ಕಿರುತೆರೆ
Sharmitha Gowda: ಭಾನುಮತಿ ಕೊರಳಲ್ಲಿ ಹೆಬ್ಬಾವು! ಜೋಪಾನ ಅಂದ್ರು ಫ್ಯಾನ್ಸ್!
ವಿಯೆಟ್ನಾಂನ ಪ್ರೇಕ್ಷಣೀಯ ಸ್ಥಳಗಳಿಗೆ ವ ‘ಗೀತಾ’ ಧಾರಾವಾಹಿಯಲ್ಲಿ ಭಾನುಮತಿ ಪಾತ್ರವನ್ನು ನಿಭಾಯಿಸುತ್ತಿರುವವರು ನಟಿ ಶರ್ಮಿತಾ ಗೌಡ (Sharmitha Gowda) ತನ್ನ ಗೆಳತಿಯರ ಜತೆ ತೆರಳಿದ್ದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಧಾರಾವಾಹಿಯಲ್ಲಿ ಭಾನುಮತಿ ಪಾತ್ರವನ್ನು ನಿಭಾಯಿಸುತ್ತಿರುವವರು ನಟಿ ಶರ್ಮಿತಾ ಗೌಡ (Sharmitha Gowda) ತನ್ನ ಗೆಳತಿಯರ ಜತೆ ವಿಯೆಟ್ನಾಂಗೆ ತೆರಳಿದ್ದರು.
ಶರ್ಮಿತಾ ಶೇರ್ ಮಾಡಿರುವ ಪೋಟೊಗಳಲ್ಲಿ ಮೈ ಮೇಲೆ ಹೆಬ್ಬಾವು ಹಾಕಿಕೊಂಡಿದ್ದಾರೆ. ಹೆಬ್ಬಾವಿನ ಜತೆ ಇರುವ ಶರ್ಮಿತಾ ಫೋಟೊ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.
ವಿಯೆಟ್ನಾಂನ ಪ್ರೇಕ್ಷಣೀಯ ಸ್ಥಳಗಳಲ್ಲಿ ಮಾರ್ಬಲ್ ಮೌಂಟೇನ್ ಕೂಡ ಒಂದು. ಮಾರ್ಬಲ್ ಮೌಂಟೇನ್ನಲ್ಲಿ ಶರ್ಮಿತಾ ಗೌಡ ಪೋಸ್ ಕೊಟ್ಟಿದ್ದಾರೆ.
‘ಗೀತಾ’ ಸೀರಿಯಲ್ನಲ್ಲಿ ಅತ್ತೆ ಪಾತ್ರ ಮಾಡುತ್ತಿದ್ದರೂ, ಶರ್ಮಿತಾ ಗೌಡ ಸಖತ್ ಯಂಗ್ ಆಗಿ ಕಾಣುತ್ತಾರೆ.
ಬಾ ನಾ ಹಿಲ್ಸ್ನಲ್ಲಿ ಶರ್ಮಿತಾ ಗೌಡ ಸ್ಟನ್ನಿಂಗ್ ಲುಕ್!
South Cinema
Megha Shetty: ಮದುವೆ ಫಿಕ್ಸ್ ಆಯ್ತಾ ಬಂಗಾರ? ಮೂಗು ಚುಚ್ಚಿಸಿಕೊಂಡ ಮೇಘಾ ಶೆಟ್ಟಿಗೆ ಫ್ಯಾನ್ಸ್ ಪ್ರಶ್ನೆ!
Megha Shetty: ʻಬಂಗಾರʼ ಅಂತಲೇ ಧಾರಾವಾಹಿಯಲ್ಲಿ ಅಪ್ಪ ಸುಬ್ಬವಿನಿಂದ ಕರೆಸಿಕೊಳ್ಳುತ್ತಿದ್ದ ಮೇಘನಾ ಇದೀಗ ಮೂಗು ಚುಚ್ಚಿಸಿಕೊಂಡಿದ್ದಾರೆ. ʻʻಬಂಗಾರಗೆ ಮದುವೆ ಫಿಕ್ಸ್ ಆಯ್ತಾ?ʼʼಎಂದು ಅವರ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ (Megha Shetty) ಆಗಾಗ ರೀಲ್ಸ್ ಮಾಡುವುದರ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಇದೀಗ ಹಲವು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ʻಬಂಗಾರʼ ಅಂತಲೇ ಧಾರಾವಾಹಿಯಲ್ಲಿ ಅಪ್ಪ ಸುಬ್ಬವಿನಿಂದ ಕರೆಸಿಕೊಳ್ಳುತ್ತಿದ್ದ ಮೇಘನಾ ಇದೀಗ ಮೂಗು ಚುಚ್ಚಿಸಿಕೊಂಡಿದ್ದಾರೆ. ʻʻಬಂಗಾರಗೆ ಮದುವೆ ಫಿಕ್ಸ್ ಆಯ್ತಾ?ʼʼಎಂದು ಅವರ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಮೇಘಾ ಶೆಟ್ಟಿ ಮೂಗು ಚುಚ್ಚಿಕೊಳ್ಳುವ ವಿಡಿಯೊ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಮೂಗು ಚುಚ್ಚಿಸಿಕೊಳ್ಳುವುದಕ್ಕೂ ಮುನ್ನ ಸಹಜವಾಗಿಯೇ ಮೇಘಾ ಕೂಡ ಹೆದರಿದ್ದಾರೆ. ಆದರೆ, ಮೂಗು ಚುಚ್ಚುವವರು ಕೊಂಚ ಧೈರ್ಯ ಹೇಳಿದ್ದಾರೆ. ಬಳಿಕ ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ಚುಚ್ಚಿದ್ದಾರೆ. ಈ ವಿಡಿಯೊ ಕಂಡು ಮೇಘನಾ ಫ್ಯಾನ್ಸ್ ಮದುವೆಗೆ ತಯಾರಿ ಆದ್ರಾ? ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ʻʻಬಂಗಾರ ಈಗ ಇನ್ನು ಮುದ್ದಾಗಿ ಕಾಣಿಸುತ್ತಿದ್ದೀಯಾʼʼಎಂದು ಕಮೆಂಟ್ ಮಾಡಿದ್ದಾರೆ. ಮೇಘಾ ಶೆಟ್ಟಿ ಆಗಾಗ ಫೋಟೊಶೂಟ್ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಹಳ್ಳಿ ಉಡುಗೆಯಾಗಿರುವ ಲಂಗ ದಾವಣಿ ತೊಟ್ಟು ನಟಿ ಮೇಘಾ ಶೆಟ್ಟಿ ಮಿಂಚಿದ್ದರು. ಮಾದಕ ನೋಟದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದ ಮೇಘಾ ಶೆಟ್ಟಿ ಸಿಂಪಲ್ ಲುಕ್ನಲ್ಲಿ ಕಂಡಿದ್ದರು. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ನಟಿ ಮೇಘಾ ಶೆಟ್ಟಿ ಬ್ಯುಸಿ ಇದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಸಖತ್ ಆ್ಯಕ್ಟಿವ್ ಆಗಿದ್ದಾರೆ.
ಇದನ್ನೂ ಓದಿ: Megha Shetty: ಮುಕ್ತಾಯವಾಗಲಿದೆಯೇ ʻಜೊತೆ ಜೊತೆಯಲಿʼ ಧಾರಾವಾಹಿ; ಮೇಘಾ ಶೆಟ್ಟಿ ಹೇಳಿದ್ದೇನು?
ಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಜೋತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿಯ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ʻಟ್ರಿಬಲ್ ರೈಡಿಂಗ್ʼ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು ಮೇಘಾ ಶೆಟ್ಟಿ. ಧನ್ವೀರ್ ನಟನೆಯ ʻಕೈವʼ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಮರಾಠಿ ಭಾಷೆಗೂ ಕಾಲಿಟ್ಟಿದ್ದಾರೆ. ‘ಲಂಡನ್ ಕೆಫೆ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.
ಕಿರುತೆರೆ
Amrithadhare Serial Kannada: `ಅಮೃತಧಾರೆ’ಸೆಟ್ನಲ್ಲಿ ʻನಾನು ನಂದಿನಿʼ ಸ್ಟೆಪ್; ಎಲ್ಲೆಲ್ಲೂ ವಿಕ್ಕಿಪೀಡಿಯಾ ಸಾಂಗ್ ಗುಂಗು!
ʻಅಮೃತಧಾರೆʼ ಧಾರಾವಾಹಿ (Amrithadhare Serial Kannada) ಖ್ಯಾತಿಯ ಸಾರಾ ಅಣ್ಣಯ್ಯ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಸಾರಾ (sara annaiah) ಅವರಿಗೆ ಸಹ ನಟ ಶಶಿಧರ್ ಹೆಗ್ಡೆ ಸಾಥ್ ಕೊಟ್ಟಿದ್ದಾರೆ.
ತಮ್ಮ ವಿಭಿನ್ನ ಕಾಮಿಡಿ ವಿಡಿಯೊಗಳಿಂದ ವಿಡಿಯೊ ಕ್ರಿಯೇಟರ್ ವಿಕಾಸ್ ( ವಿಕ್ಕಿ ಪೀಡಿಯಾ) (Vicky Pedia) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ʻನಾನು ನಂದಿನಿʼ ಹಾಡಿಗೆ ರೀಲ್ಸ್ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಇದೀಗ ʻಅಮೃತಧಾರೆʼ ಧಾರಾವಾಹಿ (Amrithadhare Serial Kannada) ಖ್ಯಾತಿಯ ಸಾರಾ ಅಣ್ಣಯ್ಯ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಸಾರಾ (sara annaiah) ಅವರಿಗೆ ಸಹ ನಟ ಶಶಿಧರ್ ಹೆಗ್ಡೆ ಸಾಥ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ವಿಕ್ಕಿ ಪೀಡಿಯಾ ಅವರ ಈ ರೀಲ್ಸ್ 15 ಮಿಲಿಯನ್ಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.
“ನಾನು ನಂದಿನಿ ಬೆಂಗಳೂರಿಗ್ ಬಂದಿನಿ” ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲಕ್ಷ ಲಕ್ಷ ವ್ಯೂಸ್ ಸಾಧಿಸಿ ದಾಖಲೆ ಬರೆದಿದೆ. ಇದೀಗ ಅಮೃತಧಾರೆ ಧಾರಾವಾಹಿಯ ಕಲಾವಿದರು ಈ ಹಾಡಿಗೆ ರೀಲ್ಸ್ ಮಾಡಿದ್ದು, ಸಖತ್ ಫೇಮಸ್ ಆಗಿದೆ. ಬಿಗ್ ಬಾಸ್ ಖ್ಯಾತಿಯ ವೈನ್ ಸ್ಟೋರ್ ರಘು, ದಿವ್ಯಾ ಉರುಡುಗ, ನಿರೂಪಕಿ ಅನುಪಮಾ ಗೌಡ, ನಟಿ ಚೈತ್ರಾ ಆಚಾರ್, ಚಂದನಾ ಅನಂತಕೃಷ್ಣ ಸೇರಿದಂತೆ ಹಲವರು ಈ ವಿಡಿಯೊ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನ ಮೀಮ್ಸ್ ಪೇಜ್ಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿದೆ.
ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್ (vickypedia) ಕಂಟೆಂಟ್ ಕ್ರಿಯೇಟರ್. ಭಾಷಣ ಟ್ರಾನ್ಸ್ಲೇಟ್ ವಿಡಿಯೊ ಅಣಕ ಮಾಡಿ ಇವರು ಸಾಕಷ್ಟು ಫೇಮಸ್ ಆಗಿದ್ದರು. ಚುನಾವಣಾ ಸಮಯದಲ್ಲಿ ರಾಷ್ಟ್ರಮಟ್ಟದ ನಾಯಕರ ಹಿಂದಿ ಭಾಷೆಯ ಭಾಷಣವನ್ನು ಸಖತ್ ಆಗಿ ಕಾಮಿಡಿಯಾಗಿ ಅಣುಕಿಸಿದ್ದರು. ಆದರೀಗ ಹೆಣ್ಣು ಮಕ್ಕಳು ಉದ್ಯೋಗಕ್ಕೆಂದು ನಗರಕ್ಕೆ ಬಂದು, ಪಿಜಿಯಲ್ಲಿ ಯಾವ ರೀತಿ ಸಮಸ್ಯೆಗೆ ಗುರಿಯಾಗುತ್ತಾರೆ, ಅಷ್ಟೇ ಅಲ್ಲದೇ ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲಿಷ್ ಬಾರದೇ ಏನೆಲ್ಲಾ ಸಮಸ್ಯೆಗೆ ಗುರಿಯಾಗುತ್ತಾರೆ ಎಂಬುದನ್ನು ವಿಡಿಯೊ ಮೂಲಕ ಹಾಡಿದ್ದಾರೆ.
ಇದನ್ನೂ ಓದಿ: Viral Video: ನಾನು ನಂದಿನಿ ಬೆಂಗಳೂರು ಬಂದಿನಿ; ಭಾರಿ ವೀಕ್ಷಣೆ ಕಂಡ ವಿಕ್ಕಿಪೀಡಿಯಾ ಹಾಡು!
ಸಾರಾ ಅಣ್ಣಯ್ಯ ಪೋಸ್ಟ್
ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್ ವಿಗ್ ಧರಿಸಿ, ಬಾರ್ಬಿ ಹಾಡಿನ ಟ್ಯೂನ್ ಬಳಸಿಕೊಂಡು ಈ ಹಾಡು ಹಾಡಿದ್ದಾರೆ. ‘ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ, ಐಟಿ ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ, ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ, ಬಾರೆ ನಂದಿನಿ ಪೇಡ ತಿನ್ನಿಸ್ತೀನಿ, ಬೆ ಬೆ ಬೇಡ, ಬಾರೆ ನಂದಿನಿ ಪಿಕ್ಚರ್ ತೋರಿಸ್ತೀನಿ, ಬೇಡ ಬೇಡ, ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು, ಇಲ್ಲ ಅಂದ್ರೆ ಐಟಿಲಿ ಕಷ್ಟ ಆಗುತ್ತೆ ಸರ್ ನಾನು ಕನ್ನಡ ಮೀಡಿಯಾಂನಲ್ಲಿ ಓದಿದ್ದೆ. ಅದಕ್ಕೆ ನನ್ನ ಇಂಗ್ಲೀಷ್ ಅಷ್ಟಕಷ್ಟೆ, ಐ ಕ್ಯಾನ್ ಟ್ರೈ ಐ ಕ್ಯಾನ್ ಟಾಕ್, ಬಟ್ ವಾಟ್ ಐ ಸ್ಪೀಕ್ ಇಟ್ಸ್ ಬಟ್ಲರ್ ಇಂಗ್ಲೀಷ್’ ಇದು ಈ ಹಾಡಿನ ಲಿರೀಕ್ಸ್ ಆಗಿದೆ. ಪೋಷಕರು ಕೂಡ ಮಕ್ಕಳೊಂದಿಗೆ ರೀಲ್ಸ್ ಮಾಡಿದ್ದಾರೆ.
ಕರ್ನಾಟಕ
VISTARA TOP 10 NEWS : ಸನಾತನ ಧರ್ಮ ನಾಶ ಹೇಳಿಕೆಗೆ ಮೋದಿ ಕೌಂಟರ್; ಕಣ್ಣೀರ ಕಥೆಗಳ ಹೇಳುತ್ತಿದೆ ಆ ಎನ್ಕೌಂಟರ್!
VISTARA TOP 10 NEWS: ಸನಾತನ ಧರ್ಮ ನಾಶವೇ ಇಂಡಿಯಾ ಬ್ಲಾಕ್ ಗುರಿ ಎಂದು ಚಾಟಿ ಬೀಸಿದ್ದಾರೆ ಪ್ರಧಾನಿ ಮೋದಿ, ಕೇರಳದಲ್ಲಿ ನಿಫಾ ಹೆಚ್ಚಾಗಿದ್ದರಿಂದ ಬೀಳುತ್ತಾ ಲಾಕ್ಡೌನ್ ಎಂಬ ಭಯ.. ಹೀಗೆ ಹಲವು ಪ್ರಮುಖ ಸುದ್ದಿಗಳ ಗುಚ್ಛವೇ
ವಿಸ್ತಾರ ಟಾಪ್ 10 ನ್ಯೂಸ್
1.ಸನಾತನ ಧರ್ಮದ ನಿರ್ನಾಮವೇ ಇಂಡಿಯಾ ಒಕ್ಕೂಟದ ಗುರಿ; ಚಾಟಿ ಬೀಸಿದ ಮೋದಿ
ಸನಾತನ ಧರ್ಮದ ನಿರ್ಮೂಲನೆ ಕುರಿತು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ವಿವಾದಿತ ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. “ಇಂಡಿಯಾ ಒಕ್ಕೂಟದ ಉದ್ದೇಶವು ಸನಾತನ ಧರ್ಮವನ್ನು (Sanatana Dharma) ನಿರ್ಮೂಲನೆ ಮಾಡುವುದೇ ಆಗಿದೆ. ಹಾಗಾಗಿ, ಇಂತಹ ದುಷ್ಟ ಉದ್ದೇಶದ ವಿರುದ್ಧ ನಾವು ಒಗ್ಗಟ್ಟಾಗಬೇಕು” ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. 11 ಜಿಲ್ಲೆಗಳು ಸಂಪೂರ್ಣ ಬರ ಪೀಡಿತ, 161 ತಾಲೂಕುಗಳ ಪಟ್ಟಿ ಇಲ್ಲಿದೆ
ರಾಜ್ಯದ 161 ತಾಲೂಕುಗಳನ್ನು ಬರಪೀಡಿತ (Drought Taluk) ತಾಲೂಕುಗಳು ಎಂದು ಘೋಷಿಸಿ ರಾಜ್ಯ ಸರ್ಕಾರ (Karnataka State Government) ಆದೇಶ ಹೊರಡಿಸಿದೆ. ಇದರಲ್ಲಿ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ಕೊಪ್ಪಳ, ಶಿವಮೊಗ್ಗ, ಕಲಬುರಗಿ, ವಿಜಯಪುರ, ಧಾರವಾಡ, ವಿಜಯನಗರ ಜಿಲ್ಲೆಗಳ ಸಂಪೂರ್ಣ ತಾಲೂಕುಗಳು ಬರ ಎಂದು ಘೋಷಿಸಲ್ಪಟ್ಟಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಕೇರಳದಲ್ಲಿ ನಿಫಾ ವೈರಸ್ ಹಾವಳಿ; ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ; ಲಾಕ್ಡೌನ್ ಜಾರಿ?
ಕೇರಳದಲ್ಲಿ ನಿಫಾ ಸೋಂಕಿನ ಹಾವಳಿ ಜಾಸ್ತಿಯಾಗುತ್ತಿದೆ. ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ನಿಫಾ ಸೋಂಕು (Nipah Virus) ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ನಿಫಾ ಸೋಂಕಿಗೆ ತುತ್ತಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಈಗಾಗಲೇ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಜನರಲ್ಲಿ ಆತಂಕ ಜಾಸ್ತಿಯಾಗುತ್ತಿದೆ. ಹಾಗೆಯೇ, ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಾಗುತ್ತದೆ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ನಿಫಾ ವೈರಸ್ ಬಗ್ಗೆ ನಿಗಾ ಇರಲಿ! ಇದರ ಲಕ್ಷಣವೇನು?
4. ಚೈತ್ರಾ ಕುಂದಾಪುರ ವಂಚನೆ ಕೇಸು: ಸ್ವಾಮೀಜಿ ಅರೆಸ್ಟ್ ಆದರೆ ದೊಡ್ಡವರು ಸಿಕ್ಕಿಬೀಳ್ತಾರಾ?
ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್ನಿಂದ ನಡೆಸಿರುವ ಐದು ಕೋಟಿ ರೂ. ವಂಚನೆ ಪ್ರಕರಣ ಅಂತಿಮವಾಗಿ ರಾಜಕಾರಣದ ಪಡಸಾಲೆಗೂ ಬರುತ್ತದೆಯೇ ಎನ್ನುವ ಪ್ರಶ್ನೆ ಗಂಭೀರವಾಗಿ ಕೇಳಿಬಂದಿದೆ. ಪ್ರಕರಣದಲ್ಲಿ ನೇರವಾಗಿ 1.5 ಕೋಟಿ ರೂ. ಪಡೆದುಕೊಂಡ ಅಭಿನವ ಹಾಲಶ್ರೀ ಸ್ವಾಮೀಜಿ (Abhinava Halasree Swameeji) ಅವರ ಬಂಧನ ಇನ್ನೂ ಆಗಿಲ್ಲ. ಅವರ ಬಂಧನ ಆಗ್ಲಿ ಎಲ್ಲಾ ಸತ್ಯ ಹೊರಬೀಳುತ್ತದೆ ಎಂದು ಚೈತ್ರ ಕುಂದಾಪುರ ಹೇಳಿದ್ದಕ್ಕೂ ಇನ್ನೂ ಸ್ವಾಮೀಜಿ ಬಂಧನ ಆಗದೆ ಇರುವುದಕ್ಕೂ ಏನಾದರೂ ಸಂಬಂಧವಿದೆಯಾ ಎಂಬ ಪ್ರಶ್ನೆ ಗಾಢವಾಗಿ ಕಾಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ 1: ವಂಚನೆ ಕಥೆ ಅತ್ಲಾಗಿರಲಿ, ಕಡುಬಡವ ಗೋವಿಂದ ಪೂಜಾರಿ ಮಹಾಸಾಧಕನಾದ Motivational ಕಥೆ ಕೇಳಿ
ಪೂರಕ ಸುದ್ದಿ 2: ಯಾರ್ರೀ ಆ ಚೈತ್ರಾ ಕುಂದಾಪುರ? ; ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಕಚೇರಿಯಿಂದಲೇ ಫೋನ್
5.ಆಧಾರ್ನಿಂದ ಡಿಎಲ್ವರೆಗೆ; ಅ.1ರಿಂದ ಎಲ್ಲದಕ್ಕೂ ಇದೊಂದೇ ಡಾಕ್ಯುಮೆಂಟ್ ಸಾಕು
ಜನನ ಹಾಗೂ ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ ಯು (2023) ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಇದರಿಂದ ಒಂದೇ ದಾಖಲೆ ನೀಡುವ ಮೂಲಕ ಹತ್ತಾರು ದಾಖಲೆಯನ್ನು ಪಡೆಯಬಹುದಾಗಿದೆ. ಅಂದರೆ ಆಧಾರ್ನಿಂದ ಡಿಎಲ್ವರೆಗೆ ಎಲ್ಲದಕ್ಕೂ ಒಂದೇ ಡಾಕ್ಯುಮೆಂಟ್ ಸಾಕು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಅನಂತ್ ನಾಗ್ ಎನ್ಕೌಂಟರ್: ಉಗ್ರರ ಗುಂಡಿಗೆ ಎದೆಯೊಡ್ಡಿದವರ ಹಿಂದಿವೆ ಹೃದಯಸ್ಪರ್ಶಿ ಕತೆಗಳು
”ನಾವು ಬೇಗನೆ ಹೊಸ ಮನೆಗೆ ಹೋಗೋಣ,” ಎಂದು ತನ್ನ 2 ವರ್ಷದ ಮಗಳಿಗೆ ಹೇಳಿ ಹೋಗಿದ್ದ ಮೇಜರ್ ಆಶೀಷ್ ಧೋನೌಕ್, ಗುಂಡಿಗೆ ಎದೆಯೊಡ್ಡುವ ಕೆಲವೇ ಗಂಟೆಗಳ ಹಿಂದೆ 6 ವರ್ಷದ ಮಗ ಹಾಗೂ 2 ವರ್ಷದ ಮಗಳೊಂದಿಗೆ ಮಾತನಾಡಿದ್ದ ಕರ್ನಲ್ ಮನಪ್ರೀತ್ ಸಿಂಗ್, ತಿಂಗಳ ಹಿಂದೆಯಷ್ಟೇ ಅಪ್ಪನಾಗಿದ್ದ ಡಿವೈಎಸ್ಪಿ ಹುಮಾಯೂನ್ ಭಟ್ ಅವರೀಗ ನೆನಪಷ್ಟೇ.. ದೇಶದ ಗಡಿ ರಕ್ಷಣೆಯಲ್ಲಿ ತಮ್ಮ ಪ್ರಾಣಗಳನ್ನೇ ಅರ್ಪಿಸಿ ಹುತಾತ್ಮರಾಗಿದ್ದಾರೆ. ಒಬೊಬ್ಬರ ಸಾವಿನ ಹಿಂದೆಯೂ ಒಂದೊಂದು ಕಣ್ಣೀರ ಕಥೆ ಇದೆ.. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್ ಉಗ್ರ ಅರಾಫತ್ ಅಲಿ ಸೆರೆ, ತೀವ್ರ ವಿಚಾರಣೆ
ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡು 2020ರಿಂದ ತಲೆಮರೆಸಿಕೊಂಡಿದ್ದ ಶಿವಮೊಗ್ಗ ಮೂಲದ ಅರಾಫತ್ ಅಲಿಯನ್ನು ನವ ದೆಹಲಿಯಲ್ಲಿ ಎನ್ಐಎ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು, ಈತ ಹಲವು ಪ್ರಕರಣಗಳಲ್ಲಿ ಬೇಕಿದ್ದಾನೆ. ವಿಚಾರಣೆ ಮೂಲಕ ಈತನಿಂದ ಇನ್ನಷ್ಟು ಮಾಹಿತಿ ಹೊರಬರಬೇಕಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿನಿಗೆ ಕಾರು ಗುದ್ದಿಸಿ ನಕ್ಕ ಪೊಲೀಸ್; ಸಾವಿಗೆ ಭಾರತ ಖಂಡನೆ
ಅಮೆರಿಕದ ಸಿಯಾಟಲ್ನಲ್ಲಿ ಭಾರತದ ಜಾಹ್ನವಿ ಕಂಡುಲಾ (Jaahnavi Kandula) ಎಂಬ 23 ವರ್ಷದ ವಿದ್ಯಾರ್ಥಿನಿಯು ಅಪಘಾತದಲ್ಲಿ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜಾಹ್ನವಿ ಕಂಡುಲಾ ಅವರಿಗೆ ಪೊಲೀಸ್ ವಾಹನ ಡಿಕ್ಕಿಯಾಗಿದ್ದು, ಇದಾದ ಬಳಿಕ ಪೊಲೀಸ್ ಅಧಿಕಾರಿಯು ದರ್ಪ ತೋರಿದ ವಿಡಿಯೊ ಈಗ ವೈರಲ್ ಆಗಿದೆ. ಹಾಗೆಯೇ, ಪೊಲೀಸರ ದರ್ಪವನ್ನು ಭಾರತ ಖಂಡಿಸಿದ್ದು, ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಕೊಹ್ಲಿ ಭೇಟಿಗಾಗಿ ಶಬರಿಯಂತೆ ಕಾದ ಲಂಕಾ ಯುವತಿ; 19 ವರ್ಷಗಳ ಬಳಿಕ ಕನಸು ನನಸು
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ(Virat Kohli) ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪ್ರಸ್ತುತ ಏಷ್ಯಾಕಪ್(Asia Cup 2023) ಆಡುತ್ತಿರುವ ವಿರಾಟ್ ಕೊಹ್ಲಿಗೆ ಲಂಕಾದ ಅಭಿಮಾನಿಯೊಬ್ಬಳು ತಾನೇ ಮಾಡಿದ ಕೊಹ್ಲಿಯ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಗಮನಸೆಳೆದಿದ್ದಾಳೆ. ಆಕೆ ಈ ಕ್ಷಣಕ್ಕಾಗಿ 17 ವರ್ಷಗಳಿಂದ ಕಾಯುತ್ತಿದ್ದಳಂತೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಟಿಆರ್ಪಿಯಲ್ಲಿ ಏರಿಕೆ ಕಂಡ ಅಮೃತಧಾರೆ, ಗಟ್ಟಿಮೇಳಕ್ಕೆ ನಾಲ್ಕನೇ ಸ್ಥಾನ
ʻಸೀತಾ ರಾಮ’ ಧಾರಾವಾಹಿ ಇದೀಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ದಿನೇದಿನೆ ಹೆಚ್ಚು ಪೈಪೋಟಿ ನೀಡಲು ಶುರು ಮಾಡಿದೆ. ಯಾವಾಗಲೂ ‘ಗಟ್ಟಿಮೇಳ’ ಎರಡನೇ ಸ್ಥಾನವನ್ನು ಕಾದಿರಿಸಿಕೊಂಡಿತ್ತು. ಆದರೀಗ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಅಮೃತಧಾರೆ ಧಾರಾವಾಹಿ ಟಿಆರ್ಪಿ ಏರಿಕೆ ಕಂಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಕಿರುತೆರೆ
Jyothi Rai: ಹಾಟ್ ಫೋಟೊಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕಡೆಸಿದ ‘ಜೋಗುಳ’ ಖ್ಯಾತಿಯ ನಟಿ ಜ್ಯೋತಿ ರೈ!
Jyothi Rai: ಜ್ಯೋತಿ ರೈ ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಸಖತ್ ಬೋಲ್ಡ್ ಆಗಿ ಇರುವ ಫೋಟೊವನ್ನು ಶೇರ್ ಮಾಡುತ್ತ ಇರುತ್ತಾರೆ. ಕಮೆಂಟ್ ಸೆಕ್ಷನ್ ಬಂದ್ ಮಾಡಿದ್ದಾರೆ.
ಇದನ್ನೂ ಓದಿ: Jyothi Rai: ಮಗನ ʻಆಟಿಸಂʼ ಕಾಯಿಲೆ ವಿರುದ್ಧ ಹೋರಾಡಿದ್ದ ಜ್ಯೋತಿ ರೈ ಈಗ ಯುವ ನಿರ್ದೇಶಕನ ಜತೆ ಅಫೇರ್?
-
ಪ್ರಮುಖ ಸುದ್ದಿ21 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ13 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ18 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ2 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಗ್ಯಾಜೆಟ್ಸ್15 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ದೇಶ14 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕ್ರೈಂ14 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ಉತ್ತರ ಕನ್ನಡ15 hours ago
ದೇವಾಲಯದ ಅವಶೇಷಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕರು; ಹಿಂದು ಸಂಘಟನೆಗಳು ಕಿಡಿ