ)

ಅನೇಕಲ್ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 1,37,693
ಡಿ.ಕೆ.ಸುರೇಶ್: 1,15,328
ಕ್ಷೇತ್ರದ ಲೀಡ್: 22,365 (ಬಿಜೆಪಿ)

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 2,55,756
ಡಿ.ಕೆ.ಸುರೇಶ್: 1,58,627
ಕ್ಷೇತ್ರದ ಲೀಡ್: 97,129 (ಬಿಜೆಪಿ)

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 1,88,726
ಡಿ.ಕೆ.ಸುರೇಶ್: 89,729
ಕ್ಷೇತ್ರದ ಲೀಡ್: 98,997 (ಬಿಜೆಪಿ)

ಇದನ್ನೂ ಓದಿ | ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಶೆಟ್ಟರ್‌ಗೆ 50 ಸಾವಿರ ಮತಗಳ ಲೀಡ್; ಕ್ಷೇತ್ರವಾರು ಪಟ್ಟಿ ಇಲ್ಲಿದೆ!

Continue Reading

ಸಿನಿಮಾ

Koti Movie: ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಟ್ರೈಲರ್ ರಿಲೀಸ್; ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ

Koti Movie: ಪರಮೇಶ್ ಗುಂಡಕಲ್ ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ ಜೂನ್ 14ರಂದು ತೆರೆಗೆ ಬರಲಿದೆ. ಈ ಸಿನಿಮಾ ಮಿಡ್ಲ್ ಕ್ಲಾಸ್ ಫ್ಯಾಮಿಲಿಗೆ ಕನೆಕ್ಟ್ ಆಗಲಿದೆ ಎಂದು ನಟ ಡಾಲಿ ಧನಂಜಯ್‌ ಹೇಳಿದ್ದಾರೆ.

VISTARANEWS.COM


on

Koti Movie
Koo

ಬೆಂಗಳೂರು: ಡಾಲಿ ಧನಂಜಯ್ ನಟನೆಯ ʼಕೋಟಿʼ (Koti Movie) ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ನಗರದಲ್ಲಿ ಬುಧವಾರ ರಿಲೀಸ್ ಮಾಡಿದ್ದು, ಟ್ರೈಲರ್‌ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಮೇಶ್ ಗುಂಡಕಲ್ ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ ಜೂನ್ 14ರಂದು ತೆರೆಗೆ ಬರಲಿದೆ.

ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಪರಮೇಶ್ ಗುಂಡಕಲ್ ಮಾತನಾಡಿ, ಇದು ದುಡ್ಡಿನ ಸುತ್ತ ಸುತ್ತುವ ಕತೆ, ಕಥೆ ಏನು ಅನ್ನೋದನ್ನ ಸಿನಿಮಾ ನೋಡಿ. ಚಿಕ್ಕಂದಿನಲ್ಲಿ ಕಷ್ಟದ ದಿನಗಳನ್ನು ನೋಡಿದ್ದೇನೆ. ಆ ಸಂದರ್ಭದಲ್ಲಿ ಜಾತ್ರೆಯಲ್ಲಿ ರಸ್ತೆಯಲ್ಲಿ 500 ರೂ. ಸಿಕ್ಕಿತ್ತು. ಅದು ಆ ಟೈಮ್‌ಗೆ ತುಂಬಾನೇ ದೊಡ್ಡದು. ಈಗ ಎಷ್ಟು ದುಡಿದಿದ್ದೇನೆ, ಎಲ್ಲಾ ಸಿಕ್ಕಿದೆ. ಆದರೂ ಆ 500 ರೂಪಾಯಿ ಮುಂದೆ ಏನೂ ಅಲ್ಲ ಎಂದು ಹೇಳಿದರು.

ನಟ ಡಾಲಿ ಧನಂಜಯ್ (Daali Dhananjaya) ಮಾತನಾಡಿ, ಸೌತ್‌ನಿಂದ ಮುಂಬೈವರೆಗೂ ಹುಡುಕಿದರೂ ಈ ತರ ಗುಂಡಿಗೆ ಇರೋ ಹುಡುಗ ಸಿಗಲ್ಲ. ಹೊಸ ಪಾತ್ರ, ಹೊಸ ಕಥೆ ಹುಡುಕುತ್ತಲೇ ಇರುತ್ತೇವೆ. ಆ ತರ ಇಷ್ಟವಾದ ಕತೆ ಕೋಟಿ, ಅದಕ್ಕೆ ಈ ಚಿತ್ರದಲ್ಲಿ ನಟಿಸಲು ಒಪಿಕೊಂಡೆ. ಮಿಡ್ಲ್ ಕ್ಲಾಸ್ ಫ್ಯಾಮಿಲಿಗೆ ಕನೆಕ್ಟ್ ಆಗೋ ಸಿನಿಮಾ ಇದಾಗಿದ್ದು, ಜತೆಗೆ ಎಲ್ಲರಿಗೂ ಕನೆಕ್ಟ್ ಆಗುತ್ತೆ. ಚಿತ್ರರಂಗದ ಸದ್ಯದ ಸ್ಥಿತಿಯ ಬಗ್ಗೆ ಗೊತ್ತು, ಕೋಟಿ ಮೂಲಕ ಈ ಫೇಸ್ ಪಾಸ್ ಆಗಲಿ ಎಂದು ತಿಳಿಸಿದರು.

ಇದನ್ನೂ ಓದಿ | Kannada New Movie: ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ ‘ಆಪರೇಷನ್ ಲಂಡನ್ ಕೆಫೆ’!

ಮದುವೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಕೋಟಿ ಸಿನಿಮಾ ಚೆನ್ನಾಗಿ ಹಿಟ್ ಆಗಲಿ, ಪಕ್ಕಾ ಮದುವೆ ಆಗುತ್ತೆ. ತಾರಾ ಅಮ್ಮಗೆ ಮಾತು ಕೊಟ್ಟಿರುವ ಹಾಗೆ ಮದುವೆ ಆಗುತ್ತೆ ಎಂದು ನಟ ಡಾಲಿ ಧನಂಜಯ್‌ ಹೇಳಿದರು.

ಕೋಟಿ ಕನ್ನಡದಲ್ಲಿ ಜಿಯೋ ಸ್ಟುಡಿಯೋಸ್ ಚೊಚ್ಚಲ ನಿರ್ಮಾಣವಾಗಿದ್ದು, ನಿರ್ದೇಶಕ ಪರಮ್ ಅವರ ನೇತೃತ್ವದಲ್ಲಿ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಚಿತ್ರವಾಗಿದೆ. ನಟರಾಕ್ಷಸ ಡಾಲಿ ಧನಂಜಯ, ರಮೇಶ್ ಇಂದಿರಾ, ಮೋಕ್ಷ ಕುಶಾಲ್, ರಂಗಾಯಣ ರಘು, ತಾರಾ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಪರಮ್ ಬರವಣಿಗೆ ಸಾರಥ್ಯದ ಕೋಟಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಟೀಸರ್ ಹಾಗೂ ಹಾಡುಗಳು ಹಿಟ್ ಲೀಸ್ಟ್ ಸೇರಿದ್ದು,, ಜೂನ್ 14 ರಿಂದ ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ | Dolly Dhananjay: ಡಾಲಿ ಧನಂಜಯ್‌ ಜತೆ ಕೊಡಗಿನ ಕನ್ನಡತಿ ರೊಮ್ಯಾನ್ಸ್‌!

ಹೊಯ್ಸಳʼ ಚಿತ್ರ ಬಿಡುಗಡೆಯಾದ ಒಂದು ವರ್ಷದ ಬಳಿಕ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

Continue Reading

ಬೆಳಗಾವಿ

ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಶೆಟ್ಟರ್‌ಗೆ 50 ಸಾವಿರ ಮತಗಳ ಲೀಡ್; ಕ್ಷೇತ್ರವಾರು ಪಟ್ಟಿ ಇಲ್ಲಿದೆ!

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪುತ್ರನನ್ನು ಕಣಕ್ಕಿಸಿದ ಕಾರಣ ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಇದಕ್ಕಾಗಿ ಅವರು ಅಬ್ಬರದ ಪ್ರಚಾರ ಕೈಗೊಂಡಿದ್ದರು, ರಣತಂತ್ರ ರೂಪಿಸಿದ್ದರು. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಎದುರಾಳಿ ಪಕ್ಷದ ಅಭ್ಯರ್ಥಿಗೆ ಭಾರಿ ಪ್ರಮಾಣದ ಲೀಡ್‌ ಸಿಕ್ಕಿದೆ.

VISTARANEWS.COM


on

Belagavi Election Result 2024
Koo

ಬೆಳಗಾವಿ: ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ (Lok Sabha Election Result 2024) ಬಿಜೆಪಿಯ ಜಗದೀಶ್‌ ಶೆಟ್ಟರ್‌ (Jagadish Shettar) ಅವರು ಗೆಲುವು ಸಾಧಿಸಿದ್ದಾರೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್ (Mrinal Hebbalkar) ಅವರು ನಿರೀಕ್ಷೆ ಹುಟ್ಟಿಸಿದ್ದರೂ ಸೋಲನುಭವಿಸಿದ್ದಾರೆ. ಮೃಣಾಳ್‌ ಹೆಬ್ಬಾಳ್ಕರ್‌ ವಿರುದ್ಧ ಜಗದೀಶ್‌ ಶೆಟ್ಟರ್‌ ಅವರು 1,78,437 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿಧಾನಸಭೆ ಕ್ಷೇತ್ರವಾದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೇ ಜಗದೀಶ್‌ ಶೆಟ್ಟರ್‌ ಅವರಿಗೆ 50,529 ಮತಗಳ ಲೀಡ್‌ ಸಿಕ್ಕಿರುವುದು ಸಚಿವೆಗೆ ಆದ ಹಿನ್ನಡೆ ಎಂದೇ ಹೇಳಲಾಗುತ್ತಿದೆ.

Lok Sabha Election 2024 Laxmi Hebbalkar launches election campaign for Mrinal Hebbalkar

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಜಗದೀಶ್‌ ಶೆಟ್ಟರ್‌ ಅವರಿಗೆ 7,62,029 ಮತಗಳು ಲಭಿಸಿದರೆ, ಮೃಣಾಲ್‌ ಹೆಬ್ಬಾಳ್ಕರ್‌ ಅವರಿಗೆ 5,83,592 ಮತಗಳು ಲಭಿಸಿವೆ. ಇನ್ನು, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜಗದೀಶ್‌ ಶೆಟ್ಟರ್‌ ಅವರಿಗೆ 1,24,970 ಮತಗಳು ಲಭಿಸಿದರೆ, ಮೃಣಾಲ್‌ ಹೆಬ್ಬಾಳ್ಕರ್‌ ಅವರಿಗೆ 74,441 ಮತಗಳು ಲಭಿಸಿವೆ. ಸಚಿವೆಯ ಕ್ಷೇತ್ರದಲ್ಲಿಯೇ ಬಿಜೆಪಿಯ ಶೆಟ್ಟರ್‌ ಅವರಿಗೆ 50,529 ಮತಗಳ ಲೀಡ್‌ ಸಿಕ್ಕಿದೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪುತ್ರನನ್ನು ಕಣಕ್ಕಿಸಿದ ಕಾರಣ ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.

ಬೆಳಗಾವಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಲೀಡ್?

ಅರಭಾವಿ ಕ್ಷೇತ್ರ
ಜಗದೀಶ್ ಶೆಟ್ಟರ್: 1,01,114 ಮತಗಳು
ಮೃಣಾಲ್ ಹೆಬ್ಬಾಳ್ಕರ್: 79,639 ಮತಗಳು
ಶೆಟ್ಟರ್ 21,475 ಮತಗಳ ಮುನ್ನಡೆ

ಗೋಕಾಕ್ ಕ್ಷೇತ್ರ
ಜಗದೀಶ್ ಶೆಟ್ಟರ್: 1,02519
ಮೃಣಾಲ್ ಹೆಬ್ಬಾಳ್ಕರ್: 78,622
ಶೆಟ್ಟರ್ 23,897 ಮತಗಳ ಮುನ್ನಡೆ

ಬೆಳಗಾವಿ ಉತ್ತರ
ಜಗದೀಶ್ ಶೆಟ್ಟರ್: 83,938
ಮೃಣಾಲ್ ಹೆಬ್ಬಾಳ್ಕರ್: 81,537
ಶೆಟ್ಟರ್ 2‌,401 ಮತಗಳ ಮುನ್ನಡೆ

ಬೆಳಗಾವಿ ದಕ್ಷಿಣ
ಜಗದೀಶ್ ಶೆಟ್ಟರ್: 1,19,249
ಮೃಣಾಲ್ ಹೆಬ್ಬಾಳ್ಕರ್: 81,537
ಶೆಟ್ಟರ್ 73,220 ಮತಗಳ ಮುನ್ನಡೆ

ಬೆಳಗಾವಿ ಗ್ರಾಮೀಣ
ಜಗದೀಶ್ ಶೆಟ್ಟರ್: 1,24970
ಮೃಣಾಲ್ ಹೆಬ್ಬಾಳ್ಕರ್: 74,441
ಶೆಟ್ಟರ್ 50,529 ಮತಗಳ ಮುನ್ನಡೆ

ಬೈಲಹೊಂಗಲ
ಜಗದೀಶ್ ಶೆಟ್ಟರ್: 82,015
ಮೃಣಾಲ್ ಹೆಬ್ಬಾಳ್ಕರ್: 60,618
ಶೆಟ್ಟರ್ 21,397 ಮತಗಳ ಮುನ್ನಡೆ

ಸವದತ್ತಿ
ಜಗದೀಶ್ ಶೆಟ್ಟರ್: 67,937
ಮೃಣಾಲ್ ಹೆಬ್ಬಾಳ್ಕರ್: 84,888
ಮೃಣಾಲ್ 16,951 ಮತಗಳ ಮುನ್ನಡೆ

ರಾಮದುರ್ಗ
ಜಗದೀಶ್ ಶೆಟ್ಟರ್: 74,729
ಮೃಣಾಲ್ ಹೆಬ್ಬಾಳ್ಕರ್: 75,123
ಮೃಣಾಲ್ 394 ಮತಗಳ ಮುನ್ನಡೆ

ಅಂಚೆ ಮತಗಳ ವಿವರ:
ಜಗದೀಶ ಶೆಟ್ಟರ್: 5,558
ಮೃಣಾಲ್ ಹೆಬ್ಬಾಳ್ಕರ್: 2,695
ಶೆಟ್ಟರ್ 2,863 ಮತಗಳ ಮುನ್ನಡೆ

ಪಿ.ಸಿ. ಮೋಹನ್‌ ಗೆದ್ದಿದ್ದೂ ಇದೇ ರೀತಿ

ಕರ್ನಾಟಕದ ಮತದಾರರ ಪಾಲಿಗೆ ಅತ್ಯಂತ ಕುತೂಹಲ ಮೂಡಿಸಿದ ಕ್ಷೇತ್ರವೆಂದರೆ ಬೆಂಗಳೂರು ಸೆಂಟ್ರಲ್​. ಇಲ್ಲಿ ಕೊನೇ ತನಕ ಕಾಂಗ್ರೆಸ್​ನ ಮನ್ಸೂರ್ ಅಲಿ ಖಾನ್​ ಗೆದ್ದಿದ್ದಾರೆ ಎಂದು ಅಂದುಕೊಂಡರೆ ಕೊನೇ ಕ್ಷಣದಲ್ಲಿ ಹಾಲಿ ಸಂಸದ ಪಿ. ಸಿ ಮೋಹನ್ ಅವರೇ ಗೆದ್ದು ಬೀಗಿದ್ದಾರೆ. ಈ ರೋಚಕ ಫಲಿತಾಂಶಕ್ಕೆ ಕಾರಣ ಮಂಜುಳಾ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ಕ್ಷೇತ್ರ. ಈ ಕ್ಷೇತ್ರವೊಂದೇ ಪಿ. ಸಿ ಮೋಹನ್ ಅವರಿಗೆ ದೊಡ್ಡ ಪ್ರಮಾಣದಲ್ಲಿ ಲೀಡ್​ ಕೊಡುವೆ ಮೂಲ ಅವರ ಮರ್ಯಾದೆ ಕಾಪಾಡಿದೆ.

ಮಹದೇವಪುರ ಕ್ಷೇತ್ರದಲ್ಲಿ ಎಣಿಕೆ ಆರಂಭಗೊಂಡಾಗ ಪಿ.ಸಿ ಮೋಹನ್ ಅವರಿಗೆ ಮುನ್ನಡೆ ಸಿಗಲು ಆರಂಭವಾಯಿತು. ಈ ವೇಳೆ ಎಣಿಕೆ ಕೇಂದ್ರನ್ನು ತೊರೆದಿದ್ದ ಬಿಜೆಪಿ ಕಾರ್ಯಕರ್ತರು ಮತ್ತೆ ಅಲ್ಲಿಗೆ ಬರಲು ಆರಂಭಿಸಿದರು. ಈ ಕ್ಷೇತ್ರವೊಂದೇ ಮೋಹನ್ ಅವರಿಗೆ 1,18,046 ಮತದ ಮುನ್ನಡೆ ತಂದುಕೊಟ್ಟಿತು. 32,707 ಮತಗಳ ಅಂತರದಿಂದ ಅವರು ಗೆದ್ದೇ ಬಿಟ್ಟರು.

ಇದನ್ನೂ ಓದಿ: J Shantha: ಅಣ್ಣ-ತಂಗಿಗೆ ಕಹಿ; ಕರ್ನಾಟಕದಲ್ಲಿ ಶ್ರೀರಾಮುಲು, ಆಂಧ್ರದಲ್ಲಿ ಜೆ. ಶಾಂತಾಗೆ ಸೋಲು!

Continue Reading
Advertisement
Sunita Williams
ಪ್ರಮುಖ ಸುದ್ದಿ12 mins ago

Sunita Williams: 3ನೇ ಬಾರಿ ಬಾಹ್ಯಾಕಾಶ ಯಾನ ಕೈಗೊಂಡ ಭಾರತ ಮೂಲದ ಸುನೀತಾ ವಿಲಿಯಮ್ಸ್;‌ Video ಇದೆ

Dr C N Manjunath
ಕರ್ನಾಟಕ32 mins ago

Dr C N Manjunath: ಬೆಂಗಳೂರಿನಲ್ಲೇ ಸುರೇಶ್‌ ವಿರುದ್ಧ ಡಾ. ಮಂಜುನಾಥ್‌ಗೆ 2 ಲಕ್ಷ ಮತಗಳ ಲೀಡ್‌! ಕ್ಷೇತ್ರವಾರು ಪಟ್ಟಿ ಇಲ್ಲಿದೆ

New Cancer Drug
ಆರೋಗ್ಯ44 mins ago

New Cancer Drug: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕ್ರಾಂತಿ; ಹೊಸ ಔಷಧ ಪ್ರಯೋಗ ಶೇ. 100 ಯಶಸ್ವಿ!

World Environment Day celebration in karatagi
ಕೊಪ್ಪಳ48 mins ago

World Environment Day: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು

500 Rs deposit in the name of new admission children by old students of Government Kannada School Lingasugur
ಕರ್ನಾಟಕ50 mins ago

Raichur News: ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ ಹೆಸರಿನಲ್ಲಿ 500 ರೂ. ಠೇವಣಿ!

Koti Movie
ಸಿನಿಮಾ1 hour ago

Koti Movie: ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಟ್ರೈಲರ್ ರಿಲೀಸ್; ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ

Belagavi Election Result 2024
ಬೆಳಗಾವಿ1 hour ago

ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಶೆಟ್ಟರ್‌ಗೆ 50 ಸಾವಿರ ಮತಗಳ ಲೀಡ್; ಕ್ಷೇತ್ರವಾರು ಪಟ್ಟಿ ಇಲ್ಲಿದೆ!

French Open 2024
ಕ್ರೀಡೆ2 hours ago

French Open 2024: ಸೆಮಿಫೈನಲ್​ ಪ್ರವೇಶಿಸಿದ ಬೋಪಣ್ಣ-ಮ್ಯಾಥ್ಯೂ ಜೋಡಿ

Minister Of Parliament
Latest2 hours ago

Minister Of Parliament: ನೀವು ಮತ ಹಾಕಿ ಕಳುಹಿಸಿರುವ ಸಂಸದರಿಗೆ ಎಷ್ಟು ಸಂಬಳ ಸಿಗುತ್ತದೆ ಗೊತ್ತೇ?

Uttarakhand Trekking Tragedy
ಪ್ರಮುಖ ಸುದ್ದಿ2 hours ago

Uttarakhand Trekking Tragedy: ಉತ್ತರಾಖಂಡದಿಂದ ರಾಜ್ಯದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ: ಸಿಎಂ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌