Actress Sneha | ಕಾಲಿವುಡ್ ನಟಿ ಸ್ನೇಹಾ ದಾಂಪತ್ಯದಲ್ಲಿ ಬಿರುಕು? Vistara News
Connect with us

ಕಾಲಿವುಡ್

Actress Sneha | ಕಾಲಿವುಡ್ ನಟಿ ಸ್ನೇಹಾ ದಾಂಪತ್ಯದಲ್ಲಿ ಬಿರುಕು?

ಕಾಲಿವುಡ್‌ ನಟಿ ಸ್ನೇಹಾ (Actress Sneha) ದಾಂಪತ್ಯದಲ್ಲಿ ಬಿರುಕಾಗಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಗಾಸಿಪ್‌ಗಳು ಹರಿದಾಡುತ್ತಿವೆ. ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.

VISTARANEWS.COM


on

Actress Sneha
Koo

ಬೆಂಗಳೂರು : ಕಾಲಿವುಡ್‌ ಕ್ಯೂಟ್‌ ಕಪಲ್‌ ಎಂದೇ ಪ್ರಖ್ಯಾತಿ ಪಡೆದಿರುವ ನಟಿ ಸ್ನೇಹಾ (Actress Sneha ) ಮತ್ತು ನಟ ಪ್ರಸನ್ನ ಜೋಡಿ ಬೇರೆಯಾಗಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಸ್ನೇಹಾ ಅವರು ಈಗಾಗಲೇ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಶೀರ್ಘದಲ್ಲಿಯೇ ಇಬ್ಬರೂ ಡಿವೋರ್ಸ್‌ ತೆಗೆದುಕೊಳ್ಳುತ್ತಿದ್ದಾರೆ ಎಂಬ ಗಾಸಿಪ್‌ ಹರಿದಾಡುತ್ತಿವೆ. ಈ ಬಗ್ಗೆ ನಟಿ ಸ್ನೇಹಾ ಅವರು ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೇ ಕಾಲಿವುಡ್‌ನಲ್ಲಿ ನಟಿ ಸಮಂತಾ,ನಟ ಧನುಷ್‌, ಹೀಗೆ ಪ್ರಮುಖ ತಾರೆಯರು ಡಿವೋರ್ಸ್‌ ತೆಗೆದುಕೊಳ್ಳುತ್ತಿರುವ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಇದರಿಂದಾಗಿ ಅವರ ಅಭಿಮಾನಿಗಳಿಗೆ ಬೇಸರ ಉಂಟುಮಾಡಿತ್ತು. ಇದೀಗ ಸ್ನೇಹಾ ಅವರ ಅಭಿಮಾನಿಗಳಲ್ಲಿಯೂ ಕೂಡ ಆತಂಕ ಹೆಚ್ಚಾಗಿದೆ. ಮಲಯಾಳಂ ಚಿತ್ರರಂಗದ ಮೂಲಕ ಸ್ನೇಹಾ ಅವರು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ತಮಿಳು ಸಿನಿಮಾದಲ್ಲಿ ಸೈ ಎನಿಸಿಕೊಂಡರು. ಕನ್ನಡದ ʻರವಿಶಾಸ್ತ್ರೀʼ ಸಿನಿಮಾದಲ್ಲಿಯೂ ನಟಿ ಮಿಂಚಿದ್ದರು. ಇದೀಗ ನಟಿ ಈ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ. ʻʻಟ್ವಿನ್ನಿಂಗ್‌ ಹ್ಯಾಪಿ ವೀಕೆಂಡ್‌ʼʼಎಂದು ಕ್ಯಾಪ್ಷನ್‌ ನೀಡಿ ಪತಿ ಪ್ರಸನ್ನ ಅವರ ಜತೆ ಇರುವ ಫೋಟೊ ಒಂದನ್ನು ಶೇರ್‌ ಮಾಡಿದ್ದಾರೆ. ಈ ಮೂಲಕ ನಾವಿಬ್ಬರೂ ಒಟ್ಟಿಗೆ ಇದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Actress Ramya | ಕಾಲಿವುಡ್‌ ನಟ ಧನುಷ್‌ ಜತೆ ಕಾಣಿಸಿಕೊಂಡ ಮೋಹಕ ತಾರೆ ರಮ್ಯಾ!

2012ರಲ್ಲಿ ನಟಿ ಸ್ನೇಹಾ ಅವರು ನಟ ಪ್ರಸನ್ನ ಅವರನ್ನು ಪ್ರೀತಿಸಿ ಮದುವೆ ಆದರು. ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. 2009ರಲ್ಲಿ ʻಅಚ್ಚಮುಂಡು ಅಚ್ಚಮುಂಡುʼ (achchamundu achchamundu) ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 3 ವರ್ಷ ಡೇಟಿಂಗ್‌ ಮಾಡಿದ ಜೋಡಿ ಪೋಷಕರ ಒಪ್ಪಿಗೆ ಮೇರೆಗೆ 2012ರಲ್ಲಿ ಮದುವೆ ಆಗಿದ್ದರು. ಇತ್ತೀಚೆಗೆ ಕನ್ನಡದ ʻಕುರುಕ್ಷೇತ್ರʼ ಸಿನಿಮಾದಲ್ಲಿ ದ್ರೌಪದಿಯಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ | Sania Mirza | ಸಾನಿಯಾ- ಮಲಿಕ್‌ ದಾಂಪತ್ಯ ಅಂತ್ಯ; ಮಾಹಿತಿ ಖಾತರಿಪಡಿಸಿದ ಶೋಯೆಬ್‌ ಆಪ್ತ

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ

South Cinema

Kamal Haasan: ನಿರ್ದೇಶಕ ಮಣಿರತ್ನಂ ಬಗ್ಗೆ ಅನೇಕರಿಗೆ ಅಸೂಯೆ! ನಟ ಕಮಲ್ ಹಾಸನ್ ಹೀಗೆ ಹೇಳಿದ್ದೇಕೆ?

ಮಣಿರತ್ನಂ ನಿರ್ದೇಶನದ ʻಪೊನ್ನಿಯನ್ ಸೆಲ್ವನ್ʼ -1ರ ಸೂಪರ್ ಸಕ್ಸೆಸ್‌ ನಂತರ, ಆ ಸಿನಿಮಾದ ಎರಡನೇ ಭಾಗವಾದ ‘ಪೊನ್ನಿಯನ್‌ ಸೆಲ್ವನ್‌ 2’ (Ponniyin Selvan 2) ಬಿಡುಗಡೆಗೆ ಸಿದ್ಧವಾಗಿದೆ. ಟ್ರೈಲರ್‌ ಲಾಂಚ್ ನಲ್ಲಿಕಮಲ್ ಹಾಸನ್ (Kamal Haasan) ಅವರು ಮುಖ್ಯ ಅತಿಥಿಯಾಗಿ ಅಧ್ಯಕ್ಷತೆ ವಹಿಸಿದ್ದರು.

VISTARANEWS.COM


on

Edited by

many writers are now jealous of Mani RatnamKamal Haasan
Koo

ಬೆಂಗಳೂರು: ಮಣಿರತ್ನಂ ನಿರ್ದೇಶನದ ʻಪೊನ್ನಿಯನ್ ಸೆಲ್ವನ್ʼ -1ರ ಸೂಪರ್ ಸಕ್ಸೆಸ್‌ ನಂತರ, ಆ ಸಿನಿಮಾದ ಎರಡನೇ ಭಾಗವಾದ ‘ಪೊನ್ನಿಯನ್‌ ಸೆಲ್ವನ್‌ 2’ (Ponniyin Selvan 2) ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಚಿಯಾನ್ ವಿಕ್ರಮ್, ತ್ರಿಶಾ ಮತ್ತು ಜಯಂ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಜತೆಗೆ ಪ್ರಕಾಶ್ ರಾಜ್, ಪ್ರಭು, ಐಶ್ವರ್ಯ ಲಕ್ಷ್ಮಿ, ಶೋಭಿತಾ ಧೂಲಿಪಾಲ, ಜಯರಾಮ್, ಅಶ್ವಿನ್ ಕಾಕುಮನು, ಮೋಹನ್ ರಾಮನ್, ಶರತ್‌ಕುಮಾರ್ ಮತ್ತು ಪಾರ್ತಿಬನ್ ನಟಿಸಿದ್ದಾರೆ. ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಮಲ್ ಹಾಸನ್‌ (Kamal Haasan) ಅವರಲ್ಲದೆ, ನಟ ಸಿಲಂಬರಸನ್ ಟಿಆರ್, ಹಿರಿಯ ಚಲನಚಿತ್ರ ನಿರ್ಮಾಪಕ ಭಾರತಿರಾಜ ಸೇರಿದಂತೆ ಹಲವು ಗಣ್ಯರು ಮಾರ್ಚ್‌ 29ರಂದು ಟ್ರೈಲರ್‌ ಲಾಂಚ್‌ನಲ್ಲಿ ಭಾಗಿಯಾಗಿದ್ದರು.

ಪೊನ್ನಿಯನ್ ಸೆಲ್ವನ್ 2 ಟ್ರೈಲರ್‌ ಲಾಂಚ್ ನಲ್ಲಿ ಕಮಲ ಹಾಸನ್

ಕಮಲ್ ಹಾಸನ್ ಅವರು ಮುಖ್ಯ ಅತಿಥಿಯಾಗಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ನಟ ಮಾತನಾಡಿ “ವರ್ಷಗಳಿಂದ ನನ್ನನ್ನು ವೇದಿಕೆಗೆ ಬರುವಂತೆ ಮಾಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಪೊನ್ನಿಯಿನ್ ಸೆಲ್ವನ್‌ನಂತಹ ಚಿತ್ರದಲ್ಲಿ ನಟಿಸುವ ಅವಕಾಶ ನಾನು ಕಳೆದುಕೊಂಡಿದ್ದೇನೆ. ಹಾಗಾಗಿ ನಾನು ಧ್ವನಿ ನೀಡಿದ್ದೇನೆʼʼ ಎಂದರು. ʻʻಕಲ್ಕಿ ಕೃಷ್ಣಮೂರ್ತಿ ಅವರ ಪುಸ್ತಕಗಳನ್ನು ಆಧರಿಸಿ ಅನೇಕ ಬರಹಗಾರರು ಅಸೂಯೆ ಪಟ್ಟಂತೆ, ಈಗ ಅನೇಕ ಬರಹಗಾರರು ಮಣಿರತ್ನಂ ಬಗ್ಗೆ ಅಸೂಯೆ ಹೊಂದಿದ್ದಾರೆʼʼ ಎಂದು ಹೇಳಿದರು.

ʻʻನಿನ್ನೆ ಮೊನ್ನೆ ಎಆರ್ ರೆಹಮಾನ್ ಮೂಲಕ ನನಗೆ ಹೊಸ ಅವಕಾಶ ಸಿಕ್ಕಿತು. ಅವರ ಆರ್ಕೆಸ್ಟ್ರಾ ಹಾಡುಗಳು ಮ್ಯಾಜಿಕ್ ಆಗಿತ್ತು. ಅದನ್ನು ಹೇಳಲು ಪದಗಳೇ ಸಾಲುತ್ತಿಲ್ಲ. ಜೀವನ ಚಿಕ್ಕದಾಗಿದ್ದು ಸಿನಿಮಾದಲ್ಲಿ ಅವಕಾಶ ಸಿಗುವುದು ಕಡಿಮೆ. ಸಿಕ್ಕ ಅವಕಾಶಗಳನ್ನು ನಾವೆಲ್ಲರೂ ಸಂಭ್ರಮಿಸಬೇಕು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಅಸೂಯೆಗೆ ಸಮಯವಿಲ್ಲ. ಈ ನಟರು ನಮ್ಮನ್ನು ಬೇರೆ ಜಗತ್ತಿಗೆ ಸಾಗಿಸಿದ್ದಾರೆ. ಅದು ಸುಲಭದ ಸಾಧನೆಯಲ್ಲ, ”ಎಂದರು.

ಇದನ್ನೂ ಓದಿ : Kamal Haasan: ವಿಚ್ಛೇದನ ನಂತರ ನನ್ನ ಬಳಿ ಇದ್ದದ್ದು ಕೇವಲ 60 ರೂ. : ಕಮಲ್‌ ಹಾಸನ್‌ ಮಾಜಿ ಪತ್ನಿ ಸಾರಿಕಾ ಹೇಳಿದ್ದೇನು?

ಈ ಸಿನಿಮಾ ಇದೇ ವರ್ಷ ಏಪ್ರಿಲ್‌ 28ರಂದು ತೆರೆ ಕಾಣಲಿದೆ. ಪೊನ್ನಿಯನ್ ಸೆಲ್ವನ್ 2 ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಂಯೋಜಕ ಎಆರ್ ರೆಹಮಾನ್, ಸಂಕಲನಕಾರ ಶ್ರೀಕರ್ ಪ್ರಸಾದ್ ಮತ್ತು ಛಾಯಾಗ್ರಾಹಕ ರವಿವರ್ಮನ್ ತಾಂತ್ರಿಕ ಸಿಬ್ಬಂದಿಯ ಭಾಗವಾಗಿದ್ದಾರೆ. ಈ ಚಿತ್ರವನ್ನು ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿವೆ.

Continue Reading

South Cinema

Actress Madhavi: ʻಹಾಲುಜೇನುʼ ಖ್ಯಾತಿಯ ನಟಿ ಮಾಧವಿ ಬಿಕಿನಿ ಫೋಟೊ ವೈರಲ್‌

ಮಾಧವಿ (Actress Madhavi) ಅವರು ಸಿನಿರಂಗದಿಂದ ದೂರ ಉಳಿದಿದ್ದಾರೆ. ಅಮೆರಿಕಾದಲ್ಲಿಯೇ ನೆಲೆಸಿದ್ದಾರೆ. ಕೊನೆಯದಾಗಿ ಡಾ. ರಾಜ್‌ಕುಮಾರ್ ಜೊತೆ ‘ಒಡಹುಟ್ಟಿದವರು’ ಸಿನಿಮಾದಲ್ಲಿ ನಟಿಸಿದ್ದರು

VISTARANEWS.COM


on

Edited by

Radha Nair shares Actress Madhavi bikini photo
Koo

ಬೆಂಗಳೂರು: ಅಣ್ಣಾವ್ರ ಸಿನಿಮಾ ʻಹಾಲುಜೇನುʼ ಖ್ಯಾತಿಯ ನಟಿ ಮಾಧವಿ (Actress Madhavi) ಇದೀಗ ಬಿಕಿನಿ ಫೋಟೊದ ವಿಚಾರವಾಗಿ ಸಖತ್‌ ಸುದ್ದಿಯಲ್ಲಿದ್ದಾರೆ. ಖ್ಯಾತ ನಟಿ ರಾಧಾ ತಮ್ಮ ಇನ್‌ಸ್ಟಾದಲ್ಲಿ ಫೋಟೊವನ್ನು ಶೇರ್‌ ಮಾಡಿಕೊಂಡಿದ್ದಾರೆ. ಅದರಲ್ಲಿ ಕಮಲ್ ಹಾಸನ್ ಚೇರ್ ಮೇಲೆ ಕೂತಿದ್ದರೆ ಹಿಂದೆ ಸ್ವಪ್ನ, ರಾಧಾ, ಮಾಧವಿ ಸ್ವಿಮ್‌ಸೂಟ್‌ನಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಇದೀಗ ರಾಧಾ ಅವರ ಫೋಟೊದಿಂದಾಗಿ ಮಾಧವಿ ಸಖತ್‌ ಸುದ್ದಿಯಲ್ಲಿದ್ದಾರೆ.

‘ಹಾಲುಜೇನು’, ‘ಖೈದಿ’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಅನುರಾಗ ಅರಳಿತು’, ‘ಜೀವನಚೈತ್ರ’, ‘ಆಕಸ್ಮಿಕ’ ರೀತಿಯ ಹಿಟ್‌ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಮಾಧವಿ ದಶಕಗಳ ಹಿಂದೆಯೇ ಬಿಕಿನಿ ತೊಟ್ಟು ಮೈಚಳಿ ಬಿಟ್ಟು ನಟಿಸಿದ್ದರು. ತಮಿಳಿನಲ್ಲಿ ʻತಿಳ್ಳು ಮುಳ್ಳು’, ‘ತಂಬಿಕ್ಕು ಎಂದ ಊರು’, ‘ರಾಜ ಪರ್ವೈ’, ‘ಕಾಕಿ ಚಟ್ಟೈ’, ‘ವಿದುತಲೈ’ ಮತ್ತು ‘ಟಿಕ್ ಟಿಕ್ ಟಿಕ್’ ಚಿತ್ರಗಳ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ನಟಿಯ ಈ ಫೋಟೊ ಮತ್ತೆ ವೈರಲ್‌ ಆಗುತ್ತಿದೆ. 80ರ ದಶಕದಲ್ಲಿ ಈ ಫೋಟೊ ಚರ್ಚೇಗೀಡಾಗಿತ್ತು. ತಮಿಳಿನ ‘ಟಿಕ್‌ ಟಿಕ್‌ ಟಿಕ್’ ಸಿನಿಮಾ ಶೂಟಿಂಗ್ ಸಮಯದಲ್ಲಿ ಕ್ಲಿಕ್ಕಿಸಿರುವ ಫೋಟೊ ಅದು. ಅದರಲ್ಲಿ ಕಮಲ್ ಹಾಸನ್ ಚೇರ್ ಮೇಲೆ ಕೂತಿದ್ದರೆ ಹಿಂದೆ ಸ್ವಪ್ನ, ರಾಧಾ, ಮಾಧವಿ ಸ್ವಿಮ್‌ಸೂಟ್‌ನಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ.

ಕಮಲ್ ಹಾಸನ್, ಮಾಧವಿ, ಸ್ವಪ್ನಾ ಮತ್ತು ರಾಧಾ ಅಭಿನಯದ ಕ್ರೈಮ್ ಥ್ರಿಲ್ಲರ್ ‘ಟಿಕ್‌ ಟಿಕ್‌ ಟಿಕ್ ಸಿನಿಮಾ 1981ರಲ್ಲಿ ಬಿಡುಗಡೆಯಾಗಿ ಹಿಟ್‌ ಕಂಡಿತ್ತು. ಮಾಧವಿ ಮತ್ತು ರಾಧಾ ಇಬ್ಬರೂ ಕಮಲ್ ಹಾಸನ್ ಅವರೊಂದಿಗೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Vaashi | ಕೋರ್ಟ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ ಟೋವಿನೋ ಥಾಮಸ್‌ ಹಾಗೂ ಕೀರ್ತಿ ಸುರೇಶ್‌

ರಾಧಾ ಪೋಸ್ಟ್‌

ಆದರೆ ಇದೀಗ ಮಾಧವಿ ಅವರು ಸಿನಿರಂಗದಿಂದ ದೂರ ಉಳಿದಿದ್ದಾರೆ. ಅಮೆರಿಕಾದಲ್ಲಿಯೇ ನೆಲೆಸಿದ್ದಾರೆ. ಕೊನೆಯದಾಗಿ ಡಾ. ರಾಜ್‌ಕುಮಾರ್ ಜೊತೆ ‘ಒಡಹುಟ್ಟಿದವರು’ ಸಿನಿಮಾದಲ್ಲಿ ನಟಿಸಿದ್ದರು. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಮಾಧವಿ ಭರತನಾಟ್ಯ ಕಲಾವಿದೆ ಆಗಿದ್ದರು. 1996ರಲ್ಲಿ ರಾಲ್ಫ್ ಶರ್ಮಾ ಎಂಬುವವರ ಕೈ ಹಿಡಿದಿದ್ದರು. ಆಕೆಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ.

Continue Reading

South Cinema

Veerappan Daughter: ವೀರಪ್ಪನ್‌ ಮಗಳು ವಿಜಯಲಕ್ಷ್ಮೀ ಸಿನಿರಂಗಕ್ಕೆ ಎಂಟ್ರಿ

ಈಗಾಗಲೇ ಚೆನ್ನೈನಲ್ಲಿ ಆಡಿಯೊ ರಿಲೀಸ್‌ ಕಾರ್ಯಕ್ರಮ ನೆರವೇರಿದೆ. ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿರುವ ವಿಜಯಲಕ್ಷ್ಮೀ (Veerappan Daughter) ರಾಜಕೀಯ ರಂಗದಿಂದ ಸಿನಿಮಾರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

VISTARANEWS.COM


on

Edited by

Veerappan Daughter Maaveeran Pillai New Film
Koo

ಚೆನ್ನೈ: ವೀರಪ್ಪನ್‌ ಮಗಳು ವಿಜಯಲಕ್ಷ್ಮೀ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ವಿಜಯಲಕ್ಷ್ಮೀ (Veerappan Daughter) ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.. ʼಮಾವೀರನ್‌ ಪಿಳ್ಳೈʼ (Maaveeran Pillai) ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.  ಈಗಾಗಲೇ ಚೆನ್ನೈನಲ್ಲಿ ಆಡಿಯೊ ರಿಲೀಸ್‌ ಕಾರ್ಯಕ್ರಮ ನೆರವೇರಿದೆ. ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿರುವ ವಿಜಯಲಕ್ಷ್ಮೀ, ರಾಜಕೀಯ ರಂಗದಿಂದ ಸಿನಿಮಾರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ವೀರಪ್ಪನ್​ ಪತ್ನಿ ಮುತ್ತುಲಕ್ಷ್ಮೀ, ಆಲ್​ ಪೀಪಲ್ಸ್​ ಪೊಲಿಟಿಕಲ್​ ಪಾರ್ಟಿ ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್​ ಸುರೇಶ್​, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.​ಆರ್.​ ರಾಜ ಮೊದಲಾದವರು ಭಾಗವಹಿಸಿದ್ದರು. ವಿಜಯಲಕ್ಷ್ಮೀ ಮಾತನಾಡಿ ʻʻನನಗೆ ಮೊದಲಿನಿಂದಲೂ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆಯಿತ್ತು. ಕುಡಿತದ ಪರಿಣಾಮದ ಮೇಲೆ ಬೆಳಕು ಚೆಲ್ಲುವ ಕಥೆ ಇದಾಗಿದೆ. ಪ್ರತಿ ಮನೆಯಲ್ಲೂ ಗಂಡಸರ ಕುಡಿತದ ಕಾರಣದಿಂದ ಹೆಣ್ಣುಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂತಹ ಮಹಿಳೆಯರ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಪಾತ್ರ ಇದಾಗಿದೆ. ಆ ಕಾರಣಕ್ಕೆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆʼ ಎಂದಿದ್ದಾರೆ.

ಇದನ್ನೂ ಓದಿ: Actor Suriya: ಸಚಿನ್ ತೆಂಡೂಲ್ಕರ್ ಭೇಟಿ ಮಾಡಿದ ಕಾಲಿವುಡ್‌ ನಟ ಸೂರ್ಯ: ಫೋಟೊ ವೈರಲ್‌

ಆಡಿಯೊ ಲಾಂಚ್‌ ಇವೆಂಟ್‌

ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಪೇರರಸು ʼಸಿನಿಮಾ ಎಂದರೆ ಅದರಲ್ಲಿ ಯಾರು ನಟಿಸುತ್ತಾರೆ, ಯಾರು ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬುದನ್ನು ಮುಖ್ಯವಾಗುವುದಿಲ್ಲ. ಸಿನಿಮಾದ ಎಂದರೆ ಕಥೆಯೇ ಜೀವಾಳʼ ಎಂದಿದ್ದಾರೆ.

ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ. ಪ್ರೇಮ್​ ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಜೂಲಿಯನ್​ ಸಂಕಲನವಿದೆ.

Continue Reading

South Cinema

Kamal Haasan: ವಿಚ್ಛೇದನ ನಂತರ ನನ್ನ ಬಳಿ ಇದ್ದದ್ದು ಕೇವಲ 60 ರೂ. : ಕಮಲ್‌ ಹಾಸನ್‌ ಮಾಜಿ ಪತ್ನಿ ಸಾರಿಕಾ ಹೇಳಿದ್ದೇನು?

ಸಾರಿಕಾ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಸೂಪರ್‌ಸ್ಟಾರ್ ಕಮಲ್ ಹಾಸನ್‌ ಅವರಿಂದ (Kamal Haasan) ವಿಚ್ಛೇದನ ಪಡೆದ ನಂತರ ಸಾರಿಕಾ ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದು, ಹಲವು ಬಾರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಾರಿಕಾ ರಾತ್ರೋ ರಾತ್ರಿ ಕೇವಲ 60 ರೂ. ಹಾಗೂ ಕಾರಿನೊಂದಿಗೆ ಹೊರಟುಬಿಟ್ಟೆ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Edited by

Sarika Was Left With Only Rs 60 After Divorce From Kamal Haasan
Koo

ಬೆಂಗಳೂರು: ಕಮಲ್‌ ಹಾಸನ್‌ (Kamal Haasan) ಅವರ ಮಾಜಿ ಪತ್ನಿ ಹಿರಿಯ ನಟಿ ಸಾರಿಕಾ ತಮ್ಮ ಏಳನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಾರಿಕಾ ಅವರ ಮೊದಲ ಸಿನಿಮಾ 1967ರಲ್ಲಿ ತೆರೆಕಂಡ ನಿರ್ದೇಶಕ ಬಿ.ಆರ್. ಚೋಪ್ರಾ ಅವರ ಹುಮ್ರಾಜ್ (Humraaz). ಬಾಲನಟಿಯಾಗಿ ಆಶೀರ್ವಾದ್, ಸತ್ರಕಂ, ಬಾಲಕ ಮತ್ತು ಬೇಟಿಯಂತಹ ಇತರ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ, ಅವರು 1975ರಲ್ಲಿ ಕಾಗಜ್ ಕಿ ನಾವೊ (Kaagaz Ki Nao) ಸಿನಿಮಾ ಮೂಲ ಗುರುತಿಸಿಕೊಂಡರು. ಸಾರಿಕಾ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಸೂಪರ್‌ಸ್ಟಾರ್ ಕಮಲ್ ಹಾಸನ್‌ನಿಂದ ವಿಚ್ಛೇದನ ಪಡೆದ ನಂತರ ಸಾರಿಕಾ ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದು, ಹಲವು ಬಾರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಾರಿಕಾ ರಾತ್ರೋ ರಾತ್ರಿ ಕೇವಲ 60 ರೂ. ಹಾಗೂ ಕಾರಿನೊಂದಿಗೆ ಹೊರಟುಬಿಟ್ಟೆ ಎಂದು ಹೇಳಿಕೊಂಡಿದ್ದಾರೆ.

ಪ್ರಾಮಾಣಿಕ ವ್ಯಕ್ತಿಯಾಗಿದ್ದೆ

ಸಿಮಿ ಗರೆವಾಲ್ ಅವರ ಚಾಟ್ ಶೋನಲ್ಲಿ 2000ರ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದರು ಸಾರಿಕಾ. ʻʻನಾನು ನನಗೆ ಮತ್ತು ನನ್ನ ತಾಯಿಗೆ ಸಾಕಷ್ಟು ಪ್ರಾಮಾಣಿಕ ವ್ಯಕ್ತಿಯಾಗಿ ಇದ್ದೆ. ಅವರಿಗೆ ಸಾಧ್ಯವಾಗುವಷ್ಟು ಒಳ್ಳೆಯದನ್ನೇ ಮಾಡಿದ್ದೇನೆ. ಇಲ್ಲದಿದ್ದರೆ ರಾತ್ರೋ ರಾತ್ರಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಆ ಸಮಯದಲ್ಲಿ ಕಮಲ್ ಮತ್ತು ಸಾರಿಕಾ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧಾರ ಮಾಡಿದ್ದರು. ಕಮಲ್‌ ವಾರು ವಾಣಿ ಗಣಪತಿ ಅವರನ್ನು ವಿವಾಹವಾದ ಕಾರಣ ಹಲವಾರು ಬಾರಿ ತಮ್ಮ ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದರು ಎಂದು ಬಹಿರಂಗಪಡಿಸಿದರು. ಕಮಲ್ ಅವರೇ ಸಾರಿಕಾ ಅವರನ್ನು ಇಷ್ಟ ಪಟ್ಟದ್ದರು. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆಗ ಸಾರಿಕಾ ಮತ್ತು ಕಮಲ್‌ ನಡುವಿನ ಸಂಬಂಧ ಕುರಿತು ಹೆಚ್ಚಾಗಿ ಚರ್ಚೆಗಳು ನಡೆದಿದ್ದವು. ಕಮಲ್ ಅವರೊಂದಿಗಿನ ಸಂಬಂಧಕ್ಕಾಗಿ ಸಾರಿಕಾ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದ್ದರು. ಸಾರಿಕಾ 1988ರಲ್ಲಿ ಕಮಲ್ ಅವರನ್ನು ವಿವಾಹವಾದರು. ಶ್ರುತಿ ಮತ್ತು ಅಕ್ಷರಾ ಹಾಸನ್ ಹುಟ್ಟಿದರು. ಕೊನೆಗೆ ದಂಪತಿ 2002ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ. ವಿಚ್ಛೇದನದ ನಂತರ, ಸಾರಿಕಾ ಹಲವು ಏರಿಳಿತವನ್ನು ಕಾಣುತ್ತಾರೆ.

ಇದನ್ನೂ ಓದಿ: Delhi MCD: ರಣರಂಗವಾದ ದೆಹಲಿ ಮಹಾನಗರ ಪಾಲಿಕೆ; ಬಿಜೆಪಿ ಕೌನ್ಸಿಲರ್​ಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದ ಮೇಯರ್​ ಶೆಲ್ಲಿ

Kamal Haasan

ಇದಾದ ನಂತರ ಸಾರಿಕಾ ತನ್ನ ವೃತ್ತಿಜೀವನವನ್ನು ಮೊದಲಿನಿಂದಲೂ ಪುನರಾರಂಭಿಸಬೇಕಾಗಿತ್ತು. ಸಿಮಿ ಗರೆವಾಲ್ ಅವರ ಹಳೆಯ ಸಂದರ್ಶನವೊಂದರಲ್ಲಿ, ಸಾರಿಕಾ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ನನ್ನಲ್ಲಿ ಉಳಿದ್ದಿದ್ದು ಕೇವಲ 60 ರೂ. ಹಾಗೂ ಕಾರು

ಸಾರಿಕಾ ಮಾತನಾಡಿ ʻʻಡಿವೋರ್ಸ್‌ ಪಡೆದ ನಂತರ ನನ್ನಲ್ಲಿ ಉಳಿದ್ದಿದ್ದು ಕೇವಲ 60 ರೂ. ಹಾಗೂ ಕಾರು. ನಾನು ನನಗೆ ಮತ್ತು ನನ್ನ ತಾಯಿಗೆ ಸಾಕಷ್ಟು ಪ್ರಾಮಾಣಿಕ ವ್ಯಕ್ತಿಯಾಗಿ ಇದ್ದೆ. ರಾತ್ರೋರಾತ್ರಿ ನಾನು 60 ರೂಪಾಯಿ ಮತ್ತು ನನ್ನ ಕಾರಿನೊಂದಿಗೆ ಹೊರಟೆ ಬಿಟ್ಟೆ” ಎಂದು ಹೇಳಿಕೊಂಡಿದ್ದರು. ಮಾತು ಮುಂದುವರಿಸಿ ʻʻರಾತ್ರೋ ರಾತ್ರಿ ಹೊರಟೆ ಆದರೆ ಮುಂದೇನು ಎಂಬುದು ನನಗೆ ತಿಳಿದಿರಲಿಲ್ಲ. ನನ್ನ ಸ್ನೇಹಿತರ ಮನೆಗೆ ಹೋಗಿದ್ದೆ, ಅವರ ಮನೆಯಲ್ಲಿಯೇ ಸ್ನಾನ ಮಾಡಿ, ನನ್ನ ಕಾರಿನಲ್ಲಿ ಮಲಗುತ್ತಿದ್ದೆ. ಆದರೆ ಜೀವನಕ್ಕೆ ಹೆದರಿರಲಿಲ್ಲʼʼಎಂದರು.

Kamal Haasan

ಕಮಲ್‌ ಈ ಬಗ್ಗೆ ಹೇಳಿದ್ದೇನು?

ಸಿಮಿ ಅವರು ತಮ್ಮ ಮಾಜಿ ಪತ್ನಿಗೆ ಆರ್ಥಿಕವಾಗಿ ಏಕೆ ಸಹಾಯ ಮಾಡಲಿಲ್ಲ ಎಂದು ಕಮಲ್ ಅವರನ್ನು ಕೇಳಿದಾಗ, ಕಮಲ್‌ ಈ ಬಗ್ಗೆ ಮಾತನಾಡಿ ʻʻಸಾರಿಕಾಳ ಕಷ್ಟದ ಪರಿಸ್ಥಿತಿ ನನಗೆ ತಿಳಿದಿತ್ತು. ಅವಳ ಆಗಿನ ಪರಿಸ್ಥಿತಿ ನೀವು ನೋಡಿದ್ದರೆ ನಿಜಕ್ಕೂ ಆಘಾತಕ್ಕೊಳಗಾಗುತ್ತೀರಿ. ಆದರೆ ಸೆಟ್‌ನಲ್ಲಿ ಅವಳು ದೊಡ್ಡ ಸ್ಟಾರ್‌ ಆಗಿ ಮಿಂಚುತ್ತಿದ್ದಳು. ಆದರೆ ಅವಳು ವಾಸಿಸುವ ಸ್ಥಳ ನೋಡಿದರೆ ಅವಳು ಸ್ಟಾರ್‌ ಅಲ್ಲ ಎಂದು ಅನಿಸುತ್ತಿತ್ತು. ಅವಳು ಎಲ್ಲಿ ವಾಸಿಸುತ್ತಿದ್ದಾರೆಂದು ಕೆಲವೇ ಜನರಿಗೆ ತಿಳಿದಿದೆ. ನಾನು ಅವಳಿಗೆ ಸಹಾನುಭೂತಿ ತೋರಿಸಿದೆ. ಆಕೆಗೆ ಆ ಸಹಾನುಭೂತಿ ಬೇಕಾಗಿರಲ್ಲ. ಸಹಾಯವೂ ಬೇಕಿರಲಿಲ್ಲ. ಅವಳಿಗೆ ಹಣದ ಸಹಾಯ ಮಾಡುತ್ತೇನೆ ಎಂದರೂ ಸಹ ಕೋಪ ಬರುತ್ತಿತ್ತು. ಆದ್ದರಿಂದ ಆಕೆಯನ್ನು ಕಂಡರೆ ನನಗೆ ಅಪಾರ ಹೆಮ್ಮೆ. ಆದ ಕಾರಣವೇ ಆಕೆಯನ್ನು ನಾನು ಮೆಚ್ಚಿ ಮದುವೆಯಾದೆʼʼ ಎಂದು ಕಮಲ್ ಉಲ್ಲೇಖಿಸಿದ್ದಾರೆ. 2004ರಲ್ಲಿ ಕಮಲ್ ಹಾಸನ್ ಮತ್ತು ಸಾರಿಕಾ ವಿಚ್ಛೇದನ ಪಡೆದುಕೊಂಡ ದೂರವಾಗಿದ್ದರು.

ಸಾರಿಕಾ 2020ರಲ್ಲಿ ಮಾಡರ್ನ್ ಲವ್ ಮುಂಬೈ ವೆಬ್ ಸಿರೀಸ್‌ ಮುಳಕ ಮತ್ತೆ ಕಮ್‌ಬ್ಯಾಕ್‌ ಆದರು. ಕೊನೆಯದಾಗಿ ಸೂರಜ್ ಬರ್ಜಾತ್ಯಾ ಅವರ ಉಂಚೈನಲ್ಲಿ ಕಾಣಿಸಿಕೊಂಡರು.

Continue Reading
Advertisement
Elephant trap
ಕರ್ನಾಟಕ2 hours ago

Elephant trapped : ಮೂರು ತಿಂಗಳಿನಿಂದ ಸತಾಯಿಸುತ್ತಿರುವ 10 ವರ್ಷದ ಗಂಡಾನೆ ಕೊನೆಗೂ ಹನಿ ಟ್ರ್ಯಾಪ್‌ಗೆ ಬಿತ್ತು!

Unaccounted 6.4 Crore rupees seized in Chikmagalur
ಕರ್ನಾಟಕ2 hours ago

Karnataka Election 2023: ಚುನಾವಣೆ ಹಿನ್ನೆಲೆ ಹಣದ ಹೊಳೆ, ದಾಖಲೆ ಇಲ್ಲದ 6 ಕೋಟಿ ರೂ., 17 ಕೆಜಿ ಚಿನ್ನ, ಬೆಳ್ಳಿ ವಶ

Champion Gujarat won by 5 wickets in the first match, CSK was disappointed
ಕ್ರಿಕೆಟ್2 hours ago

IPL 2023 : ಚಾಂಪಿಯನ್​ ಗುಜರಾತ್​​ಗೆ ಮೊದಲ ಪಂದ್ಯದಲ್ಲಿ 5 ವಿಕೆಟ್ ಜಯ, ಸಿಎಸ್​ಕೆ ನಿರಾಸೆ

holalu urus
ಕರ್ನಾಟಕ2 hours ago

Communal Harmony : ಉರೂಸ್‌ ಸಂಭ್ರಮದಲ್ಲಿ ಹಿಂದೂ ಶ್ರೀಗಳನ್ನು ಗೌರವಿಸಿ ಭಾವೈಕ್ಯತೆ ಮೆರೆದ ಮುಸ್ಲಿಮರು

Nelyadi suicide
ಕರ್ನಾಟಕ2 hours ago

Suicide case : ಮೊಬೈಲ್‌ನಲ್ಲಿ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ, ಆ ಮನೆಯಲ್ಲಿ ಇದು ಮೂರನೇ ಸುಸೈಡ್‌!

Bangalore mysore highway
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಟೋಲ್ ದರ ಜನರಿಗೆ ದುಃಸ್ವಪ್ನವಾಗದಿರಲಿ

IT Raid on the bank owned by Belgaum Congress leader VS Sadhunavar
ಕರ್ನಾಟಕ3 hours ago

IT Raid: ಕಾಂಗ್ರೆಸ್‌ ಮುಖಂಡ ವಿ.ಎಸ್.‌ ಸಾಧುನವರ ಒಡೆತನದ ಬ್ಯಾಂಕ್‌ ಮೇಲೆ ಐಟಿ ದಾಳಿ

IPL 2023
ಕ್ರಿಕೆಟ್3 hours ago

IPL 2023 : ಐಪಿಎಲ್​ನ ಮೊದಲ ಇಂಪ್ಯಾಕ್ಟ್​​ ಪ್ಲೇಯರ್​ ಯಾರು? ಅನುಕೂಲ ಬಳಸಿಕೊಂಡಿದ್ದು ಯಾವ ತಂಡ?

People In Pakistan Unhappy, Believe Partition Was A Mistake: Says Mohan Bhagwat
ದೇಶ3 hours ago

Mohan Bhagwat: ಪಾಕ್ ಜನಕ್ಕೆ ನೆಮ್ಮದಿ ಇಲ್ಲ, ದೇಶ ವಿಭಜನೆ ಪ್ರಮಾದ ಎಂಬ ಭಾವನೆ ಇದೆ: ಮೋಹನ್‌ ಭಾಗವತ್‌

Mohammad Shami who scored a century in bowling, what is the achievement?
ಕ್ರಿಕೆಟ್4 hours ago

IPL 2023 : ಬೌಲಿಂಗ್​ನಲ್ಲಿ ಶತಕ ಬಾರಿಸಿದ ಮೊಹಮ್ಮದ್​ ಶಮಿ, ಏನಿದು ಸಾಧನೆ?

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್6 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಕರ್ನಾಟಕ14 hours ago

SSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು

ಕರ್ನಾಟಕ1 day ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ2 days ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ4 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ5 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ2 weeks ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ2 weeks ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ಟ್ರೆಂಡಿಂಗ್‌

error: Content is protected !!