ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಉರಿವ ರಾತ್ರಿ ಸುರಿದ ಮಳೆ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಉರಿವ ರಾತ್ರಿ ಸುರಿದ ಮಳೆ

ಎರಡು ಬೇರೆ ಬೇರೆ ಜೀವಗಳು ಒಂದೇ ಹಸಿರು ಸೀಮೆಯ ವಿಶಾಲವಾದ ತೊಟ್ಟಿಮನೆಯಲ್ಲಿ ಮತ್ತು ಅದರಿಂದಾಚಿನ 100 ಮೀಟರ್ ದೂರದ ತುದೀ ಲೈನ್‍ಮನೆಯಲ್ಲಿ ಏದುಸಿರೆಳೆದುಕೊಳ್ಳುತ್ತ ಮತ್ತೆರಡು ಬೇರೆ ಬೇರೆ ಅತೃಪ್ತ ಜೀವಗಳಿಗೆ ಬೆನ್ನು ಹಾಕಿ ಮಲಗುತ್ತಿದ್ದವು.

VISTARANEWS.COM


on

uriva ratri surida male story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
bhavya naveen story writer

:: ಡಾ. ಹೆಚ್.ಸಿ. ಭವ್ಯ ನವೀನ್

ಇಷ್ಟೊಂದು ಸುಡು ಹಗಲಿನಲ್ಲು ಕತ್ತಲಿಗಿಂತ ಹೆಚ್ಚು ಗವ್ವೆನ್ನುವ ಆ ನಿರ್ಜನ ಕಾಡು ದಾರಿಯಲ್ಲಿ ಕೆಟ್ಟು ನಿಂತ ಬೈಕಿಗೆ ಒದ್ದು ಒಬ್ಬಂಟಿಯಾಗಿ ಬಿರುಸಾಗಿ ನಡೆದುಕೊಂಡು ಬರುತ್ತಿದ್ದ ಸೂರಿ ಸಂಜೆಯಾಗುವ ಮೊದಲು ಮನೆ ತಲುಪಿ ಚಂದನೆ ಹೆಂಡತಿಯ ಸೇರಿಕೊಳ್ಳುವ ಆತುರದಲ್ಲಿದ್ದ. ಇನ್ನೂ ತಿಂಗಳೂ ತುಂಬದ ಮದುವೆ ಶಾಸ್ತ್ರದ ಯಾವ ಗುಂಗೂ ಉಳಿಸಿಕೊಳ್ಳದೆ ತನ್ನ ಪಾಡಿಗೆ ತಾನು ಗುಡ್ಡದ ಒಂಟಿ ಮನೆಯಲ್ಲಿ ಕೆಂಡದ ಮೇಲಿದ್ದ ಹಾಲಿನ ಕುಡಿಕೆಯ ಇಣುಕಿಣುಕಿ ಇನ್ನೂ ಕೆನೆಕಟ್ಟಿಲ್ಲವಲ್ಲ ಅಂತ ಪೇಚಾಡಿಕೊಳ್ಳುತ್ತಿದ್ದಳು ಪಾರಿ. ಹಜಾರದ ಕಿಟಕಿ ಸರಳುಗಳಿಗೆ ಕಟ್ಟಿದ ಪ್ಲಾಸ್ಟಿಕ್ ಹಾಳೆ ಸಣ್ಣಗೆ ರಪ ರಪ ಸದ್ದು ಮಾಡುತ್ತಿದ್ದುದು ಬಿಟ್ಟರೆ ಇಲ್ಲೇಲ್ಲೋ ಈ ಗುಡ್ಡದ ಮೇಲೆ ಒಂದು ಮನೆ ಇದ್ದೀತು… ಅಲ್ಲಿ ನಾನೆಂಬ ಒಬ್ಬಳು ಹಸೀ ಹಸೀ ಮದುವಣಗಿತ್ತಿ ಯಾರಾದರೂ ಬರಲಿ ತನ್ನ ಗಂಡ ಮಾತ್ರ ಬರುದೂ ಬೇಡ ಅಂತ ವಿಚಿತ್ರ ಸಂಕಟದಲ್ಲಿ ಚೀರಿಕೊಳ್ಳಲೂ ಆಗದೇ ಕೂತಿರುವುದು ಆಕಾಶದಲ್ಲಿ ಸುತ್ತುವ ನಮ್ಮಪ್ಪ ಶಿವಪ್ಪನಿಗೂ ಗೊತ್ತಾಗದೇನೋ ಅಂದುಕೊಳ್ಳುತ್ತ ಅಟ್ಟದ ಕಾಲಿಗೆ ತಲೆಕೊಟ್ಟು ಕೂತಿರುವಾಗಲೇ ಸೂರಿ ಜೋರಾಗಿ ಹಾಡಿಕೊಳ್ಳುತ್ತ ಒಳಗೆ ಬಂದ.‌

ಮುದ್ದುಗರೆಯುತ್ತ ಮಾತಾಡಿ ಪೇಟೆಯಿಂದ ತಂದಿದ್ದ ಬೂದುಗುಂಬಳದ ಹಲ್ವ ತಿನ್ನಿಸಿ, ತನ್ನನ್ನು ಹದಕ್ಕೆ ತರಲು ಎಂದಿನಂತೆ ಮತ್ತೆ ಪ್ರಯತ್ನಿಸಿದ ಅವನ ಅಷ್ಟೂ ಪ್ರೀತಿಗೆ ಬೇಕೋ ಬೇಡವಾ ಅಂತಲೇ ಚೂರು ತುಟಿ ಅಗಲಿಸಿ ನಕ್ಕಳು ಪಾರಿ. ಅಷ್ಟಕ್ಕೇ ಅದೇ ಸೂಚನೆ ಅಂದುಕೊಂಡವನು ಅನಾಮತ್ತು ಅವಳನ್ನೆತ್ತ್ತಿಕೊಂಡು ಹೋಗಿ ಹಾಸಿಗೆ ಮೇಲೆ ಉರುಳು ಹಾಕಿದ. ಇವನೇನು ಕಚ್ಚಿ ಕೊಂದೇ ಬಿಡುತ್ತಾನೇನೋ ಅನ್ನುವ ಭಯದಲ್ಲಿ ಪಾರಿ ಸದ್ದು ಮಾಡದೆ ಯಾವ್ಯಾವುದೋ ಭಂಗಿಗಳಲ್ಲಿ ಹಾಸಿಗೆ ಮೇಲೆ ಒದ್ದಾಡುತ್ತಿರುವಾಗಲೇ ಇನ್ನೇನು ಮುಗಿಯಿತು ಅಂತ ಸೂರಿ ಪಕ್ಕಕ್ಕೊರಳಿಕೊಂಡ. ಅವಳು ಸಣ್ಣಗೆ ನರಳುವ ದನಿಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಬಟ್ಟೆ ಆರಿಸಿಕೊಂಡು ಎದ್ದಳು. ‘ಅಲ್ವೆ, ಸತ್ತನಾಯಿ ಹಂಗೆ….’ ಮುಂದೆ ಏನೋ ಹೇಳಲು ಹೊರಟವನು ಮುಂಗೈ ಚುಚ್ಚಿದ ಬಳೆಚೂರು ಹಿಡಿದು ಕಿಟಕಿಯ ಆಚೆ ತೂರುವಷ್ಟರಲ್ಲಿ ಪಾರಿ ಬಚ್ಚಲಿನಲ್ಲಿ ಒಂದೇ ಸಮನೆ ನೀರು ಸುರುವಿಕೊಳ್ಳುತ್ತಿದ್ದಳು.


ಪಾರಿ.. ಪಾರಿಜಾತ.. ಹಾಸನಕ್ಕೆ ಮದುವೆ ಮಾಡಿಕೊಟ್ಟಿದ್ದ ಅಕ್ಕನ ಮನೆಯಲ್ಲೇ ಉಳಿದು ಚೆನ್ನಾಗೇ ಕಾಲೇಜು ಓದಿಕೊಂಡವಳು. ಪಾರಿ ಓದಿದ್ದು ಹುಡುಗಿಯರ ಕಾಲೇಜಿನಲ್ಲೇ ಆದರೂ ಅಲ್ಲಿ ಗಂಡುಡುಗರ ಗದ್ದಲ ಇಲ್ಲದೇನಿರಲಿಲ್ಲ. ಕ್ಯಾಂಪಸ್ಸಿನ ಒಳಗಿಂದ ಒಂದು, ಗೇಟಿನ ಹೊರಗಿಂದ ಒಂದು ಅಂತ ಕ್ಯಾಂಟೀನಿಗೆ ಎರಡು ಬಾಗಿಲಿದ್ದರೆ, ಜೆರಾಕ್ಸ್ ಅಂಗಡಿ ಹಿಂಗಡೆ ಬಾಗಿಲು ಸೇರಿ ಒಂದು ಕಾಲೇಜಿಗಿದ್ದ ಮೂರು ಬಾಗಿಲಲ್ಲಿ ಹುಡುಗರು ಹಾಯಾಗಿ ಓಡಾಡಿಕೊಂಡಿದ್ದರು. ಕಾಲೇಜಿನ ಶುರುವಲ್ಲೇ ಇದ್ದ ಕ್ಯಾಂಟೀನನ್ನು ತಾಗಿಯೇ ಆಚೆ ಹೋಗಬೇಕಿದ್ದ ಹುಡುಗಿಯರ ಕಣ್ಣಿಗೆ ಹುಡುಗರು, ಹುಡುಗರ ಕಣ್ಣಿಗೆ ಹುಡುಗಿಯರು ಅನಾಯಾಸವಾಗಿ ಕನೆಕ್ಟ್ ಆಗುತ್ತಿದ್ದರು. ಹಾಗೇ.. ಬೆಳ್ಳನೆ ಅಯಸ್ಕಾಂತದಂತಿದ್ದ ಪಾರಿಯ ಪ್ರಭಾವಲಯದ ಸುತ್ತ ಅಭಿಮಾನಿ ಹುಡುಗರ ದಂಡೇ ಇರುತ್ತಿತ್ತು. ಅಲ್ಲಿ ಪೋಲಿ ರೋಮಿಯೋಗಳಿಂದ ಹಿಡಿದು, ಚಂದದ- ಬುದ್ಧಿವಂತ- ನಿಯತ್ತಾದ ಪ್ರೇಮಿಗಳೂ ಇದ್ದರೆನ್ನಿ. ಪಾರಿ ಮಾತ್ರ ಆ ಕಡೆಗೆ ಸಂಬಂಧವೇ ಇಲ್ಲ ಅನ್ನಿಸುವಂತೆ ನೇರ ರಸ್ತೆ ನೋಡುತ್ತಾ ಹೊರಟರೆ ಮುಗೀತು. ಕಡೆವರೆಗೂ ಅವಳ ತಪಸ್ಸನ್ನು ಯಾರೂ ಮುರಿಯಲಾಗಲಿಲ್ಲ ಅಂತ ಅವಳ ಗೆಳತಿಯರು ಮಾತಾಡಿಕೊಳ್ಳುತ್ತಿದ್ದರು. ಅದೆಲ್ಲಾ ಪಾರಿಯ ಕಿವಿಗೆ ಬಿದ್ದಾಗ ಪಾರಿ ಉದಾಸೀನದಿಂದ ನಕ್ಕು ಸುಮ್ಮನಾಗುತ್ತಿದ್ದಳು.

ಹಾಗಂತ ಪಾರಿಗೆ ಅವಳ ಹಿಂದೆ ಬಿದ್ದಿದ್ದ ಹುಡುಗರ ಮೇಲೆ ಪ್ರಜ್ಞೆಯೇ ಇರಲಿಲ್ಲ ಅಂತೇನಿಲ್ಲ. ಅವಳ ಹಿಂದೆ ಬಿದ್ದಿದ್ದ ಪೋಲಿ ಅರುಣ, ಜೆರಾಕ್ಸ್ ಅಂಗಡಿ ಓನರ್ ‘ಒಳ್ಳೆ ಹುಡ್ಗ ರಮೇಶ’, ಕ್ಯಾಂಟೀನಿನ ಮೂಲೆ ಹಿಡಿದು ಕೂತಿರುತ್ತಿದ್ದ ಕ್ಯಾಶಿಯರ್ ಪರಮ, ಕಾಲೇಜಿನ ಎದುರುಗಡೆ ಏರ್‌ಟೆಲ್ ಸರ್ವೀಸ್ ಸೆಂಟರಿನ ಮ್ಯಾನೇಜರ್ ಸಂದೇಶ ಎಲ್ಲರ ಹೆಸರು ಮತ್ತು ಉದ್ದೇಶಗಳು ಪಾರಿಗೆ ಗೊತ್ತಿತ್ತು. ಕಾಲೇಜಿಗೆ ಹೊಸದಾಗಿ ಅಪಾಂಯ್ಟ್ ಆಗಿ ಬಂದಿದ್ದ ಸೋಷಿಯಾಲಜಿ ಸರ್ ಇವಳೆಂದರೆ ವಿಶೇಷ ಕಾಳಜಿ ತೋರಿಸುತ್ತಿದ್ದುದನ್ನೂ ಪಾರಿ ಶುರುವೀಗೆ ಗೊತ್ತುಮಾಡಿಕೊಂಡಿದ್ದಳು. ವಯಸ್ಸಲ್ಲವಾ.. ಆಗೀಗೇನಾದರೂ ಕನಸಿನಲ್ಲಿ ಕಾಲೇಜಿನ ದಂಡು ಬಂದರೆ ಅದರಲ್ಲಿ ಗಡ್ಡ-ಮೀಸೆ ಕ್ಲೀನ್ ಶೇವ್ ಮಾಡಿಕೊಂಡು ತೆಳ್ಳಗೆ ಬೆಳ್ಳಗೆ ಇದ್ದ ಸಂದೇಶನೊಟ್ಟಿಗೆ ಮಾತ್ರ ಪಾರಿ ನಗುತ್ತಾ ಮಾತಿಗೆ ಕೂತಂತೆ ಕೂತಿರುತ್ತಿದ್ದಳು. ಅದೇ ನಿದ್ದೆಯೊಡೆದು ಎದ್ದಾಗ ಕನಸಿಗೆ ಕನಸೇ ಮರೆತು ಮತ್ತೆ ಎಲ್ಲರ ಮೇಲೂ ಎಂದಿನ ಉದ್ದೇಶಿತ ಉದಾಸೀನ ಅವಳದ್ದು.
ಹೆಚ್ಚೆಂದರೆ ಪಾರಿ ಅವಳ ಶರೂ ಬಾವನನ್ನಷ್ಟೇ ಮಾತಾಡಿಸುತ್ತಿದ್ದದ್ದಾ ಅಂತ. ಅಪ್ಪ-ಅಮ್ಮ ಇಬ್ಬರೂ ಇಲ್ಲದ ಪಾರಿಯನ್ನ ಅವಳಕ್ಕ ತಾರಿಣಿ, ಬಾವ ಶರತ ಹಳ್ಳಿಯಿಂದ ಹಾಸನದ ಮನೆಗೆ ತಂದಿಟ್ಟುಕೊಂಡ ನಾಲ್ಕೈದು ವರ್ಷದಲ್ಲಿ ಈಗೀಗ ಬಾವನ ಜೊತೆ ಅರ್ಧ ಇಂಚಿನ ಸ್ಮೈಲು ಕೊಡುವುದನ್ನು ರೂಢಿಸಿಕೊಂಡಿರುವುದು ಪಾರಿ ಅಕ್ಕ ತಾರಿಣಿಗೂ, ಶರತನಿಗೂ ಸಮಾಧಾನ. ಮೊದಲೆಲ್ಲ ಅವಳು ಶರತನ ಕಾಳಜಿಯ ಸ್ಪರ್ಶಕ್ಕೂ ಹಾವು ಕಂಡವಳಂತೆ ಮಿಡುಕಿ ಹಿಂದೆ ಸರಿಯುತ್ತಿದ್ದಾಗ ಶರತನಿಗಿಂತ ತಾರಿಣಿಗೇ ವಿಪರೀತ ಸಿಟ್ಟು ಬರುತ್ತಿತ್ತು. ಶರತ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಮನುಷ್ಯ. ಪಾರಿಯನ್ನು ತಂಗಿಯಂತೆ ಸಲಿಗೆಯಿಂದಲೂ, ನಾದಿನಿ ಅಂತ ಕಾಳಜಿಯಿಂದಲೂ ನೋಡಿಕೊಂಡ ಮೇಲೆ ಪಾರಿ ಈಗ ಸ್ವಲ್ಪ ಹದಕ್ಕೆ ಬಂದಿದ್ದಾಳೆ, ಅದೇ ಅರ್ಧ ಇಂಚಿನ ಸ್ಮೈಲು ಕೊಡುವಷ್ಟು. ವಿಷಯ ಏನೆಂದರೆ, ಮೊದಲಿಂದಲೂ ಪಾರಿಗೆ ಗಂಡು ದೇಹದ ಗಂಧದ ಮೇಲೂ ವಿಚಿತ್ರ ಭಯ. ಹಾಗೇನಾದರೂ ಯಾರಾದರೂ ಹತ್ತಿರತ್ತಿರ ಬಂದರೆ ಪಟಕ್ಕನೆ ಅವಳ ಎದೆ ಸೀಳಿನ ಮಧ್ಯೆ ಗಂಟು ಗಂಟಾಗಿ ಉಳಿದುಹೋಗಿದ್ದ ಬಳೆಗಾಜಿನ ಗೀರುಗಾಯದ ಕಲೆ ಇದ್ದಕ್ಕಿದ್ದ ಹಾಗೆ ಹಸಿಯಾಗಿಬಿಡುತ್ತಿತ್ತು… ಆಗ ಭಯಂಕರ ನೋವಿನಿಂದ ಮುಖ ಕಿವುಚುತಿದ್ದಳು.
ಹಾಲಿನ ದಿವಾನಿನ ಮೇಲೆ ಒಂಟಿಯಾಗಿ ಮಲಗುತ್ತಿದ್ದ ಎಳೇ ಯೌವ್ವನದ ಹುಡುಗಿ ಪಾರಿಗೆ ಅಕ್ಕಬಾವನ ರೂಮಿಂದ ಬರುತ್ತಿದ್ದ ಮಂಚದ ಕರ್‌ಕಿರ್ ಶಬ್ದ, ಸಿನಿಮಾದ ಪ್ರಣಯ ಪ್ರಸಂಗಗಳು ಪ್ರೀತಿಯ, ಮಾಧುರ್ಯದ ಆಸೆ ಹುಟ್ಟಿಸೇ ಇಲ್ಲ ಎಂದರೆ ಸುಳ್ಳಾದೀತು. ಆದರೆ ಅದೊಂದು ಗೀರುಗಾಯದ ಕಲೆ ಸದಾ ಅವಳನ್ನು ಕಟ್ಟಿಹಾಕುತ್ತಿತ್ತು. ಅದೂ ಬೇಡ, ಇದೂ ಬೇಡ.. ಮದುವೆಯ ಗೊಡವೆಯೇ ಬೇಡ ಅಂತಿದ್ದ ಕೆಂಪು ಕೆಂಪಾಗಿ ಮೈ ಕೈ ತುಂಬಿಕೊಂಡಿದ್ದ ಪಾರಿಯನ್ನು ಒಬ್ಬನೇ ಮಗ, ಎಂಟೆಕೆರೆ ಕಾಫಿ ತೋಟ, ಅತ್ತೆ ಮಾವನ ಕಾಟವಿಲ್ಲಾಂತ ಹೇಳಿ ಸೂರಿಗೆ ಗಂಟು ಬೀಳಿಸಿದ್ದರು. ಯಾವುದೋ ಕನಸುಗಳ ಮಧ್ಯೆ ಹೇಗೋ ಹಂಗಿಂಗಿದ್ದ ಪಾರಿಜಾತ ಸುರೇಶನ ಹೆಂಡತಿಯಾಗಿ ಮಲೆನಾಡಿನ ಈ ಒಂಟಿ ಮನೆಗೆ ಬಂದು ಬಿದ್ದದ್ದೂ ಒಂದು ಕನಸಾಗಬಾರದಾ ಅಂತ ಪಾರಿ ಈ ಒಂದು ತಿಂಗಳಿಂದ ದೇವರಿಗೆ ಪ್ರತಿ ಹೂವಿಡುವುದಕ್ಕೆ ಮುಂಚೆಯೂ ಬೇಡಿಕೊಳ್ಳುತ್ತಿದ್ದಳು.


ಅಮ್ಮಾರೇ, ಸೂರಪ್ಪಗೌಡರು ಕೊಟ್ಟುಕಳಿಸಿದ್ರು ಅಂತ ದೊಡ್ಡ ಹಲಸಿನ ಹಣ್ಣು ಹೊತ್ತುಕೊಂಡು ಬಂದ ಚನ್ನ. ಪಾರಿ ಹೊರಗೆ ಬಂದವಳೆ ಚನ್ನನನ್ನು ನೋಡಿ ಕಾಫಿ ಕೊಡಲಾ ಅಂದಳು. ‘ಕಾಪಿ ಗೀಪಿ ಬ್ಯಾಡ್ರ’ ಅಂತ ರಾಗವಾಗಿ ನುಲಿದ ಚನ್ನನನ್ನು ನೋಡಿ ಪಾರಿಗೆ ನಗುಬಂತು. ಇಂಥ ನಗುವೆಲ್ಲ ನನಗೆ ಅಭ್ಯಾಸ ಅನ್ನುವ ಹಾಗೆ ಅವನು ‘ಅಮ್ಮಾರೇ ನಾನು ಚನ್ನ, ಇಲ್ಲೇ ಇರೋನಿ. ಅಗಾ ಅಲ್‍ಕಾಣೊ ಲೈನ್ ಮನೇಲೀ.. ಏನಾರಾ ಬೇಕಿದ್ರೆ ನೀವು ಕೂ.. ಅನ್ನಿ ಸಾಕು, ನಾ ಓ.. ಅಂತ ಓಡ್ಕಂಡ್ ಬತ್ತಿನಿ’ ಅಂತ ಮಾತಿಗಿಂತಲೂ ರಾಗವಾಗಿ ಲುಂಗಿ ಅಂಚಿಡಿದುಕೊಂಡು ನುಲಿಯುತ್ತಾ ಹೊರಟ. ಆಚೇ ಕಡೆಯಿಂದ ಡರ್ ಡರ್ ಅಂತ ಸದ್ದು ಮಾಡುತ್ತಾ ಬುಲೆಟ್ ಬಂದು ನಿಂತಿತು. ಪಾರಿ ಚನ್ನನ ದಾರಿ ನೋಡುತ್ತಾ ನಗುತ್ತಲೇ ನಿಂತಿದ್ದಳು. ಸೂರಿ ಅದನ್ನು ನೋಡಿದವನೆ ‘ಅವ್ನು ಚನ್ನ, ಒಂಥರಾ ಹೆಣ್ಗ. ಮದ್ವೆಗಂತ ಊರಿಗ್ ಹೋಗಿದ್ದ. ಬಂದ್ನಲ್ಲ.. ಇನ್ನ ಮನೆ ಕೆಲ್ಸ ಏನಿದ್ರೂ ಅವನೇ ನೋಡ್ತಾನೆ’ ಅಂದು ಒಳಗೆ ಕರೆದ. ರಾತ್ರಿಯ ನಿರಾಶೆ ಮತ್ತು ಪಾರಿಯನ್ನು ಬೈದ ಬೇಸರ ಎರಡೂ ಸುರೇಶನನ್ನು ಬಿಡದೇ ಕಾಡುತ್ತಿದ್ದವು. ಪಾರಿ ಮಾತ್ರ ಅದ್ಯಾವುದೂ ತನಗೆ ನೆನಪೇ ಇಲ್ಲ ಅನ್ನುವ ಹಾಗೆ ‘ಅವ್ರಿಗೂ ಮದುವೆ ಆಯ್ತಾ’ ಅಂತ ಕಣ್ಣರಳಿಸಿ ಮುಗ್ಧತೆಯಲ್ಲಿ ಕೇಳಿದಾಗ ಸೂರಿ ‘ಅವ್ರು ಇವ್ರು ಏನ್ ಬೇಡ ಅವ್ನು ಅಂತಾನೇ ಕರಿ. ಬೇಸರ ಕಳೀಲಿಕ್ಕೆ ಮಾತಿಗ್ ಸಿಗದು ಅವ್ನೊಬ್ನೇ ಇಲ್ಲಿ’ ಅಂತೇಳಿ ಯಾವುದೋ ಲೆಕ್ಕ ಬರೆಯುತ್ತಾ ಕೂತ.


‘ಇನ್ನಾದ್ರೂ ಹೀಗೇ ಹೆಂಗಸರಂಗೆ ಸೊಂಟ ಕುಣುಸ್ಕೋತ ನಡೀಬೇಡ’ ಅಂತ ತನ್ನ ಅಕ್ಕನ ಮಗಳು, ಮೊನ್ನೆಯಷ್ಟೇ ಮದುವೆಯಾದ ಹೊಸಾ ಹೆಂಡ್ತಿ ಮಾದೇವಿ ಚನ್ನನಿಗೆ ಮೊದಲ ರಾತ್ರಿಯೇ ಹೇಳಿದ್ದು ಈ ಅಂಗೈ ಅಗಲದ ಮನೆಯ ಸಣ್ಣ ಮೂಲೆಯ ಕೋಣೆ ಅಂದುಕೊಳ್ಳಬಹುದಾದ ಕೋಣೆಯ, ಬಾಗಿಲು ಅಂದುಕೊಂಡ ಬಾಗಿಲಿಂದ ಗೋಡೆ ಅಂದುಕೊಂಡ ಗೋಡೆಯ ಆಚೆಗೆ ಹೋಗಿಬಿಟ್ಟಿತಾ ಅಂತ ಅವನು ಕಣ್ಣಲ್ಲಿ ನೀರು ತುಂಬಿಕೊಂಡು ಅವಮಾನದಿಂದ ನಿಂತಿದ್ದ. ‘ಹೆಂಗಸ್ರಂಗೆ ಅಳ್ಬೇಡ ಮತ್ತೆ’ ಅಂತ ಮಾದೇವಿ ಹೇಳಿದ್ದು ಹುಡುಗಿಯ ರಾಗದ, ಹುಡುಗಿಯ ಹಾವಭಾವದ ಚನ್ನನಿಗಲ್ಲ, ಅವಳು ಯಾವತ್ತೂ ಕಾಣದ ಚನ್ನನ ಗಂಡಸ್ತನದ ಬಗ್ಗೆ ಅಂತ ಅನ್ನಿಸಿದ್ದೇ ತಡ ದುಃಖ, ರೋಷ ಒಟ್ಟೊಟ್ಟಿಗೆ ಬಂದು ಸೇವಂತಿಗೆ, ಗುಲಾಬಿ, ಮಲ್ಲಿಗೆಯನ್ನೆಲ್ಲಾ ತರಿದು ಹಾಕಿದ್ದ ಹೊಸಾ ದಟ್ಟಕ್ಕೆ ಅವಳನ್ನು ತಳ್ಳಿ ತನಗೆ ತಾನೇ ಸಮಾಧಾನವಾಗುವಷ್ಟು ಎರಗಿ ಬಿದ್ದಿದ್ದ ಚನ್ನ. ಮಾವನ ಮೇಲಿನ ಸಲಿಗೆಗೆ ಎಂದಿನಂತೆ ಮಾತಾಡಿದ್ದ ಮಾದೇವಿ ಅದೇ ಸಲಿಗೆಯ ಮುಖದಲ್ಲೇ ನಾನು ದಣಿದೇ ಇಲ್ಲ, ನೀನೇ ಸೋತೆ ಅನ್ನುವ ಹಾಗೇ ಚನ್ನನನ್ನು ನೋಡುತ್ತಲೇ ಇದ್ದಳು. ಚನ್ನ ಮಾತ್ರ ‘ತಾನೂ ಅಪ್ಪಟ ಗಂಡಸು’ ಅನ್ನುವ ಅಹಮ್ಮಿಗೆ ಪೆಟ್ಟಾದವನಂತೆ ಮತ್ತೆ ಅವಳನ್ನು ಆವರಿಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ.


ದಿನಗಳಿಗೇನು? ತಮ್ಮ ಪಾಡಿಗೆ ತಾವು ಮಗ್ಗುಲು ಬದಲಿಸಿಕೊಂಡು ಹೋಗುತ್ತಿರುತ್ತವೆ. ಅಷ್ಟೂ ದಿನಗಳ ಮಗ್ಗುಲಿನಲ್ಲಿ ಸೂರಿಯ ಪ್ರೀತಿಯ ಆಸೆಗಳಿಗಾಗಲಿ, ರಾತ್ರಿಯ ಬಯಕೆಗಳಿಗಾಗಲೀ ಒಗ್ಗಿಕೊಂಡಿರದಿದ್ದರೂ ಪಾರಿ ಮೊದಲಿನ ಹಾಗೆ ಭಯ ಬೀಳುತ್ತಿರಲಿಲ್ಲ. ಹೆಚ್ಚು ಕಡಿಮೆ ಹತ್ತಿರದವರ್ಯಾರೂ ಇಲ್ಲದ ಸೂರಿಯಾದರೂ ಹೆಂಡತಿ ಇನ್ನೂ ಎಳೆಯವಳು, ಹೊಂದಿಕೊಳ್ಳುತ್ತಾಳೆ ಅಂತ ಆಗಾಗ ಅವರಿಸುತ್ತಲೇ ಸುಧಾರಿಸಿಕೊಂಡು ತನ್ನ ಪಾಡಿಗೆ ತಾನು ಉಳಿದು ಹೋಗಿದ್ದು ಪಾರಿಗೆ ನೆಮ್ಮದಿಯಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಚನ್ನನ ಮಾಯದ ಜತೆ ಅವಳಿಗೆ ಖುಷಿ ಕೊಡುತ್ತಿತ್ತು.
ತೀರಾ ಗಂಡಸಾಗಿದ್ದರೂ ಗಂಡಸಿನಂತಿಲ್ಲದ, ಆಸೆಗಣ್ಣಿಲ್ಲದ, ಕಣ್ಣಿಗೆ ಕಣ್ಣಚ್ಚಿ ಮಾತಾಡುವ ಚನ್ನನ ಮೇಲೆ ಪಾರಿಗೆ ವಿಪರೀತ ಅನ್ನುವಷ್ಟು ಸಲಿಗೆ. ಯಾವ ಗಂಡಸಿನ ಮೈ ಗಂಧದ ಮೇಲೆ ಅವಳಿಗೆ ಹೇಸಿಗೆಯಿತ್ತೊ ಅದನ್ನು ಮೀರಿಕೊಳ್ಳಲು ಸೂರಿಯ ಬಯಕೆಯ ತಾಳಿಕೆ-ಬಾಳಿಕೆಯ ಜೊತೆಗಿಂತ ಚನ್ನನ ಈ ನಿರ್ಲಿಪ್ತತೆ ಹೆಚ್ಚು ಅಂತನ್ನಿಸಿ, ನಿಧಾನಕ್ಕೆ ಧ್ಯಾನಸ್ಥಳಾಗಿ ಗಂಡಸಿನ ಲೋಕವನ್ನು, ಗಂಡನನ್ನೂ ಕೊಂಚ ಸಹಾನುಭೂತಿಯಿಂದ ನೋಡುವುದು ಪಾರಿಗೆ ಸಾಧ್ಯವಾಗುತ್ತಿತ್ತು. ಇತ್ತ ಚನ್ನನ ಹೆಂಡತಿ ಮಾದೇವಿಯೂ ಸಿಟ್ಟು, ಬೇಸ್ರದ ಸನ್ಯಾಸೀ ಚನ್ನನ ಸಂಗಕ್ಕಿಂತ ಸೂರಪ್ಪಗೌಡನಂಥ ಆಸೆ ಕಣ್ಣುಗಳು ಎಷ್ಟು ತಂಪು ಅಂತ ಅಂದುಕೊಂಡೇ ಚನ್ನನ ಹೆಂಡತಿಯಾಗಿ ಉಳಿದಿರುವ ಯಾವ ಕಲ್ಪನೆಗಳೂ ಇಲ್ಲದೆ, ಬಯಕೆ-ಬಯಕೆಗಳಿಲ್ಲದ ಅಥವಾ ಹಾಗಂದುಕೊಂಡ ಎರಡು ಬೇರೆ ಬೇರೆ ಜೀವಗಳು ಒಂದೇ ಹಸಿರು ಸೀಮೆಯ ವಿಶಾಲವಾದ ತೊಟ್ಟಿಮನೆಯಲ್ಲಿ ಮತ್ತು ಅದರಿಂದಾಚಿನ 100 ಮೀಟರ್ ದೂರದ ತುದೀ ಲೈನ್‍ಮನೆಯಲ್ಲಿ ಏದುಸಿರೆಳೆದುಕೊಳ್ಳುತ್ತ ಮತ್ತೆರಡು ಬೇರೆ ಬೇರೆ ಅತೃಪ್ತ ಜೀವಗಳಿಗೆ ಬೆನ್ನು ಹಾಕಿ ಮಲಗುತ್ತಿದ್ದವು.


ಈ ಒಂದೇ ದಡದ ಎರಡೂ ಕಡೆ ಎರಡು ಕೆರೆಗಳು ಅನ್ನುವುದು ನಿಜವೋ… ಒಂದೇ ಕೆರೆಯನ್ನು ಇದೊಂದು ದಡ ಎರಡಾಗಿಸಿತು ಅನ್ನುವುದು ನಿಜವೋ ಅಂತ ಪಾರಿ ಅದೊಂದು ದಿನ ಅಲ್ಲೇ ಇಳಿಜಾರಿನಲ್ಲಿ ಬಟ್ಟೆ ಸೆಣೆಯುತ್ತಾ ಕೂತಿದ್ದ ಮಾದೇವಿಗೆ ಹೇಳುವಂತೆ ತನಗೆ ತಾನೇ ಕೇಳುವಂತೆ ಕೂಗಿಕೊಂಡಳು. ಮಾದೇವಿಗೆ ಪಾರಿಯ ಭಾಷೆ ತಿಳಿಯದೆ ಹೂಂಗುಟ್ಟತ್ತಾ ತನ್ನದೇ ಯೋಚನೆಯಲ್ಲಿ ಸೂರಿಯ ಶರ್ಟಿಗೆ ಸೋಪು ಹಚ್ಚುತ್ತಿದ್ದಳು.
ಹೌದಲ್ಲ.. ಬಂಧ ಮತ್ತು ಬಯಕೆ ಎಂಬ ಎರಡು ಕೆರೆಗಳು ನನ್ನ ಗತಕಾಲದ ದಡದ ಬಗ್ಗುಲಿಗಿದೆಯೋ ಅಥವಾ ಪಾರಿಜಾತ ಮತ್ತು ಸೂರಿ ಎಂಬ ಒಂದೇ ವಿಶಾಲವಾದ ಕೆರೆಯು ಅಪನಂಬಿಕೆ, ಕರಾಳ ನೆನಪಿನ ಭಯದಿಂದಾಗಿ ಎರಡಾಗಿದೆಯೋ ಅಂಥ ಪಾರಿ ಯೋಚಿಸುತ್ತಾ ನಿಂತಿದ್ದಳು. ಬದುಕಿನ ಯಾವುದೋ ಒಂದು ಘಳಿಗೆಯಲ್ಲಿ ಒಬ್ಬ ಗಂಡಸಿನ ಬಗ್ಗೆ ಭಯ, ಉದಾಸೀನ, ಜಿಗುಪ್ಸೆಗಳನ್ನೆಲ್ಲಾ ಬೆಳೆಸಿಕೊಂಡು ಬಂದ ನನ್ನಂತಹ ಪಾರಿಜಾತಳಿಗೆ ಮಾತ್ರ ದಡಗಳು ಪ್ರತ್ಯೇಕಿಸಲು ಇದೆ ಅಂತನ್ನಿಸುತ್ತದೆ. ಸೂರಿಯ ಪ್ರಾಮಾಣಿಕ ಪ್ರೀತಿ, ಆಸೆ, ಸಿಟ್ಟುಗಳಿಗಿಂತ ಚನ್ನನ ಮಾತು, ನಡಿಗೆ, ಅವನ ಹೆಣ್ತನದ ಅಸಹಾಯಕ ಲಕ್ಷಣಗಳು ಇಷ್ಟವಾಗುತ್ತವೆ ಅನ್ನುವುದನ್ನು ನಾನಾದರೂ ಹೊರಗೆ ನಿಂತು ಒಪ್ಪಿಕೊಳ್ಳುತ್ತೇನಾ ಅಂತ ಯೋಚಿಸಿ ಪಾರಿ ತಣ್ಣಗೆ ಮತ್ತೆ ಮತ್ತೆ ತಣ್ಣಗಾಗಿಬಿಡುತ್ತಿದ್ದಳು.

ಇನ್ನು, ಹಳ್ಳದ ಹರಿಯುವ ನೀರಿನಲ್ಲಿ ಸೂರಪ್ಪನ ಅಷ್ಟಗಲದ ಶರ್ಟು ಜಾಲಾಡುತ್ತಿದ್ದ ಮಾದೇವಿಗೆ ಬೇರೆಯದೇ ಯೋಚನೆ. ಸೂರಪ್ಪಗೌಡನಂತಹ ಗಟ್ಟಿಮುಟ್ಟಾದ ಗಂಡಸಿನ ಉಸಿರುಗಟ್ಟುವ ಅಪ್ಪುಗೆ, ಸರಸದಲ್ಲಿ ಪಿಸುಗುಡುವಾಗ ಚುಚ್ಚುವ ಮೀಸೆ, ಕಡೇಪಕ್ಷ ಅವನು ಗದರುವಾಗಿನ ಏರು ರಾಗ, ಜಗಳಾಡಿ ಎಳೆದಾಡುವಾಗಿನ ಒರಟುತನ ಎಲ್ಲವನ್ನೂ ಬಸಿದುಕೊಂಡ ಗಟ್ಟಿ ಗಂಡಸೊಬ್ಬನ ಎದೆಗೆ ಒರಗುವುದು ಎಷ್ಟು ಚಂದ ಅಂತ ಯಾವುದೇ ಮುಜುಗರವಿಲ್ಲದೇ ಅಂದುಕೊಳ್ಳುತ್ತಿದ್ದಳು. ದಿನೇ ಬೆಳಗೆದ್ದು ಸೂರಪ್ಪಗೌಡನ ಮನೆಯ ಹಟ್ಟಿ ಗುಡಿಸಿ, ಕೊಟ್ಟಿಗೆ ಹಾಕಿ, ಆಗಾಗ ಅಕ್ಕಿ ಕೇರುತ್ತಾ, ರಾಗಿ ಬೀಸುತ್ತ ಅಡಿಗೆಗೆ ಸೊಪ್ಪು ತರಕಾರಿಗಳನ್ನು ಸೋಸುತ್ತಾ ಕೂರುವ ಹೆಣ್ಣಿಗನಂಥ ಚನ್ನನನ್ನು ಗೊತ್ತಿದ್ದೂ ಗೊತ್ತಿದೇ ಕಟ್ಟಿಕೊಂಡಿರುವ ನನಗೆ ಈಗ ಯಾಕೆ ಇದೆಲ್ಲಾ ಸಹಿಸಿಕೊಳ್ಳಲಾಗುತ್ತಿಲ್ಲ. ಮದುವೆಯಾಗಿ ಗರತಿ ಗೌರಮ್ಮ ಅನ್ನಿಸಿಕೊಳ್ಳೋಕಂತಲೇ ಹೆಣ್ಣಾದಾಗಿಂದ ತಂತಾನೇ ಹುಟ್ಟಿಕೊಂಡ ಈ ಆಸೆಗಳ ಚಿÀವುಟಿಕೊಳ್ಳಬೇಕಾ ಅಂತ ಪ್ರತಿಭಟಿಸುವ ಮಾದೇವಿಯ ಕಣ್ಣುಗಳು ಇದೆಲ್ಲವನ್ನು ವಿವರಿಸಿ ಒಪ್ಪಿಸುವ ಭಾಷೆ ಗೊತ್ತಾಗದೇ ಉರಿಯುತ್ತಿದ್ದವು.


ಸೂರಿ ತೋಟದಿಂದ ಬರುವಷ್ಟರಲ್ಲಿ ಮಳೆ ಬಂದ್ರೆ ಅಂತ ಪಾರಿಜಾತ ಜಗುಲಿಯಲ್ಲಿ ಕೂತು ಅವನ ದಾರಿಯನ್ನೇ ನೋಡುತ್ತಿದ್ದಳು. ‘ಮಾದೇವಿ ಇಂಥ ಮಳೆಗೆಲ್ಲಾ ಹೆದರುವುದಿಲ್ಲಾ, ಆದ್ರೂ ಈ ಕರೇ ಮೋಡ ನೋಡಿದ್ರೆ ಮಳೆ ನಿಲ್ಲಾದು ಕಾಣೆ, ಸೂರಪ್ಪ ಬಂದ್ರೆ ಪಟ್ಟಂತ ಹೊಂಟು ಬಿಡ್ತಿನಿ’ ಅಂತ ಚನ್ನ ಮನಸಲ್ಲೇ ಲೆಕ್ಕ ಹಾಕುತ್ತಾ ದಾರಿಗೇ ನಿಂತಿದ್ದ.
ನೀವು ಏನಾದರೂ ಮಾತಾಡಿಕೊಳ್ಳಿ ಅಂತ ಮಳೆ ಧೋ ಅಂತ ಸುರಿದೇ ಬಿಟ್ಟಿತು.

ಈ ಕಡೆ, ಇನ್ನೇನು ಮನೆ ತಲುಪೇ ಬಿಟ್ಟೆ ಅಂತ ಬಂದ ಸೂರಿ ಮಳೆಗೆ ಸಿಕ್ಕು ಬಿದ್ದು ಮುಂದೆ ಹೋಗಲಾಗದೆ ಲೈನ್‍ಮನೆಯ ಸೂರಡಿಯಲ್ಲಿ ನೆನೆಯದೆ ನಿಲ್ಲಲು ಹರ ಸಾಹಸ ಪಡುತ್ತಿದ್ದ.

ಚೀರಿ ಅಳುವಂಥ ದುಃಖದ ಮಳೆ ಇದು. ಆಕಾಶ ಸಮಾಧಾನ ಆಗುವವರೆಗೂ ಸುರಿಯುತ್ತಲೇ ಇರುತ್ತದೆ. ಹೀಗೇ ಅತ್ತು ಚೀರಿ ಕರಗಿಬಿಡಬೇಕು ಅನ್ನಿಸಿತು ಪಾರಿಗೆ. ಒಳಗೆದ್ದು ಬಂದು ಮಾತಿಲ್ಲದೆ ಕೂತಿದ್ದ ಪಾರಿ ಕಂಡು ಚನ್ನ ‘ಅಮ್ಮಾರೆ ಭಯಾಯ್ತಾ?’ ಅಂದ.

‘ಇಷ್ಟು ಜೋರು ಸುರಿಯೋ ಮಳೆಗೆ, ಗುಡುಗು ಸಿಡಿಲು, ಸೂರು ಕಿತ್ತು ಹೋಗೋ ಈ ಗಾಳಿಗೆ ನಾನ್ ಭಯ ಪಡೋದೇ ಇಲ್ಲ ಅಂತಲ್ಲ ಚನ್ನ, ಆದ್ರೆ ಇಂಥ ಯಾವ ಕುಂಭದ್ರೋಣದ ಮಳೆ ಸಂಜೆನೂ ಮಾಡದ ಗಾಯಗಳನ್ನ ಅದೊಂದು ವೈಶಾಖದ ಧಗೆಯ ರಾತ್ರಿ ಇನ್ನೂ ಎಳಸು ಎಳಸಾಗಿದ್ದ ಆ ಹುಡುಗಿಯ ಎದೆಯ ಮೇಲೆ ಮಾಡಿಬಿಟ್ಟಿದೆ. ಈ ಭಯ ಏನೂ ಅಲ್ಲ ಚನ್ನ’ ಅಂದಾಗ ಸಿಡಿಲು ಮನೆ ತುಂಬಾ ಬೆಳಗುತ್ತಿತ್ತು.

ಲೈನ್‍ಮನೆಯ ಸೂರಡಿಯ ಜಗುಲಿಯಲ್ಲಿ ನಿಂತು ಮನೆ ಕಡೆ ಹೋಗಲೂ ಆಗದೆ, ನಿಲ್ಲಲೂ ಆಗದೇ ಅರ್ಧರ್ಧ ನೆನೆದೇ ಹೋಗಿದ್ದ ಸೂರಪ್ಪಗೌಡನು ಕಲ್ಲೆಸೆದಂಥ ಮಳೆ ರಭಸ ತಾಳಲಾರದೆ ವಿಧಿ ಇಲ್ಲದೆ ಬಾಗಿಲು ಬಡಿದಾಗ ಮಾದೇವಿಯ ಮನೆಯೊಳಗೆ ಸಂಜೆ ಗಾಢವಾಗಿ ರಾತ್ರಿ ಹನಿಸುತ್ತಿತ್ತು. ಐದಾರು ಸಾವಿರ ಕಾಫಿ ಕುಕ್ಕೆಗಳು ನರ್ಸರಿಯಲ್ಲಿದ್ದವು, ಪಾರೀ ಮನೆಯ ಮುಂದೆ ಅಷ್ಟೊಂದು ಪ್ರೀತಿಯಿಂದ ಹಾಕಿಸಿದ್ದ ಗುಲಾಬಿ ಗಿಡಗಳು, ಮೊನ್ನೆ ಮೊನ್ನೆ ತರಿಸಿದ್ದ ಆಂಥೋರಿಯಂ ಎಲ್ಲಾ ಈ ಪರಿ ಗಾಳಿಗೆ ಉಳಿದಿರುತ್ತವಾ ಅಂತ ಲೆಕ್ಕ ಹಾಕುತ್ತಲೇ ‘ಇವತ್ತದೆಲ್ಲಾ ಮಣ್‍ಪಾಲೇ ಮಾದೇವಿ’ ಅಂತ ಕೊರಗುತ್ತಾ ಕೂರಲೋ ಬೇಡವೋ ಅಂತ ಆ ಪುಟ್ಟ ಮನೆ ತುಂಬಾ ಇದ್ದ ಒಂದೇ ಒಂದು ಮಂಚದ ತುದಿಗೆ ಭುಜ ಒರಗಿಸಿ ಕೂತ ಸೂರಿ. ಮಾದೇವಿ ಏನು.. ಎಂಥ.. ಅಂತ ತಿರುಗಿ ಕೇಳದೆ ‘ಹೂಂ.. ಸೂರಪ್ಪ್‍ಗೌಡ್ರೇ’ ಅಂದು ಬಾಗಿಲು ಮುಂದೆ ಮಾಡಿ ನಿಂತಳು.

‘ಚನ್ನ, ಅದೇ ಆ ಬೇಸಿಗೆಯ ರಾತ್ರಿ ಅಂದ್ನಲ್ಲ.. ಆ ರಾತ್ರಿ ಅಟ್ಟದ ಮೇಲೆ ತೆರೆದ ಹೆಂಚಿಂದ ಆಕಾಶ ಮನೆಯೊಳಕ್ಕೆ ಬರುತ್ತಿತ್ತು. ಚುಕ್ಕಿಗಳು ಕಣ್ಣು ಮಿಟುಕಿಸುತ್ತಿದ್ದವು. ಊರಿನ ಹಬ್ಬಕ್ಕೆ ಸೇರಿದ್ದ ನಾವೆಲ್ಲಾ ಒಂದೇ ಜಮಾಖಾನದ ಮೇಲೆ ಮಾತಾಡುತ್ತಾ, ನಗುತ್ತಾ ಗೊತ್ತೇ ಆಗದ ಹಾಗೇ ನಿದ್ದೆಗೆ ಬಿದ್ದಿದ್ದೆವು. ಅಷ್ಟೊಂದು ಗಾಢ ನಿದ್ದೆ ನನಗೀವತ್ತಿನ ತನಕ ಮತ್ತೆ ಬಂದ ನೆನಪೇ ಇಲ್ಲ. ಅಷ್ಟು ಚಂದದ ನಿದ್ದೆ, ಯಾವುದೋ ಒಳ್ಳೆಯ ಕನಸಿನ ಮಧ್ಯೆ ಹಾಯಾಗಿರುವಾಗಲೇ ಏನೋ ಚೀರಲಾಗದ ಪ್ರತಿಭಟಿಸಲಾಗದ ಒಂದು ದಾಳಿ ಶುರುವಾಯಿತು, ಜೀವನ ಪರ್ಯಂತ ಕಾಡುವ ದಾಳಿ!’

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಶ್ರಾವಣಾ

‘ಕಾಪಿ ಕಾಸಿ ಕೊಡ್ಲಾ, ಬೆಚ್ಚುಗೆ’ ಮಾದೇವಿ ಮತ್ತೇನಾದರೂ ಮಾತಡಲಾ ಅಂತ ಮಾತು ತೆಗೆದಳು. ಅವನು ಬೇಡವೆಂದ. ‘ಬಡವ್ರ್ ಮನೆ ಕಾಪಿ’ ಅಂತ ಮಾದೇವಿ ರಾಗ ತೆಗೆದಾಗ ಸೂರಪ್ಪಗೌಡ ಕಿಟಕಿಯ ಸರಳುಗಳಿಂದ ಬೀಸಿ ಬಂದ ಎರಚಲಿಗೆ ಅಡ್ಡ ಹಾಕುವಂತೆ ಕೈ ಅಡ್ಡ ಹಿಡಿದ. ಮಾದೇವಿ ತನ್ನ ಪಾಡಿಗೆ ತಾನು ಒಲೆ ಉರುವಿ ಹಾಲಿಗೆ ಕಪ್ಪುಬೆಲ್ಲ ಹಾಕಿದಳು. ಎದೆಯೊಳಗಿನ ಮಂಜುಗಡ್ಡೆಗೆ ಈ ಬೆಚ್ಚಗಿನ ಕಾಪಿ ಎಲ್ಲಿ ಸಾಲೀತು ಅಂತ ತಲೆ ಕೊಡವಿಕೊಂಡ ಸೂರಿ. ಮೈ ನುಗ್ಗಿ ಕೊರೆಯುತ್ತಿರುವ ಈ ಪರಿಯ ಚಳಿಗೆ ಈಗ ಮನೆಯಲ್ಲಿದ್ದಿದ್ದರೆ ಪಾರಿಯ ಕವುಚಿಕೊಳ್ಳಬಹುದಿತ್ತು, ಪಾರಿ ಈಗೇನು ಕೊಸರಾಡುವುದಿಲ್ಲ. ಆದರೆ ಪ್ರೀತಿ.. ನನ್ನಷ್ಟೇ ಪ್ರೀತಿಯಿಂದ ಅವಳು ಸ್ಪಂದಿಸುತ್ತಿರಲಿಲ್ಲ. ಬರೀ ದೇಹ ಬೆಚ್ಚಾಗುತ್ತಿತ್ತು.. ಗುಟುಕು ಕಾಫಿಯಷ್ಟೇ.

‘ಅವನು ವರಸೆಯಲ್ಲಿ ನಂಗ್ ಏನಾಗಿದ್ದ ಅನ್ನೋದು ಆವತ್ತಿಂದ ನಂಗೆ ಮರೆತೆ ಹೋಯ್ತು. ಅದೆಲ್ಲಾ ತುಂಬಾ ಎಳವೆಯ ದಿನಗಳು ಚನ್ನ, ಅದಾದ್ಮೇಲೂ ಮತ್ತೆ ಹಾಗೇ ಆಯ್ತು ಅಂತ ಹೇಳಿದ್ರೆ ಯಾಕಾಯ್ತು? ಹೇಗೆ ಅವಕಾಶ ಆಯ್ತು? ಅಂತ ಸುಮ್ಮನೆ ನನ್ ಮೇಲೆ ನಂಗೇ ಕೋಪ. ತಪ್ಪಿಸಿಕೊಳ್ತಾ ಹೋದೆ, ಆದ್ರೂ ತಪ್ಪಲಿಲ್ಲ. ನನ್ನ ಪ್ರತಿಭಟನೆ ಪ್ರತಿಭಟನೆ ಅಂತ ಅವ್ನಿಗೂ ಅನ್ನಿಸ್ಲಿಲ್ಲ… ಅವ್ನ್ ಊರಿಗ್ ಹೋದ. ಊರಿಗ್ ಹೋದವನು ಮತ್ತೆ ಬಂದ್ರೆ ಅಂತ ಭಯ ಆಗ್ತಿತ್ತು. ಭಯಕ್ಕೆ ಸರಿಯಾಗಿ ಅವ್ನು ಮತ್ತೆ ಬರ್ತಿದ್ದ. ಮತ್ತೆ ಮತ್ತೆ ಬರ್ತಾನೇ ಹೋದ. ಅವನು ಅಂದ್ರೆ ನಂಗೆ ಹುಲಿ, ಸಿಂಹ, ಹಾವು, ಹಲ್ಲಿ, ಹೇಲು, ಉಚ್ಚೆ. ಅವ್ನು ಬಂದಷ್ಟೂ ದಿನಾನೂ ನಾನಂದ್ರೆ ನಂಗೆ ಬರೀ ಭಯ, ಬರೀ ಹೇಸಿಗೆ. ಅದೊಂದ್ ದಿನ ನಾನ್ ಹೇಸಿಕೊಳ್ಳುವಾಗಲೇ ಎದ್ದು ಹೊರಟಿದ್ದ ಅವ್ನು ಕೈ ಹರಿದು, ಕಾಲು ನುರಿದು ಲಾರಿ ಅಡಿಯಲ್ಲಿ ಸತ್ತು ಬಿದ್ದಿದ್ದ ಅಂತ ಮನೆಯವರೆಲ್ಲಾ ಗೊಳೋ ಅಂತ ಚೀರಾಡಿ ಅಳುವಾಗ ನಾನೂ ತುಂಬಾ ಹೊತ್ತು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅತ್ತು ಹಗುರಾಗಿ ಅವ್ನು ಮತ್ತೆ ತಿರುಗಿ ಬರುವುದಿಲ್ಲ ಅಂತ ಖಾತ್ರಿಯಾದ ಮೇಲೆ ಅವನೊಬ್ಬನ್ ಬಗ್ಗೆ ಇದ್ದ ಜಿಗುಪ್ದೆ, ಭಯ ಸುತ್ತಲಿನ ಎಲ್ಲಾ ಗಂಡಸರ ಬಗ್ಗೆ ಹುಟ್ಟಿಕೊಳ್ತು. ಅವನ ಚುಚ್ಚೋ ಮೀಸೆ ನನ್ನ ನುಣುಪು ಕೆನ್ನೆನ ಘಾಸಿ ಮಾಡಿದ್ ಈಗಲೂ ಹಾಗೇ ಇದೆ ಅನ್ನೋ ಹಾಗೆ, ಅವ್ ಅಷ್ಟೊಂದು ಬಲವಾದ ಮಾಂಸ ಖಂಡಗಳು ಈಗ್ಲೂ ನನ್ನ ಕಟ್ಟಿ ನೋಯುಸ್ತಿವೆ ಅನ್ನೋ ಹಾಗೆ ಸೂರಿಯ ದಟ್ಟವಾದ ಕಪ್ಪು ಮೀಸೆ, ಅವನ ಕಡೆದಿಟ್ಟಂಥ ಬಲವಾದ ದೇಹ ನನ್ನನ್ನ ಈಗ್ಲೂ ಕಾಡತ್ತೆ ಚನ್ನ. ನಿನ್ನ ಸೂರಪ್ಪಗೌಡನೂ ಅಂಥದ್ದೇ ಕಟ್ಟುಮಸ್ತಾದ ಗಂಡಸು ಅಂತನೇ ನಂಗೆ ಸಾವಿರ ಅನುಮಾನ ಹುಟ್ಟಿ ನನ್ನ ತಾಳಿ ಕಟ್ಟಿದ ಗಂಡನೇ ದೊಡ್ಡ ಹಿಂಸೆ ಅನ್ನಿಸೋ ಹಾಗೆ..

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಮೈ ಲೈಫ್ ಮೈ ಪ್ರಾಬ್ಲಮ್

‘ಗುಟುಕು ಕಾಫಿಯಷ್ಟೇ!’ ಅಂತ ಸೂರಿ ಉಸುರಿಕೊಂಡಿದ್ದು ಮಾದೇವಿಗೆ ಸಾವಿರ ಅರ್ಥದಲ್ಲಿ ಕೇಳಿಸಿತ್ತು. ಬೆಚ್ಚಗೆ ಕಾಪಿ ಮಾತ್ರ ಯಾಕೆ, ಏನೂ ಬೇಕಾದರೂ ಕೊಡಬಹುದು. ಆದ್ರೆ ಯಾರಿಗೆ? ಎಲ್ಲಾನೂ ತಾವಗೇ ಕೊಡೋಕ್ಕೆ ನಿಂತ್ಕೊಬಾರ್ದು. ಪಡೆಯೋರು ಸುಮ್ಮನೆ ಪಡ್ಕೊಬೇಕು ಅಂತ ಅಂದುಕೊಳ್ಳುತ್ತಾ ಮಾದೇವಿ ಹಾಲಿಗೆ ಕಾಪಿ ಬೆರೆಸಿ ಎತ್ತಾಡಿಸುತ್ತಿದ್ದಳು. ನಂಗ್ ಬೇಕೆನ್ಸೋ ಅದೇ ಚುಚ್ಚು ಮೀಸೆ, ಹರವಾಗಿರೋ ಎದೆಗೆ ಈಗಂದ್ರೆ ಈಗ ಹೋಗಿ ತಾಕೊಕೊಳ್ಬೋದು, ಹೆಣ್ತನಕ್ ಸೋಲದವರ್ಯಾರಿದ್ದಾರೆ. ಆದ್ರೆ ಹೆಣ್ತನ ಸೋಲ್ಬಾರ್ದು ಅಷ್ಟೇಯಾ ಅಂತ ಅಂದುಕೊಳ್ಳುತ್ತಲೇ ಕಾಪಿ ಕೊಡುವಾಗ ಮಾದೇವಿ ಸೂರಪ್ಪ ಗೌಡನ ಬೆರಳುಗಳು ಪರಸ್ಪರ ತಾಕಿಕೊಂಡವು.
‘ಸೂರಪ್ಪಗೌಡ್ರೇ ಹಿಂಸೆನಾ??’ ಚನ್ನ ಬೆನ್ನು ನೆಟ್ಟಗೆ ಮಾಡಿ ಕೂತ. ‘ನನಗ್ ಮೀಸೆ ಇಲ್ಲ. ನಾನ್ ಗಟ್ಟಿ ಗಂಡಸಲ್ಲ ಅಂತ ನನ್ ಬಗ್ಗೆ ಧೈರ್ಯನಾ? ಅಮ್ಮಾರೇ’ ಕೀರಲು ಧ್ವನಿಯಲ್ಲೂ ಚನ್ನ ಗಟ್ಟಿಯಾಗೇ ಕೇಳಿದ. ಗಂಡ್ಸಿನ ಗಟ್ಟಿತನ ಅಂದ್ರೆ ಮೀಸೆ, ಭುಜನಾ? ಪಾರಿಯ ಮಾತುಗಳು ಮಾದೇವಿಯ ವ್ಯಂಗ್ಯಕ್ಕಿಂತ ಹೆಚ್ಚು ಕೆಟ್ಟದು ಅನಿಸಿತು ಚನ್ನನಿಗೆ. ‘ನಂಗೆ ಮೀಸೆ ಇಲ್ಲ. ಆದ್ರೆ ನಾನೂ ಗಂಡ್ಸೇ. ಗಡಸು ಧ್ವನಿ, ದೊಡ್ಡೆದೆ, ಭುಜ ಇಲ್ದಿದ್ರೇನು? ನಿಯತ್ತಿರ್ಬೇಕು. ಅದೊಂದಿಲ್ದಿದ್ರೆ ಎಂಥ ಗಂಡಸೂ ಕಚ್ಚೆ ಹರಕನೇ. ಮೈ ನೋಡಿ, ತಾಕತ್ ನೋಡಿ ಸೂರಪ್ಪ ಹೀಗೆ, ಚನ್ನ ಹೀಗೀಗೆ ಅಂತ ಅಂದ್ಕೊಂಡ್ ತೀರ್ಮಾನ ಮಾಡೇ ಬಿಡೋದಾ? ನಂಬ್ಕೆ ಜೊತೆಗೇ ಒಂದೀಸು ಸಮಾಧಾನ್ದಲ್ಲಿರ್‍ಬೇಕು ಬೇಕು-ಬೇಡ ಅನ್ನಾದು, ನಮ್ ಗಾಯಕ್ಕೆ ನಾವ್ ಔಷ್ದಿ ಮಾಡ್ಕಳ್ದೆ, ಬೇರೆವ್ರ್ನೂ ಗಾಯ ಮಾಡೋದಾ ಹೇಳಿ’ ಅಂತ ಚನ್ನ ಎದ್ದು ನಿಂತ. ಮತ್ತದೇ ಹೆಣ್ದನಿಯಲ್ಲಿ ಅಮ್ಮಾರೆ ಅಂತ ಕೂಗಲು ಹೊರಟವನು ಯಾಕೊ ಇದ್ದಬದ್ದ ಶಕ್ತಿಯೆಲ್ಲಾ ಒಗ್ಗೂಡಿಸಿ ಜೋರಾಗಿ ‘ಪಾರೀ..’ ಅಂದ.

ಲೈನ್‍ಮನೆಯಲ್ಲಿ ತಾಕಿದ ಎರಡು ಬಯಕೆಗಳ ಬೆರಳುಗಳೋ ಮಾತು ಶುರುವಾದರೆ ಅನ್ನುವ ಭಯಕ್ಕೆ ತಂತಾನೇ ಮೌನವಾದವು. ಹರವಾದ ಎದೆÉ, ದಪ್ಪಮೀಸೆ ಅಂತಿದ್ದ ಮಾದೇವಿಯ ಬೆರಳ ತುದಿಯ ಬಯಕೆಗೆ ಸೂರಪ್ಪ ಶೃತಿಯಾಗಲಿಲ್ಲ. ಅಷ್ಟಾಸೆಯ ಮಾದೇವಿಯೂ ಹದಗೊಳ್ಳಲಿಲ್ಲ. ಜೋರಾಗಿ ನಿಟ್ಟುಸಿರಿಟ್ಟು ಗಾಳಿಯಿಂದ ತೆಗೆದ ಕಿಟಕಿಗೆ ಅಗುಳಿ ಹಾಕಿದಳು. ಪಾರಿ, ಮಾದೇವಿ, ಚನ್ನ, ಸೂರಪ್ಪ ಯಾರೇ ಆಗಲೀ ತಂತಾನೇ ಆವರಿಸುವ, ಮಿಡಿಯುವ, ತಣಿಯುವ, ತಣಿಸುವ ಪ್ರೇಮದ ನಂಬಿಕೆ ಬರಬೇಕು.

‘ಪ್ರೇಮದ ಬಿಸಿ ಇಲ್ಲದೆ ಎದೆಯ ಶೀತ ಕರಗಿ ಬೆಚ್ಚಗಾಗುವುದಿಲ್ಲ’ ಅಂತ ಸೂರಪ್ಪ ಎದ್ದು ನಿಂತ.

‘ಹೂಂ ಪಾರೀ.. ಚನ್ನನ ಕಣ್ಣೊಳಗೂ ಆಸೆ ಹೊತ್ತಿಕೊಳ್ಳಬಹುದು.’ ಚನ್ನ ಬಾಗಿಲು ತೆಗೆದು ಹೊರಗೆ ಬಂದ.


ಸೂರಪ್ಪ ಹೊರಡುವಾಗ ಮಾದೇವಿ ಬೆಂಕಿ ಆರಿಸುತ್ತಿದ್ದಳು. ಸೂರಿ ಎದೆಯ ಮಂಜುಗಡ್ಡೆಗೆ ಬೆಚ್ಚಗಿನ ಕನಸಾದರೂ ಇರಲಿ ಅಂತ ನಡುಗುತ್ತಾ ಹೊರಟ. ಚನ್ನ ಕಣ್ಣೊಳಗೆ ಅದ್ಯಾವುದೋ ಕಿಡಿ ಇಟ್ಟುಕೊಂಡು ಕತ್ತಲಲ್ಲಿ ನಡೆದು ಬಂದ. ಪಾರಿಗೆ ಗಂಡಸೆಂದರೆ ಬರೀ ಅವನೊಬ್ಬನ ನೆನಪಲ್ಲ ಅನ್ನಿಸಿತು.

ಒಂದು ಉರಿವ ರಾತ್ರಿ ಸುರಿದ ಮಳೆ ನಿಧಾನಕ್ಕೆ ತೊಟ್ಟಿಕ್ಕುತ್ತಲೇ ಇತ್ತು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಪ್ರೀತಿ ಇಲ್ಲದ ಮೇಲೆ…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಧವಳ ಧಾರಿಣಿ ಅಂಕಣ: ಕಾಮವೆನ್ನುವುದು ಎಂತಹವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುತ್ತಾನೆ.

VISTARANEWS.COM


on

king dasharatha kaikeyi dhavala dharini column
Koo

ಪ್ರಾಣಕ್ಕಿಂತ ಪ್ರಿಯಳಾದ ಸತಿಯಿಂದ ಪ್ರಾಪ್ತವಾದ ಪುತ್ರ ವಿಯೋಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ
ಪಾಣ್ಡುರಾಭ್ರಮಿವಾಕಾಶಂ ರಾಹುಯುಕ್ತಂ ನಿಶಾಕರಃ ৷৷ಅ.ಯೋ.10.11৷৷

ಬಿಳಿಯದಾದ ಮೋಡಗಳಿಂದ ಕೂಡಿದ ಆಕಾಶದಲ್ಲಿ ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ ಮಹಾಯಶೋವಂತನಾದ ರಾಜನು ಭವ್ಯವಾದ ಕೈಕೇಯಿಯ ಅಂತಃಪುರವನ್ನು ಪ್ರವೇಶಿಸಿದನು.

ಕವಿಸಮಯವೆನ್ನುವದು ರಾಮಾಯಣ ಕಾವ್ಯದ ವಿಶೇಷ. ವಾಲ್ಮೀಕಿ ಕಾವ್ಯವನ್ನು ಕೇವಲ ಉಅಪದೇಶಕ್ಕಾಗಿಯಲ್ಲ, ಅದನ್ನು ತಾಳವಾದ್ಯಗಳೊಂದಿಗೆ ರಾಗವಾಗಿ ಹಾಡಲು ಅನುಕೂಲವಾಗುವಂತೆ ಬರೆದಿದ್ದಾನೆ. ಹಾಡುಗಾರಿಕೆಯಲ್ಲಿ ವರ್ಣನೆಗೆ ಮಹತ್ವ ಬರುತ್ತದೆ. ಕಾವ್ಯದ ಮುಂಗಾಣ್ಕೆ ಅಲ್ಲಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಕೈಕೇಯಿಯ ಅರಮನೆಗೆ ಹೋಗುವ ರಾಜನ ಕುರಿತು ವರ್ಣಿಸುವಾಗ ಬಿಳಿಯದಾದ ಮೋಡ, ರಾಹು, ಆಕಾಶ, ಚಂದ್ರ ಎನ್ನುವ ಉಪಮೆಗಳ ಮೂಲಕ ಹೇಳಿದ್ದಾನೆ. ಆಕಾಶ ಎನ್ನುವುದು ಮನಸ್ಸಿನಲ್ಲಿ ಆಸೆಗಳ ವಿಸ್ತಾರದವನ್ನು ಸೂಚಿಸಿದೆ. ಬಿಳಿಯದಾದ ಮೋಡವೆನ್ನುವದು ಅರ್ಥಪೂರ್ಣವಾದ ಉಪಮೆ. ನೀರಿನಿಂದ ಯುಕ್ತವಾದ ಮೋಡ ಕಪ್ಪಾಗಿರುತ್ತದೆ. ಮನಸ್ಸಿನಲ್ಲಿ ತನ್ನ ಮಗನ ಪಟ್ಟಾಭಿಷೇಕದ ಕುರಿತು ಯಾವ ಆಸೆಯನ್ನೇ ಇರಿಸಿಕೊಳ್ಳಲಿ, ಅದೆಲ್ಲವೂ ನೀರಿಲ್ಲದ ಮೋಡದಂತೆ ವ್ಯರ್ಥವಾಗಿ ಹಾರಿಹೋಗುತ್ತದೆ ಎನ್ನುವುದನ್ನು ಹೇಳುತ್ತಾನೆ. ರಾಹು ಮತ್ತು ಕೇತುಗಳು ಭಾರತೀಯ ಖಗೋಳಶಸ್ತ್ರದ ಪ್ರಕಾರ ಎರಡು ವಿರುದ್ಧದಿಕ್ಕುಗಳಲ್ಲಿರುವ ಬಿಂದುಗಳು. ಈ ಬಿಂದುವಿಗೆ ಸೂರ್ಯಚಂದರು ಬಂದಾಗ ಗ್ರಹಣವಾಗುತ್ತದೆ. ಚಂದ್ರ ಮನಸ್ಸಿನ ಕಾರಕ. ಸಂತೊಷ ಮತ್ತು ಕಾಮವಿಕಾರಗಳು ಮನಸ್ಸಿನಲ್ಲಿ ಉತ್ಪನ್ನವಾಗುವಂತವು. ಚಂದ್ರ ತನ್ನ ಪರಿಭ್ರಮಣದಲ್ಲಿ ರಾಹುವಿನ ಬಿಂದುವಿಗೆ ಬಂದಾಗ ಗ್ರಹಣವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೋ ಅದೇರಿತಿ ರಾಜ ತನ್ನೆಲ್ಲ ಕನಸನ್ನು ಕಳೆದುಕೊಂಡು ನಿಶ್ಚಿತವಾಗಿ ಮರಣದತ್ತ ಸಾಗಲು ಬಂದಿದ್ದಾನೆ ಎನ್ನುವುದನ್ನು ಉಪಮಾಮಲಂಕಾರದಲ್ಲಿ ಕವಿ ವರ್ಣಿಸಿದ್ದಾನೆ.

ದಶರಥನ ಪಾತ್ರವನ್ನು ವಿವೇಚಿಸುವಾಗ ಮೊದಲಿನಿಂದಲೂ ಕಂಡುಬಂದ ಅಂಶವೆಂದರೆ ಮಹಾನ್ ರಾಜರ್ಶಿಯಾಗಿದ್ದ ದೊರೆ ರಾಮನ ಕುರಿತು ಕಡುಲೋಭಿಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ದಶರಥನ ವ್ಯಕ್ತಿತ್ವವೆನ್ನುವುದು ಸಂಕೀರ್ಣವೇನೂ ಅಲ್ಲ. ಶೂರನಾಗಿದ್ದ; ಸೂರ್ಯವಂಶದ ಧ್ಯೇಯೋದ್ಧಶವಾದ ಧರ್ಮಸ್ಥಾಪನೆಯ ವಿಷಯದಲ್ಲಿ ಸದಾ ನಿರತನಾಗಿದ್ದ. ಅದೇ ಕಾಲಕ್ಕೆ ಅಯೋಧ್ಯೆಯ ಸಿಂಹಾಸನವೆನ್ನುವುದು ಗಣತಂತ್ರವ್ಯವಸ್ಥೆಯಲ್ಲಿ ಇತ್ತು. ರಾಜರಾಗುವವರು ಯಾರೇ ಆದರೂ ಅದಕ್ಕೆ ಪ್ರಜೆಗಳ ಒಪ್ಪಿಗೆ ಪಡೆಯಬೇಕಾಗಿತ್ತು. ಪ್ರಾಚೀನ ಗ್ರೀಸಿನಲ್ಲಿದ್ದ ರೀತಿಯ ಗಣತಂತ್ರವ್ಯವಸ್ಥೆ ಅಯೋಧ್ಯೆಯಲ್ಲಿ ಇತ್ತು ಎನ್ನುವುದಕ್ಕೆ ವಾಲ್ಮೀಕಿಯ ರಾಮಾಯಣವನ್ನು ಮತ್ತು ಮತ್ತು ಪ್ಲೇಟೋವಿನ “The Republic” ಕೃತಿಯನ್ನು ತುಲನೆ ಮಾಡಿದಾಗ ಅನಿಸುತ್ತದೆ. ಅದನ್ನು ಕೇವಲ ತೋರಿಕೆಗಾಗಿ ಆಚರಣೆಯಲ್ಲಿ ಇಟ್ಟು ತನಗೆ ಬೇಕಾದಂತೆ ಉತ್ತರಾಧಿಕಾರಿಯನ್ನು ಆರಿಸುವ ತಂತ್ರವನ್ನು ದಶರಥ ಅನುಸರಿಸಿರುವುದು ರಾಮನಿಗೆ ಪಟ್ಟಗಟ್ಟಬೇಕೆನ್ನುವ ಸಂದರ್ಭದಲ್ಲಿ ಕಾಣಬಹುದು. ಆತನ ಚಾಣಾಕ್ಷನಡೆಯ ಒಳಗಿರುವದು ತನ್ನದು ಎನ್ನುವ ಮೋಹದ ಅರಿವು ಎನ್ನುವುದು ಯಾರ ಗಮನಕ್ಕೂ, ಹೆಚ್ಚೇನು ರಾಮನ ಅರಿವಿಗೂ ಬಾರದ ಹಾಗೆ ನಡೆದುಕೊಂಡಿದ್ದಾನೆ. ಪರಿಪೂರ್ಣ ವ್ಯಕ್ತಿತ್ವದ ರಾಮನಂತಹ ದೊರೆ ತಮಗೆ ಸಿಗುತ್ತಾನೆ ಎನ್ನುವ ಕಾರಣಕ್ಕೆ ಪ್ರಜೆಗಳು ಸಂಭ್ರಮಿಸುವುದು ಸಹಜವೇ ಆಗಿದೆ. ತಾನು ಅಶ್ವಪತಿಗೆ ಕೊಟ್ಟ ಮಾತುಗಳು ಹೀಗೆ ಮರೆಯಾದ ಕಾರಣ ಅದು ದೊರೆಗೆ ಅಪರಿಮಿತ ಸಂತೋಷವನ್ನು ಕೊಟ್ಟಿದೆ. ಇಳಿವಯಸ್ಸಿನಲ್ಲಿ ಕಿರಿಯ ಚಲುವೆಯಾದ ಕೈಕೇಯಿಯ ಹಿಂದೆ ಬಿದ್ದಿದ್ದ ದೊರೆಗೆ ವೃದ್ದಾಪ್ಯದಲ್ಲಿ ಮಕ್ಕಳಾದ ಮೇಲೆ ರಾಮ ಎನ್ನುವ ಕುರುಡು ಮೋಹ ಆವರಿಸಿಕೊಂಡಿತ್ತು. ಆತನ ಕುರಿತು ಮಂಥರೆ ಹೇಳುವ ಮಾತು

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧಭಾವೇ ನ ಜಾನೀಷೇ ತೇನೈವ ಮತಿಸಂಧಿತಾ৷৷ಬಾ.ಕಾಂ.7.24৷৷

ನಿನ್ನ ಗಂಡನು ಮೇಲೆಮೇಲೆ ಧರ್ಮಸಮ್ಮತವಾದ ಮಾತುಗಳನ್ನು ಆಡುತ್ತಿದ್ದರೂ ಅಂತರಂಗದಲ್ಲಿ ಬಹಳ ಕಪಟಸ್ವಭಾವದವನು. ಬಾಯಲ್ಲಿ ಮೃದುವಾದ ಮಾತುಗಳನ್ನು ಆಡುತ್ತಿದ್ದರೂ ನಂಬಿಸಿ ಮೋಸಮಾಡುವುದು ಹೇಗೆಂದು ಯೋಚಿಸುತ್ತಿರುತ್ತಾನೆ. ಕರುಣೆಯೆನ್ನುವುದೇ ಇಲ್ಲ, ಬಹಳ ಋಜುಸ್ವಭಾವದವಳಾದ ನೀನು ಆತನ ಕಪಟವನ್ನು ಅರಿಯದೇ ಹೋದೆಯಲ್ಲವೇ.

ಮಂಥರೆ ಇಲ್ಲಿ ಕೈಕೇಯಿಯ ಮನಸ್ಸನ್ನು ತಿರುಗಿಸಲು ಹೇಳಿರುವಳಾದರೂ ಪಾಯಸವನ್ನು ತನ್ನ ರಾಣಿಯರಿಗೆ ಹಂಚುವಲ್ಲಿಂದ ಹಿಡಿದು ರಾಮಪಟ್ಟಾಭಿಷೇಕದ ವರೆಗೆ ದಶರಥ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ಗಮನಿಸಿದಾಗ ನಮ್ಮ ದೌರ್ಬಲ್ಯ ಶತ್ರುಗಳಿಗೆ ಆಯುಧ ಎನ್ನುವ ನೀತಿಶಾಸ್ತ್ರದ ಮಾತನ್ನು ನೆನಪಿಸುತ್ತದೆ. ಅಂತೂ ತನ್ನ ಕಾರ್ಯವಾದ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಯಾವ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುವುದು ಎನ್ನುವ ನಂಬಿಕೆಯೊಂದಿಗೆ ಸಂತೊಷವೆನ್ನುವುದು ಅತಿರೇಕಕ್ಕೆ ಹೋಗಿತ್ತು. ಸಂತೋಷ ಅತಿರೇಕಕ್ಕೆ ಹೋದಾಗ ಅದು ಮದಕ್ಕೆ ತಿರುಗುತ್ತದೆ. ಮದವೆನ್ನುವುದು ಕಾಮಕ್ಕೆ ಮೂಲ. ಅದನ್ನು ಇಳಿಸಿಕೊಳ್ಳಲು ಸಂಗಾತಿಯನ್ನು ಹುಡಿಕಿಕೊಳ್ಳುವುದು ಜೀವಿಗಳ ಸಹಜ ಕ್ರಿಯೆ. ಅರಸನಿಗೆ ತನ್ನ ಆಲೋಚನೆಯನ್ನು ಹಂಚಿಕೊಳ್ಳುವ ಸಂಗಾತಿಯ ಅಗತ್ಯ ತುರ್ತಾಗಿ ಎದುರಾಯಿತು. ವಶಿಷ್ಠರಲ್ಲಿಯಾಗಲಿ, ವಾಮದೇವರಲ್ಲಿಯಾಗಲಿ ಇದನ್ನೆಲ್ಲವನ್ನು ಹಂಚಿಕೊಳ್ಳಲು ಅವರೇನು ಸಾಮಾನ್ಯದವರಾಗಿರಲಿಲ್ಲ.

ರಾಮ ಯುವರಾಜ ಪಟ್ಟಕ್ಕೆ ಅರ್ಹನಾಗಿದ್ದರೂ, ಅಯೋಧ್ಯೆಯಲ್ಲಿ ಆ ಸಾಯಂಕಾಲ ನಡೆದ ಸಿದ್ಧತೆ ದಶರಥನ ವೈಯಕ್ತಿಕ ಕಾಮನೆಯ ಫಲವಾಗಿತ್ತು. ಪ್ರಜೆಗಳು ರಾಮನನ್ನು ರಾಜನ್ನಾಗಿ ನೋಡಲು ಬಯಸಿದ್ದರೆನ್ನುವುದು ನಿಜವಾದರೂ ಇಲ್ಲಿಮೊದಲ ಸಾರಿ ರಾಮನ ಪಟ್ಟಾಭಿಷೇಕಕ್ಕಾಗಿ ದಶರಥ ಹೇಗೆಲ್ಲಾ ಮಂಡಿಗೆಯನ್ನು ಹಾಕಿದ್ದ ಎನುವುದನ್ನು ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ. ರಾಮನನ್ನು ಕೇವಲ ಮಗನಾಗಿ ಮಾತ್ರ ನೋಡಿದ್ದಾನೆಯೇ ಹೊರತು ವಿಶ್ವಾಮಿತ್ರ, ವಶಿಷ್ಠರು, ಪರಶುರಾಮ ಮೊದಲಾದವರಿಗೆ ರಾಮನ ಅವತಾರದ ಹಿಂದಿರುವ ದೈವತ್ವದ ದರ್ಶನ ಅರಸನಿಗೆ ಸಾಯುವವರೆಗೂ ಆಗಲೇ ಇಲ್ಲ. ರಾಮನಿಗೆ ಪಟ್ಟಗಟ್ಟುವ ತನ್ನ ಮನಸ್ಸಿನ ಮಂಡಿಗೆ ಯಶಸ್ವಿಯಾದ ವಿಷಯವನ್ನು ವಿವರವಾಗಿ ವರ್ಣಿಸಿ ಹೇಳಲು ಕಿರಿಯ ರಾಣಿಯಷ್ಟು ಆಪ್ತರು ಬೇರೆ ಯಾರೂ ಇಲ್ಲ. ಕೌಸಲ್ಯೆಗೆ ಹೇಳಿದರೆ ಆಕೆಗೆ ಸಂತೋಷವೇನೋ ಆಗಬಹುದಾದರೂ ಆಕೆಯಲ್ಲಿ ಕಾಮದ ಆಕರ್ಷಣೆ ದೊರೆಗೆ ಬತ್ತಿಹೋಗಿತ್ತು. ಸುಮಿತ್ರೆಯೂ ಅಷ್ಟೇ. ಚಿಕ್ಕವಯಸ್ಸಿನ ಕೈಕೆಯಿಯನ್ನು ಚೆನ್ನಾಗಿ ಮರಳುಮಾಡಿ ಇಟ್ಟುಕೊಂಡಿದ್ದ. ತನಗೆ ಬೇಕಾದ ಹಾಗೆ ಸುಖವನ್ನು ಅವಳಿಂದ ಪಡೆಯುತ್ತಿದ್ದ. ಆಕೆ ರಾಜನಿಗೋಸ್ಕರ ಅಲಂಕರಿಸಿಕೊಂಡು ನಗುಮುಖದಿಂದ ಯಾವತ್ತಿಗೂ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಕೈಕೇಯಿ ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಜನನ್ನು ಮಣಿಸಲೇ ಬೇಕೆಂದು ಕೋಪಾಗಾರವನ್ನು ಸೇರಿದರೆ ಇಳಿವಯಸ್ಸಿನ ರಾಜ “ರಾಮಾಭಿಷೇಕದ ಸಂತೋಷದ ವಾರ್ತೆಯನ್ನು ಕೈಕೇಯಿಗೆ ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿ ಅತ್ಯಾಸೆಯಿಂದ ಕೈಕೇಯಿಯ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ”.

ಕೈಕೇಯಿ ಅಂತಃಪುರದಲ್ಲಿ ಇಲ್ಲವಾಗಿರುವುದನ್ನು ಕಂಡವನಿಗೆ ವ್ಯಾಕುಲವಾಯಿತು. ಪ್ರತಿಹಾರಿ ಹೇಳಿದ “ದೇವ ದೇವಿ ಬೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ-ಪರಮ ಕ್ರುದ್ಧೆಯಾಗಿ ದೇವಿ ಕೋಪಾಗಾರವನ್ನು ಸೇರಿದ್ದಾಳೆ” ಎನ್ನುವ ಮಾತನ್ನು ಕೇಳಿ ಕಂಗಾಲಾದ. ಕೋಪಾಗಾರಕ್ಕೆ ಧಾವಿಸಿ ನೋಡಿದರೆ ತನ್ನ ಪ್ರೇಯಸಿ ಅಸ್ತವ್ಯಸ್ತವಾಗಿ ನೆಲದ ಮೇಲೆ ಮಲಗಿದ್ದಾಳೆ. ಪ್ರಿಯತಮೆಯನ್ನು ಆಕಾಶದಿಂದ ಚ್ಯುತಳಾದ ಅಪ್ಸರೆಯಂತೆ ಕಂಡವನಿಗೆ ಎದೆಯೊಡೆದು ಹೋಯಿತು. “ನಿಷ್ಕಳಂಕನಾದ ದಶರಥ ಪಾಪಸಂಕಲ್ಪವನ್ನು ಹೊತ್ತ ಕೈಕೇಯಿಯನ್ನು ಕಂಡ” ಎನ್ನುವ ಮಾತು ಇಲ್ಲಿ ಬರುತ್ತದೆ. ಸಂಕಲ್ಪವೆನ್ನುವುದು ಹೊಸ ಕಾರ್ಯಕ್ಕೆ ಹೇತು. ಮುಂದಿನ ಘಟನೆಗೆ ಇಲ್ಲಿ ನಾಂದಿಯಾಗುತ್ತಿದೆ. ಧರ್ಮಮಾರ್ಗದಲ್ಲಿ ಸದಾ ನಡೆಯುತ್ತಿದ್ದ ಅರಸ ಕಾಮಮೋಹಿತನಾಗಿ ಕೈಕೇಯಿಯನ್ನು ಸಮಾಧಾನ ಮಾಡಲು ಹೇಳುವ ಮಾತುಗಳು ಸೂರ್ಯವಂಶಕ್ಕೆ ಹೇಳಿಸಿದ್ದಲ್ಲ.

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋವಾ ವಿಮುಚ್ಯತಾಮ್.
ದರಿದ್ರಃ ಕೋ ಭವದಾಢ್ಯೋ ದ್ರವ್ಯವಾನ್ಕೋSಪ್ಯಕಿಂಚನಃ৷৷ಅ. ಕಾಂ.10.33৷৷

ಕಾಮವೆನ್ನುವುದು ಎಂತವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುವ ಮಾತುಗಳು ದೊರೆತನಕ್ಕೆ ತಕ್ಕುದಲ್ಲ. ಆತ ಅವಳನ್ನು ಸಮಾಧಾನಿಸುತ್ತಾ “ಪ್ರಿಯತಮೆಯಲ್ಲಿ ನನಗೆ ನಿನಗಿಂತ- ಮನುಜರಲ್ಲಿ ರಾಮನಿಗಿಂತ ಹೆಚ್ಚಿನವರು ಯಾರೂ ಇಲ್ಲ” ಎನ್ನುವಲ್ಲಿ ರಾಮನ ಹೆಸರನ್ನು ಕೇಳಿದ ಆಕೆಗೆ ಮತ್ತುಷ್ಟು ಉರಿ ಹತ್ತಿತು. ದೊರೆ ಮನ್ಮಥನ ಬಾಣಕ್ಕೆ ಈಡಾಗಿರುವುದನ್ನು ಪಕ್ಕಾ ಮಾಡಿಕೊಂಡಳು. ಸ್ವಲ್ಪ ಹೊತ್ತು ಕಾಡಿಸಬೇಕು ಎಂದು ಸುಮ್ಮನಾದವಳು. ದಶರಥನಿಗೆ ಸಹಿಸಲಾಗಿಲ್ಲ. ಆಕೆಯ ರೂಪಲಾವಣ್ಯಕ್ಕೆ ಸೋತಿದ್ದ. ಅವಳ ನೋವನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯವೆಂದು ಬಗೆದ.. ಅದು ತನಕ ತಾನು ಗಳಿಸಿದ ಸುಕೃತದ ಮೇಲೆ ಆಣೆಯಿಟ್ಟು ಅವಳ ಬಯಕೆಯನ್ನು ಈಡೇರಿಸುವೆ ಎಂದು ಅಂಗಲಾಚಿದ.

dhavala dharini king dasharatha

ಆದರೂ ಸುಮ್ಮನಿದ್ದ ಕೈಕೇಯಿಗೆ ಕೊನೆಯದಾಗಿ “ನನ್ನ ರಾಮನಾಣೆಗೂ ನೀನು ಹೇಳುವ ಕಾರ್ಯವನ್ನು ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿಬಿಟ್ಟ. ಗಾಳದಲ್ಲಿ ಚಿಕ್ಕಮೀನನ್ನು ಚುಚ್ಚಿ ದೊಡ್ಡಮೀನನ್ನು ಸೆಳೆಯುವಂತೆ ಚಕ್ರವರ್ತಿಯನ್ನು ಮಟ್ಟುಹಾಕಿ ತನ್ನ ಕಾರ್ಯಸಾಧಿಸಲು ಇದೇ ಸಮಯವೆಂದು ತಿಳಿದ ಕೈಕೇಯಿ ಬಯಕೆಯನ್ನು ಹೇಳುವ ಮುನ್ನ ರಾಜನಲ್ಲಿನ ಧರ್ಮಪ್ರಜ್ಞೆಯನ್ನು ಜಾಗ್ರತಗೊಳಿಸಲು “ನೀನು ಮಾಡಿದ ಈ ಪ್ರತಿಜ್ಞೆಯನ್ನು ಮೂವತ್ತುಮೂರು ಕೋಟಿ ದೇವತೆಗಳು ಕೇಳಲಿ, ಚಂದ್ರಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ನವಗ್ರಹಗಳು, ಹಗಲು-ರಾತ್ರಿಗಳು, ಎಂಟುದಿಕ್ಕುಗಳು,ಗಂಧರ್ವರಾಕ್ಷಸರನ್ನೊಳಗೊಂಡಿರುವ ಸ್ವರ್ಗ-ಮರ್ತ್ಯ-ಪಾತಾಳ, ನಿಶಾಚರರೂ, ಪಿಶಾಚಗಳೂ, ಭೂತಗಣಗಳೂ, ಗೃಹದೇವತೆಗಳೂ ಸಹಿತ ಎಲ್ಲರೂ ನೀನು ಹೇಳಿದ ಈ ಪ್ರತಿಜ್ಞಾವಾಕ್ಯಕ್ಕೆ ಸಾಕ್ಷಿಗಳಾಗಲಿ” ಎಂದವಳೇ ಆತನನ್ನು ಸಂಪೂರ್ಣವಾಗಿ ಖೆಡ್ಡಾಕ್ಕೆ ತೋಡುವ ಈ ಮಾತನ್ನು ಆಡುತ್ತಾಳೆ.

ಸತ್ಯಸಂಧೋ ಮಹಾತೇಜಾಃ ಧರ್ಮಜ್ಞಃ ಸುಸಮಾಹಿತಾಃ.
ವರಂ ಮಮ ದದಾತ್ಯೇಷಃ ತನ್ಮೇ ಶ್ರೃಣ್ವನ್ತು ದೈವತಾಃ৷৷ಅಯೋ.11.16৷৷

ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ ಮಹಾತೇಜಸ್ವಿಯಾದ, ಧರ್ಮಜ್ಞನಾದ ಧಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಲಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ವ್ಯಾಧನ ಧ್ವನಿಯಿಂದ ಆಕರ್ಷಿತಳಾಗಿ ಬಲೆಗೆ ಬೀಳುವ ಜಿಂಕೆಯಂತೆ ರಾಜನು ತನ್ನ ವಿನಾಶಕ್ಕಾಗಿ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದು ಹೀಗೆ. ಅವನಿಗೆ ಮುಂದೆ ಮಾತಾಡಲು ಅವಕಾಶಕೊಡದಂತೆ ಆತನನ್ನು ಬಿಗಿದಪ್ಪಿ ತನಗೆ ಹಿಂದೆ ಕೊಟ್ಟಿದ್ದ ವರಗಳನ್ನು ಅಪೇಕ್ಷಿಸಿ ಅದಕ್ಕೆ ರಾಜ ಬೇರೆ ಏನನ್ನಾದರೂ ಹೇಳಬಾರದೆಂದು, “ರಾಮನಿಗೆ ಪಟ್ಟಾಭಿಷೇಕಕ್ಕೆ ಯಾವೆಲ್ಲಾ ಸಿದ್ಧತೆಗಳಾಗಿವೆಯೋ ಅದೇ ಸಾಂಬಾರಪದಾರ್ಥಗಳಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕು. ಎರಡನೇಯ ವರವನ್ನೂ ಹೇಳಿಯೇಬಿಡುವೆ.

ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ.

ಹದಿನಾಲ್ಕು ವರುಷಗಳ ಕಾಲ ರಾಮನು ದಂಡಕಾರಣ್ಯಕ್ಕೆ ಹೋಗಿ ಅಲ್ಲಿ ಅವನು ಜಟಾಧಾರಿಯಾಗಿ ನಾರಮುಡಿಯನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ಇರಬೇಕು.

ಕೈಕೇಯಿ ಇಷ್ಟಕ್ಕೇ ನಿಲ್ಲಿಸುವುದಿಲ್ಲ. “ಆದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನಮ್- ರಾಘವನು ಚೀರಾಜಿನ-ಜಟಾಧಾರಿಯಾಗಿ ಕಾಡಿಗೆ ಹೋಗುವುದನ್ನು ಈಗಲೇ ನಾನು ನೋಡಬೇಕು, ಸತ್ಯವಚನನಾದ ನೀನು ಈಗಲೇ ನಡೆಸಿಕೊಡು” ತನ್ನ ಇಬ್ಬರು ಪ್ರಿಯರಲ್ಲಿ ಒಬ್ಬನಾದ ರಾಮನಿಗೆ ಆಘಾತಕಾರಿಯಾದ ವಿಷಯಗಳನ್ನು ಹೇಳುವ ಮಾತುಗಳು ದಶರಥನ ಕಾಮದ ಪಿತ್ಥವನ್ನು ಜರ್ರನೆ ಇಳಿಸಿಯೇಬಿಟ್ಟಿತು; ಜೊತೆಗೆ ಆತನ ಮನೋಧೈರ್ಯವನ್ನೂ ಸಹ! ಲೋಕದ ಎಲ್ಲಾ ರಾಜರನ್ನು, ಪ್ರಜೆಗಳನ್ನು ಮತ್ತು ವಶಿಷ್ಠರಾದಿಯಾಗಿರುವ ಎಲ್ಲಾ ಋಷಿಗಳನ್ನು ತನ್ನ ಇಷ್ಟಕ್ಕೆ ಒಗ್ಗಿಕೊಳ್ಳುವಂತೆ ತಂತ್ರವನ್ನು ಹೂಡಿದ ಅರಸನ ಇಚ್ಛೆ ಇಲ್ಲಿ ತರಗೆಲೆಗಳಂತೆ ಗಾಳಿಗೆ ಹಾರಿಹೋಯಿತು. ಯಾವ ಉದ್ಧೇಶಕ್ಕಾಗಿ ಕೈಕೇಯಿಯ ಅರಮನೆಗೆ ಬಂದಿದ್ದನೋ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕದಡಿಹೋಯಿತು. ಅವನ ಜೀವನದಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿವದೊಂದೇ ಗುರಿ ಇದ್ದಿದ್ದು. ತನ್ನ ಪ್ರೀತಿಯ ರಾಣಿಯಿಂದಲೇ ಹೀಗೆ ವಿಘ್ನಬರಬಹುದೆಂದು ರಾಜ ಎಣಿಸಿರಲಿಲ್ಲ. ಅಂಥ ಸ್ವಲ್ಪ ಅನುಮಾನ ಬಂದಿದ್ದರೂ ಆತ ಕೈಕೇಯಿಯ ಅರಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆಲೇ ಎಚ್ಚರತಪ್ಪಿ ಬಿದ್ದ. ತನ್ನ ರಾಜತ್ವಕ್ಕೆ ಧಿಕ್ಕಾರ ಹಾಕಿಕೊಂಡ. ಕೊನೆಗೆ ಅನಿವಾರ್ಯವಾಗಿ ಕೈಕೇಯಿಗೆ ನಮಸ್ಕರಿಸಿಕೊಂಡು “ನಿನ್ನ ಕಾಲನ್ನು ಬೇಕಾದರೂ ಹಿಡಿಯುತ್ತೇನೆ, ರಾಮನನ್ನು ರಕ್ಷಿಸು. ವರದಾನವೆನ್ನುವ ಒಂದು ಪ್ರತಿಜ್ಞೆಯಲ್ಲಿ ನನ್ನನ್ನು ಸಿಕ್ಕಿಹಾಕಿಸಿ ನಿರಪರಾಧಿಯನ್ನು ಕಾಡಿಗಟ್ಟಿದ ದೋಷ ನನಗೆ ಬಾರದಿರಲಿ” ಎಂದು ನೆಲದಲ್ಲಿ ಹೊರಳಾಡತೊಡಗಿದ.

ಮೂಂದಿನ ಭಾಗದಲ್ಲಿ ತನ್ನ ಕರ್ಮಫಲವನ್ನು ತಾನು ಉಂಡ ಮಹಾರಾಜ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading

ದಕ್ಷಿಣ ಕನ್ನಡ

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Gangadhar Puttur : ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ (Yakshagana Artist) ಗಂಗಾಧರ ಪುತ್ತೂರು ಇಹಲೋಕ ತ್ಯಜಿಸಿದ್ದಾರೆ. ಮುಖದ ಬಣ್ಣವನ್ನು ಅಳಿಸುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

VISTARANEWS.COM


on

By

Yakshagana Artist No more
Koo

ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತದಿಂದ (Heart attack) ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ (Yakshagana Artist) ಗಂಗಾಧರ ಪುತ್ತೂರು(60) ಅವರು ಇಹಲೋಕ ತ್ಯಜಿಸಿದ್ದಾರೆ.

ನಿನ್ನೆ ಬುಧವಾರ (ಮೇ 1) ರಾತ್ರಿ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು, ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಇವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಹೊಂದಿದ್ದರು. ತಮ್ಮ 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ ಗಂಗಾಧರ ಪುತ್ತೂರು ಸುದೀರ್ಘ 40 ವರ್ಷಗಳಷ್ಟು ಕಾಲ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಕೆ.ಗೋವಿಂದ ಭಟ್ ಅವರಿಂದ ನಾಟ್ಯಾಭ್ಯಾಸ ಮಾಡಿದರು.

ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.

ಇದನ್ನೂ ಓದಿ: Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) (Srinivas Prasad) ಅವರು ತೀವ್ರ ಹೃದಯಾಘಾತದಿಂದ (Heart Aattack) ವಿಧಿವಶರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 1:20ಕ್ಕೆ (Manipal Hospital ) ಅವರು ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರು ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಇನ್ನು ಈ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಮಾಹಿತಿ ನೀಡಿದ್ದು, ಶ್ರೀನಿವಾಸ್ ಪ್ರಸಾದ್ ಅವರು ರಾತ್ರಿ 1:20ರ ಸುಮಾರಿಗೆ ತೀವ್ರವಾದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಅವರ ಈ ಅಗಲಿಕೆ ಇಡೀ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ನನಗೆ ರಾಜಕೀಯಕ್ಕೆ ಜನ್ಮ ಕೊಟ್ಟಂತವರು. ರಾಜಕೀಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡೋದಕ್ಕೆ ಬಿಟ್ಟು ಹೋಗಿದ್ದಾರೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದಾರೆ, ಹೋರಾಟದ ಜೀವಿ ಅವರು. ಐದು ವರ್ಷದ ಹಿಂದೆ ನಾನು ನಂಜನಗೂಡಿನಲ್ಲಿ ಗೆದ್ದಾಗ ಅವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿನಿ ಅಂದರು. ನನ್ನನ್ನು ಅವರು ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದ್ದಾರೆ ಯಾವುದೆ ವಿಚಾರ ಆಗಿದ್ದರೂ ಅವರ ಜೊತೆ ಚರ್ಚೆ ಮಾಡಿಯೇ ನಿರ್ಧಾರಕ್ಕೆ ಬರುತ್ತಿದೆ. ಈಗ ಯಾರ ಬಳಿ ಹೋಗಿ ಕೇಳಲಿ ಎಂದು ಅನಿಸಿ ಬಿಟ್ಟಿದೆ ಎಂದು ಭಾವುಕರಾಗಿ ಮಾತನಾಡಿದರು.

ಇದನ್ನೂ ಓದಿ:Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Kaladarpana-Art Reflects: ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

VISTARANEWS.COM


on

Kaladarpana-Art Reflects
Koo

ಬೆಂಗಳೂರು: ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್‌ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು

  • ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
  • ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯ ಹೇಮಾ ವಿನಾಯಕ್‌ ಪಾಟೀಲ್‌ ಹಾಗೂ ವಿನಾಯಕ್‌ ಪಾಟೀಲ್‌ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Continue Reading
Advertisement
Bengaluru Rain
ಕರ್ನಾಟಕ1 hour ago

Bengaluru Rain: ಸಿಲಿಕಾನ್‌ ಸಿಟಿಯಲ್ಲಿ ವರುಣನ ಆರ್ಭಟ; ಜಲಾವೃತವಾದ ರಸ್ತೆಗಳು, ನೆಲಕ್ಕುರುಳಿದ 16 ಮರ

Rohit Sharma
ಪ್ರಮುಖ ಸುದ್ದಿ2 hours ago

Rohit Sharma : 4 ರನ್​ಗೆ ಔಟಾಗಿ ಕಣ್ಣೀರು ಸುರಿಸಿದ ರೋಹಿತ್​ ಶರ್ಮಾ; ಇಲ್ಲಿದೆ ವಿಡಿಯೊ

PM Narendra Modi
ದೇಶ2 hours ago

ತಮ್ಮ ಬಗ್ಗೆ ಟ್ರೋಲ್‌ ಮಾಡಿದ್ದನ್ನೂ ಮೆಚ್ಚಿದ ಮೋದಿ; ಮಮತಾ ಬ್ಯಾನರ್ಜಿ ನೋಟಿಸ್; ಯಾರು ಸರ್ವಾಧಿಕಾರಿ?

School Children
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ, ಇ-ಮೇಲ್‌ ಕಿಡಿಗೇಡಿಗಳಿಗೆ ಕಠಿಣ ಪಾಠ ಕಲಿಸಬೇಕಿದೆ

IPL 2024
ಕ್ರೀಡೆ2 hours ago

IPL 2024 : ಸೂರ್ಯನ ಪ್ರತಾಪಕ್ಕೆ ಮಂಕಾದ ಸನ್​; ಮುಂಬೈಗೆ 7 ವಿಕೆಟ್​ ಭರ್ಜರಿ ಗೆಲುವು

Narendra Modi
ದೇಶ2 hours ago

Maldives: ಭಾರತೀಯರೇ, ದಯಮಾಡಿ ಬನ್ನಿ ಎಂದ ಮಾಲ್ಡೀವ್ಸ್‌ ಸಚಿವ; ಬಾಯ್ಕಾಟ್‌ ಪೆಟ್ಟಿಗೆ ಥಂಡಾ!

DK Shivakumar
ಕರ್ನಾಟಕ2 hours ago

Prajwal Revanna Case: ದೇವರಾಜೇಗೌಡ ನನ್ನ ವಿರುದ್ಧ ಸುಳ್ಳು ಅಪಾದನೆ ಮಾಡಿದ್ದಾರೆ ಎಂದ ಡಿಕೆಶಿ

T20 World Cup 2024
ಕ್ರೀಡೆ2 hours ago

T20 World Cup 2024 : ಕೇಸರಿಯ ರಂಗು; ಟೀಮ್​ ಇಂಡಿಯಾದ ಟಿ20 ವಿಶ್ವ ಕಪ್​​ ಜೆರ್ಸಿ ಬಿಡುಗಡೆ

108 Ambulance
ಕರ್ನಾಟಕ3 hours ago

108 Ambulance: 108 ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್

IPL 2024
ಪ್ರಮುಖ ಸುದ್ದಿ3 hours ago

IPL 2024 : ಮುಂಬೈ ಚಾ ರಾಜಾ ರೋಹಿತ್​ ಶರ್ಮಾ ಎಂದು ಕೂಗಿದ ಹೇಡನ್​ ಪುತ್ರಿ ಗ್ರೇಸ್​​; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ7 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ7 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ7 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ21 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ1 day ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ1 day ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌