Chahat Khanna: ನಟಿ ಚಾಹತ್‌ ಖನ್ನಾಗೆ 100 ಕೋಟಿ ರೂ. ಲೀಗಲ್‌ ನೋಟಿಸ್‌ ಕಳುಹಿಸಿದ ಸುಕೇಶ್ ಚಂದ್ರಶೇಖರ್‌ ವಕೀಲ - Vistara News

ಕಿರುತೆರೆ

Chahat Khanna: ನಟಿ ಚಾಹತ್‌ ಖನ್ನಾಗೆ 100 ಕೋಟಿ ರೂ. ಲೀಗಲ್‌ ನೋಟಿಸ್‌ ಕಳುಹಿಸಿದ ಸುಕೇಶ್ ಚಂದ್ರಶೇಖರ್‌ ವಕೀಲ

ಸುಖೇಶ್‌ ಚಂದ್ರಶೇಖರ್‌ ವಕೀಲರು ಏಳು ದಿನಗಳೊಳಗೆ ಚಾಹತ್ ಖನ್ನಾ (Chahat Khanna) ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು, ಅಥವಾ ಕಾನೂನು ಕ್ರಮ ಎದುರಿಸಬೇಕು ಎಂದು ಹೇಳಿದ್ದಾರೆ. ಸುಕೇಶ್ ತಿಹಾರ್ ಜೈಲಿನಲ್ಲಿ ತಮಗೆ ಪ್ರಪೋಸ್ ಮಾಡಿದ್ದಾಗಿ  ಹೇಳಿಕೊಂಡಿರುವುದು ಇದೀಗ ಲೀಗಲ್ ನೋಟಿಸ್ ಪಡೆಯಲು ಕಾರಣವಾಗಿದೆ.

VISTARANEWS.COM


on

Chahat Khanna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾನಹಾನಿ ಹೇಳಿಕೆ ನೀಡಿದ ಆರೋಪದಡಿ ಸುಕೇಶ್ ಚಂದ್ರಶೇಖರ್‌ ಅವರ ವಕೀಲರು ಈಗ ಕಿರುತೆರೆ ನಟಿ ಚಾಹತ್‌ ಖನ್ನಾಗೆ (Chahat Khanna) 100 ಕೋಟಿ ರೂಪಾಯಿಗಳ ಕಾನೂನು ನೋಟಿಸ್‌ ಕಳುಹಿಸಿದ್ದಾರೆ. ಚಾಹತ್‌ ನೀಡಿರುವ ಹೇಳಿಕೆಯಿಂದ ಸುಕೇಶ್ ಮಾನ ಹಾನಿಯಾಗಿದೆ ಇದರಿಂದ ಭರಿಸಲಾಗದಷ್ಟು ನಷ್ಟ ಆಗಿದೆ ಎಂದಿದ್ದಾರೆ. 

ಸುಕೇಶ್ ಚಂದ್ರಶೇಖರ್‌ ವಕೀಲರು ಏಳು ದಿನಗಳೊಳಗೆ ಚಾಹತ್ ಖನ್ನಾ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು, ಅಥವಾ ಕಾನೂನು ಕ್ರಮ ಎದುರಿಸಬೇಕು ಎಂದು ಹೇಳಿದ್ದಾರೆ. ಸುಕೇಶ್ ತಿಹಾರ್ ಜೈಲಿನಲ್ಲಿ ತಮಗೆ ಪ್ರಪೋಸ್ ಮಾಡಿದ್ದಾಗಿ  ಹೇಳಿಕೊಂಡಿರುವುದು ಇದೀಗ ಲೀಗಲ್ ನೋಟಿಸ್ ಪಡೆಯಲು ಕಾರಣವಾಗಿದೆ.

ಆಗಿದ್ದೇನು?

ಕಿರುತೆರೆ ನಟಿ ಚಾಹತ್‌ ಖನ್ನಾ ಹಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಸುಕೇಶ್ ಚಂದ್ರಶೇಖರ್‌ ತಿಹಾರ್‌ ಜೈಲಿನಲ್ಲಿಯೇ ಮಂಡಿಯೂರಿ ತನಗೆ ಮದುವೆ ಪ್ರಪೋಸ್‌ ಮಾಡಿದ್ದಾಗಿ ನಟಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

“2018ರ ಮೇ ತಿಂಗಳಲ್ಲಿ ನನಗೆ ಫೋನ್‌ ಕರೆಯೊಂದು ಬಂದಿತು. ದೆಹಲಿಯ ಶಾಲೆಯೊಂದರಲ್ಲಿ ಕಾರ್ಯಕ್ರಮವಿದ್ದು, ಅದರಲ್ಲಿ ತೀರ್ಪುಗಾರ್ತಿಯಾಗಿ ಭಾಗವಹಿಸಲು ಕೇಳಿಕೊಂಡರು. ಅದಕ್ಕೆ ನಾನು ಒಪ್ಪಿ, ಮೇ 18ರಂದು ದೆಹಲಿಗೆ ತೆರಳಿದೆ. ಮುಂಬೈನ ವಿಮಾನ ನಿಲ್ದಾಣದಲ್ಲಿ ಏಂಜೆಲ್‌ ಖಾನ್‌ ಹೆಸರಿನವರು ದೆಹಲಿಯ ಕಾರ್ಯಕ್ರಮಕ್ಕೆ ಬರುವವರಾಗಿ ಹೇಳಿ ನನ್ನೊಂದಿಗೆ ಸೇರಿಕೊಂಡು ದೆಹಲಿಗೆ ಬಂದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ನಾವಿಬ್ಬರು ಶಾಲೆಗೆ ತೆರಳಲೆಂದು ಕಾರು ಹತ್ತಿದೆವು. ಆದರೆ ಸ್ವಲ್ಪ ಸಮಯದಲ್ಲೇ ಏಂಜೆಲ್‌ ಅವರು ಕಾರು ನಿಲ್ಲಿಸಿ, ಈ ಕಾರನ್ನು ಶಾಲೆಯೊಳಗೆ ಬಿಡುವುದಿಲ್ಲವಾದ್ದರಿಂದ ನಾವು ಕಾರು ಬದಲಿಸಬೇಕೆಂದು ಹೇಳಿ ಬೇರೊಂದು ಕಾರಿನಲ್ಲಿ ನನ್ನನ್ನು ಕರೆದುಕೊಂಡು ಹೋದರು. ಆ ಕಾರು ಶಾಲೆಗೆ ಹೋಗದೆ ತಿಹಾರ್‌ ಜೈಲಿಗೆ ಹೋಯಿತು” ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: Chahatt Khanna: ಇಲ್ಲಿವೆ ಚಾಹತ್‌ ಖನ್ನಾ ಮಸ್ತ್‌ ಫೋಟೊ

ಚಾಹತ್‌ ಖನ್ನಾ

ಘಟನೆಯ ಬಗ್ಗೆ ವಿವರಣೆ ಮುಂದುವರಿಸಿರುವ ನಟಿ, “ಜೈಲಿಗೆ ಏಕಾಗಿ ಬಂದೆವು ಎಂದು ಕೇಳಿದಾಗ ಅವರು ಶಾಲೆಗೆ ಜೈಲಿನ ಮೂಲಕವೇ ಹೋಗಬೇಕು ಎಂದು ಹೇಳಿದರು. ನನಗೆ ನಾನು ಯಾವುದೋ ಬಲೆಯಲ್ಲಿ ಸಿಲುಕಿದ್ದೇನೆ ಎನ್ನುವ ವಿಚಾರ ಗೊತ್ತಾಯಿತು. ಕಾರಿಂದ ಇಳಿದ ತಕ್ಷಣ ನಮ್ಮನ್ನು ಯಾವುದೋ ಕೋಣೆಯೊಳಗೆ ಕರೆದೊಯ್ಯಲಾಯಿತು. ಆ ಕೋಣೆಯಲ್ಲಿ ಹಲವು ಲ್ಯಾಪ್‌ಟಾಪ್‌ಗಳು, ವಾಚ್‌, ಫ್ರಿಡ್ಜ್‌, ಸೋಫಾ, ಬ್ರಾಂಡೆಡ್‌ ಬ್ಯಾಗ್‌ಗಳು ಸೇರಿ ಐಷಾರಾಮಿ ವಸ್ತುಗಳೆಲ್ಲವೂ ಇದ್ದವು” ಎಂದು ಅವರು ವಿವರಿಸಿದ್ದಾರೆ.

“ಅಲ್ಲಿದ್ದ ಒಬ್ಬ ವ್ಯಕ್ತಿ ತಮ್ಮನ್ನು ತಾವು ಶೇಖರ್‌ ರೆಡ್ಡಿ ಎಂದು ಪರಿಚಯ ಮಾಡಿಕೊಂಡರು. ಫ್ಯಾನ್ಸಿ ಡ್ರೆಸ್‌, ಪರ್ಫ್ಯೂಮ್‌, ಬಂಗಾರದ ಸರ ಎಲ್ಲವನ್ನೂ ತೊಟ್ಟಿದ್ದ ಅವರು ತಮ್ಮನ್ನು ತಾವು ಜಯಲಲಿತಾ ಅಳಿಯ ಹಾಗೂ ದಕ್ಷಿಣ ಭಾರತದ ಟಿವಿ ವಾಹಿನಿಯೊಂದರ ಮಾಲೀಕ ಎಂದು ಪರಚಯಿಸಿಕೊಂಡರು. ನನ್ನ ದೊಡ್ಡ ಅಭಿಮಾನಿಯಾಗಿದ್ದು, ಹಲವು ವರ್ಷಗಳಿಂದ ನನ್ನನ್ನು ಭೇಟಿಯಾಗಲು ಕಾಯುತ್ತಿದ್ದಾಗಿ ತಿಳಿಸಿದರು. ನಂತರ ಮೊಣಕಾಲೂರಿ ʼನನ್ನನ್ನು ಮದುವೆಯಾಗಿʼ ಎಂದು ಕೇಳಿಕೊಂಡರು. ನನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿದಾಗ, ʼನಿಮಗೆ ನಿಮ್ಮ ಪತಿ ಸರಿಯಾಗುವುದಿಲ್ಲ, ನಾನೇ ನಿಮಗೆ ಸರಿ. ನಿಮ್ಮಿಬ್ಬರ ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆʼ ಎಂದು ಹೇಳಿದರು. ನಾನು ಜೋರಾಗಿ ಅಳಲಾರಂಭಿಸಿದೆ” ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ: Sukesh Chandrashekar: ತಿಹಾರ್‌ ಜೈಲಿನಲ್ಲೇ ನಟಿಗೆ ಮಂಡಿಯೂರಿ ಪ್ರಪೋಸ್‌ ಮಾಡಿದ್ದ ವಂಚಕ ಸುಕೇಶ್‌

“ಜೈಲಿನಿಂದ ವಿಮಾನ ನಿಲ್ದಾಣಕ್ಕೆ ಬರುವಾಗ ಏಂಜೆಲ್‌ ನನಗೆ ಗಿಫ್ಟ್‌ ಎಂದು ಎರಡು ಲಕ್ಷ ರೂ. ಕೊಟ್ಟರು. ಹಾಗೆಯೇ ಅವರ ಕೈನಲ್ಲಿ ಇದ್ದ ವರ್ಸೇಸ್ ವಾಚ್ ಅನ್ನೂ ಕೊಟ್ಟರು” ಎಂದು ನಟಿ ಹೇಳಿದ್ದಾರೆ. ಒಂದೂವರೆ ವರ್ಷದ ಹಿಂದೆ ಸುಕೇಶ್‌ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬಂದ ನಂತರವೇ ನಟಿಗೆ ತಾನು ಜೈಲಿನಲ್ಲಿ ಸುಕೇಶ್‌ನನ್ನು ಭೇಟಿ ಮಾಡಿದ್ದು ಎಂದು ಗೊತ್ತಾಗಿದ್ದಾಗಿ ತಿಳಿಸಿದ್ದಾರೆ. ಹಾಗೂ ಆ ಏಂಜೆಲ್‌ ಖಾನ್‌ ಮತ್ತಿನ್ಯಾರೂ ಅಲ್ಲ ಪಿಂಕಿ ಇರಾನಿಯೇ ಎನ್ನುವ ವಿಚಾರ ಆಗ ತಿಳಿಯಿತು ಎಂದು ನಟಿ ಮಾಹಿತಿ ಕೊಟ್ಟಿದ್ದಾರೆ. ಸುಕೇಶ್‌ ಪ್ರಕರಣದಲ್ಲಿ ಬಾಲಿವುಡ್‌ ನಟಿಯರಾದ ಜಾಕ್ವೆಲಿನ್‌ ಫರ್ನಾಂಡಿಸ್‌, ನೋರಾ ಫತೇಹಿ, ಚಾಹತ್‌ ಖನ್ನಾ ಸೇರಿ ಅನೇಕರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕಿರುತೆರೆ

Kavitha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿʻಲಕ್ಷ್ಮೀಬಾರಮ್ಮʼ ಧಾರಾವಾಹಿ ಖ್ಯಾತಿಯ ಜೋಡಿ

Kavitha Gowda: ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಜೋಡಿ ಸಾಕಷ್ಟು ಮನೆಮಾತಾಗಿತ್ತು. ಸೀರಿಯಲ್, ಸಿನಿಮಾ, ನಟನೆಯಲ್ಲಿ ಬ್ಯುಸಿಯಿರುವ ಜೋಡಿ ಇದೀಗ ಸಂಭ್ರಮದ ವಿಚಾರವನ್ನು ಹಂಚಿಕೊಂಡಿದೆ. ಇಬ್ಬರೂ ಲಾಕ್‌ಡೌನ್ ಸಮಯಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕವಿತಾ ಗೌಡ ಹಿರಿತೆರೆಯಲ್ಲಿ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಗೋವಿಂದಾ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಸೇರಿದಂತೆ ಚಿತ್ರಗಳಲ್ಲಿ ನಟಿಸಿದ್ದರು.

VISTARANEWS.COM


on

Kavitha Gowda chandan expected First Child
Koo

ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಮತ್ತು ಕವಿತಾ (Actor Chandan ) ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಜೋಡಿ ಸಾಕಷ್ಟು ಮನೆಮಾತಾಗಿತ್ತು. ಸೀರಿಯಲ್, ಸಿನಿಮಾ, ನಟನೆಯಲ್ಲಿ ಬ್ಯುಸಿಯಿರುವ ಜೋಡಿ ಇದೀಗ ಸಂಭ್ರಮದ ವಿಚಾರವನ್ನು ಹಂಚಿಕೊಂಡಿದೆ. 

ಇನ್‌ಸ್ಟಾ ಪೋಸ್ಟ್‌ ಮೂಲಕ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ.

ಇಬ್ಬರೂ ಲಾಕ್‌ಡೌನ್ ಸಮಯಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: Lakshmi Baramma Serial: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಿಂದ ಹೊರಬಂದ್ರಾ ಕೀರ್ತಿ ಪಾತ್ರಧಾರಿ? ಸೀರಿಯಲ್‌ ನೋಡಲ್ಲ ಅಂದ್ರು ಫ್ಯಾನ್ಸ್‌!

ಕವಿತಾ ಗೌಡ ಹಿರಿತೆರೆಯಲ್ಲಿ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಗೋವಿಂದಾ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಸೇರಿದಂತೆ ಚಿತ್ರಗಳಲ್ಲಿ ನಟಿಸಿದ್ದರು. ಪತಿ ಚಂದನ್ ಗೌಡ ಜೊತೆ ಹೋಟೆಲ್ ಉದ್ಯಮದಲ್ಲೂ ಸಕ್ರಿಯರಾಗಿದ್ದಾರೆ. 

ಕವಿತಾ ಗೌಡ ಹಾಗೂ ಚಂದನ್‌ ಒಬ್ಬರನ್ನೊಬ್ಬರು ಪ್ರೀತಿಸಿ, ಹಸೆಮಣೆ ಏರಿದ್ದ ಜೋಡಿ ನಟನೆ ಮತ್ತು ಉದ್ಯಮ ಎರಡಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಸಾಗುತ್ತಿದ್ದಾರೆ. ಕವಿತಾ ಗೌಡ ಕೆಲ ವರ್ಷಗಳ ಕಾಲ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಟಿಸಿ, ನಂತರ ‘ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.ಅತ್ತ ನಟಿ ಕವಿತಾ ಗೌಡ ಅವರು ಕೂಡ ತಮಿಳಿನ ‘ಅನ್ಬೇ ಶಿವಂ’ ಧಾರಾವಾಹಿಯಲ್ಲಿ ನಟಿಸುವುದರ ಜೊತೆಗೆ ಒಂದಷ್ಟು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ.

Continue Reading

ಕಿರುತೆರೆ

Bhavya Gowda: ಡ್ರಿಪ್ಸ್‌ ಹಾಕಿದ್ದರೂ ಶೂಟಿಂಗ್‌ಗೆ ಬರಲೇ ಬೇಕು ಅಂದ್ರು ಎಂದ ʻಗೀತಾ ಧಾರಾವಾಹಿʼ ನಟಿ ಭವ್ಯಾ ಗೌಡ!

Bhavya Gowda: 2020 ಜನವರಿ 6ರಂದು ‘ಗೀತಾ’ ಧಾರಾವಾಹಿ ಪ್ರಸಾರವನ್ನು ಆರಂಭಿಸಿತ್ತು. ಕೆ ಎಸ್ ರಾಮ್‌ಜೀ ಅವರು ಗಗನಾ ಎಂಟರ್‌ಪ್ರೈಸಸ್‌ನಡಿ ಈ ಧಾರಾವಾಹಿಯ ನಿರ್ಮಾಣ ಮಾಡಿದ್ದರು. ಗೀತಾ ಧಾರಾವಾಹಿಯು 2022ರಲ್ಲಿ ಬೆಂಗಾಳಿ ಭಾಷೆಗೆ ‘ಫೆರಾರಿ ಸೋಮ ಫೆರಾರಿ ಮನ್’ ಆಗಿ ಪ್ರಸಾರ ಆಗುತ್ತಲಿದೆ. ಇದೀಗ ನಟಿ ಭವ್ಯಾ ಗೌಡ(Bhavya Gowda)ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಶೂಟಿಂಗ್ ಸಮಯದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.

VISTARANEWS.COM


on

Bhavya Gowda shares her experiences during shooting
Koo

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʻಗೀತಾʼ ಧಾರಾವಾಹಿ ಖ್ಯಾತಿಯ ನಟಿ ಭವ್ಯಾ ಗೌಡ(Bhavya Gowda)ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಶೂಟಿಂಗ್ ಸಮಯದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.

ʻʻರೀಲ್ಸ್‌ ಮಾಡೋವಷ್ಟು ಸುಲಭವಲ್ಲ ಶೂಟಿಂಗ್. ಯಾವುದೋ ವಿಡಿಯೊಗೆ ಲಿಪ್‌ ಸಿಂಕ್‌ ಮಾಡೋದು ಬೇರೆ. ಆದರೆ ನಟನೆಯಲ್ಲಿ ಭಾವನೆಗಳನ್ನು ತೋರಿಸಬೇಕು. ವಾಯ್ಸ್ ಓವರ್ ಕೊಡಬೇಕು. ಹೀಗೆ ಸಾವಿರ ಜವಾಬ್ದಾರಿಗಳು ನಮ್ಮ ಮೇಲಿರುತ್ತದೆʼʼಎಂದರು ಭವ್ಯಾ.

ಇದನ್ನೂ ಓದಿ: Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

ದುಡಿಮೆ ಹಿಂದಿನ ಕಷ್ಟ ಯಾರಿಗೂ ಗೊತ್ತಿಲ್ಲ. ಒಂದೊಮ್ಮೆ ತುಮಕೂರಿನಲ್ಲಿ ಫುಡ್ ಪಾಯಿಸನ್ ಆಗಿತ್ತು.ಡಾಕ್ಟರ್ ಬಳಿ ಹೋಗಿ ಡ್ರಿಪ್ಸ್ ಹಾಕಿಸಿಕೊಂಡು ಬಂದಿದ್ದೆ.ಡ್ರಿಪ್ಸ್ ಹಾಕಿಸಿಕೊಂಡಿದ್ದೇನೆ ಶೂಟಿಂಗ್ ಕಷ್ಟ ಎಂದರೂ ಅದೆಲ್ಲ ನಮಗೆ ಗೊತ್ತಿಲ್ಲ ಬನ್ನಿ ಎಂದರು. ಆಗ ಹೋಗಲೇ ಬೇಕಾಯಿತು.

ಗೀತಾ ಧಾರಾವಾಹಿ ಆರಂಭದಲ್ಲಿ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿತ್ತು. ಧಾರಾವಾಹಿ ಬಿಡುತ್ತೇನೆ ಎಂದು ಭವ್ಯಾ ಅವರು ನಿರ್ದೇಶಕರ ಬಳಿ ಅದೆಷ್ಟೋ ಬಾರಿ ಹೇಳಿದ್ದೂ ಇದೆ ಅಂತೆ. ಕೊನೆಗೆ ನಿರ್ದೇಶಕರ ಪಾಸಿಟಿವ್‌ ಮಾತುಗಳೇ ನನ್ನನ್ನು ಪ್ರೋತ್ಸಾಹಿಸಿದ್ದು ಎಂದು ನಟಿ ಹೇಳಿಕೊಂಡಿದ್ದಾರೆ.

2020 ಜನವರಿ 6ರಂದು ‘ಗೀತಾ’ ಧಾರಾವಾಹಿ ಪ್ರಸಾರವನ್ನು ಆರಂಭಿಸಿತ್ತು. ಕೆ ಎಸ್ ರಾಮ್‌ಜೀ ಅವರು ಗಗನಾ ಎಂಟರ್‌ಪ್ರೈಸಸ್‌ನಡಿ ಈ ಧಾರಾವಾಹಿಯ ನಿರ್ಮಾಣ ಮಾಡಿದ್ದರು.

Continue Reading

ಕಿರುತೆರೆ

Vijay Deverakonda: ಸಿನಿಮಾಗಳ ಸತತ ಸೋಲಿನ ಬೆನ್ನಲ್ಲೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ ವಿಜಯ್‌ ದೇವರಕೊಂಡ!

Vijay Deverakonda: ವಿಜಯ್ ದೇವರಕೊಂಡ (Vijay Deverakonda) ಮತ್ತು ಮೃಣಾಲ್ ಠಾಕೂರ್ ( Mrunal Thakur) ಅಭಿನಯದ ಚಿತ್ರ ʻಫ್ಯಾಮಿಲಿ ಸ್ಟಾರ್ʼ ಭಾರತದಲ್ಲಿ ಸಾಧಾರಣ ಓಪನಿಂಗ್‌ (Family Star Box Office) ಪಡೆದುಕೊಂಡಿತ್ತು. ಏಪ್ರಿಲ್ 26 ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗಿತ್ತು.ಇದೀಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ ವಿಜಯ್‌ ದೇವರಕೊಂಡ.ತೆಲುಗು ನಟ ವಿಜಯ್ ದೇವರಕೊಂಡ ಅವರು ದಿಲ್ ರಾಜು ಅವರೊಂದಿಗೆ ಹೈ-ಆಕ್ಟೇನ್ ಆಕ್ಷನ್ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ.

VISTARANEWS.COM


on

Vijay Devarakonda announces new film
Koo

ಬೆಂಗಳೂರು: ʻಲೈಗರ್‌ʼ ಸಿನಿಮಾ ಸೋಲಿನ ಬಳಿಕ ನಟ ವಿಜಯ್‌ ದೇವರಕೊಂಡ (Vijay Deverakonda) ಯಾವ ಸಿನಿಮಾವನ್ನು ಮಾಡಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಇದಾದ ಬಳಿ ಸಾಕಷ್ಟು ಸಿನಿಮಾಗಳು ತೆರೆ ಕಂಡವು. ʻಖುಷಿʼ ಹಾಗೂ ʻಫ್ಯಾಮಿಲಿ ಸ್ಟಾರ್‌ʼ ಸಿನಿಮಾಗಳು ರಿಲೀಸ್‌ ಆದರೂ ತಕ್ಕ ಮಟ್ಟಿಗೆ ಸಕ್ಸೆಸ್‌ ಏನು ಆಗಿಲ್ಲ. ಇದೀಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ ವಿಜಯ್‌ ದೇವರಕೊಂಡ.

ತೆಲುಗು ನಟ ವಿಜಯ್ ದೇವರಕೊಂಡ ಅವರು ದಿಲ್ ರಾಜು ಅವರೊಂದಿಗೆ ಹೈ-ಆಕ್ಟೇನ್ ಆಕ್ಷನ್ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಈ ಸಿನಿಮಾಗೆ ರವಿ ಕರಣ್ ಕೋಲಾ (Ravi Kiran Kola) ನಿರ್ದೇಶನವಿದೆ. ರವಿಕಿರಣ್ ಕೋಲಾ ಅವರು ‘ರಾಜಾ ವರು ರಾಣಿ ಗಾರು’ (Raja Vaaru Rani Gaaru) ಮತ್ತು ‘ಅಶೋಕ ವನಮ್ಲೋ ಅರ್ಜುನ ಕಲ್ಯಾಣಂ'(Ashoka Vanamlo Arjuna Kalyanam) ಸಿನಿಮಾಗೆ ಹೆಸರುವಾಸಿಯಾಗಿದ್ದಾರೆ. ಚಿತ್ರದ ಶೀರ್ಷಿಕೆ, ತಾರಾಗಣ ಮತ್ತು ಬಿಡುಗಡೆಯ ದಿನಾಂಕ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ವಿಜಯ್ ದೇವರಕೊಂಡ (Vijay Deverakonda) ಮತ್ತು ಮೃಣಾಲ್ ಠಾಕೂರ್ ( Mrunal Thakur) ಅಭಿನಯದ ಚಿತ್ರ ʻಫ್ಯಾಮಿಲಿ ಸ್ಟಾರ್ʼ ಭಾರತದಲ್ಲಿ ಸಾಧಾರಣ ಓಪನಿಂಗ್‌ (Family Star Box Office) ಪಡೆದುಕೊಂಡಿತ್ತು. ಏಪ್ರಿಲ್ 26 ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗಿತ್ತು.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಜತೆಗಿನ ಸಂಬಂಧ ಒಪ್ಪಿಕೊಂಡ್ರಾ ರಶ್ಮಿಕಾ ಮಂದಣ್ಣ?

ಕೆಲವರು ಇದು ಸರಾಸರಿಗಿಂತ ಕಡಿಮೆ ಚಿತ್ರ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಈ ಚಿತ್ರಕ್ಕಿಂತ ಧಾರಾವಾಹಿ ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದರು. ಸಂಗೀತ ಅಷ್ಟಾಗಿ ಆಕರ್ಷಣೀಯವಾಗಿಲ್ಲ ಎಂಬ ಮಾತು ಕೂಡ ಇದೆ. ಈ ಸಿನಿಮಾ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ, ಹೊಸತನವೇನೂ ಇಲ್ಲ ಎಂದಿದ್ದರು.

ಹಾಯ್ ನಾನ್ನʼ (2023), ʻಸೀತಾ ರಾಮಂʼ (2022)ಬಳಿಕ ಮೃಣಾಲ್ ಠಾಕೂರ್ ಅವರ ಮೂರನೇ ತೆಲುಗು ಚಿತ್ರ ಇದು. ʻಫ್ಯಾಮಿಲಿ ಸ್ಟಾರ್ʼ ಸಿನಿಮಾವನ್ನು ಪರುಶುರಾಮ್ ನಿರ್ದೇಶಿಸಿದ್ದಾರೆ. ಈ ಮುಂಚೆ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʻಗೀತ ಗೋವಿಂದಂʼ (2018) ಸಿನಿಮಾಗೆ ನಿರ್ದೇಶನ ಮಾಡಿದ್ದರು.

Continue Reading

ಕಿರುತೆರೆ

Amruthadhare Serial : ಐಸ್ ಥರ ಕರಗಿಹೋಯ್ತು ಭೂಮಿಕಾ-ಗೌತಮ್‌ ಮುನಿಸು!

Amruthadhare Serial : ಭೂಮಿಕಾ ಮತ್ತು ಗೌತಮ್‌ ನಡುವೆ ಶಕುಂತಲ ಕುತಂತ್ರ ವರ್ಕೌಟ್‌ ಆಗಿತ್ತು. ಯಾವಾಗ ಗೌತಮ್‌ ಸ್ನೇಹಿತ ಆನಂದ್‌ ಭೂಮಿಕಾಗೆ ತಪ್ಪಿನ ಅರಿವು ಮನವರಿಕೆ ಮಾಡಿಕೊಟ್ಟರೋ ಆಗಲೇ ಭೂಮಿಕಾ ಗಂಡನ ಜತೆ ರಾಜಿ ಮಾಡಿಕೊಳ್ಳುತ್ತಾಳೆ. ರಾತ್ರಿ ಮಲಗುವಾಗ ಭೂಮಿಕಾ ತಪ್ಪಿನ ಅರಿವಾಗಿ ಗೌತಮ್‌ ಬಳಿ ಕ್ಷಮೆ ಕೇಳುತ್ತಾಳೆ. ಬಿಕ್ಕಿ ಬಿಕ್ಕಿ ಅಳುತ್ತಾಳೆ. ಗೌತಮ್‌ ಕೂಡ ಸಮಾಧಾನ ಮಾಡಿ, ನಿಮ್ಮ ಮುಖದಲ್ಲಿ ನಗು ಇದ್ದರೆ ಚೆಂದ ಎಂದು ಭೂಮಿಕಾಗೆ ಸಮಾಧಾನ ಮಾಡುತ್ತಾರೆ.

VISTARANEWS.COM


on

Amruthadhare Serial Bhumika-Gautham angryness has melted like ice
Koo

ಬೆಂಗಳೂರು: ಜೀ ಕನ್ನಡ ಧಾರಾವಾಹಿಯಲ್ಲಿ ʻಅಮೃತಧಾರೆʼ (Amruthadhare Serial) ಪ್ರಸಾರ ಕಾಣುತ್ತಿದೆ. ಈಗಾಗಲೇ ಭೂಮಿಕಾ ಮತ್ತು ಗೌತಮ್‌ ನಡುವೆ ಬಿರುಕು ಉಂಟಾಗಿ ಈಗ ಐಸ್ ಥರ ಕೋಪ‌ ಕರಗಿ ರಾಜಿ ಕೂಡ ಮಾಡಿಕೊಂಡಿದ್ದಾರೆ. ಭೂಮಿಕಾ ಮತ್ತು ಗೌತಮ್‌ ನಡುವೆ ಶಕುಂತಲ ಕುತಂತ್ರ ವರ್ಕೌಟ್‌ ಆಗಿತ್ತು. ಯಾವಾಗ ಗೌತಮ್‌ ಸ್ನೇಹಿತ ಆನಂದ್‌ ಭೂಮಿಕಾಗೆ ತಪ್ಪಿನ ಅರಿವು ಮನವರಿಕೆ ಮಾಡಿಕೊಟ್ಟರೋ ಆಗಲೇ ಭೂಮಿಕಾ ಗಂಡನ ಜತೆ ರಾಜಿ ಮಾಡಿಕೊಳ್ಳುತ್ತಾಳೆ.

ಗೌತಮ್‌ ತಮ್ಮ ಪಾರ್ಥ ಹಾಗೂ ಭೂಮಿಕಾ ತಂಗಿ ಅಪ್ಪಿ ಒಬ್ಬರಿಗೊಬ್ಬರು ಪ್ರೀತಿಸುತ್ತಿರುವುದು ಗೊತ್ತಿರುವ ವಿಚಾರ. ಈಗಾಗಲೇ ಭೂಮಿಗೆ ಈ ಪ್ರೀತಿ ವಿಚಾರ ಗೊತ್ತಾಗಿ ಪಾರ್ಥನಿಗೆ ಬುದ್ಧಿವಾದ ಹೇಳಿದ್ದಾರೆ. ಪ್ರೀತಿ ಎಂದರೆ ಜವಬ್ಧಾರಿ ಎಂದು ಪಾರ್ಥಗೆ ತಿಳಿ ಹೇಳಿದ್ದಾಳೆ ಭೂಮಿಕಾ. ಅತ್ತ ಗೌತಮ್‌ ತಾಯಿ ಶಕುಂತಲಾ ಮಗ ಮತ್ತು ಸೊಸೆ ಒಂದಾಗಬಾರದೆಂದು ಹೊಂಚು ಹಾಕುತ್ತಿದ್ದಾಳೆ.

ಭೂಮಿಕಾಗೆ ಕೋಚಿಂಗ್‌ ಸೆಂಟರ್‌ನಲ್ಲಿ ಪಾಠ ಮಾಡಬೇಕು ಎಂಬ ಆಸೆ. ಗೌತಮ್‌ ಪರ್‌ಮಿಶನ್‌ ಸಿಕ್ಕ ಬಳಿಕ ಕೋಚಿಂಗ್‌ಗೆ ಬರುತ್ತಾರೆ. ಅಲ್ಲಿ ಆದದ್ದೇ ಬೇರೆ. ಅಲ್ಲಿ ಹೋಗುತ್ತಿದ್ದಂತೆ ಬೋರ್ಡ್‌ ಮೆಂಬರ್‌ ಆಗಿ ಆಯ್ಕೆ ಮಾಡಿರುತ್ತಾರೆ. ಇದರಿಂದ ಸಹುದ್ಯೋಗಿಗಳು ಚುಚ್ಚಿ ಮಾತನಾಡಿದ್ದಾರೆ. ಗೌತಮ್ ಹೆಂಡತಿಗೆ ಸುಲಭವಾಗಿ ಬೋರ್ಡ್ ಮೆಂಬರ್ ಪಟ್ಟ ಸಿಕ್ಕಿದೆ. ಟ್ಯಾಲೆಂಟ್ ಗಿಂತಲೂ ಹಣಕ್ಕೆ ಹೆಚ್ಚು ಆದ್ಯತೆ ಎಂದಿದ್ದಾರೆ. ಇದೆಲ್ಲವೂ ಭೂಮಿಕಾಳ ಮನಸ್ಸಿಗೆ ಘಾಸಿ ಮಾಡಿದೆ. ಶಕುಂತಲಾ ಬೋರ್ಡ್‌ಗೆ ಕಾಲ್ ಮಾಡಿ ನಾವು ಡೊನೇಷನ್ ಕೊಡುತ್ತಿದ್ದೇವೆ. ನನ್ನ ಸೊಸೆಗೆ ದೊಡ್ಡ ಸ್ಥಾನವನ್ನು ಕೊಡಿ ಎಂದು ತಾಕೀತು ಮಾಡಿದ್ದಾಳೆ .ಭೂಮಿಕಾ ಮನೆಗೆ ಬಂದವಳೇ ಗೌತಮ್ ಮೇಲೆ ಕೂಗಾಡಲು ಶುರು ಮಾಡುತ್ತಾಳೆ.

ಗೌತಮ್‌ ಮೇಲೆ ಭೂಮಿಕಾ ಕೂಗಾಡಿದ ಬಳಿಕ ಆನಂದ್‌ ಸಮಾಧಾನ ಮಾಡುತ್ತಾನೆ. ಗೌತಮ್‌ ಬಗ್ಗೆ ಅರಿಯದೇ ಮಾತನಾಡಬೇಡಿ ಎಂದು ಭೂಮಿಕಾಗೆ ತಿಳಿ ಹೇಳುತ್ತೇನೆ. ಈ ರೀತಿ ಬೋರ್ಡ್‌ ಮೆಂಬರ್‌ ಆಗಿ ಆಯ್ಕೆ ಮಾಡಿದ್ದು ಗೌತಮ್‌ಗೆ ಗೊತ್ತಿಲ್ಲ ಎಂದು ಆನಂದ್‌ ಹೇಳಿದಾಗ ಭೂಮಿಕಾಗೆ ತಪ್ಪಿನ ಅರಿವಾಗುತ್ತದೆ. ಅತ್ತ ಗೌತಮ್‌ಗೆ ಕೂಡ ಶಕುಂತಲ ಕುತಂತ್ರ ಅರಿವಾಗದೇ ಹೋಗುತ್ತದೆ.

ಇದನ್ನೂ ಓದಿ: Amruthadhare Serial: ಕೆಂಪು ಗುಲಾಬಿಯಂತೆ ಕಂಗೊಳಿಸಿದ ʻಮಹಿಮಾʼ; ಸಾರಾ ಅಣ್ಣಯ್ಯ ಹೊಸ ಲುಕ್‌!

ಮಧ್ಯರಾತ್ರಿ ಐಸ್‌ಕ್ರೀಮ್ ತಿಂತಿದ್ದಾರೆ ಗೌತಮ್-ಭೂಮಿಕಾ

ರಾತ್ರಿ ಮಲಗುವಾಗ ಭೂಮಿಕಾ ತಪ್ಪಿನ ಅರಿವಾಗಿ ಗೌತಮ್‌ ಬಳಿ ಕ್ಷಮೆ ಕೇಳುತ್ತಾಳೆ. ಬಿಕ್ಕಿ ಬಿಕ್ಕಿ ಅಳುತ್ತಾಳೆ. ಗೌತಮ್‌ ಕೂಡ ಸಮಾಧಾನ ಮಾಡಿ, ನಿಮ್ಮ ಮುಖದಲ್ಲಿ ನಗು ಇದ್ದರೆ ಚೆಂದ ಎಂದು ಭೂಮಿಕಾಗೆ ಸಮಾಧಾನ ಮಾಡುತ್ತಾರೆ. ಆ ಬಳಿಕ ಜೋಡಿ ಮಧ್ಯರಾತ್ರಿ ಕೂತು ಐಸ್‌ಕ್ರೀಮ್‌ ತಿಂದು ರಾಜಿಯಾಗಿ ಖುಷಿಯಲ್ಲಿ ಇರುತ್ತಾರೆ.

ಅಮೃತಧಾರೆ ಧಾರಾವಾಹಿ ʻಬಢೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ನಟ ರಾಜೇಶ್ ಅವರು ಗೌತಮ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading
Advertisement
Prajwal Revanna Case
ಕರ್ನಾಟಕ3 mins ago

Prajwal Revanna Case: ಪ್ರಜ್ವಲ್‌ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು

Cooking Oils
ಆರೋಗ್ಯ49 mins ago

Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

karnataka Weather Forecast
ಮಳೆ1 hour ago

Karnataka Weather : ಇಂದು ಮಳೆ ಬರುತ್ತಾ? ಯಾವ ಜಿಲ್ಲೆಗಳಲ್ಲಿದೆ ಹೀಟ್‌ ವೇವ್‌?

Pain relievers
ಆರೋಗ್ಯ2 hours ago

Pain Relievers: ಸೈಡ್‌ ಎಫೆಕ್ಟ್‌ ಇಲ್ಲದ ಪ್ರಕೃತಿದತ್ತ ನೋವು ನಿವಾರಕಗಳಿವು

Dina bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Ramanagara News
ಕರ್ನಾಟಕ8 hours ago

Channapatna News: ಮದುವೆಯಲ್ಲಿ ಐಸ್ ಕ್ರೀಂ ತಿಂದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Narendra Modi
ದೇಶ8 hours ago

Narendra Modi: ರಾಮಲಲ್ಲಾನಿಗೆ ಮೋದಿ ಸಾಷ್ಟಾಂಗ ನಮಸ್ಕಾರ; ಇಲ್ಲಿವೆ ಅಯೋಧ್ಯೆ ಭೇಟಿ Photos

IPL 2024
ಪ್ರಮುಖ ಸುದ್ದಿ8 hours ago

IPL 2024 : ಇವರೇ ನೋಡಿ ಐಪಿಎಲ್​ 2024ರ ಮೊದಲ ಕನ್​ಕಷನ್​ ಬದಲಿ ಆಟಗಾರ

Prajwal Revanna Case
ಪ್ರಮುಖ ಸುದ್ದಿ8 hours ago

Prajwal Revanna Case: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಶೇರ್‌ ಮಾಡಿದ್ರೆ ಕೇಸ್‌ ಗ್ಯಾರಂಟಿ; ಎಸ್‌ಐಟಿ ಎಚ್ಚರಿಕೆ

IPL 2024
ಕ್ರೀಡೆ8 hours ago

IPL 2024 : ಲಕ್ನೊ ವಿರುದ್ಧ ಕೆಕೆಆರ್​​ಗೆ 98 ರನ್​ಗಳ ಬೃಹತ್​ ಜಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ12 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ14 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ14 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌