Akshay Kumar: ಅಕ್ಷಯ್ ಕುಮಾರ್ ಸಿನಿಮಾ ಹಾಡಿಗೆ ಹೊಸ ಟಚ್‌ ಕೊಟ್ಟ ʻಹೇ ಬೇಬಿʼ ಖ್ಯಾತಿಯ ರಿತೇಶ್, ಫರ್ದೀನ್ ಖಾನ್; ವಿಡಿಯೊ ವೈರಲ್‌! - Vistara News

ಬಾಲಿವುಡ್

Akshay Kumar: ಅಕ್ಷಯ್ ಕುಮಾರ್ ಸಿನಿಮಾ ಹಾಡಿಗೆ ಹೊಸ ಟಚ್‌ ಕೊಟ್ಟ ʻಹೇ ಬೇಬಿʼ ಖ್ಯಾತಿಯ ರಿತೇಶ್, ಫರ್ದೀನ್ ಖಾನ್; ವಿಡಿಯೊ ವೈರಲ್‌!

Akshay Kumar: ಸಾಜಿದ್ ಖಾನ್ ನಿರ್ದೇಶನದ ಹೇ ಬೇಬಿ ಸಿನಿಮಾ ಇಂಗ್ಲಿಷ್ ಸಿನಿಮಾ ‘ತ್ರೀ ಮೆನ್ ಅಂಡ್ ಎ ಬೇಬಿ’ ಚಿತ್ರದ ರಿಮೇಕ್ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿತ್ತು. ಈ ಮೂವರು ನಟರ ಜೊತೆಗೆ, ಒಬ್ಬಳು ಮುದ್ದಾದ ಹುಡುಗಿ ಕೂಡ ಇದ್ದಳು. ಇದೀಗ ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್ ಮತ್ತು ಫರ್ದೀನ್ ಖಾನ್ ‘ಖೇಲ್ ಖೇಲ್ ಮೇ’ ಸಿನಿಮಾ ಪ್ರಚಾರ ಮಾಡಲು ಮತ್ತೆ ಮೂವರು ಒಂದಾಗಿದ್ದಾರೆ.

VISTARANEWS.COM


on

Akshay Kumar Riteish Fardeen recreate Heyy Babyy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಹೇ ಬೇಬಿ’ ಸಿನಿಮಾ 2007ರಲ್ಲಿ ರಿಲೀಸ್ ಆಯಿತು. ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್ ಮತ್ತು ಫರ್ದೀನ್ ಖಾನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.  ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್ ಮತ್ತು ಫರ್ದೀನ್ ಖಾನ್ ಇದೀಗ ‘ಹೇ ಬೇಬಿ’ ಚಿತ್ರದ ಸ್ಟೆಪ್ಸ್‌ವನ್ನು ರಿ ಕ್ರಿಯೇಟ್‌ ಮಾಡಿದ್ದಾರೆ. ಅಕ್ಷಯ್ ಅವರ ಮುಂಬರುವ ಚಿತ್ರ, ‘ಖೇಲ್ ಖೇಲ್ ಮೇ’ ಸಿನಿಮಾ ಪ್ರಚಾರ ಮಾಡಲು ಮತ್ತೆ ಮೂವರು ಒಂದಾಗಿ, ಚಿತ್ರದ ಹೊಸ ಹಾಡು ‘ಹೌಲಿ ಹೌಲಿ’ಯ ಸಾಂಗ್‌ಗೆ ಹೆಜ್ಜೆ ಇಟ್ಟಿದ್ದಾರೆ.

ಸಾಜಿದ್ ಖಾನ್ ನಿರ್ದೇಶನದ ಹೇ ಬೇಬಿ ಸಿನಿಮಾ ಇಂಗ್ಲಿಷ್ ಸಿನಿಮಾ ‘ತ್ರೀ ಮೆನ್ ಅಂಡ್ ಎ ಬೇಬಿ’ ಚಿತ್ರದ ರಿಮೇಕ್ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿತ್ತು. ಈ ಮೂವರು ನಟರ ಜೊತೆಗೆ, ಒಬ್ಬಳು ಮುದ್ದಾದ ಹುಡುಗಿ ಕೂಡ ಇದ್ದಳು. ಇದೀಗ ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್ ಮತ್ತು ಫರ್ದೀನ್ ಖಾನ್ ‘ಖೇಲ್ ಖೇಲ್ ಮೇ’ ಸಿನಿಮಾ ಪ್ರಚಾರ ಮಾಡಲು ಮತ್ತೆ ಮೂವರು ಒಂದಾಗಿದ್ದಾರೆ.

ಅಕ್ಷಯ್ ಅವರು ಮಂಗಳವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಮೋಜಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಹೀಗೆ ಬರೆದಿದ್ದಾರೆ, “ಹೇ ಬೇಬಿ ಹೌಲಿ ಹೌಲಿಯನ್ನು ಭೇಟಿಯಾದಾಗ, ಈಗ ನೀವು ನಿಮ್ಮ ಸ್ನೇಹಿತರೊಂದಿಗೆ ಹೌಲಿ ಹೌಲಿ ರೀಲ್ಸ್‌ ಮಾಡಿ , ನಮ್ಮೊಂದಿಗೆ ಹಂಚಿಕೊಳ್ಳಿ. ಮತ್ತು 15 ಆಗಸ್ಟ್, 2024 ರಂದು ಚಿತ್ರಮಂದಿರಗಳಲ್ಲಿ ಖೇಲ್ ಖೇಲ್ ಮೇ ಬಿಡುಗಡೆಯಾಗುತ್ತಿದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Martin Trailer: ಪ್ಯಾನ್‌ ವರ್ಲ್ಸ್‌ ಮಾರ್ಟಿನ್‌ ಸಿನಿಮಾ ಟ್ರೈಲರ್‌ ಔಟ್;‌ ಪಾಕ್‌ನಲ್ಲಿ ಧ್ರುವ ಸರ್ಜಾ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ!

ಈ ತಿಂಗಳ ಆರಂಭದಲ್ಲಿ, ‘ಖೇಲ್ ಖೇಲ್ ಮೇ’ ತಂಡ ಟ್ರೈಲರ್ ಅನ್ನು ಬಿಡುಗಡೆ ಗೊಳಿಸಿದರು. ಅಕ್ಷಯ್, ತಾಪ್ಸಿ ಪನ್ನು, ವಾಣಿ ಕಪೂರ್, ಫರ್ದೀನ್ ಖಾನ್ ಮತ್ತು ಆಮಿ ವಿರ್ಕ್ ನಟಿಸಿರುವ ಈ ಚಿತ್ರ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಅಮರ್ ಕೌಶಿಕ್ ನಿರ್ದೇಶನದ ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅವರ ʻಸ್ಟ್ರೀಟ್ 2ʼ ರೊಂದಿಗೆ ಘರ್ಷಣೆಯಾಗುವ ಈ ಚಿತ್ರವನ್ನು ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ಅಕ್ಷಯ್ ಕುಮಾರ್ ದೊಡ್ಡ ಫ್ಲಾಪ್ ಕಂಡರು. ‘ಸರ್ಫಿರಾ’ ಕೂಡ ಕಳಪೆ ಗಳಿಕೆ ಮಾಡಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Divya Seth: ಸುಷ್ಮಾ ಸೇಠ್ ಮೊಮ್ಮಗಳು, ʻಜಬ್ ವಿ ಮೆಟ್ ʼಚಿತ್ರದ ಖ್ಯಾತ ನಟಿಯ ಪುತ್ರಿ ನಿಧನ

Divya Seth: ವರದಿಯು ಪ್ರಕಾರ ಮಿಹಿಕಾಗೆ ಮೊದಲು ಜ್ವರ ಮತ್ತು ನಂತರ ಮೂರ್ಛೆ ರೋಗ ಇತ್ತು ಎಂದು ವರದಿಯಾಗಿದೆ. ಇದೀಗ ಮಗಳ ಸಾವಿನಿಂದ ಕುಟುಂಬ ಇನ್ನೂ ಆಘಾತದಲ್ಲಿದೆ. ಕಳೆದ ವಾರವಷ್ಟೇ, ಕುಟುಂಬದ ಮೂರು ತಲೆಮಾರಿನ ಫೋಟೊವನ್ನು ದಿವ್ಯಾ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು.

VISTARANEWS.COM


on

Divya Seth Sushma Seth granddaughter Mihika Shah dies Divya Seth shares the news
Koo

ಬೆಂಗಳೂರು: ಹಿರಿಯ ನಟಿ ಸುಷ್ಮಾ ಸೇಠ್ (Sushma Seth) ಅವರ ಮೊಮ್ಮಗಳು, ನಟಿ ದಿವ್ಯಾ ಸೇಠ್ ಶಾ (Divya Seth) ಅವರ ಪುತ್ರಿ ಮಿಹಿಕಾ ಶಾ (Mihika Shah) ಸೋಮವಾರ ನಿಧನರಾದರು. ಆಕೆಯ ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ, ಕೆಲವು ವರದಿಗಳ ಪ್ರಕಾರ ಅನಾರೋಗ್ಯದಿಂದಾಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಈ ದುಃಖದ ಸುದ್ದಿಯನ್ನು ದಿವ್ಯಾ ಅವರು ಮಂಗಳವಾರ ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ದಿವ್ಯಾ ಬರೆದುಕೊಂಡಿದ್ದಾರೆ, “ಆಗಸ್ಟ್ 8 ರಂದು ಮಿಹಿಕಾ ಸೇಠ್‌ ಗೌರವ ನಮನ ಪ್ರಾರ್ಥನೆ ನಡೆಯಲಿದೆ ಎಂದು ಪೋಸ್ಟ್ ಮೂಲಕ ತಿಳಿಸಿದ್ದಾರೆ. .” ನೋಟಿನಲ್ಲಿ ದಿವ್ಯಾ ಮತ್ತು ಆಕೆಯ ಪತಿ ಸಿದ್ಧಾರ್ಥ್ ಶಾ ಸಹಿ ಕೂಡ ಇದೆ. ಮಗಳ ಸಾವಿಗೆ ಕಾರಣವನ್ನು ಅವರು ಟಿಪ್ಪಣಿಯಲ್ಲಿ ಬಹಿರಂಗಪಡಿಸಿಲ್ಲ.

ವರದಿಯು ಪ್ರಕಾರ ಮಿಹಿಕಾಗೆ ಮೊದಲು ಜ್ವರ ಮತ್ತು ನಂತರ ಮೂರ್ಛೆ ರೋಗ ಇತ್ತು ಎಂದು ವರದಿಯಾಗಿದೆ. ಇದೀಗ ಮಗಳ ಸಾವಿನಿಂದ ಕುಟುಂಬ ಇನ್ನೂ ಆಘಾತದಲ್ಲಿದೆ. ಕಳೆದ ವಾರವಷ್ಟೇ, ಕುಟುಂಬದ ಮೂರು ತಲೆಮಾರಿನ ಫೋಟೊವನ್ನು ದಿವ್ಯಾ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ಚಿತ್ರದಲ್ಲಿ, ತನ್ನ ಮಗಳೊಂದಿಗೆ ಹಸಿರು ಉಡುಪಿನಲ್ಲಿ ಮತ್ತು ಅವರ ತಾಯಿ ಕೆಂಪು ಉಡುಪಿನಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

ಮಿಹಿಕಾ ಹಿರಿಯ ನಟಿ ಸುಷ್ಮಾ ಸೇಠ್ ಅವರ ಮೊಮ್ಮಗಳು, ʻಕಭಿ ಖುಷಿ ಕಭಿ ಗಮ್ …, ಚಲ್ ಮೇರೆ ಭಾಯ್, ಕಲ್ ಹೋ ನ ಹೋ, ನಾಗಿನಾ ಮತ್ತು ಸ್ಟೂಡೆಂಟ್ ಆಫ್ ದಿ ಸ್ಟೂಡೆಂಟ್ ಮುಂತಾದ ಚಿತ್ರಗಳಲ್ಲಿ ಜನಪ್ರಿಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮ್ಮ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: Martin Trailer: ಪ್ಯಾನ್‌ ವರ್ಲ್ಸ್‌ ಮಾರ್ಟಿನ್‌ ಸಿನಿಮಾ ಟ್ರೈಲರ್‌ ಔಟ್;‌ ಪಾಕ್‌ನಲ್ಲಿ ಧ್ರುವ ಸರ್ಜಾ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ!

ದಿವ್ಯಾ ಸೇಠ್ ಅವರು ʻಜಬ್ ವಿ ಮೆಟ್ʼ, ʻಲ್ ಧಡಕ್ನೆ ದೋʼ, ʻಆರ್ಟಿಕಲ್ 370ʼ ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬನೇಗಿ ಅಪ್ನಿ ಬಾತ್ ಮತ್ತು ದೇಖ್ ಭಾಯಿ ದೇಖ್‌ನಂತಹ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. 1978ರಲ್ಲಿ ಬಾಲಿವುಡ್‌ನ ಜೂನೂನ್ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟ ಸುಷ್ಮಾ ಸೇಟ್‌, ಸಿಲ್ಸಿಲಾ, ಪ್ರೇಮ್ ರೋಗ್, ರಾಮ್ ತೇರಿ ಗಂಗಾ ಮೈಲಿ, ದೀವಾನಾ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Continue Reading

ಸಿನಿಮಾ

Independence Day 2024: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಕಥೆ ಹೇಳುವ ಟಾಪ್‌ 10 ಹಿಂದಿ ಸಿನೆಮಾಗಳಿವು

78ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2024) ಸಂಭ್ರಮದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಮತ್ತೊಮ್ಮೆ ನೋಡಬೇಕು, ನಮ್ಮ ಮಕ್ಕಳಿಗೂ ತೋರಿಸಬೇಕು ಎಂದೆನಿಸುವ ಹಲವು ಹಿಂದಿ ಸಿನಿಮಾಗಳಿವೆ. ನಮ್ಮೊಳಗಿನ ದೇಶಭಕ್ತಿಯನ್ನು ಜಾಗೃತಗೊಳಿಸಲು, ಮಕ್ಕಳಲ್ಲಿ ದೇಶಭಕ್ತಿಯನ್ನು ಚಿಗುರಿಸಲು ನೆರವಾಗಬಲ್ಲ ಈ ಸಿನಿಮಾಗಳನ್ನು ನಾವು ಮತ್ತೊಮ್ಮೆ ನೋಡಬೇಕು. ಈ ಎಲ್ಲ ಚಿತ್ರಗಳು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯರು ತೋರಿದ ಅದಮ್ಯ ಚೇತನಕ್ಕೆ ಸಂದ ಗೌರವವಾಗಿದೆ. ದೇಶ ಸ್ವಾತಂತ್ರ್ಯ ಪಡೆಯಲು ಅವರೆಲ್ಲ ಮಾಡಿರುವ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತದೆ.

VISTARANEWS.COM


on

By

Independence Day 2024
Koo

78ನೇ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲು (Independence Day 2024) ನಾವೆಲ್ಲ ಸಿದ್ಧರಾಗಿದ್ದೇವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯವು ಸಾಕಷ್ಟು ಮಂದಿಯ ಹೋರಾಟದ ಫಲವಾಗಿ ಬಂದಿದೆ. ಇಂಥವರ (freedom fighter story) ಸ್ಫೂರ್ತಿದಾಯಕ ಕಥೆಗಳನ್ನು ಆಧರಿಸಿ ಹಲವು ಚಲನಚಿತ್ರಗಳು (film) ಬಂದಿವೆ. ಈ ಚಿತ್ರಗಳು ನಮ್ಮಲ್ಲಿ ದೇಶ ಪ್ರೇಮವನ್ನು ಬಡಿದೆಬ್ಬಿಸುತ್ತದೆ. ಈ ಚಿತ್ರಗಳನ್ನು (Indian film) ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮತ್ತೊಮ್ಮೆ ನಾವು ನೋಡಬೇಕು, ನಮ್ಮ ಮಕ್ಕಳಿಗೂ ತೋರಿಸಬೇಕು. ನಮ್ಮೊಳಗಿನ ದೇಶಭಕ್ತಿಯನ್ನು ಜಾಗೃತಗೊಳಿಸಲು, ಮಕ್ಕಳಲ್ಲಿ ದೇಶಭಕ್ತಿಯನ್ನು ಚಿಗುರಿಸಲು ನೆರವಾಗಬಲ್ಲ ಪ್ರಮುಖ ಹತ್ತು ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಗಾಂಧಿ: (1982ರಲ್ಲಿ ನಿರ್ಮಾಣ)

ರಿಚರ್ಡ್ ಅಟೆನ್‌ಬರೋ ಅವರ ಈ ಚಲನಚಿತ್ರ “ಗಾಂಧಿ” ಭಾರತದ ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿಯ ನಾಯಕ ಮಹಾತ್ಮ ಗಾಂಧಿಯವರ ಜೀವನವನ್ನು ವಿವರಿಸುತ್ತದೆ. ಗಾಂಧಿಯವರ ಅಹಿಂಸೆ ಮತ್ತು ಅಸಹಕಾರ ಚಳವಳಿಯ ಅಸ್ತ್ರದ ಪರಿಣಾಮವನ್ನು ಸುಂದರವಾಗಿ ಸೆರೆಹಿಡಿದಿದೆ. ಇದು 8 ಆಸ್ಕರ್‌ ಅಕಾಡೆಮಿ ಪ್ರಶಸ್ತಿಗಳನ್ನು ಗಳಿಸಿದೆ.


ಲಗಾನ್: (2001ರಲ್ಲಿ ನಿರ್ಮಾಣ)

ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ “ಲಗಾನ್” ಚಿತ್ರ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ನಡೆದ ಕ್ರಿಕೆಟ್‌ ಪಂದ್ಯದ ಕಥೆಯಾಗಿದೆ. ಇದು ಭಾರತದ ಹಳ್ಳಿಯ ಜನರ ಸುತ್ತ ಹೆಣೆದ ಕಥೆಯಾಗಿದೆ. ಬ್ರಿಟಿಷ್ ದಬ್ಬಾಳಿಕೆ ಮತ್ತು ಅಮಾನವೀಯ ತೆರಿಗೆಯಿಂದ ತಪ್ಪಿಸಿಕೊಳ್ಳಲು ಹಳ್ಳಿಯ ಜನರು ಕ್ರಿಕೆಟ್ ಪಂದ್ಯದ ಸವಾಲು ಹಾಕುತ್ತಾರೆ. ಈ ಚಿತ್ರವು ಬ್ರಿಟಿಷರ ವಿರುದ್ಧದ ಭಾರತೀಯರ ಏಕತೆ, ಬದ್ಧತೆ ಮತ್ತು ಧೈರ್ಯ-ಸಾಹಸವನ್ನು ಪ್ರತಿಬಿಂಬಿಸಿದೆ.


ರಂಗ್ ದೇ ಬಸಂತಿ: (2006ರಲ್ಲಿ ನಿರ್ಮಾಣ)

ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ “ರಂಗ್ ದೇ ಬಸಂತಿ” ಸಮಕಾಲೀನ ಭಾರತೀಯ ಯುವಕರ ಕಥೆಯನ್ನು ಒಳಗೊಂಡಿದೆ. ಇದು ಸ್ವಾತಂತ್ರ್ಯ ಹೋರಾಟಗಾರರ ಕಥೆಗಳೊಂದಿಗೆ ಹೆಣೆದುಕೊಂಡಿದೆ. ಈ ಚಲನಚಿತ್ರವು ಹಿಂದಿನ ಮತ್ತು ವರ್ತಮಾನದ ನಡುವಿನ ಕಥೆಯನ್ನು ಹೆಣೆದು ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಹೊಸ ಪೀಳಿಗೆಯನ್ನು ಪ್ರೇರೇಪಿಸುವ ಕಥಾ ಹಂದರವನ್ನು ಇದು ಒಳಗೊಂಡಿದೆ.

1942 ಎ ಲವ್ ಸ್ಟೋರಿ (1994ರಲ್ಲಿ ಬಿಡುಗಡೆ)

ವಿಧು ವಿನೋದ್ ಚೋಪ್ರಾ ಅವರ ರೊಮ್ಯಾಂಟಿಕ್ ಚಿತ್ರ “1942: ಎ ಲವ್ ಸ್ಟೋರಿ” ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಆಗಿದೆ. ಕ್ವಿಟ್ ಇಂಡಿಯಾ ಚಳವಳಿಯ ಹಿನ್ನೆಲೆಯನ್ನು ಒಳಗೊಂಡಿದೆ. ಈ ಚಿತ್ರವು ಸ್ವಾತಂತ್ರ್ಯದ ಹೋರಾಟದೊಂದಿಗೆ ಅರಳುವ ಪ್ರೇಮಕಥೆಯನ್ನು ಹೊಂದಿದೆ. ಬ್ರಿಟಿಷರ ವಿರುದ್ಧ ಹೋರಾಟ ಮತ್ತು ಯುವ ಜೋಡಿಯ ಪ್ರೀತಿಯ ಕಥಾನಕ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.


ಮಂಗಲ್ ಪಾಂಡೆ: ದಿ ರೈಸಿಂಗ್ (2005ರಲ್ಲಿ ನಿರ್ಮಾಣ)

ಕೇತನ್ ಮೆಹ್ತಾ ಅವರ ಐತಿಹಾಸಿಕ ಜೀವನಚರಿತ್ರೆಯ “ಮಂಗಲ್ ಪಾಂಡೆ: ದಿ ರೈಸಿಂಗ್”ನಲ್ಲಿ ಆಮೀರ್ ಖಾನ್ ಮನೋಜ್ಞವಾಗಿ ನಟಿಸಿದ್ದಾರೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ 1857ರ ಸಿಪಾಯಿ ದಂಗೆಯನ್ನು ಹೊತ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಪಾಯಿ ಮಂಗಲ್ ಪಾಂಡೆಯ ಜೀವನವನ್ನು ಇದು ಬಿಂಬಿಸಿದೆ.

ನೇತಾಜಿ ಸುಭಾಸ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೋ (2004ರಲ್ಲಿ ನಿರ್ಮಾಣ)

ಶ್ಯಾಮ್ ಬೆನಗಲ್ ಅವರ ಈ ಚಿತ್ರವು ಪ್ರಭಾವಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜೀವನ ಕಥೆಯನ್ನು ಒಳಗೊಂಡಿದೆ. ಇದು ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ) ಸ್ಥಾಪನೆ ಮತ್ತು ಬ್ರಿಟಿಷ್ ಆಳ್ವಿಕೆಯನ್ನು ಉರುಳಿಸಲು ಅವರು ನಡೆಸಿದ ಸಾಹಸಮಯ ಹೋರಾಟದ ಮೇಲೆ ಬೆಳಕು ಚೆಲ್ಲುತ್ತದೆ.


ದಿ ಲೆಜೆಂಡ್ ಆಫ್ ಭಗತ್ ಸಿಂಗ್ (2002ರಲ್ಲಿ ನಿರ್ಮಾಣ)

ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ʼದಿ ಲೆಜೆಂಡ್ ಆಫ್ ಭಗತ್ ಸಿಂಗ್ʼ ಚಿತ್ರದಲ್ಲಿ ಅಜಯ್ ದೇವಗನ್ ಭಾರತದ ಸ್ವಾತಂತ್ರ್ಯಕ್ಕಾಗಿ ವೀರಾವೇಶದಿಂದ ಹೋರಾಡಿದ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ಬ್ರಿಟಿಷ್ ಆಡಳಿತಗಾರರ ವಿರುದ್ಧ ಭಗತ್‌ ಸಿಂಗ್ ಅವರ ಅಚಲ ಬದ್ಧತೆ ಮತ್ತು ಧೈರ್ಯದ ನಿಲುವನ್ನು ಚಲನಚಿತ್ರವು ಎತ್ತಿ ತೋರಿಸುತ್ತದೆ.


ಶಹೀದ್ (1965ರಲ್ಲಿ ನಿರ್ಮಾಣ)

ಎಸ್. ರಾಮ್ ಶರ್ಮಾ ಅವರ “ಶಹೀದ್” ಚಿತ್ರ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ್ ರಾಜಗುರು ಅವರ ಜೀವನವನ್ನು ಚಿತ್ರಿಸುತ್ತದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಈ ಮೂವರು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತಿ ಮತ್ತು ನಿಸ್ವಾರ್ಥತೆಯನ್ನು ಚಿತ್ರದ ಮೂಲಕ ಗೌರವಿಸಲಾಗಿದೆ.


ಚಿತ್ತಗಾಂಗ್ (2012ರಲ್ಲಿ ನಿರ್ಮಾಣ)

ವೇದವ್ರತ ಪೈನ್ ಅವರ “ಚಿತ್ತಗಾಂಗ್” ಚಿತ್ರವು 1930ರ ಚಿತ್ತಗಾಂಗ್ ದಂಗೆಯ ಸಮಯದಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸವಾಲೆಸೆದ ಹದಿಹರೆಯದ ಶಾಲಾ ಹುಡುಗರ ಕಥೆಯನ್ನು ಹೇಳುತ್ತದೆ. ಈ ಯುವ ದೇಶಭಕ್ತರ ಗಮನಾರ್ಹ ಶೌರ್ಯ ಮತ್ತು ಸಂಕಲ್ಪವನ್ನು ಚಲನಚಿತ್ರವು ಸಮರ್ಥವಾಗಿ ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: Indian 2 Ott: ಇಂಡಿಯನ್ 2 ಒಟಿಟಿ ಸ್ಟ್ರೀಮಿಂಗ್ ಡೇಟ್ ಅನೌನ್ಸ್!


ಬೋಸ್: ದಿ ಫಾರ್ಗಾಟನ್ ಹೀರೊ (2005ರಲ್ಲಿ ನಿರ್ಮಾಣ)

ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜೀವನದ ಮತ್ತೊಂದು ಚಿತ್ರ ಇದು. ಶ್ಯಾಮ್ ಬೆನಗಲ್ ನಿರ್ದೇಶಿಸಿದ “ಬೋಸ್: ದಿ ಫಾರ್ಗಾಟನ್ ಹೀರೋ” ಚಿತ್ರವು ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬೋಸ್ ಅವರ ಅಂತಾರಾಷ್ಟ್ರೀಯ ಮಟ್ಟದ ಪ್ರಯತ್ನಗಳು ಮತ್ತು ಇಂಡಿಯನ್‌ ನ್ಯಾಷನಲ್‌ ಆರ್ಮಿಯನ್ನು ಸಜ್ಜುಗೊಳಿಸುವಲ್ಲಿ ಅವರು ತೋರಿದ ಚಾಣಾಕ್ಷತೆಯನ್ನು ಮನೋಜ್ಞವಾಗಿ ಕಟ್ಟಿ ಕೊಟ್ಟಿದೆ.

ಈ ಎಲ್ಲ ಚಿತ್ರಗಳು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯರು ತೋರಿದ ಅದಮ್ಯ ಚೇತನಕ್ಕೆ ಸಂದ ಗೌರವವಾಗಿದೆ. ದೇಶ ಸ್ವಾತಂತ್ರ್ಯ ಪಡೆಯಲು ಅವರೆಲ್ಲ ಮಾಡಿರುವ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತದೆ.

Continue Reading

ಬಾಲಿವುಡ್

Nia Sharma: ಬ್ರಾ ಧರಿಸಿ ಪೋಸ್‌ ಕೊಟ್ಟ ಕಿರುತೆರೆ ನಟಿ ನಿಯಾ ಶರ್ಮಾರನ್ನು ಕಾಲೆಳೆದ ನೆಟ್ಟಿಗರು!

Nia Sharma: ನಿಯಾ ಅವರ ಅಸಾಂಪ್ರದಾಯಿಕ ಮತ್ತು ಸ್ಟೈಲಿಶ್ ಲುಕ್‌ಗಾಗಿ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ, ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವಿಭಾಗವು ನಟಿಯನ್ನು ಟ್ರೋಲ್ ಮಾಡಿದ್ದಾರೆ. ಮತ್ತು ಅವರ ಫ್ಯಾಶನ್ ಸೆನ್ಸ್ ಅನ್ನು ಪ್ರಶ್ನಿಸಿದ್ದಾರೆ.

VISTARANEWS.COM


on

Nia Sharma Trolled For Wearing Plunging Neckline Bralette
Koo

ಬೆಂಗಳೂರು: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜನಪ್ರಿಯ ಕಿರುತೆರೆ ನಟಿ ನಿಯಾ ಶರ್ಮಾ (Nia Sharma) ಕಾಣಿಸಿಕೊಂಡರು. ಆದರೆ ನಟಿ ಬಟ್ಟೆಯ ವಿಚಾರಕ್ಕೆ ಸಖತ್‌ ಟ್ರೋಲ್‌ ಆಗಿದ್ದಾರೆ. ನಿಯಾ ಧರಿಸಿದ್ದ ಬಿಳಿ ಬಣ್ಣದ ಬ್ರಾಲೆಟ್‌ ಮತ್ತು ಟ್ರ್ಯಾಕ್ ಪ್ಯಾಂಟ್ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಬ್ರಾಗೆ ಬಿಳಿ ಹೂವುಗಳ ಡಿಸೈನ್ ಇದ್ದರೂ ಫ್ಯಾಷನ್ ಎನ್ನುವ ಪಟ್ಟ ಕೊಟ್ಟರೂ, ವಿಶೇಷ ಅತಿಥಿಗಳು ಧರಿಸುವ ಉಡುಪು ಅಲ್ಲ ಎನ್ನೋದು ನೆಟ್ಟಿಗರ ವಾದ.

ನಿಯಾ ಅವರ ಅಸಾಂಪ್ರದಾಯಿಕ ಮತ್ತು ಸ್ಟೈಲಿಶ್ ಲುಕ್‌ಗಾಗಿ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ, ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವಿಭಾಗವು ನಟಿಯನ್ನು ಟ್ರೋಲ್ ಮಾಡಿದ್ದಾರೆ. ಮತ್ತು ಅವರ ಫ್ಯಾಶನ್ ಸೆನ್ಸ್ ಅನ್ನು ಪ್ರಶ್ನಿಸಿದ್ದಾರೆ.

“ಅವಳ ಡ್ರೆಸ್ಸಿಂ’ಏನ್ ಮೇಡಂ ಮನೆಯಲ್ಲಿ ಒಂದು ಚೆನ್ನಾಗಿರುವ ಡ್ರೆಸ್ ಇಲ್ವಾ? ಇಷ್ಟೋಂದು ಕೆಟ್ಟದಾಗಿ ಬಂದಿದ್ದೀರಾ…ಅಸಹ್ಯ’ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿರುವ ನಿಯಾ ಶರ್ಮಾ ಏಕ್ ಹಜಾರೋನ್‌ ಮೇ ಮೇರಿ ಬೆಹನಾ ಹೈ ಚಿತ್ರದಲ್ಲಿ ಮಾನ್ವಿ ಔಧರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಜೀ ವಾಹಿನಿಯಲ್ಲಿ ರಾಜಾ, ಕಲರ್ಸ್‌ ವಾಹಿನಿಯಲ್ಲಿ ಇಷ್ಕ್‌ ಮೇ ಮಾರ್ಜಾವಾನ್, ನಾಗಿಣಿ 4 ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: Duniya Vijay- Ganesh: ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್ ಸಿನಿಮಾ ಬರೋದು ಪಕ್ಕಾ; ʻಭೀಮʼನದ್ದೇ ಆ್ಯಕ್ಷನ್‌ ಕಟ್‌!

ಖತ್ರೋನ್‌ ಕೆ ಖಿಲಾಡಿ 8ರಲ್ಲಿ ಭಾಗವಹಿಸಿ ಫೈನಲಿಸ್ಟ್‌ ಆಗಿದ್ದರು. ಮೇಡ್ ಇನ್ ಇಂಡಿಯಾದಲ್ಲಿ ಭಾಗವಹಿಸಿ ವಿಜೇತರಾಗಿ ಹೊರ ಹೊಮ್ಮಿದ್ದರು. ನಿಯಾ ಪ್ರಸ್ತುತರಿಯಾಲಿಟಿ ಶೋ ಲಾಫ್ಟರ್ ಚೆಫ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

ಬಾಲಿವುಡ್

Arjun Rampal: ಅಕ್ರಮ ಸಂಬಂಧ ಕೆಲವರಿಗೆ ಚಟ, ಮಹಿಳೆಗಾಗಿ ಹಪಹಪಿಸುವುದನ್ನು ನಾನು ನೋಡಿದ್ದೇನೆ ಎಂದ ಖ್ಯಾತ ಬಾಲಿವುಡ್‌ ನಟ!

Arjun Rampal: ಅರ್ಜುನ್ ಈ ಹಿಂದೆ 1998 ರಿಂದ 2019 ರವರೆಗೆ ಮೆಹರ್ ಜೆಸಿಯಾ ಅವರನ್ನು ವಿವಾಹವಾದರು. ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಈಗ ಗೇಬ್ರಿಯೆಲಾ ಡಿಮೆಟ್ರಿಯಡ್ಸ್ ಜೊತೆ ಸಂಬಂಧ ಹೊಂದಿದ್ದಾರೆ. ನಟನಿಗೆ ಎರಡು ಗಂಡು ಮಕ್ಕಳು. ಆದರೆ, ಅರ್ಜುನ್ ಮತ್ತು ಗೇಬ್ರಿಯೆಲಾ ಅವಿವಾಹಿತರಾಗಿಯೇ ಉಳಿದಿದ್ದಾರೆ.

VISTARANEWS.COM


on

Arjun Rampal Says He Knows A Lot Of People Who Need Another Woman
Koo

ಬೆಂಗಳೂರು: ಪ್ಯಾರ್ ಇಷ್ಕ್ ಔರ್ ಮೊಹಬ್ಬತ್ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಅರ್ಜುನ್ ರಾಂಪಾಲ್ (Arjun Rampal), ಆ ನಂತರ ದಿವಾನಾಪನ್.. ಆಂಖೆ.. ದಿಲ್ ಹೈ ತುಮ್ಹಾರಾ.. ದಿಲ್ ಕಾ ರಿಷ್ತಾ.. ಅಸಂಭವ್.. ವಾದಾ.. ಹೀಗೆ ಒಂದಾದ ಮೇಲೊಂದು ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದರು. ಇದೀಗ ಸಂದರ್ಶನವೊಂದರಲ್ಲಿ ಪ್ರೇಮ,ಮದುವೆ,ವಿಚ್ಛೇದನ,ಲಿವ್ ಇನ್ ರಿಲೇಶಿನ್‌ಶಿಫ್ ಬಗ್ಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ನಟ ಮಾತನಾಡಿ, “ನಾನು ಸೆಕ್ಸ್ ಅನ್ನು ಪ್ರೀತಿಸುತ್ತೇನೆ. ಲೈಂಗಿಕತೆಯು ನಿಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ. ಹೌದು, ಒಬ್ಬ ಸಂಗಾತಿಯೊಂದಿಗೆ ಇರುವುದು ಇನ್ನೂ ಮುಖ್ಯ ಎಂದು ನಾನು ಭಾವಿಸುತ್ತೇನೆ. ನೀವು ಹಾಸಿಗೆಯನ್ನು ಹಂಚಿಕೊಳ್ಳುವಾಗ, ಶಕ್ತಿಯ ವಿನಿಮಯವಾಗುತ್ತದೆ. ನಮ್ಮ ಸಂಗಾತಿಯ ಜತೆ ಹಾಸಿಗೆ ಹಂಚಿಕೊಳ್ಳುವಾಗ ಅಲ್ಲೇನೋ ಒಂದು ರೀತಿಯ ಶಕ್ತಿ ಅಡಗಿದೆ ಎಂದು ನಾನು ಅಂದುಕೊಂಡಿದ್ದೇನೆ ಎಂದಿರುವ ಅರ್ಜುನ್ ರಾಂಪಾಲ್ ಲೈಂಗಿಕ ಕ್ರಿಯೆಯಲ್ಲಿ ದೊಡ್ಡ ಶಕ್ತಿ ವಿನಿಮಯವಾಗುತ್ತೆ ಎಂದು ಆ ಕ್ಷಣಕ್ಕೆ ನಮಗೆ ಗೊತ್ತಿರಲ್ಲ. ಆದರೆ ಆಗ ನಮ್ಮ ಡಿಎನ್ಎ ಎಲ್ಲೋ ಹೋಗಿರುತ್ತದೆ. ಆದ್ದರಿಂದ ಲೈಂಗಿಕತೆ ಅವಶ್ಯಕವಾಗಿ ಬೇಕುʼʼ ಎಂದು ಕೂಡ ಹೇಳಿದ್ದಾರೆ.

ಇದನ್ನೂ ಓದಿ: Krishnam Pranaya Sakhi: ಕೃಷ್ಣಂ ಪ್ರಣಯ ಸಖಿ ಸಿನಿಮಾದ 4ನೇ ಹಾಡು ಔಟ್;‌ ರೊಮ್ಯಾಂಟಿಕ್‌ ಸಾಂಗ್ ಇಲ್ಲಿ ಕೇಳಿ!

ಅಕ್ರಮ ಸಂಬಂಧದ ಬಗ್ಗೆಯೂ ಮಾತನಾಡಿರುವ ಅರ್ಜುನ್ ರಾಂಪಾಲ್, ಮದುವೆಯಾದರೂ ಅಕ್ರಮ ಸಂಬಂಧಕ್ಕೆ ಕೆಲವರು ಹಾತೊರೆಯುತ್ತಾರೆ ಅಂದರೆ ಅದು ಅವರ ಚಟ ಎಂದಿದ್ದಾರೆ. ಅಭ್ಯಾಸ ಎಂದಿದ್ದಾರೆ.”ಇದು ಒಂದು ಚಟ, ಇದು ಜನರು ತಮಗಾಗಿಯೇ ರಚಿಸಿಕೊಂಡಿರುವ ಅಭ್ಯಾಸವಾಗಿದೆ. ಮಹಿಳೆಗಾಗಿ ಹಪಹಪಿಸುವುದನ್ನು ನಾನು ನೋಡಿದ್ದೇನೆ ಎಂದಿರುವ ಅರ್ಜುನ್ ರಾಂಪಾಲ್, ಅವರದ್ದು ಅದ್ಹೇಗೆ ಸುಖಿ ದಾಂಪತ್ಯವಾಗುತ್ತೆ ಎನ್ನುವುದು ನನಗೆ ಈಗಲೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ವಿವಾಹೇತರ ಸಂಬಂಧ ಚಟವಾದರೂ ಅದು ಯಾವತ್ತು ಒಳ್ಳೇಯದಲ್ಲʼʼಎಂದರು.

ಅರ್ಜುನ್ ಈ ಹಿಂದೆ 1998 ರಿಂದ 2019 ರವರೆಗೆ ಮೆಹರ್ ಜೆಸಿಯಾ ಅವರನ್ನು ವಿವಾಹವಾದರು. ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಈಗ ಗೇಬ್ರಿಯೆಲಾ ಡಿಮೆಟ್ರಿಯಡ್ಸ್ ಜೊತೆ ಸಂಬಂಧ ಹೊಂದಿದ್ದಾರೆ. ನಟನಿಗೆ ಎರಡು ಗಂಡು ಮಕ್ಕಳು. ಆದರೆ, ಅರ್ಜುನ್ ಮತ್ತು ಗೇಬ್ರಿಯೆಲಾ ಅವಿವಾಹಿತರಾಗಿಯೇ ಉಳಿದಿದ್ದಾರೆ.

ಅರ್ಜುನ್ ರಾಂಪಾಲ್ ಮತ್ತು ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ಐದು ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಆದರೆ ಮದುವೆಯಾಗಲು ನಿರ್ಧರಿಸಿಲ್ಲ.

ಚಿಕ್ಕ ವಯಸ್ಸಿನಲ್ಲಿಯೇ ತನಗಿಂತ ಹಿರಿಯರಾದ ಮಾಡೆಲ್ ಮೆಹರ್ ಜೆಸಿಯಾ ಅವರನ್ನು 1998ರಲ್ಲಿ ಮದುವೆಯಾದರು.ಇಬ್ಬರು ಮುದ್ದಾದ ಹೆಣ್ಣು ಮಕ್ಕಳ ತಂದೆಯಾದ ಮೇಲೂ ಅರ್ಜುನ್ ರಾಂಪಾಲ್ ತಮ್ಮ 20 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದರು. ಮಹಿಕಾ ಮತ್ತು ಮೈರಾ ಅವರನ್ನು ಅವರ ತಾಯಿ ಮೆಹರ್ ಜೊತೆಯಲ್ಲಿಯೇ ಇರುವಂತೆ ಹೇಳಿ ವಿಚ್ಛೇದನವನ್ನು ಪಡೆದರು.

Continue Reading
Advertisement
bjp-jds padayatra Sumalatha ambareesh
ಪ್ರಮುಖ ಸುದ್ದಿ4 mins ago

BJP-JDS Padayatra: ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ‌ ; ಬ್ಯಾನರ್‌ಗಳಲ್ಲೂ ಕಾಣಿಸಿಕೊಳ್ಳದ ಸುಮಲತಾ ಅಂಬರೀಷ್‌!

Actor Darshan
ಕರ್ನಾಟಕ8 mins ago

Actor Darshan: ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ; ಎಫ್‌ಎಸ್‌ಎಲ್ ವರದಿಯಲ್ಲಿ ದೃಢ

Actor Dhanush Raayan set for OTT release
ಕಾಲಿವುಡ್9 mins ago

Actor Dhanush: ಧನುಷ್ ನಟನೆಯ ʻ50ʼನೇ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ?

Crop Over Festival
Latest31 mins ago

Rihanna Crop Over: ʼಊರ ಹಬ್ಬʼದಲ್ಲಿ ʼನಗ್ನ ಉಡುಗೆʼ ಧರಿಸಿ ಸಂಚಲನ ಮೂಡಿಸಿದ ರಿಹಾನ್ನಾ!

Viral Video
Latest43 mins ago

Viral Video: ರಸ್ತೆಯಲ್ಲಿ ಚುಡಾಯಿಸಿದ ಪುಂಡನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿನಿ; ವಿಡಿಯೊ ನೋಡಿ

Bangladesh Unrest
ವಿದೇಶ54 mins ago

Bangladesh Unrest: ಶೇಖ್‌ ಹಸೀನಾ ಅವರ ಪಕ್ಷದ ಮುಖಂಡರು, ಕಾರ್ಯಕರ್ತರೇ ಟಾರ್ಗೆಟ್‌; ಒಂದೇ ದಿನ 29 ಜನ ಬಲಿ

Student Abuse
Latest55 mins ago

Student Abuse: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

Vinesh Phogat Disqualified
ಕ್ರೀಡೆ56 mins ago

Vinesh Phogat Disqualified: ತೂಕ ವಿಭಾಗ ಬದಲಿಸಿದ್ದೇ ವಿನೇಶ್​ ಹಿನ್ನಡೆಗೆ ಕಾರಣವಾಯಿತೇ?

Namma Metro
ಕರ್ನಾಟಕ56 mins ago

Namma Metro: ಆ.6ರಂದು ನಮ್ಮ ಮೆಟ್ರೋದಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ

Vinesh Phogat
ದೇಶ57 mins ago

Vinesh Phogat: ನೋ! ನೋ! ನೋ!; ವಿನೇಶ್​ ಫೋಗಟ್ ಅನರ್ಹತೆ ಕೆಟ್ಟ ಕನಸಾಗಿರಲಿ: ಆನಂದ್‌ ಮಹೀಂದ್ರಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು21 hours ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ22 hours ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌