Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ! - Vistara News

ಲೈಫ್‌ಸ್ಟೈಲ್

Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ!

ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲಾಗದೇ ಇರುವುದಕ್ಕೆ ಹಲವು ಕಾರಣಗಳು ಇರುತ್ತವೆ. ಅದನ್ನು ಮೀರುವುದೂ ನಮ್ಮ ಕೈಯಲ್ಲೇ ಇದೆ. ಅದು ಹೇಗೆ? ಕೆಲವು ಸೂತ್ರಗಳು ಇಲ್ಲಿವೆ.

VISTARANEWS.COM


on

happy life
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
  • ರಾಧಿಕಾ ವಿಟ್ಲ

ಏನಾದರೂ ಸಾಧಿಸಲು ಆಸೆಯಿದೆ, ಆದರೆ ಸಾಧ್ಯವಾಗುತ್ತಿಲ್ಲ. ಗೊತ್ತುಗುರಿಯಿಲ್ಲದಂತೆ ದೇಶ ಸುತ್ತುವುದು, ತನ್ನದೇ ಒಂದು ಬ್ಯುಸಿನೆಸ್‌ಆರಂಭಿಸುವುದು, ಹೊಸ ಹೇರ್‌ಸ್ಟೈಲೊಂದನ್ನು ಟ್ರೈ ಮಾಡುವುದು, ತೀರಾ ತೊಂದರೆ ಕೊಡುತ್ತಿರುವ ಒಂದು ಕೆಟ್ಟ ಸಂಬಂಧದಿಂದ ಎದ್ದು ಹೊರ ನಡೆಯುವುದು… ಹೀಗೆ ಹತ್ತು ಹಲವು ಮಾಡಬೇಕೆಂದುಕೊಳ್ಳುವ ಕಾರ್ಯಗಳು ಪ್ರತಿಯೊಬ್ಬರ ಮನದಲ್ಲೂ ಇದ್ದೇ ಇರುತ್ತದೆ. ಆದರೆ, ಕೊನೆಯವರೆಗೂ ಮನಸ್ಸು ಮಾಡುವುದೇ ಇಲ್ಲ. ಕಷ್ಟವಾದರೂ ಹೊಂದಿಕೊಂಡು ಜೀವನ ನಡೆಸುವುದು, ಸುತ್ತಾಡಬೇಕೆಂದರೂ ಅದುಮಿಟ್ಟುಕೊಂಡು ಏಕತಾನತೆಯಲ್ಲಿ ದಿನದೂಡುವುದು, ಯಾವುದೇ ಹೊಸತನ್ನು ಪ್ರಯತ್ನಿಸಲು ಯೋಚಿಸಿದರೂ ʻಅರೆ, ವಯಸ್ಸಾಯ್ತು, ಜನ ಏನೆಂದುಕೊಂಡಾರುʼ ಎಂದು ತಳ್ಳಿಹಾಕುವುದು ಬಹುತೇಕರಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ.

1.. ಎಂಟು ಗಂಟೆಗಳಷ್ಟು ಚಂದ ನಿದ್ದೆ ಮಾಡಿದರೂ, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರದಿದ್ದರೂ, ಮಧ್ಯಾಹ್ನವಾಗುವ ಮೊದಲೇ ಸುಸ್ತಾಗಿಬಿಡುವುದು ಅಥವಾ ಕೆಲಸದಲ್ಲಿ ಉತ್ಸಾಹವೇ ನಿಂತು ಹೋಗಿದೆ ಅಂತ ನಿಮಗನಿಸಿದರೆ, ಖಂಡಿತ ನಿಮಗೇನೋ ಹೊಸತನದ ಅಗತ್ಯವಿದೆ ಎಂದರ್ಥ. ನಿಮಗೆ ಬದುಕಿನಲ್ಲಿ ಉತ್ಸಾಹ ತುಂಬುವ ಲವಲವಿಕೆಯಿಂದಿರುವ ಹೊಸ ಮಾರ್ಗ ಕಂಡುಕೊಳ್ಳುವ ಅವಶ್ಯಕತೆ ಇದೆ ಎಂದರ್ಥ.

2. ನೀವು ನಿಮ್ಮ ಕನಸನ್ನು ನನಸಾಗಿಸುವ ಕಡೆ ಪ್ರಯತ್ನ ಮಾಡುತ್ತಿಲ್ಲವಾದರೆ, ಪ್ರತಿ ಬಾರಿಯೂ ಅಂದುಕೊಂಡದ್ದನ್ನು ಮಾಡುವ ಯೋಚನೆಯನ್ನು ಮುಂದೂಡುತ್ತಲೇ ಇದ್ದರೆ ನಿಮಗೆ ನೀವು ಸೋತು ಹೋಗುವ ಭಯವಿದೆ ಎಂದೇ ಅರ್ಥ. ಅಂದುಕೊಂಡದ್ದನ್ನು ಮಾಡದೇ ಇದ್ದರೆ ಸೋಲುವ ಭಯವೇ ಇಲ್ಲ ಎಂಬುದು ನಿಜವೇ ಆದರೂ ಅಂದುಕೊಂಡದ್ದನ್ನು ಮಾಡದೇ ಇರುವುದು ನೀವು ನಿಮಗೇ ಮಾಡಿಕೊಳ್ಳುವ ಮೋಸ. ಸರಿಯಾದ ಸಮಯ ಬರಲಿ ಎಂದು ಕಾಯುವುದೂ ಪಲಾಯನವಾದವೇ.

3. ತಾನು ಅಂದುಕೊಂಡದ್ದನ್ನು ಸಾಧಿಸಲಾಗದೇ ಇದ್ದುದಕ್ಕೆ ಇತರರನ್ನು ದೂಷಿಸುವುದು. ಪ್ರತಿ ಸಾಧಕನೂ ತನ್ನ ಸಾಧನೆಯ ಹಾದಿಯಲ್ಲಿ ಅತ್ಯಂತ ಕೆಟ್ಟ ದಿನಗಳನ್ನು ನೋಡಿರುತ್ತಾನೆ/ಳೆ. ಹಲವಾರು ಅವಮಾನಗಳನ್ನು ಸಹಿಸಿರುತ್ತಾನೆ/ಳೆ. ಆದರೆ ಇವೆಲ್ಲ ಅವರನ್ನು ವಿಚಲಿತಗೊಳಿಸಿರುವುದಿಲ್ಲ. ಕಷ್ಟದ ದಿನಗಳು ಸುಖದ ಹಾದಿಯನ್ನು ತೋರಿಸಿಯೇ ತೋರಿಸುತ್ತದೆ. ಮಾಡಲೇಬೇಕೆಂಬ ಛಲ ಎಲ್ಲ ಕಷ್ಟಗಳನ್ನು ಮೀರಿ ನಿಲ್ಲುವಂತೆ ಮಾಡುತ್ತದೆ. ಆದರೆ, ತನ್ನ ಕೈಲಾಗದೇ ಇದ್ದುದಕ್ಕೆ ಪರಿಸ್ಥಿತಿಯನ್ನು ದೂರುವುದೂ ಕೂಡಾ ಪಲಾಯನವಾದವೇ.

4. ನಿಮಗೆ ನಿಮ್ಮ ಮೇಲೆಯೇ ಧೈರ್ಯವಿರುವುದಿಲ್ಲ. ಬೇರೆಯವರು ಮಾಡಿದ್ದು ಸುಲಭವಾಗಿ ಕಾಣುತ್ತದೆ. ನಮಗೆ ನಮ್ಮ ಸಾಧನೆಯ ಹಾದಿ ಮಾತ್ರ ಕಷ್ಟವಾಗಿ ಕಾಣುತ್ತದೆ. ನಿಜವಾಗಿ ನೋಡಿದರೆ, ಮಾಡಿಯೇ ತೀರುತ್ತೇನೆ ಎಂಬ ಧೈರ್ಯ ನಿಮಗಿರುವುದಿಲ್ಲ. ನಾನು ಮಾಡಬಲ್ಲೆ ಎಂಬ ಏಕಾಗ್ರ ಧ್ಯಾನವಷ್ಟೇ ಮುಂದೆ ಕೊಂಡೊಯ್ಯಬಲ್ಲದು.

5. ಯೋಚನೆ ಬಹಳ ಮಾಡುತ್ತೀರಿ, ಆದರೆ ಕೆಲಸ ಮಾಡುವುದು ಸ್ವಲ್ಪವೇ. ಮಾಡಬೇಕೆಂದುಕೊಂಡ ಕಾರ್ಯಗಳ ಕಲ್ಪನೆಯಲ್ಲೇ ಸಮಯ ದೂಡುವುದು, ಸರಿಯಾದ ಸಮಯ ಬಂದೇ ಇಲ್ಲವೆಂಬಂತೆ ಸ್ವಲ್ಪವೇ ಮಾಡುವುದು ಕೂಡಾ ನೀವು ಸಾಧಿಸಲಾಗದೇ ಇರುವುದಕ್ಕೆ ಮೂಲ ಕಾರಣ.

6. ಒಂದಲ್ಲ ಒಂದು ದಿನ ಮಾಡುತ್ತೇನೆ ಅಂದುಕೊಳ್ಳುವುದು. ಆದರೆ, ಬಾಲ್‌ನಿಮ್ಮ ಕಾಲ ಬಳಿಯೇ ಇದ್ದರೂ ಸ್ವಪ್ರಯತ್ನದಿಂದ ಶಕ್ತಿಯನ್ನೆಲ್ಲ ಹಾಕಿ ಒದೆಯದೇ ಇರುವುದು!

ಇದನ್ನೂ ಓದಿ: World Motorcycle Day | ಬೈಕೆಂಬ ಭಾವಗೀತೆ! ನೆನಪುಗಳ ಗಂಟು, ಅಳಿಸಲಾಗದ ಪ್ರೀತಿ ನಂಟು

7. ಇತರರನ್ನು ದ್ವೇಷಿಸುವುದು. ಇತರರ ಮನೆ, ಅವರ ಜೀವನ ಶೈಲಿ, ಅವರ ಸಾಧನೆ, ಅವರ ಹಣ, ಸಂಬಂಧಗಳು ಎಲ್ಲವೂ ನಿಮಗೆ ಅಸೂಯೆ ಹುಟ್ಟಿಸುವುದು. ಅವರಿಗೆ ಇದೆಲ್ಲ ಸಾಧ್ಯವಾಗಿದ್ದು ಅವರ ಅದೃಷ್ಟದಿಂದ, ಅತಿಯಾದ ಆಸೆಬುರುಕುತನದಿಂದ ಎಂದು ಸಮಜಾಯಿಶಿ ಕೊಟ್ಟುಕೊಳ್ಳುವುದು. ಅವರಲ್ಲಿರುವ ಯಾವುದೂ ನಿಮ್ಮಲ್ಲಿ ಇಲ್ಲ ಎಂದಾದಾಗ ಯಶಸ್ಸು ನಿಮ್ಮಲ್ಲಿಲ್ಲ ಎಂಬುದೇ ಇಂತಹ ಯೋಚನೆಗೆ ಕಾರಣವಾಗುತ್ತದೆ. ಇತರರ ಯಶಸ್ಸನ್ನೂ ಖುಷಿಯಿಂದಲೇ ಸಂಭ್ರಮಿಸಿ.

8. ಬದುಕಿಗೆ ಇಷ್ಟು ಸಾಕು ಎಂಬ ನಿರಾಶಾವಾದಿತನ. ಸೇಫ್‌ಆಗಿ ಬದುಕಿನ ಆಟ ಆಡಿ ಮುಗಿಸುವುದು ಬೇಕೋ, ಹಠದಿಂದ ವಿಜಯಮಾಲೆ ಬೇಕೇ ಬೇಕು ಎಂದು ಆಡುವುದು ಬೇಕೋ ನಿರ್ಧರಿಸಿಕೊಳ್ಳಿ. ಆಟದಲ್ಲಿ ಸೋಲೂ ಇರಬಹುದು, ಆದರೆ, ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಮರೆಯಬೇಡಿ.

9. ತನ್ನೊಂದಿಗೇ ಹಿಂದಿನ ಬೆಂಚ್‌ನಲ್ಲಿ ಕೂತು ಓದಿದ ಹುಡುಗ ಕೋಟ್ಯಾಧೀಶನಾದನೆಂದೋ, ಸಾಧಾರಣ ರೂಪಿನ ಹುಡುಗಿಗೆ ಅಸಾಮಾನ್ಯ ಹುಡುಗ ಸಿಕ್ಕನೆಂದೋ ಅಸೂಯೆ ಪಡುವುದು. ನಿಮಗೆ ಸಿಕ್ಕಿದ ಖುಷಿಗಳನ್ನು ಆಸ್ವಾದಿಸುತ್ತಾ ಇತರರ ಖುಷಿಯಲ್ಲೂ ಪಾಲ್ಗೊಳ್ಳುವ ಮನಸ್ಥಿತಿ ಬೆಳೆಸಿಕೊಂಡು ಅದನ್ನು ಸ್ಪೂರ್ತಿಯಾಗಿ ಬದಲಾಯಿಸಿಕೊಳ್ಳಬೇಕು.

10. ಒಳ್ಳೆಯ ಊಟ, ಗುಂಡು ಪಾರ್ಟಿ, ಟಿವಿ… ಇವಿಷ್ಟೇ ಪ್ರತಿದಿನದ ಖುಷಿಯ ಕ್ಷಣಗಳು ಎಂಬಲ್ಲಿಗೆ ನೀವು ಸೀಮಿತರಾದಿರಿ ಎಂದಾದರೆ ನೀವು ಬೆಳವಣಿಗೆಯತ್ತ ಮನಸ್ಸು ಮಾಡುತ್ತಿಲ್ಲ ಎಂದಷ್ಟೇ ಅರ್ಥ. ಯಾವಾಗಲಾದರೊಮ್ಮೆ ಇವೆಲ್ಲ ಖುಷಿಯೇ ನಿಜವಾದರೂ, ಇವಿಷ್ಟನ್ನೇ ನಿಮ್ಮನ್ನು ಆಳಲು ಬಿಟ್ಟರೆ ನಿಮಗೆ ನಿಜವಾಗಿ ಬೇಕಾಗಿರುವುದಾದರೂ ಏನು ಎಂಬ ಪ್ರಶ್ನೆ ಅಂತಿಮವಾಗಿ ಹಾಗೆಯೇ ಉಳಿದುಬಿಡುತ್ತದೆ.

ಇದನ್ನೂ ಓದಿ: Happiness: ಈ ಪುಟ್ಟ ದ್ವೀಪದ ಜನ ಸದಾ ಸಂತೋಷವಾಗಿರ್ತಾರೆ, ಯಾಕೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

ಚುಟುಕು ಡಯೆಟ್‌ಗಳಿಂದ ಕೆಲವೇ ದಿನಗಳಲ್ಲಿ ಕರಗುವ ತೂಕ ಮತ್ತೆ ಕೆಲವೇ ದಿನಗಳಲ್ಲಿ ಮರಳಿ ಬರುತ್ತದೆ. ಬದಲಿಗೆ, ಹಲವಾರು ತಿಂಗಳುಗಳ ಪ್ರಯತ್ನದಿಂದ ಕೊಬ್ಬು ಕರಗಿಸಿದರೆ, ಅದರಿಂದ ಸ್ನಾಯುಗಳನ್ನು ಹುರಿಗಟ್ಟಿಸಲು, ದೇಹವನ್ನು ಸಶಕ್ತವಾಗಿಸಲು ಸಾಧ್ಯವಿದೆ. ಹೇಗೆ, ಏನು ಎಂಬಿತ್ಯಾದಿ (Weight Loss Tips) ಮಾಹಿತಿ ಇಲ್ಲಿದೆ.

VISTARANEWS.COM


on

Weight Loss Tips
Koo

ಇಡೀ ಲೋಕವೆಲ್ಲ ಒಂದೇ ಮಂತ್ರವನ್ನು ಜಪಿಸಬೇಕು ಎಂದಾದರೆ, ಎಲ್ಲರೂ ಜಪಿಸುವುದೇನು? ʻತೂಕ ಇಳಿಸುವುದು (Weight Loss Tips) ಹೇಗೆ?ʼ ಎನ್ನುವ ಮಂತ್ರವೇ ಎಲ್ಲೆಡೆಯಿಂದ ಕೇಳಿಬರಬಹುದು. ಹಾಗೆ ತೂಕ ಇಳಿಸುವ ಪ್ರಯತ್ನದಲ್ಲಿರುವವರು ಸುತ್ತೆಲ್ಲ ಕಾಣುತ್ತಿದ್ದರೂ, ಫಲಿತಾಂಶ ಕಾಣದೆ ನಿರಾಶರಾದವರೇ ಹೆಚ್ಚು. ಹೊಸವರ್ಷಕ್ಕೆ, ಹುಟ್ಟಿದ ದಿನಕ್ಕೆ ಎಂದೆಲ್ಲ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವವರಲ್ಲಿ ತೂಕ ಇಳಿಸುವ ಶಪಥಗಳೇ ಹೆಚ್ಚಾಗಿರುತ್ತವೆ. ಮುಂದಿನ ವರ್ಷಕ್ಕೆ ಮತ್ತದೇ ಶಪಥ ಹೊಸದಾಗಿ ಸ್ವೀಕಾರವಾಗುತ್ತದೆ. ಹಾಗಾದರೆ ಏರಿದ್ದು ಇಳಿಯಲೇ ಬೇಕು ಎಂಬ ನಿರ್ಣಯ ತೂಕದ ವಿಷಯದಲ್ಲಿ ಇಲ್ಲ; ಬಂದಿದ್ದು ಹೋಗಲೇಬೇಕು ಎನ್ನುವ ನಿಯಮ ಹೊಟ್ಟೆಯ ವಿಷಯದಲ್ಲೂ ಇಲ್ಲ ಎಂದರ್ಥವೇ? ಹಾಗೇನಿಲ್ಲ. ಸಮಾಧಾನವೇ ಇಲ್ಲದಂಥ ಸಮಸ್ಯೆಗಳೇನಲ್ಲ ಇದು. ಆದರೆ ತೂಕ ಇಳಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ನಿಜ. ಕಾರಣ, ಹೆಚ್ಚು ಬಾರಿ ತೂಕ ಕರಗಿಸುವ ಬಗ್ಗೆ ಗಮನ ನೀಡುವು ಭರದಲ್ಲಿ ಚುಟುಕು ಡಯೆಟ್‌ಗಳ ಮೊರೆ ಹೋಗುತ್ತೇವೆ. ಆಗದಿರುವಂಥ ಸರ್ಕಸ್‌ಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಇದರ ಪರಿಣಾಮವೇನೆಂದರೆ ದೇಹದಲ್ಲಿ ಕೊಬ್ಬು ಕರಗುವ ಬದಲು, ನೀರಿನಿಂದ ಇರುವಂಥ ತೂಕ ಮಾತ್ರವೇ ಕ್ಷಿಪ್ರವಾಗಿ ಕರಗುತ್ತದೆ. ಅದೂ ಇಲ್ಲದಿದ್ದರೆ ಸ್ನಾಯುಗಳು ಮಾಯವಾಗಿ ದೇಹ ತೊಂದರೆಗೆ ಸಿಲುಕುತ್ತದೆ. ಇದರ ಜೊತೆಗೆ ತಪ್ಪಾಗಿ ವ್ಯಾಯಾಮಗಳನ್ನೂ ಮಾಡಿದರೆ, ಗಾಯಗಳ ಸಮಸ್ಯೆ ತಲೆದೋರುತ್ತದೆ. ಹಾಗಾಗಿ ತೂಕ ಕರಗಿಸುವ ಗುರಿಯನ್ನು ಕೊಬ್ಬು ಕರಗಿಸುವ ಗುರಿಯನ್ನಾಗಿ ಮಾರ್ಪಾಡು ಮಾಡಿಕೊಂಡರೆ, ಫಲಿತಾಂಶ ದೊರೆಯುತ್ತದೆ. ಇದರಲ್ಲೂ ಸೂಕ್ಷ್ಮವಿದೆ. ಕೆಲವೇ ದಿನಗಳಲ್ಲಿ ಕರಗುವ ತೂಕ ಮತ್ತೆ ಕೆಲವೇ ದಿನಗಳಲ್ಲಿ ಮರಳಿ ಬರುತ್ತದೆ. ಬದಲಿಗೆ, ಹಲವಾರು ತಿಂಗಳುಗಳ ಪ್ರಯತ್ನದಿಂದ ಕೊಬ್ಬು ಕರಗಿಸಿದರೆ, ಅದರಿಂದ ಸ್ನಾಯುಗಳನ್ನು ಹುರಿಗಟ್ಟಿಸಲು, ದೇಹವನ್ನು ಸಶಕ್ತವಾಗಿಸಲು ಸಾಧ್ಯವಿದೆ. ಡಯೆಟ್‌ ಮಾಡುವ ಭರದಲ್ಲಿ, ಅಗತ್ಯ ಪೋಷಕಾಂಶಗಳಿಂದ ಶರೀರವನ್ನು ವಂಚಿಸಬಾರದು. ಆದರೆ ಕ್ಯಾಲರಿಗಳ ಕೊರತೆಯನ್ನು ಸೃಷ್ಟಿಸಬೇಕಷ್ಟೆ. ದೇಹಕ್ಕೆ ಒದಗಿಸುವ ಕ್ಯಾಲರಿಗಳನ್ನು ಪಿಷ್ಟ, ಪ್ರೊಟೀನ್‌, ನಾರು, ಖನಿಜಗಳು ಸಾಂದ್ರವಾಗಿರಬೇಕು. ಜೊತೆಗೆ ಸರಿಯಾದ ವ್ಯಾಯಾಮ. ಆಗ ದೇಹದ ಕೊಬ್ಬು ಕರಗಿಸಿ, ಆ ಮೂಲಕ ತೂಕ ಇಳಿಸಬಹುದು. ಶರೀರ ಕೃಶವಾಗಿ ಕಾಣುವ ಬದಲು ಆರೋಗ್ಯಪೂರ್ಣ ಕಳೆಯನ್ನು ಹೊಂದಿರುತ್ತದೆ.

Weight Loss

ಏನು ಮಾಡಬೇಕು?

ಇದಕ್ಕಾಗಿ ಪೋಷಕಾಂಶ ತಜ್ಞರು ಕೆಲವು ನಿಯಮಗಳನ್ನು ಒಪ್ಪುತ್ತಾರೆ. ಮೊದಲನೆಯದಾಗಿ, ಬೆಳಗಿನ ಉಪಹಾರದಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ಒದಗಿಸುವುದು. ಆದರೆ ನಿಮಗೆ ಬೆಳಗ್ಗೆ 1200 ಕ್ಯಾಲರಿಯ ಆಹಾರ ಬೇಕು ಎಂದಿದ್ದರೆ, ಅದನ್ನು ಅಂದಾಜು 900 ಕ್ಯಾಲರಿಗಳಿಗೆ ಇಳಿಸುವುದು. ಈ ಆಹಾರದಲ್ಲಿ ಪ್ರೊಟೀನ್‌ ಮತ್ತು ಸಂಕೀರ್ಣ ಪಿಷ್ಟಗಳು ಭರಿತವಾಗಿ ಇರಬೇಕು. ಇದರಿಂದ ಶರೀರ ಸೊರಗುವುದಿಲ್ಲ ಮತ್ತು ಹಸಿವೂ ಆಗುವುದಿಲ್ಲ. ದೇಹಕ್ಕೆ ಬೇಕಾದ ಉಳಿದ 300 ಕ್ಯಾಲರಿಯನ್ನು ಶರೀರ ತನ್ನ ಕೊಬ್ಬಿನ ದಾಸ್ತಾನಿನಿಂದ ತೆಗೆದುಕೊಳ್ಳುತ್ತದೆ. ಇದನ್ನು ಎಲ್ಲಾ ಹೊತ್ತಿನ ಆಹಾರಗಳಲ್ಲೂ ಕ್ರಮೇಣ ಅಳವಡಿಸಿಕೊಳ್ಳಬಹುದು.

30-30-30

ಇದೊಂದು ಸುಸ್ಥಿರವಾದ ತೂಕ ಇಳಿಕೆಯ ಕ್ರಮ. ಬೆಳಗಿನ ಉಪಾಹಾರಕ್ಕೆ, ದೊಡ್ಡ ಮಟ್ಟದಲ್ಲಿ ಅಂದರೆ, 30 ಗ್ರಾಂನಷ್ಟು ಪ್ರೊಟೀನ್‌ ತಿನ್ನುವುದು. ದಿನಕ್ಕೆ 30 ನಿಮಿಷಗಳ ಕಡಿಮೆ ತೀವ್ರತೆಯ ವ್ಯಾಯಾಮವನ್ನು ತಪ್ಪದೆ ಮಾಡುವುದು, ತಿಂಗಳಿನ 30 ದಿನಗಳು ಏನು-ಎಷ್ಟು ಎಂಬ ಲಕ್ಷ್ಯ ಇರಿಸಿಕೊಂಡೇ ತಿನ್ನುವುದು. ೩೧ನೇ ದಿನವೆಂಬುದು ಇದ್ದರೆ ಬೇಕಾದ್ದು ತಿನ್ನಿ! ಇದರಿಂದ ದೇಹಸ್ವಾಸ್ಥ್ಯ ಸುಧಾರಿಸಲು ಸಾಕಷ್ಟು ಅವಕಾಶ ದೊರೆಯುತ್ತದೆ.

ಪ್ರೊಟೀನ್‌ ಲೆಕ್ಕ ಎಂದರೆ?

ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ತಿನ್ನಬೇಕು ಎನ್ನುವುದು ನಿಜ. ಆದರೆ 30 ಗ್ರಾಂ ಲೆಕ್ಕ ಮಾಡುವುದು ಹೇಗೆ? ಒಂದು ದೊಡ್ಡ ಮೊಟ್ಟೆಯ ಬಿಳಿ ಭಾಗದಲ್ಲಿ ಅಂದಾಜು 6 ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಒಂದು ಹಾಳೆ ಚೀಸ್‌ನಿಂದ ೪-೫ ಗ್ರಾಂ ಪ್ರೊಟೀನ್‌ ದೊರೆಯಬಹುದು. ಇಂಥ ಲೆಕ್ಕಗಳ ಆಧಾರದ ಮೇಲೆ ಹಾಲು, ಮೊಸರು, ಕಾಯಿ-ಬೀಜಗಳು, ಮೊಟ್ಟೆ, ಚಿಕನ್‌, ಸೋಯಾಬೀನ್‌, ಮೊಳಕೆ ಕಾಳುಗಳು- ಇಂಥವೆಲ್ಲ ಅಗತ್ಯವಾದ ಪ್ರೊಟೀನನ್ನು ದೇಹಕ್ಕೆ ಒದಗಿಸುವ ಹಲವಾರು ದಾರಿಗಳು. ಅದೇ ರೀತಿಯಲ್ಲಿ ತೌಡು, ಸಿಪ್ಪೆಗಳಿರುವ ಧಾನ್ಯಗಳು, ಸಿರಿ ಧಾನ್ಯಗಳನ್ನು ತಿನ್ನುವ ಮೂಲಕ ಸಂಕೀರ್ಣ ಪಿಷ್ಟಗಳನ್ನು ದೊರಕಿಸಿಕೊಡಬಹುದು.

Have enough fiber in the diet Eat plenty of whole grains fruits and raw vegetables Simple Steps to Preventing Diabetes

ನಾರು ಬೇಕಲ್ಲವೇ?

ಇದಕ್ಕಾಗಿ ಋತುಮಾನದ ಸೊಪ್ಪು-ಹಣ್ಣು-ತರಕಾರಿಗಳು ಊಟದಲ್ಲಿ ಸಾಕಷ್ಟಿರಲಿ. ಖನಿಜಗಳು ಕೊರತೆಯಾಗದಂತೆ ನೋಡಿಕೊಳ್ಳಲು ಇದಿಷ್ಟು ಆಹಾರಗಳು ಸಾಕಾಗುತ್ತವೆ. ಜೊತೆಗೆ ಚೆನ್ನಾಗಿ ನೀರು ಕುಡಿಯಿರಿ. ಇನ್ನೊಂದು ನೆನಪಿನಿಂದ ಮಾಡಬೇಕಾದ ಕೆಲಸವೆಂದರೆ ಗುಣಮಟ್ಟದ ನಿದ್ದೆ. ಉಳಿದೆಲ್ಲ ಮಾಡಿ, ಸರಿಯಾಗಿ ನಿದ್ದೆ ಮಾಡದಿದ್ದರೆ ಸರ್ವಬಣ್ಣ ಮಸಿ ನುಂಗಿತು ಎಂಬಂತಾಗುತ್ತದೆ. ಇಷ್ಟಾದ ಮೇಲೆ ದೇಹದ ಕೊಬ್ಬು ಕರಗದೆ ಎಲ್ಲಿ ಹೋಗುತ್ತದೆ!

ಇದನ್ನೂ ಓದಿ: Health Tips Kannada: ಕಣ್ಣಿನ ಕೆಳಗೆ ಕಪ್ಪಾಗಿದೆಯೇ? ಇಲ್ಲಿದೆ ಸರಳ ಮನೆಮದ್ದು

Continue Reading

ಆರೋಗ್ಯ

Tips For Healthy Skin: ಕಡಲೆಹಿಟ್ಟೆಂಬ ಶತಮಾನಗಳ ಹಳೆಯ ಸೌಂದರ್ಯವರ್ಧಕ!

ಯಾವುದೇ ರಾಸಾಯನಿಕಗಳಿಲ್ಲ, ಮನೆಯಲ್ಲಿ ತ್ವರಿತವಾಗಿ ಮಾಡಿಕೊಳ್ಳಬಹುದಾದ ಕಡಲೆಹಿಟ್ಟೆಂಬ ಸೌಂದರ್ಯವರ್ಧಕಕ್ಕೆ ಸಮನಾಗಿ ಬೇರೊಂದಿಲ್ಲ. ಎಷ್ಟೊ ತಲೆಮಾರುಗಳಿಂದ ಈ ಅಭ್ಯಾಸ ಚಾಲ್ತಿಯಲ್ಲಿದೆ, ಮುಂದೆಯೂ ಇರಲಿದೆ. ಏನಿದೆ ಅಂಥದ್ದು ಕಡಲೆಹಿಟ್ಟಿನಲ್ಲಿ? ಇಲ್ಲಿದೆ (Tips For Healthy Skin) ಉಪಯುಕ್ತ ಮಾಹಿತಿ.

VISTARANEWS.COM


on

Tips For Healthy Skin
Koo

ಕೆಲವು ಹಳೆಯ ಕಾಲದ ಅಭ್ಯಾಸಗಳು ಎಂದಿಗೂ ಬದಲಾಗುವುದಿಲ್ಲ. ಹೊಸತು ಎಂಥದ್ದೇ ಬಂದರೂ, ಹಳೆಯದ ತೂಕ ಕಡಿಮೆಯಾಗುವುದಿಲ್ಲ. ಉದಾಹರಣೆಗೆ ಹೇಳುವುದಾದರೆ, ಮುಖದ ಕಾಂತಿಗಾಗಿ ಕಡಲೆಹಿಟ್ಟನ್ನು ಬಳಸುವ ಅಭ್ಯಾಸ. ಎಷ್ಟೊ ತಲೆಮಾರುಗಳಿಂದ ಈ ಅಭ್ಯಾಸ ಚಾಲ್ತಿಯಲ್ಲಿದೆ, ಮುಂದೆಯೂ ಇರಲಿದೆ. ಕಾರಣ, ಕಡಲೆಹಿಟ್ಟಿನ ಸಾಮರ್ಥ್ಯವೇ ಅಂಥದ್ದು. ಯಾವುದೇ ರಾಸಾಯನಿಕಗಳಿಲ್ಲ, ಮನೆಯಲ್ಲಿ ತ್ವರಿತವಾಗಿ ಮಾಡಿಕೊಳ್ಳಬಹುದಾದ ಈ ಸೌಂದರ್ಯವರ್ಧಕಕ್ಕೆ ಸಮನಾಗಿ ಬೇರೊಂದಿಲ್ಲ. ಏನಿದೆ ಅಂಥದ್ದು (Tips For Healthy Skin) ಕಡಲೆಹಿಟ್ಟಿನಲ್ಲಿ?
ಕಡಲೆಹಿಟ್ಟು ಉತ್ಕರ್ಷಣ ನಿರೋಧಕಗಳಿಂದ ಭರಿತವಾಗಿದೆ. ಚರ್ಮದ ಮೇಲಿನ ಮೃತ ಕೋಶಗಳನ್ನು ತೆಗೆದುಹಾಕಿ, ಹೆಚ್ಚಿನ ಎಣ್ಣೆಯಂಶವನ್ನು ತೆಗೆದು, ಹೊಸ ಕೋಶಗಳ ಬೆವಳಣಿಗೆಗೆ ಅಗತ್ಯವಾದ ಕೆಲಸ ಮಾಡುತ್ತದೆ. ಹಾಗಾಗಿ ಕಡಲೆ ಹಿಟ್ಟನ್ನು ನಿಯಮಿತವಾಗಿ ಬಳಸಿದಾಗ ಚರ್ಮ ನಯವಾದಂತಾಗಿ, ಕಾಂತಿ ಹೆಚ್ಚುತ್ತದೆ. ಇದಿಷ್ಟನ್ನೂ ಯಾವುದೇ ರಾಸಾಯನಿಕಗಳಿಲ್ಲದಂತೆ, ನೈಸರ್ಗಿಕವಾದ, ಆರೋಗ್ಯಕರ ವಸ್ತುವಿನಿಂದ ನಾವು ಪಡೆಯಬಹುದಾದ್ದು. ಕ್ಲೆನ್ಸರ್‌, ಎಕ್ಸ್‌ಫಾಲಿಯೇಟರ್‌ ಮತ್ತು ಬ್ರೈಟ್ನರ್‌- ಎಲ್ಲವೂ ಕಡಲೆಹಿಟ್ಟೊಂದರಿಂದಲೇ ಸಾಧಿಸಬಹುದು ನಾವು.
ಇದು ಭಾರತದಲ್ಲಿ ಮಾತ್ರವೇ ಅಲ್ಲ, ದಕ್ಷಿಣ ಏಷ್ಯಾ ದೇಶಗಳಲ್ಲಿ ಶತಮಾನಗಳಿಂದ ಬಳಕೆಯಲ್ಲಿ ಇರುವಂಥದ್ದು. ಇದರ ಉರಿಯೂತ ಶಾಮಕ ಗುಣದಿಂದಾಗಿಯೇ ಇದು ಮೊಡವೆಯನ್ನೂ ನಿಯಂತ್ರಿಸಬಲ್ಲದು. ವಾತಾವರಣದ ಧೂಳು, ಹೊಗೆ, ಮಾಲಿನ್ಯಗಳಿಂದ ಮಂಕಾಗುವ ಚರ್ಮಕ್ಕೆ ಕಾಂತಿ ನೀಡುವುದಕ್ಕೆ ಇದು ಒಳ್ಳೆಯ ಮತ್ತು ಸರಳ ಉಪಾಯ. ಇದರಿಂದ ಮಾಡುವ ಫೇಸ್‌ಮಾಸ್ಕ್‌ಗಳು ಸಾಮಾನ್ಯವಾಗಿ ಎಲ್ಲರಿಗೂ ಒಗ್ಗುವಂಥವು. ಹಾಲು, ಮೊಸರು, ಹಣ್ಣಿನ ಪೇಸ್ಟ್‌ಗಳು, ತರಕಾರಿ ರಸಗಳು ಮುಂತಾದ ಯಾವುದನ್ನೇ ಆದರೂ ಕಡಲೆಹಿಟ್ಟಿನೊಂದಿಗೆ ಬಳಸಬಹುದು. ವಾರಕ್ಕೆ 2-3 ದಿನ ಇದನ್ನು ಬಳಸಿದರೆ ಸಾಕಾಗುತ್ತದೆ. ಇದನ್ನು ಅತಿಯಾಗಿ ಬಳಕೆ ಮಾಡಿದರೆ ಚರ್ಮದ ಶುಷ್ಕತೆ ಹೆಚ್ಚಬಹುದು; ಸೂಕ್ಷ್ಮ ಚರ್ಮದವರಿಗೆ ತೊಂದರೆ ಆಗಬಹುದು.

Facemask

ಫೇಸ್‌ಮಾಸ್ಕ್‌

ಮೊದಲಿಗೆ ಕಡಲೆಹಿಟ್ಟನ್ನು ಸರಿಯಾದ ವಸ್ತುಗಳೊಂದಿಗೆ ಮಿಶ್ರ ಮಾಡಿ ಪೇಸ್ಟ್‌ ಸಿದ್ಧ ಮಾಡಿ. ಹಾಲು, ಮೊಸರು, ಗುಲಾಬಿ ಜಲ ಮುಂತಾದ ಯಾವುದೂ ಆಗಬಹುದು. ಇದರಿಂದ ಹದವಾದ ಪೇಸ್ಟ್‌ ಸಿದ್ಧವಾದ ಮೇಲೆ, ಮುಖಕ್ಕೆ ವೃತ್ತಾಕಾರದಲ್ಲಿ ಹಚ್ಚಿ. ಆದರೆ ತೀರಾ ಉಜ್ಜಬೇಡಿ; ಇದರಿಂದ ಕೆಂಪಾಗಿ ಚರ್ಮಕ್ಕೆ ಕಿರಿಕಿರಿ ಉಂಟಾಗಬಹುದು. ೨೦ ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ನಂತರ ಮುಖ ಒರೆಸದೆ ಗಾಳಿಗೆ ಆರುವುದಕ್ಕೆ ಬಿಡಿ. ನಂತರ ಹಗುರವಾದ ಮಾಯಿಶ್ಚರೈಸರ್‌ ಹಚ್ಚಿ. ಇದನ್ನು ವಾರದಲ್ಲಿ 2-3 ದಿನ ಮಾಡಿದರೆ ಸಾಕಾಗುತ್ತದೆ.

Tumeric Rhizome with Green Leaf and Turmeric Powder

ಅರಿಶಿನದೊಂದಿಗೆ

ಹರಿದ್ರಾ ಸಹ ಸೌಂದರ್ಯವರ್ಧನೆಗಾಗಿ ಬಳಕೆಯಲ್ಲಿದೆ. 1 ಚಮಚ ಕಡಲೆ ಹಿಟ್ಟಿಗೆ ಚಿಟಿಕೆ ಅರಿಶಿನ, ಅರ್ಧ ಚಮಚ ಜೇನುತುಪ್ಪ ಮತ್ತು ಪೇಸ್ಟ್‌ ಮಾಡುವುದಕ್ಕೆ ಸಾಕಾಗುವಷ್ಟು ಗುಲಾಬಿ ಜಲ ಹಾಕಿ. ಇದನ್ನು ಮುಖಕ್ಕೆ ಸಮನಾಗಿ ಹಚ್ಚಿ. 20 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಮುಖ ಆರಿದ ನಂತರ ನಿತ್ಯ ಬಳಸುವ ಮಾಯಿಶ್ಚರೈಸರ್‌ ಹಚ್ಚಿ.

Lemon Anti Infective Foods

ನಿಂಬೆಯ ಸ್ಕ್ರಬ್‌

ಒಂದು ಚಮಚ ಕಡಲೆಹಿಟ್ಟನ್ನು 1 ಚಮಚ ಮೊಸರಿನೊಂದಿಗೆ ಮಿಶ್ರ ಮಾಡಿ. ಇದಕ್ಕೆ ಅರ್ಧ ಚಮಚ ಜೇನುತುಪ್ಪ ಮತ್ತು ಆರೆಂಟು ಹನಿ ನಿಂಬೆ ರಸ ಹಾಕಿ. ಇದನ್ನು ಒದ್ದೆ ಮುಖಕ್ಕೆ ಹಾಕಿ, ಲಘುವಾಗಿ ಉಜ್ಜಿ. ಇದನ್ನು ಅತಿಯಾಗಿ ಮಾಡಿದರೆ ಚರ್ಮ ಕೆಂಪಾಗುತ್ತದೆ, ಜಾಗ್ರತೆ. ಒಂದೆರಡು ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಸಾಕು.

ಕ್ಲೆನ್ಸರ್‌

ಒಂದು ಚಮಚ ಕಡಲೆ ಹಿಟ್ಟಿಗೆ ಅರ್ಧ ಚಮಚ ಹಾಲು, ಅರ್ಧ ಚಮಚ ಗುಲಾಬಿಜಲ ಬೆರೆಸಿ ಪೇಸ್ಟ್‌ ಮಾಡಿ. ಇದನ್ನು ವೃತ್ತಾಕಾರದಲ್ಲಿ ಮುಖಕ್ಕೆ ಹಾಕಿ. ಆದರೆ ಜೋರಾಗಿ ಉಜ್ಜಬಾರದು. ಒಂದೆರಡು ನಿಮಿಷಗಳ ನಂತರ ತೊಳೆಯಿರಿ. ಇದನ್ನು ವಾರದಲ್ಲಿ 2-3 ಬಾರಿ ಮಾಡಬಹುದು.

fruit Facemask

ತರಕಾರಿ-ಹಣ್ಣುಗಳ ಮಾಸ್ಕ್‌

ಪಪ್ಪಾಯ, ಬಾಳೆಯಣ್ಣು, ಮೆಲನ್‌ಗಳು ಮುಂತಾದ ಯಾವುದೇ ಹಣ್ಣುಗಳನ್ನು ಕಡಲೆಹಿಟ್ಟಿನೊಂದಿಗೆ ಬೆರೆಸಿ ಫೇಸ್‌ಮಾಸ್ಕ್‌ ತಯಾರಿಸಬಹುದು. ಸೌತೇಕಾಯಿ, ಕ್ಯಾರೆಟ್‌ ಮುಂತಾದ ತರಕಾರಿಗಳ ರಸವನ್ನು ಕಡಲೆಹಿಟ್ಟಿನೊಂದಿಗೆ ಸೇರಿಸಿ ಮುಖಕ್ಕೆ ಮಾಸ್ಕ್‌ ಮಾಡಿದರೆ ಉತ್ತಮ ಪರಿಣಾಮ ದೊರೆಯುತ್ತದೆ. ಇಂಥ ಯಾವುದನ್ನು ಬಳಸುವಾಗಲೂ ನಿಮ್ಮ ಚರ್ಮಕ್ಕೆ ಒಗ್ಗುತ್ತದೆಯೋ ಇಲ್ಲವೊ ಎಂಬ ಅನುಮಾನವಿದ್ದರೆ, ಕೈಮೇಲೆ ಪ್ಯಾಚ್‌ ಟೆಸ್ಟ್‌ ಮಾಡಿಕೊಳ್ಳಿ.

ಇದನ್ನೂ ಓದಿ: Health Tips Kannada: ಕೊಲೆಸ್ಟ್ರಾಲ್‌ ತಗ್ಗಿಸಲು ಈ ಬೆಳಗಿನ ಪೇಯಗಳಿಂದ ಸಾಧ್ಯ! ಪ್ರಯತ್ನಿಸಿ

Continue Reading

ಆರೋಗ್ಯ

Health Tips Kannada : ಉತ್ತಮ ಆರೋಗ್ಯಕ್ಕಾಗಿ ಎಷ್ಟು ಗಂಟೆ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು, ಮಲಗಬೇಕು?

Health Tips Kannada: ಉತ್ತಮ ಆರೋಗ್ಯಕ್ಕಾಗಿ ಎಷ್ಟು ಗಂಟೆ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು, ಮಲಗಬೇಕು? ಇವತ್ತು ಎಲ್ಲರೂ ಬಯಸೋದು ಆರೋಗ್ಯ ಚೆನ್ನಾಗಿರಲಿ ಎಂದು. ಆದರೆ ಇದಕ್ಕಾಗಿ ಎಷ್ಟು ಗಂಟೆಗಳ ಕಾಲ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು ಮತ್ತು ಮಲಗಬೇಕು ಎನ್ನುವ ಗೊಂದಲ ಇದ್ದೇ ಇರುತ್ತದೆ. ಆದರೆ ಹೊಸ ಅಧ್ಯಯನವೊಂದು ಇದಕ್ಕೆ ಉತ್ತರ ಕಂಡು ಹಿಡಿದಿದೆ.

VISTARANEWS.COM


on

By

Health Tips Kannada
Koo

ಉತ್ತಮ (Health Tips Kannada) ಆರೋಗ್ಯಕ್ಕಾಗಿ (Good Health) ಎಷ್ಟು ಗಂಟೆಗಳ ಕಾಲ ಕುಳಿತುಕೊಳ್ಳಬೇಕು (Sit), ನಿಂತುಕೊಳ್ಳಬೇಕು (Stand) ಮತ್ತು ಮಲಗಬೇಕು (Sleep) ಎನ್ನುವ ಗೊಂದಲ ಎಲ್ಲರಲ್ಲೂ ಇರುತ್ತದೆ. ಇದರಲ್ಲಿ ಎಷ್ಟು ಗಂಟೆ ಮಲಗಬೇಕು ಎನ್ನುವುದಕ್ಕೆ ಬಹುತೇಕ ಮಂದಿಗೆ ಉತ್ತರ ಗೊತ್ತಿರುತ್ತದೆ. ಆದರೆ ಎಷ್ಟು ಗಂಟೆ ನಿಲ್ಲಬೇಕು, ಕುಳಿತುಕೊಳ್ಳಬೇಕು ಎನ್ನುವುದನ್ನು ಹೇಳುವುದು ಕಷ್ಟ.

ಇದೀಗ ಹೊಸ ಅಧ್ಯಯನವೊಂದು ನಾವು ಆರೋಗ್ಯವಾಗಿರಲು ಎಷ್ಟು ಹೊತ್ತು ಸಕ್ರಿಯವಾಗಿರುವುದು ಅತ್ಯಗತ್ಯ ಎಂಬುದನ್ನು ಹೇಳಿದೆ. ಅದರಲ್ಲೂ ನಾವು ಎಷ್ಟು ಗಂಟೆಗಳ ಕಾಲ ಕುಳಿತುಕೊಳ್ಳಬೇಕು ಅಥವಾ ನಿಲ್ಲಬೇಕು ಅಥವಾ ವ್ಯಾಯಾಮ ಮಾಡಬೇಕು ಎಂಬುದಕ್ಕೆ ಈ ಹೊಸ ಅಧ್ಯಯನವು ಉತ್ತರ ನೀಡಿದೆ.

ಜಡ ಜೀವನಶೈಲಿಯನ್ನು ಮುರಿಯುವ ಒಂದು ಸುಲಭ ವಿಧಾನವೆಂದರೆ ಹೆಚ್ಚು ದೈಹಿಕವಾಗಿ ಸಕ್ರಿಯವಾಗಿರುವುದು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯಕಾರಣ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತೊಂದರೆಗಳು. ಹೆಚ್ಚು ಹೊತ್ತು ವ್ಯಾಯಾಮ ಮಾಡುವುದು, ಆರೋಗ್ಯಕರ, ಪೌಷ್ಟಿಕಾಂಶ ಭರಿತ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಅಲ್ಲದೇ ದೀರ್ಘ ಗಂಟೆಗಳ ಕಾಲ ಕುಳಿತುಕೊಳ್ಳುವ ತೊಂದರೆಗಳನ್ನು ಎದುರಿಸುವುದು ಕೂಡ ಬಹುಮುಖ್ಯ.

ಇದನ್ನೂ ಓದಿ: Health Tips Kannada: ಕೊಲೆಸ್ಟ್ರಾಲ್‌ ತಗ್ಗಿಸಲು ಈ ಬೆಳಗಿನ ಪೇಯಗಳಿಂದ ಸಾಧ್ಯ! ಪ್ರಯತ್ನಿಸಿ

ದೈಹಿಕ ಚಟುವಟಿಕೆಗಾಗಿ ಎಷ್ಟು ಗಂಟೆಗಳನ್ನು ವಿನಿಯೋಗಿಸಬೇಕು, ಎಷ್ಟು ಸಮಯ ನಿಲ್ಲಬೇಕು ಅಥವಾ ಕುಳಿತುಕೊಳ್ಳಬೇಕು ಎಂಬುದರ ಕುರಿತು ಹೊಸ ಆಸ್ಟ್ರೇಲಿಯನ್ ತಂಡವೊಂದು ಅಧ್ಯಯನ ನಡೆಸಿದೆ.

ಎಷ್ಟು ಗಂಟೆಗಳ ದೈಹಿಕ ಚಟುವಟಿಕೆ ಮುಖ್ಯ?

ಅತ್ಯುತ್ತಮ ಆರೋಗ್ಯಕ್ಕಾಗಿ, ವ್ಯಕ್ತಿಯ ದಿನವು ಬೆಳಗಿನ ವ್ಯಾಯಾಮ ದಿಂದ ಪ್ರಾರಂಭವಾಗಬೇಕು. ಕನಿಷ್ಠ ಎಂಟು ಗಂಟೆಗಳ ನಿದ್ರೆಯನ್ನು ಒಳಗೊಂಡ ನಾಲ್ಕು ಗಂಟೆಗಳ ದೈಹಿಕ ಚಟುವಟಿಕೆಯನ್ನು ಒಳಗೊಂಡಿರಬೇಕು. ಲಘು- ತೀವ್ರತೆಯ ಚಟುವಟಿಕೆಯು ಮನೆಗೆಲಸವನ್ನು ಮಾಡುವುದರಿಂದ ಭೋಜನವನ್ನು ಮಾಡುವವರೆಗೆ ಇರುತ್ತದೆ. ಆದರೆ ಮಧ್ಯಮ ಮತ್ತು ಹುರುಪಿನ ವ್ಯಾಯಾಮವು ಚುರುಕಾದ ನಡಿಗೆ ಅಥವಾ ಜಿಮ್ ವ್ಯಾಯಾಮದಂತಹ ಹೆಚ್ಚು ಉದ್ದೇಶಪೂರ್ವಕ ಚಲನೆಯನ್ನು ಒಳಗೊಂಡಿರುತ್ತದೆ ಎನ್ನುತ್ತಾರೆ ಸಂಶೋಧಕರು.

ದಿನದಲ್ಲಿ 4 ಗಂಟೆಗಳ ದೈಹಿಕ ಚಟುವಟಿಕೆ, 8 ಗಂಟೆಗಳ ನಿದ್ದೆ, 6 ಗಂಟೆ ಕುಳಿತುಕೊಳ್ಳುವುದು, 5 ಗಂಟೆ ನಿಂತಿರುವುದು ಆರೋಗ್ಯವಾಗಿರಲು ವ್ಯಕ್ತಿಗೆ ಅತ್ಯಗತ್ಯವಾಗಿದೆ.


ಅಧ್ಯಯನ ಏನು ಹೇಳುತ್ತದೆ?

ಆಸ್ಟ್ರೇಲಿಯದ ಸ್ವಿನ್‌ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ನೇತೃತ್ವದ ಅಂತಾರಾಷ್ಟ್ರೀಯ ತಂಡವು 24 ಗಂಟೆಗಳ ದಿನದಲ್ಲಿ 2,000ಕ್ಕೂ ಹೆಚ್ಚು ಜನರ ನಡವಳಿಕೆಯನ್ನು ಅಧ್ಯಯನ ನಡೆಸಿದೆ. ಆರೋಗ್ಯವಾಗಿರಲು ಕುಳಿತುಕೊಳ್ಳುವುದು, ಮಲಗುವುದು, ನಿಂತಿರುವುದು ಮತ್ತು ದೈಹಿಕವಾಗಿ ಸಕ್ರಿಯವಾಗಿರುವ ಸಮಯವನ್ನು ಸರಿಯಾಗಿ ನಿರ್ಧರಿಸಿದೆ.

ಅತ್ಯುತ್ತಮ ಆರೋಗ್ಯಕ್ಕೆ ಸಂಬಂಧಿಸಿ 24 ಗಂಟೆಗಳಲ್ಲಿ ದೈಹಿಕ, ಮಾನಸಿಕ ಚಟುವಟಿಕೆಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸಗಳಿರುತ್ತವೆ. ವಿಭಿನ್ನ ಆರೋಗ್ಯ ಗುರುತುಗಳಿಗೆ ಸೊಂಟದ ಸುತ್ತಳತೆಯಿಂದ ಹಿಡಿದು ಉಪವಾಸದ ಗ್ಲೂಕೋಸ್‌ನವರೆಗೆ ಪ್ರತಿ ನಡವಳಿಕೆಗೆ ವಿಭಿನ್ನ ಹಂತಗಳಿವೆ ಎಂದು ಸ್ವಿನ್‌ಬರ್ನ್ ಟೆಕ್ನಾಲಜಿ ವಿಶ್ವವಿದ್ಯಾಲಯದ ನಗರ ಪರಿವರ್ತನೆಗಳ ಕೇಂದ್ರದಿಂದ ಕ್ರಿಶ್ಚಿಯನ್ ಬ್ರೇಕೆನ್‌ರಿಡ್ಜ್ ಹೇಳಿದ್ದಾರೆ.

ಹೆಚ್ಚು ಸಮಯ ದೈಹಿಕವಾಗಿ ಸಕ್ರಿಯವಾಗಿರುವ ಅಥವಾ ಲಘು-ತೀವ್ರತೆಯ ಚಲನೆಗಳೊಂದಿಗೆ ಕುಳಿತುಕೊಳ್ಳುವ ಸಮಯವನ್ನು ಬದಲಾಯಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ, ಇದು ರಕ್ತದ ಗ್ಲೂಕೋಸ್ ಮಟ್ಟಗಳೊಂದಿಗೆ ಸಂಬಂಧಿಸಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಹೆಚ್ಚು ಕುಳಿತುಕೊಳ್ಳುವುದು ಅನಾರೋಗ್ಯಕರ

ಒಂದು ನಿರ್ದಿಷ್ಟ ಚಟುವಟಿಕೆಯು ಇನ್ನೊಂದನ್ನು ಬದಲಿಸುವ ವ್ಯಕ್ತಿಯ ಇಡೀ ದಿನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕೂಡ ಸಂಶೋಧಕರು ಕಂಡು ಹಿಡಿದಿದ್ದಾರೆ. ಒಂದೇ ಕಡೆ ಅತಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದೂ ಅನಾರೋಗ್ಯಕ್ಕೆ ದಾರಿ ಎಂದು ಅಧ್ಯಯನ ತಿಳಿಸಿದೆ.

ಹೆಚ್ಚು ಚಟುವಟಿಕೆಯೂ ಒಳ್ಳೆಯದಲ್ಲ

ವ್ಯಾಯಾಮವು ಹೆಚ್ಚು ಪ್ರಯೋಜನಕಾರಿಯಾಗಿದ್ದರೂ ಸಮಯದ ಬಳಕೆ ವಾಸ್ತವಿಕ ಮತ್ತು ಸಮತೋಲಿತವಾಗಿರಬೇಕು. ಹೆಚ್ಚು ಸಮಯ ವ್ಯಾಯಾಮ ಮಾಡಲು ಸಲಹೆ ನೀಡಬಹುದು. ಆದರೂ ಅತಿಯಾಗಿ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

Continue Reading

ಫ್ಯಾಷನ್

Summer Fashion: ಬೇಸಿಗೆಯಲ್ಲಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ 5 ಶೈಲಿಯ ಗ್ಲಾಮರಸ್‌ ಟಾಪ್‌ಗಳಿವು

ಈ ಬೇಸಿಗೆಯಲ್ಲಿ ಹುಡುಗಿಯರಿಗೆ ಗ್ಲಾಮರಸ್‌ ಲುಕ್‌ ನೀಡುವ 5 ಬಗೆಯ ಫ್ಯಾಷೆನಬಲ್‌ ಟಾಪ್‌ಗಳು ಟ್ರೆಂಡಿಯಾಗಿವೆ. ಅವು ಯಾವುವು? ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಇಲ್ಲಿದೆ (Summer Fashion) ವಿವರ.

VISTARANEWS.COM


on

Summer Fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬೇಸಿಗೆಯಲ್ಲಿ ಹುಡುಗಿಯರಿಗೆ (Summer Fashion) ಗ್ಲಾಮರಸ್‌ ಲುಕ್‌ ನೀಡುವ 5 ಬಗೆಯ ಫ್ಯಾಷೆನಬಲ್‌ ಟಾಪ್‌ಗಳು ಟ್ರೆಂಡಿಯಾಗಿವೆ. ಕಾಲೇಜು ಹುಡುಗಿಯರು ಮಾತ್ರವಲ್ಲ, ವೀಕೆಂಡ್‌ನಲ್ಲಿ ಉದ್ಯೋಗಸ್ಥ ಯುವತಿಯರು ಕೂಡ ಧರಿಸತೊಡಗಿದ್ದಾರೆ. ಇವು ನೋಡಲು ಗ್ಲಾಮರಸ್‌ ಆಗಿ ಕಾಣಿಸುವುದರೊಂದಿಗೆ ಇವು ಕಂಫರ್ಟಬಲ್‌ ಲುಕ್‌ ನೀಡುತ್ತವೆ ಎಂಬ ಕಾರಣದಿಂದಾಗಿ ಇವುಗಳ ಬೇಡಿಕೆ ಮೊದಲಿಗಿಂತ ಹೆಚ್ಚಾಗಿದೆ.

Summer Fashion

ಆನ್‌ಲೈನ್‌ನಲ್ಲಿ ಹೆಚ್ಚಿದ ಡಿಮ್ಯಾಂಡ್‌

ಶಾಪಿಂಗ್‌ ಸೆಂಟರ್‌ ಹಾಗೂ ಮಾಲ್‌ಗಳ ಶಾಪ್‌ಗಳಿಗಿಂತ ಆನ್‌ಲೈನ್‌ನಲ್ಲಿ ಸಮ್ಮರ್‌ ಟಾಪ್‌ಗಳ ಡಿಮ್ಯಾಂಡ್‌ ಹೆಚ್ಚಾಗಿದೆಯಂತೆ. ಹಾಗೆಂದು ಅಪರೆಲ್‌ ಸಂಸ್ಥೆಯ ಸಮೀಕ್ಷೆ ಬಹಿರಂಗಪಡಿಸಿದೆ. ಇದಕ್ಕೆ ಕಾರಣ, ಬೇಕಾದ ರೀತಿಯ ವಿನ್ಯಾಸ ಹಾಗೂ ಡಿಸೈನ್‌ಗಳು ಅತಿ ಸುಲಭವಾಗಿ ದೊರೆಯುತ್ತಿರುವುದು ಹಾಗೂ ಕಡಿಮೆ ಬೆಲೆಗೆ ಸಿಗುತ್ತಿರುವುದು. ಅದರಲ್ಲೂ ಬಾಲಿವುಡ್‌ ಸೆಲೆಬ್ರೆಟಿಗಳು ಧರಿಸುವಂತಹ ಡಿಸೈನ್‌ನವು ಅತಿ ಹೆಚ್ಚು ದೊರಕುತ್ತಿವೆ. ಇನ್ನು, ಇವುಗಳಿಗೆ ಬೇಡಿಕೆಯು ಹೆಚ್ಚಿದೆ ಎನ್ನುತ್ತಾರೆ ಫ್ಯಾಷನ್‌ ಸಮೀಕ್ಷೆ. ಇದರೊಂದಿಗೆ ಎಲ್ಲಾ ಸೈಝ್‌ನವರಿಗೂ ಆನ್‌ಲೈನ್‌ನಲ್ಲಿ ದೊರೆಯುತ್ತಿರುವುದು ಒಂದು ಕಾರಣವಾದರೇ, ರಿಟರ್ನ್‌ ಪಾಲಿಸಿ ಮತ್ತೊಂದು. ಪ್ಲಸ್‌ ಸೈಝಿನವರಿಗೂ ಇವು ಲಭ್ಯವಾಗುತ್ತಿರುವುದು ಮಹಿಳೆಯರನ್ನೂ ಸೆಳೆಯಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್‌ ಸಮೀಕ್ಷಾ ವರದಿಗಾರರು. ಅವರ ಪ್ರಕಾರ, ಸಮ್ಮರ್‌ ಸೀಸನ್‌ನಲ್ಲಿ ಸಾಕಷ್ಟು ಡಿಸೈನ್‌ನವು ಟ್ರೆಂಡಿಯಾಗಿರುವುದರೊಂದಿಗೆ ಆನ್‌ಲೈನ್‌ ವ್ಯಾಪಾರ ವಹಿವಾಟು ಹೆಚ್ಚಿಸಿವೆಯಂತೆ.

Summer Fashion

ಟ್ಯೂಬ್‌ ಟಾಪ್ಸ್‌

ಯಾವುದೇ ಸ್ಟ್ರಾಪ್‌ ಹಾಗೂ ಶೋಲ್ಡರ್‌ ಇಲ್ಲದ ಈ ಟಾಪ್‌ಗಳು ಸದ್ಯ ಜೆನ್‌ ಜಿ ಹುಡುಗಿಯರ ಫೇವರೇಟ್‌ ಲಿಸ್ಟ್‌ನಲ್ಲಿವೆ. ಬಾಲಿವುಡ್‌ ಸೆಲೆಬ್ರೆಟಿಗಳ ಮೊದಲ ಚಾಯ್ಸ್‌ನಲ್ಲಿವೆ. ಬಾಲಿವುಡ್‌ ತಾರೆಯರೇ ಈ ಟಾಪ್‌ಗಳನ್ನು ಅತಿ ಹೆಚ್ಚಾಗಿ ಧರಿಸುತ್ತಾರೆನ್ನಲಾಗಿದೆ. ಫಿಟ್ಟಿಂಗ್‌ ಇರುವಂತಹ ಟ್ಯೂಬ್‌ ಟಾಪ್‌ಗಳ ಆಯ್ಕೆ ಮಾಡುವುದು ಉತ್ತಮ.

Summer Fashion

ಬ್ಲೌಸ್‌ ಟಾಪ್‌

ನೋಡಲು ಸೀರೆಯ ಗಿಡ್ಡನಾದ ಬ್ಲೌಸ್‌ನಂತೆ ಕಾಣುವ ಇವು ಕೂಡ ಈ ಸೀಸನ್‌ನಲ್ಲಿವೆ. ಸ್ಕರ್ಟ್‌, ಪ್ಯಾಂಟ್‌ಗಳ ಮೇಲೆ ಹುಡುಗಿಯರು ಧರಿಸುವುದನ್ನು ಕಾಣಬಹುದು. ನಾನಾ ಶೈಲಿಯಲ್ಲಿ ಇವು ಲಭ್ಯ. ಬೇಕಿದ್ದಲ್ಲಿ ಸೀರೆಯೊಂದಿಗೂ ಇವನ್ನು ಮಿಕ್ಸ್‌ ಮ್ಯಾಚ್‌ ಮಾಡಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡಬಹುದು.

ಕ್ಯಾಮಿಸೋಲ್‌ ಟಾಪ್‌

ಇವು ಕೂಡ ಅತಿ ಹೆಚ್ಚು ಚಾಲ್ತಿಯಲ್ಲಿರುವ ಸಮ್ಮರ್‌ ಟಾಪ್‌ಗಳು. ಇವು ದಶಕಗಳಿಂದಲೇ ಸಮ್ಮರ್‌ ಸೀಸನ್‌ ಟ್ರೆಂಡ್‌ನಲ್ಲಿವೆ. ಯಾವತ್ತೂ ಸೀಸನ್‌ ಫ್ಯಾಷನ್‌ನಿಂದ ಹೊರಗೆ ಬಿದ್ದಿಲ್ಲ! ಮುಂದಿನ ಸೀಸನ್‌ನಲ್ಲಿ ಇವುಗಳ ಮೇಲೆ ಜಾಕೆಟ್‌ ಧರಿಸಿ ಲೇಯರ್‌ ಲುಕ್‌ ನೀಡಬಹುದು.

Summer Fashion

ಆಫ್‌ ಶೋಲ್ಡರ್‌ ಕ್ರಾಪ್‌ ಟಾಪ್‌

ಟೀ ಶರ್ಟ್‌ನಂತೆ ಉದ್ದವಾಗಿದ್ದ ಆಫ್‌ ಶೋಲ್ಡರ್‌ ಟಾಪ್‌ಗಳು ಇದೀಗ ಕ್ರಾಪ್‌ ಆಗಿವೆ. ಹೊಟ್ಟೆಯ ಮೇಲೆ ನಿಲ್ಲುತ್ತವೆ. ಭುಜಗಳ ಹತ್ತಿರ ಎಕ್ಸ್‌ಪೋಸ್‌ ಆಗಿರುತ್ತವೆ. ಇವನ್ನು ಪ್ಯಾಂಟ್‌, ಮಿಡಿ, ಸ್ಕರ್ಟ್‌ ಎಲ್ಲವೊಂದಿಗೂ ಧರಿಸಬಹುದು.

Summer Fashion

ಸ್ಟ್ರಾಪ್‌ ಟಾಪ್‌

ನಾನಾ ಶೇಡ್‌ನ ಸ್ಟ್ರಾಪ್‌ ಟಾಪ್‌ಗಳು ಈ ಸೀಸನ್‌ನಲ್ಲಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಅವುಗಳಲ್ಲಿ ನೂಡಲ್ಸ್‌ ಸ್ಟ್ರಾಪ್‌, ಸ್ಪೆಗೆಟಿ ಕ್ರಾಪ್‌ ಟಾಪ್‌ಗಳು ಹೆಚ್ಚು ಟೀನೇಜ್‌ ಹುಡುಗಿಯರನ್ನು ಬರ ಸೆಳೆದಿವೆ. ಎಲ್ಲಾ ಬಗೆಯ ಪ್ಯಾಂಟ್‌ ಜೊತೆ ಲಾಂಗ್‌ ಸ್ಕರ್ಟ್‌ ಜೊತೆ ಮ್ಯಾಚ್‌ ಮಾಡಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Saanya Iyer: ಗ್ರ್ಯಾಂಡ್‌ ಲೆಹೆಂಗಾದಲ್ಲಿ ರಾಣಿಯಂತೆ ಕಂಗೊಳಿಸಿದ ನಟಿ ಸಾನ್ಯಾ ಅಯ್ಯರ್‌

Continue Reading
Advertisement
rahul gandhi gary Kasparov
ವೈರಲ್ ನ್ಯೂಸ್5 mins ago

Rahul Gandhi: ರಾಹುಲ್‌ ಗಾಂಧಿಗೆ “ಮೊದಲು ರಾಯ್‌ಬರೇಲಿಯಿಂದ ಗೆಲ್ಲಿ…” ಎಂದ ಚೆಸ್‌ ದಂತಕಥೆ ಗ್ಯಾರಿ ಕಾಸ್ಪರೋವ್!

Lok Sabha Election 2024
Lok Sabha Election 202433 mins ago

Lok Sabha Election 2024: ಚುನಾವಣಾ ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಹೊಡೆದ ಕಾಂಗ್ರೆಸ್‌ ಅಭ್ಯರ್ಥಿ; ವಿಡಿಯೊ ಇಲ್ಲಿದೆ

Viral News
ವೈರಲ್ ನ್ಯೂಸ್40 mins ago

Viral News: ಹೆರಿಗೆಯಾದ ಮೂರು ಗಂಟೆಗಳಲ್ಲೇ ಅಪಾರ್ಟ್‌ಮೆಂಟ್‌ ಮೇಲಿಂದ ಮಗುವನ್ನೇ ಎಸೆದ್ಳಾ?

king dasharatha kaikeyi dhavala dharini column
ಅಂಕಣ1 hour ago

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Weight Loss Tips
ಆರೋಗ್ಯ1 hour ago

Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

saddam hussain pocso case culprit hubli
ಕ್ರೈಂ1 hour ago

Physical Abuse: ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಸದ್ದಾಂ ಹುಸೇನ್‌ ಕಾಲಿಗೆ ಗುಂಡೇಟು

Karnataka Weather Forecast
ಮಳೆ2 hours ago

Karnataka Weather: ಯೆಲ್ಲೋ ಅಲರ್ಟ್‌; ಬೆಂಗಳೂರು ಸೇರಿ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Pakistan PM
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಪಾಕಿಸ್ತಾನ ಮೊದಲು ತನ್ನ ತಟ್ಟೆಯಲ್ಲಿ ಬಿದ್ದಿರುವ ನೊಣ ತೆಗೆಯಲಿ, ಪಾಠ ಕಲಿಯಲಿ

Tips For Healthy Skin
ಆರೋಗ್ಯ2 hours ago

Tips For Healthy Skin: ಕಡಲೆಹಿಟ್ಟೆಂಬ ಶತಮಾನಗಳ ಹಳೆಯ ಸೌಂದರ್ಯವರ್ಧಕ!

Dina Bhavishya
ಭವಿಷ್ಯ3 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ16 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌