SK Bhagavan: ಗೇಟ್ ಕೀಪರ್ ನಿಂದ ಸ್ಟಾರ್ ನಿರ್ದೇಶಕನವರೆಗೆ! ಎಸ್ ಕೆ ಭಗವಾನ್ ಸಿನಿ ಎಂಟ್ರಿಯೇ ಅಚ್ಚರಿ! - Vistara News

ಸಿನಿಮಾ

SK Bhagavan: ಗೇಟ್ ಕೀಪರ್ ನಿಂದ ಸ್ಟಾರ್ ನಿರ್ದೇಶಕನವರೆಗೆ! ಎಸ್ ಕೆ ಭಗವಾನ್ ಸಿನಿ ಎಂಟ್ರಿಯೇ ಅಚ್ಚರಿ!

ಇನ್ನೊಮ್ಮೆ (SK Bhagavan) ನಾಟಕದ ಸಹವಾಸ ಮಾಡಿದರೆ ಜೀವ ತೆಗೆಯುತ್ತೇನೆ ನೋಡು ಎಂದು ಸೋದರ ಮಾವ ಬೆಲ್ಟ್ ನಿಂದ ಥಳಿಸಿ ಕೋಣೆಯಲ್ಲಿ ಕೂಡಿ ಹಾಕಿದ್ದರು. ಆದರೆ, ಅವರು ಸಿನಿಮಾ ರಂಗಕ್ಕೆ ಬಂದು ಖ್ಯಾತ ಚಿತ್ರ ನಿರ್ದೇಶಕ ಆಗುವುದನ್ನು ಯಾರಿಂದಲೂ ತಪ್ಪಿಸಲಾಗಲಿಲ್ಲ!

VISTARANEWS.COM


on

SK Bhagavan From gate keeper to star director! SK Bhagwan's movie entry is a surprise!
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶ್ರೀನಿವಾಸ ಕೃಷ್ಣ ಅಯ್ಯಂಗಾರ್ (SK Bhagavan) ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಇದೀಗ ನಮ್ಮನ್ನು ಅಗಲಿರುವ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್ ಕೆ ಭಗವಾನ್ ಅವರ ಮೂಲ ಹೆಸರಿದು!

ಮೈಸೂರು ಮೂಲದ ಭಗವಾನ್ ಹೊಟ್ಟೆಪಾಡಿಗಾಗಿ ರಂಗಭೂಮಿ ಸೇರಿದ್ದು, ಆ ಬಳಿಕ ಸಿನಿ ಲೋಕಕ್ಕೆ ಎಂಟ್ರಿ ಪಡೆದ ಕತೆ ಕುತೂಹಲಕರ. ಸಿನಿಮಾ ಮಂದಿರದ ಗೇಟ್ ಕೀಪರ್ ಕೆಲಸದಿಂದ ಹಿಡಿದು ಸೂಪರ್ ಸ್ಟಾರ್ ಡಾ. ರಾಜ್ ಕುಮಾರ್ ಅವರ ಹಲವಾರು ಹಿಟ್ ಚಿತ್ರಗಳ ನಿರ್ದೇಶನದ ತನಕ ಭಗವಾನ್ ಸಾಗಿ ಬಂದ ಹಾದಿ ಸ್ಫೂರ್ತಿದಾಯಕ.

ಭಗವಾನ್ ಅವರ ತಂದೆ ಆ ಕಾಲದ ಹೈಕೋರ್ಟ್ ಎನಿಸಿದ್ದ ಮೈಸೂರು ಕೋರ್ಟ್ ಮುಂದೆ ಅರ್ಜಿ ಬರೆಯುವ ಕೆಲಸ ಮಾಡುತ್ತಿದ್ದರು. ಹಾಗಾಗಿ ಅವರಿಗೆ ವೆಂಡರ್ ಕೃಷ್ಣಸ್ವಾಮಿ ಅಯ್ಯಂಗಾರ್ ಎಂದೇ ಕರೆಯಲಾಗುತ್ತಿತ್ತು. ತಂದೆಯ ನಿಧನದ ನಂತರ ಇವರ ಹಿರಿಯ ಸಹೋದರರು ಮತ್ತು ಸೋದರ ಮಾವನ ಸುಪರ್ದಿಯಲ್ಲಿ ಶ್ರೀನಿವಾಸ (ಭಗವಾನ್) ಬೆಳೆದರು. ಹಿರಿಯ ಸಹೋದರರೊಬ್ಬರು ಉದ್ಯೋಗ ನಿಮಿತ್ತ ಬೆಂಗಳೂರಿಗೆ ಆಗಮಿಸದ ಕಾರಣ, ಬಾಲಕ ಭಗವಾನ್ ಕೂಡ ಬೆಂಗಳೂರಿಗೆ ಬಂದು ಇಂಗ್ಲಿಷ್ ಮೀಡಿಯಂ ಶಾಲೆ ಸೇರಿದರು.

ಮುಂದೆ ಕಾಲೇಜು ಸೇರಿದಾಗ ಜಿ ವೆಂಕಟಸುಬ್ಬಯ್ಯರಂಥ ಗುರುಗಳು ಮತ್ತು ಜಿ ವಿ ಅಯ್ಯರ್ ರಂಥ ರಂಗಕರ್ಮಿಗಳ ಸಾಮಿಪ್ಯ ದೊರೆಯಿತು. ಕಾಲೇಜು ವಾರ್ಷಿಕೋತ್ಸವ ಸಂದರ್ಭದಲ್ಲಿ ಕೈಲಾಸಂ ಅವರ ‘ಟೊಳ್ಳುಗಟ್ಟಿ’ ನಾಟಕದಲ್ಲಿ ಸ್ತ್ರೀ ಪಾತ್ರ ನಿರ್ವಹಿಸಿದರು. ಕಾಲೇಜು ದಿನಗಳ ಪರಿಚಿತ ಮಾ. ಹಿರಣ್ಣಯ್ಯ ಅವರು ಭಗವಾನ್ ಅವರ ಸ್ತ್ರೀ ಪಾತ್ರದ ಜನಪ್ರಿಯತೆಯ ಬಗ್ಗೆ ತಮ್ಮ ತಂದೆ ಹಿರಣ್ಣಯ್ಯ ಅವರ ಗಮನ ಸೆಳೆದರು. ಇದು ವೃತ್ತಿ ರಂಗಭೂಮಿಗೆ ಭಗವಾನ್ ಕಾಲಿರಿಸಲು ಕಾರಣವಾಯಿತು.

ಇದನ್ನೂ ಓದಿ: SK Bhagavan: ಭಗವಾನ್‌ ನಿಧನಕ್ಕೆ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರಿಂದ ಸಂತಾಪ

SK Bhagavan

ನಾಟಕದಲ್ಲಿ ವಿಮಲೆಯ ಪಾತ್ರ

ದಿನಾ ಕಾಲೇಜು ಮುಗಿದ ಬಳಿಕ ಸಂಜೆ 6.30ಕ್ಕೆ ನಮ್ಮ ನಾಟಕ ನೋಡಲು ಬಾ ಎಂದು ಹಿರಣ್ಣಯ್ಯ ಸೂಚಿಸಿದರು. ಕೆಲ ದಿನಗಳ ಬಳಿಕ ಇವರಿಗೆ ಜಡ್ಜ್ ಪಾತ್ರ ಕೊಟ್ಟರು. ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕ ತಂಡ ಆ ದಿನಗಳಲ್ಲಿ ಪ್ರದರ್ಶಿಸುತ್ತಿದ್ದ ‘ದೇವತೆ’ ಎಂಬ ನಾಟಕದಲ್ಲಿ ಸುಬ್ಬಣ್ಣ ಎಂಬುವರು ವಿಮಲೆಯ ಪಾತ್ರ ಮಾಡುತ್ತಿದ್ದರು. ಅದೊಂದು ದಿನ ಅವರು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಅವರು ಬಸ್ ತಪ್ಪಿಸಿಕೊಂಡಿದ್ದರು. ನಾಟಕ ಕಂಪನಿಯವರು ಕಂಗಾಲಾಗಿದ್ದಾಗ ಆಪದ್ಬಾಂಧವರಾಗಿ ಕಂಡಿದ್ದು ಭಗವಾನ್. ಇನ್ನೇನು ನಾಟಕ ಶುರುವಾಗಬೇಕು. ಯಾವ ಪ್ರಾಕ್ಟೀಸ್ ಕೂಡ ಮಾಡದೆ ವಿಮಲೆಯ ಪಾತ್ರ ಮಾಡಲು ಭಗವಾನ್ ಒಪ್ಪಿದರು. ಅಷ್ಟೇ ಅಲ್ಲ ಆ ಪಾತ್ರವನ್ನು ಅದ್ಭುತವಾಗಿ ಮಾಡಿ ಹಿರಣ್ಣಯ್ಯ ಅವರ ಮನ ಗೆದ್ದರು. ಮರುದಿನ ಸುಬ್ಬಣ್ಣ ಬಂದರಾದರೂ ವಿಮಲೆಯ ಪಾತ್ರ ಮಾತ್ರ ಭಗವಾನ್ ಅವರಿಗೇ ಫಿಕ್ಸ್ ಆಯಿತು!

ಮತ್ತೊಂದು ನಾಟಕ ಕಂಪನಿಯ ಆಫರ್

ಈ ನಡುವೆ, ಸೂರಿ ಎಂಬ ಮತ್ತೊಂದು ನಾಟಕ ಕಂಪನಿಯವರೊಬ್ಬರು ಬಂದು ಕೈಗೆ ನೋಟುಗಳನ್ನು ಇಟ್ಟು, ಇನ್ನು ನಮ್ಮ ನಾಟಕ ಕಂಪನಿಯಲ್ಲಿ ನೀವೇ ಸ್ತ್ರೀ ಪಾತ್ರ ಮಾಡಬೇಕು ಎಂದು ಬಿಟ್ಟರು. ನೋಡಿದರೆ 300 ರೂ.ಗಳ ಮೂರು ನೋಟು! ಆ ದಿನಗಳಲ್ಲಿ ದೊಡ್ಡ ಮೊತ್ತ ಇದು. ನೂರರ ಮೂರು ನೋಟುಗಳನ್ನು ಕಂಡು ಭಗವಾನ್ ಗೆ ಮೂರ್ಛೆ ಹೋಗುವಂತಾಗಿತ್ತು!

ಕೆ ಆರ್ ಪೇಟೆಗೆ ಹೋಗಿ‌ ಹೊಸ ನಾಟಕ ಕಂಪನಿ ಸೇರಿಕೊಂಡರು. ವಿಶ್ವಾಮಿತ್ರ ನಾಟಕದ ಗಾಯತ್ರಿ ಪಾತ್ರ ಇವರಿಗಾಗಿ ಕಾದಿತ್ತು. ಅದೇ ವೇಳೆ ಅಲ್ಲಿ ಜಿ ವಿ ಅಯ್ಯರ್ ಮತ್ತು ಬಾಲಕೃಷ್ಣ ಅವರು ಬೇಡರ ಕಣ್ಣಪ್ಪ ನಾಟಕ ಬರೆಯತೊಡಗಿದ್ದರು. ಜಿ ವಿ ಅಯ್ಯರ್ ಬರೆದ ಕಚ್ಚಾ ಕಾಪಿಯನ್ನು ಪಕ್ಕಾ ಕಾಪಿ ಮಾಡುವ ಕೆಲಸವನ್ನು ಮೊದಲು ಭಗವಾನ್ ಗೆ ಒಪ್ಪಿಸಲಾಯಿತು. ಭಗವಾನ್ ಕೆಲವು ದಿನ ಅಲ್ಲಿ ಪಾತ್ರ ನಿರ್ವಹಿಸಿ ಮನೆಗೆ ಮರಳಿದರು.

ಮಾವ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದರು!

ಸಹೋದರಿಯ ಮದುವೆಗೆಂದು ಊರಿಗೆ ಮರಳಿದಾಗ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ಸೋದರ ಮಾವನ ಕೆಂಗಣ್ಣಿಗೆ ಗುರಿಯಾದರು. ಇವರನ್ನು ಕೋಣೆಯಲ್ಲಿ ಕೂಡಿ ಹಾಕಿದ ಸೋದರ ಮಾವ, ಬೆಲ್ಟ್ ನಿಂದ ಹಿಗ್ಗಾಮುಗ್ಗಾ ಬಾರಿಸಿ, ”ಇನ್ನೊಮ್ಮೆ ನಾಟಕ ಗೀಟಕ ಅಂದರೆ ಸಾಯಿಸಿ ಬಿಡ್ತೇನೆ. ಮೊದಲು ಓದು ಮುಗಿಸಿ ಒಳ್ಳೆಯ ಉದ್ಯೋಗ ಹುಡುಕು” ಎಂದು ವಾರ್ನ್ ಮಾಡಿದರು! ಅಲ್ಲಿಗೆ ನಾಟಕದ ಅಂಕಕ್ಕೆ ತೆರೆ ಬಿತ್ತು!

SK Bhagavan

ಥಿಯೇಟರ್ ಗೇಟ್ ಕೀಪರ್ ಆಗಿದ್ದು ಹೇಗೆ?

ಕಾಲೇಜು ಶಿಕ್ಷಣ ಮುಗಿದ ಬಳಿಕ ಉದ್ಯೋಗದ ಬೇಟೆಗಿಳಿದರು. ಮನೆಯ ಬಳಿಯೇ ಇದ್ದ ಪರಿಚಿತರೊಬ್ಬರನ್ನು ಭೇಟಿಯಾಗಿ ಏನಾದರು ಉದ್ಯೋಗಕ್ಕೆ ಸಹಾಯ ಮಾಡಿ ಎಂದಾಗ, ಅವರು ತೋರಿಸಿದ್ದು ಪ್ರಕಾಶ್ ಪಿಕ್ಚರ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಕಚೇರಿಯ ದಾರಿ! ಈ ಮೂಲಕ ಮತ್ತೆ ಅವರು ಬಣ್ಣದ ಜಗತ್ತಿಗೆ ಕಾಲಿರಿಸುವಂತಾಯಿತು.

ಇದನ್ನೂ ಓದಿ: SK Bhagavan: ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಎಸ್‌.ಕೆ. ಭಗವಾನ್ ಇನ್ನು ನೆನಪು ಮಾತ್ರ

ಚೆನ್ನೈ ಮೂಲದ ಪ್ರಕಾಶ್ ಪಿಕ್ಚರ್ಸ್ ಎಂಬ ವಿತರಣಾ ಸಂಸ್ಥೆಯ ಕೈಯಲ್ಲಿ ಆಗ ರಾಜಾ ವಿಕ್ರಮ, ನಟ ಶೇಖರ ಮತ್ತು ತೂಕು ತುಕ್ಕಿ ಎಂಬ ಮೂರು ಸೂಪರ್ ಹಿಟ್ ಚಿತ್ರಗಳಿದ್ದವು. ಕರ್ನಾಟಕದಲ್ಲಿ ಆ ಚಿತ್ರಗಳ ಕಲೆಕ್ಷನ್ ಮೇಲೆ ನಿಗಾ ಇಡುವುದು ಅದಕ್ಕೆ ಸವಾಲಾಗಿತ್ತು. ಚಿತ್ರ ಮಂದಿರಗಳಲ್ಲಿ ಕಲೆಕ್ಷನ್ ಲೆಕ್ಕ ಸರಿಯಾಗಿ ತೋರಿಸುತ್ತಿರಲಿಲ್ಲ. ಪ್ರತಿ ಶೋಗೆ ಎಷ್ಟು ಜನರಿದ್ದಾರೆ ಎಂಬ ಲೆಕ್ಕ ನೋಡುವ ಕೆಲಸವನ್ನು ಭಗವಾನ್ ಗೆ ಒಪ್ಪಿಸಲಾಯಿತು. ಇದು ಒಂಥರಾ ಗೇಟ್ ಕೀಪರ್ ಕೆಲಸವೇ ಆಗಿತ್ತು. ಈ ಕೆಲಸವನ್ನು ಭಗವಾನ್ ಶ್ರದ್ಧೆಯಿಂದ ಮಾಡಿದರು. ಈ ಕೆಲಸ ಮುಂದೆ ಅವರನ್ನು ಚೆನ್ನೈಯ ಸಿನಿಮಾ ಚಟುವಟಿಕೆಗಳ ಕೇಂದ್ರಕ್ಕೆ ಕೊಂಡೊಯ್ದಿತು. ಅಲ್ಲಿ ಕ್ಯಾಮೆರಾಮನ್ ದೊರೆ, ರಾಜ್ ಕುಮಾರ್ ಮುಂತಾದವರ ಪರಿಚಯವಾಯಿತು. ದೊರೆ ಜತೆ ಸೇರಿ ಡಾ. ರಾಜ್ ಕುಮಾರ್ ಸಿನಿಮಾಗಳನ್ನು ನಿರ್ದೇಶಿಸಲೂ ಇದು ದಾರಿ ತೋರಿಸಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Star Kids with Sanskrit Names: ಮಕ್ಕಳಿಗೆ ಸಂಸ್ಕೃತ ಮೂಲದ ಹೆಸರನ್ನೇ ಇಟ್ಟ ಸ್ಟಾರ್ಸ್‌ಗಳಿವರು!

Star Kids with Sanskrit Names: ನಟಿ ಯಾಮಿ ಗೌತಮ್‌ (Yami Gautam) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ನಾಮಕರಣ ಮಾಡಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹೆಸರು ಸಂಸ್ಕೃತದಿಂದ ಬಂದಿದೆ. ಯಾಮಿ ಮಾತ್ರವಲ್ಲ ಈ ನಡುವೆ ಸ್ಟಾರ್ಸ್‌ಗಳು ತಮ್ಮ ಮಕ್ಕಳಿಗೆ ಸಂಸ್ಕೃತ ಮೂಲದ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ನಾಮಕರಣ ಮಾಡುತ್ತಿದ್ದಾರೆ. ಹಾಗಾದ್ರೆ ಯಾರೆಲ್ಲ ಎಂಬುದು ಮುಂದೆ ಓದಿ!

VISTARANEWS.COM


on

Star Kids with Sanskrit Names From Yami Gautam to Priyanka Chopra
Koo

ಬೆಂಗಳೂರು: ನಟಿ ಯಾಮಿ ಗೌತಮ್‌ (Yami Gautam) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ನಾಮಕರಣ ಮಾಡಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʻವೇದವಿದ್’ ಅಕ್ಷಯ ತೃತೀಯ ದಿನ ಹುಟ್ಟಿದ. ಅವನಿಗೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಬೇಕು ಎಂದು ನಟಿ ಶೇರ್‌ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಮಗುವಿನ ಹೆಸರಿಗೆ ಫಿದಾ (Star Kids with Sanskrit Names) ಆಗಿದ್ದಾರೆ. ʻವೇದವಿದ್ʼ ಹೆಸರು ಎಷ್ಟು ವಿಶಿಷ್ಟ ಮತ್ತು ಅಸಾಮಾನ್ಯ ಎಂದು ಹೇಳುತ್ತಿದ್ದಾರೆ. ಈ ಹೆಸರು ಸಂಸ್ಕೃತದಿಂದ ಬಂದಿದೆ. ಯಾಮಿ ಮಾತ್ರವಲ್ಲ ಈ ನಡುವೆ ಸ್ಟಾರ್ಸ್‌ಗಳು ತಮ್ಮ ಮಕ್ಕಳಿಗೆ ಸಂಸ್ಕೃತ ಮೂಲದ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ನಾಮಕರಣ ಮಾಡುತ್ತಿದ್ದಾರೆ. ಹಾಗಾದ್ರೆ ಯಾರೆಲ್ಲ ಎಂಬುದು ಮುಂದೆ ಓದಿ!

ವಮಿಕಾ ಕೊಹ್ಲಿ

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ 2021ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅವಳೇ ಈ ವಮಿಕಾ. ವಮಿಕಾ ಎಂಬುದು ದುರ್ಗಾ ದೇವಿಯ ಹೆಸರು. ದುರ್ಗಾ ದೇವಿಯನ್ನು ವಮಿಕಾ ಎಂದೂ ಕರೆಯುತ್ತಾರೆ. ಇದೇ ಕಾರಣದಿಂದ ಪುತ್ರಿಗೆ ವಮಿಕಾ ಎಂದು ಹೆಸರಿಡಲಾಗಿದೆ. ಅರ್ಧನಾರೀಶ್ವರನ ಒಂದು ಸ್ತ್ರೀ ಭಾಗ ವಮಿಕಾ ಎಂದು ಹಲವರು ತಿಳಿಸಿದ್ದಾರೆ. ಇನ್ನು ವಮಿಕಾ ಹೆಸರಿನಲ್ಲಿ ವಿರಾಟ್​ ಅವರ ಹೆಸರಿನ ʻವʼ ಅಕ್ಷರ ಮತ್ತು ಅನುಷ್ಕಾರ ಹೆಸರಿನ ʻಕಾʼ ಅಕ್ಷರ ಸಹ ಇದೆ. ಅಷ್ಟೇ ಅಲ್ಲದೆ, ವಮಿಕಾ ಅಂದರೆ ಯಶಸ್ಸು, ಶಾಂತಿಯನ್ನು ಸೂಚಿಸುತ್ತದೆ.

ಇದನ್ನೂ ಓದಿ: Kamal Haasan: ಕಮಲ್‌ ಹಾಸನ್‌ ಅಭಿನಯದ ‘ಇಂಡಿಯನ್ 2′  ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

ರಾಹಾ ಕಪೂರ್

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳಿಗೆ ರಾಹಾ ಕಪೂರ್ ಎಂದು ಹೆಸರಿಟ್ಟಿದ್ದಾರೆ. ಬಾಲಿವುಡ್‌ ಸ್ಟಾರ್‌ ದಂಪತಿ ರಣಬೀರ್ ಕಪೂರ್‌- ಅಲಿಯಾ ಭಟ್‌ ದಂಪತಿ ತಮ್ಮ ಪುತ್ರಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ರಾಹ ಎಂದರೆ ಅದರ ಮೂಲ ಅರ್ಥ ದೈವಿಕ ಮಾರ್ಗ ಎಂದು. ಸ್ವಾಹಿಲಿ ಭಾಷೆಯಲ್ಲಿ ಸಂತೋಷ ಎಂಬ ಅರ್ಥವಿದೆ. ಸಂಸ್ಕೃತದಲ್ಲಿ ಕುಲ ಎಂಬ ಅರ್ಥವಿದೆ. ಬಾಂಗ್ಲಾದಲ್ಲಿ ವಿಶ್ರಾಂತಿ, ಆರಾಮ ಹಾಗೂ ನಿರಾಳ ಎಂಬ ಅರ್ಥವಿದೆ. ಅರೇಬಿಕ್‌ನಲ್ಲಿ ಸಂತೋಷ, ಸ್ವಾತಂತ್ರ್ಯ ಹಾಗೂ ಆನಂದ ಎಂಬ ಅರ್ಥವಿದೆ.

ಅಕಾಯ್ ಕೊಹ್ಲಿ

ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಹಾಗೂ ನಟಿ ಅನುಷ್ಕಾ ಶರ್ಮಾ (Anushka Sharma) ದಂಪತಿಯ ಎರಡನೇ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಇದು ‘ಕಾಯಾ’ ಎಂಬ ಹಿಂದಿ ಪದದಿಂದ ಬಂದಿದೆ. ಇದರರ್ಥ ‘ದೇಹ’. ಅಕಾಯ್ ಎಂದರೆ ತನ್ನ ಭೌತಿಕ ದೇಹಕ್ಕಿಂತ ಹೆಚ್ಚಿನದನ್ನು ಹೊಂದಿರುವವನು. ಇನ್ನು ಟರ್ಕಿಶ್ ಭಾಷೆಯಲ್ಲಿ ‘ಅಕಾಯ್’ ಎಂಬ ಪದದ ಅರ್ಥ ‘ಹೊಳೆಯುವ ಚಂದ್ರ’ (Shining moon). ಒಟ್ಟಿನಲ್ಲಿ ದಂಪತಿ ತಮ್ಮ ಮಗನಿಗೆ ವಿಶಿಷ್ಟ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Kantara Movie: ದಾಖಲೆ ಮೊತ್ತಕ್ಕೆ ಕಾಂತಾರ ಸಿನಿಮಾದ ಡಿಜಿಟಲ್‌ ರೈಟ್ಸ್‌ ಮಾರಾಟ; ಅಬ್ಬಾ ಇಷ್ಟು ಕೋಟಿನಾ!

ಮಾಲತಿ ಮೇರಿ ಚೋಪ್ರಾ ಜೋನಾಸ್

ಮಾಲತಿ ಸಂಸ್ಕೃತ ಮೂಲದ ಪದವಾಗಿದ್ದು, ಹೂವಿನ ಸುವಾಸನೆ, ಬೆಳದಿಂಗಳು ಎಂಬರ್ಥವಿದೆ. ಮೇರಿ ಎಂದರೆ ಲ್ಯಾಟಿಲ್ ಸ್ಟೆಲಾ ಮೇರಿಸ್ ಎಂದರ್ಥ, ಅಂದರೆ ಸಮುದ್ರದ ತಾರೆ. ಫ್ರೆಂಚ್‌ನಲ್ಲಿ ಜೀಸ್‌ಸ್‌ನ ತಾಯಿ ಎಂಬರ್ಥ ಕೂಡ ಇದೆ.

ವೇದವಿದ್

ನಟಿ ಯಾಮಿ ಗೌತಮ್‌ (Yami Gautam) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ನಾಮಕರಣ ಮಾಡಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ವೇದವಿದ್’ ಅಕ್ಷಯ ತೃತೀಯ ದಿನ ಹುಟ್ಟಿದ. ಅವನಿಗೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಬೇಕು ಎಂದು ನಟಿ ಶೇರ್‌ ಮಾಡಿಕೊಂಡಿದ್ದಾರೆ. ಈ ಹೆಸರಿನ ಅರ್ಥ ವೇದಗಳಲ್ಲಿ ಚೆನ್ನಾಗಿ ಪಾರಂಗತನಾದವನು ಎಂದು.

ಕ್ಲೀಂಕಾರ ಕೊನಿಡೆಲಾ

11 ವರ್ಷದ ಬಳಿಕ ರಾಮ್‌ಚರಣ್‌ (Ram Charan) ಹಾಗೂ ಉಪಾಸನಾ ಪೋಷಕರಾಗಿದ್ದರು. ಲಲಿತಾ ಸಹಸ್ರನಾಮ ನಾಮದಿಂದ ಮಗಳಿಗೆ ಹೆಸರನ್ನು ಇಟ್ಟರು. ಮಗುವಿನ ಹೆಸರು ‘ಕ್ಲೀಂಕಾರ ಕೊನಿಡೆಲಾ’ ‘ಕ್ಲೀಂಕಾರ’ ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ. ದೈವಿಕ ತಾಯಿಯಾದ ‘ಶಕ್ತಿ’ಯ ಪರಮೋಚ್ಚ ಶಕ್ತಿ ಎಂದು ಅರ್ಥ.

Continue Reading

ಸ್ಯಾಂಡಲ್ ವುಡ್

Actor Darshan: ದುಬೈನಲ್ಲಿ ʻಡಿ ಬಾಸ್‌ʼ ವೆಡ್ದಿಂಗ್‌ ಆ್ಯನಿವರ್ಸರಿ ಸೆಲೆಬ್ರೇಷನ್‌: ಇತ್ತ ಪವಿತ್ರಾ ಗೌಡ ಕರ್ಮದ ಬಗ್ಗೆ ಪಾಠ!

Actor Darshan: ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಅವರು ಕೋಪ ಹೊರಹಾಕಿದ್ರಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ದರ್ಶನ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಕರ್ಮದ ಬಗ್ಗೆ ಮಾತಾಡಿರುವ ವೈರಲ್ ವಿಡಿಯೊವನ್ನು ಈಗ ಪವಿತ್ರಾ ಗೌಡ (Pavithra Gowda) ಶೇರ್ ಮಾಡಿ ‘ಕರ್ಮ’ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈಗ ವಿವಾಹ ವಾರ್ಷಿಕೋತ್ಸವವನ್ನು ಗ್ರ್ಯಾಂಡ್ ಆಗಿ ಮಾಡಿದ್ದಾರೆ.

VISTARANEWS.COM


on

Darshan And Vijayalakshmi Celebrate Wedding Anniversary In Dubai pavitra gowda posted karma status
Koo

ಬೆಂಗಳೂರು: ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ (Darshan) ಅವರು ‘ಡೆವಿಲ್​: ದಿ ಹೀರೊ’ ಸಿನಿಮಾದ ಕೆಲಸಗಳ ನಡುವೆ ಬಿಡುವು ಪಡೆದ ದುಬೈಗೆ ತೆರಳಿದ್ದಾರೆ. ಅಲ್ಲಿ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಜತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ದುಬೈನಲ್ಲಿರುವ ಅಭಿಮಾನಿಗಳು ಸೆಲೆಬ್ರೇಷನ್ ಮಾಡಿದ್ದು, ನಟ ದರ್ಶನ್ ಪತ್ನಿ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಫೋಟೋ, ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.ಈ ಬಾರಿ ನಿರ್ಮಾಪಕಿ ಶೈಲಜಾ ನಾಗ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿ ಫೋಟೊ ಹಾಕಿದ್ದರು. ಅದರ ಸ್ಕ್ರೀನ್‌ಶಾಟ್ ಅನ್ನು ವಿಜಯಲಕ್ಷ್ಮೀ ದರ್ಶನ್ ತಮ್ಮ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ.ವಿಜಯಲಕ್ಷ್ಮೀ ಆ ಫೋಟೋ ಹಂಚಿಕೊಂಡ ಎರಡು ಗಂಟೆಯ ಬಳಿಕ ಪವಿತ್ರಾ ಗೌಡ ಕರ್ಮದ ಬಗ್ಗೆ ದರ್ಶನ್ ಮಾತನಾಡಿರುವ ಸ್ಟೇಟಸ್ ಹಾಕಿದ್ದಾರೆ. ಈ ವಿಚಾರಕ್ಕೆ ಅವರ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ.

ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಅವರು ಕೋಪ ಹೊರಹಾಕಿದ್ರಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ದರ್ಶನ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಕರ್ಮದ ಬಗ್ಗೆ ಮಾತಾಡಿರುವ ವೈರಲ್ ವಿಡಿಯೊವನ್ನು ಈಗ ಪವಿತ್ರಾ ಗೌಡ (Pavithra Gowda) ಶೇರ್ ಮಾಡಿ ‘ಕರ್ಮ’ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈಗ ವಿವಾಹ ವಾರ್ಷಿಕೋತ್ಸವವನ್ನು ಗ್ರ್ಯಾಂಡ್ ಆಗಿ ಮಾಡಿದ್ದಾರೆ. ದುಬೈನಲ್ಲಿರುವ ಅಭಿಮಾನಿಗಳು ಸೆಲೆಬ್ರೇಷನ್ ಮಾಡಿದ್ದು, ನಟ ದರ್ಶನ್ ಪತ್ನಿ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: Actor Darshan: ಮೇ 10ಕ್ಕೆ ಗುಡ್‌ನ್ಯೂಸ್‌ ಕೊಡ್ತಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌! ಏನದು?

ವೈರಲ್‌ ವಿಡಿಯೊ ಏನು?

ಕರ್ಮ ಎನ್ನುವುದು ಬ್ಯಾಗೇಜ್ ಥರ. ಏನನ್ನ ನೀವೂ ಅದರಲ್ಲಿ ಫಿಲ್ ಮಾಡ್ತೀರ ಅದೇ ನಿಮಗೆ ಸಿಗುತ್ತೆ. ನಾವೆಲ್ಲಾ ಚಿಕ್ಕವರಿರುವಾಗ ನಮ್ಮ ಅಜ್ಜಿ, ತಾತ ಹೇಳ್ತಾ ಇದ್ದರು. ಈಗ ಕರ್ಮ ಮಾಡ್ತಾ ಇದ್ದೀಯಾ ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತೆ ಅಂತ. ಆಗೆಲ್ಲಾ ಮುಂದಿನ ಜನ್ಮಕ್ಕೆ ಕ್ಯಾರಿ ಆಗ್ತಾ ಇತ್ತು. ಈಗ ಅಲ್ಲೆ ಡ್ರಾ ಅಲ್ಲೇ ಬಹುಮಾನ’ ಎಂಬ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಪವಿತ್ರಾ ಗೌಡ ಕರ್ಮದ ಬಗ್ಗೆ ದರ್ಶನ್ ಮಾತನಾಡಿರುವ ಸ್ಟೇಟಸ್ ಹಾಕಿದ್ದಾರೆ. ಈ ವಿಚಾರಕ್ಕೆ ಅವರ ಅಭಿಮಾನಿಗಳು ಕೋಪವಾಗಿದ್ದಾರೆ. ಆದರೆ ಇಲ್ಲಿ ಪವಿತ್ರಾ ಗೌಡ ಯಾರಿಗೆ ಕರ್ಮದ ಪಾಠ ಮಾಡಿದ್ರು ಗೊತ್ತಿಲ್ಲ. ಪಕ್ಕಾ ಇದು ವಿಜಯಲಕ್ಷ್ಮೀ ಅವರಿಗೆ ಎಂದು ಕಮೆಂಟ್‌ ಮಾಡಿದ್ದಾರೆ.

ಮಾಡೆಲ್‌ ಪವಿತ್ರ ಗೌಡ ಅವರು ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್ (Darshan Thoogudeepa) ಜತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದರು. ಇದಾದ ಮೇಲೆ ಆ ಪೋಸ್ಟ್‌ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಖಡಕ್‌ ಆಗಿಯೇ ಪ್ರತಿಕ್ರಿಯಿಸಿದ್ದರು.

ವಿಜಯಲಕ್ಷ್ಮಿ ಬರೆದುಕೊಂಡಿದ್ದೇನು?
ವಿಜಯಲಕ್ಷ್ಮಿ ಈ ಬಗ್ಗೆ ಪೋಸ್ಟ್‌ ಮಾಡಿ ʻʻಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆಗೆ ಸೆನ್ಸ್‌ ಮೊದಲು ಇರಬೇಕು. ಇದೀಗ ಆಕೆಯ ಕ್ಯಾರೆಕ್ಟರ್‌ ಹಾಗೂ ನೈತಿಕ ನಿಲುವಿನ ಬಗ್ಗೆ ತೋರಿಸುತ್ತಿದೆ. ವಿವಾಹಿತನೆಂದು ತಿಳಿದರೂ ಕೂಡ ತಮ್ಮ ವೈಯಕ್ತಿಕ ಅಗತ್ಯತೆಯಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಈ ಎಲ್ಲ ಫೋಟಗಳು ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಖುಷಿ ಗೌಡ ಅವರದ್ದು. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸೋಷಿಯಲ್‌ ಮೀಡಿಯಾವನ್ನು ಬಖಸುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಅಂದರೆ ಸಂಜಯಸಿಂಗ್ , ಖುಷಿಗೌಡ, ಪವಿತ್ರ ಗೌಡ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದುʼʼಎಂದು ಬರೆದುಕೊಂಡಿದ್ದರು.

Continue Reading

ಬಾಲಿವುಡ್

Lok Sabha Election 2024: ಕುಟುಂಬದ ಜತೆ ಬಂದು ಮತ ಚಲಾಯಿಸಿದ ಶಾರುಖ್‌ ಖಾನ್‌

Lok Sabha Election 2024: ಬಾಲಿವುಡ್ ನಟ ಆಮೀರ್ ಖಾನ್ ಅವರು ಮುಂಬೈನಲ್ಲಿ ಮಾಜಿ ಪತ್ನಿ ಕಿರಣ್ ರಾವ್ ಅವರೊಂದಿಗೆ ವೋಟ್‌ ಮಾಡಿದರು. ಆಮೀರ್‌ ಕಪ್ಪು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಬಾಂದ್ರಾದ ಮತಗಟ್ಟೆಯಲ್ಲಿ ಆಮೀರ್ ಪುತ್ರಿ ಇರಾ ಖಾನ್ ಮತ್ತು ಜುನೈದ್ ಕೂಡ ಕಾಣಿಸಿಕೊಂಡಿದ್ದಾರೆ. ಮತ ಚಲಾಯಿಸಿದ ಬಳಿಕ ಪಾಪರಾಜಿಗಳಿಗೂ ಪೋಸ್ ನೀಡಿದರು. ಆಮೀರ್ ತಾಯಿ ಜೀನತ್ ಖಾನ್ ಕೂಡ ಮತದಾನ ಮಾಡಿದರು.

VISTARANEWS.COM


on

Lok Sabha Election 2024 Shah Rukh Khan booth in Mumbai
Koo

ಬೆಂಗಳೂರು: ಲೋಕಸಭೆ 2024ರ (Lok Sabha Election 2024) ಚುನಾವಣೆಯಲ್ಲಿ ಮತ ಚಲಾಯಿಸಲು ನಟ ಶಾರುಖ್ ಖಾನ್ ಮುಂಬೈನ ಮತಗಟ್ಟೆಯಲ್ಲಿ ಕಾಣಿಸಿಕೊಂಡರು. ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್ ಮತ್ತು ಮಗ ಅಬ್ರಾಮ್ ಕೂಡ ಅವರೊಂದಿಗೆ ಇದ್ದರು. ಶಾರುಖ್ (sharukh khan) ಕಪ್ಪು ಟಿ-ಶರ್ಟ್ ಧರಿಸಿ ಮತದಾನ ಕೇಂದ್ರಕ್ಕೆ ಆಗಮಿಸಿದರು. ಸುಹಾನಾ ನೀಲಿ ಸೂಟ್ ಮತ್ತು ಗೌರಿ ಬಿಳಿ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು.

ಮೇ 18ರಂದು ಶಾರುಖ್ ತಮ್ಮ ಅಭಿಮಾನಿಗಳಿಗೆ ಈ ವರ್ಷ ತಪ್ಪದೇ ಮತ ಚಲಾಯಿಸುವಂತೆ ಮನವಿ ಮಾಡಿದರು. ಎಕ್ಸ್ ಪೋಸ್ಟ್‌ನಲ್ಲಿ, ಶಾರುಖ್‌ ʻʻಜವಾಬ್ದಾರಿಯುತ ಭಾರತೀಯ ಪ್ರಜೆಗಳಾದ ನಾವು ಈ ಸೋಮವಾರ ಮಹಾರಾಷ್ಟ್ರದಲ್ಲಿ ಮತದಾನದ ಹಕ್ಕನ್ನು ಚಲಾಯಿಸಬೇಕು. ಭಾರತೀಯರಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ ಮತ್ತು ನಮ್ಮ ದೇಶದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸೋಣʼʼ ಎಂದು ಮನವಿ ಮಾಡಿದ್ದರು.

ಮುಂಜಾನೆ ಅಕ್ಷಯ್ ಕುಮಾರ್, ರಣಬೀರ್ ಕಪೂರ್, ಕಿಯಾರಾ ಆಡ್ವಾಣಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಮುಂಬೈನಾದ್ಯಂತ ಮತದಾನ ಮಾಡಿದರು.

ಬಾಲಿವುಡ್ ನಟ ಆಮೀರ್ ಖಾನ್ ಅವರು ಮುಂಬೈನಲ್ಲಿ ಮಾಜಿ ಪತ್ನಿ ಕಿರಣ್ ರಾವ್ ಅವರೊಂದಿಗೆ ವೋಟ್‌ ಮಾಡಿದರು. ಆಮೀರ್‌ ಕಪ್ಪು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಬಾಂದ್ರಾದ ಮತಗಟ್ಟೆಯಲ್ಲಿ ಆಮೀರ್ ಪುತ್ರಿ ಇರಾ ಖಾನ್ ಮತ್ತು ಜುನೈದ್ ಕೂಡ ಕಾಣಿಸಿಕೊಂಡಿದ್ದಾರೆ. ಮತ ಚಲಾಯಿಸಿದ ಬಳಿಕ ಪಾಪರಾಜಿಗಳಿಗೂ ಪೋಸ್ ನೀಡಿದರು. ಆಮೀರ್ ತಾಯಿ ಜೀನತ್ ಖಾನ್ ಕೂಡ ಮತದಾನ ಮಾಡಿದರು.

ಇದನ್ನೂ ಓದಿ: Lok Sabha Election 2024: ರ್‍ಯಾಲಿಯಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣ; ಭಾಷಣ ಮಾಡದೇ ವೇದಿಕೆಯಿಂದ ತೆರಳಿದ ರಾಹುಲ್‌, ಅಖಿಲೇಶ್‌

ಇನ್ನು ಮುಂಬೈನಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ ಅನೇಕ ಗಣ್ಯರು ಬೆಳಗ್ಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ವೋಟ್‌ ಮಾಡಿದ ಬಳಿಕ ಅಕ್ಷಯ್‌ ಕುಮಾರ್‌ ಮಾತನಾಡಿ ʻʻನನ್ನ ಭಾರತ ಅಭಿವೃದ್ಧಿ ಮತ್ತು ಬಲಿಷ್ಠವಾಗಬೇಕೆಂದು ನಾನು ಬಯಸುತ್ತೇನೆ. ಅದನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿದ್ದೇನೆ. ಭಾರತವು ನನಗೆಸರಿ ಎನಿಸುವದಕ್ಕೆ ಮತ ಚಲಾಯಿಸಬೇಕುʼʼಎಂದರು.

ದೇಶದಲ್ಲಿ ಈಗಾಗಲೇ ನಾಲ್ಕು ಹಂತಗಳಲ್ಲಿ 379 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಈಗ ಐದನೇ ಹಂತದ ಮತದಾನಕ್ಕೆ ಚುನಾವಣೆ ಆಯೋಗವು ಸಿದ್ಧಗೊಂಡಿದೆ. ಇನ್ನು ಸೋಮವಾರವೇ ಅಯೋಧ್ಯೆಯ ಜಿಲ್ಲೆಯನ್ನು ಒಳಗೊಂಡಿರುವ ಫೈಜಾಬಾದ್‌ ಲೋಕಸಭೆ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಬಿಜೆಪಿಯ ಹಾಲಿ ಸಂಸದ ಲಲ್ಲು ಸಿಂಗ್‌ ಅವರೇ ಮತ್ತೆ ಕಣಕ್ಕಿಳಿದಿದ್ದಾರೆ. ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಲ್ಲಿಯು ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. 4.69 ಕೋಟಿ ಪುರುಷ, 4.26 ಕೋಟಿ ಮತ್ತು 5,409 ತೃತೀಯ ಲಿಂಗಿ ಮತದಾರರು ಸೇರಿದಂತೆ 8.95 ಕೋಟಿಗೂ ಅಧಿಕ ಮತದಾರರು ಇಂದು 695 ಅಭ್ಯರ್ಥಿಗಳ ಅದೃಷ್ಟ ನಿರ್ಧರಿಸಲಿದ್ದಾರೆ.

Continue Reading

ಬಾಲಿವುಡ್

Deepika Padukone: ವೋಟ್‌ ಮಾಡಿದ ದೀಪಿಕಾ ಪಡುಕೋಣೆ; ಅವರ ಹೊಟ್ಟೆ ನೋಡಿ ಗಂಡು ಮಗು ಎಂದ ನೆಟ್ಟಿಗರು!

Deepika Padukone: ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ʻಸಿಂಗಮ್ ಅಗೇನ್ʼ ಚಿತ್ರದಲ್ಲಿ ಲೇಡಿ ಸಿಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ದೀಪಿಕಾ ಅವರೊಂದಿಗೆ ಕೆಲಸ ಮಾಡಿದ ಜ್ಯೂನಿಯರ್‌ ಕಲಾವಿದರು ನಟಿಯೊಂದಿಗಿನ ಸೆಲ್ಫಿಯನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ಪ್ರಮುಖ ನಟರು ಇದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼಎನ್ನಲಾಗಿತ್ತು.

VISTARANEWS.COM


on

Deepika Padukone Enjoy Lunch Date After Casting Their Vote
Koo

ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಐದನೇ ಹಂತದ ಮತದಾನ ಆಗುತ್ತಿದೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಮತ ಚಲಾಯಿಸಿದ್ದಾರೆ. ಇದೀಗ ದೀಪಿಕಾ ಅವರ ಬೇಬಿ ಬಂಪ್‌ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗುತ್ತಿವೆ. ಈ ಮೂಲಕ ಜೋಡಿ ಬಾಡಿಗೆ ತಾಯ್ತನ ಆಶ್ರಯಿಸಿದ್ದಾರೆ ಎಂಬ ವದಂತಿಗೂ ತೆರೆ ಬಿದ್ದಿದೆ. ಲೂಸ್ ಶರ್ಟ್ ಧರಿಸಿದ್ದರೂ ಐದು ತಿಂಗಳ ಗರ್ಭಿಣಿಯಾಗಿರುವ ದೀಪಿಕಾಳ ಬೇಬಿ ಬಂಪ್ ಎದ್ದು ಕಾಣಿಸುತ್ತಿತ್ತು. ನೆಟ್ಟಿಗರು ದೀಪಿಕಾ ಹೊಟ್ಟೆಯಲ್ಲಿ ಗಂಡು ಮಗುವೇ ಇದೆ, ಈ ಜೋಡಿಗೆ ಗಂಡು ಮಗುವೇ ಆಗುವುದು ಎಂದು ಭವಿಷ್ಯ ನುಡಿಯುತ್ತಿದ್ದಾರೆ.

ವೈರಲ್‌ ಆದ ವಿಡಿಯೊದಲ್ಲಿ ದೀಪಿಕಾ ʻʻಬಿಳಿ ಶರ್ಟ್ ಮತ್ತು ಡೆನಿಮ್‌ನಲ್ಲಿ ಕಾಣಿಸಿಕೊಂಡರು. ರಣವೀರ್ ಹೆಂಡತಿಗೆ ಕಾರಿನಲ್ಲಿ ಕುಳಿತುಕೊಳ್ಳಲು ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ದೀಪಿಕಾ ಮತ್ತು ರಣವೀರ್ ಮತಗಟ್ಟೆಗೆ ತೆರಳುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದರು. ರಣವೀರ್ ಅವರು ದೀಪಿಕಾ ಅವರನ್ನು ಬೂತ್‌ಗೆ ಕರೆದೊಯ್ಯುವಾಗ ಕೈ ಹಿಡಿದು ಕರೆದುಕೊಂಡು ಹೋದರು. ದೀಪಿಕಾ ಇದೇ ಮೊದಲ ಬಾರಿಗೆ ತನ್ನ ಬೇಬಿ ಬಂಪ್ ತೋರಿಸಿದ್ದಾರೆ.

ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ʻಸಿಂಗಮ್ ಅಗೇನ್ʼ ಚಿತ್ರದಲ್ಲಿ ಲೇಡಿ ಸಿಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ದೀಪಿಕಾ ಅವರೊಂದಿಗೆ ಕೆಲಸ ಮಾಡಿದ ಜ್ಯೂನಿಯರ್‌ ಕಲಾವಿದರು ನಟಿಯೊಂದಿಗಿನ ಸೆಲ್ಫಿಯನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ಪ್ರಮುಖ ನಟರು ಇದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼ ಎನ್ನಲಾಗಿತ್ತು.

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ. ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

ಇದನ್ನೂ ಓದಿ: Deepika Padukone: ಕ್ಯಾಮೆರಾ ತಳ್ಳಿ ಮುಂದೆ ನಡೆದ ದೀಪಿಕಾ! ನಾಚಿಕೆಗೇಡಿನ ವರ್ತನೆ ಅಂದ್ರು ನೆಟ್ಟಿಗರು!

ಮಗುವಿನ ನಿರೀಕ್ಷೆ ಹೊಸ್ತಿಲಲ್ಲೇ ಮದುವೆ ಫೋಟೊಗಳು ಡಿಲಿಟ್‌!

ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ಸಂದರ್ಭದಲ್ಲೇ ತಮ್ಮ ಮದುವೆ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಡಿಲಿಟ್‌ ಮಾಡಿದ್ದರು. ಎಲ್ಲವೂ ಸರಿಯಿರುವಾಗಲೇ ರಣ್‌ವೀರ್ ಸಿಂಗ್ ಯಾಕೆ ಈ ನಿರ್ಧಾರ ತೆಗೆದುಕೊಂಡರು? ದಿಢೀರನೇ ಫೋಟೊಗಳನ್ನು ತೆಗೆದು ಹಾಕಿದ್ದು ಯಾಕೆ? ಈ ಎಲ್ಲಾ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿತ್ತು. ಕಳೆದ ವರ್ಷ ಕರಣ್ ಜೋಹರ್ ಶೋನಲ್ಲಿ ಮದುವೆ ವಿಡಿಯೋ ರಿಲೀಸ್ ಮಾಡಿದ್ದರು. ಇದರಿಂದ ರಣವೀರ್ ಸಿಂಗ್ ಹಾಗೂ ದೀಪಿಕಾ ಮಧ್ಯೆ ಏನಾದರೂ ಗಂಭೀರ ಜಗಳ ಆಯಿತೇ ಎನ್ನುವ ಅನುಮಾನ ಮೂಡಿತ್ತು.

Continue Reading
Advertisement
Crime News
ದೇಶ2 mins ago

ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತನ ತಂದೆಯನ್ನು ಬಂಧಿಸಿದ ಪೊಲೀಸರು; ಬಾರ್‌ ಮಾಲೀಕನ ವಿರುದ್ಧವೂ ಕ್ರಮ

missing case davanagere
ಕ್ರೈಂ13 mins ago

Missing case: ಒಂದೇ ಕುಟುಂಬದ ಮೂವರು ನಿಗೂಢ ನಾಪತ್ತೆ

Star Kids with Sanskrit Names From Yami Gautam to Priyanka Chopra
ಬಾಲಿವುಡ್16 mins ago

Star Kids with Sanskrit Names: ಮಕ್ಕಳಿಗೆ ಸಂಸ್ಕೃತ ಮೂಲದ ಹೆಸರನ್ನೇ ಇಟ್ಟ ಸ್ಟಾರ್ಸ್‌ಗಳಿವರು!

Rohit Sharma
ಕ್ರೀಡೆ16 mins ago

Rohit Sharma: ಖಾಸಗಿತನಕ್ಕೆ ಧಕ್ಕೆ ಆರೋಪ ಮಾಡಿದ ರೋಹಿತ್​ಗೆ ಸ್ಪಷ್ಟನೆ ನೀಡಿದ ಸ್ಟಾರ್‌ಸ್ಪೋರ್ಟ್ಸ್

corona virus wave in singapore
ಪ್ರಮುಖ ಸುದ್ದಿ35 mins ago

Corona Virus: ಸಿಂಗಾಪುರದಲ್ಲಿ ಕೋವಿಡ್‌-19 ಹೊಸ ಅಲೆ, ರಾಜ್ಯದಲ್ಲಿ ಅಲರ್ಟ್‌, ಇಂದು ಆರೋಗ್ಯ ಇಲಾಖೆ ಸಭೆ

KKR vs SRH
ಕ್ರೀಡೆ41 mins ago

KKR vs SRH: ಇಂದು ಮೊದಲ ಕ್ವಾಲಿಫೈಯರ್‌ ಪಂದ್ಯ: ಅಯ್ಯರ್​-ಕಮಿನ್ಸ್​ ಪಡೆಗಳ ಫೈನಲ್‌ ರೇಸ್‌

ISIS Terrorists
ದೇಶ42 mins ago

ISIS Terrorists: ಬಿಜೆಪಿ, ಆರ್ ಎಸ್ ಎಸ್ ನಾಯಕರ ಮೇಲೆ ಆತ್ಮಾಹುತಿ ದಾಳಿಗೆ ಸಂಚು ಮಾಡಿದ್ದ ಐಸಿಸ್ ಉಗ್ರರು; ಸೆರೆ ಸಿಕ್ಕಿದ್ದು ಹೇಗೆ?

Shocking News
ವಿದೇಶ50 mins ago

Shocking News: ಎಚ್‌ಐವಿ ಪಾಸಿಟಿವ್‌ ವಿಚಾರ ಮುಚ್ಚಿಟ್ಟ ಲೈಂಗಿಕ ಕಾರ್ಯಕರ್ತೆ; 211 ಮಂದಿಗೆ ಎದುರಾಯ್ತು ಸಂಕಷ್ಟ

Darshan And Vijayalakshmi Celebrate Wedding Anniversary In Dubai pavitra gowda posted karma status
ಸ್ಯಾಂಡಲ್ ವುಡ್50 mins ago

Actor Darshan: ದುಬೈನಲ್ಲಿ ʻಡಿ ಬಾಸ್‌ʼ ವೆಡ್ದಿಂಗ್‌ ಆ್ಯನಿವರ್ಸರಿ ಸೆಲೆಬ್ರೇಷನ್‌: ಇತ್ತ ಪವಿತ್ರಾ ಗೌಡ ಕರ್ಮದ ಬಗ್ಗೆ ಪಾಠ!

KKR vs SRH:
ಕ್ರೀಡೆ1 hour ago

KKR vs SRH: ಕೆಕೆಆರ್​-ಹೈದರಾಬಾದ್​ ಕ್ವಾಲಿಫೈಯರ್​ ಪಂದ್ಯದ ಹವಾಮಾನ ವರದಿ ಹೇಗಿದೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ20 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌