ಟ್ರೇಲರ್‌ ರಿಲೀಸ್‌ ಬೆನ್ನಲ್ಲೇ ಟ್ರೆಂಡ್‌ ಆಗ್ತಿದೆ Boycott LaalSingh Chaddha; ಆಮಿರ್‌ ಮಾತು ಮರೆತಿಲ್ಲ ಜನ Vistara News
Connect with us

ಬಾಲಿವುಡ್

ಟ್ರೇಲರ್‌ ರಿಲೀಸ್‌ ಬೆನ್ನಲ್ಲೇ ಟ್ರೆಂಡ್‌ ಆಗ್ತಿದೆ Boycott LaalSingh Chaddha; ಆಮಿರ್‌ ಮಾತು ಮರೆತಿಲ್ಲ ಜನ

Laal Singh Chaddha: ಆಮೀರ್‌ ಖಾನ್‌ ಮತ್ತು ಕರೀನಾ ಕಪೂರ್‌ ಹಿಂದೆ ಆಡಿದ ಒಂದಷ್ಟು ಮಾತುಗಳನ್ನು ಇಟ್ಟುಕೊಂಡು ನೆಟ್ಟಿಗರು ಅವರಿಬ್ಬರನ್ನೂ ಟಾರ್ಗೆಟ್‌ ಮಾಡುತ್ತಿದ್ದಾರೆ.

VISTARANEWS.COM


on

Laal Singh Chaddha
ಲಾಲ್‌ ಸಿಂಗ್‌ ಛಡ್ಡಾ ದೃಶ್ಯ
Koo

ಮುಂಬೈ: ಆಮಿರ್‌ ಖಾನ್‌ ಮತ್ತು ಕರೀನಾ ಕಪೂರ್‌ ಅಭಿನಯದ ಹಿಂದಿ ಸಿನಿಮಾ ಲಾಲ್‌ ಸಿಂಗ್‌ ಛಡ್ಡಾ (Laal Singh Chaddha) ಟ್ರೇಲರ್‌ ಭಾನುವಾರ (ಮೇ 29)ವಷ್ಟೇ ಬಿಡುಗಡೆಯಾಗಿದೆ. ನಿನ್ನೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ ಫೈನಲ್‌ ಪಂದ್ಯದ ವೇಳೆಯೇ ಈ ಸಿನಿಮಾದ ಟ್ರೇಲರ್‌ ಕೂಡ ರಿಲೀಸ್‌ ಆಗಿದ್ದು ವಿಶೇಷ. ಆದರೆ ಟ್ರೇಲರ್‌ ಬಿಡುಗಡೆಯಾದ ಕೆಲವೇ ಹೊತ್ತಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ Boycott LaalSingh Chaddha (ಲಾಲ್‌ ಸಿಂಗ್‌ ಛಡ್ಡಾ ಚಿತ್ರವನ್ನು ಬಹಿಷ್ಕರಿಸಿ) ಎಂಬ ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಆಗುತ್ತಿದೆ. ಅಂದರೆ ಆಮೀರ್‌ ಖಾನ್‌ ಅಭಿನಯದ ಈ ಸಿನಿಮಾವನ್ನು ನೋಡಬೇಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

1994ರ ಹಾಲಿವುಡ್‌ ಸಿನಿಮಾ ಫಾರೆಸ್ಟ್‌ ಗಂಪ್‌ನ ರಿಮೇಕ್‌ ಆಗಿರುವ ಲಾಲ್‌ ಸಿಂಗ್‌ ಛಡ್ಡಾವನ್ನು ನಿರ್ದೇಶನ ಮಾಡಿದ್ದು ಅದ್ವೈತ್‌ ಚಂದನ್‌. ಆಮಿರ್‌ ಖಾನ್‌ ಪ್ರೊಡಕ್ಷನ್ಸ್‌ ನಿರ್ಮಾಣದ ಸಿನಿಮಾ, ಇದೇ ವರ್ಷ 2022ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಸಿನಮಾದಲ್ಲಿ ತೆಲುಗು ನಟ ನಾಗಚೈತನ್ಯ ಕೂಡ ಅಭಿನಯಿಸಿದ್ದು, ಇದು ಅವರ ಮೊದಲ ಹಿಂದಿ ಸಿನಿಮಾ. ಹಾಗಾಗಿ ಸಿನಿಪ್ರಿಯರಲ್ಲಿ ಕುತೂಹಲ ತುಸು ಜಾಸ್ತಿಯಾಗಿಯೇ ಇದೆ. ಇದೇ ಹೊತ್ತಲ್ಲಿ, ಒಂದು ವರ್ಗದ ಜನರು ಈಗಿನಿಂದಲೇ ಲಾಲ್‌ ಸಿಂಗ್‌ ಛಡ್ಡಾ ಸಿನಿಮಾ ಬಹಿಷ್ಕರಿಸುವಂತೆ ಸೋಷಿಯಲ್‌ ಮೀಡಿಯಾ ಮೂಲಕ ಕರೆ ನೀಡುತ್ತಿದ್ದಾರೆ. ಈ ಅಭಿಯಾನ ಟ್ರೆಂಡ್‌ ಕೂಡ ಆಗಿದೆ. ಟ್ರೇಲರ್‌ ವೀಕ್ಷಿಸಿಲು ಇಲ್ಲಿ ಕ್ಲಿಕ್‌ ಮಾಡಿ.

ಇದರ ಮೂಲ ಸಿನಿಮಾ ಫಾರೆಸ್ಟ್‌ ಗಂಪ್‌ ಇನ್ನೂ ಒಟಿಟಿಯಲ್ಲಿ ಲಭ್ಯವಿದೆ. ಸ್ವಂತ ಕತೆ ಮಾಡುವ ಬದಲು ಹಾಲಿವುಡ್‌ ರಿಮೇಕ್‌ ಮಾಡುತ್ತಿದ್ದೀರಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಹಾಗೇ, ಓಟಿಟಿಯಲ್ಲಿ ಆರಾಮಾಗಿ ಸಿನಿಮಾ ನೋಡಬಹುದು. ಅದರ ರಿಮೇಕ್‌ ನೋಡಲು ಯಾಕೆ ಹಣ ಸುರಿಯಬೇಕು ಎಂದೂ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅದರೊಂದಿಗೆ ಈ ಹಿಂದೆ ಆಮಿರ್‌ ಖಾನ್‌ ನೀಡಿದ ಕೆಲವು ವಿವಾದಾತ್ಮಕ ಹೇಳಿಕೆಗಳನ್ನೂ ಇಟ್ಟುಕೊಂಡು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. 2015ರಲ್ಲಿ ಆಮಿರ್‌ ಖಾನ್‌ ಅಸಹಿಷ್ಣುತೆ ಬಗ್ಗೆ ಮಾತನಾಡಿ ದೇಶದ ಜನರ ಕೋಪಕ್ಕೆ ಗುರಿಯಾಗಿದ್ದರು. ಭಾರತದಲ್ಲಿ ತೀವ್ರ ಅಸಹಿಷ್ಣುತೆ ಇದೆ. ನಮ್ಮ ಕುಟುಂಬಕ್ಕೂ ಅಭದ್ರತೆ ಕಾಡುತ್ತಿದೆ ಎಂದು ಹೇಳಿದ್ದರು. ಆಗಲೂ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಆಮಿರ್‌ ಖಾನ್‌ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಈಗ ಅವರ ಲಾಲ್‌ ಸಿಂಗ್‌ ಛಡ್ಡಾ ಸಿನಿಮಾ ಟ್ರೇಲರ್‌ ಬಿಡುಗಡೆಯಾದ ಹೊತ್ತಲ್ಲಿ, ಮತ್ತೊಮ್ಮೆ ಅದೇ ಅಸಹಿಷ್ಣುತೆ ವಿಚಾರವನ್ನೇ ಇಟ್ಟುಕೊಂಡು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.

ಕರೀನಾ ಕಪೂರ್‌ ಕೂಡ ಟ್ರೋಲ್‌
ಕರೀನಾ ಕಪೂರ್‌ ಬಗ್ಗೆಯೂ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ (ನೆಪೋಟಿಸಂ) ನಡೆಯುತ್ತಿದೆ ಎಂಬ ಚರ್ಚೆ, ಹಿಂದೆ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮೃತಪಟ್ಟ ಬಳಿಕ ಜೋರಾಗಿ ನಡೆಯುತ್ತಿತ್ತು. ಅಲ್ಲಿ ತಮಗೆ ಬೇಕಾದವರನ್ನು ಮಾತ್ರ ಬೆಳೆಸುತ್ತಾರೆ. ಹೀಗಾಗಿಯೇ ಸುಶಾಂತ್‌ರಂತ ಹಲವು ನಟರು ಪ್ರತಿಭೆಯಿದ್ದರೂ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಅನೇಕರು ಹೇಳಿದ್ದರು. ಆ ವೇಳೆ ಕರೀನಾ ಕಪೂರ್‌ ಹೀಗೊಂದು ಪ್ರತಿಕ್ರಿಯೆ ನೀಡಿದ್ದರು. “ನನ್ನ ಸಿನಿ ಬದುಕು ಶುರುವಾಗಿ 21 ವರ್ಷ ಕಳೆಯಿತು. ನಾನಿಷ್ಟು ವರ್ಷ ಮಾಡಿದ ಸಾಧನೆ ಯಾವುದೇ ನೆಪೋಟಿಸಂನಿಂದ ಆಗಿದ್ದಲ್ಲ. ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ ಎಂಬುದನ್ನು ನಾನು ನಮ್ಮ ಸೂಪರ್‌ಸ್ಟಾರ್‌ಗಳ ಮಕ್ಕಳ ಪಟ್ಟಿಯನ್ನು ಕೊಡುವ ಮೂಲಕ ವಿವರಿಸಬಲ್ಲೆ. ನೆಪೋಟಿಸಂ ಇದೆ ಎಂದು ನಮ್ಮನ್ನು ದೂಷಿಸಬೇಡಿ. ನಾವು ಸ್ವಜನಪಕ್ಷಪಾತದಿಂದ ಉದ್ಧಾರವಾದ ಮಕ್ಕಳು ಎಂದು ಭಾವಿಸುವವರು ನಮ್ಮ ಸಿನಿಮಾವನ್ನೇ ನೋಡಬೇಡಿ” ಎಂದಿದ್ದರು. ಈಗ ನೆಟ್ಟಿಗರು ಅದೇ ಮಾತನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ʼಕರೀನಾ ಹೇಳಿದ್ದಾರೆ ಅವರ ಸಿನಿಮಾ ನೋಡುವುದು ಬೇಡವೆಂದು. ನಾವ್ಯಾಕೆ ಅವರ ಸಿನಿಮಾ ನೋಡೋಣ, ಅದೇ ಹಣವನ್ನು ಬಡ ಮಕ್ಕಳಿಗೆ ಊಟ ನೀಡಲು ಖರ್ಚು ಮಾಡೋಣʼ ಎಂದು ಹೇಳುತ್ತಿದ್ದಾರೆ.

ಆಮೀರ್‌ ಖಾನ್‌ ತುಂಬ ಕಾದು, ವೈಯಕ್ತಿಕವಾಗಿ ಇಂಟರೆಸ್ಟ್‌ ತೆಗೆದುಕೊಂಡಿರುವ ಸಿನಿಮಾ ಈ ಲಾಲ್‌ ಸಿಂಗ್‌ ಛಡ್ಡಾ. ಆಗಸ್ಟ್‌ 11ಕ್ಕೆ ತೆರೆಕಾಣಲು ಸಜ್ಜಾಗಿದೆ. ಆದರೆ ಟ್ರೇಲರ್‌ ಬಿಡುಗಡೆಯಾಗುತ್ತಿದ್ದಂತೆ ಬಹಿಷ್ಕಾರದ ಮಾತುಗಳು ಕೇಳಿಬರುತ್ತಿದ್ದು, ಇಲ್ಲಿವೆ ನೋಡಿ ನೆಟ್ಟಿಗರ ಒಂದಷ್ಟು ಟ್ವೀಟ್‌ಗಳು..

https://twitter.com/United__4SSR/status/1503038233575587842?s=20&t=p4aCI8OdUBhHMcF576QmLA
https://twitter.com/United__4SSR/status/1530816251248926720?s=20&t=DFFGhLN0CGNSB47EnCOHrQ

ಇದನ್ನೂ ಓದಿ: ಕರಣ್ ಜೋಹರ್ @ 50: ಯಶ್ ರಾಜ್ ಸ್ಟುಡಿಯೋದಲ್ಲಿ ಬಾಲಿವುಡ್‌ ನೈಟ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Aahana Kumra: ಐಫಾ ಕಾರ್ಯಕ್ರಮದಲ್ಲಿ ನಟಿ ಅಹಾನಾ ಕುಮ್ರಾಳ ಡ್ರೆಸ್‌ ಜಾರುವುದರಲ್ಲಿತ್ತು, ಆಗ? ವಿಡಿಯೊ ವೈರಲ್​

ನಟಿ ಅಹಾನಾ ಕುಮ್ರಾ (Aahana Kumra) ಅವರು ದುಬೈನಲ್ಲಿ ಐಫಾ ಕಾರ್ಯಕ್ರಮದ ಗ್ರೀನ್‌ ಕಾರ್ಪೆಟ್‌ನಲ್ಲಿ ಭಾಗವಹಿಸಿದ್ದು, ಅಲ್ಲಿ ಅವರು ತೊಟ್ಟ ಉಡುಗೆಯಿಂದ ಇರಿಸುಮುರಿಸಾಗಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

VISTARANEWS.COM


on

Edited by

Koo

ದುಬೈ: ಬಾಲಿವುಡ್‌ನ ಹಲವು ಗಣ್ಯರು ಸದ್ಯ ಅರಬ್‌ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ನಡೆಯುತ್ತಿರುವ ಐಫಾ 2023 (IIFA awards 2023) ಕಾರ್ಯಕ್ರಮದಲ್ಲಿದ್ದಾರೆ. ಅದರಂತೆ ನಟಿ ಅಹಾನಾ ಕುಮ್ರಾ (Aahana Kumra) ಕೂಡ ಇದೇ ಕಾರ್ಯಕ್ರಮದಲ್ಲಿದ್ದಾರೆ. ಈ ವೇಳೆ ನಟಿ ತೊಟ್ಟ ಉಡುಗೆ ಅವರಿಗೆ ಸರಿಯಾಗದೆ ಜಾರುತ್ತಿದ್ದು, ನಟಿ ಅದನ್ನು ಜಾರದಂತೆ ಹಲವು ಬಾರಿ ಹಿಡಿದುಕೊಂಡಿದ್ದು ಕಂಡುಬಂದಿದೆ.

ಹೌದು. ಐಫಾ ಕಾರ್ಯಕ್ರಮದ ಗ್ರೀನ್‌ ಕಾರ್ಪೆಟ್‌ ಕಾರ್ಯಕ್ರಮದಲ್ಲಿ ಅಹಾನಾ ಭಾಗಿಯಾಗಿದ್ದರು. ಅದರಲ್ಲಿ ಅವರು ಆಫ್‌ ಶೋಲ್ಡರ್‌ ಇರುವ ಕಪ್ಪು ಬಣ್ಣದ ಗೌನ್‌ ಅನ್ನು ತೊಟ್ಟಿದ್ದರು. ಅವರು ಮಾಧ್ಯಮದವರೆದುರು ಕ್ಯಾಮರಾಗಳಿಗೆ ಫೋಸ್‌ ಕೊಡುವಾಗ ಹಲವು ಬಾರಿ ಡ್ರೆಸ್‌ ಜಾರಿದೆ. ಹಾಗಾಗಿ ನಟಿ ಅದನ್ನು ಎಳೆದುಕೊಂಡು ಸರಿ ಮಾಡಿಕೊಂಡು ಫೋಸ್‌ ಕೊಟ್ಟಿದ್ದಾರೆ. ಈ ದೃಶ್ಯಗಳಿರುವ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಇದನ್ನೂ ಓದಿ: Aahana s Kumra | ಸ್ಟೈಲಿಶ್ ಪರ್ಪಲ್ ಡ್ರೆಸ್‌ನಲ್ಲಿ ಮಿಂಚಿದ ಅಹಾನಾ ಕುಮ್ರಾ
ಅಂದ ಹಾಗೆ ನಟಿ ಕಳೆದ ವಾರ ಕಾರ್ಯಕ್ರಮದವೊಂದರಲ್ಲಿ ಭಾಗಿಯಾಗಿದ್ದಾ ಅಭಿಮಾನಿಯೊಬ್ಬರಿಗೆ ಸಿಟ್ಟಿನಿಂದ ಬೈದಿದ್ದರು. ನಟಿ ಜತೆ ಫೋಟೋ ತೆಗೆಸಿಕೊಳ್ಳಲೆಂದು ಬಂದ ಅಭಿಮಾನಿಯೊಬ್ಬರು ಆಕೆಯ ಸೊಂಟಕ್ಕೆ ಕೈ ಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ನಟಿ, “ನನ್ನನ್ನು ಮುಟ್ಟಬೇಡಿ” ಎಂದು ಜೋರಾಗಿಯೇ ಹೇಳಿದ್ದರು. ಆ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್‌ ಆಗಿತ್ತು.


ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಆಕೆ, “ನಾವು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಪನ್‌ ಆಗಿ ಇರುತ್ತೇವೆ ಎನ್ನುವ ಕಾರಣಕ್ಕೆ ನಮ್ಮೊಂದಿಗೆ ಏನು ಬೇಕಾದರೂ ಮಾಡಬಹುದು ಎಂದು ಕೆಲವರು ಅಂದುಕೊಂಡುಬಿಡುತ್ತಾರೆ. ಆದರೆ ಎಲ್ಲದಕ್ಕೂ ಗಡಿ ಇದ್ದೇ ಇರುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ನಮ್ಮ ಸುರಕ್ಷತೆ ಬಹುಮುಖ್ಯ. ಅದಕ್ಕಾಗಿ ಬೌನ್ಸರ್‌ಗಳನ್ನು ನೇಮಿಸಬೇಕು” ಎಂದು ಹೇಳಿದ್ದರು.

Continue Reading

South Cinema

Ashish Vidyarthi: ಯಾವುದೇ ವಯಸ್ಸಲ್ಲಾದರೂ ಸಂತೋಷವಾಗಿರಬಹುದು; ಮದುವೆ ಬಗ್ಗೆ ಆಶಿಶ್ ವಿದ್ಯಾರ್ಥಿ ಹೇಳಿದ್ದೇನು?

Ashish Vidyarthi: ʻʻಪ್ರತಿಯೊಬ್ಬರು ಯಾವುದೇ ವಯಸ್ಸಿನಲ್ಲಾದರೂ ಸಂತೋಷವಾಗಿರಬಹುದು. ವಯಸ್ಸು ಮುಖ್ಯವಲ್ಲ. ಪ್ರತಿಯೊಬ್ಬರ ಜೀವನದ ಆಯ್ಕೆಗಳನ್ನು ನಾವು ಗೌರವಿಸಬೇಕುʼʼ ಎಂದರು.

VISTARANEWS.COM


on

Edited by

Ashish Vidyarthi says about His Marriage
Koo

ಮುಂಬೈ: ಹಿಂದಿ ಚಿತ್ರರಂಗದಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ ಜನಪ್ರಿಯ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಅವರು ತಮ್ಮ 60 ನೇ ವಯಸ್ಸಿನಲ್ಲಿ ಅಸ್ಸಾಂನ ರೂಪಾಲಿ ಬರುವಾ (Rupali Barua) ಅವರನ್ನು ಮೇ 25ರಂದು ವಿವಾಹವಾದರು. ಇದೀಗ ತಮ್ಮ ಮದುವೆಯ ಬಗ್ಗೆ ನಟ ವಿಡಿಯೊ ಮೂಲಕ ಮನಬಿಚ್ಚಿ ಮಾತನಾಡಿದ್ದಾರೆ. ʻʻಪ್ರತಿಯೊಬ್ಬರು ಯಾವುದೇ ವಯಸ್ಸಿನಲ್ಲಾದರೂ ಸಂತೋಷವಾಗಿರಬಹುದು. ವಯಸ್ಸು ಮುಖ್ಯವಲ್ಲ. ಪ್ರತಿಯೊಬ್ಬರ ಜೀವನ ಆಯ್ಕೆಗಳನ್ನು ನಾವು ಗೌರವಿಸಬೇಕುʼʼ ಎಂದರು.

“ನಮ್ಮ ಪ್ರತಿಯೊಬ್ಬರ ಜೀವನವು ವಿಭಿನ್ನವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಸವಾಲುಗಳು, ಹಿನ್ನೆಲೆಗಳು, ಶಿಕ್ಷಣ ಮತ್ತು ನಾವು ಯೋಚಿಸುವ ರೀತಿ ಇದೆ. ನಮ್ಮಲ್ಲಿ ಎಲ್ಲರಿಗೂ ಅವರದ್ದೇ ಆದ ವೃತ್ತಿಗಳಿವೆ. ನಾವೆಲ್ಲರೂ ವಿವಿಧ ದೇಶಗಳು, ಧರ್ಮಗಳು ಮತ್ತು ನಂಬಿಕೆಗಳಿಂದ ಬಂದವರು, ಆದರೆ ಒಂದು ಸಾಮಾನ್ಯ ವಿಷಯವೆಂದರೆ ನಾವೆಲ್ಲರೂ ಸಂತೋಷವಾಗಿರಲು ಬಯಸುತ್ತೇವೆʼʼಎಂದರು.

22 ವರ್ಷಗಳ ತಮ್ಮ ಹಾಗೂ ಮೊದಲ ಪತ್ನಿಯ (ರಾಜೋಶಿ ಬರುವಾ ) ದಾಂಪತ್ಯ ಜೀವನ ಕಳೆದ ಎರಡು ವರ್ಷಗಳಿಂದ ಸರಿ ಇರಲಿಲ್ಲ ಎಂದು ಹೇಳಿಕೊಂಡರು. “22 ವರ್ಷಗಳ ಹಿಂದೆ ಪಿಲೂ (ರಾಜೋಶಿ ಬರುವಾ) ಮತ್ತು ನಾನು ಭೇಟಿಯಾದೆವು. ಬಳಿಕ ಮದುವೆಯಾದೆವು. ಅಲ್ಲದೆ, ಜೀವನ ಚೆನ್ನಾಗಿಯೇ ಇತ್ತು. ಎರಡು ವರ್ಷಗಳಿಂದ ಸರಿ ಇರಲಿಲ್ಲʼʼಎಂದರು.

ʻʻಪಿಲೂ ಮತ್ತು ನಾನು ಸೌಹಾರ್ದಯುತವಾಗಿ ಒಟ್ಟಿಗೆ ನಡೆಯಲು ಸಾಧ್ಯವಾಗದಿದ್ದರೆ, ಪ್ರತ್ಯೇಕವಾಗಿ ನಡೆಯೋಣ ಎಂದು ನಿರ್ಧರಿಸಿದೆವುʼʼ ಎಂದು ಆಶಿಶ್ ಹೇಳಿದರು. “ನಾನು ಯಾರೊಂದಿಗಾದರೂ ಇರಲು ಬಯಸುತ್ತೇನೆಯೋ ಅವರೊಂದಿಗೆ ಮದುವೆಯಾಗಲು ಬಯಸುತ್ತೇನೆ ಎಂದು ನನಗೆ ದೃಢವಾದ ನಂಬಿಕೆ ಇತ್ತು. ನಾನು ರೂಪಾಲಿ ಬರುವಾ ಅವರನ್ನು ಭೇಟಿಯಾದೆ. ನಾವು ಒಂದು ವರ್ಷದ ಹಿಂದೆ ಭೇಟಿಯಾದೆವು. ಪರಸ್ಪರ ಮಾತನಾಡಿದೆವು. ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ಬದುಕಬೇಕೆಂದು ನಿರ್ಧರಿಸಿ ರೂಪಾಲಿ ಮತ್ತು ನಾನು ಮದುವೆಯಾದೆವು. ಅವಳ ವಯಸ್ಸು 50 ಮತ್ತು ನನಗೆ 57 ವರ್ಷ, 60 ಅಲ್ಲ, ಆದರೆ ವಯಸ್ಸು ಮುಖ್ಯವಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಯಾವುದೇ ವಯಸ್ಸಿನಲ್ಲಾದರೂ ಸಂತೋಷವಾಗಿರಬಹುದು ”ಎಂದು ನಟ ಹೇಳಿಕೊಂಡರು. ಪ್ರತಿಯೊಬ್ಬರ ಜೀವನ ಆಯ್ಕೆಗಳನ್ನು ನಾವು ಗೌರವಿಸಬೇಕು ಎಂದು ಹೇಳುವ ಮೂಲಕ ಆಶಿಶ್ ವಿದ್ಯಾರ್ಥಿ ಮಾತಿಗೆ ಪೂರ್ಣ ವಿರಾಮ ಇಟ್ಟರು.

ಇದನ್ನೂ ಓದಿ: Ashish Vidyarthi Marriage: ಆಶಿಶ್ ವಿದ್ಯಾರ್ಥಿ ಮರು ಮದುವೆ ಬಳಿಕ ಮೊದಲ ಪತ್ನಿಯ ಪೋಸ್ಟ್‌ ವೈರಲ್‌!

Ashish Vidyarthi

ಆಶಿಶ್ ವಿದ್ಯಾರ್ಥಿ ಪೋಸ್ಟ್‌

ಆಶಿಶ್ ವಿದ್ಯಾರ್ಥಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಕೋರ್ಟ್‌ ಮ್ಯಾರೇಜ್‌ ಆಗಿದ್ದಾರೆ. ಮದುವೆಯಲ್ಲಿ ಕೇರಳ ಮತ್ತು ಅಸ್ಸಾಂ ಸಂಪ್ರದಾಯಗಳನ್ನು ಅನುಸರಿಸಿದ್ದಾರೆ. ʻ ರಾಜೋಶಿ ಬರುವಾ ವೃತ್ತಿಯಲ್ಲಿ ನಟಿ. ಶಕುಂತಲಾ ಬರುವಾ ಅವರ ಮಗಳು. ಆಶಿಶ್ ಮತ್ತು ರಾಜೋಶಿ ಮದುವೆಯಾಗಿ 23 ವರ್ಷಗಳಾಗಿದ್ದು, ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನಿದ್ದಾನೆ. ಆಶಿಶ್ ವಿದ್ಯಾರ್ಥಿ ಅವರ ತಂದೆ ಮಲಯಾಳಿಯಾಗಿದ್ದು ಕೇರಳದ ಕಣ್ಣೂರಿನವರಾಗಿದ್ದರು. ಅವರ ತಾಯಿ ಬೆಂಗಾಲಿಯವರಾಗಿದ್ದು ರಾಜಸ್ಥಾನ ಮೂಲದವರು.

Ashish Vidyarthi

ಆಶಿಶ್‌ ಇದುವರೆಗೆ 11 ವಿವಿಧ ಭಾಷೆಗಳಲ್ಲಿ ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದ್ದರು. ಸರ್ದಾರ್ ವಲ್ಲಭಭಭಾಯಿ ಪಟೇಲ್ ಅವರ ಜೀವನವನ್ನು ಆಧರಿಸಿದ ಸರ್ದಾರ್‌ನಲ್ಲಿ ಆಶಿಶ್ ವಿದ್ಯಾರ್ಥಿ ವಿ ಪಿ ಮೆನನ್ ಪಾತ್ರವನ್ನು ನಿರ್ವಹಿಸಿದ್ದಾರೆ.

Continue Reading

South Cinema

Anushka Sharma: ಕಾನ್‌ ಚಲನಚಿತ್ರೋತ್ಸವದಲ್ಲಿ ಮಿಂಚಿದ ಅನುಷ್ಕಾ ಶರ್ಮಾ

Anushka Sharma: 76ನೇ ಕಾನ್‌ ಚಲನಚಿತ್ರೋತ್ಸವ ತಾರಾ ಬಳಗದಿಂದ ಕೂಡಿದೆ. ಅನುಷ್ಕಾ ಶರ್ಮಾ ಇದೇ ಮೊದಲ ಬಾರಿಗೆ ಕಾನ್‌ ಉತ್ಸವದಲ್ಲಿ ಭಾಗಿಯಾಗಿದ್ದರು. ನಟಿಯ ಫೋಟೊಗಳು ಇಲ್ಲಿವೆ!

VISTARANEWS.COM


on

Edited by

Anushka Sharma Cannes Film Festival
Koo
Anushka Sharma

76ನೇ ಕಾನ್‌ ಚಲನಚಿತ್ರೋತ್ಸವದಲ್ಲಿ ನಟಿ ಅನುಷ್ಕಾ ಶರ್ಮಾ (Anushka Sharma) ಇದೇ ಮೊದಲ ಬಾರಿಗೆ ಕಾನ್‌ ಭಾಗಿಯಾಗಿದ್ದರು.

Anushka Sharma

ಅದಿತಿ ರಾವ್ ಹೈದರಿ, ಮೃಣಾಲ್ ಠಾಕೂರ್, ಸನ್ನಿ ಲಿಯೋನ್, ಐಶ್ವರ್ಯಾ ರೈ, ಊರ್ವಶಿ ರೌಟೇಲಾ, ಸಾರಾ ಅಲಿ ಖಾನ್ ಸೇರಿದಂತೆ ಭಾರತದ ಹಲವು ಸೆಲೆಬ್ರಿಟಿಗಳು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

Anushka Sharma

ಬೆರಗುಗೊಳಿಸುವ ಬಿಳಿ ಹೂವಿನ ಗೌನ್‌ನಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದು ಹೀಗೆ. ಈ ಫೋಟೋದಲ್ಲಿ ಅನುಷ್ಕಾ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಅನೇಕರು ಬರೆದುಕೊಂಡಿದ್ದಾರೆ.

Anushka Sharma

ಅನುಷ್ಕಾ ಫೋಟೊ ಶೇರ್‌ ಮಾಡುತ್ತಿದ್ದಂತೆ ಪತಿ, ಕ್ರಿಕೆಟರ್ ವಿರಾಟ್ ಕೊಹ್ಲಿ ಸೇರಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

Anushka Sharma

ಅನುಷ್ಕಾ ಶರ್ಮಾ ಅವರು ಚಕ್​ ದೇ ಎಕ್ಸ್​ಪ್ರೆಸ್​ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್​ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಜೂಲನ್​ ಗೋಸ್ವಾಮಿ ಪಾತ್ರವನ್ನು ಮಾಡಿದ್ದಾರೆ.

Continue Reading

ಬಾಲಿವುಡ್

Viral Video: ಸಲ್ಮಾನ್ ಖಾನ್​ರನ್ನು ಮಾತಾಡಿಸಲು ಬಂದ ವಿಕ್ಕಿ ಕೌಶಲ್​​ಗೆ ಅವಮಾನ?-ಬಾಡಿಗಾರ್ಡ್ಸ್ ಮಾಡಿದ್ದೇನು?

filmyselfies.official ಎಂಬ ಇನ್​ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಆಗಿದೆ. ಸಲ್ಮಾನ್​ ಖಾನ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಲು ಹೋಗುತ್ತಿದ್ದರು. ಅವರ ಅಕ್ಕಪಕ್ಕ ಭದ್ರತಾ ಸಿಬ್ಬಂದಿ, ಇನ್ನಿತರರು ನಡೆದು ಬರುತ್ತಿದ್ದರು. ಆಗಲೇ ವಿಕ್ಕಿ ಕೌಶಲ್ ಕೂಡ ಅಲ್ಲಿಗೆ ಬಂದಿದ್ದರು.

VISTARANEWS.COM


on

Edited by

Salman Khan And Vicky Kaushal
Koo

ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ (IIFA 2023) ಅಬುಧಾಬಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಬಾಲಿವುಡ್​ ಖ್ಯಾತ ತಾರೆಯರಾದ ಅಭಿಷೇಕ್ ಬಚ್ಚನ್, ನೋರಾ ಸಿಂಗ್, ರಾಕುಲ್ ಪ್ರೀತ್ ಸಿಂಗ್ ಮತ್ತು ಇಶಾ ಗುಪ್ತಾ, ಸಲ್ಮಾನ್​ ಖಾನ್​, ವಿಕ್ಕಿ ಕೌಶಲ್​ ಸೇರಿ ಬಾಲಿವುಡ್​ನ ಹಲವು ಗಣ್ಯರು ಪಾಲ್ಗೊಂಡಿದ್ದಾರೆ. ಅದರಲ್ಲೀಗ ನಟ ಸಲ್ಮಾನ್​ ಖಾನ್​​ ಮತ್ತು ವಿಕ್ಕಿ ಕೌಶಲ್​ ಸುದ್ದಿಯಲ್ಲಿದ್ದಾರೆ. ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆಯುತ್ತಿರುವ IIFA 2023ರಲ್ಲಿ ವಿಕ್ಕಿ ಕೌಶಲ್​ ಅವರು ಸಲ್ಮಾನ್​ ಖಾನ್​​ ಅವರನ್ನು ಮಾತನಾಡಿಸಲು ಬರುತ್ತಿದ್ದ ವೇಳೆ, ಸಲ್ಮಾನ್ ಖಾನ್ (Salman Khan)​ ಅವರ ಅಂಗರಕ್ಷಕರು (ಬಾಡಿಗಾರ್ಡ್​ಗಳು) ವಿಕ್ಕಿ ಕೌಶಲ್ (Vicky Kaushal)​​ರನ್ನು ಪಕ್ಕಕ್ಕೆ ತಳ್ಳಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ನಟ ವಿಕ್ಕಿ ಕೌಶಲ್ ಅಭಿಮಾನಿಗಳನ್ನು ನೋಯಿಸಿದೆ.

filmyselfies.official ಎಂಬ ಇನ್​ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಆಗಿದೆ. ಸಲ್ಮಾನ್​ ಖಾನ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಲು ಹೋಗುತ್ತಿದ್ದರು. ಅವರ ಅಕ್ಕಪಕ್ಕ ಭದ್ರತಾ ಸಿಬ್ಬಂದಿ, ಇನ್ನಿತರರು ನಡೆದು ಬರುತ್ತಿದ್ದರು. ಆಗ ವಿಕ್ಕಿ ಕೌಶಲ್​ ಎದುರಿನಿಂದ ಬರುತ್ತಾರೆ. ಸಲ್ಮಾನ್ ಖಾನ್​ ಒಂದು ಕ್ಷಣ ನಿಂತು ವಿಕ್ಕಿ ಕೌಶಲ್ ಬಳಿ ಮಾತಾಡುತ್ತಾರೆ. ಆದರೆ ಅಷ್ಟರಲ್ಲಿ ಸಲ್ಮಾನ್​ ಖಾನ್​ ಸೆಕ್ಯೂರಿಟಿ ಸಿಬ್ಬಂದಿ ವಿಕ್ಕಿ ಕೌಶಲ್​​ರನ್ನು ಪಕ್ಕಕ್ಕೆ ತಳ್ಳುತ್ತಾರೆ. ಸಲ್ಮಾನ್​ ಖಾನ್ ಮುಂದೆ ಹೋಗುವುದನ್ನು ವಿಡಿಯೊದಲ್ಲಿ ನೋಡಬಹುದು. ವಿಡಿಯೊ ವೈರಲ್ ಆಗುತ್ತಿದ್ದಂತೆ ವಿಕ್ಕಿ ಕೌಶಲ್ ಅಭಿಮಾನಿಗಳು, ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ’ಸಲ್ಮಾನ್ ಖಾನ್ ಅಂಗರಕ್ಷಕರಿಗೆ ಗೌರವ ಕೊಟ್ಟು ಗೊತ್ತಿಲ್ಲ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ‘ವಿಕ್ಕಿ ಕೌಶಲ್​ ಅವರು ಅಷ್ಟು ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರೂ, ಸಲ್ಮಾನ್ ಖಾನ್​ ಯಾಕೆ ಅವರ ಬಳಿ ಅಷ್ಟು ಸೂಕ್ತವಾಗಿ ಮಾತನಾಡಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ವೈರಲ್ ಆಗುತ್ತಿರುವ ವಿಡಿಯೊ ವಿಕ್ಕಿ ಕೌಶಲ್​ ಅಭಿಮಾನಿಗಳಿಗೆ ನೋವುಂಟು ಮಾಡಿದೆ.

ವಿಕ್ಕಿ ಕೌಶಲ್ ಪ್ರತಿಕ್ರಿಯೆ ಏನು?

ಈ ವಿಡಿಯೊ ವೈರಲ್ ಆದ ಕೆಲವೇ ಕ್ಷಣದಲ್ಲಿ ವಿಕ್ಕಿ ಕೌಶಲ್ ಮತ್ತು ಸಲ್ಮಾನ್ ಖಾನ್​ ಪರಸ್ಪರ ಅಪ್ಪಿಕೊಂಡ ದೃಶ್ಯವೂ ವೈರಲ್ ಆಯಿತು. ಆದರೆ ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದ್ದ ಮಾಧ್ಯಮದವರೂ ವಿಕ್ಕಿ ಕೌಶಲ್​ಗೆ ಇದೇ ಪ್ರಶ್ನೆಯನ್ನು ಹಲವು ಬಾರಿ ಕೇಳಲು ಶುರು ಮಾಡಿದರು. ಆಗ ಪ್ರತಿಕ್ರಿಯೆ ನೀಡಿದ ನಟ, ‘ಈ ವಿಷಯವನ್ನು ದೊಡ್ಡದು ಮಾಡಬೇಕಿಲ್ಲ. ಮಾತಾಡುವುದು ಅನಗತ್ಯ’ ಎಂದಿದ್ದಾರೆ. ‘ಒಂದು ವಿಡಿಯೊ ನೋಡಿ ಏನೋ ಆಯಿತು ಅಂದುಕೊಳ್ಳುವುದು ಸರಿಯಲ್ಲ. ವಿಡಿಯೊದಲ್ಲಿ ಕಂಡಿದ್ದೇ ನಿಜವಾಗಿರುವುದಿಲ್ಲ’ ಎಂದೂ ತಿಳಿಸಿದ್ದಾರೆ.

Continue Reading
Advertisement
Bengalurus CBSE class 12 topper SS Akanksh felicitated
ಕರ್ನಾಟಕ4 hours ago

CBSE Exam Results: ಸಿಬಿಎಸ್‌ಸಿಯಲ್ಲಿ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥೆಯ ಅಮೋಘ ಸಾಧನೆ

Siddaramaiah
ಕರ್ನಾಟಕ5 hours ago

Karnataka Cabinet Expansion: ಸರ್ಕಾರ ಟೇಕಾಫ್‌ ಆದ ಬೆನ್ನಲ್ಲೇ ಅಸಮಾಧಾನದ ಹೊಗೆ; ಖಾತೆ ಬದಲಿಸಿದ ಸಿದ್ದು

Government employees with CM Siddaramaiah
ಕರ್ನಾಟಕ5 hours ago

DA Hike: ಶೇ.4 ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ; ಸಿಎಂ ಸಿದ್ದರಾಮಯ್ಯಗೆ ಸರ್ಕಾರಿ ನೌಕರರ ಅಭಿನಂದನೆ

MLA N Ravikumar
ಕರ್ನಾಟಕ5 hours ago

New Parliament Building: ಸಂಸತ್ ಭವನ ಉದ್ಘಾಟನೆ ಬಹಿಷ್ಕಾರ ನಾಚಿಕೆಗೇಡಿನ ಸಂಗತಿ: ಎನ್. ರವಿಕುಮಾರ್‌

Nissan Magnite Geza Special Edition
ಆಟೋಮೊಬೈಲ್5 hours ago

Nissan Magnite : ನಿಸ್ಸಾನ್​ ಮ್ಯಾಗ್ನೈಟ್ ಗೆಜಾ ಬೆಲೆ 7.39 ಲಕ್ಷ ರೂ.ಗಳಿಂದ ಆರಂಭ

vistara kathaspardhe prize distribution1
ಕರ್ನಾಟಕ5 hours ago

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ‌ ಚಂದ್ರಶೇಖರ್

BCCI MEETING
ಕ್ರಿಕೆಟ್5 hours ago

World Cup 2023 : ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ

Narendra Modi Speech At NITI Aayog Meeting
ದೇಶ5 hours ago

NITI Aayog Meeting: ವಿಕಸಿತ ಭಾರತದ ಕನಸು ಬಿತ್ತಿದ ಮೋದಿ; 11 ಸಿಎಂಗಳು ಗೈರಾದರೂ ಪ್ರಧಾನಿ ಅಭಿವೃದ್ಧಿ ಮಂತ್ರ

New parliament Building
ಪ್ರಮುಖ ಸುದ್ದಿ5 hours ago

ವಿಸ್ತಾರ ಸಂಪಾದಕೀಯ: ನೂತನ ಸಂಸತ್ ಕಟ್ಟಡ ಪ್ರಜಾತಂತ್ರವನ್ನು ಮತ್ತಷ್ಟು ಮೆರೆಸಲಿ

person injured in bee attack
ಕರ್ನಾಟಕ6 hours ago

Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Land Surveyor Recruitment
ಉದ್ಯೋಗ4 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Laxmi Hebbalkar oath taking as a minister
ಕರ್ನಾಟಕ11 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ1 day ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ1 day ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ2 days ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ2 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ3 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ4 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

karnataka politics it takes time to implement guarantee schemes says minister priyank kharge
ಕರ್ನಾಟಕ4 days ago

Saffronisation issue : ಬಿಜೆಪಿಯವರಿಗೆ ತೊಂದರೆ ಇದ್ರೆ ಪಾಕಿಸ್ತಾನಕ್ಕೆ ಹೋಗಲಿ; ಪ್ರಿಯಾಂಕ್‌ ಖರ್ಗೆ ವಿವಾದಿತ ಹೇಳಿಕೆ

horoscope today
ಪ್ರಮುಖ ಸುದ್ದಿ4 days ago

Horoscope Today : ಪಂಚಮಿಯ ದಿನ ಪಂಚ ರಾಶಿಯವರಿಗೆ ಶುಭ ಫಲ; ಇಲ್ಲಿದೆ ಇಂದಿನ ದಿನ ಭವಿಷ್ಯ

ಟ್ರೆಂಡಿಂಗ್‌

error: Content is protected !!