BBK Season 10 : ಸಂಗೀತಾ ಯು ಆರ್‌ ರಾಂಗ್;‌ ಡಾಮಿನೆನ್ಸ್‌ ಕ್ವೀನ್‌ ಕಿವಿ ಹಿಂಡಿದ ಕಿಚ್ಚ - Vistara News

ಕಿರುತೆರೆ/ಒಟಿಟಿ

BBK Season 10 : ಸಂಗೀತಾ ಯು ಆರ್‌ ರಾಂಗ್;‌ ಡಾಮಿನೆನ್ಸ್‌ ಕ್ವೀನ್‌ ಕಿವಿ ಹಿಂಡಿದ ಕಿಚ್ಚ

BBK Season 10 : ಫ್ಲಿಪ್‌ ಎಂಬ ಪದ ಬಳಸಿ ತನಿಷಾ ಮತ್ತು ಕಾರ್ತಿಕ್‌ ಅವರ ಸ್ನೇಹವನ್ನೇ ಪ್ರಶ್ನೆ ಮಾಡಿದ ಸಂಗೀತಾ ಶೃಂಗೇರಿಗೆ ನಿಮ್ಮ ಸ್ನೇಹ ಎಷ್ಟು ಸಾಚಾ ಎಂದು ಪ್ರಶ್ನೆ ಮಾಡಿದ್ದಾರೆ ಕಿಚ್ಚ ಸುದೀಪ್‌. ಈ ಮೂಲಕ ಡಾಮಿನೆನ್ಸ್‌ ರಾಣಿಯ ಕಿವಿ ಹಿಂಡಿದ್ದಾರೆ.

VISTARANEWS.COM


on

Sangeetha Shringeri and Kiccha Sudeep
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಫ್ಲಿಪ್‌ ಎಂಬ ಪದವನ್ನು ಇಟ್ಟುಕೊಂಡು ಎರಡು ದಿನಗಳ ಕಾಲ ತನಿಷಾ (Tanisha Kuppanda) ಮತ್ತು ಕಾರ್ತಿಕ್‌ (Kartik Mahesh) ಅವರನ್ನು ಕಾಡಿದ, ಇಬ್ಬರೂ ಕಣ್ಣೀರು ಹಾಕುವಂತೆ ಮಾಡಿ ಕೊನೆಗೆ ತಾನು ಮಾತ್ರ ಸೇಫ್‌ ಆಗಿ ಸಂಭ್ರಮಿಸಿದ ಸಂಗೀತಾ ಶೃಂಗೇರಿ (Sangeeta Shringeri) ಅವರಿಗೆ ಕಿಚ್ಚ ಸುದೀಪ್‌ (Kiccha Sudeep) ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನೀವು ಮೂವರೂ ಹೊರಗಡೆ ತುಂಬ ಕೆಟ್ಟದಾಗಿ ಕಾಣಿಸುತ್ತಿದ್ದೀರಿ. ಒಬ್ಬರು ಓವರ್ ಡಾಮಿನೆಂಟ್‌ ಆಗಿ ಕಾಣಿಸುತ್ತಿದ್ದೀರಿ. ಒಬ್ಬರು ತುಂಬಾ ವೀಕ್ ಆಗಿ ಕಾಣಿಸುತ್ತಿದ್ದೀರಿ. ಇನ್ನೊಬ್ಬರು ವಿಧಿನೇ ಇಲ್ಲದೆ, ತಲೆ ಇಲ್ಲದೆ ಆಡ್ತಿರೋರ ಹಾಗೆ ಕಾಣಿಸುತ್ತಿದ್ದೀರಿ. ಹೀಗೆ ಮಾಡಿದರೆ ಡೆಡ್‌ ಎಂಡ್‌ಗೆ ಹೋಗುವುದು ಮೂವರಿಗೂ ಕಷ್ಟ ಆಗುತ್ತದೆ. ಆ ದಿನ ನೀವು ನನ್ನ ಮಾತು ನೆನಪಿಸಿಕೊಳ್ತೀರಿ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

‘ಬಿಗ್ ಬಾಸ್‌ ಕನ್ನಡ ಸೀಸನ್‌ 10’ (BBK Season 10) ಇದರ ಆರನೇ ವಾರದ ʻವಾರದ ಕಥೆ ಕಿಚ್ಚನ ಜತೆʼ ಸಂಚಿಕೆಯಲ್ಲಿ ತುಂಬಾ ಹೊತ್ತು ಸಂಗೀತಾ – ಕಾರ್ತಿಕ್ – ತನಿಷಾ ನಡುವಿನ ಸ್ನೇಹ ಮತ್ತು ವಾದ ವಿವಾದಗಳ ಚರ್ಚೆ ನಡೆಯಿತು. ‘’ಫ್ರೆಂಡ್‌ ಆಗಿ ಅವಕಾಶವಿದ್ದರೂ ನನ್ನನ್ನ ಸೇಫ್‌ ಮಾಡಲಿಲ್ಲ’’ ಎಂದು ಪದೇಪದೆ ಕಾರ್ತಿಕ್ ಮತ್ತು ತನಿಷಾ ಅವರನ್ನು ಚುಚ್ಚಿದ ಸಂಗೀತಾ ಅವರನ್ನು ಕಿಚ್ಚ ಸುದೀಪ್‌ ʻಯೂ ಆರ್‌ ರಾಂಗ್‌ʼ ಅಂತ ನೇರವಾಗಿಯೇ ಹೇಳಿದರು. ಏನೇ ಹೇಳಿದರೂ ಕೇಳದೆ ವಾದವನ್ನೇ ಮುಂದುವರಿಸಿದ ಸಂಗೀತಾ ಅವರಿಗೆ ಕಿಚ್ಚ ಚೆನ್ನಾಗಿಯೇ ಕ್ಲಾಸ್‌ ತೆಗೆದುಕೊಂಡರು. ಫ್ರೆಂಡ್‌ಷಿಪ್‌ ಅಂತ ಹೇಳ್ತಾ ಉಳಿದವರ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಡಾಮಿನೆನ್ಸ್‌ ಮಾಡುವ ನೀವು ಫ್ರೆಂಡ್‌ ಆಗಿ 100% ಕೊಟ್ಟಿದ್ದೀರಾ ಎಂದು ನೇರವಾಗಿಯೇ ಕೇಳಿದರು.

ಕಳೆದ ವಾರದ ಲುಡೋ ಟಾಸ್ಕ್‌ನಲ್ಲಿ ಸಂಗೀತಾ, ಕಾರ್ತಿಕ್‌ ಮತ್ತು ತನಿಷಾ ಒಂದು ಗ್ರೂಪ್‌ ಆಗಿದ್ದರು. ಆಟದ ನಡುವೆ ಈ ಗ್ರೂಪ್‌ಗೆ SWAP ಎನ್ನುವ ಆಪ್ಶನ್‌ ಸಿಕ್ಕಾಗ ಅತಿ ಹೆಚ್ಚು ಸೇಫ್‌ ಆಗಿದ್ದ, HOMEಗೆ ಹೋಗಲು ಕೇವಲ ಎರಡನೇ ನಂಬರ್‌ ಅಗತ್ಯವಿದ್ದ ವರ್ತೂರು ಸಂತೋಷ್‌ ಅವರ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆಗ ಸಂಗೀತಾ ತಾನು ಹೋಗುವುದಾಗಿ ಹೇಳಿದ್ದರು. ತನಿಷಾ ಮತ್ತು ಕಾರ್ತಿಕ್‌ ಯಾವ ಮಾತೂ ಇಲ್ಲದೆ ಒಪ್ಪಿ ಸಂಗೀತಾರನ್ನು ಕಳುಹಿಸಿಕೊಟ್ಟಿದ್ದರು. ವರ್ತೂರು ಬಂದು ತನಿಷಾ ಮತ್ತು ಕಾರ್ತಿಕ್‌ ಜತೆ ಸೇರಿದ್ದರು.

sangeetha Karthik tanisha
sangeetha Karthik tanisha

ಮುಂದಿನ ಹಂತದಲ್ಲಿ ಈ ಗ್ರೂಪ್‌ಗೆ ಒಬ್ಬರನ್ನು ಸೇವ್‌ ಮಾಡುವ ಅವಕಾಶ ಸಿಕ್ಕಾಗ ಕಾರ್ತಿಕ್‌ ಮತ್ತು ತನಿಷಾ ಸಂಗೀತಾ ಅವರ ಹೆಸರು ಎತ್ತಿಕೊಳ್ಳಲು ಮುಂದಾದರಾದರೂ ವರ್ತೂರು ಸಂತೋಷ್‌ ಅವರು ಈ ವಿಚಾರದಲ್ಲಿ ನನ್ನ ಜತೆಗೂ ಚರ್ಚೆ ಮಾಡಿ ಎಂದು ಸೂಚಿಸಿದರು. ಆದರೆ, ಮೂವರ ಚರ್ಚೆಯ ಹಂತದಲ್ಲಿ ಸಂಗೀತಾ ಹೆಸರು ಬರಲಿಲ್ಲ. ಬದಲಾಗಿ ನೀತು ಮತ್ತು ಸಿರಿ ಅವರ ಹೆಸರು ಬಂದು ಸಿರಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆಗ ಸಂಗೀತಾ ʻಫ್ಲಿಪ್‌ʼ ಎಂಬ ಪದವನ್ನು ಬಳಸಿ ಕಾರ್ತಿಕ್‌ ಮತ್ತು ತನಿಷಾ ಅವರನ್ನು ಛೇಡಿಸಿದ್ದರು. ಮುಂದೆಯೂ ಬೆಂಬಿಡದೆ ಕಾಡಿದ್ದರು. ಫ್ರೆಂಡ್‌ ಆಗಿ ನೀವು ನನ್ನನ್ನು ಸೇಫ್‌ ಮಾಡದೆ ಸಿರಿ ಅವರನ್ನು ಆಯ್ಕೆ ಮಾಡುವ ಮೂಲಕ ಬಣ್ಣ ಬದಲಿಸಿದಿರಿ ಎಂದು ಹೇಳಿದ್ದರು. ಕಾರ್ತಿಕ್‌ ಮತ್ತು ತನಿಷಾ ಹೇಗೆ ಹೇಗೆ ವಿವರಿಸಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಇದೆಲ್ಲ ವಿಚಾರಗಳು ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಗೆ ಬಂತು.

ನಿಮಗೂ ಅವಕಾಶ ಸಿಕ್ಕಿತ್ತು, ನೀವ್ಯಾಕೆ ನಿಮ್ಮ ಫ್ರೆಂಡ್ಸ್‌ ಹೆಸರು ತೆಗೆದುಕೊಂಡಿಲ್ಲ!

ಲೂಡೋ ಆಟದ ವೇಳೆ ಸಂತೋಷ್‌ ಅವರ ಜತೆ ಪ್ಲೇಸ್‌ ಸ್ವಾಪ್‌ ಮಾಡುವ ಹಂತದಲ್ಲಿ ನಾನು ಹೋಗ್ತೀನಿ ಅಂತ ಸಂಗೀತಾ ಮುಂದಾಗಿದ್ದನ್ನು ಉಲ್ಲೇಖಿಸಿದ ಸುದೀಪ್‌, ಆ ಜಾಗಕ್ಕೆ ಹೋಗುವ ವಿಚಾರದಲ್ಲಿ ನೀವು ಕಾರ್ತಿಕ್‌ ಮತ್ತು ತನಿಷಾ ಜತೆ ಚರ್ಚೆ ಮಾಡಿದ್ರಾ ಎಂದು ಕೇಳಿದರು. ಆಗ ಸಂಗೀತಾ ʻಅವರೂ ಕೇಳಬಹುದಿತ್ತುʼ ಎಂದರು. ಆಗ ಸುದೀಪ್‌, ವಾರವಿಡೀ ‘ನೀನೂ ಕೇಳಬಹುದಿತ್ತು’ ಅಂತ ನೀವು ತುಂಬಾ ಸಲ ಹೇಳಿದ್ದೀರಿ. ಆದ್ರೆ ನೀವ್ಯಾಕೆ ಕೇಳಲಿಲ್ಲ? ಎಂದು ಪ್ರಶ್ನಿಸಿದರು.

ಆಗ ಸಂಗೀತ- ‘ನೀನು ಹೋಗು’ ಅಂದ್ಮೇಲೆ ನಾನು ಇನ್ನೇನು ಕೇಳಲಿ? ಎಂದು ಪ್ರಶ್ನಿಸಿದರು. ನೀವು ಹೋಗ್ತೀನಿ ಎಂದಾಗ ‘’ಹೋಗಬೇಡ’’ ಅನ್ನೋಕೆ ಅವರಿಗೆ ಮನಸ್ಸಾಗಲಿಲ್ಲ. ಒಬ್ಬ ಫ್ರೆಂಡ್‌ ಹೋಗಲು ಇಷ್ಟಪಟ್ಟರು. ಬಾಕಿ ಇಬ್ಬರು ಅದಕ್ಕೆ ಸ್ಪಂದಿಸಿದರು. ‘’ನಾನೂ ಹೋಗಬೇಕು’’ ಅಂತ ಹೇಳುವ ಮನಸ್ಸು ಇಬ್ಬರಿಗೂ ಇರಲಿಲ್ಲ ಎಂದು ವಿವರಿಸಿದರು.

ಕಾರ್ತಿಕ್‌ ಮತ್ತು ತನಿಷಾ ತಮಗೂ ಅಲ್ಲಿಗೆ ಹೋಗಬೇಕು ಅನ್ನೋ ಮನಸಿತ್ತು. ಆದರೆ, ಸಂಗೀತಾ ಆಸಕ್ತಿ ತೋರಿಸಿದಾಗ ಬೇಡ ಅನ್ನಲಾಗಲಿಲ್ಲ. ಅದಕ್ಕೆ ಬಿಟ್ಟುಕೊಟ್ಟೆವು ಎಂದರು.

ಲುಡೋ ಆಟದಲ್ಲಿ ನಿಮಗೂ ಒಬ್ಬರನ್ನು ಸೇಫ್‌ ಮಾಡುವ ಅವಕಾಶ ಸಿಕ್ಕಿತ್ತು. ಆಗ ನೀವ್ಯಾಕೆ ನಿಮ್ಮ ಫ್ರೆಂಡ್ಸ್ ಹೆಸರು ತೆಗೆದುಕೊಂಡಿಲ್ಲ, ಎಥಿಕ್ಸ್‌ ಹೆಸರಲ್ಲಿ ವರ್ತೂರು ಸಂತೋಷ್‌ ಹೆಸರು ತೆಗೆದುಕೊಂಡಿರಿ. ಆಗ ನಿಮಗೆ ಫ್ರೆಂಡ್‌ಷಿಪ್‌ ಯಾಕೆ ನೆನಪಾಗಲಿಲ್ಲ ಎಂದು ಸುದೀಪ್‌ ನೇರವಾಗಿ ಸಂಗೀತಾ ಅವರನ್ನು ಕೇಳಿದರು.

ಆಗ ಸಂಗೀತಾ, ವರ್ತೂರು ಸಂತೋಷ್ ಅವರ ಮನೆಗೆ ನಾನು ಬಂದಿದ್ದೆ. ಅಲ್ಲಿಗೆ ಬರದೇ ಹೋಗಿದ್ದರೆ ನನಗೆ ಗೆಲ್ಲುವ ಚಾನ್ಸಸ್ ಇರ್ತಿರ್ಲಿಲ್ಲ ಎಂದರು. ಆಗ ಸುದೀಪ್‌, ʻʻಇಲ್ಲ ಸಂಗೀತಾ ಅವರೇ, ಅವರಿಬ್ಬರು ನಿಮ್ಮನ್ನು ಅಲ್ಲಿಗೆ ಕಳುಹಿಸಲಿಲ್ಲ ಅಂದಿದ್ದರೆ ನೀವು ಗೆಲ್ಲೋಕೆ ಸಾಧ್ಯ ಆಗುತ್ತಿರಲಿಲ್ಲʼʼ ಎಂದರು.

ಅದಕ್ಕೆ ಮೊಂಡುವಾದ ಮಾಡಿದ ಸಂಗೀತಾ, ಅಲ್ಲಿ ಪ್ರಾಬಬಿಲಿಟಿ ಆಫ್‌ ವಿನ್ನಿಂಗ್ ⅙ ಇತ್ತು, ಅಲ್ಲಿ ಲಕ್ ಇತ್ತು… ಹೀಗಾಗಿ ಕ್ರೆಡಿಟ್‌ ಅನ್ನು ಕಾರ್ತಿಕ್‌ ಮತ್ತು ತನಿಷಾಗೆ ಕೊಡುವುದಿಲ್ಲ ಎಂದರು.

ಆಗ ಸುದೀಪ್‌- ವರ್ತೂರು ಸಂತೋಷ್ ಅವರ ಜಾಗದಲ್ಲಿ ನೀವೇ ಬರಬೇಕು ಅನ್ನೋದು ವರ್ತೂರು ಸಂತೋಷ್ ಅವರ ಆಯ್ಕೆ ಅಲ್ಲ. ನಿಮ್ಮ ಆಸೆ ಪ್ರಕಾರ.. ಕಾರ್ತಿಕ್, ತನಿಷಾ ಹಿಂದೆ ಮುಂದೆ ನೋಡದೆ ಸ್ಪಂದಿಸಿದರು. ಆಟ ಅಲ್ಲಿ ನೋಡಬೇಕಾದರೆ, ಸೇಫೆಸ್ಟ್ ಇದ್ದದ್ದು ಅದೇ ಮನೆ. ಏನು ಬೇಕಾದರೂ ಆಗಬಹುದಿತ್ತು ಅನ್ನೋದು ಆಮೇಲೆ. ಆದರೆ, ಸರ್‌ಫೇಸ್‌ ಲೆವೆಲ್‌ನಲ್ಲಿ ನಿಮ್ಮ ಪರವಾಗಿ ನಿಂತವರು ಕಾರ್ತಿಕ್, ತನಿಷಾ. ಆಟದ ರೂಲ್ಸ್ ಪ್ರಕಾರ ವರ್ತೂರು ಸಂತೋಷ್ ಶಿಫ್ಟ್ ಆದರು ಅನ್ನೋದು ಬಿಟ್ಟರೆ ದೊಡ್ಡತನದಲ್ಲಿ ಅಲ್ಲ. ಆ ಟ್ವಿಸ್ಟ್ ಬರಲಿಲ್ಲ ಅಂದಿದ್ದರೆ ವರ್ತೂರು ಸಂತೋಷ್ ಅಲ್ಲೇ ಇರುತ್ತಿದ್ದರು ಎಂದು ನೆನಪಿಸಿದರು.

ಇಷ್ಟೆಲ್ಲ ವಾದ ಮಾಡಿ, ಜಗಳವಾಡಿದ ನೀವೇ ಸೇಫ್‌ ಆಗಿ ಕುಳಿತಿದ್ದೀರಿ.. ಎಲ್ಲವನ್ನೂ ಕೇಳಿಸಿಕೊಂಡ ತನಿಷಾ ಮತ್ತು ಕಾರ್ತಿಕ್‌ ನಾಮಿನೇಷನ್‌ ಸೀಟ್‌ ನಲ್ಲಿ ಕುಳಿತಿದ್ದಾರೆ ಎಂದು ನೆನಪಿಸಿದರು ಕಿಚ್ಚ ಸುದೀಪ್‌.

ಸಂಗೀತಾ ಸ್ನೇಹದಲ್ಲಿ 100% ಕೊಟ್ಟಿಲ್ಲ ಎಂದ ಕಾರ್ತಿಕ್‌, ತನಿಷಾ

ಸಂಗೀತಾ ನೀವು ಪದೇಪದೆ ನೀವ್ಯಾಕೇ ಕೇಳಲಿಲ್ಲ, ನೀವು ಕೇಳಬೇಕಿತ್ತು ಅಂತ ಹೇಳುತ್ತಲೇ ಇದ್ರಿ. ಏನೂ ಯೋಚನೆ ಮಾಡದೆ.. ನಿಮ್ಮ ಮಾತನ್ನ ಕೇಳಿದ ತಕ್ಷಣ ಆಕಡೆಗೆ ಕಳುಹಿಸಿಕೊಟ್ರಲ್ಲ. ಅದಾದ್ಮೇಲೂ ಅನ್ನಿಸಿಕೊಂಡ್ರಲ್ಲ. ಅದರ ವಾಲ್ಯೂ ಏನು? ಇದೇನಾ ನಿಮ್ಮ ಫ್ರೆಂಡ್‌ಶಿಪ್‌? ಈ ಫ್ರೆಂಡ್‌ಶಿಪ್‌ನಲ್ಲಿ ನೀವು 100% ಗಿವಿಂಗ್ ಆಗಿದ್ದೀರಾ? ಎಂದು ಕಿಚ್ಚ ಕೇಳಿದರು. ಇಲ್ಲಿವರೆಗೂ ಕೊಟ್ಟಿದ್ದೀನಿ ಅಂತ ಸಂಗೀತಾ ಹೇಳಿದರು. ಆದರೆ, ಕಾರ್ತಿಕ್‌ ಮತ್ತು ತನಿಷಾ ಇಲ್ಲ ಎಂದರು. ʻʻಫ್ರೆಂಡ್‌ಶಿಪ್ ಹಾಳಾಗಬಾರದು ಅಂತ ಸ್ವಲ್ಪ ಜಾಸ್ತಿನೇ ಅಡ್ಜಸ್ಟ್ ಮಾಡಿಕೊಳ್ತಿದ್ದೀವಿ ಅನ್ಸತ್ತೆ ಸರ್.ʼʼ ಎಂದು ತನಿಷಾ ಹೇಳಿದರು.

ಈ ನಡುವೆ ಕಿಚ್ಚ ಅವರು ನಮೃತಾ ಬಳಿ ಕಾರ್ತಿಕ್‌, ಸಂಗೀತಾ, ತನಿಷಾ ಸಂಬಂಧದ ಬಗ್ಗೆ ಕೇಳುತ್ತಾರೆ. ಆಗ ನಮೃತಾ ʻʻಮೂವರ ಮಧ್ಯೆಯೇ ಬೇರೆ ಬೇರೆ ಗ್ರೂಪ್ ಇದೆ ಅನ್ಸುತ್ತೆ. ಅಂದ್ರೆ.. ಕಾರ್ತಿಕ್ – ಸಂಗೀತಾ, ಕಾರ್ತಿಕ್ – ತನಿಷಾ ಅಂತ. ಫ್ರೆಂಡ್‌ಶಿಪ್‌ನಿಂದ ಸಂಗೀತಾ ಬೇರೆ ಏನೋ ಎಕ್ಸ್‌ಪೆಕ್ಟ್ ಮಾಡ್ತಾರೆ. ತನಿಷಾ ಏನೂ ಎಕ್ಸ್‌ಪೆಕ್ಟ್ ಮಾಡ್ತಿಲ್ಲ. ಕಾರ್ತಿಕ್ ಇಬ್ಬರ ಮಧ್ಯೆ ಒಳ್ಳೆಯ ಈಕ್ವೇಷನ್ ಇಟ್ಟುಕೊಂಡಿದ್ದಾರೆ ಅಂತ ಅನ್ಸುತ್ತೆ ಸರ್ʼʼ ಎಂದು ವಾಸ್ತವ ಹೇಳಿದರು.

ತ್ಯಾಗ ಮಾಡೋದೂ ಮುಖ್ಯ ಅಲ್ಲ, ತಾಯಿ ಆಗೋದೂ ಮುಖ್ಯ ಅಲ್ಲ

ಸಂಗೀತಾ ವಿಷಯದಲ್ಲಿ ತಾನು ತುಂಬ ತ್ಯಾಗ ಮಾಡುತ್ತಿದ್ದೇನೆ, ಕಾಂಪ್ರೊಮೈಸ್‌ ಮಾಡಿಕೊಳ್ಳುತ್ತಿದ್ದೇನೆ ಅನಿಸುತ್ತಿದೆ ಎಂದು ಕಾರ್ತಿಕ್‌ ಹೇಳಿದರೆ, ನಾನು ಸಂಗೀತಾಳನ್ನು ಪುಟ್ಟ ಹುಡುಗಿ ಅಂದುಕೊಂಡು ತಾಯಿ ಹಾಗೆ ನೋಡಿಕೊಂಡೆ ಎಂದು ತನಿಷಾ ಹೇಳಿದರು. ಆದರೆ ನಂಬಿಕೆ ಇಲ್ಲ ಅಂತ ಸಂಗೀತಾ ಹೇಳುವಾಗ ಬೇಜಾರಾಯ್ತು ಅಂದರು.

ಆಗ ಸುದೀಪ್‌, ʻʻನಿಮ್ಮ ಫ್ರೆಂಡ್‌ಶಿಪ್‌ನ ನೀವೇನು ಮೇನ್‌ಟೇನ್ ಮಾಡೋಕೆ ಹೋಗ್ತೀರೋ.. ತ್ಯಾಗ ಮಾಡೋಕೆ ಹೋಗ್ತೀರೋ.. ಗೊತ್ತಿಲ್ಲ. ಹೊರಗಡೆ ಅಗ್ಲಿ ಆಗಿ ಕಾಣಬೇಡಿ. ಅಗ್ಲಿ ಹಾಗೇ ಕಾಣಿಸುತ್ತಿದೆ. ನಿಮ್ಮ ನಿಮ್ಮಲ್ಲಿ ನೀವು ಸ್ಟ್ರಾಂಗ್ ಸ್ಪರ್ಧಿಗಳು ಅಂದುಕೊಂಡರೆ, ಅದಕ್ಕೆ ತಕ್ಕ ಹಾಗೆ ಬಾಳಿ ಬದುಕಬೇಕೇ ಹೊರತು ಎಕ್ಸ್‌ಪೆಕ್ಟ್ ಮಾಡೋದು, ತ್ಯಾಗ ಮಾಡೋದು, ತಾಯಿ ಆಗೋದು ಮುಖ್ಯನಾ? ಎಂದು ಕೇಳಿದರು.

ಇದನ್ನೂ ಓದಿ: BBK Season 10: ಆರನೇ ವಾರ ಬಿಗ್‌ ಬಾಸ್‌ ಮನೆಯಿಂದ ಇಶಾನಿ ಔಟ್‌

ಅಂದು ನಡೆದಿದ್ದೇನು? ಕ್ಲಾರಿಟಿ ಕೊಟ್ಟ ಸುದೀಪ್‌

ಲುಡೋ ಆಟದ ವೇಳೆ ಒಬ್ಬರನ್ನು ಸೇವ್‌ ಮಾಡಬೇಕು ಅಂತ ಬಂದಾಗ ಸಂಗೀತಾ ಹೇಗಿದ್ದರೂ ಸೇಫ್ ಆಗ್ತಾಳೆ ಈಗ ಅಂತ ಕಾರ್ತಿಕ್, ತನಿಷಾ ಮಾತನಾಡಿಕೊಂಡರು. ಅದು ವರ್ತೂರು ಸಂತೋಷ್‌ಗೆ ಕೇಳಿಸಲಿಲ್ಲ. ವರ್ತೂರು ಸಂತೋಷ್ ಬಂದ್ಮೇಲೆ ಸಿರಿ ಹೆಸರನ್ನು ತೆಗೆದುಕೊಂಡರು. ದುರದೃಷ್ಟ ಏನಂದರೆ.. ಸಂಗೀತಾ ಅವರೇ.. ತಾವು ಸೇಫ್ ಆದ್ಮೇಲೂ ಇಷ್ಟೆಲ್ಲಾ ಮಾಡಿದ್ದು ಸರಿ ಅಲ್ಲ ಎಂದು ಕಿಚ್ಚ ಸುದೀಪ್‌ ಸ್ಪಷ್ಟವಾಗಿ ಹೇಳಿದರು.

ನೀವು ಮೂರೂ ಜನ ಆಡೋಕೆ ಹೋಗಿದ್ದೀರಾ.. ಅಥವಾ ಸಂಗೀತಾನ ಗೆಲ್ಲಿಸೋಕೆ ನೀವಿಬ್ಬರೂ ಹೋಗಿದ್ದೀರಾ ಅಂತ ಹೊರಗಡೆ ಡೌಟ್‌ ಇದೆ. ಫ್ರೆಂಡ್‌ಶಿಪ್‌ ತಪ್ಪು ಅಂತ ಹೇಳುತ್ತಿಲ್ಲ. ಡೋಂಟ್‌ ಮೇಕ್‌ ಇಟ್‌ ಟಾಕ್ಸಿಕ್. ಹೊರಗಡೆ ನೋಡುತ್ತಿರುವವರಿಗೆ ಟಾಕ್ಸಿಕ್ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು. ಇಷ್ಟಾದರೂ ಮಾತು ಮುಂದುವರಿಸಿದ ಸಂಗೀತಾ ಅವರಿಗೆ ಯೂ ಆರ್‌ ರಾಂಗ್‌ ಅಂತ ಕಿಚ್ಚ ಸ್ಪಷ್ಟವಾಗಿಯೇ ಹೇಳಿದರು. ಹೀಗೇ ಮುಂದುವರಿದರೆ ಮುಂದಿನ ದಾರಿ ಕಷ್ಟ ಆಗುತ್ತದೆ ಎಂದು ಎಚ್ಚರಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶ್ರದ್ಧಾಂಜಲಿ

Anchor Aparna: 6 ತಿಂಗಳು ಎಂದರೂ 2 ವರ್ಷ ಲವಲವಿಕೆಯಿಂದ ಬದುಕಿದ ಜೀವ! ಅಪರ್ಣಾ ಕೊನೆ ದಿನಗಳು ಹೀಗಿದ್ದವು

Anchor Aparna: ಕ್ಯಾನ್ಸರ್‌ ನಡುವೆಯೂ ಅವರು ಹಲವು ʼಮಜಾ ವಿದ್‌ ಸೃಜಾʼ ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಹಾಗೂ ʼಎಡೆಯೂರು ಶ್ರೀ ಸಿದ್ದಲಿಂಗೇಶ್ವರʼ ಮುಂತಾದ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಲವಲವಿಕೆಯಿಂದ ನಟಿಸಿ ಎಲ್ಲರನ್ನೂ ನಗಿಸಿದ್ದರು.

VISTARANEWS.COM


on

anchor aparna vastare
Koo

ಬೆಂಗಳೂರು: ಅಚ್ಚ ಕನ್ನಡದ ಸ್ವಚ್ಛ ಕಂಠದ ನಿರೂಪಕಿ ಅಪರ್ಣಾ ಅವರು ಸುಮಾರು ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ನರಳುತ್ತಿದ್ದರು. ಎರಡು ವರ್ಷ ಹಿಂದೆ ವೈದ್ಯರು ಆಕೆಗೆ ಕ್ಯಾನ್ಸರ್‌ ದೃಢಪಡಿಸಿದಾಗ, ಇನ್ನು ಆರು ತಿಂಗಳು ಬದುಕಬಹುದು ಎಂದಿದ್ದರು ಎಂದು ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ ತಿಳಿಸಿದ್ದಾರೆ.

“ವೈಯಕ್ತಿಕವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅಷ್ಟೇ ಖಾಸಗಿಯಾಗಿ ನಾನು ಅವಳನ್ನು ಬಿಳ್ಕೊಡಲಿಕ್ಕೆ ಇಷ್ಟ ಪಡುತೀನಿ. ಹಾಗಂತ ನನಗೆ ಸೇರುಕ್ಕೆ ಮುಂಚೆನೇ ಹೆಚ್ಚಾಗಿ ಅಪರ್ಣಾ ಕರ್ನಾಟಕಕ್ಕೆ ಸೇರಿದವಳು. ಅಪರ್ಣಾಗೆ ಒಂದು ಆಶಯ ಇತ್ತು. ಸಾವಿನ ಬಳಿಕ ಮಾಧ್ಯಮಗಳ ಮುಂದೆ‌ ಎಲ್ಲವನ್ನು ಹೇಳುವಂತೆ ತಿಳಿಸಿದ್ರು. ಎರಡು ವರ್ಷದ ಹಿಂದೆ ಜುಲೈನಲ್ಲಿ ಶಾಸ್ವಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದ ವೈದ್ಯರು ಆರು ತಿಂಗಳು ಬದಕಬಹುದು ಅಂತ ಹೇಳಿದ್ದರು” ಎಂದು ವಸ್ತಾರೆ ತಿಳಿಸಿದ್ದಾರೆ.

“ಅವಳು ಛಲಗಾತಿ, ನಾನು ಬದುಕ್ತೀನಿ ಅಂತಾ ಇದ್ಲು. ಅಲ್ಲಿಂದ ಜನವರಿವರೆಗೂ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿದ್ಲು. ಫೆಬ್ರವರಿಯಿಂದ‌ ಸೋತಿದ್ಲು. ಒಂದೂವರೆ ವರ್ಷದಿಂದ ಛಲದಿಂದ ಬದುಕಿದ್ಲು. ಅವಳು ಧೀರೆ, ಇಷ್ಟು ದಿನ ಬದುಕಿದ್ದಾಳೆ. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಇಬ್ಬರು ಜಂಟಿಯಾಗಿ ಸೋತಿದೀವಿ. ಬರುವ ಅಕ್ಟೋಬರ್‌ಗೆ ಅವಳಿಗೆ 58 ವರ್ಷ ತುಂಬ್ತಿತ್ತು. ಅವಳ ನಿಜವಾದ ವಯಸ್ಸು ಯಾವತ್ತೂ ತೊರಿಸಲಿಲ್ಲ” ಎಂದು ವಸ್ತಾರೆ ವಿವರಿಸಿದ್ದಾರೆ.

“ಇಂದು ಒಂಬತ್ತೂವರೆ ಗಂಟೆ ಸುಮಾರು ದೇಹ ತನ್ನನ್ನ ತಾನು ಹಿಂಪಡೆದಿದೆ. ದಯವಿಟ್ಟು ನೀವೆಲ್ಲಾ ತಮ್ಮ ತಮ್ಮ ಗೂಡುಗಳಿಗೆ ಹೋಗ್ಬಹುದು. ನಾಳೆ ಬೆಳಗ್ಗೆ 7:30 ಗಂಟೆಗೆ ಕರೆದುಕೊಂಡು ಬರುತ್ತೇನೆ. ಇವತ್ತು ಒಂದು ದಿನಾ ನಾನು ನನ್ನ ಕುಟುಂಬದ ಜೊತೆಗೆ ಇರ್ತೀನಿ” ಎಂದು ಅವರು ನುಡಿದಿದ್ದಾರೆ.

ಈ ಕ್ಯಾನ್ಸರ್‌ ನಡುವೆಯೂ ಅವರು ಹಲವು ʼಮಜಾ ವಿದ್‌ ಸೃಜಾʼ ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಹಾಗೂ ʼಎಡೆಯೂರು ಶ್ರೀ ಸಿದ್ದಲಿಂಗೇಶ್ವರʼ ಮುಂತಾದ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಲವಲವಿಕೆಯಿಂದ ನಟಿಸಿ ಎಲ್ಲರನ್ನೂ ನಗಿಸಿದ್ದರು. ʼನಾವು ಅಪರ್ಣಾ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದೆವುʼ ಎಂದು ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಹೇಳಿದ್ದಾರೆ. ಬೃಹತ್‌ ಸಾರ್ವಜನಿಕ ಕಾರ್ಯಕ್ರಮಗಳ ನಿರೂಪಣೆಗೆ ಅಪರ್ಣಾ ಅವರೇ ಮೊದಲ ಆಯ್ಕೆಯಾಗಿದ್ದರು.

ಮೂರು ದಿನದ ಹಿಂದೆ ಕ್ಯಾನ್ಸರ್‌ ಉಲ್ಬಣಿಸಿ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅಪರ್ಣಾ ನಿನ್ನೆ ಸಂಜೆ 9:45 ಕ್ಕೆ ನಿಧನರಾಗಿದ್ದರು. ಇಂದು ಬನಶಂಕರಿ ಬೆಳಗ್ಗೆ 11:30ರವರೆಗೆ ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ ಬಳಿ ಇರುವ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ವಸ್ತಾರೆ ತಿಳಿಸಿದ್ದಾರೆ.

ಅಂತಿಮ ದರ್ಶನಕ್ಕೆ ಬರುವವರು ಖಾಲಿ ಕೈಯಲ್ಲಿ ಬರಬೇಕು. ಪ್ಲಾಸ್ಟಿಕ್‌ ಹಾಗೂ ಬೊಕೆಗಳನ್ನು ದಯವಿಟ್ಟು ತರಬೇಡಿ. ಅವುಗಳು ಕೆಲವು ಗಂಟೆಗಳ ಬಳಿಕ ಕಸವಾಗುವುದರಿಂದ, ಆ ಮೂಲಕ ಪರಿಸರ ಮಾಲಿನ್ಯ ಮಾಡಲು ನಮಗಿಷ್ಟವಿಲ್ಲ ಎಂದೂ ವಸ್ತಾರೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Anchor Aparna: ನಟನೆ, ನಿರೂಪಣೆ, ಕನ್ನಡ, ಹಾಸ್ಯ; ಅಪರ್ಣಾ ಸಾಗಿದ ಜೀವನದ ಹಾದಿ ಇಲ್ಲಿದೆ

Continue Reading

ಪ್ರಮುಖ ಸುದ್ದಿ

Udho Udho Shri Renuka Yellamma : ಬಾಲ್ಯದಿಂದ ತಾರುಣ್ಯದ ಕಡೆಗೆ ರೇಣುಕಾ-ಯಲ್ಲಮ್ಮ, ಕಾದಿವೆ ಹಲವು ರೋಚಕ ಕತೆಗಳು

Udho Udho Shri Renuka Yellamma: ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿತ್ತು. ರೇಣುಕೆ ಹಾಗು ಯಲ್ಲಮ್ಮನ ಪಾತ್ರಕ್ಕೆ ಜೀವ ತುಂಬಿದ ಮಕ್ಕಳು ಅದ್ಭುತವಾಗಿ ನಟಿಸಿ ಕರುನಾಡಿನ ಮನೆಮಾತಾಗಿದ್ದರು.

VISTARANEWS.COM


on

Udho Udho Shri Renuka Yellamma
Koo

ಬೆಂಗಳೂರು: ಕನ್ನಡ ಕಿರುತೆರೆ ಕ್ಷೇತ್ರದ ಜನಪ್ರಿಯ ವಾಹನಿ ಸ್ಟಾರ್ ಸುವರ್ಣ ತನ್ನ ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” (Udho Udho Shri Renuka Yellamma) ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಯಶಸ್ಸಿನಿಂದ ಸಾಗುತ್ತಿದೆ. ಇದೀಗ “ಸಮಯದ ಕುದುರೆಯನ್ನೇರಿ ಉರುಳಿವೆ ಋತುಗಳು” ಆರಂಭಗೊಂಡಿದ್ದು. ಇನ್ಮುಂದೆ ಹೊಸ ಅಧ್ಯಾಯದೊಂದಿಗೆ ಧಾರಾವಾಹಿಯಲ್ಲಿ ಅನೇಕ ರೋಚಕ ತಿರುವುಗಳು ವೀಕ್ಷಕರಿ ಮನ ಸೆಳೆಯಲಿದೆ.

ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿತ್ತು. ರೇಣುಕೆ ಹಾಗು ಯಲ್ಲಮ್ಮನ ಪಾತ್ರಕ್ಕೆ ಜೀವ ತುಂಬಿದ ಮಕ್ಕಳು ಅದ್ಭುತವಾಗಿ ನಟಿಸಿ ಕರುನಾಡಿನ ಮನೆಮಾತಾಗಿದ್ದರು. ಆದರೆ ಇದೀಗ ಕಥೆಯಲ್ಲಿ ವರ್ಷಗಳುರುಳಿ ರೇಣುಕಾ-ಯಲ್ಲಮ್ಮ ಬಾಲ್ಯದಿಂದ ತಾರುಣ್ಯದ ಕಡೆಗೆ ಕಾಲಿಡುತ್ತಿದ್ದಾರೆ. ಹೀಗಾಗಿ ಕಥೆಯಲ್ಲಿನ ರೋಚಕತೆ ಹೆಚ್ಚಾಗಿದೆ.

ಬಾಲ್ಯದಿಂದಲೂ ಕಷ್ಟಗಳನ್ನೇ ಎದುರಿಸುತ್ತಾ ಬಂದಿರುವ ರೇಣುಕಾ-ಯಲ್ಲಮ್ಮರ ಬಾಳಿನಲ್ಲಿ 10 ವರ್ಷಗಳ ಬಳಿಕ ಏನೆಲ್ಲಾ ಆಗಲಿದೆ ? ದುಷ್ಟರಿಂದ ಇನ್ನೆಷ್ಟು ಕಷ್ಟಗಳನ್ನು ಎದುರಿಸಬೇಕಾಗಬಹುದು? ಇವರಿಬ್ಬರ ಬಾಳಿನಲ್ಲಿ ಪ್ರೀತಿಯ ಹೂವು ಅರಳಲಿದೆಯೇ ? ರೇಣುಕಾ ಹಾಗು ಜಮದಗ್ನಿಯ ವಿವಾಹವು ಯಾವಾಗ ? ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ದೇವಿ ಅಂಶದ ಎರಡು ಶಕ್ತಿಗಳು ಒಂದಾಗಿ ಕಷ್ಟ ಕೋಟಲೆಗಳನ್ನು ಹೇಗೆ ಎದುರಿಸುತ್ತಾರೆ? ಎಂಬುದು ಈ ಧಾರಾವಾಹಿಯ ಮುಂದಿನ ರೋಚಕ ಕಥಾಹಂದರ.

ಇದನ್ನೂ ಓದಿ: Superstar Rajinikanth : ನಟ ರಜನಿಕಾಂತ್​​ಗೆ ವಿಶೇಷ ಗಿಫ್ಟ್​ ಕೊಟ್ಟ ಲುಲು ಮಾಲ್​ನ ಮಾಲೀಕ ಯೂಸುಫ್​​ ಅಲಿ

ಈಗಾಗಲೇ ನೂತನ ಅಧ್ಯಾಯದ ಚಿತ್ರೀಕರಣ ಶುರುವಾಗಿದ್ದು, ರೇಣುಕೆಯಾಗಿ ಮಹತಿ, ಯಲ್ಲಮ್ಮನ ಪಾತ್ರದಲ್ಲಿ ಅನನ್ಯ ಮೈಸೂರ್ ಅಭಿನಯಿಸುತ್ತಿದ್ದಾರೆ. ಅಮೋಘ ವಿನ್ಯಾಸದ ಸೆಟ್‌ ಮತ್ತು ಗ್ರಾಫಿಕ್ಸ್‌ನಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೋಮೋಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಹೊಸ ಸವಾಲುಗಳನ್ನು ಎದುರಿಸಲು, ಹೊಸ ಉತ್ಸಾಹದೊಂದಿಗೆ ಬರ್ತಿದ್ದಾರೆ ರೇಣುಕಾ-ಯಲ್ಲಮ್ಮ.”ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಇದೇ ಸೋಮವಾರದಿಂದ ರಾತ್ರಿ 8.30 ಕ್ಕೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.

Continue Reading

ದೇಶ

Siddharth Kak: ಡಿಡಿಯ ʼಸುರಭಿʼ ಕಾರ್ಯಕ್ರಮ ನೆನಪಿದೆಯಾ? ಪ್ರತಿ ವಾರ ಎಷ್ಟು ಲಕ್ಷ ಪೋಸ್ಟ್‌ ಕಾರ್ಡ್‌ ಬರುತ್ತಿತ್ತು ಗೊತ್ತಾ?

90ರ ದಶಕದ ಜನಪ್ರಿಯ ಟಿವಿ ಶೋ ಸುರಭಿಯು ಒಂದು ವಾರಕ್ಕೆ 14 ಲಕ್ಷ ಪೋಸ್ಟ್‌ ಕಾರ್ಡ್‌ಗಳನ್ನು ಸ್ವೀಕರಿಸಿತ್ತು. ಇದರಿಂದ ಪೋಸ್ಟ್‌ಕಾರ್ಡ್‌ಗಳನ್ನು ಪಡೆಯಲು ಅಂಚೆ ಕಚೇರಿಗೆ ಟೆಂಪೋ ಬಾಡಿಗೆಗೆ ಪಡೆದು ಹೋಗಬೇಕಾಗಿತ್ತು ಎಂದು ಕಾರ್ಯಕ್ರಮದ ನಿರೂಪಕ ಸಿದ್ಧಾರ್ಥ್ ಕಾಕ್ (Siddharth Kak) ನೆನಪಿಸಿಕೊಂಡಿದ್ದಾರೆ.

VISTARANEWS.COM


on

By

Siddharth Kak
Koo

90ರ ದಶಕದಲ್ಲಿ ದೂರದರ್ಶನದಲ್ಲಿ (Doordarshan ) ಪ್ರಸಾರವಾಗುತ್ತಿದ್ದ ಜನಪ್ರಿಯ ಭಾರತೀಯ ಸಾಂಸ್ಕೃತಿಕ ಸರಣಿ ‘ಸುರಭಿ’ಯು (Surabhi) ವೀಕ್ಷಕರಿಂದ 14 ಲಕ್ಷ ಪೋಸ್ಟ್‌ಕಾರ್ಡ್‌ಗಳನ್ನು (post card) ಸ್ವೀಕರಿಸುತ್ತಿತ್ತು. ಇದರಿಂದಾಗಿ ಅದು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ( Limca Book of World Record) ಸೇರಿತ್ತು. ಈ ಕಾರ್ಯಕ್ರಮದ ನಿರೂಪಕ ಸಿದ್ಧಾರ್ಥ್ ಕಾಕ್ (Siddharth Kak) ಅವರು ಈ ಸಂಗತಿಯನ್ನು ಈಗ ನೆನಪಿಸಿಕೊಂಡಿದ್ದಾರೆ.

ಅವರು ಸ್ವೀಕರಿಸುತ್ತಿದ್ದ ಭಾರಿ ಪ್ರಮಾಣದ ಪೋಸ್ಟ್‌ಕಾರ್ಡ್‌ಗಳ ಕಾರಣ ಅಂಚೆ ಇಲಾಖೆಯು ಪೋಸ್ಟ್‌ಕಾರ್ಡ್‌ಗಳ ಬೆಲೆಯನ್ನು ಹೆಚ್ಚಿಸಬೇಕಾಯಿತು. ಮತ್ತು ಸ್ಪರ್ಧೆಗೆ ಪ್ರತ್ಯೇಕ ಪೋಸ್ಟ್‌ಕಾರ್ಡ್‌ಗಳನ್ನು ಪರಿಚಯಿಸಿತು ಎಂದು ಅವರು ತಿಳಿಸಿದರು. ರೇಣುಕಾ ಶಹಾನೆ ಅವರೊಂದಿಗೆ ಕಾಕ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.

ನಮ್ಮ ಸಂಶೋಧನಾ ತಂಡವು ಕೆಮರಾದ ಹಿಂದೆ ಇರಲಿಲ್ಲ, ಅದು ಕೆಮರಾದ ಮುಂದೆ ಇತ್ತು. ದೇಶವು ನಮ್ಮ ಸಂಶೋಧನಾ ತಂಡವಾಗಿತ್ತು. ಏಕೆಂದರೆ ಅವರು ನೀವು ತಿಳಿದುಕೊಳ್ಳಲು ಬಯಸುವ ಎಲ್ಲವನ್ನೂ ಅವರು ನಿಮಗೆ ಹೇಳುತ್ತಿದ್ದರು. ಇಂತಹ ಅದ್ಭುತ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.


ಮೊದಲೆರಡು ತಿಂಗಳುಗಳಲ್ಲಿ ನಾವು ಸುಮಾರು 4ರಿಂದ 5, 10-15, 100ರಿಂದ 200 ಅಕ್ಷರಗಳ ಪತ್ರಗಳನ್ನು ಪಡೆದುಕೊಂಡಿದ್ದೇವು. ನಾಲ್ಕೈದು ತಿಂಗಳ ಅನಂತರ, ನಮಗೆ ಸುಮಾರು ಐದು ಸಾವಿರ ಪತ್ರಗಳು ಬರಲಾರಂಭಿಸಿದವು ಮತ್ತು ಅದು ನಿರ್ವಹಿಸಲಾಗದಂತಾಯಿತು. ಹಾಗಾಗಿ ಪ್ರತಿ ಪತ್ರವನ್ನು ತೆರೆಯುವುದು ಸಮಯ ತೆಗೆದುಕೊಳ್ಳುತ್ತದೆ ಎಂದು ನಾನು ಅದನ್ನು ಹೇಗೆ ಮಾಡಬೇಕೆಂದು ಹೇಳಿದೆ. ನೀವು ಸಾವಿರಾರು ಪತ್ರಗಳನ್ನು ಹೊಂದಿರುವಾಗ, ಎಲ್ಲಾ ಪತ್ರಗಳನ್ನು ಓದಲು ಸುಮಾರು ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತದೆ. ನಾವು ಪ್ರತಿ ವಾರ ನಮ್ಮ ಪ್ರದರ್ಶನವನ್ನು ಹೊಂದಿದ್ದೇವು ಎಂದರೆ ನಮ್ಮ ಸಾಹಸ ಕಲ್ಪಿಸಿಕೊಳ್ಳಿ. ಆದ್ದರಿಂದ ನಾವು ವೀಕ್ಷಕರಿಗೆ ಪೋಸ್ಟ್‌ಕಾರ್ಡ್ ಕಳುಹಿಸಲು ಕೇಳಿಕೊಂಡೆವು ಎಂದವರು ನೆನಪಿಸಿಕೊಂಡರು.

ವಾರದಲ್ಲಿ 14 ಲಕ್ಷ ಪೋಸ್ಟ್ ಕಾರ್ಡ್

ಪೋಸ್ಟ್‌ಕಾರ್ಡ್‌ಗೆ ಆಗ ಸುಮಾರು 15 ಪೈಸೆ ವೆಚ್ಚವಾಗುತ್ತಿತ್ತು. ಇದು ಸಬ್ಸಿಡಿ ಹೊಂದಿದ್ದ ಪೋಸ್ಟ್‌ಕಾರ್ಡ್ ಆಗಿತ್ತು. ಆದರೆ ಇದರ ನೈಜ ಬೆಲೆ ಸುಮಾರು 50 -60 ಪೈಸೆ. ಇದು ಹಳೆಯ ಸಂವಹನ ವಿಧಾನವಾದ್ದರಿಂದ ಸರ್ಕಾರ ಇದರ ದರ ತಗ್ಗಿಸಿತ್ತು. ಜನರು ಅದನ್ನು ಪಿಂಚಣಿಗಾಗಿ ಬರೆಯಲು, ಹಳ್ಳಿಯಿಂದ ಕಳುಹಿಸಲು ಬಳಸಬಹುದಿತ್ತು. ನಾವು ಬಹಳಷ್ಟು ಪೋಸ್ಟ್‌ಕಾರ್ಡ್‌ಗಳನ್ನು ಪಡೆಯಲು ಪ್ರಾರಂಭಿಸಿದೇವು. ನಾವು ಅದನ್ನು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿಸಿದ್ದೇವೆ. ನಾವು ಒಂದು ವಾರದಲ್ಲಿ 1.4 ಮಿಲಿಯನ್ (14 ಲಕ್ಷ) ಪೋಸ್ಟ್‌ಕಾರ್ಡ್‌ಗಳನ್ನು ಸ್ವೀಕರಿಸುತ್ತಿದ್ದೆವು ಎಂದು ಕಾಕ್‌ ತಿಳಿಸಿದರು.

ಸಂಗ್ರಹಕ್ಕೆ ಸ್ಥಳವಿರಲಿಲ್ಲ

ಇಷ್ಟೊಂದು ಸಂಖ್ಯೆಯ ಪೋಸ್ಟ್‌ಕಾರ್ಡ್‌ಗಳನ್ನು ಸಂಗ್ರಹಿಸಲು ನಮ್ಮಲ್ಲಿ ಸ್ಥಳವಿಲ್ಲ ಎಂದು ಅಂಧೇರಿ ಅಂಚೆ ಕಚೇರಿಯಿಂದ ಒಮ್ಮೆ ತನಗೆ ಕರೆ ಬಂದಿತ್ತು ಎಂಬುದನ್ನು ಸಿದ್ಧಾರ್ಥ್ ಕಾಕ್ ನೆನಪಿಸಿಕೊಂಡರು.


ನೂರಾರು ಚೀಲಗಳಲ್ಲಿ ಪೋಸ್ಟ್ ಕಾರ್ಡ್‌ಗಳು

ಅಂಧೇರಿ ಅಂಚೆ ಕಚೇರಿಗೆ ಭಾರಿ ಸಂಖ್ಯೆಯ ಪೋಸ್ಟ್‌ಕಾರ್ಡ್‌ಗಳು ಬರುತ್ತಿವೆ. ಇವುಗಳನ್ನು ನೀವೇ ತೆಗೆದುಕೊಂಡು ಹೋಗಿ ಎಂದು ಅಂಚೆ ಇಲಾಖೆಯವರು ಹೇಳುತ್ತಿದ್ದರು. ಹಾಗಾಗಿ ಅಂಚೆ ಕಾರ್ಡ್‌ಗಳನ್ನು ಪಡೆಯಲು ನಾನು ಟೆಂಪೋವನ್ನು ಬಾಡಿಗೆಗೆ ತೆಗೆದುಕೊಳ್ಳಬೇಕಾಯಿತು. ಟ್ರಕ್ ಅಂಚೆ ಕಚೇರಿಯನ್ನು ತಲುಪಿದಾಗ ನೂರಾರು ಚೀಲಗಳಲ್ಲಿ ಪೋಸ್ಟ್‌ಕಾರ್ಡ್‌ಗಳು ತುಂಬಿದ್ದವು ಎಂಬ ಸಂಗತಿಯನ್ನು ಕಾಕ್‌ ಸ್ಮರಿಸಿಕೊಂಡರು.

ಅಂಚೆ ಇಲಾಖೆಯಿಂದ ದೂರು

ನಮ್ಮ ಕಾರ್ಡ್‌ಗಳಿಂದ ಫಜೀತಿಗೆ ಸಿಲುಕಿದ್ದ ಅಂಚೆ ಇಲಾಖೆ ಸುರಭಿ ಕಾರ್ಯಕ್ರಮದ ವಿರುದ್ಧ ಕೇಂದ್ರ ಸಂವಹನ ಸಚಿವಾಲಯಕ್ಕೆ ದೂರು ನೀಡಿತು. ಆಗ ಸಚಿವಾಲಯವು ಪೋಸ್ಟ್‌ಕಾರ್ಡ್‌ನ ಬೆಲೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸ್ಪರ್ಧೆಯ ಪೋಸ್ಟ್‌ಕಾರ್ಡ್‌ಗಳನ್ನು ಸಹ ರಚಿಸಬೇಕಾಯಿತು ಎಂಬುದನ್ನು ಕಾಕ್ ತಿಳಿಸಿದರು. ಬಳಿಕ ಸ್ಪರ್ಧೆಯ ಪೋಸ್ಟ್‌ಕಾರ್ಡ್‌ನ ಬೆಲೆಯನ್ನು 2 ರೂ.ಗೆ ಹೆಚ್ಚಿಸಲಾಯಿತು. ನಮ್ಮಲ್ಲಿ ಎಲ್ಲಾ ಪೋಸ್ಟ್‌ಕಾರ್ಡ್‌ಗಳನ್ನು ಎಣಿಸುವ ತಂಡವಿತ್ತು. ಪತ್ರಗಳನ್ನು ಇಡಲು ಒಂದು ಪೂರ್ಣ ಕೊಠಡಿ ಇತ್ತು. ಪ್ರತಿ ವಾರ ಅಂಚೆ ಕಾರ್ಡ್‌ಗಳ ಸುರಿಮಳೆಯಾಗುತ್ತಿತ್ತು ಎಂದು ಅವರು ಹೇಳಿದರು.

ಇದನ್ನೂ ಓದಿ: Shah Rukh Khan: ಶಾರುಖ್‌ ಹೊಸ ಸಿನಿಮಾಗಾಗಿ ಕೈ ಜೋಡಿಸಿದ ಅನಿರುದ್ಧ್ ರವಿಚಂದರ್!

11 ವರ್ಷ ಪ್ರಸಾರ

ಸುರಭಿ 1990 ರಿಂದ 2001ರವರೆಗೆ ನಡೆಯಿತು. ಇದು ಆರಂಭದಲ್ಲಿ ದೂರದರ್ಶನದ ದೂರದರ್ಶನದಲ್ಲಿ ಪ್ರಸಾರವಾಯಿತು ಮತ್ತು ಭಾನುವಾರದ ಬೆಳಗ್ಗೆ ಸ್ಲಾಟ್‌ನಲ್ಲಿ ಸ್ಟಾರ್ ಪ್ಲಸ್‌ಗೆ ಸ್ಥಳಾಂತರಗೊಂಡಿತು. ಸುರಭಿಯನ್ನು ಸಿದ್ಧಾರ್ಥ್ ಕಾಕ್ ಅವರ ಮುಂಬಯಿ ಮೂಲದ ನಿರ್ಮಾಣ ಸಂಸ್ಥೆ ಸಿನಿಮಾ ವಿಷನ್ ಇಂಡಿಯಾ ನಿರ್ಮಿಸಿತ್ತು.

Continue Reading

ಸಿನಿಮಾ

Kannada Web Series: ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಬಸ್ ಮೆಕಾನಿಕಲ್; ಸೆಟ್ಟೇರಿತು ‘ಕರ್ನಾಟಕ Love’s ಕೇರಳ’ ವೆಬ್ ಸಿರೀಸ್

Kannada Web Series: ಕನ್ನಡದಲ್ಲಿ ವೆಬ್‌ ಸೀರಿಸ್‌ಗಳು ಕಡಿಮೆ. ಇದೀಗ ಈ ಕೊರತೆಯನ್ನು ನೀಗಿಸಲು ಹೊಸಬರ ತಂಡವೊಂದು ಮುಂದಾಗಿದೆ. ‘ಕರ್ನಾಟಕ Love’s ಕೇರಳ’ ಹೆಸರಿನ ವೆಬ್‌ ಸೀರಿಸ್‌ ಬೆಂಗಳೂರಿನಲ್ಲಿ ಸೆಟ್ಟೇರಿದೆ.

VISTARANEWS.COM


on

kannada web series
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ಈಗ ಹೊಸಬರಿಗೆ ವಿಫುಲ ಅವಕಾಶವಿದೆ. ಹೊಸಬರ ಚಿತ್ರಗಳು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿವೆ. ಇದೀಗ ಮತ್ತೊಂದು ಪ್ರತಿಭಾನ್ವಿತ ಹಾಗೂ ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ‘ಕರ್ನಾಟಕ Love’s ಕೇರಳ’ (Karnataka Loves Kerala) ಎಂಬ ವೆಬ್ ಸಿರೀಸ್ ರೂಪಿಸುತ್ತಿದೆ.‌ ಅದರ ಮೊದಲ ಭಾಗವಾಗಿ ಇತ್ತೀಚೆಷ್ಟೇ ಬೆಂಗಳೂರಿನ ವೆಂಕಟೇಶ್ವರ ದೇಗುಲದಲ್ಲಿ ವೆಬ್‌ ಸೀರಿಸ್‌ (Kannada Web Series)ಗೆ ಮುಹೂರ್ತ ನಡೆಸಲಾಯಿತು. ‘ಕರ್ನಾಟಕ Love’s ಕೇರಳ’ ಸಿರೀಸ್‌ಗೆ ಗರುಡ ರಾಮ್ ಕ್ಲಾಪ್ ಮಾಡಿದ್ದು, ವೀರಕಪುತ್ರ ಶ್ರೀನಿವಾಸ್ ಕ್ಯಾಮೆರಾ ಚಾಲನೆ ನೀಡಿದರು.

‘ಕರ್ನಾಟಕ Love’s ಕೇರಳ’ ವೆಬ್ ಸರಣಿಗೆ ಯುವ ಪ್ರತಿಭೆ ಲೋಕೇಶ್ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನಿರ್ದೇಶನದ ಜತೆಗೆ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಬಸ್ ಮೆಕಾನಿಕಲ್ ಆಗಿರುವ ಲೋಕೇಶ್‌‌ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿಯಿಸಿದ್ದು, ಇದೀಗ ಪೂರ್ಣ ಪ್ರಮಾಣದ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಜ್ಯೋತಿ, ಸಹನಾ ಸಾಥ್ ನೀಡುತ್ತಿದ್ದಾರೆ.

ಎಂ.ಎಂ.ಕೆ. ಬಾಲು ನಿರ್ಮಾಣ‌ ಮಾಡುತ್ತಿರುವ ʼಕರ್ನಾಟಕದ love’s ಕೇರಳʼ ಸಿರೀಸ್‌ಗೆ ಲೋಕೇಶ್ ಅವರದ್ದೇ ಕಥೆ ಚಿತ್ರಕಥೆ. ಟೈಟಲ್ ಹೇಳುವಂತೆ ಇದೊಂದು ಪ್ರೇಮಕಥೆ‌‌ ಒಳಗೊಂಡಿದೆ. ಆನಂದ್ ಇಳಯರಾಜ ಛಾಯಾಗ್ರಹಣ, ಪ್ರವೀಣ್ ಶ್ರೀನಿವಾಸ್ ಸಂಗೀತ, ಮಹೇಶ್ ಸಂಕಲನ ಸರಣಿಗಿದೆ.‌ ಮುಂದಿನ ವಾರದಿಂದ ಕೇರಳ ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ.

’ಭುವನಂ ಗಗನಂ’ ಸಿನಿಮಾಗೆ ಧ್ರುವ ಸರ್ಜಾ ಸಾಥ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ಅಂಗಳದ ಇಬ್ಬರು ಪ್ರತಿಭಾನ್ವಿತ ನಟರಾದ ʻಸಲಾರ್ʼ ಪ್ರಮೋದ್ ಹಾಗೂ ʼದಿಯಾʼ ಪೃಥ್ವಿ ಅಂಬಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ʻಭುವನಂ ಗಗನಂʼ. ಈ ಚಿತ್ರದ ನಿರ್ಮಾಪಕ ಎಂ. ಮುನೇಗೌಡ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ. ಬೆಂಗಳೂರಿನ ಡಾ. ರಾಜಕುಮಾರ್‌ ಇಂಡೋರ್ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಟ ನೆನಪಿರಲಿ ಪ್ರೇಮ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವರು ಉಪಸ್ಥಿತಿದ್ದರು.

ಇದನ್ನೂ ಓದಿ: Kannada New Movie: ʻಕಮಲ್ ಹಾಸನ್ʼ ಬಂದು ಟೈಟಲ್‌ ಲಾಂಚ್‌ ಮಾಡಿದ್ರು! ಯಾವುದು ಆ ಸಿನಿಮಾ?

ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್‌ಗೆ ಜೋಡಿಯಾಗಿ ʼಲವ್ ಮಾಕ್ಟೇಲ್ʼ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ʼಸ್ಪರ್ಶʼ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನಿಲ್‌ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ. ಮಳೆಗಾಲದಲ್ಲಿ ʼಭುವನಂ ಗಗನಂʼ ಸಿನಿಮಾ ತೆರೆಗೆ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
illicit relationship raichur siravara
ಕ್ರೈಂ7 mins ago

Illicit Relationship: ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

Gold Rate Today
ಚಿನ್ನದ ದರ7 mins ago

Gold Rate Today: ಬಜೆಟ್‌ ಬಳಿಕ ಇದೇ ಮೊದಲ ಬಾರಿ ಏರಿಕೆ ಕಂಡ ಚಿನ್ನದ ದರ; ಇಂದು ಇಷ್ಟು ದುಬಾರಿ

Actor Darshan Astrologer Chanda Pandey Said Facing Problems Because Of His vig
ಕ್ರೈಂ27 mins ago

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Encounter in Kupwara
ದೇಶ54 mins ago

Encounter in Kupwara: ಕುಪ್ವಾರಾದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೈನಿಕರಿಗೆ ಗಾಯ

Champions Trophy 2025
ಕ್ರೀಡೆ57 mins ago

Champions Trophy 2025: ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ; ಟೀಮ್ ಇಂಡಿಯಾಗೆ ಪಾಕ್​ ಆಟಗಾರನ ಮನವಿ

Murder in PG Case
ಕ್ರೈಂ1 hour ago

Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

kaveri aarti
ಪ್ರಮುಖ ಸುದ್ದಿ1 hour ago

Kaveri Aarti: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ; ದಸರಾ ಹೊತ್ತಿಗೆ ರೆಡಿ

Malaika Arora breakup rumours rushes past Arjun Kapoor
ಬಾಲಿವುಡ್1 hour ago

Malaika Arora: ಒಂದೇ ಈವೆಂಟ್‌ನಲ್ಲಿ ಇದ್ದರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡಿಲ್ಲ! ಅರ್ಜುನ್​-ಮಲೈಕಾ ಬ್ರೇಕಪ್‌ ಖಚಿತ?

Narendra Modi
ದೇಶ2 hours ago

Narendra Modi: ರಷ್ಯಾ ಬಳಿಕ ಮುಂದಿನ ತಿಂಗಳು ಯುದ್ಧ ಪೀಡಿತ ಉಕ್ರೇನ್‌ಗೆ ಪ್ರಧಾನಿ ಮೋದಿ ಭೇಟಿ

Actor Rajinikanth Fulfils Grandfather Duties By Dropping Grandson At School
ಕಾಲಿವುಡ್2 hours ago

Actor Rajinikanth: ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದ ಮೊಮ್ಮಗ; ತಾತನ ಡ್ಯೂಟಿ ಮಿಸ್ ಮಾಡ್ದೆ ಸ್ಕೂಲ್‌ಗೆ ಬಿಟ್ಟು ಬಂದ ರಜನಿಕಾಂತ್‌!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ16 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ17 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ18 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ19 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌