Sunday Read: ಹೊಸ ಪುಸ್ತಕ: ಯಾಬ್ಲಿ: ಯಥಾಪ್ರಕಾರ Vistara News

ಕಲೆ/ಸಾಹಿತ್ಯ

Sunday Read: ಹೊಸ ಪುಸ್ತಕ: ಯಾಬ್ಲಿ: ಯಥಾಪ್ರಕಾರ

ಎಚ್.‌ ಆರ್‌ ರಮೇಶ ಅವರು ಸಣ್ಣಕಥೆಗಳ ಸಂಕಲನ ʼಯಾಬ್ಲಿʼ ಇಂದು ಬಿಡುಗಡೆಯಾಗುತ್ತಿದೆ. ಈ ಸಂಕಲನದಿಂದ ಒಂದು ಕಥೆಯ ಆಯ್ದ ಭಾಗ ಇಲ್ಲಿದೆ. ಇದು ಇಂದಿನ Sunday read.

VISTARANEWS.COM


on

new kannada book yabli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

:: ಎಚ್.ಆರ್‌ ರಮೇಶ

ಸಾವಜ್ಜಿಗೆ ರಾತ್ರಿ ನಿದ್ರೆಯಲ್ಲಿ ಕನಸು. ಭೂಮಿ ಸುಟ್ಟು ಹೋಗಿತ್ತು. ಸುಡುವ ಬೆಂಕಿಯ ಝಳದಲ್ಲಿ ಒಂದು ಬಿಳಿಯ ಹಂಸ ಹಾರಿ ಹೋಗುತ್ತಿತ್ತು ಆಕಾಶದ ಕಡೆ ಮುಖಮಾಡಿ. ಸಾವಜ್ಜಿ ನೋಡುತ್ತಲೇ ಇದ್ದಳು ಅದನ್ನು. ಅಂತರಿಕ್ಷದಲ್ಲಿ ಅದು ಹಾರಿಹೋಗುತ್ತಿತ್ತು. ಅದನ್ನು ಸಾವಜ್ಜಿ ನೋಡುತ್ತಲೇ ಇದ್ದಳು. ಸಾವಜ್ಜಿ ಅದನ್ನು ನೋಡುತ್ತಲೇ ಇದ್ದಳು. ಕಲ್ಲು ನೀರು ಕರಗುವ ಹೊತ್ತು ಈ ಕನಸು ಬಿದ್ದ ಹೊತ್ತು. ಅದು ಕರಗದೆ ಹಾಗೇ ಇತ್ತು ಅವಳ ಸುಕ್ಕುಗಳ ಮೇಲೆ ಅಡುಗೆ ಕೋಣೆಯ ಕಿಟಕಿಯಿಂದ ಸೂರ್ಯನ ಕಿರಣಗಳು ಹರಿದು ಹೋಗುವ ತನಕ. ಅವಳ ಕೆನ್ನೆಗಳ ಮೇಲೆ ಮೂಡಿದ್ದ ಸುಕ್ಕುಗಳು ನುಣುಪು ಬೆಣಚು ಕಲ್ಲುಗಳಾಗಿದ್ದವು. ಬೆಣಚು ಕಲ್ಲುಗಳ ಸಂದುಗೊಂದುಗಳಲ್ಲೆಲ್ಲ ಜುಳು ಜುಳು ಸದ್ದುಮಾಡಿಕೊಂಡು ಹರಿವ ತೊರೆಯ ನೀರು ಅವಳ ಕೆನ್ನೆಯ ಸುಕ್ಕುಗಳ ಮೇಲೆ ಹರಿವ ಸೂರ್ಯನ ಕಿರಣಗಳು. ಎಚ್ಚರವಾಯಿತು.

ಎದ್ದಳು ನಿಧಾನ. ಮಾಳಿಗೆ ಮನೆಯ ನಡುಮನೆಯಲ್ಲಿ ಮಲಗಿದ್ದಳು. ಗೋಡೆಯ ಮೇಲೆ ನೇತುಹಾಕಿದ್ದ ಶಿವನ ಪಟಕ್ಕೆ ಕೈ ಮುಗಿದು, ‘ಶಿವನೇ ಏನೇಳ್ಲಪ್ಪ ನಿನ್ನ ಮಯಿಮೇನ, ಇಷ್ಟು ದಿನ ಕರಕಂಬದ್ದಲ್ಲಪ್ಪ, ಏನೇಳ್ಲಿ ನಿನ್ನ ಪವಾಡಕೆ’ ಎಂದುಕೊಳ್ಳುತ್ತ ನಿಧಾನ ಎದ್ದಳು. ಹಳೆಯ ಸೀರೆಗಳನ್ನು ಒಂದಕ್ಕೊಂದು ಸೇರಿಸಿ ಹೊಲೆದು, ಮೆತ್ತನೆಯ ಹಾಸಿಗೆಯ ಥರ ಮಾಡಿಕೊಂಡಿದ್ದ ಅದನ್ನು ನೀಟಾಗಿ, ಚೌಕಾಕಾರದಲ್ಲಿ ಮಡಿಚಿ, ಆ ನಡುಮನೆಯ ಕೋಣೆಯ ತಾನು ಮಲಗಿದ್ದ ಬಲಭಾಗದ ಮೂಲೆಯಲ್ಲಿ ಅದನ್ನು ಮತ್ತು ಅದರ ಜೊತೆಗೆ ದಿಂಬನ್ನು ಇಟ್ಟಳು. ದಿಂಬಿಗೆ ಹಳೆಯ ಸೀರೆಯನ್ನು ಕವರನ್ನಾಗಿ ಹೊಲಿದಿದ್ದು, ಅದರಲ್ಲಿನ ಹೂವಿನ ಚಿತ್ರಗಳು ಎಣ್ಣೆಯ ಜಿಡ್ಡಿಗೆ ತಮ್ಮ ಕಳೆಯನ್ನು ಕಳೆದುಕೊಂಡಿದ್ದವು. ಎದ್ದು, ಬಾಗಿಲ ಹಿಂದೆ ಇದ್ದ ಮರದ ಅಗಳಿಯನ್ನು ಸರಿಸಿ ಬಾಗಿಲನ್ನು ಹಿಂದಕ್ಕೆ ಎಳೆದುಕೊಂಡಳು. ಇವಳು ಬಾಗಿಲು ತೆಗೆಯುವುದನ್ನೇ ಕಾಯುತ್ತಿತ್ತೇನೋ ಎಂಬಂತಿದ್ದ ಹೊರಗಿದ್ದ ಬೆಳಗಿನ ಬೆಳಕು, ಇವಳು ಬಾಗಿಲನ್ನು ತೆಗೆಯುತ್ತಿದ್ದಂತೇ ಒಳನುಗ್ಗಿತು.

ತುಸು ಎತ್ತರದ ಹೊಸ್ತಿಲನ್ನು ನಿಧಾನ ದಾಟಿ, ಬೆಳಕನ್ನು ಸೀಳಿಕೊಂಡು ಹೊರನಡೆದು, ಮನೆಯ ಬಲಗಡೆ ಸಂದಿಯಲ್ಲಿ ಅವಳ ಗಂಡನಕಾಲದ ಪುಟ್ಟ ಶೌಚಾಲಯಕ್ಕೆ ಹೋಗಿ ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಿ, ಹೊರಗಿನ ಗುಡಾಣದಲ್ಲಿರುವ ನೀರನ್ನು ಗುಡಾಣದ ಮುಚ್ಚುಳದ ಮೇಲೆ ಕಾಲದ ಸಾಕ್ಷಿಯೆಂಬಂತೆ ಇದ್ದ ಲಬಿಕಿದ ಅಲ್ಯುಮಿನಿಯಮ್ ತಂಬಿಗೆಯಲ್ಲಿ ತುಂಬಿಸಿಕೊಂಡು, ಮತ್ತೊಮ್ಮೆ ಕೈ ತೊಳೆದು, ಕಾಲಿನ ಹಿಮ್ಮಡಿಯು ನೆನೆಯುವಂತೆ ಎರಡೂ ಪಾದಗಳ ಮೇಲೆ ನೀರನ್ನು ಹಾಕಿಕೊಂಡು ಒಳನಡೆದಳು. ಅಡುಗೆ ಕೋಣೆಯು ನಡುಮನೆಗೆ ಹೊಂದಿಕೊಂಡಿತ್ತು. ನಿಧಾನ ಅಡುಗೆ ಕೋಣೆಯೊಳಗೆ ಪಾದಗಳ ಇಡತೊಡಗಿದಳು. ಒಲೆಯ ಪಕ್ಕ ಇದ್ದ ಬಚ್ಚಲು ಮನೆಗೆ ಎಡ್ಲಿಯಲ್ಲಿ ತಾಮ್ರದ ತಂಬಿಗೆಯನ್ನು ಅದ್ದಿದಳು. ಆಗ ಅಲ್ಲಿ ನೀರು ತಂಬಿಗೆ ಒಳಗಡೆ ಸೇರುವ ಗುಡುಗುಡು ಸದ್ದು. ನೀರು ತುಂಬಿಸಿಕೊಂಡು, ಇದ್ದಿಲಿನ ಪುಡಿಯಲ್ಲಿ ಹಲ್ಲುಗಳನ್ನು ಉಜ್ಜಿ, ಮುಖವನ್ನು ತೊಳೆದುಕೊಂಡು, ನಿಧಾನ ಬಚ್ಚಲಿಗೆ ಅಡ್ಡಲಾಗಿಟ್ಟಿದ್ದ ಕಲ್ಲನ್ನು ದಾಟಿ ಹೊರ ನಡೆದಳು. ಸೂರ್ಯನ ಕಿರಣಗಳು ಅವಳ ಬೆನ್ನಿನ ಮೇಲೆ ಬಂಗಾರದ ನೀರನ್ನು ಸುರಿಯುತ್ತಿರುವಂತೆ ಕಾಣುತ್ತಿತ್ತು. ನಡುಮನೆಯ ಎಡಭಾಗದ ಗೋಡೆಗೆ ಸಮೀಪ ಬಿದಿರಿನ ಒಂದು ಉದ್ದನೆಯ ಗಳವನ್ನು ತೆಂಗಿನ ಹುರಿಯಲ್ಲಿ ಜಂತೆಯ ತೊಲೆಗೆ ಕಟ್ಟಿ ನೇತು ಬಿಡಲಾಗಿತ್ತು. ಆ ದಂಡಿಗೆಯ ಮೇಲೆ ಸೀರೆ, ರವಿಕೆ, ಮತ್ತಿತರೆ ಬಟ್ಟೆಗಳನ್ನು ಮಡಿಚಿ ನೇತುಹಾಕಲಾಗಿತ್ತು.

ಅದರ ಮೇಲೆ ನೇತಾಡುತ್ತಿದ್ದ ಟವಲನ್ನು ಎಳೆದುಕೊಂಡು, ಅದರಿಂದ ಮುಖವನ್ನು ಒರೆಸಿ ಕೊಂಡು, ಅದನ್ನು ಮತ್ತೆ ತನ್ನ ಭುಜದ ಮೇಲೆ ಹಾಕಿಕೊಂಡು ಮುಂದಕ್ಕೆ ಹೆಜ್ಜೆಗಳನ್ನು ಇಟ್ಟಳು. ಅವಳ ಮನೆ ಪಶ್ಚಿಮಾಭಿಮುಖವಾಗಿದ್ದುದರಿಂದ, ಸೂರ್ಯ ಕಾಣಿದಿದ್ದರೂ, ಅವಳ ಮನೆಯ ಬಾಗಿಲಿನ ಕಡೆ ಅಂದರೆ ಪೂರ್ವ ದಿಕ್ಕಿನ ಕಡೆ ತಿರುಗಿ ಒಂದು ನಮಸ್ಕಾರ ಹಾಕಿದಳು. ಹಾಕಿ, ಮನೆಯ ಮುಂಭಾಗದ ಬಲಗಡೆಯಲ್ಲಿ ಇಬ್ಬರು ಕುಳಿತುಕೊಳ್ಳಬಹುದಾಗಿದ್ದ ಒಂದು ಸಣ್ಣಕಲ್ಲು ಹಾಸಿನ ಕೆಳಗೆ ಕೈ ಹಾಕಿ ಪೊರಕೆಯನ್ನು ತೆಗೆದುಕೊಂಡಳು. ಕಸ ಗುಡಿಸಿ, ಅಲ್ಲೆ ಗುಡಾಣದಲ್ಲಿದ್ದ ನೀರನ್ನು ತಂಬಿಗೆಯಲ್ಲಿ ತುಂಬಿಕೊಂಡು ಬಾಗಿಲಿಗೆ ನೀರನ್ನು ಚಿಮುಕಿಸಿದಳು. ಮುಂಬಾಗಿಲಿನ ಕೈಗೆಟುಕುವ ಎತ್ತರದಲ್ಲಿದ್ದ ಒಂದು ಪುಟ್ಟ ಗೂಡೊಳಗೆ ಕೈ ಹಾಕಿ ಅರಿಶಿಣ, ಕುಂಕುಮ ಮತ್ತು ರಂಗೋಲಿ ಹಿಟ್ಟು ಇದ್ದ ಒಂದು ಬಟ್ಟಲನ್ನು ತೆಗೆದುಕೊಂಡು, ಹೊಸ್ತಿಲ ಮೇಲೆ ಮೂರುಕಡೆ ಮೂರು ಗೆರೆಗಳನ್ನು, ಅವುಗಳ ಅಂತರದಲ್ಲಿ ಸುರುಳಿಯಾಕಾರದ ಚಕ್ರ, ಇಂಟು ಆಕಾರದ ಎರಡು ಎಲೆಗಳಂತಿರುವ ಎಳೆಗಳನ್ನು ಎಳೆದು, ಹೊಸ್ತಿಲಿನ ಮುಂಭಾಗಕ್ಕೆ ಕುಂಕುಮ ಮತ್ತು ಅರಿಶಿಣವನ್ನು ಇಟ್ಟಳು. ಮನೆಯ ಅಂಗಳಕ್ಕೆ ದಾರಿಗೆ ಹೊಂದಿಕೊಂಡು ಮರದಂತೆ ಬೆಳೆದಿದ್ದ ಎಕ್ಕದ ಹೂವುಗಳನ್ನು ಕಿತ್ತು ಇಟ್ಟಳು. ಅದರ ಪಕ್ಕದಲ್ಲೇ ಇದ್ದ ಮಧ್ಯಾಹ್ನ ಮಲ್ಲಿಗೆ ಹೂವು ಸಂಜೆ ಅರಳಿದ್ದರಿಂದ, ಮುದುಡಿ ಮಲಗಿದ್ದವು. ಕೆಲವು ಗಿಡದ ಬುಡದಲ್ಲಿ ಬಿದ್ದಿದ್ದವು. ತಂಬಿಗೆಯಲ್ಲಿ ಉಳಿದಿದ್ದ ನೀರಿನಲ್ಲಿ ಕೈಗಳನ್ನು ತೊಳೆದುಕೊಂಡು, ಭುಜದ ಮೇಲೆ ಹಾಕಿಕೊಂಡಿದ್ದ ಟವಲನ್ನು ಮನೆಯ ಮುಂಭಾಗದ ಗೋಡೆಗೆ ಮತ್ತು ಅಂಗಳದ ಗೂಟಕ್ಕೆ ಕಟ್ಟಿದ್ದ ತಂತಿಯ ಮೇಲೆ ನೇತುಹಾಕಿ ಒಳ ನಡೆದಳು.

ಸಾವಜ್ಜಿಯ ಮಾಳಿಗೆ ಮನೆ, ಎರಡು ಕೋಣೆಗಳಿದ್ದರೂ, ತುಂಬಾ ವಿಶಾಲವಾಗಿತ್ತು. ಮನೆಯ ಅಡುಗೆ ಕೋಣೆಯು ಐದಾರು ಜನ ಕೂತು ಊಟ ಮಾಡುವಷ್ಟು ವಿಶಾಲ ವಾಗಿತ್ತು. ಮೂಲೆಯಲ್ಲಿ ಮಣ್ಣಿನ ಸೋರೆಗಳನ್ನು ಹೈಕಳು ಲಗೋರಿ ಆಟವಾಡುವಾಗ ಒಂದರ ಮೇಲೊಂದು ಜೋಡಿಸುವ ಬಿಲ್ಲೆಗಳಂತೆ ಜೋಡಿಸಿಡಲಾಗಿತ್ತು. ನೀರು ಕುಡಿಯಲು ಕಂಚಿನ ವೃತ್ತಾಕಾರದ ಗಿಂಡಿ, ಅದರ ಪಕ್ಕ ಒಂದು ಸ್ಟೀಲಿನ ಕೊಳಗ ಅದರ ಪಕ್ಕ ಮಣ್ಣಿನ ಗುಡಾಣ. ತರಕಾರಿಗಳನ್ನು ಇಡಲು ಜಾಲರ ರೂಪದ ನೇತಾಡುವ ಬುಟ್ಟಿಯನ್ನು ಗೋಡೆಗೆ ಮೊಳೆ ಹೊಡೆದು ನೇತುಹಾಕಲಾಗಿತ್ತು. ಅಡುಗೆ ಮನೆಯಲ್ಲಿ ಮೂರು ಕಂಬಗಳಿದ್ದವು. ಅವುಗಳಿಗೆ ಹುರಮಂಜನ್ನು ಬಳಿಯಲಾಗಿತ್ತು. ಅಡುಗೆ ಕೋಣೆಯ ಬಾಗಿಲ ಮೇಲೆ ಇಡಲಾಗಿದ್ದ ಅಡ್ಡಕಲ್ಲಿನ ಮೇಲೆ ಐದಾರು ತಾಮ್ರದ, ಸ್ಟೀಲಿನ ಡಬ್ಬಿಗಳಿದ್ದವು. ಮೂರು ನಿಲುವುಗಳಿದ್ದು, ಒಂದರಲ್ಲಿ ಹಾಲಿನ ಬಟ್ಟಲು, ಮತ್ತೊಂದರಲ್ಲಿ ಕುಂಬಳಕಾಯಿ ಇದ್ದು, ಮೂರನೆಯದು ಖಾಲಿಯಿತ್ತು. ಅಡುಗೆ ಕೋಣೆಯ ಬಲಭಾಗದಲ್ಲಿ ಪುಟ್ಟದಾದ ದೇವರಗೂಡು. ಅದರಲ್ಲಿ ಹುಲಿ ವಾಹನದ ಮೇಲೆ ಕುಳಿತುಕೊಂಡಿರುವ ದೇವಿಯ ಚಿತ್ರ. ಅದಕ್ಕೆ ಗಾಜಿನ ಕಟ್ಟನ್ನು ಹಾಕಲಾಗಿತ್ತು. ಕುಂಕುಮ, ವಿಭೂತಿ, ಮತ್ತು ಅಂಟಿಕೊಂಡಿದ್ದ ಬಸವನ ಪಾದದ ಹೂವುಗಳು. ಫೋಟೋದ ಮುಂದೆ ಒಂದು ದಪ್ಪನೆಯ ಪುಸ್ತಕ. ಅದರ ಮೇಲೆಲ್ಲ ವಿಭೂತಿ, ಕುಂಕುಮ, ತೀರ್ಥದ ಕಲೆಗಳು. ಅದರ ಪಕ್ಕದಲ್ಲಿ ವಿಭೂತಿ, ಕುಂಕುಮ, ಅರಿಶಿಣ. ವಿಭೂತಿಯನ್ನು ಎತ್ತಿಕೊಂಡು ತನ್ನ ಬಲಗೈಯ ಮೂರು ಅಂಗೈ ಬೆರಳುಗಳಿಗೆ ಅದನ್ನು ಬಳಿದುಕೊಂಡು ಆ ಮೂರು ಬೆರಳುಗಳಿಂದ ತನ್ನ ಹಣೆಯ ಮೇಲೆ ಮೂರು ಅಡ್ಡ ವಿಭೂತಿಯ ಗೆರೆಗಳನ್ನು ಎಳೆದುಕೊಂಡಳು. ಮತ್ತು ಉಂಗುರದ ಬೆರಳ ತುದಿಯಿಂದ ಒಂದಿಷ್ಟಗÀಲದ ಕುಂಕುಮವನ್ನು ತನ್ನ ಎರಡು ಹುಬ್ಬುಗಳ ನಡುವೆ ಹಚ್ಚಿಕೊಂಡಳು. ದೇವಿ ಫೋಟೋದ ಪಕ್ಕ ಬಿದಿರಿನ ಕೊಳವೆಯಲ್ಲಿದ್ದ ಊದುಬತ್ತಿಗಳಲ್ಲಿ ಎರಡನ್ನು ಹೊರಗೆ ಎಳೆದುಕೊಂಡು ಅಲ್ಲೇ ದೇವರ ಗೂಡಲ್ಲಿದ್ದ ಬೆಂಕಿಪೊಟ್ಟಣವನ್ನು ಹುಡುಕಿ ತೆಗೆದು, ಕಡ್ಡಿಯನ್ನು ಗೀರಿ ಊದುಬತ್ತಿಗಳ ತುದಿಗೆ ತಾಗಿಸಿದಳು. ಹಳದಿ ಮತ್ತು ಕೆಂಪು ಮಿಶ್ರಿತ ಪುಟ್ಟದಾದ ಜ್ವಾಲೆ ಎರಡು ಸೆಕೆಂಡು ಮೂಡಿ, ಊದುಬತ್ತಿಯ ತುದಿಯಲ್ಲಿ ಕೆಂಡದ ಬಣ್ಣದಕಿಡಿ ಮಾತ್ರ ಸ್ಠಾಪಿತಗೊಂಡಿತು. ಗೊಂಡು, ಪರಿಮಳದ ಹೊಗೆ ಆ ಅಡುಗೆ ಕೋಣೆಯಲ್ಲಿ ಹಬ್ಬತೊಡಗಿತು.

ಅವುಗಳನ್ನು ಬಲಗೈಯಲ್ಲಿ ಹಿಡಿದು ಫೋಟೋಕ್ಕೆ ಮೂರುಸಲ ಬೆಳಗಿದಳು. ಅಡುಗೆ ಕೋಣೆಯ ನಡುವಲ್ಲಿ ನೇತಾಡುತ್ತಿದ್ದ ಹಾಲಿನ ನೆಲುವಿನ ಬಳಿ ಹೋಗಿ, ಅದರಲ್ಲಿದ್ದ ಬಟ್ಟಲನ್ನು ಎತ್ತಿಕೊಂಡು, ಅದರೊಳಗಿದ್ದ ಹಾಲನ್ನು ಒಂದು ಪುಟ್ಟ ಪಾತ್ರೆಯಲ್ಲಿ ಸುರುವಿದಳು. ಎರಡು ಒಲೆಗಳು ಅವುಗಳ ಹಿಂದೆ ಎರಡು ಮೂರು ಚಿಕ್ಕ ಪಾತ್ರೆಗಳನ್ನು ಇಡಬಹುದಾದಷ್ಟು ಜಾಗವಿತ್ತು. ಎಡಗಡೆಯ ಒಲೆಯ ಪಕ್ಕ ಎಡಲಿ. ಅದರ ಪಕ್ಕ ಅಡ್ಡಲಾಗಿ ಒಂದು ಆಳು ಉದ್ದದ ಮದ್ದಕ್ಕನ ಹಳ್ಳಿ ಕಲ್ಲು. ಅದರಾಚೆ ಬಚ್ಚಲು. ಮನೆಯ ಗೋಡೆಗೆ ಹೊಂದಿಕೊಂಡಂತಿದ್ದ ಅದು ಅಡ್ಡವಾಗಿ ದಾಟಿ ಹೋಗಬಹುದಾದ ಎತ್ತರದ ಕಲ್ಲನ್ನು ಹೊಂದಿತ್ತು. ಮತ್ತು ಬಿದಿರಿನ ಅಡ್ಡ ಬಾಗಿಲನ್ನು ಹೊಂದಿತ್ತು. ಆ ಬಚ್ಚಲಿನ ಒಳಗೆ ಒಂದು ಪುಟ್ಟ ಕಿಟಕಿಯೂ ಇತ್ತು. ಬಲ ಒಲೆಯ ಪಕ್ಕ ಒಂದು ಆಳು ಕುಳಿತುಕೊಂಡಾಗ ಇರುವ ಎತ್ತರದಷ್ಟು ಇಟ್ಟಿಗೆ ತಡೆಗೋಡೆ. ಅದರ ಆಚೆ ಸೌದೆಗಳನ್ನು ಪೇರಿಸಿ ಇಡಲಾಗಿತ್ತು. ಅದರ ಪಕ್ಕ ಒಂದೆರಡು ಮೂರು ಅಡಿ ದೂರದಲ್ಲಿ ನುಸಿರೋಗ ಬಂದು ಒಳಗೆ ಟೊಳ್ಳಾಗಿರುವ ತೆಂಗಿನಮರದ ಥರ ಉದ್ದನೆಯ ಕಡಗೋಲು ತಾನೇನು ಮಾಡುತ್ತಿದ್ದೆ ಎನ್ನುವುದರ ನೆನಪು ಇಲ್ಲದೆ ನಿಸ್ತೇಜಗೊಂಡು ನಿಂತಿತ್ತು ಗೋಡೆಗೆ ಒರಗಿ. ಇದರ ಎದುರಿನ ಗೋಡೆಯ ಹತ್ತಿರ ಒಂದು ಸಣ್ಣದಾದ ಪೆಟ್ಟಿಗೆ ಅನಾದಿಕಾಲದಿಂದ ಮಲಗಿದಂತೆ ಇತ್ತು. ಒಲೆಯ ಹಿಂಭಾಗದ ಹಾಸಿನ ಮೇಲಿನ ಮೂಲೆಯಲ್ಲಿ ಬೆಕ್ಕು ತಪಸ್ಸಿಗೆ ಕುಳಿತ ಮುನಿಯಂತೆ ಇತ್ತು. ಸಾವಜ್ಜಿ ಹಾಲನ್ನು ಸುರುವ ಸದ್ದಿಗೆ ಎಚ್ಚರಗೊಂಡು ಅಥವಾ ಎಚ್ಚರವಾಗಿತ್ತೇನೋ, ಆ ಕಡೆ ಕಣ್ಣು ನೆಟ್ಟಿತು. ನೆಟ್ಟು ನನಗೂ ಅದಕ್ಕೂ ಸಂಬಂಧವಿಲ್ಲ ವೇನೋ ಎನ್ನುವಂತೆ ಮತ್ತೆ ಕಣ್ಣು ಮುಚ್ಚಿಕೊಂಡಿತು. ಇದನ್ನು ಕಂಡು ಅವಳು ನಕ್ಕಳು. ಹಾಲಿನ ಪಾತ್ರೆಯನ್ನು ಹಿಡಿದುಕೊಂಡು ಒಲೆಯ ಹತ್ತಿರ ಹೋಗಿ, ಒಲೆಯ ಮೇಲೆ ಇಟ್ಟಳು.

ಒಲೆಯ ಮುಂದೆ ಕುಳಿತರೆ ಕೈಗೆ ತಾಗುವ ಅಂತರದಲ್ಲಿ ಒಂದು ಮರದ ಕಂಬ. ಅದರ ಬುಡದಲ್ಲಿ ಇದ್ದ ಮಣೆಯನ್ನು ಎಳೆದುಕೊಂಡು ಅದರ ಮೇಲೆ ಕುಳಿತಳು. ಪಾತ್ರೆಯನ್ನು ಮತ್ತೆ ತೆಗೆದು ತನ್ನ ಪಕ್ಕ ಇಟ್ಟುಕೊಂಡಳು. ತಂಬಿಗೆಯನ್ನು ತೆಗೆದುಕೊಂಡು ಎಡಲಿಯಲ್ಲಿ ನೀರನ್ನು ತುಂಬಿಕೊಂಡು ಪಕ್ಕಕ್ಕೆ ಇಟ್ಟುಕೊಂಡಳು. ಸೌದೆಗಳನ್ನು ಪೇರಿಸಿಟ್ಟ ಜಾಗದಲ್ಲಿ ಎರಡು ಅಂಗೈಯಗಲದ ಚಚ್ಚೌಕಾಕಾರದ ಮರದ ಹಲಗೆಯನ್ನು ತೆಗೆದುಕೊಂಡು, ಅದನ್ನು ಎಡಗೈಯಲ್ಲಿ ಹಿಡಿದು, ಬಲಗೈಯಲ್ಲಿ ಸೌದೆಯ ಬಳಿಯೇ ಇದ್ದ ಕಾಯಿಯ ಮೇಲಿನ ಚಿಪ್ಪನ್ನು ಎತ್ತಿಕೊಂಡು ಒಲೆಗಳಲ್ಲಿದ್ದ ಬೂದಿಯನ್ನು ಎಳೆದುಕೊಂಡಳು. ಅದನ್ನು ಸೌದೆಯ ಮುಂಭಾಗಕ್ಕೆ ಇಟ್ಟು, ಮತ್ತೆ ಕೈಗಳನ್ನು ತೊಳೆದುಕೊಂಡು ಹಾಲಿನ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಮುಚ್ಚುಳವನ್ನು ಮುಚ್ಚಿದಳು ಸೌದೆಗಳಲ್ಲಿ ಪುರಳೆಗಳಂತವುಗಳನ್ನು ಆಯ್ದುಕೊಂಡು, ಮುರಿದು, ಒಲೆ ಯೊಳಗೆ ಇಟ್ಟಳು. ನಂತರ ಒಲೆಯ ಹಾಸಿನ ಒಂದು ಜಾಗದಲ್ಲಿ ಇದ್ದ ಬೆಂಕಿಪೊಟ್ಟಣವನ್ನು ಒಂದು ಪುಟ್ಟ ಸೀಮೆ ಎಣ್ಣೆಯ ಬುಡ್ಡಿಗೆ ಹಚ್ಚಿ ಅದರ ಜ್ವಾಲೆಗೆ ಕೆಲವು ಪುರುಳೆಗಳನ್ನು ಹಿಡಿದು ಅವು ಹೊತ್ತಿಕೊಂಡಾಗ ಅವನ್ನು ಈಗಾಗಲೇ ಒಲೆಯಲ್ಲಿ ಇಟ್ಟಿದ್ದ ಪುರುಳೆಗಳಿಗೆ ತುಸು ತಾಗಿಸಿ ಬೆಂಕಿ ಮಾಡಿದಳು. ಆಮೇಲೆ ಒಂದೆರಡಮೂರು ಗಟ್ಟಿ ಸೌದೆಗಳನ್ನು ಎತ್ತಿಕೊಂಡು ಒಲೆಯಲ್ಲಿ ಇಟ್ಟಳು. ಬೆಂಕಿ ನಿಧಾನವಾಗಿ ಎಲ್ಲ ಸೌದೆಗಳಿಗೆ ಹಬ್ಬತೊಡಗಿತು. ಈಗ ಮುಚ್ಚಳವನ್ನು ತೆರೆದಳು. ಎದ್ದು ಅಡುಗೆ ಕೋಣೆಯ ಬಾಗಿಲಿನ ಒಳ ನಿಲುವಿನ ಮೇಲೆ ಇದ್ದ ಡಬ್ಬ ಒಂದನ್ನು ಎತ್ತಿಕೊಂಡು ತನ್ನ ಅಂಗೈಯಿಯ ಬೊಗಸೆಯಲ್ಲಿ ಬೆಲ್ಲದ ಪುಡಿಯನ್ನು ಸುರುವಿಕೊಂಡು, ವಾಪಸ್ಸು ಒಲೆಯ ಹತ್ತಿರ ಬಂದು ಅದನ್ನು ಹಾಲಿನಲ್ಲಿ ಸುರುವಿದಳು. ಉಕ್ಕುತ್ತಿದ್ದ ಹಾಲು ಇದನ್ನು ಹಾಕುತ್ತಿದ್ದ ಹಾಗೆ ಡೌನಾಗತೊಡಗಿತು. ಒಲೆಯ ಹಿಂಭಾಗದ ಗೋಡೆಗೆ ಒಂದು ಪುಟ್ಟಗೂಡು ಹೊಂದಿಕೊಂಡಿತ್ತು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಪುನರ್ನವ: ಅಳಿದುಳಿದ ಕುರುಕ್ಷೇತ್ರದಲ್ಲಿ

ಆ ಗೂಡಿನ ಒಳಗಡೆ ಕೈ ಹಾಕಿ ಒಂದು ಸಣ್ಣದಾದ, ಹೊಗೆ ಮತ್ತು ಮಸಿಗೆ ಕಪ್ಪಾಗಿರುವ, ತಾಮ್ರದ ಡಬ್ಬಿಯನ್ನು ಎತ್ತಿಕೊಂಡಳು. ಅದರ ಮುಚ್ಚಳ ವನ್ನು ಬಿಚ್ಚಿ ಅದರೊಳಗಿನ ಚಿಕ್ಕ ಚಮಚದಲ್ಲಿ ಅದರೊಳಗಿದ್ದ ಕಾಫಿ ಪುಡಿಯನ್ನು ತುಂಬಿಕೊಂಡು ಒಲೆಯ ಮೇಲಿನ ಪಾತ್ರೆಗೆ ಸುರುವಿ ಡಬ್ಬಿಯನ್ನು ತನ್ನ ಸ್ವಸ್ಥಳಕ್ಕೆ ತಲುಪಿಸಿದಳು. ಹಾಲಿನ ಪಾತ್ರೆಯನ್ನು ಇಳಿಸಿ, ಅಲ್ಲೇ ಗೋಡೆಯ ಮೊಳೆಯೊಂದಕ್ಕೆ ನೇತು ಹಾಕಲ್ಪಟ್ಟ ಸೋಸುವ ಜಾಲರವನ್ನು ಎತ್ತಿಕೊಂಡು, ಅದರ ಪಕ್ಕ ಮರದ ರಿಪೀಸನ್ನು ಗೋಡೆಯ ಎರಡು ಮೊಳೆಗಳ ಮೇಲಿಟ್ಟು ಅದರ ಮೇಲೆ ಮಗುಚಿ ಇಟ್ಟಿದ್ದ ಐದಾರು ಸ್ಟೀಲಿನ ಕಪ್ಪುಗಳಲ್ಲಿ ಒಂದನ್ನು ಎತ್ತಿಕೊಂಡು ಅದರಲ್ಲಿ ಸೋಸಿದಳು. ಕಿಟಕಿಯಿಂದ ತೂರಿ ಬರುತ್ತಿದ್ದ ಸೂರ್ಯನ ಬೆಳಕಿಗೆ ಮನೆಯೊಳಗಿನ ಧೂಳಿನ ಕಣಗಳು ಮತ್ತು ಅವುಗಳ ಜೊತೆಗೆ ಹೊಗೆ ಆಟವಾಡುತ್ತಿದ್ದವು ಬೆಳಕಿನ ಓರೆಯಾಕಾರದ ದಾರಿ ಮಾಡಿಕೊಂಡು. ಗವಾಕ್ಷಿಯಿಂದ ಇನ್ನೂ ಬೆಳಕು ನಿಚ್ಚಳವಾಗಿ ಹರಿದು ಬರುತ್ತಿರು ವಂತೆ ಕಾಣುತ್ತಿರಲಿಲ್ಲ. ಅವಳು ಕಾಫಿಯನ್ನು ಕುಡಿಯಲು ಬಲಗೈಯನ್ನು ಆಡಿಸುವಾಗ ಅವಳ ಕೈಯಲ್ಲಿದ್ದ ಎರಡೋ ಮೂರೋ ಬಳೆಗಳು ಒಂದು ಹಿನ್ನಲೆ ಸಂಗೀತವನ್ನು ಒದಗಿಸುತ್ತಿದ್ದವು. ಸ್ಟೀಲಿನ ಕಪ್ಪಿನ ಮೇಲೆ ಅವಳ ಪುಟ್ಟದಾದ ಆಕೃತಿ ಮೂಡಿತ್ತು. ಅವಳು ಕುಡಿಯುವ ಸಂದರ್ಭದಲ್ಲೆ ಅವಳ ಮನಸ್ಸು ಇನ್ನು ಒಂದು ಗಂಟೆ ಅಥವಾ ಒಂದೂವರೆ ಗಂಟೆಯಲ್ಲಿ ಅವಳು ಮಾಡಬಹುದಾಗಿದ್ದ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಜೀರಿಗೆ, ಎಳ್ಳು ಹಾಕಿ ರಾಗಿಯ ತಪ್ಪಲೆ ರೊಟ್ಟಿಯನ್ನು ರೂಪಿಸುತ್ತಿತ್ತು.

ಕಸಗುಡಿಸಿ, ಕಸವನ್ನು ಮತ್ತು ಬೂದಿಯನ್ನು ಒಂದು ಮೊರದಲ್ಲಿ ತುಂಬಿಕೊಂಡು ಮನೆಯ ಹಿಂಭಾಗದ ತಿಪ್ಪೆಗೆ ಹಾಕಿ, ನಂತರ ಒಂದು, ಒಂದೂವರೆ ಗಂಟೆಯಲ್ಲಿ ಇದೂ ಆಗಿ, ಮುಂಬಾಗಿಲಿನಿಂದ ಹಗಲಿನ ಬೆಳಕು ಒಳಗಡೆ ಬಂದು ಸೆಟ್ಲಾಗತೊಡಗುತ್ತಿತ್ತು. ಆ ಬೆಳಕಿನಲ್ಲಿ ನಡುಮನೆಯಲ್ಲಿ ಕುಳಿತು ರೊಟ್ಟಿಯ ಕೊನೆಯ ತುತ್ತನ್ನು ಮುಗಿಸಿ ಕೈ ತೊಳೆದುಕೊಳ್ಳುತ್ತಿದ್ದಳು. ಅಷ್ಟೊತ್ತಿಗೆ, ಅಜ್ಜಿ ಅಜ್ಜಿ ಎಂದು ಪುಟ್ಟ ಹುಡುಗಿ ಕೂಗಿಕೊಂಡು ಬಂದಳು. ‘ಯಾಕೆ ರಶ್ಮಿ, ಏನಾಯ್ತೆ, ನಿಮ್ಮಪ್ಪ, ದೊಡ್ಡಪ್ಪ ಮತ್ತೆ ಗುದ್ದಾಡ್ತಿದರೇನೆ?’ ಎಂದು ಕೇಳಿದಳು. ‘ಅಜ್ಜಿ ಇಬ್ಬರೂ ಮನೆ ಮುಂದಿನ ತೆಂಗಿನ ಮರದ ಬೇಲಿಯೊಳಗಡೆ ಬಿದ್ದಿದ್ದಾರೆ’ ಎಂದಳು. ‘ಮೂರು ಬಿಟ್ಟೋವು, ನನ್ನ ಹೊಟ್ಟೆಗೆ ಯಾಕರ ಹುಟ್ಟಿದವೋ ಏನೋ’ ಎಂದು ಶಪಿಸಿಕೊಂಡಳು. ಮೂರು ದಿನದ ಹಿಂದೆ, ಅಂದರೆ, ಇವೊತ್ತು ಸೋಮವಾರ ಅಲ್ಲವೆ, ಭಾನುವಾರ, ಶನಿವಾರ, ಹ್ಞಾ ಶುಕ್ರವಾರ ಮಧ್ಯಾಹ್ನ ಹೀಗಾಗಿತ್ತು: ಸಾರು ಮಾಡಲು ಸೊಪ್ಪು ಕಿತ್ತುಕೊಂಡು ಬರಲು ಹೊಲದ ಕಡೆ ಹೋಗಿದ್ದ ಅವಳು ತನ್ನ ಚಿಕ್ಕ ಮಗ ರಂಗ ಮತ್ತು ದೊಡ್ಡ ಮಗ ಓಬ ಇಬ್ಬರೂ ಒಬ್ಬರಿಗೊಬ್ಬರು ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು ಸೆಣಸಾಟಕ್ಕೆ ಇಳಿದಿದ್ದುದನ್ನು ಕಂಡಿದ್ದಳು. ಥೂ ಮಾನಮರ್ಯಾದೆ ಇಲ್ಲದವೆ, ಯಾಕರ ಹುಟ್ಟಿದರೋ, ನಿಮ್ಮಪ್ಪ ಹೋದನು ಹೋದ ತಣ್ಣಗೆ, ನನ್ನೂ ಅವನ ಜೊತೆ ಕರಕೊಂಡು ಹೋಗಬಾರದಿತ್ತ, ಈ ಎಲ್ಡು ನೇತ್ರಗಳಿಂದ ಏನೆಲ್ಲ ನೋಡಬೇಕೋ ಎಂದು ಮಡಿಲಲ್ಲಿ ಸೊಪ್ಪನ್ನು ಬಿಗಿಯಾಗಿ ಕಟ್ಟಿಕೊಂಡು ಅವರನ್ನು ಬಿಡಿಸಲು ಹೋಗಿದ್ದಳು. ಚಿಕ್ಕ ಮಗ ರಂಗ ‘ನಿಮ್ಮವ್ವನ್ನ ನೀನ್ಯಾಕೆ ಬಂದೆ ಹೋಗೆ ಇಲ್ಲಿ’ ಎಂದು ಅವಳನ್ನು ದೂಡಿದ. ಅವಳು ಮಾರುದೂರ ಹೋಗಿ ಬಿದ್ದಳು. ‘ದೊಡ್ಡೋನು ಅನ್ನಿಸಿಕೊಂಡೋನು ನಿನಗೂ ಬುದ್ದೀ ಇಲ್ಲವೇನಲೇ ಓಬ, ಅವನು ದೂಕಿದರೂ ಸುಮ್ಮನಿದಿಯಾ ಎಂದು ಬೈದುಕೊಳ್ಳುತ್ತ ಸಾಯಿರಿ, ನಿಮ್ಮಿಂದ ಯಾವ ದೇಶ ಉದ್ಧಾರ ಆಗಬೇಕು, ಯಾವ ಕೇರಿಗೆ ಒಳ್ಳೆದು ಆಗಬೇಕು, ಹೊಲ ಉಳಿಸಿದ್ದಕ್ಕೆ ನಿಮಗೆ ಇಷ್ಟೊಂದು ಧಿಮಾಕು, ಅವಾಗ್ಲೆ ಎಲ್ಲ ಮಾರಿದ್ದಿದ್ದರೆ ಚೆನ್ನಾಗಿರ್ತಿತ್ತು’ ಎಂದು ಬೈದುಕೊಂಡ ತನ್ನನ್ನು ತಾನೇ ಶಪಿಸಿಕೊಳ್ಳುತ್ತ ಮನೆಯ ಕಡೆ ಬಂದಿದ್ದಳು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಎಡಬಲಗಳ ಸುತ್ತಮುತ್ತ: ಮಾತಿನ ಧೂಳು

ಕೃತಿ: ಯಾಬ್ಲಿ (ಸಣ್ಣಕತೆಗಳು)
ಲೇಖಕ: ಎಚ್. ಆರ್‌ ರಮೇಶ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 160 ರೂ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

15 ವರ್ಷ ಪೂರೈಸಿದ ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ ಪುಸ್ತಕಕ್ಕೆ ಹೊಸ ಮೆರಗು

Splendours of Royal Mysore: ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ ಪುಸ್ತಕವು 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸ ಮೆರಗು ನೀಡಿ ಮರುಮುದ್ರಿಸಿ ಪ್ರಕಟಿಸಲಾಗಿದೆ.

VISTARANEWS.COM


on

By

Splendours of Royal Mysore book
Koo

ಮೈಸೂರು/ಬೆಂಗಳೂರು: ಮೈಸೂರು ಸಂಸ್ಥಾನದ ಗತ ವೈಭವವನ್ನು ಸಾರುವ ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ (Splendours of Royal Mysore) ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ದಿ ಒಡೆಯರ್ಸ್‌ ಎಂಬ ಪುಸ್ತಕ ಪ್ರಕಟಣೆಗೊಂಡು 15 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಡಬ್ಲ್ಯೂಎಂಜಿ ಹಾಗೂ ಎಂಬಸ್ಸಿ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸ್ಪ್ಲೆಂಡರ್ಸ್ ಆಫ್ ಮೈಸೂರ್ ಪುಸ್ತಕದ ಕರ್ತೃ ವಿಕ್ರಂ ಸಂಪತ್ ಸೇರಿ ಹಲವು ಮಂದಿ ಗಣ್ಯರು ಭಾಗಿ ಆಗಿದ್ದರು. ಕನ್ನಡ ನಾಡು ನುಡಿ ವಿಚಾರವಾಗಿ ಮೈಸೂರು ಸಂಸ್ಥಾನ ನೀಡಿದ ಕೊಡುಗೆಯನ್ನು ಸಾರುವ ಸ್ಪ್ಲೆಂಡರ್ಸ್ ಆಫ್ ಮೈಸೂರ್ ಪುಸ್ತಕದಲ್ಲಿ ಮೈಸೂರು ರಾಜ ವಂಶಸ್ಥರ ಕುರಿತಾಗಿ ವಿಸ್ತೃತ ಮಾಹಿತಿಯನ್ನು ನೀಡಲಾಗಿದೆ.

ವಿಕ್ರಮ್ ಸಂಪತ್ ಅವರ “ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರು” ಒಂದು ಭವ್ಯವಾದ ಮತ್ತು ದೃಷ್ಟಿಗೋಚರವಾಗಿ ಅದ್ಭುತವಾದ ಪುಸ್ತಕವಾಗಿದೆ. ವೈಭವದ ಮೈಸೂರಿನ ಸಾರವನ್ನು ಸೆರೆ ಹಿಡಿದಿದೆ. ನಗರದ ರಾಜಮನೆತನದ ಗತಕಾಲದ ಬಗ್ಗೆ ಸಂಶೋಧನೆ ಮತ್ತು ಮಾಹಿತಿಯನ್ನು ಸಂಗ್ರಹಿಸುವ ಗಮನಾರ್ಹ ಕೆಲಸವನ್ನು ಮಾಡಿದ್ದಾರೆ. ಜತೆಗೆ ಮೈಸೂರು ನಗರದ ಅನೇಕ ಗುಪ್ತ ರತ್ನಗಳನ್ನು ಬಹಿರಂಗಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಯದುವೀರ್‌, ಆಧುನಿಕ ಕಾಲಕ್ಕೆ ಮೈಸೂರು ಅರಸರ ಇತಿಹಾಸದ ಬಗ್ಗೆ ತಿಳಿಯಬೇಕಾದರೆ ಈ ಪುಸ್ತಕವನ್ನು ಓದಬಹುದು. ಕನ್ನಡದಲ್ಲಿ ಮೈಸೂರು ಸಂಬಂಧ ಹಲವಾರು ಪುಸ್ತಕಗಳಿವೆ. ಆದರೆ ಇಂಗ್ಲೀಷ್‌ ಭಾಷೆಯಲ್ಲಿ ಯಾವುದೇ ಪುಸ್ತಕ ಇರಲಿಲ್ಲ. ಇತಿಹಾಸ ಸದಾ ಎಲ್ಲರಿಗೂ ಲಭ್ಯವಿರಲಿ ಎಂದರು.

ಬಳಿಕ ಮಾತನಾಡಿದ ಲೇಖಕ ವಿಕ್ರಂ ಸಂಪತ್, ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ ಪುಸ್ತಕವನ್ನು ಸತತ 10 ವರ್ಷಗಳ ಸಂಶೋಧನೆ ನಡೆಸಿ ಬರೆಯಲಾಗಿದೆ. 2008ರಲ್ಲಿ ಮೊದಲ ಬಾರಿ ಪ್ರಕಟಿಸಲಾಯಿತು. ಈ ಪುಸ್ತಕದಲ್ಲಿ ಮೈಸೂರಿನ 600 ವರ್ಷದ ರಾಜವಂಶಸ್ಥರ ಇತಿಹಾಸ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಹೇಗೆ ಬೆಳೆಯಿತು ಎಂಬುದನ್ನು ತಿಳಿಸಲಾಗಿದೆ. ಕರ್ನಾಟಕ ಹೊರತು ಪಡಿಸಿ ಹೊರಗಿನವರು ಓದಲು ಇಂಗ್ಲಿಷ್‌ ಭಾಷೆಯಲ್ಲಿ ಯಾವುದೇ ಪುಸ್ತಕ ಇರಲಿಲ್ಲ. ಅದನ್ನೂ ಈಗ ಕೆಲವು ಬದಲಾವಣೆಗಳೊಂದಿಗೆ ಮರುಮುದ್ರಿಸಲಾಗಿದೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಕರ್ನಾಟಕ

Award Ceremony : ಪಾಂಚಜನ್ಯ ಪ್ರತಿಷ್ಠಾನದ 11ನೇ ವಾರ್ಷಿಕೋತ್ಸವ, ಪುರಸ್ಕಾರ ಪ್ರದಾನ ಇಂದು

Award Ceremony : ಬೆಂಗಳೂರಿನ ಪಾಂಚಜನ್ಯ ಪ್ರತಿಷ್ಠಾನ ನೀಡುವ 11ನೇ ವರ್ಷದ ವಾರ್ಷಿಕ ಪ್ರಶಸ್ತಿಗೆ ನಿವೃತ್ತ ಶಿಕ್ಷಕ ಸುರೇಶ್‌ ವಿ. ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

VISTARANEWS.COM


on

Panchajanya award Suresh Kulakarni
Koo

ಬೆಂಗಳೂರು: ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ – ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನದ (Panchajanya Foundation) ಹನ್ನೊಂದನೇ ವಾರ್ಷಿಕೋತ್ಸವ ಮತ್ತು ಧಾರವಾಡದ ನಿವೃತ್ತ ಶಿಕ್ಷಕ ಸುರೇಶ್.ವಿ.ಕುಲಕರ್ಣಿ (Suresh V Kulakarni) ಅವರಿಗೆ 2023ನೇ ಸಾಲಿನ ಪ್ರತಿಷ್ಠಿತ ‘ಪಾಂಚಜನ್ಯ ಪುರಸ್ಕಾರ’ (Panchajanya puraskara) ಪ್ರದಾನ ಸಮಾರಂಭ (Award Ceremony) ಡಿಸೆಂಬರ್‌ 9 (ಭಾನುವಾರ) ಬೆಂಗಳೂರಿನ ಜಯನಗರದಲ್ಲಿ ನಡೆಯಲಿದೆ.

ಪಾಂಚಜನ್ಯ ಪ್ರತಿಷ್ಠಾನ ಕಳೆದ ಹತ್ತು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಪ್ರತಿಷ್ಠಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಕ್ಷರ, ಆರೋಗ್ಯ, ಅಧ್ಯಾತ್ಮ ಕ್ಷೇತ್ರದಲ್ಲಿನ ಸಾಧಕ ಶ್ರೇಷ್ಠರನ್ನು ಗುರುತಿಸಿ ಪಾಂಚಜನ್ಯ ಪುರಸ್ಕಾರ ನೀಡಿ ಗೌರವಿಸುವ ಪರಿಪಾಠ ಬೆಳೆದು ಬಂದಿದೆ. ಅದರಂತೆ ಈ ಬಾರಿಯ ಪುರಸ್ಕಾರವನ್ನು ಸುರೇಶ್‌ ವಿ. ಕುಲಕರ್ಣಿ ಅವರಿಗೆ ನೀಡಲಾಗುತ್ತಿದೆ.

ಡಿಸೆಂಬರ್‌ 9ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ಜಯನಗರ 4ನೇ ಬ್ಲಾಕ್‌ನ ಯುವಪಥ, ವಿವೇಕ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ. ಆರ್.ವಿ.ಶಿಕ್ಷಣ ಸಮೂಹದ ನಿರ್ದೇಶಕರಾಗಿರುವ ಡಾ.ಟಿ.ವಿ.ರಾಜು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬಿಹೆಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಡಾ.ಕೆ.ಎಸ್.ಸಮೀರ ಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ವಿಶೇಷ ಆಹ್ವಾನಿತರಾಗಿ ಎಂಇಎಸ್ ಶಿಕ್ಷಣ ಸಮೂಹ ಶೈಕ್ಷಣಿಕ ನಿರ್ದೇಶಕರು ಡಾ.ಎಚ್.ಎಸ್.ಗಣೇಶ ಭಟ್ಟ ಪಾಲ್ಗೊಳ್ಳುವರು ಮತ್ತು ಕಾರ್ಯಕ್ರಮವನ್ನು ಆರ್ಕಿಡ್ ಲ್ಯಾಮಿನೇಟ್ಸ್ ಪ್ರೈವೇಟ್‌ ಲಿ. ಮತ್ತು ಬ್ಲೂನೀಮ್ ಮೆಡಿಕಲ್ ಡಿವೈಸೆಸ್ ಪ್ರೈ.ಲಿ ಪ್ರಾಯೋಜಿಸಿದ್ದಾರೆ , ಪ್ರತಿಷ್ಠಾನದ ಟ್ರಸ್ಟಿಗಳಾದ ಎಸ್.ವಿ.ಸುಬ್ರಹ್ಮಣ್ಯ , ಅನಂತ ವೇದಗರ್ಭಂ ಹಾಗು ವೆಂಕಟೇಶ ಆರ್. ವೇದಾಂತಿ ಉಪಸ್ಥಿತರಿರುವರು ಎಂದು ಸಂಸ್ಥಾಪಕ ಗೌರವ ಕಾರ್ಯದರ್ಶಿ ಮುರಳಿ ಎಸ್.ಕಾಕೋಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತ ಸುರೇಶ್‌ ವಿ. ಕುಲಕರ್ಣಿ ಕಿರು ಪರಿಚಯ

ಸುರೇಶ್.ವಿ.ಕುಲಕರ್ಣಿ ಅವರು ಧಾರವಾಡದ ಕೆ.ಇ. ಬೋರ್ಡ್ ಸ್ಕೂಲ್‌ನ ನಿವೃತ್ತ ಮುಖ್ಯೋಪಾಧ್ಯಾಯರು. ಪ್ರಸಿದ್ಧ ಕಲಾವಿದರೂ ಹೌದು. ದ.ರಾ ಬೇಂದ್ರೆ ಕುರಿತು ಸಮಗ್ರವಾಗಿ ಮಾತನಾಡುವ ವಾಗ್ಮಿ. ಕುಲಕರ್ಣಿಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಇಡಿ ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದರು; ವನ್ಯಜೀವಿ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಜಿ.ಡಿ.ಆರ್ಟ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುವ “ವಿಜ್ಞಾನ ಸಂಗತಿ” (ವಿಜ್ಞಾನ ಮಾಸಿಕ ಪತ್ರಿಕೆ) ಸಂಪಾದಕರಾಗಿದ್ದರು. ಆಕಾಶವಾಣಿ ಧಾರವಾಡದಿಂದ ಕುಲಕರ್ಣಿಯವರ 100ಕ್ಕೂ ಹೆಚ್ಚು ಕಾರ್ಯಕ್ರಮಗಳು ಪ್ರಸಾರವಾಗಿವೆ.

ಇದನ್ನೂ ಓದಿ : The Nandi Awards: ನಂದಿ ಫಿಲ್ಮ್‌ ಅವಾರ್ಡ್; ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ

Panchajanya foundation and award

ಪಾಂಚಜನ್ಯ ಪ್ರತಿಷ್ಠಾನದ ಕಿರು ಪರಿಚಯ

ಸಮಾನ ಮನೋಧರ್ಮದ ಗೆಳೆಯರು ಒಂದಾಗಿ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ,ಆರೋಗ್ಯ ಮತ್ತು ಅಧ್ಯಾತ್ಮ ವೆಂಬ ಮಂತ್ರಗಳ ಬುನಾದಿಯ ಮೇಲೆ ಭವ್ಯ ಸಮಾಜ ನಿರ್ಮಾಣದ ದೀಕ್ಷೆ ತೊಟ್ಟು, ಹಲವಾರು ಜನಮುಖಿ ಕಾರ್ಯಗಳನ್ನು ನಡೆಸುತ್ತ ಒಂದು ದಶಕದಿಂದ ನಿಸ್ವಾರ್ಥ ಚಿಂತನೆ ವಿಶಾಲದೃಷ್ಟಿಯಿಂದ ಸದ್ದಿಲ್ಲದೆ ಸೇವಾಕ್ರಾಂತಿ ಮಾಡುತ್ತ ಬಂದಿದೆ. ಪಾಂಚಜನ್ಯ ಮೊಳಗುವುದಕ್ಕಾಗಿ ಅಲ್ಲ, ದೀನರ ಬಾಳು ಬೆಳಗುವುದಕ್ಕಾಗಿ ಉದಯವಾಗಿದೆ ಎನ್ನುತ್ತಾರೆ ಈ ಪ್ರತಿಷ್ಠಾನವನ್ನು ಮುನ್ನಡೆಸುತ್ತಿರುವವರು.

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಅಗಸ್ತ್ಯರ ಆಶ್ರಮದಲ್ಲಿ ರಾವಣ ವಧೆಗೆ ಸಿದ್ಧವಾದ ವೇದಿಕೆ

ಜನಪೀಡಕನಾದ ರಾವಣನ ವಧೆಗಾಗಿಯೇ ದೇವತೆಗಳು ರಚಿಸಿದ ಮಹಾನಾಟಕದಲ್ಲಿ ರಾಮ ಲಕ್ಷ್ಮಣ ಸೀತೆಯರು ಮಾಡಿದ ಪಾತ್ರಪೋಷಣೆಯನ್ನು ವಾಲ್ಮೀಕಿ ಕವಿ ರಸಪೂರ್ವಕವಾಗಿ ರಾಮಾಯಣದಲ್ಲಿ ಕಂಡರಸಿದ್ದಾರೆ.

VISTARANEWS.COM


on

mayamruga
Koo

ರಾವಣತ್ವದ ದರ್ಪಕ್ಕೆ ಸೀತಾಕಂಪನವನ್ನು ತಂದ ಅಕಂಪ

dhavala dharini by Narayana yaji

ಹಿಂದಿನ ಸಂಚಿಕೆಯಲ್ಲಿ ಸೀತಾಪಹರಣದ ಘಟನೆಯ ಹಿಂದಿನ ಮುಖ್ಯವಾದ ವಿಷಯಗಳನ್ನು ಗಮನಿಸಿದೆವು. ಅಕಂಪನ ಮೂಲಕ ರಾವಣನ ಮನಸ್ಥಿತಿಯನ್ನು ತಿಳಿದುಕೊಳ್ಳೋಣ.

ಭಾರ್ಯಾ ತಸ್ಯೋತ್ತಮಾ ಲೋಕೇ ಸೀತಾ ನಾಮ ಸುಮಧ್ಯಮಾ.
ಶ್ಯಾಮಾ ಸಮವಿಭಕ್ತಾಙ್ಗೀ ಸ್ತ್ರೀರತ್ನಂ ರತ್ನಭೂಷಿತಾ৷৷ಅ.31.29৷৷

ರಾಮನಿಗೆ ಸುಂದರವಾದ ನಡುವುಳ್ಳ ಸೀತಾ ಎನ್ನುವ ಹೆಸರಿನ ಉತ್ತಮಳಾದ ಹೆಂಡತಿಯಿದ್ದಾಳೆ. ಅವಳು ಯೌವನಮಧ್ಯಸ್ಥಳು. ಆಕೆಯ ಅಂಗಗಳು ಯಾವ ಯಾವ ಪರಿಮಾಣದಲ್ಲಿರಬೇಕೋ ಅಷ್ಟೇ ಪರಿಣಾಮದಲ್ಲಿ ಸಮವಾಗಿ ವಿಭಕ್ತವಾಗಿವೆ. ರತ್ನಾಭರಣಗಳಿಂದ ಭೂಷಿತೆಯಾಗಿರುವ ಆಕೆ ಸ್ತ್ರೀ ರತ್ನವೇ ಆಗಿದ್ದಾಳೆ.

ಅಕಂಪನೆನ್ನುವ ರಾವಣನ ಗೂಢಚರ. ಆತ ಜನಸ್ಥಾನದಲ್ಲಿ ಖರನೊಂದಿಗೆ ಇದ್ದ. ರಾಮನ ಬಾಣದಿಂದ ಅದು ಹೇಗೋ ತಪ್ಪಿಸಿಕೊಂಡು ಲಂಕೆಗೆ ಬಂದು ರಾವಣನನ್ನು ಕಂಡು ಜನಸ್ಥಾನದಲ್ಲಿ ರಾಮನ ಪರಾಕ್ರಮಕ್ಕೆ ಖರ ದೂಷಣ ತ್ರಿಶಿರಾದಿಗಳ ಸಹಿತ ಹದಿನಾಲ್ಕು ಸಾವಿರ ರಾಕ್ಷಸರನ್ನು ರಾಮ ಏಕಾಂಗಿಯಾಗಿ ಸಂಹರಿಸಿದ ವಿವರಗಳನ್ನು ತಿಳಿಸಿದ. ಇದಕ್ಕೆ ಕಾರಣಳಾದ ಶೂರ್ಪನಖಿಯ ವಿಷಯವನ್ನು ರಾವಣನಿಂದ ಮುಚ್ಚಿಟ್ಟ. ಕ್ರುದ್ಧನಾದ ರಾವಣ ಆಗಲೇ ಎದ್ದು ರಾಮನನ್ನು ಕೊಂದುಬಿಡುವೆ ಎಂದು ಜನಸ್ಥಾನಕ್ಕೆ ಹೊರಡಲು ಸಿದ್ಧನಾದನು. ಆಗ ಆತನನ್ನು ತಡೆಯುವ ಅಕಂಪ ರಾವಣನಿಗೆ ರಾಮನ ಪರಾಕ್ರಮವನ್ನು ವಿವರವಾಗಿ ತಿಳಿಸುತ್ತಾನೆ. ಚಿನ್ನದ ರೆಕ್ಕೆಗಳುಳ್ಳ ರಾಮನ ಬಾಣಗಳಿಗೆ ಹುಸಿಯಿಲ್ಲವೆಂದು ಎಚ್ಚರಿಸುತ್ತಾನೆ, ದೇವತೆಗಳಿಂದಲೂ ರಾಮನು ಅವಧ್ಯನೆಂದು ಹೇಳುತ್ತಾನೆ. ರಾವಣ ತನ್ನ ಪರಾಕ್ರಮದಿಂದ ದೇವತೆಗಳನ್ನು ಸೋಲಿಸಿದವ. ಯಮಧರ್ಮನ ಕಾಲ ದಂಡವನ್ನೇ ಕಸಿದುಕೊಂಡವ. ಅಂತಹಾ ರಾವಣ ರಾಮನ ಪರಾಕ್ರಮದ ಕುರಿತು ಅಕಂಪ ಹೇಳಿದ ಮಾತುಗಳನ್ನು ಕೇಳುತ್ತಾನೆ ಎಂದರೆ ಆತನೋರ್ವ ನಂಬಿಗಸ್ಥ ದೂತನಾಗಿರಲೇಬೇಕು. ರಾವಣ ಎಲ್ಲ ಯುದ್ಧವನ್ನು ಗೆದ್ದಿದ್ದೂ ಕುಟಿಲತನದಿಂದಲೇ. ಅಜೇಯನೇನೂ ಅಲ್ಲ; ಅದಾಗಲೇ ಆತ ಕಾರ್ತವೀರ್ಯ, ಬಲಿ, ವಾನರರಾಜನಾದ ವಾಲಿಯ ಹತ್ತಿರ ಸೋತಿದ್ದ. ತನ್ನ ವರದ ಮಿತಿಯ ಅರಿವು (ಮನುಷ್ಯರನ್ನು ಹೊರತು ಪಡಿಸಿ ಬೇರೆ ಯಾರೂ ತನ್ನನ್ನು ಕೊಲ್ಲಲು ಸಾಧ್ಯವಾಗದಿರಲಿ ಎನ್ನುವುದು ಆತ ಬೇಡಿ ಪಡಕೊಂಡ ವರ) ಆತನಿಗೆ ಆಗಿರಬೇಕು. ಅಕಂಪನೇ ರಾವಣನಿಗೆ ರಾಮನನ್ನು ನೇರವಾದ ಯುದ್ಧದಲ್ಲಿ ಕೊಲ್ಲಲು ಸಾಧ್ಯವಾಗದಿದ್ದರೂ ಕುಟಿಲತೆಯಿಂದ ಆತನನ್ನು ಕೊಲ್ಲಬಹುದು ಎನ್ನುತ್ತಾ ಸ್ತ್ರೀ ಚಪಲಚಿತ್ತನಾದ ರಾವಣನಿಗೆ ಸೀತೆಯ ಸೌಂದರ್ಯದ ಕುರಿತು ಮೇಲೆ ಹೇಳಿದ ಶ್ಲೋಕದಲ್ಲಿದ್ದಂತೆ ವರ್ಣಿಸುತ್ತಾನೆ.

ರಾಮಾಯಣದಲ್ಲಿ ರಾವಣನ ಪರಿಚಯವಾಗುವದೇ ಅಕಂಪನ ಮೂಲಕವಾಗಿ. ಅಲ್ಲಿಯ ತನಕ ಅವನ ವಿವರ ಬರುವುದೇ ಇಲ್ಲ. ರಾವಣನ ಶೌರ್ಯ ರೂಪ ಮತ್ತು ತೇಜಸ್ಸಿನ ಕುರಿತು ಕವಿ ವಿವರಿಸುವುದು ಶೂರ್ಪನಖಿ ರಾವಣನಲ್ಲಿಗೆ ಬಂದಾಗ. ಅರಣ್ಯಕಾಂಡದ 32ನೆಯ ಸರ್ಗ ಸಂಪೂರ್ಣವಾಗಿ ರಾವಣನ ವರ್ಣನೆಗಾಗಿ ಮೀಸಲಾಗಿದೆ. ಅದ್ಭುತ ತೇಜಸ್ಸು ಆತನದ್ದು. ಆಮೇಲೆ ಹನುಮಂತ ಸೀತಾನ್ವೇಷಣೆಯಲ್ಲಿ ಲಂಕೆಗೆ ಹೋದಾಗ ಅಶೋಕವನವನ್ನು ಹಾಳುಗೆಡವಿ ರಾವಣನ ಆಸ್ಥಾನಕ್ಕೆ ಬಂಧಿಯಾಗಿ ಬಂದಾಗ ರಾವಣನನ್ನು ನೋಡಿ ಅವನ ರೂಪವನ್ನು ವರ್ಣಿಸುತ್ತಾನೆ. ರಾಕ್ಷಸರಾಜನ ರೂಪ ಹನುಮಂತನನ್ನೇ ಸೆರೆಹಿಡಿದು ಬಿಟ್ಟಿತ್ತು. ಅಂತಹಾ ವರ್ಚಸ್ಸುಳ್ಳವ ರಾವಣ. ರಾಮ ಕಥಾ ನಾಯಕನಾದರೆ ರಾವಣ ರಾಮಾಯಣದ ಪ್ರತಿನಾಯಕ. ರಾವಣ ಇಲ್ಲದಿದ್ದರೆ ರಾಮನ ಅವತಾರವೇ ಆಗುತ್ತಿರಲಿಲ್ಲ. ಆತನ ಶೌರ್ಯ ಎಷ್ಟು ಪ್ರಖರವೋ ಅದೇ ರೀತಿ ಆತನ ಹೆಣ್ಣುಬಾಕತನವೂ ಅಷ್ಟೇ ತೀವ್ರವಾಗಿತ್ತು.

ಉತ್ತರಕಾಂಡದಲ್ಲಿರುವ ರಾವಣನ ಶೌರ್ಯ ಮತ್ತು ಆತನ ಸಾಹಸವನ್ನು ಮೊದಲೇ ಕವಿ ಬರೆದಿದ್ದರೆ ಓದುಗರೂ ಸಹ ರಾಮನಿಗಿಂತಲೂ ರಾವಣನ ಪಕ್ಷಪಾತಿಯಾಗಿಬಿಡುವ ಸಾಧ್ಯತೆ ಇತ್ತು. ರಾವಣನಂತಹ ವ್ಯಕ್ತಿಗಳ ಸಾವು ಏಕಾಗಬೇಕೆಂದು ತಿಳಿಸಬೇಕಾದರೆ ಆತನ ದುರ್ಗುಣಗಳ ಪರಿಚಯ ಮೊದಲು ಆಗಲೇ ಬೇಕು. ರಾವಣನ ವಿದ್ವತ್ತು ಹೇಗೇ ಇರಲಿ, ಆರು ಕೋಟಿ ವರ್ಷಗಳ ಕಾಲ ಲೋಕವನ್ನು ಆಳಿದವ. ರಾವಣನ ವ್ಯಕ್ತಿತ್ವದ ಸ್ಥಾಯಿ ಭಾವ ದುರುಳತನ, ಪರಸ್ತ್ರೀಯರ ಅಪಹರಣ, ಸುಲಿಗೆ ಮತ್ತು ವಿಪರೀತ ಆತ್ಮಪ್ರಶಂಸೆ. ಭೂಗತ ಲೋಕದ ಪಾಪಿಗಳು ದಾನ ಧರ್ಮ ಮಾಡಿ ಜನರ ಅನುಕಂಪ ಗಳಿಸಿಕೊಂಡಂತೆ ಆಗಕೂಡದು. ವಾಲ್ಮೀಕಿಯ ಈ ರಸಪ್ರಜ್ಞೆಯನ್ನು ಕಾವ್ಯದುದ್ದಕ್ಕೂ ಕಾಣಬಹುದಾಗಿದೆ. ಪ್ರಪಂಚದಲ್ಲಿರುವ ಸುಂದರಿಯರೆಲ್ಲರೂ ತನ್ನ ಅಂತಃಪುರಕ್ಕೆ ಸೇರಬೇಕೆನ್ನುವ ಆತನ ವ್ಯಕ್ತಿತ್ವಕ್ಕೆ ತಕ್ಕ ರೀತಿಯಲ್ಲಿ ಅವನ ದೂತ ವರ್ಣಿಸುತ್ತಾನೆ. ಶೂರ್ಪನಖಿಗೆ ರಾಮ ಲಕ್ಷ್ಮಣರು ನೀಡಿದ ಶಿಕ್ಷೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾನೆ. ಸೀತೆಯ ಅಂದವನ್ನು ಬಿಟ್ಟಬಾಯಿಯಿಂದ ಕಿವಿಯನ್ನು ನೆಟ್ಟಗೆ ಮಾಡಿಕೊಂದು ಕೇಳಿದ ರಾವಣನಿಗೆ ಅವಳನ್ನು ತಂದೇ ತರಬೇಕೆನ್ನುವ ಬಯಕೆ ಹುಟ್ಟಿತು. ಸೀತೆಯ ಸೌಂದರ್ಯವನ್ನು ಅಕಂಪ ವರ್ಣಿಸಿರುವುದು ಸಂಭೋಗ ಶೃಂಗಾರದ ವಿಶೇಷಣಗಳಾದ ಶಾಮಾ, ಸಮವಿಭಕ್ತಾಙ್ಗೀ ಮತ್ತು ಸುಮಧ್ಯಮಾ ಎನ್ನುವುದರ ಮೂಲಕ. ಸುಮಧ್ಯಮಾ ಸುಂದರವಾದ ನಡುವುಳ್ಳವಳು ಇದಕ್ಕಿಂತ ಮುಖ್ಯವಾಗಿ ಸಮವಿಭಕ್ತಾಙ್ಗೀ ಎಂದರೆ ಯಾವ ಯಾವ ಅಂಗಗಳು ಎಷ್ಟು ಪ್ರಮಾಣದಲ್ಲಿ ಇರಬೇಕೋ ಅಷ್ಟೇ ಪರಿಣಾಮದಲ್ಲಿ ಸಮವಾಗಿ ವಿಭಕ್ತವಾಗಿದೆ. ಉತ್ತಮ ಜಾತಿಯ ಅಥವಾ ಪ್ರಸವಿಸದ ಹೆಂಗಸಿಗೆ ಶಾಮಾ ಎನ್ನುತ್ತಾರೆ. ಶೀತೇ ಸುಖೋಷ್ಣಸರ್ವಾಙ್ಗೀ ಗ್ರೀಷ್ಮೇ ಚ ಸುಖ ಶೀತಲಾ – ಶೀತಕಾಲದಲ್ಲಿ ಸುಖಕರವಾದ ಉಷ್ಣವಿರುವ ಮತ್ತು ಗ್ರೀಷ್ಮದಲ್ಲಿ ಹಿಮದಂತೆ ತಂಪಾಗಿ ಇರುವ ಸರ್ವಾಂಗಗಳಿಂದ ಕೂಡಿರುವವಳು.

seethapahara

ಈ ಬಣ್ಣನೆಗಳು ರಾವಣನಿಗೆ ಮಂಗನಿಗೆ ಹೆಂಡ ಕುಡಿಸಿದಂತೆ ಆಯಿತು. ಆ ಕ್ಷಣದಿಂದಲೇ ಸೀತೆಯನ್ನು ಪಡೆಯುವ ಬಯಕೆ ಉಂಟಾಯಿತು. ರಾಜನಿಗೆ ಏನನ್ನು ಹೇಳಬೇಕೋ ಅಂತಹ ಮಾತುಗಳನ್ನೇ ಭೃತ್ಯರು ಆಡುತ್ತಾರೆ. “ನೇರ ಯುದ್ಧದಲ್ಲಿ ರಾಮನನ್ನು ಎದುರಿಸುವುದು ಅಸಾಧ್ಯ. ನೀನೀಗಲೇ ಆ ಮಹಾರಣ್ಯಕ್ಕೆ ಹೋಗಿ ಅವನನ್ನು ವಂಚಿಸಿ ಅವನ ಭಾರ್ಯೆಯನ್ನು ಬಲತ್ಕಾರವಾಗಿ ಅಪಹರಿಸು, ಸೀತೆಯಿಲ್ಲದೇ ರಾಮನು ಖಂಡಿತವಾಗಿ ಬದುಕಿರುವುದಿಲ್ಲ” ಎಂದು ಹೇಳುತ್ತಾನೆ. ಅದನ್ನು ಕೇಳಿದ ರಾವಣನಿಗೆ ಈ ಮಾರ್ಗವೇ ಸರಿಯೆನಿಸಿತು. ಮಾರನೆಯ ದಿನವೇ ಹೇಸರಗತ್ತೆ ಎಳೆಯುತ್ತಿರುವ ರಥವನ್ನು ಏರಿ ಸೀದಾ ಮಾರೀಚನಲ್ಲಿಗೆ ಬಂದು ಸೀತಾಪಹರಣದಲ್ಲಿ ತನಗೆ ನೆರವಾಗುವಂತೆ ಕೇಳಿದ. ಮಾರೀಚ ಮೊದಲಿನ ರಾಕ್ಷಸನಾಗಿ ಉಳಿದಿಲ್ಲ. ಹಾಗಂತ ಸಾತ್ವಿಕನೂ ಅಲ್ಲ. ವಿಶ್ವಾಮಿತ್ರರ ಯಾಗವನ್ನು ಕೆಡಿಸಲಿಕ್ಕೆ ಹೋದಾಗ ರಾಮ ಬಾಣದಿಂದ ಆತನ ತಾಯಿ ಮತ್ತು ಅಣ್ಣನನ್ನು ಕಳೆದುಕೊಂಡ. ರಾಮ ಬಿಟ್ಟ ಮಾನವಾಸ್ತ್ರದಿಂದ ಸಮುದ್ರದಲ್ಲಿ ಬಿದ್ದು ಹೇಗೋ ಬದುಕಿಕೊಂಡಿದ್ದ.

ಆದರೂ ಪೂರ್ವ ವಾಸನೆ ಇನ್ನೂ ಇತ್ತು. ಆತನಿಗೆ ಮೃಗಗಳ ವೇಷವನ್ನು ತಾಳುವ ವಿದ್ಯೆ ತಿಳಿದಿತ್ತು. ಆಗಾಗ ದಂಡಕಾರಣ್ಯಕ್ಕೆ ಹೋಗಿ ಮೃಗವಾಗಿ ಇನ್ನಿತರ ಸಾಧು ಮೃಗಗಳನ್ನು ತಿನ್ನುತ್ತಿದ್ದ. ರಾಮ ಲಕ್ಷ್ಮಣ ಸೀತೆಯರು ದಂಡಕಾರಣ್ಯಕ್ಕೆ ಬಂದಾಗ ಅವರನ್ನು ಮಾರು ವೇಷದಲ್ಲಿರುವ ಮಾರೀಚ ಗಮನಿಸಿದ್ದ. ಪೂರ್ವದ್ವೇಷದಿಂದ ತಾಪಸಿವೇಷದಲ್ಲಿದ್ದ ರಾಮ ಸುಲಭದ ತುತ್ತಾಗಬಹುದೆಂದೂ ಮತ್ತು ಆತನನ್ನು ಕೊಲ್ಲಲು ಇದೇ ಸಮಯವೆಂದು ತಿಳಿದು ಆತ ಒಂದು ಮೃಗವಾಗಿ ತನ್ನ ಕೋರೆ ದಾಡೆಗಳಿಂದ ರಾಮನನ್ನು ಇರಿಯಲು ಬಂದಾಗ ರಾಮ ಮೂರು ಬಾಣಗಳನ್ನು ಬಿಟ್ಟ ರಭಸಕ್ಕೆ ಆತನ ಇಬ್ಬರು ಸಹಚರರು ಅದಕ್ಕೆ ಬಲಿಯಾದರು. ಈತ ಹೇಗೋ ತಪ್ಪಿಸಿಕೊಂಡು ಬಂದು ಗಜಪಚ್ಛವೆನ್ನುವ ಪ್ರದೇಶದಲ್ಲಿ ಆಶ್ರಮವನ್ನು ಕಟ್ಟಿಕೊಂಡಿದ್ದ. ಹಾಗಂತ ಆತನಲ್ಲಿದ್ದ ತಾಮಸ ಬುದ್ಧಿ ಹೋಗಿರಲಿಲ್ಲ; ರಾಮನ ಪರಾಕ್ರಮದ ಭಯ ಆತನನ್ನು ಆವರಿಸಿತ್ತು. ಮಾರೀಚ ರಾಮನನ್ನು ಗಂಧಹಸ್ತಿ (ಮದ್ದಾನೆ) ಎನ್ನುತ್ತಾ ಅವನ ಪರಾಕ್ರಮವನ್ನು ರಾವಣನಿಗೆ ವಿವರಿಸುತ್ತಾನೆ. ಸೀತಾಪಹರಣದ ಸಲಹೆಯನ್ನು ನೀಡಿ ನಿನ್ನ ತಲೆಯನ್ನು ಕೆಡಿಸಿದವ ಯಾರು, ಅವರನ್ನು ಶಿಕ್ಷಿಸು ಎನ್ನುತ್ತಾನೆ. ರಾವಣನಿಗೆ ತಲೆಗೇರಿದ ಪಿತ್ಥವಿಳಿದು “ಸರಿ ಹಾಗಾದರೆ” ಎಂದು ಲಂಕೆಗೆ ಮರಳುತ್ತಾನೆ.

ಸುಮ್ಮನಿದ್ದ ರಾವಣನನ್ನು ಕೆರಳಿಸಿ ಎಬ್ಬಿಸಿದವಳು ಶೂರ್ಪನಖಿ. ಆಕೆ ಬೊಬ್ಬಿಡುತ್ತಾ ಬಂದು ರಾವಣನಲ್ಲಿ ಖರ ದೂಷಣ ತ್ರಿಶಿರಸ್ಸುಗಳ ವಧೆಯನ್ನು ರಾಮನೊಬ್ಬನೇ ಮಾಡಿರುವುದನ್ನು ವಿವರವಾಗಿ ವರ್ಣಿಸುತ್ತಾಳೆ. ಖರನಲ್ಲಿ ತನಗೆ ರಾಮಾದಿಗಳ ಮಾಂಸದ ಆಸೆಯಿದೆ ಎಂದು ಯುದ್ಧಕ್ಕೆ ಪ್ರಚೋದಿಸಿ ಕೊಲ್ಲಿಸಲು ಕಾರಣಳಾದ ರಾಕ್ಷಸಿ ರಾವಣನ ಹತ್ತಿರ ಸೀತೆಯ ಸೌಂದರ್ಯವನ್ನು ಹೊಗಳುತ್ತಾ ಆಕೆ ರಾವಣನಿಗೆ ಯೋಗ್ಯಳೆಂದು ತಿಳಿದು ಅವಳನ್ನು ತರುವ ಸಲುವಾಗಿ ಹೋದಾಗ ಈ ಎಲ್ಲ ಕೃತ್ಯ ಆಯಿತೆನ್ನುತ್ತಾಳೆ. ರಾಮನ ಪರಾಕ್ರಮವನ್ನು ಯಥಾವತ್ತಾಗಿ ವರ್ಣಿಸಿ ಆಮೇಲೆ ಸೀತೆಯ ಸೌಂದರ್ಯವನ್ನೂ ವಿವರವಾಗಿ ತಿಳಿಸುತ್ತಾಳೆ. ಒಂದು ಹೆಣ್ಣೇ ಇನ್ನೊಬ್ಬ ಹೆಣ್ಣಿನ ರೂಪವನ್ನು ವರ್ಣಿಸಿದರೆ ಗಂಡಸಿಗೆ ಹೇಗಾಗಬೇಡ. ಸದ್ಧರ್ಮನಾಶಕನಾದ ಮತ್ತು ಪರಸ್ತ್ರೀಯಲ್ಲಿ ಆಸಕ್ತನಾದ ರಾವಣನ ದೌರ್ಬಲ್ಯವನ್ನು ಆಕೆ ಚೆನ್ನಾಗಿ ಬಲ್ಲಳು. (ಸರ್ಗ 32) ರಾವಣ ಜನಸ್ಥಾನವನ್ನು ಅಲಕ್ಷ್ಯ ಮಾಡಿದ ಪರಿಣಾಮವಾಗಿ ಆತನ ಸಾಮ್ರಾಜ್ಯ ರಾಮನಿಂದ ಅಪಾಯದಲ್ಲಿದೆ. ಖರಾದಿಗಳಿಗೆ ಮತ್ತು ತನಗೆ ಆ ಸ್ಥಿತಿ ಬರಲು ಕಾರಣವಾಗಿರುವುದು ಸೀತೆಯನ್ನು ರಾವಣನಿಗೆ ತರಬೇಕೆನ್ನುವ ತಮ್ಮ ಕಾರ್ಯಗಳಿಂದಾಗಿ. ಹಾಗಾಗಿ ಪ್ರತೀಕಾರಕ್ಕಾಗಿ ರಾವಣ ಸೇಡನ್ನು ತೀರಿಸಿಕೊಳ್ಳಲೇಬೇಕು ಎಂದು ಅವಳು ಆಗ್ರಹಿಸುತ್ತಾಳೆ.

shurpanakha

ಅವಳ ಈ ಕುಮ್ಮಕ್ಕಿನಿಂದ ವೈದೇಹಿಯ ವಿಷಯದಲ್ಲಿ ರಾವಣ ಕಾಮಪೀಡಿತನಾದ. ಅವಳನ್ನು ತರಲೇ ಬೇಕೆಂದು ನಿಶ್ಚಯಿಸಿ ಮತ್ತೆ ಮಾರೀಚನಲ್ಲಿಗೆ ಬಂದು ಆತ ಸೀತಾಪಹರಣದ ಕಾರ್ಯದಲ್ಲಿ ಮೃಗವಾಗಿ ಸಹಕರಿಸಲೇಬೇಕು. ಇಲ್ಲದಿದ್ದರೆ ಆತನನ್ನು ಕೊಲ್ಲುವೆ ಎಂದು ಬೆದರಿಕೆ ಹಾಕುತ್ತಾನೆ. ರಾವಣನಿಂದಲೋ ರಾಮನಿಂದಲೋ ತಾನು ಸಾಯಲೇಬೇಕಾಗಿರುವಾಗ ರಾಮನಿಂದ ಸಾಯುವುದೇ ಲೇಸು ಎಂದು ಆತ ರಾವಣನಿಗೆ ಸಹಕರಿಸಲು ಒಪ್ಪುತ್ತಾನೆ. ಇಲ್ಲಿಂದ ಮುಂದೆ ಪಂಚವಟಿಯ ಪ್ರದೇಶದಲ್ಲಿ ಚಿನ್ನದ ಜಿಂಕೆಯನ್ನು ನೋಡಿ ಸೀತೆ ಆಕರ್ಷಿತಳಾಗುವುದು ಎಲ್ಲವೂ ನಮಗೆ ತಿಳಿದಿರುವ ಕಥೆಯಂತೆಯೇ ಸಾಗುತ್ತದೆ. ಆ ಮಿಗವನ್ನು ಗಮನಿಸಿದ ಲಕ್ಷ್ಮಣನಿಗೆ ಅದು ಮಾಯಾಮೃಗ, ಮಾರೀಚನೇ ಈ ವೇಷವನ್ನು ತಾಳಿ ಬಂದಿದ್ದಾನೆಂದು ತಿಳಿಯಿತು. ಅದನ್ನೇ ಅಣ್ಣನಿಗೆ ಹೇಳುತ್ತಾನೆ. ಸೀತೆ ಲಕ್ಷ್ಮಣನ ಮಾತನ್ನು ಅರ್ಧಕ್ಕೇ ತಡೆದು ತನಗೆ ಅದು ಬೇಕು ಎಂದು ಹಟಹಿಡಿಯುತ್ತಾಳೆ. ತಾನು ಈ ಮೃಗವನ್ನು ಬಯಸುವುದು ಯುಕ್ತವಲ್ಲವೆಂದೂ ಸಹ ಅವಳಿಗೆ ಅನಿಸಿದೆ. “ಕಾಮವೃತ್ತಮಿದಂ ರೌದ್ರಂ ಸ್ತ್ರೀಣಾಮಸದೃಶಂ ಮತಮ್”- ತನಗುಂಟಾದ ಮೃಗದ ಮೇಲಿನ ಕಾಮನೆಯು ಸಾಧ್ವಿಯರಿಗೆ ಉಚಿತವಲ್ಲವೆಂದು ತಿಳಿದಿದೆ. ಆದರೂ ಇದು ತನಗೆ ಬೇಕು ಎಂದು ಹಟ ಹಿಡಿಯುತ್ತಾಳೆ.

ಲಕ್ಷ್ಮಣನಿಗೆ ತಿಳಿದ ಸತ್ಯ ರಾಮ ಸೀತೆಯರಿಗೆ ಅರಿವಾಗದೇ ಹೋದೀತೋ! ಆದರೂ ಏನೂ ತಿಳಿದಿಲ್ಲದಂತೆ ನಟಿಸುತ್ತಿದ್ದಂತೆ ಅನಿಸುತ್ತದೆ. ವನವಾಸ ಮುಗಿಸಿ ಅಯೋಧ್ಯೆಗೆ ತೆರಳುವಾಗ ಈ ಜಿಂಕೆಯನ್ನು ಕೊಂಡೊಯ್ದರೆ ಕೌಸಲ್ಯೆ, ಸುಮಿತ್ರೆಯರೂ ಸಂತಸ ಪಡುತ್ತಾರೆ ಎಂದು ಹೇಳುವ ಸೀತೆ ನಂತರ “ಇದು ಜೀವಂತ ಸಿಗದೇ ಇದ್ದರೆ ಇದನ್ನು ಕೊಂದು ಅದರ ಚರ್ಮವನ್ನು ತೆಗೆದುಕೊಂಡು ಬಾ. ನಾನು ಅದರ ಮೇಲೆ ಕುಳಿತುಕೊಳ್ಳುವೆ” ಎನ್ನುತ್ತಾಳೆ. ಜೀವಂತವಾಗಿ ಹಿಡಿದು ತಾ, ಎನ್ನುವ ಮಾತಾಡಿದವಳು ತಕ್ಷಣವೇ ಅದನ್ನು ಕೊಂದು ಚರ್ಮವನ್ನಾದರೂ ತೆಗೆದುಕೊಂಡು ಬಾ ಎನ್ನುವ ಮಾತುಗಳಿಂದ ರಾಮ ಸೀತೆಯರಿಗೂ ಈ ಕುರಿತು ಅರಿವಿತ್ತು. ಎಲ್ಲವನ್ನೂ ಲೆಕ್ಕಾಚಾರದ ಮೂಲಕವೇ ದಾಳ ಹಾಕುತ್ತಿರುವಂತಹ ಅರ್ಥವನ್ನೂ ನೀಡುತ್ತದೆ. ಆದರೆ ಸೀತೆಗೆ ಸ್ಪಷ್ಟವಾಗಿ ತಾನು ಪಾತ್ರಧಾರಿಯೋ ಅಥವಾ ಅಲ್ಲವೋ ಎನ್ನುವುದರ ಅರಿವಿದೆ ಎನ್ನುವುದಕ್ಕೆ ಸಾಕ್ಷಿ ರಾಮನ ವಿಷಯದಲ್ಲಿ ಸಿಗುವಷ್ಟು ಸಿಗುವುದಿಲ್ಲ. ಇಲ್ಲಿ ಹೇಳಿದ “ಮಿಗವನ್ನು ಕೊಂದಾದರೂ ಜಿಂಕೆಯನ್ನು ತಾ, ಚರ್ಮದ ಮೇಲೆ ಕುಳಿತುಕೊಳ್ಳುವೆ” ಎನ್ನುವ ಮಾತುಗಳು ಈ ವಿಷಯದಲ್ಲಿ ಪುಷ್ಟಿ ಕೊಡಲಾರವು. ಹಾಗಾಗಿ ಸೀತೆಗಾಗಲೀ, ಲಕ್ಷ್ಮಣನಿಗಾಗಲೀ ಇದೊಂದು ದೇವತೆಗಳು ಬಯಸಿದ ವ್ಯೂಹ, ಅದರ ಲಕ್ಷ್ಯ ರಾವಣ, ಅವನ ವಧೆಯಲ್ಲಿ ಇವುಗಳೆಲ್ಲವೂ ಪರ್ಯಾವಸಾನವಾಗಬೇಕು ಎನ್ನುವುದರ ಅರಿವಿಲ್ಲ.

ರಾಮ “ಲಕ್ಷ್ಮಣ, ಈ ಜಿಂಕೆ ಮಾರೀಚನ ಮೋಸವೇ ಹೌದಾದರೆ ಅವನನ್ನು ಕೊಲ್ಲುವುದು ತನ್ನ ಧರ್ಮ, ಅದನ್ನು ಕೊಂದು ಅದರ ಚರ್ಮವನ್ನು ತರುತ್ತೇನೆ, ಸೀತೆಯ ರಕ್ಷಣೆಯನ್ನು ಜಾಗರೂಕತೆಯಿಂದ ಮಾಡುತ್ತಿರು, ಜಟಾಯುವಿನ ಸಹಾಯವನ್ನೂ ಅಗತ್ಯವಿದ್ದರೆ ಪಡೆ” ಎನ್ನುವ ಮಾತುಗಳ ಅರ್ಥವನ್ನು ವಿಶ್ಲೇಷಿಸಿದರೆ ಇವೆಲ್ಲವೂ ಯಾವುದೋ ಒಂದು ತಂತ್ರಗಾರಿಕೆಯ ಮರ್ಮದಿಂದ ಕೂಡಿದೆ ಎನ್ನುವುದು ಸ್ಪಷ್ಟ. ಪತಂಗದ ಹುಳ ತಾನಾಗಿಯೇ ಹೋಗಿ ದೀಪದ ಜ್ವಾಲೆಗೆ ಬೀಳುವಂತೆ ಇಲ್ಲಿನ ಸನ್ನಿವೇಶದಲ್ಲಿ ಸ್ಪಷ್ಟವಾಗಿದೆ.

ಪ್ರದಕ್ಷಿಣೇನಾತಿಬಲೇನ ಪಕ್ಷಿಣಾ ಜಟಾಯುಷಾ ಬುದ್ಧಿಮತಾ ಚ ಲಕ್ಷ್ಮಣ.
ಭವಾಪ್ರಮತ್ತಃ ಪರಿಗೃಹ್ಯ ಮೈಥಿಲೀಂ ಪ್ರತಿಕ್ಷಣಂ ಸರ್ವತ ಏವ ಶಙ್ಕಿತಃ৷৷ಅ.43.50৷৷

“ಲಕ್ಷ್ಮಣ ! ಬಹಳ ದಕ್ಷನಾದ, ಅತಿಬಲಿಷ್ಠನಾದ, ಬುದ್ಧಿವಂತನಾದ, ಸುತ್ತಲೂ ಹಾರುತ್ತಿರುವ ಜಟಾಯುವಿನ ಸಹಕಾರವನ್ನು ಪಡೆದು ಪ್ರತಿಕ್ಷಣದಲ್ಲಿಯೂ ಆಪತ್ತು ಸಂಭವಿಸುವದೆನ್ನುವ ಶಂಕೆ ಪಡುತ್ತಾ ಜಾಗರೂಕನಾಗಿರುತ್ತಾ ಸೀತೆಯನ್ನು ಎಲ್ಲಾ ದಿಕ್ಕುಗಳಿಂದಲೂ ರಕ್ಷಿಸು”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೀತಾಪಹಾರದ ಹಿಂದಿನ ಕುತೂಹಲಕಾರಿ ವಿಷಯಗಳು

ಜಟಾಯುವಿನ ಹೆಸರನ್ನು ರಾಮ ಉಲ್ಲೇಖಿಸಿರುವುದನ್ನು ಗಮನಿಸಿದರೆ ರಾಮನಿಗೆ ಜಟಾಯುವಿನ ಮಿತ್ರತ್ವವೂ ಇತ್ತೆನ್ನುವುದು ಅರಿವಾಗುತ್ತದೆ. ರಾಮನ ಈ ಎಲ್ಲ ಕಾರ್ಯಗಳ ಹಿಂದೆ ಅಗಸ್ತ್ಯಾಶ್ರಮ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅಗಸ್ತ್ಯರು ರಾಮನಿಗೆ ವೈಷ್ಣವ ಧನುಸ್ಸನ್ನೂ, ಇಂದ್ರನಿಂದ ಅಗಸ್ತ್ಯರಿಗೆ ಕೊಡಲ್ಪಟ್ಟಂತಹ ಚಿನ್ನದ ರೆಕ್ಕೆಗಳಿರುವ ಅಕ್ಷಯವಾದ ಎರಡು ಬತ್ತಳಿಕೆಗಳನ್ನೂ ಕೊಡುತ್ತಾರೆ. ದೇವತೆಗಳ ಕೋರಿಕೆಯ ಮೇರೆಗೆ ರಾವಣನ ವಧೆಗಾಗಿಯೇ ರಾಮಾವತಾರವಾಗಿರುವುದು. ಅದಕ್ಕೆ ಪೂರ್ವಭಾವಿಯಾಗಿ ಅಗಸ್ತ್ಯರ ಆಶ್ರಮದಲ್ಲಿ ರಾಮನಿಗೆ ಕೊಡಲ್ಪಟ್ಟ ಧನುಸ್ಸು ಮಹಾವಿಷ್ಣುವೇ ಹಿಂದೆ ರಾಕ್ಷಸರನ್ನು ಕೊಲ್ಲಲು ಬಳಸಿರುವಂತಹದ್ದು. ಆಗ ಬಿಲವನ್ನು ಸೇರಿರುವ ರಾಕ್ಷಸರೆಲ್ಲರೂ ರಾವಣನಿಂದಾಗಿ ಲಂಕೆಯನ್ನು ಆಶ್ರಯಿಸಿರುವ ವಿಷಯಗಳೆಲ್ಲವೂ ಒಂದಕ್ಕೊಂದು ಸೇರಿಕೊಂಡಿದೆ. ರಾಮನನ್ನು ಸದಾ ಅಗಸ್ತ್ಯರು ಗಮನಿಸುತ್ತಿದ್ದರು ಎನ್ನುವುದಕ್ಕೆ ರಾವಣನನ್ನು ಕೊಲ್ಲಲಾಗದೇ ರಾಮ ಆಯಾಸಗೊಂಡಾಗ ಲಂಕೆಯ ರಣಭೂಮಿಗೆ ಬಂದು ಆದಿತ್ಯಹೃದಯವನ್ನು ಬೋಧಿಸಿರುವುದನ್ನು ಉದಾಹರಿಸಬಹುದು.

ಅವರ ಆಶ್ರಮದಿಂದ ಎರಡು ಯೋಜನ ದೂರದಲ್ಲಿ ಇರುವ ಪಂಚವಟಿ ಪ್ರದೇಶದಲ್ಲಿ ವಾಸಮಾಡಲು ಸೂಚಿಸಿದ ಉದ್ದೇಶವೂ ತನ್ನ ಕಣ್ಣಳತೆಯಲ್ಲಿ ರಾಮ ಇರಬೇಕೆನ್ನುವುದು. ಅಗಸ್ತ್ಯರ ಆಶ್ರಮದ ಹೊರ ಆವರಣದಲ್ಲಿಯೇ ರಾಮನಿಗೆ ಜಟಾಯುವಿನ ಪರಿಚಯವಾಗಿ ಆತನೇ ರಾಮ ಲಕ್ಷ್ಮಣರಿಬ್ಬರೂ ಆಶ್ರಮದಿಂದ ಹೊರ ಹೋಗಬೇಕಾಗಿರುವ ಸಂದರ್ಭಗಳಲ್ಲಿ ತಾನು ಸೀತಾದೇವಿಯನ್ನು ಸಂರಕ್ಷಿಸುತ್ತೇನೆ ಎಂದು ಮಾತನ್ನು ಜಟಾಯು ಆಡುತ್ತಾನೆ. ಹೀಗಾಗಿ ಇವೆಲ್ಲವೂ ರಾವಣನ ವಧೆಗಾಗಿ ರಾಮನಿಗೆ ಅರಿವಿದ್ದೋ ಅಥವಾ ಮುಂಗಾಣ್ಕೆಯನ್ನು ಬಲ್ಲ ದೇವತೆಗಳೇ ಹೀಗೆ ವ್ಯೂಹವನ್ನು ಬಲಿದಿದ್ದಾರೆ ಎಂದುಕೊಳ್ಳಬಹುದು.

ಈ ವ್ಯೂಹದಲ್ಲಿ ರಾವಣ ತನಗರಿವಿಲ್ಲದೇ ಸಿಕ್ಕಿಬಿದ್ದ ವಿವರವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾಗಿ ಮುಸುಕಿದ ಇಳೆಯ ಬೆಳಗುವ ನೀರಾಜನ: ದೀಪಾವಳಿ

Continue Reading

ಕಲೆ/ಸಾಹಿತ್ಯ

Bhashavidya Kannada: ಜಯನಗರದಲ್ಲಿ ಡಿ. 17ರಂದು ʼಕನ್ನಡದಲ್ಲಿ ಮಾತಾಡೋಣʼ ಕಾರ್ಯಾಗಾರ

Bhashavidya Workshop: ʼಕನ್ನಡದಲ್ಲಿ ಮಾತಾಡೋಣʼ ಕನ್ನಡ ಕಲಿಕಾ ಕಾರ್ಯಾಗಾರವು ಡಿ.17ರಂದು ಬೆಂಗಳೂರಿನ ಜಯನಗರದ ನ್ಯಾಷನಲ್‌ ಕಾಲೇಜಿನ ಬಿ.ವಿ.ಜಗದೀಶ್‌ ಮಲ್ಟಿಮೀಡಿಯಾ ಸಭಾಂಗಣದಲ್ಲಿ ನಡೆಯಲಿದೆ.

VISTARANEWS.COM


on

KannaDadhalli MaathaaDoNa
Koo

ಬೆಂಗಳೂರು: ಬನಶಂಕರಿಯ ಭಾಷಾವಿದ್ಯಾ ಕನ್ನಡ ಕಲಿಕಾ ಕೇಂದ್ರದ (Bhashavidya Kannada) ವತಿಯಿಂದ ಡಿಸೆಂಬರ್‌ 17ರಂದು ಕನ್ನಡೇತರರು, ವಲಸಿಗರಿಗೆ ʼಕನ್ನಡದಲ್ಲಿ ಮಾತಾಡೋಣʼ (Kannadadhalli Maathaadona) ಕನ್ನಡ ಕಲಿಕಾ ಕಾರ್ಯಾಗಾರವನ್ನು ಜಯನಗರದ ನ್ಯಾಷನಲ್‌ ಕಾಲೇಜಿನ ಬಿ.ವಿ.ಜಗದೀಶ್‌ ಮಲ್ಟಿಮೀಡಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಡಿಸೆಂಬರ್‌ 17ರಂದು ಬೆಳಗ್ಗೆ 9.30ರಿಂದ ಸಂಜೆ 5 ಗಂಟೆವರೆಗೆ ಕಾರ್ಯಾಗಾರ ನಡೆಯಲಿದೆ. ಬೆಳಗ್ಗೆ 9.15ಕ್ಕೆ ಉದ್ಘಾಟನೆ ನೆರವೇರಲಿದ್ದು, ಮುಖ್ಯ ಅತಿಥಿಗಳಾಗಿ ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ನಿರ್ದೇಶಕ ಕಿರಣ್‌ ಕುಮಾರ್‌ ಡಿ.ಕೆ. ಮತ್ತು ನಿವೃತ್ತ ಅಧಿಕಾರಿ ಎ.ಆರ್‌. ವೆಂಕಟರಾಮನ್‌ ಭಾಗವಹಿಸಲಿದ್ದಾರೆ.

ಸಂಜೆ 5.15ಕ್ಕೆ ಲೇಖಕಿ ವೀಣಾ ರಾವ್‌ ರಚನೆಯ ʼಕನ್ನಡದಲ್ಲಿ ಮಾತನಾಡೋಣʼ ಸ್ವಯಂ ಕನ್ನಡ ಕಲಿಕಾ ಅಭ್ಯಾಸ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ. ಪ್ರಿಸಮ್‌ ಪುಸ್ತಕಾಲಯದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಾಣೇಶ್‌ ಸಿರಿವರ ಭಾಗವಹಿಸಲಿದ್ದಾರೆ. ಪ್ರಿಸಮ್‌ ಮತ್ತು ಏಜ್ಯಾಸ್ ಫೆಡರಲ್ ಲೈಫ್‌ ಇನ್ಶೂರೆನ್ಸ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್‌ ಚಾನೆಲ್‌ ಮಾಧ್ಯಮ ಸಹಯೋಗ ನೀಡಿದೆ.

12 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಆಸಕ್ತ ಮಕ್ಕಳು ಮತ್ತು ವಯಸ್ಕರು ಕನ್ನಡ ಕಲಿಕಾ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದ್ದು, ಪದಸಂಪತ್ತು ವೃದ್ಧಿ, ವಾಕ್ಯ ರಚನೆ, ಸಂವಾದ ಸೇರಿ ವಿವಿಧ ಚಟುವಟಿಕೆಗಳು ನಡೆಯಲಿದೆ. ನೋಂದಣಿ ಶುಲ್ಕ 200 ರೂ. ಇರಲಿದ್ದು, ಆಸಕ್ತರು ಹೆಸರು ನೋಂದಣಿ ಮಾಡಿಸಬಹುದು. ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಉಚಿತ ಕೈಪಿಡಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9844613467, 9845933246 ಸಂಪರ್ಕಿಸಬಹುದು ಎಂದು ಭಾಷಾವಿದ್ಯಾ ಸಂಸ್ಥೆಯ ವೀಣಾರಾವ್ ಮತ್ತು ವಾಸುಕಿ ಷಣ್ಮುಖಪ್ರಿಯ ತಿಳಿಸಿದ್ದಾರೆ.

ಕನ್ನಡ ಭಾಷಾಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ʼಭಾಷಾವಿದ್ಯಾʼ

ಬೆಂಗಳೂರಿನಲ್ಲಿ ಬಹುತೇಕ ಅನ್ಯಭಾಷಿಕರು ಕನ್ನಡದಲ್ಲಿ ಮಾತನಾಡುತ್ತಿಲ್ಲ. ಬದಲಾಗಿ ಅವರು ತಮ್ಮ ಭಾಷೆಯನ್ನು ನಮ್ಮ ಮೇಲೆ ಹೇರುತ್ತಿರುವ ವಿಚಾರ ಮತ್ತು ಅದರಿಂದ ಉಂಟಾಗುತ್ತಿರುವ ಪ್ರಮಾದ, ಗೊಂದಲ, ಅಹಿತಕರ ಘಟನೆಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ವಿಷಯಗಳು ತಮ್ಮಿಂದಲೇ ಬೆಳಕಿಗೆ ಬರುತ್ತಿವೆ. ಆದರೆ ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ಅವರಿಗೆ ಕನ್ನಡ ಕಲಿಸುವ ಪ್ರಯತ್ನಗಳು ನಮ್ಮಿಂದ ಆಗಬೇಕಾದ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ. ಅವರಿಗೆ ವಿಭಿನ್ನ ರೀತಿಯಲ್ಲಿ ಕನ್ನಡ ಕಲಿಸುವ ಕೆಲಸಗಳು ಆಗಬೇಕಿವೆ.

ಇದನ್ನೂ ಓದಿ | Yellapur News: ಯಲ್ಲಾಪುರದಲ್ಲಿ ಡಿ. 9, 10 ರಂದು ಜಿಲ್ಲಾ ಮಟ್ಟದ ಸಾಹಿತ್ಯ-ಗಮಕ ಅಧಿವೇಶನ

ಅನ್ಯಭಾಷಿಕರು ಕನ್ನಡ ಕಲಿತು ಕನ್ನಡ ಭಾಷೆಯನ್ನೂ ಮತ್ತು ಕನ್ನಡ ಭಾಷಿಕರನ್ನು ಪ್ರೀತಿಸುವಂತಾಗಬೇಕು. ನಿಯಮಗಳ ಮೂಲಕ ಸರ್ಕಾರಗಳಿಂದ ಒಂದಿಷ್ಟು ಕೆಲಸಗಳಾದರೂ, ಅವರಿಗೆ ಕನ್ನಡನುಡಿ ಕಲಿಸುವ ಕೆಲಸವನ್ನು ಖಾಸಗೀ ಸಂಸ್ಥೆಗಳೇ ವಹಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ದಿಸೆಯಲ್ಲಿ ಕನ್ನಡ ಕಲಿಕೆ ಮತ್ತು ಭಾಷಾಭಿವೃದ್ಧಿಯ ಕುರಿತಾದ ಕೆಲಸಗಳನ್ನು ಆರಂಭದಿಂದಲೂ ಮಾಡಿಕೊಂಡು ಬರುತ್ತಿರುವ ಭಾಷಾವಿದ್ಯಾ ಅಡಿಯಲ್ಲಿ ಈಗ ಕನ್ನಡೇತರರು ಅಥವಾ ವಲಸಿಗರಿಗಾಗಿ ಕನ್ನಡ ಮಾತುಗಾರಿಕೆಯ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
girl students fall ill
ಕರ್ನಾಟಕ33 mins ago

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

Fans brave the dampness, waiting for India's tour of South Africa to kick off
ಕ್ರಿಕೆಟ್44 mins ago

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

Gautam Gambhir
ಕ್ರಿಕೆಟ್1 hour ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ1 hour ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ2 hours ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

WPL 2024 Auction
ಕ್ರಿಕೆಟ್2 hours ago

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

Naveen Ammembala
ದಕ್ಷಿಣ ಕನ್ನಡ2 hours ago

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

Chhattisgarh to be CM Vishnu has two deputies and Raman Singh Speaker
ದೇಶ3 hours ago

ಛತ್ತೀಸ್‍‌ಗಢ ಸಿಎಂ ವಿಷ್ಣುಗೆ ಇಬ್ಬರು ಡೆಪ್ಯುಟಿಗಳು; ರಮಣ್ ಸಿಂಗ್ ಸ್ಪೀಕರ್

Rambhapuri seer and MB Patil
ಕರ್ನಾಟಕ3 hours ago

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

India U19 vs Pakistan U19
ಕ್ರಿಕೆಟ್3 hours ago

U19 Asia Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ 8 ವಿಕೆಟ್​ ಸೋಲು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ7 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ10 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ18 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌