Ear buzzing | ಕಿವಿಯಲ್ಲಿ ಏನೇನೊ ಶಬ್ದ ಕೇಳಿಸುತ್ತಿದೆಯಾ? ಇಲ್ಲಿದೆ ಕಾರಣ - Vistara News

ಆರೋಗ್ಯ

Ear buzzing | ಕಿವಿಯಲ್ಲಿ ಏನೇನೊ ಶಬ್ದ ಕೇಳಿಸುತ್ತಿದೆಯಾ? ಇಲ್ಲಿದೆ ಕಾರಣ

ಸದಾಕಾಲ ನಾನಾ ರೀತಿಯ ಶಬ್ದಗಳಿಂದ ಮೊರೆಯುವ ಕಿವಿ ತಲೆಚಿಟ್ಟು ಹಿಡಿಸುತ್ತದೆ. ಇದು ಒಂದು ಕಿವಿಯಲ್ಲಿ ಅಥವಾ ಎರಡೂ ಕಿವಿಯಲ್ಲಿ ಕೇಳಿಸಬಹುದು; ಒಮ್ಮೊಮ್ಮೆ ಅಥವಾ ಇಡೀ ದಿನ ಕೇಳಿಸಬಹುದು. ಏನಿದರ ಕಾರಣ?

VISTARANEWS.COM


on

tinnitus
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻಕಿವಿಗೆ ಗಾಳಿ ಹೊಕ್ಕಂತೆ ಆಡುತ್ತಿದ್ದಾರೆʼ ಎಂಬ ಬೈಗುಳವನ್ನು ಸಾಮಾನ್ಯವಾಗಿ ಕೇಳಿರಬಹುದು. ನಮ್ಮ ದೇಹದ ಯಾವುದೇ ಭಾಗದಲ್ಲಿ ಸಾಮಾನ್ಯವಲ್ಲದ ಏನೇ ತೊಂದರೆ ಬಂದರೂ ಅದು ಕಿರಿಕಿರಿಯನ್ನೇ ತರುತ್ತದೆ. ಹೊರಜಗತ್ತನ್ನು ಕೇಳಬೇಕಾದ ಕಿವಿಯನ್ನು ಒಳಗಿನಿಂದಲೇ ಶಬ್ದ ಬಂದು ತುಂಬಿದರೆ? ಅದರಲ್ಲೂ ನಮ್ಮ ಸುತ್ತಲಿನ ಉಳಿದಾರಿಗೂ ಕೇಳದ ಶಬ್ದಗಳು ನಮಗೆ ಮಾತ್ರ ಕೇಳಿಸುತ್ತಿವೆ ಎಂದಾಗ? ಗುಂಯ್‌, ಹಿಸ್‌ಸ್‌, ಗರ್ರರ್‌, ಸುಂ..ಯ್‌- ಹೀಗೆ ನಾನಾ ರೀತಿಯ ಶಬ್ದಗಳು ಕಿವಿಯ ಒಳಗಿನಿಂದಲೇ ಕೇಳಿಸುವ ಈ ವಿಚಿತ್ರ ಸಮಸ್ಯೆಗೆ- ಭೂತಚೇಷ್ಟೆಯೆಂದಲ್ಲ- ಟಿನ್ನಿಟಸ್‌ ಎನ್ನಲಾಗುತ್ತದೆ.

ಸದಾಕಾಲ ನಾನಾ ರೀತಿಯ ಶಬ್ದಗಳಿಂದ ಮೊರೆಯುವ ಕಿವಿ ತಲೆಚಿಟ್ಟು ಹಿಡಿಸುತ್ತದೆ. ಇದು ಒಂದು ಕಿವಿಯಲ್ಲಿ ಅಥವಾ ಎರಡೂ ಕಿವಿಯಲ್ಲಿ ಕೇಳಿಸಬಹುದು; ಒಮ್ಮೊಮ್ಮೆ ಅಥವಾ ಇಡೀ ದಿನ ಕೇಳಿಸಬಹುದು; ಸಣ್ಣದಾಗಿ ಅಥವಾ ದೊಡ್ಡದಾಗಿ ಕೇಳಿಸಬಹುದು ಇನ್ನೂ ಕೆಲವು ಸಂದರ್ಭಗಳಲ್ಲಿ ಹೃದಯದ ಬಡಿತದಂತೆ ಒಂದು ರಿದಂನಲ್ಲೂ ಈ ಶಬ್ದಗಳು ಕೇಳಿಸಬಹುದು.

ಸಾಮಾನ್ಯವಾಗಿ ೬೫ ವರ್ಷಕ್ಕೆ ಮೇಲ್ಪಟ್ಟವರಲ್ಲಿ ಶೇ. ೨೫ರಷ್ಟು ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂಬುದು ಅಂದಾಜು. ಈ ಶಬ್ದ ಅತಿಯಾದರೆ, ಹೊರಗಿನ ಶಬ್ದವನ್ನು ಕೇಳಲು ಅಥವಾ ಯಾವುದೇ ವಿಷಯದ ಬಗ್ಗೆ ಗಮನ ಕೇಂದ್ರೀಕರಿಸಲು ಅಡಚಣೆಯಾಗಬಹುದು. ನಿದ್ದೆ ಮಾಡಲು ಸಾಧ್ಯವಾಗದೆ ನಿಧಾನಕ್ಕೆ ಖಿನ್ನತೆಯೂ ಆವರಿಸಬಹುದು. ಅಂತೂ ನಿತ್ಯದ ಬದುಕಿನ ಮೇಲೆ ಹಲವು ರೀತಿಯಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು.

ಇದೆಂಥಾ ರೋಗ?: ಅಲ್ಲ, ಇದು ರೋಗವಲ್ಲ. ಕೆಲವೊಮ್ಮೆ ಬೇರೆ ಸಮಸ್ಯೆಗಳಿಗೆ ದಿಕ್ಸೂಚಿಯಾಗಿರಬಹುದು ಅಥವಾ ಬೇರೆ ಸಮಸ್ಯೆಗಳು ಇದಕ್ಕೆ ಮೂಲವಾಗಿರಬಹುದು. ಇದು ಏನೆಲ್ಲಾ ಕಾರಣಗಳಿಂದ ಬರುತ್ತದೆ ಎಂಬುದನ್ನು ನೋಡೋಣ.

ನಮ್ಮ ಒಳಗಿವಿಯಲ್ಲಿ ನಾಜೂಕಾದ ಕೂದಲಿನಂಥ ಕೋಶಗಳಿರುತ್ತವೆ. ಪ್ರತಿಬಾರಿ ಕಿವಿಯ ಮೇಲೆ ಯಾವುದೇ ಶಬ್ದದ ತರಂಗಗಳು ಬಿದ್ದಾಗಲೂ ಈ ಕೋಶಗಳು ಕಂಪಿಸಿ, ವಿದ್ಯುನ್ಮಾನ ತರಂಗಗಳನ್ನು ಸೃಷ್ಟಿಸಿ, ವಾಹಕ ನರಗಳ ಮೂಲಕ ನಮ್ಮ ಮೆದುಳಿಗೆ ರವಾನಿಸುತ್ತವೆ. ಈ ಶಬ್ದಗಳ ಅರ್ಥವೇನು ಎಂಬುದನ್ನು ನಮ್ಮ ಮೆದುಳು ಗುರುತಿಸುತ್ತದೆ. ಆದರೆ ನಮ್ಮ ಕಿವಿಯೊಳಗಿನ ಕೂದಲಿನಂಥ ಕೋಶಗಳು ಹಾನಿಗೊಳಗಾಗುವ ಸಾಧ್ಯತೆಯಿದೆ. ಆಗ ಒಟ್ಟಾರೆ ಏನೇನೋ ಸಂಕೇತಗಳನ್ನು ಅವು ಮೆದುಳಿಗೆ ರವಾನಿಸಿ ಟಿನ್ನಿಟಸ್‌ ಉಂಟುಮಾಡಬಹುದು.

ಕಿವಿಯ ಸೋಂಕು: ಕಿವಿಯಲ್ಲಿ ಕೊಳೆ, ಅಂಟಿನಂಥ ವಸ್ತು ತುಂಬಿ ಈ ಸಮಸ್ಯೆ ಬರಬಹುದು. ಕೆಲವೊಮ್ಮೆ ಕಿವಿಯ ಸೋಂಕು ಸಹ ಇದಕ್ಕೆ ಕಾರಣವಾಗುತ್ತದೆ. ಪೆನ್ನು, ಪೆನ್ಸಿಲ್ಲಿನಂಥ ಯಾವುದಾದರೂ ವಸ್ತುವನ್ನು ಕಿವಿಯೊಳಗೆ ಹಾಕಿ, ಪೊರೆಗೆ ಗಾಯವಾದರೂ ಈ ಸಮಸ್ಯೆ ಬರಬಹುದು.

ಅಪಘಾತ: ಕೆಲವು ಅಪಘಾತಗಳಲ್ಲಿ ತಲೆಗೆ ಅಥವಾ ಕುತ್ತಿಗೆಗೆ ಗಾಯವಾಗಿರಬಹುದು. ಇದರಿಂದ ಒಳಗಿವಿಯ ಕೋಶಗಳು ಅಥವಾ ಶಬ್ದವಾಹಕ ನರಗಳಿಗೆ ಪೆಟ್ಟಾಗಿ ಈ ಸಮಸ್ಯೆ ತಲೆದೋರಬಹುದು. ಆದರೆ ಇಂಥ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಒಂದು ಕಿವಿಯಲ್ಲಿ ಟಿನ್ನಿಟಸ್‌ ಉಂಟಾಗುತ್ತದೆ.

ear buzzing

ಶಬ್ದ ಸ್ಫೋಟ: ಅತಿ ದೊಡ್ಡದಾದ ಯಾವುದಾದರೂ ಶಬ್ದ, ಉದಾ- ಸ್ಫೋಟದಂಥದ್ದು, ಒಮ್ಮೆಲೇ ಕಿವಿಗೆ ಅಪ್ಪಳಿಸಿದಾಗ ನರಗಳಿಗೆ ಹಾನಿಯಾಗಿ ಟಿನ್ನಿಟಸ್‌ ಬರುವ ಸಾಧ್ಯತೆಯಿದೆ. ಗಿರಣಿ ಅಥವಾ ಡಿಸ್ಕೊ ಬಾರ್‌ನಂಥ ಅತಿಯಾದ ಶಬ್ದವಿರುವ ಸ್ಥಳಗಳಲ್ಲಿ ದೀರ್ಘಕಾಲ ಕೆಲಸ ಮಾಡಿದವರು, ಯುದ್ಧಭೂಮಿಯಲ್ಲಿರುವ ಸೈನಿಕರು, ಕಿವಿಗೆ ದೊಡ್ಡ ವಾಲ್ಯೂಮ್‌ನಲ್ಲಿ ಸದಾಕಾಲ ಇಯರ್‌ ಪ್ಲಗ್‌ ಬಳಸುವವರಿಗೂ ಈ ಸಮಸ್ಯೆ ಕಾಡುವುದು ಸಾಮಾನ್ಯ. ಶ್ರವಣೇಂದ್ರಿಯ ಕ್ರಮೇಣ ಹಾನಿಗೊಳಗಾಗುವುದು ಇದಕ್ಕೆ ಕಾರಣ

ಔಷಧಿಗಳು: ಬಹಳಷ್ಟು ಔಷಧಿಗಳು ಈ ಸಮಸ್ಯೆಗೆ ಕಾರಣವಾಗುತ್ತವೆ. ಈಗಾಗಲೇ ಟಿನ್ನಿಟಸ್‌ ಇರುವವರಲ್ಲಿ ಈ ಔಷಧಿಗಳು ಸಮಸ್ಯೆಯನ್ನು ಬಿಗಡಾಯಿಸುತ್ತವೆ. ಕೆಲವು ಪ್ರತಿಜೈವಿಕಗಳು, ಸ್ಟಿರಾಯ್ಡ್‌ರಹಿತ ಉರಿಯೂತ ಶಮನಕಾರಕಗಳು (NSAID), ಕ್ಯಾನ್ಸರ್‌ ಔಷಧಿಗಳು, ಮಲೇರಿಯಾ ಔಷಧಿಗಳು, ಖಿನ್ನತೆ ನಿವಾರಕಗಳು- ಹೀಗೆ ಹಲವು ರೀತಿಯ ಮದ್ದುಗಳೇ ಕಿವಿಗೆ ಗುದ್ದು ಕೊಡಬಹುದು. ಸಾಮಾನ್ಯವಾಗಿ ಈ ಔಷಧಿಗಳನ್ನು ನಿಲ್ಲಿಸಿದ ಕೆಲವು ದಿನಗಳಲ್ಲಿ ಈ ಶಬ್ದ ಮಾಯವಾಗುತ್ತದೆ.

ಅಲರ್ಜಿ: ಹೆಚ್ಚಾಗಿ ಚಳಿಗಾಲದಲ್ಲಿ, ಕೆಲವರಿಗೆ ಎಲ್ಲಾ ಕಾಲದಲ್ಲೂ, ಕಾಡುವ ಅಲರ್ಜಿಯಿಂದಾಗಿ ಮೂಗಿನ ಒಳತುದಿಯನ್ನು ಒಳಗಿವಿಗೆ ಸಂಪರ್ಕಿಸುವ ನಾಳ ದ್ರವದಿಂದ ತುಂಬಿಹೋಗುತ್ತದೆ. ಹೀಗೆ ಸೃಷ್ಟಿಯಾಗುವ ಒತ್ತಡದಿಂದಲೂ ಕಿವಿಯಲ್ಲಿ ಇಂಥ ಶಬ್ದಗಳು ಬರಬಹುದು.

ಇದನ್ನೂ ಓದಿ | Health tips | ದಿನವಿಡೀ ಕಂಪ್ಯೂಟರ್‌ ಸ್ಕ್ರೀನ್‌ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ

ಇತರ ಕಾರಣಗಳು: ಅತಿಯಾದ ಮೈಗ್ರೇನ್, ಥೈರಾಯ್ಡ್‌ ಸಮಸ್ಯೆ, ಮಧುಮೇಹ, ಹೃದಯ ಸಮಸ್ಯೆ, ರಕ್ತಹೀನತೆ, ಅತಿಯಾದ ಸಿಗರೇಟ್‌ ಮತ್ತು ಕುಡಿತ, ರುಮಟಾಯ್ಡ್‌ ಆರ್ಥರೈಟಿಸ್‌ನಂಥ ಹಲವಾರು ಸಮಸ್ಯೆಗಳು ನಮ್ಮ ಕಿವಿಯಲ್ಲಿ ಈ ತೊಂದರೆಯನ್ನು ಉಂಟುಮಾಡುವಂಥವು.

ಇದಕ್ಕೇನು ಮಾಡಬಹುದು?: ಇದೊಂದು ರೋಗವಲ್ಲದಿರುವುದರಿಂದ, ಇದಕ್ಕೆಂದೇ ನಿಗದಿತವಾದ ಚಿಕಿತ್ಸೆಯೂ ಇಲ್ಲ. ಬೇರೆ ಸಮಸ್ಯೆಗಳಿಗೆ ಇದು ದಿಕ್ಸೂಚಿಯೇ ಎಂಬುದನ್ನು ಮೊದಲು ವೈದ್ಯರು ಪತ್ತೆ ಮಾಡುತ್ತಾರೆ. ಹಾಗೇನೂ ಇಲ್ಲದಿದ್ದರೆ, ಇದಕ್ಕಿರುವ ಬೇರೆಯ ಮೂಲವನ್ನು ಪತ್ತೆ ಮಾಡುವುದು ಮುಖ್ಯ. ಹೆಚ್ಚಿನ ಶಬ್ದವಿರುವ ಸ್ಥಳದಲ್ಲೇ ಬದುಕು ಎಂದಾದರೆ, ಕಿವಿಯ ರಕ್ಷಣೆಗೆ ಕೆಲವು ಸಾಧನಗಳನ್ನು ಬಳಸಬೇಕಾಗುತ್ತದೆ. ದೊಡ್ಡ ಶಬ್ದಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದಾದರೆ ಅದನ್ನು ಮಾಡುವುದು ಸೂಕ್ತ. ಅಲ್ಕೋಹಾಲ್‌ ಮತ್ತು ಸಿಗರೇಟ್‌ ಅಭ್ಯಾಸವಿದ್ದರೆ ತ್ಯಜಿಸುವುದು ಎಲ್ಲಾ ದೃಷ್ಟಿಯಿಂದಲೂ ಅನುಕೂಲ.

ಶಬ್ದ ಚಿಕಿತ್ಸೆ, ಅಂದರೆ ಬೇರೆ ರೀತಿಯ ಶಬ್ದಗಳನ್ನು ಬಾಧಿತರಿಗೆ ಕೇಳಿಸುವ ಮೂಲಕ ಅವರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವನ್ನು ಕೆಲವೊಮ್ಮೆ ವಯಸ್ಸಾದವರಲ್ಲಿ ಮಾಡಲಾಗುತ್ತದೆ. ಇದಲ್ಲದೆ, ಆಪ್ತ ಸಮಾಲೋಚನೆ, ಕಾಗ್ನಿಟಿವ್‌ ಬಿಹೇವಿಯರಲ್‌ ಥೆರಪಿ ಮುಂತಾದವುಗಳ ಮೂಲಕ ಗಮನವನ್ನು ಬೇರೆಡೆ ಸೆಳೆದು, ಈ ಸಮಸ್ಯೆಗೆ ಉಪಶಮನ ನೀಡುವ ಸಾಧ್ಯತೆಯನ್ನೂ ವೈದ್ಯರು ಪರಿಶೀಲಿಸುತ್ತಾರೆ.

ಇದನ್ನೂ ಓದಿ | Winter Fashion | ಚುಮುಚುಮು ಚಳಿಗೆ ಬಂತು ಬಣ್ಣಬಣ್ಣದ ಲೈಟ್‌ವೈಟ್‌ ಉಲ್ಲನ್‌ ಟೋಪಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Silent Heart Attack: ಏನಿದು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌? ಇದರ ಲಕ್ಷಣಗಳೇನು?

ಮಧ್ಯಪ್ರದೇಶದ ಇಂದೋರ್‌ನಲ್ಲಿ ಯುವಕನೊಬ್ಬ ಮೌನ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಯಾವುದೇ ಹೃದಯಾಘಾತದ ಲಕ್ಷಣವಿಲ್ಲದೆಯೇ ಸಾವನ್ನಪ್ಪುತ್ತಿರುವ (Silent Heart Attack) ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಏನು ಈ ಬಗೆಯ ಹೃದಯಾಘಾತದ ಲಕ್ಷಣ? ಇಲ್ಲಿದೆ ವರದಿ.

VISTARANEWS.COM


on

By

Silent Heart Attack
Koo

ಮಧ್ಯಪ್ರದೇಶದ ಇಂದೋರ್‌ನ 35 ವರ್ಷದ ವ್ಯಕ್ತಿಯೊಬ್ಬರು ತೀವ್ರ ಎದೆನೋವಿನ ಲಕ್ಷಣಗಳು ಇಲ್ಲದೆಯೇ ಹೃದಯಾಘಾತದಿಂದ (Silent Heart Attack) ಸಾವನ್ನಪ್ಪಿದ್ದಾರೆ. ಸೌಮ್ಯವಾದ ರೋಗಲಕ್ಷಣ ಅಥವಾ ಯಾವುದೇ ತೀವ್ರವಾದ ಎದೆನೋವಿನಂತಹ ವಿಶಿಷ್ಟ ಲಕ್ಷಣಗಳಿಲ್ಲದೆಯೇ ಹೃದಯಾಘಾತಗಳು ಸಂಭವಿಸುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ಎದೆ ನೋವಿನ ಲಕ್ಷಣಗಳು ಕಂಡು ಬಂದರೆ ECGಯಿಂದ ರೋಗ ಲಕ್ಷಣಗಳು ಪತ್ತೆಯಾಗುತ್ತದೆ. ಎಚ್ಚರಿಕೆಯ ಚಿಹ್ನೆಗಳು ಎದೆಯ ಮಧ್ಯದಲ್ಲಿ ಅಥವಾ ದೇಹದ ಮೇಲ್ಭಾಗದ ಅಸ್ವಸ್ಥತೆ, ಉಸಿರಾಟದ ತೊಂದರೆ ಮತ್ತು ತಣ್ಣನೆಯ ಬೆವರು ಕಂಡು ಬರುತ್ತದೆ. ಆದರೆ ಇದ್ಯಾವುದು ಇಲ್ಲದೆಯೇ ಸಾವನ್ನಪ್ಪುತ್ತಿರುವವರು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಯಾವ ಸೂಚನೆಯೂ ಇಲ್ಲದೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ತೀರ್ಥ ರಾಮ್ (35) ಮೃತರು.

ತೀರ್ಥ ರಾಮ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಮಧ್ಯೆ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆತನನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲು ನಿಧನರಾಗಿದ್ದಾರೆ. ಮೃತನ ಕುಟುಂಬದವರು ಆತನ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದಾರೆ. ಗೋವಿಂದ್ ನಗರದ ನಿವಾಸಿ ಬಿಹಾರಿ ಲಾಲ್ ಸೋನ್ವಾನೆ ಅವರ ಪುತ್ರ ತೀರ್ಥ ರಾಮ್ ಎಂದು ಮೃತನನ್ನು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ತೀರ್ಥರಾಮ್ ಮನೆಯಿಂದ ಬೈಕ್ ನಲ್ಲಿ ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ ಆತ ರಸ್ತೆಯಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂಬ ಸುದ್ದಿ ಮನೆಯವರಿಗೆ ತಿಳಿಯಿತು. ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಬರುವಷ್ಟರಲ್ಲಿ ಆತ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮೌನ ಹೃದಯಾಘಾತವೇ (ಸೈಲೆಂಟ್‌ ಹಾರ್ಟ್‌ ಆಟ್ಯಾಕ್‌) ಆತನ ಸಾವಿಗೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.


ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಎಂದರೇನು?

ಮೌನ ಹೃದಯಾಘಾತವನ್ನು ಸಾಮಾನ್ಯವಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಸೈಲೆಂಟ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (SMI) ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಹೃದಯಾಘಾತ ಸಂಭವಿಸಿದಾಗ ವ್ಯಕ್ತಿ ಎದೆಯಲ್ಲಿ ನೋವಿನ ಸಂವೇದನೆಯನ್ನು ಅನುಭವಿಸುವುದಿಲ್ಲ. ಆದರೆ ಇತರ ಕೆಲವು ಲಕ್ಷಣಗಳು ಕಂಡುಬರುತ್ತವೆ.

ಇದನ್ನೂ ಓದಿ: Self Harming: ಅಪ್ಪನಿಗೆ ಗುಡ್ ಬೈ ಹೇಳಿಸಿ ಮಗುವನ್ನು ಕೊಂದ ತಾಯಿ!

ಮೌನ ಹೃದಯಾಘಾತದ ಲಕ್ಷಣಗಳು

ಮೌನ ಹೃದಯಾಘಾತದ ಲಕ್ಷಣಗಳು ಇಂತಿವೆ. ಶೀತ ಜ್ವರ, ಎದೆಯ ಬಳಿ ಅಥವಾ ಭುಜಗಳ ಬಳಿ ಮೇಲಿನ ಬೆನ್ನಿನ ಬಳಿ ಊತ, ಪಾದದ ಬಳಿ ನೋವು, ತೋಳು ಅಥವಾ ಮೇಲಿನ ಬೆನ್ನಿನಲ್ಲಿ ಸ್ನಾಯು ನೋವು, ಸುಸ್ತಾಗಿರುವ ಭಾವನೆ ಕಂಡು ಬರುತ್ತದೆ.

ಸಾಮಾನ್ಯ ಹೃದಯಾಘಾತದ ಲಕ್ಷಣಗಳು

ಕೆಲವು ನಿಮಿಷಗಳಿಗಿಂತ ಹೆಚ್ಚು ಎದೆ ನೋವು, ಉಸಿರಾಟದ ತೊಂದರೆ, ಚಡಪಡಿಕೆ ಭಾವನೆ, ಲಘುವಾದ ಹಠಾತ್ ಬೆವರುವಿಕೆ, ವಾಂತಿ, ತುಂಬಾ ದಣಿದ ಭಾವನೆ ಮತ್ತು ಸುಸ್ತು ಕೆಲವು ದಿನಗಳವರೆಗೆ ಇರುತ್ತದೆ.

Continue Reading

ಆರೋಗ್ಯ

Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

ಆಲಿವ್‌ ಎಣ್ಣೆಯನ್ನು ಬಹುತೇಕರು ಉತ್ತಮ ಆರೋಗ್ಯಕ್ಕಾಗಿ ತಮ್ಮ ಮನೆಗಳಲ್ಲಿ ಅಡುಗೆಗೆ ಇಂದು ಬಳಸುತ್ತಿದ್ದಾರೆ. ಹೃದಯಸ್ನೇಹಿ ಎಣ್ಣೆಯಾಗಿರುವ ಇದರ ಉಪಯೋಗ ಕೇವಲ ಆಹಾರವಾಗಿ ಅಷ್ಟೇ ಅಲ್ಲ, ಕೂದಲು ಹಾಗೂ ಚರ್ಮದ ಸೌಂದರ್ಯದಲ್ಲೂ ಪಾತ್ರವಿದೆ. ಬನ್ನಿ, ಆಲಿವ್‌ ಎಣ್ಣೆಯಿಂದ ಕೂದಲಿಗೆ ಹಾಗೂ ಚರ್ಮಕ್ಕೆ ಆಗುವ ಅನುಕೂಲಗಳ ಬಗ್ಗೆ (Olive oil benefits) ಇಲ್ಲಿದೆ ಮಾಹಿತಿ.

VISTARANEWS.COM


on

Olive Oil benefits
Koo

ಆಲಿವ್‌ಗಳು ನಮಗೆ ದೇಸೀ ನೆಲದ ಆಹಾರವಲ್ಲದಿದ್ದರೂ ಇದರ ಆರೋಗ್ಯದ ಲಾಭಗಳು ಅನೇಕ. ಹಾಗೂ ಇದು ದೇಶಗಳ ಗಡಿಯ ಹಂಗಿಲ್ಲದೆ ಇಂದು ಪ್ರಪಂಚದಾದ್ಯಂತ ಬಳಕೆಯಾಗುತ್ತಿದೆ. ಹಸಿರು ಬಣ್ಣದ ಆಲಿವ್‌ ಆಗಿರಬಹುದು, ಕಪ್ಪು ಬಣ್ಣದ್ದಾಗಿರಬಹುದು. ಗುಣದಲ್ಲಿ ಎರಡೂ ಚಿನ್ನವೇ. ಎಲುಬು ಸವೆತವನ್ನು ತಡೆಯುವ ಗುಣ ಇದರಲ್ಲಿದ್ದು, ರಕ್ತದೊತ್ತಡವನ್ನೂ ಇದು ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲ, ಕ್ಯಾನ್ಸರ್‌ ನಿರೋಧಕ ಗುಣಗಳನ್ನೂ ಇದು ಹೊಂದಿದ್ದು, ಚರ್ಮಕ್ಕೆ, ಕೂದಲಿಗೆ ಸೇರಿದಂತೆ, ಆರೋಗ್ಯಕ್ಕೆ ಒಳ್ಳೆಯ ಪರಿಣಾಮವನ್ನು ಬೀರುವ ಆಹಾರವಿದು. ಆಲಿವ್‌ ಎಣ್ಣೆಯನ್ನು ಬಹುತೇಕರು ಉತ್ತಮ ಆರೋಗ್ಯಕ್ಕಾಗಿ ತಮ್ಮ ಮನೆಗಳಲ್ಲಿ ಅಡುಗೆಗೆ ಇಂದು ಬಳಸುತ್ತಿದ್ದಾರೆ. ಹೃದಯಸ್ನೇಹಿ ಎಣ್ಣೆಯಾಗಿರುವ ಇದರ ಉಪಯೋಗ ಕೇವಲ ಆಹಾರವಾಗಿ ಅಷ್ಟೇ ಅಲ್ಲ, ಕೂದಲು ಹಾಗೂ ಚರ್ಮದ ಸೌಂದರ್ಯದಲ್ಲೂ ಪಾತ್ರವಿದೆ. ಬನ್ನಿ, ಆಲಿವ್‌ ಎಣ್ಣೆಯಿಂದ ಕೂದಲಿಗೆ ಹಾಗೂ ಚರ್ಮಕ್ಕೆ ಆಗುವ ಅನುಕೂಲಗಳನ್ನು (Olive oil benefits) ತಿಳಿಯೋಣ.

Olive Oil

ಸುಕ್ಕು ನಿವಾರಣೆ

ಆಲಿವ್‌ ಎಣ್ಣೆಯಲ್ಲಿರುವ ಪಾಲಿಫಿನಾಲ್‌ ಕಾಂಪೌಂಡ್‌ಗಳಿಂದಾಗಿ ಇದು ಆಕ್ಸಿಡೇಟಿವ್‌ ಒತ್ತಡಗಳನ್ನು ದೂರವಿರಿಸುತ್ತದೆ. ಪ್ರತಿ ನಿತ್ಯ ಆಲಿವ್‌ ಎಣ್ಣೆಯಿಂದ ಮಸಾಜ್‌ ಮಾಡುವುದರಿಂದ ಚರ್ಮದ ಮೇಲಿನ ಸುಕ್ಕು, ಕಪ್ಪು ಕಲೆಗಳು ದೂರವಾಗಿ ಚರ್ಮ ತಾಜಾ ಆಗಿ ಕಂಗೊಳಿಸುತ್ತದೆ.

ಅತ್ಯುತ್ತಮ ಮಾಯ್‌ಶ್ಚರೈಸರ್‌

ಆಲಿವ್‌ ಎಣ್ಣೆಯಲ್ಲಿ ವಿಟಮಿನ್‌ ಇ ಮತ್ತು ಎ ಹೇರಳವಾಗಿದ್ದು, ಇದು ಅತ್ಯುತ್ತಮ ಮಾಯ್‌ಶ್ಚರೈಸರ್‌ ಆಗಿ ಕೆಲಸ ಮಾಡುತ್ತದೆ. ಮುಖದ ಚರ್ಮಕ್ಕೆ ಸರಿಯಾದ ತೇವಾಂಶವನ್ನು ಒದಗಿಸಲು ಈ ಎಣ್ಣೆಯ ಮಸಾಜ್‌ ಸೂಕ್ತ. ಅಷ್ಟೇ ಅಲ್ಲ, ಇದು ಚರ್ಮವನ್ನು ಇನ್ನಷ್ಟು ಆರೋಗ್ಯಯುತವಾಗಿ ನಳನಳಿಸುವಂತೆ ಮಾಡುತ್ತದೆ.

ಕಪ್ಪು ಕಲೆ ನಿವಾರಣೆ

ಬಿಸಿಲಿಗೆ ಚರ್ಮ ಬಹುಬೇಗನೆ ಹಾಳಾಗಿತ್ತದೆ, ಕಪ್ಪುಕಲೆ, ಸುಕ್ಕಾಗುವುದು ಎಲ್ಲವೂ ಬಿಸಿಲಿನ ಝಳಕ್ಕೆ. ಆಲಿವ್‌ ಎಣ್ಣೆಯಲ್ಲಿ ಸಾಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇದು ಚರ್ಮವನ್ನು ಸೂರ್ಯನ ಬಿಸಿಲಿನಿಂದಾಗುವ ಹಾನಿಯಿಂದ ತಪ್ಪಿಸುತ್ತದೆ. ನಿತ್ಯವೂ ಆಲಿವ್‌ ಎಣ್ಣೆಯಿಂದ ಮುಖ, ಕೈಕಾಲು, ಕುತ್ತಿಗೆಗೆ ಲೇಪಿಸಿ ಮಸಾಜ್‌ ಮಾಡುವುದುರಿಂದ ಉತ್ತಮ ಫಲ ಕಾಣಬಹುದು. ರಾತ್ರಿ ಮಲಗುವ ಮುಂಚೆ ಹೀಗೆ ಮಾಡಿ ಬೆಳಗ್ಗೆ ಇದನ್ನು ತೊಳೆಯಿರಿ.

image Olive Oil Benefits

ಕಜ್ಜಿ ನಿವಾರಣೆ

ಕೆಲವರಿಗೆ ಚರ್ಮದಲ್ಲಿ ತುರಿಕೆ ಇರುತ್ತದೆ. ಬಿಸಿಲಿನ ಝಳದಿಂದ ತುರಿಕೆ ಹೆಚ್ಚಾಗಿ ಚರ್ಮದ ತುಂಬ ಕಜ್ಜಿಗಳೇಳಬಹುದು. ಅಂಥ ಮಂದಿಗೆ ಈ ಎಣ್ಣೆ ಸೂಕ್ತ. ಇದು ತುರಿಕೆಯ ಪ್ರಮಾಣವನ್ನು ಕಡಿಮೆ ಮಾಡಿ, ಕಜ್ಜಿಯನ್ನು ಹೊಡೆದೋಡಿಸಿ ಚರ್ಮವನ್ನು ನಯವಾಗಿಸುತ್ತದೆ. ಮಕ್ಕಳಿಗೆ ಡಯಪರ್‌ನಿಂದಾಗುವ ಕಜ್ಜಿಗಳಿಗೂ ಈ ಎಣ್ಣೆ ಬಳಸಬಹುದು.

ಆಫ್ಟರ್‌ ಕ್ರೀಮ್‌ಗೆ ಪರ್ಯಾಯ

ಶೇವ್‌ ಮಾಡಿದ ಮೇಲೆ ತುರಿಕೆ, ಗಾಯ ಇತ್ಯಾದಿಗಳಿ ಇದ್ದಿದ್ದೇ. ಹಾಗಾಗಿ ಇದನ್ನು ಆಫ್ಟರ್‌ ಕ್ರೀಮ್‌ನ ಬದಲಾಗಿಯೂ ಬಳಸಬಹುದು. ಇದರಂದ ಚರ್ಮಕ್ಕೆ ಉತ್ತಮ ಮಾಯ್‌ಶ್ಚರೈಸರ್‌ ಸಿಗುವುದಷ್ಟೇ ಅಲ್ಲ ಇನ್‌ಫೆಕ್ಷನ್‌ ಕೂಡ ದೂರ ಉಳಿಯುತ್ತದೆ. ಕೇವಲ 2-3 ಬಿಂದು ಎಣ್ಣೆಯನ್ನು ಒದ್ದೆ ಮುಖದ ಮೇಲೆಯೇ ಹಚ್ಚಿಕೊಳ್ಳಿ, ಕೂಡಲೇ ಇದು ಚರ್ಮದ ರಂಧ್ರಗಳ ಮೂಲಕ ಹೀರಿಕೊಳ್ಳಲ್ಪಡುತ್ತದೆ.

ಇದನ್ನೂ ಓದಿ: Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ?

ಹೊಟ್ಟಿನ ಸಮಸ್ಯೆ ಮಾಯ

ತಲೆಹೊಟ್ಟು ಇರುವ ಮಂದಿಗೆ ಆಲಿವ್‌ ಎಣ್ಣೆ ಬಹಳ ಒಳ್ಳೆಯದು. ವಾರಕ್ಕೆರಡು ಬಾರಿ ಆಲಿವ್‌ ಎಣ್ಣೆಯಿಂದ ಮಸಾಜ್‌ ಮಾಡಿದರೆ ಕೆಲವೇ ವಾರಗಳಲ್ಲಿ ಹೊಟ್ಟಿನ ಸಮಸ್ಯೆ ಮಾಯ.

Hair Growth Tips

ಕೂದಲಿಗೆ ಪೋಷಣೆ

ಕೂದಲು ಒರಟೊರಟಾಗಿ ಸಂಭಾಳಿಸಲು ಕಷ್ಟವಾಗುತ್ತದೆ ಎಂದಾದಲ್ಲಿ, ತಲೆಗೆ ಸ್ನಾನ ಮಾಡುವ ಒಂದೆರಡು ಗಂಟೆ ಆಲಿವ್‌ ಎಣ್ಣೆಯನ್ನು ಹಚ್ಚಿ ಮಸಾಜ್‌ ಮಾಡಿ. ಇದು ತಲೆ ಬುಡಕ್ಕೆ ಸಾಕಷ್ಟು ರಕ್ತಸಂಚಾರವನ್ನು ನೀಡಿ ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ. ಕೂದಲು ನಯವಾಗುತ್ತದೆ. ಗಾಳಿಗೆ ಹಾರುವ ಕೂದಲು, ಚೆನ್ನಾಗಿ ನಯವಾಗಿ ನಿಮ್ಮ ತಲೆಯೇ ಮೇಲೆಯೇ ಕೂರುತ್ತದೆ. ಮೊಟ್ಟೆಯ ಬಿಳಿ ಲೋಳೆಯೊಂದಿಗೆ ಆಲಿವ್‌ ಎಣ್ಣೆಯನ್ನೂ ಸೇರಿಸಿ ಹೇರ್‌ಪ್ಯಾಕ್‌ ಹಾಕಿ ತಲೆಗೆ ಸ್ನಾ ಮಾಡುವುದರಿಂದ ಕೂದಲು ಫಳಪಳನೆ ಹೊಳೆಯುತ್ತದೆ. ಈ ಪೋಷಣೆ ಯಾವ ಹೇರ್‌ ಸ್ಪಾಗೂ ಕಡಿಮೆಯಿಲ್ಲ.

Continue Reading

ಆಹಾರ/ಅಡುಗೆ

Cooking Oils: ಭಾರತೀಯ ಅಡುಗೆ ಶೈಲಿಗೆ ಯೋಗ್ಯವಾದ 7 ಅಡುಗೆ ಎಣ್ಣೆಗಳಿವು

ಎಲ್ಲ ಕೊಬ್ಬೂ ಕೂಡಾ ಸ್ಯಾಚುರೇಟೆಡ್‌ ಹಾಗೂ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಮಿಶ್ರಣವಾಗಿದ್ದು, ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆಗಿಂತ, ಅನ್‌ ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆ ಉತ್ತಮ. ಇದು ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಬ್ಬನ್ನು ದೇಹಕ್ಕೆ ಸೇರುವಂತೆ ಮಾಡುತ್ತದೆ. ಇದರಿಂದ ಇಂತಹ ಎಣ್ಣೆಗಳು ಹೃದಯಕ್ಕೆ ಹೆಚ್ಚು ಕೆಟ್ಟದನ್ನು ಮಾಡಲಾರವು. ಭಾರತೀಯ ಅಡುಗೆಗಳಲ್ಲಿ ಕರಿಯಲು ಯೋಗ್ಯವಾದ ಏಳು ಎಣ್ಣೆಗಳು ಯಾವುವು ಎಂಬುದರ ಬಗ್ಗೆ (Cooking Oils) ಇಲ್ಲಿದೆ ಮಾಹಿತಿ.

VISTARANEWS.COM


on

Cooking Oils
Koo

ಭಾರತೀಯ ಅಡುಗೆಗಳಲ್ಲಿ ಎಣ್ಣೆಗೆ ಮುಖ್ಯ ಸ್ಥಾನವಿದೆ. ನಿತ್ಯವೂ ಏನಾದರೊಂದು ಕರಿಯಲು ಎಣ್ಣೆ ಬೇಕೇ ಬೇಕಾಗುತ್ತದೆ. ಭಾರತೀಯ ಅಡುಗೆಯ ಜೀವಾಳವಾದ ಒಗ್ಗರಣೆಗೂ ಎಣ್ಣೆ ಬೇಕೇ ಬೇಕು. ಬಗೆಬಗೆಯ ಖಾದ್ಯಗಳು, ತರಹೇವಾರಿ ಅಡುಗೆಗಳು, ಕುರುಕಲು ತಿಂಡಿಗಳು ಸೇರಿದಂತೆ ಎಲ್ಲವುಗಳ ತಯಾರಿಯಲ್ಲೂ ಎಣ್ಣೆಗೆ ಪ್ರಮುಖ ಸ್ಥಾನವಿದೆ. ಮಾರುಕಟ್ಟೆಯಲ್ಲಿ ಬೇಕಾದಷ್ಟು ಬಗೆಯ ಅಡುಗೆ ಎಣ್ಣೆಗಳು ಲಭ್ಯವಿವೆ. ಪ್ರತಿ ಎಣ್ಣೆಯೂ ಉಳಿದ ಎಣ್ಣೆಗಳಿಗಿಂತ ತಾನೇ ಶ್ರೇಷ್ಠ, ನಿಮ್ಮ ಆರೋಗ್ಯಕ್ಕೆ ನನ್ನನ್ನೇ ಬಳಸಿ ಎನ್ನುವ ಜಾಹಿರಾತುಗಳು ಗ್ರಾಹಕನನ್ನು ಸಂದಿಗ್ಧಕ್ಕೆ ದೂಡುತ್ತದೆ. ಎಂತಹ ಎಣ್ಣೆಯನ್ನು ಖರೀದಿಸಬೇಕು, ನಿಜಕ್ಕೂ ಯಾವ ಎಣ್ಣೆ ಆರೋಗ್ಯಕ್ಕೆ ಯೋಗ್ಯ ಎಂಬ ಗೊಂದಲದಲ್ಲಿ ತಲೆಕೆಡಿಸಿಕೊಳ್ಳುತ್ತಾನೆ. ಬನ್ನಿ, ಭಾರತೀಯ ಅಡುಗೆಗಳಿಗೆ ಸೂಕ್ತವಾದ ಎಣ್ಣೆ ಯಾವುವು ಎಂಬುದನ್ನು ನೋಡೋಣ.
ಎಲ್ಲ ಕೊಬ್ಬೂ ಕೂಡಾ ಸ್ಯಾಚುರೇಟೆಡ್‌ ಹಾಗೂ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಮಿಶ್ರಣವಾಗಿದ್ದು, ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆಗಿಂತ, ಅನ್‌ ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆ ಉತ್ತಮ. ಇದು ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಬ್ಬನ್ನು ದೇಹಕ್ಕೆ ಸೇರುವಂತೆ ಮಾಡುತ್ತದೆ. ಇದರಿಂದ ಇಂತಹ ಎಣ್ಣೆಗಳು ಹೃದಯಕ್ಕೆ ಹೆಚ್ಚು ಕೆಟ್ಟದನ್ನು ಮಾಡಲಾರವು. ಆದರೆ, ದೇಹಕ್ಕೆ ಒಳ್ಳೆಯ ಕೊಬ್ಬಿನ ಅಗತ್ಯವಿರುವುದು ಹೌದಾದರೂ, ಯಾವುದೇ ಎಣ್ಣೆಯಿರಲಿ, ಅತಿಯಾದ ಸೇವನೆ ಒಳ್ಳೆಯದಲ್ಲ. ಬನ್ನಿ, ಭಾರತೀಯ ಅಡುಗೆಗಳಲ್ಲಿ ಕರಿಯಲು ಯೋಗ್ಯವಾದ ಐದು ಎಣ್ಣೆಗಳು ಯಾವುವು (Cooking Oils) ಎಂಬುದನ್ನು ನೋಡೋಣ.

Rice bran oil

ರೈಸ್‌ ಬ್ರಾನ್‌ ಎಣ್ಣೆ

ರೈಸ್‌ ಬ್ರಾನ್‌ ಅಥವಾ ಅಕ್ಕಿಯ ಹೊರಕವಚದಿಂದ ತಯಾರಿಸಲ್ಪಡುವ ಈ ಎಣ್ಣೆಯಲ್ಲಿ ಒಳ್ಳೆಯ ಕೊಬ್ಬು ಹೆಚ್ಚಿದೆ. ಆಲಿವ್‌ ಎಣ್ಣೆ, ಅವಕಾಡೋ ಎಣ್ಣೆಯಂತೆ ಇದು ಹೃದಯ ಸ್ನೇಹಿ. ಜಪಾನ್‌ನ ಸರ್ಕಾರ ಇದನ್ನು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಸೇರಿಸಿದ್ದು, ಇನ್ಸುಲಿನ್‌ ಮಟ್ಟದ ಮೇಲೆ ಪರಿಣಾಮ ಬೀರದೆ, ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಇಳಿಸಲೂ ಕೂಡಾ ಇದು ನೆರವಾಗುತ್ತದೆ. ಇದರಲ್ಲಿ ಕ್ಯಾನ್ಸರ್‌ ನಿರೋಧಕ ಗುಣಗಳೂ ಇದ್ದು, ಇದನ್ನು ಭಾರತೀಯ ಅಡುಗೆಗಳಲ್ಲಿ ಇತ್ತೀಚೆಗೆ ಹೇರಳವಾಗಿ ಬಳಸಲಾಗುತ್ತದೆ.

Mustard Oil

ಸಾಸಿವೆ ಎಣ್ಣೆ

ಎರುಸಿಕ್‌ ಆಸಿಡ್‌ ಎಂಬ ಫ್ಯಾಟಿ ಆಸಿಡ್‌ ಅನ್ನು ಹೊಂದಿರುವ ಸಾಸಿವೆ ಎಣ್ಣೆಯನ್ನು ಯುರೋಪ್‌ ಹಾಗೂ ಯುಸ್‌ಗಳಲ್ಲಿ ನಿಷೇಧಿಸಿದ್ದರೂ, ಭಾರತದಲ್ಲಿ ಹೇರಳವಾಗಿ ಬಳಕೆಯಾಗುವ ಎಣ್ಣೆ. ಮುಖ್ಯವಾಗಿ ಉತ್ತರ ಭಾರತದ ಮಂದಿ ಅಡುಗೆಗೆ ಬಳಸುವ ಈ ಸಾಸಿವೆ ಎಣ್ಣೆಯಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಫ್ಯಾಟಿ ಆಸಿಡ್‌ಗಳಿದ್ದು, ಕಡಿಮೆ ಸ್ಯಾಚುರೆಟೆಡ್‌ ಫ್ಯಾಟ್‌ ಹೊಂದಿದೆ. ಇದರಲ್ಲಿ ಆಂಟಿ ಮೈಕ್ರೋಬಿಯಲ್‌, ಆಂಟಿ ಬಯಾಟಿಕ್‌ ಗುಣಗಳೂ ಇದ್ದು, ಕೆಲವು ಬಗೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ.

Sunflower oil

ಸೂರ್ಯಕಾಂತಿ ಎಣ್ಣೆ

ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ಮನೆಗಳಲ್ಲಿ ಸ್ಥಾನ ಪಡೆದಿರುವ ಸೂರ್ಯಕಾಂತಿ ಎಣ್ಣೆಯಲ್ಲಿ ಹೃದಯ ಸ್ನೇಹಿ ಗುಣಗಳಿವೆ. ಇದರಲ್ಲಿ ಪಾಳಿ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಅಂಶಗಳು ಹೆಚ್ಚಿರುವುದರಿಂದ ಒಳ್ಳೆಯ ಕೊಬ್ಬನ್ನು ಪ್ರೋತ್ಸಾಹಿಸುತ್ತದೆ. ವಿಟಮಿನ್‌ ಇ ಇದರಲ್ಲಿ ಹೇರಳವಾಗಿದ್ದು, ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು. ಕರಿಯಲು ಈ ಎಣ್ಣೆ ಯೋಗ್ಯವಾಗಿದ್ದು ಬಹಳಷ್ಟು ಮಂದಿ ಇದನ್ನು ನಿತ್ಯವೂ ಬಳಸುತ್ತಾರೆ.

Ghee Testing Method

ತುಪ್ಪ

ಇದರಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಹೆಚ್ಚಿರುವುದು ಹೌದಾದರೂ, ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿರುವ ಹಾಗೂ ಭಾರತೀಯ ಮನೆಗಳ ಅವಿಭಾಜ್ಯ ಅಂಗ. ಇದರಲ್ಲಿ ವಿಟಮಿನ್‌ ಎ, ಡಿ, ಕೆ ಹಾಗೂ ಇ ಹೇರಳವಾಗಿದ್ದು, ಆಂಟಿ ಕ್ಯಾನ್ಸರ್‌ ಗುಣಗಳನ್ನೂ ಹೊಂದಿದೆ. ಆಂಟಿ ಆಕ್ಸಿಡೆಂಟ್‌ಗಳೂ ಹೇರಳವಾಗಿರುವ ಸಾಕಷ್ಟು ವೈದ್ಯಕೀಯ ಗುಣಗಳನ್ನು ಹೊಂದಿರುವ ಇದು ಭಾರತೀಯ ಆಯುರ್ವೇದ ಚಿಕಿತ್ಸೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಹೀಗಾಗಿ. ಇದರ ಬಳಕೆ ಭಾರತೀಯ ಅಡುಗೆಗಳಲ್ಲಿ ನಿರಾಕರಿಸುವುದು ಅಸಾಧ್ಯ. ಹಿತಮಿತವಾಗಿ ಬಳಕೆ ಮಾಡಿದಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

Coconut Oil

ತೆಂಗಿನೆಣ್ಣೆ

ಲಾರಿಕ್‌ ಆಸಿಡ್‌ ಎಂಬ ಅಪರೂಪದ ಸ್ಯಾಚುರೇಟೆಡ್‌ ಫ್ಯಾಟ್‌ ತೆಂಗಿನೆಣ್ಣೆಯಲ್ಲಿದ್ದರೂ ಸಾಕಷ್ಟು ಉತ್ತಮ ಆರೋಗ್ಯಕರ ಗುಣಗಳ ಮೂಲಕ ತೆಂಗಿನೆಣ್ನೆ ತಲೆತಲಾಂತರಗಳಿಂದ ಮುಖ್ಯವಾಗಿ ದಕ್ಷಿಣ ಭಾರತೀಯರ ಮನೆಗಳಲ್ಲಿ ಅಡುಗೆಯಲ್ಲಿ ಬಹುಮುಖ್ಯ ಸ್ಥಾಣವನ್ನು ಪಡೆದಿದೆ. ಆಂಟಿ ಆಕ್ಸಿಡೆಂಟ್‌ಗಳೂ ಇದರಲ್ಲಿ ಹೇರಳವಾಗಿದೆ. ಚರ್ಮ ಹಾಗೂ ಕೂದಲ ಆರೋಗ್ಯ ಸೇರಿದಂತೆ ಹಲವು ಲಾಭಗಳು ಇದರಲ್ಲಿವೆ.

Groundnut oil

ನೆಲಗಡಲೆ ಎಣ್ಣೆ

ವಿಟಮಿನ್‌ ಇ ಯಿಂದ ಸಮೃದ್ಧವಾಗಿರುವ ಈ ಎಣ್ಣೆ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳನ್ನೂ ಹೊಂದಿದೆ. ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಸ್ಯಾಚುರೇಟೆಡ್‌ ಕೊಬ್ಬಿದ್ದರೂ, ಇದರ ಇತರ ಆರೋಗ್ಯಕರ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಅಡುಗೆಗೆ, ಕರಿಯಲು ಬಳಸಬಹುದು.

Sesame Oil

ಎಳ್ಳೆಣ್ಣೆ

ಭಾರತೀಯ ಆಯುರ್ವೇದದಲ್ಲಿ ಎಳ್ಳೆಣ್ಣೆಗೆ ಮಹತ್ವದ ಸ್ಥಾನವಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಅಡಿಮೆ ಮಾಡಲು ಈ ಎಣ್ಣೆ ಒಳ್ಳೆಯದು ಎಂಬುದನ್ನು ಸಾಕಷ್ಟು ಸಂಶೋಧನೆಗಳು ಪುಷ್ಠೀಕರಿಸಿವೆ. ಹೃದಯಸ್ನೇಹಿ ಗುಣಗಳನ್ನು ಹೊಂದಿರುವ ಈ ಎಣ್ಣೆಯನ್ನು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ಅಡುಗೆಗೆ ಬಳಸಲಾಗುತ್ತದೆ. ಹಲವಾರಿ ಆರೋಗ್ಯದ ಲಾಭಗಳನ್ನೂ ಹೊಂದಿರುವ ಇದು ಚರ್ಮ ಹಾಗೂ ಕೂದಲ ಆರೋಗ್ಯಕ್ಕೂ ಒಳ್ಳೆಯದನ್ನೇ ಮಾಡುತ್ತದೆ.
ನೆನಪಿಡಿ: ಉತ್ತಮ ಆರೋಗ್ಯಕ್ಕೆ ಎಣ್ಣೆಗಳು ಬೇಕೇಬೇಕು. ಆದರೆ, ಅತಿಯಾಗಬಾರದು ಅಷ್ಟೇ.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Continue Reading

ದೇಶ

Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

Covishield: ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ಲಸಿಕೆ ವಿತರಿಸುವಾಗಲೇ ಮಾಹಿತಿ ನೀಡಲಾಗಿದೆ. ಈಗ ಯಾವುದೇ ಮಾಹಿತಿ ಹಂಚಿಕೊಳ್ಳಲು ಬಾಕಿ ಇಲ್ಲ ಎಂಬುದಾಗಿ ಕಂಪನಿ ತಿಳಿಸಿದೆ.

VISTARANEWS.COM


on

Covishield
Koo

ಪುಣೆ: ಲಸಿಕೆಯ ಅಡ್ಡಪರಿಣಾಮದ ಕುರಿತು ಭಾರತ ಸೇರಿ ಜಗತ್ತಿನಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬ್ರಿಟಿಷ್ ಔಷಧೀಯ ದೈತ್ಯ ಅಸ್ಟ್ರಾಜೆನಿಕಾ (AstraZeneca) ಕಂಪನಿಯು ಕೊರೊನಾ ನಿರೋಧಕ ಲಸಿಕೆ ಕೋವಿಶೀಲ್ಡ್ (Covishield Vaccine)‌ ಅನ್ನು ಜಾಗತಿಕ ಮಟ್ಟದಲ್ಲಿ ಹಿಂಪಡೆಯಲು ಮುಂದಾಗಿದೆ. ಇದರ ಬೆನ್ನಲ್ಲೇ, ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಉತ್ಪಾದಿಸಿದ್ದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (SII) ಕಂಪನಿಯು, “ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮದ ಕುರಿತು ಇದಕ್ಕೂ ಮೊದಲೇ ಬಹಿರಂಗಪಡಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. “ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS ಸೇರಿ ಎಲ್ಲ ವಿರಳ ಅಡ್ಡ ಪರಿಣಾಮಗಳ ಕುರಿತು ಈಗಾಗಲೇ ಮಾಹಿತಿ ಬಹಿರಂಗಪಡಿಸಲಾಗಿದೆ” ಎಂದು ಸೀರಂ ಸಂಸ್ಥೆಯ ವಕ್ತಾರರೊಬ್ಬರು ಪ್ರಕಟಣೆ ತಿಳಿಸಿದ್ದಾರೆ.

2021ರಲ್ಲೇ ಉತ್ಪಾದನೆ ಸ್ಥಗಿತ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಕೋಟ್ಯಂತರ ಡೋಸ್‌ಗಳನ್ನು ಜನರಿಗೆ ನೀಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಬಳಿಕ ಅಂದರೆ, 2021ರ ಡಿಸೆಂಬರ್‌ನಿಂದಲೇ ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂಬುದಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮಾಹಿತಿ ನೀಡಿದೆ. ಅಷ್ಟೇ ಅಲ್ಲ, ಲಸಿಕೆಯ ಬಾಟಲಿ ಮೇಲೆಯೇ ಅಡ್ಡ ಪರಿಣಾಮದ ಕುರಿತು ಎಚ್ಚರಿಕೆ ನೀಡಿತ್ತು.

ಕೋವಿಶೀಲ್ಡ್‌ ಲಸಿಕೆ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂಬುದನ್ನು ಈ ಹಿಂದೆ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದ ಅಸ್ಟ್ರಾಜೆನಿಕಾ ಕಂಪನಿಯು ಈಗ ವ್ಯಾಪಾರ ಉದ್ದೇಶದಿಂದ ಎಲ್ಲ ಮಾರುಕಟ್ಟೆಗಳಿಂದ ತನ್ನ ಈ ಲಸಿಕೆಯನ್ನು ತೆಗೆದು ಹಾಕುವುದಾಗಿ ಘೋಷಿಸಿದೆ.

ತಜ್ಞರು ಹೇಳುವುದಿಷ್ಟು

ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದಾರೆ. ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳು ಮಾತ್ರ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮವನ್ನು ಅನುಭವಿಸುತ್ತಾರೆ. ಭಾರತದಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: Covishield vaccine: ಕೋವಿಶೀಲ್ಡ್‌ ಲಸಿಕೆಯಿಂದ ಸೈಡ್‌ ಎಫೆಕ್ಟ್‌ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Continue Reading
Advertisement
Silent Heart Attack
ಆರೋಗ್ಯ17 mins ago

Silent Heart Attack: ಏನಿದು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌? ಇದರ ಲಕ್ಷಣಗಳೇನು?

Olive Oil benefits
ಆರೋಗ್ಯ18 mins ago

Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

SSLC Result 2024
ಮಂಡ್ಯ21 mins ago

SSLC Result 2024: ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ

IPL 2024
ಪ್ರಮುಖ ಸುದ್ದಿ21 mins ago

IPL 2024 : ಸ್ಟೊಯ್ನಿಸ್ ಕಪಾಳಕ್ಕೆ ಬಾರಿಸಿದ ಕೋಚ್​​ ಕ್ಲೂಸ್ನರ್​; ಇಲ್ಲಿದೆ ವಿಡಿಯೊ

Akshaya Tritiya Fashion
ಫ್ಯಾಷನ್48 mins ago

Akshaya Tritiya Fashion: ಅಕ್ಷಯ ತೃತೀಯಕ್ಕೆ ಬಂತು ಬಂಗಾರದ ಆಕರ್ಷಕ ಮೂಗಿನ ಸ್ಟಡ್ಸ್

SSLC Result 2024
ಶಿಕ್ಷಣ55 mins ago

SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

MS Dhoni
ಕ್ರೀಡೆ55 mins ago

MS Dhoni: ಧೋನಿಗೆ ವಿಶೇಷ ಉಡುಗೊರೆ ನೀಡಿದ ಅಭಿಮಾನಿ; ವಿಡಿಯೊ ವೈರಲ್​

Janhvi Kapoor Wears Cricket-Themed Dress
ಬಾಲಿವುಡ್1 hour ago

Janhvi Kapoor: ಕ್ರಿಕೆಟ್ ಥಿಮ್‌ ಡ್ರೆಸ್‌ನಲ್ಲಿ ಪೋಸ್‌ ಕೊಟ್ಟ ಜಾನ್ವಿ ಕಪೂರ್; ಚೆಂಡಿದೆ ಬೆನ್ನ ಹಿಂದೆ!

Job Alert
ಉದ್ಯೋಗ1 hour ago

Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಅಪ್ಲೈ ಮಾಡಿ

Kannada Serials TRP Puttakkana makkalu TOP one
ಕಿರುತೆರೆ2 hours ago

Kannada Serials TRP: ಟಾಪ್‌ 3ರಲ್ಲಿ ಇವೆ ಎರಡು ಧಾರಾವಾಹಿಗಳು; ʻಪುಟ್ಟಕ್ಕನ ಮಕ್ಕಳುʼ ಸೀರಿಯಲ್‌ನದ್ದೇ ಪಾರುಪತ್ಯ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Result 2024 what is the reason for most of the students fail in SSLC
ಕರ್ನಾಟಕ4 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ4 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ5 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು5 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ5 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು7 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

ಟ್ರೆಂಡಿಂಗ್‌