ಅಪಾನವಾಯು: ಪಕ್ಕದವರು ಮೂಗು ಮುಚ್ಚದಿರಲು ಏನು ಮಾಡಬಹುದು? - Vistara News

ಆರೋಗ್ಯ

ಅಪಾನವಾಯು: ಪಕ್ಕದವರು ಮೂಗು ಮುಚ್ಚದಿರಲು ಏನು ಮಾಡಬಹುದು?

ಅಪಾನವಾಯುವಿನ ಸಮಸ್ಯೆಯಿದ್ದರೆ ನಿಮ್ಮ ಜೀರ್ಣಕ್ರಿಯೆಯ ಬಗ್ಗೆ ನೀವು ಗಮನ ಕೊಡಬೇಕೆಂಬುದೇ ಅರ್ಥ. ಸರಿಯಾಗಿ ಪಚನವಾಗದ ಆಹಾರದಿಂದ ಉಂಟಾಗುವ ಗ್ಯಾಸ್‌ ಇದು.

VISTARANEWS.COM


on

farting
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗ್ಯಾಸ್‌/ಅಪಾನವಾಯು ಬಹಳ ಮಂದಿಗೆ ಸಮಸ್ಯೆ. ಎಲ್ಲರ ಮಧ್ಯೆ ಸಶಬ್ದವಾಗಿ ಗ್ಯಾಸ್‌ ಹೊರಬಂದರೆ ಮುಜುಗರವಾಗುವುದು ಸಾಮಾನ್ಯ. ಕೆಟ್ಟ ವಾಸನೆಯೂ ಇದ್ದರೆ ಕತೆ ಮುಗಿದಂತೆಯೇ. ಆರೋಗ್ಯಕ್ಕೆ ಸಂಬಂಧಿಸಿದಂತೆ ಇದು ಹೇಳಿಕೊಳ್ಳುವಂತಹ ಸಮಸ್ಯೆ ಅಲ್ಲದಿದ್ದರೂ ಬಹಳ ಮಂದಿ ತೊಂದರೆ ಪಡುವ, ಮುಜುಗರಕ್ಕೆ ಸಿಲುಕುವ ಸಮಸ್ಯೆಯಂತೂ ನಿಜ.

ಅಧ್ಯಯನದ ಪ್ರಕಾರ, ಆರೋಗ್ಯವಂತ ಮಂದಿ ದಿನಕ್ಕೆ ೧೩ರಿಂದ ೨೧ ಬಾರಿ ಗ್ಯಾಸ್‌ ಪಾಸ್‌ ಮಾಡುತ್ತಾರಂತೆ. ಆದರೆ, ಬಹುತೇಕ ಇವೆಲ್ಲವೂ ವಾಸನೆರಹಿತ ನಿರುಪದ್ರವಿ. ಯಾರು ಯಾವಾಗ ಎಷ್ಟು ಹೊತ್ತಿನಲ್ಲಿ ಗ್ಯಾಸ್‌ ಬಿಟ್ಟರು ಎಂಬುದು ಪಕ್ಕದವರಿಗೂ ಗೊತ್ತೇ ಆಗುವುದಿಲ್ಲ. ಹಾಗಾಗಿ ಪ್ರತಿದಿನ ಬಿಡುವ ಅಪಾನವಾಯು ಆರೋಗ್ಯಕರವೇ. ನಾವು ಉಸಿರಾಡುವ ಮಾತನಾಡುವ ಸಂದರ್ಭ ಬಾಯಿಯಿಂದ ಕುಡಿದ ಗಾಳಿಯೇ ಸಂಗ್ರಹವಾಗಿ ಇಂತಹ ನಿರುಪದ್ರವಿ ಅಪಾನವಾಯುವಾಗಿ ಹೊರಗೆ ಹೋಗುತ್ತವೆ.

ಆದರೆ ಸಮಸ್ಯೆಯಿರುವುದು ಕೊಳೆತು ನಾರುವ ಅಪಾನವಾಯುವಿನದ್ದೇ. ಟೊಮೇಟೋ, ಹಸಿ ಮೊಟ್ಟೆ ಕೊಳೆತು ಹೋದಂತ ವಾಸನೆಯ ಅಪಾನವಾಯು ಇದ್ದಕ್ಕಿದ್ದಂತೆ ಸಾರ್ವಜನಿಕ ಸ್ಥಳದಲ್ಲಿ ಪಸರಿಸಿದರೆ ಎಲ್ಲರೂ ಮೂಗು ಮುಚ್ಚಲೋ ಬೇಡವೋ ಎಂಬ ಹಿಂಸೆಯಿಂದ ನರಳಾಡಿಬಿಡುತ್ತಾರೆ. ಬಿಟ್ಟವರಿಗೂ, ಪಕ್ಕದಲ್ಲಿದ್ದವರಿಗೂ ಹಿಂಸೆಯೇ. ಇಂಥ ವಾಯುವಿನ ಸಮಸ್ಯೆಯಿದ್ದರೆ ನಿಮ್ಮ ಜೀರ್ಣಕ್ರಿಯೆಯ ಬಗ್ಗೆ ನೀವು ಗಮನ ಕೊಡಬೇಕೆಂಬುದೇ ಅರ್ಥ. ಸರಿಯಾಗಿ ಪಚನವಾಗದ ಆಹಾರದಿಂದ ಉಂಟಾಗುವ ಗ್ಯಾಸ್‌ ಇದು. ಸಮಸ್ಯೆಯ ಮೂಲ ಇರುವುದೇ ಅಲ್ಲಿ!

ನಿಮ್ಮ ಗ್ಯಾಸ್‌ ವಿಪರೀತ ವಾಸನೆಯಿಂದ ಕೂಡಿದ್ದರೆ ನೀವು ನಿಮ್ಮ ಆಹಾರದ ಮೇಲೆ ಗಮನ ಕೊಡಬೇಕು. ಮುಖ್ಯವಾಗಿ ಸಲ್ಫರ್‌ಯುಕ್ತ ಆಹಾರ ಸೇವನೆಯಿಂದ ವಾಸನೆಯುಕ್ತ ಗ್ಯಾಸ್‌ ಪಚನಕ್ರಿಯೆಯ ಸಂದರ್ಭ ಉತ್ಪಾದನೆಯಾಗುತ್ತದೆ. ಉದಾಹರಣೆಗೆ, ಕ್ಯಾಬೇಜ್‌, ಕಾಫಿ, ಡೈರಿ ಉತ್ಪನ್ನಗಳು, ಚಿಕನ್‌, ಆಲ್ಕೋಹಾಲ್ ಸೇವನೆ ಇತ್ಯಾದಿಗಳಿಂದ ಹೆಚ್ಚು ಗ್ಯಾಸ್‌ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಗ್ಯಾಸ್‌ಗೆ ಕಾರಣ ಇಷ್ಟೇ ಅಲ್ಲ. ಆಸ್ಪಿರಿನ್‌ನಂತಹ ಔಷಧಿಗಳಿಂದಲೂ ಗ್ಯಾಸ್‌ ಉಂಟಾಗುತ್ತದೆ. ಆಹಾರದ ಅಲರ್ಜಿಗಳೂ ಕೆಲವರಲ್ಲಿ ಗ್ಯಾಸ್‌ ಉಂಟು ಮಾಡುತ್ತದೆ. ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇರುವ ಮಂದಿಯಲ್ಲೂ, ಮಲಬದ್ಧತೆ, ಅಜೀರ್ಣ ಕೂಡಾ ಈ ಕೆಟ್ಟ ವಾಸನೆಯ ವಾಯುವನ್ನು ತರಿಸುತ್ತದೆ.

ಹಾಗಾದರೆ, ಈ ತೊಂದರೆಗೆ ಆಗಾಗ ಸಿಲುಕುವ ಮಂದಿ ಕೆಲವು ಬಗೆಯ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡುವುದು ಉಚಿತ. ಕಾರ್ಬೋಹೈಡ್ರೇಟ್‌ ಹೇರಳವಾಗಿರುವ ಆಹಾರ ಇಂತಹ ಮಂದಿಗೆ ಒಳ್ಳೆಯದಲ್ಲ. ಲ್ಯಾಕ್ಟೋಸ್‌, ಫ್ರಕ್ಟೋಸ್‌, ಸ್ಟಾರ್ಚ್‌ ಹೆಚ್ಚಿರುವ ಆಹಾರಗಳನ್ನೂ ಕಡಿಮೆ ಮಾಡುವುದು ಒಳ್ಳೆಯದು. ಬೀನ್ಸ್‌, ಕ್ಯಾಬೇಜ್‌, ಮೊಳಕೆ ಕಾಳುಗಳು, ಬ್ರೋಕೋಲಿ, ಈರುಳ್ಳಿ, ಬೆಳ್ಳುಳ್ಳಿ, ಪೀಯರ್‌ನಂಯ ಹಣ್ಣುಗಳು, ಕಾರ್ಬೋನೇಟೆಡ್‌ ಡ್ರಿಂಕ್‌ಗಳು, ಡೈರಿ ಉತ್ಪನ್ನಗಳು, ಗೋಧಿ, ಜೋಳ, ಆಲೂಗಡ್ಡೆ ಹಾಗೂ ಇತರ ಸ್ಟಾರ್ಚ್‌ ಇರುವ ವಸ್ತುಗಳು ಹೆಚ್ಚು ಗ್ಯಾಸ್‌ಗೆ ಕಾರಣವಾಗುತ್ತದೆ. ಗ್ಯಾಸ್‌ಗೆ ಕಾರಣವಾಗುವ ಈ ಹಣ್ಣು ತರಕಾರಿಗಳು ತಮಗೆ ಹೊಂದುವುದಿಲ್ಲ ಎಂದು ಬಳಸದೇ ಇರುವುದಲ್ಲ. ಯಾಕೆಂದರೆ ಇವುಗಳು ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದವುಗಳೇ ಆಗಿರುವುದರಿಂದ ಇವುಗಳನ್ನು ಸಮಸ್ಯೆ ಇರುವ ಮಂದಿ ಮಿತವಾಗಿ ಬಳಸಬಹುದು.

ಹಾಗಾದರೆ ಗ್ಯಾಸ್‌ ತೊಂದರೆ ನಿವಾರಣೆಗೆ ಏನು ಮಾಡಬಹುದು? ಕೆಲವು ಸುಲಭೋಪಾಯಗಳು ಹೀಗಿವೆ.

೧. ನಿಧಾನವಾಗಿ ತಿನ್ನಿ. ಗಬಗಬನೆ ತಿನ್ನುವ ಮಂದಿ ಆಹಾರದ ಜೊತೆಗೆ ಸಾಕಷ್ಟು ಗಾಳಿಯನ್ನೂ ತಿನ್ನುವ ಸಾಧ್ಯತೆ ಹೆಚ್ಚಿರುವುದರಿಂದ ಆಹಾರದ ಜೊತೆಗೆ ಸಾಕಷ್ಟು ಗಾಳಿಯೂ ಹೊಟ್ಟೆ ಸೇರುತ್ತದೆ. ಇದು ಗ್ಯಾಸ್‌ಗೆ ಕಾರಣವಾಗುತ್ತದೆ. ಹಾಗಾಗಿ ನಿಧಾನವಾಗಿ ತಿನ್ನುವುದು ಒಳ್ಳೆಯದು.

೨. ಧೂಮಪಾನ ಬಿಡಿ. ಪ್ರತಿ ಸಲ ಸಿಗರೇಟು ಸೇದುವಾಗಲೂ ಸಾಕಷ್ಟು ಗಾಳಿಯನ್ನೂ ಹೊಟ್ಟೆಯೊಳಗೂ ತೆಗೆದುಕೊಳ್ಳುವುದರಿಂದ ಗ್ಯಾಸ್‌ ಸಮಸ್ಯೆ ಹೆಚ್ಚಾಗುತ್ತದೆ. ಅದಕ್ಕಾಗಿ ಧೂಮಪಾನ ಬಿಡಿ.

೩. ವ್ಯಾಯಾಮ ಮಾಡಿ. ಸುಮ್ಮನೆ ಕೂತಿರುವುದೂ ಕೂಡಾ ಗ್ಯಾಸ್‌ ಹೆಚ್ಚಾಗುವಂತೆ ಮಾಡುತ್ತದೆ. ಹಾಗಾಗಿ ಪ್ರತಿದಿನವೂ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಗ್ಯಾಸ್‌ ಸಮಸ್ಯೆಗೆ ಕೊಂಚ ಪರಿಹಾರ ಕಾಣಬಹುದು.

೪. ಮಲಬದ್ಧತೆ ಸಮಸ್ಯೆಯಿದ್ದರೆ, ಮೊದಲು ಅದನ್ನು ಸರಿಪಡಿಸಿಕೊಳ್ಳಿ. ಮಲಬದ್ಧತೆಯಲ್ಲಿಯೇ ನಿಮ್ಮ ಗ್ಯಾಸ್‌ ಸಮಸ್ಯೆಯ  ಗುಟ್ಟಿದೆ.‌

ಇದನ್ನೂ ಓದಿ | Diabetes Diet | ಮಧುಮೇಹ ನಿಯಂತ್ರಣಕ್ಕೆ ಇದೊಂದು ಸೂತ್ರ ನೆನಪಿಟ್ಟುಕೊಳ್ಳಿ

೫. ಚ್ಯೂಯಿಂಗ್‌ ಗಮ್‌ ಜಗಿಯುವುದನ್ನು ಬಿಡಿ. ಶುಗರ್‌ ಫ್ರೀ ಚ್ಯೂಯಿಂಗ್‌ಗಂಗಳಲ್ಲಿರುವ ಪ್ರಮುಖ ಪದಾರ್ಥ ಎಂದರೆ ಅದು ಹೆಕ್ಸಿಟಾಲ್.‌ ಈ ಪದಾರ್ಥ ಜೀರ್ಣವಾಗದಿದ್ದರೂ ಗ್ಯಾಸ್‌ ಉಂಟಾಗುತ್ತದೆ. ಪದೇ ಪದೇ ಗಂ ಜಗಿಯುವ ಅಭ್ಯಾಸ ಇದ್ದರೆ ಕಡಿಮೆ ಮಾಡಿ, ಇಲ್ಲವೇ ಬಿಡಿ.

೬. ನಿಮಗೆ ಯಾವ ಆಹಾರದಿಂದ ಅಲರ್ಜಿ ಇದೆಯೆಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಇದು ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಿದೆ. ಅಂಥ ಆಹಾರವನ್ನು ಕಡಿಮೆ ಮಾಡಿ.

೭. ಮಜ್ಜಿಗೆಯಂಥ ಪ್ರೊಬಯಾಟಿಕ್‌ ಆಹಾರವನ್ನು ದಿನನಿತ್ಯ ಬಳಸಿ. ಎನ್‌ಜೈಮ್‌ ಸಪ್ಲಿಮೆಂಟ್‌ ಸೇವಿಸಬಹುದು.

೮. ಮನೆಮದ್ದುಗಳನ್ನು ಮಾಡಬಹುದು. ಉದಾಹರಣೆಗೆ ಜೀರಿಗೆ ನೀರು ಕುಡಿಯುವುದು, ಇಂಗನ್ನು ಬಿಸಿನೀರಿನಲ್ಲಿ ಅಥವಾ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದು, ತುರಿದ ಶುಂಠಿಯನ್ನುನಿಂಬೆಹಣ್ಣಿನ ಜ್ಯೂಸ್‌ ಜೊತೆಗೆ ಹಾಕಿ ಊಟವಾದ ನಂತರ ಕುಡಿಯುವುದು, ಒಂದು ಕಪ್‌ ನೀರಿಗೆ ತ್ರಿಫಲ ಚೂರ್ಣ ಹಾಕಿ ಕುಡಿಯುವುದು ಇತ್ಯಾದಿಗಳನ್ನೂ ಮಾಡಬಹುದು.

ಇದನ್ನೂ ಓದಿ | World Heart day | ವಾಲ್ನಟ್‌ ತಿನ್ನಿ, ಹೃದಯದ ಆರೋಗ್ಯ ಕಾಪಾಡಿಕೊಳ್ಳಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Serial Bride: ಹಲವು ಜನರನ್ನು ಮದುವೆಯಾಗಿ ವಂಚಿಸಿದ್ದ ಮಹಿಳೆಗೆ ಎಚ್‌ಐವಿ; ಮಾಜಿ ವರಗಳಿಗಾಗಿ ಶೋಧ!

Serial Bride: ಅರೇಂಜ್‌ ಮ್ಯಾರೇಜ್‌ ಹೆಸರಿನಲ್ಲಿ ಮಹಿಳೆಯು ಹಲವರಿಗೆ ವಂಚಿಸಿದ್ದಳು. ತಾನು ಸೇರಿ ಏಳು ಜನರ ಗ್ಯಾಂಗ್‌ ಕಟ್ಟಿದ್ದ ಮಹಿಳೆಯು, ವಯಸ್ಸಾದರೂ ಮದುವೆಯಾಗದವರು, ಕಂಕಣ ಭಾಗ್ಯ ಕೂಡಿ ಬರದವರು, ಹೆಂಡತಿ ತೀರಿಕೊಂಡ ಬಳಿಕ ಒಂಟಿಯಾದವರನ್ನು ಗುರುತಿಸಿ, ಅವರನ್ನು ಮದುವೆಯಾಗುತ್ತಿದ್ದಳು. ಬಳಿಕ ಅವರ ಹಣ, ಚಿನ್ನ ಕದ್ದು ಪರಾರಿಯಾಗುತ್ತಿದ್ದಳು. ಈಗ ಈಕೆ ಜೈಲಿನಲ್ಲಿದ್ದು, ಎಚ್‌ಐವಿ ದೃಢಪಟ್ಟಿದೆ. ಇದು ಈಗ ಪೊಲೀಸರು ಹಾಗೂ ವೈದ್ಯಾಧಿಕಾರಿಗಳಿಗೆ ಹೊಸ ಆತಂಕ ತಂದೊಡ್ಡಿದೆ.

VISTARANEWS.COM


on

Serial Bride
Koo

ಲಖನೌ: ದೇಶದ ಹಲವೆಡೆ ಹತ್ತಾರು ಜನರನ್ನು ನಂಬಿಸಿ, ಅವರನ್ನು ಮದುವೆಯಾಗಿ, ಬಳಿಕ ಅವರ ಚಿನ್ನ ಹಾಗೂ ನಗದನ್ನು ದೋಚಿ ಪರಾರಿಯಾಗುತ್ತಿದ್ದ, ಸೀರಿಯಲ್‌ ಬ್ರೈಡ್‌ (ಸರಣಿ ಮದುಮಗಳು ಅಥವಾ Serial Bride) ಎಂದೇ ಖ್ಯಾತಿಯಾಗಿದ್ದ ಮಹಿಳೆಗೆ ಈಗ ಎಚ್‌ಐವಿ ದೃಢಪಟ್ಟಿರುವುದು ವೈದ್ಯಕೀಯ ವರದಿಗಳಿಂದ ಸಾಬೀತಾಗಿದೆ. ಇದು ಈಗ ಪೊಲೀಸರಿಗೆ ಮತ್ತೊಂದು ಸವಾಲಾಗಿದ್ದು, ಈಕೆಯನ್ನು ಮದುವೆಯಾಗಿದ್ದ ಮಾಜಿ ಪತಿಯರನ್ನು ಹುಡುಕಲು ಉತ್ತರ ಪ್ರದೇಶ (Uttar Pradesh) ಹಾಗೂ ಉತ್ತರಾಖಂಡದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಅರೇಂಜ್‌ ಮ್ಯಾರೇಜ್‌ ಹೆಸರಿನಲ್ಲಿ ಮಹಿಳೆಯು ಹಲವರಿಗೆ ವಂಚಿಸಿದ್ದಳು. ತಾನು ಸೇರಿ ಏಳು ಜನರ ಗ್ಯಾಂಗ್‌ ಕಟ್ಟಿದ್ದ ಮಹಿಳೆಯು, ವಯಸ್ಸಾದರೂ ಮದುವೆಯಾಗದವರು, ಕಂಕಣ ಭಾಗ್ಯ ಕೂಡಿ ಬರದವರು, ಹೆಂಡತಿ ತೀರಿಕೊಂಡ ಬಳಿಕ ಒಂಟಿಯಾದವರನ್ನು ಗುರುತಿಸಿ, ಅವರನ್ನು ಮದುವೆಯಾಗುತ್ತಿದ್ದಳು. ಮದುವೆಯಾದ ಬಳಿಕ ಗ್ಯಾಂಗ್‌ನ ಸದಸ್ಯರನ್ನು ತನ್ನ ಸಂಬಂಧಿಕರು ಎಂದು ನೂತನ ವರಗಳಿಗೆ ಪರಿಚಯ ಮಾಡಿಸುತ್ತಿದ್ದಳು. ಇದಾದ ಬಳಿಕ, ಆ ವ್ಯಕ್ತಿಯ ಬಳಿಯ ನಗದು, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದಳು.

World Aids Vaccine Day

ಹೀಗೆ, ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಹಲವರಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆ ಹಾಗೂ ಆರು ಆರೋಪಿಗಳನ್ನು ಬಂಧಿಸಿದ್ದರು. ಮಹಿಳೆಯ ಸೇರಿ ಏಳು ಜನರನ್ನು ಮುಜಫ್ಫರ್‌ನಗರ ಜೈಲಿನಲ್ಲಿ ಇರಿಸಲಾಗಿದೆ. ಇತ್ತೀಚೆಗೆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಜಿಲ್ಲಾಸ್ಪತ್ರೆಯ ವೈದ್ಯರು ನೀಡಿದ ವರದಿಯಲ್ಲಿ, ಮಹಿಳೆಗೆ ಏಡ್ಸ್‌ ಇರುವುದು ಪತ್ತೆಯಾಗಿದೆ. ಇದು ಈಗ ಭೀಕರ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಿದೆ.

“ಮಹಿಳೆಯು ಹಲವು ಜನರಿಗೆ ವಂಚಿಸಿದ್ದು, ಹತ್ತಾರು ಜನರು ಈಕೆಯ ಜತೆ ದೈಹಿಕ ಸಂಪರ್ಕಕ್ಕೆ ಬಂದಿದ್ದಾರೆ. ಈಗ ಮಹಿಳೆಗೆ ಎಚ್‌ಐವಿ ಇದೆ ಎಂಬುದು ಇತ್ತೀಚಿನ ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ. ಈಕೆಯ ಜತೆ ಲೈಂಗಿಕ ಸಂಪರ್ಕ ಹೊಂದಿದವರು, ಮದುವೆಯಾದವರನ್ನು ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಹುಡುಕಲಾಗುತ್ತಿದೆ” ಎಂದು ಮುಜಫ್ಫರ್‌ನಗರ ಜೈಲು ಎಸ್‌ಪಿ ಸೀತಾರಾಮ್‌ ಶರ್ಮಾ ಅವರು ಸುದ್ದಿಗಾರರರಿಗೆ ಮಾಹಿತಿ ನೀಡಿದ್ದಾರೆ. ಇನ್ನು, ಈಕೆಯನ್ನು ಮದುವೆಯಾದವರು ಕೂಡಲೇ ಎಚ್‌ಐವಿ ತಪಾಸಣೆ ಮಾಡಿಸಿಕೊಳ್ಳಿ ಎಂಬುದಾಗಿ ವೈದ್ಯಾಧಿಕಾರಿಗಳು ಕರೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Sebi Fines: ವಂಚನೆ ಪ್ರಕರಣ; ಟಿವಿ ನಿರೂಪಕ, ವಿಶ್ಲೇಷಕನಿಗೆ ತಲಾ 1 ಕೋಟಿ ರೂ. ದಂಡ ವಿಧಿಸಿದ ಸೆಬಿ

Continue Reading

ಆರೋಗ್ಯ

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Weight loss Tips: ವಯಸ್ಸೆಂಬುದು ಒಂದು ಸಂಖ್ಯೆ ಮಾತ್ರ ಎನ್ನುವವರು ಲೋಕದ ತುಂಬೆಲ್ಲ ಇದ್ದಾರೆ. ಹಾಗಾದರೆ ವಯಸ್ಸೆಷ್ಟು ಎಂದು ಕೇಳಿದರೆ, ಅದೊಂದು ಸಂಖ್ಯೆಯನ್ನು ಹೇಳಲು ಸಿದ್ಧರಿರುವುದಿಲ್ಲ! ವಯಸ್ಸನ್ನು ಹೇಳಿದರೂ ಹೇಳದಿದ್ದರೂ ಆಗುವುದಂತೂ ಹೌದಲ್ಲ? ಅದರಲ್ಲೂ ನಮ್ಮ ಅಂಗಾಂಗಗಳು ತಮ್ಮ ಕ್ಷಮತೆಯಲ್ಲಿ ಅದನ್ನು ತೋರಿಸಿಯೇ ಬಿಡುತ್ತವೆ. ಉದಾ, ಹಿಂದೊಮ್ಮೆ ಕಲ್ಲನ್ನಾದರೂ ತಿಂದು ಕರಗಿಸುತ್ತಿದ್ದ ಹೊಟ್ಟೆ, ಈಗೀಗ ಊಟವನ್ನೇ ಅರಗಿಸುವುದಕ್ಕೆ ಉಸ್ಸಪ್ಪ ಎನ್ನುವುದಾದರೆ, ವಯಸ್ಸು 40 ದಾಟಿದ್ದು ಹೌದು ಎಂದರ್ಥ. ಹಾಗಾದರೆ ಪ್ರಾಯ 40 ಆದ ಮೇಲೆ ದೇಹದ ಕೊಬ್ಬು ಕರಗಿಸುವುದು ಹೇಗೆ?

VISTARANEWS.COM


on

Weight Loss Tips
Koo

ಹಿಂದೆ ಕಲ್ಲನ್ನಾದರೂ ತಿಂದು (Weight loss Tips) ಕರಗಿಸುತ್ತಿದ್ದ ಹೊಟ್ಟೆ, ಈಗೀಗ ಊಟವನ್ನೇ ಅರಗಿಸುವುದಕ್ಕೆ ಉಸ್ಸಪ್ಪ ಎನ್ನುವುದಾದರೆ, ವಯಸ್ಸು 40 ದಾಟಿದ್ದು ಹೌದು ಎಂದರ್ಥ. ಈ ಗುಟ್ಟನ್ನು ದೇಹದ ಚಯಾಪಚಯ ಹೇಳಿಯೇ ಬಿಡುತ್ತದೆ. ತಿಂದಿದ್ದು ಕರಗುತ್ತಿಲ್ಲ ಎಂದಾದರೆ ಆ ಕೊಬ್ಬೆಲ್ಲ ಕುಳಿತುಕೊಳ್ಳುವುದು ದೇಹದಲ್ಲೇ ತಾನೆ? ಹಾಗಾದರೆ ಪ್ರಾಯ 40 ಆದ ಮೇಲೆ ದೇಹದ ಕೊಬ್ಬು ಕರಗಿಸುವುದು ಹೇಗೆ?

Weight Loss Benefits Of Eating Roasted Peanuts Daily

ವಯಸ್ಸೆಂಬುದು ಒಂದು ಸಂಖ್ಯೆ ಮಾತ್ರ ಎನ್ನುವವರು ಲೋಕದ ತುಂಬೆಲ್ಲ ಇದ್ದಾರೆ. ಹಾಗಾದರೆ ವಯಸ್ಸೆಷ್ಟು ಎಂದು ಕೇಳಿದರೆ, ಅದೊಂದು ಸಂಖ್ಯೆಯನ್ನು ಹೇಳಲು ಸಿದ್ಧರಿರುವುದಿಲ್ಲ! ಇರಲಿ, ವಿಷಯ ಅದಲ್ಲ. ವಯಸ್ಸನ್ನು ಹೇಳಿದರೂ ಹೇಳದಿದ್ದರೂ, ಆಗುವುದಂತೂ ಹೌದಲ್ಲ. ಅದರಲ್ಲೂ ನಮ್ಮ ಅಂಗಾಂಗಗಳು ತಮ್ಮ ಕ್ಷಮತೆಯಲ್ಲಿ ಅದನ್ನು ತೋರಿಸಿಯೇ ಬಿಡುತ್ತವೆ. ಉದಾ, ಹಿಂದೊಮ್ಮೆ ಕಲ್ಲನ್ನಾದರೂ ತಿಂದು ಕರಗಿಸುತ್ತಿದ್ದ ಹೊಟ್ಟೆ, ಈಗೀಗ ಊಟವನ್ನೇ ಅರಗಿಸುವುದಕ್ಕೆ ಉಸ್ಸಪ್ಪ ಎನ್ನುವುದಾದರೆ, ವಯಸ್ಸು ೪೦ ದಾಟಿದ್ದು ಹೌದು. ಈ ಗುಟ್ಟನ್ನು ದೇಹದ ಚಯಾಪಚಯ ಹೇಳಿಯೇ ಬಿಡುತ್ತದೆ. ತಿಂದಿದ್ದು ಕರಗುತ್ತಿಲ್ಲ ಎಂದಾದರೆ ಆ ಕೊಬ್ಬೆಲ್ಲ ಕುಳಿತುಕೊಳ್ಳುವುದು ದೇಹದಲ್ಲೇ ತಾನೆ? ಹಾಗಾದರೆ ಪ್ರಾಯ 40 ಆದ ಮೇಲೆ ದೇಹದ ಕೊಬ್ಬು ಕರಗಿಸುವುದು ಹೇಗೆ? ಹೆಚ್ಚಿನ ಸಾರಿ ತೂಕ ಕರಗಿಸುವ ಭರದಲ್ಲಿ ಚುಟುಕು ಡಯೆಟ್‌ಗಳ ಮೊರೆ ಹೋಗುತ್ತೇವೆ. ಆಗದಿರುವಂಥ ಸರ್ಕಸ್‌ಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಇದರ ಪರಿಣಾಮವೇನೆಂದರೆ ದೇಹದಲ್ಲಿ ಕೊಬ್ಬು ಕರಗುವ ಬದಲು, ನೀರಿನಿಂದ ಇರುವಂಥ ತೂಕ ಮಾತ್ರವೇ ಕ್ಷಿಪ್ರವಾಗಿ ಕರಗುತ್ತದೆ. ಅದೂ ಇಲ್ಲದಿದ್ದರೆ ಸ್ನಾಯುಗಳು ಮಾಯವಾಗಿ ದೇಹ ತೊಂದರೆಗೆ ಸಿಲುಕುತ್ತದೆ. ಇದರ ಜೊತೆಗೆ ತಪ್ಪಾಗಿ ವ್ಯಾಯಾಮಗಳನ್ನೂ ಮಾಡಿದರೆ, ಗಾಯಗಳ ಸಮಸ್ಯೆ ತಲೆದೋರುತ್ತದೆ. ಪ್ರಾಯ ಹೆಚ್ಚುತ್ತಿದ್ದಂತೆ ಗಾಯ ಮಾಯುವುದು ನಿಜಕ್ಕೂ ಕಷ್ಟ. ಹಾಗಾದರೆ ಸುಸ್ಥಿರವಾಗಿ ಮತ್ತು ಸುರಕ್ಷಿತವಾಗಿ ತೂಕ ಇಳಿಸುವುದಕ್ಕೆ 40ರ ನಂತರ ಏನು ಮಾಡಬೇಕು?

Dieting concept. Healthy Food. Beautiful Young Asian Woman

ಆಹಾರದ ಬಗ್ಗೆ ಗಮನ

ಬೆಳಗಿನ ಉಪಾಹಾರದಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ಒದಗಿಸಬೇಕು ಜೊತೆಗೆ ಕ್ಯಾಲರಿ ಇಳಿಸಬೇಕು. ಅಂದರೆ, ನಿಮಗೆ ಬೆಳಗ್ಗೆ 1200 ಕ್ಯಾಲರಿಯ ಆಹಾರ ಬೇಕು ಎಂದಿದ್ದರೆ, ಅದನ್ನು ಅಂದಾಜು 900 ಕ್ಯಾಲರಿಗಳಿಗೆ ಇಳಿಸುವುದು. ಈ ಆಹಾರದಲ್ಲಿ ಪ್ರೊಟೀನ್‌ ಮತ್ತು ಸಂಕೀರ್ಣ ಪಿಷ್ಟಗಳು ಭರಿತವಾಗಿ ಇರಬೇಕು. ಇದರಿಂದ ಶರೀರ ಸೊರಗುವುದಿಲ್ಲ ಮತ್ತು ಹಸಿವೂ ಆಗುವುದಿಲ್ಲ. ದೇಹಕ್ಕೆ ಬೇಕಾದ ಉಳಿದ 300 ಕ್ಯಾಲರಿಯನ್ನು ಶರೀರ ತನ್ನ ಕೊಬ್ಬಿನ ದಾಸ್ತಾನಿನಿಂದ ತೆಗೆದುಕೊಳ್ಳುತ್ತದೆ. ಇದನ್ನು ಎಲ್ಲಾ ಹೊತ್ತಿನ ಆಹಾರಗಳಲ್ಲೂ ಕ್ರಮೇಣ ಅಳವಡಿಸಿಕೊಳ್ಳಬಹುದು. ಋತುಮಾನದ ಸೊಪ್ಪು-ಹಣ್ಣು-ತರಕಾರಿಗಳು ಊಟದಲ್ಲಿ ಸಾಕಷ್ಟಿರಲಿ. ಇದರಿಂದ ನಾರು ಭರಪೂರ ದೊರೆಯುತ್ತದೆ. ಖನಿಜಗಳು ಕೊರತೆಯಾಗದಂತೆ ನೋಡಿಕೊಳ್ಳಲು ಇದಿಷ್ಟು ಆಹಾರಗಳು ಸಾಕಾಗುತ್ತವೆ. ಜೊತೆಗೆ ಚೆನ್ನಾಗಿ ನೀರು ಕುಡಿಯಿರಿ.

Asia woman doing yoga fitness exercise Inflammation

ವ್ಯಾಯಾಮ

ಯೋಗದಂಥ ವ್ಯಾಯಾಮಗಳು ಸರಳ ಎನ್ನಿಸಿದರೂ ಹಲವು ರೀತಿಯಲ್ಲಿ ಪ್ರಯೋಜನಕಾರಿ. ದೇಹ-ಮನಸ್ಸುಗಳನ್ನು ಶಾಂತವಾಗಿಸುವುದರ ಜೊತೆಗೆ, ದೇಹದ ವಿವಿಧ ಸ್ನಾಯುಗಳನ್ನು ಸಶಕ್ತಗೊಳಿಸುತ್ತವೆ. ಕೀಲುಗಳ ಆರೋಗ್ಯ ಸುಧಾರಿಸಿ ದೇಹದ ನಮ್ಯತೆಯನ್ನೂ ಹೆಚ್ಚಿಸುತ್ತದೆ. ಇವೆಲ್ಲ ಕ್ರಮೇಣ ನೆರವಾಗುವುದು ದೇಹದ ಕೊಬ್ಬು ಕರಗಿಸುವಲ್ಲಿ.

ಇದನ್ನೂ ಓದಿ: Seeds For Men Sexual Power: ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಈ ಬೀಜಗಳು ಪರಿಣಾಮಕಾರಿ!

ಕಾರ್ಡಿಯೊ

ಇದಕ್ಕಾಗಿ ಥ್ರೆಡ್‌ಮಿಲ್‌ಗಳ ಮೇಲೆ ಉಸಿರುಗಟ್ಟಿ ಓಡಬೇಕೆಂದಿಲ್ಲ. ಸರಳವಾಗಿ ಬೀಸು ನಡಿಗೆ, ಜಾಗಿಂಗ್‌ ಸಹ ಸಾಕಾಗುತ್ತದೆ. ನಿಮ್ಮಿಷ್ಟದ ಇಂಥ ಯಾವುದೇ ವ್ಯಾಯಾಮ ಮಾಡಬಹುದು. ಕಾರ್ಡಿಯೊ ವ್ಯಾಯಾಮಗಳು ದೇಹಕ್ಕೆ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಿ, ಹೃದಯದ ಆರೋಗ್ಯ ಹೆಚ್ಚಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಕ್ಯಾಲರಿ ಕರಗುವ ಪ್ರಮಾಣವನ್ನು ಅಧಿಕಗೊಳಿಸುತ್ತವೆ.

May Improve Sleep Quality Fish Benefits

ನಿದ್ದೆ

ಆರೋಗ್ಯದ ವಿಷಯ ಹೇಳುವಾಗ ನಿದ್ದೆಯನ್ನುಳಿದು ಮುಂದೆ ಹೋಗುವಂತೆಯೇ ಇಲ್ಲ. ತೂಕ ಇಳಿಸುವುದು, ಫಿಟ್‌ನೆಸ್‌ ಇತ್ಯಾದಿಗಳ ವಿಷಯ ಮಾತಾಡುವಾಗ ನಿದ್ದೆಯನ್ನು ಸಂಪೂರ್ಣ ಮರೆತೇ ಬಿಟ್ಟಿರುತ್ತೇವೆ. ದೇಹದ ರಿಪೇರಿಗೆ ಅಗತ್ಯ ಅವಕಾಶವನ್ನು ನೀಡದಿದ್ದರೆ ಯಾವುದೂ ಸರಿಯಾಗಿ ಆಗುವುದಿಲ್ಲ. ಆದರೆ ದಿನಕ್ಕೆ ಕಡ್ಡಾಯ 7-8 ತಾಸು ನಿದ್ದೆ ಮಾಡಿ. ಜೊತೆಗೆ, ನಿದ್ರೆಗೆಟ್ಟರೆ ತೂಕ ಹೆಚ್ಚುತ್ತದೆ. ನಿದ್ದೆ ಇಲ್ಲದಿದ್ದರೆ ಮಾನಸಿಕ ಒತ್ತಡ ಹೆಚ್ಚುತ್ತದೆ, ಇದರಿಂದಲೂ ತೂಕ ಏರುತ್ತದೆ. ಮತ್ತೆ ತೂಕ ಇಳಿಸುವುದು ಹೇಗೆ ಸಾಧ್ಯ?

Continue Reading

ಆರೋಗ್ಯ

Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

Health Tips Kannada: ʻಅಲ್ಲೇನಿದೆ? ಕುಂಬಳಕಾಯಿ!ʼ ಎಂದು ಸಸಾರ ಮಾಡುವಂತಿಲ್ಲ ಈ ತರಕಾರಿಯನ್ನು. ಕುಂಬಳಕಾಯಿಯ ಸತ್ವಗಳ ಬಗ್ಗೆ ತಿಳಿದರೆ, ಆಡಿಕೊಳ್ಳುವ ಬಾಯಿಗಳೆಲ್ಲ ಮುಚ್ಚಿಕೊಳ್ಳಬಹುದು. ಇಡೀ ಕುಂಬಳಕಾಯಿ ಬಿಡಿ, ಅದರ ಬೀಜಗಳ ಮಹಾತ್ಮೆಯನ್ನು ತಿಳಿದುಕೊಂಡರೂ ಸಾಕು ಎಷ್ಟೊಂದು ಆರೋಗ್ಯಕರ ಲಾಭಗಳನ್ನು ಪಡೆಯಬಹುದು ಗೊತ್ತೇ? ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

VISTARANEWS.COM


on

Health Tips Kannada
Koo

ಕುಂಬಳಕಾಯಿ ಎನ್ನುತ್ತಿದ್ದಂತೆ (Health Tips Kannada) ಹೆಗಲು ಮುಟ್ಟಿಕೊಳ್ಳುವ ವಿಷಯ ಅಲ್ಲವಿದು. ಕುಂಬಳಬೀಜದ ವಿಷಯ ನಾವಿಲ್ಲಿ ಮಾತಾಡುತ್ತಿರುವುದು. ʻಅಲ್ಲೇನಿದೆ. ಬರೀ ಕುಂಬಳಕಾಯಿʼ ಎನ್ನುವಂಥ ಮಾತುಗಳಿಂದ ಅದೊಂದು ಕೇವಲವಾದ ವಸ್ತು ಎನ್ನುವಂಥ ಭಾವ ಮೂಡುತ್ತದೆ. ಆದರೆ ಕುಂಬಳಕಾಯಿಯ ಸತ್ವಗಳ ಬಗ್ಗೆ ತಿಳಿದರೆ, ಆಡಿಕೊಳ್ಳುವ ಬಾಯಿಗಳೆಲ್ಲ ಮುಚ್ಚಿಕೊಳ್ಳಬಹುದು. ಇಡೀ ಕುಂಬಳಕಾಯಿ ಬಿಡಿ, ಅದರ ಬೀಜಗಳ ಮಹಾತ್ಮೆಯನ್ನು ತಿಳಿದುಕೊಂಡರೂ ಸಾಕು. ನಾವಿಂದು ಮಾಡುವುದಕ್ಕೆ ಹೊರಟಿರುವುದು ಅದನ್ನೇ… ಕುಂಬಳ ಬೀಜಗಳ ಸದ್ಗುಣಗಳನ್ನು ತಿಳಿಯಲು. ಹಲವು ಸಮಸ್ಯೆಗಳಿಗೆ ಸರಳ ಸಮಾಧಾನದಂತೆ ಈ ಪುಟ್ಟ ಬೀಜಗಳು ಕಂಡುಬರುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಹೃದಯದ ಆರೋಗ್ಯ ಸುಧಾರಿಸುವವರೆಗೆ ಹಲವು ರೀತಿಯಲ್ಲಿ ಕುಂಬಳಬೀಜ ನಮಗೆ ಉಪಕಾರಿಯಾಗಬಲ್ಲದು. ಹಲವು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಈ ಜೀವಗಳು, ಹಸಿವಾದಾಗ ಅಥವಾ ಕಳ್ಳ ಹಸಿವೆಯನ್ನು ನಿವಾರಿಸುವುದನ್ನು ಸುಮ್ಮನೆ ಬಾಯಾಡುವುದಕ್ಕೆ ಜೊತೆಯಾಗುತ್ತವೆ. ಇದನ್ನು ಗೋಡಂಬಿಯಂತೆ ಹಲವು ಖಾದ್ಯಗಳಿಗೆ ಬಳಸಬಹುದು. ಚಿಟಿಕೆ ಉಪ್ಪಿನೊಂದಿಗೆ ಹುರಿದರೆ, ಚಹಾ ಜೊತೆಗೆ ಬಾಯಿಗೆಸೆದುಕೊಳ್ಳಬಹುದು.

Immunity Against Diseases Kantola Benefits

ಪ್ರತಿರೋಧಕತೆ ಹೆಚ್ಚಳ

ವಿಟಮಿನ್‌ ಇ ಮತ್ತು ಜಿಂಕ್‌ ಸತ್ವಗಳಿಂದ ಸಮೃದ್ಧವಾಗಿರುವ ಈ ಬೀಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಸೋಂಕುಗಳ ವಿರುದ್ಧ ಹೋರಾಡುವಂಥ ಸಾಮರ್ಥ್ಯ ವಿಟಮಿನ್‌ ಇ ಗಿದೆ. ದೇಹದಲ್ಲಿ ಅಂಡಲೆಯುವ ಮುಕ್ತ ಕಣಗಳನ್ನು ಕಟ್ಟಿಹಾಕುವ ಸಾಧ್ಯತೆಯೂ ಇ ಜೀವಸತ್ವಕ್ಕಿದೆ. ಪ್ರತಿರೋಧಕ ಶಕ್ತಿಯನ್ನು ಜಾಗೃತಗೊಳಿಸುವ ಬಗ್ಗೆ ಸತುವಿನ ಕಾರ್ಯಸಾಮರ್ಥ್ಯ ಕಡಿಮೆಯೇನಿಲ್ಲ. ಹಾಗಾಗಿ ಮಳೆಗಾಲದ ಸೋಂಕುಗಳನ್ನು ಮಟ್ಟ ಹಾಕುವುದಕ್ಕೆ ಉಳಿದೆಲ್ಲ ಕ್ರಮಗಳ ಜೊತೆಗೆ ಕುಂಬಳಬೀಜ ಬಾಯಾಡಿಸುವುದನ್ನು ಮರೆಯಬೇಡಿ.

Vastu Tips

ನಿದ್ದೆ ಹೆಚ್ಚಳ

ಕುಂಬಳಬೀಜದಲ್ಲಿ ಟ್ರಿಪ್ಟೊಫ್ಯಾನ್‌ ಎಂಬ ಅಮೈನೊ ಆಮ್ಲವಿದೆ. ಇದು ಸೆರೊಟೋನಿನ್‌ ಮತ್ತು ಮೆಲಟೋನಿನ್‌ನಂಥ ಹ್ಯಾಪಿ ಹಾರ್ಮೋನುಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ಹಾರ್ಮೋನುಗಳು ನಮ್ಮ ಮೂಡ್‌ ಮತ್ತು ನಿದ್ದೆಯನ್ನು ನಿಯಂತ್ರಿಸುತ್ತವೆ. ಹಾಗಾಗಿ ನಿದ್ರಾಹೀನತೆಯನ್ನು ದೂರ ಮಾಡಿ, ಕಣ್ತುಂಬಾ ನಿದ್ದೆ ತರಿಸಿ, ದೇಹ-ಮನಸ್ಸುಗಳ ಆರೋಗ್ಯವನ್ನು ಕಾಪಾಡುವಲ್ಲಿ ಈ ಕಿರುಬೀಜಗಳದ್ದು ದೊಡ್ಡ ಕಾಣಿಕೆ.

ಉತ್ಕರ್ಷಣ ನಿರೋಧಕತೆ

ಇದರಲ್ಲಿ ವಿಟಮಿನ್‌ ಇ ಮಾತ್ರವಲ್ಲ, ದೊಡ್ಡ ಪ್ರಮಾಣದಲ್ಲಿ ಕೆರೊಟಿನಾಯ್ಡ್‌ಗಳೂ ಇವೆ. ಇವೆಲ್ಲ ದೇಹವನ್ನು ಉರಿಯೂತದಿಂದ ಕಾಪಾಡುವ ಗುಣವನ್ನು ಹೊಂದಿವೆ. ದೇಹದ ಕೋಶಗಳನ್ನು ಮುಕ್ತಕಣಗಳಿಂದ ಕಾಪಾಡಿ, ಅವುಗಳ ಜೀವಿತಾವಧಿಯನ್ನು ಹೆಚ್ಚಿಸುತ್ತವೆ. ಇದರಿಂದ ದಾಂಗುಡಿಯಿಡುವ ಮಾರಕ ರೋಗಗಳನ್ನು ದೂರ ಮಾಡುವುದಕ್ಕೆ ಸಾಧ್ಯವಾಗುತ್ತದೆ.

healthy internal organs of human digestive system

ಜೀರ್ಣಕಾರಿ

ಇದರಲ್ಲಿರುವ ನಾರಿನಂಶದಿಂದಾಗಿ ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ. ಮಲಬದ್ಧತೆಯನ್ನು ನಿವಾರಿಸಿ, ಪಚನಕ್ರಿಯೆಯನ್ನು ಚುರುಕಾಗಿಸುತ್ತದೆ. ನಾರುಯುಕ್ತ ಆಹಾರಗಳು ಜೀರ್ಣಾಂಗಗಳ ಆರೋಗ್ಯಕ್ಕೆ ಮಾತ್ರವಲ್ಲ, ತೂಕ ಇಳಿಕೆಗೂ ಸೂಕ್ತವಾದವು. ಇಂಥ ಆಹಾರಗಳು ಬೇಗನೇ ಹೊಟ್ಟೆ ತುಂಬಿದ ಅನುಭವವನ್ನು ನೀಡಿ, ಬೇಗ ಹಸಿವಾಗದಂತೆ ತಡೆಯುತ್ತವೆ.

ಮೆಗ್ನೀಶಿಯಂ ವಿಫುಲ

ದೇಹದ ಹಲವು ಕೆಲಸಗಳನ್ನು ನಿರ್ವಹಿಸುವುದಕ್ಕೆ ನಮಗೆ ಮೆಗ್ನೀಶಿಯಂ ಅಗತ್ಯವಾದ ಖನಿಜ. ರಕ್ತದೊತ್ತಡ ಸಮತೋಲನದಲ್ಲಿ ಇರಿಸುವುದು, ಸ್ನಾಯು ಮತ್ತು ನರಗಳ ಆರೋಗ್ಯ ರಕ್ಷಣೆ, ಮೂಳೆಗಳನ್ನು ಭದ್ರಗೊಳಿಸುವುದು ಮತ್ತು ದೇಹಕ್ಕೆ ಬೇಕಾದ ಶಕ್ತಿ ಒದಗಿಸುವಂಥ ಹಲವು ಕೆಲಸಗಳು ಈ ಖನಿಜದ ಪಾಲಿಗಿದೆ. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಬದುಕಿನ ಸ್ವಾಸ್ಥ್ಯ ಹೆಚ್ಚಿಸುವುದಕ್ಕೆ ಮೆಗ್ನೀಶಿಯಂ ಬೇಕು. ಈ ಖನಿಜ ಕುಂಬಳ ಬೀಜದಲ್ಲಿ ಹೇರಳವಾಗಿದೆ.

Obese male suffering from chest pain high blood pressure cholesterol level Sesame Benefits

ಕೊಲೆಸ್ಟ್ರಾಲ್‌ ಕಡಿಮೆ

ಕುಂಬಳಕಾಯಿ ಬೀಜಗಳಲ್ಲಿ ಆರೋಗ್ಯಯುತ ಕೊಬ್ಬು ಮತ್ತು ಪ್ರೊಟೀನ್‌ಗಳು ತುಂಬಿವೆ. ಆರೋಗ್ಯಕರ ಕೊಬ್ಬಿನ ಸೇವನೆಯಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್‌ನಂಥ ಬೇಡದ ಕೊಬ್ಬು ಜಮೆಯಾಗುವುದನ್ನು ತಡೆಯಬಹುದು. ಇದರಿಂದ ಹೃದಯದ ತೊಂದರೆಗಳನ್ನೂ ದೂರ ಇರಿಸಬಹುದು. ಹಾಗಾಗಿ ಸುಮ್ಮನೆ ತಿನ್ನಿ, ಹುರಿದು ತಿನ್ನಿ, ಟೋಸ್ಟ್‌ ಮಾಡಿ ತಿನ್ನಿ, ಬೇರೆ ಖಾದ್ಯಗಳಿಗೆ ಬಳಸಿ- ಹೇಗಾದರೂ ಸರಿ, ಕುಂಬಳ ಬೀಜವನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ, ಆರೋಗ್ಯ ಹೆಚ್ಚಿಸಿಕೊಳ್ಳಿ.

Continue Reading

ಆರೋಗ್ಯ

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Fatty lever disease: ಮಕ್ಕಳ ಆಟವೆಂದರೆ ಏನೂ ಆದೀತು. ಕುಂಟಾಬಿಲ್ಲೆಯಿಂದ ಹಿಡಿದು, ಕಣ್ಣಾಮುಚ್ಚಾಲೆ, ಗಾಳಿಪಟ, ಮರಕೋತಿ, ಜೂಟಾಟ, ಜೋಕಾಲಿ… ಪಟ್ಟಿ ಉದ್ದವಾಗುತ್ತದೆ. ಆದರೆ ಈ ಯಾವ ಆಟಗಳೂ ಈಗಿನ ಮಕ್ಕಳಿಗಲ್ಲ, ಹಳೆಯ ಕಾಲದ ಚಿಣ್ಣರಿಗೆ. ಈಗಿನ ಮಕ್ಕಳ ಆಟದ ಪಟ್ಟಿಯನ್ನು ಕೊಡುವುದಾದರೆ ಫ್ರೀಫಯರ್‌, ಪಬ್‌ಜೀ, ಸಬ್‌ವೇ ಸರ್ಫರ್‌, ಕ್ಯಾಂಡಿ ಕ್ರಷ್…‌ ಇಂಥವೇ ಇರುತ್ತವೆ ಅದರಲ್ಲಿ. ಸದಾ ಕಾಲ ಪರದೆಗೇ ಅಂಟಿಕೊಂಡಿರುವ ಈ ಮಕ್ಕಳಲ್ಲಿ ಹೊರಗಿನ ಆಟ ಲುಪ್ತವಾದ್ದರಿಂದ ಆಗುತ್ತಿರುವ ಸಮಸ್ಯೆಗಳು ಒಂದೆರಡೇ ಅಲ್ಲ. ಕೇವಲ ದೃಷ್ಟಿದೋಷವನ್ನು ಮಾತ್ರವೇ ಪರದೆಯ ವ್ಯಸನ ನೀಡುತ್ತಿಲ್ಲ, ಜೊತೆಗೆ ಫ್ಯಾಟಿ ಲಿವರ್‌ನಂಥ ಗಂಭೀರವಾದ ಯಕೃತ್ತಿನ ಸಮಸ್ಯೆಗಳನ್ನು ಸಹ ನೀಡುತ್ತವೆ.

VISTARANEWS.COM


on

Fatty Lever Disease
Koo

ಟಿ ಲಿವರ್‌ ಸಮಸ್ಯೆ ಕೇವಲ (Fatty lever disease) ವಯಸ್ಕರಿಗೆ ಎಂದು ಭಾವಿಸಬೇಡಿ, ಮಕ್ಕಳಲ್ಲೂ ವ್ಯಾಪಕವಾಗುತ್ತಿದೆ ಎಂದು ಅಧ್ಯಯನಗಳು ಎಚ್ಚರಿಸುತ್ತಿವೆ. ದೋಷಪೂರಿತ ಆಹಾರಶೈಲಿಯ ಜೊತೆಗೆ ಆಟ, ಓಟಗಳೂ ಮಕ್ಕಳಲ್ಲಿ ಕಾಣೆಯಾಗಿರುವುದು ಆತಂಕವನ್ನು ಹೆಚ್ಚಿಸುತ್ತಿದೆ. ಮಕ್ಕಳ ಆಟವೆಂದರೆ ಏನೂ ಆದೀತು. ಕುಂಟಾಬಿಲ್ಲೆಯಿಂದ ಹಿಡಿದು, ಕಣ್ಣಾಮುಚ್ಚಾಲೆ, ಗಾಳಿಪಟ, ಮರಕೋತಿ, ಜೂಟಾಟ, ಜೋಕಾಲಿ… ಪಟ್ಟಿ ಉದ್ದವಾಗುತ್ತದೆ. ಆದರೆ ಈ ಯಾವ ಆಟಗಳೂ ಈಗಿನ ಮಕ್ಕಳಿಗಲ್ಲ, ಹಳೆಯ ಕಾಲದ ಚಿಣ್ಣರಿಗೆ. ಈಗಿನ ಮಕ್ಕಳ ಆಟದ ಪಟ್ಟಿಯನ್ನು ಕೊಡುವುದಾದರೆ ಫ್ರೀಫಯರ್‌, ಪಬ್‌ಜೀ, ಸಬ್‌ವೇ ಸರ್ಫರ್‌, ಕ್ಯಾಂಡಿ ಕ್ರಷ್…‌ ಇಂಥವೇ ಇರುತ್ತವೆ ಅದರಲ್ಲಿ. ಸದಾ ಕಾಲ ಪರದೆಗೇ ಅಂಟಿಕೊಂಡಿರುವ ಈ ಮಕ್ಕಳಲ್ಲಿ ಹೊರಗಿನ ಆಟ ಲುಪ್ತವಾದ್ದರಿಂದ ಆಗುತ್ತಿರುವ ಸಮಸ್ಯೆಗಳು ಒಂದೆರಡೇ ಅಲ್ಲ. ಕೇವಲ ದೃಷ್ಟಿದೋಷವನ್ನು ಮಾತ್ರವೇ ಪರದೆಯ ವ್ಯಸನ ನೀಡುತ್ತಿಲ್ಲ, ಜೊತೆಗೆ ಫ್ಯಾಟಿ ಲಿವರ್‌ನಂಥ ಗಂಭೀರವಾದ ಯಕೃತ್ತಿನ ಸಮಸ್ಯೆಗಳನ್ನು ಸಹ ನೀಡುತ್ತವೆ. ಅದರಲ್ಲೂ ಭಾರತದಲ್ಲಿ ಪ್ರತಿ ಮೂರನೇ ಮಗುವಿಗೆ ಯಕೃತ್ತಿನ ಕೊಬ್ಬು ಕಾಡುತ್ತಿದೆ ಎನ್ನುವುದು ಇತ್ತೀಚಿನ ಅಧ್ಯಯನಗಳ ಸಾರ.

Fatty Lever

ವಿವರಗಳು ಇಂತಿವೆ

ದಿನಕ್ಕೆ ಆರು ತಾಸುಗಳ ದೈಹಿಕ ಚಟುವಟಿಕೆಯನ್ನು ಮಾಡದ ಮಕ್ಕಳು ಯಕೃತ್ತಿನ ಸಮಸ್ಯೆಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದೈಹಿಕ ಚಟುವಟಿಕೆಯೆಂದರೆ ಯಾವುದೋ ಕ್ರಮಬದ್ಧವಾದ ಆಟವನ್ನೇ ಮಕ್ಕಳು ಆಡಬೇಕೆಂದಿಲ್ಲ. ಕಳೆಯ ಕಾಲದ ಕುಂಟಾಬಿಲ್ಲೆ, ಜೂಟಾಟಗಳಿಂದ ಹಿಡಿದು ಯಾವುದೇ ರೀತಿಯ ಆಡುವ, ಓಡುವ, ಕುಣಿದು ಕುಪ್ಪಳಿಸುವ ಚಟುವಟಿಕೆಯೂ ಮಕ್ಕಳನ್ನು ಆರೋಗ್ಯಪೂರ್ಣವಾಗಿ ಇರಿಸುತ್ತದೆ. ಇಂಥ ಯಾವುದೇ ಚಟುವಟಿಕೆಗಳು ಮಕ್ಕಳಲ್ಲಿ ಫ್ಯಾಟಿ ಲಿವರ್‌ ಬಾರದಂತೆ ತಡೆಯುವಲ್ಲಿ ಶೇ. 33ರಷ್ಟು ಯಶಸ್ವಿಯಾಗುತ್ತವೆ ಎನ್ನುತ್ತವೆ ಕ್ಲಿನಿಕಲ್‌ ಮತ್ತು ಪ್ರಾಯೋಗಿಕ ಹೆಪಟಾಲಜಿ ವಿಭಾಗದ ಅಧ್ಯಯನಗಳು.

ಮುಂಚೂಣಿಯಲ್ಲಿ ಭಾರತ

ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆಯ ನಂತರದ ಸ್ಥಾನವನ್ನು ಫ್ಯಾಟಿ ಲಿವರ್‌ ಆಕ್ರಮಿಸಿದೆ. ಈ ನಿಟ್ಟಿನಲ್ಲಿ ಯಕೃತ್ತಿನ ಕೊಬ್ಬನ್ನು ಹೊತ್ತ ಅತಿಹೆಚ್ಚು ಜನರನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲು ಸಿದ್ಧತೆ ನಡೆಸಿದೆ. ಅಂದರೆ, ಸುಮಾರು ೫೦ ಕೋಟಿ ಜನಕ್ಕೆ ಯಕೃತ್‌ನ ತೊಂದರೆ ಕಾಡುತ್ತಿದೆ. ಪ್ರತಿ ಮೂರನೇ ಮಗು ಯಕೃತ್ತಿನ ತೊಂದರೆಗೆ ತುತ್ತಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಗುಜರಿ ತಿನಿಸುಗಳು, ಜಿಡ್ಡುಭರಿತ ಆಹಾರದ ಸೇವನೆ ಮಿತಿಮೀರಿ ಹೆಚ್ಚಿದೆ. ಹಾಗೆ ತಿಂದ ಮೇಲೆ ಅದನ್ನು ಕರಗಿಸಲು ವ್ಯಾಯಾಮ ಮಾಡಿ ಶಕ್ತಿ ವ್ಯಯಿಸುವ ಬದಲು, ಜೀರ್ಣಾಂಗಗಳೇ ಚೂರ್ಣಿಸುವ ಕೆಲಸವನ್ನು ಮಾಡಬೇಕೆಂದು ಅಪೇಕ್ಷಿಸುತ್ತೇವೆ. ಇಂಥ ಸಂದರ್ಭಗಳಲ್ಲಿ ಯಕೃತ್ತಿನಲ್ಲಿ ಕೊಬ್ಬು ಶೇಖರವಾಗತೊಡಗುತ್ತದೆ. ಇದು ಮಕ್ಕಳು-ವಯಸ್ಕರೆನ್ನದೆ ಎಲ್ಲರನ್ನೂ ಕಾಡುತ್ತಿದೆ. ಇದರಿಂದಾಗಿ ಅಲ್ಕೋಹಾಲ್‌ನಿಂದಾಗುವ ಫ್ಯಾಟಿ ಲಿವರ್‌ಗಿಂತಲೂ ಹೆಚ್ಚು ಅಲ್ಕೋಹಾಲ್‌ ಜನ್ಯವಲ್ಲದ ಫ್ಯಾಟಿಲಿವರ್‌ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣಗಳು ಹಲವಿವೆ. ದೈಹಿಕ ಚಟುವಟಿಕೆ ಕ್ಷೀಣವಾಗಿರುವುದು ಎಲ್ಲಕ್ಕಿಂತ ಮು‍ಖ್ಯವಾಗಿದ್ದು. ಜೊತೆಗೆ, ಕರಿದ ತಿಂಡಿಗಳು, ಮಸಾಲೆ ಭರಿತ ಜಿಡ್ಡಿನ ಆಹಾರಗಳು, ಗುಜರಿ ತಿನಿಸುಗಳು, ಸಂಸ್ಕರಿತ ಸಕ್ಕರೆಯ ಪದಾರ್ಥಗಳ ಸೇವನೆ ಎಲ್ಲ ವಯೋಮಾನದವರಲ್ಲೂ ಹೆಚ್ಚಿದೆ. ಇದರಿಂದ ಯಕೃತ್ತಿನ ಸಮಸ್ಯೆ ಮಾತ್ರವಲ್ಲದೆ, ಕೊಲೆಸ್ಟ್ರಾಲ್‌, ಬೊಜ್ಜು, ಮಧುಮೇಹ, ಥೈರಾಯ್ಡ್‌ ಏರುಪೇರು, ಅಜೀರ್ಣ, ನಿದ್ರಾಹೀನತೆಯಂಥ ತೊಂದರೆಗಳು ಗಂಟು ಬೀಳುತ್ತವೆ.

ಇದನ್ನೂ ಓದಿ: Constipation Problem: ಮಲಬದ್ಧತೆಯ ಸಮಸ್ಯೆಯೇ? ಸರಳ ಪರಿಹಾರಗಳು ಇಲ್ಲಿವೆ!

ಬದಲಾವಣೆ ಅಗತ್ಯ

ನಿಯಮಿತವಾದ ವ್ಯಾಯಾಮ, ಸಂತುಲಿತ ಆಹಾರ, ಅಲ್ಕೋಹಾಲ್‌ ಮತ್ತು ಸಂಸ್ಕರಿತ ಆಹಾರಗಳ ಸೇವನೆಯಿಂದ ದೂರ ಇರುವುದು ಮುಂತಾದ ಕೆಲವು ಸರಳ ಬದಲಾವಣೆಗಳಿಂದ ನಮ್ಮ ಯಕೃತ್ತನ್ನು ಕ್ಷೇಮವಾಗಿ ಕಾಪಾಡಿಕೊಂಡು, ರೋಗಮುಕ್ತರಾಗಿ ಬದುಕುವುದಕ್ಕೆ ಸಾಧ್ಯವಿದೆ. ಆಹಾರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದರಿಂದ ಯಕೃತ್ತಿನ ಆರೋಗ್ಯ ಗಣನೀಯ ಪ್ರಮಾಣದಲ್ಲಿ ಸುಧಾರಿಸಬಲ್ಲದು. ಇವುಗಳ ಜೊತೆಗೆ ದಿನಕ್ಕೆ 30 ನಿಮಿಷಗಳ ದೈಹಿಕ ಚಟುವಟಿಕೆ ಕಡ್ಡಾಯವಾಗಿಬೇಕು.

Green tea

ಗ್ರೀನ್‌ ಟೀ

ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಈ ಪೇಯ, ದೇಹದಲ್ಲಿ ಉರಿಯೂತ ಶಮನ ಮಾಡಬಲ್ಲದು. ಇದರಿಂದ ಯಕೃತ್ತಿನ ಆರೋಗ್ಯವೂ ಸುಧಾರಿಸುತ್ತದೆ.

Green vegetables

ಹಸಿರು ತರಕಾರಿಗಳು

ಎಲೆಕೋಸು, ಹೂಕೋಸು, ಬ್ರೊಕೊಲಿಯಂಥ ತರಕಾರಿಗಳು ಸಹ ಪಿತ್ತಜನಕಾಂಗದ ಆರೋಗ್ಯ ರಕ್ಷಣೆಗೆ ನೆರವಾಗಬಲ್ಲವು.

Seeds Assortment

ಬೀಜಗಳು

ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಬಾದಾಮಿ, ವಾಲ್‌ನಟ್‌ ಮುಂತಾದ ಬೀಜಗಳು ಲಿವರ್‌ನ ಕ್ಷಮತೆಯನ್ನು ಹೆಚ್ಚಿಸಬಲ್ಲವು

Garlic cloves

ಬೆಳ್ಳುಳ್ಳಿ

ಪಿತ್ತಜನಕಾಂಗದ ಉರಿಯೂತವನ್ನು ಕಡಿಮೆ ಮಾಡಿ, ಉತ್ಕರ್ಷಣ ನಿರೋಧಕವಾಗಿಯೂ ಬೆಳ್ಳುಳ್ಳಿ ಕೆಲಸ ಮಾಡಬಲ್ಲದು.

Berries

ಬೆರ್ರಿಗಳು

ಬ್ಲೂಬೆರ್ರಿ, ಸ್ಟ್ರಾಬೆರ್ರಿಯಂಥವು ದೇಹಕ್ಕೆ ಹೆಚ್ಚಿನ ನಾರಿನಂಶದೊಂದಿಗೆ ಪಿತ್ತಜನಕಾಂಗದ ರಕ್ಷಣೆಗೆ ಅಗತ್ಯ ಸತ್ವಗಳನ್ನು ನೀಡಬಲ್ಲವು.

Continue Reading
Advertisement
ollie robinson
ಪ್ರಮುಖ ಸುದ್ದಿ3 mins ago

Ollie Robinson: 6, 6nb, 4, 6, 4, 6nb, 4, 6nb, 1; ಒಂದೇ ಓವರ್‌ನಲ್ಲಿ 43 ರನ್‌ ಕೊಟ್ಟ ಇಂಗ್ಲೆಂಡ್‌ ಬೌಲರ್; Video ಇದೆ

Serial Bride
ದೇಶ41 mins ago

Serial Bride: ಹಲವು ಜನರನ್ನು ಮದುವೆಯಾಗಿ ವಂಚಿಸಿದ್ದ ಮಹಿಳೆಗೆ ಎಚ್‌ಐವಿ; ಮಾಜಿ ವರಗಳಿಗಾಗಿ ಶೋಧ!

Demand to provide job reservation for Kannadigas; Massive Dharani sathyagraha on July 1 from Karave
ಕರ್ನಾಟಕ1 hour ago

Bengaluru News: ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ; ಕರವೇಯಿಂದ ಜು.1ರಂದು ಬೃಹತ್ ಧರಣಿ ಸತ್ಯಾಗ್ರಹ

Attica Babu
ಕರ್ನಾಟಕ2 hours ago

Attica Babu: ಕದ್ದ ಚಿನ್ನ ಖರೀದಿ; ಅಟ್ಟಿಕಾ ಗೋಲ್ಡ್‌ ಕಂಪನಿ ಮಾಲೀಕ ಅಟ್ಟಿಕಾ ಬಾಬು ಬಂಧನ

Terrorists Killed
ಪ್ರಮುಖ ಸುದ್ದಿ3 hours ago

Terrorists Killed: ಆಪರೇಷನ್‌ ಆಲ್‌ಔಟ್ ಯಶಸ್ವಿ; ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ

DCM Dk shivakumar statement in bagilige bantu sarkara sevege irali sahakara programme in channapattana
ಕರ್ನಾಟಕ3 hours ago

DK Shivakumar: ಸರ್ಕಾರಿ ಅಧಿಕಾರಿಗಳು ಗುಲಾಮರೆಂದ ಮಾಜಿ ಶಾಸಕ; ಕ್ಷಮೆ ಕೇಳಿದ ಡಿ.ಕೆ. ಶಿವಕುಮಾರ್

MEIL got the opportunity to implement Kaiga nuclear power generation project
ಕರ್ನಾಟಕ3 hours ago

MEIL: ಕೈಗಾ ಪರಮಾಣು ವಿದ್ಯುತ್‌ ಉತ್ಪಾದನೆ ಯೋಜನೆ ಜಾರಿ ಅವಕಾಶ ಗಿಟ್ಟಿಸಿದ ಎಂ.ಇ.ಐ.ಎಲ್‌

DCM DK Shivakumar statement about milk price hike
ಕರ್ನಾಟಕ3 hours ago

DK Shivakumar: ಹಾಲಿನ ದರ ಕಡಿಮೆಯಾಯಿತು, ಇನ್ನೂ ಹೆಚ್ಚಿಸಬೇಕಿತ್ತು ಎಂದ ಡಿ.ಕೆ. ಶಿವಕುಮಾರ್

Union Minister HD Kumaraswamy latest statement in New Delhi
ಬೆಂಗಳೂರು3 hours ago

HD Kumaraswamy: ನನ್ನ ಹೃದಯದಲ್ಲಿ ಕೆಂಪೇಗೌಡರಿದ್ದಾರೆ, ಆಹ್ವಾನ ಬೇಕಿಲ್ಲ; ಕುಮಾರಸ್ವಾಮಿ

NEET UGC NET Exam irregularities protest demanding investigation
ರಾಯಚೂರು3 hours ago

Raichur News: ನೀಟ್, ಯುಜಿಸಿ ನೆಟ್ ಪರೀಕ್ಷೆಯಲ್ಲಿ ಅಕ್ರಮ; ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌