ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕ ಸಂಕಲ್ಪದ ಹಿಂದಿನ ಗೂಢಗಳು - Vistara News

ಅಂಕಣ

ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕ ಸಂಕಲ್ಪದ ಹಿಂದಿನ ಗೂಢಗಳು

ಧವಳ ಧಾರಿಣಿ ಅಂಕಣ: ರಾಮಾಯಣದಲ್ಲಿ ದಶರಥನ ಮೇಲೆ ಇರುವ ದೊಡ್ಡ ಆಪಾದನೆ ಎಂದರೆ ಭರತನನ್ನು ತಪ್ಪಿಸಿ ರಾಮನಿಗೆ ಪಟ್ಟ ಕಟ್ಟಲು ಮುಂದಾದ ಎನ್ನುವುದು, ಇದು ನಿಜವೇ?

VISTARANEWS.COM


on

king dasharatha dhavala dharini
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾತು ಮರೆತ ದಶರಥ

dhavala dharini by Narayana yaji

ವಿಪ್ರೋಷಿತಶ್ಚ ಭರತೋ ಯಾವದೇವ ಪುರಾದಿತಃ.
ತಾವದೇವಾಭಿಷೇಕಸ್ತೇ ಪ್ರಾಪ್ತಕಾಲೋ ಮತೋ ಮಮ৷৷ಅ.4.25৷৷

ಮೇಲಾಗಿ ಭರತನು ಈ ಸಮಯದಲ್ಲಿ ಪಟ್ಟಣದಿಂದ ದೂರವಿರುವನು. ನನ್ನ ಅಭಿಪ್ರಾಯದಂತೆ (ಆತನು ಹಿಂತಿರುಗಿ ಬರುವುದರೊಳಗಾಗಿ) ಈ ಸಮಯವೇ ನಿನ್ನ ಪಟ್ಟಾಭಿಷೇಕಕ್ಕೆ ಯೋಗ್ಯ ಪ್ರಾಪ್ತಕಾಲವಾಗಿದೆ.

ರಾಮಾಯಣದಲ್ಲಿ ದಶರಥನ ಮೇಲೆ ಇರುವ ಬಹುದೊಡ್ಡ ಆಪಾದನೆ ಎಂದರೆ ಆತ ಕೈಕೇಯಿಯನ್ನು ಮದುವೆಯಾಗುವ ಮೊದಲು ಆಕೆಯ ತಂದೆಯಾದ ಅಶ್ವಪತಿ ಮಹಾರಾಜನಿಗೆ “ಕೈಕೇಯಿಯ ಮಕ್ಕಳಿಗೆ ಕೋಸಲ ರಾಜ್ಯವನ್ನು ಕನ್ಯಾಶುಲ್ಕವಾಗಿ ಕೊಡುತ್ತೇನೆ” ಎನ್ನುವ ಭಾಷೆಯನ್ನು ಕೊಟ್ಟು ಮದುವೆಯಾಗಿದ್ದಾನೆ. ಅದನ್ನು ಮರೆಮಾಚಿ ರಾಮನಿಗೆ ಪಟ್ಟವನ್ನು ಕಟ್ಟಲು ಹೊರಟಿದ್ದಾನೆ. ಭಾಷೆಯ ವಿಷಯ ಆತನ ನಂಬಿಗಸ್ಥ ಮಂತ್ರಿಯಾದ ಸುಮಂತ್ರನಿಗೂ ಗೊತ್ತಿತ್ತು. ವಂಚನೆಯಿಂದ ಹೂಡಿದ ಈ ಕಾರಣಕ್ಕಾಗಿಯೇ ರಾಮನಿಗೆ ಪಟ್ಟಾಭಿಷೇಕದ ಯೋಗ ಮುರಿದು ಕಾಡಿಗೆ ಹೋಗಬೇಕಾಗಿ ಬಂತು. ರಾಮನಿಗೆ ಪಟ್ಟಗಟ್ಟುವ ನಿರ್ಣಯವನ್ನು ತೆಗೆದುಕೊಂಡಾಗ ದಶರಥ ಮೇಲೆ ಉಲ್ಲೇಖಿಸಿರುವ ಶ್ಲೋಕವನ್ನು ತನ್ನ ಮಗ ರಾಮನಲ್ಲಿ ಹೇಳಿರುವುದು. “ಭರತನೇನಾದರೂ ಕೇಕಯದಿಂದ ಬಂದುಬಿಟ್ಟರೆ ಕಷ್ಟವಾಗಿಬಿಡುತ್ತದೆ. “ಭವನ್ತಿ ಬಹು ವಿಘ್ನಾನಿ ಕಾರ್ಯಾಣ್ಯೇವಂವಿಧಾನಿ ಹಿ” ಮಹಾಕಾರ್ಯಗಳಾಗಬೇಕಾದರೆ ಬಹುವಿಧವಾದ ವಿಘ್ನಗಳು ಎದುರಾಗುತ್ತವೆ. ಹಾಗಾಗಿ ಭರತನ ವಿಷಯದಲ್ಲಿ ಆಲೋಚನೆ ಮಾಡದೇ ನೀನು ನಾಳೆಯೇ ಪಟ್ಟವನ್ನು ಏರಲೇ ಬೇಕು ಎನ್ನುವ ಜಾಗರೂಕತೆಯ ಮಾತುಗಳು ಇಲ್ಲಿವೆ.

ರಾಮನೂ ಮೌನವಾಗಿ ಈ ಮಾತುಗಳಿಗೆ ಅನುಮತಿಯನ್ನು ಸೂಚಿಸಿ ಮುಂದಿನ ಸಿದ್ಧತೆಗಾಗಿ ತೆರಳುತ್ತಾನೆ. ಈ ಸಂಭಾಷಣೆಗಳಿಗೆ ಅರ್ಥವನ್ನು ಹುಡುಕುವುದಾದರೆ ದಶರಥನ ರಾಜತ್ವದ ಹೊಣೆಯನ್ನು ಮತ್ತು ನಿಭಾಯಿಸಬೇಕಾದ ಕರ್ತವ್ಯಗಳನ್ನು ವಿವೇಚಿಸುವುದೊಳ್ಳೆಯದು. ಇಬ್ಬರು ರಾಣಿಯರನ್ನು ಮದುವೆಯಾದರೂ ಆತನಿಗೆ ಸಂತಾನ ಭಾಗ್ಯವಿರಲಿಲ್ಲ. ಬಹು ದೀರ್ಘಕಾಲ ರಾಜ್ಯವನ್ನಾಳಿದ ದಶರಥನಿಗೆ ಕೊನೆ ಕೊನೆಗೆ ರಾಜತ್ವದ ಹೊಣೆಯ ಕುರಿತು ಉದಾಸೀನ ಭಾವ ಬಂದುಬಿಟ್ಟಿತ್ತು. ಆತ ಕೊನೆಯ ಪ್ರಯತ್ನವೆನ್ನುವಂತೆ ಕೇಕಯ ರಾಜ ಅಶ್ವಪತಿಯಲ್ಲಿ ಹೋಗಿ ವಧುವನ್ನು ಬೇಡಿದ್ದ. ಪರಾಕ್ರಮಶಾಲಿ ಮತ್ತು ಪ್ರತಿಷ್ಠಿತ ಮನೆತನಕ್ಕೆ ಕನ್ಯೆಯನ್ನು ಕೊಡಲು ಅಶ್ವಪತಿಗೆ ಗೊಂದಲವುಂಟಾಗಿದೆ. ಇಲ್ಲ ಎನ್ನುವ ಹಾಗೆಯೂ ಇಲ್ಲ, ಕೊಟ್ಟರೆ ತನ್ನ ಮಗಳ ಭವಿಷ್ಯ ಹೇಗೋ ಎನ್ನುವ ಚಿಂತೆ.

ಹಾಗಾಗಿ ತಂದೆಯಾಗಿ ತನ್ನ ಮಗಳ ಸಂತಾನದ ಭದ್ರತೆಯ ಕುರಿತು ಪ್ರಶ್ನಿಸಿದ್ದರೆ ಅದು ಸಹಜ. ಹೇಗೂ ಮೊದಲ ಇಬ್ಬರ ಪತ್ನಿಯರಿಗೆ ಸಂತಾನ ಆಗಿಲ್ಲ. ಹಾಗಾಗಿ ಕೈಕೇಯಿಗೆ ಮಕ್ಕಳಾದರೆ ಸಹಜವಾಗಿಯೇ ಅವಳ ಮಕ್ಕಳಿಗೇ ದೊರೆತನ ಪ್ರಾಪ್ತವಾಗುತ್ತದೆ. ಸೂರ್ಯವಂಶದ ಅರಸು ಮನೆತನವಾಗಿರುವುದರಿಂದ, ಧರ್ಮಿಷ್ಟರಾದ ವಸಿಷ್ಠರು, ವಾಮದೇವ ಮುಂತಾದವರಿರುವುದರಿಂದ ರಾಜನಾಗಲು ಬೇಕಾಗಿರುವ ಅರ್ಹತೆಯ ವಿಷಯದಲ್ಲಿ ಯಥಾಯೋಗ್ಯವಾಗಿ ಅವರು ಸಿದ್ಧ ಮಾಡುತ್ತಾರೆ. ಹಾಗಾಗಿ ಕೋಸಲ ರಾಜ್ಯವನ್ನು ಕನ್ಯಾಶುಲ್ಕವಾಗಿ ದಶರಥ ಕೊಟ್ಟಿರುವುದು ಕಾಲೋಚಿತವಾಗಿ ಆಗಿರುವುದರಲ್ಲಿ ಯಾವ ಸಂದೇಹವೂ ಇಲ್ಲ. ಪ್ರಶ್ನೆ ಬಂದಿರುವುದು ರಾಮ ಪಟ್ಟಾಭಿಷೇಕದ ವಿಷಯದಲ್ಲಿ ದಶರಥ ತನ್ನ ಮಾತನ್ನು ಯಾಕೆ ನಡೆಸಿಲ್ಲವೆನ್ನುವುದು.

ಕಾವ್ಯವನ್ನು ವಿವೇಚಿಸಬೇಕಾದಾಗ ಕವಿಯ ಆಲೋಚನೆಯನ್ನು ಅಥವಾ ಆತ ಪಾತ್ರವನ್ನು ಸಮರ್ಥವಾಗಿ ನಿರೂಪಿಸಿಲ್ಲವೆಂದು ಟೀಕೆ ಮಾಡುವುದಲ್ಲ. ಕಾವ್ಯದ ತಿರುಳು ತರ್ಕದಲ್ಲಿ ಇರುವುದಿಲ್ಲ. ಬಿ. ಎಚ್. ಶ್ರೀಧರ ಅವರು ಸಾಹಿತ್ಯ ವಿಮರ್ಶೆಯ ಕುರಿತು “Logic of beauty-ರಸತರ್ಕವು ಪ್ರಸ್ತುತವಲ್ಲದೇ, Beauty of Logic-ಶುದ್ಧ ತರ್ಕದ ಸೌಂದರ್ಯವಲ್ಲ” ಎನ್ನುತ್ತಾರೆ. (ಕಾವ್ಯ ಸೂತ್ರ- ಬಿ. ಎಚ್. ಶ್ರೀಧರ) ರಾಮಾಯಣವನ್ನು ಆಸ್ವಾದಿಸಬೇಕಾದರೆ ಮೊದಲು ರಾಮನ ಪಟ್ಟಾಭಿಷೇಕದ ಸಂದರ್ಭವನ್ನು ಗಮನಿಸಬೇಕು. ಶ್ರೀರಾಮ ಪಟ್ಟಾಭಿಷೇಕವೆನ್ನುವುದು ರಾಮಯಣದ ಮಹತ್ವದ ಘಟ್ಟ. ಹಿರಿಯ ಮಗನಾಗಿ ರಾಮ ಪಟ್ಟವನ್ನೇರಿ ರಾಜನಾಗಿದ್ದರೆ ಸೂರ್ಯವಂಶದ ಮತ್ತೋರ್ವ ದೊರೆಯಾಗಿ ಮರೆಯಾಗುತ್ತಿದ್ದ. ರಾಮಾಯಣ ಕಾವ್ಯವೇ ಇರುತ್ತಿರಲಿಲ್ಲ. ರಾಮನ ಪಟ್ಟಾಭಿಷೇಕ ಭಂಗವಾಗಲೇ ಬೇಕಿತ್ತು. ಆದರೆ ಅದಕ್ಕಿರುವ ನಾಟಕೀಯ ತಿರುವು ಮಾತ್ರ ಯಾವ ಕಾಲಕ್ಕೂ ಪ್ರಸ್ತುತವಾದಂತವು.

ರಾಮಾಯಣ ಮನುಷ್ಯನ ಸಿಟ್ಟು, ಈರ್ಷ್ಯೆ, ಸೆಡವು, ದುಃಖ, ಸಂತಸಗಳನ್ನೆಲ್ಲವನ್ನು ಒಳಗೊಂಡಿದೆ. ಮಾನವ ಸಹಜವಾದ ದೌರ್ಬಲ್ಯ ಕಾವ್ಯಕುಂಚದಲ್ಲಿ ಕಲಾತ್ಮಕವಾಗಿ ಅರಳಿದೆ. ಎಲ್ಲವೂ ಸಹಜವಾಗಿ ನಡೆಯಿತು ಎನ್ನುವಾಗ ಅನಿರೀಕ್ಷಿತವಾದ ತಿರುವುಗಳು ರಾಮಾಯಣದಲ್ಲಿ ಬರುವಷ್ಟು ಬೇರೆ ಕಾವ್ಯದಲ್ಲಿ ಬರುವುದಿಲ್ಲ. ಮಹಾಭಾರತದ ಕಷ್ಟಗಳೆಲ್ಲವೂ ಮನುಷ್ಯನ ದೌರ್ಬಲ್ಯದ ಮೂಲದವು. ಅಲ್ಲಿ ಯಾರೂ ಆದರ್ಶರಾಗಿ ಕಾಣಿಸುವುದಿಲ್ಲ. ಅನುಕರಣೀಯರೂ ಆಲ್ಲ. “ರಾಮನ ನಡೆಯನ್ನು ಅನುಸರಿಸು, ಕೃಷ್ಣನ ತತ್ತ್ವವನ್ನು ಅರಿತು ಅನುಸರಿಸು” ಎನ್ನುವ ಗಾದೆ ರೂಢಿಯಲ್ಲಿದೆ. ರಘುಕುಲದ ಘನತೆಯ ದೊರೆ ಮಕ್ಕಳಿಲ್ಲದೇ ಬಹಳಕಾಲ ನೊಂದು ನಂತರ ಮಕ್ಕಳನ್ನು ಪಡೆದ. ಯಜ್ಞದಲ್ಲಿ ಮಹಾಪುರುಷನೇ ದೇವನಿರ್ಮಿತ ಪಾಯಸವನ್ನು ತಂದು ಕೊಟ್ಟಮೇಲೆ ತನ್ನಮಕ್ಕಳು ದೈವಾಂಶ ಸಂಭೂತರು ಎನ್ನುವ ಅರಿವು ದಶರಥನಿಗೆ ಆಗಬೇಕಿತ್ತು. ಅದಾಗಲಿಲ್ಲ. ತಾನೋರ್ವ ದೊರೆ ಎನ್ನುವುದನ್ನು ಮರೆತು ಲೋಕದ ಸಾಮಾನ್ಯ ತಂದೆಯಂತೆ ವರ್ತಿಸುತ್ತಿದ್ದ. ಅಶ್ವಮೇಧ ಯಾಗದಲ್ಲಿ ಎಲ್ಲವನ್ನೂ ದಾನಮಾಡಿ ಜಿತೇಂದ್ರಿಯತ್ವವನ್ನು ಪಡೆದಿರಬೇಕಾದ ರಾಜನಲ್ಲಿ ಮಕ್ಕಳ ಅದರಲ್ಲಿಯೂ ರಾಮನ ಮೇಲಿನ ಮೋಹವನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ.

ಶಿವಧನುಸ್ಸನ್ನು ರಾಮ ಮುರಿಯುವಾಗ ದಶರಥ ಅಲ್ಲಿ ಇರಲಿಲ್ಲ. ಪರಶುರಾಮರು ಎದುರಾದಾಗ ವೈಷ್ಣವ ಧನಸ್ಸನ್ನು ಭಂಗಿಸಿದ ರಾಮನ ಪರಾಕ್ರಮವನ್ನು ಅಲ್ಲೇ ಇದ್ದೂ ಸಹ ದಶರಥ ನೋಡಲಿಲ್ಲ. ರಾಮನ ದಿವ್ಯ ರೂಪವನ್ನು ನೋಡುವ ಭಾಗ್ಯ ದಶರಥನಿಗೆ ಇಲ್ಲದೇ ಹೋಯಿತು. ಆತ ತನ್ನ ಕುಲದ ಅಭ್ಯುದಯಕ್ಕೆ ಮಕ್ಕಳನ್ನು ಬಯಸಿದ್ದ. ಹಾಗಾಗಿ ರಾಮನನ್ನು ಆತ ಕೇವಲ ಮುಪ್ಪಿನ ಕಾಲದಲ್ಲಿ ದೊರೆತ ಅಪೂರ್ವ ನಿಧಿಯಾಗಿ, ಪುನ್ನಾಮ ನರಕದಿಂದ ತಪ್ಪಿಸುವ ಪುತ್ರನಾಗಿ ನೋಡಿದನೇ ಹೊರತು ವಸಿಷ್ಠರಾಗಲಿ, ವಿಶ್ವಾಮಿತ್ರರಾಗಲಿ, ಅಗಸ್ತ್ಯರಾಗಲಿ ರಾಮನಲ್ಲಿ ಕಂಡ ಪರಮಧಾಮ ದೊರೆಗೆ ಬದುಕಿರುವಾಗ ಅರಿವಾಗಲೇ ಇಲ್ಲ. ಆತನ ಮಂತ್ರಿಯಾದ ಸುಮಂತ್ರನಿಗೆ ರಾಮ ಸಾಮಾನ್ಯನಲ್ಲ, ವಿಭೂತಿಪುರುಷ ಎನ್ನುವ ಅರಿವಿತ್ತು.

ರಾಮನ ಮೇಲೆ ದಶರಥನಿಗೆ ಮೋಹ ಉಂಟಾಗಲು ಕಾರಣ ಆತ ಹಿರಿಯ ಮಗನೆನ್ನುವುದು ಒಂದಾದರೆ ಇನ್ನೊಂದು ಆತನ ಗುಣಗಳು. ಅದರಲ್ಲಿಯೂ ಪರಶುರಾಮರನ್ನು ರಾಮ ಭಂಗಿಸಿದ ನಂತರ ಆತನ ಮೇಲಿನ ಅಭಿಮಾನವೇ ಅತಿಮೋಹವಾಗಿ ಪರಿಣಮಿಸಿತ್ತು. ತನ್ನ ಕುಲವನ್ನು ಕ್ಷತ್ರಿಯ ವೈರಿಯಿಂದ ರಕ್ಷಿಸಿದ ಮಹಾಶೂರ ಎನ್ನುವುದು ಕಾರಣವೂ ಇದ್ದಿರಬಹುದು. ಮಿಥಿಲೆಯಿಂದ ಅಯೋಧ್ಯೆಗೆ ಬಂದ ನಂತರ ರಾಜನ ಮನಸ್ಸಿನಲ್ಲಿ ಯಾವುದೋ ಒಂದು ಚಿಂತೆ ಕಾಡುತ್ತಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಆತ ಭರತನನ್ನು ಕರೆದು ಕೇಕಯದಿಂದ “ನಿನ್ನ ಸೋದರಮಾವ ಯುಧಾಜಿತ್ತನೆನ್ನುವವ ಬಂದಿದ್ದಾನೆ. ಆತನ ಸಂಗಡ ನೀನು ನಿನ್ನ ಅಜ್ಜನ ಮನೆಗೆ ಹೋಗಬೇಕು” ಎನ್ನುವ ಮಾತುಗಳನ್ನು ಆಡುತ್ತಾನೆ. ಅದಕ್ಕೆ ಕೊಡುವ ಕಾರಣ ಮಕ್ಕಳೆಲ್ಲರ ಮದುವೆಯ ಸಂದರ್ಭದಲ್ಲಿ ಅವರ ಸಂಬಂಧಿಕರೂ ಮಿಥಿಲೆಗೆ ಬಂದಿದ್ದರು. ಸಹಜವಾಗಿ ಕೇಕಯದಿಂದ ಯುಧಾಜಿತ್ತ ಬಂದಿದ್ದಾನೆ. ಅವನ ತಂದೆ ಅಶ್ವಪತಿ ಬಹುಶಃ ವೃದ್ಧಾಪ್ಯದ ಕಾರಣದಿಂದ ಬಂದಿರಲಿಕ್ಕಿಲ್ಲ. ಆತ ತನ್ನ ಮೊಮ್ಮಗನನ್ನು ನೋಡುವ ಇಚ್ಛೆಯನ್ನು ವ್ಯಕ್ತಪಡಿಸಿರಬೇಕು. ಮಿಥಿಲೆಯಲ್ಲಿ ಸೇರಿದ್ದ ಮಹರ್ಷಿಗಳ ಮುಂದೆ ಯುಧಾಜಿತ್ ಭರತನನ್ನು ತನ್ನ ಜೊತೆ ಕಳುಹಿಸಿಕೊಡು ಎಂದು ಹೇಳಿದ್ದ. “ಪ್ರಾರ್ಥಿತಸ್ತೇನ ಧರ್ಮಜ್ಞ ಮಿಥಿಲಾಯಾಮಹಂ ತಥಾ”. ಅಯೋಧ್ಯೆಗೆ ಹೋದ ಮೇಲೆ ನೊಡೋಣ, ಈಗ ಬೇಡ ಎಂದು ರಾಜ ಹೇಳಿರಬೇಕು.

ಆಗ ದಶರಥನಿಗೆ ಮಕ್ಕಳೆಲ್ಲರ ಮೇಲೆ ಮೋಹವಿತ್ತು. ಆ ಮೋಹ ಈಗ ರಾಮನ ಮೇಲೆ ಮಾತ್ರ ತಿರುಗಿಬಿಟ್ಟಿತ್ತು. ಮಕ್ಕಳಲ್ಲಿಯೂ ಲಕ್ಷ್ಮಣ ಸದಾ ರಾಮನೊಂದಿಗೆ ಇರುತ್ತಿದ್ದರೆ, ಶತ್ರುಘ್ನ ಭರತನನ್ನು ಅಗಲಿ ಇರುತ್ತಿರಲಿಲ್ಲ. ನಾಲ್ಕು ದೇಹ ಎರಡು ಜೀವವಾಗಿ ಮಕ್ಕಳ ಆಟೋಟಗಳಿದ್ದವು. ಸೂಕ್ಷ್ಮವಾಗಿ ರಾಜ ಮಕ್ಕಳ ಈ ಸ್ವಭಾವವನ್ನು ಗಮನಿಸಿದ. ಅದೇ ಹೊತ್ತಿಗೆ ಯುಧಾಜಿತ್ತ ಅಯೋಧ್ಯೆಗೆ ಬಂದು ಭರತನನ್ನು ಕೇಕಯಕ್ಕೆ ಕರೆದೊಯ್ಯಲು ಬಂದಿದ್ದಾನೆ. ಅಜ್ಜನ ಮನೆಯ ನೆಪ ಸಿಕ್ಕಿದ್ದೇ ಭರತನಿಗೆ “ನಿನ್ನ ಮಾವನನ್ನು ಇಚ್ಛೆಯನ್ನು ನಡೆಸಬೇಕಾಗಿರುವುದು ನಿನ್ನ ಧರ್ಮ- ತಸ್ಯ ತ್ವಂ ಪ್ರೀತಿಂ ಕರ್ತುಮಿಹಾರ್ಹಸಿ” ಎಂದು ಹೇಳುತ್ತಾನೆ. ಭರತ ತನ್ನ ತಂದೆಗೆ ವಿಧೇಯನಾಗಿ ತನ್ನೊಟ್ಟಿಗೆ ಶತ್ರುಘ್ನನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ನಮಸ್ಕರಿಸಿ ಹೊರಟುಬಿಟ್ಟ. ಅಜ್ಜನ ಆಶೀರ್ವಾದವನ್ನು ಪಡೆಯಲು ಅವರ ಜೊತೆ ಪತ್ನಿಯರಾದ ಮಾಂಡವೀ ಮತ್ತು ಶ್ರುತಕೀರ್ತಿಯರು ಹೊರಟಿದ್ದಾರೆಂದು ಊಹಿಸಬಹುದು.

ದಶರಥ ಈಗ ನಿರುಮ್ಮಳನಾಗಿದ್ದಾನೆ. ಆತನ ಹೆಂಡತಿಯರಾದ ಸುಮಿತ್ರೆ, ಕೈಕೇಯಿ ಇಬ್ಬರೂ ಆಶೀರ್ವದಿಸಿ ಮಕ್ಕಳನ್ನು ಕಳುಹಿಸಿದರು. ಕೈಕೆ ಮುಗ್ಧಳೇನೂ ಅಲ್ಲ, ರಾಜಕಾರಣದಲ್ಲಿ ಅನಾಸಕ್ತಳೂ ಅಲ್ಲ. ಆಕೆಗೆ ಯುದ್ಧವಿದ್ಯೆ, ರಾಜನೀತಿಗಳ ಅರಿವು ಚನ್ನಾಗಿಯೇ ಇತ್ತು. ಯುದ್ಧ ಕೌಶಲ್ಯಕ್ಕೆ ಕೇಕಯ ರಾಜ್ಯ ಏಕೆ ಎನ್ನುವುದಕ್ಕೆ ಆಗಿನ ಕಾಲದ ಭೌಗೋಳಿಕ ಪರಿಸ್ಥಿತಿಯನ್ನು ಗಮನಿಸಿದರೆ ಈಗಿನ ಬಿಯಾಸ್ ಮತ್ತು ಗಾಂಧಾರ ದೇಶದ ನಡುವೆ ಕೇಕಯ ರಾಜ್ಯವಿತ್ತು. ಅಲ್ಲಿನ ದೊರೆ ಅಶ್ವಪತಿಗೆ ಪ್ರಾಣಿಗಳ ಭಾಷೆ ಅರ್ಥವಾಗುತ್ತಿತ್ತೆಂದು ಸುಮಂತ್ರ ಹೇಳುತ್ತಾನೆ. ಅಧ್ಯಾತ್ಮಿಕವಾಗಿ ಅಶ್ವಪತಿ ದೊರೆ ಬಹಳಷ್ಟು ಸಾಧನೆಯನ್ನು ಗೈದಿದ್ದ. ಉದ್ಧಾಲಕ ಮಹರ್ಷಿಗೆ ಪ್ರಾಚೀನಶಾಲಾ, ಬುಡಿಲ ಇನ್ನಿತರರು ವೈಶ್ವಾನರ ವಿದ್ಯೆಯನ್ನು ಕಲಿಯಲು ಬಂದಾಗ ತನಗೆ ಆ ಕುರಿತು ತಿಳಿದಿಲ್ಲ. ಕೇಕಯದ ರಾಜ ಅಶ್ವಪತಿ ಅದನ್ನು ಅರಿತಿದ್ದಾನೆ. ಅವನ ಹತ್ತಿರವೇ ಕಲಿಯೋಣವೆಂದು ಬಂದು ವೈಶ್ವಾನರ ವಿದ್ಯೆಯನ್ನು ಕಲಿತು ಲೋಕಕ್ಕೆ ನೀಡಿದ ಎಂದು ಛಾಂದೋಗ್ಯ ಉಪನಿಷತ್ತು ಹೇಳುತ್ತದೆ.

king dasharatha
king dasharatha

ಯುಧಾಜಿತ್ ಯುದ್ಧವಿದ್ಯೆಯಲ್ಲಿಯೂ ನಿಪುಣನಾಗಿದ್ದ. ಪ್ರಬುದ್ಧ ಅರಸು ಮನೆತನವಾದ ಕೇಕಯದಲ್ಲಿ ರಾಜಕುಮಾರರಿಗೆ ಬೇಕಾಗಿರುವ ಎಲ್ಲಾವಿಧವಾದ ವಿದ್ಯೆಗಳೂ ಸಿಗುವುದರಲ್ಲಿ ಯಾವ ಅನುಮಾನವೂ ಇಲ್ಲದ ಕಾರಣದಿಂದ ಕೈಕೇಯಿಗಾಗಲೀ ಇನ್ನಿತರರಿಗಾಗಲೀ ಮಕ್ಕಳನ್ನು ಅಗಲುವಿಕೆಯ ನೋವು ಇಲ್ಲವಾಗಿತ್ತು. ಇತ್ತ ರಾಮಲಕ್ಷ್ಮಣರು ತಂದೆ ತಾಯಿಗಳ ಯೋಗಕ್ಷೇಮವನ್ನು ಚನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಅತ್ತ ಭರತ ಶತ್ರುಘ್ನರೂ ಸಹ ಅಜ್ಜನ ಮನೆಯಲ್ಲಿ ಸುಖವಾಗಿದ್ದರೂ ವೃದ್ಧನಾಗಿರುವ ತಮ್ಮ ತಂದೆ ತಾಯಿಗಳ ಸೇವೆಯನ್ನು ತಮಗೆ ಮಾಡಲು ಆಗುತ್ತಿರಲಿಲ್ಲವಲ್ಲಾ ಎನ್ನುವ ಕೊರಗು ಅವರನ್ನು ಆಗಾಗ ಕಾಡುತ್ತಿತ್ತು. ಕೆಲವೊಂದು ರಾಮಾಯಣದಲ್ಲಿ ಭರತ ಮತ್ತು ಶತ್ರುಘ್ನರು ವೃದ್ಧನಾಗಿರುವ ತಮ್ಮ ತಂದೆ ರಾಜ್ಯವನ್ನು ಹೇಗೆ ನಿರ್ವಹಿಸುತ್ತಾನೋ ಏನೋ! ಈಗಲಾದರೂ ರಾಮನನ್ನು ಯುವರಾಜನನ್ನಾಗಿ ಮಾಡಿರಬಹುದೇ ಎಂದು ಆಗಾಗ ಹೇಳಿಕೊಳ್ಳುತ್ತಿದ್ದರು ಎಂದಿದೆ. ಇದು ಪುಣೆಯ ಬಂಢಾರಕಾರ್ಸ್ ಇವರ ಸಂಶೋಧನೆಯಲ್ಲಿಲ್ಲ.

ಅಯೋಧ್ಯೆಯಲ್ಲಿ ದಶರಥ ಮಾತ್ರ ನಿರಾಳವಾಗಿದ್ದ. ಆದರೂ ಸಿಂಹಾಸನದ ವಾರಸುದಾರರ ಚಿಂತೆ ಆತನನ್ನು ಕಾಡುತ್ತಿತ್ತು. ಮದುವೆಯ ಕಾಲಕ್ಕೆ ಕೊಟ್ಟ ಕನ್ಯಾಶುಲ್ಕ ಅವನಿಗೆ ನೆನಪಿತ್ತು. ಪ್ರಾಚೀನ ಭಾರತದಲ್ಲಿ ಸೂರ್ಯವಂಶದ ದೊರೆತನವೆನ್ನುವುದು ವಂಶಪರಂಪರೆಯಾದರೂ ಅದಕ್ಕೆ ಮಾಂಡಲಿಕರ, ಋಷಿಗಳ, ಪ್ರಜಾಜನರ ಒಪ್ಪಿಗೆ ಬೇಕಿತ್ತು. ಯಜುರ್ವೇದದಲ್ಲಿ ರಾಜನಾದವನಿಗೆ ಇರಬೇಕಾದ ಗುಣಗಳನ್ನು ಅನೇಕ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಯಜುರ್ವೇದದ 6ರಿಂದ 10ನೇಯ ಅಧ್ಯಾಯಗಳಲ್ಲಿ ಬರುವ ವಿವರಣೆಗಳ ಸಾರದಂತೆ ರಾಜನಾಗಿರುವವನಿಗೆ “ಪರಾಕ್ರಮದಲ್ಲಿ ಆತ ಇಂದ್ರನಿಗೆ ಸಮನಾಗಿರಬೇಕು. ಯಮ ಸೂರ್ಯ ಅಗ್ನಿ ವರುಣ ಚಂದ್ರ ಮತ್ತು ಕುಬೇರ ಇವರುಗಳ ಗುಣಗಳು ಆತನಲ್ಲಿರಬೇಕು. ಧುರಭಿಮಾನಿಗಳಾದ ಶತ್ರುಗಳನ್ನು ಗಿಡುಗಪಕ್ಷಿ ಹೇಗೆ ಶತ್ರುಗಳ ಮೇಲೆ ಬಿದ್ದು ಅವುಗಳನ್ನು ನಿಗ್ರಹಿಸುತ್ತದೆಯೋ ಅದೇ ರೀತಿ ಪರಾಕ್ರಮವನ್ನು ಹೊಂದಿದವನಾಗಿರಬೇಕು. “ರಾಯಸ್ಪೋಷದೇ” ಪ್ರಜೆಗಳಿಗೆಲ್ಲರಿಗೂ ಧನಸಮೃದ್ಧಿಯನ್ನು ಉಂಟುಮಾಡುವವ ಆತನಾಗಿರಬೇಕು. ಇಂತಹ ಗುಣಗಳು ಯಾರಲ್ಲಿ ಇರುತ್ತದೆಯೋ, ಅಂತಹ ಸಮರ್ಥನನ್ನು ಎಲ್ಲ ಪ್ರಜೆಗಳು ಸೇರಿ ಅಂಗೀಕರಿಸಲು ಬಯಸುತ್ತೇವೆ” ಎನ್ನುವ ವಿವರಣೆಗಳಿವೆ.

ವಂಶಪಾರಂಪರ್ಯ ಅರಸು ಪದ್ಧತಿ ಇರುವ ರಾಜ್ಯಗಳೂ ಅಂದು ಇದ್ದವು. ಇಂಗ್ಲೆಂಡಿನಲ್ಲಿಯೂ ರಾಜತ್ವ ವಂಶಪಾರಂಪರ್ಯವಾಗಿದೆ. ಹಾಗಂತ ರಾಜಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ರಾಜರಾಗಲು ಸಾಧ್ಯವಿಲ್ಲ. ಅಲ್ಲಿಯೂ ಕೆಲವೊಂದು ಅನುಸರಿಸಲೇಬೇಕಾದ ಕಠಿಣ ನಿಯಮಗಳಿವೆ. ಈ ಹಿನ್ನೆಲೆಯಲ್ಲಿ ದಶರಥ ಆಲೋಚಿಸಿರುವ ಸಾಧ್ಯತೆಗಳು ಹೆಚ್ಚಿವೆ. ವೃದ್ಧಾಪ್ಯದಲ್ಲಿ ಮಕ್ಕಳಾಗಿರುವುದರಿಂದ ದೊರೆಗೆ ಮಕ್ಕಳ ಮೇಲೆ ಮೋಹ ವಿಪರೀತವಾಗಿತ್ತು. ಅದರಲ್ಲಿಯೂ ರಾಮನ ಮೇಲಿನ ಮೋಹ ಇನ್ನುಳಿದ ಮೋಹವನ್ನು ಅಡಗಿಸಿಬಿಡುತ್ತಿತ್ತು. ಭರತ ಮತ್ತು ಶತ್ರುಘ್ನರ ಅಗಲಿಕೆ ಆತನನ್ನು ಆಗಾಗ ಬಾಧಿಸುತ್ತಿದ್ದರೂ ರಾಮನನ್ನು ನೋಡಿದ ತಕ್ಷಣ ಅದು ಪರಿಹಾರವಾಗುತ್ತಿತ್ತು. ತಮ್ಮನಾದ ಲಕ್ಷ್ಮಣನೊಂದಿಗೆ ರಾಮ ರಾಜ್ಯದ ಸಮಸ್ತ ಜವಾಬುದಾರಿಯನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ. ರಾಮನ ಕಡುಚಲುವು ಆತನ ಮನಸ್ಸನ್ನು ಸೆಳೆಯುತ್ತಿತ್ತು. ಅವನನ್ನು ನೊಡಿದವನಿಗೇ ಲೋಕವೇ ಮರೆತು ಹೋಗುತ್ತಿತ್ತು. ನಿರೋಗಕಾಯ, ತರುಣ, ವಾಗ್ಮಿ, ದೇಶಕಾಲವನ್ನು ತಿಳಿದವನು. ಯಾವ ಕಾಲದಲ್ಲಿ ಯಾವ ಸ್ಥಳದಲ್ಲಿ ಯಾವ ಯಾವ ಕೆಲಸವನ್ನು ಮಾಡಬೇಕೆನ್ನುವುದರ ವಿವೇಚನೆಯುಳ್ಳವನು. ಪರೇಂಗಿತಜ್ಞನು. ಅಪಕಾರಿಗಳ ವಿಷಯದಲ್ಲಿಯೂ ಪ್ರತಿಕ್ರಿಯೆ ತೋರದೇ ಸದ್ಭಾವದಿಂದಿರುವವನು. ಈ ಎಲ್ಲ ಗುಣಗುಳುಳ್ಳ ಏಕೈಕ ಪುರುಷನನ್ನು ಬ್ರಹ್ಮ ನಿರ್ಮಿಸಿದ್ದರೆ ಅದು ರಾಮರೂಪದಲ್ಲಿ ಎಂದು ಪ್ರಜೆಗಳು ಮಾತಾಡಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಘನ ದಶರಥನಿಗೆ ನಿಲುಕದ ಅಪೂರ್ವ ಮಿಲನ

ಆತ ಲಕ್ಷ್ಮಣನೊಡಗೂಡಿ ರಾಜ್ಯದ ಸೀಮೆಯನ್ನು ಬಲಪಡಿಸಿದ್ದಲ್ಲದೇ ಶತ್ರುಗಳನ್ನು ಯುದ್ಧದಲ್ಲಿ ಜಯಿಸಿದ್ದನು. ಕೋಸಲ ಸೀಮೆ ರಾಮನ ನೇತೃತ್ವದಲ್ಲಿ ಮತ್ತಷ್ಟು ಬಲಿಷ್ಠವಾಯಿತು. ಸುಮಾರು ಹತ್ತು ವರ್ಷಗಳ ಕಾಲ ಕೋಸಲ ಸೀಮೆಯನ್ನು ರಾಮ ಲಕ್ಷ್ಮಣರು ಭದ್ರಪಡಿಸಿದ್ದರು. ರಾಮನಿಗೆ ಆಗ ಇಪ್ಪತ್ತೈದು ವರ್ಷವಾಗಿತ್ತು. ವಿಶ್ವಾಮಿತ್ರರ ಸಂಗಡ ರಾಮನನ್ನು ಕಳುಹಿಸುವಾಗ ರಾಮನಿಗೆ ಹದಿನೈದು ವರ್ಷಗಳಾಗಿತ್ತು. ಅರಣ್ಯಕ್ಕೆ ಹೋಗುವಾಗ ಅವನಿಗೆ ಇಪ್ಪತ್ತೈದು ವರ್ಷಗಳಾಗಿದ್ದವು ಎಂದು ಅರಣ್ಯಕಾಂಡದಲ್ಲಿ ಸೀತೆಯೇ ಸ್ವತಃ ರಾವಣನಿಗೆ ಹೇಳುತ್ತಾಳೆ. ದಿನನಿತ್ಯವೂ ರಾಮನ ಈ ಗುಣಗಳನ್ನು ನೋಡುತ್ತಿದ್ದಂತೆ ದಶರಥನ ಮನಸ್ಸಿನಲ್ಲಿ ಅದುಮಿಟ್ಟಿದ್ದ ಆಸೆಯೊಂದು ಎದ್ದು ಬಂತು. ಪ್ರಜೆಗಳ ಮನಸ್ಸನ್ನು ಗೆಲ್ಲುವ ಅವಕಾಶವನ್ನು ವಿಪುಲವಾಗಿ ಮಾಡಿಕೊಟ್ಟಿದ್ದ. ಮಂತ್ರಿ ಸುಮಂತ್ರ, ಗುರು ವಸಿಷ್ಠರ ಸಹಕಾರವೂ ಇದರೊಂದಿಗಿತ್ತು. ಈ ಎಲ್ಲದರ ಪರಿಣಾಮ ಅದ ಸಹಜವಾಗಿಯೇ ರಾಜನಿಗೆ ರಾಮನನ್ನು ರಾಜನನ್ನಾಗಿ ಪಟ್ಟಕ್ಕೆ ಏರಿಸಬೇಕೆಂದು ಮನಸಾದರೆ ಅದು ಸಹಜ. ಯಜುರ್ವೇದದಲ್ಲಿ ಹೇಳಿದ ಹೋಲಿಕೆಗೂ ರಾಮನ ಗುಣಗಳಿಗೂ ಹೋಲಿಕೆಯಾಗುವ ಶ್ಲೋಕವನ್ನು ವಾಲ್ಮೀಕಿ ಹೇಳುವುದು ಹೀಗೆ:

ಯಮಶಕ್ರಸಮೋ ವೀರ್ಯೇ ಬೃಹಸ್ಪತಿಸಮೋ ಮತೌ৷৷
ಮಹೀಧರಸಮೋ ಧೃತ್ಯಾಂ ಮತ್ತಶ್ಚ ಗುಣವತ್ತರಃ ৷৷ಅ.1.38৷৷

ಪರಾಕ್ರಮಗಳಲ್ಲಿ ಯಮ ಮತ್ತು ಇಂದ್ರರಿಗೆ ಸಮಾನನು, ಬುದ್ಧಿಯಲ್ಲಿ ಬೃಹಸ್ಪತಿಗೆ ಸಮಾನನು. ಪ್ರಜೆಗಳ ಧಾರಣ-ಪೋಷಣೆಯಲ್ಲಿ ಪರ್ವತಕ್ಕೆ ಸಮಾನನು. ಗಣದಲ್ಲಂತೂ ನನಗಿಂತಲೂ ಹೆಚ್ಚಿನವನು.

ಮೊದಲು ಪ್ರಜೆಗಳ ಮನಸ್ಸನ್ನು ತನ್ನ ಗುಣಗಳ ಮೂಲಕ ಗೆಲ್ಲುವ ಅವಕಾಶವನ್ನು ರಾಮನಿಗೆ ಕೊಟ್ಟ ದಶರಥನ ಮನಸ್ಸಿನಂತೆ ರಾಮನಲ್ಲಿ ಗುಣಗಳಿತ್ತು. ಸಹಜವಾಗಿಯೇ ಆತ ಮಳೆಗರೆಯುವ ಮೋಡವು ಹೇಗೆ ಪ್ರಿಯವಾಗುವುದೋ ಅದೇರೀತಿ ಪ್ರಜೆಗಳ ಮನಸ್ಸನ್ನು ಗೆದ್ದಿದ್ದನು. ಇದೇ ಸಮಯ ಎಂದುಕೊಂಡ ರಾಜನಿಗೆ ಒಮ್ಮೆ ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡಾಗ ಕಪ್ಪಾದ ತಲೆಕೂದಲಿನಲ್ಲಿ ಒಂದು ಬಿಳಿಯದಾದ ಕೂದಲು ಕಾಣಿಸಿತಂತೆ!? ತಡಮಾಡುವುದಲ್ಲ ಎಂದುಕೊಂಡವನೇ ಅವಸರವಸರವಾಗಿ ಸಭೆಯನ್ನು ಕರೆಯಲು ಮಂತ್ರಿಗಳಿಗೆ ಸೂಚನೆಯನ್ನು ನೀಡಿದ. ರಾಮನನ್ನು ಪಟ್ಟಕ್ಕೇರಿಸಲು ಆತನಿಗೆ ಒಂದು ನೆವ ಸಿಕ್ಕಂತಾಯಿತು.

ಪಟ್ಟಾಭಿಷೇಕದ ಈ ಹಿನ್ನೆಲೆಯಲ್ಲಿ ರಾಮ ಪಟ್ಟಾಭಿಷೇಕದ ವಿವರಣೆ ಮುಂದಿನ ಭಾಗದಲ್ಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

ರಾಜಮಾರ್ಗ ಅಂಕಣ: ಭಗವಂತನು ಆತನನ್ನು ಈಜುವುದಕ್ಕಾಗಿ ಸೃಷ್ಟಿ ಮಾಡಿದ್ದ ಅನ್ನಿಸುತ್ತದೆ. ಆರು ಅಡಿ ನಾಲ್ಕು ಇಂಚು ಎತ್ತರ, ಮೀನಿನ ಹಾಗೆ ಬೆಂಡ್ ಆಗುವ ದೇಹ, ಭಾರೀ ಬಲಿಷ್ಟವಾದ ತೋಳುಗಳು, ನೀರನ್ನು ರಭಸವಾಗಿ ಹಿಂದೆ ತಳ್ಳಿ ಮುಂದೆ ಹೋಗುವ ದೋಣಿ ಆಕಾರದ ದೇಹ ಇದೆಲ್ಲವೂ ಆತನಿಗೆ ದೈವದತ್ತವಾಗಿ ಬಂದಿದ್ದವು.

VISTARANEWS.COM


on

Michel Phelps ರಾಜಮಾರ್ಗ ಅಂಕಣ
Koo

ಜಗತ್ತಿನ ಮಹೋನ್ನತ ಸ್ವಿಮ್ಮರ್ ನೀರಿಗೆ ಇಳಿದರೆ ದಾಖಲೆ ಮತ್ತು ದಾಖಲೆಗಳೇ ನಿರ್ಮಾಣ ಆಗುತ್ತಿದ್ದವು!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಒಲಿಂಪಿಕ್ಸ್ (Olympics) ವೇದಿಕೆಗಳಲ್ಲಿ ಒಂದೋ ಅಥವಾ ಎರಡೋ ಪದಕಗಳನ್ನು (medals) ಗೆಲ್ಲುವ ಕನಸು ಕಂಡವರು, ಅದನ್ನು ಸಾಧನೆ ಮಾಡಿದವರು ಲೆಜೆಂಡ್ ಅಂತ ಅನ್ನಿಸಿಕೊಳ್ಳುತ್ತಾರೆ. ಆದರೆ ಈ ಅಮೇರಿಕನ್ ಈಜುಗಾರ (Swimmer) ಒಟ್ಟು ನಾಲ್ಕು ಒಲಿಂಪಿಕ್ ಕೂಟಗಳಲ್ಲಿ ಭಾಗವಹಿಸಿ ಗೆದ್ದದ್ದು ಬರೋಬ್ಬರಿ 28 ಒಲಿಂಪಿಕ್ ಪದಕಗಳನ್ನು ಅಂದರೆ ನಂಬಲು ಸಾಧ್ಯವೇ ಇಲ್ಲ! ಅದರಲ್ಲಿ ಕೂಡ 23 ಹೊಳೆಯುವ ಚಿನ್ನದ ಪದಕಗಳು! ಆತನು ನೀರಿಗೆ ಇಳಿದರೆ ಸಾಕು ದಾಖಲೆಗಳು ಮತ್ತು ದಾಖಲೆಗಳು ಮಾತ್ರ ನಿರ್ಮಾಣ ಆಗುತ್ತಿದ್ದವು.

ಆತನು ಅಮೇರಿಕಾದ ಮಹೋನ್ನತ ಈಜುಗಾರ ಮೈಕೆಲ್ ಫೆಲ್ಪ್ಸ್ (Michel Phelps).

ಭಗವಂತನು ಆತನನ್ನು ಈಜುವುದಕ್ಕಾಗಿ ಸೃಷ್ಟಿ ಮಾಡಿದ್ದ ಅನ್ನಿಸುತ್ತದೆ. ಆರು ಅಡಿ ನಾಲ್ಕು ಇಂಚು ಎತ್ತರ, ಮೀನಿನ ಹಾಗೆ ಬೆಂಡ್ ಆಗುವ ದೇಹ, ಭಾರೀ ಬಲಿಷ್ಟವಾದ ತೋಳುಗಳು, ನೀರನ್ನು ರಭಸವಾಗಿ ಹಿಂದೆ ತಳ್ಳಿ ಮುಂದೆ ಹೋಗುವ ದೋಣಿ ಆಕಾರದ ದೇಹ ಇದೆಲ್ಲವೂ ಆತನಿಗೆ ದೈವದತ್ತವಾಗಿ ಬಂದಿದ್ದವು. ಸತತವಾಗಿ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಆತ ಭಾಗವಹಿಸಿದ್ದು ಮಾತ್ರವಲ್ಲ ಪ್ರತೀ ಬಾರಿ ನೀರಿಗೆ ಇಳಿದಾಗ ಒಂದಲ್ಲ ಒಂದು ದಾಖಲೆ, ಒಂದಲ್ಲ ಒಂದು ಪದಕ ಗೆಲ್ಲದೆ ಆತ ಮೇಲೆ ಬಂದ ಉದಾಹರಣೆಯೇ ಇಲ್ಲ!

ಬಾಲ್ಟಿಮೋರ್‌ನ ಬುಲ್ಲೆಟ್!

1985ನೇ ಜೂನ್ 30ರಂದು ಅಮೇರಿಕಾದ ಬಾಲ್ಟಿಮೋರ್ ಎಂಬ ಪ್ರಾಂತ್ಯದಲ್ಲಿ ಹುಟ್ಟಿದ ಆತ ತನ್ನ ಒಂಬತ್ತನೇ ವಯಸ್ಸಿಗೆ ಅಪ್ಪ ಮತ್ತು ಅಮ್ಮನ ಪ್ರೀತಿಯಿಂದ ವಂಚಿತವಾದನು. ಅದಕ್ಕೆ ಕಾರಣ ಅವರ ವಿಚ್ಛೇದನ. ಅದರಿಂದಾಗಿ ಆತನಿಗೆ ಮಾನಸಿಕ ನೆಮ್ಮದಿ ಹೊರಟುಹೋಯಿತು. ಆತನಿಗೆ Attention Deficit Hyper active Disorder (ADHD) ಎಂಬ ಮಾನಸಿಕ ಸಮಸ್ಯೆಯು ಬಾಲ್ಯದಿಂದಲೂ ತೊಂದರೆ ಕೊಡುತ್ತಿತ್ತು. ರಾತ್ರಿ ನಿದ್ದೆ ಬಾರದೆ ಆತ ಒದ್ದಾಡುತ್ತಿದ್ದನು. ಈ ಸಮಸ್ಯೆಗಳಿಂದ ಹೊರಬರಲು ಆತ ಆರಿಸಿಕೊಂಡ ಮಾಧ್ಯಮ ಎಂದರೆ ಅದು ಸ್ವಿಮ್ಮಿಂಗ್ ಪೂಲ್! ತನ್ನ ಏಳನೇ ವಯಸ್ಸಿಗೆ ನೀರಿಗೆ ಇಳಿದ ಆತನಿಗೆ ಬಾಬ್ ಬೌಮಾನ್ ಎಂಬ ಕೋಚ್ ಸಿಕ್ಕಿದ ನಂತರ ಆತನ ಬದುಕಿನ ಗತಿಯೇ ಬದಲಾಯಿತು. ಆತ ದಿನದ ಹೆಚ್ಚು ಹೊತ್ತನ್ನು ನೀರಿನಲ್ಲಿಯೇ ಕಳೆಯಲು ತೊಡಗಿದನು.

ಆತನ ಕಣ್ಣ ಮುಂದೆ ಇಬ್ಬರು ಸ್ವಿಮ್ಮಿಂಗ್ ಲೆಜೆಂಡ್ಸ್ ಇದ್ದರು. ಒಬ್ಬರು ಒಂದೇ ಒಲಿಂಪಿಕ್ ಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಗೆದ್ದ ಮಾರ್ಕ್ ಸ್ಪಿಟ್ಜ್ (1972). ಇನ್ನೊಬ್ಬರು ಆಸ್ಟ್ರೇಲಿಯಾದ ಸ್ವಿಮಿಂಗ್ ದೈತ್ಯ ಇಯಾನ್ ತೋರ್ಪ್. ಅವರಿಂದ ಸ್ಫೂರ್ತಿ ಪಡೆದ ಆತ ಮುಂದೆ ಮಾಡಿದ್ದು ಎಲ್ಲವೂ ವಿಶ್ವ ದಾಖಲೆಯ ಸಾಧನೆಗಳೇ ಆಗಿವೆ. ಜನರು ಆತನನ್ನು ಬಾಲ್ಟಿಮೋರದ ಬುಲೆಟ್ ಎಂದು ಪ್ರೀತಿಯಿಂದ ಕರೆದರು.

ಸತತ ನಾಲ್ಕು ಒಲಿಂಪಿಕ್ಸ್ – 28 ಪದಕಗಳು – ಅದರಲ್ಲಿ 23 ಚಿನ್ನದ ಪದಕಗಳು!

2004ರ ಅಥೆನ್ಸ್ ಒಲಿಂಪಿಕ್ಸ್ – ಒಟ್ಟು ಎಂಟು ಪದಕಗಳು.
2008 ಬೀಜಿಂಗ್ ಒಲಿಂಪಿಕ್ಸ್ – ಒಟ್ಟು ಎಂಟು ಚಿನ್ನದ ಪದಕಗಳು.
2012 ಲಂಡನ್ ಒಲಿಂಪಿಕ್ಸ್ – ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿಯ ಪದಕಗಳು.
2016 ರಿಯೋ ಒಲಿಂಪಿಕ್ಸ್ – ಐದು ಚಿನ್ನದ ಪದಕ ಮತ್ತು ಒಂದು ಬೆಳ್ಳಿ.

ಅಂದರೆ ಸತತ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಭಾಗವಹಿಸಿ ಒಟ್ಟು 28 ಪದಕಗಳನ್ನು ಬೇರೆ ಯಾರೂ ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ! ಬಟರ್ ಫ್ಲೈ, ಮೆಡ್ಲಿ, ಫ್ರೀ ಸ್ಟೈಲ್, ಬ್ಯಾಕ್ ಸ್ಟ್ರೋಕ್ಸ್…ಹೀಗೆ ಪ್ರತೀಯೊಂದು ವಿಭಾಗಳಲ್ಲಿಯೂ ಮೈಕೆಲ್ ಒಂದರ ಮೇಲೊಂದು ಪದಕಗಳನ್ನು ಗೆಲ್ಲುತ್ತಾ ಹೋಗಿದ್ದಾನೆ! ಆ 16 ವರ್ಷಗಳ ಅವಧಿಯಲ್ಲಿ ಆತನಿಗೆ ಸ್ಪರ್ಧಿಗಳೇ ಇರಲಿಲ್ಲ ಎನ್ನಬಹುದು!

ಮೈಕೆಲ್ ಎಂಬ ಚಿನ್ನದ ಮೀನಿನ ಜಾಗತಿಕ ದಾಖಲೆಗಳು

೧) ಆತನು ತನ್ನ ಜೀವಮಾನದಲ್ಲಿ ಗೆದ್ದ ಒಟ್ಟು ಅಂತಾರಾಷ್ಟ್ರೀಯ ಪದಕಗಳ ಸಂಖ್ಯೆ ಬೆರಗು ಹುಟ್ಟಿಸುತ್ತದೆ. ಒಟ್ಟು 82 ಪದಕಗಳು. ಅದರಲ್ಲಿ 65 ಚಿನ್ನ, 14 ಬೆಳ್ಳಿ ಮತ್ತು 3 ಕಂಚು!
೨) ಒಟ್ಟು 20 ಗಿನ್ನೆಸ್ ದಾಖಲೆಗಳು ಆತನ ಹೆಸರಿನಲ್ಲಿ ಇವೆ!
೩) ಒಟ್ಟು 39 ವಿಶ್ವದಾಖಲೆಗಳು ಆತನ ಹೆಸರಿನಲ್ಲಿ ಇವೆ. ಅದರಲ್ಲಿ 29 ವೈಯಕ್ತಿಕ ಮತ್ತು 10 ರಿಲೇ ಸ್ಪರ್ಧೆಗಳದ್ದು!
೪) 2004ರಿಂದ 2018ರವರೆಗೆ ನಡೆದ ವಿಶ್ವ ಈಜು ಚಾಂಪಿಯನಶಿಪ್ ಸ್ಪರ್ಧೆಗಳಲ್ಲಿ ಆತ ಪದಕಗಳ ಗೊಂಚಲು ಗೆಲ್ಲದೆ ಹಿಂದೆ ಬಂದ ನಿದರ್ಶನವೇ ಇಲ್ಲ!
೫) ಒಟ್ಟು ಎಂಟು ಬಾರಿ ಅವನಿಗೆ ‘ವರ್ಲ್ಡ್ ಸ್ವಿಮ್ಮರ್ ಆಫ್ ದ ಇಯರ್’ ಪ್ರಶಸ್ತಿಗಳು ದೊರೆತಿವೆ!
೬) ಒಟ್ಟು 11 ಬಾರಿ ‘ಅಮೇರಿಕನ್ ಸ್ವಿಮ್ಮರ್ ಆಫ್ ದ ಇಯರ್’ ಪ್ರಶಸ್ತಿಗಳು ದೊರೆತಿವೆ!
೭) ಒಂದೇ ಒಲಿಂಪಿಕ್ ಕೂಟದಲ್ಲಿ ಆತ ಎಂಟು ಚಿನ್ನದ ಪದಕಗಳನ್ನು (2008 ಬೀಜಿಂಗ್) ಗೆದ್ದ ದಾಖಲೆಯನ್ನು ಮುಂದೆ ಕೂಡ ಯಾರೂ ಮುರಿಯುವ ಸಾಧ್ಯತೆ ಇಲ್ಲವೇ ಇಲ್ಲ!
೮) ಆತನಿಗೆ ಜಾಗತಿಕ ಒಲಿಂಪಿಕ್ ಸಮಿತಿಯು ಜಗತ್ತಿನ ಅತ್ಯುತ್ತಮ ಸ್ವಿಮ್ಮರ್ ಪ್ರಶಸ್ತಿ ನೀಡಿ ಗೌರವಿಸಿದೆ!
೯) 100 ಮೀಟರ್ ಬಟರ್ ಫ್ಲೈ, 200 ಮೀಟರ್ ಬಟರ್ ಫ್ಲೈ, 200 ಮೀಟರ್ ಇಂಡಿವಿಜುವಲ್ ಮೆಡ್ಲಿ, 400 ಮೀಟರ್ ಇಂಡಿವಿಜುವಲ್ ಮೆಡ್ಲಿ ಈ ವಿಭಾಗದಲ್ಲಿ ಆತ ಮಾಡಿದ ಜಾಗತಿಕ ದಾಖಲೆಗಳನ್ನು ಮುಂದೆ ಕೂಡ ಯಾರೂ ಮುರಿಯುವ ಸಾಧ್ಯತೆ ಇಲ್ಲ ಎಂದು ಭಾವಿಸಲಾಗುತ್ತಿದೆ!

ಈ ಎಲ್ಲಾ ಸಾಧನೆಗಳಿಗೆ ಕಾರಣ ಆತನ ಈಜುವ ಪ್ಯಾಶನ್!

ಆತನ ಆತ್ಮಚರಿತ್ರೆಯ ಪುಸ್ತಕವನ್ನು ಒಮ್ಮೆ ತಿರುವಿ ಹಾಕಿದಾಗ ಆತನ ಸ್ವಿಮ್ಮಿಂಗ್ ಪ್ಯಾಶನ್ ಬಗ್ಗೆ ಹಲವು ಉದಾಹರಣೆಗಳು ದೊರೆಯುತ್ತವೆ.

ಒಮ್ಮೆ ಏನಾಯಿತೆಂದರೆ 2001 ಸೆಪ್ಟೆಂಬರ್ 11ರಂದು ಅಮೆರಿಕದ ಟ್ವಿನ್ ಟವರ್ ಮೇಲೆ ಭಯೋತ್ಪಾದಕ ಧಾಳಿ ನಡೆದು ಇಡೀ ಟವರ್ ಕುಸಿದು ಹೋದದ್ದು, ಇಡೀ ಅಮೇರಿಕಾ ನಲುಗಿ ಹೋದದ್ದು ನಮಗೆಲ್ಲ ಗೊತ್ತಿದೆ. ಸರಿಯಾಗಿ ಅದೇ ಹೊತ್ತಿಗೆ ಮೈಕೆಲ್ ಸ್ವಿಮ್ಮಿಂಗ್ ಪೂಲನಲ್ಲಿ ಈಜುತ್ತಾ ತನ್ನ ಕೋಚಗೆ ಕಾಲ್ ಮಾಡಿ ಕೇಳಿದ್ದನಂತೆ- ಸರ್, ಎಲ್ಲಿದ್ದೀರಿ? ನಾನು ಪೂಲಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ದೇನೆ!

ಮೈಕೆಲ್ ಫೆಲ್ಫ್ಸ್ ಇಷ್ಟೊಂದು ವಿಶ್ವ ದಾಖಲೆಗಳನ್ನು ಕ್ರಿಯೇಟ್ ಮಾಡಿದ್ದು ಸುಮ್ಮನೆ ಅಲ್ಲ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕಾರ್ಗಿಲ್, ಇದು‌ ಕೆಚ್ಚಿನ ಕಲಿಗಳ ಸಮರಗಾಥೆ

Continue Reading

ಅಂಕಣ

ರಾಜಮಾರ್ಗ ಅಂಕಣ: ಕಾರ್ಗಿಲ್, ಇದು‌ ಕೆಚ್ಚಿನ ಕಲಿಗಳ ಸಮರಗಾಥೆ

ರಾಜಮಾರ್ಗ ಅಂಕಣ: ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

VISTARANEWS.COM


on

ರಾಜಮಾರ್ಗ ಅಂಕಣ Kargil Vijay Diwas 2024
Koo

ಇಂದು ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಭಾರತವು ಗೆದ್ದ ಅತ್ಯಂತ ಕಠಿಣ ಯುದ್ಧ (Kargil Vijay Diwas) ಅದು! 1999ರಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ ಮಲಿಕ್ ಬರೆದಿರುವ ‘KARGIL – FROM SURPRISE TO VICTORY’ ಓದುತ್ತಾ ಹೋದಂತೆ ನಾನು ಹಲವಾರು ಬಾರಿ ಬೆಚ್ಚಿಬಿದ್ದಿದ್ದೇನೆ! ಯಾಕೆಂದರೆ ಅದು ಭಾರತವು ಎದುರಿಸಿದ ಅತ್ಯಂತ ಕಠಿಣವಾದ ಯುದ್ಧ (India0 Pakistan War) ಮತ್ತು ದೀರ್ಘಕಾಲದ ಯುದ್ಧ. ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

ಯುದ್ಧದ ಹಿನ್ನೆಲೆ – ಮುಷರಫ್ ಕುತಂತ್ರ

ಆಗಷ್ಟೇ ಭಾರತವು ಅಣುಪರೀಕ್ಷೆ ಮಾಡಿ ಜಗತ್ತಿನ ಕಣ್ಣು ಕೋರೈಸುವ ಸಾಧನೆಯನ್ನು ಮಾಡಿತ್ತು. ಪಾಕ್ ಕೂಡ ಅಮೇರಿಕಾದ ನೆರವು ಪಡೆದು ತನ್ನ ಬಳಿ ಅಣುಬಾಂಬು ಇದೆ ಎಂದು ಹೇಳಿಕೊಂಡಿತ್ತು. ಆಗ ಭಾರತದ ಪ್ರಧಾನಿ ಆಗಿದ್ದ ವಾಜಪೇಯಿ (Atal Bihari Vajpayee) ಅವರು ತುಂಬಾ ಮೃದು ನಿಲುವಿನ ನಾಯಕ ಎಂದು ಪಾಕ್ ನಂಬಿ ಕುಳಿತಿತ್ತು. ಪಾಕಿಸ್ಥಾನಕ್ಕೆ ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ (Siachin) ವಶಪಡಿಸಿಕೊಳ್ಳಬೇಕು ಎಂಬ ದುರಾಸೆ. ಅಲ್ಲಿಂದ ಮುಂದೆ ಕಾರ್ಗಿಲ್ ಮತ್ತು ಮುಂದೆ ಇಡೀ ಕಾಶ್ಮೀರವನ್ನು ಕಬಳಿಸಬೇಕು ಎನ್ನುವ ಮಾಸ್ಟರ್ ಪ್ಲಾನ್! ಆಗ ಪಾಕಿಸ್ತಾನದ ಸೇನಾ ನಾಯಕ ಪರ್ವೇಜ್ ಮುಷರಫ್ (Parvez Musharraf) ಹೊಂಚು ಹಾಕಿ ಕುಳಿತ ಕಾಲ ಅದು.

ಅದಕ್ಕೆ ಪೂರಕವಾಗಿ 1998ರ ಜೂನ್ ತಿಂಗಳಿಂದಲೇ ಪಾಕಿಸ್ಥಾನದ 5000ರಷ್ಟು ಸೈನಿಕರು ಲೈನ್ ಆಫ್ ಕಂಟ್ರೋಲ್ ದಾಟಿ ಭಾರತದ 4-10 ಕಿ.ಮೀ. ಒಳಗೆ ಬಂದು ಎತ್ತರದ ಪ್ರದೇಶದಲ್ಲಿ ಜಮಾವಣೆ ಆಗತೊಡಗಿದ್ದರು! ಅವರ ಬಳಿಗೆ ಆಧುನಿಕ ಶಸ್ತ್ರಾಸ್ತ್ರಗಳು ಬಂದು ತಲುಪಿದ್ದವು. ಆದರೆ 1999ರ ಮೇ 18ರವರೆಗೆ ಭಾರತ ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಭಾರತೀಯ ಸೇನಾ ಗೂಢಚಾರ ಸಂಸ್ಥೆಯವರು ಇನ್ನೂ ಸ್ವಲ್ಪ ದಿನ ಮೈಮರೆತಿದ್ದರೆ…! ಆ ಕುರಿಗಾಹಿ ಹುಡುಗರು ಆ ನುಸುಳುಕೋರ ಸೈನಿಕರ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಕೊಡದೇ ಹೋಗಿದ್ದರೆ…! ನಾನು ಬೆಚ್ಚಿ ಬಿದ್ದದ್ದು ಆಗ.

ಭಾರತದ ಸೈನಿಕರ ಬಳಿ ಯುದ್ಧದ ಸಿದ್ಧತೆಗೆ ಸಮಯ ಇರಲಿಲ್ಲ

ಗಡಿಯ ಒಳಗೆ ಅಷ್ಟು ದೊಡ್ಡ ಸಂಖ್ಯೆಯ ಸೈನಿಕರು ನುಸುಳಿಬಂದ ವಿಷಯ ಭಾರತಕ್ಕೆ ಗೊತ್ತಾಯಿತು ಅಂದಾಗ ಮುಷರಫ್ ಅಲರ್ಟ್ ಆದರು. ಅವರು ನಮ್ಮ ಸೈನಿಕರೇ ಅಲ್ಲ, ಯಾವುದೋ ಭಯೋತ್ಪಾದಕ ಸಂಘಟನೆಯವರು ಎಂದು ಬಿಟ್ಟರು ಮುಷರಫ್! ಆದರೆ ಈಗ ಭಾರತದ ಪ್ರಧಾನಿ ವಾಜಪೇಯಿ, ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸೇನಾ ಮುಖ್ಯಸ್ಥರನ್ನು ಕರೆಸಿ ಯುದ್ಧ ಘೋಷಣೆ ಮಾಡಿಬಿಟ್ಟರು. ಆದರೆ ಭಾರತೀಯ ಸೈನ್ಯಕ್ಕೆ ಆ ಯುದ್ಧಕ್ಕೆ ಸಿದ್ಧತೆ ಮಾಡಲು ದೊರೆತದ್ದು 24 ಘಂಟೆ ಮಾತ್ರ! ಆದರೂ 1999ರ ಮೇ 3ರಂದು ಭಾರತ ಯುದ್ಧ ಘೋಷಣೆ ಮಾಡಿ ಆಗಿತ್ತು!

ಆರಂಭದಲ್ಲಿ ಭಾರತಕ್ಕೆ ಹಿನ್ನಡೆ ಆದದ್ದು ನಿಜ. ಆದರೆ ಮೇ 30 ಆಗುವಾಗ ಭಾರತದ 30,000 ಸೈನಿಕರು ಟೈಗರ್ ಹಿಲ್ ಬಳಿ ಬಂದು ಜಮಾವಣೆ ಮಾಡಿ ಆಗಿತ್ತು. ಭಾರತದ ಭೂಸೈನ್ಯ ಮತ್ತು ವಾಯು ಸೈನ್ಯಗಳು ವೀರಾವೇಶದಿಂದ ಹೋರಾಟಕ್ಕೆ ಇಳಿದಿದ್ದವು. ಎರಡೂ ಕಡೆಯ ಸೈನಿಕರು, ಬಾಂಬುಗಳು, ಮದ್ದುಗುಂಡುಗಳು, ಶೆಲ್‌ಗಳು ಸಿಡಿಯುತ್ತ ಕಾರ್ಗಿಲ್ ಯುದ್ಧಭೂಮಿಯು ರಕ್ತದಲ್ಲಿ ಒದ್ದೆಯಾಗುತ್ತಾ ಹೋಯಿತು. ಟೈಗರ್ ಹಿಲ್ ಏರಿ 10 ಪಾಕ್ ಸೈನಿಕರ ಹತ್ಯೆಯನ್ನು ನಮ್ಮ ಸೈನಿಕರು ಮಾಡಿದಾಗ ಭಾರತವು ಯುದ್ಧದಲ್ಲಿ ಸಣ್ಣ ಮೇಲುಗೈ ಸಾಧಿಸಿತು.

ಅಲ್ಲಿಂದ ಮುಂದೆ ಭಾರತದ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸ್ವತಃ ಯುದ್ಧಭೂಮಿಗೆ ಬಂದು ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದ್ದು, ಪ್ರಧಾನಿ ವಾಜಪೇಯಿ ವಾರ್ ರೂಮಿನಲ್ಲಿ ಕುಳಿತು ಸೈನ್ಯಕ್ಕೆ ನಿರ್ದೇಶನವನ್ನು ಕೊಟ್ಟದ್ದು ಭಾರತವನ್ನು ಗೆಲ್ಲಿಸುತ್ತಾ ಹೋದವು. 75 ದಿನಗಳ ಘನಘೋರ ಯುದ್ಧದ ನಂತರ ಭಾರತ ಜುಲೈ 26ರಂದು ದ್ರಾಸ್ ಪರ್ವತದ ತಪ್ಪಲಲ್ಲಿ ಇದ್ದ ಕೊನೆಯ ಪಾಕ್ ಸೈನಿಕನನ್ನೂ ಹೊಸಕಿ ಹಾಕಿದಾಗ ಭಾರತ ವಿಜಯೋತ್ಸವ ಆಚರಣೆ ಮಾಡಿತು. ಕಾರ್ಗಿಲ್ ಮೈದಾನದಲ್ಲಿ ಸೈನಿಕರ ನಡುವೆ ತ್ರಿವರ್ಣಧ್ವಜ ಹಾರಿಸಿದ ಕ್ಷಣವೇ ಕಾರ್ಗಿಲ್ ವಿಜಯ ದಿನ.

Kargil Vijay Diwas 2024
Kargil Vijay Diwas 2024

ಹುತಾತ್ಮರಾದವರು ಭಾರತದ 527 ಸೈನಿಕರು!

ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೈನಿಕರ ಬಲಿದಾನ ಭಾರತಕ್ಕೆ ಒಂದು ದೊಡ್ಡ ವಿಜಯವನ್ನು ತಂದುಕೊಟ್ಟಿತ್ತು. ಅದರಲ್ಲಿ ಕರ್ನಾಟಕದ 21 ಸೈನಿಕರೂ ಇದ್ದರು. ಸಾವಿರಾರು ಯೋಧರು ತೀವ್ರವಾಗಿ ಗಾಯಗೊಂಡರು. ಪಾಕಿಸ್ತಾನವೂ ದೊಡ್ಡ ಸಂಖ್ಯೆಯ ಸೈನಿಕರನ್ನು ಕಳೆದುಕೊಂಡಿತ್ತು.

ನಮ್ಮ ಸೈನಿಕರಾದ ಸಿಯಾಚಿನ್ ಹೀರೋ ನಾಯಬ್ ಸುಬೇದಾರ್ ಬಾಣಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಮೇಜರ್ ಪದ್ಮಪಾಣಿ ಆಚಾರ್ಯ, ಗ್ರೆನೆಡಿಯರ್ ಯೋಗೇಂದರ್ ಸಿಂಘ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನುಜ್ ನಯ್ಯರ್, ಲೆಫ್ಟಿನೆಂಟ್ ಬಲವಾನ್ ಸಿಂಘ್, ರೈಫಲ್ ಮ್ಯಾನ್ ಸಂಜಯ ಕುಮಾರ್, ಕ್ಯಾಪ್ಟನ್ ವಿಜಯವಂತ್ ಥಾಪರ್, ಮೇಜರ್ ಸೋನಂ ವಾಂಗಚುಕ್, ಲೆಫ್ಟಿನೆಂಟ್ ಕರ್ನಲ್ ವೈ.ಕೆ. ಜೋಷಿ ಇವರೆಲ್ಲರೂ ನಿಜವಾದ ಕಾರ್ಗಿಲ್ ಹೀರೋಗಳು. ಅದರಲ್ಲಿ ಹೆಚ್ಚಿನವರು ಹುತಾತ್ಮರಾದವರು. ಅವರಿಗೆಲ್ಲ ವಿವಿಧ ಸೇನಾ ಶೌರ್ಯ ಪ್ರಶಸ್ತಿಗಳನ್ನು ನೀಡಿ ಭಾರತ ಸರಕಾರವು ಗೌರವಿಸಿತು.

ಕಾರ್ಗಿಲ್ ಯುದ್ಧದ ಫಲಶ್ರುತಿ ಏನೆಂದರೆ ಮುಂದೆ ಭಾರತವು ಎಂದಿಗೂ ಪಾಕಿಸ್ತಾನವನ್ನು ನಂಬಲಿಲ್ಲ ಮತ್ತು ಪಾಕಿಸ್ತಾನ ಯಾವತ್ತೂ ಭಾರತದ ಮೇಲೆ ಮತ್ತೆ ದಂಡೆತ್ತಿ ಬರುವ ಸಾಹಸವನ್ನು ಮಾಡಲಿಲ್ಲ!

ಜೈ ಹಿಂದ್.

ಇದನ್ನೂ ಓದಿ: ರಾಜಮಾರ್ಗ ಅಂಕಣ:  ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?

Continue Reading

ಅಂಕಣ

ರಾಜಮಾರ್ಗ ಅಂಕಣ:  ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?

ರಾಜಮಾರ್ಗ ಅಂಕಣ: ಕುಳಕುಂದ ಶಿವರಾವ್ ಅಂದರೆ ಯಾರಿಗೂ ಥಟ್ಟನೆ ಪರಿಚಯ ಆಗಲಾರದು. ಆದರೆ ಕನ್ನಡದ ಶ್ರೇಷ್ಠ ಲೇಖಕ ನಿರಂಜನ ಎಂದರೆ ಎಲ್ಲರಿಗೂ ಪರಿಚಯ ಆಗುತ್ತದೆ. ಈ ವರ್ಷ ಅವರ ಜನ್ಮ ಶತಮಾನೋತ್ಸವ.

VISTARANEWS.COM


on

ರಾಜಮಾರ್ಗ ಅಂಕಣ
Koo

ಈ ವರ್ಷ (2024) ಲೇಖಕ ನಿರಂಜನರ ಜನ್ಮ ಶತಮಾನೋತ್ಸವ

Rajendra-Bhat-Raja-Marga-Main-logo

ಕುಳಕುಂದ ಶಿವರಾವ್ ಅಂದರೆ ಯಾರಿಗೂ ಥಟ್ಟನೆ ಪರಿಚಯ ಆಗಲಾರದು. ಆದರೆ ಕನ್ನಡದ ಶ್ರೇಷ್ಠ ಲೇಖಕ ನಿರಂಜನ (Niranjana) ಎಂದರೆ ಎಲ್ಲರಿಗೂ ಪರಿಚಯ ಆಗುತ್ತದೆ. ಅವರು 71 ವರ್ಷಗಳ ಕಾಲ ಬದುಕಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು. ಕನ್ನಡದ ಮೊದಲ ಮತ್ತು ಜನಪ್ರಿಯ ಅಂಕಣ ಲೇಖಕರು ಅಂದರೆ ಅದು ನಿರಂಜನ! (ರಾಜಮಾರ್ಗ ಅಂಕಣ)

ಬಾಲ್ಯದಿಂದಲೂ ಬರವಣಿಗೆ

1924 ಜೂನ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಳಕುಂದ ಎಂಬ ಗ್ರಾಮದಲ್ಲಿ ಜನಿಸಿದ ಅವರು ಸಣ್ಣ ಪ್ರಾಯದಲ್ಲಿ ಪತ್ರಿಕೆಗಳಿಗೆ ಬರೆಯಲು ತೊಡಗಿದರು. ಮೊದಲು ಕಂಠೀರವ ಪತ್ರಿಕೆ ಅವರಿಗೆ ಬರೆಯಲು ಅವಕಾಶ ಕೊಟ್ಟಿತು. ಮುಂದೆ ಕನ್ನಡದ ಎಲ್ಲ ಪ್ರಸಿದ್ಧ ಪತ್ರಿಕೆಗಳಿಗೆ ಅವರು ಅಂಕಣಗಳನ್ನು ಬರೆಯುತ್ತಾ ಹೋದರು. ರಾಷ್ಟ್ರಬಂಧು ಎಂಬ ಪತ್ರಿಕೆಯ ಪ್ರಮುಖ ಲೇಖಕರಾಗಿ ಅವರು ಸಾವಿರಾರು ಅಂಕಣಗಳನ್ನು ಬರೆದರು. ಅವರ ಅಂಕಣ ಲೇಖನಗಳು ಎಂಟು ಕೃತಿಗಳಾಗಿ ಹೊರಬಂದು ಅವರಿಗೆ ಅಪಾರ ಜನಪ್ರಿಯತೆ ಕೊಟ್ಟವು. ಅವರು ಕನ್ನಡದ ಮೊದಲ ಅಂಕಣಕಾರ ಎಂಬ ದಾಖಲೆಯೂ ನಿರ್ಮಾಣವಾಯಿತು.

ಪ್ರಭಾವಶಾಲಿ ಸಣ್ಣ ಕಥೆಗಳು

ಸಣ್ಣ ಕಥೆಗಳು ಅವರಿಗೆ ಇಷ್ಟವಾದ ಇನ್ನೊಂದು ಪ್ರಕಾರ. ಅವರ 156 ಸಣ್ಣ ಕಥೆಗಳ ಸಂಗ್ರಹವಾದ ‘ಧ್ವನಿ’ ಕನ್ನಡದ ಶ್ರೇಷ್ಠ ಕೃತಿ ಆಗಿದೆ. ಕಾರಂತರ ಸಂಪರ್ಕ, ಲೆನಿನ್ ಬಗ್ಗೆ ಓದು ಅವರನ್ನು ಬೆಳೆಸುತ್ತಾ ಹೋದವು.

ಬಾಪೂಜಿ ಬಾಪು ಅವರ ಅತ್ಯಂತ ಶ್ರೇಷ್ಟವಾದ ಸಣ್ಣ ಕಥೆ. ಗಾಂಧೀಜಿ ಬದುಕಿದ್ದಾಗಲೇ ಅವರು ಸತ್ತಂತೆ ಕಲ್ಪಿಸಿಕೊಂಡು ಬರೆದ ಕಥೆ ಇದು! ರಕ್ತ ಸರೋವರ ಕಾಶ್ಮೀರದ ದಾಲ್ ಸರೋವರದ ಹಿನ್ನೆಲೆಯಲ್ಲಿ ಅರಳಿದ ಅದ್ಭುತವಾದ ಕಥೆ.
ತಿರುಕಣ್ಣನ ಮತದಾನ ರಾಜಕೀಯ ವಿಡಂಬನೆಯ ಕಥೆ. ಅವರ ಸಣ್ಣ ಕಥೆಗಳು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಸಂಸ್ಕೃತಿಯಲ್ಲಿ ಅರಳಿದ ಕಥೆಗಳು. ಕನ್ನಡದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ನಂತರ ಇಷ್ಟೊಂದು ವೈವಿಧ್ಯಮಯವಾದ ಸಣ್ಣ ಕಥೆಗಳನ್ನು ಬರೆದವರು ನಿರಂಜನ ಮಾತ್ರ ಅಂದರೆ ಅದು ಅತಿಶಯೋಕ್ತಿ ಅಲ್ಲ!

ಕಾದಂಬರಿಕಾರರಾಗಿ ನಿರಂಜನರು

ಅವರು ಬರೆದದ್ದು ಒಟ್ಟು 21 ಕಾದಂಬರಿಗಳು. ವರ್ಗ ಸಂಘರ್ಷ ಮತ್ತು ಸಾಮಾಜಿಕ ಸಮಾನತೆ ಅವರ ಹೆಚ್ಚಿನ ಕಾದಂಬರಿಗಳ ಹೂರಣ. 700 ಪುಟಗಳ ಬೃಹತ್ ಕಾದಂಬರಿ ಮೃತ್ಯುಂಜಯ ಅದೊಂದು ಮಾಸ್ಟರಪೀಸ್ ಕಲಾಕೃತಿ. ವಿಮೋಚನೆ, ಬನಶಂಕರಿ, ಅಭಯ, ಚಿರಸ್ಮರಣೆ, ರಂಗಮ್ಮನ ವಟಾರ ಮೊದಲಾದ ಕಾದಂಬರಿಗಳು ಒಮ್ಮೆ ಓದಿದರೆ ಮರೆತುಹೋಗೋದಿಲ್ಲ. ಸುಳ್ಯ ಮತ್ತು ಮಡಿಕೇರಿ ಪ್ರದೇಶದಲ್ಲಿ ಕಲ್ಯಾಣಸ್ವಾಮಿ ಎಂಬಾತ ನಡೆಸಿದ ರಕ್ತಕ್ರಾಂತಿಯ ಹಸಿಹಸಿ ಕಥೆಯನ್ನು ಹೊಂದಿರುವ ಒಂದು ಶ್ರೇಷ್ಟವಾದ ಕಾದಂಬರಿ ಅವರು ಬರೆದಿದ್ದಾರೆ. ನಿರಂಜನರು ಬರೆದ ನಾಟಕಗಳೂ ಜನಪ್ರಿಯವಾಗಿವೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

ನಿರಂಜನ ಅವರ ಸಂಪಾದನಾ ಗ್ರಂಥಗಳು

ಇಂದು ಕನ್ನಡ ನಾಡು ನಿರಂಜನರನ್ನು ನೆನಪಿಟ್ಟುಕೊಳ್ಳಲೇ ಬೇಕಾದ ಮುಖ್ಯ ಕಾರಣ ಎಂದರೆ ಅವರ ಸಂಪಾದನೆಯ ಗ್ರಂಥಗಳು. 25 ಸಂಪುಟಗಳ ವಿಶ್ವ ಕಥಾಕೋಶ, ಜ್ಞಾನಗಂಗೋತ್ರಿ ಹೆಸರಿನ ಎಳೆಯರ ಏಳು ಸಂಪುಟಗಳ ವಿಶ್ವ
ಜ್ಞಾನಕೋಶ, ಪುರೋಗಾಮಿ ಪ್ರಕಾಶನದ ಎಂಟು ಪುಸ್ತಕಗಳು, ಜನತಾ ಸಾಹಿತ್ಯಮಾಲೆಯ 25 ಪುಸ್ತಕಗಳು….ಹೀಗೆ ಲೆಕ್ಕ ಮಾಡುತ್ತಾ ಹೋದರೆ ಸಾವಿರಾರು ಪುಟಗಳ ಅದ್ಭುತ ಜ್ಞಾನಕೋಶಗಳು ಅರಳಿದ್ದು ನಿರಂಜನರ ಸಂಪಾದಕತ್ವದಲ್ಲಿ! ಅವರ ಇಡೀ ಜೀವನವನ್ನು ನಿರಂಜನರು ಅಧ್ಯಯನ ಮತ್ತು ಬರವಣಿಗೆಯಲ್ಲಿಯೇ ಕಳೆದರು.

ಇಡೀ ಕುಟುಂಬವು ಸಾಹಿತ್ಯಕ್ಕೆ ಮೀಸಲು

ನಿರಂಜನರ ಪತ್ನಿ ಅನುಪಮಾ ನಿರಂಜನ ಕನ್ನಡದ ಸ್ಟಾರ್ ಕಾದಂಬರಿಕಾರರು. ಹೆಣ್ಣು ಮಕ್ಕಳಾದ ತೇಜಸ್ವಿನಿ ಮತ್ತು ಸೀಮಂತಿನಿ ಇಬ್ಬರೂ ಕನ್ನಡದ ಪ್ರಭಾವೀ ಲೇಖಕರಾಗಿ ಗುರುತಿಸಿಕೊಂಡವರು. ಹಾಗೆ ನಿರಂಜನರ ಇಡೀ ಕುಟುಂಬವು ಕನ್ನಡದ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿತು.

ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ದೊರೆತವು. 1995ರಲ್ಲಿ ಅವರು ನಮ್ಮನ್ನು ಅಗಲಿದರು. ಕನ್ನಡ ಸಾಹಿತ್ಯಲೋಕವನ್ನು ಚಂದವಾಗಿ ಬೆಳೆಸಿದ ನಿರಂಜನರ ಜನ್ಮ ಶತಮಾನೋತ್ಸವದ ಈ ವರ್ಷ ಕನ್ನಡ ಸಾರಸ್ವತ ಲೋಕ ಒಂದು ಸ್ಮರಣೀಯ ಕಾರ್ಯಕ್ರಮವನ್ನು ಅವರ ನೆನಪಿನಲ್ಲಿ ಮಾಡಬೇಕು ಎನ್ನುವುದು ನಮ್ಮೆಲ್ಲರ ಆಗ್ರಹ ಆಗಬೇಕು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

Continue Reading

ಅಂಕಣ

Guru Purnima 2024: ಗುರು ಎಂದರೆ ವ್ಯಕ್ತಿಯಲ್ಲ, ಅದ್ಭುತವಾದ ಶಕ್ತಿ!

Guru Purnima 2024: ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು, ಗುರುಗೋವಿಂದ ಭಟ್ಟರು-ಸಂತ ಶಿಶುನಾಳ ಶರೀಫ , ರಾಮಕೃಷ್ಣ ಪರಮಹಂಸರು- ಸ್ವಾಮಿ ವಿವೇಕಾನಂದರು, ಬ್ರಹ್ಮಚೈತನ್ಯ ಗೊಂದಾವಲಿಕರ ಮಹಾರಾಜ-ಬ್ರಹ್ಮಾನಂದ ಮಹಾರಾಜ… ಹೀಗೆ ಗುರು-ಶಿಷ್ಯರಿಗೆ ಪರಂಪರೆಗಳ ಐತಿಹ್ಯವಿದೆ.

VISTARANEWS.COM


on

Guru Purnima 2024
Koo

ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ
(ಲೇಖಕರು, ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು ಹಾಗೂ ಜ್ಯೋತಿಷಿಗಳು)

ಆಷಾಢ ಮಾಸ ಶುಕ್ಲ ಪಕ್ಷದಲ್ಲಿ ಬರುವ “ಕಡ್ಲಿಗರ ಹುಣ್ಣಿಮೆ”ಯನ್ನು ನಾವು ಆಚರಿಸ್ಪಡುವ, ಶ್ರೇಷ್ಠವಾದ ಪರ್ವವೆಂದರೆ ಅದು “ಗುರು ಪೂರ್ಣಿಮೆ”.
ಈ ದಿನ ನಾವು ನಂಬಿದ ನಮ್ಮಲ್ಲಿಯ ಅಂಧಕಾರವನ್ನು ತೊಲಗಿಸಿ ಜ್ಞಾನ ಸಾಕ್ಷಾತ್ಕಾರ ಮಾಡಿಸಿದ ನಮ್ಮ ಗುರುಗಳಿಗೆ ವಂದನೆ (Guru Purnima 2024) ಸಲ್ಲಿಸುವ ದಿನ. ಆ ಗುರುವನ್ನು ನೆನೆದು ಅವರ ಮಹತ್ವವನ್ನು ಸಾರುವ ದಿನ. ಗುರುಗಳು ನಮಗೆ ನಮ್ಮ ಜೀವನಕ್ಕೆ ಸರಿಯಾದ ಮಾರ್ಗ ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ ದಿಕ್ಸೂಚಿ,ದಾರಿದೀಪ. ಪರಮಾತ್ಮನ, ಪರಮಾರ್ಥದ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮಜ್ಯೋತಿಯನ್ನು ಜ್ಞಾನವೆಂಬ ತೈಲ ಹಾಕಿ ಬೆಳುಗುವಂತೆ ಮಾಡಿ ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಆಧ್ಯಾತ್ಮದ ಜತೆಗೆ ಲೌಕಿಕ ಪ್ರಪಂಚದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟವ ತನಕ ಸಹಾಯ ಮಾಡುವವನೇ “ ಶ್ರೇಷ್ಠಗುರು”.

ಅಲೆದು ಅಲೆದು ಹುಡಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವುಗಳೆಲ್ಲರೂ ಆ ಗುರುವಿನ ಮುಖಾಂತರವೇ ಪರಮಾತ್ಮನ ಅರಿವು, ಪ್ರಪಂಚದ ಅರಿವು, ಅರಿಯಬೇಕಾಗಿರುವುದರಿಂದ, ನಾವು ಪ್ರತಿ ಆಷಾಢ ಮಾಸದ ಈ ಪೌರ್ಣಿಮೆಯಂದು ಮಾತ್ರ ಗುರುವನ್ನು ಪೂಜಿಸದೆ.. ಅನು ದಿನ, ಅನು ಕ್ಷಣ, ಗುರುವನ್ನು ನಮ್ಮ ಅಂತರಂಗದಲ್ಲೇ ಪ್ರತಿಷ್ಠಾಪಿಸಿ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲ ಎಂದು ಅಂತಹ ಗುರುವಿಗೆ ಶರಣಾದಾಗ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಫಲಪ್ರದವಾಗುತ್ತದೆ.

ಉಪನಿಷತ್ತಿನಲ್ಲಿ ಗುರು

ಉಪನಿಷತ್ತಿನಲ್ಲಿ ಗುರು ಎಂಬುದನ್ನು ಈ ರೀತಿಯಾಗಿ ವಿವರಿಸಿದ್ದಾರೆ. “ಗು” ಎಂದರೆ ಅಂಧಕಾರವೆಂದು “ರು” ಎಂದರೆ ದೂರೀಕರಿಸುವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಯ ಕಡೆಗೆ ನಡೆಸುವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ನಿಜವಾದ ಗುರು ಎಂದು ಅರ್ಥೈಸಬಹುದೇನೋ ಎಂಬ ಅಭಿಪ್ರಾಯ.

ಆದಿಗುರು ಶ್ರೀ ಶಂಕರಭಗವತ್ಪಾದಚಾರ್ಯರು ಗುರು ಮಹಿಮೆ ಕುರಿತು ಹೀಗೆ ಸ್ತೋತ್ರವನ್ನು ಹೇಳಿದ್ದಾರೆ:

ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||

ಗುರುವು ತ್ರೀಮೂರ್ತಿ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ. ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಲ್ಪಟಿದೆ :

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ।
ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ॥
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ।
ಚಕ್ಷುರುನ್ಮೀಲಿತಂ ಯೇನ
ತಸ್ಮೈ ಶ್ರೀ ಗುರವೇ ನಮಃ॥

ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳ್ಗಿಗೆ ಬೇಕಾದ ಸೋಪಾನವನ್ನು ಹತ್ತಿಸುವ ಹಾಗೂ ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.
ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ ಬಂದಿದ್ದಾರೆ..

ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ।
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ॥

ಅಂದರೆ ಗುರುವಿಗಿಂತ ಮೀರಿದ ತತ್ವ, ತಪಸ್ಸು ಯಾವುದೂ ಇಲ್ಲ. ಜ್ಞಾನವೆಂಬ ದಾರಿದೀಪವಾಗಿರುವ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ. ಶಾಶ್ವತವಾದ ಆನಂದವನ್ನು ಪಡೆಯುವುದು ಆ ಸದ್ಗುರುವಿನಿಂದಲೆ ಮಾತ್ರವೇ ಸಾಧ್ಯ ಎಂದು ಶ್ರೀ ಶಂಕರಾಚಾರ್ಯರು ತಮ್ಮ “ಗುರ್ವಷ್ಟಕಮ್” ಎಂಬ ಸ್ತೂತ್ರದಲ್ಲಿ ಹೀಗೆ ಹೇಳಿದ್ದಾರೆ :
ಶರೀರಂ ಸುರೂಪಂ ತಥಾ ವಾ ಕಲತ್ರಂ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ।

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್।।

ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ, ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ ಎಂದು.ಏನೆಲ್ಲ ಸಾಧಿಸಿದ್ದರೂ, ತ್ಯಜಿಸಿದ್ದರೂ,ಗುರುವಿನ ಕರುಣೆಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಯುತ್ತದೆ.ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟಸಾದ್ಯ ಎನ್ನುತ್ತಾ ಗುರುವಿನ ಮಹತ್ವನ್ನು ವಿವರಿಸುತ್ತಾರೆ ಆಚಾರ್ಯರು.

ನಮ್ಮ ಈ ಸನಾತನ ಪರಂಪರೆಯಲ್ಲಿ ಈಗಿರುವ “ಗುರುವಿನ ಗುರುವಿಗೆ ಪರಮಗುರು”ಎಂದೂ, “ಪರಮ ಗುರುವಿನ ಗುರುವನ್ನು ಪರಾಪರ ಗುರು”ಎಂದೂ,”ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು”ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ಯಂದು ಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ. ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರ ವಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನ ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜತೆಗೇ “ಗುರು ಪೂರ್ಣಿಮೆ”ಯಂದು ಪೂಜಿಸುತ್ತೇವೆ. ಲೋಕಗುರು, ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು. ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ. “ಗುರು” ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬ ಚೈತನ್ಯದಾಯಕವಾಗಿರುತ್ತದೆ.

ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ ಸಿದ್ಧ ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ. ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ,ಗುರುಗೋವಿಂದ ಭಟ್ಟರು-ಸಂತ ಶಿಶುನಾಳ ಶರೀಫ , ರಾಮಕೃಷ್ಣ ಪರಮಹಂಸರು- ಸ್ವಾಮಿ ವಿವೇಕಾನಂದರು,ಬ್ರಹ್ಮಚೈತನ್ಯ ಗೊಂದಾವಲಿಕರ ಮಹಾರಾಜ-ಬ್ರಹ್ಮಾನಂದ ಮಹಾರಾಜ… ಇವರೆಲ್ಲ ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.

ಗುರುವಿನ ಬಗೆಗೆ ವರ್ಣಿಸುತ್ತಾ ಹೊರಟರೆ ಅದು ಸಾಗರದಷ್ಟು ಆಳ, ಅಗಲ. ಆಗಸದಷ್ಟು ವಿಶಾಲ, ವಿಸ್ತಾರ. ಗುರು ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಅದ್ಬುತ ಶಕ್ತಿ ಎಂದು ಅರ್ಥೈಸಿ ತಿಳಿದುಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ….

ಇದನ್ನೂ ಓದಿ: Guru Purnima 2024: ಭಾರತದ ಮಹೋನ್ನತ ಕ್ರೀಡಾ ತಾರೆಗಳನ್ನು ಸೃಷ್ಟಿಸಿದ 6 ‘ಗುರು’ಗಳಿವರು

Continue Reading
Advertisement
shiradi ghat train karnataka rian news
ಪ್ರಮುಖ ಸುದ್ದಿ10 mins ago

Karnataka Rain News: ಎಡಕುಮೇರಿಯಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ, ಬೆಂಗಳೂರು- ಮಂಗಳೂರು ರೈಲ್ವೆ ಸಂಚಾರ ಬಂದ್‌

UGCET 2024 seat allotment process begins Only a few days left for the option to enter
ಬೆಂಗಳೂರು15 mins ago

UGCET 2024 : ಯುಜಿಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ; ಆಪ್ಶನ್ ಎಂಟ್ರಿ ಮಾಡಲು ಕೆಲವೇ ದಿನಗಳು ಬಾಕಿ!

Actor Darshan Lata Jaiprakash says that since Darshan is a devotee of God,
ಸಿನಿಮಾ29 mins ago

Actor Darshan: ದರ್ಶನ್ ದೈವ ಭಕ್ತ, ಜೈಲಿಗೆ ಸೇರಿದ್ದಾಗಿನಿಂದ ವಿಜಯಲಕ್ಷ್ಮಿ ಅತ್ತಿಗೆ ಹೋರಾಟ ಜಾಸ್ತಿ ಆಗಿದೆ ಎಂದ ಲತಾ ಜೈಪ್ರಕಾಶ್!

Paris Olympics
ಕ್ರೀಡೆ33 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆ; ಜೂಡೊಪಟು ತಾತ್ಕಾಲಿಕ ಅಮಾನತು

illicit relationship raichur siravara
ಕ್ರೈಂ43 mins ago

Illicit Relationship: ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

Gold Rate Today
ಚಿನ್ನದ ದರ43 mins ago

Gold Rate Today: ಬಜೆಟ್‌ ಬಳಿಕ ಇದೇ ಮೊದಲ ಬಾರಿ ಏರಿಕೆ ಕಂಡ ಚಿನ್ನದ ದರ; ಇಂದು ಇಷ್ಟು ದುಬಾರಿ

Actor Darshan Astrologer Chanda Pandey Said Facing Problems Because Of His vig
ಕ್ರೈಂ1 hour ago

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Encounter in Kupwara
ದೇಶ1 hour ago

Encounter in Kupwara: ಕುಪ್ವಾರಾದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೈನಿಕರಿಗೆ ಗಾಯ; ಓರ್ವ ಉಗ್ರ ಹತ

Champions Trophy 2025
ಕ್ರೀಡೆ2 hours ago

Champions Trophy 2025: ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ; ಟೀಮ್ ಇಂಡಿಯಾಗೆ ಪಾಕ್​ ಆಟಗಾರನ ಮನವಿ

Murder in PG Case
ಕ್ರೈಂ2 hours ago

Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ17 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ18 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ19 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ20 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌