Amala Paul: ಸಮಸ್ಯೆ ಇರೋದು ಬಟ್ಟೆಯಲಲ್ಲ, ಕ್ಯಾಮೆರಾಮೆನ್‌ಗಳಲ್ಲಿ ಎಂದು ಟ್ರೋಲಿಗರ ಬಾಯಿ ಮುಚ್ಚಿಸಿದ ಅಮಲಾ ಪೌಲ್! - Vistara News

ಟಾಲಿವುಡ್

Amala Paul: ಸಮಸ್ಯೆ ಇರೋದು ಬಟ್ಟೆಯಲಲ್ಲ, ಕ್ಯಾಮೆರಾಮೆನ್‌ಗಳಲ್ಲಿ ಎಂದು ಟ್ರೋಲಿಗರ ಬಾಯಿ ಮುಚ್ಚಿಸಿದ ಅಮಲಾ ಪೌಲ್!

Amala Paul: ಸೇಂಟ್ ಆಲ್ಬರ್ಟ್ ಕಾಲೇಜಿನಲ್ಲಿ ತಮ್ಮ ಮುಂಬರುವ ಚಿತ್ರವಾದ ʻಲೆವೆಲ್ ಕ್ರಾಸ್ʼ (Level Cross) ಪ್ರಚಾರ ಮಾಡಲು ಬಂದಿದ್ದರು. ನಟಿ ಈ ಸಮಯಲ್ಲಿ ಅತ್ಯಂತ ಚಿಕ್ಕ ಉಡುಗೆಯನ್ನು ಧರಿಸಿ ಬಂದಿದ್ದರು. ಬಳಿಕ ನಟಿಯನ್ನು ಸಖತ್‌ ಟ್ರೋಲ್‌ ಮಾಡಿದ್ದಾರೆ ನೆಟ್ಟಿಗರು. ಇದೀಗ ನಟಿ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಮಲಾ ಪೌಲ್ (Amala Paul ) ಮತ್ತು ಆಸಿಫ್ ಅಲಿ ಇತ್ತೀಚೆಗೆ ಕೊಚ್ಚಿಯ ಎರ್ನಾಕುಲಂನಲ್ಲಿರುವ ಸೇಂಟ್ ಆಲ್ಬರ್ಟ್ ಕಾಲೇಜಿನಲ್ಲಿ ತಮ್ಮ ಮುಂಬರುವ ಚಿತ್ರವಾದ ʻಲೆವೆಲ್ ಕ್ರಾಸ್ʼ (Level Cross) ಪ್ರಚಾರ ಮಾಡಲು ಬಂದಿದ್ದರು. ನಟಿ ಈ ಸಮಯಲ್ಲಿ ಅತ್ಯಂತ ಚಿಕ್ಕ ಉಡುಗೆಯನ್ನು ಧರಿಸಿ ಬಂದಿದ್ದರು. ಬಳಿಕ ನಟಿಯನ್ನು ಸಖತ್‌ ಟ್ರೋಲ್‌ ಮಾಡಿದ್ದಾರೆ ನೆಟ್ಟಿಗರು. ಇದೀಗ ನಟಿ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ʻಸಮಸ್ಯೆ ಇರೋದು ಬಟ್ಟೆಯಲ್ಲ, ಕ್ಯಾಮೆರಾಮೆನ್‌ಗಳು ಹೇಗೆ ನನ್ನ ಉಡುಗೆ ಶೈಲಿಯನ್ನು ತೋರಿಸುತ್ತಾರೆ ಎಂಬುದರಲ್ಲಿ. ಅದನ್ನು ನಿಯಂತ್ರಿಸೋದು ನನ್ನ ಕೈಯಲ್ಲಿ ಇಲ್ಲʼʼಎಂದು ಹೇಳಿದ್ದಾರೆ.

ಈ ಬಗ್ಗೆ ನಟಿ ಮಾತನಾಡಿ ʻʻನನಗೆ ಯಾವ ಬಟ್ಟೆ ಆರಾಮದಾಯಕವಾಗುತ್ತೋ ಅದನ್ನು ಮಾತ್ರ ಧರಿಸುವೆ. ಸಮಸ್ಯೆ ಇರೋದು ಬಟ್ಟೆಯಲ್ಲ, ಕ್ಯಾಮೆರಾಗಳು ಹೇಗೆ ನನ್ನ ಉಡುಗೆ ಶೈಲಿಯನ್ನು ತೋರಿಸುತ್ತಾರೆ ಎಂಬುದರಲ್ಲಿ. ಅದನ್ನು ನಿಯಂತ್ರಿಸೋದು ನನ್ನ ಕೈಯಲ್ಲಿ ಇಲ್ಲ. ನಾನು ಎಲ್ಲ ರೀತಿಯ ಡ್ರೆಸ್​ನ ಹಾಕುತ್ತೇನೆ. ಪಾಶ್ಚಾತ್ಯ ಹಾಗೂ ಸಾಂಪ್ರದಾಯಿಕ ಉಡುಗೆಯನ್ನೂ ಧರಿಸುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

ʻʻನನ್ನ ಬಟ್ಟೆಯಿಂದಾಗಿ ವಿದ್ಯಾರ್ಥಿಗಳು ಮುಜುಗರಕ್ಕೆ ಒಳಗಾಗಿಲ್ಲ. ನಾನು ಸಾಂಪ್ರದಾಯಿಕ ಅಥವಾ ಪಾಶ್ಚಿಮಾತ್ಯ ಎಲ್ಲಾ ರೀತಿಯ ಉಡುಪುಗಳನ್ನು ಧರಿಸುತ್ತೇನೆ. ಆ ಉಡುಪನ್ನು ಧರಿಸುವ ಮೂಲಕ, ವಿದ್ಯಾರ್ಥಿಗಳಲ್ಲಿ ಅವರ ಡ್ರೆಸ್ಸಿಂಗ್ ಆಯ್ಕೆಗಳ ಬಗ್ಗೆ ಆತ್ಮವಿಶ್ವಾಸವನ್ನು ತುಂಬಲು ನಾನು ಬಯಸುತ್ತೇನೆ”ಎಂದು ಅವರು ಹೇಳಿದರು.

ಇದನ್ನೂ ಓದಿ: Actor Yash: ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾ ವಿರುದ್ಧ ದೂರು ದಾಖಲು

ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ ಅಮಲಾ ಅವರು ತಮ್ಮ ಮಲಯಾಳಂ ಚಿತ್ರ ಲೆವೆಲ್ ಕ್ರಾಸ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂದು ಥಿಯೇಟರ್‌ಗೆ ಬಂದಿದೆ. ನಟಿ ಇಂತಹ ಡ್ರೆಸ್‌ ಧರಿಸಿ ಕಾಣಿಸಿಕೊಂಡಿದ್ದಕ್ಕಾಗಿ ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ.

ಡ್ರೆಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದ ಒಂದು ಕಮೆಂಟ್ ಹೀಗಿದೆ, “ಇದು ಪ್ರಚಾರದ ಭಾಗವಾಗಿರಲಿ ಅಥವಾ ಯಾವುದೇ ಕಾರ್ಯವಾಗಲಿ, ಶಿಕ್ಷಣ ಸಂಸ್ಥೆಯಲ್ಲಿ ನೀವು ಧರಿಸುವ ಉಡುಪಿಗೆ ಕನಿಷ್ಠ ಅರ್ಥವಿರಬೇಕು.” ಎಂದು ಕಮೆಂಟ್‌ ಮಾಡಿದ್ದಾರೆ ಇನ್ನೊಬ್ಬರು, “ಶಿಕ್ಷಣ ಸಂಸ್ಥೆಗೆ ಹೋಗುವಾಗ ಯೋಗ್ಯವಾದ ಉಡುಗೆ ಧರಿಸಿ” ಎಂದು ಬರೆದಿದ್ದಾರೆ. ಅಮಲಾ ಪೌಲ್ ಅವರು ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಆಡುಜೀವಿತಂ’ ಸಿನಿಮಾದಲ್ಲಿ ನಟಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Sai Pallavi: ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಸಾಯಿ ಪಲ್ಲವಿ ಡೇಟಿಂಗ್‌?

Sai Pallavi: ಇತ್ತೀಚೆಗೆ, ಸಾಯಿ ಪಲ್ಲವಿ ಮದುವೆಯಾಗಿರುವ ಪ್ರಸಿದ್ಧ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹುಟ್ಟಿಕೊಂಡಿವೆ. ಈ ಸುದ್ದಿ ವಿಶೇಷವಾಗಿ ಅವರ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದೆ. ನಟಿಯ ಫಾಲೋವರ್ಸ್‌ಗಳು ಈ ವದಂತಿಗಳನ್ನು ತಳ್ಳಿಹಾಕುತ್ತಿದ್ದಾರೆ.

VISTARANEWS.COM


on

Sai Pallavi Dating a Married Actor Who Has Two Kids
Koo

ಬೆಂಗಳೂರು: ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು. 2015 ರ ಮಲಯಾಳಂ ಚಲನಚಿತ್ರ ‘ಪ್ರೇಮಂ’ನಲ್ಲಿನ ಅಭಿನಯದೊಂದಿಗೆ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದರು. ಕಲಿ, ಮಾರಿ 2, ಗಾರ್ಗಿ ಮತ್ತು ಇತರ ಅನೇಕ ಚಲನಚಿತ್ರಗಳ ಮೂಲಕ ಹೆಸರು ಗಳಿಸಿದ್ದಾರೆ. ಸಿನಿಮಾ ಜತೆಗೆ ನಟಿ ಆಗಾಗ ವೈಯಕ್ತಿಕ ವಿಚಾರಗಳಿಗಾಗಿ ಸುದ್ದಿಯಲ್ಲಿ ಇರುತ್ತಾರೆ. ಸದ್ಯ ನಟಿ ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ವೈರಲ್‌ ಆಗಿದೆ.

ಇತ್ತೀಚೆಗೆ, ಸಾಯಿ ಪಲ್ಲವಿ ಮದುವೆಯಾಗಿರುವ ಪ್ರಸಿದ್ಧ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹುಟ್ಟಿಕೊಂಡಿವೆ. ಈ ಸುದ್ದಿ ವಿಶೇಷವಾಗಿ ಅವರ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದೆ. ನಟಿಯ ಫಾಲೋವರ್ಸ್‌ಗಳು ಈ ವದಂತಿಗಳನ್ನು ತಳ್ಳಿಹಾಕುತ್ತಿದ್ದಾರೆ. ಸದ್ಯ ಈ ಸುದ್ದಿ ನ್ಯಾಷನಲ್ ಲೆವೆಲ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ ಈ ನಟ ಯಾರು ಎನ್ನೋದನ್ನು ಮಾತ್ರ ವರದಿಗಳಲ್ಲಿ ತಿಳಿಸಲಾಗಿಲ್ಲ. ಸದ್ಯಕ್ಕೆ ಈ ವದಂತಿಗಳಿಗೆ ಸಾಯಿ ಪಲ್ಲವಿ ಉತ್ತರ ನೀಡಿಲ್ಲ.

ಸದ್ಯ ಸಾಯಿ ಪಲ್ಲವಿ ಕೈಯಲ್ಲಿ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ತಮಿಳು ಚಿತ್ರ ಶಿವಕಾರ್ತಿಕೇಯನ್ ಜೊತೆ ನಟಿಸುತ್ತಿರುವ ಅಮರನ್, ನಾಗಚೈತನ್ಯ ಸಿನಿಮಾ ‘ತಾಂಡೇಲ್’ ಹಾಗೂ ಬಾಲಿವುಡ್‌ನ ‘ರಾಮಾಯಣ’ ಕೈಯಲ್ಲಿದೆ. ಟ್ರೆಡಿಷನಲ್ ಲುಕ್‌ನಲ್ಲಿ ನಟಿಸಿ ಜನರ ಮನಗೆದ್ದಿರುವ ಸಾಯಿ ಪಲ್ಲವಿ ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರು. ‘ಪ್ರೇಮಂ’, ಮಿಡಲ್ ಕ್ಲಾಸ್ ಅಬ್ಬಾಯ್, ಲವ್ ಸ್ಟೋರಿ, ಎನ್‌ಜಿಕೆ, ಗಾರ್ಗಿ, ಫಿದಾ, ಮಾರಿ 2 ಅಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಒಂದಿಷ್ಟು ದಿನ ಸಿನಿಮಾದಿಂದ ದೂರ ಉಳಿದಿದ್ದರೂ, ಅವರ ಕೈಯಲ್ಲೀಗ ಮೆಗಾ ಪ್ರಾಜೆಕ್ಟ್‌ಗಳು ಇವೆ.

ಇದನ್ನೂ ಓದಿ” Sai Pallavi Mass Dance: ಆಮೀರ್​ ಖಾನ್​ ಪುತ್ರನ ಜತೆ ಪಬ್‌ನಲ್ಲಿ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ!

ಶಿವ ಆರೂರ್ ಮತ್ತು ರಾಹುಲ್ ಸಿಂಗ್ ಅವರ ‘ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್: ಟ್ರೂ ಸ್ಟೋರೀಸ್ ಆಫ್ ಮಾಡರ್ನ್ ಮಿಲಿಟರಿ’ ಪುಸ್ತಕವನ್ನು ಆಧರಿಸಿದ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್, ಭುವನ್ ಅರೋರಾ, ಲಲ್ಲು, ಶ್ರೀಕುಮಾರ್ ಮತ್ತು ಶ್ಯಾಮ್ ಮೋಹನ್ ಸಹ ನಟಿಸಿದ್ದಾರೆ. ಇದು ಅಕ್ಟೋಬರ್ 31, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ರಾಮಾಯಣದೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ ನಟಿ. ಈ ಚಿತ್ರದಲ್ಲಿ ಅವರು ಸೀತಾ ದೇವಿಯ ಪಾತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಜೋಡಿ ಈಗಾಗಲೇ ಮುಂಬೈನಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದೆ ಮತ್ತು ಚಿತ್ರವು 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Continue Reading

ಟಾಲಿವುಡ್

Sundeep Kishan: ಪ್ರತಿದಿನ 350 ಬಡವರ ಹೊಟ್ಟೆ ತುಂಬಿಸುತ್ತಿರುವ ನಟನ ಹೋಟೆಲ್ ಮೇಲೆ ದಾಳಿ; ಡೇಟ್ ಬಾರ್ ಅಕ್ಕಿ ಪತ್ತೆ!

Sundeep Kishan: ತೆಲುಗು ಹೀರೊ ಸಂದೀಪ್ ಕಿಶನ್ ಪ್ರಸ್ತುತ ತಮ್ಮ “ರಾಯನ್‌” ಚಿತ್ರದ ಪ್ರಚಾರದಲ್ಲಿದ್ದಾರೆ. ಸಂದೀಪ್ ಕಿಶನ್ ಅವರು ‘ವಿವಾಹ ಭೋಜನಂ’ಬು ಹೆಸರಿನ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದಾರೆ. ಸಿಕಂದರಾಬಾದ್​ನಲ್ಲಿ ಈ ರೆಸ್ಟೋರೆಂಟ್ ಇದೆ.  ಸಿಕಂದರಾಬಾದ್‌ನ ವಿವಾಹ ಭೋಜನಂಬು ಎಂಬ ರೆಸ್ಟೋರೆಂಟ್‌ನಲ್ಲಿ ಆಹಾರ ಸುರಕ್ಷತಾ ಇಲಾಖೆ ಇತ್ತೀಚೆಗೆ ನಡೆಸಿದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

Sundeep Kishan Distributes Free Food To 350 Needy People Hotel Raided By Food Safety Department
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ಸೇರಿದಂತೆ ಟಾಲಿವುಡ್‌ನಲ್ಲಿಯೂ ಅನೇಕ ನಟರು ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕೆಲವು ಹೀರೋಗಳು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಟಾಲಿವುಡ್‌ನ ಪ್ರತಿಭಾವಂತ ನಾಯಕ ಸಂದೀಪ್ ಕಿಶನ್ (Sundeep Kishan) ಈ ವರ್ಗಕ್ಕೆ ಸೇರಿದ್ದಾರೆ. ಈ ಬಗ್ಗೆ ಸುದ್ದಿ ವೈರಲ್‌ ಆಗುತ್ತಿದ್ದಂತೆ ಆಹಾರ ಸುರಕ್ಷತೆ ಮತ್ತು ಶೇಖರಣೆ ವಿಚಾರದಲ್ಲಿ ಸಾಕಷ್ಟು ನಿಯಮಗಳನ್ನು ಅವರು ಗಾಳಿಗೆ ತೂರಿದ್ದಾರೆ ಎಂದು ವರದಿ ಆಗಿತ್ತು.

ತೆಲುಗು ಹೀರೊ ಸಂದೀಪ್ ಕಿಶನ್ ಪ್ರಸ್ತುತ ತಮ್ಮ “ರಾಯನ್‌” ಚಿತ್ರದ ಪ್ರಚಾರದಲ್ಲಿದ್ದಾರೆ. ಸಂದೀಪ್ ಕಿಶನ್ ಅವರು ‘ವಿವಾಹ ಭೋಜನಂ’ಬು ಹೆಸರಿನ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದಾರೆ. ಸಿಕಂದರಾಬಾದ್​ನಲ್ಲಿ ಈ ರೆಸ್ಟೋರೆಂಟ್ ಇದೆ.  ಸಿಕಂದರಾಬಾದ್‌ನ ವಿವಾಹ ಭೋಜನಂಬು ಎಂಬ ರೆಸ್ಟೋರೆಂಟ್‌ನಲ್ಲಿ ಆಹಾರ ಸುರಕ್ಷತಾ ಇಲಾಖೆ ಇತ್ತೀಚೆಗೆ ನಡೆಸಿದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಜುಲೈ 8 ರಂದು ಈ ದಾಳಿ ನಡೆದಿದ್ದು, ಆಹಾರ ಸುರಕ್ಷತೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದಂತೆ ಹಲವಾರು ಉಲ್ಲಂಘನೆಗಳು ನಡೆದಿವೆ ಎಂದು ತಿಳಿದುಬಂದಿದೆ.

ಸಂದೀಪ್ ನಡೆಸುತ್ತಿರುವ ರೆಸ್ಟೋರೆಂಟ್​ ಏಳು ಔಟ್​ಲೆಟ್​ಗಳನ್ನು ಹೊಂದಿದೆ. ತಮಗೆ ಮೋಸ ಮಾಡೋ ಅಗತ್ಯವಿಲ್ಲ ಎಂದಿದ್ದಾರೆ ಅವರು. ‘ವಿವಾಹ ಭೋಜನಂಬು ರೆಸ್ಟೋರೆಂಟ್​​ನ ಏಳು ಶಾಖೆ​ಗಳಿಂದ ನಾವು ನಿತ್ಯ 50 ಫುಡ್ ಪ್ಯಾಕೆಟ್​ಗಳನ್ನು ದಾನ ಮಾಡುತ್ತೇವೆ. ಅಂದರೆ ದಿನಕ್ಕೆ 350 ಫುಡ್ ಪ್ಯಾಕೆಟ್​ಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಒಂದು ಪ್ಯಾಕೆಟ್​ನ ಬೆಲೆ 50 ರೂಪಾಯಿ. ಅಂದರೆ ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿಗೂ ಹೆಚ್ಚು ಆಹಾರವನ್ನು ಉಚಿತವಾಗಿ ನೀಡುತ್ತಿದ್ದೇವೆ. ಹೀಗಿರುವಾಗ ಕೆಲವೇ ಸಾವಿರ ರೂಪಾಯಿ ಬೆಲೆ ಬಾಳುವ ಅಕ್ಕಿಯನ್ನು ಶೇಖರಿಸಿಟ್ಟು ನಮಗೆ ಆಗೋದು ಏನಿದೆ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ʻʻನಾವು ಎಷ್ಟೇ ದಾನ ಮಾಡಿದರೂ ಸ್ವಚ್ಛತೆ ಇರಬೇಕು. ಮತ್ತು ಆಹಾರ ಸುರಕ್ಷತಾ ಇಲಾಖೆಯು ಯಾವುದೇ ಶುಚಿತ್ವದ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿಲ್ಲ” ಎಂದು ಅವರು ಹೇಳಿದರು. ಈ ದಾಳಿ ನಡೆದ ಬಳಿಕ ಸಾಮಾನ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಬಿಲ್ಲಿಂಗ್ ಬಂದಿದೆ. ನಾವು ನೀಡುವ ಗುಣಮಟ್ಟದ ಆಹಾರದ ಮೇಲೆ ಜನರಿಗೆ ನಂಬಿಕೆ ಇದೆ’ ಎಂದಿದ್ದಾರೆ ಸಂದೀಪ್.

ಇದನ್ನೂ ಓದಿ: Back Benchers Movie: ಬ್ಯಾಕ್ ಬೆಂಚರ್ಸ್‌ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕ ಖುಷಿ!

ದಾಳಿ ನಡೆದ ಸಂದರ್ಭದಲ್ಲಿ ಡೇಟ್ ಬಾರ್​ ಆದ ಅಕ್ಕಿ ಬ್ಯಾಗ್ ಈ ರೆಸ್ಟೋರೆಂಟ್​ನಲ್ಲಿ ಸಿಕ್ಕಿತ್ತು ಎನ್ನಲಾಗಿದೆ. ಇನ್ನು, 500 ಗ್ರಾಮ್ ತೆಂಗಿನ ತುರಿಗೆ ಬಣ್ಣ ಹಾಕಲಾಗಿತ್ತು. ಈ ಬಗ್ಗೆ ಅಧಿಕಾರಿಗಳು ಹೇಳಿಕೊಂಡಿದ್ದರು ಎಂದು ವರದಿಯಾಗಿದೆ.

ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ರಾಯನ್‌’ (Raayan). ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದರು. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್‌ʼ ಅವರ ಎರಡನೇ ನಿರ್ದೇಶನದ ಸಿನಿಮಾ. ಸಿನಿಮಾ ಜುಲೈ 26ಕ್ಕೆ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. 

Continue Reading

ದೇಶ

IMDb 2024 top movies: ಈ ವರ್ಷದ ಅತ್ಯಂತ ನಿರೀಕ್ಷಿತ ಮತ್ತು ಜನಪ್ರಿಯ ಸಿನಿಮಾಗಳ ಪಟ್ಟಿ ಇಲ್ಲಿದೆ

ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಸೆಲೆಬ್ರಿಟಿಗಳ ಕುರಿತು ಮಾಹಿತಿಗಾಗಿ ಅತ್ಯಂತ ಜನಪ್ರಿಯ ಮೂಲಗಳಲ್ಲಿ ಒಂದಾಗಿರುವ ಇಂಟರ್ನೆಟ್ ಮೂವಿ ಡೇಟಾಬೇಸ್ 2024ರ (IMDb 2024) ಟಾಪ್ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 2024ರಲ್ಲಿ ಈವರೆಗಿನ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಮತ್ತು ಹೆಚ್ಚು ನಿರೀಕ್ಷಿತ ಚಲನಚಿತ್ರಗಳ ಮಾಹಿತಿಯನ್ನು ನೀಡಲಾಗಿದೆ. ನೀವು ಇವುಗಳಲ್ಲಿ ಯಾವ ಚಿತ್ರ ನೋಡಿದ್ದೀರಿ? ಈ ಪಟ್ಟಿ ನೋಡಿ.

VISTARANEWS.COM


on

By

IMDb 2024
Koo

ಬಾಕ್ಸ್ ಆಫೀಸ್‌ನಲ್ಲಿ (box office collection) ಅನಿಶ್ಚಿತತೆಯ ಹೊರತಾಗಿಯೂ 2024ರಲ್ಲಿ ಹಲವು ಭಾರತೀಯ ಸಿನಿಮಾಗಳು (Indian film) ದಾಖಲೆಯನ್ನು ಬರೆದಿತ್ತು. ಕಲ್ಕಿ 2898 ಎಡಿ (kalki 2898 AD) ಪ್ರಸ್ತುತ 2024ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರವಾಗಿದೆ. ಪುಷ್ಪ: ದಿ ರೂಲ್ ಭಾಗ 2 (pushpa: the rule part 2) ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. ಇಂಟರ್ನೆಟ್ ಮೂವಿ ಡೇಟಾಬೇಸ್ (IMDb 2024) ಪ್ರಕಾರ ಇದು ಈ ವರ್ಷದ ಬಹು ನಿರೀಕ್ಷಿತ ಭಾರತೀಯ ಚಲನಚಿತ್ರವಾಗಿದೆ.

ಇಂಟರ್ನೆಟ್ ಮೂವಿ ಡೇಟಾಬೇಸ್ 2024ರ ಟಾಪ್ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂಟರ್ನೆಟ್ ಮೂವಿ ಡೇಟಾಬೇಸ್ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಸೆಲೆಬ್ರಿಟಿಗಳ ಕುರಿತು ಮಾಹಿತಿಗಾಗಿ ಅತ್ಯಂತ ಜನಪ್ರಿಯ ಮೂಲಗಳಲ್ಲಿ ಒಂದಾಗಿದೆ. 2024ರಲ್ಲಿ ಈವರೆಗಿನ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಮತ್ತು ಹೆಚ್ಚು ನಿರೀಕ್ಷಿತ ಚಲನಚಿತ್ರಗಳ ಮಾಹಿತಿಯನ್ನು ಐಎಂಡಿಬಿ ಪ್ರಕಟಿಸಿದೆ.

ಕಲ್ಕಿ 2898 ಎಡಿ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಮಾತನಾಡಿ, ನಮ್ಮ ಇಡೀ ತಂಡವು ಐಎಂಡಿಬಿ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಬಹಳ ಸಂತೋಷ ಮತ್ತು ಗೌರವವಾಗಿದೆ. ಇದು ಪ್ರಪಂಚದಾದ್ಯಂತದ ನಮ್ಮ ಪ್ರೇಕ್ಷಕರ ಪ್ರೀತಿಯನ್ನು ನೇರವಾಗಿ ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.


ಐಎಂಡಿಬಿ ಪಟ್ಟಿಯ 2024ರ ನಂ. 2 ಶ್ರೇಯಾಂಕದಲ್ಲಿರುವ ʼಮಂಜುಮ್ಮೆಲ್ ಬಾಯ್ಸ್‌ʼ ಚಿತ್ರದ ನಿರ್ದೇಶಕ ಚಿದಂಬರಂ ಪ್ರತಿಕ್ರಿಯಿಸಿ ಈ ಗೌರವಕ್ಕಾಗಿ ನಾನು ಐಎಂಡಿಬಿಗೆ ಕೃತಜ್ಞನಾಗಿದ್ದೇನೆ. ಅವರ ಪ್ರೀತಿ ಮತ್ತು ಬೆಂಬಲಕ್ಕಾಗಿ ಪ್ರಪಂಚದಾದ್ಯಂತದ ವೀಕ್ಷಕರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಈ ಚಿತ್ರದ ಮ್ಯಾಜಿಕ್‌ಗೆ ಜೀವ ತುಂಬಿದ ಇಡೀ ಚಿತ್ರತಂಡದ ಶ್ರಮ ಮತ್ತು ಸಮರ್ಪಣೆಗೆ ಈ ಸಾಧನೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಐಎಂಡಿಬಿ 2024 ಪಟ್ಟಿಯಲ್ಲಿ ಭಾರತೀಯ ಸಿನಿಮಾ

ಭಾರತೀಯ ಸಿನಿಮಾವು ಭಾರತದಲ್ಲಿ ಮತ್ತು ಜಾಗತಿಕವಾಗಿ ಅತೀ ಹೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ ಎಂದು ಐಎಂಡಿಬಿ ಇಂಡಿಯಾದ ಮುಖ್ಯಸ್ಥೆ ಯಾಮಿನಿ ಪಟೋಡಿಯಾ ಹೇಳಿದ್ದಾರೆ.
2024ರಲ್ಲಿ ಇಲ್ಲಿಯವರೆಗೆ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ಐದು ಹಿಂದಿ, ಮೂರು ಮಲಯಾಳಂ ಮತ್ತು ಎರಡು ತೆಲುಗು ಚಲನಚಿತ್ರಗಳು ಪ್ರೇಕ್ಷಕರನ್ನು ಕಾಯುವಂತೆ ಮಾಡಿದೆ. ಇದರಲ್ಲಿ ಪುಷ್ಪಾ: ದಿ ರೂಲ್ – ಭಾಗ 2 ಮೊದಲ ಸ್ಥಾನದಲ್ಲಿ ಇದೆ ಎಂದು ಅವರು ತಿಳಿಸಿದ್ದಾರೆ.


ಅತ್ಯಂತ ಜನಪ್ರಿಯ ಚಿತ್ರಗಳು

ಕಲ್ಕಿ 2898 ಎಡಿ, ಮಂಜುಮ್ಮೆಲ್ ಬಾಯ್ಸ್, ಫೈಟರ್, ಹನುಮಾನ್, ಶೈತಾನ್, ಲಾಪತಾ ಲೇಡಿಸ್, ಆರ್ಟಿಕಲ್ 370, ಪ್ರೇಮಾಲು, ಆವೇಶಮ್, ಮುಂಜ್ಯ ಕ್ರಮವಾಗಿ 1ರಿಂದ 10ರೊಳಗಿನ ಸ್ಥಾನದಲ್ಲಿದೆ.

ಶ್ರೇಯಾಂಕ

2024ರ ಜನವರಿ 1ರಿಂದ ಜುಲೈ 10ರ ನಡುವೆ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಚಲನಚಿತ್ರಗಳಲ್ಲಿ ಐಎಂಡಿಬಿ ಬಳಕೆದಾರರ ಸರಾಸರಿ ರೇಟಿಂಗ್ 6 ಅಥವಾ ಕನಿಷ್ಠ 10,000 ಮತಗಳೊಂದಿಗೆ ಈ ಚಿತ್ರಗಳು ಹೆಚ್ಚು ಜನಪ್ರಿಯವಾಗಿವೆ.


ಹೆಚ್ಚು ನಿರೀಕ್ಷಿತ ಚಿತ್ರಗಳು

ಪುಷ್ಪಾ: ದಿ ರೂಲ್- ಭಾಗ 2, ದೇವರ- ಭಾಗ 1, ವೆಲ್ಕಮ್ ಟು ಜಂಗಲ್, ಡಿ ಗ್ರೇಟೆಸ್ಟ್ ಆಫ್ ಆಲ್ ಟೈಮ್, ಕಂಗುವ, ಸಿಂಗಂ ಅಗೈನ್, ಭೂಲ್ ಭುಲೈಯಾ 3, ತಂಗಲಾನ್, ಔರಾನ್ ಮೇ ಕಹಾನ್ ದಮ್ ಥಾ, ಸ್ತ್ರೀ 2 ಕ್ರಮವಾಗಿ 1ರಿಂದ 10ರೊಳಗಿನ ಸ್ಥಾನದಲ್ಲಿದೆ.


ಟಾಪ್ ಸ್ಥಾನದಲ್ಲಿ ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಅಜಯ್ ದೇವಗನ್

ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮತ್ತು ಅಜಯ್ ದೇವಗನ್ ಅವರ ಚಿತ್ರಗಳು ಎರಡೂ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ದೀಪಿಕಾ ಮತ್ತು ದಿಶಾ ಕಲ್ಕಿ 2898 ಎಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಫೈಟರ್ ಚಿತ್ರದಲ್ಲೂ ದೀಪಿಕಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Actor Dhanush: ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸಬಾರದಾ? ನಾನೇನು ಬೀದಿಯಲ್ಲಿ ಇರಬೇಕಾ ಎಂದ ನಟ ಧನುಷ್‌!

ಶೈತಾನ್ ಚಿತ್ರದಲ್ಲಿ ಅಜಯ್ ನಟಿಸಿದ್ದು, ದೀಪಿಕಾ ಮತ್ತು ಅಜಯ್ ಮೊದಲ ಬಾರಿಗೆ ಸಿಂಗಮ್ ಅಗೈನ್ ನಲ್ಲಿ ಕಾಣಿಸಿಕೊಂಡಿದ್ದಾರೆ.


ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. ದಿಶಾ ಅವರ ಮುಂಬರುವ ಬಿಡುಗಡೆಗಳಲ್ಲಿ ವೆಲ್ಕಮ್ ಟು ದಿ ಜಂಗಲ್ ಮತ್ತು ಕಂಗುವ ಸೇರಿವೆ.

Continue Reading

Latest

Naga Chaitanya: ನಾಗಚೈತನ್ಯ ಜೊತೆ ಪ್ರೇಮಿ, ಪತ್ನಿ ಮತ್ತು ತಾಯಿಯಾಗಿ ನಟಿಸಿದ್ದಾರೆ ಈ ನಟಿ!

Naga Chaitanya: ನಟಿ ಲಾವಣ್ಯ ತ್ರಿಪಾಠಿ ಅವರು ನಾಗ ಚೈತನ್ಯ ಜೊತೆ ಕೃಷ್ಣ ಮಾರಿಮುತ್ತು ನಿರ್ದೇಶನದ ‘ಯುದ್ಧಂ ಶರಣಂ’ ಚಿತ್ರದಲ್ಲಿ ಪ್ರೇಮಿಯ ಪಾತ್ರದಲ್ಲಿ ನಟಿಸಿದ್ದರು. ‘ಬಂಗಾರರಾಜು’ ಚಿತ್ರದಲ್ಲಿ ನಾಗಚೈತನ್ಯ ತಾಯಿಯಾಗಿ ನಟಿಸಿದ್ದರು. ಇನ್ನು‘ಮನಂ’ ಚಿತ್ರದಲ್ಲಿ ಲಾವಣ್ಯ ನಾಗ ಚೈತನ್ಯ ಅವರ ಸ್ನೇಹಿತೆಯಾಗಿ (ಅತಿಥಿ ಪಾತ್ರ) ನಟಿಸಿದ್ದಾರೆ. ಈ ರೀತಿಯಾಗಿ, 33 ವರ್ಷದ ನಟಿ ಈ ಚಿತ್ರಗಳಲ್ಲಿ ಚೈತನ್ಯ ಅವರ ಪತ್ನಿ, ತಾಯಿ ಮತ್ತು ಸ್ನೇಹಿತೆಯ ಪಾತ್ರವನ್ನು ನಿರ್ವಹಿಸಿದ್ದರು. ಈ ಕುರಿತ ವರದಿ ಇಲ್ಲಿದೆ.

VISTARANEWS.COM


on

Naga Chaitanya
Koo

‘ಯೇ ಮಾಯಾ ಚೆಸಾವೆ’ ಮತ್ತು ‘ಮನಮ್’ನಂತಹ ಹಿಟ್ ಚಿತ್ರಗಳೊಂದಿಗೆ ತಮ್ಮ ಅಭಿನಯದ ಮೂಲಕ ಛಾಪು ಮೂಡಿಸಿದ ತೆಲುಗು ನಟರಲ್ಲಿ ನಾಗ ಚೈತನ್ಯ ಒಬ್ಬರು. ಚೈತನ್ಯ ಅವರು ಲಾವಣ್ಯ ತ್ರಿಪಾಠಿ ಸೇರಿದಂತೆ ಹಲವಾರು ಪ್ರಮುಖ ನಟಿಯರೊಂದಿಗೆ ನಟಿಸಿದ್ದಾರೆ. ಕೃಷ್ಣ ಮಾರಿಮುತ್ತು ನಿರ್ದೇಶನದ ‘ಯುದ್ಧಂ ಶರಣಂ’ ಚಿತ್ರದಲ್ಲಿ ಲಾವಣ್ಯ ತ್ರಿಪಾಠಿ ಅವರು ನಾಗ ಚೈತನ್ಯ(Naga Chaitanya) ಅವರ ಪ್ರೇಮಿಯ ಪಾತ್ರದಲ್ಲಿ ನಟಿಸಿದ್ದರು.

‘ಬಂಗಾರರಾಜು’ ಚಿತ್ರದಲ್ಲಿ ಇವರು ನಾಗಚೈತನ್ಯ ಅವರ ತಾಯಿಯಾಗಿ ನಟಿಸಿದ್ದರು. ಈ ಚಿತ್ರವು ‘ಸೊಗ್ಗಡೆ ಚಿನ್ನಿ ನಯನ’ ಚಿತ್ರದ ಮುಂದುವರಿದ ಭಾಗವಾಗಿದೆ. ವಿಕ್ರಮ್ ಕೆ ಕುಮಾರ್ ನಿರ್ದೇಶನದ ‘ಮನಂ’ ಚಿತ್ರದಲ್ಲಿ ಲಾವಣ್ಯ ನಾಗ ಚೈತನ್ಯ ಅವರ ಸ್ನೇಹಿತೆಯಾಗಿ (ಅತಿಥಿ ಪಾತ್ರ) ನಟಿಸಿದ್ದಾರೆ. ಈ ರೀತಿಯಾಗಿ, 33 ವರ್ಷದ ನಟಿ ಈ ಚಿತ್ರಗಳಲ್ಲಿ ಚೈತನ್ಯ ಅವರ ಪತ್ನಿ, ತಾಯಿ ಮತ್ತು ಸ್ನೇಹಿತೆಯ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲದೇ ಯುದ್ಧಂ ಶರಣಂ, ಸೊಗ್ಗಡೆ ಚಿನ್ನಿ ನಯನ ಮತ್ತು ಮನಂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಬಹಳ ಸದ್ದು ಮಾಡಿದ್ದವು.

ನಾಗ ಚೈತನ್ಯ ಪ್ರಸ್ತುತ ಚಂದೂ ಮೊಂಡೆಟಿ ನಿರ್ದೇಶನದ ‘ತಾಂಡೇಲ್’ ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಚಿತ್ರದ ತಂಡವು ನವೆಂಬರ್ 22ರಂದು ಚಿತ್ರದ ಫಸ್ಟ್ ಲುಕ್ ಅನ್ನು ಟ್ವೀಟ್ ಮೂಲಕ ಬಿಡುಗಡೆ ಮಾಡಿದೆ. ಫಸ್ಟ್ ಲುಕ್‌ನಲ್ಲಿ ಅವರು ಮೀನುಗಾರನ ಪಾತ್ರವನ್ನು ನಿರ್ವಹಿಸುತ್ತಿದ್ದು, ನಾಗಚೈತನ್ಯ ಅವರು ದೋಣಿಯಲ್ಲಿ ಕುಳಿತಿರುವುದನ್ನು ತೋರಿಸಲಾಗಿದೆ. ಚೈತನ್ಯ ಈ ಪೋಸ್ಟ್ ಗೆ “#NC23 #Thandel ನಾನು ನಿಜವಾಗಿಯೂ ಎದುರು ನೋಡುತ್ತಿರುವ ಪಾತ್ರ .. ಮತ್ತು ಪ್ರತಿಯೊಬ್ಬರೂ at@GeethaArts @chandoomondeti@Sai_Pallavi92@ThisIsDSPand ನಾನು ನಿಜವಾಗಿಯೂ ಇಷ್ಟಪಡುವ ತಂಡ. ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ” ಎಂದು ಶೀರ್ಷಿಕೆ ನೀಡಿದ್ದಾರೆ,
ನಿರ್ಮಾಪಕರು ಚಿತ್ರದ ಕಥೆಯನ್ನು ರಹಸ್ಯವಾಗಿಟ್ಟಿದ್ದಾರೆ.

ಚಿತ್ರ ತಂಡವು ಈ ವರ್ಷದ ಆರಂಭದಲ್ಲಿ ಕೆ ಮ್ಯಾಚಿಲೆಸಂ ಎಂಬ ಮೀನುಗಾರಿಕಾ ಕುಗ್ರಾಮಕ್ಕೆ ಪ್ರಯಾಣ ಬೆಳೆಸಿತ್ತು. ಶ್ರೀಕಾಕುಳಂ ಬಳಿ ಇರುವ ಈ ಗ್ರಾಮವು ಮೀನುಗಾರ ಸಮುದಾಯಕ್ಕೆ ಸೇರಿದ ನೆಲೆಯಾಗಿದೆ. ಚಿತ್ರದ ನಿರ್ದೇಶಕ ಚಂದೂ ಮೊಂಡೆಟಿ ಮತ್ತು ನಾಗ ಚೈತನ್ಯ ಇಬ್ಬರೂ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಈ ಚಿತ್ರವು ಗ್ರಾಮದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ ಎಂದು ಹೇಳಿದ್ದಾರೆ. ಚಿತ್ರಕ್ಕಾಗಿ ಉತ್ತಮ ತಯಾರಿ ನಡೆಸಲು ಅವರು ಮೀನುಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಅದಕ್ಕಾಗಿ ಅವರೊಂದಿಗೆ ಹೆಚ್ಚು ಸಮಯ ಕಳೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಆಟವಾಡುತ್ತ ಕೂದಲಿನ ಕ್ಲಿಪ್ ನುಂಗಿದ 10 ತಿಂಗಳ ಮಗು!

ವರದಿಗಳ ಪ್ರಕಾರ, ನಾಗ ಚೈತನ್ಯ ಅವರು ಈ ಪಾತ್ರಕ್ಕಾಗಿ ತಮ್ಮ ಕೂದಲನ್ನು ಬೆಳೆಸಲಿಲ್ಲವಂತೆ. ಆದರೆ ಅವರು ಮೀನುಗಾರರೊಂದಿಗೆ ಅವರ ಬಾಡಿ ಲ್ಯಾಂಗ್ವೇಜ್ ಮತ್ತು ಭಾಷೆಯನ್ನು ಕಲಿಯಲು ಸಮಯ ಕಳೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗೇ ಅವರು ಈ ಚಿತ್ರದಲ್ಲಿ ಶ್ರೀಕಾಕುಳಂ ಗ್ರಾಮದ ಜನರ ಭಾಷೆಯಲ್ಲೇ ಮಾತನಾಡಲಿದ್ದಾರೆ. ಈ ರೀತಿಯ ಚಿತ್ರ ಅವರ ವೃತ್ತಿಜೀವನದಲ್ಲಿ ಮೊದಲನೆಯದು ಎನ್ನಲಾಗಿದೆ.

Continue Reading
Advertisement
Ragging Case
Latest5 mins ago

Ragging Case: ಜೂನಿಯರ್ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಸೀನಿಯರ್‌ಗಳು! ತಲ್ಲಣ ಮೂಡಿಸುವ ವಿಡಿಯೊ

Namratha Gowda new look photos got viral
ಸ್ಯಾಂಡಲ್ ವುಡ್14 mins ago

Namratha Gowda: ಕಪ್ಪು ಬಣ್ಣದ ಲಾಂಗ್ ಗೌನ್‌ನಲ್ಲಿ ಹಾಟ್‌ ಆಗಿ ಕಂಡ ನಮ್ರತಾ ಗೌಡ!

SL vs IND 1st T20I
ಕ್ರೀಡೆ14 mins ago

SL vs IND 1st T20I: ನಾಳೆ ಭಾರತ-ಲಂಕಾ ಮೊದಲ ಟಿ20; ಇತ್ತಂಡಗಳ ದಾಖಲೆ, ಪಿಚ್​ ರಿಪೋರ್ಟ್ ವರದಿ ಹೇಗಿದೆ?

News Rules
ದೇಶ21 mins ago

News Rules: ಗೂಗಲ್‌ ಮ್ಯಾಪ್‌ ಶುಲ್ಕದಿಂದ LPG ದರದವರೆಗೆ; ಆ.1ರಿಂದ ಏನೇನು ಬದಲಾವಣೆ?

Anti dengue month and larval survey programme in yadgiri
ಆರೋಗ್ಯ22 mins ago

Yadgiri News: ಡೆಂಗ್ಯೂ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ: ಡಿಸಿ ಡಾ. ಸುಶೀಲ

Genius Mutta Kannada movie release in August
ಕರ್ನಾಟಕ23 mins ago

Kannada New Movie: ʼಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʼಚಿನ್ನಾರಿ ಮುತ್ತʼ; ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್‌

Glittering Entrepreneurs vedike inauguration in bengaluru
ಬೆಂಗಳೂರು30 mins ago

Bengaluru News: ಮಹಿಳೆಗೆ ಮಾತ್ರ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿಯಿದೆ; ದಿವ್ಯಾ ರಂಗೇನಹಳ್ಳಿ

Samsung has launched a new range of ACs in chilled water based cassette units
ಕರ್ನಾಟಕ42 mins ago

Samsung AC: ಹೊಸ ಶ್ರೇಣಿಯ ಎಸಿಗಳನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ಇದರ ವಿಶೇಷತೆ ಏನೇನು?

BJP Protest
ಕರ್ನಾಟಕ58 mins ago

BJP Protest: ಸಂಸತ್ ಬಳಿ ರಾಜ್ಯ ಬಿಜೆಪಿ ಸಂಸದರ ಪ್ರತಿಭಟನೆ; ವಾಲ್ಮೀಕಿ ನಿಗಮ ಅಕ್ರಮ, ಮುಡಾ ಹಗರಣ ಸಿಬಿಐ ತನಿಖೆಗೆ ನೀಡಲು ಆಗ್ರಹ

Ram Mandir Watch
Latest1 hour ago

Ram Mandir Watch: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ22 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌