BBK Season 10 : ಬಿಗ್‌ ಬಾಸ್‌ ಮನೆಗೆ ಬೆಂಕಿ ಹಚ್ಚಿದ ಸಿಗರೇಟ್‌ ಕಿಡಿ; ಇಬ್ಬರಿಂದಾಗಿ ಎಲ್ಲರಿಗೂ ಶಿಕ್ಷೆ! - Vistara News

ಕಿರುತೆರೆ

BBK Season 10 : ಬಿಗ್‌ ಬಾಸ್‌ ಮನೆಗೆ ಬೆಂಕಿ ಹಚ್ಚಿದ ಸಿಗರೇಟ್‌ ಕಿಡಿ; ಇಬ್ಬರಿಂದಾಗಿ ಎಲ್ಲರಿಗೂ ಶಿಕ್ಷೆ!

BBK Season 10 : ಬಿಗ್‌ ಬಾಸ್‌ ಮನೆಯಲ್ಲಿ ಸಿಗರೇಟಿನ ಕಿಡಿ ಬೆಂಕಿ ಹಚ್ಚಿದೆ. ಭಾರವಾದ ಚೀಲದ ಶಿಕ್ಷೆ ಎಲ್ಲರನ್ನೂ ಕೆರಳಿಸಿದೆ. ಹಾಗಿದ್ರೆ ಯಾಕೆ ಈ ಶಿಕ್ಷೆ? ತಪ್ಪಿತಸ್ಥರು ಯಾರು? ಏನೀ ಬೆಂಕಿ?

VISTARANEWS.COM


on

Vinay Gowda Michael Cigarette big boss
ವಿನಯ್‌ ಗೌಡ ಮತ್ತು ಮೈಕೆಲ್‌ ಅಜಯ್‌ ಸಿಗರೇಟು ಸೇದಿದವರು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ದೊಡ್ಮನೆಯಲ್ಲಿ ಬೆಂಕಿ ಹತ್ತಿಕೊಂಡಿದೆ. ಸ್ನೇಕ್‌ ಶ್ಯಾಮ್‌ ಮತ್ತು ಗೌರೀಶ್‌ ಅಕ್ಕಿ ಅವರ ನಿರ್ಗಮನದ ಬಳಿಕ ಈಗ 15 ಮಂದಿ ಮನೆಯೊಳಗೆ ಉಳಿದಿದ್ದಾರೆ. ಹಾಗೆ ಮೂರನೇ ವಾರ ಆರಂಭವಾಗುತ್ತಿದ್ದಂತೆಯೇ ಹುಟ್ಟಿಕೊಂಡ ಕಿಡಿ ಬೆಂಕಿಯಾಗಿದೆ. ಈ ಕಿಡಿ ಹಚ್ಚಿದ್ದು ಒಂದು ಸಿಗರೇಟು! (Cigarette Spark)

ಬಿಗ್‌ ಬಾಸ್‌ ಮನೆಯಲ್ಲಿ ರೂಲ್ಸ್‌ (Big Boss rules) ಪಾಲನೆ ಕಡ್ಡಾಯ. ಅದು ಪಾಲನೆಯಾಗದೆ ಇದ್ದಾಗ ಅದಕ್ಕೆ ಸೂಕ್ತ ಶಿಕ್ಷೆಯನ್ನು, ಸೂಕ್ತ ಕಾರಣಗಳೊಂದಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ತಪ್ಪು ಮಾಡಿದವರಿಗೆ, ತಪ್ಪು ಮಾಡಿದ ತಂಡಕ್ಕೆ ಈ ಶಿಕ್ಷೆ ಕೊಡಲಾಗುತ್ತದೆ. ಆದರೆ, ಈ ಬಾರಿ ತಪ್ಪು ಮಾಡಿದ್ಯಾರೋ? ಶಿಕ್ಷೆ ಯಾರಿಗೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದುವೇ ಕಿಡಿ ಬೆಂಕಿಯಾಗಲು ಕಾರಣ.

ಬಿಗ್‌ ಬಾಸ್‌ ಮನೆಯಲ್ಲಿ ಆರಂಭಿಕ ವರ್ಷಗಳಲ್ಲಿ ಸಿಗರೇಟು ಸೇವನೆ ನಿಷಿದ್ಧವಾಗಿತ್ತು. ಎಷ್ಟೇ ಅಭ್ಯಾಸವಿದ್ದರೂ ಮನೆಯೊಳಗೆ ಬಂದ ಮೇಲೆ ಬಿಡಬೇಕಾಗಿತ್ತು, ಹೀಗಾಗಿ ಕೆಲವರ ಪಾಲಿಗೆ ಅದು ರಿಫಾರ್ಮ್‌ ಸೆಂಟರ್‌ ಆಗಿಯೂ ಕೆಲಸ ಮಾಡಿತ್ತು. ಆದರೆ, ಮುಂದೆ ಸ್ಪರ್ಧೆಗೆ ಬರುವಾಗಲೇ ಸಿಗರೇಟಿಗೆ ಅವಕಾಶ ಕೊಡಲೇಬೇಕು ಎಂದು ಸ್ಪರ್ಧಿಗಳೇ ಷರತ್ತು ವಿಧಿಸಿದ್ದರಿಂದ ಅದಕ್ಕೆ ಸ್ಮೋಕಿಂಗ್‌ ರೂಮ್‌ನ ಅವಕಾಶ ಮಾಡಿಕೊಡಲಾಗಿದೆ.

ಈ ಬಾರಿ ಸ್ಮೋಕಿಂಗ್‌ ರೂಮ್‌ನಲ್ಲಿ ಒಮ್ಮೆಗೆ ಒಬ್ಬರು ಮಾತ್ರ ಸಿಗರೇಟು ಸೇವನೆ ಮಾಡಬಹುದು ಎಂಬ ನಿಯಮ ಜಾರಿ ಮಾಡಲಾಗಿದೆ. ಆದರೆ, ಈ ನಿಯಮವನ್ನು ಆರಂಭದಿಂದಲೂ ಉಲ್ಲಂಘಿಸಲಾಗುತ್ತಿತ್ತು. ಪದೇಪದೆ ಎಚ್ಚರಿಸಿದರೂ ಅದನ್ನು ಮೀರುತ್ತಿದ್ದುದನ್ನು ಕಂಡ ಬಿಗ್‌ ಬಾಸ್‌ ದೊಡ್ಡ ಶಿಕ್ಷೆಯನ್ನೇ ನೀಡಲು ಮುಂದಾದರು.

Vinay Gowda Michael Cigarette big boss
ವಿನಯ್‌ ಮೈಕೆಲ್‌ ಜತೆಯಾಗಿ ಸಿಗರೇಟು ಸೇದುತ್ತಿರುವುದು.

ವಿನಯ್ ಗೌಡ (Vinay gowda) ಮತ್ತು ಮೈಕೆಲ್ (Michael Ajay) ಒಂದೇ ಬಾರಿಗೆ ಕೋಣೆಗೆ ಹೋಗಿ ಸಿಗರೇಟು ಸೇದಿದ್ದನ್ನು ವಿಡಿಯೊ ಸಹಿತ ಬಯಲು ಮಾಡಿದ ಬಿಗ್‌ ಬಾಸ್‌ ಇದೀಗ ಸ್ಮೋಕಿಂಗ್‌ ರೂಮನ್ನೇ ಬಂದ್‌ ಮಾಡಿದ್ದಾರೆ.

ಗೊತ್ತಿಲ್ಲದೆ ಅಲ್ಲ ವಿನಯ್‌, ಗೊತ್ತಿದ್ದೇ ಉಲ್ಲಂಘನೆ ಮಾಡಿದ್ದೀರಿ

ಈ ರೀತಿ ಬಿಗ್‌ ಬಾಸ್‌ ಆಕ್ರೋಶಿತರಾಗಿದ್ದನ್ನು ಗಮನಿಸಿದ ವಿನಯ್‌ ಗೌಡ ಮತ್ತು ಮೈಕೆಲ್‌ ಇಬ್ಬರೂ ತಪ್ಪಾಯಿತು, ಕ್ಷಮಿಸಿ ಎಂದು ಕೇಳಿಕೊಂಡರು. ‘ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪಾಗಿದೆ, ಕ್ಷಮೆ ಕೇಳುತ್ತೇನೆ. ನಾನು ಇಲ್ಲಿ ಇರುವವರೆಗೂ ಸಿಗರೇಟ್ ಸೇದುವುದಿಲ್ಲ’ ಎಂದು ವಿನಯ್ ಗೌಡ ಕೇಳಿಕೊಂಡರು. ಆಗ ಬಿಗ್‌ ಬಾಸ್‌ ಸಿಟ್ಟಿಗೆದ್ದು, ‘ಗೊತ್ತಿಲ್ಲದೇ ಅಲ್ಲ ವಿನಯ್ ಗೊತ್ತಿದ್ದೂ, ಗೊತ್ತಿದ್ದೂ ತಪ್ಪು ಮಾಡಿದ್ದೀರಿ. ನಾವು ಎಚ್ಚರಿಕೆ ನೀಡಿದ ಮೇಲೆಯೂ ತಪ್ಪು ಮಾಡಿದ್ದೀರಿ’ ಎಂದು‌ ಹೇಳಿದರು.

Vinay Gowda Michael Cigarette big boss

ಅವರಿಬ್ಬರನ್ನು ಬಿಟ್ಟು ಉಳಿದವರಿಗೆ ಶಿಕ್ಷೆ ಕೊಟ್ಟ ಬಿಗ್‌ಬಾಸ್‌

ಹೀಗೆ ನಿಯಮ ಉಲ್ಲಂಘಿಸಿದ್ದಕ್ಕೆ ಅವರಿಬ್ಬರಿಗೆ ಶಿಕ್ಷೆ ಸಿಗಬಹುದು ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಆದರೆ, ಬಿಗ್‌ ಬಾಸ್‌ ಇದನ್ನು ಉಲ್ಟಾ ಮಾಡಿ ಅವರಿಬ್ಬರನ್ನು ಬಿಟ್ಟು ಉಳಿದ ಎಲ್ಲ 13 ಸ್ಪರ್ಧಿಗಳಿಗೆ ಶಿಕ್ಷೆಯನ್ನು ನೀಡಿದರು. ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂದು ಬರೆದಿರುವ ಭಾರವಾದ ಚೀಲವೊಂದನ್ನು ಬೆನ್ನ ಮೇಲೆ ಹೊತ್ತುಕೊಂಡೇ ಓಡಾಡುವ ಶಿಕ್ಷೆ ಇದು. ಶೌಚಾಲಯ ಬಳಸುವಾಗ ಹೊರತುಪಡಿಸಿ (ಮಲಗುವಾಗಲೂ) ಎಲ್ಲಾ ಹೊತ್ತಿನಲ್ಲೂ ಇದನ್ನು ಬೆನ್ನಿಗೆ ಹಾಕಿಕೊಂಡಿರಬೇಕು ಎಂದು ಬಿಗ್‌ ಬಾಸ್‌ ಎಚ್ಚರಿಕೆ ನೀಡಿದ್ದಾರೆ.

Big boss smoking sentence

ಎಲ್ಲರೂ ಯಾಕೆ ಶಿಕ್ಷೆ ಅನುಭವಿಸಬೇಕು ಎಂಬುದಕ್ಕೆ ಬಿಗ್‌ ಬಾಸ್‌ ಸಮರ್ಥನೆ ನೀಡಿದ್ದಾರೆ. ಅದೇನೆಂದರೆ, ನಿಯಮ ಪಾಲನೆ ಎಲ್ಲರ ಕರ್ತವ್ಯ. ಯಾರಾದರೂ ತಪ್ಪು ಮಾಡಿದ್ದಾರೆ, ರೂಲ್ಸ್‌ ಮುರಿಯುತ್ತಿದ್ದಾರೆ ಎನ್ನುವುದು ತಿಳಿದ ಕೂಡಲೇ ಎಚ್ಚರಿಸಬೇಕು. ಆದರೆ, ನೀವೆಲ್ಲರೂ ಗಮನಿಸಿಯೂ ಸುಮ್ಮನಿದ್ದೀರಿ. ಹೀಗಾಗಿ ಶಿಕ್ಷೆ ನಿಮಗೂ ಅನ್ವಯಿಸುತ್ತದೆ ಎಂದು ಎಚ್ಚರಿಸಿದರು.

Big boss smoking sentence

ವಿನಯ್‌ ಗೌಡ, ಮೈಕೆಲ್‌ ಮೇಲೆ ಮನೆ ಮಂದಿಗೆ ಆಕ್ರೋಶ

ಈ ಪ್ರಕರಣ ವಿನಯ್‌ ಗೌಡ ಮತ್ತು ಮೈಕೆಲ್‌ ಮೇಲೆ ಮನೆಯ ಹಲವರು ಸಿಟ್ಟುಗೊಳ್ಳುವಂತಾಗಿದೆ. ತನಿಷಾ ಕುಪ್ಪಂಡ ಅವರಂತೂ ಬೆನ್ನ ಮೇಲೆ ಭಾರ ಹೊತ್ತುಕೊಂಡು ಬಂದವರೇ ನೇರವಾಗಿ ಬಂದು ಥ್ಯಾಂಕ್ಯೂ ವಿನಯ್‌, ಥ್ಯಾಂಕ್ಯೂ ಮೈಕೆಲ್‌ ಎಂದರು. ಇದು ವಿನಯ್‌ ಅವರನ್ನು ಕೆರಳಿಸಿತು. ಆದರೆ, ತನಿಷಾ ಇದಕ್ಕೆ ಸೊಪ್ಪು ಹಾಕಲಿಲ್ಲ. ಹೇಳಬೇಕು ಅನಿಸಿತು ಹೇಳಿದೆ ಎಂದರು.

ಇತ್ತ ಡ್ರೋನ್‌ ಪ್ರತಾಪ್‌ ಕೂಡಾ ಶೌಚಾಲಯದಲ್ಲಿ ಕೌಂಟರ್‌ ಕೊಟ್ಟರು. ಒಂದು ವೇಳೆ ಅವರಲ್ಲದೆ ಬೇರೆಯವರು ರೂಲ್ಸ್‌ ಬ್ರೇಕ್‌ ಮಾಡಿದ್ದರೆ ನಾನು ಈ ಮನೆಯಲ್ಲಿ ಬದುಕಲು ಸಾಧ್ಯವಿತ್ತೇ ಎಂದು ಕೇಳಿದರು. ಇದು ಮುಂದೆ ಡ್ರೋನ್‌ ಮತ್ತು ವಿನಯ್‌ ನಡುವೆ ವಾಗ್ಯುದ್ಧಕ್ಕೆ ಕಾರಣವಾಯಿತು. ಆಗ ಪ್ರತಾಪ್‌ ಮಾತನ್ನು ಸ್ವಲ್ಪ ತಿರುಗಿಸಿ, ನಾನು ಹೇಳಿದ್ದು ಕ್ಯಾಪ್ಟನ್‌ ಶಿಕ್ಷೆ ಕೊಡುತ್ತಿದ್ದರು ಎಂದು ಎಂದರು. ಆಗ ಡ್ರೋನ್‌ ಮತ್ತು ರಕ್ಷಕ್‌ ಬುಲೆಟ್‌ ನಡುವೆ ಬೆಂಕಿ ಹಚ್ಚಿ ತಣ್ಣಗಾಯಿತು.

ಇದನ್ನೂ ಓದಿ: BBK Season 10 : ವರ್ತೂರು ಸಂತೋಷ್‌ ಅರೆಸ್ಟ್‌ ಉಳಿದ ಸ್ಪರ್ಧಿಗಳಿಗೆ ಇನ್ನೂ ಗೊತ್ತೇ ಇಲ್ಲ!

ನೀನೂ ಸಿಗರೇಟ್‌ ಸೇದಿಲ್ವಾ? ಕಾರ್ತಿಕ್‌ ವರ್ಸಸ್‌ ವಿನಯ್‌ ಗೌಡ

ಈ ನಡುವೆ, ಕಾರ್ತಿಕ್‌ ಮಹೇಶ್‌ ಅವರು ಅಡುಗೆ ಮನೆಯಲ್ಲಿದ್ದ ತಮ್ಮ ತಂಡದ ಸದಸ್ಯರ ಬಳಿ ʻವಿನಯ್‌ ಮತ್ತು ಮೈಕೆಲ್‌ ಅವರಿಂದಾಗಿ ಇಡೀ ಮನೆಗೆ ಶಿಕ್ಷೆಯಾಗಿದ್ದನ್ನು ಪ್ರಶ್ನೆ ಮಾಡಬೇಕುʼ ಎಂದು ಕುಮ್ಮಕ್ಕು ನೀಡಿದರು. ಇದನ್ನು ಕೇಳಿಕೊಂಡು ಕೆರಳಿದ ವಿನಯ್‌ ಕಾರ್ತಿಕ್‌ ಮಹೇಶ್‌ ಅವರನ್ನು ತರಾಟೆಗೆತ್ತಿಕೊಂಡರು.

ʻನಾನು ಮಾತ್ರಾನಾ ಸಿಗರೇಟು ಸೇದಿದ್ದು, ನೀನೂ ಜಂಟಿಯಾಗಿ ಸೇದಿಲ್ವಾ? ನಿನ್ನ ವಿಡಿಯೊ ಬಂದಿಲ್ಲ ಎಂಬ ಕಾರಣಕ್ಕೆ ದೊಡ್ಡ ಮನುಷ್ಯನ ಹಾಗೆ ಆಡಬೇಡʼ ಎಂದರು. ಆಗ ಕಾರ್ತಿಕ್‌ ನಾನು ತಪ್ಪು ಮಾಡಿದ್ದೇನೆ ಎಂಬ ಕಾರಣಕ್ಕಾಗಿಯೇ ಮಾತನಾಡುತ್ತಿಲ್ಲ ಎಂದರು. ಆಗ ವಿನಯ್‌ ಯಾಕೆ ಅವರನ್ನೆಲ್ಲ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದೀಯಾ? ಅವರಿಗೆ ಏನು ಮಾಡಬೇಕು ಎಂದು ಗೊತ್ತಿಲ್ವಾ? ಎಂದು ಕೇಳಿದರು.

ಹೀಗೆ ಸಿಗರೇಟಿನಿಂದ ಹುಟ್ಟಿದ ಕಿಡಿ ಇಡೀ ಮನೆಯಲ್ಲಿ ಬೆಂಕಿ ಬೀಳುವಂತೆ ಮಾಡಿದೆ. ಭಾರವಾದ ಚೀಲ ಎಲ್ಲರನ್ನೂ ಜಗ್ಗುತ್ತಿದೆ. ಮಲಗಲಾಗದೆ ಕಷ್ಟಪಡುತ್ತಿರುವ ಸ್ಪರ್ಧಿಗಳು ಬಿಗ್‌ ಬಾಸನ್ನು ಬೇಡಿಕೊಳ್ಳುತ್ತಿದ್ದಾರೆ. ಆದರೆ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು, ಇದಕ್ಕೆ ಕ್ಷಮೆ ಇಲ್ಲ ಎನ್ನುತ್ತಿದ್ದಾರೆ ಬಿಗ್‌ ಬಾಸ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕಿರುತೆರೆ

Netraa Jadhav: ಸೀರಿಯಲ್‌ನಿಂದ ಔಟ್‌ ಆಗುತ್ತಿದ್ದಂತೆ ʻಯಕ್ಷಗಾನʼದಲ್ಲಿ ಶಾರ್ವರಿ ಶೈನ್‌!

Netraa Jadhav: ಶ್ರೀರಸ್ತು ಧಾರಾವಾಹಿಯಲ್ಲಿ ಶಾರ್ವರಿ ಪಾತ್ರ ಹೇಗೆಂದರೆ ಮುಂದೆ ಒಳ್ಳೆಯವರಂತೆ ನಟಿಸುತ್ತ, ಒಳಗೊಳಗೆ ಪಿತೂರಿ ಮಾಡುವ ಪಾತ್ರ. ಇಷ್ಟು ದಿನ ಶಾರ್ವರಿ ದೆಹಲಿಯಲ್ಲಿರುವ ತಮ್ಮ ಕಂಪನಿಯಲ್ಲಿ ಸಮಸ್ಯೆ ಆಗಿತ್ತು ಎಂಬ ಕಾರಣಕ್ಕೆ ಮಾಧವ್ ಬದಲು ತಾನು ಹೋಗಿರುತ್ತಾಳೆ. ಇದೀಗ ಮತ್ತೆ ಮನೆಗೆ ವಾಪಸ್‌ ಆಗಿದ್ದಾಳೆ.ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ (Shreerastu Shubhamastu Serial) ಇಷ್ಟು ದಿನಗಳವರೆಗೂ ಶಾರ್ವರಿ ಪಾತ್ರವನ್ನು ನಟಿ ನೇತ್ರಾ ಜಾಧವ್ (Netra Jadhav) ಅವರು ನಡೆಸಿಕೊಡುತ್ತಿದ್ದರು.

VISTARANEWS.COM


on

Netraa Jadhav Out From Serial perform Yakshagana on the special occasion
Koo

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ (Shreerastu Shubhamastu Serial) ಇಷ್ಟು ದಿನಗಳವರೆಗೂ ಶಾರ್ವರಿ ಪಾತ್ರವನ್ನು ನಟಿ ನೇತ್ರಾ ಜಾಧವ್ (Netra Jadhav) ಅವರು ನಡೆಸಿಕೊಡುತ್ತಿದ್ದರು.ಧಾರಾವಾಹಿಯಲ್ಲಿ ದೆಹಲಿಗೆ ಹೋಗಿ ಬರುತ್ತೇನೆ ಎಂದು ಹೊರಟʻ ಶಾರ್ವರಿʼ, ವಾಪಸ್ ಬಂದಿದ್ದು, ಸ್ವಪ್ನಾ ದೀಕ್ಷಿತ್ ಆಗಿ. ಒಳ್ಳೆಯವಳು ಎನಿಸಿಕೊಂಡು ಕುತಂತ್ರ ಬುದ್ಧಿಯ ಶಾರ್ವರಿ ಪಾತ್ರಕ್ಕೆ ನೇತ್ರಾ ಅವರು ನ್ಯಾಯ ಒದಗಿಸಿಕೊಟ್ಟಿದ್ದರು. ಹೆಸರಿಗೆ ತಕ್ಕಂತೆಯೇ ಅಭಿನಯ ಮಾಡುವಲ್ಲಿ ಇವರದ್ದು ಎತ್ತಿದ ಕೈ. ಸೀರಿಯಲ್​ನಿಂದ ನಟಿ ನಿರ್ಗಮಿಸಿರುವುದು ಬಹಳ ಮಂದಿಗೆ ಬೇಸರ ತಂದಿದೆ.

ಧಾರಾವಾಹಿಯಿಂದ ನಟಿ ಹೊರಗೆ ಹೋಗುತ್ತದ್ದಂತೆ ಮತ್ತೆ ಕಂಡು ಬಂದದ್ದು ಯಕ್ಷಗಾನದ ಗೆಟಪ್‌ನಲ್ಲಿ. ತೆಲಂಗಾಣದಲ್ಲಿ ಅಮ್ಮಂದಿರ ದಿನದಂದು ಈ ಯಕ್ಷಗಾನ ಮಾಡಿರುವುದಾಗಿ ಅವರು ಈ ಫೋಟೋಗಳಿಗೆ ಶೀರ್ಷಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: Shreerastu Shubhamastu Serial: ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಿಂದ ಹೊರನಡೆದ ನೇತ್ರಾ ಜಾಧವ್: ʻಶಾರ್ವರಿʼ ಪಾತ್ರಕ್ಕೆ ಹೊಸ ಎಂಟ್ರಿ ಯಾರು?

ಕರ್ನಾಟಕ ಸಾಂಸ್ಕೃತಿಕ ಪ್ರದರ್ಶನವಾದ ಯಕ್ಷಗಾನವನ್ನು ತೆಲಂಗಾಣದಲ್ಲಿ ತಾಯಂದಿರ ದಿನದ ವಿಶೇಷ ಸಂದರ್ಭದಲ್ಲಿ ʻಸ್ಟಾರ್‌ ಮಾʼದಲ್ಲಿ ಪ್ರದರ್ಶಿಸುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ನೋಡಿದಾಗಲೇ ನಟಿ ಯಕ್ಷಗಾನ ಕಲಾವಿದೆ ಎಂದು ಅಭಿಮಾನಿಗಳಿಗೆ ಗೊತ್ತಾಗಿದ್ದು!

ರಥ ಸಪ್ತಮಿ, ಸುಂದರಿ, ಸಾಗುತ ದೂರ ದೂರ , ಆಕೃತಿ ಹೀಗೆ ಕನ್ನಡ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು ನೇತ್ರಾ.

ಇತ್ತೀಚೆಗೆ ನಡೆದ ʻಜೀ ಕುಟುಂಬ ಅವಾರ್ಡ್ʼ ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಖಳ ನಟಿ ಪ್ರಶಸ್ತಿಯನ್ನು ಕೂಡ ನೇತ್ರಾ ಜಾಧವ್ ಪಡೆದುಕೊಂಡಿದ್ದರು.

Continue Reading

ಕಿರುತೆರೆ

Comedy Khiladigalu: ನನ್ನ ಮಗ ಚಿನ್ನುವನ್ನು ಇದೇ ಕೈಯಲ್ಲಿ ಕಳ್ಕೊಂಡೆ: ಅನುಶ್ರೀ ಭಾವುಕ!

Comedy Khiladigalu: ಈ ಕಾಮಿಡಿ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಐವರು ನಿರೂಪಕರು ಇದ್ದಾರೆ. ನಿರೂಪಕರಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಹೆಸರು ಪಡೆದವರು ಅದೆಷ್ಟೋ ಸ್ಟಾರ್‌ ನಟರ ಜತೆ, ಬೆಳ್ಳಿ ಪರದೆಯಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ. ಮೆಗಾ ಆಡಿಷನ್‌ನಲ್ಲಿ ಈ ಬಾರಿಯೂ ವಿವಿಧ ಭಾಗದ ಬೇರೆ ಬೇರೆ ಕಲಾವಿದರು ಆಯ್ಕೆಯಾಗಿದ್ದಾರೆ. ತಮ್ಮ ವಿಶೇಷ ಪ್ರತಿಭೆಗಳಿಂದ ನೋಡುಗರನ್ನು ರಂಜಿಸಲಿದ್ದಾರೆ.‌

VISTARANEWS.COM


on

Comedy Khiladigalu anchor anushree and Jaggesh Remembers Dogs
Koo

ಬೆಂಗಳೂರು: ʻಜೀ ಕನ್ನಡʼ ವಾಹಿನಿಯ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಅಂದರೆ ಅದುವೇ ʻಕಾಮಿಡಿ ಕಿಲಾಡಿಗಳುʼ ಶೋ. ಈಗಾಗಲೇ ಸೀಸನ್‌ 5 (Comedy Khiladigalu) ಪ್ರೇಕ್ಷಕರ ಮುಂದೆ ಬಂದಾಗಿದೆ. ಈ ಕಾಮಿಡಿ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಐವರು ನಿರೂಪಕರು ಇದ್ದಾರೆ. ನಿರೂಪಕರಾದ ಅನುಶ್ರೀ (anchor anushree) , ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ವಾರ ತಮ್ಮ ಮುದ್ದಿನ ಶ್ವಾನ ಅರ್ಜುನನ್ನು ನೆನದು ಗುಣಗಾನ ಮಾಡಿದ್ದಾರೆ ಜಗ್ಗಣ್ಣ. ಮಾತ್ರವಲ್ಲ ಅನುಶ್ರೀ ಕೂಡ ತಮ್ಮ ಮುದ್ದಿನ ʻಚಿನ್ನುʼ ಶ್ವಾನವನ್ನು ನೆನೆದು ಭಾವುಕರಾದರು.

ಜೀ ವಾಹಿನಿ ಶ್ವಾನ ಪ್ರೀತಿಯನ್ನು ವ್ಯಕ್ತಪಡಿಸಿರುವ ಜಗ್ಗೇಶ್‌ ಅವರ ವಿಡಿಯೊವನ್ನು ಹಂಚಿಕೊಂಡಿದೆ . ‘ಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್ ಅವರು ʻಅರ್ಜುನʼ ಎಂಬ ಹೆಸರಿನ ಸಾಕು ನಾಯಿಯ ಜತೆ ಇರುವ ಫೋಟೊವನ್ನು ತೋರಿಸಿದಾಗ, ʻಇವನ ಹೆಸರನ್ನೇ ನಾನು ನನ್ನ ಮೊಮ್ಮಗನಿಗೆ ಇಟ್ಟಿದ್ದೇನೆ. ಕಾರಣವೆನೆಂದರೆ, ಲ್ಯಾಬ್ರೇಡರ್ ನಾಯಿ ಜಾಸ್ತಿ ದಿನ ಬದುಕುವುದಿಲ್ಲ. ಆದರೆ ಅವನು ಹದಿನಾಲ್ಕುವರೆ ವರ್ಷ ನಮ್ಮ ಜತೆ ಬದುಕಿದ್ದʼ ಎಂದರು.

ಈ ಅರ್ಜುನನ ಪೋಟ್ರೆ ಮಾಡಿ ನಮ್ಮ ಮನೆಯಲ್ಲಿ ಹಾಕಿಕೊಂಡಿದ್ದೇನೆ. ಯಾವಾಗಲಾದರೂ ಬೇಜಾರು ಆದರೆ ಅವನ್ನನ್ನೇ ನೋಡಿಕೊಂಡು ಕೂತ್ತಿರುತ್ತೇನೆ. ಬಹಳ ಖುಷಿ ಅವನನ್ನೇ ನೋಡಿದರೆ. ಅವನನ್ನು ಮಿಸ್‌ ಮಾಡಿಕೊಂಡ ಮೇಲೆ ಸುಮಾರು ಒಂದು ವರ್ಷ ಅತ್ತಿದ್ದೇನೆ. ಅದು ನನ್ನ ಮುಖ ಹತ್ತಿರ ಬಂದು ನೆಕ್ಕಿ ಪ್ರೀತಿ ವ್ಯಕ್ತಪಡಿಸುತ್ತಿತ್ತು. ಡೈನಿಂಗ್‌ ಟೇಬಲ್‌ನಲ್ಲಿ ಕೂತ್ಕೊಂಡು ಊಟ ಮಾಡುತ್ತಿದ್ದ ಎಂದರು. ಇದಾದ ಬಳಿಕ ಅನುಶ್ರೀ ಅವರ ಮುದ್ದಿನ ಶ್ವಾನ ಚಿನ್ನು ಫೋಟೊ ಬಂತು. ಅನುಶ್ರೀ ಚಿನ್ನು ಫೋಟೊ ನೋಡಿ ಭಾವುಕರಾದರು.

ʻʻಚಿನ್ನು ಈಗ ನಮ್ಮ ಜತೆ ಇಲ್ಲ. ಎರಡು ವರ್ಷದ ಹಿಂದೆ ಅವನನ್ನು ನಾವು ಕಳೆದುಕೊಂಡೆವು. ಇದೇ ಕೈಯಲ್ಲಿ ಕಳೆದುಕೊಂಡೆ. ಅವನು ನನ್ನ ಮಗ. ಮತ್ತೆ ಈಗ ಚಿನ್ನು ಹುಟ್ಟಿ ಬಂದಿದ್ದಾನೆ. ಏನು ಎಕ್ಸ್‌ಪೆಕ್ಟ್‌ ಮಾಡದೇ ಫ್ಯೂರ್ ಲವ್ ಕೊಡೋ ಏಕೈಕ ಅದು ಡಾಗ್ಸ್ಎಂದು ಅನುಶ್ರೀ ಹೇಳುತ್ತಾರೆ. ನಂತರ ಮಾತನಾಡಿದ ಜಗ್ಗೇಶ್, ಯಾಕೆಂದರೆ ಈ ಶ್ವಾನಗಳಲ್ಲಿ ಭಗವಂತ ಒಂದು ಶಕ್ತಿಯನ್ನಿಟ್ಟಿದ್ದಾನೆ ಎಂದರು.

ಇದನ್ನೂ ಓದಿ: IPL 2024 : ಕೆಕೆಆರ್​ ಗೆದ್ದ ಬಳಿಕ ವಿವಾದಿತ ಫ್ಲೈಯಿಂಗ್ ಕಿಸ್​ ಕೊಟ್ಟ ಶಾರುಖ್ ಖಾನ್​; ಇದಕ್ಕೂ ಒಂದು ಕಾರಣವಿದೆ

ʻʻಏನು ಅದು ಎಂದರೆ ಪ್ರೀತಿ ಅಕ್ಕರೆ ಊಟ ಕೊಟ್ಟರೆ ಈ ಶ್ವಾನಗಳಿಗೆ ನನ್ನವರು ಎನ್ನುವ ಭಾವನೆ ಬಂದು ಬಿಡತ್ತೆ. ಮನುಷ್ಯ ನಾಯಿ. ದೇವರು ಶ್ವಾನವನ್ನು ಯಾಕಿಟ್ಟ ಅಂದ್ರೆ, ಲೋ ನೋಡು ಅದಕ್ಕೆ ನಾಯಿ ಅಂತ ಕರೀತಾರೆ, ಆದರೆ ಮನುಷ್ಯ ನಾಯಿ ಎಂದು ಹೇಳುತ್ತಾರೆ. ಮನುಷ್ಯನಿಗೆ ನಾವು ಊಟ ಹಾಕು, ದುಡ್ಡುಕೊಡು, ಮನೆ ಮಾಡಿಕೊಡು, ಆಸ್ತಿ ಮಾಡಿಕೊಡು ಎಲ್ಲ ಕೊಡು ನಿಂಗೆ ಹಿಂದೆ ಇಂದ ಚುಚ್ಚಿ ಹೋಗುತ್ತಾನೆ. ಆದರೆ ನಾಯಿಗಳು ಮಾತ್ರ ಹೋಗಲ್ಲ, ಅವು ಮನುಷ್ಯ, ಅದು ಪ್ರೀತಿ, ಪ್ರೀತಿಯ ಸಂಕೇತವೇ ನಾಯಿʼʼ ಎಂದರು.

Continue Reading

ಕಿರುತೆರೆ

Lakshmi Nivasa: ಭಾವನಾ-ಸಿದ್ದೇಗೌಡ್ರು ಮದುವೆ ಆಗೋಯ್ತಾ? ವೈರಲ್‌ ಆಗ್ತಿದೆ ವಿಡಿಯೊ!

Lakshmi Nivasa: ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇರಲಿದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂದು ಕಷ್ಟಪಡುವ ತಂದೆಯ ಕಥೆ-ವ್ಯಥೆಯ ಜೊತೆ ಸಾಕಷ್ಟು ಭಾವನಾತ್ಮಕ ವಿಚಾರಗಳನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗಿದೆ.ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

VISTARANEWS.COM


on

Lakshmi Nivasa siddhe gowdru bhavana wedding scene
Koo

ʻಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ (Lakshmi Nivasa) ಭಾವನಾ ಹಾಗೂ ಸಿದ್ದೇಗೌಡರ ಜೋಡಿ ಪ್ರಮುಖ ಹೈಲೈಟ್‌. ಸಿದ್ದೇಗೌಡರು ಭಾವನ ಮೇಲಿರುವ ಪ್ರೀತಿಯನ್ನು ಹೇಳಲು ಒದ್ದಾಡುತ್ತಿದ್ದಾರೆ. ಆದರೆ ಭಾವನ ಸಿದ್ದೇಗೌಡರನ್ನ ನೋಡಿ ಎಷ್ಟೇ ಕೋಪಿಸಿಕೊಂಡರು, ಸಿದ್ದೇಗೌಡರ ಫೋನ್‌ ಕಾಲ್‌ ಬಂದರೆ ಸಾಕು ಫುಲ್ ಖುಷಿಯಾಗುತ್ತಾಳೆ. ಇದೀಗ ಈ ಜೋಡಿಯ ಮದುವೆ ರೀಲ್ಸ್‌ ವೈರಲ್‌ ಆಗುತ್ತಿದೆ.

ಸೌಪರ್ಣಿಕಾ ಹಾಗೂ ನೀಲೂ ಡಬ್ಬಲ್ ಗೇಮ್ ಶುರು ಮಾಡಿದ್ದರೂ ಈ ಜೋಡಿ ಮದುವೆ ಆಗೋದು ಗ್ಯಾರಂಟಿ ಎನ್ನತ್ತಿದ್ದಾರೆ ಫ್ಯಾನ್ಸ್‌.

ಸಿದ್ದೇಗೌಡರ ಪ್ರೀತಿ ನಿಲೂಗೆ ಮಾತ್ರ ಗೊತ್ತಿದೆ. ಹೀಗಾಗಿ ಸಿದ್ದೇಗೌಡರ ಜತೆ ಪೂರ್ವಿ ಜತೆ ಮದುವೆ ಮಾಡಬೇಕು ಎಂದು ಸೌಪರ್ಣಿಕಾ ಜತೆ ಕೈ ಜೋಡಿಸಿದ್ದಾಳೆ. ಆದರೀಗ ವೈರಲ್‌ ಆಗುತ್ತಿರುವ ವಿಡಿಯೊ ಕಂಡು ಸಿದ್ದೇಗೌಡರು ಭಾವನಾಳನ್ನೇ ಮದುವೆ ಆಗೋದು ಎನ್ನುತ್ತಿದ್ದಾರೆ.

ಇದನ್ನೂ ಓದಿ: Dhruva Sarja: ಬಾಲಿವುಡ್‌ ಸಿನಿಮಾಗೆ ಎಂಟ್ರಿ ಕೊಡ್ತಾರಾ ಧ್ರುವ ಸರ್ಜಾ? ಬಿಗ್‌ ಬಜೆಟ್‌ ಚಿತ್ರದಲ್ಲಿ ಸಹೋದರನ ಪಾತ್ರ?

ಆದರೆ ಇನ್ನೂ ಕೆಲವರು ಭಾವನಾಳಿಗೆ ಇರುವ ಕೋಪ, ಸಿದ್ದೇಗೌಡರ ಭಯ, ಸೌಪರ್ಣಿಕಾ ಕೈವಾಡ ಮಧ್ಯೆ ಮದುವೆಯಾಗೋದು ಡೌಟು. ಇದೆಲ್ಲ ಕನಸು ಆಗಿರಬಹುದು ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ವೈರಲ್‌ ಆಗಿರುವ ವಿಡಿಯೊದಲ್ಲಿ ಸಿದ್ದೇಗೌಡ್ರ ಸುತ್ತ ನಿಂತಿರುವ ಮನೆ ಮಂದಿ ಫುಲ್ ಸೈಲೆಂಟ್ ಆಗಿ ನಿಂತಿದ್ದಾರೆ. ಅಷ್ಟೇ ಅಲ್ಲ ಜವರೇಗೌಡ್ರು ಫುಲ್ ಗರಂ ಆಗಿ ನೋಡುತ್ತಿದ್ದಾರೆ. ಇದೀಗ ಪ್ರೇಕ್ಷಕರು ಈ ಎಪಿಸೋಡ್‌ಗೆ ಕಾತುರದಿಂದ ಕಾದಿದ್ದಾರೆ.

Continue Reading

ಕಿರುತೆರೆ

Amrithadhare Serial: ಭೂಮಿಗೆ ಒಲವಿನುಸಿರ ಕೊಟ್ಟು ಮರುಜನ್ಮ ನೀಡಿದ ಗೌತಮ್‌!

Amrithadhare Serial: ಈಗ ಭೂಮಿಕಾ ಆಸ್ಪತ್ರೆಯಲ್ಲಿ ಇದ್ದಾಳೆ. ಮರು ಜನ್ಮ ನೀಡಿದ ಗೌತಮ್‌ಗೆ ಥ್ಯಾಂಕ್ಸ್‌ ಹೇಳುತ್ತಾಳೆ. ಈ ಜೋಡಿ ಕಂಡು ಪ್ರೇಕ್ಷಕರು ಕೂಡ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರ ಅಭಿನಯಕ್ಕೂ ಮನಸೋತಿದ್ದಾರೆ. ಎಪಿಸೋಡ್‌ ಕಂಡು ತುಂಬಾ ನೋವು ಮತ್ತೆ ಖುಷಿ ಎರಡು ಒಟ್ಟಿಗೆ ಆಯ್ತು ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

Amrithadhare Serial Fans reaction about goutham Bhoomika
Koo

ಧಾರಾವಾಹಿಯಲ್ಲಿ (Amrithadhare Serial) ಪ್ರೇಕ್ಷಕರು ಹೆಚ್ಚಾಗಿ ನಯಸೋದು ನಾಯಕ ನಾಯಕಿ ಒಂದಾಗಬೇಕು ಎಂದು. ಇದೀಗ ಅಮೃತಧಾರೆ ಸೀರಿಯಲ್​ನಲ್ಲಿಯೂ ಅದೇ ರೀತಿ ಆಗಿದ್ದು, ಭೂಮಿಕಾ ಮತ್ತು ಗೌತಮ್​ ಪಾತ್ರಧಾರಿಗಳ ನಟನೆಗೆ ವೀಕ್ಷಕರು ಕಣ್ಣೀರು ಹಾಕಿ, ನೂರುಕಾಲ ಹೀಗೆ ಚೆನ್ನಾಗಿ ಇರಿ ಎಂದು ಹಾರೈಸಿದ್ದಾರೆ.

ಗೌತಮ್‌ನ ಒಲವಿನ ಮಾತು..ಭೂಮಿಕಾಗೆ ಹೊಸ ಉಸಿರು ನೀಡಿದೆ. ಚಿಕ್ಕಮಗಳೂರಿಗೆ ಗೌತಮ್‌ ಮತ್ತು ಭೂಮಿಕಾ ಹೋಗಿದ್ದರು. ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಜಗಳಕ್ಕೆ ಬಂದಿದ್ದರು. ಆದರೆ ಜಮೀನಿನ ವಿಚಾರ ಗೌತಮ್‌ಗೆ ಗೊತ್ತಿಲ್ಲ. ಇದೇ ನೆಪ ಇಟ್ಟುಕೊಂಡು ಶಕುಂತಲಾ ಇಬ್ಬರನ್ನೂ ಹನಿಮೂನ್‌ಗೆ ಕಳುಹಿಸಿರುತ್ತಾಳೆ. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್​. ಅದೇ ರೀತಿ ಭೂಮಿಕಾ ಕಿಡ್‌ನ್ಯಾಪ್‌ ಆಗಿದ್ದಳು.

ಇದನ್ನೂ ಓದಿ: Amrithadhare Serial Kannada: `ಅಮೃತಧಾರೆ’ಸೆಟ್‌ನಲ್ಲಿ ʻನಾನು ನಂದಿನಿʼ ಸ್ಟೆಪ್‌; ಎಲ್ಲೆಲ್ಲೂ  ವಿಕ್ಕಿಪೀಡಿಯಾ ಸಾಂಗ್‌ ಗುಂಗು!

ಅಂತೂ ಗೌತಮ್‌ ಭೂಮಿಕಾ ಹುಡುಕಿ ತನ್ನ  ಉಸಿರು ತುಂಬಿ ಜೀವ ನೀಡಿದ್ದಾನೆ. ಇದಕ್ಕೂ ಮುಂಚೆ ಜೈದೇವ್‌ನು ಭೂಮಿಕಾ ಮುಗಿಸಿದರೆ ರೌಡಿ ಕೆಂಚನಿಗೆ ಹೆಚ್ಚು ಹಣ ನೀಡುವುದಾಗಿ ಹೇಳಿರುತ್ತಾನೆ. ಆದರೆ ಕೆಂಚ ಇನ್ನಷ್ಟು ಹಣ ಸಿಗಬಹುದು ಎಂದು ನೇರವಾಗಿ ಗೌತಮ್‌ಗೆ ಹಣ ಕೇಳುತ್ತಾನೆ. ಹೀಗಾಗಿ ಭೂಮಿಕಾಳನ್ನು ಅಪಹರಿಸುತ್ತಾನೆ.

ಇದೇ ವೇಳೆ ಭೂಮಿಕಾ ಕಿವಿಯೋಲೆ ಮತ್ತು ಬಳೆಗಳನ್ನು ಎಸೆದು ತನ್ನನ್ನು ಈ ಜಾಗದಿಂದ ಕರೆದುಕೊಂಡು ಹೋಗಿರುವ ಬಗ್ಗೆ ಕುರುಹು ಬಿಟ್ಟಿರುತ್ತಾಳೆ. ಗೌತಮ್​ ಮತ್ತು ಆನಂದ್​ ಅದೇ ದಾರಿಯಲ್ಲಿ ಸಾಗುತ್ತಾರೆ. ಕೆಂಚ ಕೊನೆಗೂ ಸಿಕ್ಕಿ ಬಿದ್ದು ಭೂಮಿಕಾಳನ್ನು ಬಚ್ಚಿಟ್ಟಿರುವ ಬಗ್ಗೆ ಹೇಳುತ್ತಾನೆ. ಗೌತಮ್‌ ನೆಲದ ಒಳಗಿನ ಡ್ರಮ್​ನಿಂದ ಭೂಮಿಕಾಳನ್ನು ಹೊರಕ್ಕೆ ತೆಗೆದು ತನ್ನ ಉಸಿರು ನೀಡುತ್ತಾನೆ.

ಈಗ ಭೂಮಿಕಾ ಆಸ್ಪತ್ರೆಯಲ್ಲಿ ಇದ್ದಾಳೆ. ಮರು ಜನ್ಮ ನೀಡಿದ ಗೌತಮ್‌ಗೆ ಥ್ಯಾಂಕ್ಸ್‌ ಹೇಳುತ್ತಾಳೆ. ಈ ಜೋಡಿ ಕಂಡು ಪ್ರೇಕ್ಷಕರು ಕೂಡ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರ ಅಭಿನಯಕ್ಕೂ ಮನಸೋತಿದ್ದಾರೆ. ಎಪಿಸೋಡ್‌ ಕಂಡು ತುಂಬಾ ನೋವು ಮತ್ತೆ ಖುಷಿ ಎರಡು ಒಟ್ಟಿಗೆ ಆಯ್ತು ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

Continue Reading
Advertisement
karnataka weather forecast
ಮಳೆ10 mins ago

Karnataka weather : ಗುಡುಗು ಸಹಿತ ಮಳೆಯೊಂದಿಗೆ 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

Rishab Pant
ಪ್ರಮುಖ ಸುದ್ದಿ40 mins ago

Rishabh Pant : ವಿಶ್ವಕಪ್​​ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ರಿಷಭ್ ಪಂತ್ ವಿಡಿಯೋ ಹಂಚಿಕೊಂಡ ಬಿಸಿಸಿಐ

Wildlife Sanctuaries
ಪರಿಸರ40 mins ago

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

T20 World Cup
ಕ್ರೀಡೆ1 hour ago

T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

namaz on road
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ನಡುರಸ್ತೆಯಲ್ಲೇಕೆ ನಮಾಜ್‌ ಮಾಡಬೇಕು?

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರು ಜಂಟಿ ಹೂಡಿಕೆ ವ್ಯವಹಾರದಿಂದ ದೂರವಿರಿ

Prajwal Revanna Case
ಪ್ರಮುಖ ಸುದ್ದಿ7 hours ago

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

chakravarthy sulibele
ಕರ್ನಾಟಕ8 hours ago

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Cyber Crime
ಪ್ರಮುಖ ಸುದ್ದಿ8 hours ago

Cyber Crime : ಹೆಣ್ಣು ಮಕ್ಕಳ ಫೋಟೋ ಅಶ್ಲೀಲಗೊಳಿಸಿ ಪೋಸ್ಟ್​ ಮಾಡುತ್ತಿದ್ದವನ ಬಂಧನ

Bomb Threat
ಪ್ರಮುಖ ಸುದ್ದಿ9 hours ago

Bomb Threat : ತೆಲಂಗಾಣ ಡಿಸಿಎಂ ಮನೆಗೆ ಬಾಂಬ್​ ಬೆದರಿಕೆ; ಆತಂಕ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ11 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು20 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌