Alia Bhatt: ಅತ್ಯುತ್ತಮ ನಟಿ ಪ್ರಶಸ್ತಿ ಬಂದರೂ ಸಮಾರಂಭಕ್ಕೆ ಗೈರಾದ ಆಲಿಯಾ ಭಟ್‌; ಕಾರಣವೇನು? - Vistara News

South Cinema

Alia Bhatt: ಅತ್ಯುತ್ತಮ ನಟಿ ಪ್ರಶಸ್ತಿ ಬಂದರೂ ಸಮಾರಂಭಕ್ಕೆ ಗೈರಾದ ಆಲಿಯಾ ಭಟ್‌; ಕಾರಣವೇನು?

Alia Bhatt: ಅಬುಧಾಬಿಯಲ್ಲಿ ಮೇ 27ರಂದು ನಡೆದ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA 2023)ರಲ್ಲಿ (IIFA 2023 Winners Full List) ʻಗಂಗೂಬಾಯಿ ಕಥಿಯಾವಾಡಿʼಗಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

VISTARANEWS.COM


on

Alia Bhatt Skips IIFA 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈ ಬಾರಿ ಅಬುಧಾಬಿಯಲ್ಲಿ ನಡೆಯುತ್ತಿರುವ IIFA 2023ರಲ್ಲಿ ಆಲಿಯಾ ಭಟ್‌ (Alia Bhatt) ಗೈರಾಗಿದ್ದರು. ಕಾರಣವೇನು ಎಂಬುದರ ಬಗ್ಗೆ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಈ ಬಗ್ಗೆ ಕಾರಣ ತಿಳಿದು ಬಂದಿದ್ದು, ಆಲಿಯಾ ಭಟ್‌ ಅವರ ತಾತನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವಿದೇಶ ಪ್ರಯಾಣದ ಸಿದ್ಧತೆಯಲ್ಲಿದ್ದ ಆಲಿಯಾ, ಪ್ರವಾಸವನ್ನು ರದ್ದು ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಪ್ರಶಸ್ತಿ ಸಮಾರಂಭಕ್ಕೆ ಗೈರಾಗಿದ್ದು ಇದೇ ಕಾರಣ ಎನ್ನಲಾಗಿದೆ.

ವರದಿಗಳ ಪ್ರಕಾರ, ಆಲಿಯಾ ಭಟ್ ಅವರ ತಾತ ನರೇಂದ್ರ ರಾಜ್​ದಾನ್​ ಅವರು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಶ್ವಾಸಕೋಶದ ಸೋಂಕಿನಿಂದಾಗಿ ನರೇಂದ್ರ ರಾಜ್​ದಾನ್‌ ಅವರನ್ನು ಈ ಹಿಂದೆ ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ 95 ವರ್ಷ ವಯಸ್ಸಾಗಿದೆ.

ಅಂದುಕೊಂಡಂತೆ ಆಗಿದ್ದರೆ ಆಲಿಯಾ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಆದರೆ, ತಾತ ಆರೋಗ್ಯ ಹದಗೆಟ್ಟಿದ್ದರಿಂದ ಪ್ರಯಾಣವನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.

ಅಬುಧಾಬಿಯಲ್ಲಿ ಮೇ 27ರಂದು ನಡೆದ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA 2023)ರಲ್ಲಿ (IIFA 2023 Winners Full List) ʻಗಂಗೂಬಾಯಿ ಕಥಿಯಾವಾಡಿʼಗಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಲಿಯಾ ಸಮಾರಂಭದಲ್ಲಿ ಗೈರಾದ ಕಾರಣ ನಿರ್ಮಾಪಕ ಜಯಂತಿಲಾಲ್ ಗಡಾ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಬಾರಿ ʻಗಂಗೂಬಾಯಿ ಕಥಿಯಾವಾಡಿ ಸಿನಿಮಾಗೆ ಹಲವು ಪ್ರಶಸ್ತಿಗಳು ಸಂದಿವೆ.ಬಾಲಿವುಡ್ ಫ್ಯಾಂಟಸಿ ಚಿತ್ರ ಬ್ರಹ್ಮಾಸ್ತ್ರ: ಭಾಗ ಒಂದು – ಶಿವ, ಮತ್ತು ಜೀವನಚರಿತ್ರೆ ಗಂಗೂಬಾಯಿ ಕಾಠಿಯಾವಾಡಿ ಈ ವರ್ಷದ IIFAನಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಗಂಗೂಬಾಯಿ ಕಾಠಿಯಾವಾ ಡಿಸಿನಿಮಾದ ತಾಂತ್ರಿಕ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಛಾಯಾಗ್ರಹಣ, ಚಿತ್ರಕಥೆ ಮತ್ತು ಸಂಭಾಷಣೆಗಾಗಿ ಟ್ರೋಫಿಗಳನ್ನು ಗೆದ್ದುಕೊಂಡಿತು. ಈ ಚಿತ್ರದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದರು.

ಇದನ್ನೂ ಓದಿ: IIFA 2023 Winners Full List: ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ; ವಿಜೇತರ ಪಟ್ಟಿ ಇಲ್ಲಿದೆ!

ಆಲಿಯಾ ಭಟ್ ಅವರು ಈಗ ಬಾಲಿವುಡ್​ಗೆ ಮಾತ್ರ ಸೀಮಿತ ಆಗಿಲ್ಲ. ಅವರು ಹಾಲಿವುಡ್ ಚಿತ್ರ ಕೂಡ ಮಾಡಿದ್ದಾರೆ. ‘ಹಾರ್ಟ್ ಆಫ್​ ಸ್ಟೋನ್’ ಹೆಸರಿನ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿ ಬಂದಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Dwarakish: ಪತ್ನಿ, ಮಕ್ಕಳಿದ್ದರೂ ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು ದ್ವಾರಕೀಶ್​​

Actor Dwarakish: ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ದ್ವಾರಕೀಶ್ ಅವರ ವಯಕ್ತಿಕ ಬದುಕು ಕೂಡ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಏನೂ ಇರಲಿಲ್ಲ. ಮದುವೆಯಾಗಿ, ಮಕ್ಕಳಿದ್ದರೂ ಅವರು ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದರು.

VISTARANEWS.COM


on

By

Actor Dwarakish
Koo

ಬೆಂಗಳೂರು: ಮದುವೆಯಾಗಿ ಮಕ್ಕಳಾದ ಮೇಲೆ ಇನ್ನೊಂದು ಮದುವೆ ಅಷ್ಟೊಂದು ಸುಲಭವಲ್ಲ. ಅದೂ ಪ್ರೀತಿಸಿ ಮದುವೆಯಾಗುವುದೆಂದರೆ ಅದೊಂದು ಅಪರೂಪದಲ್ಲೊಂದು ಪ್ರಕರಣವಾಗುವುದು ಖಚಿತ. ಅಂಥದ್ದೇ ಅಪರೂಪದ ವ್ಯಕ್ತಿಯಾಗಿದ್ದು ನಟ ದ್ವಾರಕೀಶ್​. ಸಿನಿಮಾ ನಟನಾಗಿ. ನಿರ್ಮಾಪಕನಾಗಿದ್ದುಕೊಂಡು ಸಿನಿಮಾ ಕತೆಯ ರೀತಿಯಲ್ಲೇ ತಮ್ಮ ಜೀವನವನ್ನು ಸಾಗಿಸಿದ್ದರು ಸ್ಯಾಂಡಲ್​ವುಡ್​ನ ಕುಳ್ಳ. ಆದರೆ ನನ್ನ ಬದುಕಲ್ಲಿ ಎಲ್ಲವೂ ಸುಖಾಂತ್ಯವಾಗಿ ಎಂದು ನಗುತ್ತಿದ್ದರು ಹಾಸ್ಯ ನಟ (comedian) ದ್ವಾರಕೀಶ್ (actor dwarakish).

ನಟನಾಗಿ (actor), ನಿರ್ಮಾಪಕನಾಗಿ (producer), ನಿರ್ದೇಶಕನಾಗಿ (director) ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ದ್ವಾರಕೀಶ್ ಅವರ ವಯಕ್ತಿಕ ಬದುಕು ಕೂಡ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಏನೂ ಇರಲಿಲ್ಲ. ಮದುವೆಯಾಗಿ, ಮಕ್ಕಳಿದ್ದರೂ ಅವರು ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದರು. ಅದನ್ನು ಸುಖಾಂತ್ಯಗೊಳಿಸಲು ಪ್ರಯತ್ನಿಸಿದ್ದರು.

ಮೊದಲ ಮದುವೆ

ವಯಸ್ಸಿನಲ್ಲಿ ದೊಡ್ಡವರೂ, ಸಂಬಂಧಿಯು ಆಗಿದ್ದ ಅಂಬುಜಾ ಅವರನ್ನು ಪ್ರೀತಿಸಿ 1967 ಏಪ್ರಿಲ್ 26ರಂದು ದ್ವಾರಕೀಶ್ ಕೈ ಹಿಡಿದಿದ್ದು, ನಾಲ್ಕು ಗಂಡು ಮಕ್ಕಳ ತಂದೆಯಾದರು. ಇದಾಗಿ ಕೆಲವು ವರ್ಷಗಳ ಬಳಿಕ ಅಕ್ಕನ ಮಗಳಿಗೆ ಸಿನಿಮಾದಲ್ಲಿ ಅವಕಾಶ ಕೇಳಿಕೊಂಡು ಶೈಲಜಾ ಅವರು ದ್ವಾರಕೀಶ್‌ ಬಳಿ ಬಂದಿದ್ದರು.

ಇದನ್ನೂ ಓದಿ: ‌Actor Dwarakish: ಚಿತ್ರರಂಗ ಮಾತ್ರವಲ್ಲ, ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ದ್ವಾರಕೀಶ್!

ಪ್ರೀತಿಯಲ್ಲಿ ಬಿದ್ದ ಕುಳ್ಳ

ಈ ಮೂಲಕ ಶೈಲಜಾ ದ್ವಾರಕೀಶ್‌ ಅವರಿಗೆ ಪರಿಚಿತರಾದರು. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಶೈಲಜಾ ಹಾಗೂ ನಟ ದ್ವಾರಕೀಶ್‌ ಅವರ ನಡುವೆ ಮೊದಲು ಸ್ನೇಹ ಬೆಳೆದು ಬಳಿಕ ಅದು ಪ್ರೀತಿಗೆ ತಿರುಗಿತ್ತು. ಆದರೆ ಈ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಗೆ ಹೇಳಬೇಕು ಎನ್ನುವ ಗೊಂದಲ, ಚಿಂತೆ ಅವರನ್ನು ಕಾಡಿತ್ತು. ಹೀಗಾಗಿ ಒಂದು ದಿನ ಎಲ್ಲರಿಗೂ ವಿಷಯ ತಿಳಿಸಬೇಕು ಎಂದು ನಿರ್ಧರಿಸಿಯೇ ಬಿಟ್ಟರು.

ಹೆಂಡತಿ ಒಪ್ಪಿಗೆ

ಈ ವಿಷಯವನ್ನು ಮನೆ ಮಂದಿಗೆ ತಿಳಿಸಬೇಕು ಎಂದು ನಿರ್ಧರಿಸಿ ಮನೆ ಮಂದಿಯನ್ನೆಲ್ಲ ಕರೆದುಕೊಂಡು ಮದ್ರಾಸ್ ನ ಫೈವ್ ಸ್ಟಾರ್ ಹೊಟೇಲ್ ಗೆ ಹೋದ ಅವರು ಊಟ ಮಾಡುವ ಮುನ್ನ ಪತ್ನಿ ಅಂಬುಜಾ ಅವರಿಗೆ ಒಂದು ನೋಟ್ ಪುಸ್ತಕ ಕೊಟ್ಟು ಹೀಗೆ ಹೇಳಿದರು…

ಇದೊಂದು ಕಾದಂಬರಿ ಅಂತಾ ತಿಳಿದುಕೋ. ಆದರೆ ಇದು ನನ್ನ ಜೀವನದ ಕಥೆ. ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ. ಆಕೆಯ ಹೆಸರು ಶೈಲಜಾ. ನೀನು ಒಪ್ಪಿದರೆ ಮದುವೆಯಾಗುತ್ತೇನೆ. ಇಲ್ಲವಾದರೆ ಇಲ್ಲ. ಎಲ್ಲವನ್ನೂ ಮರೆತು ಬಿಡಲು ಪ್ರಯತ್ನಿಸುತ್ತೇನೆ. ಈ ನೋಟ್ ಪುಸ್ತಕದ ಕೊನೆಯಲ್ಲಿ ನಿನ್ನ ಅಭಿಪ್ರಾಯವನ್ನು ಬರೆ. ಅದು ಖುಷಿ ಕೊಟ್ಟರೂ ಸರಿ ದುಃಖ ನೀಡಿದರೂ ಸರಿ ನಾನು ಅದನ್ನು ಸ್ವೀಕರಿಸುತ್ತೇನೆ ಎಂದು ಹೇಳಿ ಮೌನವಾದರು.

ಸುಮಾರು ಐದು ನಿಮಿಷ ಯೋಚಿಸಿದ ಅಂಬುಜಾ, ನೋಟ್ ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ ಏನೋ ಬರೆದರು. ಬಳಿಕ ಅದನ್ನು ತೆರೆದು ಓದಿದ ದ್ವಾರಕೀಶ್ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಂಬುಜಾ ಅವರು ಅದರಲ್ಲಿ ನಿಮ್ಮ ಸಂತೋಷವೇ ನನ್ನ ಸಂತೋಷ ಎಂದು ಹೇಳಿದ್ದರು.

ಎರಡನೇ ಮದುವೆ

ಮಡದಿಯ ಒಪ್ಪಿಗೆ ಸಿಕ್ಕಿದ ಬಳಿಕ ಅಲ್ಲಿಂದಲೇ ಶೈಲಜಾ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅಂಬುಜಾ ಕೂಡಾ ಶೈಲಜಾ ಅವರೊಂದಿಗೆ ಮಾತನಾಡಡಿದ್ದರು. ಈ ವಿಷಯ ಕೇಳಿ ಅವರ ಮಕ್ಕಳೂ ಖುಷಿ ಪಟ್ಟಿದ್ದರು. ಎಲ್ಲರೂ ಶುಭ ಹಾರೈಸಿದರು. ಬಳಿಕ ಎಲ್ಲರ ಸಮ್ಮುಖದಲ್ಲೂ ಶೈಲಜಾ ಅವರನ್ನು ಮದುವೆಯಾಗಿರುವುದಾಗಿ ದ್ವಾರಕೀಶ್ ನೆನಪಿಸಿಕೊಂಡಿದ್ದರು.

ದ್ವಾರಕೀಶ್ ಅವರಿಗೆ ಎರಡನೇ ಮದುವೆಯಾದಾಗ ಅವರಿಗೆ 51 ವರ್ಷ. ಮೊದಲ ಹೆಂಡತಿಯ ಒಪ್ಪಿಗೆ ಪಡೆದು ಅವರು ಎರಡನೇ ಮದುವೆಯಾದರೂ ಇದು ಆಗ ಸಾಕಷ್ಟು ವಿವಾದ ಎಬ್ಬಿಸಿತ್ತು.


ದ್ವಾರಕೀಶ್ ಮತ್ತು ಅಂಬುಜಾ ಅವರ ಮೊದಲ ಮಗ ತಂದೆಯೊಂದಿಗೆ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಉಳಿದವರು ಒಂದೆರಡು ಚಿತ್ರಗಳ ಬಳಿಕ ಬೇರೆ ಕೆಲಸಗಳಲ್ಲಿ ಆಸಕ್ತಿ ತೋರಿಸಿದರು. ದ್ವಾರಕೀಶ್ ಮತ್ತು ಶೈಲಜಾ ಅವರಿಗೆ ಓರ್ವ ಮಗನಿದ್ದಾನೆ. ಒಟ್ಟಿನಲ್ಲಿ ಇಬ್ಬರು ಮಡದಿಯರ ಮುದ್ದಿನ ಗಂಡನಾಗಿ ದ್ವಾರಕೀಶ್ ಅವರ ಪ್ರೇಮ ಕಥೆ ಅವರ ಎರಡನೇ ಮದುವೆ ವೇಳೆ ಸಾಕಷ್ಟು ಸುದ್ದಿ ಮಾಡಿತ್ತು.

Continue Reading

ಸಿನಿಮಾ

Movie release: ಹಾರರ್, ಥ್ರಿಲರ್, ಆ್ಯಕ್ಷನ್.. ಒಟಿಟಿಯಲ್ಲಿ ಬರಲಿವೆ ಸೂಪರ್ ಹಿಟ್ ಮೂವಿಗಳು

Movie release: ಸುಮಾರು ಎರಡು ವಾರಗಳ ಬಳಿಕ ಈ ವಾರದಲ್ಲಿ ಹಲವಾರು ಚಿತ್ರಗಳು ಒಟಿಟಿಯಲ್ಲಿ ಬರಲು ಸಜ್ಜಾಗಿದೆ. ಹಾರರ್, ಥ್ರಿಲರ್, ಆಕ್ಷನ್, ರೋಮ್ಯಾಂಟಿಕ್ ಸೇರಿದಂತೆ ಸೂಪರ್ ಹಿಟ್ ಮೂವಿಗಳು ಈ ವಾರ ತೆರೆ ಕಾಣಲಿದೆ.

VISTARANEWS.COM


on

By

Movie release
Koo

ಬೆಂಗಳೂರು: ಹೊರಗೆ ಬಿಸಿಲು ತೀವ್ರವಾಗಿದೆ. ಹೀಗಿರುವಾಗ ಮನೆಯೊಳಗೆ ಕುಳಿತು ತಂಪಾದ ಜ್ಯೂಸು ಕುಡಿಯುತ್ತಾ, ತಿಂಡಿಗಳನ್ನು ಮೆಲ್ಲುತ್ತಾ ಇಷ್ಟವಾದ ಸಿನಿಮಾಗಳನ್ನು ನೋಡುತ್ತಾ ರಜೆ ಕಳೆಯಬಹುದು. ಯಾಕೆಂದರೆ ಈ ವಾರ ಹಲವು ಹೊಸ ಚಿತ್ರಗಳು ಒಟಿಟಿಯಲ್ಲಿ (OTT) ಬಿಡುಗಡೆಯಾಗಲಿದೆ. ಅತ್ಯಂತ ನಿರೀಕ್ಷಿತ ಚಿತ್ರಗಳಾದ ಯನಿವನ್ ಬಟ್ ಯು (Anyone But You), ಡ್ಯೂನ್: ಪಾರ್ಟ್ 2 (Dune: Part 2), ಡ್ರೀಮ್ ಸಿನಾರಿಯೊ (Dream Scenario) ಮತ್ತು ಝಾಕ್ ಸ್ನೈಡರ್ಸ್ ರೆಬೆಲ್ ಮೂನ್ – ಪಾರ್ಟ್ 2: ದಿ ಸ್ಕಾರ್ಗಿವರ್ (Zack Snyder’s Rebel Moon – Part Two: The Scargiver) ಕೂಡ ಸೇರಿದೆ.

ಇನ್ನು ವಿದ್ಯಾ ಬಾಲನ್ (Vidya Balan) ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ. ದೋ ಔರ್ ದೋ ಪ್ಯಾರ್ (Do Aur Do Pyaar ) ಕೂಡ ಈ ವಾರ ಥಿಯೇಟರ್‌ಗಳಿಗೆ ಆಗಮಿಸಲಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಹೀಗಾಗಿ ಮನೆಯಿಂದ ಹೊರಬಂದು ದೊಡ್ಡ ಪರದೆಯ ಮೇಲೆ ಈ ಚಿತ್ರ ನೋಡಬಹುದು.

ಇಷ್ಟೇ ಅಲ್ಲದೇ ಸೀ ಯು ಇನ್ ಅನದರ್ ಲೈಫ್, ದಿ ಗ್ರಿಮ್ ವೇರಿಯೇಷನ್ಸ್, ದಿ ಟೂರಿಸ್ಟ್: ಸೀಸನ್ 2 ಮತ್ತು ಚೀಫ್ ಡಿಟೆಕ್ಟಿವ್ 1958 ಸರಣಿಯು ತೆರೆಗೆ ಬರಲು ಕಾಯುತ್ತಿದೆ. ಈ ವಾರ ನೆಟ್ ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇರಿದಂತೆ ಒಟಿಟಿಯಲ್ಲಿ ಬರಲು ಸಿದ್ದವಾಗಿರುವ ಚಿತ್ರಗಳು ಇಂತಿದೆ.

ಇದನ್ನೂ ಓದಿ: Priyanka Chopra: ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾವನ್ನು ಹೊಗಳಿದ ಪ್ರಿಯಾಂಕಾ ಚೋಪ್ರಾ!

ಡ್ಯೂನ್: ಪಾರ್ಟ್ ಟು

ಬುಕ್ ಮೈ ಶೋ (BookMyShow ) ನಲ್ಲಿ ಡೆನಿಸ್ ವಿಲ್ಲೆನ್ಯೂವ್ ನಿರ್ದೇಶನದ ತಿಮೋತಿ ಚಲಾಮೆಟ್, ಝೆಂಡಯಾ, ಜೇವಿಯರ್ ಬಾರ್ಡೆಮ್, ರೆಬೆಕಾ ಫರ್ಗುಸನ್, ಜೋಶ್ ಬ್ರೋಲಿನ್, ಫ್ಲಾರೆನ್ಸ್ ಪಗ್, ಆಸ್ಟಿನ್ ಬಟ್ಲರ್, ಲಿಯಾ ಸೆಡೌಕ್ಸ್, ಕ್ರಿಸ್ಟೋಫರ್ ವಾಕೆನ್ ಮೊದಲಾದವರು ಅಭಿನಯಿಸಿರುವ ಚಿತ್ರ ಡ್ಯೂನ್: ಪಾರ್ಟ್ ಟು ಏಪ್ರಿಲ್ 16ರಂದು ಬಿಡುಗಡೆಯಾಗಲಿದೆ. ಸಾಹಸಮಯ ದೃಶ್ಯಗಳಿಂದಾಗಿಯೇ ಈ ಚಿತ್ರದ ಟ್ರೇಲರ್ ಸಾಕಷ್ಟು ಮಂದಿಯ ಗಮನ ಸೆಳೆದಿದೆ.


ಅವರ್ ಲಿವಿಂಗ್ ವರ್ಲ್ಡ್

ಜೇಮ್ಸ್ ಹನಿಬೋರ್ನ್ ನಿರ್ದೇಶನದ ಈ ಚಿತ್ರ ನೆಟ್‌ಫ್ಲಿಕ್ಸ್ ನಲ್ಲಿ ಏಪ್ರಿಲ್ 17ರಂದು ತೆರೆಗೆ ಬರಲಿದೆ. ಪ್ರಮುಖ ಪಾತ್ರಧಾರಿಯಾಗಿ ಕೇಟ್ ಬ್ಲಾಂಚೆಟ್ ಕಾಣಿಸಿಕೊಂಡಿದ್ದು,ಇದರಲ್ಲಿ ಎಮ್ಮಿ ಪ್ರಶಸ್ತಿ ವಿಜೇತ ತಂಡವು ಜೀವಂತ ಜಗತ್ತನ್ನು ಪುನಃಸ್ಥಾಪಿಸಲು ಮತ್ತು ಉಳಿಸಿಕೊಳ್ಳಲು ಪ್ರಯತ್ನಿಸುವ ಸಾಹಸಗಾಥೆಯನ್ನು ಒಳಗೊಂಡ ಚಿತ್ರವಿದು. ಅತ್ಯಂತ ರೋಮಾಂಚಕ ದೃಶ್ಯಗಳು ಮನ ಸೆಳೆಯುತ್ತದೆ.


ಸೀ ಯು ಇನ್ ಅನೆದರ್ ಲೈಫ್

ಜಾರ್ಜ್ ಸ್ಯಾಂಚೆಜ್-ಕಾಬೆಜುಡೊ, ಬೋರ್ಜಾ ಸೋಲರ್ ನಿರ್ದೇಶನದ ಈ ಚಿತ್ರದಲ್ಲಿ ರಾಬರ್ಟೊ ಗುಟೈರೆಜ್, ಪೋಲ್ ಲೋಪೆಜ್, ತಮಾರಾ ಕ್ಯಾಸೆಲ್ಲಾಸ್, ಕ್ವಿಮ್ ಅವಿಲಾ, ಮೌರಾದ್ ಔವಾನಿ, ಜೈಮ್ ಜಟಾರಿನ್ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 17 ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಈ ಚಿತ್ರ ತೆರೆಗೆ ಬರಲಿದೆ. ಮ್ಯಾನುಯೆಲ್ ಜಬೋಯಿಸ್ ಅವರ ಪುಸ್ತಕವನ್ನು ಆಧರಿಸಿ ನಿರ್ಮಿಸಿರುವ ಈ ಕಿರುಸರಣಿಯು 11M ರೈಲು ಬಾಂಬ್ ದಾಳಿಯ ಹಿನ್ನೆಲೆಯನ್ನು ಹೊಂದಿದೆ.


ದಿ ಗ್ರಿಮ್ಮ್ ವರಿಯೇಷನ್ಸ್

ಯೊಕೊ ಕನೆಮೊರಿ, ಯಸುಹಿರೊ ಅಕಮಾಟ್ಸು, ಜುನಿಚಿರೊ ಹಶಿಗುಚಿ, ಯುಮಿ ಕಾಮಮುರಾ, ಮಸಾಟೊ ಟಕೆಯುಚಿ, ಶಿಂಟಾರೊ ನಕಾಜವಾ ನಿರ್ದೇಶಿಸರುವ ಅನಿಮೇಷನ್ ಚಿತ್ರ ಏಪ್ರಿಲ್ 17ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ತತ್ಸುಹಿಸಾ ಸುಜುಕಿ, ಕೆಂಜಿ ನೊಜಿಮಾ, ಮಿಸಾಟೊ ಫುಕುಯೆನ್ ಧ್ವನಿ ನೀಡಿರುವ ಚಿತ್ರದಲ್ಲಿ ಜಪಾನೀಸ್ ಮೂಲ ನೆಟ್ ಅನಿಮೇಷನ್ (ONA) ಸಂಕಲನ ಸರಣಿಯು ಸಹೋದರರಾದ ಜಾಕೋಬ್ ಮತ್ತು ವಿಲ್‌ಹೆಲ್ಮ್ ಮತ್ತು ಅವರ ಕಿರಿಯ ಸಹೋದರಿ, ಮುಗ್ಧ ಮತ್ತು ಕುತೂಹಲಕಾರಿ ಚಾರ್ಲೆಟ್ ಸುತ್ತ ಸುತ್ತುತ್ತದೆ.


ದಿ ಸೀಕ್ರೆಟ್ ಸ್ಕೋರ್

ಜುವಾನ್ ಕಾರ್ಲೋಸ್ ಡಿ ಲಾಕಾ ನಿರ್ದೇಶಿಸಿದ ಈ ಚಿತ್ರದಲ್ಲಿ ವಾಲ್ ಡೊರಾಂಟೆಸ್, ಜುವಾನ್ಮಾ ಪಿಯಾನೋ, ಜೋಸ್ ಪೆರಾಲ್ಟಾ, ಡೇನಿಯಲ್ ಅಬ್ರೆಗೊ, ಮೊನಿಕಾ ಪ್ಲೆಹ್ನ್, ಡಿಯಾಗೋ ಸ್ಯಾಂಡೋವಲ್, ಪಾವೊಲಾ ಗೊಮೆಜ್, ಮಿಚೆಲ್ ಅಲ್ಮಾಗುರ್, ಸೀಸರ್ ಅಕೋಸ್ಟಾ, ಡೇವಿಡ್ ಅಂಗುಲೋ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಏಪ್ರಿಲ್ 17ರಂದು ಚಿತ್ರ ತೆರೆಗೆ ಬರಲಿದೆ.


ಸುಗಾ: ಅಗಸ್ಟ್ ಡಿ ಟೂರ್ ಡಿ-ಡೇ ದಿ ಮೂವಿ

ಜುನ್-ಸೂ ಪಾರ್ಕ್ ನಿರ್ದೇಶನದ ಸುಗಾ, ಜಿಮಿನ್, ಜಂಗ್‌ಕುಕ್ ಅಭಿನಯಿಸಿರುವ ಈ ಚಿತ್ರ ಏಪ್ರಿಲ್ 18ರಂದು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ. ಎನ್‌ಕೋರ್ ಸಂಗೀತ ಕಛೇರಿಗಾಗಿ ಪ್ರಪಂಚದಾದ್ಯಂತ ಪ್ರಯಾಣಿಸುವ ತಂಡದ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ.


ಆರ್ಟಿಕಲ್ 370

ಆದಿತ್ಯ ಸುಹಾಸ್ ಜಂಬಾಳೆ ನಿರ್ದೇಶನದ ಯಾಮಿ ಗೌತಮ್, ಪ್ರಿಯಾಮಣಿ, ಸ್ಕಂದ ಠಾಕೂರ್, ಅಶ್ವಿನಿ ಕೌಲ್, ವೈಭವ್ ತತ್ವವಾದಿ, ಅರುಣ್ ಗೋವಿಲ್, ಕಿರಣ್ ಕರ್ಮಾರ್ಕರ್ ಅಭಿನಯದ ಚಿತ್ರ ಜಿಯೋ ಸಿನಿಮಾದಲ್ಲಿ ಏಪ್ರಿಲ್ 19ರಂದು ತೆರೆ ಕಾಣಲಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಮೇಲೆ ಚಿತ್ರ ಕೇಂದ್ರೀಕರಿಸಿದೆ. ಈಗಾಗಲೇ ಈ ಚಿತ್ರ ತೆರೆಗೆ ಬಂದಿದ್ದು, ನೋಡಲಾಗದೇ ಇದ್ದರೆ ಈ ವಾರ ಓಟಿಟಿಯಲ್ಲಿ ಕಾಣಬಹುದು.


ಚೀಫ್ ಡಿಟೆಕ್ಟಿವ್ 1958

ಕಿಮ್ ಸಿಯೋಂಗ್-ಹೂನ್ ನಿರ್ದೇಶನದ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಲೀ ಜೆ-ಹೂನ್, ಲೀ ಡಾಂಗ್-ಹ್ವಿ, ಚೋಯ್ ವೂ-ಸಂಗ್, ಯೂನ್ ಹ್ಯುನ್-ಸೂ ಕಾಣಿಸಿಕೊಂಡಿದ್ದಾರೆ. Disney+ Hotstar ನಲ್ಲಿ ಈ ಚಿತ್ರ ಏಪ್ರಿಲ್ 19ರಂದು ತೆರೆ ಕಾಣಲಿದೆ. ಚೀಫ್ ಇನ್ಸ್‌ಪೆಕ್ಟರ್ (1971) ಸರಣಿಯ ಪೂರ್ವಭಾವಿ ಕಥೆಯನ್ನು ಅಂದರೆ 1950 ರಿಂದ 1960 ರ ದಶಕದ ಕಥೆಯನ್ನು ಇದು ಒಳಗೊಂಡಿದೆ.


ಡ್ರೀಮ್ ಸಿನಾರಿಯೋ

ಕ್ರಿಸ್ಟೋಫರ್ ಬೋರ್ಗ್ಲಿ ನಿರ್ದೇಶನದ ಈ ಚಿತ್ರದಲ್ಲಿ ನಿಕೋಲಸ್ ಕೇಜ್, ಜೂಲಿಯಾನ್ನೆ ನಿಕೋಲ್ಸನ್, ಮೈಕೆಲ್ ಸೆರಾ, ಟಿಮ್ ಮೆಡೋಸ್, ಡೈಲನ್ ಗೆಲುಲಾ, ಡೈಲನ್ ಬೇಕರ್ ಮುಖ್ಯ ಭೂಮಿಕಾಯಲ್ಲಿ ಕಾಣಿಸಿಕೊಂಡಿದ್ದಾರೆ. ಲಯನ್ಸ್‌ಗೇಟ್ ಪ್ಲೇ ನಲ್ಲಿ ಏಪ್ರಿಲ್ 19ರಂದು ಪ್ರದರ್ಶನ ಕಾಣಲಿದೆ.


ರೆಬೆಲ್ ಮೂನ್- ಪಾರ್ಟ್ ಟು: ದಿ ಸ್ಕ್ಯಾರ್ಗಿವೆರ್

ಝಾಕ್ ಸ್ನೈಡರ್ ನಿರ್ದೇಶನದ ಈ ಚಿತ್ರದಲ್ಲಿ ಸೋಫಿಯಾ ಬೌಟೆಲ್ಲಾ, ಚಾರ್ಲಿ ಹುನ್ನಮ್, ಮೈಕೆಲ್ ಹುಯಿಸ್ಮನ್, ಜಿಮನ್ ಹೌನ್ಸೌ, ಡೂನಾ ಬೇ, ರೇ ಫಿಶರ್, ಕ್ಲಿಯೋಪಾತ್ರ ಕೋಲ್ಮನ್, ಜೆನಾ ಮ್ಯಾಲೋನ್, ಫ್ರಾ ಫೀ, ಎಡ್ ಸ್ಕ್ರೇನ್, ಆಂಥೋನಿ ಹಾಪ್ಕಿನ್ಸ್ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 19 ರಂದು ನೆಟ್‌ಫ್ಲಿಕ್ಸ್ ಚಿತ್ರ ತೆರೆ ಕಾಣಲಿದೆ.


ಸೀರೆನ್

ಆಂಟೋನಿ ಭಾಗ್ಯರ ನಿರ್ದೇಶನದ ಈ ಚಿತ್ರದಲ್ಲಿ ಜಯಂ ರವಿ, ಕೀರ್ತಿ ಸುರೇಶ್, ಅನುಪಮಾ ಪರಮೇಶ್ವರನ್, ಯೋಗಿ ಬಾಬು ಮತ್ತು ಸಮುದ್ರಕನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. Disney+ Hotstar ನಲ್ಲಿ ಏಪ್ರಿಲ್ 19ರಂದು ಚಿತ್ರ ತೆರೆ ಕಾಣಲಿದೆ. ಆಕ್ಷನ್ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಇದೊಂದು ಒಳ್ಳೆಯ ಸಿನೆಮಾ.


ದಿ ಟೂರಿಸ್ಟ್ : ಸೀಸನ್ 2

ಕ್ರಿಸ್ ಸ್ವೀನಿ ನಿರ್ದೇಶನದ ಈ ಚಿತ್ರದಲ್ಲಿ ಜೇಮೀ ಡೋರ್ನಾನ್, ಡೇನಿಯಲ್ ಮ್ಯಾಕ್ಡೊನಾಲ್ಡ್, ಓಲ್ವೆನ್ ಫೌರೆ, ಗ್ರೆಗ್ ಲಾರ್ಸೆನ್, ವಿಕ್ಟೋರಿಯಾ ಹರಾಲಾಬಿಡೌ, ಕಾನರ್ ಮ್ಯಾಕ್‌ನೀಲ್, ಮಾರ್ಕ್ ಮೆಕೆನ್ನಾ, ನೆಸ್ಸಾ ಮ್ಯಾಥ್ಯೂಸ್, ಡೈರ್ಮೇಡ್ ಮುರ್ತಾಗ್, ಫ್ರಾನ್ಸಿಸ್ ಮ್ಯಾಗೀ ಮುಖ್ಯ ಪಾತ್ರಧಾರಿಗಳು. ಏಪ್ರಿಲ್ 19 ರಂದು ಲಯನ್ಸ್‌ಗೇಟ್ ಪ್ಲೇ ನಲ್ಲಿ ಈ ಚಿತ್ರ ತೆರೆ ಕಾಣಲಿದೆ.


ಎನಿ ಒನ್ ಬಟ್ ಯು

ವಿಲ್ ಗ್ಲುಕ್ ನಿರ್ದೇಶನದ ಈ ಚಿತ್ರದಲ್ಲಿ ಸಿಡ್ನಿ ಸ್ವೀನಿ, ಗ್ಲೆನ್ ಪೊವೆಲ್, ಅಲೆಕ್ಸಾಂಡ್ರಾ ಶಿಪ್, ಗಾಟಾ, ಹ್ಯಾಡ್ಲಿ ರಾಬಿನ್ಸನ್, ಮಿಚೆಲ್ ಹರ್ಡ್, ಡರ್ಮಟ್ ಮುಲ್ರೋನಿ, ಡ್ಯಾರೆನ್ ಬಾರ್ನೆಟ್ ಮತ್ತು ರಾಚೆಲ್ ಗ್ರಿಫಿತ್ಸ್. ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್ ನಲ್ಲಿ ಏಪ್ರಿಲ್ 19ರಂದು ಈ ಚಿತ್ರ ತೆರೆ ಕಾಣಲಿದೆ.


ಲವ್ ಸೆಕ್ಸ್ ಔರ್ ಧೋಖಾ 2

ದಿಬಾಕರ್ ಬ್ಯಾನರ್ಜಿ ನಿರ್ದೇಶನದ ಈ ಚಿತ್ರದಲ್ಲಿ ನಿಮೃತ್ ಕೌರ್ ಅಹ್ಲುವಾಲಿಯಾ, ಅನುಪಮ್ ಜೋರ್ದಾರ್, ರೊಸಾನಾ ಎಲ್ಸಾ ಸ್ಕುಗಿಯಾ, ಉರ್ಫಿ ಜಾವೇದ್, ಅನು ಮಲಿಕ್ ಮುಖ್ಯ ಪಾತ್ರಧಾರಿಗಳಾಗಿದ್ದರೆ. ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಸಾಮಾಜಿಕ ಜಾಲತಾಣದಲ್ಲಿ ಬೆಳೆದ ಪ್ರೀತಿ ಹೇಗಿರುತ್ತದೆ ಎನ್ನುವುದನ್ನು ಈ ಚಿತ್ರ ವಿವರಿಸುತ್ತದೆ.


ಸಿವಿಲ್ ವಾರ್

ಅಲೆಕ್ಸ್ ಗಾರ್ಲ್ಯಾಂಡ್ ನಿರ್ದೇಶನ ನಿರ್ದೇಶನದ ಕರ್ಸ್ಟನ್ ಡನ್ಸ್ಟ್, ವ್ಯಾಗ್ನರ್ ಮೌರಾ, ಕೈಲೀ ಸ್ಪೇನಿ, ಸ್ಟೀಫನ್ ಮೆಕಿನ್ಲೆ ಹೆಂಡರ್ಸನ್, ನಿಕ್ ಆಫರ್ಮನ್ ಅವರು ಅಭಿನಯಿಸಿರುವ ಚಿತ್ರ ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಿಲಿಟರಿ-ಎಂಬೆಡೆಡ್ ಪತ್ರಕರ್ತರ ತಂಡವು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ವೇಗವಾಗಿ ಉಲ್ಬಣಗೊಳ್ಳುತ್ತಿರುವ ಎರಡನೇ ಅಮೇರಿಕನ್ ಅಂತರ್ಯುದ್ಧದ ಸಮಯದಲ್ಲಿ ಪ್ರಯಾಣಿಸುವ ಕಥೆಯನ್ನು ಇದು ಒಳಗೊಂಡಿದೆ.


ದೋ ಔರ್ ದೋ ಪ್ಯಾರ್

ಶಿರ್ಷಾ ಗುಹಾ ಠಾಕುರ್ತಾ ಅವರ ನಿರ್ದೇಶನದ ಈ ಚಿತ್ರದಲ್ಲಿ ವಿದ್ಯಾ ಬಾಲನ್, ಪ್ರತೀಕ್ ಗಾಂಧಿ, ಇಲಿಯಾನಾ ಡಿ’ಕ್ರೂಜ್, ಸೆಂಧಿಲ್ ರಾಮಮೂರ್ತಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. 2017 ರ ರೊಮ್ಯಾಂಟಿಕ್ ಕಾಮಿಡಿ ದಿ ಲವರ್ಸ್‌ನ ಅಧಿಕೃತ ರೂಪಾಂತರ ವಾದ ಈ ಚಿತ್ರದಲ್ಲಿ ದಂಪತಿ ದೂರವಾಗಿ ಮತ್ತೆ ತಮ್ಮ ಹೊಸ ಸಂಗಾತಿಗಾಗಿ ಹುಡುಕುವ ಕಥೆಯನ್ನು ಇದು ಒಳಗೊಂಡಿದೆ.

Continue Reading

ಸ್ಯಾಂಡಲ್ ವುಡ್

Kannada New Movie: ಚಿತ್ರೀಕರಣ ಆರಂಭಿಸಿದ ಬಹುನಿರೀಕ್ಷಿತ ಚಿತ್ರ ʼಉತ್ತರಕಾಂಡʼ

Kannada New Movie: ಉತ್ತರಕಾಂಡ” ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಚಿತ್ರವನ್ನು ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ನಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ನಿರ್ಮಿಸಲಿದ್ದಾರೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ.

VISTARANEWS.COM


on

Kannada New Movie uttarakhanda started shooting
Koo

ಬೆಂಗಳೂರು: ಬಹುನಿರೀಕ್ಷಿತ ಕನ್ನಡ ಚಿತ್ರ (Kannada New Movie) “ಉತ್ತರಕಾಂಡ” ಚಿತ್ರೀಕರಣವನ್ನು ಇಂದು (ಏ. 15) ಆರಂಭಿಸಲಾಗಿದೆ. 15 ದಿನಗಳ ಶೂಟಿಂಗ್‌ ವಿಜಯಪುರದಲ್ಲಿ ಚಿತ್ರೀಕರಣಗೊಳ್ಳಲಿದೆ.

“ಉತ್ತರಕಾಂಡ”ದ ಮುಹೂರ್ತ 2022ರಲ್ಲಿ‌ ಆಗಿದ್ದು, ಚಿತ್ರಕಥೆಯು ಬಯಲುಸೀಮೆಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಿಂದ, ಹಾಗೂ ಚಿತ್ರವು ಉತ್ತರ ಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಚಿತ್ರಕ್ಕೆ ನಿಖರವಾದ ಸಂಶೋಧನೆ ಮತ್ತು ಪ್ಲಾನಿಂಗ್ ಅಗತ್ಯವಿತ್ತು. ಈ ಕಾರಣದಿಂದ ಮತ್ತು ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಚಿತ್ರೀಕರಣ ವಿಳಂಬಗೊಂಡಿತು. ಆದರೆ,‌ ಇದೀಗ ಸರ್ವ ಸಿದ್ಧತೆಗಳೊಂದಿಗೆ ಇಂದು ಚಿತ್ರೀಕರಣ ಆರಂಭಗೊಂಡಿದ್ದು, ಚಿತ್ರ ತಂಡದವರು ಉತ್ಸುಕರಾಗಿದ್ದಾರೆ.

ಚಿತ್ರದ ನಿರ್ದೇಶಕ ರೋಹಿತ್ ಪದಕಿ ಮಾತನಾಡಿ “ಚಿತ್ರವನ್ನು ಆರಂಭಿಸಲು ನಾನು ಉತ್ಸಾಹಿಯಾಗಿದ್ದೇನೆ. ಈ ಚಿತ್ರಕ್ಕೆ ನಿಖರವಾದ ಪ್ಲಾನಿಂಗ್, ತಯಾರಿ ಮತ್ತು ಸಂಶೋಧನೆ ಅಗತ್ಯವಿತ್ತು. ನಾನು ಮತ್ತು ನಿರ್ಮಾಪಕರು ನಿದ್ದೆಗೆಟ್ಟು ಇದನ್ನು ಕಾರ್ಯರೂಪಕ್ಕೆ ತರವುದರಲ್ಲಿ ಶ್ರಮಿಸಿದ್ದೇವೆ. ಶಿವಣ್ಣ ಮತ್ತು ಧನಂಜಯ್ ಪಾತ್ರ ವಹಿಸಿರುವ ಬಹು ದೊಡ್ಡ ತಾರಾಗಣದ ಚಿತ್ರಕಥೆಯನ್ನು ಸಿನಿ ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಈ‌ ಕುರಿತು ಕುಂದು ಕೊರತೆ ಬರದಂತೆ ನಾನು ಮತ್ತು ಕೆ.ಆರ್.ಜಿ ಕೆಲಸ ಮಾಡಲಿದ್ದೇವೆ” ಎಂದರು.

ಇದನ್ನೂ ಓದಿ: Kannada New Movie: ಕಾಸಿನ ಹಿಂದೆ ಬಿದ್ದವರ ಕನಸಿನ ಕಥೆ `ಪುಕ್ಸಟ್ಟೆ ಪೈಸ’ ಥಿಯೇಟರಿನತ್ತ

ಚಿತ್ರದ ನಿರ್ಮಾಪಕ, ಕಾರ್ತಿಕ್ ಗೌಡ ಮಾತನಾಡಿ “ಉತ್ತರಕಾಂಡ ಚಿತ್ರವು ಕೆ.ಆರ್.ಜಿ.ಯ ಹೆಮ್ಮೆ ಎಂದರೆ ಉತ್ಪ್ರೇಕ್ಷೆಯಲ್ಲ. ಕೇವಲ ನಾವಷ್ಟೇ ಅಲ್ಲದೆ ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ ಉತ್ತರಕಾಂಡ ಮುಂಬರಲಿದೆ” ಎಂದು ಭರವಸೆ ನೀಡಿದರು.

“ಉತ್ತರಕಾಂಡ” ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಚಿತ್ರವನ್ನು ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ನಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ನಿರ್ಮಿಸಲಿದ್ದಾರೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ.

ಚಿತ್ರಕ್ಕೆ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ (ಡಿಸೈನ್)ಮಾಡಲಿದ್ದಾರೆ. ಬಹು ದೊಡ್ಡ ತಾರಾಬಳಗವನ್ನು ಹೊಂದಿರುವ ಈ ಚಿತ್ರ, ತಾರಾಬಳಗವನ್ನು ಈ ವಾರ ಘೋಷಿಸಲಿದೆ.

Continue Reading

ಕಾಲಿವುಡ್

Actress Nayanthara: ನಿವಿನ್ ಪೌಲ್‌-ನಯನತಾರಾ ಹೊಸ ಸಿನಿಮಾ ಅನೌನ್ಸ್‌!

Actress Nayanthara: ಈ ಸಿನಿಮಾ ಮೊದಲು ನಯನತಾರಾ ಮತ್ತು ನಿವಿನ್ ಪೌಲ್‌ 2019 ರಲ್ಲಿ ‘ಲವ್ ಆ್ಯಕ್ಷನ್ ಡ್ರಾಮಾ’ ನಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾಗೆ ಧ್ಯಾನ್ ಶ್ರೀನಿವಾಸನ್ ನಿರ್ದೇಶನವಿತ್ತು. ಇದೀಗ ಮತ್ತೆ ತೆರೆ ಮೇಲೆ ಮಿಂಚಲು ಜೋಡಿ ರೆಡಿಯಾಗಿದೆ.

VISTARANEWS.COM


on

Dear Students Nayanthara and Nivin Pauly reunite after five years
Koo

ಬೆಂಗಳೂರು: ನಟಿ ನಯನತಾರಾ (Actress Nayanthara ) ಮತ್ತು ನಿವಿನ್ ಪೌಲ್‌ ಮುಂಬರುವ ಮಲಯಾಳಂ ಚಿತ್ರ ‘ಡಿಯರ್ ಸ್ಟೂಡೆಂಟ್ಸ್’ಗ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಏಪ್ರಿಲ್ 14ರಂದು ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಸಂದೀಪ್ ಕುಮಾರ್ ಮತ್ತು ಜಾರ್ಜ್ ಫಿಲಿಪ್ ಜೋಡಿ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ನಯನತಾರಾ ಮತ್ತು ನಿವಿನ್ ಪೌಲಿ ಅವರು ಚಿತ್ರದಲ್ಲಿ ನಟಿಸಿರುವುದಲ್ಲದೇ ತಮ್ಮ ನಿರ್ಮಾಣ ಸಂಸ್ಥೆಗಳ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಈ ಸಿನಿಮಾ ಮೊದಲು ನಯನತಾರಾ ಮತ್ತು ನಿವಿನ್ ಪೌಲ್‌ 2019 ರಲ್ಲಿ ‘ಲವ್ ಆ್ಯಕ್ಷನ್ ಡ್ರಾಮಾ’ ನಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾಗೆ ಧ್ಯಾನ್ ಶ್ರೀನಿವಾಸನ್ ನಿರ್ದೇಶನವಿತ್ತು. ಇದೀಗ ಮತ್ತೆ ತೆರೆ ಮೇಲೆ ಮಿಂಚಲು ಜೋಡಿ ರೆಡಿಯಾಗಿದೆ. “ಆತ್ಮೀಯ ವಿದ್ಯಾರ್ಥಿಗಳ ಮೋಜಿನ ಜಗತ್ತಿನಲ್ಲಿʼʼ ಎಂದು ಸಣ್ಣ ವಿಡಿಯೊ ಹಂಚಿಕೊಂಡಿದ್ದಾರೆ ನಯನತಾರಾ.

ಮಲಯಾಳಂನಲ್ಲಿ, ನಯನತಾರಾ ಕೊನೆಯ ಬಾರಿಗೆ ನಿರ್ದೇಶಕ ಅಲ್ಫೋನ್ಸ್ ಪುತ್ರೇನ್ ಅವರ ‘ಗೋಲ್ಡ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್ ಸುಕುಮಾರನ್ ನಾಯಕರಗಿದ್ದರು. ಸಿನಿಮಾ ನೆಗೆಟಿವ್‌ ವಿಮರ್ಶೆಯನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ: Nayanthara and Vignesh: ಪತಿಯನ್ನು ಅನ್‌ಫಾಲೋ ಮಾಡಿ ಭಾವುಕ ಪೋಸ್ಟ್‌ ಹಂಚಿಕೊಂಡ ನಯನತಾರ!

ಇತ್ತೀಚೆಗೆ ನಿರ್ದೇಶಕ ವಿನೀತ್ ಶ್ರೀನಿವಾಸನ್ ಅವರ ‘ವರ್ಷಂಗಲ್ಕ್ಕು ಶೇಷಂ’ ಚಿತ್ರದಲ್ಲಿ ನಿವಿನ್ ಪೌಲಿ ಕಾಣಿಸಿಕೊಂಡಿದ್ದರು. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಇನ್ನೂ ಯಶಸ್ವಿಯಾಗಿ ಓಡುತ್ತಿದೆ.

‘ಬೈಜು ಬವ್ರಾ’ ಚಿತ್ರದಲ್ಲಿ ನಟಿಸುತ್ತಾರಾ ನಯನತಾರಾ?

ಸದ್ಯ ಕೇಳಿ ಬಂದಿರುವ ಸುದ್ದಿಯ ಪ್ರಕಾರ ನಯನತಾರಾ ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಬಹು ನಿರೀಕ್ಷಿತ ‘ಬೈಜು ಬವ್ರಾ’ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣವೀರ್‌ ಸಿಂಗ್‌ ಮತ್ತು ಆಲಿಯಾ ಭಟ್‌ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಬಹಳ ಹಿಂದಿನಿಂದಲೇ ಕೇಳಿ ಬರುತ್ತಿತ್ತು. ಇದೀಗ ಈ ಬಹು ನಿರೀಕ್ಷಿತ ಪ್ರಾಜೆಕ್ಟ್‌ನಲ್ಲಿ ನಯನತಾರಾ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ತಮ್ಮ ಎರಡನೇ ಬಾಲಿವುಡ್‌ ಚಿತ್ರದ ಬಗ್ಗೆ ಸಂಜಯ್‌ ಲೀಲಾ ಬನ್ಸಾಲಿ ಜತೆ ಈಗಾಗಲೇ ನಯನತಾರಾ ಚರ್ಚೆ ನಡೆಸಿ ನಟಿಸಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಣವೀರ್‌ ಸಿಂಗ್‌ ಟೈಟಲ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು 1952ರಲ್ಲಿ ತೆರೆಕಂಡ ‘ಬೈಜು ಬವ್ರಾ’ ಚಿತ್ರದ ರಿಮೇಕ್‌ ಎನ್ನಲಾಗಿದ್ದು, ಮೂಲ ಚಿತ್ರದಲ್ಲಿ ಭರತ್ ಭೂಷಣ್-ಮೀನಾ ಕುಮಾರಿ ನಟಿಸಿದ್ದರು. ಸಂಗೀತಗಾರನೊಬ್ಬನ ಜೀವನದ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಿತ್ತು. ಈ ಚಿತ್ರದ ಪ್ರಮುಖ ಪಾತ್ರ ನಿರ್ವಹಿಸುವಂತೆ ನಯನತಾರಾ ಅವರನ್ನು ಸಂಪರ್ಕಿಸಲಾಗಿದೆ. ಅವರು ಇನ್ನೂ ತಮ್ಮ ನಿರ್ಧಾರವನ್ನು ಅಂತಿಮಗೊಳಿಸಿಲ್ಲ. ಮಾರ್ಚ್‌ನಲ್ಲಿ ನಯನತಾರಾ, ಪತಿ ವಿಘ್ನೇಶ್‌ ಶಿವನ್‌ ಜತೆ ಸಂಜಯ್‌ ಲೀಲಾ ಬನ್ಸಾಲಿ ಅವರನ್ನು ಭೇಟಿಯಾಗಿ ಈ ಸಿನಿಮಾ ಕುರಿತು ಮಾತುಕತೆ ನಡೆಸಿದ್ದರು ಎಂದು ಮೂಲಗಳು ವರದಿ

Continue Reading
Advertisement
DK Shivakumar attack on HD Kumaraswamy
ಕರ್ನಾಟಕ21 seconds ago

DK Shivakumar: ಕುಮಾರಸ್ವಾಮಿ ನನಗೆ ಮರ್ಯಾದೆ ಕೊಟ್ಟರೆ, ನಾನೂ ಕೊಡುತ್ತೇನೆ: ಡಿ.ಕೆ. ಶಿವಕುಮಾರ್

2nd PUC Exam
ಕರ್ನಾಟಕ19 mins ago

2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಏ.18ರವರೆಗೆ ಅವಕಾಶ

Lok Sabha Election
ದೇಶ21 mins ago

Lok Sabah Election : ಹೇಮಮಾಲಿನಿಗೆ ಅವಹೇಳನ; ಕಾಂಗ್ರೆಸ್​ ನಾಯಕ ಸುರ್ಜೇವಾಲಾಗೆ 48 ಗಂಟೆ ನಿಷೇಧ

Kanker Encounter
ದೇಶ27 mins ago

Kanker Encounter: ಎನ್‌ಕೌಂಟರ್‌ನಲ್ಲಿ 18 ಮಾವೋವಾದಿಗಳ ಹತ್ಯೆಗೈದ ಭದ್ರತಾ ಪಡೆ

Karnataka weather Forecast
ಮಳೆ59 mins ago

Karnataka Weather : ಮುಂದಿನ 4 ತಿಂಗಳು ವಾಡಿಕೆಗಿಂತ‌ ಹೆಚ್ಚು ಮಳೆ; ನಾಳಿನ ಹವಾಮಾನ ಏನು?

Oil Pulling
ಆರೋಗ್ಯ1 hour ago

Oil Pulling: ಆಯಿಲ್‌ ಪುಲ್ಲಿಂಗ್‌; ನಿಮ್ಮ ಬಾಯಿಯೊಳಗಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಇಲ್ಲಿದೆ!

UPSC Results 2023
ಪ್ರಮುಖ ಸುದ್ದಿ1 hour ago

UPSC Results 2023: ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್‌ ಆದ ಪೊಲೀಸ್‌ ಅಧಿಕಾರಿ!

Take action to close failed borewell says Vijayanagara DC MS Diwakar
ವಿಜಯನಗರ1 hour ago

Vijayanagara News: ವಿಫಲ ಕೊಳವೆಬಾವಿ ಮುಚ್ಚಲು ಕ್ರಮವಹಿಸಿ: ಡಿಸಿ ಎಂ.ಎಸ್. ದಿವಾಕರ್‌

Job Alert
ಉದ್ಯೋಗ1 hour ago

Job Alert: ಅಂಗನವಾಡಿಯಲ್ಲಿದೆ 513 ಹುದ್ದೆ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ; ಏ. 19 ಕೊನೆಯ ದಿನ

Kalaburagi MP Dr. Umesh Jadav spoke in booth level workers meeting Chittapur assembly constituency
ಕಲಬುರಗಿ1 hour ago

Lok Sabha Election 2024: ಕೋಲಿ ಸಮುದಾಯದ ಬಗ್ಗೆ ಕಾಂಗ್ರೆಸ್‌ ಮೊಸಳೆ ಕಣ್ಣೀರು: ಡಾ. ಉಮೇಶ್ ಜಾಧವ್ ಕಿಡಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ15 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌