Drugs case: ನಟ ಸುಶಾಂತ್ ಸಿಂಗ್‌ ಡ್ರಗ್ಸ್‌ ವ್ಯಸನಕ್ಕೆ ಕುಮ್ಮಕ್ಕು ನೀಡಿದ್ದೇ ರಿಯಾ ಚಕ್ರವರ್ತಿ ಎಂದ ಎನ್‌ಸಿಬಿ - Vistara News

ಬಾಲಿವುಡ್

Drugs case: ನಟ ಸುಶಾಂತ್ ಸಿಂಗ್‌ ಡ್ರಗ್ಸ್‌ ವ್ಯಸನಕ್ಕೆ ಕುಮ್ಮಕ್ಕು ನೀಡಿದ್ದೇ ರಿಯಾ ಚಕ್ರವರ್ತಿ ಎಂದ ಎನ್‌ಸಿಬಿ

ಸುಶಾಂತ್‌ ಸಿಂಗ್‌ ಸಾವು ಸಂಭವಿಸಿ ಎರಡು ವರ್ಷ ಕಳೆದರೂ ಸಾವಿನ ಭೂತ ನಟಿ, ಗೆಳತಿ ರಿಯಾ ಚಕ್ರವರ್ತಿ ಅವರ ಬೆನ್ನು ಬಿಟ್ಟಿಲ್ಲ. ಸುಶಾಂತ್‌ಗೆ ಡ್ರಗ್ಸ್‌ ಪೂರೈಸುವ ಮೂಲಕ ವ್ಯಸನವನ್ನು ಹೆಚ್ಚಿಸಿದ್ದಾರೆ ಎನ್ನುವ ಗಂಭೀರ ಆರೋಪ ಈಗ ಅವರ ಮೇಲೆ ಕೇಳಿಬಂದಿದೆ.

VISTARANEWS.COM


on

Rhea Chakraborty and Sushant Singh Rajput
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್‌ ಅವರ`ʻತೀವ್ರ ಮಾದಕ ವ್ಯಸನʼಕ್ಕೆ ನಟಿ ರಿಯಾ ಚಕ್ರವರ್ತಿ ಅವರು ಕುಮ್ಮಕ್ಕು ನೀಡುತ್ತಿದ್ದರು ಎಂದು ಎನ್‌ಸಿಬಿ ಗಂಭೀರ ಆರೋಪ ಮಾಡಿದೆ. ಆಕೆ ಸುಶಾಂತ್‌ಗೆ ಬೇರೆ ಬೇರೆ ಮೂಲಗಳಿಂದ ಡ್ರಗ್ಸ್‌ ತರಿಸಿಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ.

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ವಿಶೇಷ ನ್ಯಾಯಾಲಯಕ್ಕೆ ಎನ್‌ಸಿಬಿ ಹಸ್ತಾಂತರಿಸಿದ ಕರಡು ಆರೋಪ ಪಟ್ಟಿಯಲ್ಲಿ ಈ ಆರೋಪಗಳನ್ನು ಮಾಡಲಾಗಿದೆ. ರಿಯಾ ಚಕ್ರವರ್ತಿ ತನ್ನ ಸಹೋದರ ಶೋವಿಕ್‌ ಮಲ್ಲಿಕ್‌ ಮತ್ತು ಗೆಳೆಯ ಸಾಮ್ಯುವೆಲ್‌ ಮಿರಾಂಡಾ ಅವರನ್ನು ಬಳಸಿಕೊಂಡು ಸುಶಾಂತ್‌ ಸಿಂಗ್‌ಗಷ್ಟೇ ಅಲ್ಲ, ಬಾಲಿವುಡ್‌ನ ಹಲವು ಮಂದಿಗೆ ಗಾಂಜಾ ಸರಬರಾಜು ಮಾಡಿದ್ದಾರೆ ಎನ್ನುವ ಗಂಭೀರ ಆರೋಪವೂ ಇದರಲ್ಲಿದೆ.

ಸುಶಾಂತ್ ಸಿಂಗ್ ರಜಪೂತ್ ೨೦೨೦ರ ಜೂನ್ 14ರಂದು ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ಇದೊಂದು ಆತ್ಮಹತ್ಯೆ ಎಂದು ಬಿಂಬಿತವಾಗಿತ್ತು. ಬಳಿಕ ಡ್ರಗ್ಸ್‌ ಕೇಸ್‌ ಇದರ ಸುತ್ತ ಸುತ್ತಿಕೊಂಡಿತು. ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದ ರಿಯಾ ಚಕ್ರವರ್ತಿಯೇ ಸಾವಿಗೆ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದವು. ಎನ್‌ಸಿಬಿ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ರಿಯಾ ಅವರ ಶಾಮೀಲಾತಿ, ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸಿದ್ದವು. ಜಾರಿ ನಿರ್ದೇಶನಾಲಯ ರಿಯಾಗೆ ಕ್ಲೀನ್‌ ಚಿಟ್‌ ಕೊಟ್ಟಿದೆ. ಸಿಬಿಐ ವರದಿಯಲ್ಲಿ ರಿಯಾ ಅವರ ಮೇಲೆ ಹಲವು ಆರೋಪಗಳಿವೆ. ಇದೀಗ ಎನ್‌ಸಿಬಿ ಕೂಡಾ ಅವರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿರುವುದರಿಂದ ಪ್ರಕರಣ ಗಂಭೀರ ತಿರುವು ಪಡೆಯುವ ಸಾಧ್ಯತೆ ಇದೆ. ಎನ್‌ಸಿಬಿ ಸಲ್ಲಿಸಿರುವ ಕರಡು ಆರೋಪ ಪಟ್ಟಿಯಲ್ಲಿ 35 ಆರೋಪಿಗಳ ವಿರುದ್ಧ ಒಟ್ಟು 38 ಆರೋಪಗಳನ್ನು ಮಾಡಲಾಗಿದೆ.

ರಿಯಾ ಹಾಗೂ ಸುಶಾಂತ್‌

ಪ್ರಕರಣದಲ್ಲಿ ೧೦ನೇ ಆರೋಪಿಯಾಗಿರುವ ರಿಯಾ ಚಕ್ರವರ್ತಿ ಅವರು ಶೋವಿಕ್‌ ಮಲ್ಲಿಕ್‌ ಚಕ್ರವರ್ತಿ, ಸಾಮ್ಯುವೆಲ್‌ ಮಿರಾಂಡಾ, ದೀಪೇಶ್‌ ಸಾವಂತ್‌ ಮತ್ತು ಇತರರ ಮೂಲಕ ಗಾಂಜಾವನ್ನು ತರಿಸಿಕೊಂಡು ಸುಶಾಂತ್‌ ಸಿಂಗ್‌ ರಜಪೂತ್‌ಗೆ ನೀಡುತ್ತಿದ್ದರು. ಶೋವಿಕ್‌ ಮತ್ತು ಸುಶಾಂತ್‌ ಸೂಚನೆಯ ಮೇರೆಗೆ ಅದಕ್ಕೆ ಹಣ ಪಾವತಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

NDPS ಕಾಯಿದೆ 1985 ರ ಅಡಿಯಲ್ಲಿ ರಿಯಾ ಚಕ್ರವರ್ತಿ ಮೇಲೆ ಸೆಕ್ಷನ್ 8[c] ಅಡಿಯಲ್ಲಿ 20[b][ii]A, 27A, 28, 29 ಅಪರಾಧ ಮಾಡಿದ್ದಾರೆ ಎನ್‌ಸಿಬಿ ಹೇಳಿದೆ. ಇದರ ಜತೆಗೆ ಸಮಾಜದ ಉನ್ನತ ವರ್ಗಕ್ಕೆ, ಬಾಲಿವುಡ್‌ನ ಕೆಲವು ವ್ಯಕ್ತಿಗಳಿಗೆ ಗಾಂಜಾ ಮಾರಾಟ ಮಾಡಿದ, ಪೂರೈಸಿದ ಆರೋಪವೂ ಅವರ ಮೇಲಿದೆ.

ಇದನ್ನೂ ಓದಿ : ಸುಶಾಂತ್‌ ಸಿಂಗ್ ರಜಪೂತ್‌ ಇಲ್ಲದೆ 2 ವರ್ಷ, ಅನ್ಯಾಯ ಅಂತ ಟ್ರೆಂಡ್‌ ಆಗುತ್ತಿರುವುದೇಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Ranbir Kapoor: ಅತ್ಯಂತ ಕಿರಿಯ ಮತ್ತು ಶ್ರೀಮಂತ ಸ್ಟಾರ್‌ ಕಿಡ್‌ ಆಗಲಿದ್ದಾರಂತೆ ರಣಬೀರ್- ಆಲಿಯಾ ಮಗಳು!

Ranbir Kapoor: ರಣಬೀರ್ ಅವರ ಹೊಸ ಬಂಗಲೆಗೆ 250 ಕೋಟಿ ರೂ. ವೆಚ್ಚ ತಗುಲಿದೆ ಎನ್ನಲಾಗುತ್ತಿದೆ. ಇದು ಮುಂಬೈನ ‘ಅತ್ಯಂತ ದುಬಾರಿ’ ಸೆಲೆಬ್ರಿಟಿ ಬಂಗಲೆಯಾಗಿದೆ ಎಂದು ವರದಿಯಾಗಿದೆ.

VISTARANEWS.COM


on

Ranbir Kapoor Raha Kapoor
Koo

ಬೆಂಗಳೂರು: ರಣಬೀರ್ ಕಪೂರ್ (Ranbir Kapoor), ಆಲಿಯಾ ಭಟ್( Alia Bhatt) ಮತ್ತು ನೀತು ಕಪೂರ್ (Neetu Kapoor) ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿ (Mumbai’s Bandra) ನಿರ್ಮಾಣ ಹಂತದ ಬಂಗಲೆಗೆ ಭೇಟಿ ಕೊಟ್ಟಿದ್ದರು. ಇದೀಗ ವರದಿಯ ಪ್ರಕಾರ, ರಣಬೀರ್ ಮತ್ತು ಆಲಿಯಾ ಮಗಳು ರಾಹಾ ಕಪೂರ್ ಅವರ ಹೆಸರಿನಲ್ಲಿ ಈ ಬಂಗಲೆ ನೋಂದಣಿ ಆಗಲಿದೆ ಎಂದು ವರದಿಯಾಗಿದೆ. ಈ ಮನೆಗೆ ಕನಿಷ್ಠ 250 ಕೋಟಿ ರೂಪಾಯಿ ವೆಚ್ಚ ತಗುಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ರಾಹಾ ಮನೆಯ ಒಡತಿ ಆದರೆ ʻಕಿರಿಯ ಮತ್ತು ಶ್ರೀಮಂತ ಸ್ಟಾರ್‌ ಕಿಡ್‌ʼ (youngest and richest star kid) ಆಗಲಿದ್ದಾರೆ.

ರಣಬೀರ್ ಅವರ ಹೊಸ ಬಂಗಲೆಯು 250 ಕೋಟಿ ರೂ. ವೆಚ್ಚ ತಗುಲಿದೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ಅವರ ಮನ್ನತ್ ಮತ್ತು ಅಮಿತಾಭ್‌ ಬಚ್ಚನ್ ಅವರ ‘ಜಲ್ಸಾ’ ಸಮೀಪವೇ ಇದೆ. ಇದು ಮುಂಬೈನ ‘ಅತ್ಯಂತ ದುಬಾರಿ’ ಸೆಲೆಬ್ರಿಟಿ ಬಂಗಲೆಯಾಗಿದೆ ಎಂದು ವರದಿಯಾಗಿದೆ. “ರಣಬೀರ್ ಮತ್ತು ಆಲಿಯಾ ಇಬ್ಬರೂ ತಮ್ಮ ಕನಸಿನ ಮನೆಯನ್ನು ಮಾಡಲು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸಮಾನವಾಗಿ ಹೂಡಿಕೆ ಮಾಡುತ್ತಿದ್ದಾರೆ. 250 ಕೋಟಿಗೂ ಹೆಚ್ಚು ವೆಚ್ಚ ತಗುಲಿದೆ. ಶಾರುಖ್ ಖಾನ್ ಅವರ ಮನ್ನತ್ ಮತ್ತು ಅಮಿತಾಭ್‌ ಬಚ್ಚನ್ ಅವರ ಜಲ್ಸಾಗೆ ಹೋಲಿಸಿದರೆ ಇದು ಮುಂಬೈನ ಅತ್ಯಂತ ದುಬಾರಿ ಬಂಗಲೆಯಾಗಲಿದೆʼʼ ಎಂದು ವರದಿಯಾಗಿದೆ.

ಈ ಬಂಗಲೆ ಜತೆಗೆ ಆಲಿಯಾ ಮತ್ತು ರಣಬೀರ್ ಇಬ್ಬರೂ ಬಾಂದ್ರಾ ಪ್ರದೇಶದಲ್ಲಿ ನಾಲ್ಕು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಇದರ ಮೌಲ್ಯ 60 ಕೋಟಿ ರೂ.ಗಿಂತ ಹೆಚ್ಚು. ರಣಬೀರ್ ಕಪೂರ್ ಅವರ ತಾಯಿ ನೀತು ಕಪೂರ್ ಇತ್ತೀಚೆಗೆ ಬಾಂದ್ರಾದಲ್ಲಿ 15 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಬಂಗಲೆ ಪೂರ್ಣವಾದ ಬಳಿಕ ಇಡೀ ಕಪೂರ್ ಕುಟುಂಬ, ನೀತು ಸೇರಿದಂತೆ ಇದೇ ಬಂಗಲೆಯಲ್ಲಿ ಇರಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Ranbir Kapoor: ತಮ್ಮ ಐಷಾರಾಮಿ ಬಂಗಲೆಯಲ್ಲಿ ಪೋಸ್‌ ಕೊಟ್ಟ ಆಲಿಯಾ-ರಣಬೀರ್!

2020ರಲ್ಲಿ ರಿಷಿ ಕಪೂರ್ ಸಾಯುವ ಮೊದಲು, ಅವರು ಈ ಸೈಟ್‌ಗೆ ಭೇಟಿ ನೀಡಿದ್ದರು. ಆಲಿಯಾ ಮತ್ತು ರಣಬೀರ್ ಸೆಪ್ಟೆಂಬರ್ 2022ರಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಆಲಿಯಾ ಗರ್ಭಿಣಿಯಾಗಿದ್ದರು.ಆಲಿಯಾ ಮತ್ತು ರಣಬೀರ್ ಅನೇಕ ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2022ರ ಏಪ್ರಿಲ್ 14ರಂದು ಮದುವೆಯಾದರು.

ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಣಬೀರ್‌, ಆಲಿಯಾ

ನಿತೇಶ್ ತಿವಾರಿ ರಾಮಾಯಣ ಆಧರಿಸಿ ಸಿನಿಮಾ ಮಾಡಲಿದ್ದಾರೆ. ಈ ಚಿತ್ರದಲ್ಲಿ ಈ ಚಿತ್ರದಲ್ಲಿ ರಣಬೀರ್, ಆಲಿಯಾ ಭಟ್ ಹಾಗೂ ಯಶ್ (Actor Yash) ನಟಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ.

Continue Reading

ಬಾಲಿವುಡ್

Kangana Ranaut : ನಾನು, ಶಾರುಖ್‌ ಈ ಯುಗದ ಕೊನೆಯ ಸೂಪರ್‌ಸ್ಟಾರ್‌ಗಳು ಎಂದ ಕಂಗನಾ!

Kangana Ranaut : ನಟಿ ಕಂಗನಾ ರಣಾವತ್ ಹಿಟ್‌ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲ ತಮ್ಮನ್ನು ಹಾಗೂ ಶಾರುಖ್ ಅವರನ್ನು ʻ ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳು’ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Kangana Ranaut
Koo

ಬೆಂಗಳೂರು: ನಟಿ ಕಂಗನಾ ರಣಾವತ್ (Kangana Ranaut) ಹಿಟ್ ಸಿನಿಮಾ ನೀಡದೇ ವರ್ಷಗಳೇ ಕಳೆದಿವೆ. ಆದರೆ, ಅವರ ಅಭಿಪ್ರಾಯದಲ್ಲಿ ಇದು ಮುಖ್ಯವಲ್ಲ. ಏಕೆಂದರೆ, ‘ಪಠಾಣ್’ ಮೊದಲು, ಬಾಲಿವುಡ್‌ನ ಸೂಪರ್‌ಸ್ಟಾರ್, ಶಾರುಖ್ ಖಾನ್ (Shah Rukh Khan) ಸಹ ಹತ್ತು ವರ್ಷಗಳ ಕಾಲ ಫ್ಲಾಪ್‌ ಸಿನಿಮಾಗಳನ್ನೇ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ತಮ್ಮನ್ನು ಹಾಗೂ ಶಾರುಖ್ ಅವರನ್ನು ʻ ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳು’ ಎಂದು ಹೇಳಿಕೊಂಡಿದ್ದಾರೆ.

ಟೈಮ್ಸ್ ನೌ ಶೃಂಗಸಭೆ 2024ರಲ್ಲಿ ಮಾತನಾಡಿದ ಕಂಗನಾ, ನಾನು ಮತ್ತು ಶಾರುಖ್ “ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳುʼʼ ಎಂದಿದ್ದಾರೆ. ʻʻಒಟಿಟಿ ವೇದಿಕೆ ಸ್ಟಾರ್‌ಗಳನ್ನು ನಿರ್ಮಾಣ ಮಾಡುವುದಿಲ್ಲ. ದೇವರ ದಯೆಯಿಂದ ನಮಗೆ ತುಂಬಾ ಬೇಡಿಕೆಯಿದೆʼʼ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಂಗನಾ ಅವರು ಅಭಿನಯಿಸಿದ “ತೇಜಸ್‌ʼ ಕೊನೆಯದಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಅವರ ‘ಜಡ್ಜ್‌ಮೆಂಟಲ್ ಹೈ ಕ್ಯಾ’, ‘ತಲೈವಿ’, ‘ಧಕಡ್’ ಮತ್ತು ‘ಚಂದ್ರಮುಖಿ 2’ ಚಿತ್ರಗಳು ಅಷ್ಟಾಗಿ ಯಶಸ್ಸು ಕಂಡಿಲ್ಲ. ಶಾರುಖ್ ಅವರ ಉದಾಹರಣೆಯನ್ನು ಉಲ್ಲೇಖಿಸಿ ಸಿನಿಮಾಗಳ ವೈಫಲ್ಯದ ಬಗ್ಗೆ ಕಂಗನಾ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Kangana Ranaut: ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸನ್ನಿ ಲಿಯೋನ್‌ ಹೆಸರು ಎಳೆದು ತಂದ ಕಂಗನಾ!

“ಜಗತ್ತಿನ ಯಾವುದೇ ನಟನಿಗೆ ಹಿಟ್‌ಗಳು ಮಾತ್ರ ಸಾಲದು. ಶಾರುಖ್ ಖಾನ್ ಅವರ ಚಿತ್ರಗಳು ಹತ್ತು ವರ್ಷಗಳ ಕಾಲ ಹಿಟ್‌ ಕಂಡೇ ಇಲ್ಲ. ಬಳಿಕ ʻಪಠಾಣ್ʼ ಸಕ್ಸೆಸ್‌ ಆಯಿತು. ನನ್ನ ಚಿತ್ರಗಳು ಏಳೆಂಟು ವರ್ಷಗಳ ಕಾಲ ಯಶಸ್ಸು ಕಾಣಲೇ ಇಲ್ಲ. ನಂತರ ‘ಕ್ವೀನ್’ ಸಿನಿಮಾ ಗೆದ್ದಿತು. 3-4 ವರ್ಷಗಳ ನಂತರ, ʻಮಣಿಕರ್ಣಿಕಾʼ ಕೆಲಸ ಮಾಡಿದೆ. ಈಗ, ʻ ಎಮರ್ಜೆನ್ಸಿʼ ಸಿನಿಮಾ ಬರುತ್ತಿದೆ. ಬಹುಶಃ ಅದು ಹಿಟ್ ಆಗಬಹುದುʼʼ ಎಂದು ಹೇಳಿಕೊಂಡಿದ್ದಾರೆ

ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಕುರಿತಾಗಿನ ಕಥೆ ʻಎಮರ್ಜೆನ್ಸಿʼ ಸಿನಿಮಾದಲ್ಲಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಕಂಗನಾ ನಟಿಯಾಗಿ ನಟಿಸಿರುವುದಷ್ಟೇ ಅಲ್ಲದೆ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಇದನ್ನೂ ಓದಿ: Kangana Ranaut: 37ನೇ ವಸಂತಕ್ಕೆ ಕಾಲಿಟ್ಟ ಕಂಗನಾ ರಣಾವತ್‌!

ಈ ಹಿಂದೆ ನಟಿ “ತಲೈವಿʼ ಸಿನಿಮಾದಲ್ಲಿ ತಮಿಳುನಾಡಿನ ಪ್ರಸಿದ್ಧ ರಾಜಕಾರಣಿ, ಜೆ. ಜಯಲಲಿತಾ ಅವರಾಗಿಯೂ ಕಾಣಿಸಿಕೊಂಡಿದ್ದರು. ಆ ಸಿನಿಮಾ ಕೂಡ ಸಾಕಷ್ಟು ಜನರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. 2024ರ ಜೂನ್‌ 14ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

Continue Reading

ಬಾಲಿವುಡ್

Kangana Ranaut: ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸನ್ನಿ ಲಿಯೋನ್‌ ಹೆಸರು ಎಳೆದು ತಂದ ಕಂಗನಾ!

Kangana Ranaut: ಕಂಗನಾ ರಣಾವತ್‌ ಅವರು ಊರ್ಮಿಳಾ ಮಾತೋಂಡ್ಕರ್ ( Urmila Matondkar) ಅವರನ್ನು ‘ಸಾಫ್ಟ್ ಪೋರ್ನ್ ಸ್ಟಾರ್’ ಎಂದು ಹೇಳಿ ವಿವಾದಕ್ಕೊಳಗಾಗಿದ್ದರು. ಇದೀಗ ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

VISTARANEWS.COM


on

Kangana Ranaut and sunny Urmila
Koo

ಬೆಂಗಳೂರು: ಕಂಗನಾ ರಣಾವತ್‌ (Kangana Ranaut) ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.  ಇದರ ಜತೆಗೆ 2020ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಕಂಗನಾ, ನಟಿ ಹಾಗೂ ರಾಜಕೀಯ ನಾಯಕಿಯಾಗಿ ಗುರುತಿಸಿಕೊಂಡಿರುವ ಊರ್ಮಿಳಾ ಮಾತೋಂಡ್ಕರ್ ( Urmila Matondkar) ಅವರನ್ನು ‘ಸಾಫ್ಟ್ ಪೋರ್ನ್ ಸ್ಟಾರ್’ ಎಂದು ಹೇಳಿ ವಿವಾದಕ್ಕೊಳಗಾಗಿದ್ದರು. ಇದೀಗ ಈ ವಿಡಿಯೊ ವೈರಲ್‌ ಆಗಿದ್ದು, ಸಾಕಷ್ಟು ಚರ್ಚೆಗಳು ಆಗುತ್ತಿವೆ. ಈ ಬಗ್ಗೆ ನಟಿ ಟೈಮ್ಸ್ ನೌ ಶೃಂಗಸಭೆಯಲ್ಲಿ ಸಮರ್ಥಸಿಕೊಂಡಿದ್ದಾರೆ.

“ಸಾಫ್ಟ್ ಪೋರ್ನ್ ಅಥವಾ ಪೋರ್ನ್ ಸ್ಟಾರ್ ಒಂದು ಆಕ್ಷೇಪಾರ್ಹ ಪದವೇ? ಅಲ್ಲ! ಇದು ಆಕ್ಷೇಪಾರ್ಹ ಪದವಲ್ಲ. ಇದು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲದ ಪದವಾಗಿದೆ. ವಯಸ್ಕ ಸಿನಿಮಾಗೆ ನಮ್ಮ ದೇಶದಲ್ಲಿ ಗೌರವ ಕೂಡ ಇದೆ. ಪೋರ್ನ್ ಸ್ಟಾರ್‌ಗಳಿಗೆ ನಾವು ಕೊಡುವಷ್ಟು ಗೌರವ ಯಾವ ದೇಶವೂ ಕೊಡುವುದಿಲ್ಲ. ಸನ್ನಿ ಲಿಯೋನ್‌ (Sunny Leone) ಅವರನ್ನು ಕೇಳಿ ಗೊತ್ತಾಗುತ್ತೆʼʼಎಂದು ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

ಊರ್ಮಿಳಾ ಮಾತೋಂಡ್ಕರ್ ಬಗ್ಗೆ ಕಂಗನಾ (Kangana Ranaut) ಮಾತನಾಡಿ ʻʻನನ್ನನ್ನು ರಾಜಕೀಯದಲ್ಲಿ ಪ್ರವೇಶಿಸಲು ಬಿಜೆಪಿಯು ಯಾವ ಆಧಾರದ ಮೇಲೆ ಪರಿಗಣಿಸಿದೆ ಎಂಬುದು ಊರ್ಮಿಳಾ ಅವರ ಪ್ರಶ್ನೆ ಆಗಿತ್ತು. ಕಲೆಗೆ ವಿವಿಧ ಕ್ಷೇತ್ರಗಳಿವೆ ಎಂದು ನಾನು ನಂಬುತ್ತೇನೆ. ಕಲೆಯನ್ನು ನಾವು ಸಂವೇದನಾಶೀಲ, ಸಮೂಹ ಕಲೆ ಎಂದು ನಾವು ಉಲ್ಲೇಖಿಸುತ್ತೇವೆ. ನಾನು ಬ್ಯಾಲೆನ್ಸ್ಡ್‌ ಸಿನಿಮಾ ಕಲಾವಿದರ ಗುಂಪಿಗೆ ಸೇರಿದವಳು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆʼಎಂದು ಹೇಳಿದರು.

ಇದನ್ನೂ ಓದಿ: Kangana Ranaut: 37ನೇ ವಸಂತಕ್ಕೆ ಕಾಲಿಟ್ಟ ಕಂಗನಾ ರಣಾವತ್‌!

ಮಾತ್ರವಲ್ಲ ವೇಶ್ಯೆಗೆ ಹೋಲಿಸಿದರೆ ಪೋರ್ನ್ ಸ್ಟಾರ್‌ಗಳನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳುವುದರ ಹಿಂದಿನ ಕಾರಣವನ್ನು ಕಂಗನಾ ಪ್ರಶ್ನಿಸಿದ್ದಾರೆ. “ನಾವು ಪೋರ್ನ್ ಸ್ಟಾರ್‌ಗಳನ್ನು ಸಾಮಾಜಿಕವಾಗಿ ಸ್ವೀಕರಿಸುವಾಗ ವೇಶ್ಯೆಯರ ಬಗ್ಗೆ ಈ ರೀತಿಯ ಕೆಟ್ಟ ಮನಸ್ಥಿತಿ ಏಕೆ ಹೊಂದಿದ್ದೇವೆ? ಅವರ ಬಳಿ ಹೆಚ್ಚು ಹಣವಿದೆ ಎಂಬ ಕಾರಣಕ್ಕಾಗಿಯೇ? ಗ್ಲಾಮರ್‌ಗಾಗಿಯೇ? ನಾವು ವೇಶ್ಯೆಯರನ್ನು ಪೋರ್ನ್ ಸ್ಟಾರ್‌ಗಳಂತೆ ಪರಿಗಣಿಸುತ್ತಿಲ್ಲ, ”ಎಂದು ಅವರು ಹೇಳಿದರು. ಇತ್ತೀಚಿನ ಕಂಗನಾ ಅವರ ಹೇಳಿಕೆಗಳ ಬಗ್ಗೆ ಊರ್ಮಿಳಾ ಮತ್ತು ಸನ್ನಿ ಇನ್ನೂ ಪ್ರತಿಕ್ರಿಯಿಸಿಲ್ಲ.

Continue Reading

ಬಾಲಿವುಡ್

Ranbir Kapoor: ತಮ್ಮ ಐಷಾರಾಮಿ ಬಂಗಲೆಯಲ್ಲಿ ಪೋಸ್‌ ಕೊಟ್ಟ ಆಲಿಯಾ-ರಣಬೀರ್!

Ranbir Kapoor: ಆಲಿಯಾ ರಣಬೀರ್‌ ಬಂಗಲೆಯ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ. ಇದೀಗ ದಂಪತಿ ಬಂಗಲೆಯನ್ನು ವೀಕ್ಷಣೆ ಮಾಡಿದ ವಿಡಿಯೊಗಳು ವೈರಲ್‌ ಆಗಿವೆ.

VISTARANEWS.COM


on

Ranbir Kapoor Alia Bhatt visit new Mumbai bungalow
Koo

ಬೆಂಗಳೂರು: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Ranbir Kapoor) ಅವರ ತಾಯಿ, ನಟಿ ನೀತು ಕಪೂರ್ ಅವರು ಮುಂಬೈನಲ್ಲಿ ತಮ್ಮ ಹೊಸ ಬಂಗಲೆಗೆ ಬುಧವಾರ (ಮಾ.27) ಭೇಟಿ ನೀಡಿದ್ದರು. ಆಲಿಯಾ ಮತ್ತು ನೀತು ಒಟ್ಟಿಗೆ ಬಂಗಲೆಗೆ ಪ್ರವೇಶಿಸಿದ ವಿಡಿಯೊಗಳು ಮತ್ತು ರಣಬೀರ್ ಅವರು ಬಂಗಲೆಯಲ್ಲಿನ ಬಾಲ್ಕನಿಯಿಂದ ವೀಕ್ಷಣೆ ಮಾಡುತ್ತಿರುವ ಕ್ಲಿಪ್‌ಗಳು ವೈರಲ್‌ ಆಗಿವೆ.

ಪಾಪರಾಜೋ ಖಾತೆಯಿಂದ ಹಂಚಿಕೊಂಡಿರುವ ವಿಡಿಯೊದಲ್ಲಿ, ಆಲಿಯಾ ತನ್ನ ಕಾರಿನಿಂದ ಹೊರಬಂದು ಬಂಗಲೆಯೊಳಗೆ ಹೋಗುತ್ತಿರುವುದನ್ನು ಕಾಣಬಹುದು. ಪ್ರತ್ಯೇಕ ಕಾರಿನಲ್ಲಿ ಬಂದ ನೀತು ಅವರು ಆಲಿಯಾ ಅವರ ಜತೆ ಸೇರಿಕೊಂಡರು. ಆಲಿಯಾ ಕಪ್ಪು ಪ್ಯಾಂಟ್ ಜೊತೆಗೆ ಕಪ್ಪು ಶರ್ಟ್ ಧರಿಸಿದ್ದರೆ, ರಣಬೀರ್ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು. ನೀತು ಬೀಜ್ ಉಡುಪಿನಲ್ಲಿ ಕಂಡರು.

ಬಂಗಲೆಯ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ. ಕುಟುಂಬ ಯಾವಾಗ ಹೊಸ ಬಂಗಲೆಗೆ ಶಿಪ್ಟ್ ಆಗಲಿದೆ ಎಂದು ತಿಳಿದು ಬಂದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ, ರಣಬೀರ್, ನೀತು ಮತ್ತು ಆಲಿಯಾ ಜತೆಗೆ ಅನೇಕ ಬಾರಿ ಬಂಗಲೆಗೆ ಭೇಟಿ ನೀಡಿದ್ದರು. 2020ರಲ್ಲಿ ರಿಷಿ ಕಪೂರ್ ಸಾಯುವ ಮೊದಲು, ಅವರು ಈ ಸೈಟ್‌ಗೆ ಭೇಟಿ ನೀಡಿದ್ದರು. ಆಲಿಯಾ ಮತ್ತು ರಣಬೀರ್ ಸೆಪ್ಟೆಂಬರ್ 2022ರಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಆಲಿಯಾ ಗರ್ಭಿಣಿಯಾಗಿದ್ದರು.

ಇದನ್ನೂ ಓದಿ: Ranbir Kapoor: ‘ಅನಿಮಲ್ ಪಾರ್ಕ್ʼ ಶೂಟಿಂಗ್‌ ಯಾವಾಗಿನಿಂದ ಶುರು?

ಆಲಿಯಾ ಮತ್ತು ರಣಬೀರ್ ಅನೇಕ ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2022ರ ಏಪ್ರಿಲ್ 14ರಂದು ಮದುವೆಯಾದರು.

ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಣಬೀರ್‌, ಆಲಿಯಾ

ನಿತೇಶ್ ತಿವಾರಿ ರಾಮಾಯಣ ಆಧರಿಸಿ ಸಿನಿಮಾ ಮಾಡಲಿದ್ದಾರೆ. ಈ ಚಿತ್ರದಲ್ಲಿ ಈ ಚಿತ್ರದಲ್ಲಿ ರಣಬೀರ್, ಆಲಿಯಾ ಭಟ್ ಹಾಗೂ ಯಶ್ (Actor Yash) ನಟಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ.

Continue Reading
Advertisement
Narendra Modi And Bill Gates
ದೇಶ5 mins ago

Narendra Modi: ಮೋದಿ ಜತೆ ಚಾಟ್; ಭಾರತದ ಡಿಜಿಟಲ್ ಕ್ರಾಂತಿಗೆ ಬಿಲ್ ಗೇಟ್ಸ್ ಶ್ಲಾಘನೆ

Lok Sabha Election 2024 JDS finalised candidates for 3 constituency
ಪ್ರಮುಖ ಸುದ್ದಿ6 mins ago

HD Deve Gowda: ನಾಲ್ಕು ಕ್ಷೇತ್ರ ಗೆಲ್ಲಲು ಪಣ ತೊಟ್ಟಿರುವ ದೇವೇಗೌಡರು; ಮಾಸ್ಟರ್‌ ಪ್ಲಾನ್‌ ಏನು?

Sania Mirza
ಕ್ರೀಡೆ40 mins ago

Sania Mirza: ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಸಾನಿಯಾ ಮಿರ್ಜಾ?; ಈ ಪಕ್ಷದಿಂದ ಆಫರ್​

Savadatti Yallamma
ಕರ್ನಾಟಕ42 mins ago

ಬರದ ಮಧ್ಯೆಯೂ ಭರ್ಜರಿ ಕಾಣಿಕೆ; ಸವದತ್ತಿ ಯಲ್ಲಮ್ಮ ದೇಗುಲದಲ್ಲಿ 11 ಕೋಟಿ ರೂ. ಸಂಗ್ರಹ!

Heart Attack
ಬೆಂಗಳೂರು55 mins ago

Heart Attack : ಬಸ್‌ ಏರಿ ಕುಳಿತಾಗಲೇ ಹಠಾತ್ ಹೃದಯಾಘಾತ; ಹಾರಿ ಹೋಯ್ತು ವೃದ್ಧನ ಪ್ರಾಣ ಪಕ್ಷಿ

Ranbir Kapoor Raha Kapoor
ಬಾಲಿವುಡ್1 hour ago

Ranbir Kapoor: ಅತ್ಯಂತ ಕಿರಿಯ ಮತ್ತು ಶ್ರೀಮಂತ ಸ್ಟಾರ್‌ ಕಿಡ್‌ ಆಗಲಿದ್ದಾರಂತೆ ರಣಬೀರ್- ಆಲಿಯಾ ಮಗಳು!

Cows
ಕರ್ನಾಟಕ2 hours ago

ಹಾಸನದಲ್ಲಿ ಅಕ್ರಮ ಗೋಮಾಂಸ ಜಾಲ; 60 ಗೋವುಗಳನ್ನು ಕೊಂದ ರಾಕ್ಷಸರು!

R Ashwin
ಕ್ರೀಡೆ2 hours ago

IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

Bangalore water crisis IT companies
ಬೆಂಗಳೂರು2 hours ago

Bangalore Water Crisis: “ನೀರು ಕೊಡ್ತೀವಿ, ಪ್ಲೀಸ್‌ ಹೋಗ್ಬೇಡಿ…” ಐಟಿ ಸಂಸ್ಥೆಗಳಿಗೆ ರಾಜ್ಯ ಮನವಿ; ಗಾಳ ಹಾಕಿದ ಕೇರಳ

Chikkaballapur
ಕರ್ನಾಟಕ2 hours ago

ಚಿಕ್ಕಬಳ್ಳಾಪುರದಲ್ಲಿ ಅತ್ತೆಯನ್ನು ಎಳೆದೊಯ್ದು ತಿಪ್ಪೆಗೆ ಎಸೆದ ಕ್ರೂರ ಸೊಸೆ; ವೃದ್ಧೆಯ ತಪ್ಪೇನು?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202422 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202423 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌