Anant Nag Birthday: ಸ್ಯಾಂಡಲ್‌ವುಡ್‌ನ ಲೆಜೆಂಡ್‌ ಅನಂತ್ ನಾಗ್‌ಗೆ ಜನುಮದಿನದ ಸಂಭ್ರಮ! - Vistara News

South Cinema

Anant Nag Birthday: ಸ್ಯಾಂಡಲ್‌ವುಡ್‌ನ ಲೆಜೆಂಡ್‌ ಅನಂತ್ ನಾಗ್‌ಗೆ ಜನುಮದಿನದ ಸಂಭ್ರಮ!

Anant Nag Birthday: ಕನ್ನಡ ಸಿನಿಮಾ ರಂಗಕ್ಕೆ ಸೇವೆ ಸಲ್ಲಿಸುತ್ತಿರುವ ಅನಂತ್‌ ನಾಗ್‌ ಅವರಿಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿಗೆದ್ದಾರೆ.

VISTARANEWS.COM


on

Anant Nag
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಳದಿಂಗಳ ಬಾಲೆ, ಗೌರಿ ಗಣೇಶ, ನಾ ನಿನ್ನ ಬಿಡಲಾರೆ, ಬಯಲುದಾರಿ ಸೇರಿದಂತೆ ಸುಮಾರು 300ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅತ್ಯಂತ ಮನೋಜ್ಞವಾಗಿ (anant nag kannada movies list) ಅಭಿನಯಿಸಿರುವ ಹಿರಿಯ ನಟ ಅನಂತ್ ನಾಗ್ ಅವರಿಗೆ ಸೆಪ್ಟೆಂಬರ್‌ 4ರಂದು ಜನುಮದಿನದ ಸಂಭ್ರಮ. ಸ್ಯಾಂಡಲ್‌ವುಡ್‌ನ ಲೆಜೆಂಡ್‌ ಎಂದು ಕರೆಸಿಕೊಳ್ಳುವ ಅನಂತ್‌ ನಾಗ್‌ (Anant Nag Birthday) ಮಾಡದಿರುವ ಪಾತ್ರವಿಲ್ಲ. ಗಂಭೀರ ಪಾತ್ರವೇ ಆಗಲಿ ಅಥವಾ ಕಾಮಿಡಿ ಜಾನರ್‌ ಆಗಿರಲಿ ಅನಂತ್‌ ನಾಗ್‌ ಸಲೀಸಾಗಿ ಮಾಡಿಬಿಡುತ್ತಾರೆ. ಆ್ಯಕ್ಷನ್‌ ಪ್ರಧಾನ ಸಿನಿಮಾಗಳಲ್ಲೂ ಅನಂತ್‌ ನಾಗ್‌ (anant nag upcoming movies) ಮಿಂಚಿದ್ದುಂಟು. ಇಂತಹ ಮಹಾನ್‌ ನಟನ ಜನ್ಮದಿನದಂದು ಗಣ್ಯರು ಶುಭಹಾರೈಸಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಸೇವೆ ಸಲ್ಲಿಸುತ್ತಿರುವ ಅನಂತ್‌ ನಾಗ್‌ ಅವರಿಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿಗೆದ್ದಾರೆ.

ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್‌ನಾಗ್‌

ಅನಂತ್ ನಾಗ್ ಅವರು ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅನೇಕರು ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಹಲವು ಕಡೆಗಳಲ್ಲಿ ಅವರನ್ನು ಕರೆದು ಸನ್ಮಾನಿಸುವ ಕೆಲಸ ಕೂಡ ಆಗುತ್ತಿದೆ. ಅನಂತ್ ನಾಗ್ ಅವರು ಸದ್ಯ ಒಂದೆರಡು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಡೈಲಾಗ್‌ ಕಿಂಗ್..!

ಒಂದೊಂದು ಪೇಜ್‌ ಡೈಲಾಗ್‌ ಇದ್ದರೂ ಸರಳವಾಗಿ, ಸಲೀಸಾಗಿ ಹೇಳಿಬಿಡುತ್ತಿದ್ದರು ಅನಂತ್‌ ನಾಗ್.‌ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ‘ ಇದಕ್ಕೊಂದು ಉದಾಹರಣೆ. ಅದರಲ್ಲೂ 80, 90ರ ದಶಕದಲ್ಲಿ ಅನಂತ್‌ ನಾಗ್‌ ಅವರ ಜತೆಗೆ ಸಿನಿಮಾ ಮಾಡಲು ನಿರ್ದೇಶಕರು ಮುಗಿಬೀಳುತ್ತಿದ್ದರು. ಪೋಷಕ ಪಾತ್ರವೇ ಇರಲಿ, ನಾಯಕನ ಪಾತ್ರವೇ ಆಗಿರಲಿ ಅನಂತ್‌ ನಾಗ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು. ಇನ್ನು ಯಾವುದೇ ಸಿನಿಮಾ ಬಂದರೂ ಕುಟುಂಬ ಸಮೇತ ಕೂತು ನೋಡಲು ಮುಜುಗರ ಇರುತ್ತಿರಲಿಲ್ಲ. ಹೀಗಾಗಿ ಅನಂತ್‌ ನಾಗ್‌ ಅವರ ಸಿನಿಮಾಗಳು ಕನ್ನಡ ನಾಡಿನ ಮನೆಮಾತಾಗಿದ್ದವು.

ಇದನ್ನೂ ಓದಿ: Anant Nag: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್‌ನಾಗ್‌; ಶಿವಣ್ಣ, ರಿಷಬ್‌ ಸ್ಪೆಷಲ್‌ ವಿಶ್‌

ಸಾಲು ಸಾಲು ಹಿಟ್..!

ನಟ ಅನಂತ್‌ ನಾಗ್‌ 5 ದಶಕ ಅಂದರೆ ಬರೊಬ್ಬರಿ ಅರ್ಧ ಶತಮಾನಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸೇವೆ ಸಲ್ಲಿಸಿದ್ದಾರೆ. ಈ ಸೇವೆಯಲ್ಲಿ ಸಾಲುಸಾಲು ಹಿಟ್‌ ಸಿನಿಮಾ ನೀಡಿದ್ದ ಅನಂತ್‌ ನಾಗ್‌ ಯಾವುದೇ ಪಾತ್ರವಾದರೂ ಸೈ ಎನಿಸಿಕೊಳ್ಳುತ್ತಿದ್ದರು. ಗೌರಿ ಗಣೇಶ, ಗಣೇಶನ ಮದುವೆ, ಯಾರಿಗೂ ಹೇಳಬೇಡಿ, ಮನೇಲಿ ಇಲಿ ಬೀದಿಲಿ ಹುಲಿ, ಒಂದು ಸಿನಿಮಾ ಕಥೆ, ಬೆಂಕಿಯ ಬಲೆ, ಅರುಣರಾಗ, ಅನುಪಮಾ, ಮುದುಡಿದ ತಾವರೆ ಅರಳಿತು, ನಾ ನಿನ್ನ ಬಿಡಲಾರೆ ಹೀಗೆ ನಟ ಅನಂತ್‌ ನಾಗ್‌ ಅಭಿನಯಿಸಿರುವ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಹುತೇಕ ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದವು.

ಅನಂತ್‌ ನಾಗ್‌ ಅವರ ಸಹಜ ಅಭಿನಯವನ್ನ ಇಷ್ಟಪಡದ ಪ್ರೇಕ್ಷಕನೇ ಇಲ್ಲ. ಅದರಲ್ಲೂ ಬೇರೆ ಬೇರೆ ಭಾಷೆಯಲ್ಲೂ ಅಭಿಮಾನಿಗಳ ಮನಗೆದ್ದವರು ನಟ ಅನಂತ್‌ ನಾಗ್‌. ಗಣ್ಯರು ನಟ ಅನಂತ್‌ ನಾಗ್‌ ಅವರಿಗೆ ಶುಭ ಕೋರಿದ್ದು, ಇನ್ನೂ ಹಲವು ದಶಕಗಳ ಕಾಲ ಚಂದನವನಕ್ಕೆ ಅನಂತ್‌ ನಾಗ್‌ ಸೇವೆ ಸಲ್ಲಿಸಲಿ ಎಂಬುದೇ ಕೋಟಿ ಕೋಟಿ ಕನ್ನಡಿಗರ ಆಶಯ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಬುದ್ಧಿ ಇರೋರು ವೋಟ್‌ ಹಾಕ್ತಿದ್ದಾರೆ ಎಂದ ಕಿಚ್ಚ! ಉಳಿದ ತಾರೆಗಳು ಹೇಳಿದ್ದೇನು?

Lok Sabha Election 2024: ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವಂತೆ ಪ್ರಕಾಶ್ ರಾಜ್ ಮನವಿ ಮಾಡಿದರು. ಈ ಬಾರಿ ಡಾಲಿ ಧನಂಜಯ್‌ ಅವರು ಹಳ್ಳಿ ಸ್ಟೈಲ್‌ನಲ್ಲಿ ಬಂದು ವೋಟ್‌ ಮಾಡಿದರು. ನಟ ಸುದೀಪ್‌ ಅವರು ಮಗಳ ಜತೆ ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. ದೇಶದ ಮೇಲೆ ಪ್ರೀತಿ ಇರುವವರು ವೋಟ್‌ ಹಾಕುತ್ತಿದ್ದಾರೆ, ಮಿಕ್ಕವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ ಎಂದರು ಸುದೀಪ್‌.

VISTARANEWS.COM


on

Lok Sabha Election 2024 sandalwood celebrities reaction
Koo

ಬೆಂಗಳೂರು:  ಲೋಕಸಭಾ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವಂತೆ ಪ್ರಕಾಶ್ ರಾಜ್ ಮನವಿ ಮಾಡಿದರು. ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕೂಡ ʻನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿʼ ಎಂದು ಮಾಧ್ಯಮದ ಜತೆ ಮಾತನಾಡಿದರು. ಅಶ್ವಿನಿ ಪುನೀತ್, ಡಾಲಿ ಧನಂಜಯ್, ಸಪ್ತಮಿ ಗೌಡ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಸೇರಿ ಅನೇಕ ಸೆಲೆಬ್ರಿಟಿಗಳು ವೋಟ್ ಮಾಡಿದ್ದಾರೆ. 

ನಟ ಸುದೀಪ್‌ ಅವರು ಮಗಳ ಜತೆ ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. ಈ ವೇಳೆ ನಟ ಮಾಧ್ಯಮದ ಜತೆ ಮಾತನಾಡಿ ʻʻತಲೆ ಇರುವವರು, ಬುದ್ಧಿ ಇರುವವರು, ದೇಶದ ಮೇಲೆ ಪ್ರೀತಿ ಇರುವವರು ವೋಟ್‌ ಹಾಕುತ್ತಿದ್ದಾರೆ, ಮಿಕ್ಕವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಯಾರು ವೋಟ್‌ ಹಾಕಲು ಬರುತ್ತ ಇಲ್ಲವೋ ಅವರ ಬಗ್ಗೆ ತುಂಬ ತೆಲೆ ಕೆಡಿಸಿಕೊಳ್ಳುವುದನ್ನು ಬಿಡೋಣʼʼಎಂದರು.

ಇದನ್ನೂ ಓದಿ: Lok Sabha Election 2024: ಹಳ್ಳಿ ಸ್ಟೈಲ್‌ನಲ್ಲಿ ಬಂದು ಮತ ಹಾಕಿದ ಡಾಲಿ! ವೋಟ್ ಮಾಡಿದ ಸೆಲೆಬ್ರಿಟಿಗಳಿವರು!

ನಟ ಉಪೇಂದ್ರ ಮಾತನಾಡಿ ʻʻವೋಟ್‌ ಮಾಡಲು ತುಂಬ ಜನ ಬರುತ್ತ ಇದ್ದಾರೆ. ಎಲ್ಲರಿಗೂ ಮಹತ್ವ ಗೊತ್ತಿದೆ. ಖಂಡತ ಎಲ್ಲರೂ ಬರ್ತಾರೆ. ಯುವಕರು ಬಂದು ವೋಟ್‌ ಮಾಡಿ. ಪ್ರಜೆಗಳು ವಿಚಾರ ಮಾಡಿ ಮತ ಹಾಕಿʼʼಎಂದರು.

ಈ ಬಾರಿ ಡಾಲಿ ಧನಂಜಯ್‌ ಅವರು ಹಳ್ಳಿ ಸ್ಟೈಲ್‌ನಲ್ಲಿ ಬಂದು ವೋಟ್‌ ಮಾಡಿದರು. ಈ ವೇಳೆ ವಿಸ್ತಾರ ಜತೆಗೆ ಮಾತನಾಡಿ ʻʻಮತದಾನ ಪರ್ಸಂಟೇಜ್‌ ಜಾಸ್ತಿ ಆಗಬೇಕು. ನಾವು ಮತ ಚಲಾಯಿಸಬೇಕು. ಯುವಕರಿಗೆ ಹೇಳೋದು ಏನಂದರೆ ಯೋಚನೆ ಮಾಡಿ ಮತ ಹಾಕಿ. ನೋಡೋದು, ಕೇಳೋದು ಯಾವತ್ತೂ ಸತ್ಯ ಇರುವುದಿಲ್ಲ. ನಮ್ಮ ಭವಿಷ್ಯಕ್ಕೆ ಏನು ಬೇಕು ಎಂದು ಅರಿತು ವೋಟ್‌ ಮಾಡಬೇಕು. ನಮ್ಮ ಮತ ಖಂಡಿತ ಒಳ್ಳೆಯ ನಾಯಕರಿಗೆ ಆಗರುತ್ತೆʼʼಎಂದರು.

ಮತದಾನದ ಬಳಿಕ ನಟಿ ತಾರಾ ಮಾತನಾಡಿ ʻಇವತ್ತು ರಾಷ್ಟ್ರ ಕಟ್ಟುವ ಸಮಯ. ಇಲ್ಲಿ ನಮ್ಮ ನೆಚ್ಚಿನ ನಾಯಕನ್ನು ಆರಿಸುವ ಸಮಯ. ವೋಟ್‌ ಮಾಡುವ ಸಂಭ್ರಮ ನೋಡಿ ಖುಷಿ ಆಗುತ್ತದೆ. ತುಂಬ ಯುವಕರು ವೋಟ್‌ ಮಾಡುತ್ತಿದ್ದಾರೆ. ದೇಶದ ಪ್ರಜೆಯಾಗಿ ವೋಟ್‌ ಮಾಡುವುದು ತುಂಬ ಮುಖ್ಯ. ಎಲ್ಲ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮಗಿಂತ ಹೆಚ್ಚಾಗಿ ನೀವು ಮನೆ ಮನೆಗೆ ತಲುಪಿ ಮತದಾನದ ಅರಿವು ಮೂಡಿಸಿದ್ದೀರಿʼʼ ಎಂದರು.

ನಟ ಯಶ್ ಮಾತನಾಡಿ ʻʻಮತ ಹಾಕೋದು ನಮ್ಮೆಲ್ಲರ ಕರ್ತವ್ಯ. ಅದು ನಮ್ಮ ಹಕ್ಕು. ದೇಶಕ್ಕಾಗಿ ಮತ ಚಲಾವಣೆ ಮಾಡಬೇಕು. ನಿಮ್ಮ ನಿರ್ಧಾರಗಳಿಂದ ಕಲಿಯುವುದಕ್ಕೆ ಅವಕಾಶ ಸಿಗಲಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯ ಮುಖ್ಯ. ಸಮಯ ಕಳೆದಂತೆ ಮತದಾನ ಹೆಚ್ಚಾಗಬಹುದು. ಅಭಿವೃದ್ಧಿ ಅನ್ನೋದು ಮುಖ್ಯ. ದೇಶಕ್ಕೆ ಈಗ ಒಳ್ಳೆಯ ಅವಕಾಶ ಇದೆ. ಒಳ್ಳೆಯ ಸಮಯʼʼಎಂದು ಹೇಳಿದರು.

ನಟ ಸೃಜನ್ ಲೋಕೇಶ್ ಮಾತನಾಡಿ ʻʻಮತ ಹಾಕಿರುವುದು ಖುಷಿ ಕೊಟ್ಟಿದೆ. ಒತ್ತಾಯದಿಂದ ಯಾರು ಮತದಾನ ಮಾಡಬಾರದು. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಅದು ನಮ್ಮ ಮೂಲ ಹಕ್ಕುʼʼಎಂದರು.

ಮತದಾನ ಮಾಡಿದ ಬಳಿಕ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮಾತನಾಡಿ ʻʻಮತದಾನ ನಮ್ಮಲ್ಲೆರ ಹಕ್ಕು. ಯೋಚನೆ ಮಾಡಿ ಮತದಾನ ಮಾಡಿ. ದೇಶದ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಮತದಾನ ಮಾಡಿ ಅಂತ ಹೇಳುತ್ತೇನೆ. ಬಂದು ಮತ ಹಾಕಿ ಎಲ್ಲಿಗಾದರೂ ಹೋಗಿ. ಯಾಕೆಂದರೆ ಮತಕ್ಕೆ ತುಂಬಾ ಬೆಲೆ ಇದೆʼʼಎಂದರು.

ನಟಿ ಅಮೂಲ್ಯ ಪತಿ ಜಗದೀಶ್ ಮಾತನಾಡಿ ʻʻವೋಟ್ ಮಾಡಿದ್ದೇವೆ,ಇದು ಎಲ್ಲರ ಹಕ್ಕು. ಈ ಬಾರೀ ತುಂಬಾ ಜನ ವೋಟ್ ಮಾಡ್ತಿದ್ದಾರೆ. ಹೆಚ್ಚು ಜನರು ವೋಟಿಂಗ್‌ಗೆ ಬಂದಿರೋದು ಖುಷಿಯಾಯ್ತು. ಎಲ್ಲರೂ ತಪ್ಪದೇ ಮತದಾನ ಮಾಡಬೇಕುʼʼಎಂದರು.

ಈಗಾಗಲೇ ಡಿಂಪಲ್‌ ಕ್ಷೀನ್‌ ರಚಿತಾ ರಾಮ್‌, ನಿರಂಜನ್‌ ದೇಶಪಾಂಡೆ, ದರ್ಶನ್‌, ವಿಜಯ್‌ ರಾಘವೇಂದ್ರ ಸೇರಿದಂತೆ ಸ್ಟಾರ್ಸ್‌ಗಳು ಮತಚಲಾಯಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Lok Sabha Election 2024: ಹಳ್ಳಿ ಸ್ಟೈಲ್‌ನಲ್ಲಿ ಬಂದು ಮತ ಹಾಕಿದ ಡಾಲಿ! ವೋಟ್ ಮಾಡಿದ ಸೆಲೆಬ್ರಿಟಿಗಳಿವರು!

Lok Sabha Election 2024: : ಲೋಕಸಭಾ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವಂತೆ ಪ್ರಕಾಶ್ ರಾಜ್ ಮನವಿ ಮಾಡಿದರು. ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕೂಡ ʻನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿʼ ಎಂದು ಮಾಧ್ಯಮದ ಜತೆ ಮಾತನಾಡಿದರು.ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಡಾಲಿ ಧನಂಜಯ ಮತದಾನ ಮಾಡಿದರು. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್‌ನಲ್ಲಿ ಬಂದು ಹಕ್ಕು ಚಲಾಯಿಸಿದರು ಧನಂಜಯ್‌.

VISTARANEWS.COM


on

Lok Sabha Election 2024 Kannada Celeb vote Pictures
Koo

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆಗುತ್ತಿದೆ. ಅಶ್ವಿನಿ ಪುನೀತ್, ಡಾಲಿ ಧನಂಜಯ್, ಸಪ್ತಮಿ ಗೌಡ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಸೇರಿ ಅನೇಕ ಸೆಲೆಬ್ರಿಟಿಗಳು ವೋಟ್ ಮಾಡಿದ್ದಾರೆ. ದೊಡ್ಡಬಿದರಕಲ್ಲು ರೆಡ್ಡಿಕಟ್ಟೆ ಸರ್ಕಾರಿ ಶಾಲೆಯಲ್ಲಿ ನಟ ದೊಡ್ಡಣ್ಣ ಹೆಂಡತಿ ಜತೆ ಮತದಾನ ಮಾಡಿದ್ದಾರೆ.

ನಟಿ ಅಮೂಲ್ಯ ಅವರು ಪತಿ ಜತೆ ಮುಂಜಾನೆಯೇ ಮತ ಚಲಾಯಿಸಲು ಆಗಮಿಸಿದ್ದರು.

ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್​ನಲ್ಲಿ ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ಮತದಾನ ಮಾಡಿದರು.

ಡಾ. ರಾಜ್ ಕುಮಾರ್ ಕುಟುಂಬದ Smiling ಮತದಾನ ಮಾಡಿದ್ದಾರೆ.

ಇದನ್ನೂ ಓದಿ: Lok Sabha Election 2024: ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಓಡೋಡಿ ಹೋದ ವರ; ವೋಟ್‌ ಹಾಕಿ ನಿರಾಳ

ನಟ ಕೋಮಲ್‌ ವೋಟ್‌ ಮಾಡಿ ಕ್ಯಾಮೆರಾಗೆ ಪೋಸ್‌ ಕೊಟ್ಟರು.

JP ನಗರದ ಎ.ವಿ.‌ಎಜುಕೇಷನ್ ಸ್ಕೂಲ್‌ನಲ್ಲಿ ಹಿರಿಯ ನಟಿ ತಾರಾ ಮತ್ತು ಅವರ ಪತಿ ಎಚ್ ಸಿ ವೇಣು ಮತದಾನ ಮಾಡಿದರು.

ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಕೂಡ ಮತದಾನ ಮಾಡಿದರು.

ನಟ ಶ್ರೀಮುರಳಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕುಟುಂಬದ ಜತೆ ಬಂದು ಅವರು ಮತ ಚಲಾಯಿಸಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ದಂಪತಿ ವೋಟ್‌ ಮಾಡಿ, ʻನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿʼ ಎಂದು ಜನತೆಗೆ ಮನವಿ ಮಾಡಿದರು.

ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಡಾಲಿ ಧನಂಜಯ ಮತದಾನ ಮಾಡಿದರು. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್‌ನಲ್ಲಿ ಬಂದು ಹಕ್ಕು ಚಲಾಯಿಸಿದರು ಧನಂಜಯ್‌.

ಪ್ರಕಾಶ್‌ ರಾಜ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌ ದಂಪತಿ , ರವಿಶಂಕರ ದಂಪತಿ ಕೂಡ ಮುಂಜಾನೆಯೇ ಮತ ಚಲಾಯಿಸಿದರು.

ಗಿರಿನಗರದಲ್ಲಿ ಗಾಯಕ ವಾಸುಕಿ ವೈಭವ್‌ ಮತ ಚಲಾಯಿಸಿದರು.

ಚೈತ್ರಾ ಆಚಾರ್‌, ನಮ್ರತಾ ಗೌಡ, ಭಾರತಿ ವಿಷ್ಣುವರ್ಧನ್‌ ಮತದಾನ ಮಾಡಿದರು.

ಜೆಪಿ ನಗರದ ಆಕ್ಸ್ಫರ್ಡ್ ಶಾಲೆಯಲ್ಲಿ ಮಗಳ ಜತೆ ಮತದಾನ ಮಾಡಿದರು ಸುದೀಪ್.

ಆರ್ ಆರ್ ನಗರದ ಮೌಂಟ್ ಕಾರ್ಮಲ್‌ನಲ್ಲಿ ನಟ ದರ್ಶನ್ ಮತದಾನ ಮಾಡಿದರು.

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರು ಉಡುಪಿಯ ಕುಕ್ಕಿಕಟ್ಟೆ ಶಾಲೆಯಲ್ಲಿ ಮತ ಚಲಾಯಿಸಿದರು.

ಪೂಜಾ ಗಾಂಧಿ ಹಾಗೂ ನಟ ಉಪೇಂದ್ರ ಅವರು ವೋಟ್‌ ಮಾಡಿ ಸಂಭ್ರಮಿಸಿದರು.

Continue Reading

ಕಾಲಿವುಡ್

Shruti Haasan: ಎರಡನೇ ಬಾಯ್‌ಫ್ರೆಂಡ್‌ ನಿಂದಲೂ ಕಮಲ್‌ ಹಾಸನ್‌ ಪುತ್ರಿ ಬ್ರೇಕಪ್?

Shruti Haasan: ಮೈಕಲ್ ಕೋರ್ಸೆಲ್ ಅವರಿಂದ ದೂರವಾದ ನಂತರ, ಶ್ರುತಿ ಹಾಸನ್ ಬದುಕಿನಲ್ಲಿ ಬಂದ ವ್ಯಕ್ತಿ ಶಂತನು ಹಜಾರಿಕಾ. ಶಂತನು ಹಜಾರಿಕಾ ಜತೆ ಎರಡು ವರ್ಷಗಳ ಪ್ರೀತಿಯಲ್ಲಿ ಇದ್ದಿದ್ದರು ಶ್ರುತಿ ಹಾಸನ್. ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು. ನಟಿ ಶ್ರುತಿ ಹಾಸನ್ ಆಗಾಗ ಅವಾಂತರಗಳನ್ನು ಮಾಡುತ್ತಲೇ ಸಾಕಷ್ಟು ವಿವಾದಕ್ಕೂ ಗುರಿಯಾಗುತ್ತಲೇ ಇರುತ್ತಾರೆ. ಶ್ರುತಿ ಹಾಸನ್‌ ನಗುವಿನೊಂದಿಗೆ ಶಾಂತನು ಹಜಾರಿಕಾನ ಕಣ್ಣು ಅಷ್ಟೇ ಅಲ್ಲ, ಮತ್ತು ಆತ ಬಿಡುವ ಹೂಸು ಕೂಡ ನನಗೆ ತುಂಬಾ ಇಷ್ಟ ಎಂದಿದ್ದರು.

VISTARANEWS.COM


on

Shruti Haasan and boyfriend santanu hazarika break up
Koo

ಬೆಂಗಳೂರು: ಕಾಲಿವುಡ್‌ ಸೂಪರ್‌ ಸ್ಟಾರ್‌ ಮಲ್‌ ಹಾಸನ್‌ (Kamal Hassan) ಅವರ ಪುತ್ರಿ ನಟಿ ಶ್ರುತಿ ಹಾಸನ್‌ (Shruti Haasan) ಪ್ರಿಯತಮ ಶಂತನು ಹಜಾರಿಕಾ (santanu hazarika) ಜತೆ ಲಿವಿಂಗ್‌ ರಿಲೇಶನ್‌ಶಿಪ್‌ನಲ್ಲಿ ಇರುವುದು ಗೊತ್ತೇ ಇದೆ. ಇದೀಗ ಜೋಡಿ ಬ್ರೇಕಪ್‌ ಮಾಡಿಕೊಂಡಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಪೂರಕ ಎಂಬಂತೆ ನಟಿ ಪ್ರಿಯತಮ ಶಂತನು ಹಜಾರಿಕಾ ಅವರ ಎಲ್ಲ ಫೋಟೊಗಳನ್ನು ಡಿಲಿಟ್‌ ಮಾಡಿದ್ದಾರೆ. ಜತೆಗೆ ಇನ್‌ಸ್ಟಾ ಅನ್‌ಫಾಲೋ ಮಾಡಿದ್ದಾರೆ.

ಮೂಲಗಳ ಪ್ರಕಾರ ನಟಿ ಸ್ವಲ್ಪ ಸಮಯದವರೆಗೆ ಇನ್ಸ್ಟಾಗ್ರಾಮ್ ಖಾತೆಯನ್ನು ಡಿ ಆಕ್ಟಿವೇಟ್‌ ಮಾಡಿದ್ದರು. ಬಳಿಕ ಇನ್‌ಸ್ಟಾದಲ್ಲಿ ಶಂತನು ಹಜಾರಿಕಾ ಜತೆ ಇದ್ದ ಫೋಟೊಗಳನ್ನು ಡಿಲಿಟ್‌ ಮಾಡಿದ್ದಾರೆ. ಜತೆಗೆ ಅನ್‌ಫಾಲೋ ಮಾಡಿದ್ದಾರೆ. ಈಗಾಗಲೇ ಈ ಜೋಡಿ ಒಟ್ಟಿಗೆ ಇಲ್ಲ ಎಂದು ವರದಿಯಾಗಿದೆ. ಈ ಮುಂಚೆ ಒಂದೇ ಮನೆಯಲ್ಲಿ ಇಬ್ಬರೂ ಇದ್ದಿದ್ದರು. ನಟಿ ತನ್ನ ವೈಯಕ್ತಿಕ ಜೀವನದಲ್ಲಿ ನಡೆಯುವ ಘಟನೆಗಳನ್ನು ಅಭಿಮಾನಿಗಳೊಂದಿಗೆ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಬ್ರೇಕಪ್‌ ಬಗ್ಗೆ ನಟಿ ಶೀರ್ಘದಲ್ಲೇ ಅಧಿಕೃತವಾಗಿ ಹೇಳಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಮೈಕಲ್ ಕೋರ್ಸೆಲ್ ಅವರಿಂದ ದೂರವಾದ ನಂತರ, ಶ್ರುತಿ ಹಾಸನ್ ಬದುಕಿನಲ್ಲಿ ಬಂದ ವ್ಯಕ್ತಿ ಶಂತನು ಹಜಾರಿಕಾ. ಶಂತನು ಹಜಾರಿಕಾ ಜತೆ ಎರಡು ವರ್ಷಗಳ ಪ್ರೀತಿಯಲ್ಲಿ ಇದ್ದಿದ್ದರು ಶ್ರುತಿ ಹಾಸನ್. ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಇದನ್ನೂ ಓದಿ: Shruti Haasan: ನಿರ್ದೇಶಕನ ಜತೆ ಸಖತ್‌ ರೊಮ್ಯಾನ್ಸ್‌ ಮಾಡಿದ ಕಮಲ್ ಹಾಸನ್ ಪುತ್ರಿ

ಶ್ರುತಿ ಹಾಸನ್‌ ಮತ್ತು ಶಂತನು ಹಜಾರಿಕಾ ಸುಮಾರು 5 ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದಾರೆ. ಇವರು 2018ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಆಗಾಗ ಶ್ರುತಿ ಹಾಸನ್‌ ಶಂತನು ಹಜಾರಿಕಾ ಜತೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಿದ್ದರು. ಮೊದಲು ಪ್ರಪೋಸ್ ಮಾಡಿದ್ದು ಕೂಡ ಶ್ರುತಿ ಹಾಸನ್‌ ಅಂತೆ.

ನನ್ನ ಬಾಯ್‌ಫ್ರೆಂಡ್‌ನ ಹೂಸು ಕೂಡ ನಂಗಿಷ್ಟ ಎಂದಿದ್ದ ಕಮಲ್‌ ಹಾಸನ್‌ ಪುತ್ರಿ

ನಟಿ ಶ್ರುತಿ ಹಾಸನ್ ಆಗಾಗ ಅವಾಂತರಗಳನ್ನು ಮಾಡುತ್ತಲೇ ಸಾಕಷ್ಟು ವಿವಾದಕ್ಕೂ ಗುರಿಯಾಗುತ್ತಲೇ ಇರುತ್ತಾರೆ. ಶ್ರುತಿ ಹಾಸನ್‌ ನಗುವಿನೊಂದಿಗೆ ಶಾಂತನು ಹಜಾರಿಕಾನ ಕಣ್ಣು ಅಷ್ಟೇ ಅಲ್ಲ, ಮತ್ತು ಆತ ಬಿಡುವ ಹೂಸು ಕೂಡ ನನಗೆ ತುಂಬಾ ಇಷ್ಟ ಎಂದಿದ್ದರು.

ಶ್ರುತಿ ಹಾಸನ್ ಫುಲ್ ಬ್ಯುಸಿ ಶ್ರುತಿ ಹಾಸನ್ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. ನಟಿ ಪ್ರಭಾಸ್ ಅವರ ಸಲಾರ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸಲಾರ್‌ ಸಿನಿಮಾದಲ್ಲಿ ಶ್ರುತಿ ಹಾಸನ್ ‘ಆದ್ಯ’ ಪಾತ್ರ ಮಾಡಿದ್ದರು. ಶ್ರುತಿ ಇತ್ತೀಚೆಗೆ ತೆಲುಗು ಚಿತ್ರ ‘ವಾಲ್ತೇರ್‌ ವೀರಯ್ಯ’ದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ವೀರಸಿಂಹ ರೆಡ್ಡಿ ಮತ್ತು ವಾಲ್ತೇರ್‌ ವೀರಯ್ಯ ಜನವರಿ ತಿಂಗಳಲ್ಲಿ ಒಟ್ಟಿಗೆ ತೆರೆಗೆ ಬಂತು.

ಕಮಲ್ ಹಾಸನ್ (Kamal Haasan) ನಟನೆಯ ‘ವಿಕ್ರಮ್’ ಚಿತ್ರಕ್ಕೆ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದರು. ಕಮಲ್‌ ಹಾಸನ್‌ ಪುತ್ರಿ ಶ್ರುತಿ ಹಾಸನ್‌ ಅವರಿಗೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ ಲೋಕೇಶ್‌ ಕನಕರಾಜ್‌. ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ (RKFI) ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

Continue Reading

ಟಾಲಿವುಡ್

Samantha Ruth Prabhu: ಮದುವೆ ಗೌನ್‌ ಕತ್ತರಿಸಿ ಹೊಸ ಉಡುಪು ತಯಾರಿಸಿದ ಸಮಂತಾ!

Samantha Ruth Prabhu: ಸಮಂತಾ ರುತ್ ಪ್ರಭು ಅವರು ತಮ್ಮ ಮದುವೆಯ ಗೌನ್‌ಗೆ ಹೊಸ ಟಚ್‌ ಕೊಟ್ಟು ಧರಿಸಿದ್ದಾರೆ. ತನ್ನ ಬಿಳಿ ಲೇಸಿ ಮದುವೆಯ ಗೌನ್ ಕತ್ತರಿಸಿ ಹೊಸ ಟಚ್‌ ಕೊಟ್ಟು ಪ್ರಶಸ್ತಿ ಸಮಾರಂಭಕ್ಕಾಗಿ ಧರಿಸಿದ್ದಾರೆ. ಸಮಂತಾ ಅವರ ಆಪ್ತ ಸ್ನೇಹಿತರಾದ ಡಿಸೈನರ್ ಕ್ರೇಶಾ ಬಜಾಜ್ ಅವರು ಈ ಗೌನ್‌ವನ್ನು ಸ್ಟ್ರಾಪ್‌ಲೆಸ್ ಡ್ರೆಸ್ ಆಗಿ ಪರಿವರ್ತಿಸಿದವರು. ಸಮಂತಾ ಅವರ ಮದುವೆಯ ಗೌನ್‌ ಕೂಡ ಇವರೇ ವಿನ್ಯಾಸಗೊಳಿಸಿದ್ದರು.

VISTARANEWS.COM


on

Samantha Ruth Prabhu repurposes her wedding gown
Koo

ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ಸಮಂತಾ (samantha) ಮಾಜಿ ಪತಿ ನಟ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ ಜತೆ ವೆಕೇಶನ್‌ ಮೂಡ್‌ನಲ್ಲಿರುವ ಫೋಟೊ ವೈರಲ್‌ ಆಗಿತ್ತು. ಇದೀಗ ಸಮಂತಾ ಅವರು ತಮ್ಮ ಮದುವೆಯ ಗೌನ್‌ ಹರಿದು ಕಪ್ಪು ಕಾಕ್ಟೈಲ್ ಗೌನ್ ಆಗಿ ( black strapless outfit) ಪರಿವರ್ತಿಸಿ ಧರಿಸಿದ್ದಾರೆ. ಮಾತ್ರವಲ್ಲ ಹೊಸ ಫೋಟೊ ( black cocktail gown ) ಹಂಚಿಕೊಂಡು ‘ಪ್ರೀತಿಯ ಗೌನ್’ ಎಂದು ಕ್ಯಾಪ್ಷನ್‌ ಕೂಡ ಕೊಟ್ಟಿದ್ದಾರೆ. ಈ ಹೊಸ ಗೌನ್‌ವನ್ನು ಪ್ರಶಸ್ತಿ ಸಮಾರಂಭಕ್ಕಾಗಿ ಧರಿಸಿದ್ದಾರೆ.

ಸಮಂತಾ ರುತ್ ಪ್ರಭು ಅವರು ತಮ್ಮ ಮದುವೆಯ ಗೌನ್‌ಗೆ ಹೊಸ ಟಚ್‌ ಕೊಟ್ಟು ಧರಿಸಿದ್ದಾರೆ. ತನ್ನ ಬಿಳಿ ಲೇಸಿ ಮದುವೆಯ ಗೌನ್ ಕತ್ತರಿಸಿ ಹೊಸ ಟಚ್‌ ಕೊಟ್ಟು ಪ್ರಶಸ್ತಿ ಸಮಾರಂಭಕ್ಕಾಗಿ ಧರಿಸಿದ್ದಾರೆ. ಈ ಹೊಸ ಉಡುಪನ್ನು ಧರಿಸಿ ಪೋಸ್‌ ಕೊಟ್ಟಿದ್ದಾರೆ ಸಮಂತಾ. ಇನ್‌ಸ್ಟಾದಲ್ಲಿ ಫೋಟೊಗಳನ್ನು ಹಂಚಿಕೊಂಡು ʻನನ್ನ ಪ್ರೀತಿಯ ಗೌನ್’ ಎಂದು ಸಮಂತಾ ಉಲ್ಲೇಖಿಸಿದ್ದಾರೆ.

ನಾಗ ಚೈತನ್ಯ ಅವರೊಂದಿಗೆ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ (Christian wedding ceremony) ಮದುವೆಯಾಗುವಾಗ ಸಮಂತಾ ಈ ಬಿಳಿ ಗೌನ್ ಧರಿಸಿದ್ದರು. 2017 ರಲ್ಲಿ ಗೋವಾದಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದರು. ನಾಲ್ಕು ವರ್ಷಗಳ ನಂತರ, ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್‌ ಪಡೆದುಕೊಂಡರು. ಇದೀಗ ಅದೇ ಬಿಳಿ ಗೌನ್‌ ಅನ್ನು ಹೊಸ ರೂಪದಲ್ಲಿ ಮರು ಬಳಕೆ ಮಾಡಿದ್ದಾರೆ.

ಇದನ್ನೂ ಓದಿ: Samantha Ruth Prabhu: ಫಾಲೋವರ್ಸ್‌ಗಳನ್ನು ದಾರಿ ತಪ್ಪಿಸಿದ್ರಾ ಸಮಂತಾ? ವೈದ್ಯರಿಂದ ಸಖತ್‌ ಕ್ಲಾಸ್‌!

ಫೋಟೊ ಹಂಚಿಕೊಂಡ ಸಮಂತಾ ʻʻನಾನು ಇಂದು ಧರಿಸಿರುವ ಉಡುಗೆ ನನ್ನ ಪ್ರೀತಿಯ ಗೌನ್ ಆಗಿದೆ. ನನ್ನ ಹಳೆಯ ಬಟ್ಟೆಗಳನ್ನು ಮರುಬಳಕೆ ಮಾಡುವುದು ಮೊದಲಿಂದಲೂ ನನಗಿರುವ ಅಭ್ಯಾಸʼʼಎಂದು ಬರೆದುಕೊಂಡಿದ್ದಾರೆ. ಸಮಂತಾ ಅವರ ಆಪ್ತ ಸ್ನೇಹಿತರಾದ ಡಿಸೈನರ್ ಕ್ರೇಶಾ ಬಜಾಜ್ ಅವರು ಈ ಗೌನ್‌ವನ್ನು ಸ್ಟ್ರಾಪ್‌ಲೆಸ್ ಡ್ರೆಸ್ ಆಗಿ ಪರಿವರ್ತಿಸಿದವರು. ಸಮಂತಾ ಅವರ ಮದುವೆಯ ಗೌನ್‌ ಕೂಡ ಇವರೇ ವಿನ್ಯಾಸಗೊಳಿಸಿದ್ದರು.

ಸಿನಿಮಾ ವಿಚಾರಕ್ಕೆ ಬಂದರೆ, ಸಮಂತಾ ರುತ್ ಪ್ರಭು ‘ಸಿಟಾಡೆಲ್: ಹನಿ ಬನ್ನಿ’ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶನದ ಈ ಸಿರೀಸ್‌ನಲ್ಲಿ ವರುಣ್ ಧವನ್ ಕೂಡ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ನಟಿ ಸಮಂತಾ ಇದೀಗ ನಟನೆಗೆ ವಿರಾಮ ನೀಡಿ ಯೋಗ, ಧ್ಯಾನ, ಕುದುರೆ ಸವಾರಿ ಮತ್ತು ಕಿಕ್ ಬಾಕ್ಸಿಂಗ್ ಕಡೆಗೆ ಗಮನಹರಿಸುತ್ತಿದ್ದಾರೆ.

Continue Reading
Advertisement
Lok Sabha Election 2024 sandalwood celebrities reaction
Lok Sabha Election 20246 mins ago

Lok Sabha Election 2024: ಬುದ್ಧಿ ಇರೋರು ವೋಟ್‌ ಹಾಕ್ತಿದ್ದಾರೆ ಎಂದ ಕಿಚ್ಚ! ಉಳಿದ ತಾರೆಗಳು ಹೇಳಿದ್ದೇನು?

ಕರ್ನಾಟಕ14 mins ago

Lok sabha Election 2024: ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ನೇರವಾಗಿ ಮತಗಟ್ಟೆಗೆ ಬಂದ ನಾರಾಯಣ ಮೂರ್ತಿ

Lok Sabha Election 2024: Karnataka records 38.23% voter turnout; highest in Dakshina Kannda
ಕರ್ನಾಟಕ29 mins ago

Lok Sabha Election: ರಾಜ್ಯಾದ್ಯಂತ 1 ಗಂಟೆ ವೇಳೆಗೆ 38.23% ಮತದಾನ; ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?

Lok Sabha Election 2024 Kannada Celeb vote Pictures
ಸ್ಯಾಂಡಲ್ ವುಡ್52 mins ago

Lok Sabha Election 2024: ಹಳ್ಳಿ ಸ್ಟೈಲ್‌ನಲ್ಲಿ ಬಂದು ಮತ ಹಾಕಿದ ಡಾಲಿ! ವೋಟ್ ಮಾಡಿದ ಸೆಲೆಬ್ರಿಟಿಗಳಿವರು!

Lok Sabha Election 2024 DK brothers distribute Rs 505 in Bengaluru Rural constituency HD Kumaraswamy allegations
Lok Sabha Election 202456 mins ago

Lok Sabha Election 2024: ಕನಕಪುರದಲ್ಲಿ 505 ರೂ, ಮಲೆ ಮಹದೇಶ್ವರದ ಲಾಡು, ಗ್ಯಾರಂಟಿ ಕಾರ್ಡ್ ಹಂಚಿಕೆ; ಎಚ್‌ಡಿಕೆ ಗಂಭೀರ ಆರೋಪ

Lok sabha election 2024
Lok Sabha Election 20241 hour ago

Lok Sabha Election 2024: ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಓಡೋಡಿ ಹೋದ ವರ; ವೋಟ್‌ ಹಾಕಿ ನಿರಾಳ

Narendra Modi
ಕರ್ನಾಟಕ1 hour ago

Narendra Modi: ಭ್ರಷ್ಟರ ಬೇಟೆಯಾಡಿದ, ಉಗ್ರರ ಓಡಿಸಿದ; ಮೋದಿಗಾಗಿ ಕನ್ನಡದಲ್ಲಿ ಹಾಡು ಹಾಡಿದ ಅಜ್ಜಿ!

Chocolate industry
ಪರಿಸರ1 hour ago

Chocolate: ಏನಿದು ಮೀಲಿಬಗ್‌ ವೈರಸ್‌? ಚಾಕೊಲೇಟ್ ದರ ಏರಿಕೆಗೂ ಇದಕ್ಕೂ ಏನು ಸಂಬಂಧ?

ವೈರಲ್ ನ್ಯೂಸ್1 hour ago

Viral News: ಸಿಂಗಾಪುರ ಏರ್‌ಲೈನ್ಸ್‌ ಪೈಲಟ್‌ ಅಂತಾ ಹೇಳ್ಕೊಂಡು ಪೋಸ್‌ ಕೊಡ್ತಿದ್ದವ ಲಾಕ್‌!

Lok Sabha Election 2024 Woman casts her vote with the help of oxygen elderly woman dies after casting her vote
Lok Sabha Election 20242 hours ago

Lok Sabha Election 2024: ಆಕ್ಸಿಜನ್‌ ಸಹಾಯದಿಂದ ಮತ ಚಲಾಯಿಸಿದ ಮಹಿಳೆ; ವೋಟು ಹಾಕಿ ಕುಸಿದು ಮೃತಪಟ್ಟ ವೃದ್ಧೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20243 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20243 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ9 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ22 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ22 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌