Jote Joteyali Serial Happy ENd Jote Joteyali Serial: ಇಂದು ʻಜೊತೆ ಜೊತೆಯಲಿʼ ಧಾರಾವಾಹಿ ಅಂತ್ಯ; ಕೊನೆಗೂ ಒಂದಾದ್ರ ಅನು-ಆರ್ಯ? - Vistara News

ಕಿರುತೆರೆ

Jote Joteyali Serial: ಇಂದು ʻಜೊತೆ ಜೊತೆಯಲಿʼ ಧಾರಾವಾಹಿ ಅಂತ್ಯ; ಕೊನೆಗೂ ಒಂದಾದ್ರ ಅನು-ಆರ್ಯ?

Jote Joteyali Serial: ಸಾಕಷ್ಟು ಏರಿಳಿತ ಉಂಟಾದ ಹಿನ್ನೆಲೆಯಲ್ಲಿ 953 ಎಪಿಸೋಡ್​ಗೆ ಧಾರಾವಾಹಿ ಪೂರ್ಣಗೊಳಿಸಲಾಗಿದೆ. ನಿರ್ದೇಶಕ ಆರೂರು ಜಗದೀಶ್ ಅವರು ಘೋಷಣೆ ಮಾಡಿದಂತೆ ಇಂದು (ಮೇ 19) ಧಾರಾವಾಹಿ ಪೂರ್ಣಗೊಳ್ಳುತ್ತಿದೆ.

VISTARANEWS.COM


on

Jote Joteyali Serial Happy ENd
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 2019ರ ಸೆಪ್ಟೆಂಬರ್‌ 9ರಂದು ಹೊಸ ಶೈಲಿಯ ಕಥೆಯೊಂದು (Kannada Serial) ಕಿರುತೆರೆಗೆ ಎಂಟ್ರಿ ಕೊಟ್ಟಿತ್ತು. ಅದುವೇ ʼಜೊತೆ ಜೊತೆಯಲಿʼ (Jote Joteyali Serial). ಈ ಧಾರಾವಾಹಿ ಬಂದಿದೇ ತಡ ಒಂದೇ ವಾರದಲ್ಲಿ ಕನ್ನಡದ ಎಲ್ಲಾ ಧಾರಾವಾಹಿಗಳ ದಾಖಲೆಗಳನ್ನು ಮುರಿದು ಅತಿ ಹೆಚ್ಚು ವೀಕ್ಷಣೆ ಪಡೆದ ಧಾರಾವಾಹಿ ಎನ್ನುವ ಖ್ಯಾತಿ ಪಡೆದುಕೊಂಡಿತು. ಇದೀಗ ಸಾಕಷ್ಟು ಏರಿಳಿತ ಉಂಟಾದ ಹಿನ್ನೆಲೆಯಲ್ಲಿ 953 ಎಪಿಸೋಡ್​ಗೆ ಧಾರಾವಾಹಿ ಪೂರ್ಣಗೊಳಿಸಲಾಗಿದೆ. ನಿರ್ದೇಶಕ ಆರೂರು ಜಗದೀಶ್ ಅವರು ಘೋಷಣೆ ಮಾಡಿದಂತೆ ಇಂದು (ಮೇ 19) ಧಾರಾವಾಹಿ ಪೂರ್ಣಗೊಳ್ಳುತ್ತಿದೆ. ಹ್ಯಾಪಿ ಎಂಡಿಂಗ್‌ನೊಂದಿಗೆ ಧಾರಾವಾಹಿ ಅಂತ್ಯ ಹಾಡಲಿದೆ.

ಅನಿರುದ್ಧ ಅವರನ್ನು ಧಾರಾವಾಹಿ ತಂಡದಿಂದ ಹೊರಹಾಕಿದ ನಂತರ ಅವರ ಸ್ಥಾನಕ್ಕೆ ಹರೀಶ್‌ ರಾಜ್‌ ಅವರನ್ನು ಕರೆತರಲಾಗಿತ್ತು. ಅದಕ್ಕಾಗಿಯೇ ಕೆಲವು ಹೊಸ ಉಪಕಥೆಯನ್ನೂ ಪರಿಚಯಿಸಲಾಗಿದೆ. ಹಾಗೆಯೇ ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರ ರಾವ್‌ ಅವರನ್ನೂ ಸಹ ಆರಾಧನಾ ಹೆಸರಿನಲ್ಲಿ ಧಾರಾವಾಹಿಯಲ್ಲಿ ಪರಿಚಯಿಸಲಾಗಿತ್ತು. ಇದೀಗ ರಾಜನಂದಿನಿಯನ್ನು ಕೊಂದಿದ್ದು ಝೇಂಡೆ ಎನ್ನುವ ವಿಚಾರ ರಿವೀಲ್ ಆಗಿದೆ. ಈತನಿಗೆ ಅನು ಸಿರಿಮನೆ (Anu Sirimane) ಪ್ರಾಣಭಿಕ್ಷೆ ನೀಡಿದ್ದಾಳೆ.

ಒಂದಾದ ಅನು-ಆರ್ಯ

ಅನಿರುದ್ಧ ಧಾರಾವಾಹಿಯಿಂದ ಹೊರ ಬರುತ್ತಿದ್ದಂತೆ ಟಿಆರ್‌ಪಿ ಕುಸಿತಗೊಂಡಿತ್ತು. ಧಾರಾವಾಹಿಯ ಕಥೆಯಲ್ಲಿ ಆರ್ಯನ ಮೊದಲ ಪತ್ನಿ ರಾಜನಂದಿನಿಯ ಕೊಂದಿದ್ದು ಝೇಂಡೆ. ಶಾರದಾ ದೇವಿಯ ಪತಿಯನ್ನು ಕೊಂದಿದ್ದೂ ಆತನೇ. ಈ ವಿಚಾರವನ್ನು ಶಾರದಾ ದೇವಿ ರಿವೀಲ್ ಮಾಡಿದರು. ಪ್ರಪಾತದಲ್ಲಿ ಸಿಕ್ಕಿ ಬಿದ್ದಿದ್ದ ರಾಜನಂದಿನಿ ಸಾವಿಗೆ ಝೇಂಡೆಯೇ ಕಾರಣ ಆಗಿದ್ದ. ಈಗ ಝೇಂಡೆಗೂ ಅದೇ ಪರಿಸ್ಥಿತಿ ಬಂದಿತ್ತು. ಪ್ರಪಾತಕ್ಕೆ ಬೀಳುವವನಿದ್ದ ಝೇಂಡೆ‌ಯನ್ನು ಅನು ಕಾಪಾಡಿದ್ದಾಳೆ. ಇದರಿಂದ ಅನುವಿನ ಋಣ ತೀರಿಸಲು ಝೇಂಡೆ ನಿರ್ಧರಿಸಿದ್ದಾನೆ. ಇತ್ತ ಆರಾಧನಾ ಮನೆ ಬಿಟ್ಟು ಹೋಗಿದ್ದಾಳೆ. ಆರ್ಯನನ್ನು ನೋಡಿದಾಗಲೆಲ್ಲ ಆಕೆಗೆ ತನ್ನ ಪತಿಯೇ (ವಿಶ್ವಾಸ್) ನೆನಪಾಗುತ್ತಿದ್ದ. ಹೀಗಾಗಿ ಪತಿಯನ್ನು ಬಿಟ್ಟುಕೊಡಲು ಅನು ಮುಂದಾಗಿದ್ದಳು. ಅದಕ್ಕೂ ಮೊದಲೇ ಆರಾಧನಾ ಮನೆ ಬಿಟ್ಟು ಹೋಗಿದ್ದಾಳೆ. ಈ ಮೂಲಕ ಅನು-ಆರ್ಯ ಮತ್ತೆ ಒಂದಾಗಿದ್ದಾರೆ.

ಇದನ್ನೂ ಓದಿ: Jote Joteyali Serial: ‘ಜೊತೆ ಜೊತೆಯಲಿ’ ಧಾರಾವಾಹಿ ಮುಕ್ತಾಯ; ಆ ಸಮಯಕ್ಕೆ ಹೊಸದೊಂದು ಕಥೆ ಶುರು!

ಭಾವುಕ ಪೋಸ್ಟ್‌ ಹಂಚಿಕೊಂಡ ಆರೂರು ಜಗದೀಶ್‌


ʻʻಕಥೆ ನಿಂತ ನೀರಲ್ಲ; ಅದು ಹರಿಯುವ ಹೊಳೆ! ಕಥೆಗಳಿಗೆ ಮುಕ್ತಾಯ ಎನ್ನುವುದು ಇರುವುದಿಲ್ಲ. ನಾವಾಗಿಯೇ ಅನಿವಾರ್ಯವಾಗಿ ‘ದಿ ಎಂಡ್’ ಕೊಟ್ಕೋಬೇಕು ಅಷ್ಟೆ! ಜೊತೆ ಜೊತೆಯಲಿ ಧಾರಾವಾಹಿಗೂ ಈ ಅನಿವಾರ್ಯತೆ ಬಂದಿದೆ. 951ನೇ ಸಂಚಿಕೆಗೆ ‘ಜೊತೆ ಜೊತೆಯಲಿ’ ಧಾರಾವಾಹಿ ಮುಗಿಯುತ್ತಿದೆ. 1000 ಸಂಚಿಕೆ ಮಾಡಬಹುದಿತ್ತಲ್ಲ ಎಂದು ಅನೇಕ ಅಭಿಮಾನಿಗಳು ಹೇಳಿದ್ದರು.ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗುತ್ತಿಲ್ಲ.
ಜೊತೆ ಜೊತೆಯಲಿ ಜೆ.ಎಸ್ ಪ್ರೊಡಕ್ಷನ್‌ಗೆ ದೊಡ್ಡ ಮೈಲಿಗಲ್ಲು. ಸಾಕಷ್ಟು ಪಾಠಗಳನ್ನು ಕಲಿಸಿದೆ, ಯಶಸ್ಸನ್ನು ತಂದು ಕೊಟ್ಟಿದೆ, ಏರಿಳಿತಗಳೆಲ್ಲವನ್ನೂ ನಾವು ಸಮಚಿತ್ತದಿಂದಲೇ ನೋಡಿದ್ದೇವೆ. ಮೊದಲ ವಾರದ ಟಿಆರ್‌ಪಿ ಬಂದಾಗ ಸುದ್ದಿ ವಾಹಿನಿಗಳೆಲ್ಲಾ ನಮ್ಮ ಸೆಟ್‌ಗೆ ಬಂದು ‘ಇದು ಟಿವಿ ಇತಿಹಾಸದಲ್ಲೇ ದಾಖಲೆ’ ಎಂದು ಹೇಳಿದಾಗ ನಾವು ಹೇಗಿದ್ದೆವೋ, ಈಗಲೂ ಹಾಗೇ ಇದ್ದೇವೆ.

ಅಂದು ಆ ಖುಷಿಯನ್ನು ಸಂಭ್ರಮವನ್ನು ಕೆಲಸದ ಒತ್ತಡದಲ್ಲಿ ಸಂಪೂರ್ಣವಾಗಿ ಅನುಭವಿಸಲು ಆಗಲಿಲ್ಲ. ಕನಸ್ಸಿನಂತೆ ಬಂದು ಮಾಯವಾದ ಅನುಭವ.. ಪ್ರಾಮಾಣಿಕ ಪ್ರಯತ್ನ ಮತ್ತು ಶ್ರಮಕ್ಕೆ ಯಾವತ್ತೂ ಪ್ರತಿಫಲ ಸಿಗುತ್ತದೆ ಎನ್ನುವುದಕ್ಕೆ ಜೊತೆ ಜೊತೆಯಲಿ ಸಾಕ್ಷಿ! ಆರಂಭದ ದಿನಗಳಲ್ಲಿ ಒಂದೊಂದು ಎಪಿಸೋಡ್ ಚಿತ್ರೀಕರಣವೂ ಹರಸಾಹಸವೇ ಸರಿ. ಅರ್ಧ ಗಂಟೆಯ ಎಪಿಸೋಡ್‌ಗೆ ಆರೇಳು ದಿನಗಳ ಶ್ರಮ. ಜನ ಚಪ್ಪಾಳೆ ತಟ್ಟಿದಾಗಷ್ಟೇ ಸಮಾಧಾನ! ಒಂದು ಸಿನಿಮಾ ಹಿಟ್ ಆದರೆ ಅದರ ಯಶಸ್ಸನ್ನು ಎಂಜಾಯ್ ಮಾಡಲು ಒಂದೆರಡು ತಿಂಗಳಾದರೂ ಸಿಗುತ್ತದೆ. ಇಲ್ಲಿ ಹಾಗಲ್ಲ. ಓಡು! ಓಡುತ್ತಲೇ ಇರು. ದಣಿವಾದಾಗೆಲ್ಲಾ ಬೆನ್ನು ತಟ್ಟಿ ನಡೆಸಿದವರನ್ನೆಲ್ಲಾ ಈ ಕ್ಷಣದಲ್ಲಿ ನೆನೆಯಲೇ ಬೇಕುʼʼ ಎಂದು ಸಮಗ್ರವಾಗಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kannada Serials: ಅಂತ್ಯ ಕಾಣಲಿವೆ ಕನ್ನಡದ ಎರಡು ಪ್ರಮುಖ ಧಾರಾವಾಹಿಗಳು? ಕಾರಣವೇನು?

ಈಗಾಗಲೇ ಜೀ ವಾಹಿನಿಯಲ್ಲಿ ಕೆಲವು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ ಹಾಗೂ ಹೊಸ ಧಾರಾವಾಹಿಗಳು ಪ್ರಾರಂಭವಾಗುತ್ತಿದೆ. ಇದೇ ಕಾರಣಕ್ಕೆ ಅನೇಕ ಧಾರಾವಾಹಿಗಳು ವಿದಾಯ ಹೇಳುತ್ತಿವೆ. ಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿಯ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ

Puttakkana Makkalu: ಮುರಳಿ-ಸಹನಾ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದೆ. ಸಹನಾಗೆ ವಿಚ್ಛೇದನ ಬೇಕು, ಮುರಳಿಗೆ ತನ್ನ ತಪ್ಪಿನ ಅರಿವಾಗಿದೆ. ಮುರಳಿ ಜತೆ ಬಾಳಲು ರೆಡಿ ಇಲ್ಲ ಸಹನಾ. ಸಹನಾ ಈಗ ಮನೆ ಬಿಟ್ಟು ಹೋಗಿದ್ದಾಳೆ.ತಾಯಿಗೆ ಎಲ್ಲಿ ತಾನು ಭಾರವಾಗುತ್ತೇನೋ ಎಂದು ಸಹನಾ ಮನೆಯಿಂದ ಆಚೆ ನಡೆದಿದ್ದಾಳೆ. ಸದ್ಯ ಪುಟ್ಟಕ್ಕನ ಮಗಳು ಸಹನಾ ಮನೆ ಬಿಟ್ಟು ಹೋಗಿದ್ದಾಳೆ.

VISTARANEWS.COM


on

Puttakkana makkalu sahana dead
Koo
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʻಪುಟ್ಟಕನ ಮಕ್ಕಳುʼ (Puttakkana Makkalu) ಸತತ ಎರಡನೇ ವಾರ ಒಳ್ಳೆಯ ಟಿಆರ್‌ಪಿ ಕಂಡಿದೆ. ಸದ್ಯ ಪುಟ್ಟಕ್ಕನ ಮಗಳು ಸಹನಾ ಮನೆ ಬಿಟ್ಟು ಹೋಗಿದ್ದಾಳೆ.

ಸಹನಾ ಶವ ಪತ್ತೆ ಆಗಿದೆ, ಎಲ್ಲರೂ ಮನೆ ಮಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

ಬಾಳಬೇಕಾದ ಮಗಳು ಶವವಾಗಿ ಮಲಗಿರೋದು ನೋಡಿ ಪುಟ್ಟಕ್ಕ ಅಳುತ್ತಿದ್ದಾಳೆ. ಸಹನಾ ಅಂತ್ಯಸಂಸ್ಕಾರ ಮುಗಿದಿದೆ.

ಮುರಳಿಯಿಂದ ಡಿವೋರ್ಸ್ ಪಡೆದಿರುವ ಸಹನಾ ತವರುಮನೆಗೂ ಕೂಡ ಸ್ವಲ್ಪವೂ ಭಾರವಾಗದೆ, ತನ್ನ ಜೀವನ ತಾನೇ ನಡೆಸಬೇಕು ಅಂತ ಅಂದುಕೊಂಡಿದ್ದಳು. ಹೀಗೆ ಅಂದುಕೊಂಡವಳು ಹೇಗೆ ಶವವಾದಳು. ಆದರೆ ವೀಕ್ಷಕರು ಸಹನಾ ಸತ್ತಿಲ್ಲ ಬದುಕಿದ್ದಾಳೆ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಸಹನಾ ಮುಖ ಪ್ಲಾಸ್ಟಿಕ್‌ ಸರ್ಜರಿ ಆಗರಿಬಹುದೆಂದು ಕಮೆಂಟ್‌ ಮಾಡಿದ್ದಾರೆ!

Continue Reading

ಕಿರುತೆರೆ

Shine Shetty: ಸಖತ್‌ ಫಿಟ್‌ ಆದ ‘ಬಿಗ್ ಬಾಸ್‌’ ವಿನ್ನರ್ ಶೈನ್ ಶೆಟ್ಟಿ!

Shine Shetty: ಶೈನ್‌ ಶೆಟ್ಟಿ ಅವರು ʻಜಸ್ಟ್‌ ಮ್ಯಾರಿಡ್‌ʼ ಮತ್ತು ʻನಿದ್ರಾದೇವಿ ನೆಕ್ಸ್ಟ್‌ ಡೋರ್‌ʼ ಎಂಬ ಎರಡು ಹೊಸ ಚಿತ್ರಗಳಿಗೆ ನಾಯಕರಾಗಿದ್ದಾರೆ. ಶೈನ್‌ ಶೆಟ್ಟಿ ಬಿಗ್‌ ಬಾಸ್‌ ಮೂಲಕ ಸಖತ್‌ ಫೇಮಸ್‌ ಆಗಿದ್ದರು. ದೀಪಿಕಾ ದಾಸ್‌ ಅವರು ಶೈನ್‌ ಶೆಟ್ಟಿ (Shyne Shetty) ಅವರ ಜತೆ ಬಿಗ್‌ ಬಾಸ್‌ ಮನೆಯಲ್ಲಿ ತುಂಬ ಕ್ಲೋಸ್‌ ಆಗಿದ್ದರು. ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದ ನಂತರವೂ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಜನ ಅಂದುಕೊಳ್ಳುತ್ತಿದ್ದರು.

VISTARANEWS.COM


on

Shine Shetty follows diet and fitness
Koo

ಸ್ಯಾಂಡಲ್‌ವುಡ್‌, ನಟ ಬಿಗ್‌ ಬಾಸ್‌ ವಿಜೇತ, ಕನ್ನಡ ಕಿರುತೆರೆ ಜನಪ್ರಿಯ ನಟ ಶೈನ್ ಶೆಟ್ಟಿ (Shine Shetty) ಕೈಯಲ್ಲಿ ಎರಡು ಬಿಗ್ ಪ್ರಾಜೆಕ್ಟ್ ಸಿನಿಮಾಗಳಿವೆ. ಇದೀಗ ಚಿತ್ರಕ್ಕೆಂದು ಫಿಟ್ನೆಸ್‌ ಬಗ್ಗೆ ಗಮನ ಕೊಟ್ಟಿದ್ದಾರೆ.

ಫಿಟ್‌ ಆಗಿರುವ ಹಾಗೂ ವರ್ಕೌಟ್‌ ಮಾಡಿರುವ ಫೋಟೊಗಳನ್ನು ಶೈನ್‌ ಶೆಟ್ಟಿ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಸುಮಾರು 11 ದಿನಗಳ ಕಾಲ ಕಠಿಣ ವರ್ಕೌಟ್ ಮತ್ತು ಡಯಟ್ ಫಾಲೋ ಮಾಡಿ ಸಿಕ್ಸ್‌ ಪ್ಯಾಕ್ ಮಾಡಿರುವ ಶೈನ್‌ ಇದೀಗ ರಗಡ್‌ ಆಗಿ ಕಾಣುತ್ತಿದ್ದಾರೆ.

ಶೈನ್‌ ಶೆಟ್ಟಿ ಅವರು ʻಜಸ್ಟ್‌ ಮ್ಯಾರಿಡ್‌ʼ ಮತ್ತು ʻನಿದ್ರಾದೇವಿ ನೆಕ್ಸ್ಟ್‌ ಡೋರ್‌ʼ ಎಂಬ ಎರಡು ಹೊಸ ಚಿತ್ರಗಳಿಗೆ ನಾಯಕರಾಗಿದ್ದಾರೆ.

ಇದನ್ನೂ ಓದಿ: Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

ಶೈನ್‌ ಶೆಟ್ಟಿ ಬಿಗ್‌ ಬಾಸ್‌ ಮೂಲಕ ಸಖತ್‌ ಫೇಮಸ್‌ ಆಗಿದ್ದರು. ದೀಪಿಕಾ ದಾಸ್‌ ಅವರು ಶೈನ್‌ ಶೆಟ್ಟಿ (Shyne Shetty) ಅವರ ಜತೆ ಬಿಗ್‌ ಬಾಸ್‌ ಮನೆಯಲ್ಲಿ ತುಂಬ ಕ್ಲೋಸ್‌ ಆಗಿದ್ದರು. ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದ ನಂತರವೂ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಜನ ಅಂದುಕೊಳ್ಳುತ್ತಿದ್ದರು. ಬಿಗ್‌ ಬಾಸ್‌ ಸಂದರ್ಭದಲ್ಲಿ ಈ ಜೋಡಿಗೆ ಜನರೇ ‘ಶಿನಿಕಾ’ ಎಂದು ಹೆಸರಿಟ್ಟು, ತುಂಬಾ ಮುದ್ದಾದ ಜೋಡಿ ಎಂದು ಹೇಳುತ್ತಿದ್ದರು.

Continue Reading

ಸಿನಿಮಾ

Karan Johar: ‘ಕಳಪೆ’ ಮಿಮಿಕ್ರಿ ಕಂಡು ಕರಣ್ ಜೋಹರ್ ಗರಂ; ಕ್ಷಮೆಯಾಚಿಸಿದ ಹಾಸ್ಯನಟ!

Karan Johar: ಕೆತನ್‌ ಸಿಂಗ್ ಅವರು ಕರಣ್‌ ಅವರ ರೀತಿ ಅನುಕರಣೆ ಮಾಡಿದ್ದಾರೆ. ಇದು ಕರಣ್‌ ಅವರಿಗೆ ಇಷ್ಟವಾಗಲಿಲ್ಲ. ಹೀಗಾಗಿ ಕರಣ್‌ ಬೇಸರದಲ್ಲಿ ಇನ್‌ಸ್ಟಾದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಆದರೆ ಎಲ್ಲಿಯೂ ಕಾರ್ಯಕ್ರಮದ ಹೆಸರನ್ನು ಉಲ್ಲೇಖಿಸಿಲ್ಲ. ಹೀಗಾಗಿ ಇದು ʻಮ್ಯಾಡ್ನೆಸ್ ಮಚಾಯೆಂಗೆʼ ಕಾರ್ಯಕ್ರಮದ ಬಗ್ಗೆಯೇ ಕರಣ್ ಮಾತನಾಡಿರುವುದು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

Karan Johar upset with Kettan Singh's poor mimicry of him
Koo

ಬೆಂಗಳೂರು: ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ (Karan Johar) ಭಾನುವಾರ ರಾತ್ರಿ (ಮೇ.5) ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮನ್ನು ಅನುಕರಣೆ ಮಾಡಿದ ಕಾಮಿಡಿ ಶೋ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕೆತನ್‌ ಸಿಂಗ್ (Comedian Kettan Singh ) ಅವರು `ಮ್ಯಾಡ್ನೆಸ್ ಮಚಾಯೆಂಗೆʼ ( Madness Machaenge) ಕಾರ್ಯಕ್ರಮದ ಪ್ರೋಮೊ ಪೋಸ್ಟ್‌ ಮಾಡಿದ್ದಾರೆ. ಕೆತನ್‌ ಸಿಂಗ್ ಅವರು ಕರಣ್‌ ಅವರ ರೀತಿ ಅನುಕರಣೆ ಮಾಡಿದ್ದಾರೆ. ಇದು ಕರಣ್‌ ಅವರಿಗೆ ಇಷ್ಟವಾಗಲಿಲ್ಲ. ಹೀಗಾಗಿ ಕರಣ್‌ ಬೇಸರದಲ್ಲಿ ಇನ್‌ಸ್ಟಾದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಆದರೆ ಎಲ್ಲಿಯೂ ಕಾರ್ಯಕ್ರಮದ ಹೆಸರನ್ನು ಉಲ್ಲೇಖಿಸಿಲ್ಲ. ಹೀಗಾಗಿ ಇದು ʻಮ್ಯಾಡ್ನೆಸ್ ಮಚಾಯೆಂಗೆʼ ಕಾರ್ಯಕ್ರಮದ ಬಗ್ಗೆಯೇ ಕರಣ್ ಮಾತನಾಡಿರುವುದು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಕರಣ್ ಟೀಕೆಗೆ ಇದೀಗ ಹಾಸ್ಯನಟ ಕೂಡ ಪ್ರತಿಕ್ರಿಯಿಸಿದ್ದಾರೆ.

ಕರಣ್ ಇನ್‌ಸ್ಟಾ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ, “ನಾನು ನನ್ನ ತಾಯಿಯೊಂದಿಗೆ ಕುಳಿತು ಟಿವಿ ನೋಡುತ್ತಿದ್ದೆ. ಒಳ್ಳೆಯ ಚಾನೆಲ್‌ನಲ್ಲಿ ಕಾಮಿಡಿ ರಿಯಾಲಿಟಿ ಶೋ ಹಾಸ್ಯದ ಪ್ರೋಮೊ ನೋಡಿದೆ. ನನ್ನ ಅನುಕರಣೆ ಅದರಲ್ಲಿತ್ತು. ಅತ್ಯಂತ ಕಳಪೆಯಾಗಿತ್ತು. ಈ ರೀತಿ ಕಳಪೆ ಮಟ್ಟದ ಮಿಮಿಕ್ರಿಯನ್ನು ನಾನು ಟ್ರೋಲ್‌ ಪೇಜ್‌ಗಳಿಂದ, ಫೇಮಸ್‌ ಇಲ್ಲದೇ ಇರುವ ಜನರಿಂದ ನಿರೀಕ್ಷಿಸುತ್ತೇನೆ. ಆದರೆ 25 ವರ್ಷಗಳಿಂದ ಒಳ್ಳೆಯ ಬಾಡಿಂಗ್‌ ಇರುವ ಚಾನೆಲ್‌ನಿಂದ ಈ ರೀತಿಯ ಕಳಪೆ ಮಟ್ಟದ ಪ್ರದರ್ಶನ ನಾನು ನಿರೀಕ್ಷಿಸರಲಿಲ್ಲ. ಈ ಪ್ರೋಮೊ ಕಂಡು ನನಗೆ ಕೋಪ ಬರಲಿಲ್ಲ. ಬಹಳ ದುಃಖವನ್ನುಂಟುಮಾಡಿತು!” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ವನ್ನು ನಿರ್ಮಾಪಕಿ ಏಕ್ತಾ ಕಪೂರ್ ಕೂಡ ರಿ ಪೋಸ್ಟ್‌ ಮಾಡಿ ಕರಣ್ ಬೆಂಬಲಕ್ಕೆ ನಿಂತರು. ಕಳಪೆ ಹಾಸ್ಯ ಎಂದು ಏಕ್ತಾ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Karan Johar: ಉಪ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ ಕರಣ್ ಜೋಹರ್

ಏಕ್ತಾ ಕಪೂರ್‌ ರಿ ಪೋಸ್ಟ್‌ ಮಾಡಿ ʻʻಈ ರೀತಿ ಹಲವು ಬಾರಿ ಸಂಭವಿಸಿದೆ! ಕಳಪೆ ಹಾಸ್ಯವು ಕೆಲವೊಮ್ಮೆ ಕಾರ್ಯಕ್ರಮಗಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿಯೂ ಇರುತ್ತದೆ. ಇದರ ಜತೆಗೆ ನೀವು ಹಾಜರಾಗಬೇಕೆಂದು ಅವರು ನಿರೀಕ್ಷಿಸುತ್ತಾರೆʼʼ ಎಂದು ಅವರು ಬರೆದಿದ್ದಾರೆ.

ಕರಣ್‌ ಜೋಹರ್ ಹೇಳಿಕೆಯ ನಂತರ, ಹಾಸ್ಯನಟ ಕೆತನ್‌ ಸಿಂಗ್ ಪ್ರತಿಕ್ರಿಯಿಸಿದರು ಮತ್ತು ಕ್ಷಮೆಯಾಚಿಸಿದರು. “ನಾನು ಕರಣ್ ಸರ್ ಅವರಲ್ಲಿ ಕ್ಷಮೆ ಕೇಳುತ್ತೇನೆ. ಮೊದಲನೇದಾಗಿ ಈ ರೀತಿ ಮಿಮಿಕ್ರಿ ಮಾಡಲು ಕಾರಣ ಕರಣ್ ಜೋಹರ್ ಅವರ ಕಾಫಿ ಶೋವನ್ನು ಬಹಳಷ್ಟು ಬಾರಿ ನೋಡಿದ್ದೇನೆ. ನಾನು ಅವರ ಕೆಲಸಕ್ಕೆ ಮತ್ತು ಆ ಕಾರ್ಯಕ್ರಮಕ್ಕೆ ನಾನು ದೊಡ್ಡ ಅಭಿಮಾನಿ. ಇತ್ತೀಚೆಗೆ ನಾನು ಕರಣ್‌ ಅವರ ಚಿತ್ರ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾವನ್ನು 5 ರಿಂದ 6 ಬಾರಿ ನೋಡಿದ್ದೇನೆ. ನನ್ನ ಈ ನಟನೆಯಿಂದ ಕರಣ್‌ ಅವರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ. ನಿಮ್ಮನ್ನು ನೋವಿಸುವ ಉದ್ದೇಶ ನನ್ನದಾಗಿರಲಿಲ್ಲ. ನಾನು ಕೇವಲ ಪ್ರೇಕ್ಷಕರನ್ನು ರಂಜಿಸಲು ಬಯಸಿದ್ದೆʼʼಎಂದು ಹೇಳಿದ್ದಾರೆ.

ಕರಣ್‌ ಜೋಹರ್ ಅವರ ಕೊನೆಯ ಚಿತ್ರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಕಮರ್ಷಿಯಲ್ ಹಿಟ್ ಆಗಿತ್ತು. ಪ್ರಸ್ತುತ ಅವರು ಹಲವಾರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮತ್ತೊಂದೆಡೆ, ಕರಣ್ ಜೋಹರ್ ಅವರ ಸಲ್ಮಾನ್ ಖಾನ್ ಅವರ ‘ದಿ ಬುಲ್’ ಶೀರ್ಷಿಕೆಯ ಚಿತ್ರ ಸೆಟ್ಟೇರಲು ಸಜ್ಜಾಗಿದೆ.

Continue Reading

ಕಿರುತೆರೆ

Mahanati Show: ‘ಮಹಾನಟಿʼ ವೇದಿಕೆಯಲ್ಲಿ ನಟ ರಿಷಿ ಫೋನ್‌ ನಂಬರ್‌ ಕೇಳಿದ ಚಿತ್ರದುರ್ಗದ ಗಗನಾ!

Mahanati Show: ಗಗನಾ ಅವರು ರಿಷಿ ಅವರನ್ನು ಈ ಮೊದಲು ನೋಡಿದ್ದರಂತೆ. ಫೋಟೊ ಮಾತ್ರ ತೆಗೆದುಕೊಂಡಿದ್ದರಂತೆ. ಈಗ ವೇದಿಕೆ ಹಂಚಿಕೊಳ್ಳುವುದರ ಬಗ್ಗೆ ಸಖತ್‌ ಖುಷ್‌ ಆಗಿದ್ದಾರೆ. ಅನುಶ್ರೀ ಅವರು ಗಗನಾ ಅವರಿಗೆ ತಮಾಷೆಯಾಗಿ ರಿಷಿ ಮತ್ತು ಗಗನಾ ವಿಮಾನದಲ್ಲಿ ಟ್ರಾವೆಲ್‌ ಮಾಡುವ ಟಾಪಿಕ್‌ ಕೊಟ್ಟಿದ್ದಾರೆ. ಈ ವೇಳೆ ಗಗನಾ ಕಾಮಿಡಿಗೆ ನೆರೆದಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಬಾರಿ ಶೋನಲ್ಲಿ ಈ ಬಾರಿ ಕಾನ್ಸೆಪ್ಟ್ ಜೊತೆಗೆ ಸೆಲೆಬ್ರೆಟಿಗಳನ್ನು ಕರೆಸಲಾಗಿದೆ.

VISTARANEWS.COM


on

Mahanati Show Gagana Comedy About Rishi actor
Koo

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ  ‘ಮಹಾನಟಿ’ ರಿಯಾಲಿಟಿ ಶೋ (Mahanati Show) ಪ್ರಸಾರ ಕಾಣುತ್ತಿದೆ. ಈ ಶೋನಲ್ಲಿ ಗಗನಾ ಪ್ರಮುಖ ಹೈಲೈಟ್‌. ಯಾವುದೇ ವಿಷಯ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸುವ ಅವರು ಈ ಬಾರಿಯೂ ವೇದಿಕೆಯಲ್ಲಿ ನಟನೆ ಮೂಲಕ ತಮ್ಮ ಕಾಮಿಡಿ ಮೂಲಕ ರಂಜಿಸಿದ್ದಾರೆ. ಈ ಮಹಾನಟಿ ಶೋನಲ್ಲಿ ರಮೇಶ್‌ ಅರವಿಂದ್‌ ಅವರು ಒಂದೊಂದು ಟಾಪಿಕ್‌ ಕೊಡುತ್ತಾರೆ. ಅದರ ಬಗ್ಗೆ ಸ್ಪರ್ಧಿಗಳು ನಟಿಸಬೇಕು. ಮಹಾನಟಿಯರು ತಕ್ಷಣೆಕ್ಕೆ ಡೈಲಾಗ್‌ ರೆಡಿ ಮಾಡಿಕೊಂಡು ನಟಿಸುತ್ತಾರೆ. ಈ ಬಾರಿ ಕಾನ್ಸೆಪ್ಟ್ ಜೊತೆಗೆ ಸೆಲೆಬ್ರೆಟಿಗಳನ್ನು ಕರೆಸಲಾಗಿದೆ. ಯಾವ್ಯಾವ ಕಾನ್ಸೆಪ್ಟ್‌ಗೆ ಯಾರು ಸರಿ ಹೊಂದುತ್ತಾರೆ ಆ ಸೆಲೆಬ್ರೆಟಿಗಳನ್ನು ಕರೆಸಲಾಗಿದೆ. ನಟ ರಿಷಿ ಅವರು ಈ ವಾರ ಬಂದಿದ್ದರು. ಈ ವೇಳೆ ಸ್ಪರ್ಧಿ ಗಗನಾ ಅವರು ನಟನ ನಂಬರ್‌ ಕೇಳುವ ಮೂಲಕ ವೇದಿಕೆಯಲ್ಲಿ ನೆರೆದವರನ್ನು ನಕ್ಕು ನಗಿಸಿದರು.

‘ಮುದ್ದು ಮಣಿಗಳು’ ಧಾರಾವಾಹಿ ಮೂಲಕ ಸೋನಿ ಸಖತ್‌ ಫೇಮಸ್‌ ಆದವರು. ಮುದ್ದುಲಕ್ಷ್ಮೀಯ ಮಗಳಾಗಿ ಕಾಣಿಸಿಕೊಂಡಿದ್ದರು. ಧಾರಾವಾಹಿ ಮುಗಿದ ಮೇಲೆ ಇದೀಗ ಮಹಾನಟಿ ವೇದಿಕೆ ಮುಖಾಂತರ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಬಂದಿದ್ದಾರೆ. ಸೋನಿಗೆ ತಮ್ಮ ಬಾಯ್‌ಫ್ರೆಂಡ್‌ರನ್ನು ಇಂಪ್ರೆಸ್‌ ಮಾಡು ಟಾಪಿಕ್‌ ರಮೇಶ್‌ ನೀಟಿದ್ದರು. ಆದರೆ ಸೋನಿಗೆ ಸಂಜೆಯಾದರೆ ಕಣ್ಣು ಕೂಡ ಕಾಣುವುದಿಲ್ಲ. ಸೋನಿ ಬಾಯ್ ಫ್ರೆಂಡ್ ರೂಪದಲ್ಲಿ ರಿಯಾಲಿಟಿ ಶೋನಲ್ಲಿ ಪ್ರತ್ಯಕ್ಷವಾಗಿದ್ದು ರಿಷಿ. ಆದರೆ ರಿಷಿ ಅವರಿಗೆ ಹುಡುಗಿಯ ಬಗ್ಗೆ ರಿಷಿ ಕೊಂಚವೂ ಅನುಮಾನ ಪಡದೇ, ಬೇಸರ ಮಾಡಿಕೊಳ್ಳದೇ ಹುಡುಗಿಗೆ ಇಂಪ್ರೆಸ್ ಮಾಡಿದ್ದಾರೆ.

ಇದನ್ನೂ ಓದಿ: Mahanati Show: ʼಮಹಾನಟಿ ಶೋʼ ವಿರುದ್ಧ ಮೆಕ್ಯಾನಿಕ್‌ಗಳ ಆಕ್ರೋಶ; ಸ್ಪರ್ಧಿ ಗಗನಾ, ರಮೇಶ್‌ ಅರವಿಂದ್‌ ಸೇರಿ ಐವರ ವಿರುದ್ಧ ಮತ್ತೊಂದು ದೂರು

ಇದಾದ ಬಳಿಕ ಅನುಶ್ರೀ ಎಲ್ಲಾ ‌ಮಹಾನಟಿಯರನ್ನು ವೇದಿಕೆ ಮೇಲೆ ಕರೆದಿದ್ದಾರೆ. ಎಲ್ಲಾ ನಟಿಮಣಿಯರು ರಿಷಿ ಜತೆಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಗಗನಾ ಕಾಮಿಡಿ ಎಲ್ಲರಿಗೂ ಇಷ್ಟವಾಗಿದೆ. ಗಗನಾ ಅವರು ರಿಷಿ ಅವರನ್ನು ಶೋ ಮೊದಲು ನೋಡಿದ್ದರಂತೆ. ಫೋಟೊ ಮಾತ್ರ ತೆಗೆದುಕೊಂಡಿದ್ದರಂತೆ. ಈಗ ಅವರ ಜತೆ ವೇದಿಕೆ ಹಂಚಿಕೊಳ್ಳುವುದರ ಬಗ್ಗೆ ಸಖತ್‌ ಖುಷ್‌ ಆಗಿದ್ದಾರೆ. ಇದಾದ ಬಳಿಕ ಅನುಶ್ರೀ ಅವರು ಗಗನಾ ಅವರಿಗೆ ತಮಾಷೆಯಾಗಿ ರಿಷಿ ಮತ್ತು ಗಗನಾ ವಿಮಾನದಲ್ಲಿ ಟ್ರಾವೆಲ್‌ ಮಾಡುವ ಟಾಪಿಕ್‌ ಕೊಟ್ಟಿದ್ದಾರೆ. ಟ್ರಾವೆಲ್ ಮಾಡುವಾಗ ಇಬ್ಬರ ಮಾತುಕತೆ ಹೇಗಿರುತ್ತೆ ಎಂಬುದನ್ನು ರಿಹರ್ಸಲ್ ಮಾಡಿಸಿದ್ದಾರೆ. ಈ ವೇಳೆ ಅನುಶ್ರೀ, ಜ್ಯೂಸ್, ಕಾಫಿ ಬೇಕಾ? ಎಂದು ಕೇಳಿದರೆ ರಿಷಿ ʻನೀರು ಸಾಕುʼ ಎಂದಿದ್ದಾರೆ. ಗಗನಾಗೆ ಕೇಳಿದಾಗ, ʻರಿಷಿ ಅವರ ನಂಬರ್‌ ಕೇಳಿ ಕೊಡಿʼ ಎಂದು ಕಾಮಿಡಿ ಮಾಡಿದ್ದಾರೆ. ಗಗನಾ ಕಾಮಿಡಿಗೆ ನೆರೆದಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ.

ʻಮಹಾನಟಿ’ ರಿಯಾಲಿಟಿ ಶೋಗೆ ಈ ಬಾರಿ ಮೂರು ಹೊಸ ತೀರ್ಪುಗಾರರು ವೇದಿಕೆಯನ್ನ ಅಲಂಕರಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ, ನಟ ರಮೇಶ್‌ ಅರವಿಂದ್‌, ಖ್ಯಾತ ನಾಯಕ ನಟಿ ಪ್ರೇಮಾ, ‘ಕಾಟೇರ’ದಂತಹ ಯಶಸ್ವಿ ಚಿತ್ರಕೊಟ್ಟ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಯುವ ನಾಯಕ ನಟಿ ನಿಶ್ವಿಕಾ ನಾಯ್ಡು ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೆಕ್ಯಾನಿಕಲ್‌ ಲೈಫ್‌ ಬಗ್ಗೆ ಕೆಟ್ಟ ಡೈಲಾಗ್‌ ಹೊಡೆದಿದ್ದ ಗಗನಾ

ಗಗನಾ ಕಳೆದ ಬಾರಿ ಟ್ರೋಲ್‌ಗೆ ಗುರಿಯಾಗಿದ್ದರು. ಮೆಕ್ಯಾನಿಕಲ್‌ ಲೈಫ್‌ ಬಗ್ಗೆ ಕಾನ್ಸೆಪ್ಟ್‌ ಕೊಟ್ಟಿದ್ದರು. ನಿಮ್ಮ ತಂಗಿ ಮೆಕ್ಯಾನಿಕಲ್‌ ಅವರನ್ನು ಮದುವೆ ಆಗಿದ್ದರೆ ಏನು ಮಾಡುತ್ತೀಯಾ? ಎಂದು ಸ್ಕಿಟ್‌ ಮಾಡಬೇಕಿತ್ತು. ಡೈಲಾಗ್‌ ಹೇಳುವ ಭರದಲ್ಲಿ ಮೆಕ್ಯಾನಿಕ್‌ ಮದುವೆಯಾದರೆ ಗ್ರೀಸ್‌ ತಿಂದು ಬದುಕಬೇಕಾಗುತ್ತದೆ ಎಂದಿದ್ದರು. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ರಮೇಶ್‌ ಅರವಿಂದ್‌, ಗಗನಾ ಸೇರಿದಂತೆ ಈ ಬಗ್ಗೆ ದೂರು ದಾಖಲಾಗಿತ್ತು.

Continue Reading
Advertisement
70.94 percent voting in Koppal Lok Sabha constituency says Koppal DC Nalin Atul
ಕೊಪ್ಪಳ3 hours ago

Lok Sabha Election 2024: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ 70.94ರಷ್ಟು ಮತದಾನ

Rampura PSI Mahesh Hosapete admitted to the hospital Hanagal village road accident injured persons
ಕರ್ನಾಟಕ4 hours ago

Road Accident: ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸಿದ ಪಿಎಸ್‌ಐ

Lok Sabha Election 2024
ಕರ್ನಾಟಕ4 hours ago

Lok Sabha Election 2024: 2ನೇ ಹಂತದಲ್ಲಿ ಶೇ.70.41 ಮತದಾನ; ಕಳೆದ ಬಾರಿಗಿಂತ ಹೆಚ್ಚು, ಚಿಕ್ಕೋಡಿಯಲ್ಲಿ ಗರಿಷ್ಠ

Mayawati
ಪ್ರಮುಖ ಸುದ್ದಿ4 hours ago

Mayawati: ನೇಮಿಸಿದ 5 ತಿಂಗಳಲ್ಲೇ ಸೋದರಳಿಯನನ್ನು ಉತ್ತರಾಧಿಕಾರಿ ಹುದ್ದೆಯಿಂದ ತೆಗೆದ ಮಾಯಾವತಿ!

IPL 2024
ಪ್ರಮುಖ ಸುದ್ದಿ4 hours ago

IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

Music Festival
ಬೆಂಗಳೂರು4 hours ago

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Amanatullah Khan
ದೇಶ5 hours ago

Amanatullah Khan: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮೇಲೆ ಆಪ್‌ ಎಂಎಲ್‌ಎ ಪುತ್ರನಿಂದ ಹಲ್ಲೆ; ಬಿತ್ತು ಕೇಸ್

Yuzvendra Chahal
ಕ್ರಿಕೆಟ್5 hours ago

Yuzvendra Chahal : ಟಿ20 ವಿಕೆಟ್​​ಗಳ ಗಳಿಕೆಯಲ್ಲಿ ನೂತನ ದಾಖಲೆ ಬರೆದ ಸ್ಪಿನ್ನರ್ ಯಜ್ವೇಂದ್ರ ಚಹಲ್​

Bescom Helpline
ಕರ್ನಾಟಕ5 hours ago

BESCOM Helpline: ಮಳೆ ಹಾನಿ; ದೂರು ಸಲ್ಲಿಸಲು ಬೆಸ್ಕಾಂ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌, ದೂರವಾಣಿ ಸಂಖ್ಯೆ

Nissan India
ಆಟೋಮೊಬೈಲ್5 hours ago

Nissan India : ಉಚಿತ ಏಸಿ ರಿಪೇರಿ ಮಾಡಿಸಿಕೊಳ್ಳಲು ನಿಸ್ಸಾನ್ ಕಾರು ಮಾಲೀಕರಿಗೆ ಇಲ್ಲಿದೆ ಅವಕಾಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna has severe chest pain Admission in Victoria
ರಾಜಕೀಯ7 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ10 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ12 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌