Sunday read | 110 ವರ್ಷಗಳ ಹಿಂದೆ, ಒಂದು ಹಡಗು ಮುಳುಗುವ ಮುನ್ನ - Vistara News

ಕಲೆ/ಸಾಹಿತ್ಯ

Sunday read | 110 ವರ್ಷಗಳ ಹಿಂದೆ, ಒಂದು ಹಡಗು ಮುಳುಗುವ ಮುನ್ನ

ಎಂದೂ ಮುಳುಗಲಾರದ ಹಡಗು ಎಂದು ಹುಟ್ಟುವಾಗಲೇ ಖ್ಯಾತಿ ಪಡೆದುಕೊಂಡಿದ್ದ ಟೈಟಾನಿಕ್‌ ಮೊದಲ ಯಾನದಲ್ಲೇ ಮುಳುಗಿ ನೂರಹತ್ತು ವರ್ಷ. ಮುಳುಗುವ ಮುನ್ನ ಹಡಗಿನ ಒಳಗೆ ಏನೇನು ನಡೆಯಿತು? ಓದಿ, ಈ sunday read.

VISTARANEWS.COM


on

titanic
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1912ರ ಏಪ್ರಿಲ್ 14ರ ರಾತ್ರಿ, ಯುರೋಪ್‌ನಿಂದ ಅಮೆರಿಕಕ್ಕೆ 2200 ಮಂದಿಯನ್ನು ತುಂಬಿಕೊಂಡು ಯಾನ ಹೊರಟಿದ್ದ ಬೃಹತ್ ಹಡಗು ಅಟ್ಲಾಂಟಿಕ್ ಸಮುದ್ರದ ನಡುಮಧ್ಯದಲ್ಲೆಲ್ಲೋ ನೀರ್ಗಲ್ಲಿಗೆ ಹೊಡೆದು ಬಿರುಕು ಬಿಟ್ಟಿತ್ತು. ನೌಕೆಯಲ್ಲಿ ನೀರು ತುಂಬಿಕೊಂಡು ಮುಳುಗಲಾರಂಭಿಸಿತು. ಹಡಗಿನ ತುಂಬ ಚೀರಾಟ.

ಅಂಥ ಭಯಾನಕ ಸ್ಥಿತಿಯಲ್ಲೂ ಯಾರೂ ಆ ಕಾಲದ ಸಮುದ್ರಯಾನ ಹಾಗೂ ಜೀವನದ ಶಿಷ್ಟಾಚಾರವನ್ನು ಮರೆತಿರಲಿಲ್ಲ. ಮಹಿಳೆಯರು ಹಾಗೂ ಮಕ್ಕಳನ್ನು ಮೊದಲು ಜೀವರಕ್ಷಕ ದೋಣಿಗಳಿಗೆ ಹತ್ತಿಸಿ ದೂರ ಕಳುಹಿಸಲಾಯಿತು. ಹೆಚ್ಚಿನ ಪುರುಷರು ಅಲ್ಲೇ ಉಳಿದರು.

ವಯೋವೃದ್ಧ ಇಸಿಡೋರ್ ಸ್ಟ್ರಾಸ್ ಹಡಗಿನಲ್ಲಿದ್ದ. ಆತ ಅಮೆರಿಕದ ಅಧ್ಯಕ್ಷರ ಸಲಹೆಗಾರ ಮತ್ತು ಕಾಂಗ್ರೆಸ್ ಸದಸ್ಯನಾಗಿದ್ದ. ಫ್ರಾನ್ಸ್‌ನಲ್ಲಿ ರಜೆ ಮುಗಿಸಿ ಹೆಂಡತಿ ಇಡಾ ಜತೆ ಮರಳುತ್ತಿದ್ದ. ಹಡಗು ಮುಳುಗುತ್ತಿದ್ದಾಗ ಲೈಫ್‌ಬೋಟ್ 8ರ ಸಿಬ್ಬಂದಿ ಇಡಾರನ್ನು ಹತ್ತಲು ಕರೆದರು. ಒಮ್ಮೆ ದೋಣಿ ಹತ್ತಲು ಮುಂದಾದ ಇಡಾ, ಕೊನೆಯ ಕ್ಷಣದಲ್ಲಿ ಮನಸು ಬದಲಾಯಿಸಿದರು. ಇಸಿಡೋರ್‌ಗೆ ಹೇಳಿದರು- ”ನಾವು ಇಷ್ಟು ವರ್ಷ ಜತೆಯಾಗಿ ಬದುಕಿದ್ದೇವೆ. ನೀವೆಲ್ಲಿ ಹೋಗುತ್ತೀರೋ, ನಾನಲ್ಲಿರುತ್ತೇನೆ…”

ಹತ್ತಿರ ಇದ್ದವರು ಆಕೆಯ ನಿಲುವನ್ನು ಬದಲಾಯಿಸಲು ಯತ್ನಿಸಿದರು. ಆಕೆ ಮಣಿಯಲಿಲ್ಲ. ದೋಣಿಯಲ್ಲಿದ್ದವರಾರೋ ಕೂಗಿದರು- ‘ನಿಮ್ಮಂಥ ವೃದ್ಧ ಜಂಟಲ್‌ಮನ್ ದೋಣಿ ಹತ್ತಿದರೆ ಯಾರೂ ಆಕ್ಷೇಪಿಸೋಲ್ಲ…ʼʼ ವೃದ್ಧ ಇಸಿಡೋರ್ ಉತ್ತರಿಸಿದರು- ʼʼಇತರ ಗಂಡಸರು ಹೋಗಲಿ, ಆಮೇಲೆ ನಾನು ಹೋಗುತ್ತೇನೆ…ʼʼ ಅಲ್ಲಿಗೆ ಎಲ್ಲ ನಿರ್ಧಾರವಾದಂತಾಯಿತು. ಇಡಾಳ ಸೇವಕಿ ದೋಣಿಗೆ ಹತ್ತಿದಳು. ವೃದ್ಧೆ ಇಡಾ ತಮ್ಮ ಕೋಟನ್ನು ಬಿಚ್ಚಿ ಆಕೆಗಿತ್ತರು. ದೋಣಿ ನೀರಿಗಿಳಿದು ದೂರವಾಗತೊಡಗಿದಂತೆ, ಮುಳುಗುತ್ತಿರುವ ಹಡಗಿನ ಡೆಕ್ಕಿನ ಮೇಲೆ ವೃದ್ಧ ದಂಪತಿ ತಡವರಿಸುತ್ತ ನಡೆದು ಹೋಗುತ್ತಿರುವುದನ್ನು ಎಲ್ಲರೂ ಕಂಡರು.

ಆತನ ಹೆಸರು ಥಾಮಸ್ ಆಂಡ್ರ್ಯೂಸ್. ಹಡಗಿನ ಯಾವ ನಟ್ಟು, ಬೋಲ್ಟು ಎಲ್ಲಿರಬೇಕು, ಪ್ರೊಫೆಲ್ಲರ್ ಎಲ್ಲಿರಬೇಕು, ಎಲ್ಲೆಲ್ಲಿ ಯಾವ್ಯಾವ ರೂಮುಗಳು, ದೊಡ್ಡ ಅಲೆಗಳ ಹೊಡೆತ ತಡೆದುಕೊಳ್ಳುವ ಬಗೆಯೆಂತು… ಇತ್ಯಾದಿ ಅಂಶಗಳನ್ನು ಚಿಂತಿಸಿ ರೂಪಿಸಿದವನು, ವಿನ್ಯಾಸಗೊಳಿಸಿದವನು ಆತ. ಹಡಗಿನ ಮೊದಲ ಯಾನ ಹೇಗಾಗುತ್ತದೆ ನೋಡುವ ಕುತೂಹಲದಿಂದ ಆತ ನೌಕೆಯೇರಿದ್ದ.

ಹಡಗು ಮುಳುಗುವ ಸಂದರ್ಭದಲ್ಲಿ ಆತ ಏನು ಮಾಡುತ್ತಿದ್ದ? ಹಡಗಿನ ಕ್ಯಾಪ್ಟನ್ ಸ್ಮಿತ್ ಜತೆಗೂಡಿ, ನೀರು ತುಂಬಿದ ಭಾಗಗಳಲ್ಲಿ ಓಡಾಡುತ್ತಿದ್ದ.

ಇನ್ನೆರಡು ಗಂಟೆಗಳಲ್ಲಿ ಹಡಗು ಸಂಪೂರ್ಣ ಮುಳುಗಿಹೋಗಲಿದೆ ಎಂಬ ಎಚ್ಚರಿಕೆಯನ್ನು ಪ್ರಯಾಣಿಕರಿಗೆ ಕೊಟ್ಟವನೇ ಅವನು. ಕೊನೆಯ ಬಾರಿಗೆ ಆತನನ್ನು ಕಂಡವನು ಒಬ್ಬ ಸೇವಕ. ಆಗ ಆತ ತನ್ನ ಮೊದಲ ದರ್ಜೆಯ ಸ್ಮೋಕಿಂಗ್ ಝೋನ್‌ನಲ್ಲಿ, ತನ್ನ ಕನಸು ನೀರಿನಲ್ಲಿ ಮುಳುಗಿಹೋಗುತ್ತಿರುವುದನ್ನು ನೋಡುತ್ತ ನಿಂತಿದ್ದ. ಆತನ ಲೈಫ್ ಜಾಕೆಟ್ ಅನಾಥವಾಗಿ ಬಳಿಯಲ್ಲಿ ಬಿದ್ದಿತ್ತು.

ಹಡಗಿನ ಮೂರನೇ ದರ್ಜೆಯಲ್ಲಿತ್ತು, ಸೇಜ್ ಕುಟುಂಬ, ಕುಟುಂಬದ ಎಲ್ಲ ಹನ್ನೊಂದು ಮಂದಿಯೂ ನೌಕೆಯಲ್ಲಿದ್ದರು. ಫ್ಲೋರಿಡಾದಲ್ಲೊಂದು ಹಣ್ಣಿನ ತೋಟ ಖರೀದಿಸಿದ್ದ ಅವರು, ಅಲ್ಲಿ ಜತೆಯಾಗಿ ಬದುಕು ಕಳೆಯಲು ಹೊರಟಿದ್ದರು. ಜತೆಗೆ ಐದು ಮಕ್ಕಳು ಕೂಡ. ಹಡಗು ಮುಳುಗುವ ಕೊನೆಯ ಕ್ಷಣದಲ್ಲಿ, ಸೇಜ್ ಕುಟುಂಬದ ಒಬ್ಬ ಸೊಸೆ ಲೈಫ್‌ಬೋಟ್ ಹತ್ತಿದಳು. ಕುಟುಂಬದ ಉಳಿದವರಾರೂ ಬೋಟ್ ಏರಿಲ್ಲವೆಂದು ಗೊತ್ತಾದ ಕೂಡಲೆ ಹಡಗಿಗೆ ಮರಳಿದಳು. ಈ ಹನ್ನೊಂದು ಮಂದಿಯಲ್ಲಿ ಒಬ್ಬೇ ಒಬ್ಬಳು ಬಿಟ್ಟರೆ, ಇನ್ಯಾರ ಶವವೂ ಸಿಗಲಿಲ್ಲ.

smith
ಕ್ಯಾಪ್ಟನ್‌ ಸ್ಮಿತ್

ಹಡಗಿನ ಕ್ಯಾಪ್ಟನ್ ಸ್ಮಿತ್, ನೌಕಾಯಾನದಲ್ಲಿ ದಶಕಗಳ ಅನುಭವವಿದ್ದವನು. ವೈಟ್ ಸ್ಟಾರ್ ಲೈನ್ ಕಂಪನಿಯ ಅತಿ ಹಿರಿಯ ಕಪ್ತಾನ. ಎಲ್ಲ ಹಡಗುಗಳ ಮೊದಲ ಪ್ರಯಾಣಕ್ಕೆ ಈತನ ಅನುಭವವನ್ನೇ ಬಳಸಿಕೊಳ್ಳಲಾಗುತ್ತಿತ್ತು. ಈ ಸಲದ ಪ್ರಯಾಣ ಮುಗಿಸಿದ ಕೂಡಲೇ ಆತ ನಿವೃತ್ತನಾಗಲಿದ್ದ. ಕೊನೆಯ ಪ್ರಯಾಣದಲ್ಲಿ, ತಾನು ಅತಿವೇಗದಲ್ಲಿ ಅಟ್ಲಾಂಟಿಕ್ ಸಮುದ್ರವನ್ನು ದಾಟಿದೆನೆಂಬ ದಾಖಲೆಯನ್ನು ಬರೆಯಬೇಕು ಎಂಬುದು ಆತನ ಕನಸಾಗಿತ್ತು.

ಹೀಗಾಗಿ ಆತ ದಿನದಿಂದ ದಿನಕ್ಕೆ ಹಡಗಿನ ವೇಗವನ್ನು ಹೆಚ್ಚಿಸುತ್ತ ನಡೆದಿದ್ದ. ಆ ಸಮುದ್ರದಲ್ಲಿ ಅಡ್ಡಾಡುತ್ತಿದ್ದ ಇತರ ನೌಕೆಗಳು, ದಾರಿಯಲ್ಲಿ ದೊಡ್ಡ ದೊಡ್ಡ ನೀರ್ಗಲ್ಲುಗಳು ತೇಲಿ ಬರುತ್ತಿವೆ ಎಂದು ಎಚ್ಚರಿಕೆ ಕಳುಹಿಸಿದ್ದವು. ಆದರೆ ಸ್ಮಿತ್, ಆ ಬಗ್ಗೆ ಹೆಚ್ಚಿನ ಗಮನ ಕೊಡಲೇ ಇಲ್ಲ. ಯಮಸ್ವರೂಪಿ ಹಿಮಗಲ್ಲಿನ ಸನಿಹಕ್ಕೆ ಬಂದಾಗ ಹಡಗಿನ ವೇಗ ನಿಯಂತ್ರಣದಲ್ಲಿರಲಿಲ್ಲ.

ಕೊನೆಯ ಲೈಫ್ ಬೋಟ್ ಹಡಗು ಬಿಟ್ಟು ತೆರಳಿದಾಗ ಈತ ಡೆಕ್ ಮೇಲೆ ನಿಂತಿದ್ದ. ನೀರ್ಗಲ್ಲುಗಳ ಅಪಾಯ ಲೆಕ್ಕಿಸದೆ ಮುನ್ನುಗ್ಗಿ ಸಾವಿರಾರು ಜನರ ಮರಣಕ್ಕೆ ಕಾರಣನಾದದ್ದಕ್ಕೆ ಆತನಿಗೆ ಶಾಪ ಹಾಕಬೇಕೊ, ಮಹಿಳೆಯರು ಮಕ್ಕಳನ್ನು ರಕ್ಷಿಸಿ ತನ್ನ ಪಾಲಿಗೆ ಸಾವನ್ನು ಆಹ್ವಾನಿಸಿಕೊಂಡ ಧೀರೋದಾತ್ತತೆಗೆ ವಂದನೆ ಹೇಳಬೇಕೊ ಅರ್ಥವಾಗದ ಗೊಂದಲದಲ್ಲಿ ಉಳಿದವರಿದ್ದರು. ಸಿಗದೆ ಹೋದ ಸಾವಿರಾರು ಶವಗಳ ಪಟ್ಟಿಯಲ್ಲಿ ಈತನ ಹೆಸರೂ ಇದೆ: ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್.

ಟೈಟಾನಿಕ್ ದುರಂತವೆಂದರೆ ನಮ್ಮ ಪಾಲಿಗೆ ಸಾವಿರ ಸಾವಿನ ನೆನಪಷ್ಟೇ ಅಲ್ಲ. ಅದು ಕತೆಗಳ ರೂಪದಲ್ಲಿ, ಪುಸ್ತಕಗಳ ರೂಪದಲ್ಲಿ, ಚರಿತ್ರೆಯ ಪಾಠದ ರೂಪದಲ್ಲಿ, ಸಿನಿಮಾದ ರೂಪದಲ್ಲಿ ನಮ್ಮವರೆಗೂ ಸಾಗಿ ಬಂದಿದೆ. ಇದರ ಬಗ್ಗೆ ಬಂದ ಪುಸ್ತಕಗಳ ಲೆಕ್ಕ ಇಟ್ಟವರಿಲ್ಲ. ಜೇಮ್ಸ್ ಕ್ಯಾಮೆರೂನ್‌ನ ಇದೇ ಹೆಸರಿನ ಸಿನಿಮಾ ನೋಡಿ ತಲ್ಲಣಗೊಳ್ಳದ, ಅಲ್ಲಿನ ಪ್ರೇಮ ವಿಷಾದ- ಶೋಕಗಳ ಜೀವಲೋಕವನ್ನು ಕಂಗಳಲ್ಲಿ ತುಂಬಿಕೊಳ್ಳದ ಸಿನಿಮಾ ಪ್ರೇಮಿಯಿಲ್ಲ. ಇಂದಿಗೂ, ಟೈಟಾನಿಕ್‌ ಕತೆ ಹೇಳುತ್ತೇನೆ ಎಂದು ಯಾರಾದರೂ ಕರೆದರೆ, ನಾವೆಲ್ಲ ಚಕ್ಕಳಮಕ್ಕಳ ಹಾಕಿ ಕುಳಿತೆವೇ.

titanic

ಟೈಟಾನಿಕ್ ಮುಳುಗುತ್ತಿದ್ದ ಸಂದರ್ಭ, ಅದರಲ್ಲಿನ ಪ್ರಯಾಣಿಕರ ಮನರಂಜನೆಗಾಗಿ ಬ್ಯಾಂಡ್‌ ನುಡಿಸುತ್ತಿದ್ದ ತಂಡ, ಹಡಗು ಮುಳುಗುವ ಕೊನೆಯ ಕ್ಷಣದವರೆಗೂ ಅದನ್ನು ನುಡಿಸುತ್ತಲೇ ಇತ್ತಂತೆ. ಇದನ್ನು ಕ್ಯಾಮೆರೂನ್ ಕೂಡ ತನ್ನ ಸಿನಿಮಾದಲ್ಲಿ ತೋರಿಸಿದ್ದಾನೆ. ಹಾಗೆ ನೋಡಿದರೆ, ಆ ಸಿನಿಮಾದಲ್ಲಿ ಬರುವ ಜಾಕ್ ಡಾಸನ್- ರೋಸ್ ಪ್ರೇಮ ಪ್ರಕರಣ ಬಿಟ್ಟರೆ, ಬೇರಾವೂದೂ ಅತಿರಂಜಿತ ಚಿತ್ರಣಗಳಲ್ಲ. ಮೊದಲ ದರ್ಜೆಯ ಪ್ರಯಾಣಿಕರು ಪಾರಾಗುವವರೆಗೂ ಮೂರನೇ ದರ್ಜೆಯ ಪ್ರಯಾಣಿಕರನ್ನು ತಡೆಹಿಡಿದಿಟ್ಟ ಕ್ರೌರ್ಯವೂ ನಿಜ; ಲೈಫ್‌ಬೋಟ್‌ಗಳಿಗೂ ಕೇಳಿಸುತ್ತಿದ್ದ ಬ್ಯಾಂಡ್‌ನ ವಿಷಾದಮಯ ಮಧುರ ನಿನಾದವೂ ನಿಜ. ಆದರೆ ಡಾಸನ್ ರೋಸ್‌ರಂಥ ಒಂದೇ ಒಂದು ಘಟನೆ ಅಲ್ಲಿ ನಡೆಯಲಿಲ್ಲ ಎಂದು ಖಚಿತವಾಗಿ ಹೇಳಬಹುದೆ?

ಟೈಟಾನಿಕ್ ವಿಸ್ಕೃತಿಗೆ ಸರಿಯಲು ಯುರೋಪ್- ಅಮೆರಿಕಗಳು ಬಿಡಲಿಲ್ಲ. ಅನೇಕ ಜನಪ್ರಿಯ ಸ್ಮೃತಿ, ಸಂಕೇತ, ರೂಪಕಗಳ ಮೂಲಕ ಅದನ್ನು ಜೀವಂತವಾಗಿಟ್ಟಿತು. ಅದು ನಮ್ಮ ರಾಮಾಯಣದಂತೆ, ತಲೆಮಾರಿನಿಂದ ತಲೆಮಾರಿಗೆ ಹೊಸ ಹೊಸ ಹುಟ್ಟುಗಳನ್ನು ಪಡೆಯುತ್ತಲೇ ಹೋಯಿತು.

ಇಂದಿಗೂ, ಮುಳುಗಿದ ಟೈಟಾನಿಕ್‌ನ ಹೊರನೋಟವಷ್ಟೇ ನಮಗೆ ಲಭ್ಯ. ಹೇಗಾದರೂ ಒಳಗಡೆಯ ಚಿತ್ರಣ ಪಡೆಯಲು ಸಾಧ್ಯವಾ ಎಂದು ವಿಜ್ಞಾನಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ತುಕ್ಕು ಹಿಡಿದು ಮಣ್ಣಾಗುತ್ತಿರುವ ಹಡಗಿನ ಒಳಗೆ ಹೋಗುವ ಅಪಾಯ ಅವರು ಅರಿಯದ್ದಲ್ಲ.

ಟೈಟಾನಿಕ್ ಆಧುನಿಕ ಜನಪದ. ಅದರ ಬಗ್ಗೆ ಹೊಸ ಸುದ್ದಿಗಳೂ ಆಗೀಗ ಬರುತ್ತಿರುತ್ತವೆ. ಅದು ಮುಳುಗಿ ನೂರನೇ ವರ್ಷಾಚರಣೆ ನಡೆದಾಗಲಂತೂ ಎಲ್ಲರೂ ಅದರ ಬಗೆಗೆ ಮಾತನಾಡಿದರು. ಟೈಟಾನಿಕ್ ಸಿನಿಮಾದ ಮೂರು ಆಯಾಮದ ಆವೃತ್ತಿ ಬಿಡುಗಡೆಯಾಯಿತು. ನ್ಯಾಷನಲ್ ಜಿಯಾಗ್ರಫಿಕ್, ಡಿಸ್ಕವರಿಯಂತಹ ಚಾನೆಲ್‌ಗಳಲ್ಲೆಲ್ಲ ಅದರದೇ ಕಾರ್ಯಕ್ರಮಗಳು. ಟೈಟಾನಿಕ್ ಹೋದ ಹಾದಿಯಗುಂಟ ಸಾಗುವ ಸ್ಮಾರಕ ಯಾನವೊಂದನ್ನು ‘ಎಂಎಸ್ ಬಾಲೋರಲ್’ ಎಂಬ ಹಡಗಿನ ಮೂಲಕ ಆಯೋಜಿಸಲಾಯಿತು.

ಟೈಟಾನಿಕ್ ಮುಳುಗಿದ ಸ್ಥಳದಲ್ಲಿ, ಹಡಗಿನ ತುಕ್ಕು ಹಿಡಿದ ಭಾಗಗಳನ್ನು ಕರಗಿಸುತ್ತಿರುವ ಹೊಸ ಬ್ಯಾಕ್ಟಿರಿಯಾ ಜಾತಿಯೊಂದು ಪತ್ತೆಯಾಗಿದೆ. ಅದಕ್ಕೆ ‘ಹಾಲೋಮೊನಾಸ್ ಟೈಟಾನಿಕೇ’ ಎಂದು ಹೆಸರಿಡಲಾಗಿದೆ… ಹೀಗೇ ಸುದ್ದಿಗಳು.

ಸುದ್ದಿಗಳು ಹೇಗಾದರೂ ಇರಲಿ, ನೂರಾರು ವರ್ಷ ಕಳೆದರೂ ತನ್ನೆಡೆಗೆ ಎಲ್ಲರ ಮನ ಸೆಳೆಯುತ್ತಿರುವ ಟೈಟಾನಿಕ್‌ನ ಆಕರ್ಷಣೆಯಾದರೂ ಎಂಥದು? ಅದೊಂದು ರೂಪಕವೆನ್ನಬಹುದೆ? ಅದು ಮನುಕುಲದ ಸಾಧನೆಯ ಚರಮಸೀಮೆ ಹೇಗೋ ಹಾಗೇ, ಅಸಹಾಯಕತೆಯ ಪರಾಕಾಷ್ಠೆಯೂ ಹೌದು. ಹೀಗಾಗಿಯೇ ಅದೆಂದೂ ತೀರ ಸೇರದು; ನಮಗದರ ಕುತೂಹಲ ತೀರದು.

ಬಿಬಿಸಿಗೆ ಟೈಟಾನಿಕ್ ಬಗ್ಗೆ 2 ಗಂಟೆಗಳ ಡಾಕ್ಯುಮೆಂಟರಿ ಮಾಡಿದ ಜೇಮ್ಸ್ ಕ್ಯಾಮೆರೂನ್ ಹೇಳುತ್ತಾನೆ- “ಟೈಟಾನಿಕ್ ಮನುಕುಲದ ಪಾಲಿಗೆ ಒಡೆದ ಗಾಳಿಗುಳ್ಳೆ, 20ನೇ ಶತಮಾನದ ಆರಂಭದಲ್ಲಿ ಎಂಥ ಸಾಧನೆಯ ಅಬ್ಬರವಿತ್ತು! ಲಿಫ್ಟ್‌ಗಳು! ವಾಹನಗಳು! ವಿಮಾನಗಳು! ನಿಸ್ತಂತು
ರೇಡಿಯೊ! ಎಲ್ಲವೂ ಪರಮಾದ್ಭುತವಾಗಿ, ಮನುಷ್ಯನ ಸಾಧನೆಯ ಕೊನೆಯಿಲ್ಲದ ಮೆಟ್ಟಿಲುಗಳಾಗಿ ಕಾಣಿಸುತ್ತಿದ್ದವು. ಟೈಟಾನಿಕ್‌ನೊಂದಿಗೆ ಅಂತಿಮವಾಗಿ ಎಲ್ಲವೂ ಮುಳುಗಿದವು…’

ಅದು ಟೈಟಾನಿಕ್ ಘಟನೆಯ ಬಗ್ಗೆ ಮನುಷ್ಯ ಬರೆಯಬಹುದಾದ ಚರಮವಾಕ್ಯ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Book Release: ಬೆಂಗಳೂರಿನಲ್ಲಿ ಜೂ.29ರಂದು ‘ಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ

Bengaluru News: ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ ವಿರಚಿತ “ಭಾವರಾಮಾಯಣ ರಾಮಾವತರಣ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ನಗರದ ಹೊಸಕೆರೆಹಳ್ಳಿಯ ಪಿ.ಇ.ಎಸ್‌. ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ. ಸಭಾಂಗಣದಲ್ಲಿ ಇದೇ ಜೂ. 29ರಂದು ಶನಿವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.

VISTARANEWS.COM


on

Bhaavaramayana Ramavatarana book release programme on June 29 in Bengaluru
Koo

ಬೆಂಗಳೂರು: ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ ವಿರಚಿತ ʼಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ (Book Release) ಕಾರ್ಯಕ್ರಮವನ್ನು ನಗರದ ಹೊಸಕೆರೆಹಳ್ಳಿಯ ಪಿ.ಇ.ಎಸ್‌. ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ. ಸಭಾಂಗಣದಲ್ಲಿ ಇದೇ ಜೂ. 29ರಂದು ಶನಿವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರ ಇಳಿಕೆ

ಕಾರ್ಯಕ್ರಮದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾರು ಹಾಗೂ ಶ್ರೀಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಮತ್ತು ಪಿ.ಇ.ಎಸ್‌. ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಂ.ಆರ್‌. ದೊರೆಸ್ವಾಮಿ ಉಪಸ್ಥಿತರಿರುವರು.

ಇದನ್ನೂ ಓದಿ: Para Badminton Ranking: ಮೊದಲ ಬಾರಿಗೆ ವಿಶ್ವ ನಂ.1 ಸ್ಥಾನಕ್ಕೇರಿದ ಕನ್ನಡಿಗ ಸುಹಾಸ್‌ ಯತಿರಾಜ್

ಸಂಜೆ 5 ಗಂಟೆಗೆ ಕಲಾಸ್ನೇಹಿ ಹಾಗೂ ನರ್ತನಯೋಗ ಸಂಸ್ಥೆಯ ನಿರ್ದೇಶಕಿ ಸ್ನೇಹಾ ನಾರಾಯಣ ಮತ್ತು ಯೋಗೇಶ್‌ ಕುಮಾರ್‌ ಅವರಿಂದ ಭರತನಾಟ್ಯ, ಸಂಜೆ 5.30 ಕ್ಕೆ ನೂರಕ್ಕೂ ಹೆಚ್ಚು ಗಣ್ಯರಿಂದ ಪುಸ್ತಕ ಲೋಕಾರ್ಪಣೆ, ಶ್ರೀಸಂಸ್ಥಾನದವರೊಂದಿಗೆ ಸಂವಾದ, ಎನ್. ರವಿಶಂಕರ್‌ ಸಂವಾದಕರಾಗಿ ಪಾಲ್ಗೊಳ್ಳುವರು. ಮಂತ್ರಾಲಯ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ಜರುಗಲಿದೆ.

Continue Reading

ಕಲೆ/ಸಾಹಿತ್ಯ

ಕಥೆ ನಿಜ, ಕಥೆಗಾರ ಸುಳ್ಳು: ಕಥೆಕೂಟ ಸಮಾವೇಶದಲ್ಲಿ ಟಿಎನ್‌ ಸೀತಾರಾಮ್‌

ಸಕಲೇಶಪುರದ ಮಕ್ಕಿತಿಟ್ಟದಲ್ಲಿ ನಡೆದ ʼಕಥೆಕೂಟʼ ವಾಟ್ಸ್ಯಾಪ್‌ ಗುಂಪಿನ ಒಂಬತ್ತನೇ ವಾರ್ಷಿಕೋತ್ಸವ ಹಾಗೂ ಆರನೇ ಸಮಾವೇಶದ ಎರಡನೇ ದಿನ ನಡೆದ ‘ಮುಕ್ತಕಥಾ’ ಸಂವಾದ ಕಾರ್ಯಕ್ರಮದಲ್ಲಿ ಟಿಎನ್ನೆಸ್ ಮತ್ತು ಡುಂಡಿರಾಜ್ ತಮ್ಮ ಕಥಾಜೀವನ- ಕಾವ್ಯಜೀವನದ ಅಂತರಂಗವನ್ನು ತೆರೆದಿಟ್ಟರು.

VISTARANEWS.COM


on

ಕಥೆಕೂಟ literature meet
Koo

ಬೆಂಗಳೂರು: ನಾನು ಸಾಹಿತ್ಯ ಸಿನಿಮಾ ಎಂದು ಬೆಂಗಳೂರಿನಲ್ಲಿ ಬದುಕು ಹುಡುಕಿಕೊಳ್ಳುತ್ತಿದ್ದಾಗ ತಂದೆ ಊರಿನಲ್ಲಿ ನನಗಾಗಿ ಜಮೀನು ಮಾಡಿಟ್ಟು ಊರಿಗೆ ಬಾ ಎಂದು ಕರೆದರು. ನಾನು, ನಿಮ್ಮ ಜಮೀನು ನನಗೆ ಬೇಕಿಲ್ಲ ಎಂದು ಉತ್ತರಿಸಿ ಪತ್ರ ಬರೆದೆ. ಇದಾದ ತಿಂಗಳೊಳಗೆ ಅವರು ಕಾಯಿಲೆ ಉಲ್ಬಣಿಸಿ ತೀರಿಕೊಂಡರು. ಊರಿಗೆ ಹೋದೆ. ತಂದೆ ನನ್ನ ಪತ್ರ ತಲುಪಿದ ಬಳಿಕ ಕೊರಗಿನಲ್ಲಿ ತಮ್ಮ ಮಾತ್ರೆಗಳನ್ನು ಸೇವಿಸಿರಲಿಲ್ಲ ಎಂದು ಗೊತ್ತಾಯಿತು. ತಂದೆಯ ಸಾವಿಗೆ ಕಾರಣವಾದೆ ಎಂಬ ಪಶ್ಚಾತ್ತಾಪದಿಂದ ದಗ್ಧನಾದೆ. ಮುಂದೆ ಇದೇ ಘಟನೆಯನ್ನಿಟ್ಟುಕೊಂಡು ಒಂದು ನಾಟಕ ಬರೆದೆ. ಅದೇ ‘ಬದುಕ ಮನ್ನಿಸು ಪ್ರಭುವೆ’. ಇದಕ್ಕೆ ಲಂಕೇಶ್, ರಾಮಚಂದ್ರ ಶರ್ಮ ಅವರೆಲ್ಲ ಸ್ಪರ್ಧಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂತು. ಅದು ನನ್ನ ಕಣ್ಣೀರಿನಿಂದ ಮೂಡಿದ ಕೃತಿ. ನಮ್ಮ ನಮ್ಮ ಕಣ್ಣೀರುಗಳನ್ನು, ನಿಟ್ಟುಸಿರುಗಳನ್ನು ಹಿಂಬಾಲಿಸುತ್ತ ಹೋದರೆ ನೈಜ ಕತೆಗಳೋ ಕಾದಂಬರಿಗಳೋ ಬರೆಸಿಕೊಳ್ಳುತ್ತವೆ.

  • ಟಿಎನ್ ಸೀತಾರಾಮ್ ಹೀಗೆ ತಮ್ಮ ಬದುಕಿನಿಂದ ಆಯ್ದ ಒಂದು ಘಟನೆಯನ್ನು ಎತ್ತಿಕೊಂಡು, ಅದಕ್ಕೂ ತಮ್ಮ ಸೃಜನಶೀಲತೆಗೂ ಇದ್ದ ಸಂಬಂಧವನ್ನು ವಿವರಿಸುತ್ತಾ ಇದ್ದರೆ ಎದುರು ಕುಳಿತ ಕಥೆಕೂಟಿಗರು ಮಂತ್ರಮುಗ್ಧ.

ಸಕಲೇಶಪುರದ ಮಕ್ಕಿತಿಟ್ಟದಲ್ಲಿ ನಡೆದ ʼಕಥೆಕೂಟʼ ವಾಟ್ಸ್ಯಾಪ್‌ ಗುಂಪಿನ ಒಂಬತ್ತನೇ ವಾರ್ಷಿಕೋತ್ಸವ ಹಾಗೂ ಆರನೇ ಸಮಾವೇಶದ ಎರಡನೇ ದಿನ ನಡೆದ ‘ಮುಕ್ತಕಥಾ’ ಸಂವಾದ ಕಾರ್ಯಕ್ರಮದಲ್ಲಿ ಟಿಎನ್ನೆಸ್ ಮತ್ತು ಡುಂಡಿರಾಜ್ ತಮ್ಮ ಕಥಾಜೀವನ- ಕಾವ್ಯಜೀವನದ ಅಂತರಂಗವನ್ನು ತೆರೆದಿಟ್ಟರು.

ನಾವು ನೊಂದ ನೋವಿನಲ್ಲಿ ನಮ್ಮ ಜೀವವಿರುತ್ತದೆ. ನಮ್ಮ ಕಣ್ಣೀರು ನಿಟ್ಟುಸಿರನ್ನು ಹಿಂಬಾಲಿಸಿದಾಗಲೇ ನಾವು ಬರೆಯಬೇಕಾದ ಕತೆ ಸಿಗುತ್ತದೆ. ಹಾಗಾಗಿ ನಾನು ಬರೆಯುವ ಕತೆಗಳಲ್ಲಿ ನಿಜವಾದ ನಾನು ಇರುತ್ತೇನೆ. ಹೊರತು, ನಿಮ್ಮ ಜೊತೆ ಒಡನಾಡುತ್ತಿರುವ ನಾನು ಸುಳ್ಳಿರಬಹುದು. ಆದರೆ ನನ್ನ ಕತೆಗಳು ಸುಳ್ಳಲ್ಲ. ನನ್ನ ಕತೆಯೇ ಸತ್ಯ ಎಂದರು ಟಿಎನ್ನೆಸ್. ನಾನು ಇದುವರೆಗೂ ಸೀರಿಯಲ್‌ಗಳಿಗಾಗಿ ಪ್ರತಿದಿನದಂತೆ ಸುಮಾರು 7000 ಕತೆಗಳನ್ನು ಬರೆದಿದ್ದೇನೆ. ಮನುಷ್ಯ ಮೂಲಭೂತವಾಗಿ ಕತೆ ಕಟ್ಟುವವನಾದ್ದರಿಂದ ಇದು ಸಾಧ್ಯವಾಗಿದೆ ಎಂದವರ ಮಾತು.

ಹಾಸ್ಯಕವನ, ಹನಿಕವನ ಬರೆಯುವುದು ನನ್ನ ಆಯ್ಕೆಯಾಗಿರಲಿಲ್ಲ. ಅದು ಅನಿವಾರ್ಯ ಆಗಿತ್ತು. ಮಾಧ್ಯಮಗಳೂ ಕೆಲವೊಮ್ಮೆ ಅದನ್ನೇ ಬಯಸುತ್ತಿದ್ದವು. ನನಗೆ ಗಂಭೀರ ಕಾವ್ಯ ರಚನೆ ಇಷ್ಟವೇ. ಹಲವು ಗಂಭೀರ ಕಾವ್ಯ ರಚಿಸಿದ್ದೇನೆ ಕೂಡಾ. ಆದರೆ ಜನರ ಗಮನ ಹೆಚ್ಚು ಸೆಳೆದದ್ದು ಹನಿಗವನಗಳು ಎಂಬುದು ಡುಂಡಿರಾಜ್ ಮಾತಾಗಿತ್ತು. ಹಾಲು ಮಾರಲು ಬರುತ್ತಿದ್ದ ಹುಡುಗಿಯ ಬಗ್ಗೆ ಬರೆದ ಮೊದಲ ಕವನ ನೆನಪಿಸಿಕೊಂಡರು ಡುಂಡಿ.

ಗಂಭೀರ ಕವನ ಬರೆಯಲು ಸಾಕಷ್ಟು ಜನರಿದ್ದಾರೆ; ಆದರೆ ಹನಿಗವನ ಬರೆಯುವುದರಲ್ಲಿ ನಿನಗೆ ಸ್ಪರ್ಧಿಗಳಿಲ್ಲ ಎಂದು ಗೆಳೆಯ ಬಿಆರೆಲ್ ತನಗೆ ಒತ್ತಾಸೆಯಾಗಿ ನಿಂತುದನ್ನು ಡುಂಡಿ ನೆನಪಿಸಿಕೊಂಡರು. ಆತ್ಮತೃಪ್ತಿಯ ರಚನೆಗಳು ಮತ್ತು ಜನಪ್ರಿಯ ರಚನೆಗಳು- ಎರಡರ ನಡುವೆ ಭೇದ ಇದ್ದೇ ಇರುತ್ತದೆ. ಹೊಟ್ಟೆಪಾಡಿನ ಪ್ರಶ್ನೆ ಬಂದಾಗ ಜನಪ್ರಿಯ ರಚನೆಗಳು ಅನಿವಾರ್ಯವಾಗುತ್ತವೆ; ಆತ್ಮತೃಪ್ತಿ ಬದಿಗೆ ಸರಿಯುತ್ತದೆ ಎಂಬುದು ಇಬ್ಬರ ಒಕ್ಕೊರಲ ಉತ್ತರವಾಗಿತ್ತು.

ಅನಂತ ಕುಣಿಗಲ್ ಚುರುಕಾದ ಪ್ರಶ್ನೆಗಳ ಮೂಲಕ ಈ ಕಾರ್ಯಕ್ರಮ ನಡೆಸಿಕೊಟ್ಟರು. ಕವಿತಾ ಹೆಗಡೆ ಅಭಯಂ ಕಾರ್ಯಕ್ರಮವನ್ನು ನಿರ್ವಹಿಸಿದರು. ಜೋಗಿ, ಗೋಪಾಲಕೃಷ್ಣ ಕುಂಟಿನಿ ಉಪಸ್ಥಿತರಿದ್ದರು.

ಇದನ್ನೂ ಓದಿ: Pustaka Sante : ವೀರಲೋಕ ಪುಸ್ತಕ ಸಂತೆ ಅದ್ಧೂರಿ ಆರಂಭ, ವೆರಿ ಗುಡ್ ಎಂದು ಬೆನ್ನುತಟ್ಟಿದ ಸಿಎಂ ಸಿದ್ದರಾಮಯ್ಯ

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?” ಎಮರ್ಜೆನ್ಸಿಯ ಕರಾಳ ನೆನಪು

ನನ್ನ ದೇಶ ನನ್ನ ದನಿ ಅಂಕಣ: ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ!

VISTARANEWS.COM


on

indira gandhi ನನ್ನ ದೇಶ ನನ್ನ ದನಿ
Koo

ಇಂದು ತುರ್ತುಪರಿಸ್ಥಿತಿ ಹೇರಿಕೆಯ ʼಚಿನ್ನದ “ಹಬ್ಬʼ !

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ಅವು ತುರ್ತುಪರಿಸ್ಥಿತಿಯ (internal Emergency) ದಿನಗಳು. ತಮ್ಮ ಅಧಿಕಾರ ಉಳಿಸಿಕೊಳ್ಳುವ ಏಕೈಕ ದುರುದ್ದೇಶದಿಂದ ಇಂದಿರಾ ಗಾಂಧಿಯವರು (Indira Gandhi) ದೇಶದಾದ್ಯಂತ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಎಲ್ಲ ಮಾಧ್ಯಮದವರು, ಓರಾಟಗಾರರು, ಬುದ್ಧಿಜೀವಿಗಳು, ಬಹುತೇಕ ವಿರೋಧ ಪಕ್ಷಗಳವರು ಶರಣಾಗತರಾಗಿಬಿಟ್ಟಿದ್ದರು, ಅಷ್ಟೇ ಅಲ್ಲ, ಮನೆಯಲ್ಲಿ ಮಂಚದ ಅಡಿಯಲ್ಲಿ ಅಡಗಿಕೊಂಡುಬಿಟ್ಟಿದ್ದರು. ತುರ್ತುಪರಿಸ್ಥಿತಿಯನ್ನು ರಾಷ್ಟೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಪರಿವಾರ ಸಂಘಟನೆಗಳು ಮಾತ್ರವೇ ವಿರೋಧಿಸುತ್ತಿದ್ದುದರಿಂದ ಇಂದಿರಾ ಗಾಂಧಿಯವರು ಆರೆಸ್ಸೆಸ್ ಎಂದರೆ ಸಿಡಿಮಿಡಿಗೊಳ್ಳುತ್ತಿದ್ದರು.

1975ರ ಆ ವರ್ಷದ ಗಾಂಧೀ ಜಯಂತಿ (Gandhi Jayanthi) ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶ, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧೀಜಯಂತಿ ಆಚರಿಸಿದವರು ಸಂಘದ ಭೂಗತ ಕಾರ್ಯಕರ್ತರು. ಎದೆಯ ಮೇಲೆ ಧರಿಸಲು ಗಾಂಧೀ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧೀ ಭಿತ್ತಿಚಿತ್ರಗಳು. ಎರಡರಲ್ಲೂ ಗಾಂಧೀ ಚಿತ್ರದ ಕೆಳಗೆ “ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆಬಾಗುವುದು ಹೇಡಿತನ” ಎನ್ನುವ ಗಾಂಧೀ ಉಕ್ತಿ. ಆದರೆ ಅಂದಿನ ಇಂದಿರಾ – ದೇವರಾಜ ಅರಸು ಅವರ ಕಾಂಗ್ರೆಸ್ ಸರ್ಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.

ಗಾಂಧೀ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದವರ ಚಿತ್ರ ಹಿಡಿದಿದ್ದಕ್ಕೆ ಹೊಡೆದು ಬಡಿದು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ, ನ್ಯಾಯಾಧೀಶರು ತಮ್ಮ ಕಣ್ಣು – ಕಿವಿಗಳನ್ನು ನಂಬದಾದರು. “ಏನು, ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸಿನವರು ಏನು ಹೇಳಿಯಾರು! “ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು” ಎಂಬ ನೆಪ ಹೇಳಿದರು. “ಇರಬಹುದು, ಆದರೆ ಇವರು ಮಾಡಿದ ಅಪರಾಧವೇನು?” ಎಂದ ನ್ಯಾಯಾಧೀಶರ ಪ್ರಶ್ನೆಗಳಿಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು (ಕೆಲವೆಡೆ) ಪೊಲೀಸರಿಗೆ ಛೀಮಾರಿ ಹಾಕಿ ಬಂಧಿತರನ್ನು ಬಿಡುಗಡೆ ಮಾಡಿದರು.

ಹಿಂದೆ ಉಪ್ಪಿನ ಸತ್ಯಾಗ್ರಹದಲ್ಲಿ, ಭಾರತ್ ಛೋಡೋ ಚಳವಳಿಯಲ್ಲಿ ಭಾಗವಹಿಸಿ ‘ವಂದೇ ಮಾತರಂ’, ‘ಮಹಾತ್ಮಾ ಗಾಂಧೀ ಕೀ ಜೈ’, ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಿಸುತ್ತಿದ್ದವರ ಮೇಲೆ ಬ್ರಿಟಿಷ್ ಪೊಲೀಸರ ಲಾಠಿಯೇಟು, ಬೂಟಿನೇಟು ಬೀಳುತ್ತಿತ್ತು. ‘ಸ್ವಾತಂತ್ರ್ಯ’ ಬಂದ ಮೇಲೂ ಹಾಗೆ ಘೋಷಣೆ ಕೂಗಿದವರ ಮೇಲೆ, ಕಾಂಗ್ರೆಸ್ ಸರಕಾರದ ಪೊಲೀಸರ ಲಾಠಿಯೇಟು ಬಿದ್ದುದು, ಬರಿಯ ವಿಸ್ಮಯದ – ವಿಷಾದಭಾವದ ಮಾತಲ್ಲ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದೆಯೇ, ಕಾಂಗ್ರೆಸ್ಸಿನಂತಹ ಪಕ್ಷಗಳನ್ನು ಬೆಂಬಲಿಸಿ ಮತ ಹಾಕುವುದರ ದುಷ್ಪರಿಣಾಮಗಳ ಅಂತಿಮ ಹಂತವಿದು.

1975ರ ನವೆಂಬರ್ 14ರಿಂದ ದೇಶಾದ್ಯಂತ ಪ್ರತಿಭಟನೆಯನ್ನು ಆರೆಸ್ಸೆಸ್ ಪರಿವಾರ ಸಂಘಟನೆಗಳು ಹಮ್ಮಿಕೊಂಡಿದ್ದವು. ಬಹುಪಾಲು ರಾಜಕಾರಣಿಗಳು, ನಾಯಕರು ಸೆರೆಮನೆಯಲ್ಲಿದ್ದರು. ಪ್ರತಿಭಟನೆಯನ್ನು ವಿಫಲಗೊಳಿಸಲು ಅಂದಿನ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಬಂಧನಗಳಿಗೆ (Preventive Arrests) ಆಜ್ಞೆ ಮಾಡಿತ್ತು. ಆ ಕಾರಣಕ್ಕೆ ನಾವೆಲ್ಲಾ ಬಂಧನಕ್ಕೆ ಒಳಗಾದುದು ನವೆಂಬರ್ 13ರಂದು. ಪೊಲೀಸರು “ನೀವು ಭಾರತೀಯರೋ ರಾಷ್ಟ್ರೀಯರೋ?” ಎಂದು ಪ್ರಶ್ನೆ ಹಾಕಿದಾಗ ನಾನೂ ನನ್ನ ಉಳಿದ ಸ್ವಯಂಸೇವಕ ಬಂಧುಗಳೂ ಕಕ್ಕಾಬಿಕ್ಕಿಯಾದೆವು. ನಮ್ಮ ಮುಂದೆ PSR (Prisoners’ Search Register) ಹರಡಿಕೊಂಡಿತ್ತು. ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಮುಗ್ಧತೆಯಿಂದ “ನಾವೆಲ್ಲಾ ಭಾರತೀಯರೂ ಹೌದು, ರಾಷ್ಟ್ರೀಯರೂ ಹೌದು” ಎಂದೆವು. “ಎರಡರಲ್ಲಿ ಒಂದು ಹೇಳ್ರೀ” ಎಂದು ಅವರು ಅಬ್ಬರಿಸಿದಾಗ ಇನ್ನಷ್ಟು ಗೊಂದಲ. ಕೊನೆಗೆ ಆ ಪ್ರಶ್ನೆ ನಾವು ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದವರೋ, ಭಾರತೀಯ ಜನಸಂಘಕ್ಕೆ ಸಂಬಂಧಿಸಿದವರೋ ಎಂಬುದಾಗಿತ್ತು ಎಂದು ತಿಳಿದಾಗ, ಗೊಂದಲದಿಂದ ಪರಿಹಾರ. ನಾವೆಲ್ಲಾ ಒಕ್ಕೊರಲಿನಿಂದ “ನಾವು ರಾಷ್ಟೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು” ಎಂದೆವು. ಅಂದಿನ ದಿನಮಾನಗಳಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಹೆಸರನ್ನು ಸರಿಯಾಗಿ ಉಚ್ಚರಿಸಲು, ಉಲ್ಲೇಖಿಸಲು ಬಹಳ ಜನರಿಗೆ ಬರುತ್ತಿರಲಿಲ್ಲ (ಕೆಲವರಿಗೆ ಈಗಲೂ ಗೊಂದಲ!).

ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ ಎಂಬುದು ಇಂದಿಗೂ ಪ್ರಶ್ನೆಯಾಗಿ ಕಾಡುತ್ತದೆ. ಎಂತಹ ಪಕ್ಷವಿದು. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ! ಕಾಂಗ್ರೆಸ್ಸಿನ ಒಬ್ಬನೇ ಒಬ್ಬ MP ,MLA, MLC ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಇಲ್ಲ. ಕಾಸು ಮಾಡಿಕೊಳ್ಳುವ ಧಂಧೆಯನ್ನು ಎಲ್ಲ ಕಾಂಗ್ರೆಸ್ಸಿಗರೂ ಇನ್ನಷ್ಟು ನಿರಾಳವಾಗಿ ಮುಂದುವರಿಸಿಕೊಂಡುಹೋದರು. ಕಳೆದ ಏಳೆಂಟು ದಶಕಗಳ ಭಾರತೀಯ ಇತಿಹಾಸವನ್ನು ಅವಲೋಕಿಸಿದರೆ ಈ ಕಾಂಗ್ರೆಸ್ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಾಗಿರದೆ, ದೇಶಕ್ಕೆ ಅಂಟಿದ ಒಂದು ಶಾಪ, ಒಂದು ರೋಗ ಎಂಬುದು ಖಚಿತವಾಗುತ್ತದೆ.

ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಪ್ಯಾರೇಲಾಲರು, ‘Mahatma Gandhi : The Last Phase’ ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನು ಗಾಂಧೀವಾದಿ ಕೆ.ವಿ.ಶಂಕರಗೌಡರು ‘ಮಹಾತ್ಮಾಗಾಂಧಿ: ಅಂತಿಮ ಹಂತ’ ಎಂದು ಅನುವಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯವು ಹೊರತಂದಿರುವ ಈ ಸಂಪುಟಗಳು ಓದಲೇಬೇಕಾದ ಅಪೂರ್ವ ಮಾಹಿತಿಗಳನ್ನು ದಾಖಲೆಗಳನ್ನು ಸಂಗತಿಗಳನ್ನು ಒಳಗೊಂಡಿದೆ.

“ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರನೇಕರು, ಗಾಳಿ ಬಂದಾಗ ತೂರಿಕೋ ಎನ್ನುವ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‍ನಲ್ಲಿ ತಲೆದೋರಿರುವ ಗುಂಪುಗಾರಿಕೆ ಮತ್ತು ಮಂತ್ರಿಗಳ ದೌರ್ಬಲ್ಯವನ್ನು ಕಂಡ ಜನರಲ್ಲಿ ಒಂದು ಬಗೆಯ ದಂಗೆಯ ಮನೋಭಾವ ಮೂಡುತ್ತಿದೆ. ಜನರು ಬ್ರಿಟಿಷ್ ಸರ್ಕಾರವೇ ವಾಸಿಯಾಗಿತ್ತು ಎನ್ನುತ್ತಿದ್ದಾರಲ್ಲದೆ, ಕಾಂಗ್ರೆಸ್ಸನ್ನು ಹಳಿಯುತ್ತಿದ್ದಾರೆ” ಎಂದರು. ಗಾಂಧೀಜಿ. ಸರಿಯಾಗಿ ಗಮನಿಸಿ. ಇದು ಸ್ವಾತಂತ್ರ್ಯ ಬಂದ ಕೆಲವೇ ದಿನಗಳ ಅನಂತರ ಗಾಂಧೀಜಿಯವರು ಹೇಳಿದ ಮಾತುಗಳು. ಡಿಸೆಂಬರ್ 1947ರಲ್ಲಿ ಮತ್ತೆ ಗಾಂಧೀಜಿ ಹೇಳಿದರು “ಕಾಂಗ್ರೆಸ್‍ನಂತಹ ಬೃಹತ್ ಸಂಸ್ಥೆಗಳಿಂದ ಭ್ರಷ್ಟಾಚಾರ, ಅಸತ್ಯ ಮುಂತಾದ ಪೀಡೆಗಳನ್ನು ಉಚ್ಚಾಟಿಸದೇ ಹೋದರೆ, ನಾಲ್ಕೂ ಕಡೆಗಳಿಂದ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ಮುತ್ತಿ, ಈ ಸಂಸ್ಥೆಯು ಧೂಳೀಪಟವಾಗುತ್ತದೆ ಮತ್ತು ಹಾಗಾದಾಗ ನಾನು ಒಂದು ತೊಟ್ಟು ಕಣ್ಣೀರನ್ನೂ ಸುರಿಸುವುದಿಲ್ಲ. ದೊಡ್ಡ ರೋಗದಿಂದ ಬಳಲುತ್ತಿರುವ ರೋಗಿಯನ್ನು ಗುಣಮಾಡಲು ಸಾಧ್ಯವಿಲ್ಲದೆ ಹೋದರೆ, ರೋಗಿ ಸಾಯುವುದು ಮೇಲು” (ಪುಟ 721).

ಈ ಪರಿಪ್ರೇಕ್ಷ್ಯದಲ್ಲಿ, ತುರ್ತುಪರಿಸ್ಥಿತಿಯ ಹೇರಿಕೆಯ (25/6/1975) ವಾರ್ಷಿಕೋತ್ಸವದ ಕಹಿನೆನಪುಗಳ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ.

ಇತಿಹಾಸ, ಸ್ವಾತಂತ್ರ್ಯ ಹೋರಾಟಗಳ ಸರಿಯಾದ ವಿಮರ್ಶಾತ್ಮಕ ವಿಶ್ಲೇಷಣೆಗಳು ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ಮತ್ತೊಮ್ಮೆ ನೀಗಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ

Continue Reading

ವಾಣಿಜ್ಯ

JioMart: ಕುಶಲಕರ್ಮಿಗಳು, ನೇಕಾರರ ಉತ್ತೇಜನಕ್ಕೆ ಜಿಯೋಮಾರ್ಟ್‌ನಿಂದ ಮತ್ತೊಂದು ಘೋಷಣೆ

JioMart: ಜಿಯೋಮಾರ್ಟ್‌ನಿಂದ ಸೋಮವಾರ ಮಹತ್ತರವಾದ ಸಹಭಾಗಿತ್ವವನ್ನು ಘೋಷಣೆ ಮಾಡಲಾಗಿದ್ದು, ಸಣ್ಣ ಪ್ರಮಾಣದ ಮಾರಾಟಗಾರರು, ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕರರು ಒಳಗೊಂಡಂತೆ ಅವರ ಬೆಳವಣಿಗೆಗೆ ಸಹಕರಿಸಬೇಕು ಹಾಗೂ ಅವರನ್ನು ಸಬಲಗೊಳಿಸಬೇಕು ಎಂಬ ದೃಷ್ಟಿಕೋನದ ಹಿನ್ನೆಲೆಯಲ್ಲಿ JASCOLAMPF ಹಾಗೂ JHARCRAFT ಜತೆಗೆ ಸಹಭಾಗಿತ್ವ ವಹಿಸಲಾಗಿದೆ.

VISTARANEWS.COM


on

Jiomart partnership with JASCOLAMPF and JHARCRAFT
Koo

ಮುಂಬೈ: ರಿಲಯನ್ಸ್ ರೀಟೇಲ್‌ನ ಇ-ಮಾರ್ಕೆಟ್ ಪ್ಲೇಸ್ ಅಂಗವಾದ ಜಿಯೋಮಾರ್ಟ್‌ನಿಂದ (JioMart) ಸೋಮವಾರ ಮಹತ್ತರವಾದ ಸಹಭಾಗಿತ್ವವನ್ನು ಘೋಷಣೆ ಮಾಡಲಾಗಿದ್ದು, ಸಣ್ಣ ಪ್ರಮಾಣದ ಮಾರಾಟಗಾರರು, ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕ ವೃತ್ತಿಯವರು ಒಳಗೊಂಡಂತೆ ಅವರ ಬೆಳವಣಿಗೆಗೆ ಸಹಕರಿಸಬೇಕು ಹಾಗೂ ಅವರನ್ನು ಸಬಲಗೊಳಿಸಬೇಕು ಎಂಬ ಉದ್ದೇಶದಿಂದ JASCOLAMPF ಹಾಗೂ JHARCRAFT ಜತೆಗೆ ಸಹಭಾಗಿತ್ವ ವಹಿಸಲಾಗಿದೆ.

ಅಂದ ಹಾಗೆ ಮೊದಲನೆಯದು ಜಾರ್ಖಂಡ್‌ನ ರಾಜ್ಯ ಸರ್ಕಾರಿ ಎಂಪೋರಿಯಂ ಹಾಗೂ ಎರಡನೆಯದು ಜಾರ್ಖಂಡ್ ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವಂಥದ್ದು. ಜಾರ್ಖಂಡ್‌ನಲ್ಲಿನ ಕುಶಲಕರ್ಮಿಗಳ ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಈ ಜಂಟಿ ಉಪಕ್ರಮವು ಬಹಳ ದೊಡ್ಡ ಮೈಲುಗಲ್ಲಾಗಿದೆ. ಮತ್ತು ಇದರೊಂದಿಗೆ ಜಿಯೋಮಾರ್ಟ್ ಮೂಲಕ ದೇಶದಾದ್ಯಂತ ತಲುಪುವುದಕ್ಕೆ ಅನುಕೂಲ ಆಗುತ್ತದೆ.

ಇದನ್ನೂ ಓದಿ: Team India : ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ, ಶುಭ್​ಮನ್ ಗಿಲ್​ಗೆ ನಾಯಕತ್ವ

ಜಾರ್ಖಂಡ್‌ನ ಪಟ್ಟಣ ಮತ್ತು ನಗರಗಳಾದ ಗುಮ್ಲಾ, ಸರೈಕೆಲಾ ಹಾಗೂ ಪಲಮೌ ಸೇರಿದಂತೆ ಇತರೆಡೆಗಳಿಂದ ಅಪಾರ ಸಂಖ್ಯೆಯ ಕುಶಲಕರ್ಮಿಗಳನ್ನು ಜಿಯೋಮಾರ್ಟ್ ವೇದಿಕೆಗೆ ಕರೆತರುವಲ್ಲಿ ಈ ಸಹಯೋಗ ನೆರವಾಗಿದೆ. ಇದೀಗ ಈ ಕುಶಲಕರ್ಮಿಗಳು ತನ್ನ ಅದ್ಭುತ ಕರಕುಶಲ ವಸ್ತುಗಳನ್ನು ಪ್ರದರ್ಶಿಸುವುದಕ್ಕೆ ಮಾತ್ರವಲ್ಲ, ಅದರ ಜತೆಗೆ ದೇಶದಾದ್ಯಂತ ಇರುವಂಥ ಗ್ರಾಹಕರನ್ನು ತಲುಪುವುದಕ್ಕೆ ಮತ್ತು ತಮ್ಮ ವ್ಯಾಪಾರ- ವ್ಯವಹಾರವನ್ನು ವಿಸ್ತರಿಸುವುದಕ್ಕೆ ಸಹಾಯ ಆಗುತ್ತದೆ.

ಜಾರ್ಖಂಡ್‌ನ ರಾಜ್ಯ ಸರ್ಕಾರದ ಎಂಪೋರಿಯಂ ಅನ್ನು JASCOLAMPF ಎಂದು ಕರೆಯಲಾಗುತ್ತದೆ. ತಮ್ಮ ವ್ಯವಹಾರವನ್ನು ಆರಂಭಿಸುವುದಕ್ಕೆ ಯಾವುದೇ ಸಮಸ್ಯೆ ಆಗದಂಥ, ಗ್ರಾಹಕರಿಗೆ ಸಂಪೂರ್ಣ ಪಾರದರ್ಶಕವಾದಂಥ ಹಾಗೂ ಜತೆಗೆ ಮೀಸಲು ಇರಿಸಿದಂಥ ಮಾರ್ಕೆಟಿಂಗ್ ಬೆಂಬಲದೊಂದಿಗೆ ಇನ್ನು ಲಭ್ಯವಿರುತ್ತದೆ.

ಈ ಸಹಯೋಗದ ಮೂಲಕ ಜಿಯೋಮಾರ್ಟ್‌ನ ಲಕ್ಷಾಂತರ ಸಂಖ್ಯೆಯ ಗ್ರಾಹಕರು ಜಿಐ- ಟ್ಯಾಗ್ ಆದಂಥ ಮರದ ಉತ್ಪನ್ನಗಳು, ಬಿದಿರಿನ ವಸ್ತುಗಳು, ಧೋಕ್ರಾ ಕಲಾಕೃತಿಗಳು, ಟೆರಾಕೋಟಾ ವಸ್ತುಗಳು, ಲ್ಯಾಕ್ ಬಳೆಗಳು, ಹತ್ತಿ ಕೈಮಗ್ಗ, ಅಪ್ಲಿಕ್ ವರ್ಕ್, ಝರ್ಡೋಜಿ ವರ್ಕ್, ತಸರ್ ಕೈ ಮಗ್ಗ ಸೀರೆಗಳು, ಪುರುಷರ ಅಂಗಿಗಳು, ಹೊಲಿಗೆ ಹಾಕಿರದಂಥ ಡ್ರೆಸ್ ಮಟಿರೀಯಲ್ ಗಳು, ಕರಕುಶಲ ಬ್ಯಾಗ್, ಬೆಡ್ ಶೀಟ್ ಗಳು, ಪೇಂಟಿಂಗ್ ಗಳು, ಗೃಹಾಲಂಕಾರ ವಸ್ತುಗಳು, ಮತ್ತು ಇನ್ನೂ ಹಲವು ಕೈಯಿಂದ ಸಿದ್ಧಪಡಿಸಲಾದ ಹಲವು ವಿಧದ ಕಲಾ ವಸ್ತುಗಳು ದೊರೆಯುತ್ತವೆ.

ಇದರಿಂದಾಗಿ ಕೇವಲ ಸ್ಥಳೀಯ ಕರಕುಶಲತೆ ಜತೆಗೆ ನಿಕಟ ಬಂಧವನ್ನು ಮಾತ್ರ ಸೃಷ್ಟಿಸುವುದಲ್ಲದೆ “ವೋಕಲ್ ಫಾರ್ ಲೋಕಲ್”ಎಂಬ ಸ್ಥಳೀಯ ವಸ್ತುಗಳಿಗೆ ಉತ್ತೇಜನ ನೀಡಬೇಕು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ದೃಷ್ಟಿಕೋನದೊಂದಿಗೆ ಸಾಗುತ್ತದೆ.

ಇದನ್ನೂ ಓದಿ: Pralhad Joshi: ಮಾತೃಭಾಷೆ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಲ್ಹಾದ್‌ ಜೋಶಿ

ಈ ಕುರಿತು ಜಾರ್ಖಂಡ್ ಸ್ಟೇಟ್ ಕೋ-ಆಪರೇಟಿವ್ ಲ್ಯಾಕ್ ಮಾರ್ಕೆಟಿಂಗ್ ಅಂಡ್ ಪ್ರೊಕ್ಯೂರ್‌ಮೆಂಟ್ ಫೆಡರೇಷನ್ ಲಿಮಿಟೆಡ್ (JASCOLAMPF) ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಸಿಂಗ್ ಮಾತನಾಡಿ, “ಜಾರ್ಖಂಡ್‌ನ ಕರಕುಶಲ ಕಲಾವಿದರು, ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾಕಾರಗೊಳಿಸುವ ಅದ್ಭುತ ಕೌಶಲಗಳನ್ನು ಹೊಂದಿದ್ದಾರೆ.

ಅವರೊಂದಿಗೆ ಸಹಯೋಗವು ಜಾರ್ಖಂಡ್‌ನ ರೋಮಾಂಚಕ ಕರಕುಶಲತೆ ಮತ್ತು ಕಾಲಾತೀತ ಸಂಪ್ರದಾಯಗಳಲ್ಲಿ ಆಳವಾದ ತೊಡಗುಕೊಳ್ಳುವಿಕೆಗೆ ಭರವಸೆ ನೀಡುತ್ತದೆ. ಆದರೆ ಇದು ಜಾರ್ಖಂಡ್‌ನ ಇತರ ಎಂಎಸ್‌ಎಂಇ (ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ತಯಾರಕರಿಗೆ ಸಹ ಪ್ರಯೋಜನಗಳನ್ನು ನೀಡುತ್ತದೆ. ಆದರೂ ಹಂಚಿಕೆಯ ಜ್ಞಾನ ಮತ್ತು ಅವಕಾಶಗಳ ಮೂಲಕ, ಈ ಬಾಂಧವ್ಯದ ಬೆಳವಣಿಗೆ, ನಾವೀನ್ಯತೆ ಮತ್ತು ಜಾರ್ಖಂಡ್‌ನ ಗುರುತನ್ನು ವ್ಯಾಖ್ಯಾನಿಸುವ ಸಂಕೀರ್ಣವಾದ ಕರಕುಶಲತೆಗೆ ಗಹನವಾದ ಮೆಚ್ಚುಗೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಜಾರ್ಖಂಡ್ ಸಿಲ್ಕ್ ಟೆಕ್ಸ್‌ಟೈಲ್ ಮತ್ತು ಕರಕುಶಲ ಅಭಿವೃದ್ಧಿ ನಿಗಮ ಲಿಮಿಟೆಡ್ (JHARCRAFT) ನ ಉಪ ಪ್ರಧಾನ ವ್ಯವಸ್ಥಾಪಕಿ ಅಶ್ವಿನಿ ಸಹಾಯ್ ಮಾತನಾಡಿ, “ದೇಶೀಯ ಉತ್ಪನ್ನಗಳ ವಿಶಿಷ್ಟ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಜಿಯೋಮಾರ್ಟ್ ನಂತಹ ಸ್ಥಳೀಯ ವೇದಿಕೆಯಲ್ಲಿ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ನಮಗೆ, ಈ ಬಿಡುಗಡೆಯು ಜಾರ್ಖಂಡ್‌ನ ವೈವಿಧ್ಯಮಯ ಕಲಾ ಪ್ರಕಾರಗಳೊಂದಿಗೆ ಜಿಯೋಮಾರ್ಟ್ ಮಾರುಕಟ್ಟೆಯನ್ನು ಶ್ರೀಮಂತಗೊಳಿಸುವ ಬದ್ಧತೆಯ ಸಂಕೇತವಾಗಿದೆ. ಆ ಮೂಲಕ ಕುಶಲಕರ್ಮಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಾಪಾಡುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Artificial Colours Ban: ರಾಜ್ಯದಲ್ಲಿ ಚಿಕನ್‌, ಫಿಶ್‌ ಕಬಾಬ್‌ನಲ್ಲಿ ಕೃತಕ ಬಣ್ಣ ಬಳಕೆ ನಿಷೇಧ!

2022ರಲ್ಲಿ ಪ್ರಾರಂಭ ಆದಾಗಿನಿಂದ ಜಿಯೋಮಾರ್ಟ್ ದೇಶವ್ಯಾಪಿ 20 ಸಾವಿರ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಬಲ ತುಂಬಿದೆ. ಇಂಥ ಸರ್ಕಾರಿ ಸಂಸ್ಥೆಗಳ ಜತೆಗೆ ಸಹಭಾಗಿತ್ವ ವಹಿಸುವ ಮೂಲಕ ಡಿಜಿಟಲ್ ವಿಭಜನೆಯಿಂದ ಸೃಷ್ಟಿ ಆಗಿರುವ ಕಂದಕದ ಮಧ್ಯೆ ಸೇತುವೆ ನಿರ್ಮಿಸುವುದಕ್ಕೆ ಹಾಗೂ ಕುಶಲಕರ್ಮಿ ಸಮುದಾಯದ ಏಳ್ಗೆಗೆ ಸಹಕಾರಿ ಆಗುತ್ತದೆ. ಇನ್ನೂ ಮುಂದುವರಿದು ಕರಕುಶಲ ಮೇಳದಂಥ ಉಪಕ್ರಮಗಳು ಮತ್ತು ಇತರ ಕ್ರಮಗಳು ಸ್ಥಳೀಯ ಕಲೆಯನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಒತ್ತಿ ಹೇಳುತ್ತದೆ.

Continue Reading
Advertisement
Narendra Modi
ದೇಶ19 mins ago

Narendra Modi: ಸಂಸತ್ತಿನಲ್ಲಿ ಇಬ್ಬರು ‘ಪುಟಾಣಿ’ ಅತಿಥಿಗಳನ್ನು ಸ್ವಾಗತಿಸಿದ ಮೋದಿ; ಯಾರವರು? Video ನೋಡಿ

Weight Loss Tips
ಆರೋಗ್ಯ25 mins ago

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Nadaprabhu Kempegowda
ಬೆಂಗಳೂರು31 mins ago

Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

Nitin Gadkari
ದೇಶ1 hour ago

Nitin Gadkari: ಜಿಪಿಎಸ್‌ ತಂತ್ರಜ್ಞಾನದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಬಂಪರ್;‌ 10 ಸಾವಿರ ಕೋಟಿ ರೂ. ಆದಾಯ!

Paris Fashion Week
ಫ್ಯಾಷನ್1 hour ago

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

Anant Ambani
ದೇಶ1 hour ago

Anant Ambani Video: ಮಹಾರಾಷ್ಟ್ರ ಸಿಎಂ ಹೆಗಲ ಮೇಲೆ ಕೈ ಹಾಕಿದ ಅಂಬಾನಿ ಮಗ! ನೀವೇನಂತೀರಿ?

Viral Video
Latest2 hours ago

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Acharya Pramod Krishnam
ದೇಶ2 hours ago

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Viral Video
Latest2 hours ago

Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Rohit Sharma
ಕ್ರೀಡೆ2 hours ago

Rohit Sharma: ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​; ಲಂಕಾ ಆಟಗಾರನಿಗೆ ನಡುಕ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌