Literary Conference by Vistara News on May 27, 28 : Support from publishersಮೇ 27, 28ರಂದು ವಿಸ್ತಾರ ಸಾಹಿತ್ಯ ಸಂಭ್ರಮ, ಪ್ರಕಾಶಕರ ಬೆಂಬಲ - Vistara News

ಕಲೆ/ಸಾಹಿತ್ಯ

ಮೇ 27, 28ರಂದು ವಿಸ್ತಾರ ಸಾಹಿತ್ಯ ಸಂಭ್ರಮ, ಪ್ರಕಾಶಕರ ಬೆಂಬಲ

ವಿಸ್ತಾರ ವಾಹಿನಿಯು ಕನ್ನಡ ನಾಡು-ನುಡಿ, ಸಂಸ್ಕೃತಿ ಬಿಂಬಿಸುವ, ಈ ಮೂಲಕ ಕಲಾಸಕ್ತರನ್ನು ಬೆಸೆಯುವ ʼಸಾಹಿತ್ಯ ಸಂಭ್ರಮ’ ಆಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕಾಶಕರ ಸಲಹೆಗಳನ್ನು ಪಡೆಯಲಾಯಿತು.

VISTARANEWS.COM


on

Literary Conference by Vistara News on May 27, 28 : Support from publishers
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 27 ಮತ್ತು 28ರಂದು ನಡೆಯಲಿರುವ ವಿಸ್ತಾರ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವಿಸ್ತಾರ ನ್ಯೂಸ್ ಕಚೇರಿಯಲ್ಲಿ ಶುಕ್ರವಾರ ಪ್ರಕಾಶಕರ ಸಭೆ ನಡೆಯಿತು.

ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಅವರು ಸಾಹಿತ್ಯ ಸಂಭ್ರಮದ ರೂಪುರೇಷೆಗಳನ್ನು ವಿವರಿಸಿದರು.

ವಿಸ್ತಾರ ವಾಹಿನಿಯು ಕನ್ನಡ ನಾಡು-ನುಡಿ, ಸಂಸ್ಕೃತಿಗಳನ್ನು ಬಿಂಬಿಸುವ, ಈ ಮೂಲಕ ಕಲಾಸಕ್ತರನ್ನು ಬೆಸೆಯುವ ʼಸಾಹಿತ್ಯ ಸಂಭ್ರಮ’ ಆಯೋಜಿಸುತ್ತಿದೆ. ವಾಹಿನಿಯೊಂದು ಸಾಹಿತ್ಯೋತ್ಸವ ಆಯೋಜಿಸುತ್ತಿರುವುದು ಇದೇ ಮೊದಲು. ಜೈಪುರ ಲಿಟರೇಚರ್ ಫೆಸ್ಟಿವಲ್ ಸೇರಿದಂತೆ ದೇಶಾದ್ಯಂತ ಹಲವು ಸಾಹಿತ್ಯೋತ್ಸವಗಳು ಜನಪ್ರಿಯತೆ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಮಹತ್ವದ ಸಾಹಿತ್ಯೋತ್ಸವ ಆಯೋಜಿಸುವುದು ವಿಸ್ತಾರದ ಆಶಯ ಎಂದವರು ತಿಳಿಸಿದರು.

ವಿಸ್ತಾರದ ಈ ಉತ್ಸವದಲ್ಲಿ ನಾಡಿನ ಖ್ಯಾತ ಸಾಹಿತಿಗಳು, ಸಿನೆಮಾ, ರಾಜಕೀಯ, ಕ್ರೀಡೆ ಮುಂತಾದ ಹಲವಾರು ಸಾಂಸ್ಕೃತಿಕ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ. ರಾಜ್ಯದ ಪ್ರತಿ ತಾಲೂಕಿನಿಂದ ಮತ್ತು ದೇಶ – ವಿದೇಶಗಳಿಂದ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಮಕ್ಕಳ ಆಟ, ಪರಿಸರ ಪಾಠ, ಆಹಾರ ವೈವಿಧ್ಯ, ಪುಸ್ತಕ ಮೇಳ ಮುಂತಾದ ಅನೇಕ ಆಕರ್ಷಣೆಗಳಿರುತ್ತವೆ. ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರೂ ಖುಷಿಯಿಂದ ಭಾಗವಹಿಸಬಹುದಾದ ಪರಿಸರ ನಿರ್ಮಾಣವಾಗಲಿದೆ ಎಂದು ಅವರು ವಿವರಿಸಿದರು.

ಈ ಸಭೆಯಲ್ಲಿ ಪ್ರಕಾಶಕರು ಉಪಯುಕ್ತ ಸಲಹೆಗಳನ್ನು ನೀಡಿದರು ಮತ್ತು ಈ ವಿಶಿಷ್ಟ ಸಾಹಿತ್ಯ ಹಬ್ಬಕ್ಕೆ ತಮ್ಮ ಸಂಪೂರ್ಣ ಬೆಂಬಲ ಪ್ರಕಟಿಸಿದರು.

ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಮಾತನಾಡಿ, ವಿಸ್ತಾರ ಸಾಹಿತ್ಯ ಸಂಭ್ರಮದಲ್ಲಿ ಪುಸ್ತಕ ಮೇಳಕ್ಕೆ ಅವಕಾಶ ನೀಡುತ್ತಿರುವುದು ಖುಷಿಯ ಸಂಗತಿ ಎಂದರು.

ಸ್ವಪ್ನ ಬುಕ್‌ ಹೌಸ್‌ನ ದೊಡ್ಡೇಗೌಡ ಅವರು ಮಾತನಾಡಿ, ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕೂಡ ಪ್ರಕಾಶಕರನ್ನು ಕರೆದು ಸಲಹೆ ಪಡೆಯುವುದಿಲ್ಲ. ಆದರೆ ವಿಸ್ತಾರ ನ್ಯೂಸ್‌ ಎಲ್ಲ ಪ್ರಕಾಶಕರನ್ನು ಕರೆದು ಚರ್ಚೆ ನಡೆಸುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದರು.

ಇಂಥ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಪೀಳಿಗೆಯ ಬರಹಗಾರರು ಮತ್ತು ಓದುಗರಿಗೆ ಸ್ಫೂರ್ತಿ ತುಂಬುವಂತಹ ಕಾರ್ಯಕ್ರಮ ರೂಪಿಸಬೇಕು ಎಂದು ಛಂದ ಪುಸ್ತಕದ ವಸುಧೇಂದ್ರ ಅವರು ಸಲಹೆ ನೀಡಿದರು.

ಮಾಧ್ಯಮ ಸಹಯೋಗ ಮುಖ್ಯ…

ಮಲಯಾಳ, ಬೆಂಗಾಲಿ, ಮರಾಠಿ ಸಾಹಿತ್ಯ ಸಮ್ಮೇಳನಗಳು ಅದ್ಧೂರಿಯಾಗಿ ನಡೆಯಲು ಮಾಧ್ಯಮದ ಸಹಯೋಗವೇ ಮುಖ್ಯ ಕಾರಣ. ಮಲಯಾಳ ಸಾಹಿತ್ಯ ಕಾರ್ಯಕ್ರಮಕ್ಕೆ ಮಲಯಾಳ ಮನೋರಮಾ, ಮಾತೃಭೂಮಿಯಂಥ ಮಾಧ್ಯಮ ಸಂಸ್ಥೆಗಳು ಸಾಥ್‌ ನೀಡುತ್ತವೆ. ಹಾಗೆಯೇ ಜೈಪುರ ಸಾಹಿತ್ಯ ಹಬ್ಬಕ್ಕೆ ರಾಷ್ಟ್ರ ಮಟ್ಟದ ಹಲವು ಮಾಧ್ಯಮಗಳ ಪ್ರಾಯೋಜಕತ್ವ ಇರುತ್ತವೆ. ಈ ಹಿನ್ನೆಲೆಯಲ್ಲಿ ವಿಸ್ತಾರ ಸಾಹಿತ್ಯ ಸಂಭ್ರಮ ಆಶಾದಾಯಕ ಎಂದು ಬಹುರೂಪಿ ಪ್ರಕಾಶನದ ಜಿ ಎನ್‌ ಮೋಹನ್‌ ಅವರು ಹೇಳಿದರು.

ಕನ್ನಡದಲ್ಲೂ ಓದುಗರ ಸಂಖ್ಯೆ ಕಡಿಮೆಯೇನಿಲ್ಲ. ಕೋವಿಡ್‌ ಅವಧಿಯಲ್ಲೂ ನಾವು 20 ಸಾವಿರ ಪ್ರತಿ ಮಾರಿದ್ದೇವೆ. ನಮ್ಮ ಪುಸ್ತಕ ಮಳಿಗೆ ಮುಂದೆ ಓದುಗರು ಕ್ಯೂ ನಿಂತಿದ್ದನ್ನೂ ನೋಡಿದ್ದೇನೆ. ಗುಣಮಟ್ಟದ ಸಾಹಿತ್ಯ ಹಬ್ಬವನ್ನು ನಾವು ರೂಪಿಸಬೇಕಿದೆ ಎಂದವರು ಸಲಹೆ ನೀಡಿದರು.

ಸ್ನೇಹ ಬುಕ್ ಹೌಸ್ ನ ಪರಶಿವಪ್ಪ, ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್, ಹರಿವು ಪ್ರಕಾಶನದ ರಿತೇಶ್, ಸಾವಣ್ಣ ಪ್ರಕಾಶನದ ಜಮೀಲ್, ವಸಂತ ಪ್ರಕಾಶನದ ಮುರಳಿ, ಗೀತಾಂಜಲಿ ಪ್ರಕಾಶನದ ವಿಜಯ್‌, ಸಾಹಿತ್ಯ ಭಂಡಾರದ ಅರುಣ್‌, ರಾವ್ಸ್‌ ಅಕಾಡೆಮಿಯ ಸುಧೀಂದ್ರ ರಾವ್, ಕಾನ್‌ಕೇವ್‌ ಪ್ರಕಾಶನದ ನಂದೀಶ್‌, ಸಹನ ಪ್ರಕಾಶನದ ಆರ್ಯ, ಅನ್ನಪೂರ್ಣ ಪ್ರಕಾಶನದ ಸುರೇಶ್‌, ನಿಂಗರಾಜ್‌ ಚಿತ್ತಣ್ಣವರ್‌, ಕ್ರಿಯಾ ಮಾಧ್ಯಮದ ಚಂದ್ರಶೇಖರ್‌ ಮತ್ತಿತರರು ಭಾಗವಹಿಸಿದ್ದರು.

ವಿಸ್ತಾರ ನ್ಯೂಸ್‌ನ ನಿರ್ದೇಶಕ (ಬ್ಯುಸಿನೆಸ್‌) ವಿನಯ್‌ ಶೇಷಗಿರಿ, ಸಿಒಒ ಪರಶುರಾಮ್‌, ವಿಸ್ತಾರ ನ್ಯೂಸ್‌ ಡಿಜಿಟಲ್‌ ವಿಭಾಗದ ಸಂಪಾದಕ ರಮೇಶ್‌ ಕುಮಾರ್‌ ನಾಯಕ್‌, ಸ್ಪೆಷಲ್‌ ಆಪರೇಷನ್ ಎಡಿಟರ್‌ ಕಿರಣ್‌ ಕುಮಾರ್‌ ಡಿ ಕೆ, ವಿಸ್ತಾರ ಮನರಂಜನಾ ವಾಹಿನಿ ಕಂಟೆಂಟ್‌ ಹೆಡ್‌ ಕುಸುಮಾ ಆಯರಹಳ್ಳಿ ಜತೆಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ಧವಳ ಧಾರಿಣಿ ಅಂಕಣ: ಭರತ ಅಯೋಧ್ಯೆಯಲ್ಲಿ ಇಲ್ಲದ ಸಮಯದಲ್ಲಿ ರಾಮನ ಪಟ್ಟಾಭಿಷೇಕಕ್ಕೆ ದಶರಥ ಅವಸರ ಮಾಡಿದ್ದೇಕೆ? ರಾಮಾಯಣ ವಿಶ್ಲೇಷಣೆ ಇಲ್ಲಿದೆ.

VISTARANEWS.COM


on

king dasharatha
Koo

ದಶರಥ- ಭಾಗ 4: ಪಟ್ಟಾಭಿಷೇಕಕ್ಕಾಗಿ ಘನ ದೊರೆಯ ಜಾಣ ನಡೆ

dhavala dharini by Narayana yaji

ಧವಳ ಧಾರಿಣಿ ಅಂಕಣ: ದಿವ್ಯನ್ತರಿಕ್ಷೇ ಭೂಮೌ ಚ ಘೋರಮುತ್ಪಾತಜಂ ಭಯಮ್
ಸ್ಚಚಕ್ಷೇಥ ಮೇಧಾವೀ ಶರೀರೇ ಚಾತ್ಮನೋ ಜರಾಮ್. ৷৷ಅ. 1.42৷৷

“ಮೇಧಾವಿಯಾದ ದಶರಥನು (ಮಂತ್ರಿಗಳನ್ನು ಉದ್ದೇಶಿಸಿ) ಸ್ವರ್ಗಾಕಾಶ, ಭೂಮಿಯಲ್ಲಿ ದೃಷ್ಟಿಗೆ ಗೋಚರವಾಗುವಂತೆ ಉತ್ಪಾತಗಳಾಗುತ್ತಿವೆ. ಭಯಂಕರವಾದ ಕಾಲವು ಹತ್ತಿರದಲ್ಲಿಯೇ ಬರಲಿದೆ. ನನ್ನ ದೇಹದಲ್ಲಿ ದಿನದಿನಕ್ಕೆ ವಾರ್ಧಕವೂ ಹೆಚ್ಚಾಗುತ್ತಿದೆ.”

ದಶರಥ (king dasharath) ಅಶ್ವಪತಿ ರಾಜನಿಗೆ ಕೈಕೇಯಿಯನ್ನು (Kaikeyi) ಮದುವೆಯಾಗುವ ಸಮಯಕ್ಕೆ ಕೋಸಲ ರಾಜ್ಯವನ್ನು ಕನ್ಯಾಶುಲ್ಕವಾಗಿ ಕೊಟ್ಟಿದ್ದ. ಆದರೆ ಈಗ ಆತನಿಗೆ ತನ್ನ ಕುಲದ ಪರಂಪರೆಯನ್ನು ಮೀರಿ ಹೀಗೆ ಕನ್ಯಾಶುಲ್ಕವಾಗಿ ಕೊಡಲು ಮನಸ್ಸಿಲ್ಲ. ಆ ಕಾರಣಕ್ಕೆ ಭರತನನ್ನು ಕೇಕಯಕ್ಕೆ ಕಳುಹಿಸಿದ್ದಾನೆ. ಇತ್ತ ಅಯೋಧ್ಯೆಯಲ್ಲಿ ರಾಮ ತನ್ನ ಸಹಜವಾದ ಗುಣಗಳಿಂದಾಗಿ ಹೇಗೆ ಹೂವು ದುಂಬಿಯನ್ನು ಆಕರ್ಷಿಸುವುದೋ ಅದೇ ರೀತಿ ಎಲ್ಲರ ಮನವನ್ನೂ ಗೆದ್ದಿದ್ದನು. ಹಣ್ಣು ಬಲಿತಿದೆ, ಇದೇ ಸರಿಯಾದ ಸಮಯ ಎಂದು ದಶರಥ ತನ್ನ ಕೆಲವೇ ಮಂತ್ರಿಗಳನ್ನು ಕರೆಯಿಸಿ “ಪ್ರಕೃತಿಯಲ್ಲಿ ಕೆಲ ಉತ್ಪಾತಗಳನ್ನು ತಾನು ನೋಡುತ್ತಿದ್ದೇನೆ. ತಾನು ವೃದ್ಧನೂ ಆಗುತ್ತಿದ್ದೇನೆ. ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಳ್ಳಲು ಸಮರ್ಥನಾದ ರಾಜನ ಆಯ್ಕೆಯ ಸಮಯ ಬಂದಿದೆಯೆಂದು” ಹೇಳುತ್ತಾನೆ. ಅವರಿಗೆ ಮಾತನಾಡಲು ಅವಕಾಶ ಕೊಡದೇ ತಕ್ಷಣವೇ ಪೂರ್ಣಚಂದ್ರನಂತೆ ಮುಖವುಳ್ಳ ರಾಮನು ರಾಜನಾದರೆ ಸೂಕ್ತವಾಗುವುದೆಂದು ಹೇಳುವನು. ರಾಮನೇ ರಾಜನಾಗಬೇಕೆಂಬ ಅತುಲವಾದ ಆಸೆ ತನಗಿದ್ದರೂ ಅದನ್ನು ತೋರಿಸಿಕೊಳ್ಳದೇ ಪ್ರಜೆಗಳ ಶ್ರೇಯೋಭಿವೃದ್ಧಿಗೋಸ್ಕರ ಇದೇ ಸೂಕ್ತವೆಂದು ಮತ್ತೆ ಮತ್ತೆ ಹೇಳುತ್ತಿದ್ದನು.

ಅವನ ಆತುರ ಎಷ್ಟಿತ್ತೆಂದರೆ ಸ್ವಲ್ಪವೇ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲೂ ಆತನಿಗೆ ಮನಸ್ಸಿರಲಿಲ್ಲ. ಆ ಕೂಡಲೇ ಪಟ್ಟಾಭಿಷೇಕಕ್ಕೆ (Sri Rama Pattabhisheka) ಬೇಕಾಗಿರುವ ಸಾಂಬಾರಗಳನ್ನು ಸಿದ್ಧಮಾಡಿಕೊಳ್ಳುವಂತೆ ಮಂತ್ರಿಗಳಿಗೆ ತ್ವರೆಮಾಡಿದನು. ರಾಜನೀತಿಯಲ್ಲಿ ರಾಜ ತನಗೆ ಅನುಕೂಲವಾದ ವಿಷಯಗಳನ್ನು ಒಪ್ಪಿಗೆ ಪಡೆಯಲು ಅನುಸರಿಸುವ ಮಾರ್ಗವೆಂದರೆ ಮೊದಲು ತನ್ನ ಮನಸ್ಸಿನಲ್ಲಿ ಯೋಜನೆಗಳನ್ನು ಚನ್ನಾಗಿ ಮನನಮಾಡಿಕೊಂಡಿರಬೇಕು. ಅದು ರಾಜ್ಯದ ಹಿತದ ಸಲುವಾಗಿ ಎನ್ನುವ ರೀತಿಯಲ್ಲಿ ಬಿಂಬಿಸಬೇಕು. ಅರಸವಿನ ಅಭಿಪ್ರಾಯ ಸರಿ ಎಂದು ಹೇಳಲು ಅಗತ್ಯವಿರುವ ಮಂತ್ರಿಗಳನ್ನೂ ಇತರರನ್ನೂ ಆ ಮೊದಲೇ ಮಾನಸಿಕವಾಗಿ ಸಿದ್ಧತೆ ಮಾಡಿಸಿರಬೇಕು. ಸಭಾಸದರಿಗೆ ಆ ಕುರಿತು ವಿಮರ್ಶಿಸಲು ಸಮಯ ನೀಡದೇ ವಿಷವನ್ನು ಮಂಡಿಸಿದ ತಕ್ಷಣ ತನ್ನ ಕಡೆಯವರು ಅದಕ್ಕೆ ಒಪ್ಪಿಗೆ ಸೂಚಿಸುವಂತೆ ಮಾಡಿ ಸಭೆಯ ಅಭಿಪ್ರಾಯವನ್ನು ಏಕತ್ರ ತರುವ ಚಾಕಚಕ್ಯತೆಯನ್ನು ಪ್ರದರ್ಶಿಸಬೇಕು. ಇದನ್ನು ಗುಂಪು ಒಪ್ಪಿಗೆ (Mass acceptance) ಎನ್ನುತ್ತಾರೆ. ಆ ಕೂಡಲೇ ದಶರಥನು ತನ್ನ ರಾಜ್ಯದ ನಗರ ಪ್ರದೇಶಗಳಿಂದ, ಗ್ರಾಮ ಪ್ರದೇಶಗಳಿಂದ ಜನರನ್ನು ಕರೆಯುವಂತೆ ಮಂತ್ರಿಗಳಿಗೆ ನಿರ್ದೇಶನವನ್ನು ನೀಡಿದನು. ಪೃಥ್ವಿಯ ಇತರ ರಾಜರನ್ನೂ ಸಹ ಕರೆಯಿಸಿದನು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅವಸರದ ಕಾರಣದಿಂದ ಕೇಕಯ ರಾಜನನ್ನೂ ಜನಕನನ್ನೂ ಕರೆಯಲಿಲ್ಲವಂತೆ. ದಶರಥನ ಜಾಣತನ ಇಲ್ಲಿ ವ್ಯಕ್ತವಾಗುತ್ತಿದೆ. ಜನಕರಾಜನ ಕುರಿತು ಅವನಿಗೆ ಸಮಸ್ಯೆಯಿರಲಿಲ್ಲ. ಆದರೆ ಕೇಕಯ ರಾಜ ಅಶ್ವಪತಿಯೇನಾದರೂ ಬಂದಿದ್ದರೆ, ಮದುವೆಯ ಕಾಲಕ್ಕೆ ಕನ್ಯಾಶುಲ್ಕವನ್ನಾಗಿ ಕೋಸಲ ರಾಜ್ಯವನ್ನು ಕೊಟ್ಟಿರುವ ವಿಷಯವನ್ನು ಎತ್ತಿದ್ದರೆ ಎನ್ನುವ ಆತಂಕ ಆತನಿಗಿತ್ತು.

ಕೇವಲ ಅಶ್ವಪತಿಯನ್ನು ಬಿಟ್ಟರೆ ಅಪವಾದ ಬರುವುದೆಂದೆಣಿಸಿ ಜನಕನನ್ನು ಕರೆಯಲಿಲ್ಲ. ಕೇಳಿದರೆ ಬಹುದೂರವಿರುವ ಅವರನ್ನು ಕರೆಯಿಸಲಾಗಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಬಹುದು. ರಾಜರುಗಳೆಲ್ಲರೂ ಬಂದು ಸೇರಲು ಕೆಲ ದಿನಗಳು ಹಿಡಿದಿರಬಹುದು. ಎಷ್ಟು ಸಮಯದೊಳಗೆ ಅವರೆಲ್ಲರೂ ಬಂದು ಸೇರಿದ್ದರು ಎನ್ನುವುದನ್ನು ವಾಲ್ಮೀಕಿ ಹೇಳುವುದಿಲ್ಲ. ಬಂದವರಿಗೆಲ್ಲ ಉಳಿದುಕೊಳ್ಳಲು ಯಥೋಚಿತವಾದ ಬಿಡಾರದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಬಂದು ಸೇರಿದ ರಾಜರುಗಳ ಮತ್ತು ಪ್ರಜೆಗಳ ವಿವರವನ್ನು ನೋಡಿದರೆ ಒಂದು ನಾಲ್ಕೈದು ದಿನಗಳಷ್ಟಾದರೂ ಸಮಯಬೇಕು. ದೂರದ ಗುಡ್ಡಗಾಡು ಪ್ರದೇಶದ ಮಾಂಡಲಿಕರು ಬರಬಹುದಾದರೆ ಕೇಕಯ ಮತ್ತು ಮಿಥಿಲೆಯವರಿಗೆ ಬರಲು ಸಾಧ್ಯವಿಲ್ಲವೇ! ರಾಮನ ಗುಣಗಳ ಕುರಿತು ಎಲ್ಲರಲ್ಲಿಯೂ ಒಳ್ಳೆಯ ಅಭಿಪ್ರಾಯ ಅದಾಗಲೇ ಮೂಡಿರುವುದರಿಂದ ಒಮ್ಮೆ ರಾಜನಾಗಿ ಬಿಟ್ಟರೆ ಅಶ್ವಪತಿ ತೋರಿಕೆಗಾದರೂ ಸಮ್ಮತಿ ಸೂಚಿಸಲೇ ಬೇಕಾಗುತ್ತದೆ. ಅವರೇನಾದರೂ ಕಾರಣ ಕೇಳಿದರೆ ತನಗೆ ಬಿದ್ದ ದುಃಸ್ವಪ್ನ ಮತ್ತು ಶುಕುನದ ವಿಷಯವನ್ನು ಹೇಳಿದರಾಯಿತು, ಎನ್ನುವ ನೆವ ಆತನಲ್ಲಿತ್ತು.

ಜನಕನಿಗೆ ತನ್ನ ಅಳಿಯ ರಾಜನಾಗುವುದು ಸಹಜವಾಗಿಯೇ ಸಂತೋಷದ ಸಂಗತಿ. ಸಂಶಯಾತ್ಮಾ ವಿನಶ್ಯತಿ ಎನ್ನುವ ಗಾದೆಯೊಂದಿದೆ. ರಾಜನೀತಿಯಲ್ಲಿ ರಾಜನಾದವ ಸದಾ ಜಾಗರೂಕನಾಗಿರಬೇಕು ಎನ್ನುವ ಹಿನ್ನೆಲೆಯಲ್ಲಿ ಒಂದು ಸಂಶಯದ ಕಣ್ಣನ್ನು ಇತರರಮೇಲೆ ಇರಿಸಬೇಕೆಂದಿದೆ. ರಾಜನ ಮೂರನೆಯ ಕಣ್ಣು ಮತ್ತು ಕಿವಿಯಾಗಿ ಸಮರ್ಥ ಗೂಢಾಚಾರರನ್ನು ಇರಿಸಿಕೊಂಡು ಆ ಮೂಲಕ ವಿಷಯಗಳನ್ನು ಸಂಗ್ರಹಿಸಿ ವಿವೇಚಿಸಿಬೇಕೆಂದಿದೆ. ದಶರಥ ಇಲ್ಲಿ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಬರಬಹುದಾದ ವಿಘ್ನಗಳ ಕುರಿತು ಆಲೋಚಿಸಿದ್ದಾನೆ. ಆದರೆ ರಾಮನ ಕುರಿತು ಅಶ್ವಪತಿಗಾಗಲಿ, ಯುಧಾಜಿತ್ತುಗಾಗಲಿ, ಕೈಕೇಯಿಗಾಗಲಿ, ಕೊನೆಗೆ ಭರತನಿಗಾಗಲಿ ಯಾವ ಅಭಿಪ್ರಾಯ ಇದೆ ಎನ್ನುವುದನ್ನು ಒಮ್ಮೆಯೂ ತಿಳಿದುಕೊಳ್ಳುವ ಪ್ರಯತ್ನವನ್ನು ಆತ ಮಾಡಿಲ್ಲ. ತನ್ನ ಮನಸ್ಸಿನೊಳಗೇ ಎಲ್ಲವನ್ನೂ ಕಲ್ಪಿಸಿಕೊಂಡು ಅಪರಾಧಿ ಪ್ರಜ್ಞೆಯಿಂದ ಹೇಗಾದರೂಸರಿ ರಾಮನನ್ನು ಪಟ್ಟಕ್ಕೆ ಏರಿಸಿಬಿಡಬೇಕೆನ್ನುವ ಹುಂಬತನ ಆತನಲ್ಲಿತ್ತು. ಹಾಗಾಗಿ ಆತ ತನ್ನ ಮನಸ್ಸಿನೊಳಗಿರುವುದನ್ನು ವಶಿಷ್ಠರಿಗೂ ಮೊದಲು ಹೇಳಿಲ್ಲ.

ಸಭೆಯನ್ನು ಸೇರಿಸಿದವನೇ ಎಲ್ಲರನ್ನೂ ಉದ್ಧೇಶಿಸಿ ಗಂಭೀರ ಧ್ವನಿಯಲ್ಲಿ ಮಾತನಾಡತೊಡಗಿದ. ಅವನ ಧ್ವನಿ ಭೇರಿಯ ಶಬ್ಧದಂತೆ ಇತ್ತು. ವಿಲಿಯಮ್ ಷೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ಜ್ಯುಲಿಯಸ್ ಸೀಸರ್ ನಾಟಕದಲ್ಲಿ ಮಾರ್ಕ್ ಆಂಟನಿ ತನ್ನ ಅಭಿಪ್ರಾಯವನ್ನು ಪ್ರಜೆಗಳು ಒಪ್ಪುವಂತೆ ಮಾಡಿದ ಭಾಷಣ ಬಹು ಪ್ರಸಿದ್ಧ. ಭಾರತೀಯ ಕಾವ್ಯದಲ್ಲಿ ಸಂದರ್ಭದಲ್ಲಿ ದಶರಥನ ಮಾತುಗಳು ಅದಕ್ಕೆ ಮಿಗಿಲಾಗಿದ್ದವು. ಎರಡರಲ್ಲಿಯೂ ಸಂಧರ್ಭ ಮತ್ತು ಉದ್ಧೇಶ ಬೇರೆ ಬೇರೆ. ಆದರೆ ಪರಿಣಾಮಕಾರಿ ಮಾತುಗಳಿಗೆ ಇದೊಂದು ಉದಾಹರಣೆಯಾಗಬಹುದು. ಸೂರ್ಯವಂಶದ ಶ್ರೇಷ್ಠ ದೊರೆಗಳನ್ನು ಉದಾಹರಿಸುತ್ತ “ತನ್ನ ಅರವತ್ತು ಸಾವಿರ ವರ್ಷಗಳ ಆಡಳಿತವನ್ನೂ ಸಮರ್ಥಿಸುತ್ತಾನೆ. ರಾಜ ಪರಿಪಾಲನೆಯೆನ್ನುವುದು ಸುಲಭವಲ್ಲ, ಧೈರ್ಯ-ಶೌರ್ಯ-ಪರಾಕ್ರಮಗಳಿಂದ ಮಾತ್ರವೇ ರಾಜ್ಯವನ್ನು ಆಳಲು ಸಾಧ್ಯವಿದೆ. ಜಿತೇಂದ್ರಿಯನಲ್ಲದಿರುವವ ರಾಜ್ಯಾಡಳಿತವನ್ನು ನಿರ್ವಹಿಸಲಾರ, ಇಂಥ ಹೊಣೆಯನ್ನು ಹೊತ್ತಿರುವ ತಾನು ನಿಶ್ಚರ್ಯವಾಗಿಯೂ ಬಹಳ ಬಳಲಿದ್ದೇನೆ” ಎಂದವನೇ ಮುಂದೆ ಈ ರಾಜ್ಯವನ್ನು ಆಳಲು ಇಲ್ಲಿರುವ ಬ್ರಾಹ್ಮಣಶ್ರೇಷ್ಠರ ಅನುಮತಿ ಪಡೆದು “ಪುಷ್ಯನಕ್ಷತ್ರಯುಕ್ತನಾಗಿರುವ ರಾಮನನ್ನು ತೊಡಗಿಸಿಕೊಳ್ಳುವೆ” ಎನ್ನುತ್ತಾನೆ. ದಶರಥನ ಜಾಣನುಡಿಗಳನ್ನು ಗಮನಿಸಿ “ನಾನು ಧರ್ಮದಿಂದ ರಾಜ್ಯವಳುತಿರುವಾಗ ನನ್ನ ಮಗನು ಯುವರಾಜನಾಗುವುದನ್ನ ನೀವು ಸ್ವಾಗತಿಸುವಿರೋ ಹೇಗೆ” ಎನ್ನುವ ಮಾತುಗಳನ್ನಾಡಿ ಭಾಷಣವನ್ನು ಮುಗಿಸುತ್ತಾನೆ. ನವಿರಾದ ಮಾತುಗಳು ಹೇಗಿತ್ತೆಂದರೆ ಪ್ರತಿರೋಧ ಇರಲೇ ಬಾರದು. ಅದಾಗಲೇ ರಾಮ ಪ್ರಜೆಗಳ ಮನಸ್ಸನ್ನು ಗೆದ್ದಿದ್ದ ಕಾರಣದಿಂದ ಪ್ರತಿರೋಧದ ಮಾತೇ ಬಂದಿಲ್ಲ. ಒಕ್ಕೋರಲಿಂದ ಒಪ್ಪಿಗೆ ಸೂಚಿಸಿದರು.

ತೇ ತಮೂಚುರ್ಮಹಾತ್ಮಾನಂ ಪೌರಜಾನಪದೈಸ್ಸಹ.
ಬಹವೋ ನೃಪ ಕಲ್ಯಾಣಾ ಗುಣಾಃ ಪುತ್ರಸ್ಯ ಸನ್ತಿ ತೇ৷৷ಅ .2.26৷৷

ಅಲ್ಲಿ ಸೇರಿದ ಪೌರ ಜಾನಪದ- ಪಟ್ಟಣಗಳ ಮತ್ತು ಹಳ್ಳಿಗಳಿಂದ ಬಂದ ಪ್ರಜಾಜನರು ಇನ್ನಿತರ ರಾಜರೊಡನೆ ಏಕಕಂಠದಲ್ಲಿ “ಮಹಾರಾಜಾ, ನಿನ್ನ ಮಗನಲ್ಲಿ ಅನೇಕ ಕಲ್ಯಾಣಗುಣಗಳಿವೆ. ಆತ ಬುದ್ಧಿವಂತನಾದವ, ದೇವಸೃದಶನಾದವ, ಗುಣವಂತನಾದವ ಎನ್ನುತ್ತಾ ಆತನು ಯುವರಾಜನಾಗಲು ಒಪ್ಪಿಗೆಯನ್ನು ಸೂಚಿಸಿದರು. ಅರಸನ ಸಂತಸಕ್ಕೆ ಪಾರವೇ ಇರಲಿಲ್ಲ. ವಶಿಷ್ಠರ ಹತ್ತಿರ ತಿರುಗಿದವನೇ ಚೈತ್ರಪಕ್ಷದ ಪುಷ್ಯನಕ್ಷತ್ರದ ಸುಮೂರ್ತವೇ ಒಳ್ಳೆಯದು ಎಂದು ತಾನೇ ನಿಶ್ಚಯಿಸಿದ್ದ ಮುಹೂರ್ತವನ್ನು ಸಾರಿಯೂ ಬಿಟ್ಟ. ಗಮನಿಸಬೇಕಾದ ಸಂಗತಿಯೆಂದರೆ ರಾಮಪಟ್ಟಾಭಿಷೇಕದ ಈ ಭಾಗದಲ್ಲಿ ಇನ್ನಿತರ ಕಾವ್ಯದಲ್ಲಿ ಬರುವಂತೆ ವಶಿಷ್ಠರಾಗಲಿ, ವಾಮದೇವರಾಗಲಿ ಇಟ್ಟ ಮೂಹೂರ್ತವಲ್ಲ. ದಶರಥನಿಗೆ ಮುಹೂರ್ತಗಳ, ಜ್ಯೋತಿಷ್ಯದ ಕಲ್ಪನೆಯಿತ್ತು. ರಾಮನದ್ದು ಪುನರ್ವಸು ನಕ್ಷತ್ರ, ಪುನರ್ವಸುವಿನ ನಂತರ ಬರುವ ನಕ್ಷತ್ರ ಪುಷ್ಯ ರಾಮನಿಗೆ ಸಂಪತ್ತನ್ನು ತರುವ ತಾರೆಯಾಗುತ್ತದೆ. ಅದೂ ಅಲ್ಲದೇ ಪುಷ್ಯ ನಕ್ಷತ್ರ ಕರ್ಕಾಟಕ ರಾಶಿಯಲ್ಲಿ ಬರುತ್ತದೆ. ಇದು ಚಂದ್ರನಿಗೆ ಸ್ವಕ್ಷೇತ್ರ. ಸ್ವಕ್ಷೇತ್ರದಲ್ಲಿ ಗ್ರಹಗಳು ಪ್ರಭಲರಾಗಿರುತ್ತವೆ. ಚಂದ್ರ ಮನಃಕಾರಕ. ರಾಜನಾದವನಿಗೆ ಮನಸ್ಸಿನ ಸ್ಥೈರ್ಯ ಬೇಕು. ರಾಮನಿಗೆ ರಾಜನಿಟ್ಟ ಮುಹೂರ್ತ ಸಂಪತ್ತು ಮತ್ತು ಧೈರ್ಯವನ್ನು ತಂದುಕೊಡುತ್ತದೆ ಎನ್ನುವ ಅರ್ಥವನ್ನು ಕೊಡುತ್ತದೆ. ಅವನ ಅವಸರ ಎಷ್ಟಿತ್ತೆಂದರೆ ತಕ್ಷಣವೇ ಸುಮಂತ್ರನಿಗೆ ರಾಮನನ್ನು ಕರೆತರಲು ಹೇಳಿಕಳಿಸಿಯೂಬಿಟ್ಟ. ಸುಮಂತ್ರ ರಾಮನನ್ನು ಯುವರಾಜನಿಗೆ ಒಪ್ಪುವ ಬಿರುದುಬಾವಲಿಗಳಿಂದಲೇ ಕರೆದುತಂದ. ದಶರಥನಿಗೆ ರಾಮನನ್ನು ನೋಡಿ ಆನಂದವೋ ಆನಂದ. ತನ್ನ ಒತ್ತಿನಲ್ಲಿಯೇ ಕುಳ್ಳಿರಿಸಿ ಪ್ರಜೆಗಳನ್ನು ತೋರಿಸಿ ಇವರೆಲ್ಲರೂ ನಿನ್ನನ್ನು ಯುವರಾಜನನ್ನಾಗಿ ನೋಡಲು ಕಾತರದಿಂದ ಇದ್ದಾರೆ ಎಂದು ಸಂಭ್ರಮಿಸಿದ. ಸಭಾಸದರ ಹರ್ಷೋದ್ಗಾರಗಳ ನಡುವೆ ರಾಮನೂ ಸಂತೋಷದಿಂದ ಒಪ್ಪಿ ತನ್ನ ಅರಮನೆಗೆ ಹಿಂತಿರುಗಿದ. ಸಭೆಯೂ ವಿಸರ್ಜಿಸಲ್ಪಟಿತು.

king dasharatha dhavala dharini

ದಶರಥ ರಾಮ ಪಟ್ಟಾಭಿಷೇಕದ ವಿಷಯದಲ್ಲಿ ತಾನೋರ್ವನೇ ಎಲ್ಲವನ್ನೂ ನಿಶ್ಚಯಿಸಿದ್ದಾನೆ. ಸಭಾಸದರೆಲ್ಲ ಹೊರಟ ಮೇಲೆ ಅಲ್ಲಿದ್ದ ಮಂತ್ರಿಗಳು ಮತ್ತು ವಶಿಷ್ಠರನ್ನು ಕರೆಯುತ್ತಾನೆ. ಮೊದಲು ಯಾವುದೋ ಒಂದು ನೆವದಿಂದ ಅವಸರದಲ್ಲಿ ಸಭೆ ಸೇರಿಸಿದವ, ತನಗೆ ಅನುಕೂಲವಾಗುವಂತೆ ರಾಮನ ವಿಷಯವನ್ನು ಪ್ರಸ್ತಾಪಿಸಿದ. ಅದಕ್ಕೆ ಒಪ್ಪಿಗೆ ಸಿಕ್ಕಮೇಲೆ ಚೈತ್ರಮಾಸದ ಶುಕ್ಲಪಕ್ಷದ ಪುಷ್ಯ ನಕ್ಷತ್ರದಂದು ಎಂದ. ಈಗ ಮಂತ್ರಾಲೋಚನೆಯಲ್ಲಿ ಇನ್ನಷ್ಟು ತನ್ನ ತಂತ್ರವನ್ನು ವಿಶದಪಡಿಸುತ್ತಾನೆ. ನಾಳೆಯೇ ಪುಷ್ಯ ನಕ್ಷತ್ರದ ಯೋಗವಿದೆ. ಹಾಗಾಗಿ ನಾಳೆಯೇ ಮುಹೂರ್ತವನ್ನು ನಿಗದಿಪಡಿಸಿ ಎನ್ನುತ್ತಾನೆ. ಅವರೆಲ್ಲರೂ ಹೋದಮೇಲೆ ಪುನಃ ರಾಮನನ್ನು ಕರೆಯಲು ಸುಮಂತ್ರನಿಗೇ ಹೇಳುತ್ತನೆ. ಸುಮಂತ್ರ ದಶರಥನ ಅಂತರಂಗವನ್ನು ಅರಿತ ನಂಬಿಗಸ್ತನಾಗಿದ್ದ. ರಾಮ ಮನೆಗೆ ಹೋಗಿದ್ದನೋ ಇಲ್ಲವೋ ಮತ್ತೊಮ್ಮೆ ದಶರಥನನ್ನು ನೋಡಲು ಕರೆ ಬಂದಿರುವುದರಿಂದ ಅವಸರವಾಗಿ ತಂದೆಯನ್ನು ಕಂಡ. ಇಲ್ಲಿ ರಾಜ ತನ್ನ ಅಂತರಂಗದ ಮಾತುಗಳನ್ನು ರಾಮನಲ್ಲಿ ಆಡುತ್ತಾನೆ. ಪಟ್ಟಾಭಿಷೇಕಕ್ಕೆ ಸಿದ್ದನಾಗಬೇಕಾದ ನೀನು ನಿನ್ನ ಪತ್ನಿಯೊಡನೆ ಉಪವಾಸವಿದ್ದು ಈ ರಾತ್ರಿ ದರ್ಭಾಸ್ತರಣದಲ್ಲಿ ಮಲಗಬೇಕು ಎನ್ನುತ್ತಾನೆ.

ದರ್ಭಾಸ್ತರಣವೆನ್ನುವುದು ಇಂದು ಸತ್ತಮೇಲೆ ಮಲಗಿಸುವ ಕ್ರಿಯೆಯಾಗಿದೆ. ಅದರ ಮೂಲ ಕಾರಣ ರಾಜನಾದವನಿಗೆ ತನ್ನದು ಎನ್ನುವುದಿರುವುದಿಲ್ಲ. ಸಮಷ್ಟಿಯ ಹಿತವನ್ನು ಆತ ಗಮನಿಸುವಾಗ ಸ್ವಾರ್ಥರಹಿತನಾಗಿರಬೇಕಾಗುತ್ತದೆ. ಸನ್ಯಾಸವನ್ನು ಸ್ವೀಕರಿಸುವ ಮೊದಲದಿನ ರಾತ್ರಿಯೂ ದರ್ಭಾಸ್ತರಣದಲ್ಲಿ ಮಲಗಬೇಕಾಗುತ್ತದೆ. ಸನ್ಯಾಸಿಯೂ ಪ್ರಾಪಂಚಿಕ ಸುಖವನ್ನು ಆತ್ಮಶ್ರಾದ್ಧ ಮಾಡಿಕೊಂಡು ತ್ಯಜಿಸುತ್ತಾನೆ. ಒಂದು ಅವಸ್ಥೆಯಿಂದ ಇನ್ನೊಂದಕ್ಕೆ ಹೋಗುವಾಗ ತನ್ನದೆನ್ನುವ ಎಲ್ಲವನ್ನೂ ಬಿಡಬೇಕೆನ್ನುವುದು ಇದು ಸೂಚಿಸುತ್ತದೆ. ರಾಜ ಆತ್ಮ ಶಾದ್ಧ ಮಾಡಿಕೊಳ್ಳುವುದಿಲ್ಲ. ಆತ ಪ್ರಾಪಂಚಿಕ ಪ್ರಪಂಚದಲ್ಲಿ ಇದ್ದೂ ಇಲ್ಲದಂತಿರಬೇಕು. ಆತ್ಮ ಸಂಯಮವನ್ನು ಆತ ಇಟ್ಟುಕೊಳ್ಳಬೇಕು. ಸನ್ಯಾಸಿಯಂತೆ ಆತ ಋಣಮುಕ್ತನಲ್ಲ; ಆತನಿಗೆ ದೇವಋಣ, ಋಷಿಋಣ, ಪಿತೃಋಣಗಳ ಜೊತೆಗೆ ವಿಪ್ರಋಣ ಮತ್ತು ಆತ್ಮಋಣಗಳಿವೆ. ಈ ಭೂಮಿಯನ್ನು ಪರಶುರಾಮ ಕ್ಷತ್ರಿಯರನ್ನು ಗೆದ್ದ ಮೇಲೆ ಕಾಶ್ಯಪರಿಗೆ ದಾನವಾಗಿ ಕೊಟ್ಟಿದ್ದ. ಅವರು ಪುನಃ ಅದನ್ನು ಕ್ಷತ್ರಿಯರಿಗೆ ರಾಜ್ಯವಾಳಲು ಕೊಟ್ಟಿದ್ದರು. ಆ ಕಾರಣಕ್ಕೆ ವಿಪ್ರಋಣವಿರುತ್ತದೆ. ಅದರ ನಿವಾರಣೆಗೆ ಆತ ದಾನ ಧರ್ಮಗಳನ್ನು ಮಾಡಬೇಕು. ಶರೀರವನ್ನು ಪುಷ್ಟಿಯುತವಾಗಿರಿಸಿಕೊಳ್ಳಲೇ ಬೇಕಾಗಿರುವುದರಿಂದ ವಿಹಿತವಾದ ಸುಖವನ್ನು ಅನುಭವಿಸಬೇಕು. ಸನ್ಯಾಸಿ ಪ್ರಾಪಂಚಿಕವನ್ನು ಬಿಟ್ಟವನಾದರೆ, ರಾಜ ಪ್ರಾಪಂಚಿಕದಲ್ಲಿದ್ದು ತನ್ನದೆನ್ನುವ ಸ್ವಾರ್ಥವನ್ನು ಬಿಟ್ಟಿರಬೇಕು. ನಾನು ಎನ್ನುವುದು ವಯಕ್ತಿಕ ನಾವು ಎನ್ನುವುದು ಸಮಷ್ಟಿ. ಹಾಗಾಗಿ ಸನ್ಯಾಸಿಗಳು ಮತ್ತು ರಾಜ ತನ್ನನ್ನು ಉದ್ಧೇಶಿಸಿ ಹೇಳುವಾಗ ನಾನು ಎನ್ನದೇ ನಾವು ಎನ್ನುತ್ತಾರೆ. ಒಂದೊಂದು ಮಾತಿನ ಮೂಲಕವೂ ವಾಲ್ಮೀಕಿ ದಶರಥನ ಜ್ಞಾನ ಮತ್ತು ಸಮಯಪ್ರಜ್ಞೆಯನ್ನು ಎತ್ತಿ ತೋರಿಸುತ್ತಾರೆ. ಆಧ್ಯಾತ್ಮ ಮತ್ತು ಲೌಕಿಕ ಎರಡರಲ್ಲಿಯೂ ಪಾರಂಗತನಾಗಿರುವುದರಿಂದ ಆತ ರಾಜರ್ಷಿಯಾಗಿದ್ದ.

ಶುಕ್ರನೀತಿಯಲ್ಲಿ ದಶರಥ ಪರಿಣಿತನಾಗಿದ್ದ. ಆತನಿಗೆ ಶತ್ರುಗಳು ಎಲ್ಲಿಯಾದರೂ ಯುವರಾಜನಾಗುವ ರಾಮನ ಮೇಲೆ ಆಕ್ರಮಣ ಮಾಡಿದರೆ ಎನ್ನುವ ಸಂಶಯವಿದೆ. ಅದಕ್ಕೆ ಆತ ರಾಮನ ಹತ್ತಿರ ವ್ರತಸ್ಥನಾದ ರಾಮ ನಿರಾಯುಧನಾಗಿ ಇರುತ್ತಾನೆ. ಹಾಗಾಗಿ ಆತನಿಗೆ ನಂಬಿಗಸ್ತರಾದ ಸ್ನೇಹಿತರು ಆತನನ್ನು ಬಹಳ ಜಾಗರೂಕತೆಯಿಂದ ಕಾಯಬೇಕು. ಅಂಥವರನ್ನು ನಿಯಮಿಸಿಕೋ ಎನ್ನುತ್ತಾನೆ. ರಾಜಕಾರಣದ ಅಂತರಂಗವನ್ನೆಲ್ಲ ರಾಮನಿಗೆ ರಾಜ ಹೇಳುತ್ತಾನೆ. ರಾಮ ಇಷ್ಟು ಅವಸರವೇಕೆ ಎಂದು ಕೇಳಿದ್ದನೋ ಏನೋ. ಆಗ “ಭವನ್ತಿ ಬಹುವಿಘ್ನಾನಿ ಕಾರ್ಯಾಣ್ಯೇವಂವಿಧಾನಿ ಹಿ” ಮಹತ್ತರವಾದ ಕಾರ್ಯವಾಗಬೇಕಾದರೆ ಅದಕ್ಕೆ ಅನೇಕ ವಿಧವಾದ ವಿಘ್ನಗಳು ಬರುತ್ತದೆ ಎಂದು ಎಚ್ಚರಿಸುತ್ತಾ “ಭರತ ಬರುವದರೊಳಗಾಗಿ ನಿನಗೆ ಪಟ್ಟಾಭಿಷೇಕವಾಗಬೇಕು” ಎನ್ನುವ ಮಾತುಗಳನ್ನು ಆಡುತ್ತಾನೆ. ಅದರೊಂದಿಗೆ ಭರತನ ಗುಣಗಳನ್ನು “ಆತ ಸತ್ಪುರುಷರ ಮಾರ್ಗದಲ್ಲಿಯೇ ನಡೆಯತಕ್ಕವನು, ಅಣ್ಣನಾದ ನಿನ್ನನ್ನೇ ಅನುಸರಿಸಿ ಇರುವವನು; ಧರ್ಮಾತ್ಮನು; ದಯಾಪರನು; ಜಿತೇಂದ್ರಿಯನು ಇದರಲ್ಲಿ ಯಾವ ಸಂಶಯವೂ ಇಲ್ಲ ಎನ್ನುತ್ತಾ

ಕಿನ್ತು ಚಿತ್ತಂ ಮನುಷ್ಯಾಣಾಮನಿತ್ಯಮಿತಿ ಮೇ ಮತಿಃ.
ಸತಾಂ ಚ ಧರ್ಮನಿತ್ಯಾನಾಂ ಕೃತಶೋಭಿ ಚ ರಾಘವ!৷৷ಅ.4.27৷৷

“ಮಾನವರ ಮನಸ್ಸು ಸ್ಥಿರವಲ್ಲವೆಂಬುದು ನನ್ನ ಖಚಿತವಾದ ಅಭಿಪ್ರಾಯವಾಗಿದೆ. ಧರ್ಮನಿರತರಾದ ಸತ್ಪುರುಷರ ಮನಸ್ಸೂ ಸಹ ತತ್ತನ್ನಿಮಿತ್ತವಾದ ರಾಗದ್ವೇಷಗಳಿಂದ ಕೂಡಿರುತ್ತದೆ.”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕ ಸಂಕಲ್ಪದ ಹಿಂದಿನ ಗೂಢಗಳು

ಸ್ವಭಾವತ ಸಾಧುವಾದ ಭರತನ ಮನಸ್ಸು ಕೇಕಯದವರ ಮಾತುಗಳನ್ನು ಕೇಳಿ ವಿರುದ್ಧವಾಗಿ ವರ್ತಿಸಬಹುದು ಎನ್ನುವ ಎಚ್ಚರಿಕೆ ಇಲ್ಲಿದೆ. ದಶರಥನಿಗೆ ತನ್ನ ಮಾತುಗಳ ಕುರಿತು ಎಷ್ಟೊಂದು ಅಳುಕಿದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಈ ಸಂಭಾಷಣೆಯ ಹೊತ್ತಿನಲ್ಲಿಯೇ ರಾಮ ಇದಕ್ಕೆ ಕಾರಣವನ್ನು ಕೇಳಿರಬಹುದು. ಅದಕ್ಕೆ ಕನ್ಯಾಶುಲ್ಕದ ವಿಷಯ ಬಂದಿರಬಹುದಾಗಿದೆ. ಭರತ ಅರಣ್ಯಕ್ಕೆ ಬಂದು ರಾಮನಿಗೆ ಪುನಃ ಅರಮನೆಗೆ ಬರಬೇಕೆಂದು ಒತ್ತಾಯಿಸಿದಾಗ ಕನ್ಯಾಶುಲ್ಕದ ವಿಷಯವನ್ನು ಭರತನಿಗೆ ತಿಳಿಸುತ್ತಾನೆ. ರಾಜ್ಯ ಭರತನದೇ ಆಗಿತ್ತು ಎನ್ನುವುದನ್ನು ಒತ್ತಿಹೇಳಿ ತಾನು ಅರಣ್ಯದಿಂದ ಬರಲಾರೆ ಎನ್ನುತ್ತಾನೆ. ರಾಮ ತನ್ನ ತಂದೆಯ ಹತ್ತಿರ ಈ ವಿಷಯವನ್ನು ಹೇಳಿ ರಾಜ್ಯವನ್ನು ಏಕೆ ನಿರಾಕರಿಸಲಿಲ್ಲ. ಎನ್ನುವುದಕ್ಕೆ ಕಾರಣ ವಾಲ್ಮೀಕಿ ವಿವರಿಸುವುದಿಲ್ಲ. ಇದು ಧರ್ಮಸೂಕ್ಷ್ಮದ ಪ್ರಶ್ನೆ. ಮೊದಲನೆಯದ್ದು ಯುವರಾಜ ಪದವಿ ಎನ್ನುವುದು ಸೂರ್ಯವಂಶದಲ್ಲಿ ಜ್ಯೇಷ್ಠಾನುವರ್ತಿ. ಅದು ಹಿರಿಯವನ ಕರ್ತವ್ಯವೂ ಹೌದು. ಎರಡನೆಯದು ರಾಮ ತನ್ನ ತಂದೆಯ ಮಾತನ್ನು ಮೀರಲಾರ. ರಾಜನಾದವ ತನ್ನ ರಾಜ್ಯವನ್ನು ಯಾರು ಯಾರಿಗೋ ಕೊಡುವಂತಿಲ್ಲ ಎನ್ನುವುದನ್ನು ಗಣತಂತ್ರ ವ್ಯವಸ್ಥೆಯನ್ನು ಅನುಸರಿಸುತ್ತಿರುವ ಅಯೋಧ್ಯೆಯ ವಿಷಯದಲ್ಲಿ ಮೊದಲೇ ನೋಡಿದ್ದೇವೆ. ದಶರಥ ಕರೆದ ಸಭೆಯಲ್ಲಿ ಸಭಾಸದರು ಭರತ ಬೇಡ ಎಂದು ಹೇಳಿಬಿಟ್ಟಿದ್ದರೆ ದಶರಥನ ಭಾಷೆ ವ್ಯರ್ಥವಾಗಿ ಹೋಗುತ್ತಿತ್ತು. ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ರಾಜನ ಮುತ್ತಿನ ಸತ್ತಿಗೆಯನ್ನು ಕೊಡಲಾಗುವುದಿಲ್ಲ ಎನ್ನುವ ಅಭಿಪ್ರಾಯವಿದೆ.

ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು
ಜನನಿಯಂ ಜನಕನಂ ನಲ್ಲಳಂ ದೈವವಂ
ಮನವಾರೆ ನಂಬಿ ನಚ್ಚಿರ್ದ ಪರಿವಾರಮಂ ಕೊಡುವ ಬಿಡುವತಿಕಲಿಗಳು
ಜನರೊಳಗೆ ಜನಿಸರೆಂದೆನಲು

ಯಜುರ್ವೇದದಲ್ಲಿಯೂ ರಾಜತ್ವವೆನ್ನುವುದು ಅರ್ಹರು ಮಾತ್ರ ಪಾಲಿಸಬೇಕಾದ ಹೊಣೆ ಎನ್ನುತ್ತದೆಯೇ ಹೊರತು ಕೇವಲ ಪಿತ್ರಾರ್ಜಿತವಾದ ಆಸ್ತಿಯಾಗಿರುವುದಲ್ಲ ಎಂದಿದೆ. “ವಿಶ್ವಾಮಿತ್ರರು ಆತನಿಗೆ ಎರಡೆರಡು ಸಾರಿ “ಕರ್ತವ್ಯಂ ದೈವಮಾನ್ಹಿಕಂ- ಕರ್ತವ್ಯವೇ ನಿನಗೆ ದೇವಪೂಜೆ” ಎಂದು ಹೇಳಿರುವುದರಿಂದ ದೊರೆತನವನ್ನು ರಾಮ ತಾನು ಪಾಲಿಸಬೇಕಾದ ಕರ್ತವ್ಯದ ಭಾಗವಾಗಿ ನೋಡಿದ್ದಾನೆ. ತಂದೆಯ ಮಾತು ಸಹ ಕರ್ತವ್ಯದ ಭಾಗವಾಗಿರುವುದರಿಂದ ಆತ ಮುಂದೆ ಭರತನಿಗೋಸ್ಕರ ಸಿಂಹಾಸನವನ್ನು ತ್ಯಜಿಸಿದ್ದಾನೆ. ಆ ವಿವರ ಮುಂದಿನ ಭಾಗದಲ್ಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಘನ ದಶರಥನಿಗೆ ನಿಲುಕದ ಅಪೂರ್ವ ಮಿಲನ

Continue Reading

ಅಂಕಣ

ದಶಮುಖ ಅಂಕಣ: ಮೌನವೆಂಬ ಭಾವಸೇತು

ದಶಮುಖ ಅಂಕಣ: ಮೌನವೆಂದರೆ ಸುಮ್ಮನೆ ಮಾತಾಡದಿರುವುದಲ್ಲ; ಆಡದೆಯೇ ನುಡಿಸುವುದು; ಮುಟ್ಟದೆಯೇ ತಟ್ಟುವುದು. ಮೌನವೆಂಬುದು ಜಗತ್ತಿನ ಅತಿ ಸುಂದರ ಭಾಷೆ.

VISTARANEWS.COM


on

dashamukha column silence
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಗೆಳತಿಯೊಬ್ಬಳು ಸಿಕ್ಕಿದ್ದಳು. ಎಂದಿನ ಲವಲವಿಕೆ ಕಾಣದೆ ಶೋಕವೇ ಮೂರ್ತಿವೆತ್ತಂತೆ ಗೋಚರಿಸುತ್ತಿದ್ದಳು. ಅತ್ತು ಕೆಂಪಾಗಿದ್ದ ಕಣ್ಣುಗಳಲ್ಲಿ ಈಗಲೂ ಪಸೆಯಿತ್ತು. ಸಂಕಟದ ನಗೆಯೊಂದನ್ನು ಬೀರಿದಳು. ‘ಏನಾಯ್ತೆ?’ ಎಂದು ಕೇಳಿದ್ದೆ ತಡ, ಮನಸ್ಸಿಗೆ ಕೋಡಿ ಬಿದ್ದೇಬಿಟ್ಟಿತ್ತು. ವಿಷಯ ಮತ್ತೇನಲ್ಲ, ಅವಳ ಮನೆಯ ನಾಯಿ, ಮರಿ ಹಾಕಿತ್ತು. ಹೊಸದಾಗಿ ಹುಟ್ಟಿದ್ದ ನಾಲ್ಕು ಮರಿಗಳಲ್ಲಿ ಒಂದನ್ನಷ್ಟೇ ಇರಿಸಿಕೊಂಡು ಉಳಿದೆಲ್ಲವನ್ನೂ ಸಾಕುವ ಆಸಕ್ತರಿಗೆ ಕೊಟ್ಟಿದ್ದಳು. ಮೊದಲಿನ ಎರಡು ಮರಿಗಳನ್ನು ಕೊಡುವಾಗ ಅವಿನ್ನೂ ಸಣ್ಣವಾದ್ದರಿಂದ ಹೆಚ್ಚಿನ ಪ್ರತಿರೋಧ ತೋರಿರಲಿಲ್ಲ. ಆದರೆ ಮೂರನೇ ಮರಿಯನ್ನು ಕೊಡುವಾಗ ಉಳಿದವಕ್ಕಿಂತ ಕೊಂಚ ದೊಡ್ಡದಾಗಿದ್ದ ಮರಿ, ಹೊಸಬರೊಂದಿಗೆ ಹೋಗಲೊಲ್ಲೆ ಎಂದು ತನ್ನ ಮೂಕಭಾಷೆಯಲ್ಲಿ ಗೋಳಾಡಿತ್ತಂತೆ. ಬಂದವರು ಎತ್ತಿಕೊಂಡು ಹೋಗುವಾಗ ತನ್ನತ್ತ ನೋಡುತ್ತಾ ಕಣ್ಣಲ್ಲೇ ಬೇಡಿಕೊಂಡಿದ್ದ ಮರಿಯ ಚಿತ್ರವನ್ನು ಮನಸ್ಸಿಗೆ ತಂದುಕೊಂಡು ಅತ್ತೂಅತ್ತು ಹೈರಾಣಾಗಿದ್ದಳು. ಜೊತೆಗೆ ಒಬ್ಬೊಂಟಿಯಾಗಿದ್ದ ಕೊನೆಯ ಮರಿ ಮನೆಯಲ್ಲೇ ಮಂಕಾಗಿ ಕುಳಿತಿದ್ದು ಆಕೆಯನ್ನು ಇನ್ನೂ ಸಂಕಟಕ್ಕೆ ದೂಡಿತ್ತು. ಏನನ್ನೂ ತಿನ್ನದೆ ಮರಿಗಳ ಅಮ್ಮನೂ ಮೌನವಾಗಿ ಕೂತಿದ್ದು ಕಂಡು ಹೀಗೆ ಶೋಕವೇ ಮೂರ್ತಿವೆತ್ತಂತಾಗಿದ್ದಳು. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಎಷ್ಟೇ ಸಮಾಧಾನ ಹೇಳಿದರೂ, ವಿಹ್ವಲತೆ ಅವಳನ್ನು ಬಿಡುತ್ತಲೇ ಇರಲಿಲ್ಲ. ಇವಳ ದುಃಖಕ್ಕಿಂತಲೂ ನನ್ನ ಗಮನವನ್ನು ಹೆಚ್ಚಾಗಿ ಸೆಳೆದಿದ್ದು ಆ ಮೂಕ ಜೀವಿಗಳ ಭಾವ. ಏನನ್ನೂ ಹೇಳದೆಯೇ ತಮ್ಮ ಮನಸ್ಸಿನ ವೇದನೆಯನ್ನು ಇನ್ನೊಬ್ಬರಿಗೆ ತಲುಪಿಸಿದವಲ್ಲ ಅವು, ಹಾಗಾದರೆ ಏನನ್ನು ಹೇಳದಿದ್ದರೂ ಸಂವಹನ ನಡೆಯುತ್ತದೆ ಎಂದಾಯಿತು. ಭಾವಕ್ಕೆ ಭಾಷೆಯೆಂಬುದೇ ಸೇತುವೆಯಲ್ಲವೇ?

ನಿಜಕ್ಕೂ, ಭಾಷೆ ಮಾತ್ರವೇ ಭಾವಸೇತುವೇ? ಭಾಷೆ ಇಲ್ಲದಿದ್ದರೆ ಸಂವಹನ ನಡೆಯುವುದಿಲ್ಲವೇ? ಅಥವಾ ಶಬ್ದಗಳಿಗಿಂತಲೂ ಮೌನವೇ ಸಮರ್ಥವಾದ ಭಾಷೆಯೇ? ಯಾವುದೆಲ್ಲ ಕಾರಣಗಳಿಗೆ ನಾವು ಮೌನವಾಗುತ್ತೇವೆ? ಮಾತಿಗಿಂತಲೂ ಹೆಚ್ಚು ಮೌನವೇ ನಮ್ಮನ್ನು ಕಾಡುವುದೇಕೆ? ಹೇಳದೆ ಮೌನವಾದಾಗ ಭಾವತೀವ್ರತೆ ಹೆಚ್ಚಾಗುತ್ತದೆಯೇ ಅಥವಾ ಇರುವುದಕ್ಕಿಂತ ಹೆಚ್ಚು ಭಾವಗಳನ್ನು ನಾವು ಕಲ್ಪಿಸಿಕೊಳ್ಳುತ್ತೇವೆಯೇ? ಮೌನ ಯಾಕಷ್ಟು ತಾಕುತ್ತದೆ ನಮ್ಮನ್ನು? ಏನೀ ಮೌನದ ಹಕೀಕತ್ತು?

ಮೌನದ ಭಾವಗಳು ನಿಜಕ್ಕೂ ಕುತೂಹಲ ಹುಟ್ಟಿಸುವಂಥವು. ಉದಾಹರಣೆಗೆ ಹೇಳುವುದಾದರೆ, ಮೌನವು ಸಮ್ಮತಿಯ ಲಕ್ಷಣ ಎನ್ನುತ್ತದೆ ಜನಪ್ರಿಯ ಗಾದೆ. ನಿಜಕ್ಕೂ ಸಮ್ಮತಿಸುವಾಗ ಮಾತ್ರವೇ ಮೌನವಾಗಿ ಇರುತ್ತೇವೆಯೇ? ಕೆಲವು ಸಂದರ್ಭಗಳಲ್ಲಿ ಮೌನವು ಅಸಮ್ಮತಿಯನ್ನೂ ಸೂಚಿಸುತ್ತದಲ್ಲ. ಕೋಪ ಬಂದಾಗಲೂ ಮಾತು ಬಿಡುತ್ತೇವೆ. ಮನಸ್ಸಿಗೆ ಹಿತವಾಗದಿದ್ದರೆ, ನಿರಾಕರಣೆಯ ಭಾವದಲ್ಲಿ, ನಿರ್ಲಕ್ಷಿಸುವಾಗ, ಪ್ರತಿರೋಧದ ಭಾವದಲ್ಲಿ, ಅತಿಯಾದ ಶೋಕದಲ್ಲಿ ನಾವು ಆಶ್ರಯಿಸುವುದು ಮೌನವನ್ನೇ. ಕದಪು ಕೆಂಪಾಗಿ ನಾಚಿಕೆಯಲ್ಲಿ ಮಿಂದೇಳುವಾಗ ಮಾತಿಗೇನು ಕೆಲಸ? ನಮ್ಮೊಳಗೆ ಏನನ್ನೋ ಧೇನಿಸುವಾಗ ಮೌನವೇ ಹಿತ ಎನಿಸುತ್ತದೆ. ಭಗವಂತನ ಸಾನಿಧ್ಯಕ್ಕೂ ಸಲ್ಲುವುದು ಮೌನವೇ. ಹಾಗಾದರೆ ಶಾಂತಿ, ಪ್ರೀತಿ, ಭಕ್ತಿ ಮುಂತಾದ ಎಷ್ಟೊಂದು ಭಾವಗಳ ಪ್ರವಾಹಕ್ಕೆ ಮೌನವೇ ಪಾತ್ರವಾಗಬಲ್ಲದು. ಮೌನವು ಜಗತ್ತಿನ ಸುಂದರವಾದ ಭಾಷೆ ಎಂಬುದು ನಿಜವೇ?

ಮೌನಕ್ಕೆ ಕಾರಣಗಳು ಏನು ಬೇಕಿದ್ದರೂ ಆಗಬಹುದು. ಊಟ ಮಾಡುವಾಗ ಮಾತಾಡಬಾರದು ಎನ್ನುವುದಕ್ಕೆ ಆಚಾರ-ವಿಚಾರಗಳು ಕಾರಣವಾದರೆ, ಧ್ಯಾನಕ್ಕೆ ಕೂತಾಗ ಮೌನವಾಗಿರಬೇಕು ಎನ್ನುವುದಕ್ಕೆ ಧಾರ್ಮಿಕ ಕಾರಣಗಳು ಇರಬಹುದು. ಎಷ್ಟೋ ಧರ್ಮಗಳಲ್ಲಿ ಮೌನವೆಂಬುದು ದೇವೋಪಾಸನೆಯ ಮಾರ್ಗವೂ ಹೌದು. ವರ್ಷಕ್ಕೆ ನಿಗದಿತ ದಿನಗಳು ಮೌನವಾಗಿರುವುದು ಧಾರ್ಮಿಕ ಅನುಷ್ಠಾನಗಳ ಕ್ರಮವೂ ಆಗಿದ್ದೀತು. ದೇವನಿಗೆ ಮಾತಿನಷ್ಟೇ ಮೌನವೂ ಪ್ರಿಯ ಎಂಬುದು ಇದರರ್ಥವೇ? ಅಥವಾ ಹೊರಗಿನ ಜಗತ್ತಿನೊಂದಿಗೆ ಮಾತು ನಿಂತಾಗಲೇ ʻಒಳ-ಹೋಗುವುದಕ್ಕೆʼ ಸಾಧ್ಯ ಎನ್ನುವ ಚಿಂತನೆ ಇಂಥ ಉಪಾಸನೆಗಳ ಹಿಂದಿರಬಹುದೇ? ಎಲ್ಲವೂ ಅವರವರ ಭಾವಕ್ಕೆ ಬಿಟ್ಟಿದ್ದು.

ಮಾತಿನ ಬಗ್ಗೆ ಕೆಲವು ಅಪಸ್ವರದ ಧಾಟಿಗಳನ್ನು ಅಲ್ಲಲ್ಲಿ ಕಾಣಬಹುದು. ಉದಾ, ಮಾತು ಮನೆ ಕೆಡಿಸಿತು ಅಥವಾ ಮಾತು ಆಡಿದರೆ ಹೋಯಿತು ಇಂಥವು. ಅಂದರೆ ಒಮ್ಮೆ ಬಾಯಿಂದ ಹೊರಬಿದ್ದ ಮಾತನ್ನು ಮತ್ತೆ ಹಿಂತೆಗೆದುಕೊಳ್ಳಲು ಆಗದೇ ಇರುವುದರಿಂದ ಆಗುವ ಅನಾಹುತಗಳನ್ನು ಸೂಚಿಸುವಂಥವು ಇವೆಲ್ಲ. ಹಾಗಾಗಿಯೇ ʻನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು…ʼ ಎಂಬೆಲ್ಲ ವಚನಗಳೂ ನಮ್ಮ ಮುಂದಿವೆ. ಮಾತಿಗೆ ಇಷ್ಟೆಲ್ಲ ನೀತಿ-ಸೂತ್ರಗಳು ಇದ್ದರೂ ಅದು ಕೇವಲ ಬೆಳ್ಳಿಯಂತೆ. ಮೌನ ಮಾತ್ರ ಬಂಗಾರ! -ಎನ್ನುವಲ್ಲಿಗೆ ಮಾತಿಗಿಂತ ಹೆಚ್ಚಿನ ಸ್ಥಾನ-ಮಾನ ಮೌನದ್ದು ಎನ್ನೋಣವೇ? ಹಾಗೆಂದೇ ʻಮೌನೇನ ಕಲಹಂ ನಾಸ್ತಿʼ ಎನ್ನುತ್ತದೆ ಒಂದು ಸುಭಾಷಿತ. ಆದರೆ ʻಮಾತು ಬಲ್ಲವನಿಗೆ ಜಗಳವಿಲ್ಲʼ ಎಂಬ ಗಾದೆಯೂ ಪ್ರಚಲಿತವಿದೆಯಲ್ಲ. ʻವಾದವಿರುವ ಮಾತಿಗಿಂತ ಸ್ವಾದವಿರುವ ಮೌನವೇ ಲೇಸುʼ ಎನ್ನುತ್ತದೊಂದು ನಾಣ್ಣುಡಿ. ಅಂತೂ ಮಾತಾಡಿ ಅಥವಾ ಬಿಡಿ- ಎಲ್ಲದಕ್ಕೂ ಅದರದ್ದೇ ಆದ ಮಹತ್ವವಿರುವಂತೆ, ಅದರದ್ದೇ ಆದ ಹದವೂ ಇದೆ ಎನ್ನೋಣವೇ?

ಪ್ರಕೃತಿಯಲ್ಲೂ ಮೌನವಿದೆಯೇ? ನಿರ್ಜನವಾದ ಯಾವುದೇ ಪ್ರದೇಶಕ್ಕೆ ಹೋದರೂ ಮೌನ ಸಿಗಬಹುದೇ? ಬೆಟ್ಟದ ತುದಿಗೆ, ನದಿ ತಟಕ್ಕೆ, ಸಮುದ್ರದ ದಂಡೆಗೆ, ಮರಳುಗಾಡಿಗೆ, ಗೊಂಡಾರಣ್ಯಕ್ಕೆ- ಇಂಥ ಯಾವುದೇ ಸ್ಥಳಗಳಿಗೆ ಹೋದರೂ ಮೌನ ದೊರೆಯಬಹುದೇ? ಇಲ್ಲೆಲ್ಲ ನೀರಿನ ಮೊರೆತ, ಗಾಳಿಯ ಹೊಡೆತ, ಹಕ್ಕಿಗಳ ಕೂಜನವೆಲ್ಲ ಕೇಳುತ್ತದಲ್ಲ… ಆದರೂ ಪ್ರಕೃತಿಯಲ್ಲಿ ಮೌನವಿದೆ ಎಂದು ನಮಗೇಕನ್ನಿಸುತ್ತದೆ? ಈ ಸದ್ದುಗಳನ್ನೆಲ್ಲ ಸೇರಿಸಿಯೇ ನಾವು ನಿಸರ್ಗವನ್ನು ಭಾವಿಸುವುದೇ? ಅದಿಲ್ಲದ ನೀರವತೆ ಉಲ್ಲಾಸದ ಬದಲು ಬೇಸರ ತಂದೀತು ಎಂದೇ? ಕೇರಳದ ಮೌನ ಕಣಿವೆಯ ಬಗ್ಗೆ ನಾವೆಲ್ಲ ಕೇಳಿದವರೇ. ವಿಸ್ತಾರವಾದ ಆ ನಿತ್ಯ ಹರಿದ್ವರ್ಣ ಕಣಿವೆಗಳಲ್ಲಿ ನೆಲೆಸಿದ್ದ ಅಮೂಲ್ಯ ಮೌನವನ್ನು ಸ್ವರ್ಗ ಸದೃಶ್ಯ ಎಂದೇ ಬಣ್ಣಿಸಲಾಗುತ್ತಿತ್ತಲ್ಲ. ಈ ವೈವಿಧ್ಯಮಯ ಜೀವಜಗತ್ತಿನ ಖಜಾನೆಯನ್ನು ಅಣೆಕಟ್ಟೆಯಡಿ ಮುಳುಗಿಸುವ ಅಧಿಕಾರದ ಹುನ್ನಾರಿಗೆ ಪ್ರತಿಯಾಗಿ ಪ್ರಬಲವಾದ ಜನಾಂದೋಲನ ರೂಪುಗೊಂಡು, ಅದನ್ನು ರಾಷ್ಟ್ರೀಯ ಉದ್ಯಾನವನ್ನಾಗಿ ಕಾಪಾಡಿಕೊಂಡಿದ್ದು ಈಗ ಇತಿಹಾಸ.

ಪ್ರಕೃತಿಯಲ್ಲಿರುವ ಮೌನದ ಬಗ್ಗೆ ಬಹಳಷ್ಟು ಕವಿಗಳು ನಾನಾ ರೂಪದಲ್ಲಿ ವರ್ಣಿಸಿದ್ದಿದೆ. “ಮೌನ ತಬ್ಬಿತು ನೆಲವ/ ಜುಮ್ಮನೆ ಪುಳಕಗೊಂಡಿತು ಧಾರಿಣಿ/ ನೋಡಿ ನಾಚಿತು ಬಾನು/ ಸೇರಿತು ಕೆಂಪು ಸಂಜೆಯ ಕದಪಲಿ/ ಹಕ್ಕಿಗೊರಲಿನ ಸುರತಗಾನಕೆ/ ಬಿಗಿಯು ನಸುವೆ ಸಡಿಲಿತು/ ಬೆಚ್ಚಬೆಚ್ಚನೆಯುಸಿರಿನಂದದಿ/ ಗಾಳಿ ಮೆಲ್ಲನೆ ತೆವಳಿತು” ಎನ್ನುವ ಗೋಪಾಲಕೃಷ್ಣ ಅಡಿಗರ ಕವನದಲ್ಲಿ ಪ್ರಕೃತಿಯೊಂದಿಗಿನ ಮೌನದ ಅನುಸಂಧಾನ ಹೃದ್ಯವಾಗಿದೆ. ಮೌನವು ಇಷ್ಟೇ ತೀವ್ರವಾಗಿ ಅಭಿವ್ಯಕ್ತಿಗೊಂಡಿರುವುದು ಪು.ತಿ. ನರಸಿಂಹಾಚಾರ್‌ ಅವರ ʻಯದುಗಿರಿಯ ಮೌನ ವಿಕಾಸʼ ಕವನದಲ್ಲಿ. ಯದುಗಿರಿಯ ಮೂಡಣದ ಕಣಿವೆಯಲ್ಲಿ ಸೂರ್ಯೋದಯಕ್ಕೆ ಮೆಲ್ಲಗೆ ಎಚ್ಚರಗೊಳ್ಳುವ ಮೌನ ಒಂದೆಡೆ; ಪಡುವಣದ ಕಣಿವೆಯಲ್ಲಿ ಎಲ್ಲ ಸದ್ದುಗಳ ನಡುವೆಯೆ ನಿದ್ರಿಸುವ ಘನ ಮೌನ- ಈ ಎರಡೂ ಮೌನಗಳ ನಡುವೆ ಮುಂಜಾನೆಯ ಹೊತ್ತಿನ ದೇಗುಲದ ಸೊಬಗು- ಇದು ಕವಿಯನ್ನು ತೀವ್ರವಾಗಿ ಕಾಡಿದೆ. “ತಮ ಹುದುಗುತಿದೆ, ಬೆಳಕೊಗೆಯುತಿದೆ/ ಬೆಳ್ಳಿಯು ಮಂಜೊಳು ಕರಗುತಿದೆ” ಎಂಬಂತೆ ಅವರಿಗೆ ಕಾಣುತ್ತಿದೆ. “ಸಹಸ್ರಕಂಠದಿ ಮೇಳವಿಸಿದೆ ನುತಿ/ ದೇಗುಲವಾಗಿದೆ ಘೋಷವತಿ” ಎನ್ನುವ ಸಾಲುಗಳಲ್ಲೇ ಹುಸಿ ಬೆಳಗು, ನಸು ಬೆಳಗು, ಮುಂಬೆಳಗುಗಳೆಲ್ಲ ಕಳೆದು ಮೌನ ವಿಕಾಸವಾಗುವ ಅದ್ಭುತ ಲಯವೊಂದು ಸೃಷ್ಟಿಯಾಗುತ್ತದೆ. ಲೌಕಿಕ ಮೌನದ ವಿಕಾಸದಲ್ಲಿ ಅಂತರಂಗದ, ಅಧ್ಯಾತ್ಮದ ವಿಕಾಸದ ಹಾದಿಯನ್ನೂ ಕವಿ ತೆರೆದಿಡುವಂತಿದೆ.

ಇದನ್ನೂ ಓದಿ: ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

ಮನುಷ್ಯ ಭಾವದ ಮೌನವೂ ಕವಿಗಳ ಕಲ್ಪನೆಗೆ ದಕ್ಕಿದ್ದಿದೆ. ಕೆ.ಎಸ್.‌ ನರಸಿಂಹಸ್ವಾಮಿಗಳ ʻಮೊದಲ ದಿನ ಮೌನʼ ಕವಿತೆಯನ್ನು ಮರೆಯುವುದು ಹೇಗೆ? ಆಗಿನ್ನೂ ಮದುವೆಯಾಗಿ ಗಂಡನ ಮನೆಯ ಹೊಸಿಲು ತುಳಿದ ಹೊಸ ವಧುವಿನ ಭಾವಭಿತ್ತಿಯಲ್ಲಿ ಆಗುವ ಪಲ್ಲಟಗಳನ್ನು ಈ ಕವನ ಎಳೆಎಳೆಯಾಗಿ ಕಟ್ಟಿಕೊಡುತ್ತದೆ. “ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ/ ಜೀವದಲಿ ಜಾತ್ರೆ ಮುಗಿದಂತೆ/… ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ/ ಚಿಂತೆ ಬಿಡಿ ಹೂವ ಮುಡಿದಂತೆ” ಎನ್ನುವ ಸಾಲುಗಳು, ಆ ಎಳೆಯ ಜೀವದಲ್ಲಿ ಮೂಡಿದ ಭಾವಗಳ ಜಾತ್ರೆಯನ್ನು ತಂತಿ ಮೀಟುವಂತೆ ಚಿತ್ರಿಸುತ್ತವೆ. “ಮೂಕನಾಗಬೇಕು, ಜಗದೊಳು ಜ್ವಾಕ್ಯಾಗಿರಬೇಕು” ಎನ್ನುವ ಕಡಕೋಳ ಮಡಿವಾಳೇಶ್ವರರ ತತ್ವಪದವು, ಮಾತು, ಮೌನ, ನೀತಿ, ತತ್ವ, ಆಸೆಗಳ ಬಗ್ಗೆ ತೀರಾ ಸರಳವಾಗಿ ತಿಳಿಸುತ್ತವೆ.

ಅಲ್ಲ, ಮೌನದ ಬಗ್ಗೆ ಹೇಳುವುದಕ್ಕೆ ಇಷ್ಟೊಂದು ಮಾತಾಡಬೇಕೆ? ಹಾಗೇನಿಲ್ಲ! ವಾಚ್ಯವಾಗಿ ಏನೂ ಹೇಳದೆಯೆ ಕೇವಲ ನಿಟ್ಟುಸಿರು, ಕಣ್ಣೋಟ, ಕಿರುನಗೆ, ಕೊಂಕು ತುಟಿಗಳೆಲ್ಲ ಎಷ್ಟೊಂದು ಅರ್ಥಗಳನ್ನು ನಮಗೆ ದಾಟಿಸುತ್ತವೆ. ಹಾಗಾದರೆ ಮೌನವೆಂದರೆ ಸುಮ್ಮನೆ ಮಾತಾಡದಿರುವುದಲ್ಲ; ಬೇಸರ ತರುವಂಥ ನಿಶ್ಶಬ್ದವಲ್ಲ; ಹೆದರಿಸುವ ನೀರವತೆಯೂ ಅಲ್ಲ. ಮೌನವೆಂದರೆ ಹೇಳದೆಯೇ ತಿಳಿಸುವುದು; ಆಡದೆಯೇ ನುಡಿಸುವುದು; ಮುಟ್ಟದೆಯೇ ತಟ್ಟುವುದು. ಹೌದೇಹೌದು, ಮೌನವೆಂಬುದು ಜಗತ್ತಿನ ಅತಿ ಸುಂದರ ಭಾಷೆ.

ಇದನ್ನೂ ಓದಿ: ದಶಮುಖ ಅಂಕಣ: ಉಪವಾಸದ ಹಿಂದೆ ಎಷ್ಟೊಂದು ನೆನಪುಗಳು!

Continue Reading

ಕರ್ನಾಟಕ

KUWJ Awards: ಕಾರ್ಯನಿರತ ಪತ್ರಕರ್ತರ ಸಂಘದ 2024ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳು ಪ್ರಕಟ: ಪುರಸ್ಕೃತರ ಪಟ್ಟಿ ಇಲ್ಲಿದೆ

KUWJ Awards: ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತವೆ. ಚಿತ್ರದುರ್ಗದಲ್ಲಿ ಏಪ್ರಿಲ್ 1ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು

VISTARANEWS.COM


on

kuwj awards
Koo

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ (KUWJ) ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು (KUWJ Awards) ಪ್ರಕಟಿಸಲಾಗಿದೆ. ಪ್ರಶಸ್ತಿಗಳು ಹಾಗೂ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ:

ಪ್ರಶಸ್ತಿಗಳ ವಿವರ:

ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ: ಬಿ.ಎಂ.ಬಶೀರ್, ಮಂಗಳೂರು

ಗೊಮ್ಮಟ ಮಾಧ್ಯಮ ಪ್ರಶಸ್ತಿ: ಕುಂತಿನಾಥ ಕಲಮನಿ, ಬೆಳಗಾವಿ

ಡಿವಿಜಿ ಪ್ರಶಸ್ತಿ: ವಿ. ವೆಂಕಟೇಶ್, ಬೆಂಗಳೂರು

ಸಿ.ಆರ್.ಕೃಷ್ಣರಾವ್(ಸಿಆರ್‌ಕೆ) ಪ್ರಶಸ್ತಿ: ಸಿ.ಜಿ.ಮಂಜುಳ, ಬೆಂಗಳೂರು

ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ಮಲ್ಲಿಗೆ ಮಾಚಮ್ಮ, ಮೈಸೂರು

ಎಸ್.ವಿ. ಜಯಶೀಲರಾವ್ ಪ್ರಶಸ್ತಿ: ಮೋಹನ ಹೆಗಡೆ, ಹುಬ್ಬಳ್ಳಿ

ಡಾ.ಎಂ.ಎಂ. ಕಲಬುರ್ಗಿ ಪ್ರಶಸ್ತಿ: ಸನತ್ ಕುಮಾರ್ ಬೆಳಗಲಿ

mahendra basheer
ಸಿ.ಕೆ ಮಹೇಂದ್ರ, ಬಿ.ಎಂ ಬಶೀರ್

ಕಿಡಿ ಶೇಷಪ್ಪ ಪ್ರಶಸ್ತಿ: ಬಿ.ಎಂ.ನಂದೀಶ್, ಹಾಸನ

ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ: ಆರ್. ಜಯಕುಮಾರ್, ಬೆಂಗಳೂರು

ಪಿ.ಆರ್. ರಾಮಯ್ಯ ಪ್ರಶಸ್ತಿ: ಸಿ.ಕೆ.ಮಹೇಂದ್ರ, ಮೈಸೂರು

ಎಚ್.ಕೆ. ವೀರಣ್ಣಗೌಡ ಪ್ರಶಸ್ತಿ: ಅಶೋಕ್ ರಾಮ್, ರಾಮನಗರ

ರಾಜಶೇಖರ ಕೋಟಿ ಪ್ರಶಸ್ತಿ: ಶಶಿಕುಮಾರ್ ಬಿ ಕೆರೂರ, ಬಾಗಲಕೋಟೆ

ಪಿ.ರಾಮಯ್ಯ ಪ್ರಶಸ್ತಿ: ಮನೋಹರ ಮಲ್ಲಾಡದ, ರಾಣೆಬೆನ್ನೂರು

ಮ. ರಾಮಮೂರ್ತಿ ಪ್ರಶಸ್ತಿ: ಎಚ್.ಕೆ. ಬಸವರಾಜು, ಬೆಂಗಳೂರು

ಗರುಡನಗಿರಿ ನಾಗರಾಜ್ ಪ್ರಶಸ್ತಿ: ಪ್ರಭುಲಿಂಗ ಶಾಸ್ತ್ರಿಮಠ, ಬೆಂಗಳೂರು

ಮಹದೇವ ಪ್ರಕಾಶ್ ಪ್ರಶಸ್ತಿ: ವಿಜಯಕುಮಾರ್ ವಾರದ, ಕಲಬುರಗಿ

ಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಶಸ್ತಿ: ಎನ್.ಬಾಬು, ಭದ್ರಾವತಿ

ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ: ನಾಮದೇವ ವಾಟ್ಕರ್, ಯಾದಗಿರಿ

ಎಂ.ನಾಗೇಂದ್ರರಾವ್ ಪ್ರಶಸ್ತಿ: ರವಿ ಆರ್, ದಾವಣಗೆರೆ

ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: ಕೆ.ಗೋಪಿಕಾ ಮಲ್ಲೇಶ್, ಕೋಲಾರ

ಗುರುಲಿಂಗಸ್ವಾಮಿ ಹೊಳಿಮಠ ಪ್ರಶಸ್ತಿ: ಆರ್.ಸಿ.ಪುಟ್ಟರಾಜು, ಚಾಮರಾಜನಗರ

ವಿಶೇಷ ಪ್ರಶಸ್ತಿ:
ಚಿಕ್ಕಪ್ಪನಳ್ಳಿ ಷಣ್ಮುಖ
ಎಸ್.ಬಿ.ರವಿಕುಮಾರ್
ಶ.ಮಂಜುನಾಥ್
ರವಿ ಮಲ್ಲಾಪುರ

ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತವೆ. ಚಿತ್ರದುರ್ಗದಲ್ಲಿ ಏಪ್ರಿಲ್ 1ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Dr Shripad Bhat: ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್‌ಗೆ ‘ರಂಗ ಭೂಪತಿ’ ಪ್ರಶಸ್ತಿ

Continue Reading

ಕಲೆ/ಸಾಹಿತ್ಯ

Dr Shripad Bhat: ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್‌ಗೆ ‘ರಂಗ ಭೂಪತಿ’ ಪ್ರಶಸ್ತಿ

Dr Shripad Bhat: ಮಾರ್ಚ್ 30ರಂದು ಸಂಜೆ 6.30ಕ್ಕೆ ಧಾರವಾಡದ ರಂಗಾಯಣ ಆವರಣದ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಹಿರಿಯ ರಂಗ ನಿರ್ದೇಶಕ ಶ್ರೀಪಾದ ಭಟ್ ಅವರಿಗೆ ʼರಂಗ ಭೂಪತಿʼ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

VISTARANEWS.COM


on

Dr Shripad Bhat
Koo

ಧಾರವಾಡ: ಹಿರಿಯ ರಂಗ ನಿರ್ದೇಶಕ ಶ್ರೀಪಾದ ಭಟ್ (Dr Shripad Bhat) ಅವರಿಗೆ ಖ್ಯಾತ ನಾಟಕಕಾರ ದಿ. ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ‘ರಂಗ ಭೂಪತಿ’ ಮೊದಲ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಧಾರವಾಡದ ಗೋ.ವಾ. ರಂಗ-ಸಂಗ, ಆಟ-ಮಾಟ, ಹಾಗೂ ಬೆಂಗಳೂರಿನ ಬಹುರೂಪಿ ಫೌಂಡೇಶನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಮಾರ್ಚ್ 30 (ಶನಿವಾರ) ಸಂಜೆ 6.30ಕ್ಕೆ ಧಾರವಾಡದ ರಂಗಾಯಣ ಆವರಣದಲ್ಲಿರುವ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು, ರಂಗಕರ್ಮಿ ಧನಂಜಯ ಕುಲಕರ್ಣಿ ಹಾಗೂ ಹಿರಿಯ ಪತ್ರಕರ್ತ, ಬಹುರೂಪಿ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾದ ಜಿ.ಎನ್. ಮೋಹನ್, ರವಿ ಕುಲಕರ್ಣಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಗೋಪಾಲ ವಾಜಪೇಯಿ ಅವರು ರಚಿಸಿದ ರಂಗಗೀತೆಗಳ ಹಬ್ಬ ಆಯೋಜಿಸಲಾಗಿದ್ದು, ರಂಗಾಯಣ ಕಲಾವಿದ ರಾಘವ ಕಮ್ಮಾರ, ಹೂವಿನ ಹಡಗಲಿಯ ಶಶಿಧರ.ಕೆ.ಎಂ, ರವಿ ಯಲ್ಲಪ್ಪನವರ್, ಪರಶುರಾಮ ನಾಗೋಜಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರಾದ ಗೋ.ವಾ. ರಂಗ-ಸಂಗದ ರಾಜಕುಮಾರ ಮಡಿವಾಳರ ಅವರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದ ಶ್ರೀಪಾದ ಭಟ್ ಅವರು ಕನ್ನಡ ರಂಗಭೂಮಿಯ ಮಹತ್ವದ ಹೆಸರು. ರಂಗಭೂಮಿಯ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಎರಡೂ ರಂಗಗಗಳಲ್ಲಿ ನುರಿತವರು. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಜಾನಪದ ಅಧ್ಯಯನ, ಸಂಗೀತ, ಸಂಘಟನೆ ಇವರ ಆಸಕ್ತಿಯ ಕ್ಷೇತ್ರಗಳು. ಶಿಕ್ಷಣ, ಕಾವ್ಯ ಹಾಗೂ ಮಕ್ಕಳ ರಂಗಭೂಮಿಯಲ್ಲಿ ಇವರು ನಡೆಸಿದ ಪ್ರಯೋಗಗಳು ದೇಶಾದ್ಯಂತ ಹೆಸರುವಾಸಿಯಾಗಿದೆ. ಗಾಂಧಿ- 150 ರ ಸಂದರ್ಭದಲ್ಲಿ ಇವರು ನಿರ್ದೇಶಿಸಿದ ‘ಪಾಪು-ಬಾಪು’ ನಾಟಕವು 2 ಸಾವಿರ ಪ್ರಯೋಗ ಕಂಡಿದೆ. ಇದುವರೆಗೂ ಸುಮಾರು 150 ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ‘ದಡವ ನೆಕ್ಕಿದ ಹೊಳೆ’ ನಟನೆಯ ಕೈಪಿಡಿ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ರಂಗಭೂಮಿ ಕುರಿತ ಅಧ್ಯಯನಕ್ಕೆ ಪಿಎಚ್‌ಡಿ ಪಡೆದಿದ್ದಾರೆ.

ಇದನ್ನೂ ಓದಿ | Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

ಹಲವು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸುವುದರ ಜತೆ ಕವಿ, ನಾಟಕಕಾರ, ನಟ, ನಿರ್ದೇಶಕರಾಗಿ, ಆಕಾಶವಾಣಿ, ರಂಗಭೂಮಿ, ಸಿನಿಮಾ, ಜನಸಮುದಾಯ ಅತಿ ಇಷ್ಟದ ಮಾಧ್ಯಮಗಳ ಮೂಲಕ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಬರಹದ ಮೂಲಕ ಪ್ರಭಾವಿಸಿದವರು ಗೋಪಾಲ ವಾಜಪೇಯಿ ಅವರು. ಉತ್ತರ ಕರ್ನಾಟಕದ ಗಟ್ಟಿ ಆಡುಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಅವರು ರಂಗಭೂಮಿಗೆ ನೀಡಿದ ಕೊಡುಗೆ ಅಪಾರ.

Continue Reading
Advertisement
Heat Stroke
ಆರೋಗ್ಯ2 mins ago

Heat Stroke: ನೀರು ಕುಡಿದು ತಂಪಾಗಿರಿ, ಹೀಟ್‌ ಸ್ಟ್ರೋಕ್‌ ತಪ್ಪಿಸಿಕೊಳ್ಳಿ

Rahul Gandhi And Tejashwi Yadav
Lok Sabha Election 20248 mins ago

Lok Sabha Election: ಬಿಹಾರದಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಸೀಟು ಹಂಚಿಕೆ; ಯಾರಿಗೆ ಎಷ್ಟು ಕ್ಷೇತ್ರ?

IPL 2024
ಕ್ರೀಡೆ14 mins ago

IPL 2024: ಹಾರ್ದಿಕ್​ ಪಾಂಡ್ಯ ಮೇಲೆ ಬೌಲಿಂಗ್​ ಕೋಚ್​ ಮುನಿಸು; ವಿಡಿಯೊ ವೈರಲ್​​

Sringeri Shankar Mutt
ಮೈಸೂರು14 mins ago

Sringeri Shankar Mutt: ಮೈಸೂರಿನಲ್ಲಿ ಮಾ.30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ

LIC
ದೇಶ1 hour ago

LIC Offices: ವೀಕೆಂಡ್‌ನಲ್ಲೂ ಕಾರ್ಯನಿರ್ವಹಿಸಲಿವೆ ಎಲ್‌ಐಸಿ ಕಚೇರಿಗಳು; ಕಾರಣ ಇಲ್ಲಿದೆ

Dead Body Found in water tank
ಬೀದರ್‌1 hour ago

Dead Body Found : ವಾಟರ್‌ ಟ್ಯಾಂಕರ್‌ನಲ್ಲಿತ್ತು ಕೊಳೆತ ಶವ; ಅದೇ ನೀರು ಕುಡಿದವರು ಕಕ್ಕಾಬಿಕ್ಕಿ

Varthur Santhosh tears
ಬಿಗ್ ಬಾಸ್2 hours ago

Varthur Santhosh: ಟೀಕೆಗಳಿಗೆ ಮನನೊಂದು ಕಣ್ಣೀರಿಟ್ಟ ವರ್ತೂರ್‌ ಸಂತೋಷ್‌!

Lok Sabha Election 2024 Brijesh Chowta declares assets
Lok Sabha Election 20242 hours ago

Lok Sabha Election 2024: ಅವಿವಾಹಿತ ಬ್ರಿಜೇಶ್ ಚೌಟ ಬಳಿ ಇಲ್ಲ ಕೋಟಿ ಕೋಟಿ ಆಸ್ತಿ! ಸಾಲ ಮಾಡಿ ಕಾರು ಖರೀದಿ

Drowned in canal
ದಾವಣಗೆರೆ2 hours ago

Bhadra canal : ಭದ್ರಾ ನಾಲೆಗೆ ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು

Unmukt Chand
ಕ್ರೀಡೆ2 hours ago

Unmukt Chand: ಭಾರತ ತಂಡ ತೊರೆದು ಯುಎಸ್​ಎ ಸೇರಿದ ಉನ್ಮುಕ್ತ್‌ಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಅನುಮಾನ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌