ಬೆಳಗಾವಿ: ನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿಗೆ ವಿಫಲ ಯತ್ನ - Vistara News

ಕ್ರೈಂ

ಬೆಳಗಾವಿ: ನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿಗೆ ವಿಫಲ ಯತ್ನ

ಬೈಲಹೊಂಗಲದಲ್ಲಿ ನೆಲೆಸಿರುವ ಕನ್ನಡ ಚಿತ್ರನಟ, ಉದ್ಯಮಿ ಶಿವರಂಜನ್ ಬೋಳಣ್ಣವರ ಮೇಲೆ ಮಂಗಳವಾರ ರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿಯ ವಿಫಲ ಯತ್ನ ನಡೆಸಿದ್ದಾರೆ.

VISTARANEWS.COM


on

shivaranjan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಹಿರಿಯ ಚಿತ್ರನಟ, ಉದ್ಯಮಿ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿಗೆ ವಿಫಲ ಯತ್ನ ನಡೆದಿದೆ. ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸುಮಾರು ೮ ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೂರರಿಂದ ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ.

ಅದೃಷ್ಟವಶಾತ್ ಒಂದೇ ಒಂದು ಗುಂಡು ಕೂಡ ಶಿವರಂಜನ್ ಅವರಿಗೆ ತಗುಲಿಲ್ಲ. ಬೈಲಹೊಂಗಲದ ಹಳೆಯ ಹಣಮಂತ ದೇವರ ದೇವಸ್ಥಾನ ಬಳಿ ಇರುವ ಶಿವರಂಜನ್ ಬೋಳಣ್ಣವರ್ ಮನೆ ಎದುರೇ ಈ ದಾಳಿ ನಡೆಸಲಾಗಿದೆ.

ಶಿವರಂಜನ್ ಸೋದರ ಸಂಬಂಧಿಯೇ ಈ ಗುಂಡಿನ ದಾಳಿ ನಡೆಸಿರಬಹುದೆಂದು ಅನುಮಾನಿಸಲಾಗುತ್ತಿದೆ. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಡಾ.ಸಂಜೀವ ಪಾಟೀಲ್ ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ಕೂಡ ರಚಿಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವರಂಜನ್‌ ʼಅಮೃತಸಿಂಧುʼ, ʼರಾಜಾರಾಣಿʼ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ನಾಯಕ ನಟರಾಗಿದ್ದರು. ಅಮೃತಸಿಂಧು ಚಿತ್ರದ ಮೂಲಕ ಅವರು ದೊಡ್ಡ ಹೆಸರು ಮಾಡಿದ್ದರು. ನಟಿ ಶ್ರುತಿ ಈ ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದರು. 20 ವರ್ಷಗಳ ಹಿಂದೆ ಈ ಚಿತ್ರವನ್ನು ಶಿವರಂಜನ್ ಅವರ ತಂದೆಯೇ ನಿರ್ಮಾಣ ಮಾಡಿದ್ದರು. ಮುಖ್ಯವಾಗಿ ಕನಸೆಂಬ ಕುದುರೆಯನ್ನೇರಿ, ಬಿಸಿ ರಕ್ತ, ವೀರಭದ್ರ, ಆಟ ಹುಡುಗಾಟ ಚಿತ್ರಗಳಲ್ಲಿ ಅವರು ನಟಿಸಿ, ಗಮನ ಸೆಳೆದಿದ್ದರು. ಈಗ ಚಿತ್ರ ರಂಗದಿಂದ ದೂರವಾಗಿದ್ದ ಅವರು, ಕೆಲ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ| ಬಿ.ಕಾಂ. ಓದಿ ಕಾರು ಕಳ್ಳತನಕ್ಕೆ ಇಳಿದ: ಟೆಕ್ನಾಲಜಿಯೇ ಈತನ ಬಂಡವಾಳ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Actor Darshan Arrested: ರೇಣುಕಾಸ್ವಾಮಿಗೆ ದರ್ಶನ್‌ ಗ್ಯಾಂಗ್‌ನಿಂದ ಕ್ರೂರ ಹಿಂಸೆ; ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಭಯಾನಕ ಡಿಟೇಲ್ಸ್‌

Actor Darshan Arrested: ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಪೊಲೀಸರು ತನಿಖಾ ವರದಿ ರಚಿಸಲಿದ್ದಾರೆ. ಆರೋಪಿಗಳ ಬಾಯಿ ಬಿಡಿಸಲಿದ್ದಾರೆ. ಆರೋಪಿಗಳು ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೇಳಬಹುದಾದ ಸುಳ್ಳುಗಳನ್ನು ಆ ಕ್ಷಣದಲ್ಲೇ ತಡೆಯಲಿದ್ದಾರೆ. ಸಾಂದರ್ಭಿಕ ಪ್ರಶ್ನೆಗಳನ್ನು ಹಾಕುವ ಮೂಲಕ ನೈಜ ಉತ್ತರವನ್ನು ಪಡೆಯಲಿದ್ದಾರೆ. ಇವೆಲ್ಲವೂ ತನಿಖೆಯ ಪ್ರಗತಿಗೆ ನೆರವಾಗಲಿದೆ.

VISTARANEWS.COM


on

Actor Darshan Arrested
Koo

ಬೆಂಗಳೂರು: ದರ್ಶನ್ ಮತ್ತು ಆತನ ಗ್ಯಾಂಗ್​ನ(Actor Darshan Arrested ) ಕೈಗೆ ಸಿಕ್ಕಿ ಅಮಾನುಷವಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷೆಯ ವರದಿ ಪ್ರಕಟವಾಗಿದೆ. ವರದಿಯ ಪ್ರಕಾರ ಆರೋಪಿಗಳು ಅತ್ಯಂತ ಹೀನಾಯವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ರೇಣುಕಾ ಸ್ವಾಮಿಯ ದೇಹದ ಸರ್ವ ಅಂಗಗಳ ಮೇಲೂ ಕೊಲೆಗಾರರ ಗ್ಯಾಂಗ್​ ಪ್ರಹಾರ ಮಾಡಿದೆ. ಕೈಗೆ ಸಿಕ್ಕಿದ್ದ ವಸ್ತುಗಳಿಂದೆಲ್ಲ ಹೊಡೆದು ಆಘಾತ ಮಾಡಿದ್ದಾರೆ. ರಕ್ತ ಹೆಪ್ಪುಗಟ್ಟಿಸಿ ಕೊಲೆ ಮಾಡಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಪೊಲೀಸರು ತನಿಖಾ ವರದಿ ರಚಿಸಲಿದ್ದಾರೆ. ಆರೋಪಿಗಳ ಬಾಯಿ ಬಿಡಿಸಲಿದ್ದಾರೆ. ಆರೋಪಿಗಳು ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೇಳಬಹುದಾದ ಸುಳ್ಳುಗಳನ್ನು ಆ ಕ್ಷಣದಲ್ಲೇ ಭೇದಿಸಲಿದ್ದಾರೆ. ಸಾಂದರ್ಭಿಕ ಪ್ರಶ್ನೆಗಳನ್ನು ಹಾಕುವ ಮೂಲಕ ಆರೋಪಿಗಳಿಂದ ನೈಜ ಉತ್ತರವನ್ನು ಕಕ್ಕಿಸಲಿದ್ದಾರೆ. ಇವೆಲ್ಲವೂ ತನಿಖೆಯ ಪ್ರಗತಿಗೆ ನೆರವಾಗಲಿದೆ.

ರೇಣುಕಾಸ್ವಾಮಿ ದೇಹದ ಎಲ್ಲೆಲ್ಲಿ ಗಾಯವಾಗಿತ್ತು?

ಮರಣೋತ್ತರ ಪರಿಕ್ಷೆ ವರದಿಯ ಆಧಾರದಲ್ಲಿ ರೇಣುಕಾ ಸ್ವಾಮಿಯ ಮರ್ಮಾಂಗದ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಇದು ಮನುಷ್ಯನಿಗೆ ಅತೀವವಾದ ನೋವು ತರುವ ಆಘಾತವಾಗಿದೆ. ಕೊಲೆಗಾರರ ಹೊಡೆತಕ್ಕೆ ರೇಣುಕಾ ಅವರ ಮರ್ಮಾಂಗದಲ್ಲಿ ಆಂತರಿಕ ಹಾಗೂ ಬಾಹ್ಯ ರಕ್ತ ಸ್ರಾವ ಉಂಟಾಗಿದೆ.

ರೇಣುಕಾ ಅವರ ಹೊಟ್ಟೆ ಭಾಗದಲ್ಲೂ ರಕ್ತ ಸೋರಿಕೆಯಾಗಿದೆ. ಒಳ ಭಾಗದಲ್ಲೂ ರಕ್ತ ಹೆಪ್ಪುಗಟ್ಟಿದೆ. ಹೊರಗಿನಿಂದ ಅಪ್ಪಳಿಸಿರುವ ಬಾಹ್ಯ ವಸ್ತುಗಳಿಂದ ಈ ಗಾಯಗಳು ಉಂಟಾಗಿವೆ. ಅಂದರೆ ಮರದ ದೊಣ್ಣೆಗಳಿಂದ ಅವರ ಮುಖ, ಮೂತಿ ನೋಡದೆ ಹಲ್ಲೆ ಮಾಡಿರುವುದು ಖಾತರಿಯಾಗಿದೆ.

ರೇಣುಕಾ ಅವರ ತಲೆ ಭಾಗಕ್ಕೆ ಒಳಗಿನಿಂದ ಗಂಭೀರವಾಗಿ ಪೆಟ್ಟು ಬಿದ್ದಿದೆ. ತಲೆ ಭಾಗದಲ್ಲಿ ರಕ್ತ ಸೋರಿಕೆ ಆಗಿಲ್ಲ. ಆದರೆ, ಯಾವುದೋ ವಸ್ತುವಿನಿಂದ ಅಪ್ಪಳಿಸಿರುವ ಆಘಾತ ತಲೆಗೆ ಆಗಿದೆ.

ಇದನ್ನೂ ಓದಿ: Renuka Swamy Murder Case: ಚಿತ್ರದುರ್ಗದಲ್ಲಿ ಮೌನ ಪ್ರತಿಭಟನೆ; ದರ್ಶನ್‌ ಸೇರಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಆಗ್ರಹ

ಕೈ ಮತ್ತು ಕಾಲುಗಳು ಹಾಗೂ ಬೆನ್ನಿನಲ್ಲಿ ಸಿಕ್ಕಾಪಟ್ಟೆ ರಸ್ತ ಸ್ರಾವ ಉಂಟಾಗಿದೆ. ಪದೇ ಪದೇ ಆಗಿರುವ ಪ್ರಹಾರದಿಂದ ಚರ್ಮ ಕಿತ್ತು ಬಂದು ರಕ್ತ ಸ್ರಾವ ಉಂಟಾಗಿದೆ. ರೇಣುಕಾ ಅವರ ಸಾವಿನ ಆರ್ತನಾದವನ್ನೂ ಕೇಳದೆ ಆರೋಪಿಗಳು ಹಲ್ಲೆ ಮಾಡಿರುವುದು ಈ ವರದಿಯಿಂದ ಖಚಿತವಾಗಿದೆ. ಎದೆ ಭಾಗಕ್ಕೂ ಪೆಟ್ಟು ಬಿದ್ದಿದ್ದು ಹೃದಯ ಹಾಗೂ ಶ್ವಾಸಕೋಶಗಳಿರುವ ಪ್ರದೇಶಗಳು ಜರ್ಜರಿತಗೊಂಡಿದೆ.

ಹಲ್ಲೆಗೆ ಬಳಸಿರಬಹುದಾದ ವಸ್ತುಗಳು


ಮರದ ಪೀಸ್​ಗಳಿಂದಲೇ ಹಲ್ಲೆ ಮಾಡಿರುವುದು ಗಾಯದ ಆಳ ಮತ್ತು ತೀವ್ರತೆಯಿಂದ ಗೊತ್ತಾಗಿದೆ. ಚರ್ಮ ಸುಲಿದು ಹೋಗುವ ರೀತಿಯಲ್ಲಿ ಬಾರಿಸಿದ್ದನ್ನು ಗಮನಿಸಿದ್ದರೆ ಚರ್ಮದ ಬೆಲ್ಟ್ ಕೂಡ ಬಳಸಿರಬಹುದು. ಗಂಟೆಗಟ್ಟೆ ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆಸಲಾಗಿದ್ದು ಏಟಿನ ಆಘಾತಕ್ಕೆ ಅವರು ಮೂರ್ಛೆ ತಪ್ಪಿರಬಹುದು. ಅದೇ ರೀತಿ ಅವರ ತಲೆಯನ್ನು ಹಿಡಿದು ಯಾವುದೇ ಗಟ್ಟಿ ವಸ್ತುವಿಗೆ ಅಪ್ಪಳಿಸಿದ ಸೂಚನೆಯೂ ಇದೆ. ದೇಹದಲ್ಲಿ ಒಟ್ಟಾರೆಯಾಗಿ ಕೊಲೆಗಾರರ ಗ್ಯಾಂಗ್​ 15 ಕಡೆ ಗಾಯ ಮಾಡಿದೆ. ಶವವನ್ನು ಎಸೆದು ಹೋದ ಬಳಿಕ ಮುಖ ಹಾಗೂ ದವಡೆಯನ್ನು ನಾಯಿಗಳು ಕಿತ್ತು ಎಳೆದಿರುವುದು ಕೂಡ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ.

ಲಾರಿಗೆ ತಲೆ ಅಪ್ಪಳಿಸಿದ್ದನ್ನು ಒಪ್ಪಿಕೊಂಡ ಕೊಲೆಗಾರರು

ದರ್ಶನ್ ಗ್ಯಾಂಗ್​ನ (Actor Darshan) ಅಮಾನುಷ ಕೃತ್ಯಕ್ಕೆ ಬಲಿಯಾದ ರೇಣುಕಾ ಸ್ವಾಮಿ ಪ್ರಕರಣ ಥೇಟ್‌ ಸಿನಿಮಾ ಮಾದರಿಯಲ್ಲಿಯೇ ನಡೆದಿದೆ. ಪೊಲೀಸರ ಮುಂದೆ ಆರೋಪಿಗಳು ಕೊಲೆ ಮಾಡಿದ್ದು ಹೇಗೆ ಎಂಬುದನ್ನು ವಿವರಸಿದ್ದಾರೆ. ಪೊಲೀಸರು ಸತತ ಪ್ರಶ್ನೆಗಳು ಹಾಗೂ ಕೆಂಗಣ್ಣನ್ನು ಎದುರಿಸಲಾಗದ ಆರೋಪಿಗಳು ಕೊಲೆ ಮಾಡಿರುವ ಪ್ರತಿ ಕ್ಷಣವನ್ನೂ ವಿವರಿಸಿದ್ದಾರೆ.

ಪೊಲೀಸರ ಲಾಠಿ ಏಟು ರುಚಿ ತಿನ್ನುತ್ತಿದ್ದಂತೆ ಆರೋಪಿಗಳು ಹೇಳಿಕೆ ನೀಡಿದ್ದು ಹೀಗೆ. ʻʻಮೊದಲಿಗೆ ದರ್ಶನ್‌ ಅವರು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ದರ್ಶನ್‌ ಅವರು ರೇಣುಕಾ ಸ್ವಾಮಿಯನ್ನು ಜೋರಾಗಿ ತಳ್ಳಿದ್ದರು. ಇದರಿಂದಾಗಿ ಶೆಡ್‌ನಲ್ಲಿದ್ದ ಲಾರಿಗೆ ರೇಣುಕಾಸ್ವಾಮಿ ತಲೆ ತಾಗಿ ಆತ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆಗ ದರ್ಶನ್‌ ಹಾಗೂ ಪವಿತ್ರಾ ಇಬ್ಬರೂ ಅಲ್ಲಿದ್ದರು. ಆ ಬಳಿಕ ದರ್ಶನ್‌ ಮತ್ತು ಪವಿತ್ರಾ ಮನೆಗೆ ಹೋಗಿದ್ದರು. ನಾವು ಮತ್ತೆ ರೇಣುಕಾ ಸ್ವಾಮಿಗೆ ಹೊಡೆದೆವು. ರೇಣುಕಾ ಸ್ವಾಮಿ ಕಾಲು ಹಿಡಿದು ಕಾಂಪೌಂಡ್‌ಗೆ ಬಡಿದೆವು. ಆಗ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟರು. ತಕ್ಷಣ ನಮ್ಮ ದರ್ಶನ್‌ ಅವರಿಗೆ ಕರೆ ಮಾಡಿದೆವು. ಬಾಡಿನ ಏನಾದ್ರು ಮಾಡಿ ಮುಚ್ಚಾಕಿ ಅಂದರು. ಭಯದಲ್ಲಿ ಏನ್ಮಾಡಬೇಕು ಅಂತಾ ಗೊತ್ತಾಗದೆ ಮೋರಿಗೆ ಬಿಸಾಕಿ ಮನೆಗೆ ಹೋಗಿದ್ವಿʼʼಎಂದು ಹೇಳಿಕೆ ನೀಡಿದ್ದಾರೆ.

Continue Reading

ಕರ್ನಾಟಕ

Actor Darshan: ದರ್ಶನ್‌ ಹೀರೋ ಅಲ್ಲ ಖಳನಾಯಕ, ಆತನಿಗೆ ಶಿಕ್ಷೆ ಆಗಲೇಬೇಕು: ರೇಣುಕಾ ಸ್ವಾಮಿ ತಂದೆ ಕಿಡಿ

Actor Darshan: ದರ್ಶನ್ ಬರೀ ತೆರೆ ಮೇಲೆ ಮಾತ್ರ ಹೀರೋ ತರ ನಾಟಕವಾಡುತ್ತಾನೆ. ಅವನಿಗೆ ಮಾನವೀಯತೆ ಅನ್ನೋದೇ ಗೊತ್ತಿಲ್ಲ, ಮನಷ್ಯ ಅಲ್ಲ, ಆತ ಪಶು‌ ಎಂದು ರೇಣುಕಾ ಸ್ವಾಮಿ ತಂದೆ ಕಾಶಿನಾಥ ಶಿವನಗೌಡ ಆಕ್ರೋಶ ಹೊರಹಾಕಿದ್ದಾರೆ.

VISTARANEWS.COM


on

Actor Darshan
Koo

ಚಿತ್ರದುರ್ಗ: ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಅವನಿಗೆ ಇಂತಹ ಶಿಕ್ಷೆಯಾ? ಏನು ಮಾಡದ ತಪ್ಪಿಗೆ ನನ್ನ ಮಗ ಬಲಿ ಆದ. ಅವನ ಪಾಡಿಗೆ ಅವನು ಇದ್ದ, ಏನೂ ಮಾಡಿಲ್ಲ. ಯಾವುದೇ ಗಲಾಟೆ ಗೋಜಿಗೆ ಹೋಗಿರಲಿಲ್ಲ. ನಟ ದರ್ಶನ್‌ಗೆ ಶಿಕ್ಷೆ ಆಗಲೇಬೇಕು, ಅವನು ಹೀರೋ ಅಲ್ಲ ಖಳನಾಯಕ. ಬರೀ ತೆರೆ ಮೇಲೆ ಮಾತ್ರ ಹೀರೋ ತರ ನಾಟಕವಾಡುತ್ತಾನೆ. ಅವನಿಗೆ ಮಾನವೀಯತೆ ಅನ್ನೋದೇ ಗೊತ್ತಿಲ್ಲ, ಮನಷ್ಯ ಅಲ್ಲ, ಆತ ಪಶು ಎಂದು ರೇಣುಕಾ ಸ್ವಾಮಿ ತಂದೆ ಕಾಶಿನಾಥ ಶಿವನಗೌಡ ಕಿಡಿಕಾರಿದ್ದಾರೆ.

ನಗರದಲ್ಲಿ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಅವರು, ಏನು ಮಾಡದ ತಪ್ಪಿಗೆ ನನ್ನ ಮಗ ಬಲಿಯಾಗಿದ್ದಾನೆ, ನಟ ದರ್ಶನ್‌ ಸೇರಿ ಇತರ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ನನ್ನ ಮಗ ಹಾಗೂ ಪವಿತ್ರ ಗೌಡ ನಡುವೆ ಚಾಟಿಂಗ್ ನಡೆದಿತ್ತು

ನನ್ನ ಮಗ ಹಾಗೂ ಪವಿತ್ರಾ ಗೌಡ ನಡುವೆ ಚಾಟಿಂಗ್ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ನಿರಂತರ ಚಾಟಿಂಗ್ ಮಾಡುತ್ತಿದ್ದರು ಎಂದು ಮಾಹಿತಿ ಕೊಟ್ಟಿದ್ದಾರೆ ಎಂದು ರೇಣುಕಾ ಸ್ವಾಮಿ ತಾಯಿ ಹೇಳಿದ್ದಾರೆ. ಹಾಗಾದರೆ ಮೊದಲಿನಿಂದಲೂ ಪವಿತ್ರಾ ಹಾಗೂ ರೇಣುಕಾ ಮಧ್ಯೆ ಪರಿಚಯ ಇತ್ತೇ? ಕುಟುಂಬಕ್ಕೆ ಹೇಳದೆ ರೇಣುಕಾ ಸ್ವಾಮಿ ವಿಷಯ ಮುಚ್ಚಿಟ್ಟಿದ್ದರಾ? ಹಾಗಾದರೆ ಇಬ್ಬರ ಮಧ್ಯೆ ಏನು ಚಾಟಿಂಗ್‌ ನಡೆದಿತ್ತು ಎಂಬುವುದು ಕುತೂಹಲ ಮೂಡಿಸಿದ್ದು, ರೇಣುಕಾಸ್ವಾಮಿ ತಾಯಿ ಹೇಳಿಕೆ ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ Renuka Swamy Murder Case: ಚಿತ್ರದುರ್ಗದಲ್ಲಿ ಮೌನ ಪ್ರತಿಭಟನೆ; ದರ್ಶನ್‌ ಸೇರಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಆಗ್ರಹ

ಲಾರಿಗೆ ತಲೆಯನ್ನು ಬಡಿದು ಸಿನಿಮಾ ಶೈಲಿಯಲ್ಲೇ ರೇಣುಕಾ ಸ್ವಾಮಿ ಕೊಲೆ ಮಾಡಿದ್ದ ದರ್ಶನ್ ಗ್ಯಾಂಗ್​!

ಬೆಂಗಳೂರು: ದರ್ಶನ್ ಗ್ಯಾಂಗ್​ನ (Actor Darshan) ಅಮಾನುಷ ಕೃತ್ಯಕ್ಕೆ ಬಲಿಯಾದ ರೇಣುಕಾ ಸ್ವಾಮಿ ಪ್ರಕರಣ ಥೇಟ್‌ ಸಿನಿಮಾ ಮಾದರಿಯಲ್ಲಿಯೇ ನಡೆದಿದೆ. ಪೊಲೀಸರ ಮುಂದೆ ಆರೋಪಿಗಳು ಕೊಲೆ ಮಾಡಿದ್ದು ಹೇಗೆ ಎಂಬುದನ್ನು ವಿವರಸಿದ್ದಾರೆ. ಪೊಲೀಸರು ಸತತ ಪ್ರಶ್ನೆಗಳು ಹಾಗೂ ಕೆಂಗಣ್ಣನ್ನು ಎದುರಿಸಲಾಗದ ಆರೋಪಿಗಳು ಕೊಲೆ ಮಾಡಿರುವ ಪ್ರತಿ ಕ್ಷಣವನ್ನೂ ವಿವರಿಸಿದ್ದಾರೆ.

ಪೊಲೀಸರ ಲಾಠಿ ಏಟು ರುಚಿ ತಿನ್ನುತ್ತಿದ್ದಂತೆ ಆರೋಪಿಗಳು ಹೇಳಿಕೆ ನೀಡಿದ್ದು ಹೀಗೆ. ʻʻಮೊದಲಿಗೆ ದರ್ಶನ್‌ ಅವರು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ದರ್ಶನ್‌ ಅವರು ರೇಣುಕಾ ಸ್ವಾಮಿಯನ್ನು ಜೋರಾಗಿ ತಳ್ಳಿದ್ದರು. ಇದರಿಂದಾಗಿ ಶೆಡ್‌ನಲ್ಲಿದ್ದ ಲಾರಿಗೆ ರೇಣುಕಾಸ್ವಾಮಿ ತಲೆ ತಾಗಿ ಆತ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆಗ ದರ್ಶನ್‌ ಹಾಗೂ ಪವಿತ್ರಾ ಇಬ್ಬರೂ ಅಲ್ಲಿದ್ದರು. ಆ ಬಳಿಕ ದರ್ಶನ್‌ ಮತ್ತು ಪವಿತ್ರಾ ಮನೆಗೆ ಹೋಗಿದ್ದರು. ನಾವು ಮತ್ತೆ ರೇಣುಕಾ ಸ್ವಾಮಿಗೆ ಹೊಡೆದೆವು. ರೇಣುಕಾ ಸ್ವಾಮಿ ಕಾಲು ಹಿಡಿದು ಕಾಂಪೌಂಡ್‌ಗೆ ಬಡಿದೆವು. ಆಗ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟರು. ತಕ್ಷಣ ನಮ್ಮ ದರ್ಶನ್‌ ಅವರಿಗೆ ಕರೆ ಮಾಡಿದೆವು. ಬಾಡಿನ ಏನಾದ್ರು ಮಾಡಿ ಮುಚ್ಚಾಕಿ ಅಂದರು. ಭಯದಲ್ಲಿ ಏನ್ಮಾಡಬೇಕು ಅಂತಾ ಗೊತ್ತಾಗದೆ ಮೋರಿಗೆ ಬಿಸಾಕಿ ಮನೆಗೆ ಹೋಗಿದ್ವಿʼʼಎಂದು ಹೇಳಿಕೆ ನೀಡಿದ್ದಾರೆ.

Continue Reading

ಕರ್ನಾಟಕ

Renuka Swamy Murder Case: ಚಿತ್ರದುರ್ಗದಲ್ಲಿ ಮೌನ ಪ್ರತಿಭಟನೆ; ದರ್ಶನ್‌ ಸೇರಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಆಗ್ರಹ

Renuka Swamy Murder Case: ಚಿತ್ರದುರ್ಗದ ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು. ದರ್ಶನ್‌ ಸೇರಿ ಇತರ 13 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

VISTARANEWS.COM


on

Renukaswamy murder case
Koo

ಚಿತ್ರದುರ್ಗ: ರೇಣುಕಾ ಸ್ವಾಮಿ ಹತ್ಯೆ ಖಂಡಿಸಿ (Renuka Swamy Murder Case) ನಗರದಲ್ಲಿ ಬುಧವಾರ 10ಕ್ಕೂ ಹೆಚ್ಚು ಸಂಘಟನೆಗಳಿಂದ ಮೌನ ಪ್ರತಿಭಟನೆ ನಡೆಸಲಾಯಿತು. ಬಜರಂಗದಳ, ವಿಶ್ವ ಹಿಂದು ಪರಿಷತ್, ಕನ್ನಡಪರ ಸಂಘಟನೆ, ರೈತ ಸಂಘಟನೆಗಳ 200ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ನಟ ದರ್ಶನ್‌ ಸೇರಿ ಇತರ 13 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ನಗರದ ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನಗರಸಭಾ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಪ್ರತಿಭಟನೆಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿದೆ.

ಇದನ್ನೂ ಓದಿ | Actor Darshan : ದರ್ಶನ್‌ ಪರ ವಹಿಸಿ ಸಿಎಂ, ಗೃಹ ಸಚಿವರಿಗೆ ಮನವಿ ಮಾಡಿದ್ರಾ ರಾಜಕೀಯ ನಾಯಕರು?

ಈ ವೇಳೆ ಮಾಜಿ ಶಾಸಕ ಎಸ್.ಬಸವರಾಜನ್ ಮಾತನಾಡಿ, ಈ ಪ್ರಕರಣದಲ್ಲಿ ರಾಜಕಾರಣಿಗಳು ಪ್ರಭಾವ ಬೀರುವ ಸಾಧ್ಯತೆ ಇದೆ. ಸರ್ಕಾರ ಅವರ ಪರವಾಗಿ ಇರಬಹದು ಎನಿಸುತ್ತದೆ. ಕಾಂಗ್ರೆಸ್ ಪರ ದರ್ಶನ್ ಪ್ರಚಾರ ಮಾಡಿದರು, ಅದಕ್ಕಾಗಿ ಸರ್ಕಾರ ಅಥವಾ ರಾಜಕಾರಣಿಗಳು ಅವರ ಪರ ನಿಲ್ಲಬಹುದು. ಅದಕ್ಕಾಗಿ ಈ ಪ್ರಕರಣವನ್ನು ಸಿಬಿಐಗೆ ನೀಡುವುದು ಸೂಕ್ತ ಎಂದು ಹೇಳಿದರು.

ದರ್ಶನ್‌ಗೆ ಇರುವುದು ಅಂಧ ಅಭಿಮಾನಿಗಳು. ಇಂತ ಕೃತ್ಯ ಮಾಡಿದರೂ ಬೆಂಬಲ ಕೊಡುತ್ತಾರೆ ಎಂದರೆ ಏನರ್ಥ? ಅಭಿಮಾನಿಗಳು ನಟನ ತಪ್ಪು ತಿದ್ದಬೇಕು. ತಪ್ಪನ್ನೇ ಸರಿ ಎಂದು ಹುಬ್ಬೇರಿಸಬೇಡಿ. ಅಭಿಮಾನಿಗಳು ಹುಬ್ಬೇರಿಸಿದ್ದಕ್ಕೆ ಹೀಗೆ ಕೊಲೆ ಆಗಿದೆ. ಸೆಲೆಬ್ರಿಟಿ ತಪ್ಪಿಸಿಕೊಳ್ಳಲು ಪೊಲೀಸರು ಬಿಡಬಹುದಿತ್ತು. ಆದರೆ ಪೊಲೀಸರು ಹಾಗೆ ಮಾಡದೆ ಅರೆಸ್ಟ್ ಮಾಡಿದ್ದಾರೆ. ಪ್ರಭಾವಿ ರಾಜಕಾರಣಿಗಳಿಂದ ಪ್ರಕರಣ ದಾರಿ ತಪ್ಪಿಸುವ ಕೆಲಸ ಮಾಡಬಹುದು. ಅದಕ್ಕೆ ಅವಕಾಶ ಕೊಡದೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | Actor Darshan: ಪವಿತ್ರಾಗೆ ಮರ್ಮಾಂಗದ ಫೋಟೊ ಕಳುಹಿಸಿದ್ರಾ ರೇಣುಕಾಸ್ವಾಮಿ? ದರ್ಶನ್​ಗೆ ತಿಳಿದಿದ್ದು ಹೇಗೆ?

ದರ್ಶನ್ ನಿಜ ಜೀವನದಲ್ಲಿ ಹೀರೋ ಅಲ್ಲವೇ ಅಲ್ಲ

ಬಿಜೆಪಿ ಮಾಜಿ ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ನಟ ದರ್ಶನ್ ತೆರೆ ಮೇಲೆ ಸ್ಟಾರ್ ಆಗಿದ್ದಾರೆ, ಆದರೆ ನಿಜ ಜೀವನದಲ್ಲಿ ಅವರು ಹೀರೋ ಅಲ್ಲವೇ ಅಲ್ಲ. ರೇಣುಕಾ ಸ್ವಾಮಿ ತಂದೆ-ತಾಯಿ ಗೋಳು ನೋಡೋಕೆ ಆಗಲ್ಲ. ಈ ಸರ್ಕಾರ ಬಂದಾಗಿನಿಂದ ಇಂತ ಘಟನೆಗಳು ನಡೆಯುತ್ತಿವೆ. A1 ಆಗಿದ್ದ ದರ್ಶನ್‌ನ A2 ಮಾಡಿದ್ದೇಕೆ? ಪ್ರಕರಣದಿಂದ ತಪ್ಪಿಸಲು ಹೀಗೆ ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಮಾತ್ರ ಏನೂ ಆಗಿಲ್ಲ ಎನ್ನೋ ತರ ಮಾತಾಡುತ್ತಾರೆ. ಸರ್ಕಾರ ಇಂತ ಪ್ರಕರಣಗಳನ್ನು ಕೇರ್ ಲೆಸ್ ಮಾಡಬಹುದು. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಆರೋಪಿಗಳು ರಿಲೀಸ್ ಆಗಬಾರದು, ಬಿಡುಗಡೆಯಾದರೆ ನಾವು ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Continue Reading

ಪ್ರಮುಖ ಸುದ್ದಿ

Fraud case: ಡಾಕ್ಟರ್ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ಹೋಗಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ನಟ!

Fraud case: ಆ ಲಿಂಕ್ ಒತ್ತಿ ಇಷ್ಟು ಹಣ ಕಳೆದುಕೊಂಡರು, ಈ ಲಿಂಕ್ ಬ್ಯಾಂಕ್ ಬ್ಯಾಲೆನ್ಸ್ ಪೂರ್ತಿ ಕಳೆದುಕೊಂಡರು ಎಂಬ ಸುದ್ದಿ ದಿನ ಕೇಳುತ್ತೇವೆ. ಆದರೂ ಮತ್ತೆ ಮತ್ತೆ ಮೋಸ ಹೋಗುತ್ತಾ ಇರುತ್ತೇವೆ. ದಾದರ್‌ನಲ್ಲಿ ನಟನೊಬ್ಬ ಫೋನ್‌ನಲ್ಲಿ ವೈದ್ಯರ ಅಪಾಯಿಂಟ್ ಮೆಂಟ್ ತೆಗೆದುಕೊಳ್ಳಲು ಹೋಗಿ ವಂಚಕನಿಂದ ಟೋಪಿ ಹಾಕಿಸಿಕೊಂಡ ಘಟನೆ ನಡೆದಿದೆ.

VISTARANEWS.COM


on

Fraud case
Koo

ಮುಂಬೈ: ಇಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ (Digital) ನಿಂದ ಆಗುತ್ತಿದೆ. ಒಂದು ಪ್ಯಾಕೆಟ್‌ ಬಿಸ್ಕೇಟ್‌ ನಿಂದ ಹಿಡಿದು ಹಾಕುವ ಬಟ್ಟೆವರೆಗೂ ಫೋನ್‌ ಮೂಲಕ ವ್ಯವಹಾರ ನಡೆಸುತ್ತೇವೆ. ಪರ್ಸ್‌ ಮರೆತರೂ ಪರ್ವಾಗಿಲ್ಲ, ಮೊಬೈಲ್‌ ಹಾಗೂ ಆನ್‌ಲೈನ್‌ ಬ್ಯಾಂಕಿಂಗ್‌ನ ಪಾಸವರ್ಡ್‌ ನೆನಪಿದ್ದರೆ ಸಾಕು ಎನ್ನುವವರೇ ಹೆಚ್ಚು. ಜನರು ಎಲ್ಲಾ ವ್ಯವಹಾರಗಳನ್ನು ಆನ್‌ಲೈನ್ ನಲ್ಲಿಯೇ ಮಾಡುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ (Cyber Crime) ಘಟನೆಗಳು ಹೆಚ್ಚಾಗಿ ನಡೆಯುತ್ತಿರುತ್ತದೆ. ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ, ಮೆಸೇಜ್ ಗಳನ್ನು ಕಳುಹಿಸುವ ಮೂಲಕ ಅವರ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಲೂಟಿ ಮಾಡುತ್ತಿದ್ದಾರೆ. ಇದೀಗ ಅಂತಹದೊಂದು ಘಟನೆ ದಾಖಲಾಗಿದೆ. ದಾದರ್‌ನಲ್ಲಿ ನಟನೊಬ್ಬ ಫೋನ್ ನಲ್ಲಿ ವೈದ್ಯರ ಅಪಾಯಿಂಟ್ ಮೆಂಟ್ ತೆಗೆದುಕೊಳ್ಳಲು ಹೋಗಿ ವಂಚಕನಿಂದ (Fraud case) ತನ್ನ ಬ್ಯಾಂಕ್ ಖಾತೆಯಿಂದ 77,000 ರೂ ಕಳೆದುಕೊಂಡಿದ್ದಾನೆ.

ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಆಜಾದ್ (59) ವಂಚನೆಗೆ ಒಳಗಾದ ಸಂತ್ರಸ್ತ. ಈತ ಗೂಗಲ್ ನಲ್ಲಿ ಮೂಳೆ ವೈದ್ಯರ ಫೋನ್ ನಂಬರ್ ಅನ್ನು ಹುಡುಕಿ ಜೂನ್ 6ರಂದು ಅವರಿಗೆ ಕರೆ ಮಾಡಿದ್ದಾನೆ. ಆ ಕಡೆ ಕರೆ ಸ್ವೀಕರಿಸಿದ ವ್ಯಕ್ತಿ ವೈದ್ಯರೊಂದಿಗೆ ಮಾತನಾಡುವ ಮೊದಲು 10 ರೂ ಪಾವತಿಸಿ ನೊಂದಾಯಿಸಿಕೊಳ್ಳಲು ಹೇಳಿದ್ದಾನೆ. ಹಾಗೇ ಆತ ಆಜಾದ್ ಗೆ ಎರಡು ಬಾರಿ ಲಿಂಕ್ ಕಳುಹಿಸಿದನು. ಆದರೆ ಆಜಾದ್ ಆ ಲಿಂಕ್ ಗೆ ಮೊತ್ತವನ್ನು ಕಳುಹಿಸಲು ವಿಫಲನಾದನು. ಆದರೂ ಅವರ ಖಾತೆಯಿಂದ 77,000 ರೂ. ಲೂಟಿಯಾಗಿದೆ.

ಆಜಾದ್‌ಗೆ ಅನುಮಾನ ಬಂದು ತಕ್ಷಣ ತಮ್ಮ ಬ್ಯಾಂಕ್ ಮ್ಯಾನೇಜರ್‌ಗೆ ಎಚ್ಚರಿಕೆ ನೀಡಿದರೂ ಕೂಡ ವಂಚಿತನ ಲಿಂಕ್ ಟ್ಯಾಪ್ ಮಾಡಿದ ನಾಲ್ಕು ದಿನಗಳ ನಂತರ ಅವನ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ. ಬ್ಯಾಂಕ್ ಹಣ ಕಡಿತಗೊಂಡ ಬಗ್ಗೆ ಸೋಮವಾರ ಆಜಾದ್ ಮೊಬೈಲ್‌ಗೆ ನಾಲ್ಕು ಮಸೇಜ್ ಬಂದಿದೆ. ಹಾಗಾಗಿ ಆತ ತಕ್ಷಣ ಸೈಬರ್ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿದರೂ ಕೂಡ ಅವನಿಗೆ ಅವನ ಹಣ ಮರಳಿ ಸಿಗಲಿಲ್ಲ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಆಜಾದ್ ಪ್ರಕರಣ ದಾಖಲಿಸಿದ್ದು, 420(ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: Free Bus Problem: ನಮಗೆ ಫ್ರೀ ಬಸ್‌ ಬೇಡ, ವಿದ್ಯೆ ಬೇಕು! ಈ ವಿದ್ಯಾರ್ಥಿನಿ ಮಾತಿನ ವಿಡಿಯೊ ನೋಡಿ

ಹಾಗಾಗಿ ಜನರು ಆನ್‌ಲೈನ್ ನಲ್ಲಿ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆಯಿಂದಿರಿ. ನಿಮಗೆ ತಿಳಿಯದ ಯಾವುದೇ ಲಿಂಕ್‌ಗಳನ್ನು ಓಪನ್ ಮಾಡಲು ಹೋಗಬೇಡಿ. ಇದರಿಂದ ನೀವು ಸೈಬರ್ ಅಟ್ಯಾಕ್‌ಗಳಿಂದ ತಪ್ಪಿಸಿಕೊಳ್ಳಬಹುದು.

Continue Reading
Advertisement
Kuwait Fire
ವಿದೇಶ4 mins ago

Kuwait Fire: ಕುವೈತ್‌ನಲ್ಲಿ ಭೀಕರ ಅಗ್ನಿ ದುರಂತಕ್ಕೆ 41 ಭಾರತೀಯರ ಬಲಿ; ದಕ್ಷಿಣ ಭಾರತದವರೇ ಹೆಚ್ಚು!

Money Guide
ಮನಿ-ಗೈಡ್12 mins ago

Money Guide: ಪಿಎಫ್‌ ಅಕೌಂಟ್‌ಗೆ ಹೊಸ ಮೊಬೈಲ್‌ ನಂಬರ್‌ ಸೇರಿಸಿಬೇಕೆ? ಜಸ್ಟ್‌ ಹೀಗೆ ಮಾಡಿ ಸಾಕು

Harbhajan Singh
ಕ್ರೀಡೆ23 mins ago

Harbhajan Singh: ಪಾಕ್​ ಆಟಗಾರನಿಗೆ ‘ನಾಲಾಯಕ್’ ಎಂದ ಹರ್ಭಜನ್​ ಸಿಂಗ್

Actor Darshan
ಕರ್ನಾಟಕ51 mins ago

Actor Darshan: ದರ್ಶನ್ ಮೇಲೆ ಮತ್ತೊಂದು ಗಂಭೀರ ಆರೋಪ; ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ, ಬಾಡೂಟ, ಎಣ್ಣೆ ಪಾರ್ಟಿ!

Kiran Bedi announces her biopic by director Kushaal Chawla
ಬಾಲಿವುಡ್59 mins ago

Kiran Bedi: ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಯೋಪಿಕ್ ಅನೌನ್ಸ್‌: ಕುಶಾಲ್ ಚಾವ್ಲಾ ಆ್ಯಕ್ಷನ್‌ ಕಟ್‌!

mayank agarwal
ಕ್ರೀಡೆ1 hour ago

Mayank Agarwal: ಕುಕ್ಕೆಯಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಿದ ಕ್ರಿಕೆಟಿಗ ಮಯಾಂಕ್‌ ಅಗರ್ವಾಲ್‌

Rahul Gandhi
ದೇಶ1 hour ago

Rahul Gandhi: ನನ್ನ ಮೇಲೆ ಮೋದಿಗಿರುವಷ್ಟು ದೇವರ ಕೃಪೆ ಇಲ್ಲ ಎಂದ ರಾಹುಲ್‌ ಗಾಂಧಿ; ಏಕಿಂಥ ಮಾತು?

Narendra Modi
ದೇಶ1 hour ago

Narendra Modi: ಜೂನ್‌ 21ರ ಯೋಗ ದಿನದಂದು ವಿಶೇಷ ಸ್ಥಳದಲ್ಲಿ ಮೋದಿ ಯೋಗ; ಯಾವುದದು?

Kuwait fire
ಪ್ರಮುಖ ಸುದ್ದಿ2 hours ago

Kuwait fire : ಕುವೈತ್ ನಲ್ಲಿ ಅಗ್ನಿ ಅವಘಡ: 5 ಭಾರತೀಯರು ಸೇರಿ 35 ಮಂದಿ ಸಾವು

IND vs USA
ಕ್ರಿಕೆಟ್2 hours ago

IND vs USA: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಯಾರಿಗೆ ಕೊಕ್​?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ24 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌