Sunday Read | ಹೊಸ ಪುಸ್ತಕ | ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ - Vistara News

ಕಲೆ/ಸಾಹಿತ್ಯ

Sunday Read | ಹೊಸ ಪುಸ್ತಕ | ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ

ತೆಲುಗಿನ ಮಹಾ ಕಾದಂಬರಿಕಾರ, ಲೇಖಕ ಚಲಂ ಅವರ ಆತ್ಮಕತೆಯನ್ನು ಲಕ್ಕೂರು ಸಿ. ಆನಂದ ಅವರು ಕನ್ನಡಕ್ಕೆ ತಂದಿದ್ದಾರೆ. ಪ್ರೇಮ, ಆತ್ಮಮರುಕ, ಸಹಾನುಭೂತಿ ಎಲ್ಲದರ ಸಂಗಮದಂತಿರುವ ಈ ಹೊಸ ಪುಸ್ತಕ ʼಚಲಂʼನಿಂದ ಆಯ್ದ ಒಂದು ಭಾಗ ಇಲ್ಲಿದೆ.

VISTARANEWS.COM


on

chalam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮದ್ರಾಸಿನ ಸಮುದ್ರದ ತೀರದಲ್ಲಿ ಕುಳಿತಿದ್ದಾರೆ ಒಬ್ಬ ಯುವಕ, ಯುವತಿ.
ಸೂರ್ಯೋದಯಕ್ಕೆ ಎದುರಾಗಿ, ದೂರದಿಂದ ಸೂರ್ಯನು ತನ್ನೊಳಗಿನಿಂದ ತೀರಕ್ಕೆ ಹೊರಳಿಸುತ್ತಿರುವ ಬೆಳಕಿನ ಎಳೆಗಳನ್ನು ನೋಡುತ್ತ, ಇಬ್ಬರೂ ಬಡ ಯುವಕರು, ಲೋಕವೆಂದರೆ ಅಷ್ಟಾಗಿ ತಿಳಿಯದೆ ಯಾರು ಹೇಳುತ್ತಾರೆಂದು ಹುಡುಕುವ ಅಮಾಯಕರು.
“ಹೋಗೋಣವಾ” ಎಂದಳು ಆಕೆ.
“ಹೋಗಬೇಕಾ?” …… ಎಂದನು ಆತ.
ಏಳಲು ಹೋಗಿ, ಇನ್ನೂ ಹತ್ತಿರಕ್ಕೆ ಕುಸಿದು ಬಿದ್ದ ಮರಳಿನಲ್ಲಿ. ಆಕೆಯ ಬೆರಳುಗಳು ಆತನ ಬೆರಳಿನೊಳಗೆ ಸಂಧಿಸಿದವು. ತನ್ನನ್ನು ಲೋಕದಿಂದ ರಕ್ಷಿಸೆಂಬಂತೆ ಕೇಳುತ್ತಿರುವಂತಿದೆ. ಅಷ್ಟೇ ಮತ್ತೆ ಕುಳಿತುಕೊಂಡರು.
“ನೀನು ಹೊರಟು ಹೋಗುವೆಯಾ?” ಕಣ್ಣೀರಿನೊಂದಿಗೆ ತಲೆಯನ್ನು ತಗ್ಗಿಸಿಕೊಂಡಳು ಆಕೆ.
ಸೊಂಟದ ಸುತ್ತಾ ಕೈಯಾಕಿ ಆಕೆಯನ್ನು ತನ್ನೆಡೆಗೆ ಒತ್ತಿಕೊಂಡ. ಆಕೆಯ ತಲೆ ಆತನ ಭುಜವನ್ನು ಮುದ್ದು ಮಾಡುತ್ತಿದೆ. ಪಶ್ಚಿಮದ ಗಾಳಿ ಆಕೆಯ ಜುಟ್ಟಿನೊಂದಿಗೆ ಆತನ ಕತ್ತನ್ನು ಮಧುರವಾಗಿ ಕಚಗುಳಿಯಿಡುತ್ತಿದೆ. ಆತನು ಆಕೆಯ ಮುಖದ ಮೇಲಕ್ಕೆ ಬಗ್ಗಿ ಮೃದುವಾಗಿ ಸೂರ್ಯಕಿರಣವನ್ನು ತೊಲಗಿಸಿ ಮುತ್ತಿಟ್ಟುಕೊಂಡ. ಆಕೆಯ ತುಟಿಗಳು ಅಷ್ಟೊಂದು ನಾಜೂಕಾಗಿ ಆತನ ತುಟಿಗಳ ಕೆಳಗೆ ಕದಲಿದವು. ಇನ್ನು ಆಕೆಯನ್ನು ಸಂರಕ್ಷಿಸುವೆಯೆಂದು (ದೇಹವನಲ್ಲ) ಕೋರಿಕೆಯಿಂದ ಆಕೆಯ ಮನಸನ್ನು ಕೆಡಿಸುವೆನೆಂಬ ಭಯದಿಂದ ನಡುಗಿದ. “ಹೋಗೋಣ ಬಾ” ಎಂದು ಎದ್ದ ದೃಢವಾಗಿ. ಕೈಯಲ್ಲಿ ಕೈಯನ್ನು ಹಿಡಿದುಕೊಂಡು ಇಬ್ಬರೂ ಪಟ್ಟಣದ ಕಡೆ ನಡೆದರು.
“ಯಾವೊತ್ತಿಗೂ ಈ ಕೈಯನ್ನು ಬಿಡಬೇಡ” ಎಂದ ಆತ. ರೋಡಿನ ಪಕ್ಕದಲ್ಲಿರುವ ಗಿಡಗಳ ಮೊನೆಗಳು ಪಕಪಕನೆ ನಕ್ಕವು ವಿಷಾದದಿಂದ. ಅಂದಿನ ಮದ್ರಾಸು ನಗರದ ಒಂಟಿ ಬೀದಿಯಲ್ಲಿ ಏಕಾಂತವಾಗಿ ತಿರುಗಿ ಅಪ್ಪಿಕೊಂಡರು. ಅಂದಿನಿಂದ ಇಂದಿನವರೆಗೂ ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ, ಪರ್ವತದ ಶಿಲೆಗಳ ನೆರಳಲ್ಲಿ, ಹೊಳೆಯ ನೀರಿನ ಮೇಲೆ, ಬಾಗಿರುವ ಗಿಡಗಳ ಕೆಳಗೆ ಸಾಗಿತು.
“ನಿಮ್ಮವರು ನಿನಗೆ ಮದುವೆ ಮಾಡುತ್ತಾರೆ?”
“ಮಾಡುವುದಿಲ್ಲ. ಯಾಕೆ ಮಾಡುತ್ತಾರೆ? ಹೇಗೆ ಮಾಡುತ್ತಾರೆ?”
“ಏನು ಮಾಡುತ್ತೀಯಾ ಮನೆಯಲ್ಲಿ ಕುಳಿತುಕೊಂಡು”
ನೊಂದುಕೊಳ್ಳುತ್ತಾಳೆ ಆಕೆ. “ತಿಳಿಯದಾ?” ಎಂದಳು.
ಅಲೋಚಿಸುತ್ತಿದ್ದಾಳೆ. ಕ್ರಮವಾಗಿ ಆತನ ಕಡೆಗೆ ನೋಡುತ್ತ ಸ್ವಲ್ಪ ದೂರ ನಡೆದಳು. ಮುಖದ ಮೇಲೆ ಬಂದು ಹಿಂದಕ್ಕೆ ಹೋಗುತ್ತಿವೆ ಅಲೆಗಳಂತಹ ಗಿಡಗಳ ನೆರಳುಗಳು. ಈಕೆ ತನಗೆ ದೂರವಾಗಿ ಹೋದರೆ ತಾನು ಹೇಗೆ ಕಾಲ ಕಳೆಯುವುದು?

chalam


“ನಾನು ಬಂದರೆ ನನ್ನನ್ನು ಓದಿಸುವೆಯಾ ಚಲಂ (ವೆಂಕಟಾಚಲಂ)?”
“ತಪ್ಪದೆ ಓದಿಸುತ್ತೇನೆ- ಅಲ್ಲ ನಾನು ಓದು ಹೇಳಿಕೊಡುತ್ತೇನೆ”.
“ಹೇಳುವೆಯಾ? ನಾನು ಡಾಕ್ಟರ್ ಆಗಬೇಕೆಂದಿರುವೆ”.
“ಹ್ಞೂ!!!”
ಈಕೆಗೇನು ವಾಗ್ದಾನ ಮಾಡುತ್ತಿದ್ದೇನೆ, ಇಂಗ್ಲೀಷ್ ಒಂದು ಮಾತೂ ಕೂಡಾ ಬರದ ಈಕೆಗೆ ತಾನು ಬದುಕುವುದು ಹೇಗೆ ಎಂದು ಗೊತ್ತಿರದ ನಾನು, ಈಕೆಯನ್ನು ಡಾಕ್ಟರ್ ಮಾಡುತ್ತೀನಾ?
ಆದರೆ ಸ್ತ್ರೀಯರ ಕುರಿತಾಗಿ, ಮಕ್ಕಳ ಕುರಿತಾಗಿ ಆತನ ಸಾಹಸಕ್ಕೆ ಕೊನೆಯಿಲ್ಲ. ಹಾಗೆ ಕಾಪಾಡುತ್ತಿದ್ದಾನೆ ಈಶ್ವರನು ಇಂದಿನವರೆಗೂ ಕೂಡಾ.
“ಓದಿಸುತ್ತೇನೆ”
ಯಾಕೆ ನಂಬಿದಳು? ಆತನನ್ನು ಈಕೆ. ಇಂದಿಗೂ ಆತನನ್ನು ಯಾಕೆ ನಂಬುತ್ತಾರೆ? ಆಕೆ ಆತನನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಆಕೆ ಸಣ್ಣ ಕೈಗಳ ಮೇಲೆಯೇ ಎಷ್ಟೋ ಜನ ದಿಕ್ಕಿಲದ ಸ್ತ್ರೀಯರು, ಆಪತ್ತಿನಲ್ಲಿರುವವರು, ದುಃಖಿತರು, ಸಮಾಧಾನಕ್ಕಾಗಿ ಹಪತಪಿಸುವವರು, ನನಗೊಬ್ಬ ತಾಯಿ ಇರುವುದಿಲ್ಲವಾ ಎಂದು ಅಳುವವರು, ಈ ಲೋಕದಲ್ಲಿ ಎಲ್ಲಿಯೂ ದಿಕ್ಕೆಂಬುದು ಇಲ್ಲದ ದೀನರು, ಸಮಾಜದ ಬಹಿಷ್ಕೃತರು. ಎಷ್ಟೋ ಜನ ಸ್ತ್ರೀಯರು, ತಾಯಿಯರನ್ನು ಬಿಟ್ಟು ಬಂದ ಮಕ್ಕಳು, ನನ್ನನ್ನು ತೆಗೆದುಕೊಳ್ಳಿ ಎಂದು ಗರ್ಭದಲ್ಲಿಯೇ ಕೈಗಳನ್ನು ಚಾಚುವ ಶಿಶುಗಳು. ಎಷ್ಟೊಂದು ಸಂತೋಷದಲ್ಲಿ ಅವರ ಬದುಕುಗಳು ಒಂದು ದೊಡ್ಡ fulfilment ನಡೆದಂತೆ ತೃಪ್ತಿಪಟ್ಟರು!


ಬೆಳಿಗ್ಗೆ ತೋಟದಲ್ಲಿ ದಾಳಿಂಬೆ ಹೂವಿನ ಗಿಡದ ಕೆಳಗೆ ಧ್ಯಾನದಲ್ಲಿ ಕುಳಿತಿರುವಾಗ ಮತ್ತೆ ಆ ಕೈ ನನ್ನ ಕೈಗಳಿಗೆ ತಗುಲಿತು. ಕಣ್ಣು ತೆರೆದು ನೋಡಿದೆ. ಹೊಸ ಕಣ್ಣುಗಳಿಂದ ಮಾಸಿ ಹೋದ ಸೀರೆ, ಕೆದರಿದ ಜುಟ್ಟು, ಕಿರುನಗೆಯಿಂದ ನಡುಗುತ್ತಿರುವ ತುಟಿಗಳು, ಅಮಾಯಕವಾದ ನೋಟಗಳು.
“ಯಾರೂ? ಯಾರು?”
“ಬಂದಿರುವೆ”
“ಬಂದೆಯಾ? ನಿಜವಾಗಿಯೂ ಬಂದೆಯಾ?” ಎಂದೆ. ಆದರೆ ಧ್ಯಾನದಿಂದ ಇನ್ನೂ ಹೊರಗೆ ಬರದೆ ಮೆದುಳು ಆಗಲೇ ಒರಟು ಆಲೋಚನೆಗಳನ್ನು ಪ್ರಾರಂಭಿಸಿತು. ಅರ್ಥವಾಗುತ್ತಿದೆ ಆಕೆಗೆ, ನಾನು ನಿಂತಿದ್ದೇನೆ. ಆಕೆಯೂ ಕೂಡಾ ನಿಂತಿದ್ದಾಳೆ. ದೂರದಲ್ಲಿ ದುಷ್ಯಂತನ ಸಭೆಯಲ್ಲಿ ಶಕುಂತಲೆಯಂತೆ, ಮಾತುಗಳಿಲ್ಲದೆ ನಡೆಯುತ್ತಿದ್ದೇವೆ. ಆಕೆ ತನ್ನಲ್ಲಿಲ್ಲದ ಉತ್ಸಾಹವನ್ನು ತಂದುಕೊಳ್ಳುತ್ತಿದ್ದಾಳೆ.
“ಬರುವಾಗ ನನ್ನನ್ನು ಉಟ್ಟುಬಟ್ಟೆಯಿಂದ ಕಳುಹಿಸಿದರು. ಹಣ ಕಳುಹಿಸುತ್ತೇನೆಂದರು. ಆದರೆ ಕಳುಹಿಸುತ್ತಾರಾ?” ಸುತ್ತಲೂ ನೋಡಿದಳು.
“ಇಲ್ಲ ನೀನು ಇರುತ್ತೀಯಾ?”
“ಎಷ್ಟೊಂದು ದೊಡ್ಡದಾಗಿದೆಯೋ! ಆದರೆ ಆಕೆ ಯಾರು? ಆಕೆಯೂ ಕೂಡಾ ನಿನ್ನೊಂದಿಗೆ ಇರುತ್ತಾಳಾ?” ನಾನು ಕೇಳಿಸಿಕೊಳ್ಳುತ್ತಿಲ್ಲ.
ಈಕೆಯೊಂದಿಗೆ ಇಲ್ಲಿ ಹೇಗೆ? ಹೇಗೆ?
“ಯಾರು ಇರುತ್ತಾರೆ ಇಲ್ಲಿ ವೆಂಕಟಾಚಲಂ?”
“ನಿನ್ನ ಮನೆಯಲ್ಲವಾ….. ಮಾತನಾಡುತ್ತಿಲ್ಲವೇಕೆ?” ಎನ್ನುತ್ತಾಳೆ ಭಯದಿಂದ.
“ಈ ಊರಿಗೆ ಬಂದ ಮೇಲೆ ನಿನ್ನನ್ನು ಬೇಟಿಯಾಗುವುದಕ್ಕೆ ಎಷ್ಟು ಕಷ್ಟವಾಯಿತೆಂದು ಕೊಂಡೆ?” ಎಂದು ಆಕೆಯನ್ನು ಕೇಳಿದೆ.
“ವೆಂಕಟಾಚಲಂ ಇದ್ದಾನಾ ಎಂದು?”
“ವೆಂಕಟಾಚಲಂ, ವೆಂಕಟಾಚಲಂ?”
“ಯಾರು ನೀನು?”
“ನಾನು ವೊಯ್ಯಿʼʼ
“ಓ !”
“ಎಲ್ಲಿದ್ದಾನೆ?”
“ನನಗೇನು ಗೊತ್ತು ಎಲ್ಲಿದ್ದಾನೋ? ಹಾಗೆ ಹೋಗಿ ಆ ಕಾಡಿನಲ್ಲಿ ಹುಡುಕು” ಎಂದಳು. ನಿರ್ಲಕ್ಷö್ಯವಾಗಿ. ಎಷ್ಟೊಂದು ಅಳು ಬಂತೋ!
ಗಿಡಗಳ ಮೇಲಕ್ಕೆ ಹರಡಿಕೊಂಡಿರುವ ಆ ಮುಂಜಾನೆಯ ಬಿಸಿಲಲ್ಲಿ ಇಬ್ಬರೂ ನಡೆಯುತ್ತಿದ್ದೇವೆ. ಮದ್ರಾಸಿನಲ್ಲಿ ನಾವಿಬ್ಬರು ಎಲ್ಲಿ ಬೇರೆಯಾಗಿ ಬಿಟ್ಟು ಹೋದೆವೋ, ಆ ಕಥೆಯನ್ನು ಮತ್ತೆ ಪಡೆದುಕೊಳ್ಳುವಂತಿದೆ. ಏಕತಾರಿಯನ್ನು ಹಿಡಿದುಕೊಂಡು ಭವಿಷ್ಯತ್ತಿನ ಸಂಗತಿಯನ್ನು ಆಲೋಚಿಸುತ್ತಾ ನಾನು, ನನ್ನ ಕೈಯನ್ನು ಹಿಡಿದುಕೊಂಡು ಎಲ್ಲಿಯೂ ಹಗೆಯಿಲ್ಲದ ವಿಶ್ವಾಸದಿಂದ ಆಗಾಗ ನನ್ನ ಮುಖದ ಕಡೆಗೆ ಪ್ರಶ್ನಾರ್ಥಕವಾಗಿ ನೋಡುತ್ತ ನಡೆಯುತ್ತಿದ್ದಾಳೆ ವೊಯ್ಯಿ. ಇಬ್ಬರೂ ದರಿದ್ರರು. ದಿಕ್ಕಿಲ್ಲದವರು. ಲೋಕ ಬಹಿಷ್ಕೃತರು. ಆದರೆ ಈ ದಿನದಿಂದ ನಮ್ಮ ಬದುಕಿನಲ್ಲಿ ಒಂದು ಉಜ್ವಲವಾದ ಕಾಂತಿಯೊಳಗಿನಿಂದ ನಡೆಯುತ್ತಿರುವೆಯೆಂದು ಗೊತ್ತಿಲ್ಲವಲ್ಲ.
“ನೀನು ಎಲ್ಲಿರುವುದು?”
ಪರಧ್ಯಾನದಲ್ಲಿ ನಾನು “ಹ್ಞೂ” ಎಂದೆ. ಎರಡು ನಿಮಿಷಗಳ ನಂತರ ಆಕೆ.
“ಚಿಟ್ಟಿ, ರವಿ ಎಲ್ಲಿ”
“ತೆನಾಲಿಗೆ ಹೋಗಿದ್ದಾರೆ”
“ಯಾಕೆ?”
“ನಮಗೆ ಯಾರೂ ಈ ಊರಿನಲ್ಲಿ ಮನೆ ಕೊಡುವುದಿಲ್ಲ. ಈಕೆ ನಮ್ಮ ಅಬ್ಬತ್ತೆ. ಈ ತೋಟದವರು ಆಕೆಗೆ ರಕ್ಷಣೆ ಕೊಟ್ಟರು. ಈಕೆ ನಮಗೆ ರಕ್ಷಣೆ ಕೊಟ್ಟಿದ್ದಾಳೆ” ನಾನು ಆಲೋಚಿಸುತ್ತಿದ್ದೇನೆ.
“ನಾನು ಬರುವುದು ನಿನಗೆ ತೊಂದರೇನಾ?”
“ನೀನು ಬರುವುದರಿಂದ ನನ್ನೊಳಗೆ, ಈ ತೋಟದ ಒಳಗೆ ಕಾಂತಿಯೊAದನ್ನು ಬೆಳಗಿಸಿದೆ”.
ತದನಂತರ ಮಾತನಾಡದೆ ಮನೆಗೆ ಬಂದೆವು. ಅಬ್ಬತ್ತೆ ಬಾಗಿಲಲ್ಲಿ ನಿಂತಿದ್ದಾಳೆ.
“ಇವಳೇ ನನ್ನ ವೊಯ್ಯಿ” ಎಂದೆ.
ಅಬ್ಬತ್ತೆ ಆಕೆಯ ಸುತ್ತಾ ಕೈ ಹಾಕಿದಳು.
“ಬಾರಮ್ಮ! ಒಳಗೆ ಬಾ! ನಮ್ಮವನ್ನು ಹೇಳಿದ್ದಾನೆ ನಿನ್ನ ವಿಷಯ”
ಮಾರನೇಯ ದಿನ ವೊಯ್ಯಿಗೆ ಪಾಠಗಳನ್ನು ಹೇಳಲು ಪ್ರಾರಂಭಿಸಿದೆ.


ಅಂದಿನಿಂದ ಪ್ರಾರಂಭವಾಯಿತು ನನ್ನ ಬದುಕಿಗೆಲ್ಲಾ ಉಜ್ವಲವಾದ ಕಾಲ. ನೆನಪು ಮಾಡಿಕೊಳ್ಳೋಣವೆಂದರೆ, ನೆನಪು ಮಾಡಿಕೊಳ್ಳುವುದಕ್ಕೆ ಏನೂ ಇಲ್ಲ. ಅಸಲು ಆನಂದವೆಂದರೆ ಏನು, ಏನು ಇಲ್ಲದೆಯಿರುವುದೇ ಆನಂದ. ಇದರಿಂದ ಆನಂದ ಬಂದಿದೆಯೆಂದರೆ ಅದು ಆನಂದದಲ್ಲಿ ಲೋಪವೆ. ಚಿಕ್ಕ ಮಕ್ಕಳು ಸಂತೋಷದಿಂದ ಕಳೆಯುತ್ತಾರೆ ದಿನಗಳನ್ನು, ಮುಖ್ಯವಾಗಿ ಬೀದಿ ಮಕ್ಕಳು. ಎಲೆಗಳೊಂದಿಗೆ, ಕಡ್ಡಿಗಳೊಂದಿಗೆ, ಕಲ್ಲುಗಳೊಂದಿಗೆ ಕೆಲಸವಿಲ್ಲದೆ ಕಳೆಯುತ್ತಾರೆ ಕ್ಷಣಗಳನ್ನು. ಈಡೆನ್‌ನಲ್ಲಿ ಆಡಂ ಈವ್ ಹಾಗೆಯೆ ಕಳೆದಿರುತ್ತಾರೆ ಬದುಕನ್ನು. Forbidden apple ತಿನ್ನುವವರೆಗೂ.
ಅಬ್ಬತ್ತೆ ಏನು ಬೇಯಿಸಿಡುತ್ತಾಳೋ ಅದನ್ನು ತಿಂದು, ಎಲ್ಲ ನಿದ್ದೆ ಮಾಡುತ್ತಿದ್ದೆವೊ, ಏನು ಮಾತನಾಡಿಕೊಳ್ಳುತ್ತಿದ್ದೆವೊ ನೆನಪಿಲ್ಲ. ಕೆಲವು ಎಕರೆಗಳ ದೊಡ್ಡ ತೋಟದಲ್ಲಿ ಹೂಗಳು, ಹಣ್ಣುಗಳು, ಬೆಚ್ಚಗಾಗಿಸುವ ಬಿಸಿಲು, ಉದಯಿಸುವ ಸೂರ್ಯನಿಗೆ Good bye ಹೇಳುವ ನಕ್ಷತ್ರಗಳು ಇಷ್ಟೇ ನೆನಪು. ತೊಡುವ ಎರಡು ಜೊತೆ ಬಟ್ಟೆಯ ಹೊರತು ನಮಗೆ ಆಸ್ತಿಯಿಲ್ಲ. ಕಾಲೇಜಿಗೆ ಹೋದರೂ ಹೋದಂತಿರುತ್ತಿರಲಿಲ್ಲ. ನನ್ನ ಮನಸು ಆಕೆಯ ಸೀರೆಯ ನೆರಿಗೆಗಳಲ್ಲಿ ಬಚ್ಚಿಟ್ಟುಕೊಂಡಿರುತ್ತಿತ್ತು. ಅಷ್ಟೂ ಹೊತ್ತು ಕಾಲೇಜು ಮುಗಿಯುತ್ತಿರುವಂತೆ, ಯಾವುದಾದರೂ ಗಿಡದ ಕೊಂಬೆಯಲ್ಲಿಯೊ ಕುಳಿತುಕೊಂಡು ನನಗಾಗಿ ಎದುರುನೋಡುವ ಆಕೆಗಾಗಿ ಕೈಗಳೊಳಗೆ ಮುಖವನ್ನು ಹುದುಗಿಸುತ್ತಿದ್ದೆ. ಮನುಷ್ಯ ಸಂಚಾರವಿಲ್ಲದ ಕಾಡಿನಂತಹ ಅಷ್ಟು ದೊಡ್ಡ ತೋಟವನ್ನು ನಮಗಾಗಿಯೇ ನಿರ್ಮಿಸಿರಬಹುದೆಂಬ ಕೃತಜ್ಞತೆಯಿಂದ ತುಂಬಿಹೋಗುತ್ತಿತ್ತು ನನ್ನ ಹೃದಯ. ಇದೆಲ್ಲಾ ನಿಜಾನಾ? ಕನಸಾ? ಇಂತಹ ಆನಂದ ಅಸಲು ಇದೆಯಾ ಪ್ರಪಂಚದಲ್ಲಿ? ಹೀಗೆಯೇ ಇದು ಬಿಡುವುದಕ್ಕೆ ಸಾಧ್ಯನಾ? ಇದಕ್ಕೂ ಮೊದಲು ಅಸಲು ಬದುಕಿರುವೆವಾ? ಎಂದು ಬಣ್ಣದ ನೆರಳಿನಂತಹ ಆಲೋಚನೆಗಳು ಮಾತ್ರ ಬರುತ್ತಿತ್ತು. ಏನನ್ನು ತಿನ್ನುತ್ತಿರುವೆವೊ! ಏನನ್ನು ಉಡುತ್ತಿರುವೆವೊ ನೆನಪಿಲ್ಲ;
ಒಂದು ದಿನ ಪ್ರಿನ್ಸಿಪಾಲ್ ನನ್ನನ್ನು ಕರೆದು, “ಏನು ಈ ಬಟ್ಟೆಗಳು? ನಿನ್ನನ್ನು ಪಾಠ ಹೇಳಲು ಹೇಗೆ ಕ್ಲಾಸ್‌ಗೆ ಕಳುಹಿಸಲಿ?ʼʼ ಎಂದು ಕೇಳುವವರೆಗೂ, ಅಲ್ಲಿಯವರೆಗೂ ನನಗೆ ಪೂರ್ತಿಯಾಗಿ ಅರ್ಥವಾಗಲಿಲ್ಲ.
“ಬದಲಾಯಿಸಬೇಕಾ? ಯಾಕೆ? ಹೇಗೆ ಬದಲಾಯಿಸಬೇಕು?” ಎಂದು ಕೇಳಿದೆ.
ಆತ ಜಂಟಲ್‌ಮನ್‌, ನನ್ನ ಕುರಿತು ದಯೆ ಇರುವವನು. “ನನಗೆ ಅದೆಲ್ಲಾ ಗೊತ್ತಿಲ್ಲ. ನೀನು ಬದಲಾಯಿಸಿಕೊಳ್ಳಬೇಕು” ಎಂದು ಹೊರಟು ಹೋದರು.
ಒಂದು ದಿನ ಕಾಲೇಜಿಗೆ ಹೋದ ನಂತರ ಕಾಲೇಜಿಗೆ ರಜೆ ಎಂದರು. ಪೂರ್ವ ಸಿದ್ಧತೆಯಿಲ್ಲದೆ, ಆಕಸ್ಮಾತ್ತಾಗಿ ಮನೆಗೆ ಬಂದೆ. ಮನೆಯೊಳಗಿನಿಂದ ಅಬ್ಬತ್ತೆಯ ಅಳು ಕೇಳಿಸಿತು. ನಿಂತು ಕೇಳಿದೆ. ಅದು ತನ್ನ ಸ್ವಂತ ದುಃಖ, ನಡು-ನಡುವೆ ಯಾರನ್ನೋ ಬಯ್ಯುತ್ತಿದ್ದಾಳೆ. ಇದಕ್ಕೂ ಮೊದಲು ಆಗಾಗ ಅಳುತ್ತಿದ್ದರೂ, ನಾನು ವೊಯ್ಯಿ ಹೋಗಿ ನಮ್ಮ-ನಮ್ಮ ಸಂತೋಷಗಳಿಂದ ಆಕೆಯನ್ನು ನಗಿಸುತ್ತಿದ್ದೇವು. ವೊಯ್ಯಿ ಹೇಳುತ್ತಿದ್ದಳು. ನಾನು ಇಲ್ಲದೆಯಿರುವಾಗ ಆಗಾಗ ಹೀಗೆ ಅಳುತ್ತಿರುತ್ತಾಳೆ. ಲೋಕವನ್ನೆಲ್ಲಾ ಮರೆತರೆ ಮರೆಯುತ್ತೇನೆ. ಆದರೆ ಯಾರೊಂದಿಗೆ ಬದುಕುತ್ತಿರುವೆವೊ ಆ ಅಬ್ಬತ್ತೆಯನ್ನು, ಕಮಲಳನ್ನು ಮರೆತು ತಿರುಗುತ್ತಿರುವೆಯೆಂದು ನನಗೆ ತುಂಬಾ ನಾಚಿಕೆಯಾಯಿತು. ಗಬಗಬನೆ ಓಡುತ್ತ ಹೋಗಿ ಅಬ್ಬತ್ತೆಯ ಕತ್ತನ್ನು ತಲೆಯನ್ನು ತಬ್ಬಿಕೊಂಡೆ.
“ಯಾಕೆ ಅಬ್ಬತ್ತೆ, ಏನಿದು?”
“ಏನೂ ಇಲ್ಲ ಬಿಡಪ್ಪ” ಎಂದು ಕಣ್ಣನ್ನು ಒರೆಸಿಕೊಂಡಳು.
“ಏನಿದು ದುಃಖ? ಹೇಳು ಅತ್ತೆ”
ಅಷ್ಟೊಂದು ಉಕ್ಕಿ ಬರುವ ಆನಂದದಲ್ಲಿ ಬದುಕುತ್ತಿದ್ದ ನಾನು ಇನ್ನೊಬ್ಬರ ಕಷ್ಟವನ್ನು ಒಳಗೆ ತೆಗೆದುಕೊಳ್ಳಲಾರದೆ ಹೋದೆ. ಲೋಕವೆಲ್ಲಾ ಆನಂದದಿಂದ ಕಾಣಿಸುತ್ತಿದೆ” ಒಂದು ಹೊತ್ತು ಅಬ್ಬತ್ತೆ ಊಟ ಮಾಡಿ ಬಡಿಸದೆ ಹೋದರೆ, ಕಮಲ ಸ್ನಾನಕ್ಕೆ ನೀರು ಇಡದೇ ಹೋದರೆ, ತಿಳಿಯುತ್ತಿತ್ತು ನನ್ನ ಆನಂದ ಎಂತಹದೆAದು. ಈ ಗಾಳಿ, ಬಿಸಿಲು, ಹಗಲು, ರಾತ್ರಿ, ಗಿಡಗಳು ನೆರಳು, ಬೆಳದಿಂಗಳು ಎಲ್ಲವನ್ನು ಪ್ರಶ್ನೆಯಿಲ್ಲದೆ ಅನುಭವಿಸುತ್ತ, ಯಾವ ಒಂದರಲ್ಲಿ ಯಾವ ಲೋಪ ಬಂದರೂ ಬಯ್ಯಲು ಪ್ರಾರಂಭಿಸುತ್ತೇವೆ. ವಿಧಿಯನ್ನೋ, ವಿಧಾತನನ್ನೋ, ಎಷ್ಟೊಂದು ದೊಡ್ಡದಾದ ಈ ಲೋಕದಲ್ಲಿ ಶೃಂಗಾರಕ್ಕೆ ಹಿಡಿದು ತುಂಬಾ ದೊಡ್ಡ ಲೋಪವಿದು. ಪ್ರಿಯರು ಒಬ್ಬರಲ್ಲಿ ಒಬ್ಬರು ತನ್ಮಯರಾಗಿರುವಾಗ ಈ ಲೋಕವನ್ನೇ ಮರೆಯುತ್ತಾರೆ. ಹಾಗೆ ಮರೆಯದೆ ಹೋದರೆ ಅದು ದೊಡ್ಡ ಶೃಂಗಾರವಾಗುವುದಿಲ್ಲ.
ಆ ಬೆಳಗ್ಗೆ ಇಷ್ಟೊಂದು ಆನಂದಮಯವಾದ ಕಾಲದಲ್ಲಿ ಅಬ್ಬತ್ತೆ ಯಾಕೆ ಅಳುತ್ತಿರುವಳೆಂದು ನನಗೆ ಆಶ್ಚರ್ಯವಾಯಿತು. ಆಸ್ತಿಯೆಲ್ಲಾ ಹೋಗಿ ಲೋಕದಲ್ಲಿ ಎಲ್ಲಿಯೂ ದಿಕ್ಕಿಲ್ಲದೆ, ಮುಂದೆ ತನ್ನ ಜೀವನ ಏನಾಗುತ್ತದೆಯೋ ತಿಳಿಯದೆ ಬೆಳೆಯುತ್ತಿರುವ ಕಮಲಳನ್ನು ಏನು ಮಾಡಬೇಕೆಂದು ಅರ್ಥವಾಗದೆ ಹಾಗೆ ಕುಗ್ಗಿ ಹೋಗುತ್ತಿದ್ದರೆ ನನಗೆ ಆಶ್ಚರ್ಯ. ನಾನು ಮನೆಗೆ ಬರುವಾಗ ಹೋಗುವಾಗ ನನ್ನಿಂದ ಒಂದು ಸಣ್ಣ ದಯೆಯಿರುವ ಮಾತಿಗೆ ಬಾಗಿಲು ಹಿಡಿದುಕೊಂಡು ಎದುರು ನೋಡುತ್ತ ನಿಂತಿರುವ ಕಮಲಳ ಕಡೆಗೆ ನಾನು ಕಣ್ಣೆತ್ತಿ ನೋಡಿದೆನಾ? ಅಬ್ಬತ್ತೆಗೆ ನಮ್ಮ ಮೇಲಿನ ನಿರ್ವಾಜ್ಯ ಕರುಣೆಗೆ ಯಾವಾಗಲಾದರು ಎದುರು ಮಾತನಾಡಿದೆನಾ? ಆದರೂ ನನ್ನ ಜೀವನದಲ್ಲಿ ಬಹುದೊಡ್ಡ ಕಾಲವದು.
ಮತ್ತೆ ಮೊದಲು ಜಾರಿಬೀಳುವ ನಕ್ಷತ್ರಗಳ ಕಾಂತಿ. ಬೆಳದಿಂಗಳಲ್ಲಿ ಗುರುತಿಲ್ಲದೆ ಕರಗಿ ಹೋಗುವಂತೆ ನಮ್ಮ ಕಾಲವೆಲ್ಲಾ ಪ್ರೀತಿಯ ಮಾಧುರ್ಯದಲ್ಲಿ ತೇಲಿ ಹೋಯಿತು. ಆದರೆ ಎಷ್ಟು ಕಾಲ ಸಾಗುತ್ತದೆ? ನನ್ನ ಕಾಲೇಜಿನ ಪರೀಕ್ಷೆ ಮುಗಿಯುತ್ತಿರುವಂತೆ ನಾನು ಮೊಯ್ಯಿ ಹೊರಟು ಹೋಗಬೇಕು. ಅತ್ತ ತದನಂತರ ಅಬ್ಬತ್ತೆ ಏನಾಗುತ್ತಾಳೆ? ಎಂಬ ಆಲೋಚನೆಯಿಲ್ಲ. ಆ ಮುಂಜಾನೆ ಆಲೋಚಿಸುವುದು ತಪ್ಪಲಿಲ್ಲ. ನಾನೂ ವೊಯ್ಯಿ ಊಟ ಮಾಡುತ್ತಿದ್ದೇವೆ. ನಾವು ಏನು ತಿನ್ನುತ್ತಿರುವೆಂದು ನಮಗೆ ನೆನಪಿಲ್ಲ. ಕಿರುನಗೆಯಿಂದ ಬಡಿಸುತ್ತಿದ್ದಾಳೆ ಕಮಲ ನಮ್ಮ ಸಂತೋಷವನ್ನೆ ತನ್ನ ಸಂತೋಷ ಮಾಡಿಕೊಂಡು ಎಷ್ಟು ಹೊತ್ತಿಗೋ ನಮ್ಮ ನೋಟ ನಮ್ಮ ಸುತ್ತಲಿರುವ ತೋಟದ ಮೇಲೆ ನೆನ್ನೆ ರಾತ್ರಿ ಸುರಿದ ಮಳೆಯ ಹನಿಗಳು ಬಿಸಿಲಿನಲ್ಲಿ ಹೊಳೆಯುತ್ತ ಗಾಳಿಯಲ್ಲಿ ತಣ್ಣಗೆ ಎಲೆಗಳ ಮೇಲೆಯಿಂದ ಜಾರಿಹೋಗುತ್ತಿವೆ. ಇನ್ನೂ ಬರಲಿಲ್ಲವಲ್ಲಾ? ಎಂಬ ಕೇಕೆಗಳು ಮಾಡುತ್ತಿವೆ ಪಕ್ಷಿಗಳು ಕಮಲ ಭಯದಿಂದ “ಈ ಹೊತ್ತಿಗೆ ಈ ಸಾರು, ಮಜ್ಜಿಗೆ” ಎಂದಳು.
ತಲೆಯೆತ್ತಿ ನೋಡಿದೆ, ಏನೋ ಹೇಳುತ್ತಿದ್ದಾಳೆ.
“ಪಲ್ಯ ಮಾಡಲಿಲ್ಲ”
“ಪಲ್ಯ? ಪಲ್ಯ ಇಲ್ಲದಿದ್ದರೇನಂತೆ?” ಎಂದಳು ವೊಯ್ಯಿ.
ಮಜ್ಜಿಗೆ ಅನ್ನದ ಕೈಯನ್ನು ತೊಳೆದುಕೊಂಡು ತೋಟದ ಒಳಗೆ ಓಡಿದೆವು.

ಇದನ್ನೂ ಓದಿ: Sunday Read | ಹೊಸ ಪುಸ್ತಕ: ದೇವರಿಲ್ಲದ ವಾಡೆಯಲ್ಲಿ ಭೂತಮಾತೆಯ ಸ್ವಗತ
“ಪಲ್ಯಕ್ಕೆ ಬೇಕಾದ ಸೊಪ್ಪು ಕೊಳ್ಳಲು ಅವರ ಬಳಿ ಹಣವಿಲ್ಲ” ಎಂದಳು ವೊಯ್ಯಿ.
ಎಷ್ಟೊಂದು ಕುರುಡ ನಾನು. ನಮ್ಮೀಬ್ಬರಿಗೆ ಯಾಕೆ ಊಟವಿಡುತ್ತಾಳೆ ಅಬ್ಬತ್ತೆ? ಯಾಕಿಡಬೇಕು ಆಕೆ? ನಮ್ಮಿಂದ ಹಣವಿಲ್ಲ. ಸರಿ, ಒಂದು ಒಳ್ಳೇಯ ಮಾತು, ಒಂದು ಕಿರುನಗೆಯೂ ಕೂಡಾ! ತಕ್ಷಣ ಏನೇನೋ ನೆನಪಿಗೆ ಬಂದು ದೊಡ್ಡ ಪಶ್ಚಾತ್ತಾಪದಿಂದ ಅಬ್ಬತ್ತೆಯ ಬಳಿಗೆ ಓಡಿದೆ. ನಾವು ಹೋಗಿ ನೋಡುವ ಹೊತ್ತಿಗೆ ಅರ್ಧ ತಿಂದ ಸಾರು. ಅನ್ನ ತಟ್ಟೆಯ ಮುಂದೆ ಇಟ್ಟುಕೊಂಡು ನಿಶ್ಯಬ್ಧವಾಗಿ ಅಳುತ್ತಿದದ್ದಾಳೆ. ಆ ತಟ್ಟೆ ಒಂದು ಬಟ್ಟಲು ನಾನು ಎಷ್ಟು ಗೋಗೆರೆದರೂ ಅಳು ನಿಲ್ಲಿಸಲಿಲ್ಲ ಎಷ್ಟು ಆಕೆ ಪ್ರಯತ್ನಿಸಿದರೂ ಅಳುವನ್ನು ನಿಲ್ಲಿಸಲಾಗುತ್ತಿಲ್ಲ. ಆಕೆಗೆ, ಕೊನೆಗೆ “ನೋಡಪ್ಪ! ಸಮಯ ಬರುವ ಹೊತ್ತಿಗೆ ನನ್ನ ಬಳಿಗೆ ಸೇರಿದ ನನ್ನ ಸೋದರಳಿಯನಿಗೆ ತಿಂಡಿ ಇಡುವುದಕ್ಕೂ ಕೂಡಾ ಏನೂ ಇಲ್ಲದಂತೆ ಮಾಡಿದನವನು”.
ಅವನೆಂದರೆ ತನ್ನ ಆಸ್ತಿಯನ್ನೆಲ್ಲಾ ಕಬಳಿಸಿದ ಆ ಮೂರನೇಯ ಗಂಡ. ಅಷ್ಟೊಂದು ಆಸ್ತಿಯನ್ನು ಈಕೆಯ ಅನುಮತಿಯಿಲ್ಲದೆ ಆತ ಹೇಗೆ ಕಬಳಿಸಿದನೋ ಯಾರಿಗೂ ಗೊತ್ತಿಲ್ಲ!
ಬಿಡುವಾಗಿ ಕುಳಿತುಕೊಂಡು ವಿರಾಮವಾಗಿ ಸುತ್ತಲೂ ನೋಡಿದೆ.
“ನಿನ್ನ ಹತ್ತಿರ ಹಣವಿಲ್ಲವೇ ಅಬ್ಬತ್ತೆ?”
“ನಿನಗೇಕೆ ತಂದೆ ಈ ತಗಾದೆಯಲ್ಲಾ” ಎಂದಳು. ನನಗೆ ಗಟ್ಟಿಯಾದ ಅನುಮಾನ ವುಂಟಾಗಿ, ಕಮಲಳನ್ನು ಕೇಳಿ, ತಿಳಿದುಕೊಂಡೆ. ಕ್ರಮವಾಗಿ ಅಬ್ಬತ್ತೆ ಅಡುಗೆಯ ಬಟ್ಟಲುಗಳನ್ನು ಮಾರಿಕೊಳ್ಳುತ್ತಾಳೆ. ಅದರ ಬದಲಾಗಿ ಮಣ್ಣಿನ ಪಾತ್ರೆಗಳನ್ನು ಕೊಂಡು ಕೊಳ್ಳುತ್ತಾಳೆ. ನಮ್ಮಿಬ್ಬರಿಗೆ ಒಳ್ಳೇಯ ಊಟವನ್ನಿಟ್ಟು ತಾನು, ಕಮಲ ಸಾರು, ಗಂಜಿಯನ್ನು ಸುರಿದುಕೊಂಡು ತಿನ್ನುತ್ತಿದ್ದಾರೆ. ಆಕೆ ಬರುವ ಅಳಿಯನಿಗೆ ವರದಕ್ಷಿಣೆಗೆಂದು ನಾಯ್ಡು ರವರು ಆಕೆಯ ನಗಾನಾಣ್ಯಗಳನ್ನು ಭದ್ರಪಡಿಸಿದ್ದಾರೆ. ಪ್ರತಿ ತಿಂಗಳೂ ಇಬ್ಬರಿಗೂ ಸರಿ ಹೊಂದುವ ಅಕ್ಕಿಯ ಖರ್ಚನ್ನು ಕೊಡುತ್ತಾರಂತೆ. ಮೂರು ಮದುವೆಗಳ್ಳನ್ನಾದ ಆಕೆಯ ನೈತಿಕ ನಿಲುವು ಆತನ ದೃಷ್ಟಿಯಲ್ಲಿ ಅಷ್ಟೇ ಇರಬಹುದು. ನನ್ನ ಸಂಪಾದನೆ ರೂ.೧೫, ಆಕೆಗೆ ಸ್ವಲ್ಪ ಕೊಡಲು ಹೋದೆ. “ಯಾಕಪ್ಪಾ” ಇವು ನನಗೆ? ನನ್ನ ಸೋದರಳಿಯನಿಗೆ ತಿಂಡಿಯನ್ನೂ ಕೂಡಾ ಕೊಡಲಾಗದ ದರಿದ್ರದ ಮುಂಡೆಯಾಗಿ ಮಾಡಿಟ್ಟ ಆ ಮುಂಡೆಮಗ. ಇದನ್ನೆಲ್ಲಾ ಅವನಿಂದ ಪಡದೇ ಪಡೆಯುತ್ತೇನೆ. ನೀನು ಯಾಕೆ ಕೊಡುವುದು? ನಿನಗೆಷ್ಟಿದೆ? ಎಂದು ನನ್ನ ಭುಜದ ಮೇಲೆ ಬಿದ್ದು ಅತ್ತಳು. ಅಂದಿನಿಂದ ಯಾವುದೋ ಒಂದು ಸಮಯದಲ್ಲಿ ಪ್ರತಿದಿನ ಅಳುತ್ತಿದ್ದಳು. ನಾನು ಪ್ರತಿ ಸಾರಿ ಮುದ್ದು ಮಾಡಿ, ತಲೆನೆವರಿ ಸಮಾಧಾನಗೊಳಿಸುವವರೆಗೂ ಅಳುತ್ತಿದ್ದಳು.
“ಅಳಬೇಡ ಅಬ್ಬತ್ತೆ! ಡಿಗ್ರಿ ಮುಗಿಯುತ್ತಿರುವಂತೆ ನಿನ್ನನ್ನು ನನ್ನ ಹತ್ತಿರವಿಟ್ಟುಕೊಂಡು ಹಾಯಾಗಿರಿಸುತ್ತೇನೆ”.
“ನಿಜಾನಾ ತಂದೆ!” ಎನ್ನುತ್ತಿದ್ದಳು.
ತನ್ನ ಕಷ್ಟಗಳು ಬಗೆಹರಿದವೆಂದಲ್ಲ. ನನ್ನೊಂದಿಗೆ ತನ್ನ ಉನ್ನತವಾದ ಭವಿಷ್ಯತ್ತನ್ನು eಟಿರಿoಥಿ ಮಾಡುತ್ತಿರುವಂತೆ, ನನ್ನ ಜೀವನದಲ್ಲಿ ನನಗೆ ನಾನು ಮಾಡಿಕೊಳ್ಳಬೇಕೆಂದಿರುವಲ್ಲಿ ಇತರರಿಗೆ ಮಾಡಬೇಕೆಂದಿರುವುಗಳಲ್ಲಿ ತುಂಬಾ ಮಟ್ಟಿಗೆ ನೆರವೇರಲಿಲ್ಲ. ಆದರೆ ಅಬ್ಬತ್ತೆ ವಿಷಯದಲ್ಲಿ ನಾನೂ ವೊಯ್ಯಿ ಇಷ್ಟರಲ್ಲಿಯೇ ಎಷ್ಟು ಸಾರಿ ಉಪಕಾರ ಮಾಡಲಾದಿತೋ ನೆನಪಿಸಿಕೊಂಡು ಆಶ್ಚರ್ಯವಾಗುತ್ತದೆ.


ಚಳಿಗಾಲ ಬರುತ್ತಿದೆ. ಕೋಗಿಲೆಗಳು ಹವೆಯ ಪ್ರದೇಶಗಳಿಗೆ ಹೊರಟು ಹೋಗಿವೆ. ಮುಂಜಾನೆಯೆ ಪಾರಿಜಾತ ಹೂಗಳು ಬಿಳಿಯಾಗಿ ಗಿಡದ ಕೆಳಗೆ ಹರಡಿಕೊಂಡಿವೆ. ಚಿಗುರು ಬೆಳದಿಂಗಳು ಸೂಸುತ್ತಿದೆ. ದೂರದಲ್ಲಿ ಊರಿನಿಂದ ಪಟಾಕಿಗಳ ಸದ್ದು ಕೇಳಿ ಬರುತ್ತಿದೆ. ಗಿಡಗಳ, ಮೇಲೆ ಸೀತಾಫಲಗಳು ಬಿರಿದುಕೊಳ್ಳುತ್ತಿವೆ. ಮತ್ತೆ ನಮ್ಮ ಸಂತೋಷದಲ್ಲಿ ಎಲ್ಲವನ್ನು ಮರೆತು ಹೋದೆವು. ಗಿಡಗಳ ಕೊಂಬೆಗಳ ಮೇಲೆ ಮಲಗಿಕೊಂಡು ಮೇಲಕ್ಕೆ ನೋಡುತ್ತಿದ್ದರೆ ತೇಜೋವಂತನಾದ ಆ ನೀಲಿಯೆಲ್ಲಾ ಕಣ್ಣುಗಳು ಕಲ್ಪಿಸಿಕೊಂಡಿರುವ ಭ್ರಮೆಯೇನಾ? ಅಲ್ಲಿ ಏನೂ ಇಲ್ಲವಾ? ಎಂದು ಆಶ್ಚರ್ಯವಾಗುತ್ತದೆ. ಇಷ್ಟರಲ್ಲಿ ಒಂದು ದಿನ ಅಬ್ಬತ್ತೆ ಆಕಸ್ಮಾತ್ತಾಗಿ “ಇನ್ನು ಸಾಕು ಹೊರಟು ಹೋಗಿಯಪ್ಪ” ಎಂದಳು. ಸಿಡಿಲು ಬಡಿದಂತೆ ಅಲ್ಲಿಯೇ ಕುಸಿದುಬಿದ್ದೆ. ಕಾರಣವೇನೆಂದು ಆಲೋಚಿಸಲಿಲ್ಲ. ಈಗ ಎಲ್ಲಿಗೆ ಹೋಗುವುದು? ನನಗೆ ಮನೆ ಯಾರು ಕೊಡುತ್ತಾರೆ? ತಿಂಡಿ ಯಾರು ಇಡುತ್ತಾರೆ. ತೋಟದೊಳಗೆ ಹೋಗಿ ವೊಯ್ಯಿಗೆ ಹೇಳಿದೆ.
“ಇಷ್ಟೇನಾ! ಯಾವುದಾದರೂ ಗುಡಿಸಲಿಗೆ ಹೋಗೋಣ” ಎಂದಳು.
“ರವಿ ಬರುತ್ತಿರುವನೆಂದು ಭಯಪಟ್ಟಳೇನೊ’ ಹೌದು ರವಿ ಬರುತ್ತಿದ್ದಾನೆಂದು ಪತ್ರ ಬಂದಿತು. ಒಳ್ಳೇಯ ಮಾತು ಹೇಳಿದೆಯೆಂದು ಅರ್ಧಗಂಟೆಯಲ್ಲಿ ಹೊರಗಡೆಗೆ ಹೋಗಿ, ಲಕ್ಷ್ಮಿವಾರಪೇಟೆಯಲ್ಲಿ, ಹೊಲೆಯರ ಗುಡಿಸಲಿನಲ್ಲಿ ಖಾಲಿಯಿರುವ ಕುಟೀರವೊಂದು ಏರ್ಪಡಿಸಿಕೊಂಡು ಬಂದೆನು. ನಮಗೇನಾದರು ಸಾಮಾನುಗಳಾ? ಏನಾದರೂನಾ? ಎರಡು ಬಟ್ಟೆಗಳು ಎರಡು ಪುಸ್ತಕಗಳನ್ನು ಹಿಡಿದುಕೊಂಡು ನಗುತ್ತಾ.
“ಹೋಗುತ್ತಿದ್ದೇವೆ ಅಬ್ಬತ್ತೆ” ಎಂದು ಹೇಳಿ ಹೊರಟು ಹೋದೆವು.
ಕಣ್ಣೀರಿನೊಂದಿಗೆ ನಮ್ಮ ಕಮಲ ನಮ್ಮ ಕಡೆಗೆ ಹಾಗೆಯೇ ನೋಡುತ್ತ ನಿಂತಿದ್ದಳು. ನಮ್ಮ ಮನೆಯ ಪಕ್ಕದಲ್ಲಿಯೆ ನಮ್ಮ ಕ್ಯಾಂಟೀನು, ಮುಂಜಾನೆಯ ಹೊತ್ತಿಗೆಲ್ಲಾ, ದಮ್ಮಡಿಗೆ ಒಂದು ಸಣ್ಣ ಇಡ್ಲಿ. ಒಂದು ಪಾವ್ ಬಜ್ಜಿ ತಿನ್ನುತ್ತಿದ್ದೆವು. ಮತ್ತೆ ನಾನು ಕಾಲೇಜಿಗೆ, ವೊಯ್ಯಿ ಸ್ಕೂಲಿಗೆ ಹೋಗುವ ಮೊದಲು ಗೋದಾವರಿ ರೈಲ್ವೆ ಸ್ಟೇಷನ್‌ನ ರೋಡ್ ಪಕ್ಕದಲ್ಲಿ ಮಾರುವ ಉದ್ದಿನ ರೊಟ್ಟಿಯ ಎರಡು ಚೂರುಗಳನ್ನು ತಿನ್ನುತ್ತಿದ್ದೆವು. ರವಿಗೆ ಇಡುತ್ತಿದ್ದೆವು.

ಕೃತಿ: ಚಲಂ (ಆತ್ಮಕತೆ)

ಮೂಲ ಲೇಖಕ: ವೆಂಕಟಾಚಲಂ, ತೆಲುಗು

ಅನುವಾದ: ಲಕ್ಕೂರು ಸಿ. ಆನಂದ

ಪ್ರಕಾಶನ: ಸೃಷ್ಟಿ ಪ್ರಕಾಶನ, ಬೆಂಗಳೂರು

ಪುಟ 360, ಬೆಲೆ 350 ರೂ.

ಇದನ್ನೂ ಓದಿ: ಹೊಸ ಪುಸ್ತಕ | ಇಂಗ್ಲಿಷ್‌ ನಾಮಫಲಕ ತೆಗೆಯಿರಿ ಎಂದು ಬಿಎಂಶ್ರೀಗೆ ಹೇಳಿದ ದಿಟ್ಟ ವ್ಯಕ್ತಿ ಇವರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ದಶಮುಖ ಅಂಕಣ: ಮಳೆಯ ನಡುವೆ ಮರಳಿ ಶಾಲೆಗೆ!

ದಶಮುಖ ಅಂಕಣ: ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ.

VISTARANEWS.COM


on

ದಶಮುಖ back to school
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಶಾಲೆಗಳು (School) ಪ್ರಾರಂಭವಾಗಿ ಕೆಲದಿನಗಳಾಗಿವೆ. ಬಣ್ಣದ ಚಿಟ್ಟೆಗಳಂತೆ ಹಾರಾಡುತ್ತಾ ಶಾಲೆಯ ದಾರಿ ಹಿಡಿದಿರುವ (Back to School) ಮಕ್ಕಳನ್ನು (Children) ಕಾಣುತ್ತಿದ್ದಂತೆ ಮನಸ್ಸು ತುಂಬಿ ಬರುತ್ತದೆ. ಬೇಸಿಗೆ (Summer holidays) ರಜೆಯಲ್ಲಿ ಅವರೇನೇ ಮಾಡಿದರೂ, ಮಾಡದಿದ್ದರೂ… ರಜೆ ಕಳೆದಿದ್ದಂತೂ ಹೌದು. ಈಗ ಮರಳಿ ಶಾಲೆಗೆ. ಬಹುಪಾಲು ಮಕ್ಕಳು ಶಾಲೆಗೆ ಮರಳಿ ಹೋಗುತ್ತಿದ್ದರೆ, ಒಂದಿಷ್ಟು ಪುಟಾಣಿಗಳು ಮೊದಲ ಬಾರಿಗೆ ಶಾಲೆಗೆ ಹೋಗುವವರು. ಶಾಲೆಯ ಹಾದಿ ಹಿಡಿದಿರುವ ತಂತಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ತುಂಬಿಸಿಟ್ಟಿದ್ದಾರೆ. ಸಮವಸ್ತ್ರ (Uniform) ಹಾಕಿ ಹೊರಟವರು, ಅದಿನ್ನೂ ದೊರೆಯದೆ ಬಣ್ಣದ ಬಟ್ಟೆಗಳಲ್ಲೇ ಹೊರಟವರು, ಅಕ್ಕ-ಅಣ್ಣನ ಕೈ ಹಿಡಿದು ನಿಂತವರು, ಹೋಗಲು ಮನಸ್ಸಿಲ್ಲದ ಪೆಚ್ಚ ಮೋರೆಯವರು, ಫೋಟೊ ಇಷ್ಟವಿಲ್ಲದ ಗಂಭೀರ ಭಾವದವರು, ರಜೆಯ ಬೋರು ಕಳೆದ ಬಿಡುಗಡೆಯ ಭಾವದವರು, ಮೊದಲ ಬಾರಿಗೆ ಹೊರಟ ಅಳು ಮೋರೆಯವರು… ಅಂತೂ ಸಂಭ್ರಮ, ನಗು, ದುಗುಡ, ಆತಂಕ, ಅಳು ಮುಂತಾದ ಹಲವಾರು ಭಾವಗಳನ್ನು ಹೊತ್ತ ಪುಟ್ಟ ಬೊಂಬೆಗಳಂತೆ ಅವರೆಲ್ಲ ಕಂಡುಬರುತ್ತಾರೆ.

ಇದೇನು ಹೊಸದಲ್ಲ, ಪ್ರತಿವರ್ಷವೂ ಕಾಣುವಂಥದ್ದು. ಇವೆಲ್ಲ ಎಷ್ಟು ಹಳೆಯದ್ದೆಂದರೆ, ಬಾಲ್ಯದಲ್ಲಿ ನಾವೂ ಇದನ್ನೇ ಮಾಡಿದ್ದೆವಲ್ಲ ಎನಿಸಬಹುದು. ಶಾಲೆಗೆ ಹೋಗುವಾಗ ನಮಗೆಲ್ಲ ಈಗಿನಂತೆ ಪ್ರೀಸ್ಕೂಲ್‌ಗಳೆಲ್ಲ ಇರಲಿಲ್ಲ. ನೇರವಾಗಿ ಕಿಂಡರ್‌ಗಾರ್ಟ್‌ನ್‌ಗೆ ಹೋಗುವುದಾಗಿತ್ತು. ಅದಕ್ಕೆ ಬರುವವರೂ ಕಡಿಮೆಯೇ. ಒಂದನೇ ತರಗತಿಗೆ ಹೋದರೆ ಸಾಲದೇ ಎಂಬ ಮನಸ್ಥಿತಿ ಹಲವರಿಗಿತ್ತು ಆಗ. ಮನೆಯೊಂದನ್ನು ಶಾಲೆಯಾಗಿ ಮಾಡಿ, ನಮ್ಮ ಬಾಲವಾಡಿಯನ್ನು ನಡೆಸಲಾಗುತ್ತಿತ್ತು. ಬಾಲವಾಡಿಗೆ ಹೋದ ಮೊದಲ ದಿನ ನಾವೊಂದಿಷ್ಟು ಜನ ನಗುನಗುತ್ತಲೇ ಇದ್ದೆವು. ಆದರೆ ಇನ್ನೊಂದಿಷ್ಟು ಮಕ್ಕಳು ಚೀರಾಡಿ, ಭೋರಾಡಿ, ಉರುಳಾಡಿ, ಘಟ್ಟಿಸಿಕೊಂಡು ಅತ್ತಿದ್ದರು. ಸಮಾಧಾನ ಮಾಡುವ ಸಲುವಾಗಿ ಅವರಿಗೆಲ್ಲ ಒಂದೊಂದು ನಿಂಬೆಹುಳಿ ಪೆಪ್ಪರಮಿಂಟ್‌ ಸಿಕ್ಕಿದ್ದವು. ಮಾರನೇ ದಿನ ಅತ್ತವರ ಸಂಖ್ಯೆ ಹೆಚ್ಚಾಗಿತ್ತು, ನನ್ನನ್ನೂ ಸೇರಿ!

ನಮ್ಮ ಬಾಲವಾಡಿಯಲ್ಲಿ ಸಹಾಯಕ್ಕಿದ್ದವರನ್ನೂ ಸೇರಿಸಿದರೆ ಒಟ್ಟೂ ನಾಲ್ವರು ಸಿಬ್ಬಂದಿ ಇದ್ದರು. ಪಂಕಜಾ ಮಿಸ್‌, ಫಿರ್ದೂಸ್‌ ಮಿಸ್‌, ಸುಶೀಲಮ್ಮ ಆಂಟಿ ಮತ್ತು ಆಯಮ್ಮ ಆಂಟಿ- ಇವರಿಷ್ಟು ಮಂದಿ ಸೇರಿ, ಸುಮಾರು ೩೦ ಮಕ್ಕಳನ್ನು ಸುಧಾರಿಸುತ್ತಿದ್ದರು. ಕುಳಿತುಕೊಳ್ಳುವುದಕ್ಕೆಂದು ಬೆಂಚು- ಕುರ್ಚಿಗಳಲ್ಲ, ಮಕ್ಕಳಿಗೆಲ್ಲ ಪುಟ್ಟ ಕಾಲುಮಣೆಗಳು ಇರುತ್ತಿದ್ದವು. ಆ ಕಾಲುಮಣೆಗಳ ಅಡಿಗಿನ ಖಾಲಿ ಜಾಗವಂತೂ, ನಮ್ಮ ಬೆಣ್ಣೆ ಬಳಪಗಳು ಮತ್ತು ಸೀಮೆಸುಣ್ಣಗಳನ್ನು ಆಗಾಗ ತಿಂದು ಹಾಕುತ್ತಿತ್ತು. ಕೆಲವೊಮ್ಮೆ ಪಾಟಿಗಳೂ ಅದರಡಿಗೆ ಮರೆಯಾಗಿ, ಅದನ್ನು ಹುಡುಕುವುದಕ್ಕೆಂದು ಕಾಲುಮಣೆಗಳನ್ನು ಸರಿಸಿದಾಗ ಎಂದೋ ಕಣ್ಮರೆಯಾಗಿದ್ದ ಯಾರಾರದ್ದೋ ಬಣ್ಣಬಣ್ಣದ ಸೀಮೆ ಸುಣ್ಣಗಳೆಲ್ಲ- ಇಡಿಯಾಗಿ, ಪುಡಿಯಾಗಿ ದೊರೆಯುತ್ತಿದ್ದವು.

ನಮಗೆಲ್ಲ ಬಾಲವಾಡಿಯಲ್ಲಿ ಪುಸ್ತಕ-ಪೆನ್ಸಿಲ್ಲು ಇರಲಿಲ್ಲ. ಪೆನ್ಸಿಲ್ಲು, ರಬ್ಬರು, ಮೆಂಡರ್‌ಗಳನ್ನೆಲ್ಲ ನಾವು ಕಂಡಿದ್ದು ಪ್ರಾಥಮಿಕ ಶಾಲೆ ಆರಂಭವಾದ ಮೇಲೆಯೆ. ಅಲ್ಲಿಯವರೆಗೆ ಸ್ಲೇಟು-ಬಳಪದಲ್ಲೇ ಗೀಚುತ್ತಿದ್ದೆವು. ʻನನ್ನ ಪಾಟಿ ಕರಿಯದು, ಸುತ್ತುಕಟ್ಟು ಬಿಳಿಯದುʼ ಎಂಬ ಶಿಶುಗೀತೆ ಹೇಳಿದವರಿಗೆ, ಅದನ್ನು ಬಳಸಿಯೂ ಗೊತ್ತಿದ್ದೀತು. ಹಾಗಂತ ಪ್ಲಾಸ್ಟಿಕ್‌ ಮಣಿಗಳ ಪಾಟಿ ಇರುತ್ತಿತ್ತು ಕೆಲವರ ಬಳಿ. ಯಾರದ್ದೋ ಸ್ಲೇಟಿನಲ್ಲಿ ಬರೆದಿದ್ದನ್ನು ಇನ್ಯಾರೊ ಅಳಿಸುವುದು, ಯಾರದ್ದೋ ಬಟ್ಟೆ ತಾಗಿ, ಬರೆದಿದ್ದೆಲ್ಲ ತನ್ನಷ್ಟಕ್ಕೆ ಒರೆಸಿ ಹೋಗುವುದು, ಅದಕ್ಕಾಗಿ ʻಹೋʼ ಎಂದು ಅತ್ತು ರಂಪ ಮಾಡುವುದು, ಹಾಗೆ ಅಳಿಸಿಹೋಗಬಾರದೆಂದು ಸೀಮೆ ಸುಣ್ಣವನ್ನು ನೀರಲ್ಲಿ ಅದ್ದಿಕೊಂಡು ಬರೆಯುವುದು, ಹಾಗೆ ಬರೆದಿದ್ದನ್ನು ಅಳಿಸಲೇ ಆಗದೆ ʻಥೂʼ ಎಂದು ಎಂಜಲು ಉಗಿದು ಅಳಿಸುವುದು… ಇಂಥವೆಲ್ಲ ಬಾಲವಾಡಿಯ ದಿನಗಳ ಮಾಮೂಲಿ ಪ್ರಕ್ರಿಯೆ.

ಅಂದಿನ ಬಾಲವಾಡಿಯ ಜಗಳಗಳೂ ಇಂದಿನ ಹಾಗೆಯೇ, ಯಾವ ಕಾರಣಕ್ಕೆ ಬೇಕಿದ್ದರೂ ಹುಟ್ಟುತ್ತಿದ್ದವು. ತೊಟ್ಟ ಅಂಗಿಯ ಚುಂಗನ್ನು ಪಕ್ಕದವರು ಜಗ್ಗಿದರು ಎನ್ನುವುದರಿಂದ ಹಿಡಿದು, ಬಳಪ ಮುರಿದರು, ಮೊಣಕೈಯಲ್ಲಿ ತಿವಿದರು, ಜುಟ್ಟೆಳೆದರು, ಸ್ಲೇಟು ಮುಟ್ಟಿದರು ಎನ್ನುವವರೆಗೆ ಯಾವುದೇ ಕಾರಣಕ್ಕೂ ಹೊಡೆದಾಟ ಶುರುವಾಗುತ್ತಿತ್ತು. ಮನೆಯಲ್ಲಿ ಅತಿ ಮುದ್ದಿನಿಂದ ಬೆಳೆದವರು, ಬಾಲವಾಡಿಯಲ್ಲೂ ಹಠ ಮಾಡಿ, ಪೆಟ್ಟು ತಿಂದು, ಅತ್ತು ವಾಂತಿ ಮಾಡಿದ ಉದಾಹರಣೆಗಳಿದ್ದವು. ಮಕ್ಕಳ ಉಳಿದೆಲ್ಲ ಚಾಕರಿಯ ಜೊತೆಗೆ ಬಾಲವಾಡಿಯ ಆಯಮ್ಮ ಆಂಟಿಗೆ ಇಂಥ ಸ್ವಚ್ಛತೆಗೆ ಕೆಲಸಗಳೂ ಗಂಟು ಬೀಳುತ್ತಿದ್ದವು.

ಒಮ್ಮೆ ಬಾಲವಾಡಿ ಮುಗಿದ ಮೇಲೆ ಮುಂದಿನ ತರಗತಿಗಳಲ್ಲಿ, ಶಾಲೆಯ ಮೊದಲ ದಿನ ಅಷ್ಟೊಂದು ಕಷ್ಟ ಎನಿಸಿರಲಿಲ್ಲ. ಆದರೂ ಕೆಲವು ಮಕ್ಕಳಿಗೆ ಎರಡೇಟು ಬಿಗಿದು ಪಾಲಕರು ಬಿಟ್ಟು ಹೋಗುವ ದೃಶ್ಯಗಳು ಅಲ್ಲಲ್ಲಿ ಕಾಣುತ್ತಲೇ ಇರುತ್ತಿದ್ದವು. ಶಾಲೆಯ ಮುಖ ಕಾಣುತ್ತಿದ್ದಂತೆ, ʻಹೋಗಲೊಲ್ಲೆʼ ಎಂದು ರಸ್ತೆಯಲ್ಲೇ ಬಿದ್ದು ಉರುಳಾಡುವ ಮಕ್ಕಳ ಚಿತ್ರಗಳು ಈಗಲೂ ನೆನಪಿಗೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಮೊದಲ ದಿನವೆಂದರೆ ಹಬ್ಬದ ವಾತಾವರಣವನ್ನೇ ನಿರ್ಮಿಸಲಾಗುತ್ತಿದೆ. ಶಾಲೆಯ ಆವರಣವನ್ನು ತಳಿರು-ತೋರಣ, ಬಾಳೆ ಕಂಬಗಳಿಂದ ಅಲಂಕರಿಸಿ, ಮಕ್ಕಳಿಗೆಲ್ಲ ಆರತಿ ಎತ್ತಿ ಬರಮಾಡಿಕೊಂಡು, ಮಿಠಾಯಿ ಹಂಚುವುದೋ ಅಥವಾ ಸಿಹಿಯೂಟ ಉಣಿಸುವುದನ್ನು ಕಾಣಬಹುದು. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಯ ಮೇಲೆ, ಟ್ರಾಕ್ಟರ್‌ಗಳ ಮೇಲೆ ಮೆರವಣಿಗೆಯ ಮೂಲಕ ಶಾಲೆಗೆ ಕರೆದೊಯ್ದ ಸುದ್ದಿಗಳಿವೆ. ಹಿಂದೆ ಶಾಲೆಗಳನ್ನು ಕರೆಯುತ್ತಿದ್ದುದೇ ʻಶಾಲೆಮನೆʼಗಳೆಂದು. ಹಿಂದಲ್ಲ, ಇಂದಿಗೂ ಮಕ್ಕಳು ಮನೆಗೆ ಹೋದಷ್ಟೇ ನಿರುಮ್ಮಳವಾಗಿ ಶಾಲೆಗೆ ಹೋಗಬೇಕೆಂಬ ಕಳಕಳಿ ನಿಜಕ್ಕೂ ಶ್ಲಾಘನೆಗೆ ಅರ್ಹ.

Maharashtra proposed to change School timings to ensure children get enough sleep

ನಮ್ಮಲ್ಲಿ ಮಾತ್ರವಲ್ಲ, ಹಲವಾರು ದೇಶಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ಎಂಬುದು ಸಂಭ್ರಮದ ಸಮಯ. ಇದಕ್ಕಾಗಿ ಬಹುತೇಕ ಅಂಗಡಿ-ಮಳಿಗೆಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ರಿಯಾಯ್ತಿಗಳು ರಾರಾಜಿಸುತ್ತವೆ. ಪೆನ್ನು, ಪೆನ್ಸಿಲ್ಲು, ಇರೇಸರ್‌ಗಳಿಂದ ಹಿಡಿದು ಬಣ್ಣದ ಪೆನ್ಸಿಲ್ಲುಗಳು, ಕ್ರೇಯಾನ್‌, ಚಿತ್ರಕಲೆಯ ತರಹೇವಾರಿ ಉಪಕರಣಗಳು, ನೋಟ್ ಪುಸ್ತಕಗಳು, ಶಾಲೆಯ ಬ್ಯಾಗು, ಊಟದ ಡಬ್ಬಿ, ನೀರಿನ ಬಾಟಲಿಗಳು, ಶೂಗಳು, ವಸ್ತ್ರಗಳು, ಕ್ಯಾಲ್ಕುಲೇಟರ್‌, ಲ್ಯಾಪ್‌ಟಾಪ್‌… ಹೀಗೆ, ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಬೇಕಾಗುವ ಲೆಕ್ಕವಿಲ್ಲದಷ್ಟು ಸಾಮಗ್ರಿಗಳು ʻಸೇಲ್‌ʼ ಎಂಬ ಹಣೆಪಟ್ಟಿ ಹೊತ್ತು ಕುಳಿತಿರುತ್ತವೆ. ಇದೇ ಸಮಯದಲ್ಲಿ, ಉಪಯೋಗಿಸಲು ಯೋಗ್ಯ ಸ್ಥಿತಿಯಲ್ಲೇ ಇರುವ ಶಾಲೆಯ ಸಾಮಗ್ರಿಗಳ ‌ʻಗರಾಜ್‌ ಸೇಲ್ʼ ಸಹ ಕಂಡುಬರುತ್ತದೆ. ಆ ವಸ್ತುಗಳ ಮಾಲೀಕರಿಗೆ ಮನೆಯಲ್ಲಿ ಜಾಗ ಖಾಲಿಯಾಯಿತು, ಜೊತೆಗೆ ನಾಲ್ಕು ಕಾಸೂ ಕೈಗೆ ಬಂತು; ಹೊಸದನ್ನು ಖರೀದಿಸಲು ಅನುಕೂಲ ಇಲ್ಲದವರಿಗೆ ಕಡಿಮೆ ಖರ್ಚಿನಲ್ಲಿ ಅಗತ್ಯ ವಸ್ತುಗಳೂ ದೊರೆತವು- ಉಪಾಯ ಒಳ್ಳೆಯದಲ್ಲವೇ? ನಮ್ಮಲ್ಲಿ… ಇವನ್ನೆಲ್ಲ ಯೋಚಿಸುವುದೂ ಕಷ್ಟ.

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ಇನ್ನೂ ಒಂದು ಕುತೂಹಲ ಬಹುದಿನಗಳವರೆಗೆ ಬಾಲ್ಯದಲ್ಲಿ ಕಾಡಿದ್ದಿತ್ತು. ಜೂನ್‌ 1ರಂದು ಅಷ್ಟೆಲ್ಲಾ ಜನರ ಬರ್ತ್‌ಡೇ ಇರುವುದಕ್ಕೆ ಹೇಗೆ ಸಾಧ್ಯ ಎಂಬುದು! ಪ್ರತಿ ಕ್ಲಾಸಿನಲ್ಲಿ ಇರುತ್ತಿದ್ದ 60-70 ಮಕ್ಕಳಲ್ಲಿ, ನಾಲ್ಕಾರು ಜನರಾದರೂ ಜೂನ್‌ 1ಕ್ಕೆ ಹುಟ್ಟಿದವರು ಇರುತ್ತಿದ್ದರು. ನಮ್ಮ ಕೆಲವು ಟೀಚರ್‌ಗಳು ತಾವೂ ಜೂನ್‌ 1ಕ್ಕೇ ಹುಟ್ಟಿದವರೆಂದು ಹೇಳಿ ನಕ್ಕಾಗ, ಅದೊಂದೇ ದಿನ ಯಾಕಾಗಿ ಅಷ್ಟೊಂದು ಜನ ಹುಟ್ಟುತ್ತಾರೆ ಎಂಬ ಕುತೂಹಲ ಮೂಡಿತ್ತು. ಹುಟ್ಟಿದ ದಿನಾಂಕ ಸ್ಪಷ್ಟವಾಗಿ ಗೊತ್ತಿಲ್ಲದವರೆಲ್ಲ, ಶಾಲೆಗೆ ಹೆಸರು ಕೊಡುವಾಗ ಅನಿವಾರ್ಯವಾಗಿ ಜೂನ್‌ 1ಕ್ಕೇ ಹುಟ್ಟುತ್ತಿದ್ದರು ಎಂಬುದು ತಿಳಿದಾಗ, ಟೀಚರ್‌ಗಳ ನಗೆಯೊಂದಿಗೆ ನಮ್ಮದೂ ಸೇರಿತ್ತು.

ಮಿತ್ರರ ಹುಟ್ಟಿದ ದಿನಗಳಂದು, ನಮ್ಮ ರಫ್‌ ಪುಸ್ತಕದ ಹಾಳೆಗಳನ್ನು ಹಿಂದಿನಿಂದ ಹರಿದು ಅವರಿಗಾಗಿ ತಯಾರಿಸುತ್ತಿದ್ದ ಗ್ರೀಟಿಂಗ್‌ ಕಾರ್ಡ್‌ಗಳು, ಪುಸ್ತಕದ ನಡುವೆ ಮರಿ ಹಾಕಲೆಂದು ಇರಿಸಿಕೊಳ್ಳುತ್ತಿದ್ದ ಹಕ್ಕಿಪುಕ್ಕಗಳು, ಸಾಮಾನ್ಯ ಇಂಕ್‌ ಪೆನ್ನುಗಳ ನಡುವೆ ರಾರಾಜಿಸುತ್ತಿದ್ದ ಹೀರೊ ಪೆನ್ನುಗಳು, ಆರೆಂಟು ಹನಿ ಇಂಕಿನ ಕಡ ಹಿಂತಿರುಗಿಸದ್ದಕ್ಕೆ ಹುಟ್ಟುತ್ತಿದ್ದ ಮುನಿಸು, ಫೌಂಟೆನ್‌ ಪೆನ್ನುಗಳಿಂದ ಚಿಮ್ಮುವ ಇಂಕಿಗೆ ಮುಂದಿನ ಬೆಂಚಿನವರ ವಸ್ತ್ರ ಕಲೆಯಾಗಿ ಏಳುತ್ತಿದ್ದ ಜಗಳ, ಮಧ್ಯಾಹ್ನ ಊಟದ ಡಬ್ಬಿಯ ಹಂಚಿಕೆಯಲ್ಲಿ ಆಗುತ್ತಿದ್ದ ರಾಜಿ ಪಂಚಾಯ್ತಿ, ಪ್ರತಿದಿನವೂ ಇರುತ್ತಿದ್ದ ಆಟದ ಪಿರಿಯೆಡ್‌, ಬೆತ್ತ ಹಿಡಿದೇ ಹುಟ್ಟಿದವರಂತೆ ಕಾಣುತ್ತಿದ್ದ ಪಿ.ಟಿ. ಮೇಷ್ಟ್ರು … ಹೆಕ್ಕುತ್ತಾ ಹೋದರೆ ಶಾಲೆಯ ಜೀವನದ ನೆನಪುಗಳು ಅಡಿಗಡಿಗೆ ಸಿಗುತ್ತವೆ.

ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ… ಎಂದೋ ದಾಟಿ ಬಂದ ನಮ್ಮದೇ ಶಾಲೆಯ ಅಂಗಳಕ್ಕೆ. ಈಗ ನಿಮ್ಮ ಶಾಲೆಯ ದಿನಗಳು ನಿಮಗೂ ನೆನಪಾಗದಿದ್ದರೆ ಕೇಳಿ!

ಇದನ್ನೂ ಓದಿ: ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

Continue Reading

ಬೆಂಗಳೂರು

Bengaluru News: ಜೈನ್‌ ಶಾಂತಮಣಿ ಕಲಾ ಕೇಂದ್ರದ ಕಲ್ಲಿನ ಕೆತ್ತನೆ ಮತ್ತು ಚಿತ್ರಕಲಾ ಶಿಬಿರ “ಪಾರ್ಶ್ವ ಪಡಾಪ್” ಗೆ ಸಂಭ್ರಮದ ತೆರೆ

Bengaluru News: ಭಾರತೀಯ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಒಂದು ವಾರದ ಸಮಾವೇಶ “ಪಾರ್ಶ್ವ ಪಡಾಪ್” ಶನಿವಾರ ಸಂಭ್ರಮದಿಂದ ತೆರೆ ಕಂಡಿತು. ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಉತ್ಸಾಹಿ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಅದ್ಭುತ ಶಿಲ್ಪಕಲೆ ಹಾಗೂ ಚಿತ್ರಕಲೆಗಳು ನೋಡುಗರ ಗಮನ ಸೆಳೆದವು.

VISTARANEWS.COM


on

Jain Shantamani Kala Kendra Stone Carving and Painting Camp in Bengaluru
Koo

ಬೆಂಗಳೂರು: ಭಾರತದಾದ್ಯಂತ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಒಂದು ವಾರದ ಸಮಾವೇಶ “ಪಾರ್ಶ್ವ ಪಡಾಪ್” ಶನಿವಾರ ಸಂಭ್ರಮದಿಂದ ತೆರೆ ಕಂಡಿತು. ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಉತ್ಸಾಹಿ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಅದ್ಭುತ ಶಿಲ್ಪಕಲೆ ಹಾಗೂ ಚಿತ್ರಕಲೆಗಳು ನೋಡುಗರ ಗಮನ (Bengaluru News) ಸೆಳೆದವು.

ಜೈನ್ ವಿವಿಯ (ಡೀಮ್ಡ್-ಟು-ಯುನಿವರ್ಸಿಟಿ) ಶಾಂತಮಣಿ ಕಲಾ ಕೇಂದ್ರ ಮತ್ತು ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ (ಜೆಐಆರ್‌ಎಸ್) ಸಹಯೋಗದಲ್ಲಿ ಆಯೋಜಿಸಿದ್ದ ಕಲಾ ಪ್ರತಿಭಾನ್ವೇಷಣೆ ಶಿಬಿರದಲ್ಲಿ ವಿವಿಧ ಕಲಾ ಪ್ರಕಾರಗಳ ಚಟುವಟಿಕೆಗಳು ಆಯೋಜನೆಗೊಂಡಿದ್ದವು. ಇವುಗಳಲ್ಲಿ ಬೆಂಗಳೂರಿನ ಜೈನ್ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆದ ಶಿಲ್ಪಕಲಾ ಸ್ಪರ್ಧೆ ಮತ್ತು ರಾಷ್ಟ್ರೀಯ ಚಿತ್ರಕಲಾ ಶಿಬಿರವೂ ಒಳಗೊಂಡಿದ್ದವು.

ಕಲ್ಲಿನ ಕೆತ್ತನೆ, ಶಿಲ್ಪಕಲೆ ಮತ್ತು ಭಾವನಾತ್ಮಕ ಚಿತ್ರಕಲೆಯ ಮೇಲೆ ಕೇಂದ್ರೀಕರಿಸಿದ ಈ ಕಾರ್ಯಕ್ರಮವು ವಿಶಿಷ್ಟ ವೇದಿಕೆಯೊಂದರ ಮೂಲಕ ಭಾರತೀಯ ಕಲಾವಿದರಲ್ಲಿ ಕಲಾತ್ಮಕ ಬುದ್ದಿಮತ್ತೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: VSK Media Awards 2024: ಬೆಂಗಳೂರಿನಲ್ಲಿ ಜೂ.30 ರಂದು “ವಿಎಸ್‌ಕೆ ಮಾಧ್ಯಮ ಪ್ರಶಸ್ತಿ” ಪ್ರದಾನ

ಈ ಶಿಬಿರವು ದೇಶದ ನಾನಾ ರಾಜ್ಯಗಳಿಂದ ಬಂದ ಉತ್ಸಾಹಿ ಶಿಲ್ಪಿಗಳು, ವರ್ಣಚಿತ್ರಕಾರರ ಸಮಗ್ರ, ಸಾಂಸ್ಕೃತಿಕ ಮತ್ತು ಶ್ರೀಮಂತ ಕಲಾತ್ಮಕತೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿತು. ಕಲಾವಿದರು, ಕಲಾ ಉತ್ಸಾಹಿಗಳು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ವಿವಿಧ ವಯೋಮಾನದ ಉತ್ಸಾಹಿಗಳು, ವಿಶೇಷಚೇತನ ಕಲಾವಿದರೊಬ್ಬರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಶಿಬಿರದಲ್ಲಿ ಕಲಾವಿದರು ಪ್ರಕೃತಿ ಮತ್ತು ಮಾನವೀಯತೆಯ ಅಂಶಗಳನ್ನು ಮುಕ್ತವಾಗಿ ಬೆಸೆದರು. ಇಂದಿನ ಜಗತ್ತಿಗೆ ಅಗತ್ಯವಿರುವ ಸಂದೇಶಗಳನ್ನು ಸಾರಿದರು. ಎಲ್ಲರೂ ಒಟ್ಟಾಗಿ ಭಾಗವಹಿಸಿದ ಈ ಪ್ರದರ್ಶನದಲ್ಲಿ ಕಲಾತ್ಮಕತೆಯ ವೈವಿಧ್ಯತೆ ಮತ್ತು ಆಳವನ್ನು ಅನುಭವಿಸಿದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಿಲ್ಪಿಗಳು, ವರ್ಣಚಿತ್ರಕಾರರನ್ನು ಗೌರವಿಸಿ, ಪ್ರಮಾಣಪತ್ರಗಳು ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು ಅಲ್ಲದೇ ಜೈನ್ ಗ್ರೂಪ್ ವತಿಯಿಂದ ನಗದು ಬಹುಮಾನಗಳನ್ನು ಸಹ ವಿತರಣೆ ಮಾಡಲಾಯಿತು.

ಇದನ್ನೂ ಓದಿ: Kannada New Movie: “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯ 3ನೇ ಸ್ಥಾನದಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು!

ಲೋಹದ ಲೇಬಲ್‌ಗಳೊಂದಿಗೆ ಕಲಾವಿದರ ಹೆಸರನ್ನು ಹೊಂದಿರುವ ಕಲ್ಲಿನ ಕೆತ್ತನೆಯ ಶಿಲ್ಪಗಳು ನೋಡುಗರನ್ನು ಆಕರ್ಷಿಸಿದವು. ಅದ್ಭುತ ಶಿಲ್ಪಕಲೆ ಹಾಗೂ ಚಿತ್ರಕಲೆಗಳು ವೀಕ್ಷಕರನ್ನು ಗಮನ ಸೆಳೆದವು.

Continue Reading

ಕರ್ನಾಟಕ

VSK Media Awards 2024: ಬೆಂಗಳೂರಿನಲ್ಲಿ ಜೂ.30 ರಂದು “ವಿಎಸ್‌ಕೆ ಮಾಧ್ಯಮ ಪ್ರಶಸ್ತಿ” ಪ್ರದಾನ

VSK Media Awards 2024: ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವತಿಯಿಂದ ಬೆಂಗಳೂರು ನಗರದ ಬಸವನಗುಡಿಯ ಬಿ.ಎಂ.ಎಸ್‌. ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಇದೇ ಜೂ.30 ರಂದು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ವಿಎಸ್‌ಕೆ ಮೀಡಿಯಾ ಅವಾರ್ಡ್ಸ್‌ (VSK Media Awards) ಮಾಧ್ಯಮ ಪ್ರಶಸ್ತಿ 2024 ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.

VISTARANEWS.COM


on

VSK Media Awards 2024 Programme in Bengaluru on June 30
Koo

ಬೆಂಗಳೂರು: ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವತಿಯಿಂದ ಬೆಂಗಳೂರು ನಗರದ ಬಸವನಗುಡಿಯ ಬಿ.ಎಂ.ಎಸ್‌. ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಇದೇ ಜೂ.30 ರಂದು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ವಿಎಸ್‌ಕೆ ಮೀಡಿಯಾ ಅವಾರ್ಡ್ಸ್‌ (VSK Media Awards 2024) ಮಾಧ್ಯಮ ಪ್ರಶಸ್ತಿ 2024 ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.

ಇದನ್ನೂ ಓದಿ: Air Wing NCC: ಏರ್ ವಿಂಗ್ ಎನ್‌ಸಿಸಿ ಸೇರಲು ಅರ್ಜಿ ಆಹ್ವಾನ; ಜುಲೈ 9 ಕೊನೆಯ ದಿನ

ಕಾರ್ಯಕ್ರಮದಲ್ಲಿ ಆರ್ಗನೈಸರ್‌ ಪತ್ರಿಕೆಯ ಸಂಪಾದಕ ಪ್ರಫುಲ್ಲ ಕೇತ್ಕರ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಚಾಲಕ ಡಾ. ಪಿ. ವಾಮನ್‌ ಶೆಣೈ ಉಪಸ್ಥಿತರಿರುವರು.

ಪ್ರಶಸ್ತಿ ಪುರಸ್ಕೃತರು

ತಿ.ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಸುದರ್ಶನ್‌ ಚನ್ನಂಗಿಹಳ್ಳಿ, ಚಂದ್ರಶೇಖರ ಭಂಡಾರಿ ಪತ್ರಿಕೋದ್ಯಮ ಪ್ರಶಸ್ತಿಗೆ ಸುವರ್ಣ ನ್ಯೂಸ್ ಸಂಪಾದಕ ಅಜಿತ್‌ ಹನುಮಕ್ಕನವರ್‌, ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಗೆ ಶೋಭಾ ಎಚ್‌.ಜಿ., ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿಗೆ ಪ್ರೊ. ಪ್ರೇಮಶೇಖರ, ವಿ.ಎಸ್.ಕೆ. ಡಿಜಿಟಲ್‌ ಮಾಧ್ಯಮ ಪ್ರಶಸ್ತಿಗೆ ಡಾ. ಪೂರ್ವಿ ಜಯರಾಮ್‌ ಭಾಜನರಾಗಿದ್ದಾರೆ.

ಇದನ್ನೂ ಓದಿ: Gold Rate Today: ತುಸು ಏರಿಕೆ ಕಂಡ ಚಿನ್ನದ ಬೆಲೆ; ಇಷ್ಟಿದೆ ಇಂದಿನ ದರ

Continue Reading

ಕರ್ನಾಟಕ

Book Release: ಬೆಂಗಳೂರಿನಲ್ಲಿ ಜೂ.29ರಂದು ‘ಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ

Bengaluru News: ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ ವಿರಚಿತ “ಭಾವರಾಮಾಯಣ ರಾಮಾವತರಣ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ನಗರದ ಹೊಸಕೆರೆಹಳ್ಳಿಯ ಪಿ.ಇ.ಎಸ್‌. ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ. ಸಭಾಂಗಣದಲ್ಲಿ ಇದೇ ಜೂ. 29ರಂದು ಶನಿವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.

VISTARANEWS.COM


on

Bhaavaramayana Ramavatarana book release programme on June 29 in Bengaluru
Koo

ಬೆಂಗಳೂರು: ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ ವಿರಚಿತ ʼಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ (Book Release) ಕಾರ್ಯಕ್ರಮವನ್ನು ನಗರದ ಹೊಸಕೆರೆಹಳ್ಳಿಯ ಪಿ.ಇ.ಎಸ್‌. ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ. ಸಭಾಂಗಣದಲ್ಲಿ ಇದೇ ಜೂ. 29ರಂದು ಶನಿವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರ ಇಳಿಕೆ

ಕಾರ್ಯಕ್ರಮದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾರು ಹಾಗೂ ಶ್ರೀಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಮತ್ತು ಪಿ.ಇ.ಎಸ್‌. ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಂ.ಆರ್‌. ದೊರೆಸ್ವಾಮಿ ಉಪಸ್ಥಿತರಿರುವರು.

ಇದನ್ನೂ ಓದಿ: Para Badminton Ranking: ಮೊದಲ ಬಾರಿಗೆ ವಿಶ್ವ ನಂ.1 ಸ್ಥಾನಕ್ಕೇರಿದ ಕನ್ನಡಿಗ ಸುಹಾಸ್‌ ಯತಿರಾಜ್

ಸಂಜೆ 5 ಗಂಟೆಗೆ ಕಲಾಸ್ನೇಹಿ ಹಾಗೂ ನರ್ತನಯೋಗ ಸಂಸ್ಥೆಯ ನಿರ್ದೇಶಕಿ ಸ್ನೇಹಾ ನಾರಾಯಣ ಮತ್ತು ಯೋಗೇಶ್‌ ಕುಮಾರ್‌ ಅವರಿಂದ ಭರತನಾಟ್ಯ, ಸಂಜೆ 5.30 ಕ್ಕೆ ನೂರಕ್ಕೂ ಹೆಚ್ಚು ಗಣ್ಯರಿಂದ ಪುಸ್ತಕ ಲೋಕಾರ್ಪಣೆ, ಶ್ರೀಸಂಸ್ಥಾನದವರೊಂದಿಗೆ ಸಂವಾದ, ಎನ್. ರವಿಶಂಕರ್‌ ಸಂವಾದಕರಾಗಿ ಪಾಲ್ಗೊಳ್ಳುವರು. ಮಂತ್ರಾಲಯ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ಜರುಗಲಿದೆ.

Continue Reading
Advertisement
Team India Captain
ಕ್ರೀಡೆ59 seconds ago

Team India Captain : ರೋಹಿತ್ ಶರ್ಮಾ ನಂತರ ಟಿ20 ತಂಡದ ನಾಯಕ ಯಾರು? ಇಲ್ಲಿದೆ ಐದು ಮುಂಚೂಣಿ ಹೆಸರುಗಳು

Water tank Collapsed
ದೇಶ3 mins ago

Water Tank Collapsed: ಭೀಕರ ದುರಂತ; ಇಬ್ಬರು ಸ್ಥಳದಲ್ಲೇ ಸಾವು-12ಮಂದಿಗೆ ಗಂಭೀರ ಗಾಯ

New Criminal Law
ದೇಶ14 mins ago

New Criminal Law: ಹೊಸ ಕ್ರಿಮಿನಲ್‌ ಕಾನೂನಿನಂತೆ ಬೀದಿ ವ್ಯಾಪಾರಿ ವಿರುದ್ಧ ಮೊದಲ ಎಫ್‌ಐಆರ್‌ ದಾಖಲು

Actor Darshan In Central Jail remembering mother and son
ಕ್ರೈಂ15 mins ago

Actor Darshan: ಇಂದಾದ್ರೂ ಭೇಟಿಗೆ ಬರ್ತಾರಾ ದರ್ಶನ್‌ ಅಮ್ಮ, ತಮ್ಮ?

Rakshit Shetty Visited Koragajja Temple And Prayed
ಸಿನಿಮಾ36 mins ago

Rakshit Shetty: ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ಕೊಟ್ಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ!

Parliament Sessions
ದೇಶ48 mins ago

Parliament Sessions: ಇಂದು ಸಂಸತ್‌ ಕಲಾಪ ಪುನರಾರಂಭ; ʼನೀಟ್‌ʼ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು ಸಾಧ್ಯತೆ: Live ಇಲ್ಲಿ ನೋಡಿ

Watermelon At Nigh
ಆರೋಗ್ಯ48 mins ago

Watermelon At Night: ಸಂಜೆ 7 ಗಂಟೆಯ ಕಲ್ಲಂಗಡಿ ಹಣ್ಣನ್ನು ತಿನ್ನಲು ಹೋಗಬೇಡಿ!

Off Shoulder Tops Fashion
ಫ್ಯಾಷನ್48 mins ago

Off Shoulder Tops Fashion: ನೀವೂ ಆಫ್‌ ಶೋಲ್ಡರ್‌ ಟಾಪ್‌ ಧರಿಸಬಹುದು! ಆದರೆ ಈ ಎಚ್ಚರಿಕೆ ವಹಿಸಿ

shubham milk price hike
ಪ್ರಮುಖ ಸುದ್ದಿ51 mins ago

Milk Price Hike: ಹಾಲಿನ ದರ 4 ರೂ. ಹೆಚ್ಚಳ? ಶುಭಂ ಗೋಲ್ಡ್‌ ದರ ಏರಿಕೆ

irat Kohli's Heartfelt Tribute to Anushka Sharma
ಕ್ರಿಕೆಟ್58 mins ago

Virat Kohli: ಈ ಗೆಲುವು ನನ್ನದಷ್ಟೇ ಅಲ್ಲ, ನಿನ್ನದು ಕೂಡ ಎಂದು ಪತ್ನಿಗೆ ಪ್ರೀತಿ ವ್ಯಕ್ತಪಡಿಸಿದ ವಿರಾಟ್‌ ಕೊಹ್ಲಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ16 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು21 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌