ʼಹ್ಯಾಪಿ ಬರ್ತಡೇʼ ದಿನವೇ ʼಹ್ಯಾಪಿ ಡೇಸ್‌ʼ ನಿಖಿಲ್‌ ಕೊಟ್ಟ ಗುಡ್‌ ನ್ಯೂಸ್‌? - Vistara News

ಟಾಲಿವುಡ್

ʼಹ್ಯಾಪಿ ಬರ್ತಡೇʼ ದಿನವೇ ʼಹ್ಯಾಪಿ ಡೇಸ್‌ʼ ನಿಖಿಲ್‌ ಕೊಟ್ಟ ಗುಡ್‌ ನ್ಯೂಸ್‌?

ನಿಖಿಲ್‌ ಇದೀಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ನಲ್ಲಿ ಕುತೂಹಲಕಾರಿ ಅಂಶವೊಂದನ್ನು ರಿವೀಲ್‌ ಮಾಡಿದ್ದಾರೆ.

VISTARANEWS.COM


on

ʼಹ್ಯಾಪಿ ಡೇಸ್‌ʼ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ನಿಖಿಲ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸುದ್ದಿಯೊಂದನ್ನು ಫ್ಯಾನ್ಸ್‌ಗೆ ನೀಡಿದ್ದಾರೆ. 37 ವರ್ಷಕ್ಕೆ ಕಾಲಿಟ್ಟ ನಟ ನಿಖಿಲ್‌ ತೆಲುಗು ಚಿತ್ರರಂಗದಲ್ಲಿ ‘ಹ್ಯಾಪಿ ಡೇಸ್‌’ ಚಿತ್ರದ ರಾಜೇಶ್‌ ಪಾತ್ರದ ಮೂಲಕ ಹೆಸರನ್ನು ಪಡೆದುಕೊಂಡವರು. ಸಹಾಯಕ ನಿರ್ದೇಶನದಿಂದ, ಹ್ಯಾಪಿ ಡೇಸ್‌ ಸಿನಿಮಾ ಮೂಲಕ ನಟನಾಗಿ ಎಂಟ್ರಿ ಕೊಟ್ಟ ನಿಖಿಲ್‌ ಒಂದರ ಮೇಲೆ ಒಂದು ಸಿನಿಮಾ ಮಾಡುತ್ತಲೇ ಬಂದಿದ್ದಾರೆ.

ಇದೀಗ ನಿಖಿಲ್‌ ಅಭಿನಯದ ಕಾರ್ತಿಕೇಯ-2 ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. ಮುಂದುವರೆದ ಭಾಗ ಕಾರ್ತಿಕೇಯ -2 ಮೋಷನ್‌ ಪೋಸ್ಟ್‌ರ್‌ ಸೋಷಿಯಲ್‌ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಧ್ವನಿ ಮತ್ತು ಉತ್ತಮ ಸಂಭಾಷಣೆಯೊಂದಿಗೆ ಜನರನ್ನು ಆಕರ್ಷಿಸಿದ್ದು, ಕಮೆಂಟ್‌ ಬಾಕ್ಸ್‌ ಮೂಲಕ ಜನರು ಉತಮ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | Queen 2 Web Series : ಶೂಟಿಂಗ್‌ ಫೋಟೊ ಹಂಚಿಕೊಂಡ ರಮ್ಯಾ ಕೃಷ್ಣನ್ 

ಪೀಪಲ್‌ ಮಿಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್‌ ಅಗ್ರವಾಲ್‌ ಆರ್ಟ್‌ ಬ್ಯಾನರ್‌ ಮೂಲಕ, ವಿಶ್ವಪ್ರಸಾದ್‌ ಮತ್ತು ಅಭಿಷೇಕ್‌ ಅಗ್ರವಾಲ್‌ ನಿರ್ಮಾಣ ಮಾಡಲಿದ್ದು, ಈ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಮುಗ್ಧ ಪಾತ್ರದಲ್ಲಿ ನಟಿಸುತ್ತಿದ್ದು, ಬಾಲಿವುಡ್‌ನ ಪ್ರಮುಖ ನಟ ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೋಷನ್‌ ಪೋಸ್ಟರ್‌ ಅಲ್ಲಿ ಧ್ವನಿಯನ್ನು ಸ್ವತಃ ನಿಖಿಲ್‌ ತೆಲುಗು ಮತ್ತು ಹಿಂದಿಯಲ್ಲಿ ನೀಡಿದ್ದಾರೆ. ಜುಲೈ 22 ರಂದು ಪಂಚ ಭಾಷೆಗಳಲ್ಲಿ ರಿಲೀಸ್‌ ಆಗುತ್ತಿರುವುದು ವಿಶೇಷ.

ಇದೀಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ನಲ್ಲಿ ಕುತೂಹಲಕಾರಿ ಅಂಶವೆಂದರೆ ಕಾರ್ತಿಕೇಯ ಅವರ ಪಯಣ. ಕಾಲ ಬೈರವ ಸಂಗೀತ ನಿರ್ದೇಶನ ಮಾಡಲಿದ್ದು, ಕಾರ್ತಿಕ್ ಘಟ್ಟಾಮನೇನಿ ಛಾಯಾಗ್ರಹಣ ಮಾಡಲಿದ್ದಾರೆ.

ನಟ ನಿಖಿಲ್‌ ಅವರ ಹಿಟ್‌ ಸಿನಿಮಾ :

ಹ್ಯಾಪಿ ಡೇಸ್‌ : 2007

ಶೇಖರ್‌ ಕುಮ್ಮುಲ ಅವರ ಹ್ಯಾಪಿ ಡೇಸ್‌ ಸಿನಿಮಾದಲ್ಲಿ ಕಾಲೇಜ್‌ ಕಥೆಯನ್ನು ಹೊಂದಿದ್ದು, ಸ್ನೇಹದ ಕುರಿತ ಕಥಾ ಹಂದರವನ್ನು ಸಿನಿಮಾ ಒಳಗೊಂಡಿದೆ. ಚಿತ್ರ ಭಾರಿ ಹಿಟ್‌ ಆಗಿದ್ದು, ವರುಣ್‌ ಸಂದೇಶ್‌, ತಮನ್ನಾ, ರಾಹುಲ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಸ್ವಾಮಿ ರಾರಾ : 2013

ಸಿನಿಮಾದಲ್ಲಿ ಮೂರು ಸ್ನೇಹಿತರ ಮಧ್ಯೆ ನಡೆಯುವ ಕಥೆಯಾಗಿದ್ದು, ಕ್ರೈಂ ಜತೆ ಕಾಮಿಡಿ ಕಂಟೆಂಟ್‌ ಒಳಗೊಂಡಿದೆ. ನಿಖಿಲ್ ಜೊತೆಗೆ ಸ್ವಾತಿ ರೆಡ್ಡಿ, ಸತ್ಯ, ರವಿಬಾಬು, ಪೂಜಾ ರಾಮಚಂದ್ರನ್, ಜೀವಾ, ರವಿವರ್ಮ ಮತ್ತು ಪ್ರವೀಣ್ ಚಿತ್ರದ ಭಾಗವಾಗಿದ್ದರು.

ಇದನ್ನೂ ಓದಿ | ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್‌

ಕಾರ್ತೀಕೇಯ : 2014

ಮೊದಲ ಭಾಗದಲ್ಲಿ ವೈದ್ಯ ಶಿಬಿರಕ್ಕಾಗಿ ಗ್ರಾಮಕ್ಕೆ ಭೇಟಿ ನೀಡಿ ರಹಸ್ಯವನ್ನು ತಿಳಿದು ಪರಿಹರಿಸುವ ಒಂದು ಕಥಾ ವಸ್ತುವಾಗಿದ್ದು, ಹ್ಯಾಂಡೂ ಮೊಂಡೇಟಿ ನಿರ್ದೇಶಿಸಿದ್ದಾರೆ.

ಎಕ್ಕಡಿಕಿ ಪೊತಾವು ಚಿನ್ನವಾದ (2016)

ಅಲೌಕಿಕ-ರೊಮ್ಯಾಂಟಿಕ್ ಥ್ರಿಲ್ಲರ್ ತನ್ನ ಮಾಜಿ ಗೆಳತಿಯನ್ನು ನೆನಪಿಸುವ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುವ ಯುವಕನ ಕಥೆಯ ಸುತ್ತ ಸುತ್ತುತ್ತದೆ. ಚಿತ್ರವು ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆಯಿತು ಮತ್ತು ತಮಿಳಿನಲ್ಲಿ ʼಆಯಿರಂ ಜೆನಮಂಗಲ್ʼ ಎಂದು ಮರುನಿರ್ಮಾಣವಾಯಿತು. ಚಿತ್ರವನ್ನು ವಿ ಆನಂದ್ ನಿರ್ದೇಶಿಸಿದ್ದಾರೆ. ನಿಖಿಲ್ ಜತೆಗೆ ಹೆಬ್ಬಾ ಪಟೇಲ್, ನಂದಿತಾ ಶ್ವೇತಾ, ಅವಿಕಾ ಗೋರ್ ಮತ್ತು ವೆನ್ನೆಲಾ ಕಿಶೋರ್ ಕೂಡ ಕಾಣಿಸಿಕೊಂಡಿದ್ದಾರೆ.

ಅರ್ಜುನ್ ಸುರವರಂ (2019)

ಹಗರಣದ ಹಿಂದೆ ಅಪರಾಧವನ್ನು ಕಂಡುಹಿಡಿದು ಮತ್ತು ಅದನ್ನು ಸ್ವತಃ ತನಿಖೆ ಮಾಡಲು ನಿರ್ಧರಿಸುವ ತನಿಖಾ ಪತ್ರಕರ್ತನ ಕಥೆಯನ್ನು ಕಥೆಯು ವಿವರಿಸುತ್ತದೆ. ಈ ಚಿತ್ರವನ್ನು ಟಿ ಸಂತೋಷ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಲಾವಣ್ಯ ತ್ರಿಪಾಠಿ, ಸತ್ಯ ಅಕ್ಕಲಾ, ತರುಣ್ ಅರೋರಾ, ವೆನ್ನೆಲಾ ಕಿಶೋರ್, ಕೃಷ್ಣ ಮುರಳಿ ಪಸೋನಿ ಮತ್ತು ಪ್ರಗತಿ ನಟಿಸಿದ್ದಾರೆ.

ಇದನ್ನೂ ಓದಿ | ಟ್ರೇಲರ್‌ ರಿಲೀಸ್‌ ಬೆನ್ನಲ್ಲೇ ಟ್ರೆಂಡ್‌ ಆಗ್ತಿದೆ Boycott LaalSingh Chaddha; ಆಮಿರ್‌ ಮಾತು ಮರೆತಿಲ್ಲ ಜನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Teja Sajja: ಹೊಸ ಸಿನಿಮಾ ಅನೌನ್ಸ್‌ ಮಾಡಿದ ʻಹನುಮಾನ್ʼ ಹೀರೊ ತೇಜ್ ಸಜ್ಜಾ

Teja Sajja: ಮಿರಾಯ್ʼ ಸಿನಿಮಾಗಾಗಿ ತೇಜ್ ಸಜ್ಜಾ ಕೋಲು ಕಾಳಗ ಕಲಿತಿದ್ದಾರೆ. ಪ್ರತಿ ಫ್ರೇಮ್ ನ್ನು ಕಾರ್ತಿಕ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗೌರ ಹರಿ ಸಂಗೀತ ತೂಕ ಹೆಚ್ಚಿಸಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ಮಿರಾಯ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

VISTARANEWS.COM


on

Teja Sajja Hanuman Movie Feme Mirai announce
Koo

ಬೆಂಗಳೂರು: ʻಹನುಮಾನ್ʼ ಸಿನಿಮಾ (Hanuman Movie) ಮೂಲಕ ಸೂಪರ್ ಸಕ್ಸೆಸ್‌ ಕಂಡಿರುವ ತೆಲುಗಿನ ಯುವ ನಟ ತೇಜ್ ಸಜ್ಜಾ (Teja Sajja) ಹೊಸ ಸಿನಿಮಾ ಅನೌನ್ಸ್ ಆಗಿದೆ. ʻಕಾರ್ತಿಕೇಯʼ, ʻಕಾರ್ತಿಕೇಯ-2ʼ , `ಧಮಾಕ’ ಸೇರಿದಂತೆ ಹಲವು ಹಿಟ್ ಚಿತ್ರ ಕೊಟ್ಟಿರುವ ಕಾರ್ತಿಕ್ ಗಟ್ಟಮ್ನೇನಿ  ಅವರು ತೇಜ್ ಸಜ್ಜಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಝಲಕ್ ಅನಾವರಣಗೊಂಡಿದೆ.

ʻಹನುಮಾನ್ʼನಲ್ಲಿ ಸೂಪರ್ ಹೀರೊ ಆಗಿದ್ದ ತೇಜ್ ಸಜ್ಜಾ ಈಗ ಸೂಪರ್ ಯೋಧನಾಗಿ ಪ್ರತ್ಯಕ್ಷರಾಗಿದ್ದಾರೆ. ಕೈಯಲ್ಲಿ ಸ್ಟಾಫ್ಟ್ ಸ್ಟಿಕ್ ಹಿಡಿದು ದುಷ್ಟರನ್ನು ಸಂಹರಿಸಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ತೇಜ್ ಸಜ್ಜಾ ಹೊಸ ಅವತಾರವನ್ನೇ ತಾಳಿದ್ದಾರೆ.

ಕಾರ್ತಿಕ್ ಗಟ್ಟಮ್ನೇನಿ ಹಾಗೂ ತೇಜ್ ಸಜ್ಜಾ ಹೊಸ ಸಿನಿಮಾ ʻಮಿರಾಯ್ʼ ಎಂಬ ಟೈಟಲ್ ಇಡಲಾಗಿದೆ. ʻಮಿರಾಯ್ʼ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ ಮಿರಾಯ್ ವಿಷ್ಯುವಲ್ ಟ್ರೀಟ್ ನೋಡುಗರಿಗೆ ಹಬ್ಬದಂತಿದೆ.

ʻಮಿರಾಯ್ʼ ಸಿನಿಮಾಗಾಗಿ ತೇಜ್ ಸಜ್ಜಾ ಕೋಲು ಕಾಳಗ ಕಲಿತಿದ್ದಾರೆ. ಪ್ರತಿ ಫ್ರೇಮ್ ನ್ನು ಕಾರ್ತಿಕ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗೌರ ಹರಿ ಸಂಗೀತ ತೂಕ ಹೆಚ್ಚಿಸಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ಮಿರಾಯ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: Hanuman Chalisa: ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ FIR;‌ ಪಾಕಿಸ್ತಾನವನ್ನು ಆಳುತ್ತಿದ್ದೀರಾ ಎಂದು ಸಿಎಂಗೆ ಜೋಶಿ ಪ್ರಶ್ನೆ

ಕಾರ್ತಿಕ್ ಗಟ್ಟಮ್ನೇನಿ ಮಿರಾಯ್ ಗೆ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದು, ಮಣಿಬಾಬು ಕರಣಂ ಅವರು ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶಕನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರಾಗಿದ್ದಾರೆ. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರ್ತಿರುವ ಮರೈ ಸಿನಿಮಾವನ್ನು 2025ರ ಏಪ್ರಿಲ್ 18ರಂದು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

Continue Reading

ಟಾಲಿವುಡ್

Nikhil Siddhartha: ಮಗನ ಹೆಸರನ್ನು ರಿವೀಲ್‌ ಮಾಡಿದ ʻಕಾರ್ತಿಕೇಯʼ ಸಿನಿಮಾ ಖ್ಯಾತಿಯ ನಟ!

Nikhil Siddhartha: ನಿಖಿಲ್ ಮತ್ತು ಪಲ್ಲವಿ 2020ರಲ್ಲಿ ಮದುವೆಯಾಗಿದ್ದರು. ನಿಶ್ಚಿತಾರ್ಥ ಮಾಡಿಕೊಳ್ಳುವ ಮೊದಲು ಜೋಡಿ ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿತ್ತು. ಸಿನಿಮಾ ವಿಚಾರಕ್ಕೆ ಬಂದರೆ ನಿಖಿಲ್‌ ಶೀಘ್ರದಲ್ಲೇ ʻಸ್ವಯಂಭುʼ, ʻದಿ ಇಂಡಿಯಾ ಹೌಸ್ʼ ಮತ್ತು ʻಕಾರ್ತಿಕೇಯ 3ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದೀಗ ದಂಪತಿ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮಗನಿಗೆ ʻಧೀರʼ ಎಂದು ನಾಮಕರಣ ಮಾಡಿದೆ ಜೋಡಿ. ಇದೀಗ ನಿಖಿಲ್‌ ಮಾಧ್ಯಮದ ಜತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

VISTARANEWS.COM


on

Nikhil Siddhartha reveals his son name
Koo

ಬೆಂಗಳೂರು: ʻಕಾರ್ತಿಕೇಯʼ ಸಿನಿಮಾ ಖ್ಯಾತಿಯ ಟಾಲಿವುಡ್‌ ನಟ ನಿಖಿಲ್ ಸಿದ್ಧಾರ್ಥ ಅವರ ಪತ್ನಿ ಪಲ್ಲವಿ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ದಂಪತಿ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮಗನಿಗೆ ʻಧೀರʼ ಎಂದು (Dheera Siddhartha) ನಾಮಕರಣ ಮಾಡಿದೆ ಜೋಡಿ. ಇದೀಗ ನಿಖಿಲ್‌ ಮಾಧ್ಯಮದ ಜತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಿಖಿಲ್ ಸಿದ್ಧಾರ್ಥ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಮಗನೊಂದಿಗೆ ಮನೆಯಲ್ಲಿ ಸಮಯ ಕಳೆಯಲು ಹಾಗೂ ಹೆಂಡತಿಯೊಂದಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಇಷ್ಟ ಪಡುವುದಾಗಿ ಹೇಳಿಕೊಂಡರು. ನಿಖಿಲ್ ಸಿದ್ಧಾರ್ಥ ಮಾತನಾಡಿ ʻʻನಾವು ಮಗನಿಗೆ ಧೀರ ಸಿದ್ಧಾರ್ಥ ಎಂದು ಹೆಸರಿಟ್ಟಿದ್ದೇವೆ. ನಾನು ಪ್ರತಿದಿನ ಅವನೊಂದಿಗೆ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೇನೆ. ಏಕೆಂದರೆ ಮಕ್ಕಳು ಬೇಗನೆ ಬೆಳೆಯುತ್ತಾರೆ. ನಾನು ಪಲ್ಲವಿಯೊಂದಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ. ನಾನು ವಾರಕ್ಕೊಮ್ಮೆಯಾದರೂ ಪಾರ್ಟಿಗೆ ಹೋಗುತ್ತಿದ್ದೆ, ಆದರೆ ನಾನು ಈಗ ಅದನ್ನೆಲ್ಲ ಕಡಿಮೆ ಮಾಡಿದ್ದೇನೆ. ಪೋಷಕರಾದ ನಂತರ ನಮ್ಮ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಕೆಟ್ಟ ಅಭ್ಯಾಸಗಳನ್ನು ಬಿಡಬೇಕುʼʼಎಂದರು.

ಇದನ್ನೂ ಓದಿ: Nikhil Siddhartha: ’ಸ್ವಯಂಭು’ ಮೂಲಕ ಮತ್ತೆ ಬಣ್ಣ ಹಚ್ಚಿದ ವಜ್ರಕಾಯ ‘ಪಟಾಕ’!

ಫೆಬ್ರವರಿ 21 ರಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಧೀರ ಜನಿಸಿದ. ಮಗುವನ್ನು ಎತ್ತಿಕೊಂಡಿರುವ ಫೋಟೊವನ್ನು ನಟ ನಿಖಿಲ್ ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದರು. ಜತೆಗೆ ಹೀಗೆ ಬರೆದುಕೊಂಡಿದ್ದರು. ʻʻಒಂದು ವರ್ಷದ ಹಿಂದೆ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ಈಗ ಮನೆಗೆ ಧಿರ ಬಂದಿದ್ದಾನೆ. ಪಲ್ಲವಿ ಮತ್ತು ನನಗೆ ಇಂದು ಮುದ್ದಾದ ಪುಟ್ಟ ಗಂಡು ಮಗುವಿದೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ. ಅತ್ಯಂತ ಸಂತೋಷವಾಗಿದೆʼʼಎಂದು ಬರೆದುಕೊಂಡಿದ್ದರು.

ನಿಖಿಲ್ ಮತ್ತು ಪಲ್ಲವಿ 2020ರಲ್ಲಿ ಮದುವೆಯಾಗಿದ್ದರು. ನಿಶ್ಚಿತಾರ್ಥ ಮಾಡಿಕೊಳ್ಳುವ ಮೊದಲು ಜೋಡಿ ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿತ್ತು. ಸಿನಿಮಾ ವಿಚಾರಕ್ಕೆ ಬಂದರೆ ನಿಖಿಲ್‌ ಶೀಘ್ರದಲ್ಲೇ ʻಸ್ವಯಂಭುʼ, ʻದಿ ಇಂಡಿಯಾ ಹೌಸ್ʼ ಮತ್ತು ʻಕಾರ್ತಿಕೇಯ 3ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Ayalaan Movie: ತಮಿಳು ನಟ ಶಿವಕಾರ್ತಿಕೇಯನ್ ‘ಅಯಲಾನ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್

ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ʻಸ್ವಯಂಭುʼ

ತೆಲುಗು ನಟ ನಿಖಿಲ್ ಸಿದ್ದಾರ್ಥ್ (Nikhil Siddhartha) ನಟಿಸುತ್ತಿರುವ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ʻಸ್ವಯಂಭುʼ (Swayambhu Movie) ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸಹಸ್ರಮಾನಗಳ ಹಿಂದಿನ ಕಥೆಯನ್ನೊಳಗೊಂಡಿರುವ ಈ ಚಿತ್ರದ ಮೂಲಕ ವಜ್ರಕಾಯದ ʻಪಟಾಕʼ ಕಂಬ್ಯಾಕ್ ಮಾಡುತ್ತಿದ್ದಾರೆ. ಕನ್ನಡತಿ ನಭಾ ನಟೇಶ್‌ಗೆ 2023ರಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಅವರು ಸರ್ಜರಿಗೂ ಒಳಗಾಗಬೇಕಾಯಿತು. ಈಗ ಸಂಪೂರ್ಣ ಚೇತರಿಕೆ ಕಂಡಿರುವ ಸುಂದರಿ ʻಸ್ವಯಂಭುʼ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ.

ಸ್ವಯಂಭು’ ಶೂಟಿಂಗ್ ಅಖಾಡಕ್ಕೆ ನಭಾ ಎಂಟ್ರಿ ಕೊಟ್ಟಿದ್ದಾರೆ. ಸಣ್ಣ ಝಲಕ್ ಮೂಲಕ ಚಿತ್ರತಂಡ ಆಕೆಯನ್ನು ಚಿತ್ರಪ್ರೇಮಿಗಳಿಗೆ ಪರಿಚಯಿಸಿದೆ. ರಾಣಿಯಂತೆ ಕಂಗೊಳಿಸುತ್ತಿರುವ ನಭಾ ಲುಕ್ ರಿವೀಲ್ ಮಾಡಲಾಗಿದೆ. ಆದರೆ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಬಿಟ್ಟುಕೊಟ್ಟಿಲ್ಲ. ಶಿವಣ್ಣ ನಟನೆಯ ʻವಜ್ರಕಾಯʼ ಚಿತ್ರದ ಮೂಲಕ ಸಿನಿಮಾ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ನಭಾ, ಪೂರಿ ಜಗನ್ನಾಥ್ ನಿರ್ದೇಶನದ ʻಇಸ್ಮಾರ್ಟ್ ಶಂಕರ್ʼ ಮೂಲಕ ಖ್ಯಾತಿ ಗಳಿಸಿದರು.

ನಿಖಿಲ್ ನಾಯಕನಟನಾಗಿರುವ ʻಸ್ವಯಂಭುʼ ಸಿನಿಮಾದಲ್ಲಿ ಸಂಯುಕ್ತ ಮೆನನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮ್ಮ ಪಾತ್ರಕ್ಕಾಗಿ ಅವರು ತಯಾರಿಯಲ್ಲಿದ್ದಾರೆ. ಅಂದಹಾಗೇ ಭರತ್ ಕೃಷ್ಣಮಾಚಾರಿ ಸ್ವಯಂಭು ಆ್ಯಕ್ಷನ್ ಕಟ್ ಹೇಳಿದ್ದಾರೆ.

Continue Reading

ಟಾಲಿವುಡ್

Indian 2 : ‘ಇಂಡಿಯನ್ 2ʼ ಸಿನಿಮಾದಲ್ಲಿ ಸಿದ್ಧಾರ್ಥ್: ಫಸ್ಟ್‌ ಲುಕ್‌ ಔಟ್‌!

Indian 2 : ಶಂಕರ್ ನಿರ್ದೇಶನದ ʻಇಂಡಿಯನ್ 2ʼ ಇದೇ ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ಸಿನಿಮಾ ಜೂನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದು, ಯಾವ ದಿನ ಎಂಬುದನ್ನು ಬಹಿರಂಗಪಡಿಸಿಲ್ಲ. ಹೊಸ ಪೋಸ್ಟರ್‌ನಲ್ಲಿ, ಕಮಲ್ ಬಿಳಿ ಅಂಗಿ ಧರಿಸಿ, ಕೈಯನ್ನು ಕೈಕೋಳದಲ್ಲಿ ಕಟ್ಟಿರುವುದನ್ನು ತೋರಿಸಲಾಗಿದೆ. ಚಿತ್ರದಲ್ಲಿ ಸೇನಾಪತಿ ಪಾತ್ರದಲ್ಲಿ ಕಮಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Siddharth first look from Kamal Haasan Indian 2
Koo

ಬೆಂಗಳೂರು:  ʻಇಂಡಿಯನ್ʼ (Indian 2 Movie) ಸಿನಿಮಾದಲ್ಲಿ ಕಮಲ್ ಹಾಸನ್ (kamal haasan) ಸೇನಾಪತಿ ಪಾತ್ರದಲ್ಲಿ ಮಿಂಚಿದ್ದರು. ಅದರ ಮುಂದುವರಿದ ಭಾಗವಾಗಿ ‘ಇಂಡಿಯನ್ 2’ . ಇಂದು (ಏ.17) ನಟ ಸಿದ್ದಾರ್ಥ್‌ ಅವರ ಜನುಮದಿನ. ನಟ 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಂದರ್ಭದಲ್ಲಿ ʻಇಂಡಿಯನ್ 2ʼ ಸಿನಿಮಾ ಸಿದ್ಧಾರ್ಥ್ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಶೇರ್‌ ಮಾಡಿಕೊಂಡಿದೆ. ಸಿದ್ಧಾರ್ಥ್ ಅವರು ಎಸ್ ಶಂಕರ್ ನಿರ್ದೇಶನದ ‘ಇಂಡಿಯನ್ 2’ ಸೀಕ್ವೆಲ್‌ನಲ್ಲಿ ಕಮಲ್ ಹಾಸನ್ ಜತೆ ನಟಿಸಲಿದ್ದಾರೆ.

ಸಿದ್ಧಾರ್ಥ್ ಅವರ ಫಸ್ಟ್ ಲುಕ್!

ಲೈಕಾ ಪ್ರೊಡಕ್ಷನ್ಸ್‌ನ ಅಧಿಕೃತ ಎಕ್ಸ್‌ ಹ್ಯಾಂಡಲ್ ‘ಇಂಡಿಯನ್ 2’ ಸಿನಿಮಾದ ಸಿದ್ಧಾರ್ಥ್‌ ಫಸ್ಟ್‌ ಲುಕ್‌ ಪೋಸ್ಟರ್‌ ಅನಾವರಣಗೊಳಿಸಿತು. ಸಿದ್ಧಾರ್ಥ್ ಕೆಂಪು ಮತ್ತು ಬಿಳಿ ಬಣ್ಣದ ಚೆಕ್ಸ್‌ ಶರ್ಟ್ ಧರಿಸಿದ್ದರು. ಪೋಸ್ಟರ್‌ನಲ್ಲಿ ಅವರ ಹಿಂದೆ “ಟೀಮ್ ಇಂಡಿಯನ್ 2ರಿಂದ ಶುಭಾಶಯಗಳು” ಎಂದು ಬರೆಯಲಾಗಿದೆ.

ಶಂಕರ್ ನಿರ್ದೇಶನದ ʻಇಂಡಿಯನ್ 2ʼ ಇದೇ ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ಸಿನಿಮಾ ಜೂನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದು, ಯಾವ ದಿನ ಎಂಬುದನ್ನು ಬಹಿರಂಗಪಡಿಸಿಲ್ಲ. ಹೊಸ ಪೋಸ್ಟರ್‌ನಲ್ಲಿ, ಕಮಲ್ ಬಿಳಿ ಅಂಗಿ ಧರಿಸಿ, ಕೈಯನ್ನು ಕೈಕೋಳದಲ್ಲಿ ಕಟ್ಟಿರುವುದನ್ನು ತೋರಿಸಲಾಗಿದೆ. ಚಿತ್ರದಲ್ಲಿ ಸೇನಾಪತಿ ಪಾತ್ರದಲ್ಲಿ ಕಮಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಸಿದ್ಧಾರ್ಥ್ ʻಇಂಡಿಯನ್ 2ʼ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ವರದಿ ಇದೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್‌ ಸಿನಿಮಾದಲ್ಲಿ ಸಿದ್ಧಾರ್ಥ್‌ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್‌ ಹಾಗೂ ಸಿದ್ಧಾರ್ಥ್‌ ಒಟ್ಟಿಗೆ ಕೆಲಸ ಮಾಡುವಂತಾಗಿದೆ.

ಇದನ್ನೂ ಓದಿ: Indian 2: ‘ಇಂಡಿಯನ್ 2′ ಚಿತ್ರದ ಶೂಟಿಂಗ್ ಪೂರ್ಣ; ಕಮಲ್‌ ಹಾಸನ್‌ ಸಿನಿಮಾ ತೆರೆಗೆ ಯಾವಾಗ?

ಸಿದ್ಧಾರ್ಥ್ ʻಇಂಡಿಯನ್ 2ʼ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ವರದಿ ಇದೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್‌ ಸಿನಿಮಾದಲ್ಲಿ ಸಿದ್ಧಾರ್ಥ್‌ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್‌ ಹಾಗೂ ಸಿದ್ಧಾರ್ಥ್‌ ಒಟ್ಟಿಗೆ ಕೆಲಸ ಮಾಡುವಂತಾಗಿದೆ.

ಸಿದ್ಧಾರ್ಥ್ ಇತ್ತೀಚೆಗೆ ನಟಿ ಅದಿತಿ ರಾವ್ ಹೈದರಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಅದಿತಿ ಅವರು ಮುಂಬರುವ ನೆಟ್‌ಫ್ಲಿಕ್ಸ್ ಸಿರೀಸ್‌ ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Continue Reading

ಸಿನಿಮಾ

Samantha Kickboxing: ನಟನೆ ಬಿಟ್ಟು `ಕಿಕ್ ಬಾಕ್ಸಿಂಗ್’ ಕಡೆಗೆ ಗಮನಹರಿಸಿದ್ರಾ ನಟಿ ಸಮಂತಾ?

Samantha Kickboxing ನಟಿ ಸಮಂತಾ ಇತ್ತೀಚೆಗೆ ಸಿನಿಮಾಕ್ಕಿಂತ ಹೆಚ್ಚು ಬೇರೆ ಹವ್ಯಾಸಗಳ ಕಡೆ ಗಮನ ನೀಡುತ್ತಿರುವುದು ಕಂಡು ಬರುತ್ತಿದೆ. ಅದು ಅಲ್ಲದೇ, ಅವರು ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದು ಅದನ್ನು ಗುಣಪಡಿಸುವ ಸಲುವಾಗಿ ಹಾಗೂ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬಲಗೊಳಿಸಲು ನಟನೆಗೆ ವಿರಾಮ ನೀಡಿ ಯೋಗ, ಧ್ಯಾನ, ಕುದುರೆ ಸವಾರಿ ಮತ್ತು ಕಿಕ್ ಬಾಕ್ಸಿಂಗ್ ಕಡೆಗೆ ಗಮನಹರಿಸುತ್ತಿದ್ದಾರಂತೆ.

VISTARANEWS.COM


on

Samantha
Koo

ಬೆಂಗಳೂರು: ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ನಟಿ ಸಮಂತಾ ಇದೀಗ ನಟನೆಗೆ ವಿರಾಮ ನೀಡಿ ಯೋಗ, ಧ್ಯಾನ, ಕುದುರೆ ಸವಾರಿ ಮತ್ತು ಕಿಕ್ ಬಾಕ್ಸಿಂಗ್ ಕಡೆಗೆ ಗಮನಹರಿಸುತ್ತಿದ್ದಾರೆ. ತಾವು ಕಲಿತ ಸಮರ ಕಲೆಗಳ ಪ್ರದರ್ಶನದ ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ನಟಿ ಸಮಂತಾ (Samantha Kickboxing) ಇದಕ್ಕೆ ‘ಒನ್ ಡೇ ಎಟ್ ಅ ಟೈಮ್ ‘ ಎಂಬ ಶೀರ್ಷಿಕೆ ನೀಡಿದ್ದಾರೆ.

ನೆಚ್ಚಿನ ನಟಿ ಸಿನಿಮಾ ಬಿಟ್ಟು ಬೇರೆ ಹವ್ಯಾಸಗಳ ಕಡೆ ಗಮನ ನೀಡುತ್ತಿರುವುದು ಸಮಂತಾ ಅಭಿಮಾನಿಗಳಿಗೆ ಬೇಸರವನ್ನು ಉಂಟುಮಾಡಿರಬಹುದು. ಆದರೆ ನಟಿ ತಮ್ಮ ಜೀವನದ ಸಂತೋಷವನ್ನು ಮರಳಿ ಪಡೆಯಲು ಈ ಮಾರ್ಗವನ್ನು ಅನುಸರಿಸಿದ್ದಾರಂತೆ.

ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ

ಹೌದು, ನಟಿ ಸಮಂತಾ ಮಯೋಸಿಟಿಸ್ ಎಂಬ ಅಪರೂಪದ ರೋಗಕ್ಕೆ ಒಳಗಾಗಿದ್ದು, ಇದು ಮಾನವ ದೇಹದ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆಯಂತೆ. ಇದರಿಂದ ಸ್ನಾಯುಗಳು ಕಾಲಾಂತರದಲ್ಲಿ ದುರ್ಬಲಗೊಳ್ಳುತ್ತದೆಯಂತೆ. ಹಾಗಾಗಿ ನಟಿ ಈ ಕಾಯಿಲೆಯನ್ನು ಗುಣಪಡಿಸುವ ಸಲುವಾಗಿ ಹಾಗೂ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬಲಗೊಳಿಸಲು ನಟನೆಗೆ ವಿರಾಮ ನೀಡಿ ಯೋಗ, ಧ್ಯಾನ, ಕುದುರೆ ಸವಾರಿ ಮತ್ತು ಕಿಕ್ ಬಾಕ್ಸಿಂಗ್ ಕಡೆಗೆ ಗಮನಹರಿಸುತ್ತಿದ್ದಾರೆ ಎನ್ನಲಾಗಿದೆ.

ನಟಿ ಈ ಹಿಂದೆ ತಮ್ಮ ಕುದುರೆ ಸವಾರಿಗೆ ಸಂಬಂಧಪಟ್ಟ ಕೆಲವು ಫೋಟೊಗಳನ್ನು ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಆದರೆ ನಟಿ ಸಮಂತಾ ನಟನಾ ವೃತ್ತಿಗೆ ವಿದಾಯ ಹೇಳಿಲ್ಲ, ಬದಲಾಗಿ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ ಅಷ್ಟೇ. ನಟಿ ಈಗಾಗಲೇ ʻಸಿಟಾಡೆಲ್ ಇಂಡಿಯಾ: ಹನಿ ಬನ್ನಿʼ ವೆಬ್ ಸರಣಿಯಲ್ಲಿ ನಟಿಸಿದ್ದು ಅದರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಸಮಂತಾ ಜತೆ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಸಿಕಂದರ್ ಖೇರ್, ಸಾಕಿಬ್ ಸಲೀಮ್ ಮತ್ತು ಕೇ ಕೇ ಮೆನನ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ರಾಜ್ ಮತ್ತು ಡಿಕೆ ಮತ್ತು ಸೀತಾ ಆರ್ ಮೆನನ್ ನಿರ್ದೇಶನದ ಸಿಟಾಡೆಲ್ ಇಂಡಿಯಾ:ಹನಿ ಬನ್ನಿ ಯುಎಸ್ ಶೋನ ಭಾರತೀಯ ಸ್ಪಿನ್ ಆಫ್ ಆಗಿದೆ. ಇದರಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Chiyaan Vikram: ಚಿಯಾನ್ ವಿಕ್ರಮ್ ಜನುಮದಿನಕ್ಕೆ ʻತಂಗಲಾನ್‌ʼ ಚಿತ್ರತಂಡದಿಂದ ಭರ್ಜರಿ ಗಿಫ್ಟ್‌!

ಹಾಗೇ ನಟಿ ಸಮಂತಾ ಇನ್ನೂ ಕೆಲವು ಯೋಜನೆಗಳಿಗೆ ಸಹಿ ಹಾಕಿದ್ದು, ಅವು ಇನ್ನೂ ಸೆಟ್ಟೇರದ ಕಾರಣ ನಟಿ ಮುಗಂಡ ಹಣವನ್ನು ವಾಪಾಸು ನೀಡಿದ್ದಾರೆ ಎಂಬುದಾಗಿ ವರದಿಯಾಗಿದೆ.

Continue Reading
Advertisement
kaalnadige Jatha programme in Uttara kannada
ಉತ್ತರ ಕನ್ನಡ9 mins ago

Lok Sabha Election 2024: ಉ.ಕ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮತದಾನದ ಗುರಿ; ಡಿಸಿ

Bangalore Rural Lok Sabha Constituency Congress candidate D K Suresh Election campaign
ಬೆಂಗಳೂರು ಗ್ರಾಮಾಂತರ11 mins ago

Lok Sabha Election 2024: ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಡಿ.ಕೆ. ಸುರೇಶ್

Neha Murder Case
ಕರ್ನಾಟಕ12 mins ago

Neha Murder Case: ನನ್ನ ಮಗನಿಗೆ ಶಿಕ್ಷೆ ಆಗಬೇಕು; ಯಾರೂ ಇಂಥ ಕೃತ್ಯ ಎಸಗಬೇಡಿ ಎಂದು ಫಯಾಜ್‌ ತಂದೆ ಕಣ್ಣೀರು

IPL 2024
ಪ್ರಮುಖ ಸುದ್ದಿ15 mins ago

IPL 2024 : ಇಂಪ್ಯಾಕ್ಟ್​ ಪ್ಲೇಯರ್ ನಿಯಮಕ್ಕೆ ಆಕ್ಷೇಪ ಎತ್ತಿದ ರಿಕಿ ಪಾಂಟಿಂಗ್​

Lok Sabha Election 2024
Lok Sabha Election 202418 mins ago

Lok Sabha Election 2024: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ; ಕಾರಣ ಇದು

Day 2 of CET 2024 Exam 26 out of syllabus question KEA asks to raise objections by April 27
ಶಿಕ್ಷಣ59 mins ago

CET 2024 Exam: ಸಿಇಟಿ ಪರೀಕ್ಷೆಯ 2ನೇ ದಿನವೂ 26 ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ! ಏ.27ರೊಳಗೆ ಆಕ್ಷೇಪಣೆ ಸಲ್ಲಿಸಲು KEA ಸೂಚನೆ

Maldives Tourism
ವಿದೇಶ1 hour ago

Maldives Tourism: ಪರಿಣಾಮ ಬೀರಿದ ಮಾಲ್ಡೀವ್ಸ್ ಬಹಿಷ್ಕಾರದ ಕೂಗು; ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಕುಸಿತ

IPL 2024
ಕ್ರೀಡೆ1 hour ago

IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

Party symbols
ರಾಜಕೀಯ1 hour ago

Party Symbols: ವಿವಿಧ ಪಕ್ಷಗಳ ಚುನಾವಣಾ ಚಿಹ್ನೆ ಹಿಂದೆ ಹೇಗಿತ್ತು, ಈಗ ಏನಾಗಿದೆ? ಸಂಗ್ರಹಯೋಗ್ಯ ಮಾಹಿತಿ

letter to President
ಕರ್ನಾಟಕ1 hour ago

letter to President: ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ: ನ್ಯಾಯ ಕೊಡಿಸಲು ರಾಷ್ಟ್ರಪತಿಗಳಿಗೆ ಕರವೇ ನಾರಾಯಣಗೌಡ ಮನವಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ6 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ17 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌