Sunday read | ಹೊಸ ಪುಸ್ತಕ | ಮತ್ತೆ ಹಾಡಾಗಿದೆ ಮಳೆ ಸಂಗೀತ - Vistara News

ಕಲೆ/ಸಾಹಿತ್ಯ

Sunday read | ಹೊಸ ಪುಸ್ತಕ | ಮತ್ತೆ ಹಾಡಾಗಿದೆ ಮಳೆ ಸಂಗೀತ

ಯೋಗೀಂದ್ರ ಮರವಂತೆ ಅವರ ನೂತನ ಲಲಿತ ಪ್ರಬಂಧಗಳ ಸಂಕಲನ ʼನನ್ನ ಕಿಟಕಿʼಯಿಂದ ಆಯ್ದ ಒಂದು ಪ್ರಬಂಧ ಇಲ್ಲಿದೆ. ಮಳೆಗಾಲದ ಹಾಡು ಹಾಗೂ ಕಾವ್ಯ ಇಲ್ಲಿ ಪ್ರಬಂಧ ಧ್ವನಿಯಾಗಿದೆ.

VISTARANEWS.COM


on

nanna kitaki
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
yogindra maravanthe

| ಯೋಗೀಂದ್ರ ಮರವಂತೆ

ನೈಋತ್ಯ ಮಾರುತದ ಆಗಮನವಾಗಿ ತಿಂಗಳು ಕಳೆದಿದೆ. ಚಲನಶೀಲ ಮೇಘರಾಶಿಯು ಭಾರತದ ಮೇಲೆ ಹರಡುವುದು ಆಮೇಲೆ ಮಳೆಯಾಗಿ ಇಳಿಯುವುದು ಸುರಿಯುವುದು, ನಡುನಡುವೆ ಗುಡುಗುವುದು ಮಿಂಚುವುದು ಬೀಸುವುದು, ನದಿ ಉಕ್ಕುವುದು, ತೊರೆ ತುಂಬುವುದು, ನೆರೆ ಬರುವುದು, ಸಮುದ್ರ ಮೊರೆಯುವುದು, ಜಲಪಾತ ಧುಮ್ಮಿಕ್ಕುವುದು, ನೆಲ ಮಣ್ಣು ಬೆಟ್ಟ ಗುಡ್ಡ ರಸ್ತೆ ತೋಟ ತೋಯುವುದು, ಯಾವ ದೇಶದ ಯಾವ ದಿಕ್ಕಿನಲ್ಲಿ ಯಾವ ಕಾಲಮಾನ ತಾಪಮಾನವೇ ಆದರೂ ಭಾರತದಲ್ಲೀಗ ವರ್ಷ ಋತುಮಾನ. ಮಳೆ ಸುರಿಯುವ ಊರಿರಲಿ, ನೀರು ಕಾಣದ ಬಂಜರಿರಲಿ, ಕಪ್ಪುಗಟ್ಟಿದ ಮೋಡಗಳ ನೆರಳು ಬೀಳುವ ತಾಣವಿರಲಿ, ಮೋಡವೇ ಇಲ್ಲದ ಸ್ವಚ್ಛ ಬರಡು ಬಾನಿನಡಿಯ ಹಾದಿಯಿರಲಿ, ತುಂಬಿದ ಕೆರೆಯ ಗ್ರಾಮವಿರಲಿ ಅಥವಾ ಬರಿದು ಕೆರೆಗಳ ಸ್ಥಳವಿರಲಿ, ಜಗತ್ತಿನ ಯಾವ ದೇಶದ ಯಾವ ಮೂಲೆಗೆ ಹೋದರೂ ಅಲ್ಲೆಲ್ಲ ಅಲ್ಲಿರುವವರನ್ನೆಲ್ಲ ತುಂಬಾ ಕಾಡಿದ ವಸ್ತು, ವಿಷಯ, ಪ್ರಕ್ರಿಯೆ, ಬದಲಾವಣೆ ಮಳೆಯೇ ಇರಬೇಕು.

ಮಳೆ ಬೀಳದ ಕಾರಣಕ್ಕೋ ಅಥವಾ ಮಳೆ ಬರುವ ನಿಮಿತ್ತಕ್ಕೋ. ಕವಿಗಳಿರಲಿ, ಕಥೆಗಾರರಿರಲಿ, ಬರಹಗಾರರಿರಲಿ, ಓದುಗರಿರಲಿ, ಅಕ್ಷರ ಪ್ರೇಮಿಗಳಿರಲಿ, ನಿರಕ್ಷರರಿರಲಿ ಮಳೆ ಎಲ್ಲರನ್ನೂ ಆವರಿಸುತ್ತದೆ. ಮಳೆಯನ್ನು ಅದಮ್ಯವಾಗಿ ಪ್ರೀತಿಸುವವರು, ಮಳೆಗಾಗಿ ಹಂಬಲಿಸುವವರು ರೈತರೊ ತೋಟಗಾರರೊ ಮಾತ್ರ ಆಗಿರಬೇಕೆಂದಿಲ್ಲ. ಮಳೆ ಸೃಜಿಸುವ ಸಂವಹನ, ತುಂಬುವ ಸ್ಫೂರ್ತಿಯೇ ಅಂತಹದ್ದು. ಯಾರೊಂದಿಗೂ ಮಾತಾಡಬಲ್ಲುದು ಯಾರನ್ನೂ ಮಾತಾಡಿಸಬಲ್ಲುದು; ಯಾರನ್ನೂ ಕಾಡಬಲ್ಲದು ಯಾರೊಡನೆಯೂ ಹಾಡಬಲ್ಲದು. ಬಾಯಾರಿದವನಿಗೆ ಮಾತ್ರ ಮಳೆ ಜೀವ ನೀಡುವುದಲ್ಲ, ಮಳೆಗೆ ಒದ್ದೆ ಆಗುವ ಮನಸ್ಸಿದ್ದವರನ್ನೆಲ್ಲ ಮಳೆ ಹಿಡಿದು ಕಾಡಬಲ್ಲದ್ದು. ಮಳೆ ಬರುವಾಗ ಕೆಲವರಿಗೆ ಬಾಲ್ಯ ನೆನಪಾಗುತ್ತದೆ, ಇನ್ನು ಕೆಲವರಿಗೆ ಪ್ರೇಮಿಯ ನೆನಪು ಕಾಡುತ್ತದೆ, ಹೊಸ ಕನಸು ಮೂಡಬಹುದು, ಮತ್ತೆ ಕೆಲವರಿಗೆ ಬಿಸಿ ಚಹಾ ಅಥವಾ ಕಾಫಿ ಹೀರುತ್ತಾ ಹಪ್ಪಳ ತಿನ್ನುವ ಅನಿಸಬಹುದು, ಇನ್ನು ಎಳೆ ಹೃದಯದ ಹುಚ್ಚುಮನಸಿನ ಜೀವಗಳಿಗೆ ಮಳೆಯಲ್ಲಿ ನೆನೆಯುತ್ತ ನೀರು ಸಿಡಿಸುತ್ತ ಆಡುವ ಹಂಬಲ ಆಗಬಹುದು, ಮತ್ತೆ ಕೆಲವರಿಗೆ ಕಾಗದ ದೋಣಿ ಮಾಡಿ ಮನೆಯ ಮುಂದೆ ಹರಿಯುವ ನೀರಿನ ಕಾಲುವೆಯಲ್ಲಿ ಬಿಡುವ ಆಸೆ ಮೂಡಬಹುದು, ಆ ನೀರಲ್ಲಿ ಕೊಚ್ಚಿ ಹೋಗುತ್ತಿರುವ ಇರುವೆಗೆ ಕಡ್ಡಿಯ ಆಸರೆ ನೀಡಿ ಬದುಕಿಸುವ ಎಂದೆನಿಸಬಹುದು. ಮತ್ತೆ ಏನೋ ಬರೆಯುವ ಏನೋ ಹೇಳುವ ಅಂತ ಅನಿಸಬಹುದು. ಕ್ಯಾಮೆರಾ ಹಿಡಿದು ಊರು ಕಾಡು ಬೆಟ್ಟ ಗುಡ್ಡ ಜಲಪಾತ ಸುತ್ತಿ ಮಳೆ ಮೋಡ ಹಸಿರು ಆಕಾಶವನ್ನು ಆಯತಾಕಾರದ ಕಿರು ಚೌಕಟ್ಟಿನ ಭಾವಚಿತ್ರದಲ್ಲಿಯೇ ಹಿಡಿದಿಡುವ ವಾಂಛೆ ಉಕ್ಕಬಹುದು. ಅಥವಾ ಕರಾವಳಿಯ ನನ್ನೂರಿನಂತಹ ಊರಿನಿಂದ ಐದು ಸಾವಿರ ಮೈಲು ದೂರದ ಬ್ರಿಟಿನ್ನಿನ ಬೇಸಿಗೆಯಲ್ಲಿ ಕುಳಿತವರೆದುರು ಆ ಮಳೆಯ ಕನವರಿಕೆಯೇ ಚಿಟಪಟ ಸದ್ದು ಮಾಡಿ ಕುಣಿಯಬಹುದು.

ಮುಂಗಾರು ಮಳೆ ಭಾರತದ ಉದ್ದಗಲವನ್ನು ಹಂತಹಂತವಾಗಿ ತನ್ನ ತೆಕ್ಕೆಯಲ್ಲಿ ಸೆಳೆದುಕೊಳ್ಳುತ್ತಿರುವ ಹೊತ್ತಲ್ಲಿ ಮಳೆಯ ಲಹರಿಯಲ್ಲಿ ಬಳಲುತ್ತಾ ಮೋಡವನ್ನು ಮಳೆಯನ್ನು ಮುಂಗಾರನ್ನು ಜೀವಸದೃಶವಾಗಿ ದೇವಸ್ವರೂಪಿಯಾಗಿ ಕಾಲಾತೀತವಾಗಿ ಕಂಡವರು ಕೊಂಡಾಡುವವರು ಕೂಡ ಕಣ್ಣ ಮುಂದೆ ಬರುತ್ತಾರೆ. ಅವರವರ ಭಾವಕ್ಕೆ ಅವರವರ ಜೀವಕ್ಕೆ ಮಳೆ ಸತ್ವವಾಗಿ, ದೃಶ್ಯವಾಗಿ, ಚಿತ್ರವಾಗಿ, ಶಬ್ದವಾಗಿ, ಗಂಧವಾಗಿ, ಅಕ್ಷರವಾಗಿ ಒಗ್ಗುತ್ತಿರುತ್ತದೆ. ಇದು ಮಳೆಯ ಸಾಮರ್ಥ್ಯವೋ ಇಳೆಯ ಮಹಿಮೆಯೋ ಬಲ್ಲವರು ಹೇಳಬೇಕು. ಮಳೆಯ ಬಗ್ಗೆ ಮಾತನಾಡದವರನ್ನು, ಮಳೆಯ ಬಗ್ಗೆ ಕನಸು ಕಾಣದವರನ್ನು, ಮಳೆಯನ್ನು ದೂಷಿಸದವರನ್ನು, ಮಳೆಗೆ ಕರಗದವರನ್ನು ಹುಡುಕುವುದು ಕಷ್ಟ, ಹುಡುಕಿದರೂ ಸಿಗುವುದು ದುರ್ಲಭ. ಹಾಗಾಗಿಯೇ ಯಾವ ಊರಿಗೆ ನಡೆದರೂ ಯಾವ ಭಾಗಕ್ಕೆ ಹೋದರು ಮಳೆಪ್ರೇಮಿಗಳು ಸಿಗುತ್ತಾರೆ.

ಮತ್ತೆ ಮಳೆಯನ್ನು ಶಬ್ದ ವಾಕ್ಯ ಪುಸ್ತಕಗಳಲ್ಲಿ ಹುಡುಕಹೊರಟರೂ ಯಾವ ಭಾಷೆಯ ಕಾವ್ಯವನ್ನು ಅರಸುತ್ತ ಅನ್ವೇಷಿಸುತ್ತ ನಡೆದರೂ ಮಳೆಯ ಬಗ್ಗಿನ ಕವನಗಳು ಚಿತ್ರಣಗಳು ಸಾಲು ಸಾಲಾಗಿ ಸಿಗುತ್ತವೆ. ಮತ್ತೆ ಅಂತಹ ಕವನ ಕಾವ್ಯ ಸೊಲ್ಲು ಸಾಲುಗಳನ್ನು ಹುಡುಕಿ ಹುಡುಕಿ ಓದುವವರು ಮೈಮರೆಯುವವರು ಹಾತೊರೆಯುವವರು ಕೂಡ ಎಲ್ಲೆಲ್ಲೂ ಸಿಗುತ್ತಾರೆ. ಮಳೆ ಯಾಕೆ ಇಷ್ಟು ಕಾಡುತ್ತದೆ ಎನ್ನುವುದು ಮಳೆಯಷ್ಟೇ ಕಾಡುವ ಪ್ರಶ್ನೆ. ಕಪ್ಪು ಮೋಡಗಳ ಎದೆಯಿಂದ ಆಕಾಶವನ್ನು ಸೀಳಿ ಸುರಿಯುವ ಧಾರೆಗೋ, ಮಳೆಮಣ್ಣಿನ ಸ್ಪರ್ಶಕ್ಕೆ ಹಬ್ಬುವ ಗಂಧಕ್ಕೋ, ಗಂಟೆಗಟ್ಟಲೆ ದಿನಗಟ್ಟಲೆ ಬಿಡದೆ ಇಳಿದು ಬಸಿದು ಆವರಿಸುವ ಗುಂಗಿಗೋ, ಮಳೆ ಸುರಿಯುವಾಗಿನ “ರಿಂ ಜಿಮ್” ಸ್ವರಪ್ರಸ್ತಾರಕ್ಕೋ, ಮಳೆಯ ಅಸ್ತಿತ್ವದಿಂದಲೇ ಬದುಕುವ ಬಾಳುವ ಅಥವಾ ಮಳೆ ಸಂಗೀತದೊಳಗಿನ ಗುಡುಗು ಸಿಡಿಲು ಗಾಳಿ ಮರಗಳ ಹೊಯ್ದಾಟದ ಶ್ರುತಿ ಲಯ ಲಾಸ್ಯಕ್ಕೋ? ಅನುಭವಿಸಿದವರೇ ಅನ್ನಬೇಕು, ಕಾವ್ಯ ಬರೆದವರೇ ಹೇಳಬೇಕು ಅಥವಾ ಬರೆಸಿಕೊಂಡ ಮಳೆಯೇ ಚಿಟಪಟಿಸಬೇಕು.

ಮಳೆಗಾಲ ಮಹಾನ್ ಕವಿಗಳ ಮೆಚ್ಚಿನ ಮಾಸವೂ ಹೌದು. ಮೋಡಗಳನ್ನು ರಮಿಸಿ ಒಲಿಸಿ ಕಾವ್ಯದ ಮಳೆ ಸುರಿಸಿದ ಹೆಗ್ಗಳಿಕೆ ಮುಂಗಾರಿನ ಮಾಸಕ್ಕೂ ಮತ್ತು ಆ ಮಾಸದ ಮೇಘರಾಶಿಗೂ ಜೊತೆಜೊತೆಗೆ ಸಲ್ಲುತ್ತದೆ. ಮಳೆಗಾಲವು ಸೌಂದರ್ಯಪೂರ್ಣವೂ ರೌದ್ರ-ರಮಣೀಯವೂ ಆಗಿ ತೋರುವ ದೇಶಗಳಲ್ಲಿ ಭಾರತಕ್ಕೆ ಮುಖ್ಯ ಸ್ಥಾನ ಇದೆ. ಹಾಗಾಗಿ ಮಾನ್ಸೂನ್ ಕಾವ್ಯವನ್ನು ಬರೆದ ಮಹಾನ್ ಕವಿಗಳನ್ನು ಹುಡುಕಿ ನಾವೇನೂ ದೇಶಾಂತರ ಹೋಗಬೇಕಿಲ್ಲ. ಜಗತ್ತಿನ ಮಳೆಕಾವ್ಯದ ಅತಿರಥ ಮಹಾರಥರನ್ನೆಲ್ಲ ಒಂದೆಡೆ ಸೇರಿಸಿದರೆ ಬಹುಷಃ ಅವರಲ್ಲೆಲ್ಲ ಎತ್ತರದ ಸ್ಥಾನ ಭಾರತೀಯ ಕವಿ ಸಾಹಿತಿಗಳಿಗೇ ಸಿಗಬೇಕೇನೋ. ಮೋಡ, ಮಳೆ ಮತ್ತು ಮಳೆಗಾಲಗಳನ್ನು ಮತ್ತೆ ಮತ್ತೆ ಬೇರೆ ಬೇರೆ ಕಣ್ಣಲ್ಲಿ ನೋಡುತ್ತಾ ಹೊಸ ಹೊಸ ಶಬ್ದ ಕಲ್ಪನೆ ಜೋಡಿಸುತ್ತ ಕಾವ್ಯ ಹೊಸೆದ ಭಾರತೀಯ ಕವಿಗಳು ಹಲವರಿದ್ದಾರೆ.

ಅವರಲ್ಲಿ ನಮಗೆ ಇಷ್ಟವಾದ ಕವಿಗಳು ಯಾರೇ ಇದ್ದರೂ ಅಂತಹ ಕವಿಗಳ ಪಟ್ಟಿಯಲ್ಲಿ ಪೂರ್ವಜನೆನಿಸುವವನು ಮಹಾಕವಿ ಕಾಳಿದಾಸ; ಆತನ ಬಗ್ಗೆ ನುಡಿಗೌರವ ಸಲ್ಲಿಸದೆ ಬೇರೆ ಮಳೆಕವಿಗಳ ಬಗ್ಗೆ ಕುರಿತು ಹೇಳುವ ಹಾಗಿಲ್ಲ. 1600 ವರ್ಷಗಳ ಹಿಂದೆ ರಚಿಸಲ್ಪಟ್ಟಿತು ಎಂದು ಹೇಳಲಾಗುವ ಕಾಳಿದಾಸನ “ಮೇಘದೂತ” ಕಾವ್ಯಾಸಕ್ತರನ್ನು ಇಂದಿಗೂ ಮುಂದಿಗೂ ಮೋಡ ಇರುವಾಗಲೂ ಇಲ್ಲದಾಗಲೂ ಮಳೆಗಾಲದ ಮೊದಲೂ ಆಮೇಲೂ ಮಳೆಗಾಲದೊಳಗೂ ಹೊರಗೂ ಕಾಡುತ್ತದೆ. ಭಾರತದ ಎಲ್ಲ ಭಾಷೆಗಳಿಗೂ, ಆಂಗ್ಲ ಭಾಷೆಗೂ ಮತ್ತೆ ಮತ್ತೆ ಮೇಘದೂತ ಅನುವಾದಿಸಲ್ಪಟ್ಟಿದೆ. ಮೋಡವನ್ನು ಮಳೆಯನ್ನೂ ಪ್ರೀತಿಸುವವರೆಲ್ಲ ಮುಂಗಾರು ಮಳೆಯನ್ನು ನೋಡಲೇಬೇಕು, ಮೋಡ ಮಳೆಯ ಹೊಸ ಕಲ್ಪನೆ ಕವಿತೆ ಬರೆಯುವವರೆಲ್ಲ ಕಾಳಿದಾಸನ ಮೇಘದೂತವನ್ನು ಓದಲೇಬೇಕು. ಕತೆಯಾಗಿ, ಕವನವಾಗಿ, ಹಾಡಾಗಿ, ಗೀತನಾಟಕವಾಗಿ, ಗದ್ಯವಾಗಿ, ಯಕ್ಷಗಾನವಾಗಿ ಮೇಘದೂತ ಜಗತ್ತಿನ ಮೂಲೆ ಮೂಲೆಯನ್ನು ಮುಟ್ಟಿದೆ. ಶಾಪಗ್ರಸ್ತನಾಗಿ ಅಂದಿನ ಭಾರತದಲ್ಲಿ ಅಲೆದಾಡುತ್ತಿದ್ದ ಯಕ್ಷನೊಬ್ಬ ತಲೆಯ ಮೇಲೆ ಸರಿದು ಹೋಗುವ ಮೋಡದ ಮೂಲಕ ಹಿಮಾಲಯದ ಕೈಲಾಸ ಪರ್ವತದಲ್ಲಿರುವ ತನ್ನ ಪತ್ನಿಗೆ ಸಂದೇಶ ಕಳುಹಿಸುವುದನ್ನು ಕಾಳಿದಾಸ 111 ಪಂಕ್ತಿಗಳ ಕವಿತೆಯಾಗಿ ಬರೆದಿದ್ದಾನೆ. ಕಲ್ಪನೆ, ಗ್ರಹಿಕೆ, ಕಾವ್ಯದ ದೃಷ್ಟಿಯಿಂದ ಶ್ರೇಷ್ಠ ಎಂದು ಕೊಂಡಾಡಲ್ಪಡುವ ಮೇಘದೂತ, ಮಳೆಗಾಲದ ಮೋಡಗಳಿಗೂ ಹೆಮ್ಮೆ ತರುವ ಕಾವ್ಯ.

ಎಲ್ಲೋ ಹುಟ್ಟುವ ಮಳೆಗಾಲದ ಮೋಡಗಳು ದಟ್ಟವಾಗಿ ಪರ್ವತಾಕಾರವಾಗಿ ಜೂನ್ ತಿಂಗಳ ಮೊದಲಿಗೆ ಮಳೆಯ ಸಂದೇಶವನ್ನು ಹೊತ್ತು ಭಾರತವನ್ನು ಪ್ರವೇಶಿಸುತ್ತವೆ. ಜೀವಜಗತ್ತೆಲ್ಲ ಕಾಯುವ ಕಾತರಿಸುವ ಮೇಘಸಂದೇಶ ಮಳೆಯಾಗಿ ಸುರಿಯುತ್ತದೆ. ಕಾಳಿದಾಸನ ಕಾವ್ಯ ಇಂಗ್ಲಿಷ್ ಅನುವಾದದಲ್ಲಿ “ಕ್ಲೌಡ್ ಮೆಸ್ಸೆಂಜರ್” ಎಂಬ ಶಬ್ದಜೋಡಣೆಯನ್ನು ಕಲ್ಪನೆಯನ್ನು ಹುಟ್ಟುಹಾಕಿದೆ. ಹಲವು ಶತಮಾನಗಳ ಹಿಂದೆ ಕಾವ್ಯ ಕಟ್ಟಿದರೂ ಇಂದಿಗೂ ನೆನಪಿಗೆ ಬರುವ ಕಾಳಿದಾಸನ ಯುಗದ ನಂತರ ಮೋಡದ ಕುರಿತು ಮಳೆಯ ಬಗ್ಗೆ ಕವನ ಬರೆದವರು ಕತೆ ಕಾದಂಬರಿಗಳಲ್ಲಿ ಮಳೆಯ ಚಿತ್ರಣವನ್ನು ಮಾಡಿದ ಹಲವು ಕವಿಗಳು ಇದ್ದಾರೆ. ಅವರೆಲ್ಲರ ನಡುವೆ ತೀವ್ರ ಮಳೆಪ್ರೇಮದ ಕವಿ ಎಂದು ಗುರುತಿಸಲ್ಪಡುವವರು ರವೀಂದ್ರನಾಥ ಟ್ಯಾಗೋರರು. ಟ್ಯಾಗೋರರು ಬರೆದುದು ಒಂದಲ್ಲ ಎರಡಲ್ಲ ನಾಲ್ಕಲ್ಲ ಎಂಟಲ್ಲ ಅನೇಕ ಮಳೆ ಕವಿತೆಗಳನ್ನು. ಟ್ಯಾಗೋರರ ಮಳೆಕವಿತೆಗಳು ಬಂಗಾಳದಲ್ಲಿ ಮಾತ್ರ ಮನೆ ಮಾತಲ್ಲ ದೇಶದಾದ್ಯಂತ ಜಗತ್ತಿನಾದ್ಯಂತ ಇಂದಿಗೂ ಓದಲ್ಪಡುತ್ತವೆ ಹಾಡಲ್ಪಡುತ್ತವೆ.

ಇದನ್ನೂ ಓದಿ | Sunday read | ಹೊಸ ಪುಸ್ತಕ | ಮಹಾಭಾರತದ ನೈಜ ನಾಯಕ ವಿದುರ

“ಮೋಡಗಳು ತೇಲುತ್ತ ನನ್ನ ಜೀವನಕ್ಕೆ ಬರುತ್ತವೆ, ಮಳೆನೀರ ಹೊತ್ತೂ ಅಲ್ಲ ಬಿರುಗಾಳಿಯ ಜೊತೆಯಾಗಲೂ ಅಲ್ಲ, ನನ್ನ ಸೂರ್ಯಾಸ್ತದ ಬಾನಿಗೆ ಬಣ್ಣ ಹಚ್ಚಲು” ಎಂದವರು ಟ್ಯಾಗೋರರು. ಮಳೆಸಂಗೀತ ಎನ್ನುವ ಅವರ ಕವನ ಹೀಗೆ ಹಾಡುತ್ತದೆ-

“ಮಳೆದಿನಗಳಲಿ
ಮಳೆಯ ಚಿಟಪಟ ದನಿಯಾಗುವಾಗ
ಹೇಳಲಸಾಧ್ಯ ನನ್ನ ಅನಿಸಿಕೆ,
ದಿಗ್ಭ್ರಮೆಯೂ ಆಗಿದೆ ಮನಸಿಗೆ.
ಅನಿಸುತಿದೆ ಯಾರೋ ಬಿಟ್ಟು ಹೋದಂತೆ
ನನ್ನ ಕರೆಕರೆದು
ಇರುಳಲಿ ತಟ್ಟಿ ಬಾಗಿಲ
ಮಳೆದಿನಗಳಲಿ
ಸ್ವರವಾಗಿದೆ ಮಳೆಯ ಚಿಟಪಟ.
ಇರಲಿ ಕರುಣೆ ನನ್ನಲಿ, ಪ್ರಿಯೆ ಹೊತ್ತಿಸು ಬೆಳಕ ನನ್ನೆದೆಗೆ
ಕಂಡಂತಾಯ್ತು ಯಾರದೋ ನೆರಳು ಕನಸಿನಲಿ
ಅರೆನಿದ್ರೆಯ ಅರೆಎಚ್ಚರದ
ನನ್ನ ಕಂಗಳಲಿ ತುಂಬಿದೆ ಕಣ್ಣೀರು
ಯಾರೋ ಇರುಳಲಿ ಬಳಿ ಬಂದಂತಾಗಿ
ಮಳೆದಿನಗಳಲಿ
ಚಿಟಪಟ ಸಂಗೀತವಾಗಿ

ವಿಮರ್ಶಕರು ಟ್ಯಾಗೋರರ ಮಳೆಕವಿತೆಗಳೆಲ್ಲವೂ ಅವರ ದಿವ್ಯಪ್ರೇಮಿಯ (Soulmate) ಅನ್ವೇಷಣೆ, ನಿಸರ್ಗ ಮತ್ತು ಮನುಷ್ಯನ ನಡುವಿನ ಸಂಬಂಧದ ಮರುನಿರೂಪಣೆ ಎಂದಿದ್ದಾರೆ. ಮಳೆಗೂ ಪ್ರೇಮಕ್ಕೂ ಪ್ರಾಕೃತಿಕ ಸಹಜ ಸಂಬಂಧ. ಆ ಸಂಬಂಧ ಸಹಜವಾಗಿಯೇ ಟ್ಯಾಗೋರರ ಮಳೆಪದಗಳಲ್ಲೂ ಕಾಣುತ್ತದೆ. 1930ರಲ್ಲಿ ಟ್ಯಾಗೋರರು ರಷ್ಯಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಕಾರ್ಮಿಕ ಒಕ್ಕೂಟಗಳ ಕಾರ್ಯಾಗಾರದಲ್ಲಿ ಎರಡು ಕವನಗಳನ್ನು ಓದಿದ್ದರು. ಅವುಗಳಲ್ಲಿ ಒಂದು ಕವನ ಮಳೆಯ ಬಗ್ಗಿನದಾಗಿತ್ತು. ತನ್ನ ಕವನವೊಂದನ್ನು ಪರಿಚಯಿಸುವಾಗ, ಭಾರತದ ಚಿತ್ರಣವನ್ನು ವಿದೇಶದ ಅಪರಿಚಿತರಿಗೆ ಮಾಡಿಸುವಾಗ ಅವರ ಆಯ್ದುಕೊಂಡ ಕವಿತೆ ಮಳೆಪ್ರೀತಿಗೆ ನಿದರ್ಶನವಾಗಿದೆ. ಬೆಂಗಾಲಿಯಲ್ಲಿ “ನಬಬರಷ” ಎನ್ನುವ ಶೀರ್ಷಿಕೆಯ ಕವನ “ಹೊಸಮಳೆ”ಯ ಕುರಿತಾದದ್ದು. ಈ ಕವನನ್ನು ವಾಚಿಸುವ ಮುನ್ನ ಟ್ಯಾಗೋರು ರಷ್ಯನ್ ಸ್ನೇಹಿತರಿಗೆ ಕವನದ ಹಿನ್ನೆಲೆಯನ್ನೂ ನೀಡಿದ್ದರು. ಅಂದಿನ ಕೃಷಿಪ್ರಧಾನ ಭಾರತದಲ್ಲಿ ಬೇಸಿಗೆಯಲ್ಲಿ ಬೆಂದವರು ಮೋಡ ದಟ್ಟವಾಗುವುದಕ್ಕೆ ಕಾಯುವುದು, ಮೊದಲ ಮಳೆಗೆ ಪುಳಕಗೊಳ್ಳುವುದು ಸ್ವತಃ ಟ್ಯಾಗೋರರ ಹೃದಯವೇ ನವಿಲಾಗಿ ನರ್ತಿಸುವುದು; ಭತ್ತದ ತೆನೆಗಳು ನಲಿದಾಡುವುದು, ನೀರಲ್ಲಿ ಹುದುಗಿದ ಕಪ್ಪೆಗಳು ಗೊಟರ್ ಸದ್ದು ಮಾಡುವುದು, ಮಳೆಯಲ್ಲಿ ನೆನೆದ ಬಾತುಕೋಳಿಗಳು ತಮ್ಮ ಗೂಡಿನಲ್ಲಿ ಮರಿಗಳ ಜೊತೆ ನಡುಗುವುದು ಹೀಗೆ ಮಣ್ಣಿನ ಹಾಗು ಮಣ್ಣಿನ ಮಕ್ಕಳ ಬದುಕಿನ ಚಿತ್ರಣವನ್ನು ಬರೆಯುತ್ತದೆ “ಹೊಸಮಳೆ” ಕವನ. “ಗೀತಾಭಿತನ್” ಎನ್ನುವ ಟ್ಯಾಗೋರರ ನಿಸರ್ಗದ ಹಾಡುಗಳ ಸಂಗ್ರಹವನ್ನು ಅವಲೋಕಿಸಿದರೆ ಅದರಲ್ಲಿ 115 ಮಳೆಗೀತಗಳಿವೆ, 96 ಹಾಡುಗಳು ವಸಂತದ ಬಗ್ಗೆ, 30 ಹಾಡುಗಳು ಶರತ್ಕಾಲದ ಬಗ್ಗೆ, 16 ಹಾಡುಗಳು ವೈಶಾಖದ ಕುರಿತು, 12 ಚಳಿಯ ಬಗ್ಗೆ ಮತ್ತೆ ಐದು ಹೇಮಂತ ಋತುವಿನ ಪಾಲಿಗೆ. ಇಲ್ಲಿಯೂ ಮಳೆಯ ಪಕ್ಷಪಾತಿ ಟ್ಯಾಗೋರರು.

ಟ್ಯಾಗೋರರು ಜೀವನದ್ದುದ್ದಕ್ಕೂ ಬದುಕಿನ ಬೇರೆ ಬೇರೆ ಹಂತಗಳಲ್ಲಿ ಮಳೆ ಕವನಗಳನ್ನು ಬರೆದವರು. ಬದುಕಿರುವವರೆಗೂ ಅವರು ಮಳೆಹುಚ್ಚರೇ. “ಗೀತಾಂಜಲಿ” ಸಂಕಲನದಲ್ಲಿನ ಒಂದು ಹಾಡು ಹೀಗೆನ್ನುತ್ತದೆ:

“ಮೋಡಗಳ ಮೇಲೆ ಮೋಡಗಳು ಏರಿ ಕಪ್ಪೆನಿಸಿವೆ.
ಓ ಪ್ರಿಯೆ ನನ್ನ ಯಾಕೆ ಕಾಯಿಸುವೆ ಬಾಗಿಲ ಹೊರಗೆ ಒಂಟಿಯಾಗಿ?
ಈ ನಡುದಿನದ ಕೆಲಸದಲ್ಲಿ ನಿರತನಾಗಿರುವಾಗ ಗುಂಪಿನೊಳಗೆಲ್ಲೋ ಕರಗಿರುವಾಗ
ಈ ಕರಾಳ ಒಂಟಿ ದಿನದಲ್ಲಿ ನೀನೆ ನನ್ನ ಭರವಸೆ
ನೀನೆಲ್ಲಾದರೂ ಮುಖವೇ ತೋರದಿದ್ದರೆ
ನನ್ನ ಪೂರ್ತಿಯಾಗಿ ಕಡೆಗಣಿಸಿದರೆ
ಅರಿಯೆ ಹೇಗೆ ಕಳೆದೇನು ಈ ದೀರ್ಘ ಮಳೆಕ್ಷಣಗಳ
ನೋಡುತ್ತಲೇ ಇರುತ್ತೇನೆ
ಆಗಸದ ದೂರದ ಕತ್ತಲೆಯ ಭಾರ
ಮತ್ತೆ ನನ್ನೆದೆ ಅಲೆದಾಡುತ್ತ ಚೀರುತ್ತಿದೆ
ಬೀಸುವ ಅಶಾಂತ ಗಾಳಿಯೊಡನೆ.

ಮಳೆಗಾಲದಲ್ಲಿ ನೋಡುವ ಕೇಳುವ ಅನಿಸುವ ಅನುಭವಿಸುವ ಕ್ಷಣಗಳೆಲ್ಲ ಟ್ಯಾಗೋರರ ಕವಿತೆಗಳಲ್ಲಿ ಬಂದು ಹೋಗುತ್ತವೆ. ಬಾಹ್ಯಜಗತ್ತಿನ ರೂಪಾಂತರಕ್ಕೆ ಒಳಮನಸಿನ ಸ್ಪಂದನ, ತೇವ, ಭಾರಗಳೂ ಅಕ್ಷರಗಳಾಗಿ ಪ್ರಕಟಗೊಳ್ಳುತ್ತವೆ. ಟ್ಯಾಗೋರರ ಕವನಗಳನ್ನು ಓದುವವರಿಗೆಲ್ಲ, ಇಂತಹದ್ದೇ ಓದಬೇಕು ಎಂದು ಗುರಿ ಇಟ್ಟು ಹುಡುಕದೆ ಇದ್ದರೂ ಮಳೆ ಕವಿತೆಗಳೇ ಹುಡುಕಿ ಬಂದು ಓದಿಸುತ್ತವೆ. ಆ ಸಾಲುಗಳಲ್ಲಿ ಸಾಲುಗಳ ನಡುವಲ್ಲಿ ಪ್ರಕೃತಿ ಹಾಗು ಮಳೆ, ಕಾತರಿಸುವುದರ ಹಾಗು ಕಾಯುವುದು, ಒಂಟಿತನದ ಹಾಗು ಪ್ರೇಮಗಳು ತಣ್ಣಗೆಯೂ ಬೆಚ್ಚಗೆಯೂ ಅವಿತಿವೆ. ಕವಿ ಇಲ್ಲಿ ಮಳೆಗಾಗಿ ಕಾಯುವುದೋ, ಒಂಟಿತನವೇ ಅವರನ್ನು ತಿನ್ನುವುದೋ ಅಥವಾ ಮಳೆಯಂತಹ ಹುಡುಗಿಯನ್ನು ನೆನೆದು ಬೇಯುವುದೋ ಎಂದೆಲ್ಲ ವಿಮರ್ಶಕರು ವಾದಿಸುತ್ತಾರೆ.

ಇದನ್ನೂ ಓದಿ | Sunday read | ಹೊಸ ಪುಸ್ತಕ | ತಟ್ಟನೆ ಮನಮಂ ಪಸಾಯದಾನ ಕೊಟ್ಟಳು

ಮಳೆಗಾಲದ ಹೊತ್ತಿನಲ್ಲಿ ಪ್ರಾಕೃತಿಕ ಅವಘಢಗಳು ಬಾರದಿರಲಿ, ಮಳೆಯಲ್ಲಿ ಆಡುವ ಮಕ್ಕಳು ಕ್ಷೇಮವಾಗಿರಲಿ ಬೇಗ ಮನೆ ಸೇರಲಿ ಎನ್ನುವ ಆಶಯದ ಕವಿತೆಯನ್ನೂ ಬರೆದಿದ್ದಾರೆ. “ಬೆಂಗಾಲದ ಬಿಸಿಲಿನ ಬೇಗೆ ಮಣ್ಣಿನ ಬಾಯಾರಿಕೆಗಳ ಮೇಲೆ ಹೊಯ್ದು ದಾಹ ತೀರಿಸು, ಮೊದಲ ಮಳೆಗೆ ದಿಗಂತದಲ್ಲಿ ತಯಾರಿ ನಡೆಸಿ ರೈತರಲ್ಲಿ ಉತ್ಸಾಹ ತುಂಬಿಸು” ಎಂದು ಹೇಳಿದ್ದಾರೆ. ಮಳೆಯ ಚಿಟಪಟದ ಮಧ್ಯೆ ಪುರಾತನ ಕವಿಯ ಮುಂಗಾರಿನ ವರ್ಣನೆಯ ಲಯ ಮನಸ್ಸಲ್ಲಿ ಹಾದುಹೋಗುತ್ತದೆ ಎಂದು ಕಾಳಿದಾಸನನ್ನೂ ತನ್ನ ಸಾಲುಗಳಲ್ಲಿ ನೆನೆದಿದ್ದಾರೆ. “ಮಳೆಗಾಲದ ಕಾವ್ಯ ಧಾರೆ ಧಾರೆಯಾಗಿ ಭಾವಲಹರಿಯಾಗಿ ಹರಿದಿದೆ, ಮನದ ಹೊರೆ ಇಳಿಸಿದೆ” ಎಂದು ಬರೆದಿದ್ದಾರೆ.

ಟ್ಯಾಗೋರರ ಮಳೆಪ್ರೇಮ ಬರೇ ಕವನದ ಸಾಲುಗಳಲ್ಲಿ ಮಾತ್ರ ಇಣುಕಿ ಮರೆಯಾಗುವಂತಹದ್ದಲ್ಲ. ಮಳೆಯ ಸ್ವಾಗತದ ನೆಪದಲ್ಲಿ ಶಾಂತಿನಿಕೇತನದಲ್ಲಿ ಅವರು “ಬರ್ಷ ಮಂಗಲ್” ಎನ್ನುವ ಸಾಮಾಜಿಕ -ಸಾಂಸ್ಕೃತಿಕ ಹಬ್ಬವನ್ನು ಆಚರಿಸಲು ಶುರು ಮಾಡಿದವರು. ಬಂಗಾಳ ವಿಭಜನೆ ಆದರೂ ಟ್ಯಾಗೋರರ ಕಲ್ಪನೆಯ ಕೂಸಾದ “ಬರ್ಷ ಮಂಗಲ್” ಪಶ್ಚಿಮ ಬಂಗಾಲ ಮತ್ತು ಬಾಂಗ್ಲಾ ದೇಶಗಗಳೆರಡರಲ್ಲೂ ಈಗಲೂ ಪ್ರತಿವರ್ಷವೂ ಆಚರಿಸಲ್ಪಡುತ್ತದೆ; ದಿನವಿಡೀ ಮಳೆಯನ್ನು ನೆನೆಸುವ ನಮಿಸುವ ಹಾಡು ನಾಟಕ ಕುಣಿತ ಗೊಂಬೆಯಾಟಗಳು ನಡೆಯುತ್ತವೆ. ಆಷಾಢ ತಿಂಗಳಲ್ಲಿ ಆಚರಿಸಲಾಗುವ ಈ ಹಬ್ಬ ಎರಡೂ ಕಡೆಯ ಬಂಗಾಳಿ ಜನರನ್ನು ಭಾವನಾತ್ಮಕವಾಗಿ ಜೋಡಿಸುತ್ತದೆ. ಬಂಗಾಳದ ಮನೆಮನೆಗಳಲ್ಲೂ ಆಲಿಸಲ್ಪಡುವ “ರಬೀಂದ್ರ ಸಂಗೀತ”ದಲ್ಲೂ ಟ್ಯಾಗೋರರು ಬರೆದ ಮಳೆ ಪದಗಳು ಸೇರಿಕೊಂಡಿವೆ. “ಬರ್ಷ ಮಂಗಲ್”ದಂತಹ ಮಳೆನಮನ ಮಳೆಚಿಂತನ ಬಂಗಾಳದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ನಡೆಯಬೇಕಾಗಿದೆ.

ಅತಿಯಾದ ಮಳೆ ಅಲ್ಲದಿದ್ದರೆ ತೀವ್ರವಾದ ಬರದ ಭಯಗಳು ಆಸುಪಾಸಲ್ಲೆ ಸುಳಿದಾಡುವ ಕಾಲದಲ್ಲಿ ಟ್ಯಾಗೋರರು ಭಾವನಾತ್ಮಕವಾಗಿ ಬರೆದ ಕವಿತೆಗಳು ವೈಚಾರಿಕ ನೆಲೆಯಲ್ಲೂ ನಮ್ಮನ್ನು ಕಾಡಬೇಕಾಗಿದೆ. ಅವರ ಕವನಗಳಲ್ಲಿ ನಿಚ್ಚಳವಾಗಿ ಕಾಣುವ ನಿಸರ್ಗಪ್ರೇಮ ಮಳೆಪ್ರೀತಿ ರಮ್ಯ ಕಾವ್ಯವೊಂದರ ಓದಿನ ಖುಷಿಗಷ್ಟೇ ಸೀಮಿತವಾಗದೆ ನಮ್ಮೊಳಗೇ ಒಂದು ಪ್ರಾಕೃತಿಕ ಎಚ್ಚರವನ್ನು ಹೊತ್ತಿಸಬೇಕಾಗಿದೆ. ಟ್ಯಾಗೋರರು ತೀವ್ರವಾಗಿ ಪ್ರೀತಿಸಿದ ಮಳೆ ಮತ್ತೆ ಸುರಿಯುತ್ತಿದೆ ಹರಿಯುತ್ತಿದೆ. ಇಂತಹದೇ ಸಮಯಕ್ಕೆ ಹಿಂದೆಂದೋ ಟ್ಯಾಗೋರರು ಸೃಷ್ಟಿಸಿದ ಕಲ್ಪನೆಗಳು, ಜೋಡಿಸಿದ ಪದಪುಂಜಗಳು, ಪೋಣಿಸಿದ ಸಾಲುಗಳು ಮತ್ತೆ ಅವುಗಳ ಹಿಂದಿನ ಕಾವ್ಯ ಪ್ರೇಮ ಒಂಟಿತನ ಕಾತರ ಕಾಳಜಿ ಪ್ರಜ್ಞೆಗಳು ಇನ್ನೂ ಕೂಡಾ ಇಲ್ಲೇ ಎಲ್ಲೋ ತಂಗಾಳಿಯಾಗಿ ತೇಲುತ್ತಿವೆ, ಚಿಟಪಟ ಸ್ವರವಾಗಿ ಹಾಡುತ್ತಿವೆ.

ಕೃತಿ: ನನ್ನ ಕಿಟಕಿ (ಲಲಿತ ಪ್ರಬಂಧ ಸಂಕಲನ)

ಲೇಖಕ: ಯೋಗಿಂದ್ರ ಮರವಂತೆ

ಪ್ರಕಾಶನ: ಪ್ರಿಸಮ್‌ ಬುಕ್ಸ್

ಬೆಲೆ: ೨೨೫ ರೂ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Kaladarpana-Art Reflects: ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

VISTARANEWS.COM


on

Kaladarpana-Art Reflects
Koo

ಬೆಂಗಳೂರು: ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್‌ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು

  • ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
  • ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯ ಹೇಮಾ ವಿನಾಯಕ್‌ ಪಾಟೀಲ್‌ ಹಾಗೂ ವಿನಾಯಕ್‌ ಪಾಟೀಲ್‌ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಅಂಕಣ

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

ರಾಜಮಾರ್ಗ ಅಂಕಣ (Rajamarga column): ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

VISTARANEWS.COM


on

arijit singh rajamarga column 2
Koo

ದ ಮ್ಯೂಸಿಕಲ್ ಲೆಜೆಂಡ್, ಜೇನು ದನಿಯ ಸರದಾರ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ (Rajamaraga Column): ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಸಿಂಗ್‌ (Arijit singh)) ಹುಟ್ಟಿದ ಹಬ್ಬ (Birthday)!

ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಆತನ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು….ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು!

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು.

ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು! ಮುಂದೆ TIPS ಸಂಗೀತ ಕಂಪೆನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ! ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟವು ಆತನಿಗಿಂತ ಮುಂದೆ ಇತ್ತು! ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ!

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು! ಅರ್ಜಿತ್ ಒಂದು ದೊಡ್ಡ ಬ್ರೇಕ್ ಥ್ರೂ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

arijit singh rajamarga column 2

2011ರಲ್ಲಿ ಅರ್ಜಿತ್ ಭಾಗ್ಯದ ಬಾಗಿಲು ತೆರೆಯಿತು!

ಆ ವರ್ಷ ಬಿಡುಗಡೆ ಆದ ಮರ್ಡರ್ 2 ಸಿನೆಮಾದ ‘ಫೀರ್ ಮೊಹಬ್ಬತೆ ‘ ಹಾಡು ಸೂಪರ್ ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ ( ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರೀ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಇಡೀ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿಯು ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದೀ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಯಿತು. ಭಾರೀ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರೀ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ.

ಸ್ಟುಡಿಯೋ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೋ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ!

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.

ಅಂತಹ ಅನನ್ಯ ಪ್ರತಿಭೆ, ಜೇನು ದನಿಯ ಸರದಾರ ಅರ್ಜಿತ್ ಸಿಂಗ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Continue Reading

ಪ್ರಮುಖ ಸುದ್ದಿ

Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

ವರನಟ, ಗಾನಗಂಧರ್ವ ಡಾ.ರಾಜ್‌ಕುಮಾರ್‌ ಅವರು ಕನ್ನಡಿಗರಿಗೆ ಸದಾ ಕಾಲ ಸ್ಫೂರ್ತಿ ನೀಡುವಂಥ ನೂರಾರು ಹಾಡುಗಳನ್ನು ಕೊಟ್ಟು ಹೋಗಿದ್ದಾರೆ. ಅವುಗಳಲ್ಲಿ ಬೆಸ್ಟ್‌ ಅನಿಸುವ 7 ಹಾಡುಗಳು ಇಲ್ಲಿವೆ. ಇದು ಡಾ.ರಾಜ್‌ ಬರ್ತ್‌ಡೇ ವಿಶೇಷ.

VISTARANEWS.COM


on

Koo

1. ಯಾರೇ ಕೂಗಾಡಲಿ ಊರೇ ಹೋರಾಡಲಿ

ʼಸಂಪತ್ತಿಗೆ ಸವಾಲ್‌ʼ ಚಿತ್ರದಲ್ಲಿ ಅಣ್ಣಾವ್ರು ಎಮ್ಮೆಯ ಮೇಲೆ ಕುಳಿತು ಹಾಡುತ್ತಾ ಸಾಗುವ ಈ ದೃಶ್ಯ ಕನ್ನಡ ಚಲನಚಿತ್ರ ರಂಗದ ಐಕಾನಿಕ್‌ ಅನಿಸುವ ಹಾಡು. ʼಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆʼ ಎಂದು ಎಮ್ಮೆಯ ನೆಮ್ಮದಿಯ ಸೂತ್ರವನ್ನು ಮನುಷ್ಯನಿಗೆ ಅನ್ವಯಿಸಿ, ಪ್ರಾಣಿಗಳ ಗುಣಗಳಿಂದ ಮನುಷ್ಯರು ಕಲಿಯಬೇಕಾದ್ದನ್ನು ಉದಾಹರಿಸಿ ಹಾಡಿದ್ದಾರೆ.

2. ನಗುತನಗುತ ಬಾಳು ನೀನು ನೂರು ವರುಷ
ʼಪರಶುರಾಮ್‌ʼ ಫಿಲಂನ ʼನಗುತಾ ನಗುತಾ ಬಾಳು ನೀನು ನೂರು ವರುಷʼ ಹಾಡು ಕನ್ನಡದ ಎರಡು ಬೆಲೆಬಾಳುವ ಮುತ್ತುಗಳನ್ನು ಒಳಗೊಂಡ ಮಾಣಿಕ್ಯ. ಇದರಲ್ಲಿ ವರನಟ ರಾಜ್‌ ಅವರು ಮುದ್ದು ಬಾಲನಟ ಪುನೀತ್‌ ರಾಜ್‌ಕುಮಾರ್‌ಗೆ ಬರ್ತ್‌ಡೇ ಕೇಕ್‌ ತಿನ್ನಿಸುತ್ತಾ ಹಾಡುತ್ತಾರೆ. ʼದೇವರು ತಂದ ಸೃಷ್ಟಿಯ ಅಂದ ಎಲ್ಲರು ನಗಲೆಂದೇʼ ಎಂಬಂಥ ಅರ್ಥಪೂರ್ಣವಾದ ಸಾಲುಗಳನ್ನು ಇದು ಒಳಗೊಂಡಿದೆ.

3. ಬಾನಿಗೊಂದು ಎಲ್ಲೆ ಎಲ್ಲಿದೆ
ʼಬೆಳದಿಂಗಳಾಗಿ ಬಾʼ ಚಲನಚಿತ್ರದಲ್ಲಿ ನಾಯಕಿ ಆರತಿ ಅವರಿಗೆ ಡಾ.ರಾಜ್‌ ಬುದ್ಧಿವಾದ ಹೇಳುವ ಹಾಡು ಇದು. ಚಿಕ್ಕಮಗಳೂರಿನ ಹಸಿರು ಸಿರಿಯ ನಡುವೆ ಕಾರು ಚಲಾಯಿಸುತ್ತಾ ʼಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆʼ ʼಹೂವೂ ಮುಳ್ಳೂ ಎರಡೂ ಉಂಟು ನಮ್ಮ ಬಾಳಲಿʼ ಎಂದು ಹಾಡುತ್ತಾ ಸಾಗುವ ಈ ದೃಶ್ಯ ಮನಮೋಹಕವಾಗಿದೆ.

4. ಬಾಳುವಂಥ ಹೂವೆ ಬಾಡುವಾಸೆ ಏಕೆ?
ʼಆಕಸ್ಮಿಕʼ ಚಲನಚಿತ್ರದಲ್ಲಿ ಅಣ್ಣಾವ್ರು ನಾಯಕಿ ಮಾಧವಿಗೆ ಬುದ್ಧಿ ಹೇಳುವ ಹಾಡು ʼಬಾಳುವಂಥ ಹೂವೆ ಬಾಡುವಾಸೆ ಏಕೆ?ʼ ʼಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು, ವ್ಯರ್ಥವ್ಯಸನದಿಂದ ಸಿಹಿಯು ಕೂಡ ಬೇವುʼ ʼಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯʼ ʼಸಣ್ಣ ಬಿರುಕು ಸಾಲದೇ ತುಂಬು ದೋಣಿ ತಳ ಸೇರಲು?ʼ ಎಂಬಂಥ ಸಾರ್ವಕಾಲಿಕವಾದ ನೀತಿಮುತ್ತುಗಳನ್ನು ಹೇಳುತ್ತಾರೆ.

5. ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ
ಶಿವರಾಜ್‌ ಕುಮಾರ್‌ ಅವರು ನಟಿಸಿರುವ ʼರಣರಂಗʼ ಚಿತ್ರಕ್ಕೆ ಡಾ.ರಾಜ್‌ ಅವರು ಹಾಡಿರುವ ಹಾಡು ಇದು. ಇದರ ಬೀಟ್‌ ಹಾಗೂ ಒಕ್ಕಣೆಗಳು ಎಂಥವನನ್ನೂ ಹೋರಾಡಲು ಪ್ರಚೋದಿಸುವಂತಿವೆ. ಹಿಡಿಯೋ ಆತ್ಮಬಲದಸ್ತ್ರ, ಅದುವೇ ಜಯದ ಮಹಾ ಮಂತ್ರ, ನಿನ್ನ ದಾರಿಯಲ್ಲಿ ಎಲ್ಲೂ ಸೋಲೇ ಇಲ್ಲ, ಬಾಳ ಯುದ್ಧದಲ್ಲಿ ನಿನ್ನ ಗೆಲ್ಲೋರಿಲ್ಲ, ಛಲವೇ ಬಲವು ಮುಂದೆ ನುಗ್ಗಿ ನುಗ್ಗಿ ಬಾʼ ಎಂದು ಧೈರ್ಯ ತುಂಬುತ್ತಾರೆ ಇದರಲ್ಲಿ.

6. ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ
ಕನ್ನಡ ನಾಡಿನ ಮೊದಲ ಸಾಮ್ರಾಟ ಕದಂಬರ ಮಯೂರವರ್ಮನಾಗಿ ʼಮಯೂರʼ ಫಿಲಂನಲ್ಲಿ ನಟಿಸಿದ ರಾಜ್‌, ʼನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ, ಬಾಳುವಿರೆಲ್ಲ ಹಾಯಾಗಿʼ, “ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾʼʼ ಎಂದು ಧೈರ್ಯ ಹೇಳಿದ್ದು ಒಂದು ಕಾಲದ ನಾಡಿನ ಜನತೆಯಲ್ಲಿ ಧೈರ್ಯವನ್ನು ತುಂಬುವ ನಾಯಕ ಗುಣವನ್ನು ಸ್ಪಷ್ಟವಾಗಿ ಚಿತ್ರಿಸಿತು.

7. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ʼಜೀವನಚೈತ್ರʼ ಚಿತ್ರದಲ್ಲಿ ಹಳದಿ ಪೇಟ ಕಟ್ಟಿಕೊಂಡು ಜಟಕಾ ಬಂಡಿಯನ್ನು ಹೊಡೆಯುತ್ತಾ ಅಣ್ಣಾವ್ರು ಸಾಗುವ ಈ ಹಾಡು ಐತಿಹಾಸಿಕ, ಕನ್ನಡ ಹೋರಾಟಕ್ಕೆ ಸದಾ ಸ್ಫೂರ್ತಿ ತುಂಬುವ ಒಂದು ಹಾಡು. ʼʼಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ, ಕಸ್ತೂರಿ ಕನ್ನಡʼ ಎಂದು ಅವರು ಸಾರಿದ್ದು ಇಂದೂ ಮುಂದೂ ಕನ್ನಡ ನಾಡಿನ ಆತ್ಮಗೀತೆಯಂತೆ ಇದ್ದೇ ಇರುತ್ತದೆ, ನಮಗೆ ಸ್ಫೂರ್ತಿ ತುಂಬುವಂತಿದೆ.

ಇದನ್ನೂ ಓದಿ: Dr.Rajkumar Memory: ಪ್ಯಾನ್‌ ಇಂಡಿಯಾ ಫಿಲಂಗಳ ಕಾಲದಲ್ಲಿ ಅಣ್ಣಾವ್ರ ಚಿತ್ರ ನೋಡೋಕೆ 8 ಕಾರಣಗಳು

Continue Reading
Advertisement
Kaladarpana-Art Reflects
ಬೆಂಗಳೂರು38 mins ago

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Covishield Vaccine
ಪ್ರಮುಖ ಸುದ್ದಿ55 mins ago

ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Narendra modi
ಪ್ರಮುಖ ಸುದ್ದಿ1 hour ago

Narendra Modi : ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ಇಲ್ಲ ಎಂದ ಮೋದಿ

DK Shivakumar
ಪ್ರಮುಖ ಸುದ್ದಿ1 hour ago

DK Shivakumar: ಅಶ್ಲೀಲ ಚಿತ್ರಕ್ಕೆ ಡಿಕೆಶಿ ಫೋಟೊ ಮಾರ್ಫಿಂಗ್ ಆರೋಪ; ಮೂವರ ವಿರುದ್ಧ ಎಫ್‌ಐಆರ್‌

IPL 2024
Latest1 hour ago

IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

Union Minister Pralhad Joshi election campaign in Shiggavi
ಧಾರವಾಡ2 hours ago

Lok Sabha Election 2024: ಈ ಲೋಕಸಭಾ ಚುನಾವಣೆ ಭಾರತದ ಸುವರ್ಣ ಯುಗಕ್ಕೆ ನಾಂದಿ: ಪ್ರಲ್ಹಾದ್‌ ಜೋಶಿ

Lok Sabha Election 2024 Bike rally for voting awareness in Hosapete
ವಿಜಯನಗರ2 hours ago

Lok Sabha Election 2024: ಹೊಸಪೇಟೆಯಲ್ಲಿ ಮತದಾನ ಜಾಗೃತಿಗಾಗಿ ಬೈಕ್ ರ‍್ಯಾಲಿ

BJP National President JP Nadda Election Campaign for Haveri Gadag Lok Sabha Constituency BJP Candidate Basavaraj Bommai
ಕರ್ನಾಟಕ2 hours ago

Lok Sabha Election 2024: ಮೋದಿಯವರ ವಿಕಸಿತ ಭಾರತ ಸಾಕಾರಗೊಳಿಸಲು ಬೊಮ್ಮಾಯಿಯವರನ್ನು ಗೆಲ್ಲಿಸಿ: ಜೆಪಿ ನಡ್ಡಾ

2nd PUC Paper Leak
ಕರ್ನಾಟಕ2 hours ago

2nd PUC Paper Leak: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ವಜಾಗೊಂಡಿದ್ದ ಎಸ್‌ಡಿಎ ಮರು ನೇಮಕ!

Lok Sabha Election
Lok Sabha Election 20242 hours ago

Lok Sabha Election: ಕಳೆದ ಬಾರಿಗೆ ಹೋಲಿಸಿದರೆ ಮೊದಲೆರಡು ಹಂತಗಳ ಮತದಾನದ ಪ್ರಮಾಣದಲ್ಲಿ ಕುಸಿತ; ಇಲ್ಲಿದೆ ಅಂಕಿ-ಅಂಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ20 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌