Book translation | ದಿನಕ್ಕೊಂದು ಪುಸ್ತಕ ಅನುವಾದಕ್ಕೆ ಮುಂದಾದ ತಮಿಳುನಾಡು ಸರ್ಕಾರ Vistara News
Connect with us

ಕಲೆ/ಸಾಹಿತ್ಯ

Book translation | ದಿನಕ್ಕೊಂದು ಪುಸ್ತಕ ಅನುವಾದಕ್ಕೆ ಮುಂದಾದ ತಮಿಳುನಾಡು ಸರ್ಕಾರ

ದಿನಕ್ಕೊಂದರಂತೆ 365 ಅತ್ಯುತ್ತಮ ಕೃತಿಗಳ ಅನುವಾದ ಮಾಡಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ.

VISTARANEWS.COM


on

MK Stalin
Koo

ಚೆನ್ನೈ: ದಿನಕ್ಕೊಂದರಂತೆ 365 ಅತ್ಯುತ್ತಮ ಕೃತಿಗಳ ಅನುವಾದ ಮಾಡಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ಈ ನಿಟ್ಟನಲ್ಲಿ ಹಲವು ದೇಶಗಳ ಪ್ರಕಾಶಕರೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಹೇಳಿದ್ದಾರೆ.

365ರಲ್ಲಿ ತಮಿಳಿನ 90 ಅತ್ಯುತ್ತಮ ಕೃತಿಗಳ ವಿದೇಶಿ ಭಾಷಾ ಅನುವಾದ, 60 ತಮಿಳು ಕೃತಿಗಳ ಇತರ ಭಾರತೀಯ ಭಾಷಾ ಅನುವಾದ, 170 ಇತರ ಭಾಷಾ ಕೃತಿಗಳ ತಮಿಳು ಅನುವಾದ, 45 ಕೃತಿಗಳ ಅನ್ಯಾನ್ಯ ಭಾಷಾ ಅನುವಾದಗಳು ಬರಲಿವೆ ಎಂದು ಅವರು ತಿಳಿಸಿದ್ದಾರೆ.

ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ 3 ಕೋಟಿ ರೂ. ಅನುವಾದದ ಹಕ್ಕುಗಳಿಗಾಗಿ ತೆಗೆದಿರಿಸಿದೆ. 6 ಕೋಟಿ ರೂ.ಗಳನ್ನು ಪುಸ್ತಕ ಮೇಳಕ್ಕೆ ಮೀಸಲಾಗಿಟ್ಟಿದೆ. ಔದ್ಯಮಿಕ ಬೆಳವಣಿಗೆ, ಚೆಸ್‌ ಒಲಿಂಪಿಯಾಡ್‌, ಎಟಿಪಿ ಟೆನ್ನಿಸ್‌ ಟೂರ್ನಮೆಂಟ್‌ಗಳ ಮೂಲಕ ಜಗತ್ತಿನ ಗಮನ ಸೆಳೆದಿರುವ ತಮಿಳುನಾಡು ಈಗ ಪುಸ್ತಕಗಳ ಮೂಲಕವೂ ಸೆಳೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ | ಸಂಡೇ ರೀಡ್‌ | ಕ್ಯಾಪ್ಟನ್‌ ಗೋಪಿನಾಥ್‌ ಜೀವನದ ಒಳʼಹರಿವುʼ ತೆರೆದಿಡುವ ಪುಸ್ತಕ ʼನಮ್ಮ ಭಾರತʼ

ಪೆರಿಯಾರ್‌ ಅವರು ಪ್ರಕಾಶನ ಉದ್ಯಮ ಇನ್ನೂ ಬೆಳೆಯುವ ಮುನ್ನವೇ ಕಮ್ಯುನಿಸ್ಟ್‌ ಪುಸ್ತಕಗಳನ್ನು, ಲೆನಿನ್‌ ಕೃತಿಗಳನ್ನು ಭಾಷಾಂತರಿಸಿದ್ದರು. ಜಗತ್ತನ್ನು ತಮಿಳಿಗೆ ತರುವುದು ಹಾಗೂ ತಮಿಳನ್ನು ಜಗತ್ತಿಗೆ ಕೊಂಡೊಯ್ಯುವುದು ಈ ಎರಡೂ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ನಾಯಕರ ಕನಸನ್ನು ನನಸು ಮಾಡಲು ನಾವು ಯತ್ನಿಸುತ್ತಿದ್ದೇವೆ ಎಂದರು. ಕಳೆದ ಒಂದು ವರ್ಷದಲ್ಲಿ ಸರ್ಕಾರ 173 ಕೃತಿಗಳನ್ನು ಪ್ರಕಟಿಸಿದೆ. ಶ್ರೇಷ್ಠ ಕೃತಿಗಳು ಅನುವಾದಗೊಂಡಾಗ, ಭಾಷೆ ಸಹಾ ಬೆಳೆಯುತ್ತದೆ ಎಂದರು.

ಇದನ್ನೂ ಓದಿ | ಹೊಸ ಪುಸ್ತಕ | ಮಾಯ ಮತ್ತು ಜೋಗದ ಬೆಳಕಿನಲ್ಲಿ | ಕಾಂತಾರದ ದಂತಕತೆ ಮತ್ತು ಮಾಯವಾಗುವ ದೈವಗಳು

ಕರ್ನಾಟಕ

Book Release: ಮಾ.25ರಂದು ಕಲಬುರಗಿಯಲ್ಲಿ ಏಕಕಾಲಕ್ಕೆ 115 ಪುಸ್ತಕಗಳ ಲೋಕಾರ್ಪಣೆ

Book Release: ಶ್ರೀ ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ 46ನೇ ವಾರ್ಷಿಕೋತ್ಸವದಲ್ಲಿ 115 ಪುಸ್ತಕಗನ್ನು ಬಿಡುಗಡೆ ಮಾಡಲಾಗುತ್ತದೆ.

VISTARANEWS.COM


on

Edited by

Koo

ಕಲಬುರಗಿ: ಶ್ರೀ ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಶ್ರೀ ಬಸವ ಪ್ರಕಾಶನದ 46ನೇ ವಾರ್ಷಿಕೋತ್ಸವ ಹಾಗೂ 115 ಪುಸ್ತಕಗಳ ಲೋಕಾರ್ಪಣೆ ಸಂಭ್ರಮವನ್ನು (Book Release) ಮಾರ್ಚ್‌ 25ರಂದು ಬೆಳಗ್ಗೆ 10.30ಕ್ಕೆ ನಗರದ ಸೂಪರ್‌ ಮಾರ್ಕೆಟ್‌ನ ಚೇಂಬರ್‌ ಆಫ್‌ ಕಾಮರ್ಸ್‌ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಬಡಬಾಳ ತೇರಿನಮಠದ ಶ್ರೀ ಷ.ಬ್ರ.ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಲಿದ್ದು, ಕಡಗಂಚಿ-ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಧಾರವಾಡದ ಹಿರಿಯ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ 115 ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ | Vice Chancellor: ರಾಜ್ಯದ 7 ನೂತನ ವಿವಿಗಳಿಗೆ ಕುಲಪತಿಗಳ ನೇಮಕ: ಸಚಿವ ಅಶ್ವತ್ಥನಾರಾಯಣ ಮಾಹಿತಿ

ಕಲಬುರಗಿ ದಕ್ಷಿಣ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕಲಸಚಿವ ಬಿ. ಶರಣಪ್ಪ ಭಾಗವಹಿಸಲಿದ್ದಾರೆ. ಶ್ರೀ ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನ ಸಂಸ್ಥಾಪಕ ಬಸವರಾಜ ಜಿ.ಕೊನೇಕ ಉಪಸ್ಥಿತರಿರಲಿದ್ದಾರೆ.

Continue Reading

ಉತ್ತರ ಕನ್ನಡ

Sirsi News: ಹಳೆ ಹಾಡು ಬರಹಗಾರ್ತಿ ಶೈಲಜಾ ಹೆಗಡೆಗೆ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ಪ್ರದಾನ

Sirsi News: ಸಿದ್ದಾಪುರದ ಮಗೇಗಾರಿನ ಹಳೆ ಹಾಡು ಬರಹಗಾರ್ತಿ ಶೈಲಜಾ ಹೆಗಡೆ ಅವರಿಗೆ ಸಾಹಿತ್ಯ ಸಿಂಚನ ಬಳಗದ ವಾರ್ಷಿಕೋತ್ಸವದ ಅಂಗವಾಗಿ ನೀಡುವ ಸಾಹಿತ್ಯ ಸಿಂಚನ ಶ್ರೀ (Sahitya Sinchana Sri ) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

VISTARANEWS.COM


on

Edited by

Sahitya Sinchana Sri Award Shailaja Hegde sirsi
ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ಸ್ವೀಕರಿಸಿದ ಸಿದ್ದಾಪುರದ ಮಗೇಗಾರಿನ ಹಳೆ ಹಾಡು ಬರಹಗಾರ್ತಿ ಶೈಲಜಾ ಹೆಗಡೆ.
Koo

ಶಿರಸಿ: ಇಲ್ಲಿನ ಸಾಹಿತ್ಯ ಸಿಂಚನ ಬಳಗದ ವಾರ್ಷಿಕೋತ್ಸವದ ಅಂಗವಾಗಿ ನೀಡುವ ಸಾಹಿತ್ಯ ಸಿಂಚನ ಶ್ರೀ (Sahitya Sinchana Sri) ಪ್ರಶಸ್ತಿಯನ್ನು ಸಿದ್ದಾಪುರದ ಮಗೇಗಾರಿನ ಹಳೆ ಹಾಡು ಬರಹಗಾರ್ತಿ ಶೈಲಜಾ ಹೆಗಡೆ ಅವರಿಗೆ ನೀಡಿ ಅಭಿನಂದಿಸಲಾಯಿತು.

ನಗರದ ನೆಮ್ಮದಿ ಕುಠೀರದಲ್ಲಿ ಭಾನುವಾರ (ಮಾ.19) ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಗ್ರಾಮೀಣ ಭಾಗದಲ್ಲಿ ಇರುವ ನನ್ನ ಸಣ್ಣ ಸಾಹಿತ್ಯ ಸೇವೆಯನ್ನು ಗಮನಿಸಿ ಪ್ರಶಸ್ತಿ‌ ನೀಡಿದ್ದು ಖುಷಿಯಾಗಿದೆ. ಪ್ರಶಸ್ತಿ ಪಡೆದುಕೊಳ್ಳುತ್ತಿರುವುದು ಇದೇ ಮೊದಲ” ಎಂದರು.

ಇದನ್ನೂ ಓದಿ: Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ತಾಲೂಕು ಕಸಾಪ ಅಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಉದ್ಘಾಟಿಸಿ, “ಕಾವ್ಯ ಸಂಕಲನದ ಗುಣಮಟ್ಟದ‌ ಕುರಿತು ಪರಿಶೀಲನೆ ಮಾಡಬೇಕಾದ‌ ಕಾಲದಲ್ಲಿ ಇದ್ದೇವೆ. ಸಾಹಿತ್ಯ ಸಂಘಟನೆಯಲ್ಲಿ ಜೀವನೋತ್ಸಾಹ ಉಳಿಸಿ ಬೆಳೆಸಬೇಕಿದೆ.
ಶೈಲಜಾ ಹೆಗಡೆ ಅವರು ಬರೆಯುವ ಮೂಲಕ ಸಾಹಿತ್ಯ ಆಸಕ್ತಿ ಉಳಿಸಿಕೊಂಡಿದ್ದಾರೆ” ಎಂದರು.

ಕೈಗಾದ ಸಾಹಿತಿ ಎಸ್.ಆರ್.ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಾಹಿತ್ಯವೆಂಬುದು ಖುಷಿಯನ್ನು ನೀಡುವುದರ ಜತೆಗೆ ಜೀವನದ ಪಾಠವಾಗುತ್ತದೆ. ಅತಿ ಹೆಚ್ಚು ಸಾಹಿತಿಗಳನ್ನು ಲೇಖಕರನ್ನು ಶಿರಸಿ ನೀಡುತ್ತಿದೆ. ಸಾಹಿತ್ಯ ವಾತಾವರಣವನ್ನು ಶಿರಸಿಯಲ್ಲಿ ನಿರ್ಮಾಣ ಮಾಡಲು ಹಲವರು ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಸಿಂಚನ ಬಳಗ ಹಾಗೂ ಶಿರಸಿಯ ಸಾಹಿತ್ಯ ಕ್ಷೇತ್ರ ಇನ್ನಷ್ಟು ಬೆಳೆಯಲಿ” ಎಂದರು.

ಇದನ್ನೂ ಓದಿ: Swara Bhasker: ಪಾಕಿಸ್ತಾನದ ಪ್ರಸಿದ್ಧ ಡಿಸೈನರ್ ವಿನ್ಯಾಸ ಮಾಡಿದ ಲೆಹೆಂಗಾದಲ್ಲಿ ಮಿಂಚಿದ ನಟಿ ಸ್ವರಾ ಭಾಸ್ಕರ್

ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ರಾಜೀವ ಅಜ್ಜಿಬಳ ಅವರ ಸಮುದ್ಧರಣ ಮತ್ತು ದ್ವೀಪಾಂತರ ಹಾಗೂ ಲತಾ ಹೆಗಡೆ ಬಾಳೆಗದ್ದೆ ಅವರ ನುಡಿ ಸಿಂಚನ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಶಿವ ಪ್ರಸಾದ ಹೆಗಡೆ ಹಿರೇಕೈ ಪ್ರಾಸ್ತಾವಿಕ ಮಾತನಾಡಿದರು. ಯಶಸ್ವಿನಿ ಕಾನಸೂರು ಸ್ವಾಗತಿಸಿದರು. ಭವ್ಯ ಹಳೆಯೂರು ನಿರ್ವಹಣೆ‌ ಮಾಡಿದರು. ನಾಗವೇಣಿ ಹೆಗಡೆ ಪರಿಚಯಿಸಿದರು. ಸುಜಾತಾ ದಂಟಕಲ್ ವಂದಿಸಿದರು‌. ಹದಿನೈದಕ್ಕೂ ಅಧಿಕ ಕವಿಗಳು ಕಾವ್ಯ ವಾಚನ ಮಾಡಿದರು.

Continue Reading

ಕರ್ನಾಟಕ

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

ಸಾಹಿತಿ ಮಂಜುನಾಥ ಅಜ್ಜಂಪುರ (Manjunatha Ajjampura) ವಿರಚಿತ “ನಿಜ ಇತಿಹಾಸದೊಂದಿಗೆ ಮುಖಾಮುಖಿ” ಅಂಕಣ ಸಂಕಲನ ಬಿಡುಗಡೆ ಸಮಾರಂಭವು ಬೆಂಗಳೂರಿನಲ್ಲಿ ಭಾನುವಾರ ನಡೆಯಿತು. ಈ ವೇಳೆ ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅರ್ಥಪೂರ್ಣವಾಗಿ ಮಾತನಾಡಿದರು.

VISTARANEWS.COM


on

Edited by

someone cant tell the truth that Tipu used to charge high taxes on Hindus says Hariprakash konemane
ನಿಜ ಇತಿಹಾಸದೊಂದಿಗೆ ಮುಖಾಮುಖಿ ಅಂಕಣ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಮಾತನಾಡಿದರು.
Koo

ಬೆಂಗಳೂರು: ಇತಿಹಾಸ ವಸ್ತುನಿಷ್ಠವಾಗಿರಬೇಕೇ ಹೊರತು ಕಪೋಲಕಲ್ಪಿತವಾಗಿರಬಾರದು ಎಂದು ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಹೇಳಿದರು.

ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಂಸ್ಥೆಯ ವಾಡಿಯಾ ಸಭಾಂಗಣದಲ್ಲಿ ಭಾನುವಾರ (ಮಾ. 19) ಏರ್ಪಡಿಸಲಾಗಿದ್ದ “ನಿಜ ಇತಿಹಾಸದೊಂದಿಗೆ ಮುಖಾಮುಖಿ” ಅಂಕಣ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈಲ್ವೆ ಅಭಿವೃದ್ಧಿ ಆಗಲು ಬ್ರಿಟಿಷ್ ಸಂಸ್ಥಾನ ಕಾರಣ ಎಂಬುದು ನಿಜ. ಆದರೆ, ಅವರು ಅರಣ್ಯದ ಸಂಪತ್ತನ್ನು ದೋಚಲು ಇದನ್ನು ಬಳಕೆ ಮಾಡಿಕೊಂಡಿದ್ದರು ಎಂಬ ಸತ್ಯವನ್ನು ಬಹಳಷ್ಟು ಮಂದಿ ಬರೆಯವುದಿಲ್ಲ. ಟಿಪ್ಪು ರೇಷ್ಮೆ ಬೆಳೆಯನ್ನು ತಂದ, ಬಾಬಾ ಬುಡನ್‌ ಕಾಫಿ ಬೀಜವನ್ನು ತಂದ ಎಂಬ ಸುಳ್ಳು ಇತಿಹಾಸವನ್ನು ಬರೆಯಲಾಗಿದೆ. ಆದರೆ, ಟಿಪ್ಪು ಹಿಂದುಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುತ್ತಿದ್ದ ಎಂಬ ವಿಷಯ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆದ್ದರಿಂದ ಸತ್ಯ ಎಲ್ಲರಿಗೂ ತಿಳಿಯಬೇಕು. ಈ ಕೆಲಸವು ಬರಹಗಾರರಿಂದ ಆಗಬೇಕು ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಕೆಟ್ಟ ಸಂಪ್ರದಾಯದ ಬಗ್ಗೆ ಇರಲಿ ಎಚ್ಚರ

ಯಾವುದೇ ವಿಷಯವನ್ನು ಕ್ಷಣಿಕ ಕಾರಣಕ್ಕಾಗಿ ಯಾರಾದರೂ ಪ್ರಸ್ತಾಪ ಮಾಡುತ್ತಾರೆಂದರೆ ಭವಿಷ್ಯದಲ್ಲಿ ನಾವು ಬಹಳ ದೊಡ್ಡ ಅಪಚಾರ ಮಾಡಿದಂತಾಗುತ್ತದೆ. ಅನೇಕರು ವ್ಯಾಪಾರಕ್ಕೋಸ್ಕರ, ಸ್ವಂತಕ್ಕೋಸ್ಕರ, ಪ್ರಚಾರಕ್ಕೋಸ್ಕರ ಹೆಸರುಗಳನ್ನು, ಇತಿಹಾಸಗಳನ್ನು ಬಳಸುವ ಅಪಾಯವಿದೆ. ಇಂಥ ಒಂದು ಕೆಟ್ಟ ಸಂಪ್ರದಾಯವನ್ನು ನಾವು ಹಾಕಿಕೊಟ್ಟಂತೆ ಆಗುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಟಿಪ್ಪು, ಉರಿಗೌಡ, ನಂಜೇಗೌಡರ ಬಗ್ಗೆ ಇಂದು ಕೇವಲ ರಾಜಕೀಯ ಚರ್ಚೆಗಳಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸತ್ಯ ಹೇಳುವವರನ್ನು ಗೌರವಿಸೋಣ

ಕಾ.ವೆಂ. ನಾಗರಾಜ್‌ ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವೀರ ಸೇನಾನಿ ದೋಂಡಿಯಾ ವಾಘ್ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಿದ್ದಾರೆ. ದೋಂಡಿಯಾ ವಾಘ್ ಬಗ್ಗೆ ಎಷ್ಟು ಜನಕ್ಕೆ ಇಂದು ಗೊತ್ತಿದೆ? ಏಕೆ ಸ್ಮರಿಸಿಕೊಳ್ಳಬೇಕು ಎಂಬುದು ಎಲ್ಲರಿಗೂ ಗೊತ್ತಾಗಬೇಕಿದೆ. ಇಂಥ ಕೆಲಸವನ್ನು ಇವರು ಇಂದು ಮಾಡುತ್ತಿದ್ದಾರೆ. ನಾವು ಇಂಥವರನ್ನು ಗೌರವಿಸುವ ಕೆಲಸ ಆಗಬೇಕು. ಸ್ವಾರ್ಥದ ಲವಲೇಶವೂ ಇಲ್ಲದೆ ಕೆಲಸ ಮಾಡುವವರ ಮೇಲೆ ನಾವು ಹೃದಯದಲ್ಲಿ ಗೌರವವನ್ನು ಇಟ್ಟುಕೊಳ್ಳಬೇಕು. ಸಾಹಿತಿ ಚಿದಾನಂದ ಮೂರ್ತಿಯವರು ಸತ್ಯ ಹೇಳಿದರು ಎನ್ನುವ ಕಾರಣಕ್ಕೆ ಅವರನ್ನು ಎಂದೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲಿಲ್ಲ. ಸ್ವಾರ್ಥ, ಹಿತಾಸಕ್ತಿ ಇಲ್ಲದೆ ಕೆಲಸ ಮಾಡುವವರ ಕುರಿತು ಗೌರವವನ್ನು ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಇತಿಹಾಸ, ಸಂಸ್ಕೃತಿ, ಗುಲಾಮಗಿರಿ ಬಗ್ಗೆ ಸಾಕಷ್ಟು ಬರಹಗಾರರು ಸತ್ಯ ಬರೆಯಲು ಹಿಂಜರಿಯುತ್ತಾರೆ. ಆದರೆ, ಸಾಹಿತಿ ಮಂಜುನಾಥ್ ಅಜ್ಜಂಪುರ ಅವರು ಅಕ್ಷರದ ಮೂಲಕ ಈ ಬಗ್ಗೆ ಸತ್ಯವನ್ನು ಬಿಚ್ಚಿಡುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

ನಿಜ ಇತಿಹಾಸದೊಂದಿಗೆ ಮುಖಾಮುಖಿ ಅಂಕಣ ಸಂಕಲನವನ್ನು ಬಿಡುಗಡೆ ಮಾಡಲಾಯಿತು

ಲೇಖನಗಳು ಶಾಶ್ವತವಾಗಿ ಉಳಿಯುತ್ತವೆ. ಮಂಜುನಾಥ್ ಅಜ್ಜಂಪುರ ಅವರು ವಾಯ್ಸ್ ಆಫ್ ಇಂಡಿಯಾದಲ್ಲಿ ಪರಿಚಯವಾಗಿದ್ದರು. ಅವರಲ್ಲಿ ಲೇಖನಗಳನ್ನು ಬರೆಸಲಾರಂಭಿಸಿದೆ. ಇದಕ್ಕೆ ನಾಡಿನ ಓದುಗರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಮಂಜುನಾಥ್‌ ಅವರ ಎದೆಗಾರಿಕೆಯ ಲೇಖನಗಳಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದಿದ್ದವು. ಆದರೆ, ಅದನ್ನೆಲ್ಲ ಎದುರಿಸಿದ ಅವರು ಬರವಣಿಗೆಯನ್ನು ನಿಲ್ಲಿಸಲಿಲ್ಲ. ಈಗ ಈ ಪುಸ್ತಕವನ್ನು ಇಂದು ಹೊರತರಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ವಿಸ್ತಾರ Money Guide | PAN-Aadhaar link: ಆಧಾರ್‌ ಜತೆ ಮಾ. 31ರೊಳಗೆ ಲಿಂಕ್ ಮಾಡದಿದ್ದರೆ ಪ್ಯಾನ್‌ ನಿಷ್ಕ್ರಿಯ

someone cant tell the truth that Tipu used to charge high taxes on Hindus says Hariprakash konemane
ಅನಿಸಿಕೆ ಹಂಚಿಕೊಂಡ ಲೇಖಕ ಮಂಜುನಾಥ್ ಅಜ್ಜಂಪುರ

ತಪ್ಪುಗಳನ್ನು ಸರಿಪಡಿಸೋಣ

ಲೇಖಕ ಮಂಜುನಾಥ್ ಅಜ್ಜಂಪುರ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ. ನನ್ನ ಮೊದಲ ಅಂಕಣ ಸಂಕಲನವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ ಸಾಕಷ್ಟು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲು ಸಾಧ್ಯವಾಗಿದೆ. ಪ್ರಮುಖ ವಿಚಾರವೆಂದರೆ ಗಂಭೀರ ವಿಚಾರಗಳನ್ನು ತಲುಪಿಸುವ ಕೆಲಸವು ಅತ್ಯಂತ ಕಷ್ಟಕರವಾಗಿದೆ. ಶಾಲಾ ಪುಸ್ತಕಗಳಲ್ಲಿ ಸಾಕಷ್ಟು ತಪ್ಪಾದ ಮಾಹಿತಿಗಳಿವೆ. ಸಂಸದೀಯ ವ್ಯವಸ್ಥೆ, ಕೈಗಾರಿಕಾ ಕ್ರಾಂತಿಯಂತಹ ಎಷ್ಟೋ ವಿಷಯಗಲೂ ನಮಗೆ ಪಾಶ್ಚಾತ್ಯರಿಂದ ಬಂದಿದೆ ಎಂಬ ಮಾಹಿತಿಗಳನ್ನು ಬಿತ್ತರಿಸಲಾಗಿದೆ. ಆದರೆ, ಇದು ತಪ್ಪು ಕಲ್ಪನೆಯಾಗಿದೆ. ಈ ರೀತಿಯ ತಪ್ಪುಗಳನ್ನು ಸರಿಪಡಿಸಬೇಕಾಗಿದೆ ಎಂದರು.

ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದೊಂದು ಮಹತ್ವದ ಪುಸ್ತಕವಾಗಿದೆ. ರಾಷ್ಟ್ರೋತ್ಥಾನದ ಮುದ್ರಣವು ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಸುಳ್ಳಿನ ಮೇಲೆ ಸಾಕಷ್ಟು ನಡೆದಿದ್ದೇವೆ. ಸುಳ್ಳನ್ನು ಸತ್ಯ ಎಂದು ನಂಬಿದ್ದೇವೆ. ಸಾಹಿತ್ಯ ಪಠ್ಯ ಪುಸ್ತಕಗಳಲ್ಲಿ ಸಾಕಷ್ಟು ತಪ್ಪುಗಳಿವೆ. ದಾರಿ ತಪ್ಪಿಸುವಂತಿವೆ. ನಾವೆಲ್ಲ ತಲೆಯಲ್ಲಿ ಬ್ರಿಟಿಷ್ ಶಿಕ್ಷಣವನ್ನು ತುಂಬಿಕೊಂಡಿದ್ದೇವೆ. ಈ ಸುಳ್ಳುಗಳನ್ನು ಈ ಪುಸ್ತಕದಲ್ಲಿ ತೊಡೆದು ಹಾಕಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: WTC 2023 Final: ಓವಲ್‌ ಕದನಕ್ಕೆ ಕಾಯುತ್ತಿದ್ದೇವೆ; ಫೈನಲ್​ಗೂ ಮುನ್ನವೇ ರೋಹಿತ್​ ಪಡೆಗೆ ಎಚ್ಚರಿಕೆ ನೀಡಿದ ಸ್ಮಿತ್​

someone cant tell the truth that Tipu used to charge high taxes on Hindus says Hariprakash konemane

ಈ ಪುಸ್ತಕದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಹೊರತರಲಾಗಿದೆ. ಪಂಚಭೂತಗಳ ಆರಾಧನೆಯನ್ನು ಹೇಳಲಾಗಿದೆ. ಬಲಿಷ್ಠ ರಾಷ್ಟ್ರ ಕಟ್ಟುವ ಲೇಖನಗಳನ್ನು ಬರೆಯಲಾಗಿದೆ. ಬ್ರಿಟಿಷ್ ಗುಲಾಮಗಿರಿಯಿಂದ ಇನ್ನೂ ನಾವು ಹೊರ ಬಂದಿಲ್ಲ. ಬೌದ್ಧಿಕ ದಾಸ್ಯ ನಮ್ಮಲ್ಲಿ ಉಳಿದು ಹೋಗಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ಪೋಷಕರು ಸಹ ಮಕ್ಕಳಿಗೆ ತಿಳಿ ಹೇಳುತ್ತಿಲ್ಲ, ಇದು ದೌರ್ಭಾಗ್ಯದ ಪರಿಸ್ಥಿತಿ. ಮನೆಯಲ್ಲಿ ಮೊದಲು ಉತ್ತಮ ವಾತಾವರಣ ನಿರ್ಮಾಣವಾಗಬೇಕು. ಶಾಲೆಯಿಂದಲೇ ಸಂಸ್ಕೃತಿ ಬಿತ್ತುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಟಿಪ್ಪುವಿನ ಬಗ್ಗೆ ಹರಿಪ್ರಕೋಶ್‌ ಕೋಣೆಮನೆ ಹೇಳಿದ ಮಾತು…

ಚಿಂತಕ, ಇತಿಹಾಸಕಾರ ಜಿ.ಬಿ. ಹರೀಶ್ ಮಾತನಾಡಿ, ಹಿಂದುತ್ವ ಇರಲು ಬಂದಿರುವ ಧರ್ಮವೇ ಹೊರತು ಹೋಗಲು ಬಂದಿರುವ ಧರ್ಮವಲ್ಲ ಎಂಬ ಬಗ್ಗೆ ಈ ಪುಸ್ತಕದಲ್ಲಿ ಹೇಳಲಾಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಸಾಕಷ್ಟು ಗುಲಾಮಗಿರಿಯನ್ನು ಅನುಭವಿಸಿದೆವು. ಬ್ರಿಟಿಷರು ನಮ್ಮನ್ನು ಆಳಿದ್ದು ಕೇವಲ 90 ವರ್ಷ. ಚಂದ್ರಶೇಖರ ಆಜಾದ್, ಸುಖದೇವ್ ತರಹದ ಅನೇಕ ಮಹನೀಯರು ಬ್ರಿಟಿಷರ ಆಳ್ವಿಕೆಯಲ್ಲಿ ಸಾಕಷ್ಟು ಕಾಡಿದರು. ಈ ಬಗ್ಗೆ ಇತಿಹಾಸದಲ್ಲೇ ಉಲ್ಲೇಖಿಸಲಾಗಿದೆ. ಈ ಎಲ್ಲ ಅಂಶಗಳನ್ನೂ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದರು.

ಆಗಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ತಂದವರು ಎನ್ನುವುದು ಸತ್ಯ. ಅದಕ್ಕೆ ಅಡಿಪಾಯ ಹಾಕಿದವರು ನೆಹರು ಎನ್ನುವುದೂ ಸತ್ಯ. ಇನ್ನು ಎಡ್ವಿನಾ ಬ್ರಿಟಿಷರ ಗೂಢಚಾರಿಯಾಗಿ ನೆಹರುವನ್ನು ತನ್ನ ತೆಕ್ಕೆಗೆ ಹೇಗೆ ಹಾಕಿಕೊಂಡಳು ಎನ್ನುವ ನಿಜವನ್ನು ಎಲ್ಲಿಯೂ ಹೇಳಲಾಗಿಲ್ಲ. ವಿಯೆಟ್ನಾಂ ನಿಜವಾದ ಸ್ವಾತಂತ್ರ್ಯ ಪಡೆದ ರೀತಿ ನಾವು ಸಹ ಎಂದೋ ಪಡೆಯುತ್ತಿದ್ದೆವು. ಆದರೆ, ನಮ್ಮಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಕೈಗೂಡಲು ಬಿಡಲಿಲ್ಲ ಎನ್ನುವುದು ದುರಂತ ಎಂದು ಹರೀಶ್‌ ಹೇಳಿದರು.

ಓದುವ ಧೈರ್ಯವಿದ್ದವರಿಗೆ ಮಾತ್ರ ಈ ಪುಸ್ತಕ

ಈ ಪುಸ್ತಕ ಓದುವ ಧೈರ್ಯವಿದ್ದವರಿಗೆ ಮಾತ್ರ. ಇದರಲ್ಲಿ ಪೂರ್ತಿ ಸತ್ಯವನ್ನು ಹೇಳಲಾಗಿದೆ. ಗಾಂಧೀಜಿಯವರ ಬಗ್ಗೆ ಪೂರ್ತಿಯಾಗಿ ಸತ್ಯ ಹೇಳಲಾಗಿದೆ. ಇಷ್ಟು ದಿನ ಕೇವಲ ಅರ್ಧ ಸತ್ಯ ಹೇಳಲಾಗಿತ್ತು. ನಮ್ಮ ಇತಿಹಾಸದಲ್ಲಿ ನಳಂದದ ಬಗ್ಗೆ ಸಾಕಷ್ಟು ಸುಳ್ಳು ಇದೆ. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂದಾಗ ರಾಜೇಂದ್ರ ಪ್ರಸಾದ್ ತಡೆದಿದ್ದರು. ಪೊಲೀಸ್, ಮಿಲಿಟರಿಯನ್ನು ಹೆಚ್ಚಿಸದಿರಲು ಪಟೇಲ್ ಕಾರಣವಾಗಿದ್ದರು. ನಾನು ಎನ್ನುವ ಪರಿಧಿಯನ್ನು ಕುಟುಂಬಕ್ಕೆ ಸೀಮಿತ ಮಾಡಿಕೊಂಡಿರುವುದು ಇಷ್ಟು ದಿನದ ಎಲ್ಲ ಅವಾಂತರಕ್ಕೆ ಕಾರಣವಾಗಿದೆ. ಬ್ರಿಟಿಷರು ಇತಿಹಾಸವನ್ನು ಮೊಘಲರಿಂದ ತೆಗೆದುಕೊಂಡರು. ವಕ್ಫ್ ಮಂಡಳಿ ಯವುದೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಹಲವರಿಗೆ ತಿಳಿದಿಲ್ಲ. ಇದು ದೊಡ್ಡ ದುರಂತವಾಗಿದೆ ಎಂದು ಹರೀಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನಿಜ ಇತಿಹಾಸದೊಂದಿಗೆ ಮುಖಾಮುಖಿ ಕೃತಿ ಬಿಡುಗಡೆ ಸಮಾರಂಭದ ವಿಡಿಯೊ ಇಲ್ಲಿದೆ

ಇದನ್ನೂ ಓದಿ: World’s Greatest Places: ಟೈಮ್ಸ್​ನ ವಿಶ್ವ ಶ್ರೇಷ್ಠ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 2 ಪ್ರದೇಶಗಳು; ಯಾವವು? ಯಾಕೆ?

ಪಂಪ ಪ್ರಶಸ್ತಿ ಪುರಸ್ಕೃತ ಡಾ ಎಸ್. ಆರ್. ರಾಮಸ್ವಾಮಿ ಮಾತನಾಡಿ, ಇಂದು ಲೋಕಾರ್ಪಣೆಯಾದ ಪುಸ್ತಕ ಒಂದು ಒಳ್ಳೆಯ ಕೃತಿಯಾಗಿದೆ. ವಿಷಯ ಶ್ರೀಮಂತಿಕೆಯಿಂದ ಕೂಡಿದ ಪುಸ್ತಕ ಇದಾಗಿದೆ. ಇದು ಕೇವಲ ಅಂಕಣ ಬರಹದ ಪುಸ್ತಕ ಅಲ್ಲವೇ ಇಲ್ಲ. ಗಂಭೀರವಾದ, ಚಿರಕಾಲದ ಬರಹಕ್ಕೆ 40 ವರ್ಷದ ತಪಸ್ಸು ಇದೆ. ವಿಷಯದ ಹದ, ನೇರವಾದ ಮಾತನ್ನು ಇದರಲ್ಲಿ ಕಾಣಬಹುದು ಎಂದು ತಿಳಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯೆ ಎಸ್. ಆರ್. ಲೀಲಾ ಮತ್ತಿತರ ಗಣ್ಯರು ಹಾಜರಿದ್ದರು.

Continue Reading

ಕರ್ನಾಟಕ

Book Release: ಮೈಸೂರಿನಲ್ಲಿ ʼನಾನು ಕೃತಾರ್ಥಳು ನಾನು ಕೃತಜ್ಞಳುʼ ಪುಸ್ತಕ ಬಿಡುಗಡೆ

Book Release: ರಾಷ್ಟ್ರ ಸೇವಿಕಾ ಸಮಿತಿಯ ದ್ವಿತೀಯ ಸಂಚಾಲಿಕಾ ವಂದನೀಯ ಸರಸ್ವತೀ ತಾಯಿ ಆಪ್ಟೆ (ತಾಯೀಜಿ) ಅವರ ಕುರಿತ ಕನ್ನಡ ಅನುವಾದದ ‘ನಾನು ಕೃತಾರ್ಥಳು ನಾನು ಕೃತಜ್ಞಳು’ ಪುಸ್ತಕ ಬಿಡುಗಡೆ ಮಾಡಲಾಗಿದೆ.

VISTARANEWS.COM


on

Edited by

Nanu krutarthalu nanu krutagnalu book Released In Mysore
Koo

ಮೈಸೂರು: ಮೈಸೂರಿನಲ್ಲಿ ನಡೆದ ರಾಷ್ಟ್ರ ಸೇವಿಕಾ ಸಮಿತಿ ದ್ವಿತೀಯ ಅರ್ಧ ವಾರ್ಷಿಕ ಬೈಠಕ್‌ನಲ್ಲಿ ‘ನಾನು ಕೃತಾರ್ಥಳು ನಾನು ಕೃತಜ್ಞಳು’ ಪುಸ್ತಕವನ್ನು (Book Release) ಬಿಡುಗಡೆ ಮಾಡಲಾಯಿತು. ಇದು ರಾಷ್ಟ್ರ ಸೇವಿಕಾ ಸಮಿತಿಯ ದ್ವಿತೀಯ ಸಂಚಾಲಿಕಾ ವಂದನೀಯ ಸರಸ್ವತೀ ತಾಯಿ ಆಪ್ಟೆ (ತಾಯೀಜಿ) ಅವರ ಬದುಕು ಹಾಗೂ ಉನ್ನತ ವ್ಯಕ್ತಿತ್ವ ಕುರಿತು ಲೇಖಕಿ ಮೃಣಾಲಿನಿ ಜೋಷಿ ಅವರು ಬರೆದಿರುವ ‘ಕೃತಾರ್ಥಮೀ ಕೃತಜ್ಞಮೀ’ ಮೂಲ ಮರಾಠಿ ಪುಸ್ತಕದ ಕನ್ನಡ ಅನುವಾದವಾಗಿದೆ. ರಾಷ್ಟ್ರ ಸೇವಿಕಾ ಸಮಿತಿಯ ಸುಕೃಪಾ ಟಸ್ಟ್ ವತಿಯಿಂದ ಈ ಕೃತಿಯನ್ನು ಹೊರತರಲಾಗಿದೆ.

ಮುಖ್ಯ ಅತಿಥಿ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಡಾ. ಬಿ.ವಿ. ಸುಧಾಮಣಿ ಮಾತನಾಡಿ, ಈ ಪುಸ್ತಕ ವಂದನೀಯ ತಾಯೀಜಿ ಅವರ ಜೀವನದ ಆದರ್ಶಗಳನ್ನು ಸಾರಿದೆ, ಮೂಲ ಪುಸ್ತಕದ ಆಶಯ ಹಾಗೂ ಭಾವನೆಗಳನ್ನು ಕನ್ನಡ ಅನುವಾದಿತ ಪುಸ್ತಕದಲ್ಲಿ ಕಾಣಬಹುದಾಗಿದೆ. ಇದನ್ನು ಎಲ್ಲ ಮಹಿಳೆಯರೂ ಓದಲೇಬೇಕು ಎಂದು ತಿಳಿಸಿದರು.

ಪುಸ್ತಕದ ಲೇಖಕಿ ಎಸ್. ಉಮಾದೇವಿ ಅವರು ಮಾತನಾಡಿ, ಮೂಲ ಪುಸ್ತಕವನ್ನು ಓದಿದ ನಂತರ ಕನ್ನಡ ಅನುವಾದ ಮಾಡುವ ಹಂತದಲ್ಲಿ ವಂದನೀಯ ಸರಸ್ವತಿ ತಾಯಿ ಅವರ ಜೀವನಗಾಥೆಯು ತಮ್ಮ ಮೇಲೆ ಅಪಾರ ಪ್ರಭಾವವನ್ನು ಬೀರಿತು ಎಂದು ಹೇಳಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಲಸಿಕಾ ವಿಜ್ಞಾನದ ಪಿತಾಮಹ ಎಡ್ವರ್ಡ್ ಜೆನ್ನರ್; ಅವನು ಯುದ್ಧವನ್ನೇ ನಿಲ್ಲಿಸಿದ ಶಸ್ತ್ರರಹಿತ ಸೇನಾನಿ!

ಹೊಯ್ಸಳ ಪ್ರಾಂತ ಕಾರ್ಯವಾಹಿಕಾ ಮಾ. ವಸಂತಾ ಸ್ವಾಮಿ ಅವರು ಪುಸ್ತಕ ಪರಿಚಯ ಮಾಡಿ, ವಂದನೀಯ ಸರಸ್ವತಿ ತಾಯೀಜಿ ಅವರ ಪ್ರೇರಣಾದಾಯಿ ವ್ಯಕ್ತಿತ್ವ ಮತ್ತು ಸಮಾಜಮುಖಿ ಚಿಂತನೆ ಹಾಗೂ ಸೇವಾಕಾರ್ಯ ಕುರಿತು ಮಾತನಾಡಿ, ಈ ಪುಸ್ತಕದ ಅಧ್ಯಯನದಿಂದ ಎಲ್ಲ ಕಾರ್ಯಕರ್ತೆಯರೂ ಸ್ಫೂರ್ತಿ ಪಡೆದು
ರಾಷ್ಟ್ರ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹಿಕಾ ಮಾ. ಸಾವಿತ್ರಿ ಸೋಮಯಾಜಿ, ದಕ್ಷಿಣ ಮಧ್ಯ ಕ್ಷೇತ್ರ ಸಹ ಕಾರ್ಯವಾಹಿಕಾ ಮಾ. ಅಂಬಿಕಾ ನಾಗಭೂಷಣ್ ಉಪಸ್ಥಿತರಿದ್ದರು.

Continue Reading
Advertisement
CM Basavaraja Bommai Science gallery
ಕರ್ನಾಟಕ5 mins ago

Panchamasali Reservation : ಮಾ. 24ರಂದು ಪಂಚಮಸಾಲಿ ಸಮುದಾಯಕ್ಕೆ GOOD NEWS ಕೊಡ್ತಾರಂತೆ ಸಿಎಂ ಬೊಮ್ಮಾಯಿ

Donald Trump failed to disclose 17 gifts from India, including Narendra Modi Gift
ದೇಶ11 mins ago

Donald Trump Gifts: ಮೋದಿ ಕೊಟ್ಟಿದ್ದು ಸೇರಿ 2 ಕೋಟಿ ರೂ. ಮೌಲ್ಯದ ಉಡುಗೊರೆಗಳ ಮಾಹಿತಿ ನೀಡದ ಟ್ರಂಪ್‌

Actress Haripriya gave good news at last; Didn't say the name though!
ಸಿನಿಮಾ15 mins ago

Sandalwood Actor : ಕೊನೆಗೂ ಗುಡ್​ ನ್ಯೂಸ್ ಕೊಟ್ಟ ನಟಿ ಹರಿಪ್ರಿಯಾ; ಆದರೂ ಹೆಸರು ಹೇಳಲಿಲ್ಲ!

Man killed in attack with deadly weapons near Kaveripatnam
ಕರ್ನಾಟಕ27 mins ago

Murder Case: ಕಾವೇರಿಪಟ್ಟಣಂ ಬಳಿ ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನ ಕೊಲೆ

smartphone
ವಾಣಿಜ್ಯ34 mins ago

Smartphone Export : ಭಾರತದಿಂದ 2 ತಿಂಗಳಲ್ಲಿ ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು

vistara-top-10-news-siddaramaiah-constituency-confusion-continues-to-congress-first-list-on-wednesday-and-more-news
ಕರ್ನಾಟಕ40 mins ago

ವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಕೇಂದ್ರ ಸರ್ಕಾರಕ್ಕೆ 155 ಲಕ್ಷ ಕೋಟಿ ರೂ. ಸಾಲದವರೆಗಿನ ಪ್ರಮುಖ ಸುದ್ದಿಗಳಿವು

Jio True 5G service launched in 41 cities including KGF's robertsonpet
ಕರ್ನಾಟಕ47 mins ago

ಕೆಜಿಎಫ್‌ನ ರಾಬರ್ಟಸನ್ ಪೇಟೆ ಸೇರಿ 41 ನಗರಗಳಲ್ಲಿ Jio True 5G ಸೇವೆ ಶುರು

Had Kohli not appealed, he would not have applied for the post of head coach
ಕ್ರಿಕೆಟ್1 hour ago

Team India : ಕೊಹ್ಲಿ ಮನವಿ ಮಾಡದೇ ಹೋಗಿದ್ದರೆ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ​

Man Dips Leafy Vegetables In Chemical Solution, Here is a video
ದೇಶ1 hour ago

Viral Video: ನೀವು ತಿನ್ನುವ ‘ತಾಜಾ’ ತರಕಾರಿ ರಾಸಾಯನಿಕಯುಕ್ತ, ಹೇಗೆ ಅಂತೀರಾ? ಇಲ್ಲಿದೆ ವಿಡಿಯೊ

ಸಿನಿಮಾ1 hour ago

Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ16 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ7 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ8 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!