ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಕಿತ್ತಳೆ ಚಿಟ್ಟೆ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಕಿತ್ತಳೆ ಚಿಟ್ಟೆ

ಅವಳ ತುಟಿಗಳು ಅದುರುವುದನ್ನು ನಿಲ್ಲಿಸುವವರೆಗೆ ಅವಳನ್ನು ಮುಟ್ಟಬಾರದು ಎಂದು ನಿರ್ಧರಿಸಿದೆ. ಅವಳೂ ನನ್ನ ಬೆರಳುಗಳ ನಡುಕ ನಿಲ್ಲಿಸಲು ಪ್ರಯತ್ನಿಸುತ್ತಲೇ ಇದ್ದಳು. ಕಾಲ ನಮ್ಮನ್ನು ತಿಂದು ಮುಗಿಸುವವರೆಗೂ ಒಟ್ಟಾಗಿ ಕಾಯುವುದು ಬಿಟ್ಟರೆ ಬೇರಾವ ಮಾರ್ಗವೂ ನಮಗುಳಿದಿರಲಿಲ್ಲ.

VISTARANEWS.COM


on

kitthale chitte short story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
manju chelluru

:: ಮಂಜು ಚೆಳ್ಳೂರು

’ಕೆ’ – ಅವಳು ತನ್ನ ಇನ್‌ಸ್ಟಾಗ್ರಾಮ್ ಐಡಿಗೆ ಇಟ್ಟುಕೊಂಡಿದ್ದ ಹೆಸರು. ಅದರ ಪ್ರೊಫೈಲಿಗೆ ತನ್ನದೊಂದು ಫೋಟೋ ಕೂಡ ಇಟ್ಟಿರಲಿಲ್ಲ. ಕಪ್ಪು ಹಂಸವೊಂದರ ಚಿತ್ರ. ಕಣ್ಣುಗಳು ಮಾತ್ರ ಬಿಳಿಬಿಳಿ.

’ಸಜ್ಜೆಸ್ಟೆಡ್ ಫಾರ್‍ ಯು’ ಪಟ್ಟಿಯಲ್ಲಿ ಹತ್ತಾರು ಸಲ ಅವಳ ಪ್ರೊಫೈಲ್ ಬಂದಿದ್ದರೂ ಆಸಕ್ತಿ ವಹಿಸಿರಲಿಲ್ಲ. ಆಕಸ್ಮಾತ್ ಅವಳು ತನ್ನ ಫೋಟೋ ಇಟ್ಟಿದ್ದರೆ ಆಸಕ್ತಿ ವಹಿಸುತ್ತಿದ್ದೆ. ಕೊನೆಗೊಂದು ದಿನ ಅವಳೇ ಫಾಲೋ ಮಾಡಿದ್ದಳು. ಇದ್ಯಾವುದೋ ಫೇಕ್ ಐಡಿ ಎಂದುಕೊಂಡು ಪ್ರೊಫೈಲ್ ಚೆಕ್ ಮಾಡಿದೆ. ಒಂದಷ್ಟು ಫೋಟೋಗಳು ಗಮನ ಸೆಳೆದವು. ಸುತ್ತುವರೆದು ಹಾರಾಡುತ್ತಿರುವ, ವೈರುಗಳ ಜಾಲದಲ್ಲಿ ಸಿಕ್ಕಿಬಿದ್ದಂತೆ ಕಾಣುವ ಕಾಗೆ, ತಂತಿ ಬೇಲಿಯ ಮೇಲೆ ಕುಳಿತ ಗುಬ್ಬಿ, ಮೆಟ್ರೋ ಸ್ಟೇಶನ್‌ನ ಗಾಜಿನ ಕಿಟಕಿಗಳಲ್ಲಿ ಏನೋ ಚಿಂತೆಯಲ್ಲಿರುವಂತೆ ಕೂತ ಪಾರಿವಾಳ – ಎಲ್ಲವೂ ಕಪ್ಪು ಬಿಳಿಪು. ನನಗೂ ಕಪ್ಪು ಬಿಳುಪು ಫೋಟೋಗಳು ಇಷ್ಟ. ಹಾಗಾಗಿ ಅವಳ ಪ್ರೊಫೈಲ್ ಇಷ್ಟವಾಯಿತು.  ಅದ್ಯಾಕೋ ಅಲ್ಲಿದ್ದ ಫೋಟೋಗಳನ್ನು ನೋಡಿದಾಗ ಈ ಪ್ರೊಫೈಲ್‌ ಒಬ್ಬ ಹೆಣ್ಣಿನದೇ ಎನಿಸಿತ್ತು. ಫಾಲೋ ಮಾಡಿದೆ. ಆಗಾಗ ಅವಳು ಹಾಕುತ್ತಿದ್ದ ಫೋಟೋಗಳಿಗೆ ಲೈಕ್ ಮಾಡುತ್ತಿದ್ದೆ.

ಅದಾಗಿ ಎಷ್ಟೋ ದಿನಗಳ ಮೇಲೆ ನಾನೊಂದು ಫೋಟೋ ಪೋಸ್ಟ್ ಮಾಡಿದ್ದೆ. ವಿಜಯನಗರದ ಬಟ್ಟೆ ಅಂಗಡಿಯೊಂದರಲ್ಲಿ ನಿಲ್ಲಿಸಿದ್ದ ಕಣ್ಣು ಮೂಗು ಬಾಯಿಗಳಿಲ್ಲದ ಗೊಂಬೆಯ ಚಿತ್ರ. ಅದಕ್ಕೆ ಅವಳದೇ ಮೊದಲ ಲೈಕು. ಇನ್ ಬಾಕ್ಸಿಗೆ ಮೆಸೇಜೂ ಬಂತು – ನೀವು ಇವತ್ತು ಹಾಕಿದ ಫೋಟೋ ಇಷ್ಟ ಆಯ್ತು. ನಾನು ’ತ್ಯಾಂಕ್ಯೂ’ ಜೊತೆಗೆ ಖುಷಿಯ ಇಮೋಜಿ ಸೇರಿಸಿದ್ದೆ. ನಂಗೂ ನಿಮ್ಮ ಫೋಟೊಗಳು ತುಂಬ ಇಷ್ಟ. ಅದ್ಯಾಕೆ ಬರೀ ಬ್ಲಾಕ್ ಅಂಡ್ ಫೋಟೋಗಳನ್ನೇ ಪೋಸ್ಟ್ ಮಾಡ್ತೀರಿ – ಮಾತು ಮುಂದುವರಿಸುವ ಇರಾದೆಯಲ್ಲಿ ಕೇಳಿದ್ದೆ. ಯಾಕೆ ಗೊತ್ತಿಲ್ಲ. ಐ ಹ್ಯಾವ್ ದಿಸ್‌ ಸ್ಟ್ರೇಂಜ್ ಅಫಿನಿಟಿ ಟುವರ್ಡ್ಸ್ ಬ್ಲಾಕ್ ಅಂಡ್ ವೈಟ್ ಫೋಟೋಸ್ – ಎಂದಿದ್ದಳು. ಸೇಮ್‌ ಹೇರ್‍, ನಂಗೂ ಇಷ್ಟಾನೇ, ಆದ್ರೆ ಯಾಕೆ ಅಂತ ನಂಗೂ ಗೊತ್ತಿಲ್ಲ – ಕೈಚೆಲ್ಲುವ ಇಮೋಜಿ ಸೇರಿಸಿದ್ದೆ. ಹೀಗೆ ಶುರುವಾದ ಮಾತುಕತೆ ಅರ್ಧ ಗಂಟೆವರೆಗೆ ಮುಂದುವರಿಯಿತು.  ನಿಮ್ಮ ಆ ಫೋಟೋದ ಕಂಪೋಸಿಶನ್ ಚೆನ್ನಾಗಿದೆ, ಈ ಫೋಟೋದ ಕಲರ್‍ ಗ್ರೇಡಿಂಗ್ ಚೆನ್ನಾಗಿದೆ, ಇದನ್ನ ಮೆಜೆಸ್ಟಿಕ್ಕಿನ್ ಸ್ಕೈವಾಕ್ ಮೇಲೆ ನಿಂತು ತೆಗೆದಿದ್ದು, ಆ ಫೋಟೋ ತೆಗೆಯುವಾಗ ಜನರಿಂದ ಬೈಸಿಕೊಂಡಿದ್ದೆ, ಮೊಬೈಲ್‌ ಕ್ಯಾಮೆರಾಗೆ ಎಷ್ಟೇ ಲಿಮಿಟೇಶನ್ಸ್ ಇದ್ರೂ ತಕ್ಕಮಟ್ಟಿಗಿನ ಆರ್ಟಿಸ್ಟಿಕ್ ಇಮೇಜಸ್ ಕ್ರಿಯೇಟ್ ಮಾಡಬಹುದಲ್ವಾ? ಕ್ವಾಲಿಟಿ ನಮ್ಮ ಕೈಲಿಲ್ಲ, ಕಂಪೋಸಿಶನ್ ಅಷ್ಟೆ ನಮ್ ಕೈಲಿರೋದು, ನಾನು ಸ್ನಾಪ್‌ಸೀಡ್ ಬಳಸೋದು, ಓಹ್ ಇನ್ಮೇಲೆ ನಾನೂ ಬಳಸ್ತೀನಿ, ಬೇರೇನು ಹವ್ಯಾಸ? ಓಹ್ ನೀವೂ ಸಾಹಿತ್ಯಪ್ರೇಮಿನಾ, ಇಂಗ್ಲಿಷ್ ತುಂಬ ಓದ್ತೀರಾ? ನನಗ್ಯಾಕೋ ಅವರು ಅಷ್ಟು ಸೇರಲ್ಲ, ಆಕ್ಚುಲಿ ತುಂಬ ಸೆಲಬ್ರೇಟ್ ಆಗ್ತಿರೋರು ಇಷ್ಟ ಆಗಲ್ಲ, ಒಬ್ಬ ರೈಟರ್‍ ನನಗಷ್ಟೆ ಅರ್ಥ ಆಗಿದಾನೆ ಅನ್ನಿಸ್ಬೇಕು, ಅವಾಗ್ಲೇ ಅವರು ಹತ್ತಿರ ಆಗೋದು, ನಂದೊಂಥರ ವಿಚಿತ್ರ ಕಲ್ಪನೆ ಬಿಡಿ, ಹ್ಹಹ್ಹ – ಹೀಗೆ ಎಲ್ಲವೂ ಫೋಟೋಗ್ರಫಿಯ ಸುತ್ತ, ಸಿನಿಮಾ, ಸಾಹಿತ್ಯದ ಸುತ್ತ ನಡೆದ ಮಾತುಕತೆ. ಆ ಕಡೆ ಮಾತಾಡುತ್ತಿರುವ ಜೀವ ಹುಡುಗಿಯದೆ ಎಂದುಕೊಂಡಿದ್ದರಿಂದ ಅಷ್ಟೊತ್ತು ಮಾತಾಡಿದ್ದೆ.  ಕೊನೆಗೆ – ಸರಿ ಬ್ರೋ ಇಷ್ಟೆಲ್ಲಾ ಮಾತಾಡಿದ್ರಿ ನಿಮ್ ನಿಜವಾದ್‌ ಹೆಸರೇನು ಗೊತ್ತಾಗ್ಲಿಲ್ಲ?! – ಎಂದು ಟ್ರಿಕ್ ಪ್ಲೇ ಮಾಡಿದೆ. ಹುಡುಗಿಯಾಗಿದ್ದರೆ ಜೋರಾಗಿ ನಗುತ್ತಾಳೆ ಎಂದುಕೊಂಡಿದ್ದೆ. ಆದರೆ ಆ ಕಡೆಯಿಂದ ಐದು ನಿಮಿಷ ಯಾವುದೇ ಉತ್ತರ ಬರಲಿಲ್ಲ. ಮೆಸೇಜ್ ನೋಡಿದ್ದಳು ಕೂಡ. ಕಿರಿಕಿರಿ ಆಯಿತು. ಏನು ಮಾಡಬೇಕು ತೋಚದೆ ಮೊಬೈಲ್ ಪಕ್ಕಕ್ಕಿಟ್ಟೆ. ಮತ್ತೆ ಮತ್ತೆ ತೆಗೆದು ನೋಡಿದೆನಾದರೂ ಎಷ್ಟೊತ್ತಾದರೂ ಉತ್ತರ ಬರದಿದ್ದಾಗ ಲಾಕ್ ಮಾಡಿ ಮಲಗಿಕೊಂಡೆ.

ಬೆಳಗ್ಗೆ ಎದ್ದಾಗ ಇನ್ ಬ್ಯಾಕ್ಸಿನಲ್ಲಿ ಉದ್ದ ಮೆಸೇಜ್ –

’ನಂಗೊತ್ತು ನೀವು ನಾನು ಹುಡುಗಿ ಅಂದುಕೊಂಡೇ ಅಷ್ಟೊತ್ತು ಮಾತಾಡಿದ್ದು. ಇರಲಿ. ನನ್ನ ಹೆಸರು ಕವಿತಾ. ಇಪ್ಪತ್ತೇಳು ವಯಸ್ಸು. ರಾಯಚೂರು ಕಡೆಯ ಒಂದು ಊರು. ಒಂದು ಸಾಫ್ಟ್‌ವೇರ್‍ ಕಂಪನೀಲಿ ಉದ್ಯೋಗ. ಅದರ ಬಗ್ಗೆ ಅಂಥ ಆಸಕ್ತಿಯೇನಿಲ್ಲ. ಹುಟ್ಟಿದ ಊರಿನಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಇಂಜಿನಿಯರಿಂಗ್ ಮಾಡಿದ್ದು. ನೀವು ಎಲ್ಲ ಉತ್ತರಗಳನ್ನೂ ಪರೋಕ್ಷವಾಗಿ ಪಡೆಯುವ ತ್ರಾಸು ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಒಂದೇ ಸಲಕ್ಕೆ ಒದರಿಬಿಟ್ಟೆ. ನಿಮ್ಮ ಫೋಟೋಗಳ ಮೇಲಿರುವಷ್ಟು ಆಸಕ್ತಿ ನಿಮ್ಮ ಮೇಲೆ ಖಂಡಿತ ಇಲ್ಲ. ಆದರೂ ಇಂಥ ಫೋಟೋಗಳನ್ನು ತೆಗೆದ ಮನಸ್ಸಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ನಿಮಗೆ ತೊಂದರೆ ಇಲ್ಲದಿದ್ದರೆ ನನ್ನ ರೀತಿ ಒಂದೇ ಸಲಕ್ಕೆ ಎಲ್ಲವನ್ನೂ ಒದರಬಹುದು’

ಟಫ್‌ ಹುಡುಗಿ ಎನಿಸಿತು. ಅವಳ ಭಾಷೆ, ಅದರ ಸ್ಪಷ್ಟತೆ ಆಶ್ಚರ್ಯ ಹುಟ್ಟಿಸಿತು. ನಾನೂ ಉದ್ದವಾಗಿ ನನ್ನ ಪರಿಚಯ ಮಾಡಿಕೊಂಡೆ. ಹುಟ್ಟಿದ ಊರು ಧಾರವಾಡದ ಬಗ್ಗೆ, ಕಲಿತು ಕೆಲಸ ಮಾಡುತ್ತಿರುವ ಪತ್ರಿಕೋದ್ಯಮದ ಬಗ್ಗೆ ಹೇಳಿಕೊಂಡೆ. ಆದರೆ ನನಗಿಲ್ಲದ ಹವ್ಯಾಸಗಳನ್ನು ಆರೋಪಿಸಿಕೊಂಡಿದ್ದೆ, ಅವಳಿಗಿಂತ ಎರಡು ವರ್ಷ ಚಿಕ್ಕವನಿದ್ದಿದ್ದನ್ನು ಮುಚ್ಚಿಟ್ಟಿದ್ದೆ, ಫೋಟೋಗ್ರಫಿ, ಸಾಹಿತ್ಯದ ಕುರಿತು ಮಹಾ ಆಸಕ್ತಿ ಇದ್ದವನಂತೆ ಹೇಳಿಕೊಂಡಿದ್ದೆ. ಪ್ರತಿ ವಾಕ್ಯದಲ್ಲೂ ಇಂಪ್ರೆಸ್ ಮಾಡುವ ಇರಾದೆ ಮೇಲುಗೈ ಪಡೆದಿತ್ತು.

——

ಅದಾದಮೇಲೆ ಮಾತಿಗೆ ಮಾತಿನ ಬಳ್ಳಿ ಬೆಳೆಯುತ್ತ ಹೋಯಿತು. ಆಗಾಗ ಅದು ವಾರಗಟ್ಟಲೆ ತುಂಡಾಗಿಯೂ ಬಿಡುತ್ತಿತ್ತು. ಯಾಕೆಂದರೆ ಅವಳು ತನ್ನ ಬಯೋದಲ್ಲಿ ಬರೆದುಕೊಂಡಂತೆ ’ಹಂಡ್ರೆಡ್ ಸೀಸನ್ಸ್ ಪರ್‍ ಡೇ’ ಆಗಿದ್ದಳು. ಕೆಲವೊಮ್ಮೆ ತಾಸುಗಟ್ಟಲೆ ಮಾತು, ಕೆಲವೊಮ್ಮೆ ಎರಡೇ ಮಾತಿಗೆ ಕೊನೆ, ಇನ್ನು ಕೆಲವೊಮ್ಮೆ ಇನ್‌ಸ್ಟಾದಿಂದಲೆ ಕಾಣೆ. ಆಗೆಲ್ಲ ನನಗೆ ವಿಚಿತ್ರ ಚಡಪಡಿಕೆ. ಏನೂ ಮಾಡುವಂತಿರಲಿಲ್ಲ. ನಂಬರ್‍ ಕೇಳುವ ಧೈರ್ಯ ಮಾಡಿದ್ದೆ. ಸ್ಪಷ್ಟ ನಿರಾಕರಿಸಿದ್ದಳು. ’ನೀವು ನಂಬರ್‍ ಕೇಳಿದಿರಿ ಅಂತ ನಿಮ್ಮನೇನು ಜಡ್ಜ್‌ ಮಾಡುವುದಿಲ್ಲ. ಇಲ್ಲೇ ಚೆನ್ನಾಗಿದೆ. ವಾಟ್ಸಾಪ್ ನನಗೆ ಸೇರಿಬರುವುದಿಲ್ಲ’ ಎಂದು ಗಾಯಕ್ಕೆ ಮುಲಾಮು ಹಚ್ಚುವ ಪ್ರಯತ್ನ ಮಾಡಿದ್ದಳಾದರೂ ನನ್ನ ಮನಸು ಮುರುಟಿಹೋಗಿತ್ತು. ಅದಾಗಿ ಒಂದಷ್ಟು ದಿನ ಮಾತಾಡಿಸಲಿಕ್ಕೆ ಹೋಗಲಿಲ್ಲ. ಅವಳು ಮಾತಾಡಿಸಿದರೂ ಒನ್ ವರ್ಡ್ ಉತ್ತರ ಕೊಟ್ಟು ಸುಮ್ಮನಾಗುತ್ತಿದ್ದೆ. ನನ್ನ ತಂತ್ರ ಕೆಲಸ ಮಾಡಿತು. ಒಂದು ದಿನ ಇನ್‌ಬಾಕ್ಸಿಗೆ ಅವಳ ನಂಬರ್‍ ಬಂದು ಬಿತ್ತು. ನಾನದಕ್ಕೆ ತ್ಯಾಂಕ್ಸ್‌ ಹೇಳಿದಾಗ ಸುಮ್ಮನೆ ನಗುವ ಸ್ಮೈಲಿ ಹಾಕಿದ್ದಳು. ಆ ನಂಬರಿನ ವಾಟ್ಸಾಪಿನಲ್ಲೂ ಅದೇ ಕಪ್ಪುಹಂಸ, ಬಿಳಿಬಿಳಿ ಕಣ್ಣುಗಳು.  ಅವಳು ಹೇಗಿದ್ದಾಳೆ ಎಂದು ನೋಡುವ ನನ್ನ ಆಸೆಗೆ ಅಲ್ಲಿಯೂ ತಣ್ಣೀರು. ತನ್ನ ರೂಪದ ಬಗ್ಗೆ ಕೀಳರಿಮೆ ಇರಬಹುದು ಎಂದುಕೊಂಡೆ. ಆದರೂ ಮನಸೊಳಗೆ ಅವಳನ್ನು ನೋಡುವ ಬಯಕೆ. ಹಾಗಂತ ಬಾಯಿಬಿಟ್ಟು ಕೇಳುವಹಾಗಿಲ್ಲ. ’ಯಾಕೆ ನೀವು ನಿಮ್ಮ ಡೀಪಿಗೆ ನಿಮ್ಮ ಫೋಟೋ ಇಟ್ಟಿಲ್ಲ?’ ಎಂದು ಕೇಳಿದರೂ ನನ್ನ ಉದ್ದೇಶ ಅವಳಿಗೆ ಅರ್ಥವಾಗಿಬಿಡುತ್ತದೆ. ಕೆಲವೊಮ್ಮೆ ಅವಳ ಸೂಕ್ಷ್ಮತೆ ಬಗ್ಗೆ ಕಿರಿಕಿರಿ. ಆದರೆ ಅದರೊಟ್ಟಿಗೆ ಆ ಸೂಕ್ಷ್ಮತೆಯೇ ಅವಳ ಮೇಲಿನ ಕುತೂಹಲಕ್ಕೆ ಕಾರಣ ಎಂದು ಹೊಳೆಯುತ್ತಿತ್ತು. ಅದಲ್ಲದೆ ಅವಳೊಂದಿಗೆ ಮಾತಾಡುತ್ತ ಮಾತಾಡುತ್ತ ನನ್ನ ಭಾಷೆ ಸೂಕ್ಷ್ಮವಾಗುತ್ತಿರುವುದು ಗಮನಕ್ಕೆ ಬಂತು. ಮೊದಲಾದರೆ ಐನೂರು ಪದಗಳ ಸುದ್ದಿಯನ್ನು ಎಡಿಟ್ ಮಾಡಿ ಮುನ್ನೂರು ಪದಗಳಿಗೆ ಇಳಿಸಲು ಹೆಣಗಾಡುತ್ತಿದ್ದವನು ಈಗ ಇನ್ನೂರು ಪದಗಳಿಗೂ ಇಳಿಸಬಲ್ಲವನಾಗಿದ್ದೆ.

’ಭಾಷೆಯ ಮೇಲೆ ಇಷ್ಟೊಂದು ಹಿಡಿತ ಇದೆ. ಯಾಕೆ ನೀವು ಏನಾದರೂ ಬರೆಯಬಾರದು?’ – ಕೇಳಿದ್ದೆ.

’ಬರೆದು?’

’ಪಬ್ಲಿಷ್ ಮಾಡಬಹುದು’

’ಅದ್ರಿಂದ ಏನು ಪ್ರಯೋಜನ?’

’ನಾಲಕ್ ಜನ ಓದುತ್ತಾರೆ’

’ಓದಿ ಏನು ಪ್ರಯೋಜನ?’

ಮುಂದೆ ಮಾತನಾಡಿ ಪ್ರಯೋಜನ ಇಲ್ಲ ಎನಿಸಿ ಸುಮ್ಮನಾದೆ. ಸಿಟ್ಟೂ ಬಂದಿತ್ತು. ಎಷ್ಟೊತ್ತು ಏನೂ ಮಾತಿಲ್ಲ. ಅವಳೇ ಮೆಸೇಜ್ ಮಾಡಿದಳು –

’ನಿಮ್ಮ ಕಾಳಜಿ ಇಷ್ಟವಾಯಿತು. ನನಗೆ ಓದುವುದೇ ಸುಖ. ನೀವು ಏನಾದರೂ ಬರೆದಿದ್ರೆ ಕಳಿಸಿ’

’ಭಾನುವಾರ ಒಂದು ಕವಿಗೋಷ್ಠಿಯಿದೆ. ಬಂದರೆ ನನ್ನ ಕವಿತೆ ಕೇಳಬಹುದು’

’ಓದಲು ಕೇಳಿದೆ ನಾನು’

’ಕೇಳಿದರಷ್ಟೆ ನನ್ನ ಕವಿತೆ ಇಷ್ಟ ಆಗುವುದು’

’ಸರಿ’

ಅದಾದ ಮೇಲೆ ಮಾತು ನಿಂತು ಹೋಯಿತು. ಗರ್ವದ ಹುಡುಗಿ ತಾನೇ ಮಾತಾಡಿಸುವವರೆಗೂ ಮಾತಾಡಿಸಬಾರದು ಎಂದು ಪಣ ತೊಟ್ಟೆ.

—–

ಕವಿಗೋಷ್ಠಿಯ ದಿನ.  ನನ್ನ ಕವಿತೆಗೆ ಚಪ್ಪಾಳೆ ಸುರಿಮಳೆ. ಅದರಲ್ಲೂ ಜಾಸ್ತಿ ಹುಡುಗಿಯರು ಸೇರಿದ್ದ ಸಭಾಂಗಣ. ಹಿಗ್ಗಿ ಹೀರೇಕಾಯಿ ಆಗಿದ್ದೆ. ಮಾತಾಡಿಸಲು ಬಂದ ಹುಡುಗಿಯರು ಮತ್ತಷ್ಟು ಇಂಪ್ರೆಸ್ ಆಗುವಂತೆ ಮಾತಾಡುತ್ತ ಉತ್ಸಾಹದಿಂದ ನಂಬರ್‍ ಕೊಡುತ್ತ ಓಡಾಡುತ್ತಿದ್ದೆ. ನನ್ನ ಮೊಬೈಲ್ ವೈಬ್ರೇಟ್ ಮಾಡಿತು. ಅವಳ ಮೆಸೇಜು –

’ಕೇಳಿದೆ, ಸ್ವಲ್ಪವೂ ಇಷ್ಟವಾಗಲಿಲ್ಲ’

’ಹೇಯ್ ಬಂದಿದೀರಾ?! ವಾವ್!! ಎಲ್ಲಿದೀರ? ಪ್ಲೀಸ್ ಹಾಗೇ ಹೋಗ್ಬೇಡಿ. ಐ ಶುಡ್ ಮೀಟ್ ಯು’

’ಇಷ್ಟು ಎಕ್ಸೈಟ್ ಆಗುವಷ್ಟು ಚಂದ ಇಲ್ಲ ನಾನು. ಅಭಿಮಾನಿಗಳ ಗುಂಪು ಕರಗಿದ ಮೇಲೆ ಬನ್ನಿ. ಫೌಂಟನ್ ಹತ್ತಿರ’

ನಾನು ಕಳಿಸಿದ್ದ ಮೆಸೇಜ್ ನೋಡಿಕೊಂಡೆ. ನಾಚಿಕೆಯಾಯಿತು. ಎಲ್ಲರಿಗೂ ಬಾಯ್ ಹೇಳಿ ಅಲ್ಲಿಂದ ಕಾಲ್ಕಿತ್ತು ಫೌಂಟನ್ ಕಡೆಗೆ ಬಂದೆ. ಫೌಂಟನ್‌ನ ನೀರು ಸದ್ದು ಮಾಡುತ್ತ ಸುರಿಯುತ್ತಿತ್ತು.  ಅದರ ಗುಲಾಬಿ ಅಲ್ಲಲ್ಲಿ ಗುಂಪಾಗಿ ನಿಂತಿದ್ದ ಜನರಿಗೆಲ್ಲಾ ಅಷ್ಟಿಷ್ಟು ಮೆತ್ತಿಕೊಂಡಿತ್ತು. ಅವಳಿಗಾಗಿ ಸುತ್ತ ನೋಡಿದೆ. ಆ ಗುಲಾಬಿ ಪ್ರಭೆಯಾಚೆಗಿನ ಮೂಲೆಯಲ್ಲೊಂದರಲ್ಲಿ ಪುಟ್ಟ ಆಕೃತಿಯೊಂದು ಮಾಸ್ಕ್‌ ಹಾಕಿಕೊಂಡು ನಿಂತಿತ್ತು. ಅದರ ನೆರಳು ಉದ್ದ ಬೆಳೆದು ಜನರ ಕಾಲುಗಳಿಗೆ ಸಿಕ್ಕಿಕೊಂಡಿತ್ತು. ಅದು ಅವಳೇ ಎನಿಸಿತು. ಹತ್ತಿರಕ್ಕೆ ಬಂದೆ. ಅವಳ ಒಂದು ಕೈನ ಬೆರಳುಗಳು ಮೊಬೈಲ್‌ ಹಿಡಿದುಕೊಂಡು ಏನೋ ಸ್ಕ್ರಾಲ್ ಮಾಡುತ್ತಿದ್ದವು. ಇನ್ನೊಂದು ಕೈನವು ಹೆದರಿಕೊಂಡ ಮಗುವಿನ ಬೆರಳುಗಳಂತೆ ಮಡಚಿಕೊಂಡಿದ್ದವು.

’ಹಾಯ್’ ಎಂದದ್ದೆ ಬೆಚ್ಚಿದಳು. ಕಪ್ಪು ಹಂಸದ ಬಿಳಿಬಿಳಿ ಕಣ್ಣು ನೆನಪಾದವು.

’ಮಾಸ್ಕ್ ಯಾಕೆ ಹಾಕ್ಕೊಂಡಿದೀರ? ಕರೋನ ಮುಗ್ದೋಗಿದ್ಯಲ್ಲ?’

’ಇಲ್ಲಾ ಅದೂ ಅದೂ… ಧೂಳು… ಅಲರ್ಜಿ… ಆಗ್ಬರಲ್ಲ… ಸೋ…’

ಮಾಸ್ಕ್‌ ಬಿಚ್ಚಿ ಸಣ್ಣಗೆ ನಡುಗುವ ಕೈಗಳಲ್ಲಿ ಬ್ಯಾಗಿನೊಳಕ್ಕಿಟ್ಟುಕೊಂಡಳು. ಸಣ್ಣ ಮೂಗು, ಸಣ್ಣ ಬಾಯಿ, ತುಸು ದಟ್ಟ ಹುಬ್ಬುಗಳು. ಬಾದಾಮಿ ಕಣ್ಣುಗಳು. ಕೂದಲು ಹಿಂದಕ್ಕೆ ಕಟ್ಟಿದ್ದಳು.

’ಕವಿತೆ ನಿಜಕ್ಕೂ ಇಷ್ಟ ಆಗ್ಲಿಲ್ವಾ?’

’ಹ್ಞಾ ಆಯ್ತು. ಆದ್ರೆ ಅಷ್ಟೊಂದಲ್ಲ. ಬಟ್ ಚೆನ್ನಾಗಿದೆ. ನಾನ್ ಸುಮ್ನೆ… ತಮಾಷೆಗ್ ಹೇಳ್ತಾರಲ್ಲ… ಹಾಗ್ ಹೇಳ್ದೆ ಅಷ್ಟೆ.’

ಮೆಸೇಜುಗಳಲ್ಲಿ ಅಷ್ಟು ಕಾನ್ಫಿಡೆಂಟಾಗಿ ಸ್ಪಷ್ಟವಾಗಿ ಮಾತಾಡುತ್ತಾಳೆ. ಆದರೆ ಎದುರಿಗಿದ್ದಾಗ ಯಾಕಿಷ್ಟು ಒಂದು ರೀತಿ ಗೊಂದಲಕ್ಕೆ ಬಿದ್ದವಳ ಹಾಗೆ ಮಾತಾಡುತ್ತಾಳೆ ಎಂದು ಆಶ್ಚರ್ಯವಾಯಿತು. ಪದಗಳನ್ನು ನುಂಗುವುದು, ಒಂದು ವಾಕ್ಯ ಮುಗಿಯುವ ಮುನ್ನವೇ ಇನ್ನೊಂದು ಶುರು ಮಾಡುವುದು, ಕೇಳದ ಪ್ರಶ್ನೆಗೂ ಉತ್ತರ ನೀಡುವುದು – ಪಾಪದ ಹುಡುಗಿ ಎನಿಸಿತು.

’ಬನ್ನಿ ಕಾಫಿಗ್ ಹೋಗಣ. ಇಲ್ಲೊಂದ್ ಒಳ್ಳೆ ಕಾಫಿ ಶಾಪ್ ಇದೆ’

ಕ್ಷಣ ತಬ್ಬಿಬ್ಬಾದಳು.

’ನಿಮಗೆ ಇಷ್ಟ ಇಲ್ಲ ಅಂದ್ರೆ ಬೇಡ’

’ಹೇಯ್ ಹಾಗೇನಿಲ್ಲಾ. ಬನ್ನಿ ಬನ್ನಿ ಹೋಗಣ’

ಇನ್‌ಸ್ಟಾದಲ್ಲಿ ಮಾತನಾಡಿದಷ್ಟು ರಫ್‌ ಅಲ್ಲದ ಹುಡುಗಿ. ಪ್ರತಿ ಹೆಜ್ಜೆಯನ್ನೂ ಅಳೆದು ತೂಗಿ ನೆಲಕ್ಕೆ ನೋವಾಗಿಬಿಡುತ್ತದೇನೋ ಎನ್ನುವಂತೆ ಇಡುತ್ತಿದ್ದಳು. ಕಾಫಿಶಾಪಿನಲ್ಲೂ ಅಷ್ಟೆ- ಅವಳು ಎಳೆದ ಚೇರು ಚೂರೂ ಸದ್ದಾಗಲಿಲ್ಲ, ಕುಡಿದು ಇಟ್ಟ ಕಾಫಿ ಕಪ್‌ ದನಿ ಮಾಡಲಿಲ್ಲ. ಮಾತುಗಳಾದರೂ ಕಿವಿಗೊಟ್ಟೇ ಕೇಳಬೇಕು – ಇಲ್ಲದಿದ್ದರೆ ಅವಳ ತುಟಿಗಳು ಒಂದಕ್ಕೊಂದು ಬಡಿಯುವುದಷ್ಟೆ ನಿಜ. ಅವಳ ಸದಾಗಾಬರಿ ಕಣ್ಣುಗಳೋ ನನ್ನ ಬಿಟ್ಟು ಬೇರೆಲ್ಲ ನೋಡುತ್ತಿದ್ದವು. ಜಾಸ್ತಿ ಮಾತಾಗಲಿಲ್ಲ. ಅಲ್ಲಿಂದ ಬೀಳ್ಕೊಡುವಾಗ ’ಮೀಟ್ ಆಗಿದ್ದು ಖುಷಿ ಆಯ್ತು’ ಎಂದು ಕೈ ಕೊಟ್ಟೆ. ಅವಳು ಮತ್ತೆ ತಬ್ಬಿಬ್ಬಾದಳು. ’ಸಾರಿ ಸಾರಿ’ ಎಂದು ನಾನು ಬೆಚ್ಚಿದ ಪರಿಗೆ, ’ಹೇಯ್ ಪರವಾಗಿಲ್ಲ’ ಎಂದು ಧೈರ್ಯ ತಂದುಕೊಂಡು ಕೈ ಚಾಚಿದಳು.  ಅವಳ ಅಂಗೈ ಇನ್ನೂ ಬೆವರುತ್ತಿತ್ತು. ಸೋಜಿಗವೆಂದರೆ ಅದ್ಯಾಕೋ ಒಂದೆರಡು ಸೆಕೆಂಡ್ ಜಾಸ್ತಿಯೇ ನನ್ನ ಕೈ ಹಿಡಿದುಕೊಂಡಳು!

ರೂಮಿಗೆ ಬಂದು ಮಲಗುವಾಗ ಬಂದ ಅವಳ ಮೆಸೇಜು ನೋಡಿ ಅತ್ಯಾಶ್ಚರ್ಯ.

’ನಿಮ್ಮ ಕವಿತೆಯಷ್ಟು ಕಪಟ ಇಲ್ಲ ನಿಮ್ಮ ಕೈಗಳು. ನಿಮ್ಮನ್ನ ನಂಬಬಹುದು’

’ವಾಟ್‌?!’

’ಏನಿಲ್ಲಾ ಬಿಡಿ’

’ಕೆಲವೊಂದ್ಸಲ ನಿಮ್ ಮಾತೇ ಅರ್ಥ ಆಗಲ್ಲ’

’ಹ್ಮ. ನಿಜಾ. ಎನಿವೇ. ನೀವ್ ಸಿಕ್ಕಿದ್ದು ತುಂಬಾನೇ ಖುಷಿ. ಗುಡ್ ನೈಟ್‌. ಸ್ವೀಟ್ ಡ್ರೀಮ್ಸ್‌’

ನಿಜಕ್ಕೂ ಏನೂ ಅರ್ಥ ಆಗಲಿಲ್ಲ.

—-

ಅದೊಂದು ಹ್ಯಾಂಡ್‌ಶೇ‌ಕ್  ಮೋಡಿ ಮಾಡಿಬಿಟ್ಟಿತ್ತು. ಆಮೇಲಿನ ಮಾತುಗಳು ಯಾವತ್ತೂ ತುಂಡಾಗಲಿಲ್ಲ. ರಾತ್ರಿ ಶಿಫ್ಟ್ ಮುಗಿಸಿಕೊಂಡು ಬರುವಷ್ಟೊತ್ತಿಗೆ ಅವಳ ಐದಾರು ಮೆಸೇಜು ಕಾದಿರುತ್ತಿದ್ದವು.  ನಾನಾದರೂ ಅವಳೊಂದಿಗೆ ಹಂಚಿಕೊಳ್ಳಲು ದಿನಕ್ಕೊಂದಾದರೂ ಸ್ವಾರಸ್ಯ ಹುಡುಕಿಟ್ಟುಕೊಂಡಿರುತ್ತಿದೆ. ದಿನಗಳು ಉರುಳಿದ್ದು ಗೊತ್ತಾಗಲಿಲ್ಲ, ಅವಳು ನನಗೆ ಮೊದಲ ಬಾರಿ ’ಕಣೋ’ ಎಂದದ್ದು ನಾನು ಅವಳಿಗೆ ’ಕಣೇ’ ಎಂದದ್ದು ಯಾವಾಗ ಅಂತಲೂ ಅರಿವಿಗೆ ಬರಲಿಲ್ಲ. ವಿಚಿತ್ರವೆಂದರೆ ನನ್ನ ಭಾಷೆ ಸ್ಪಷ್ಟವಾಗುತ್ತ ಸಂಕ್ಷಿಪ್ತವಾಗುತ್ತ ಸಾಗಿದಂತೆ ಅವಳ ಭಾಷೆ ಅವಳ ಮಾತಿನ ಭಾಷೆಯಂತೆ ಛಿದ್ರಛಿದ್ರವೂ ಉದ್ದವೂ ಆಗತೊಡಗಿತು. ಮೊದಲಾದರೆ ಒಂದೇ ಮೆಸೇಜಿನಲ್ಲಿ ಎಲ್ಲವನ್ನೂ ಆದಷ್ಟು ಕಮ್ಮಿ ವಾಕ್ಯಗಳಲ್ಲಿ ಹೇಳುತ್ತಿದ್ದಳು.

ಎರಡನೆ ಭೇಟಿಗೆ ತ್ರಾಸು ಪಡಬೇಕಾಗಲಿಲ್ಲ. ’ಈ ಭಾನುವಾರ ಏನು ಪ್ಲಾನ್?’ ಎಂದು ಕೇಳಿದ್ದೇ – ’ಸಿಗಣ ಬಿಡು. ನೀನ್ ಪೀಠಿಕೆ ಹಾಕೋ ಅವಶ್ಯಕತೆ ಇಲ್ಲ’ ಎಂದು ನಕ್ಕಿದ್ದಳು. ಅವಳಿಷ್ಟದಂತೆ ಅವಳ ನೆಚ್ಚಿನ ಹಳೆಯ ಬ್ಲಾಸಮ್ ಬುಕ್ ಹೌಸಿನ ಪೋಯೆಟ್ರಿ ಸೆಕ್ಷನ್‌ನ ಮೂಲೆಯಲ್ಲಿ ಸಿಗುವುದೆಂತಾಯಿತು.. ನಾನು ಹೋಗುವುದಕ್ಕೆ ಮುಂಚೆಯೇ ಅಲ್ಲಿದ್ದಳು. ಅದು ತನ್ನ ಮನೆಯೇನೋ ಎನ್ನುವಂತೆ ಒಂದು ಚೇರ್‍ ಹಾಕಿಕೊಂಡು ಯಾವುದೋ ಕವಿತೆ ಪುಸ್ತಕ ಹಿಡಿದು ಆರಾಮಾಗಿ ಓದುತ್ತಿದ್ದಳು. ಅವತ್ತಿನ ಅವಳ ನಡವಳಿಕೆ ಕವಿಗೋಷ್ಠಿಯ ದಿನ ಸಿಕ್ಕ ಸದಾಗಾಬರಿ ಹುಡುಗಿ ಇವಳೇನಾ ಎನ್ನುವಂತಿತ್ತು. ಇಡೀ ಬುಕ್ ಸ್ಟಾಲ್ ತನ್ನ ಊರೇನೋ ಎನ್ನುವಂತೆ ಪರಿಚಯಿಸಿದಳು. ಅಲ್ಲಿರುವ ಎಲ್ಲರಿಗೂ ಹೆಸರಿಟ್ಟು ಮಾತನಾಡಿಸಿದಳು, ಉಭಯಕುಶಲೋಪರಿ ವಿಚಾರಿಸಿದಳು. ನನ್ನ ಅಲ್ಲಿಂದ ಬೀಳ್ಕೊಡುವ ಮುನ್ನ ನಾನು ಕೊಟ್ಟ ಕೈಯನ್ನು ನಿಮಿಷ ಹೊತ್ತು ಹಾಗೇ ಹಿಡಿದುಕೊಂಡಿದ್ದಳು.

ಮನೆಗೆ ಬರುವವರೆಗೂ ನನ್ನ ಕೈ ನೋಡಿಕೊಂಡೆ. ಏನು ವಿಶೇಷವಿದೆ ಅದರಲ್ಲಿ ಎನ್ನುವುದೇ ಅರ್ಥವಾಗಲಿಲ್ಲ. ಅದು ಅರ್ಥವಾಗುವುದಕ್ಕೆ ನಾನು ಅವಳಿಗೆ ನನ್ನ ಪ್ರೀತಿ ನಿವೇದನೆ ಮಾಡಿಕೊಳ್ಳಬೇಕಾಯಿತು. ನಿವೇದನೆಯೂ ನಾನು ಕಲ್ಪಿಸಿಕೊಂಡಿದ್ದಷ್ಟು ಕಷ್ಟವಾಗಲಿಲ್ಲ.

ಅಷ್ಟೊತ್ತಿಗೆ ಕಾಲ್ ಮಾಡಿ ಮಾತಾಡುವಷ್ಟು ಹತ್ತಿರವಾಗಿದ್ದೆವು. ಮಾತು ಶುರುವಾದರೆ ಇಡೀ ಜಗತ್ತು ಸುತ್ತಿ ಬರುತ್ತಿತ್ತು.  ಅವತ್ತೊಂದು ರಾತ್ರಿ ಹೀಗೇ ಮೂರು ಗಂಟೆಯವರೆಗೆ ಮಾತಿನಲ್ಲಿ ಮುಳುಗಿದ್ದೆವು. ಬಾಯ್ ಹೇಳಿ ಕಾಲ್ ಕಟ್ ಮಾಡುವ ಹೊತ್ತಿಗೆ ನನಗೇನನ್ನಿಸಿತೋ ’ನಾನ್ ಏನೋ ಹೇಳಬೇಕು’ ಎಂದವನು ಒಳಗಿದ್ದದ್ದನ್ನೆಲ್ಲಾ ಒಂದೇ ಉಸಿರಿಗೆ ಹೇಳಿಬಿಟ್ಟೆ. ಏನೂ ಹೇಳದೆ ಕಾಲ್ ಕಟ್ ಮಾಡಿದಳು. ಕಂಗಾಲಾಗಿ ಮತ್ತೆ ಮತ್ತೆ ಕಾಲ್ ಮಾಡಿದೆ. ರಿಸೀವ್ ಮಾಡಲಿಲ್ಲ. ಸಾರಿ ಕೇಳಿದ ಮೆಸೇಜುಗಳಿಗೂ ಉತ್ತರ ಇಲ್ಲ. ಇಡೀ ರಾತ್ರಿ ನಿದ್ದೆಯಿಲ್ಲದೆ ಅವಳ ಮೆಸೇಜು ಬರಬಹುದೆಂದು ಕಾಯುತ್ತಿದ್ದೆ. ಬೆಳಗಿನ ಜಾವಕ್ಕೆ ನಿದ್ದೆ ಹತ್ತಬೇಕು ಮೊಬೈಲ್ ಸದ್ದು ಮಾಡಿತು. ಅವಳ ಮೆಸೇಜು –

’ನೀನು ಸಿಕ್ಕ ದಿನ ನನಗೊಂದು ಕನಸು ಬಿತ್ತು. ಹಾಗೆ ನೋಡಿದರೆ ನಾನು ಎಷ್ಟೋ ವರ್ಷಗಳಿಂದ ಕಾಣುತ್ತ ಬಂದಿರುವ ಕನಸದು. ಆದರೆ ಅವತ್ತಿನ ಕನಸಿನ ಕೊನೆಯಲ್ಲಿ ನೀನಿದ್ದೆ’

’ಏನ್ ಹೇಳ್ತಿದೀಯ?!’

’ಕಿತ್ತಳೆಬನವೊಂದರಲ್ಲಿ ನಾನೊಂದು ಕಿತ್ತಳೆಯಾಗಿ ಹುಟ್ಟಿದ್ದೆ. ಅಂದು ಸುರಿದ ಮಳೆಗೆ ಅಲ್ಲಲ್ಲಿ ನೀರಿನ ಗುಂಡಿಗಳು ಏರ್ಪಟ್ಟಿದ್ದವು. ಅವುಗಳಲ್ಲಿ ನನ್ನ ಪ್ರತಿಬಿಂಬ ಕಣ್ಣು ಕುಕ್ಕುವಷ್ಟು ಮೋಹಕವಾಗಿತ್ತು. ಸಂತೋಷದಲ್ಲಿ ನಗುತ್ತಿದ್ದೆ. ಆಗ ಒಂದು ಬಿರುಸು ಕೈ ನನ್ನಿಡೀ ಮೈಗೆ ಕೈ ಹಾಕಿತು. ಗಿಡದಿಂದ ಕಿತ್ತು ತನ್ನ ವಶಕ್ಕೆ ತೆಗೆದುಕೊಂಡಿತು. ನನ್ನ ಚರ್ಮ ಚರಪರ ಸುಲಿದು ಬಲವಾಗಿ ಹಿಚುಕುತ್ತಾ ರಸ ಕುಡಿಯತೊಡಗಿತು. ಎಷ್ಟು ಕಿರುಚಿದರೂ ಕೇಳುತ್ತಿಲ್ಲ. ನೋವಿನರಿವಾಗುವಷ್ಟರಲ್ಲಿ ಸಿಪ್ಪೆ ಸಿಪ್ಪೆಯಾಗಿ ತಿಪ್ಪೆಯೊಂದರಲ್ಲಿ ಬಿದ್ದಿದ್ದೆ. ಆ ವಾಸನೆಯ ನರಕದಲ್ಲಿ ನನ್ನಂಥ ಎ‌ಷ್ಟೋ ಸಿಪ್ಪೆಗಳು. ಆ ಸಿಪ್ಪೆಗಳೂ ಅರಚುತ್ತಿವೆ. ದಾರಿಹೋಕರು ನಮ್ಮ ತಿಪ್ಪೆ ಹಾದು ಹೋಗುತ್ತಿದ್ದಾರೆ. ಯಾರಿಗೂ ನಮ್ಮ ದನಿ ಕೇಳಿಸುತ್ತಿಲ್ಲ. ಅಷ್ಟೊತ್ತಿಗೆ ನೀನು ಎಲ್ಲಿಗೋ ಹೊರಟಿದ್ದವನು ಅಚಾನಕ್ಕು ನನ್ನತ್ತ ಗಮನ ಹರಿಸಿದೆ. ನನ್ನೇ ನೋಡುತ್ತ ನಿಂತೆ. ನಿನಗೆ ನನ್ನ ನೋವು ಹೇಳಿಕೊಳ್ಳಲು ಎಷ್ಟು ಪ್ರಯತ್ನಪಟ್ಟೆ. ನಿನಗೇನೂ ಕೇಳಿಸುತ್ತಿಲ್ಲ. ಆದರೆ ನಿನ್ನ ನುಣುಪಾದ ಕೈಗಳಿಂದ ನನ್ನ ಎತ್ತಿಕೊಂಡೆ. ಎಷ್ಟು ಹಿತವಾಯಿತು ಗೊತ್ತೆ?! ಅಷ್ಟಕ್ಕೆ ಬಿಡಲಿಲ್ಲ ನೀನು. ನನ್ನ ಒಂದೊಂದೇ ಸಿಪ್ಪೆಗಳನ್ನು ಜೋಡಿಸಿ ವಾಪಸ್ಸು ಹಣ್ಣಿನ ರೂಪ ಕೊಡಲು ಪ್ರಯತ್ನಿಸತೊಡಗಿದೆ. ನಾನು ಇನ್ನೇನು ಹಣ್ಣಾಗುತ್ತೇನೆ ಎನ್ನುವಷ್ಟೊತ್ತಿಗೆ ಕನಸು ಮುಗಿದುಹೋಯಿತು. ಕನಸಿನಿಂದೆದ್ದಾಗ ನಾನು ನಿಜಕ್ಕೂ ಹಣ್ಣಾಗಿದ್ದೆ, ಹಣ್ಣಲ್ಲ ಚಿಟ್ಟೆಯಾಗಿದ್ದೆ, ಕಿತ್ತಳೆ ಚಿಟ್ಟೆಯಾಗಿದ್ದೆ!’

ಏನು ಉತ್ತರಿಸಬೇಕು ತೋಚಲಿಲ್ಲ. ಅವಳೇ ಮಾತು ಮುಂದುವರಿಸಿದಳು –

’ನಾನು ರಿಯಾಲಿಟಿಗಿಂತ ಕನಸುಗಳನ್ನೇ ನಂಬುತ್ತೇನೆ. ನಿನಗೆ ಜೊತೆಯಾಗುವುದಾದರೆ ಈ ಕನಸನ್ನು ನಂಬಿಯೇ ಜೊತೆಯಾಗುತ್ತೇನೆ. ಓಕೇನಾ?’

’ಓಕೆ’ ಎಂದು ತೋಳು ಚಾಚುವ ಸ್ಮೈಲಿ ಸೇರಿಸಿದೆ.

ಅವಳ ಕನಸಿಗೆ ನಾನು ಕಾಲಿಟ್ಟು ಅವಳು ಚಿಟ್ಟೆಯಾದಳು. ಆದರೆ ಚಿಟ್ಟೆಯ ಜೀವ ಎಷ್ಟು ಸೂಕ್ಷ್ಮ ಎನ್ನುವುದು ಅಂದೇ ಹೊಳೆಯಬೇಕಿತ್ತು ನನಗೆ.

—-

ಆಮೇಲಿನ ಒಂದಷ್ಟು ದಿನಗಳು ನಿಜಕ್ಕೂ ಉಲ್ಲಾಸದಾಯಕವಾಗಿದ್ದವು. ನನ್ನ ಕೈಗಳ ಮೇಲೆ ಹುಚ್ಚು ಮೋಹ ಅವಳದು. ಯಾವಾಗಲೂ ಕೈಹಿಡಿದು ನಡೆಯಬೇಕು, ಮೊದಲ ತುತ್ತನ್ನು ತನಗೆ ತಿನ್ನಿಸಿಯೇ ತಿನ್ನಬೇಕು, ತುಟಿಯಂಚಿಗೆ ಅಂಟಿದ ಅಗುಳಾಗಲಿ ರೆಪ್ಪೆಯಾಚೆಗೆ ಸರಿದ ಕಪ್ಪನ್ನಾಗಲಿ ನನ್ನ ಬೆರಳುಗಳೇ ಒರೆಸಬೇಕು, ಮೆಟ್ರೋದಲ್ಲಿ ನಿಂತಾಗ ಅವಳ ಆಧಾರಕ್ಕೆಂದು ನನ್ನ ಕೈಯೊಂದು ಮೀಸಲಾಗಿರಬೇಕು – ನನ್ನ ಕೈಗಳ ಸ್ಪರ್ಶ ಸಿಕ್ಕುವ ಯಾವ ಅವಕಾಶವನ್ನೂ ಅವಳು ತಪ್ಪಿಸಿಕೊಳ್ಳುತ್ತಿರಲಿಲ್ಲ. ಊಟವಾದ ಮೇಲಂತೂ ನನ್ನ ಕೈಯ ಒಂದೊಂದೆ ಬೆರಳು ತಿಕ್ಕಿ ತೊಳೆಯುವುದನ್ನು ಎಷ್ಟು ಸಂಭ್ರಮಿಸುತ್ತಿದ್ದಳು!

ಅಂದು ಇಬ್ಬರೂ ಲಾಲ್ ಬಾಗಿನ ನಿರ್ಜನ ಮೂಲೆಯೊಂದರ ಬೆಂಚಿನ ಮೇಲೆ ಕೂತಿದ್ದೆವು. ನನ್ನ ಕೈಹಿಡಿದು ಅದರೊಂದಿಗೆ ಆಟವಾಡುತ್ತಿದ್ದಳು. ನಾನು ಇನ್ನೊಂದು ಕೈಯಲ್ಲಿ ಮೊಬೈಲ್‌ ಹಿಡಿದು ’ಹವ್ ಟು ಆಸ್ಕ್‌ ಫಾರ್‍ ಫಸ್ಟ್ ಕಿಸ್’ ಎಂಬ ಸರ್ಚಿಗೆ ಬಂದ ಲೇಖನಗಳನ್ನು ನೋಡುತ್ತಿದ್ದೆ. ಅವಳು ನನ್ನ ಬೆರಳುಗಳ ನಟಿಕೆ ತೆಗೆಯುತ್ತಿದ್ದವಳು ಇದ್ದಕ್ಕಿದ್ದಹಾಗೆ ವೇಗ ಜಾಸ್ತಿ ಮಾಡಿದಳು. ಜೋರಾಗಿ ಹಿಚುಕತೊಡಗಿದಳು. ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂದು ನೋಡುವಷ್ಟರಲ್ಲಿ ಅವಳು ಅಲ್ಲಿಂದೆದ್ದು ಅಲ್ಲೇ ಬಿದ್ದಿದ್ದ ಕಲ್ಲೊಂದನ್ನು ಕೈಗೆತ್ತಿಕೊಂಡು ಒಂದು ಕಡೆಗೆ ಜೋರಾಗಿ ಬೀಸಿದಳು. ಅಲ್ಲಿ ನಿಂತಿದ್ದ ಮದ್ಯವಯಸ್ಕನೊಬ್ಬನ ತೋಳಿಗೆ ಬಿತ್ತು. ಅವನು ತನ್ನ ಪ್ಯಾಂಟ್‌ ಜಿಪ್ ಏರಿಸಿಕೊಳ್ಳುತ್ತ ಓಡಿದ. ’ಏಯ್ ನಿಲ್ಲೋ ನಾಯಿ’ ಎಂದು ಕೂಗಿದಳು. ಅವಳ ಕೂಗು ಕೇಳಿ ಪ್ರಣಯದಲ್ಲಿದ್ದ ಪ್ರೇಮಿಗಳು ಓಡಿಬಂದರು. ನನಗೀಗ ಅರ್ಥವಾಯಿತು – ಆ ಮದ್ಯವಯಸ್ಕ ಅವರನ್ನು ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ.

ಇವಳ ಕಣ್ಣು ಕೆಂಪಾಗಿದ್ದವು. ಮೈ ಕಂಪಿಸುತ್ತಿತ್ತು. ’ಹೇಯ್ ಸಮಾಧಾನ’ ಎಂದು ಮುಟ್ಟಲು ಹೋದರೆ ಹಿಂದೆ ಸರಿದಳು. ನೀರಿನ ಬಾಟಲ್ ಕೈಗಿಟ್ಟೆ. ಗಟಗಟ ಇಡೀ ಬಾಟಲ್ ನೀರು ಖಾಲಿ ಮಾಡಿದಳು.  ನಾನು ಏನೂ ಮಾತಾಡಿಸಲಿಲ್ಲ. ಸುಮಾರು ಹೊತ್ತು ಬುಸುಗುಡುತ್ತ ಕೂತಿದ್ದಳು. ಕತ್ತಲಾಗತೊಡಗಿತು. ಅಲ್ಲಿಂದ ಅವಳನ್ನು ಕರೆದುಕೊಂಡು ಅವಳ ಪೀಜಿಗೆ ಬಿಟ್ಟೆ. ಆ ಕಣ್ಣುಗಳ ಕೆಂಪು ಅಷ್ಟೊತ್ತಾದರೂ ಆರಿರಲಿಲ್ಲ. ಪ್ರತಿ ಸಲ ಹೇಳುವ ಹಾಗೆ ’ಹುಷಾರಾಗ್ ಹೋಗು’ ಎಂದು ಹೇಳಲಿಲ್ಲ. ಪದೇ ಪದೆ ಕಾಲ್ ಮಾಡಿ ”ರೀಚ್ ಆದ್ಯಾ?’’ ಅಂತಲೂ ವಿಚಾರಿಸಲಿಲ್ಲ. ಮನೆಗೆ ಬಂದ ಮೇಲೆ ಮೆಸೇಜ್ ಹಾಕಿ ತಿಳಿಸಿದೆ. ಅದಕ್ಕವಳ ಮೆಸೇಜು ’ಹ್ಮ’ ಅಂತಷ್ಟೆ ಇತ್ತು. ತಾನಾಗೇ ಸಮಾಧಾನ ಆಗುತ್ತಾಳೆ, ಸಮಾಧಾನ ಮಾಡಲು ಹೋದಷ್ಟು ಕಿರಿಕಿರಿ ಮಾಡಿಕೊಳ್ಳುತ್ತಾಳೆ ಎಂದುಕೊಂಡು ’ಗುಡ್ ನೈಟ್’ ಹೇಳಿ ಮಲಗಿದೆ.

ಮರುದಿನ ಬೆಳಗ್ಗೆ ಅವಳ ಮೆಸೇಜು.

’ಸಾರಿ. ನನ್ನಿಂದ ನೀನೂ ಡಿಸ್ಟರ್ಬ್ ಆಗ್ಬಿಟ್ಟೆ. ನೀನು ನನ್ನ ಲಾಲ್‌ಬಾಗಿಗೆ ಕರೆಸಿದ್ದ ಉದ್ದೇಶ ನನಗೆ ಗೊತ್ತಿತ್ತು. ನೀನು ಕೊಡುತ್ತೀಯ ಅಂತ ಕಾಯುತ್ತಿದ್ದೆ. ಅಷ್ಟೊತ್ತಿಗೆ ಆ ನಾಯಿ ಬಂದು ಎಲ್ಲ ಹಾಳುಮಾಡಿತು’

’ಇಟ್ಸ್ ಓಕೆ. ನಿನಗೆ ಮನಸಾಗುವವರೆಗೂ ನಾನೇನೂ ಮಾಡುವುದಿಲ್ಲ’

’ನೀನು ಮಾಡುವುದಲ್ಲ ಅದು. ಇಬ್ಬರೂ ಸೇರಿ ಮಾಡುವುದು. ನಿನಗೆ ಮನಸಿದ್ದರೆ ನಾಳೆ ನಿನ್ನ ರೂಮಿಗೆ ಬರುತ್ತೇನೆ’

’ಆರ್‍ ಯು ಸ್ಯೂರ್‍?!’

’ಸ್ಯೂರ್‍ ಮೈ ಡಿಯರ್‍ ಸಾಫ್ಟ್ ಹ್ಯಾಂಡ್ಸ್‌’

ಮೈಯೆಲ್ಲಾ ಕಂಪನವಾಗತೊಡಗಿತು.

—-

ಅದು ಮೊದಲ ಬಾರಿ – ಅವಳು ತನ್ನ ಕಾಣುವಿಕೆ ಬಗ್ಗೆ ಅಷ್ಟು ಆಸಕ್ತಿ ವಹಿಸಿದ್ದು. ಕೂದಲು ಕಟ್ಟದೆ ಹಾಗೇ ಬಿಟ್ಟಿದ್ದಳು. ಹುಬ್ಬು ತೀಡಿಸಿಕೊಂಡಿದ್ದಳು, ಕಣ್ಣಿಗೆ ಕಾಡಿಗೆ ಸವರಿದ್ದಳು. ನನಗಿಷ್ಟವೆಂದು ತಿಳಿ ನೀಲಿ ಬಣ್ಣದ ಕುರ್ತಿ ಧರಿಸಿದ್ದಳು. ಮೊದಲೆಲ್ಲ ಅವಳ ಮೈಯಿಂದ ಬೇಬಿ ಸೋಪಿನ ವಾಸನೆ. ಆದರಿಂದು ಪರ್ಫ್ಯೂಮಿನ ಪರಿಮಳ. ನನ್ನೊಳಗಿನ ಆಸೆಗಳೆಲ್ಲ ಮುಗಿಬಿದ್ದು ಉದ್ರೇಕಗೊಂಡವು. ಹಸಿದ ಹುಲಿಯಂತೆ ಅವಳ ಮೇಲೆರಗಿದೆ. ಅವಸರವಸರದಲ್ಲಿ ಅವಳನ್ನು ತಿಂದು ಮುಗಿಸಿದೆ. ಅಕ್ಷರಶಃ ತಿಂದು ಮುಗಿಸಿದೆ. ಇಲ್ಲದಿದ್ದರೆ ನನಗೆ ನನ್ನದೇ ದೇಹದಿಂದುಕ್ಕಿದ ಜೀವರಸದ ಬಗ್ಗೆ ಹೇಸಿಗೆ ಹುಟ್ಟುತ್ತಿರಲಿಲ್ಲ. ಅದನ್ನು ತೊಳೆದುಕೊಂಡು ಬಾತ್ರೂಮಿನಿಂದ ಹೊರಬಂದಾಗ ಮೊಣಕಾಲು ಮುದುಡಿ ಮಗುವಿನಂತೆ ಮಲಗಿದ್ದಳು. ಕೈಗಳು ಮುದುಡಿಕೊಂಡು ನಡುಗುತ್ತಿದ್ದವು. ಅವುಗಳೊಂದಿಗೆ ಅವಳ ಮೈಮೇಲೆ ನಾನು ಮೂಡಿಸಿದ ಗುರುತುಗಳೂ ನಡುಗುತ್ತಿದ್ದವು. ಅವಳ ಕಪಾಳದುದ್ದಕ್ಕೂ ಕಣ್ಣೀರು ಹರಿದು ದಿಂಬಿನೊಂದು ಭಾಗ ಒದ್ದೆಯಾಗಿತ್ತು. ಆ ಒದ್ದೆಯಿಂದ ಬರುತ್ತಿದೆ ಎಂಬಂತೆ ಬೇಬಿಸೋಪಿನ ವಾಸನೆ ಬಂದು ನನ್ನ ಕಣ್ಣಲ್ಲಿ ನೀರುಕ್ಕಿಸಿತು. ಅವಳ ಕಣ್ಣೊರೆಸಲು ಹೋದೆ. ಕೈ ಜಾಡಿಸಿದಳು. ಏನು ಮಾಡಬೇಕು ತೋಚಲಿಲ್ಲ. ಸುಮ್ಮನೆ ಪಕ್ಕ ಕೂತೆ. ಎದ್ದು ಕೂತಳು. ಮೌನವಾಗಿ ಬಟ್ಟೆ ಹಾಕಿಕೊಂಡು ಹೊರಟುನಿಂತಳು. ನಾನು ಮಾತನಾಡಿಸುವ ಧೈರ್ಯ ಮಾಡಲಿಲ್ಲ. ಕಾಲ್ ಮಾಡಿದರೆ ಕಟ್ ಮಾಡಿದಳು. ಇಡೀ ರಾತ್ರಿ ಕಾಲ್ ಮಾಡುತ್ತಲಿದ್ದೆ. ಪ್ರಯೋಜನವಾಗಲಿಲ್ಲ.

ಅವಳು ಕನಸೆಂದು ಹೇಳಿದ ನಿಜವನ್ನು ಅರ್ಥ ಮಾಡಿಕೊಂಡಿದ್ದೆ. ಅವಳ ಹಿನ್ನೆಲೆ ಕೆದಕಿ ನೋವುಂಟು ಮಾಡದಿರುವ ಎಚ್ಚರವಹಿಸಿದ್ದೆ. ಆದರೆ ಏನು ಪ್ರಯೋಜನ? ನನ್ನ ನುಣುಪು ಕೈಗಳ ಮೇಲೆ ಹುಟ್ಟಿದ್ದ ಅವಳ ನಂಬಿಕೆಯನ್ನ ನಾನೇ ಒಡೆದುಹಾಕಿದ್ದೆ.

ಮೂರು ದಿನ ಹೀಗೇ ಕಳೆದವು – ನಾನು ಕಾಲ್ ಮಾಡುವುದು ಅವಳು ಕಟ್ ಮಾಡುವುದು. ನನ್ನ ಸಾಲು ಸಾಲು ಮೆಸೇಜುಗಳನ್ನು ಕಳಿಸಿದ ತಕ್ಷಣ ನೋಡುತ್ತಿದ್ದಳು. ಆದರೆ ಯಾವುದಕ್ಕೂ ಉತ್ತರವಿಲ್ಲ ನಾಲ್ಕನೇ ಮುಂಜಾವಿನಲ್ಲಿ ಒಂದು ಕೆಟ್ಟ ಕನಸು. ಎದ್ದಾಗ ಮೈಪೂರ ನಡುಗುತ್ತಿತ್ತು. ಮುಖ ಪೂರ್ತಿ ಕಣ್ಣೀರಲ್ಲಿ ತೊಯ್ದಿತ್ತು. ಮುಟ್ಟಿಕೊಂಡಾಗ ನನ್ನ ಕೈಗಳೇ ನನಗೆ ಬಿರುಸಾಗಿ ಚುಚ್ಚಿದವು. ದುಃಖ ತಡೆದುಕೊಳ್ಳಲಾಗಲಿಲ್ಲ. ಅವಳಿಗೆ ಸೆಲ್ಫಿ ಕಳಿಸಿದೆ. ತಕ್ಷಣ ಕಾಲ್ ಮಾಡಿದಳು. ಸಂಜೆ ಸಿಗುವ ಭರವಸೆ ನೀಡಿದಳು. ’ಸೆಲ್ಫಿ ಕಳಿಸು’ ಎಂದು ಹಠ ಮಾಡಿದೆ. ಕಳಿಸಿದಳು. ಬಾದಾಮಿ ಕಣ್ಣುಗಳು ಕಪ್ಪಾಗಿದ್ದವು.

—–

ಆ ಕಪ್ಪನ್ನು ಮರೆಮಾಚಲು ಮತ್ತಷ್ಟು ಕಪ್ಪು ಹಚ್ಚಿಕೊಂಡು ಬಂದಿದ್ದಳು. ಬಯ್ಯಪ್ಪನಹಳ್ಳಿ ಮೆಟ್ರೊ ಸ್ಟೇಶನ್‌ನ ಪಿಜ್ಜಾ ಹಟ್‌ನಲ್ಲಿ ಕೂತಿದ್ದೆವು. ಬೇಕಂತಲೇ ಉತ್ಸಾಹ ತಂದುಕೊಂಡು ನನಗಿಷ್ಟದ ಪಿಜ್ಜಾ ಆರ್ಡರ್‍ ಮಾಡಿದಳು, ತಮಾಷೆ ಮಾತುಗಳಾಡಿದಳು, ’ಹೊಸ ಕವಿತೆ ಏನಾದ್ರು ಬರ್ದಿದೀಯಾ?’ ಎಂದು ವಿಚಾರಿಸಿದಳು. ಎಲ್ಲವೂ ಸರಿ ಆಗಿದೆ ಎನ್ನುವಂತಿತ್ತು ಅವಳ ವರ್ತನೆ. ಆದರೆ ಅವತ್ತಾಗಿದ್ದ ಘಟನೆ ಅವಳ ಇಡೀ ಮುಖದ ಮೇಲೆ ಒತ್ತಿದ ಮುದ್ರೆ ಸ್ಪಷ್ಟ ಕಾಣಿಸುತ್ತಿತ್ತು.

’ಪಿಜ್ಜಾ ಇನ್ನೂ ಲೇಟ್‌. ಅಲ್ಲಿವರ್ಗೂ ಒಂದ್ ಆಟ ಆಡನ. ಕೈ ಕೊಡು ಭವಿಷ್ಯ ಹೇಳ್ತೀನಿ’

ಎಂದು ನನ್ನ ಕೈತೆಗೆದುಕೊಂಡಳು.

’ಅದು ಬೇಡ. ನಿನ್ ಕೈಕೊಡು. ನಾನೇನೋ ಬರೀತೀನಿ.  ಗೆಸ್ ಮಾಡ್ಬೇಕು’

ಎಂದು ಅವಳ ಕೈ ತೆಗೆದುಕೊಂಡೆ. ಅಂಗೈ ಮೇಲೆ ’ಸಾರಿ’ ಎಂದು ಬರೆದೆ. ಅವಳು ಏನೂ ಹೇಳಲಿಲ್ಲ. ಮತ್ತೊಮ್ಮೆ ಒತ್ತಿ ಬರೆದೆ. ಮತ್ತೆ ಮತ್ತೆ ಬರೆದೆ. ಅವಳ ಕಣ್ಣು ಹನಿಗೂಡಿದವು. ಏನಾದರು ಹೇಳುತ್ತಾಳೆಂದು ಕಾದೆ. ಏನೂ ಹೇಳಲಿಲ್ಲ. ಅಷ್ಟೊತ್ತಿಗೆ ಪಿಜ್ಜಾ ಬಂತು. ತಾನೇ ಬಿಡಿಸಿ ಮೊದಲ ಸ್ಲೈಸ್ ತಿನ್ನಿಸಿದಳು. ಆದರೆ ಪ್ರತಿ ಸಲದಂತೆ ನಾನು ತಿನ್ನಿಸುವುದಕ್ಕೆ ಕಾಯದೆ ಇನ್ನೊಂದು ಸ್ಲೈಸ್ ಬಾಯಿಗಿಟ್ಟುಕೊಂಡಳು. ನನಗೆ ತುತ್ತು ಒಳಗೆ ಹೋಗಲಿಲ್ಲ. ಅವಳನ್ನೇ ನೋಡುತ್ತಿದ್ದೆ. ಅರ್ಥವಾಯಿತವಳಿಗೆ. ’ಹೇಯ್ ಇದ್ ಚೂರ್‍ ಒರೆಸಾ’ ಎಂದು ಮುಖ ಮುಂದಕ್ಕೊಡಿದಳು. ಒರೆಸಲಿಕ್ಕೆಂದು ಹೋದರೆ ಅವಳ ತುಟಿಗಳು ಸಣ್ಣಗೆ ಅದುರುತ್ತಿದ್ದವು. ಅದನ್ನು ನೋಡಿ ನನ್ನ ಬೆರಳೂ ಅದುರತೊಡಗಿತು. ತಾನೇ ನನ್ನ ಕೈಹಿಡಿದು ಒರೆಸಿಕೊಂಡಳು.

ಅವಳ ತುಟಿಗಳು ಅದುರುವುದನ್ನು ನಿಲ್ಲಿಸುವವರೆಗೆ ಅವಳನ್ನು ಮುಟ್ಟಬಾರದು ಎಂದು ನಿರ್ಧರಿಸಿದೆ. ಅವಳೂ ನನ್ನ ಬೆರಳುಗಳ ನಡುಕ ನಿಲ್ಲಿಸಲು ಪ್ರಯತ್ನಿಸುತ್ತಲೇ ಇದ್ದಳು. ನನ್ನ ನಿರ್ಧಾರ ಅಚಲವಾಗಿತ್ತು. ಆದರೆ ಅವಳ ಪ್ರಯತ್ನ ದಿನದಿಂದ ದಿನಕ್ಕೆ ವಿಫಲವಾಗುತ್ತ ಸಾಗಿ ಇಬ್ಬರನ್ನೂ ಕಂಗೆಡಿಸತೊಡಗಿತು.

’ಒಬ್ಬರನ್ನು ಮುಟ್ಟುವ ಮುನ್ನ ನೂರು ಸಲ ಯೋಚಿಸಬೇಕು. ಮನಸಲ್ಲುಳಿವ ಗುರುತಿಗಿಂತ ದೇಹದಲ್ಲಚ್ಚಾಗುವ ನೆನಪು ತುಂಬ ಕ್ರೂರಿ’ – ಸ್ಟೇಟಸ್ ಇಟ್ಟಿದ್ದೆ.

’ಪಾಪಪ್ರಜ್ಞೆ ಹುಟ್ಸೋದು ಕೂಡ ಪಾಪವಾಗಿರುತ್ತೆ’ ರಿಪ್ಲೈ ಮಾಡಿದ್ದಳು.

’ನೀನು ನಿನ್ನ ಕನಸು ಹಂಚಿಕೊಂಡಮೇಲೂ ನಾನು ಹಾಗೆ ಮಾಡಬಾರದಿತ್ತು’

’ನೀನು ಸಹಜವಾಗೇ ವರ್ತಿಸಿದೆ. ನನ್ನ ಮನಸೇ ಅಸಹಜ ಎನುವಷ್ಟು ಸೂಕ್ಷ್ಮ ಆಗೋಗಿದೆ’

’ನನ್ನ ಇನ್ನೊಂದ್ ಸಲ ಸಂಪೂರ್ಣವಾಗಿ ನಂಬಬಹುದಾ?’

’ಈಗಲೂ ನಂಬಿದ್ದೇನೆ. ನನಗೆ ಅಪನಂಬಿಕೆ ಹುಟ್ಟಿರೋದು ನನ್ನ ಮೇಲೆಯೇ’

ಮಾತು ಯಾವ ದಡವನ್ನೂ ತಲುಪದೆ ಅಲ್ಲಲ್ಲೇ ಸುತ್ತುವರೆಯುತ್ತಿತ್ತು. ನಮ್ಮಿಬ್ಬರ ಮನಸುಗಳು ಅದದೇ ಹೊಂಡಗಳಲ್ಲಿ ಬಿದ್ದು ಒದ್ದಾಡಿ ಹೈರಾಣಾಗತೊಡಗಿದವು. ನನ್ನ ಕೈಗಳು ಅವಳ ಪ್ರೀತಿಯ ನೇವರಿಕೆ ಇಲ್ಲದೆ ಸೊರಗತೊಡಗಿದವು. ಅವಳ ಕಣ್ಣುಗಳೋ ಭರವಸೆ ಹುಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಸೋತು ಸೋತು ಕಪ್ಪಾಗತೊಡಗಿದವು. ದಾರಿ ಸಂಪೂರ್ಣ ಮುಚ್ಚಿಹೋಗಿತ್ತು. ಬಿಟ್ಟು ನಡೆಯುವುದಂತೂ ಕಲ್ಪನೆಗೂ ಮೀರಿದ್ದಾಗಿತ್ತು. ಕಾಲ ನಮ್ಮನ್ನು ತಿಂದು ಮುಗಿಸುವವರೆಗೂ ಒಟ್ಟಾಗಿ ಕಾಯುವುದು ಬಿಟ್ಟರೆ ಬೇರಾವ ಮಾರ್ಗವೂ ನಮಗುಳಿದಿರಲಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಮೇ 19ರಂದು ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ

Bengaluru News: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ.ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

VISTARANEWS.COM


on

7 books release programme on May 19 in Bengaluru
Koo

ಬೆಂಗಳೂರು: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ (Bengaluru News) ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ.

ಇದನ್ನೂ ಓದಿ: SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ. ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

ವೀರಕಪುತ್ರ ಆಶಯನುಡಿಗಳನ್ನಾಡಲಿದ್ದಾರೆ. ಶೋಭಾ ರಾವ್‌ ಮತ್ತು ಅನಂತ ಕುಣಿಗಲ್‌ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.

ಇದನ್ನೂ ಓದಿ: Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

ಲೋಕಾರ್ಪಣೆಗೊಳ್ಳಲಿರುವ ಕೃತಿಗಳು ಹಾಗೂ ಕೃತಿಕಾರರ ವಿವರ

ಡಾ. ಲಕ್ಷ್ಮಣಕೌಂಟೆ ಅವರ ಮಹಾವಿನಾಶ (ಕಾದಂಬರಿ), ಕೌಂಡಿನ್ಯ ಅವರ ಬೆಳವಡಿ ಮಲ್ಲಮ್ಮ (ಕಾದಂಬರಿ), ರಾಘವೇಂದ್ರ ಪ್ರಭು ಎಂ. ಅವರ ಬಹುತ್ವ ಭಾರತ ಕಟ್ಟಿದವರು (ಬದುಕು ಬರಹಗಳು), ವಿ. ಗೋಪಕುಮಾರ್‌ ಅವರ ಕಗ್ಗಕ್ಕೊಂದು ನ್ಯಾನೋ ಕಥೆ (ನ್ಯಾನೋ ಕತೆಗಳು), ಗೀತಾ ದೊಡ್ಮನೆ ಅವರ ನೀಲಿ ಶಾಯಿಯ ಕಡಲು (ಕವಿತೆಗಳು), ಮೇದಿನಿ ಕೆಸವಿನಮನೆ ಅವರ ಮಿಸ್ಸಿನ ಡೈರಿ (ಅನುಭವ ಕಥನ), ಪಾರ್ವತಿ ಪಿಟಗಿ ಅವರ ಪುನರುತ್ಥಾನ (ಕಾದಂಬರಿ) ಲೋಕಾರ್ಪಣೆಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ಕಲೆ/ಸಾಹಿತ್ಯ

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್- ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಕೃತಿಯನ್ನು ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Konkani Book Release ) ಬಿಡುಗಡೆಗೊಳಿಸಿದರು. ಕರಾವಳಿಯಲ್ಲಿ ಕೊಂಕಣಿ ಮಾತನಾಡುವ ಜಿಎಸ್‌ಬಿ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇದೊಂದು ಅಪೂರ್ವ ಕೃತಿಯಾಗಿದೆ.

VISTARANEWS.COM


on

By

Konkani Book Release
Koo

ಮಂಗಳೂರು: ಇಟಾಲಿಯನ್- ಬ್ರಿಟಿಷ್ ಲೇಖಕ (Italian-born British citizen) ಗಿನೋ ಡಿ’ಕ್ಲೆಮೆಂಟೆ ಅವರು ಸಂಪಾದಿಸಿದ ಕೃತಿ ”ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ’ ಕೃತಿಯನ್ನು (Konkani Book Release) ಕೇರಳದ (kerala) ಎರ್ನಾಕುಲಂನಲ್ಲಿರುವ (Ernakulam) ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Samyameendra Thirtha Swamiji ) ಬಿಡುಗಡೆಗೊಳಿಸಿದರು.

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್-ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಸಂವಾದಾತ್ಮಕ ಜಿಎಸ್‌ಬಿ (ಗೌಡ ಸಾರಸ್ವತ ಬ್ರಾಹ್ಮಣ) ಕೊಂಕಣಿ ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ರಚಿಸಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಪ್ರತಿಷ್ಠಿತ ದಿಗ್ವಿಜಯ್ ಮಹೋತ್ಸವದಲ್ಲಿ ಅನಾವರಣಗೊಂಡ ಈ ಮಾರ್ಗದರ್ಶಿ ಕೃತಿ ಶ್ರೀಮಂತ ಭಾರತೀಯ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ಮಹತ್ವದ ಮೈಲುಗಲ್ಲನ್ನು ಗುರುತಿಸುತ್ತದೆ.


Gino’s Guide for Conversational GSB Konkani ಕೃತಿಯು ಜಿ ಎಸ್ ಬಿ ಸಮುದಾಯದ ಪರಂಪರೆಯನ್ನು ಪೋಷಿಸುವ ಸಮರ್ಪಿತ ಸಂಸ್ಥೆಯಾದ ಜಿಎಸ್ ಬಿ ವರ್ಲ್ಡ್‌ವೈಡ್‌ನ ಯುವಜನರಿಂದ ಸುಗಮಗೊಳಿಸಲ್ಪಟ್ಟ ಅಡ್ಡ-ಸಾಂಸ್ಕೃತಿಕ ತಿಳುವಳಿಕೆ ಮತ್ತು ಭಾಷಾ ಸಂರಕ್ಷಣೆಗೆ ಅಸಾಧಾರಣ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಕೃತಿಯ ಕುರಿತು ಮಾತನಾಡಿದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಇದು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳ ಮೇಲೆ ಬೀರುವ ಮಹತ್ವದ ಪರಿಣಾಮವನ್ನು ಒತ್ತಿ ಹೇಳುತ್ತದೆ ಎಂದರು.

ಗಿನೋ ಡಿ ಕ್ಲೆಮೆಂಟೆ ಅವರ ಕೆಲಸವು ಸಮರ್ಪಣಾ ಶಕ್ತಿ ಮತ್ತು ಸಾಂಸ್ಕೃತಿಕ ಮೆಚ್ಚುಗೆಗೆ ಸಾಕ್ಷಿಯಾಗಿದೆ. ನಮ್ಮ ಸಮುದಾಯದ ಹೊರಗಿನವರಿಂದ ಅಂತಹ ಆಳವಾದ ತೊಡಗಿಸಿಕೊಳ್ಳುವಿಕೆಯನ್ನು ನೋಡುವುದು ಅಪರೂಪ. ಈ ಮಾರ್ಗದರ್ಶಿ ನಮ್ಮ ಭಾಷಾ ಸಂರಕ್ಷಣೆಯ ಪ್ರಯತ್ನಗಳಲ್ಲಿ ಒಂದು ಸ್ಮಾರಕ ಸಾಧನೆಯಾಗಿದೆ ಎಂದು ಹೇಳಿದರು.

ಮಾರ್ಗದರ್ಶಿಯು ದೈನಂದಿನ ಸಂಭಾಷಣೆಗಳಿಗೆ ಪ್ರಾಯೋಗಿಕ ನುಡಿಗಟ್ಟುಗಳು ಮತ್ತು ಉದಾಹರಣೆಗಳೊಂದಿಗೆ ಉಚ್ಚಾರಣೆ, ವ್ಯಾಕರಣ ಮತ್ತು ಶಬ್ದಕೋಶದ ವಿವರವಾದ ಅವಲೋಕನವನ್ನು ನೀಡುತ್ತದೆ. ಇದು ಆರಂಭಿಕ ಮತ್ತು ಮುಂದುವರಿದ ಕಲಿಯುವವರಿಬ್ಬರನ್ನೂ ಪೂರೈಸುತ್ತದೆ, ಜಿಎಸ್ ಬಿ ಕೊಂಕಣಿಯನ್ನು ಕರಗತ ಮಾಡಿಕೊಳ್ಳಲು ಉತ್ಸುಕರಾಗಿರುವ ಯಾರಿಗಾದರೂ ಇದೊಂದು ಬಹುಮುಖ್ಯ ಸಂಪನ್ಮೂಲವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Narayana Murthy: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಕತ್ತರಿ? ನಾರಾಯಣ ಮೂರ್ತಿ ಶಾಕಿಂಗ್‌ ಹೇಳಿಕೆ

ಲೇಖಕರ ಹಿನ್ನೆಲೆ ಏನು?

ಜಿನೋ ಡಿ ಕ್ಲೆಮೆಂಟೆ ಮೂಲತಃ ಇಟಲಿಯವರಾಗಿದ್ದು, ಈಗ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಮದುವೆಯ ಮೂಲಕ ಜಿ ಎಸ್ ಬಿ ಸಂಸ್ಕೃತಿಗೆ ಆಳವಾದ ವೈಯಕ್ತಿಕ ಸಂಪರ್ಕವನ್ನು ಹೊಂದಿದ್ದಾರೆ. ಅವರ ಸಂಗಾತಿಯು ಕರ್ನಾಟಕದ ಕಾರ್ಕಳ ತಾಲೂಕಿನ ಮೂಲದವರಾಗಿದ್ದಾರೆ. ಈ ಕೌಟುಂಬಿಕ ಬಂಧವು ಜಿನೋ ಅವರ ಜಿಎಸ್‌ಬಿ ಕೊಂಕಣಿಯ ತಲ್ಲೀನಗೊಳಿಸುವ ಅಧ್ಯಯನಕ್ಕೆ ಪ್ರೇರೇಪಿಸಿತು. ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಉತ್ಸಾಹವು ಈ ಸಮಗ್ರ ಮಾರ್ಗದರ್ಶಿಯಲ್ಲಿ ಉತ್ತುಂಗಕ್ಕೇರಿತು. ಭಾರತೀಯ ಭಾಷೆಗಳ ದಾಖಲೀಕರಣ ಮತ್ತು ಪ್ರಚಾರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ.

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

ಧವಳ ಧಾರಿಣಿ ಅಂಕಣ: ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು.

VISTARANEWS.COM


on

king dasharatha dhavala dharini
Koo

ಕರ್ಮಫಲವನ್ನು ತಾನೇ ಅರಿತು ಅನುಭವಿಸಿದ ಸೂರ್ಯವಂಶದ ಮಹಾನ್ ಚಕ್ರವರ್ತಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕವೆನ್ನುವುದು ದಶರಥನಿಗೆ ಮಹಾನ್ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ಆತ ಏನೆಲ್ಲ ಕಸರತ್ತನ್ನು ಮಾಡಿದ್ದ ಎನ್ನುವುದನ್ನು ನೋಡಿದ್ದೇವೆ.

ಕೈಕೇಯಿ ಮಂಥರೆಯ ದುರ್ಬೋಧನೆಯಿಂದ ಎಷ್ಟರಮಟ್ಟಿಗೆ ಪ್ರಭಾವಿತಳಾಗಿದ್ದಳೆಂದರೆ ಅರಸನ ಯಾವ ಒದ್ದಾಟವೂ ಅವಳನ್ನು ಕರಗಿಸಲಿಲ್ಲ. ರಾಮನನ್ನು ಬಿಟ್ಟರೆ ತಾನು ಬದುಕಿರಲಾರೆ ಎನ್ನುವ ಮಾತುಗಳು ಕಾದ ಮರಳಲ್ಲಿ ಬಿದ್ದ ನೀರಿನಂತೆಯೇ ಇಂಗಿಹೋಯಿತು. ಕೈಕೇಯಿ ತಿರುಗಿ ರಾಜನಿಗೆ ಧರ್ಮೋಪದೇಶ ಮಾಡುತ್ತಾಳೆ. ಶೈಭ್ಯ, ಅಲರ್ಕ ಮೊದಲಾದ ರಾಜರ್ಷಿಗಳು ಪ್ರತಿಜ್ಞಾಬದ್ಧರಾಗಿ ತಮ್ಮ ತಮ್ಮ ಜೀವವನ್ನೇ ಒತ್ತೆಯಾಗಿರಿಸಿದ ಸಂಗತಿಯನ್ನು ಹೇಳುತ್ತಾ ಪರೋಕ್ಷವಾಗಿ ದೊರೆಯ ಸಾವಿನ ಕುರಿತು ತಾನು ಅಂಜುವವಳಲ್ಲ ಎನ್ನುತ್ತಾಳೆ. ಅವಳಿಗೆ ತನ್ನ ಮಗ ಭರತ ಪಟ್ಟಕ್ಕೇರಲೇ ಬೇಕಾಗಿದೆ. ಆಕೆ ಕೌಸಲ್ಯೆಯನ್ನು ಎಷ್ಟರಮಟ್ಟಿಗೆ ದ್ವೇಷಿಸುತ್ತಿದಳೆಂದರೆ “ರಾಮ ಪಟ್ಟಾಭಿಷೇಕವಾದೊಡನೆಯೇ ರಾಜಮಾತೆಯಾಗಿ ಸಕಲಪ್ರಜೆಗಳಿಂದ ಗೌರವವನ್ನು ಸ್ವೀಕರಿಸುವ ಕೌಸಲ್ಯೆಯನ್ನು ತಾನು ಒಂದು ದಿನವೂ ನೋಡಿಸಹಿಸಲಾರೆ ಎನ್ನುತ್ತಾಳೆ. ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿ ಕೌಸಲ್ಯೆಯೊಂದಿಗೆ ನಿತ್ಯವೂ ರಮಿಸಲು ಇಚ್ಛಿಸುವ ನಿನ್ನ ಹುನ್ನಾರ ತನಗೆ ಗೊತ್ತು ಎಂದು ಜರಿಯುತ್ತಾಳೆ.

ದಶರಥನಿಗೆ ಮಾತು ಬಾರದಾಗಿದೆ. ಆತ ರಾಮನನ್ನು ಕಾಡಿಗೆ ಕಳುಹಿಸುವುದು ಬೇಡವೆಂದು ಬಗೆಬಗೆಯಲ್ಲಿ ಗೋಳಾಡುತ್ತಾನೆ. ಸ್ತ್ರೀಸುಖಕ್ಕೊಸ್ಕರವಾಗಿ ತನ್ನ ಪ್ರಿಯಸುತನನ್ನೇ ಅರಣ್ಯಕ್ಕೆ ಕಳುಹಿಸಿದ ತನ್ನನ್ನು ಅತಿಕಾಮಿಯೆಂದು ಪುರಜನರು ಆಡಿಕೊಳ್ಳುವರು, ಆ ಅಪವಾದ ಬರುತ್ತದೆಯೆಂದು ಗೋಗೆರೆಯುತ್ತಾನೆ. “ಹೆಂಗಸರೆಲ್ಲ ಮೋಸಗಾರರು, ಸ್ವಾರ್ಥಪರಾಯಣರು ಎಂದು ಉದ್ವೇಗದಿಂದ ಕೂಗಾಡುತ್ತಾನೆ. ಬಹುಶಃ ಆಗ ಆತನಿಗೆ ತನ್ನ ಹಿರಿಯ ಹೆಂಡತಿಯರಾದ ಕೌಸಲ್ಯೆ ಮತ್ತು ಸುಮಿತ್ರೆಯರ ನೆನಪಾಗಿರಬೇಕು. ಇಲ್ಲ, ಪ್ರಪಂಚದಲ್ಲಿ ಎಲ್ಲಾ ಹೆಂಗಸರೂ ಹಾಗಿಲ್ಲ’ ಕೇವಲ ಭರತನ ತಾಯಿಗೆ ಮಾತ್ರ ತನ್ನ ಮಾತು ಅನ್ವಯಿಸುತ್ತದೆ ಎಂದು ಕೂಗಾಡುತ್ತಾನೆ. ರಾಮನನ್ನು ಅರಣ್ಯಕ್ಕೆ ಕಳುಹಿಸುವ ಒಂದು ಮಾತನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು ಎನ್ನುವ ಮಾತುಗಳು ಕೈಕೇಯಿಯ ಮೇಲೆ ಪರಿಣಾಮ ಬೀರದಿದ್ದಾಗ ಕೊನೆಯ ಅಸ್ತ್ರವೆನ್ನುವಂತೆ ದಶರಥ ಲೋಕಮರ್ಯಾದೆಯನ್ನು ಮೀರಿ ಅನಾಥನಂತೆ ಗೋಳಾಡುತ್ತಾ ಆಕೆಯ ಕಾಲಿಗೆ ನಮಸ್ಕರಿಸಲು ಹೋಗುತ್ತಾನೆ. ಆಗ ಕೈಕೇಯಿ ತಿರಸ್ಕಾರದಿಂದ ತನ್ನ ಕಾಲನ್ನು ದೂರಕ್ಕೆ ಚಾಚಿದುದರಿಂದ ಅವೂ ಆತನಿಗೆ ಸಿಕ್ಕದೇ ರೋಗಿಯೊಬ್ಬ ತತ್ತರಿಸಿ ಬೀಳುವಂತೆ ನೆಲದಮೇಲೆ ಬೀಳುತ್ತಾನೆ. ಅವನ ಈ ಸ್ಥಿತಿಯನ್ನು ನೋಡಿದ ರಾಮಾಯಣದ ಕವಿ ವಾಲ್ಮೀಕಿಗೂ ದಶರಥನ ಮೇಲೆ ಹೇಸಿಗೆಯುಂತಾಗುತ್ತದೆ. ಚಕ್ರವರ್ತಿ ತನ್ನ ಘನತೆಯನ್ನು ಮರೆತು ಹೀಗೆ ಮಾಡಬಾರದಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ.

ಅತದರ್ಹಂ ಮಹಾರಾಜಂ ಶಯಾನಮತಥೋಚಿತಮ್.
ಯಯಾತಿಮಿವ ಪುಣ್ಯಾನ್ತೇ ದೇವಲೋಕಾತ್ಪರಿಚ್ಯುತಮ್৷৷ಅಯೋ. .13.1৷৷

ರಾಜಾಧಿರಾಜನಾದಂತಹ ದಶರಥನು ಕೈಕೇಯಿಯ ಪಾದಗಳ ಮೇಲೆ ಬೀಳಲು ಹೋಗಬಾರದಿತ್ತು(ಅತದರ್ಹಂ) ಎಂದು ಬಹಿರಂಗವಾಗಿಯೇ ಸಿಡಿಮಿಡಿಗೊಳ್ಳುತ್ತಾನೆ. ರಾಮಾಯಣದ ಈ ಸನ್ನಿವೇಶ ವಾಲ್ಮೀಕಿಯ ಕಣ್ಣಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಕಾಣುತ್ತಿದೆ. ನಿರುಧ್ವಿಘ್ನವಾಗಿ ಕಥೆಯನ್ನು ಹೇಳುತ್ತಾಹೋಗಬೇಕಾದ ಕವಿ ಸೀತೆಗೆ ತೊಂದರೆಯಾದ ಉತ್ಕಟಕ್ಷಣಗಳಲ್ಲಿ ರಸಭಾವವನ್ನು ಹತ್ತಿಕ್ಕಲಾರದೇ ತಾನೇ ಕಥೆಯೊಳಗೆ ಪ್ರವೇಶಿಸುವುದುಂಟು. ಆದರೆ ಇಲ್ಲಿ ಮಾತ್ರ ಆತನಿಗೆ ದಶರಥನ ಒಟ್ಟಾರೆಯ ವ್ಯವಹಾರವೇ ರೇಜಿಗೆ ಹುಟ್ಟಿಸಿದೆ. ಕೈಕೇಯಿಯನ್ನು ಇಕ್ಷಾಕುವಂಶಕ್ಕೇ ಅನರ್ಥಕಾರಿಣಿಯೆಂದು ತಿರಸ್ಕಾರದಿಂದ ಕವಿಹೇಳುತ್ತಾನೆ. ಸೂರ್ಯವಂಶದ ಪುಣ್ಯದ ಕಾರಣದಿಂದ ದಶರಥನಿಗೆ ಕೈಕೇಯಿಯ ಪಾದಗಳು ಸಿಗಲಿಲ್ಲ. ಎನ್ನುತ್ತಾನೆ. ಈ ಭಾಗವನ್ನು ದಶರಥವಿಲಾಪವೆನ್ನುವ ಹೆಸರಿನಿಂದ ಕರೆದರೂ ಇಲ್ಲಿ ಕಾಳಿದಾಸನ ಪ್ರಸಿದ್ಧಕಾವ್ಯ ರಘುವಂಶದ ಅಜವಿಲಾಪ ನೆನಪಿಗೆ ಬರುತ್ತದೆ. ರಘುವಂಶದಲ್ಲಿ ಅಜ ಮತ್ತು ಇಂದುಮತಿ ದಂಪತಿಗಳ ಪ್ರೇಮದ ವಿಷಯ ಪ್ರಸಿದ್ಧ. ದಿವ್ಯಪುಷ್ಪಮಾಲೆಯೊಂದು ಅಜನ ಪತ್ನಿ ಇಂದುಮತಿಯಮೇಲೆ ಬಿದ್ದಾಗ ಅವಳು ಮೃತಳಾಗುತ್ತಾಳೆ. ಆಗ ಅಜ ತನ್ನ ಪತ್ನಿಗಾಗಿ ಮಾಡುವ ದುಃಖವು ಅಜವಿಲಾಪವೆಂದೇ ಪ್ರಸಿದ್ಧಿಯಾಗಿದೆ. ಪತ್ನಿಯ ವಿರಹವನ್ನು ತಾಳಲಾರದೇ ಕುಗ್ಗಿ ಕುಗ್ಗಿ ಸಾಯುವ ಅಜನೂ ಸ್ತ್ರೀ ಕಾರಣದಿಂದ ಸಾಯುತ್ತಾನಾದರೂ ಅದು ಪ್ರೇಮಕಾವ್ಯದ ಉತ್ತುಂಗಗಳಲ್ಲೊಂದೆಂದು ಪರಿಗಳಿಸಲ್ಪಟ್ಟಿದೆ. ಅದರ ವಿರುದ್ಧವಾಗಿ ಅಜನ ಮಗನಾದ ದಶರಥನ ಒದ್ದಾಟವಿದೆ. ಅವನ ವಿಲಾಪಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಯಾರೂ ಬರುವುದಿಲ್ಲ. ಅವನ ವಿಲಾಪಕ್ಕೆ ರಾತ್ರಿಯೇ ಹೆದರಿ ಓಡಿಹೋಯಿತು.

ಬೆಳಗಾದರೂ ದೊರೆ ಗೋಳಾಡುವುದನ್ನು ಬಿಟ್ಟು ರಾಮನನ್ನು ಪಟ್ಟಗಟ್ಟುವ ಯಾವ ಸೂಚನೆಯನ್ನೂ ನೀಡುವುದಿಲ್ಲ. ಎಲ್ಲಿಯಾದರೂ ಬೇರೆಯವರಿಗೆ ತಿಳಿದರೆ ತನ್ನ ಕೆಲಸ ಕೆಟ್ಟಿತೆನ್ನುವ ಚಿಂತೆ ಕೈಕೇಯಿಯಲ್ಲುಂಟಾಯಿತು. ರಾಜನನ್ನು ಧರ್ಮಪರಿಪಾಲನೆಯೆನ್ನುವ ಹಗ್ಗದಲ್ಲಿ ಕಟ್ಟಿಹಾಕಿದ್ದಳು.

ಸತ್ಯಮೇಕಪದಂ ಬ್ರಹ್ಮ ಸತೇ ಧರ್ಮಃ ಪ್ರತಿಷ್ಠಿತಃ
ಸತ್ಯಮೇವಾಕ್ಷಯಾ ವೇದಾಃ ಸತ್ಯೇನೈವಾಪ್ಯತೇ ಪರಮ್ II ಅಯೋ.14-7II

ಸತ್ಯವೆನ್ನುವುದೇ ಬ್ರಹ್ಮವಾಚಕವಾದ ಪ್ರಣವಸ್ವರೂಪವು. ಸತ್ಯದಲ್ಲಿಯೇ ಸಮಸ್ತ ಧರ್ಮಗಳೂ ಅಡಗಿರುವವು. ಕ್ಷಯವೃದ್ಧಿಗಳಿಲ್ಲದ ವೇದಗಳು ಸತ್ಯದ ಸ್ವರೂಪಗಳೇ ಆಗಿವೆ. ಪರಮೋತ್ಕ್ರಷ್ಟವಾದ ಲೋಕಗಳೂ ಸತ್ಯದ ಅವಲಂಬನೆಯಿಂದಲೇ ಲಭಿಸುತ್ತವೆ.

ಸಮಗ್ರವಾದ ಉಪನಿಷತ್ತಿನ ಸಾರವನ್ನು ಸಾರುವ ಈ ಮಾತು ಕೈಕೇಯಿಯಿಂದ ಬೇರೆ ಯಾವ ಸಂದರ್ಭದಲ್ಲಿಯಾದರೂ ಬಂದಿದ್ದರೆ ಆಕೆಯನ್ನು ಗಾರ್ಗಿ, ಲೋಪಾಮುದ್ರಾ ಮೊದಲಾದವರಸಾಲಿಗೆ ಸೇರಿಸಿಬಿಡುತ್ತಿದ್ದರೇನೋ. ಆಕೆಯ ತಂದೆ ಅಶ್ವಪತಿ ವೈಶ್ವಾನರ ವಿದ್ಯೆಯನ್ನು ಉದ್ಧಾಲಕನಿಗೆ ಕಲಿಸಿದ ಕುರಿತು “ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ”. ರಾವಣನೂ ಸಹ ಎಲ್ಲಾ ವೇದಗಳನ್ನು ಓದಿಕೊಂಡಿದ್ದ. ಮೂಲತಃ ಸ್ವಭಾವದಲ್ಲಿ ಸಾತ್ವಿಕ ಗುಣಗಳಿಲ್ಲದಿದ್ದರೆ ಅವೆಲ್ಲವೂ ವ್ಯರ್ಥವಾಗುತ್ತದೆ. ಕೈಕೇಯಿಗಾಗಿರುವುದೂ ಅದೇ. ತನಗೆ ತಿಳಿದಿರುವ ಧರ್ಮಸೂತ್ರಗಳನ್ನು ತನ್ನ ಸ್ವಾಥಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ. ಗಂಗಾನದಿಯೇ ಆದರೂ, ಬಚ್ಚಲುಮನೆಯಿಂದ ಹೊರಬಂದರೆ ಅದನ್ನು ಯಾರೂ ತೀರ್ಥವೆಂದು ಪರಿಗಣಿಸುವುದಿಲ್ಲ. ರಾಜನನ್ನು ಕರೆದೊಯ್ಯಲು ಸುಮಂತ್ರ ಕೈಕೇಯಿಯ ಅರಮನೆಗೆ ಬಂದಾಗ ಎಲ್ಲದರಲ್ಲಿಯೂ ಸೋತ ರಾಜನೇ “ರಾಮನನ್ನು ನೋಡಬೇಕೆಂದಿದ್ದೇನೆ, ಅವನನ್ನಿಲ್ಲಿಗೆ ಕರೆದುಕೊಂಡು ಬಾ” ಎನ್ನುತ್ತಾನೆ. ಆಗಲೆಂದು ಹೊರಟ ಸುಮಂತ್ರನಿಗೆ ಮನಸ್ಸಿನಲ್ಲಿ ಏನೋ ಒಂಡು ಸಂಶಯಕಾಡಿತು. ಸಭೆಗೆಬಂದವ ಅದಾಗಲೇ ಬಂದುಸೇರಿದ್ದ ಅರಸರ ವಿಷಯಗಳನ್ನು ತಿಳಿಸುವ ನೆವಮಾಡಿ ಮತ್ತೊಮ್ಮೆ ಕೈಕೇಯಿಯ ಅಂತಃಪುರಕ್ಕೆ ಬಂದ. ಕೈಕೇಯಿಗೆ ರಾಮನನ್ನು ಗುಪ್ತವಾಗಿ ಅರಣ್ಯಕ್ಕೆ ಕಳುಹಿಸಿ ಭರತನನ್ನು ಪಟ್ಟಾಭಿಷೇಕಕ್ಕೆ ಏರಿಸಬೇಕಿತ್ತು. ಚಾಣಾಕ್ಷಳಾಗಿದ್ದ ಆಕೆಗೆ ಈ ವಿಷಯ ಬಹಿರಂಗಕ್ಕೆ ಬಂದರೆ ಸಾಮಂತರೆಲ್ಲರೂ ತಿರುಗಿಬೀಳುವರು ಎನ್ನುವುದರ ಅರಿವಿತ್ತು. ಅದಕ್ಕಾಗಿಯೇ ಅವಳು ರಾಮ ತನ್ನ ಮನೆಗೇ ಬರಲಿ ಎಂದು ರಾಜನನ್ನು ಒತ್ತಾಯಿಸಿದಳು. ಎರಡನೆಯ ಸಾರಿ ಸುಮಂತ ಬಂದಾಗ ಸ್ವಲ್ಪ ಸಿಟ್ಟಿನಿಂದಲೇ ರಾಮನನ್ನು ಇಲ್ಲಿಗೆ ಕರೆತರಬೇಕು. ಇದು ತನ್ನ ಆಜ್ಞೆ ಎಂದು ಕಠೋರವಾಗಿಯೇ ಹೇಳುತ್ತಾನೆ. “ದಶರಥನ ಮಾತು ಸೋತ ಹೊತ್ತು ಅದು”. ದೊರೆ ಅಸಹಾಯಕನಾಗಿದ್ದ. ತನ್ನೆದುರೇ ತನ್ನ ಪರವಾಗಿ ಕೈಕೇಯಿ ರಾಮನಲ್ಲಿ ತನ್ನ ವರದ ಕುರಿತು ಒಡಂಬರಿಸುತ್ತಿರುವಾಗ ಮೌನವಾಗಿದ್ದ. ನಾಲಿಗೆ ಮಾತನ್ನು ಆಡುವುದು ಬುದ್ಧಿಯಬಲದಿಂದ. ದಶರಥನ ಬುದ್ಧಿಯನ್ನು ಸಂಪೂರ್ಣವಾಗಿ ಕೈಕೇಯಿ ಆಕ್ರಮಿಸಿಕೊಂಡಿದ್ದಳು. ರಾಮನ ಪ್ರಿಯಮಾತೆ ಕೈಕೇಯಿ ರಾಜನ ಪರವಾಗಿ ಆಡುವ ಮಾತಾಗಿದ್ದಳು. ಸಮಯ ಸರಿದಷ್ಟೂ ತನಗೇ ಅಪಾಯವೆಂದು ಅವಳಿಗೆ ಅರಿವಾಗತೊಡಗಿತು. ತಂದೆಯ ನೋಡಲು ಬಂದ ರಾಮ ಆತನ ಚಿಂತೆಗೆ ಕಾರಣವನ್ನು ಕೇಳೆದರೆ ಆತನಲ್ಲಿ ದೊರೆಯ ಮನಸ್ಸಿನಲ್ಲಿರುವುದು ಭರತನು ರಾಜನಾಗುವ ಮತ್ತು ರಾಮನ ಅರಣ್ಯಗಮನದ ವರಗಳನ್ನು ಹೇಳುತ್ತಾಳೆ. ಅಷ್ಟೇ ಅಲ್ಲ,’ “ಎಲ್ಲಿಯವರೆಗೆ ನೀನು ಈ ಅಯೋಧ್ಯೆಯನ್ನು ಬಿಟ್ಟು ಅರಣ್ಯಕ್ಕೆ ಹೋಗುವುದಿಲ್ಲವೋ ಅಲ್ಲಿಯವರೆಗೆ ರಾಜನು ಸ್ನಾನವನ್ನೂ ಮಾಡುವುದಿಲ್ಲ, ಊಟವನ್ನೂ ಮಾಡುವುದಿಲ್ಲ” ಎನ್ನುವ ಮಾತನ್ನು ಹೇಳಿದಾಗ ರಾಮ ಇನ್ನು ತಡಮಾಡುವುದು ಸರಿಯಲ್ಲವೆಂದು ಅರಣ್ಯಕ್ಕೆ ಹೊರಟಕಥೆ ಎಲ್ಲರಿಗೂ ಚಿರಪರಿಚಿತ.

dhavala dharini king dasharatha

ದಶರಥನಿಗೆ ರಾಮನ ಅಗಲುವಿಕೆಯ ದುಃಖಕ್ಕಿಂತ ಆತ ಸುಮಂತ್ರನ ಹತ್ತಿರ ತನ್ನ ತಂದೆ ಮತ್ತು ತಾಯಿಗೆ ಹೇಳುವ ಸಂದೇಶ ಇನ್ನಷ್ಟು ಶೋಕವನ್ನು ಕೊಡುತ್ತದೆ. ರಾಮ ತನ್ನ ತಾಯಿಗೆ ತಾಳ್ಮೆಯಿಂದ ಇರಲು ಹೇಳಿಕಳುಹಿಸುತ್ತಾನೆ. ಹದಿನಾಲ್ಕುವರ್ಷಗಳ ತನಕ ಹೇಗೋ ಭರತನ ಜೊತೆ ಹೊಂದಿಕೊಂಡು ಹೋಗು ಎಂದಿದ್ದ. ಭರತನಿಗೂ ಕೈಕೇಯಿಯಂತೇ ತನ್ನ ತಾಯಯಿಂದರನ್ನು ನೋಡಿಕೊಳ್ಳುವಂತೆ ಕಾಠಿಣ್ಯದಿಂದ ತುಂಬಿದ ಎಚ್ಚರಿಕೆಯ ಸಂದೇಶನ್ನು ಕಳಿಹಿಸುತ್ತಾನೆ. ಕೌಸಲ್ಯಯ ಕುರಿತು ಹೇಳುವಾಗ ರಾಮನ ಕಣ್ಣಲ್ಲಿ ನೀರು ಹರಿಯುತ್ತಿರುವುದನ್ನು ಕಂಡ ಲಕ್ಷ್ಮಣ ಕ್ರುದ್ಧನಾಗಿರುವ ವಿಷಯವನ್ನು ಹೇಳುವಾಗ ಅರಸನಿಗೆ ಕಾಮಮೋಹಿತನಾಗಿದ್ದ ತಾನೇ ಅವಸರದಿಂದ ಕೈಕೇಯಿಯನ್ನು ಓಲೈಸಲು ಹೋದೆ ಅನಿಸುತ್ತದೆ. ರಾಜ ಯಾವ ನಿರ್ಣಯಗಳನ್ನು ಕೈಗೊಳ್ಳುವಾಲೂ ಮೊದಲು ಅಮಾತ್ಯರೊಡನೆ ಸಮಾಲೋಚಿಸಿ ಅವರ ಸಲಹೆಪಡೆದು, ಅದು ಧರ್ಮಸಮ್ಮತವಾಗಿದ್ದರೆ ತನಗೆ ಯುಕ್ತವಾದ ನಿರ್ಣಯವನ್ನು ಕೈಗೊಳ್ಳಬೇಕು. ಇಲ್ಲಿ ಅದೇನನ್ನೂ ಮಾಡದೇ ಇರುವ ಅಪರಾಧೀ ಭಾವ ಕಾಡುತ್ತದೆ. ವನವಾಸಕ್ಕೆ ಹೊರಟ ರಾಮ, ಸೀತಾ ಲಕ್ಷ್ಮಣರು ನಗುತ್ತಲೇ ಹೊರಟರು, ಗುಹನಲ್ಲಿ ಆಲದ ಹಾಲನ್ನು ತರಿಸಿ ತಪಸ್ವಿಗಳಂತೆ ಜಟಾಧಾರಿಯಾದ ವಿಷಯವನ್ನು ಕೇಳಿದ ಕೌಸಲ್ಯೆಯ ಮಾತ್ರಭಾವಕ್ಕೆ ಬಲವಾದ ನೋವನ್ನು ಕೊಡುತ್ತದೆ. ಅನೇಕವರ್ಷಗಳಕಾಲ ಧಶರಥನಿಂದ ಅಲಕ್ಷಕ್ಕೆ ಒಳಗಾದರೂ ಆಕೆ ಅದನ್ನೆಲ್ಲ ಸಹಿಸಿಕೊಂಡು ಮೌನಿಯಾಗಿದ್ದವಳು ಬಲುತೀಕ್ಷ್ಣವಾದ ಮಾತುಗಳಿಂದ ಗಂಡನನ್ನು ನಿಂದಿಸುತ್ತಾಳೆ. ಕೊನೆಯದಾಗಿ “ಮಹರಾಜಾ! ನಿನ್ನ ಈ ದುಶ್ಚರ್ಯೆಯಿಂದಾಗಿ ನಾನು ಮತ್ತು ನನ್ನ ಮಗನು ಮಾತ್ರ ವಿನಾಶ ಹೊಂದಲಿಲ್ಲ. ರಾಮನನ್ನು ಕಾಡಿಗಟ್ಟಿ ರಾಷ್ಟ್ರಸಹಿತವಾದ ರಾಜ್ಯವನ್ನು ಹಾಳುಮಾಡಿದೆ. (ಹತಂ ತ್ವಯಾ ರಾಜ್ಯಮಿದಂ ಸರಾಷ್ಟ್ರಂ ಹತಸ್ತಥಾತ್ಮಾ ಸಹ ಮಂನ್ತ್ರಿಭಿಶ್ಚ) ಮಂತ್ರಿಗಳೊಡನೇ ನೀನೂ ಹಾಳಾದೆ” ಎನ್ನುವ ಕಠೋರಮಾತುಗಳನ್ನಾಡುತ್ತಾಳೆ.

ಅದುತನಕ ಅದುಮಿಟ್ಟುಕೊಂಡ ಅವಮಾನ, ತಿರಸ್ಕಾರಗಳೆಲ್ಲವೂ ಸ್ಪೋಟಗೊಂಡಹೊತ್ತು ಅದು. ಆಕೆಯ ಮಾತುಗಳು ಎಷ್ಟು ತೀಕ್ಷ್ಣವಾಗಿತ್ತೆಂದರೆ ದಶರಥ ಅದನ್ನು ಕೇಳಿದವನೇ ಮೂರ್ಛಿತನಾದ. ಆತನನ್ನು ಉಪಚರಿಸಿದ ಕೌಸಲ್ಯೆ ತಾನು ಹಾಗೇ ಮಾತಾಡಬಾರದಾಗಿತ್ತೆಂದು ದುಃಖಪಡುತ್ತಾಳೆ. ದಶರಥನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಾಳೆ. ಕೌಸಲ್ಯಾ ಮತ್ತು ಸುಮಿತ್ರಾ ಇಬ್ಬರೂ ಸೇರಿ ಗಂಡನ ಶುಶ್ರೂಷೇ ಮಾಡುತ್ತಾ ತಾವೇ ದುಃಖಿಸುತ್ತಲೂ ಇರುತ್ತಾರೆ. ದಶರಥನಿಗೆ ತಾನು ಇಷ್ಟೆಲ್ಲಾ ಒಳ್ಳೆಯ ಕಾರ್ಯವನ್ನು ಮಾಡಿದರೂ ತನಗೆ ಏಕೆ ಹೀಗೆ ಆಯಿತು ಎಂದು ಚಿಂತಿಸುತ್ತಾ ಯಾವುದೋ ಒಂದು ವಿಷಯವನ್ನು ಹೇಳಲೋ ಬೇಡವೋ ಎನ್ನುವಂತೆ ಇದ್ದ. ಆರನೆಯದಿನದ ಅರ್ಧರಾತ್ರಿಯಲ್ಲಿ ಇದ್ದಕ್ಕಿದ್ದಂತೆ ತನ್ನ ಪುತ್ರವಿಯೋಗಕ್ಕೆ ಕಾರಣವಾದ ತನ್ನ ಕರ್ಮಫಲದ ಕುರಿತು ಹೇಳಲು ನಿಶ್ಚಯಿಸಿದ. ಅದು ಎಲ್ಲರಿಗೂ ತಿಳಿದ ಕಥೆಯಾದ ಶ್ರವಣಕುಮಾರನ ಕಥೆ, ರಾಮಾಯಣದಲ್ಲಿ ಶ್ರವಣಕುಮಾರ ಎನ್ನುವ ಹೆಸರಿಲ್ಲ. ಕರಣ ಎಂದು ಆತನ ಹೆಸರು. ಆತನ ತಂದೆ ಓರ್ವ ಋಷಿಯಾಗಿದ್ದ. ಈ ಕಥೆ ಒಂದೇ ರೀತಿಯದಾದರೂ ಕಾಲಾಂತರದಲ್ಲಿ ಬೇರೆ ಬೇರೆ ರಾಮಾಯಣಗಳಲ್ಲಿ ಶ್ರವಣಕುಮಾರ ಎನ್ನುವ ಹೆಸರು ಬಂತು.

ಈ ಘಟನೆ ನಡೆಯುವಾಗ ದಶರಥನಿಗೆ ಪ್ರಾಯದ ಕಾಲ. ಆತ ಶಬ್ದವೇಧಿ ವಿದ್ಯೆಯಲ್ಲಿ ಮಹಾಚತುರ ಎನ್ನುವ ಕೀರ್ತಿ ಹಬ್ಬಿತ್ತು. ಅದನ್ನು ಪ್ರಯೋಗಿಸುವ ಹವ್ಯಾಸ ದೊರೆಗೆ. ಹಾಗಾಗಿ ಕಾಡಿಗೆ ಹೋಗಿ ಬೇಟೆಯಾಡುವ ವ್ಯಸನವನ್ನು ಹಚ್ಚಿಕೊಂಡಿದ್ದ. ಯುವರಾಜನಾಗಿದ್ದ ಆತನಿಗೆ ಆಗಿನ್ನೂ ಮದುವೆಯಾಗಿರಲಿಲ್ಲ (ದೇವ್ಯನೂಢಾ ತ್ವಮಭವೋ ಯುವರಾಜೋ ಭವಾಮ್ಯಹಮ್). ಮಳೆಗಾಲದ ಒಂದು ದಿನ ಬೇಟೆಗೆ ಹೋದಾಗ ಅನೆ ನೀರು ಕುಡಿಯುತ್ತಿರುವ ಸದ್ದು ಕೇಳಿಬಂತು. ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು. ಆತನೇ ಕುರುಡರಾದ ತನ್ನ ತಂದೆಯ ವಿಷಯವನ್ನು ಹೇಳಿ ಅವರಿಗೆ ನೀರನ್ನು ತೆಗೆದುಕೊಂಡು ಹೋಗು ಎಂದು ಕೇಳಿದ. ದಶರಥ ಯೌವನ ಮದದಿಂದ ಅಪರಾಧವನ್ನು ಮಾಡಿದರೂ ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಕುರುಡ ದಂಪತಿಗಳ ಬಳಿಗೆ ಬಂದು ಪ್ರಾಮಾಣಿಕವಾಗಿ ನಡೆದ ಸಂಗತಿಯನ್ನು ಹೇಳಿದ. ಬಾಲಕನ ಶವ ಸಂಸ್ಕಾರವನ್ನು ಅವರ ಹತ್ತಿರವೇ ಮಾಡಿಸಿದ. ಉದ್ಧೇಶಪೂರ್ವಕವಾಗಿ ತನ್ನ ಮಗನನ್ನು ಕೊಲ್ಲದ ಕಾರಣ ದೊರೆಗೆ ಬ್ರಹ್ಮಹತ್ಯಾ ಶಾಪವು ತಟ್ಟದು ಎಂದು ಹೇಳಿದರು. ಸಾಯುವ ಕಾಲದಲ್ಲಿ ತಮಗೆ ಆದ ರೀತಿಯಲ್ಲಿಯೇ ನಿನಗೂ ಪುತ್ರವಿಯೋಗವುಂಟಾಗಲಿ ಎಂದು ಶಾಪವನ್ನಿತ್ತು ಮಗನ ಚಿತೆಯನ್ನು ಏರಿ ದಿವ್ಯ ಶರೀರವನ್ನು ಧರಿಸಿ ಸ್ವರ್ಗಕ್ಕೆ ಹೋದರು.

king dasharatha kaikeyi dhavala dharini column

ರಾಜ ಕಾಲಾಂತರದಲ್ಲಿ ಅದನ್ನೆಲ್ಲ ಮರೆತಿದ್ದ. ಈಗ ರಾಮನ ಅಗಲುವಿಕೆಯೆನ್ನುವದು ಆತನಲ್ಲಿ ಅಪರಾಧೀ ಭಾವವನ್ನು ಮೂಡಿಸಿದೆ. ತನ್ನ ಕೊನೆಯ ದಿನಗಳು ಹತ್ತಿರ ಬಂತು ಎಂದು ದೊರೆಗೆ ಅನಿಸಲು ಸುರುವಾಯಿತು. ಸತ್ಯವಂತನಾದ, ಧರ್ಮಮಾರ್ಗದಲ್ಲಿ ನಡೆದ ತನಗೆ ಈ ಗತಿ ಏಕೆ ಬಂತು ಎಂದು ಚಿಂತಾಮಗ್ನನಾಗಿರುವಾಗ ಅವನಿಗೆ ತಾನೆಸಗಿದ ಈ ದುಷೃತ್ಯ ನೆನಪಿಗೆ ಬಂತು. ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಮುನಿಯ ಶಾಪ ಫಲಿಸುವ ಕಾಲ ಬಂತು ಎಂದು ಕೌಸಲ್ಯೆಗೆ ಹೇಳಿ ಇದಕ್ಕೆ ಕಾರಣ ತನ್ನ ಕರ್ಮಫಲ ಎನ್ನುತ್ತಾನೆ. ಮಾಡಿದ್ದಕ್ಕೆ ತಕ್ಕ ಕರ್ಮಫಲವನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆ ಪುನರ್ಜನ್ಮದಷ್ಟೇ ಪ್ರಾಚೀನವಾದುದು. ತಾನು ಬದುಕಬೇಕೆಮ್ದರೆ ರಾಮ ಬಂದು ತನ್ನನ್ನು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ತಾನು ಬದುಕುವೆ ರಾಘವನ ವಿಷಯದಲ್ಲಿ ಘನತೆಯಿಂದ ತಾನು ನಡೆದುಕೊಳ್ಳಲಿಲ್ಲ ವೆಂದು ನಿರಂತರವಾಗಿ ಶೋಕಿಸುತ್ತಾನೆ. ಇಷ್ಟಾದರೂ ಪಾಯಸದ ಮಹಿಮೆಯಿಂದ ಜನಿಸಿದ ಮಕ್ಕಳು ಎನ್ನುವ ವಿಷಯವೇ ಮರೆತುಹೋಗಿದೆ. ಋಷಿಮುನಿಗಳಿಗೆ ಕಂಡ ರಾಮನ ನಿಜರೂಪದ ಅರಿವು ದಶರಥನಿಗೆ ಆಗಲೇ ಇಲ್ಲ. ಅತನನ್ನು ಸಮಾಧಾನ ಮಾಡುತ್ತಾ ಕೌಸಲ್ಯೆ ಮತ್ತು ಸುಮಿತ್ರೆಯರು ತಮ್ಮ ನಡುವೆ ಮಲಗಿಸಿಕೊಂಡಿದ್ದರು ಆರುದಿನಗಳಿಂದಲೂ ಬಾರದ ನಿದ್ರೆ ಇಬ್ಬರೂ ರಾಣಿಯರಿಗೂ ತಡರಾತ್ರಿ ಬಂತು. ರಾಘವನ ನೆನಪು ಮಾಡುತ್ತಲೇ ಇದ್ದ ರಾಜನನ್ನು ಚಿರನಿದ್ರೆ ಸೆಳೆದುಬಿಟ್ಟಿತು.

ರಘುವಂಶದ ಘನತೆಯ ಚಕ್ರವರ್ತಿಯೆಂದು ಹೆಸರು ಮಾಡಿದ ಯಶೋವಂತನಾದ ದೊರೆ ತನ್ನ ಕರ್ಮ ಫಲವನ್ನು ಅನುಭವಿಸಿ ಕೊನೆಗಾಲವನ್ನು ಕಂಡ. ಯಾವಾತ ತನ್ನ ಕರ್ಮಫಲವನ್ನು ಜೀವಿತಾವಧಿಯಲ್ಲಿ ಅನುಭವಿಸುತ್ತಾನೆಯೋ, ಆ ಕಾರಣದಿಂದ ಅವರು ಪಶ್ಚಾತ್ತಾಪ ಪಡುತ್ತಾರೆಯೋ ಅಂತವರು ಸತ್ತಮೇಲೆ ನರಕದಲ್ಲಿ ಆ ಶಿಕ್ಷೆ ಅನುಭವಿಸುವುದಿಲ್ಲ. ಈ ಎಲ್ಲಾ ಅವಸ್ಥೆಯನ್ನು ಅನುಭವಿಸಿದ ಸೂರ್ಯವಂಶದ ಯಶೋವಂತ ಅರಸನೂ ಸಹ ಸ್ವರ್ಗಕ್ಕೆ ನಡೆದ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Continue Reading

ಬೆಂಗಳೂರು

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Award Ceremony: 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ಡಾ. ಬಿ. ಎಸ್. ಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

VISTARANEWS.COM


on

Award Ceremony
Koo

ಬೆಂಗಳೂರು: ಅ. ನ. ಕೃ. ಪ್ರತಿಷ್ಠಾನ ವತಿಯಿಂದ ಕಾದಂಬರಿ ಸಾರ್ವಭೌಮ ಅ. ನ. ಕೃ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 19ರಂದು ಬೆಳಗ್ಗೆ 10ಗಂಟೆಗೆ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್. ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ಡಾ. ಬಿ. ಎಸ್. ಸ್ವಾಮಿ ಅವರಿಗೆ ಪ್ರದಾನ (Award Ceremony) ಮಾಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರು ರಾಷ್ಟೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾಗಿದ್ದು, ಡಾ. ಬಿ. ಎಸ್. ಸ್ವಾಮಿ ಅವರು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ.

ಪ್ರಜಾವಾಣಿ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, ಲೇಖಕ, ಉಪನ್ಯಾಸಕ ಡಾ. ಬಂಡ್ಲಹಳ್ಳಿ ವಿಜಯಕುಮಾ‌ರ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಇದನ್ನೂ ಓದಿ | ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ಡಾ. ಕೆ.ಆರ್. ಸಂಧ್ಯಾರೆಡ್ಡಿ, ಶಾ.ಮಂ. ಕೃಷ್ಣರಾವ್, ಎಂ. ವೆಂಕಟೇಶ್ ಅವರು ಉಪಸ್ಥಿತರಿರಲಿದ್ದು, ಮಾಜಿ ಅಡ್ವೊಕೇಟ್ ಜನರಲ್ ಹಾಗೂ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅ. ನ. ಕೃ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಗೌತಮ್ ಅ. ನ. ಕೃ, ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿರಲಿದ್ದಾರೆ.

2022ರ ಪ್ರಶಸ್ತಿ ಪುರಸ್ಕೃತರು: ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ

ಆರೂವರೆ ದಶಕಗಳ ಕಾಲ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಮಾಜಕಾರ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಎಸ್. ಆರ್. ರಾಮಸ್ವಾಮಿ ಅವರು (ಜನನ: 29-10-1937) ಕಳೆದ 45 ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆ ಮತ್ತು ‘ರಾಷ್ಟ್ರೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರಾಗಿದ್ದಾರೆ.

ಸುಭಾಷ್‌ಚಂದ್ರ ಬೋಸ್ ಅವರ ಸಮಗ್ರ ಜೀವನಚರಿತ್ರೆ ‘ಕೋಲ್ಮಿಂಚು’ ಜಯಪ್ರಕಾಶ್ ನಾರಾಯಣ್ ವಲ್ಲಭಭಾಯಿ ಪಟೇಲ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಭಗಿನಿ ನಿವೇದಿತಾ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಜೀವನಚರಿತ್ರೆಗಳೂ ಸೇರಿ ಸುಮಾರು 60 ಗ್ರಂಥಗಳನ್ನು ಬರೆದಿದ್ದಾರೆ. ‘ಭಾರತದಲ್ಲಿ ಸಮಾಜಕಾರ್ಯ’, ‘ಸ್ವಾತಂತ್ರ್ಯೋದಯದ ಮೈಲಿಗಲ್ಲುಗಳು’ ಮೊದಲಾದ ಹಲವಾರು ಪ್ರತಿಷ್ಠಿತ ಕೃತಿಗಳಿಗೆ ವಿಸ್ತತ ಸ್ವತಂತ್ರ ಅವಲೋಕನ ಪ್ರಬಂಧಗಳನ್ನು ಬರೆದು ಸಂಪಾದನ ಮಾಡಿದ್ದಾರೆ.

ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮ ಮಾಡಿರುವ ಇವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ ಅರ್ಥಶಾಸ್ತ್ರ ಕ್ಷೇತ್ರದ ಒಂದು ಉನ್ನತ ಕೃತಿಯೆಂದು ಪರಿಗಣಿತವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಅರ್ಥಿಕ ಯೋಜನೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿರುವ ರಾಮಸ್ವಾಮಿಯವರ ‘ಶತಮಾನದ ತಿರುವಿನಲ್ಲಿ ಭಾರತ’ ಸಮಾಜವಿಜ್ಞಾನ ಕ್ಷೇತ್ರದ ಆ ವರ್ಷದ ಶ್ರೇಷ್ಠ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಬ್ರಿಟಿಷ್-ಪೂರ್ವ ಭಾರತದ ಉನ್ನತ ಸ್ಥಿತಿ ಕುರಿತ ಖ್ಯಾತ ಸಂಶೋಧಕ ಧರ್ಮಪಾಲ್ ಅವರ ಕೃತಿಗಳನ್ನು ಇವರು ಕನ್ನಡಕ್ಕೆ ಪರಿಚಯಿಸಿದ್ದಾರೆ. ಸ್ವದೇಶೀ ಚಿಂತನೆಯ ಪ್ರತಿಪಾದಕಗಳಾದ ಇವರ ಹಲವಾರು ಕೃತಿಗಳು ಪಥದರ್ಶಕವೆನಿಸಿವೆ.

ಅನೇಕ ಹಿರಿಯ ಸಾಹಿತಿಗಳ ಒಡನಾಟದಲ್ಲಿದ್ದ ರಾಮಸ್ವಾಮಿಯವರು, ಡಿ.ವಿ.ಗುಂಡಪ್ಪ, ಸೀತಾರಾಮಯ್ಯ, ರಾಕ್ಲಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರಿ, ತಿ. ತಾ. ಶರ್ಮ, ಪಿ. ಕೋದಂಡರಾವ್, ತೋಟಗಾರಿಕೆ ಋಷಿ ಎಂ. ಎಚ್. ಮರಿಗೌಡ ಮೊದಲಾದ ಧೀಮಂತರನ್ನು ಕುರಿತು ಬರೆದ ‘ದೀವಟಿಗೆಗಳು’, ‘ದೀಪ್ತಿಮಂತರು’ ಮತ್ತು ‘ದೀಪ್ತಶೃಂಗಗಳು’ – ಇವು ಅನುಪಮ ವ್ಯಕ್ತಿಚಿತ್ರಮಾಲಿಕೆಗಳಾಗಿವೆ. ಈಗಿನ ಜಗದ್‌ವ್ಯಾಪಿ ತುಮುಲಗಳ ಬೇರುಗಳಿರುವುದು ಎರಡು ಭಿನ್ನ ಜೀವನದೃಷ್ಟಿಗಳಲ್ಲಿ – ಎಂದು ಅವರ ‘ನಾಗರಿಕತೆಗಳ ಸಂಘರ್ಷ’ ಕೃತಿ ಪ್ರತಿಪಾದಿಸಿದೆ. ಅವರ ‘ಕೆಲವು ಇತಿಹಾಸ-ಪರ್ವಗಳು’ ಮತ್ತು ‘ಮರೆಯಬಾರದ ಇತಿಹಾಸಾಧ್ಯಾಯಗಳು’ ಮೈಲಿಗಲ್ಲುಗಳೆಂದು ಅಂಕಿತಗೊಂಡಿರುವ ಕೆಲವು ಇತಿಹಾಸ ಘಟನಾಸರಣಿಗಳ ಪರಾಮರ್ಶನೆಯಾಗಿವೆ. ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ರಾಜಾ ರಾಮಮೋಹನರಾಯ್ ಅವರಿಂದ ಜಯಪ್ರಕಾಶ ನಾರಾಯಣ್ ವರೆಗಿನ ಹತ್ತಾರು ಮಹನೀಯರ ಜೀವಿತಕಥನಗಳು `ನವೋತ್ಥಾನದ ಅಧ್ವರ್ಯುಗಳು’ ಮತ್ತು ‘ಹಲವರು ರಾಷ್ಟ್ರಾರಾಧಕರು’. ರಾಮಸ್ವಾಮಿಯವರ ‘ಕವಳಿಗೆ’ ಮತ್ತು ‘ಸಾಹಿತ್ಯ ಸಾನ್ನಿಹಿತ್ಯ ಉನ್ನತಮಟ್ಟದ ಸಾಹಿತ್ಯ ಪರಾಮರ್ಶಕ ಕೃತಿಗಳಾಗಿವೆ. ರಾಮಸ್ವಾಮಿಯವರು ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ 2000ಕ್ಕೂ ಹೆಚ್ಚು ಅಧ್ಯಯನಪೂರ್ಣ ಲೇಖನಗಳನ್ನು ಬರೆದಿದ್ದಾರೆ.

ಪತ್ರಿಕೋದ್ಯಮ ಸೇವೆಗಾಗಿ 2006ರಲ್ಲಿ ಇವರಿಗೆ ‘ಆರ್ಯಭಟ ಪ್ರಶಸ್ತಿ’ ದೊರೆತಿದೆ. ಸಾಹಿತ್ಯಸೇವೆಗಾಗಿ 2008ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಇವರಿಗೆ ದೊರೆತಿದೆ. 2011ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇವರ ಸುದೀರ್ಘ ಸಾಹಿತ್ಯಸೇವೆಗಾಗಿ ಗೌರವಾರ್ಥ ಡಾಕ್ಟರೇಟ್ ನೀಡಿದೆ. ದೀರ್ಘ ಪತ್ರಿಕೋದ್ಯಮ ಸೇವೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ‘ವರ್ಷದ ಶ್ರೇಷ್ಠ ವ್ಯಕ್ತಿ’ ಸಮ್ಮಾನ ದೊರೆತಿದೆ (2012). ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳ ಜೀವಮಾನ ಸಾಧನೆಗಾಗಿ 2015ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪದವಿಯನ್ನು ಇವರಿಗೆ ನೀಡಲಾಗಿದೆ. ಕರ್ನಾಟಕ ಸರಕಾರವು 2022-23ರ ‘ಪಂಪಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

2023ರ ಪ್ರಶಸ್ತಿ ಪುರಸ್ಕೃತರು : ಡಾ. ಬಿ. ಎಸ್. ಸ್ವಾಮಿ

ಬಿ. ಸಿದ್ಧಲಿಂಗ ಸ್ವಾಮಿಯವರು ಮೂಲತಃ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯವರು. ವಿ. ಬಸವಲಿಂಗಪ್ಪ – ಶಿವನಾಗಮ್ಮ ದಂಪತಿಯ ಸುಪುತ್ರರಾದ ಇವರು ಎಂ. ಎ., ಪಿಎಚ್. ಡಿ. ಪದವೀಧರರು. ಐದು ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಇಪ್ಪತ್ತು ವರ್ಷ ಕಾರ್ಯನಿರ್ವಹಿಸಿ ಅನಂತರ ಗುಲ್ಬರ್ಗ, ಬೆಂಗಳೂರು, ಮಂಗಳೂರು ಬಾನುಲಿಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಹದಿನಾಲ್ಕು ವರ್ಷ ದುಡಿದು ನಿವೃತ್ತರಾದರು.

ಬಾನುಲಿಯ ಸುದೀರ್ಘ ಸೇವೆಯಲ್ಲಿ ಇವರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಪ್ರತಿಭಾವಂತರನ್ನು ಹುಡುಕಿ ಅವರನ್ನು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿ ಜನಾನುರಾಗಿಯಾದರು.
1967ರಲ್ಲಿ ಇವರ ಮೊದಲ ಕವನಸಂಗ್ರಹ ‘ಅಮೃತ’ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಆರು ದಶಕ ಲೇಖನಿಯನ್ನು ಕೆಳಗಿಡದೆ ಒಂದೇ ಸಮನೆ ಬರೆಯುತ್ತ ಸುಮಾರು ನಾಲ್ಕುನೂರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ‘ಕಲಿ ಭಾರತ’, ‘ಅಲ್ಲಮಪ್ರಭು’, ‘ಅಕ್ಕಮಹಾದೇವಿ’, ‘ಬಸವಣ್ಣ’ ಮಹಾಕಾವ್ಯಗಳೂ, ‘ಬೆಂಕಿಯಲ್ಲಿ ಅರಳಿದ ಹೂವು’ ನಂತಹ ಆತ್ಮಕಥನವೂ ಸೇರಿದೆ.

ಇವರ ಸಾಹಿತ್ಯಸೃಷ್ಟಿಗೆ ಯಾವ ಸರಹದ್ದುಗಳೂ ಇಲ್ಲ. ಕಥೆ, ಕಾದಂಬರಿ, ಕವನ, ನಾಟಕ, ರೂಪಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಸಂಪಾದನೆ, ವೈಚಾಲಕ, ಹಾಸ್ಯ, ಜಾನಪದ, ಪ್ರವಾಸಕಥನ, ಜೀವನ ಚರಿತ್ರೆ, ವಚನಸಾಹಿತ್ಯ, ದಾಸಸಾಹಿತ್ಯ, ಮಕ್ಕಳ ಸಾಹಿತ್ಯ, ಬಿಡಿ ಬರೆಹಗಳು – ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದಾರೆ. ಅನೇಕ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳನ್ನು ಬರೆದ ಕೈಗಳಿಂದಲೇ ಜಾನಪದ ಸಾಹಿತ್ಯಚರಿತ್ರೆಯ ಹದಿನೈದು ಸಂಪುಟಗಳು, ಮಲೆ ಮಾದೇಶ್ವರ ಕಾವ್ಯ ಸಂಪಾದನೆ ಮಾಡಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕ್ಷೇತ್ರಕಾರ್ಯ, ಸಂಪಾದನೆ, ವಿಶ್ಲೇಷಣ, ಸಂಗ್ರಹ ಮಾಡಿದ್ದಾರೆ. ಶಿಷ್ಟಸಾಹಿತ್ಯದಲ್ಲಿ ಡಾ. ಸ್ವಾಮಿಯವರ ಕೊಡುಗೆ ಸಣ್ಣದಲ್ಲ. ಕಾಳಿದಾಸನ ಸಾಹಿತ್ಯದ ಕುರಿತು ಬರೆಯಬಲ್ಲ ಡಾ. ಸ್ವಾಮಿಯವರು ಸೂರದಾಸನ ಸಾಹಿತ್ಯದ ಬಗೆಗೂ ಬರೆಯಬಲ್ಲರು. ಹರಿದಾಸ ಪರಂಪರೆಯ ಕುರಿತು ಹಲವು ವರ್ಷ ಸಂಶೋಧನೆ ಮಾಡಿ ಒಂದು ಬೃಹತ್ ಗ್ರಂಥ ಪ್ರಕಟಿಸಿದ್ದಾರೆ. ಅದಕ್ಕಾಗಿ ಅವರು ಊರೂರು ಅಲೆದು ಹಲಕಥಾಕಾರರನ್ನು ಸಂದರ್ಶಿಸಿ, ವಾಚನಾಲಯಗಳಲ್ಲಿ ತಿಂಗಳುಗಟ್ಟಲೆ ಕುಳಿತು ಸಂಶೋಧನೆ ಮಾಡಿದ್ದಾರೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ಇವರ ಸಾಹಿತ್ಯಸೇವೆಯನ್ನು ಗಮನಿಸಿ ಕನ್ನಡಿಗರು ಅವರಿಗೆ ‘ಮಧುವೃತ’ ಎಂಬ ಗೌರವಗ್ರಂಥ ಅರ್ಪಿಸಿದ್ದಾರೆ.
ಇವರ ‘ಕವಿಚಕ್ರೇಶ್ವರ’ ಕಾದಂಬರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ(1974), ‘ಜಾನಪದ ಕಥಾಸಂಗಮ’ಕ್ಕೆ ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯ ಬಹುಮಾನ(1987), ‘ಮಹಾಜ್ಯೋತಿ ಮಾದೇಶ್ವರ’ ಕೃತಿಗೆ ಮುದ್ದಣ- ರತ್ನಾಕರವರ್ಣಿ ಪ್ರಶಸ್ತಿ, ‘ಜಾನಪದ ಸೌರಭ’, ಅಕ್ಕಮ್ಮ ಗಿರಿಗೌಡ ರುದ್ರಪ್ಪ ಪ್ರಶಸ್ತಿ (1996), ‘ತುಳುನಾಡ ಐಸಿರಿ’ಗೆ ಗೊರೂರು ಪ್ರತಿಷ್ಠಾನದ ಪ್ರಶಸ್ತಿ (1997), ಕದಂಬೋತ್ಸವದಲ್ಲಿ ಅಭಿನಂದನೆ(1998), ‘ಸಮಗ್ರ ನಾಟಕಗಳು’ಗೆ ಆರ್ಯಭಟ ಪ್ರಶಸ್ತಿ, ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ(2002), ‘ನಾಟಕ ರೂಪಕ’ ಕೃತಿಗೆ ಅತ್ತಿಮಬ್ಬೆ ಸಾಹಿತ್ಯಪ್ರತಿಷ್ಠಾನದ ಪ್ರಶಸ್ತಿ, ‘ಜಾನಪದಶ್ರೀ’ಗೆ ಕರ್ನಾಟಕ ಜಾನಪದ ಅಕಾಡೆಮಿ ಬಹುಮಾನ, ಇಂಥ ಅನೇಕ ಸಂಘಸಂಸ್ಥೆಗಳ ಬಹುಮಾನಗಳು, ಪ್ರಶಸ್ತಿಗಳು ಇವರಿಗೆ ಸಂದಿವೆ.

Continue Reading
Advertisement
Mobile
ದೇಶ2 hours ago

ಪರೀಕ್ಷೆಗೆ ಓದುವುದು ಬಿಟ್ಟು ಮೊಬೈಲ್‌ನಲ್ಲೇ ತಲ್ಲೀನ; 22 ವರ್ಷದ ಮಗಳನ್ನೇ ಕೊಂದ ತಾಯಿ

Rameshwaram Cafe Blast
ಕರ್ನಾಟಕ2 hours ago

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಹುಬ್ಬಳ್ಳಿಯಲ್ಲಿ ಇಬ್ಬರು ಎನ್‌ಐಎ ವಶಕ್ಕೆ

LPL 2024
ಪ್ರಮುಖ ಸುದ್ದಿ2 hours ago

LPL 2024 : ಐಪಿಎಲ್ ಎಫೆಕ್ಟ್​, ಸಿಕ್ಕಾಪಟ್ಟೆ ದುಡ್ಡು ಬಾಚಿದ ಮಹೀಶ್ ಪತಿರಾನಾ

Porsche
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

Hajj pilgrimage
ಬೆಂಗಳೂರು2 hours ago

Hajj Pilgrimage: ಹಜ್ ಯಾತ್ರಿಗಳನ್ನು ಬೀಳ್ಕೊಟ್ಟ ಸಿಎಂ ಸಿದ್ದರಾಮಯ್ಯ; ಹಜ್ ಭವನ ನಿರ್ಮಾಣಕ್ಕೆ ಅನುದಾನ

IPL 2024
ಕ್ರೀಡೆ2 hours ago

IPL 2024 : ಕೆಕೆಆರ್​ 4ನೇ ಬಾರಿ ಐಪಿಎಲ್​​ನ​ ಫೈನಲ್​ಗೆ, ಎಸ್ಆರ್​ಎಚ್​ಗೆ ಇನ್ನೊಂದು ಅವಕಾಶ

Robert Vadra
ದೇಶ3 hours ago

Robert Vadra: ಸ್ವಂತ ಬಲದಿಂದ ರಾಜಕೀಯಕ್ಕೆ ಬರುವೆ, ಗಾಂಧಿ ಹೆಸರು ಬಳಸಲ್ಲ; ರಾಬರ್ಟ್‌ ವಾದ್ರಾ ಶಪಥ!

IPL 2024
ಕ್ರೀಡೆ3 hours ago

IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

Talking Digital Safety for Teens programme by Meta in Bengaluru
ಕರ್ನಾಟಕ3 hours ago

Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

MLC Election North East Graduates Constituency Election Prohibitory order imposed in Vijayanagar district from June 1
ವಿಜಯನಗರ3 hours ago

MLC Election: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ವಿಜಯನಗರ ಜಿಲ್ಲೆಯಲ್ಲಿ ಜೂ.1ರಿಂದ ನಿಷೇಧಾಜ್ಞೆ ಜಾರಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ8 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು13 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು14 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌