ಧವಳ ಧಾರಿಣಿ ಅಂಕಣ: ಘನ ದಶರಥನಿಗೆ ನಿಲುಕದ ಅಪೂರ್ವ ಮಿಲನ - Vistara News

ಅಂಕಣ

ಧವಳ ಧಾರಿಣಿ ಅಂಕಣ: ಘನ ದಶರಥನಿಗೆ ನಿಲುಕದ ಅಪೂರ್ವ ಮಿಲನ

ಧವಳ ಧಾರಿಣಿ ಅಂಕಣ: ಧೃತರಾಷ್ಟ್ರನದ್ದು ಕುರುಡು ಮೋಹವಾದರೆ ದಶರಥನದ್ದು ಹುಚ್ಚುಮೋಹ. ಮೊದಲಿನ ಘನತೆಯ ಚಕ್ರವರ್ತಿ ನಂತರ ಈ ಅಂಧಪ್ರೀತಿಯ ಕಾರಣ ಅಳುಮುಂಜಿಯಾದ.

VISTARANEWS.COM


on

dhavala dharini king dasharatha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾಗ 2:

ಶ್ರೀರಾಮದರ್ಶನಕ್ಕೆ ಅಡ್ಡಿಯಾದ ಪುತ್ರವ್ಯಾಮೋಹ

dhavala dharini by Narayana yaji

ಧವಳ ಧಾರಿಣಿ ಅಂಕಣ: ಕೋಸಲ ಸೀಮೆಯ ಚಕ್ರವರ್ತಿಯಾದ ದಶರಥ ಘನತೆಯಿಂದ ರಾಜ್ಯವನ್ನಾಳುತ್ತಿದ್ದನು ಎನ್ನುವುದಕ್ಕೆ ವಾಲ್ಮೀಕಿಯಷ್ಟು ವಿವರವಾಗಿ ಬೇರೆ ಯಾರೂ ಕೊಡಲಿಲ್ಲ. ಕಾಳಿದಾಸನೂ ಸಹ ತನ್ನ ರಘುವಂಶದಲ್ಲಿ ದಿಲೀಪ, ರಘು ಅಜರಿಗೆ ಕೊಟ್ಟಷ್ಟು ಮಹತ್ವವನ್ನು ದಶರಥನಿಗೆ ನೀಡಿಲ್ಲ. ಸೂರ್ಯವಂಶದ ದೊರೆಗಳಲ್ಲಿ ಕಾಳಿದಾಸನ ಪ್ರಕಾರ ರಘುವಿನಷ್ಟು ಘನತೆಯುಳ್ಳ ದೊರೆಗಳು ಬೇರೆ ಯಾರೂ ಇಲ್ಲ. ಪಾತ್ರವನ್ನು ಭಂಜಿಸಿ ಪುನಃ ನವೀನವಾಗಿ ಕಟ್ಟುವುದು ಕಾವ್ಯದಲ್ಲಿ ಇರುವ ಒಂದು ಕ್ರಮ. ಆದರೆ ಇಂತಹ ಕ್ರಿಯೆಯಿಂದ ಮೂಲ ಪಾತ್ರದ ನಿರ್ವಚನೆವೇ ಸೂತ್ರ ತಪ್ಪಿಹೋಗುವಾಗ ಅದನ್ನು ಆಗಾಗ ನೆನಪಿಸಿಕೊಳ್ಳುವುದೂ ಸಹ ಅಷ್ಟೇ ಮುಖ್ಯವಾಗುತ್ತದೆ. ಜನಸಾಮಾನ್ಯರಲ್ಲಿ ಮೂಲಕಾವ್ಯದ ಪಾತ್ರಕ್ಕಿಂತ ಅದರಿಂದ ಹೊರಬಂದ ಟಿಸಿಲುಗಳು ಜನಪ್ರಿಯವಾಗಿವೆ. ಕೆಲವೊಂದು ರಾಮಾಯಣದಲ್ಲಿ ಪರಶುರಾಮ ಯುದ್ಧಕ್ಕೆ ಬಂದಾಗಲೆಲ್ಲ ದಶರಥ ಹೆಣ್ಣುಗಳ ನಡುವೆ ಇದ್ದ ಎನ್ನುವ ಕಥೆಯನ್ನೂ ಹೆಣೆದಿವೆ. ರಾಮಾಯಣ ದರ್ಶನದಲ್ಲಿ ಕುವೆಂಪು ದಶರಥನನ್ನು ಬಣ್ಣಿಸುವುದು ಹೀಗೆ:

ಚಕ್ರವರ್ತಿಯದಕ್ಕೆ ದಶರಥಂ ದೊರೆ ಸಗ್ಗದೊಡೆಯಂಗೆ. ಇಕ್ಷ್ವಾಕು
ರಘು ದೀಲೀಪರ ಕುಲಪಯೋಧಿ ಸುಧಾಸೂತಿ.
ರಾಜರ್ಷಿಯಾ ದೀರ್ಘದರ್ಶಿಯಾ ಸಮದರ್ಶಿ ತಾಂ…
…ಸರ್ವ ಪ್ರಜಾಮತಕೆ ತಾನು ಪ್ರತಿನಿಧಿಯೆಂಬ
ಮೇಣವರ ಹಿತಕೆ ಹೊಣೆಯೆಂದೆಂಬ ಬುಧರೊಲಿದ
ಸಮದರ್ಶನವನೊಪ್ಪಿ

ವಾಲ್ಮೀಕಿ ಕಟ್ಟಿದ ಪಾತ್ರದ ʼದರ್ಶನʼ ಕುವೆಂಪು ಅವರಿಗೆ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ದಶರಥ ಅಪ್ರತಿಮ ಪರಾಕ್ರಮಿಯಾಗಿದ್ದ ಎನ್ನುವುದನ್ನು ಮತ್ತು ಆತನಿಗೆ ಶಬ್ಧವೇಧಿ ವಿದ್ಯೆ ಸಿದ್ಧಿಸಿತ್ತು. ಆತನ ಕಾಲದಲ್ಲಿ ರಾವಣನ ಪ್ರತಿರೋಧವನ್ನು ತಡೆಯಲಿಲ್ಲವೇ ಎನ್ನುವುದು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ರಾವಣ ಅನರಣ್ಯನ ವಧೆಯನ್ನು ಮಾಡಿದ ನಂತರ ರಾವಣ ದಂಡಕಾರಣ್ಯದ ಆಚೆ ಬಂದಿರಲಿಲ್ಲ. ದಂಡಕಾರಣ್ಯದಲ್ಲಿ ರಾಮ ಖರನೊಡನೆ ಯುದ್ಧ ಮಾಡುವಾಗ,

ಪಾಪಮಾಚರತಾಂ ಘೋರಂ ಲೋಕಸ್ಯಾಪ್ರಿಯಮಿಚ್ಛತಾಮ್.
ಅಹಮಾಸಾದಿತೋ ರಾಜಾ ಪ್ರಾಣಾನ್ಹನ್ತುಂ ನಿಶಾಚರ৷৷ಅ.29.10৷৷

“ನಿಶಾಚರನೇ ಘೋರವಾದ ಪಾಪಗಳನ್ನು ಮಾಡುವವರ ಮತ್ತು ಜನರಿಗೆ ಅಹಿತವನ್ನು ಬಯಸುವವರ ಸಂಹಾರಕ್ಕಾಗಿಯೇ ರಾಜನಾದ (ದಶರಥ) ನಿಂದ ನಿಯುಕ್ತನಾಗಿ ಇಲ್ಲಿಗೆ ಬಂದಿರುತ್ತೇನೆ” ಎನ್ನುವ ಮಾತುಗಳನ್ನು ವಿಮರ್ಶಿಸುವುದಾದರೆ ದಶರಥ ರಾಕ್ಷಸರನ್ನು ಹಿಮ್ಮೆಟ್ಟಿಸುವತ್ತ ಸದಾ ಪ್ರಯತ್ನವನ್ನು ನಡೆಸುತ್ತಿದ್ದ ಎನ್ನುವುದು ಸ್ಪಷ್ಟವಗುತ್ತದೆ. ಜಟಾಯು ಮತ್ತು ಸಂಪಾತಿ ಎನ್ನುವ ಪಕ್ಷಿಗಳು ದಶರಥನ ಶೌರ್ಯತನಕ್ಕೊಲಿದು ಆತನ ಸ್ನೇಹವನ್ನು ಸಂಪಾದಿಸಿದ್ದವು. ಅವು ಇರುವುದೂ ಸಹ ದಂಡಕಾರಣ್ಯದಲ್ಲಿಯೇ. ಶಂಭರನನ್ನು ನಿಗ್ರಹಿಸಿರುವುದೂ ಸಹ ದಂಡಕಾರಣ್ಯದಲ್ಲಿಯೇ. ಶಂಭರರೆಂದರೆ ರಾಕ್ಷಸರ ಒಂದು ಪ್ರಬೇಧ. ಧಶರಥನ ಕಾಲದಲ್ಲಿ ಇದ್ದವ ತಿಮಿದ್ವಜ ಎನ್ನುವಾತ. ಆತ ದಂಡಕಾರಣ್ಯದ ನಡುವೆ ವೈಜಯಂತಪುರ ಎನ್ನುವಲ್ಲಿ ತನ್ನ ರಾಜ್ಯವನ್ನು ನಿರ್ಮಿಸಿಕೊಂಡಿದ್ದ. ಇಂದ್ರನ ಕೋರಿಕೆಯ ಮೇರೆಗೆ ದಶರಥ ದಕ್ಷಿಣದಲ್ಲಿರುವ ದಂಡಕಾರಣ್ಯದ ನಡುವೆ ಇರುವ ತಿಮಿಧ್ವಜನನ್ನು ಎದುರಿಸಲು ಹೋದಾಗ ಯುದ್ಧದಲ್ಲಿ ಕ್ಷತ-ವಿಕ್ಷತವಾಗಿ ರಥದಲ್ಲಿ ಮೂರ್ಚಿತನಗಿದ್ದ ಕಾಲದಲ್ಲಿ ಆತನ ಸಂಗಡವೇ ಇದ್ದ ಕೈಕೆ ಆತನನ್ನು ಯುದ್ಧರಂಗದಿಂದ ದೂರ ಒಯ್ದು ರಕ್ಷಿಸಿದ್ದಳು. ಬಹುಶಃ ಆ ಸಮಯದಲ್ಲಿ ಕೈಕೆ ದಶರಥನ ಸಾರಥಿ ಆಗಿರಬೇಕು. ಸಾರಥಿ ಮಾತ್ರವೇ ತನ್ನ ರಥಿಕನ ಪ್ರಾಣವನ್ನು ಇಂಥ ಹೊತ್ತಿನಲ್ಲಿ ಕಾಪಾಡಬಲ್ಲನೆಂದು ಮಹಾಭಾರತ ಯುದ್ಧದಲ್ಲಿ ಅನೇಕ ಕಡೆ ಬರುತ್ತದೆ.

ತನ್ನ ಜೀವವನ್ನು ಉಳಿಸಿದವಳೆನ್ನುವ ಕಾರಣಕ್ಕೆ ದಶರಥ ಕೈಕೆಗೆ ಎರಡು ವರವನ್ನು ಕೊಟ್ಟಿರುವುದು ಗೊತ್ತಿರುವ ಸಂಗತಿಯೇ ಆಗಿದೆ. ರಾಮಾಯಣದಲ್ಲಿ ಮತ್ತೆ ಈ ತಿಮಿಧ್ವಜನ ಪ್ರಕರಣ ಎಲ್ಲಿಯೂ ಬರುವುದಿಲ್ಲ ಬಹುಶಃ ಮೂರ್ಛೆಯಿಂದ ಎದ್ದ ನಂತರ ದಶರಥ ತಿಮಿಧ್ವಜನನ್ನು ನಿಗ್ರಹಿಸಿರಬೇಕೆನ್ನುವುದು ಖರನಲ್ಲಿ ರಾಮ ಹೇಳುವ ಮೇಲಿನ ಮಾತುಗಳಿಂದ ಸ್ಪಷ್ಟವಾಗುತ್ತದೆ. ಆ ನಂತರದಲ್ಲಿ ರಾವಣನಿಂದ ನಿಯುಕ್ತರಾಗಿ ಖರ ದೂಷಣರು ದಂಡಕಾರಣ್ಯದಲ್ಲಿ ತಮ್ಮ ರಾಜ್ಯವನ್ನು ನಿರ್ಮಿಸಿಕೊಂಡಿರಬಹುದು. ಹಾಗಾದರೆ ಸಿದ್ಧಾಶ್ರಮಕ್ಕೆ ತಾಟಕಿ ಮತ್ತು ಆಕೆಯ ಮಕ್ಕಳು ಬಂದಿರುವ ಘಟನೆಯನ್ನು ಪರಿಶೀಲಿಸುವುದಾದರೆ ಅವರು ಅಲ್ಲಿ ವಾಸ ಮಾಡುತ್ತಿರಲಿಲ್ಲ. ಆಕಾಶಮಾರ್ಗದಿಂದ ಬಂದು ತಪಸ್ಸನ್ನು ಕೆಡಿಸಿ ಹೋಗುತ್ತಿದ್ದರು. ಆ ಕಾಲಕ್ಕೆ ದಶರಥ ವೃದ್ಧನೂ ಆಗಿರುವುದರಿಂದ ಮತ್ತು ಮಕ್ಕಳಾಗದಿರುವುದರಿಂದ ಆತ ಕೊನೆ ಕೊನೆಗೆ ಅನ್ಯಮನಸ್ಕನಾಗಿದ್ದ ಎಂತಲೂ ಊಹಿಸಬಹುದಾಗಿದೆ.

ರಾಮ ಮೋಹಿತ:
ಚತುರ್ಣಾಮಾತ್ಮಜಾನಾಂ ಹಿ ಪ್ರೀತಿ:ಪರಮಿಕಾ ಮಮ৷৷
ಜ್ಯೇಷ್ಠಂ ಧರ್ಮಪ್ರಧಾನಂ ಚ ನ ರಾಮಂ ನೇತುಮರ್ಹಸಿ. ৷৷ಅ-20-11 ৷৷

ಈ ನಾಲ್ವರು ಮಕ್ಕಳಲ್ಲಿ ನನಗೆ ಅತ್ಯಂತ ಪ್ರಿಯನಾದವನು ರಾಮನೇ. ಇವನು ಜ್ಯೇಷ್ಠಪುತ್ರನಾಗಿದ್ದಾನೆ; ಧರ್ಮರಕ್ಷಕನಾಗಿರುವನು. ಆದುದರಿಂದ ನೀವು ರಾಮನನ್ನು ಒಯ್ಯುವುದು ಖಂಡಿತವಾಗಿಯೂ ಯುಕ್ತವಾದುದಲ್ಲ.

ದಶರಥನ ರಾಮನ ಮೇಲಿನ ಅತಿಯಾದ ವ್ಯಾಮೋಹಕ್ಕೆ ಈ ಮೇಲಿನ ಶ್ಲೋಕವೊಂದು ಸಾಕು. ಮಕ್ಕಳೇ ಆಗುವುದಿಲ್ಲ ಎನ್ನುವ ಹೊತ್ತಿಗೆ ದಶರಥನಿಗೆ ಪಾಯಸದ ಅನುಗ್ರಹದಿಂದ ಮಕ್ಕಳಾದರು. ರಾಮ, ಭರತ, ಲಕ್ಷ್ಮಣ ಮತ್ತು ಶತೃಘ್ನರು ಕ್ರಮವಾಗಿ ಪುನರ್ವಸು , ಪುಷ್ಯ ಮತ್ತು ಆಶ್ಲೇಷಾ ನಕ್ಷತ್ರಗಳಲ್ಲಿ ಜನಿಸಿದ್ದಾರೆಂದು ವಾಲ್ಮೀಕಿ ತಿಳಿಸುತ್ತಾನೆ. ಬಹುಕಾಲದ ನಂತರ ಅರಮನೆಯಲ್ಲಿ ಮಕ್ಕಳ ಗಜ್ಜೆಗಳ ಸದ್ದು ಸಹಜವಾಗಿಯೇ ತಂದೆತಾಯಿಗಳಲ್ಲಿ ಸಂತಸವನ್ನು ಉಕ್ಕೇರಿಸಿದೆ. ಅದಕ್ಕೂ ಮೊದಲು ಅರಮನೆಯ ಬಿಡಿಸಿದ ರಂಗೋಲಿ ಮಾರನೆಯ ದಿನ ಹೊಸ ರಂಗೋಲಿ ಹಾಕುವವರೆಗೂ ನಳಿನಳಿಸುತ್ತಿರುತ್ತಿತ್ತು, ಈಗ ಚಿತ್ರಿಸಿದ ಮರುಕ್ಷಣದಲ್ಲಿಯೇ ಮಕ್ಕಳು ಕ್ಷಣಮಾತ್ರದಲ್ಲಿ ಅದನ್ನು ಅಳಿಸಿ ಹಾಕಿಬಿಡುವುದನ್ನು ನೋಡಿ ತಾಯಿಯಂದಿರು ಸಂಭ್ರಮದಿಂದ ದಾಸಿಯರ ಸಂಗಡ ಕುಣಿದು ಕುಪ್ಪಳಿಸುತ್ತಿದ್ದರಂತೆ. ದಶರಥನಿಗೆ ಮಕ್ಕಳಾಗಿರುವ ಸಂತಸ ಸಹಜವಾಗಿ ಆಗಿರುವುದು ಒಂದು ಕಡೆ ಆದರೆ ಹಿರಿಯ ಮಗನಾದ ರಾಮನ ಮೇಲೆ ಎಲ್ಲಕ್ಕಿಂತ ಹೆಚ್ಚಿನ ಪ್ರೀತಿಯುಂಟಾಗಿ ಅದು ವ್ಯಾಮೋಹಕ್ಕೆ ತಿರುಗಿಬಿಟ್ಟಿತ್ತು.

ಕೈಕೆಯನ್ನು ಮದುವೆಯಾದ ಮೇಲೆ ದಶರಥನಿಗೆ ತನ್ನ ಇನ್ನಿಬ್ಬರು ರಾಣಿಯರನ್ನು ಅಲಕ್ಷ್ಯ ಮಾಡಿದ್ದ. ಆದರೆ ಕೌಸಲ್ಯೆಯ ಮಗನಾದ ಶ್ರೀ ರಾಮನೆಂದರೆ ಹುಚ್ಚು ಕಕ್ಕುಲತೆಯಾಗಿತ್ತು. ರಾಮಾಯಣವನ್ನು ಬರೆದ ಎಲ್ಲಾ ಕವಿಗಳೂ ದಶರಥನ ಈ ಪುತ್ರವ್ಯಾಮೋಹವನ್ನೇ ಪ್ರಧಾನವಾಗಿ ಬಣ್ಣಿಸಿದ್ದಾರೆ. ಅದರಲ್ಲಿಯೂ ಭಾಸ ತನ್ನ ಪ್ರತಿಮಾ ನಾಟಕದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಶರಥ ರಾಮನನ್ನು ಸರಿಯಾಗಿ ನೋಡಲೇ ಇಲ್ಲವೆನ್ನುವ ರೀತಿಯಲ್ಲಿ ಚಿತ್ರಿಸುತ್ತಾನೆ. ರಾಮ ರಾಜಸಭೆಗೆ ಬಂದು ದಶರಥನಿಗೆ ನಮಸ್ಕರಿಸಿದಾಗ ಧಶರಥನಿಗೆ ಆನಂದ ಭಾಷ್ಪದಿಂದ ಹರಿದ ಕಣ್ಣೀರು ರಾಮನ ನೆತ್ತಿಯನ್ನು ತೋಯಿಸಿತಂತೆ. ತಂದೆಯ ಇಂತಹ ಪ್ರೀತಿಯನ್ನು ಅನುಭವಿಸಿದ ರಾಮನ ಆನಂದಭಾಷ್ಪ ದಶರಥನ ಪಾದವನ್ನು ತೋಯಿಸಿತಂತೆ. ಭಾಸನ ಪ್ರಕಾರ ಯಾವಾಗಲೂ ದಶರಥನಿಗೆ ರಾಮನನ್ನು ಸರಿಯಾಗಿ ನೋಡಲು ಆತನ ಆನಂದಭಾಷ್ಪ ಅಡ್ಡಿಬರುತ್ತಿತ್ತೆಂದು ವಿಮರ್ಶಕರು ಹೇಳುತ್ತಾರೆ. ರಾಮ ಮಹಾತೇಜಸ್ವಿಯೂ, ಸತ್ಯವಾದ ಪರಾಕ್ರಮಿಯೂ, ಪ್ರಜೆಗಳಿಗೆ ಪ್ರಿಯನಾಗಿಯೂ ಇದ್ದನು. ದಶರಥನಿಗಂಟೂ ರಾಮ ತನ್ನ ವಂಶದ ಕಲಶಪ್ರಾಯನಾಗಿಬಿಟ್ಟಿದ್ದ. ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಹದಿನೈದು ವರ್ಷಗಳಾದಾಗ ಒಂದು ದಿವಸ ವಿಶ್ವಾಮಿತ್ರರು ರಾಜಸಭೆಗೆ ಆಗಮಿಸಿ ಸಿದ್ಧಾಶ್ರಮದಲ್ಲಿ ನಡೆಸಲಿರುವ ಯಜ್ಞಗಳಿಗೆ ತಾಟಕಿ ಮತ್ತು ಆಕ್ಯೆಯ ಮಕ್ಕಳಾದ ಸುಭಾಹು ಮಾರೀಚರೆನ್ನುವ ರಾಕ್ಷಕರ ಕಾಟ ವಿಪರೀತವಾಗಿದೆ. ಅವರನ್ನು ನಿಗ್ರಹಿಸಲು ರಾಮನನ್ನು ತನ್ನೊಡನೆ ಕಳುಹಿಸಬೇಕು ಎಂದಾಗ ದಶರಥನಿಗೆ ಆಘಾತವುಂಟಾಯಿತು. ಮೂರ್ಛಿತನಾಗಿ ಬಿಟ್ಟ. ರಾಕ್ಷಸರ ವಿರುದ್ಧ ಹೋರಾಡಲು ಸಹಾಯವನ್ನು ಯಾಚಿಸುವಂತಹ ಪರಾಕ್ರಮಿಯಾಗಿದ್ದ ದಶರಥನ ಜಂಘಾಬಲವೇ ಉಡುಗಿಹೋಯಿತು.

ವಿಶ್ವಾಮಿತ್ರರು ರಾಮನನ್ನು ಕೇವಲ ಹತ್ತುದಿನಗಳ ಮಟ್ಟಿಗೆ ಕಳುಹಿಸು ಎನ್ನುತ್ತಾರೆ. ಅದು ತನಕ ರಾಮನ ರಥಯುದ್ಧ ಕೌಶಲವನ್ನೂ, ಆನೆ ಅಶ್ವಗಳ ಸವಾರಿಯ ಚಾಕಚಕ್ಯತೆಯನ್ನೂ ಬಿಲ್ಲು ವಿದ್ಯೆಯ ನಿಪುಣತೆಯನ್ನೂ ನೋಡಿ ಆನಂದಿಸುತ್ತಿದ್ದ ದಶರಥ ಏಕಾಏಕಿಯಾಗಿ ಮಾರೀಚ ಸುಭಾಹು ಮತ್ತು ರಾವಣನಂತವರನ್ನು ಎದುರಿಸಲು ತಾನು ಅಸಮರ್ಥ, ರಾಮನಿಗೆ ಬಿಲ್ಲು ವಿದ್ಯೆಯ ಪರಿಪೂರ್ಣತೆ ಆಗಿಲ್ಲ, ಅವನಿನ್ನೂ ಎಳೆಸು, ರಾಮನ ಬದಲು ತಾನು ಬಂದು ಹೋರಾಡುತ್ತೇನೆ, ಆದರೆ ಯುದ್ಧದಲ್ಲಿ ತನ್ನ ಪ್ರಾಣವೇ ಹೋಗಬಹುದು. ಆದರೂ ಚಿಂತೆಯಿಲ್ಲ ಎಂದೆಲ್ಲಾ ಹೇಳುತ್ತಾ ಅಳುತ್ತಾನೆ. ಆತ ಈಗ ಮೊದಲಿನ ದಶರಥನಾಗಿ ಉಳಿಯದೇ ತನ್ನ ಮಗ ರಾಮನನ್ನು ಕಳುಹಿಸಲು ಮನಸ್ಸಿಲ್ಲದೇ ಆತ ವಯಸ್ಸಿನ ಕಾರಣಕ್ಕೆ ಮತ್ತು ತನ್ನಲ್ಲಿನ ವೃದ್ಧಾಪ್ಯದ ಕಾರಣಕ್ಕೆ ರಾಕ್ಷಸರನ್ನು ಎದುರಿಸುವ ಬಲ ತನ್ನಲ್ಲಿ ಈಗ ಉಳಿದಿಲ್ಲ ಎನ್ನುವ ಸುಳ್ಳುಗಳನ್ನೂ ಹೇಳುತ್ತಾನೆನ್ನುವ ಎನ್ನುವುದು ವಿಶ್ವಾಮಿತ್ರರಿಗೆ ತಿಳಿಯಿತು. ಒಂದರ್ಥದಲ್ಲಿ ಇದು ವಶಿಷ್ಠರು ಕಲಿಸಿದ ವಿದ್ಯೆಗೂ ಅವಮಾನ ಎನ್ನುವುದನ್ನು ರಾಜ ಮರೆತು ಬಿಟ್ಟಿದ್ದ. ತಾನೋರ್ವ ಹೇಡಿ ಎನ್ನುವ ಭಾವ ಬರುವ ಮಾತುಗಳನ್ನೂ ಆಡಿದ ಕೇಳಿದ ವಿಶ್ವಾಮಿತ್ರರಿಗೆ ಕ್ರೋಧ ಬಂತು. ಮಕ್ಕಳನ್ನು ಕಳುಹಿಸಲಾರೆ ಎನ್ನುವ ಕಾರಣಕ್ಕೆ ಕ್ರೋಧ ಬಂದಿಲ್ಲ. ದಶರಥ ಮಗನ ಮೇಲಿನ ಮೋಹದಿಂದ ಸೂರ್ಯವಂಶದ ತೇಜಸ್ಸನ್ನೇ ಅವಮಾನ ಮಾಡುತ್ತಿದ್ದಾನೆ (ನರಪತಿಜಲ್ಪನಾತ್) ಎನ್ನುವ ಕಾರಣಕ್ಕಾಗಿ.

ಸಿಟ್ಟುಗೊಂಡು “ಆಯಿತು, ಸತ್ಯಪ್ರತಿಜ್ಞರ ಮಹಾ ವಂಶದಲ್ಲಿ ಮಿಥ್ಯಾವಾದಿಯೋರ್ವ ಹುಟ್ಟಿದನು” ಎನ್ನುವ ಅಪವಾದ ನಿನಗೆ ಬರುತ್ತದೆ, ತಾನಿನ್ನು ಹೊರಡುತ್ತೇನೆ ಎಂದು ಸಿಟ್ಟಿನಿಂದ ಹೊರಡಲುದ್ಯುಕ್ತನಾದ. ತಪಸ್ವಿಯಾದ ವಿಶ್ವಾಮಿತ್ರರಿಗೆ ತಾವೇ ರಾಕ್ಷಸರನ್ನು ನಿಗ್ರಹಿಸುವ ಶಕ್ತಿಯಿತ್ತು. ಆದರೆ ಅವರೀಗ ಬ್ರಹ್ಮರ್ಷಿಗಳಾಗಿದ್ದಾರೆ. ತಪಸ್ಸನ್ನು ಪುಣ್ಯಕ್ಕಾಗಿ ಉಪಯೋಗಿಸಬೇಕು, ರಕ್ಕಸರ ನಿರ್ಮೂಲನೆಗೆ ಕ್ಷತ್ರಿಯರ ದಂಡು ಸಿದ್ಧವಾಗಬೇಕು ಎನ್ನುವ ಸಂಕಲ್ಪದಿಂದ ಬಂದಿದ್ದರು. ದೇರಾಜೆ ಸೀತಾರಾಮನವರ “ರಾಮ ರಾಜ್ಯದ ರುವಾರಿ” ಎನ್ನುವ ಕೃತಿಯನ್ನು ಓದಿದರೆ ಇದರ ಸಂಪೂರ್ಣ ವಿವರ ಸಿಗುತ್ತದೆ. ತನ್ನ ಯೌವನದ ಕಾಲದಲ್ಲಿ ಇಂದ್ರನಿಗೆ ಸಮನಾದ ಶೌರ್ಯವಂತನಾಗಿದ್ದ ದಶರಥನಿಗೆ ಪುತ್ರಮೋಹವೆನ್ನುವುದು ಆತನ ಎಲ್ಲ ಘನತೆ ಮತ್ತು ಗುಣಗಳನ್ನು ಮರೆಮಾಚಿ ಬಿಟ್ಟಿತ್ತು. ಮಕ್ಕಳ ಮೇಲಿನ ಅತಿಯಾದ ಮೋಹದಿಂದ ಅನೇಕ ಪಾಲಕರು ತಮ್ಮಮಕ್ಕಳಿಗೆ ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ ಎನ್ನುವ ರೀತಿಯಲ್ಲಿ ವರ್ತಿಸುವದನ್ನು ಇಂದಿಗೂ ಕಾಣಬಹುದು. ದಶರಥ ಹೀಗೆ ತನ್ನ ಮಕ್ಕಳ ಕುರಿತು ಅದರಲ್ಲಿಯೂ ವಿಶೇಷವಾಗಿ ರಾಮನ ವಿಷಯದಲ್ಲಿ ಮೋಹಪರವಶನಾಗಿದ್ದ.

ವಿಶ್ವಾಮಿತ್ರರು ಬಂದಾಗ ಅವರಿಗೆ ಯಾವ ಸಹಾಯ ತನ್ನಿಂದ ಬೇಕು ಅದನ್ನು “ಕರ್ತಾ ಚಾಹಮಶೇಷೇಣ ದೈವತಂ ಹಿ ಭವಾನ್ಮಮ” ‘ಎಂತಹ ಕ್ಲಿಷ್ಟವಾದ ಕಾರ್ಯವನ್ನಾದರೂ ಅದನ್ನು ಮರುಮಾತಿಲ್ಲದೇ ನಡೆಸಿಕೊಡುತ್ತೇನೆ. ನೀವೇ ನನಗೆ ಪರದೈವ’ ಎಂದು ಮಾತುಕೊಟ್ಟ ದೊರೆ ಪುತ್ರ ವ್ಯಾಮೋಹದಿಂದ ಅದನ್ನು ಈಡೇರಿಸಲು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿರುವುದನ್ನು ನೋಡಲು ವಶಿಷ್ಠರಿಂದಾಗಲಿಲ್ಲ. ದಶರಥನಿಗೆ “ರಾಮನನ್ನು ವಿಶ್ವಾಮಿತ್ರರ ಸಂಗಡ ಕಳುಹಿಸು, ಆತನ ಶ್ರೇಯೋಭಿವೃದ್ದಿಗೆ ಇದು ನಾಂದಿಯಾಗುತ್ತದೆ. ಒಂದುವೇಳೆ ಕಲುಹಿಸದಿದ್ದರೆ ನೀನು ಇದುತನಕ ಮಾಡಿದ ಅಶ್ವಮೇದ ಯಾಗದ ಫಲ, ವಾಪಿ-ಕೂಪ-ತಟಾಕಾದಿಗಳನ್ನು ನಿರ್ಮಿಸಿದ ಫಲಗತಿಗಳೆಲ್ಲ ನಾಶವಾಗುತ್ತದೆ ಎಂದು ಎಚ್ಚರಿಸಿದರೋ ಆಗ ಅಂತೂ ಅನ್ಯಮನಸ್ಕನಾಗಿಯೇ ರಾಮನನ್ನು ವಿಶ್ವಾಮಿತ್ರರ ಜೊತೆಯಲ್ಲಿ ಯಜ್ಞರಕ್ಷಣೆಗಾಗಿ ಕಳುಹಿಸಿಕೊಟ್ಟ. ಕೇವಲ ಹತ್ತು ದಿನಗಳ ಮಟ್ಟಿಗೆ ಕರೆದುಕೊಂಡು ಹೋಗುತ್ತೇನೆಂದು ಹೋದ ವಿಶ್ವಾಮಿತ್ರರು ಯಜ್ಞ ಮುಗಿದ ಮೇಲೆ ಅಲ್ಲಿಂದ ಮಿಥಿಲೆಗೆ ಕರೆದುಕೊಂಡು ಹೋಗಿ ರಾಮ ಶಿವಧನಸ್ಸನ್ನು ಮುರಿದು ಸೀತೆಯನ್ನು ಮದುವೆಯಾಗುವ ಸಂಗತಿ ದಶರಥನಿಗೆ ತಿಳಿಯುವ ತನಕ ಆತ ಎಷ್ಟು ಒದ್ದಾಡಿದ್ದನೋ ಏನೋ! ದಶರಥನನ್ನು ಮಿಥಿಲೆಗೆ ಆಹ್ವಾನಿಸಲು ಹೋದ ದೂತರು ಅಯೋಧ್ಯೆಯನ್ನು ತಲುಪಲು ನಾಲ್ಕು ದಿನಗಳನ್ನು ತೆಗೆದುಕೊಂಡಿದ್ದರು. ರಾಮನಿಗೆ ಮದುವೆಯ ವಿಷಯ ಕೇಳಿದ ದಶರಥ ಸಂತಸಪಟ್ಟಿದ್ದು ಓರ್ವ ತಂದೆಯಾಗಿ ಸಹಜದ ಕ್ರಿಯೆ. ಮದುವೆಯೆಲ್ಲ ಸಾಂಗವಾಗಿ ಮುಗಿದು ನಾಲ್ವರೂ ಮಕ್ಕಳು ಮತ್ತು ಸೊಸೆಯೊಂದಿಗೆ ಅಯೋಧ್ಯೆಗೆ ಬರುವಾಗ ಬೀಸಿತೊಂದು ಭಯಂಕರ ಬಿರುಗಾಳಿ.

ರಾಮ ಮರ್ಧಿಸಿದ ಮಹಾಧನುಸ್ಸೆರಡನ್ನೂ ನೋಡಲಿಲ್ಲ ದೊರೆ:

ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ||

ಇದ್ದಕ್ಕಿಂತ ಸುಂಟರಗಾಳಿ ಬೀಸಿ ಮಹಾವೃಕ್ಷಗಳನ್ನೆಲ್ಲ ಬುಡಮೇಲು ಮಾಡತೊಡಗಿತು. ಭೂಮಿಯಿಂದ ಎದ್ದ ಧೂಳು ಸೂರ್ಯನನ್ನೇ ಮರೆಮಾಚಿತು. ದಿಕ್ಕುಗಳೇ ಕಾಂತಿಹೀನವಾಯಿತು. ಎಲ್ಲರೂ ತಮ್ಮ ಜೀವದ ಆಶೆಯನ್ನೇ ತೊರೆದರು. ವಸಿಷ್ಠರು ದಶರಥ ಆವನ ಮಕ್ಕಳು ಮಾತ್ರ ಈ ಬಿರುಗಾಳಿಗೆ ಹೆದರದೇ ಇದ್ದರು. ಆ ಅಂಧಕಾರದಿಂದ ಭಯಂಕರ ಪ್ರಕಾಶದಿಂದ ಕೂಡಿದ, ಜಟಾಮಂಡಲಧಾರಿಯಾದ ಕ್ಷತ್ರಿಯಕುಲವಿಧ್ವಂಸಕನಾದ ಪರಶುರಾಮರ ಆಕೃತಿ ಗೋಚರವಾಯಿತು.

king dasharatha
king dasharatha

ನೇರವಾಗಿ ರಾಮನನ್ನು ಉದ್ಧೇಶಿಸಿ ಅವರು “ರಾಮ! ದಾಶರಥೇ! ವೀರ! ನೀನು ಇದುತನಕ ಗೈದ ಪರಾಕ್ರಮಗಳಾದ ತಾಟಕಾವಧೆಯಿಂದ ಹಿಡಿದು ಇತ್ತೀಚೆಗೆ ಶಿವಧನುರ್ಭಂಗದವರೆಗಿನ ಎಲ್ಲವನ್ನೂ ಕೇಳಿದ್ದೇನೆ. ನಿಜವಾಗಿಯೂ ನೀನು ಅಷ್ಟೊಂದು ಪರಾಕ್ರಮಿಯೇ ಹೌದಾದರೆ ನನ್ನ ಕೈಯಲ್ಲಿರುವ ಈ ವೈಷ್ಣವ ಧನಸ್ಸನ್ನು ನೋಡು. ಈ ಮಹಾಧನಸ್ಸಿಗೆ ನೀವು ಮೌರ್ವಿಯನ್ನು ಬಿಗಿದು ತೋಲನ-ಪೂರಣ-ಶರಸಂಧಾನದಿಗಳನ್ನು ಮಾಡಿದರೆ ನಾನು ನಿನಗೆ ವೀರ್ಯಶ್ಲಾಘ್ಯವಾದ ದ್ವಂದ್ವಯುದ್ಧವನ್ನು ಕೊಡುತ್ತೇನೆ” ಎಂದು ತನ್ನ ಕಂಚಿನ ಕಂಠದ ಧ್ವನಿಯಲ್ಲಿ ಹೇಳಿದನು. ಈ ಮಾತನ್ನು ಕೇಳಿದ ದಶರಥನಿಗೆ ಜಂಘಾಬಲವೇ ಉಡುಗಿಹೋಯಿತು. ಪರಶುರಾಮನ ಹತ್ತಿರ ಅಳಲಿಕ್ಕೇ ಮೊದಲಾಗುತ್ತಾನೆ. ರಾಮನಿಗೇನಾದರೂ ಆದರೆ ತಾವ್ಯಾರೂ ಬದುಕುವುದಿಲ್ಲ ಎಂದು ಗೋಳಿಡುತ್ತಾನೆ. ತಾನೋರ್ವ ಕ್ಷತ್ರಿಯ, ಮಹಾಪ್ರರಾಕ್ರಮಿಯಾದವ ಎನ್ನುವುದಕ್ಕಿಂತಲೂ ರಾಮನಿಗೆ ಏನಾದರೂ ಆಗಿಬಿಟ್ಟರೆ ಎನ್ನುವ ಕಲ್ಪನೆಯೇ ಆತನಲ್ಲಿ ಭೀತಿಯನ್ನು ಹುಟ್ಟಿಸಿತು. ಸಾಲದ್ದಕ್ಕೆ ಪರಶುರಾಮ ದಶರಥನ ಮಾತಿಗೆ ಲಕ್ಷ್ಯವನ್ನೇ ಕೊಡದೇ ರಾಮನಲ್ಲಿ ಪಂಥಾಹ್ವಾನವನ್ನು ಕೊಟ್ಟಾಗ ರಾಮ ಅದನ್ನು ಧೈರ್ಯದಿಂದಲೇ ಸ್ವೀಕರಿಸಿದ. ದಶರಥ ಇನ್ನು ಕಥೆ ಮುಗಿಯಿತು ಎಂದವನೇ ಕಣ್ಣುಮುಚ್ಚಿ ಗಡಗಡ ನಡುಗುತ್ತ ಹೆಣ್ಣುಗಳ ಹಿಂದೆ ಅಡಗಿಕೊಳ್ಳಲು ಜಾಗ ಹುಡುಕಿದ.

ರಾಮ ಮರು ಮಾತಾಡದೇ ತನ್ನ ಕಾಲಿನಲ್ಲಿ ಬಿಲ್ಲಿನ ಪಾದವನ್ನು ಹಿಡಿದು ಬಗ್ಗಿಸಿ ನಾಣನ್ನು ಕಟ್ಟಿದವನೇ ಬಾಣವನ್ನು ಹೂಡಿ ಪರಶುರಾಮನತ್ತ ತಿರುಗಿ ಗಂಬೀರಸ್ವರದಲ್ಲಿ “ನೀನು ಗೌರವಾನ್ವಿತನಾದವ ಮತ್ತು ನನ್ನ ಗುರು ವಿಶ್ವಾಮಿತ್ರರ ಜ್ಞಾತಿಬಂಧುವಾಗಿರುವೆ. ಈ ಕಾರಣದಿಂದ ನಿನ್ನ ಮೇಲೆ ಶರಪ್ರಯೋಗ ಮಾಡಲಾರೆ. ಎಲ್ಲೆಂದರಲ್ಲಿ ಸಾಗುವ ಸ್ವೇಚ್ಛಾಗಮನಕ್ಕೆ ಬಾಣವನ್ನು ಬಿಡಲೇ ಇಲ್ಲವೇ ತಪಸ್ಸಿನಿಂದ ಗಳಿಸಿರುವ ನಿನ್ನ ಅಪ್ರತಿಮ ಪುಣ್ಯದ ರಾಶಿಗೆ ಬಿಡಲೇ” ಎಂದು ಗಂಭೀರಸ್ವರದಲ್ಲಿ ಕೇಳಿದ.. ಪರಶುರಾಮ ಪ್ರಪಂಚದಲ್ಲಿಯೇ ಎರಡನೆಯದಿಲ್ಲದ ವೈಷ್ಣವ ಧನಸ್ಸನ್ನು ರಾಮ ಲೀಲಾಜಾಲವಾಗಿ ಹೆದೆಯೇರಿಸಿ ತನ್ನೆಡೆಗೇ ಗುರಿಯಿಟ್ಟ. ಪರಶುರಾಮ ರಾಮನ ಕಣ್ಣಿನ ತೇಜಸ್ಸನ್ನು ನೋಡಿದ. ಅರ್ಥವಾಯಿತು! “ಹಿಂದೆ ತಾನು ಗೆದ್ದ ಈ ಭೂಮಿಯನ್ನು ಕಶ್ಯಪರಿಗೆ ದಾನವಾಗಿ ಕೊಟ್ಟಮೇಲೆ ಇದು ತನ್ನದಲ್ಲ. ಹಾಗಾಗಿ ತಾನು ಇಲ್ಲಿ ಹೆಚ್ಚುಹೊತ್ತು ಇರಲಾರೆ. ತನ್ನ ಸ್ವೇಚ್ಛಾಗಮನಕ್ಕೆ ಹಾನಿ ಮಾಡಬೇಡ. ದಿವ್ಯಲೋಕಗಳಿಗೆ ಹೋಗಬಹುದಾದ ಸಾಮರ್ಥ್ಯವನ್ನು ಗಳಿಸಿರುವ ತನ್ನ ಪುಣ್ಯರಾಶಿಯ ಮೇಲೆಯೇ ಬಾಣಪ್ರಯೋಗ ಮಾಡು. ಆ ಶಕ್ತಿ ತನ್ನಿಂದ ಹ್ರಾಸವಾದರೂ ತೊಂದರೆಯಿಲ್ಲ” ಎಂದು ಹೇಳಿದನು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ

ಮೂಲತತ್ತ್ವದ ಅಂಶವೇ ಆದ ಪರಶುರಾಮನಿಗೆ ಪಾಪ ಪುಣ್ಯಗಳ ಹಂಗಿಲ್ಲ. ಇಲ್ಲಿ ಶಿವ ಮತ್ತು ವೈಷ್ಣವ ಈ ಎರಡು ಶಕ್ತಿಯ ಸಂಕೇತಗಳು. ರಾಮನೆನ್ನುವವ ನಾಮರೂಪಾತ್ಮಕವಾದ ಎರಡನ್ನೂ ಅಂಶಗಳನ್ನು ಮೀರಿನಿಂತವ ಎನ್ನುವುದನ್ನು ವಾಲ್ಮೀಕಿ ರೂಪಕದಮೂಲಕ ವಿವರಿಸಿದ್ದಾನೆ. ರಾಮನೆನ್ನುವವ ಪರತತ್ತ್ವ. ಪರಾವಸ್ತು. ಸೃಷ್ಟಿಯ ಎಲ್ಲವೂ ರಾವಣನನ್ನು ಗೆಲ್ಲಲು ಸಮರ್ಥವಾಗಲಾರದು. ಅದನ್ನು ಮೀರಿದ ಪರವಸ್ತುವೇ ಮಾನವ ರೂಪ ತಾಳಿ ರಾವಣತ್ವದ ವಧೆಗೆ ಕಾರಣವಾಗಬೇಕು. ಅಮೂರ್ತವಾಗಿರುವ ಈ ತತ್ತ್ವವೇ ಮಾನವ ಮೂರ್ತಿಯಾಗಿ ವೈಷ್ಣವ ಧನಸ್ಸನ್ನು ಎತ್ತಿರುವ ಅಪರೂಪದ ದೃಶ್ಯವನ್ನು ನೋಡಲು ಸ್ವತಃ ಬ್ರಹ್ಮನೇ ಅಲ್ಲಿಗೆ ಬಂದುನೋಡಿ ಆನಂದಿಸಿದ. ಅವರೆಲ್ಲರೂ ನೋಡುತ್ತಿರುವಂತೆ ರಾಮ ಹೆದೆಯೇರಿಸಿ ಬಾಣವನ್ನು ಬಿಟ್ಟ. ಕ್ಷತ್ರಿಯರನ್ನು ನಿಗ್ರಹಿಸಿದ ಭಯಂಕರ ಮುನಿಯ ತೇಜಸ್ಸು ಕ್ಷಾತ್ರ ತೇಜಸ್ಸಿನಲ್ಲಿ ಸೇರಿಹೋಯಿತು. ರಾಮನಿಗೆ ಜೈಕಾರ ಹಾಕಿದ ಪರಶುರಾಮ ಅಲ್ಲಿಂದ ಮಹೇಂದ್ರಾಚಲಕ್ಕೆ ಹೊರಟ. ಕೊಡಲಿರಾಮನ ಪುಣ್ಯ ರಘುರಾಮನಿಗೆ ಹೀಗೆ ಕೊಡಲ್ಪಟ್ಟಿರುವುದನ್ನು ನೋಡಿ ಸಂತೋಷಪಡುವ ಭಾಗ್ಯ ದಶರಥನಿಗೆ ಇಲ್ಲವಾಗಿತ್ತು. ಆತ ಈ ಸನ್ನೀವೇಶ ಪ್ರಾರಂಭವಾದಾಗಿನಿಂದಲೂ ಭಯದಿಂದ ಕಣ್ಣುಮುಚ್ಚಿಕೊಂಡಿದ್ದ. ಪರಶುರಾಮ ಹೊರಟ ಎಷ್ಟೋ ಹೊತ್ತಿನನಂತರ ಆತ ಕಣ್ಣುಬಿಟ್ಟು ಈ ಎಲ್ಲ ಸಂಗತಿಗಳನ್ನು ತಿಳಿದುಕೊಂಡ. ಅಯೋಧ್ಯೆಗೆ ಹೊರಟ್ಟಿತು ರಾಮನ ದಂಡು.

ಮಕ್ಕಳಿಲ್ಲದೇ ಕೊರಗಿದ್ದ ದಶರಥ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದ. ರಾಜ್ಯವನ್ನು ಸಮರ್ಥರಾದ ಮಂತ್ರಿಗಳು ಆಳುತ್ತಿದ್ದ ಕಾರಣ ರಾಜಕಾರಣದ ಚಿಂತೆ ಇರಲಿಲ್ಲ. ಮಕ್ಕಳ ಸಲುವಾಗಿ ಕಣ್ಣೀರು ಹಾಕುತ್ತಾ ಇರುವವನಿಗೆ ರಾಮನಂತಹ ಮಕ್ಕಳನ್ನು ಕಂಡವನೇ ಇನ್ನುಳಿದ ಮಕ್ಕಳಿಗಿಂತ ರಾಮನೇ ಆತನನ್ನು ಸಂಪೂರ್ಣವಾಗಿ ಆವರಿಸಿದ್ದ. ಧೃತರಾಷ್ಟ್ರನದ್ದು ಕುರುಡು ಮೋಹವಾದರೆ ದಶರಥನದ್ದು ಹುಚ್ಚುಮೋಹ. ರಾಮನಿಗೆ ಏನೂ ಆಗಬಾರದೆನ್ನುವ ಕಾರಣಕ್ಕೆ ಆತ ತಾನೋರ್ವ ಪರಾಕ್ರಮಿಯಾದ ದೊರೆಯೆನ್ನುವುದನ್ನೂ ಮರೆತು ದೀನನಾಗಿ ರಾಮನನ್ನು ಉಳಿಸಿಕೊಳ್ಳಲು ವಿಶ್ವಾಮಿತ್ರರಲ್ಲಿ, ಪರಶುರಾಮರಲ್ಲಿ ವಸ್ತುತಃ ಯಾಚಿಸಿದ್ದ. ಮೊದಲಿನ ಘನತೆಯ ಚಕ್ರವರ್ತಿ ನಂತರ ಈ ಅಂಧಪ್ರೀತಿಯ ಕಾರಣದಿಂದ ಅಳುಮುಂಜಿಯಾಗಿ ಬದಲಾಗಿ ಮಕ್ಕಳಿಲ್ಲದ ವೇಳೆಯಲ್ಲಿ ಗಂಗೋದಕವನ್ನೂ ಹಾಕುವವರಿಲ್ಲದ ಸ್ಥಿತಿಯಲ್ಲಿ ಕೊರಗಿ ಕೊರಗಿ ಸಾಯಬೇಕಾಯಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗಂಧವತಿಗೆ ಸಿರಿಗಂಧಲೇಪನನ ಆಗಮನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

ರಾಜಮಾರ್ಗ ಅಂಕಣ: ಭಗವಂತನು ಆತನನ್ನು ಈಜುವುದಕ್ಕಾಗಿ ಸೃಷ್ಟಿ ಮಾಡಿದ್ದ ಅನ್ನಿಸುತ್ತದೆ. ಆರು ಅಡಿ ನಾಲ್ಕು ಇಂಚು ಎತ್ತರ, ಮೀನಿನ ಹಾಗೆ ಬೆಂಡ್ ಆಗುವ ದೇಹ, ಭಾರೀ ಬಲಿಷ್ಟವಾದ ತೋಳುಗಳು, ನೀರನ್ನು ರಭಸವಾಗಿ ಹಿಂದೆ ತಳ್ಳಿ ಮುಂದೆ ಹೋಗುವ ದೋಣಿ ಆಕಾರದ ದೇಹ ಇದೆಲ್ಲವೂ ಆತನಿಗೆ ದೈವದತ್ತವಾಗಿ ಬಂದಿದ್ದವು.

VISTARANEWS.COM


on

Michel Phelps ರಾಜಮಾರ್ಗ ಅಂಕಣ
Koo

ಜಗತ್ತಿನ ಮಹೋನ್ನತ ಸ್ವಿಮ್ಮರ್ ನೀರಿಗೆ ಇಳಿದರೆ ದಾಖಲೆ ಮತ್ತು ದಾಖಲೆಗಳೇ ನಿರ್ಮಾಣ ಆಗುತ್ತಿದ್ದವು!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಒಲಿಂಪಿಕ್ಸ್ (Olympics) ವೇದಿಕೆಗಳಲ್ಲಿ ಒಂದೋ ಅಥವಾ ಎರಡೋ ಪದಕಗಳನ್ನು (medals) ಗೆಲ್ಲುವ ಕನಸು ಕಂಡವರು, ಅದನ್ನು ಸಾಧನೆ ಮಾಡಿದವರು ಲೆಜೆಂಡ್ ಅಂತ ಅನ್ನಿಸಿಕೊಳ್ಳುತ್ತಾರೆ. ಆದರೆ ಈ ಅಮೇರಿಕನ್ ಈಜುಗಾರ (Swimmer) ಒಟ್ಟು ನಾಲ್ಕು ಒಲಿಂಪಿಕ್ ಕೂಟಗಳಲ್ಲಿ ಭಾಗವಹಿಸಿ ಗೆದ್ದದ್ದು ಬರೋಬ್ಬರಿ 28 ಒಲಿಂಪಿಕ್ ಪದಕಗಳನ್ನು ಅಂದರೆ ನಂಬಲು ಸಾಧ್ಯವೇ ಇಲ್ಲ! ಅದರಲ್ಲಿ ಕೂಡ 23 ಹೊಳೆಯುವ ಚಿನ್ನದ ಪದಕಗಳು! ಆತನು ನೀರಿಗೆ ಇಳಿದರೆ ಸಾಕು ದಾಖಲೆಗಳು ಮತ್ತು ದಾಖಲೆಗಳು ಮಾತ್ರ ನಿರ್ಮಾಣ ಆಗುತ್ತಿದ್ದವು.

ಆತನು ಅಮೇರಿಕಾದ ಮಹೋನ್ನತ ಈಜುಗಾರ ಮೈಕೆಲ್ ಫೆಲ್ಪ್ಸ್ (Michel Phelps).

ಭಗವಂತನು ಆತನನ್ನು ಈಜುವುದಕ್ಕಾಗಿ ಸೃಷ್ಟಿ ಮಾಡಿದ್ದ ಅನ್ನಿಸುತ್ತದೆ. ಆರು ಅಡಿ ನಾಲ್ಕು ಇಂಚು ಎತ್ತರ, ಮೀನಿನ ಹಾಗೆ ಬೆಂಡ್ ಆಗುವ ದೇಹ, ಭಾರೀ ಬಲಿಷ್ಟವಾದ ತೋಳುಗಳು, ನೀರನ್ನು ರಭಸವಾಗಿ ಹಿಂದೆ ತಳ್ಳಿ ಮುಂದೆ ಹೋಗುವ ದೋಣಿ ಆಕಾರದ ದೇಹ ಇದೆಲ್ಲವೂ ಆತನಿಗೆ ದೈವದತ್ತವಾಗಿ ಬಂದಿದ್ದವು. ಸತತವಾಗಿ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಆತ ಭಾಗವಹಿಸಿದ್ದು ಮಾತ್ರವಲ್ಲ ಪ್ರತೀ ಬಾರಿ ನೀರಿಗೆ ಇಳಿದಾಗ ಒಂದಲ್ಲ ಒಂದು ದಾಖಲೆ, ಒಂದಲ್ಲ ಒಂದು ಪದಕ ಗೆಲ್ಲದೆ ಆತ ಮೇಲೆ ಬಂದ ಉದಾಹರಣೆಯೇ ಇಲ್ಲ!

ಬಾಲ್ಟಿಮೋರ್‌ನ ಬುಲ್ಲೆಟ್!

1985ನೇ ಜೂನ್ 30ರಂದು ಅಮೇರಿಕಾದ ಬಾಲ್ಟಿಮೋರ್ ಎಂಬ ಪ್ರಾಂತ್ಯದಲ್ಲಿ ಹುಟ್ಟಿದ ಆತ ತನ್ನ ಒಂಬತ್ತನೇ ವಯಸ್ಸಿಗೆ ಅಪ್ಪ ಮತ್ತು ಅಮ್ಮನ ಪ್ರೀತಿಯಿಂದ ವಂಚಿತವಾದನು. ಅದಕ್ಕೆ ಕಾರಣ ಅವರ ವಿಚ್ಛೇದನ. ಅದರಿಂದಾಗಿ ಆತನಿಗೆ ಮಾನಸಿಕ ನೆಮ್ಮದಿ ಹೊರಟುಹೋಯಿತು. ಆತನಿಗೆ Attention Deficit Hyper active Disorder (ADHD) ಎಂಬ ಮಾನಸಿಕ ಸಮಸ್ಯೆಯು ಬಾಲ್ಯದಿಂದಲೂ ತೊಂದರೆ ಕೊಡುತ್ತಿತ್ತು. ರಾತ್ರಿ ನಿದ್ದೆ ಬಾರದೆ ಆತ ಒದ್ದಾಡುತ್ತಿದ್ದನು. ಈ ಸಮಸ್ಯೆಗಳಿಂದ ಹೊರಬರಲು ಆತ ಆರಿಸಿಕೊಂಡ ಮಾಧ್ಯಮ ಎಂದರೆ ಅದು ಸ್ವಿಮ್ಮಿಂಗ್ ಪೂಲ್! ತನ್ನ ಏಳನೇ ವಯಸ್ಸಿಗೆ ನೀರಿಗೆ ಇಳಿದ ಆತನಿಗೆ ಬಾಬ್ ಬೌಮಾನ್ ಎಂಬ ಕೋಚ್ ಸಿಕ್ಕಿದ ನಂತರ ಆತನ ಬದುಕಿನ ಗತಿಯೇ ಬದಲಾಯಿತು. ಆತ ದಿನದ ಹೆಚ್ಚು ಹೊತ್ತನ್ನು ನೀರಿನಲ್ಲಿಯೇ ಕಳೆಯಲು ತೊಡಗಿದನು.

ಆತನ ಕಣ್ಣ ಮುಂದೆ ಇಬ್ಬರು ಸ್ವಿಮ್ಮಿಂಗ್ ಲೆಜೆಂಡ್ಸ್ ಇದ್ದರು. ಒಬ್ಬರು ಒಂದೇ ಒಲಿಂಪಿಕ್ ಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಗೆದ್ದ ಮಾರ್ಕ್ ಸ್ಪಿಟ್ಜ್ (1972). ಇನ್ನೊಬ್ಬರು ಆಸ್ಟ್ರೇಲಿಯಾದ ಸ್ವಿಮಿಂಗ್ ದೈತ್ಯ ಇಯಾನ್ ತೋರ್ಪ್. ಅವರಿಂದ ಸ್ಫೂರ್ತಿ ಪಡೆದ ಆತ ಮುಂದೆ ಮಾಡಿದ್ದು ಎಲ್ಲವೂ ವಿಶ್ವ ದಾಖಲೆಯ ಸಾಧನೆಗಳೇ ಆಗಿವೆ. ಜನರು ಆತನನ್ನು ಬಾಲ್ಟಿಮೋರದ ಬುಲೆಟ್ ಎಂದು ಪ್ರೀತಿಯಿಂದ ಕರೆದರು.

ಸತತ ನಾಲ್ಕು ಒಲಿಂಪಿಕ್ಸ್ – 28 ಪದಕಗಳು – ಅದರಲ್ಲಿ 23 ಚಿನ್ನದ ಪದಕಗಳು!

2004ರ ಅಥೆನ್ಸ್ ಒಲಿಂಪಿಕ್ಸ್ – ಒಟ್ಟು ಎಂಟು ಪದಕಗಳು.
2008 ಬೀಜಿಂಗ್ ಒಲಿಂಪಿಕ್ಸ್ – ಒಟ್ಟು ಎಂಟು ಚಿನ್ನದ ಪದಕಗಳು.
2012 ಲಂಡನ್ ಒಲಿಂಪಿಕ್ಸ್ – ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿಯ ಪದಕಗಳು.
2016 ರಿಯೋ ಒಲಿಂಪಿಕ್ಸ್ – ಐದು ಚಿನ್ನದ ಪದಕ ಮತ್ತು ಒಂದು ಬೆಳ್ಳಿ.

ಅಂದರೆ ಸತತ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಭಾಗವಹಿಸಿ ಒಟ್ಟು 28 ಪದಕಗಳನ್ನು ಬೇರೆ ಯಾರೂ ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ! ಬಟರ್ ಫ್ಲೈ, ಮೆಡ್ಲಿ, ಫ್ರೀ ಸ್ಟೈಲ್, ಬ್ಯಾಕ್ ಸ್ಟ್ರೋಕ್ಸ್…ಹೀಗೆ ಪ್ರತೀಯೊಂದು ವಿಭಾಗಳಲ್ಲಿಯೂ ಮೈಕೆಲ್ ಒಂದರ ಮೇಲೊಂದು ಪದಕಗಳನ್ನು ಗೆಲ್ಲುತ್ತಾ ಹೋಗಿದ್ದಾನೆ! ಆ 16 ವರ್ಷಗಳ ಅವಧಿಯಲ್ಲಿ ಆತನಿಗೆ ಸ್ಪರ್ಧಿಗಳೇ ಇರಲಿಲ್ಲ ಎನ್ನಬಹುದು!

ಮೈಕೆಲ್ ಎಂಬ ಚಿನ್ನದ ಮೀನಿನ ಜಾಗತಿಕ ದಾಖಲೆಗಳು

೧) ಆತನು ತನ್ನ ಜೀವಮಾನದಲ್ಲಿ ಗೆದ್ದ ಒಟ್ಟು ಅಂತಾರಾಷ್ಟ್ರೀಯ ಪದಕಗಳ ಸಂಖ್ಯೆ ಬೆರಗು ಹುಟ್ಟಿಸುತ್ತದೆ. ಒಟ್ಟು 82 ಪದಕಗಳು. ಅದರಲ್ಲಿ 65 ಚಿನ್ನ, 14 ಬೆಳ್ಳಿ ಮತ್ತು 3 ಕಂಚು!
೨) ಒಟ್ಟು 20 ಗಿನ್ನೆಸ್ ದಾಖಲೆಗಳು ಆತನ ಹೆಸರಿನಲ್ಲಿ ಇವೆ!
೩) ಒಟ್ಟು 39 ವಿಶ್ವದಾಖಲೆಗಳು ಆತನ ಹೆಸರಿನಲ್ಲಿ ಇವೆ. ಅದರಲ್ಲಿ 29 ವೈಯಕ್ತಿಕ ಮತ್ತು 10 ರಿಲೇ ಸ್ಪರ್ಧೆಗಳದ್ದು!
೪) 2004ರಿಂದ 2018ರವರೆಗೆ ನಡೆದ ವಿಶ್ವ ಈಜು ಚಾಂಪಿಯನಶಿಪ್ ಸ್ಪರ್ಧೆಗಳಲ್ಲಿ ಆತ ಪದಕಗಳ ಗೊಂಚಲು ಗೆಲ್ಲದೆ ಹಿಂದೆ ಬಂದ ನಿದರ್ಶನವೇ ಇಲ್ಲ!
೫) ಒಟ್ಟು ಎಂಟು ಬಾರಿ ಅವನಿಗೆ ‘ವರ್ಲ್ಡ್ ಸ್ವಿಮ್ಮರ್ ಆಫ್ ದ ಇಯರ್’ ಪ್ರಶಸ್ತಿಗಳು ದೊರೆತಿವೆ!
೬) ಒಟ್ಟು 11 ಬಾರಿ ‘ಅಮೇರಿಕನ್ ಸ್ವಿಮ್ಮರ್ ಆಫ್ ದ ಇಯರ್’ ಪ್ರಶಸ್ತಿಗಳು ದೊರೆತಿವೆ!
೭) ಒಂದೇ ಒಲಿಂಪಿಕ್ ಕೂಟದಲ್ಲಿ ಆತ ಎಂಟು ಚಿನ್ನದ ಪದಕಗಳನ್ನು (2008 ಬೀಜಿಂಗ್) ಗೆದ್ದ ದಾಖಲೆಯನ್ನು ಮುಂದೆ ಕೂಡ ಯಾರೂ ಮುರಿಯುವ ಸಾಧ್ಯತೆ ಇಲ್ಲವೇ ಇಲ್ಲ!
೮) ಆತನಿಗೆ ಜಾಗತಿಕ ಒಲಿಂಪಿಕ್ ಸಮಿತಿಯು ಜಗತ್ತಿನ ಅತ್ಯುತ್ತಮ ಸ್ವಿಮ್ಮರ್ ಪ್ರಶಸ್ತಿ ನೀಡಿ ಗೌರವಿಸಿದೆ!
೯) 100 ಮೀಟರ್ ಬಟರ್ ಫ್ಲೈ, 200 ಮೀಟರ್ ಬಟರ್ ಫ್ಲೈ, 200 ಮೀಟರ್ ಇಂಡಿವಿಜುವಲ್ ಮೆಡ್ಲಿ, 400 ಮೀಟರ್ ಇಂಡಿವಿಜುವಲ್ ಮೆಡ್ಲಿ ಈ ವಿಭಾಗದಲ್ಲಿ ಆತ ಮಾಡಿದ ಜಾಗತಿಕ ದಾಖಲೆಗಳನ್ನು ಮುಂದೆ ಕೂಡ ಯಾರೂ ಮುರಿಯುವ ಸಾಧ್ಯತೆ ಇಲ್ಲ ಎಂದು ಭಾವಿಸಲಾಗುತ್ತಿದೆ!

ಈ ಎಲ್ಲಾ ಸಾಧನೆಗಳಿಗೆ ಕಾರಣ ಆತನ ಈಜುವ ಪ್ಯಾಶನ್!

ಆತನ ಆತ್ಮಚರಿತ್ರೆಯ ಪುಸ್ತಕವನ್ನು ಒಮ್ಮೆ ತಿರುವಿ ಹಾಕಿದಾಗ ಆತನ ಸ್ವಿಮ್ಮಿಂಗ್ ಪ್ಯಾಶನ್ ಬಗ್ಗೆ ಹಲವು ಉದಾಹರಣೆಗಳು ದೊರೆಯುತ್ತವೆ.

ಒಮ್ಮೆ ಏನಾಯಿತೆಂದರೆ 2001 ಸೆಪ್ಟೆಂಬರ್ 11ರಂದು ಅಮೆರಿಕದ ಟ್ವಿನ್ ಟವರ್ ಮೇಲೆ ಭಯೋತ್ಪಾದಕ ಧಾಳಿ ನಡೆದು ಇಡೀ ಟವರ್ ಕುಸಿದು ಹೋದದ್ದು, ಇಡೀ ಅಮೇರಿಕಾ ನಲುಗಿ ಹೋದದ್ದು ನಮಗೆಲ್ಲ ಗೊತ್ತಿದೆ. ಸರಿಯಾಗಿ ಅದೇ ಹೊತ್ತಿಗೆ ಮೈಕೆಲ್ ಸ್ವಿಮ್ಮಿಂಗ್ ಪೂಲನಲ್ಲಿ ಈಜುತ್ತಾ ತನ್ನ ಕೋಚಗೆ ಕಾಲ್ ಮಾಡಿ ಕೇಳಿದ್ದನಂತೆ- ಸರ್, ಎಲ್ಲಿದ್ದೀರಿ? ನಾನು ಪೂಲಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ದೇನೆ!

ಮೈಕೆಲ್ ಫೆಲ್ಫ್ಸ್ ಇಷ್ಟೊಂದು ವಿಶ್ವ ದಾಖಲೆಗಳನ್ನು ಕ್ರಿಯೇಟ್ ಮಾಡಿದ್ದು ಸುಮ್ಮನೆ ಅಲ್ಲ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕಾರ್ಗಿಲ್, ಇದು‌ ಕೆಚ್ಚಿನ ಕಲಿಗಳ ಸಮರಗಾಥೆ

Continue Reading

ಅಂಕಣ

ರಾಜಮಾರ್ಗ ಅಂಕಣ: ಕಾರ್ಗಿಲ್, ಇದು‌ ಕೆಚ್ಚಿನ ಕಲಿಗಳ ಸಮರಗಾಥೆ

ರಾಜಮಾರ್ಗ ಅಂಕಣ: ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

VISTARANEWS.COM


on

ರಾಜಮಾರ್ಗ ಅಂಕಣ Kargil Vijay Diwas 2024
Koo

ಇಂದು ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಭಾರತವು ಗೆದ್ದ ಅತ್ಯಂತ ಕಠಿಣ ಯುದ್ಧ (Kargil Vijay Diwas) ಅದು! 1999ರಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ ಮಲಿಕ್ ಬರೆದಿರುವ ‘KARGIL – FROM SURPRISE TO VICTORY’ ಓದುತ್ತಾ ಹೋದಂತೆ ನಾನು ಹಲವಾರು ಬಾರಿ ಬೆಚ್ಚಿಬಿದ್ದಿದ್ದೇನೆ! ಯಾಕೆಂದರೆ ಅದು ಭಾರತವು ಎದುರಿಸಿದ ಅತ್ಯಂತ ಕಠಿಣವಾದ ಯುದ್ಧ (India0 Pakistan War) ಮತ್ತು ದೀರ್ಘಕಾಲದ ಯುದ್ಧ. ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

ಯುದ್ಧದ ಹಿನ್ನೆಲೆ – ಮುಷರಫ್ ಕುತಂತ್ರ

ಆಗಷ್ಟೇ ಭಾರತವು ಅಣುಪರೀಕ್ಷೆ ಮಾಡಿ ಜಗತ್ತಿನ ಕಣ್ಣು ಕೋರೈಸುವ ಸಾಧನೆಯನ್ನು ಮಾಡಿತ್ತು. ಪಾಕ್ ಕೂಡ ಅಮೇರಿಕಾದ ನೆರವು ಪಡೆದು ತನ್ನ ಬಳಿ ಅಣುಬಾಂಬು ಇದೆ ಎಂದು ಹೇಳಿಕೊಂಡಿತ್ತು. ಆಗ ಭಾರತದ ಪ್ರಧಾನಿ ಆಗಿದ್ದ ವಾಜಪೇಯಿ (Atal Bihari Vajpayee) ಅವರು ತುಂಬಾ ಮೃದು ನಿಲುವಿನ ನಾಯಕ ಎಂದು ಪಾಕ್ ನಂಬಿ ಕುಳಿತಿತ್ತು. ಪಾಕಿಸ್ಥಾನಕ್ಕೆ ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ (Siachin) ವಶಪಡಿಸಿಕೊಳ್ಳಬೇಕು ಎಂಬ ದುರಾಸೆ. ಅಲ್ಲಿಂದ ಮುಂದೆ ಕಾರ್ಗಿಲ್ ಮತ್ತು ಮುಂದೆ ಇಡೀ ಕಾಶ್ಮೀರವನ್ನು ಕಬಳಿಸಬೇಕು ಎನ್ನುವ ಮಾಸ್ಟರ್ ಪ್ಲಾನ್! ಆಗ ಪಾಕಿಸ್ತಾನದ ಸೇನಾ ನಾಯಕ ಪರ್ವೇಜ್ ಮುಷರಫ್ (Parvez Musharraf) ಹೊಂಚು ಹಾಕಿ ಕುಳಿತ ಕಾಲ ಅದು.

ಅದಕ್ಕೆ ಪೂರಕವಾಗಿ 1998ರ ಜೂನ್ ತಿಂಗಳಿಂದಲೇ ಪಾಕಿಸ್ಥಾನದ 5000ರಷ್ಟು ಸೈನಿಕರು ಲೈನ್ ಆಫ್ ಕಂಟ್ರೋಲ್ ದಾಟಿ ಭಾರತದ 4-10 ಕಿ.ಮೀ. ಒಳಗೆ ಬಂದು ಎತ್ತರದ ಪ್ರದೇಶದಲ್ಲಿ ಜಮಾವಣೆ ಆಗತೊಡಗಿದ್ದರು! ಅವರ ಬಳಿಗೆ ಆಧುನಿಕ ಶಸ್ತ್ರಾಸ್ತ್ರಗಳು ಬಂದು ತಲುಪಿದ್ದವು. ಆದರೆ 1999ರ ಮೇ 18ರವರೆಗೆ ಭಾರತ ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಭಾರತೀಯ ಸೇನಾ ಗೂಢಚಾರ ಸಂಸ್ಥೆಯವರು ಇನ್ನೂ ಸ್ವಲ್ಪ ದಿನ ಮೈಮರೆತಿದ್ದರೆ…! ಆ ಕುರಿಗಾಹಿ ಹುಡುಗರು ಆ ನುಸುಳುಕೋರ ಸೈನಿಕರ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಕೊಡದೇ ಹೋಗಿದ್ದರೆ…! ನಾನು ಬೆಚ್ಚಿ ಬಿದ್ದದ್ದು ಆಗ.

ಭಾರತದ ಸೈನಿಕರ ಬಳಿ ಯುದ್ಧದ ಸಿದ್ಧತೆಗೆ ಸಮಯ ಇರಲಿಲ್ಲ

ಗಡಿಯ ಒಳಗೆ ಅಷ್ಟು ದೊಡ್ಡ ಸಂಖ್ಯೆಯ ಸೈನಿಕರು ನುಸುಳಿಬಂದ ವಿಷಯ ಭಾರತಕ್ಕೆ ಗೊತ್ತಾಯಿತು ಅಂದಾಗ ಮುಷರಫ್ ಅಲರ್ಟ್ ಆದರು. ಅವರು ನಮ್ಮ ಸೈನಿಕರೇ ಅಲ್ಲ, ಯಾವುದೋ ಭಯೋತ್ಪಾದಕ ಸಂಘಟನೆಯವರು ಎಂದು ಬಿಟ್ಟರು ಮುಷರಫ್! ಆದರೆ ಈಗ ಭಾರತದ ಪ್ರಧಾನಿ ವಾಜಪೇಯಿ, ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸೇನಾ ಮುಖ್ಯಸ್ಥರನ್ನು ಕರೆಸಿ ಯುದ್ಧ ಘೋಷಣೆ ಮಾಡಿಬಿಟ್ಟರು. ಆದರೆ ಭಾರತೀಯ ಸೈನ್ಯಕ್ಕೆ ಆ ಯುದ್ಧಕ್ಕೆ ಸಿದ್ಧತೆ ಮಾಡಲು ದೊರೆತದ್ದು 24 ಘಂಟೆ ಮಾತ್ರ! ಆದರೂ 1999ರ ಮೇ 3ರಂದು ಭಾರತ ಯುದ್ಧ ಘೋಷಣೆ ಮಾಡಿ ಆಗಿತ್ತು!

ಆರಂಭದಲ್ಲಿ ಭಾರತಕ್ಕೆ ಹಿನ್ನಡೆ ಆದದ್ದು ನಿಜ. ಆದರೆ ಮೇ 30 ಆಗುವಾಗ ಭಾರತದ 30,000 ಸೈನಿಕರು ಟೈಗರ್ ಹಿಲ್ ಬಳಿ ಬಂದು ಜಮಾವಣೆ ಮಾಡಿ ಆಗಿತ್ತು. ಭಾರತದ ಭೂಸೈನ್ಯ ಮತ್ತು ವಾಯು ಸೈನ್ಯಗಳು ವೀರಾವೇಶದಿಂದ ಹೋರಾಟಕ್ಕೆ ಇಳಿದಿದ್ದವು. ಎರಡೂ ಕಡೆಯ ಸೈನಿಕರು, ಬಾಂಬುಗಳು, ಮದ್ದುಗುಂಡುಗಳು, ಶೆಲ್‌ಗಳು ಸಿಡಿಯುತ್ತ ಕಾರ್ಗಿಲ್ ಯುದ್ಧಭೂಮಿಯು ರಕ್ತದಲ್ಲಿ ಒದ್ದೆಯಾಗುತ್ತಾ ಹೋಯಿತು. ಟೈಗರ್ ಹಿಲ್ ಏರಿ 10 ಪಾಕ್ ಸೈನಿಕರ ಹತ್ಯೆಯನ್ನು ನಮ್ಮ ಸೈನಿಕರು ಮಾಡಿದಾಗ ಭಾರತವು ಯುದ್ಧದಲ್ಲಿ ಸಣ್ಣ ಮೇಲುಗೈ ಸಾಧಿಸಿತು.

ಅಲ್ಲಿಂದ ಮುಂದೆ ಭಾರತದ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸ್ವತಃ ಯುದ್ಧಭೂಮಿಗೆ ಬಂದು ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದ್ದು, ಪ್ರಧಾನಿ ವಾಜಪೇಯಿ ವಾರ್ ರೂಮಿನಲ್ಲಿ ಕುಳಿತು ಸೈನ್ಯಕ್ಕೆ ನಿರ್ದೇಶನವನ್ನು ಕೊಟ್ಟದ್ದು ಭಾರತವನ್ನು ಗೆಲ್ಲಿಸುತ್ತಾ ಹೋದವು. 75 ದಿನಗಳ ಘನಘೋರ ಯುದ್ಧದ ನಂತರ ಭಾರತ ಜುಲೈ 26ರಂದು ದ್ರಾಸ್ ಪರ್ವತದ ತಪ್ಪಲಲ್ಲಿ ಇದ್ದ ಕೊನೆಯ ಪಾಕ್ ಸೈನಿಕನನ್ನೂ ಹೊಸಕಿ ಹಾಕಿದಾಗ ಭಾರತ ವಿಜಯೋತ್ಸವ ಆಚರಣೆ ಮಾಡಿತು. ಕಾರ್ಗಿಲ್ ಮೈದಾನದಲ್ಲಿ ಸೈನಿಕರ ನಡುವೆ ತ್ರಿವರ್ಣಧ್ವಜ ಹಾರಿಸಿದ ಕ್ಷಣವೇ ಕಾರ್ಗಿಲ್ ವಿಜಯ ದಿನ.

Kargil Vijay Diwas 2024
Kargil Vijay Diwas 2024

ಹುತಾತ್ಮರಾದವರು ಭಾರತದ 527 ಸೈನಿಕರು!

ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೈನಿಕರ ಬಲಿದಾನ ಭಾರತಕ್ಕೆ ಒಂದು ದೊಡ್ಡ ವಿಜಯವನ್ನು ತಂದುಕೊಟ್ಟಿತ್ತು. ಅದರಲ್ಲಿ ಕರ್ನಾಟಕದ 21 ಸೈನಿಕರೂ ಇದ್ದರು. ಸಾವಿರಾರು ಯೋಧರು ತೀವ್ರವಾಗಿ ಗಾಯಗೊಂಡರು. ಪಾಕಿಸ್ತಾನವೂ ದೊಡ್ಡ ಸಂಖ್ಯೆಯ ಸೈನಿಕರನ್ನು ಕಳೆದುಕೊಂಡಿತ್ತು.

ನಮ್ಮ ಸೈನಿಕರಾದ ಸಿಯಾಚಿನ್ ಹೀರೋ ನಾಯಬ್ ಸುಬೇದಾರ್ ಬಾಣಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಮೇಜರ್ ಪದ್ಮಪಾಣಿ ಆಚಾರ್ಯ, ಗ್ರೆನೆಡಿಯರ್ ಯೋಗೇಂದರ್ ಸಿಂಘ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನುಜ್ ನಯ್ಯರ್, ಲೆಫ್ಟಿನೆಂಟ್ ಬಲವಾನ್ ಸಿಂಘ್, ರೈಫಲ್ ಮ್ಯಾನ್ ಸಂಜಯ ಕುಮಾರ್, ಕ್ಯಾಪ್ಟನ್ ವಿಜಯವಂತ್ ಥಾಪರ್, ಮೇಜರ್ ಸೋನಂ ವಾಂಗಚುಕ್, ಲೆಫ್ಟಿನೆಂಟ್ ಕರ್ನಲ್ ವೈ.ಕೆ. ಜೋಷಿ ಇವರೆಲ್ಲರೂ ನಿಜವಾದ ಕಾರ್ಗಿಲ್ ಹೀರೋಗಳು. ಅದರಲ್ಲಿ ಹೆಚ್ಚಿನವರು ಹುತಾತ್ಮರಾದವರು. ಅವರಿಗೆಲ್ಲ ವಿವಿಧ ಸೇನಾ ಶೌರ್ಯ ಪ್ರಶಸ್ತಿಗಳನ್ನು ನೀಡಿ ಭಾರತ ಸರಕಾರವು ಗೌರವಿಸಿತು.

ಕಾರ್ಗಿಲ್ ಯುದ್ಧದ ಫಲಶ್ರುತಿ ಏನೆಂದರೆ ಮುಂದೆ ಭಾರತವು ಎಂದಿಗೂ ಪಾಕಿಸ್ತಾನವನ್ನು ನಂಬಲಿಲ್ಲ ಮತ್ತು ಪಾಕಿಸ್ತಾನ ಯಾವತ್ತೂ ಭಾರತದ ಮೇಲೆ ಮತ್ತೆ ದಂಡೆತ್ತಿ ಬರುವ ಸಾಹಸವನ್ನು ಮಾಡಲಿಲ್ಲ!

ಜೈ ಹಿಂದ್.

ಇದನ್ನೂ ಓದಿ: ರಾಜಮಾರ್ಗ ಅಂಕಣ:  ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?

Continue Reading

ಅಂಕಣ

ರಾಜಮಾರ್ಗ ಅಂಕಣ:  ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?

ರಾಜಮಾರ್ಗ ಅಂಕಣ: ಕುಳಕುಂದ ಶಿವರಾವ್ ಅಂದರೆ ಯಾರಿಗೂ ಥಟ್ಟನೆ ಪರಿಚಯ ಆಗಲಾರದು. ಆದರೆ ಕನ್ನಡದ ಶ್ರೇಷ್ಠ ಲೇಖಕ ನಿರಂಜನ ಎಂದರೆ ಎಲ್ಲರಿಗೂ ಪರಿಚಯ ಆಗುತ್ತದೆ. ಈ ವರ್ಷ ಅವರ ಜನ್ಮ ಶತಮಾನೋತ್ಸವ.

VISTARANEWS.COM


on

ರಾಜಮಾರ್ಗ ಅಂಕಣ
Koo

ಈ ವರ್ಷ (2024) ಲೇಖಕ ನಿರಂಜನರ ಜನ್ಮ ಶತಮಾನೋತ್ಸವ

Rajendra-Bhat-Raja-Marga-Main-logo

ಕುಳಕುಂದ ಶಿವರಾವ್ ಅಂದರೆ ಯಾರಿಗೂ ಥಟ್ಟನೆ ಪರಿಚಯ ಆಗಲಾರದು. ಆದರೆ ಕನ್ನಡದ ಶ್ರೇಷ್ಠ ಲೇಖಕ ನಿರಂಜನ (Niranjana) ಎಂದರೆ ಎಲ್ಲರಿಗೂ ಪರಿಚಯ ಆಗುತ್ತದೆ. ಅವರು 71 ವರ್ಷಗಳ ಕಾಲ ಬದುಕಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು. ಕನ್ನಡದ ಮೊದಲ ಮತ್ತು ಜನಪ್ರಿಯ ಅಂಕಣ ಲೇಖಕರು ಅಂದರೆ ಅದು ನಿರಂಜನ! (ರಾಜಮಾರ್ಗ ಅಂಕಣ)

ಬಾಲ್ಯದಿಂದಲೂ ಬರವಣಿಗೆ

1924 ಜೂನ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಳಕುಂದ ಎಂಬ ಗ್ರಾಮದಲ್ಲಿ ಜನಿಸಿದ ಅವರು ಸಣ್ಣ ಪ್ರಾಯದಲ್ಲಿ ಪತ್ರಿಕೆಗಳಿಗೆ ಬರೆಯಲು ತೊಡಗಿದರು. ಮೊದಲು ಕಂಠೀರವ ಪತ್ರಿಕೆ ಅವರಿಗೆ ಬರೆಯಲು ಅವಕಾಶ ಕೊಟ್ಟಿತು. ಮುಂದೆ ಕನ್ನಡದ ಎಲ್ಲ ಪ್ರಸಿದ್ಧ ಪತ್ರಿಕೆಗಳಿಗೆ ಅವರು ಅಂಕಣಗಳನ್ನು ಬರೆಯುತ್ತಾ ಹೋದರು. ರಾಷ್ಟ್ರಬಂಧು ಎಂಬ ಪತ್ರಿಕೆಯ ಪ್ರಮುಖ ಲೇಖಕರಾಗಿ ಅವರು ಸಾವಿರಾರು ಅಂಕಣಗಳನ್ನು ಬರೆದರು. ಅವರ ಅಂಕಣ ಲೇಖನಗಳು ಎಂಟು ಕೃತಿಗಳಾಗಿ ಹೊರಬಂದು ಅವರಿಗೆ ಅಪಾರ ಜನಪ್ರಿಯತೆ ಕೊಟ್ಟವು. ಅವರು ಕನ್ನಡದ ಮೊದಲ ಅಂಕಣಕಾರ ಎಂಬ ದಾಖಲೆಯೂ ನಿರ್ಮಾಣವಾಯಿತು.

ಪ್ರಭಾವಶಾಲಿ ಸಣ್ಣ ಕಥೆಗಳು

ಸಣ್ಣ ಕಥೆಗಳು ಅವರಿಗೆ ಇಷ್ಟವಾದ ಇನ್ನೊಂದು ಪ್ರಕಾರ. ಅವರ 156 ಸಣ್ಣ ಕಥೆಗಳ ಸಂಗ್ರಹವಾದ ‘ಧ್ವನಿ’ ಕನ್ನಡದ ಶ್ರೇಷ್ಠ ಕೃತಿ ಆಗಿದೆ. ಕಾರಂತರ ಸಂಪರ್ಕ, ಲೆನಿನ್ ಬಗ್ಗೆ ಓದು ಅವರನ್ನು ಬೆಳೆಸುತ್ತಾ ಹೋದವು.

ಬಾಪೂಜಿ ಬಾಪು ಅವರ ಅತ್ಯಂತ ಶ್ರೇಷ್ಟವಾದ ಸಣ್ಣ ಕಥೆ. ಗಾಂಧೀಜಿ ಬದುಕಿದ್ದಾಗಲೇ ಅವರು ಸತ್ತಂತೆ ಕಲ್ಪಿಸಿಕೊಂಡು ಬರೆದ ಕಥೆ ಇದು! ರಕ್ತ ಸರೋವರ ಕಾಶ್ಮೀರದ ದಾಲ್ ಸರೋವರದ ಹಿನ್ನೆಲೆಯಲ್ಲಿ ಅರಳಿದ ಅದ್ಭುತವಾದ ಕಥೆ.
ತಿರುಕಣ್ಣನ ಮತದಾನ ರಾಜಕೀಯ ವಿಡಂಬನೆಯ ಕಥೆ. ಅವರ ಸಣ್ಣ ಕಥೆಗಳು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಸಂಸ್ಕೃತಿಯಲ್ಲಿ ಅರಳಿದ ಕಥೆಗಳು. ಕನ್ನಡದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ನಂತರ ಇಷ್ಟೊಂದು ವೈವಿಧ್ಯಮಯವಾದ ಸಣ್ಣ ಕಥೆಗಳನ್ನು ಬರೆದವರು ನಿರಂಜನ ಮಾತ್ರ ಅಂದರೆ ಅದು ಅತಿಶಯೋಕ್ತಿ ಅಲ್ಲ!

ಕಾದಂಬರಿಕಾರರಾಗಿ ನಿರಂಜನರು

ಅವರು ಬರೆದದ್ದು ಒಟ್ಟು 21 ಕಾದಂಬರಿಗಳು. ವರ್ಗ ಸಂಘರ್ಷ ಮತ್ತು ಸಾಮಾಜಿಕ ಸಮಾನತೆ ಅವರ ಹೆಚ್ಚಿನ ಕಾದಂಬರಿಗಳ ಹೂರಣ. 700 ಪುಟಗಳ ಬೃಹತ್ ಕಾದಂಬರಿ ಮೃತ್ಯುಂಜಯ ಅದೊಂದು ಮಾಸ್ಟರಪೀಸ್ ಕಲಾಕೃತಿ. ವಿಮೋಚನೆ, ಬನಶಂಕರಿ, ಅಭಯ, ಚಿರಸ್ಮರಣೆ, ರಂಗಮ್ಮನ ವಟಾರ ಮೊದಲಾದ ಕಾದಂಬರಿಗಳು ಒಮ್ಮೆ ಓದಿದರೆ ಮರೆತುಹೋಗೋದಿಲ್ಲ. ಸುಳ್ಯ ಮತ್ತು ಮಡಿಕೇರಿ ಪ್ರದೇಶದಲ್ಲಿ ಕಲ್ಯಾಣಸ್ವಾಮಿ ಎಂಬಾತ ನಡೆಸಿದ ರಕ್ತಕ್ರಾಂತಿಯ ಹಸಿಹಸಿ ಕಥೆಯನ್ನು ಹೊಂದಿರುವ ಒಂದು ಶ್ರೇಷ್ಟವಾದ ಕಾದಂಬರಿ ಅವರು ಬರೆದಿದ್ದಾರೆ. ನಿರಂಜನರು ಬರೆದ ನಾಟಕಗಳೂ ಜನಪ್ರಿಯವಾಗಿವೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

ನಿರಂಜನ ಅವರ ಸಂಪಾದನಾ ಗ್ರಂಥಗಳು

ಇಂದು ಕನ್ನಡ ನಾಡು ನಿರಂಜನರನ್ನು ನೆನಪಿಟ್ಟುಕೊಳ್ಳಲೇ ಬೇಕಾದ ಮುಖ್ಯ ಕಾರಣ ಎಂದರೆ ಅವರ ಸಂಪಾದನೆಯ ಗ್ರಂಥಗಳು. 25 ಸಂಪುಟಗಳ ವಿಶ್ವ ಕಥಾಕೋಶ, ಜ್ಞಾನಗಂಗೋತ್ರಿ ಹೆಸರಿನ ಎಳೆಯರ ಏಳು ಸಂಪುಟಗಳ ವಿಶ್ವ
ಜ್ಞಾನಕೋಶ, ಪುರೋಗಾಮಿ ಪ್ರಕಾಶನದ ಎಂಟು ಪುಸ್ತಕಗಳು, ಜನತಾ ಸಾಹಿತ್ಯಮಾಲೆಯ 25 ಪುಸ್ತಕಗಳು….ಹೀಗೆ ಲೆಕ್ಕ ಮಾಡುತ್ತಾ ಹೋದರೆ ಸಾವಿರಾರು ಪುಟಗಳ ಅದ್ಭುತ ಜ್ಞಾನಕೋಶಗಳು ಅರಳಿದ್ದು ನಿರಂಜನರ ಸಂಪಾದಕತ್ವದಲ್ಲಿ! ಅವರ ಇಡೀ ಜೀವನವನ್ನು ನಿರಂಜನರು ಅಧ್ಯಯನ ಮತ್ತು ಬರವಣಿಗೆಯಲ್ಲಿಯೇ ಕಳೆದರು.

ಇಡೀ ಕುಟುಂಬವು ಸಾಹಿತ್ಯಕ್ಕೆ ಮೀಸಲು

ನಿರಂಜನರ ಪತ್ನಿ ಅನುಪಮಾ ನಿರಂಜನ ಕನ್ನಡದ ಸ್ಟಾರ್ ಕಾದಂಬರಿಕಾರರು. ಹೆಣ್ಣು ಮಕ್ಕಳಾದ ತೇಜಸ್ವಿನಿ ಮತ್ತು ಸೀಮಂತಿನಿ ಇಬ್ಬರೂ ಕನ್ನಡದ ಪ್ರಭಾವೀ ಲೇಖಕರಾಗಿ ಗುರುತಿಸಿಕೊಂಡವರು. ಹಾಗೆ ನಿರಂಜನರ ಇಡೀ ಕುಟುಂಬವು ಕನ್ನಡದ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿತು.

ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ದೊರೆತವು. 1995ರಲ್ಲಿ ಅವರು ನಮ್ಮನ್ನು ಅಗಲಿದರು. ಕನ್ನಡ ಸಾಹಿತ್ಯಲೋಕವನ್ನು ಚಂದವಾಗಿ ಬೆಳೆಸಿದ ನಿರಂಜನರ ಜನ್ಮ ಶತಮಾನೋತ್ಸವದ ಈ ವರ್ಷ ಕನ್ನಡ ಸಾರಸ್ವತ ಲೋಕ ಒಂದು ಸ್ಮರಣೀಯ ಕಾರ್ಯಕ್ರಮವನ್ನು ಅವರ ನೆನಪಿನಲ್ಲಿ ಮಾಡಬೇಕು ಎನ್ನುವುದು ನಮ್ಮೆಲ್ಲರ ಆಗ್ರಹ ಆಗಬೇಕು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

Continue Reading

ಅಂಕಣ

Guru Purnima 2024: ಗುರು ಎಂದರೆ ವ್ಯಕ್ತಿಯಲ್ಲ, ಅದ್ಭುತವಾದ ಶಕ್ತಿ!

Guru Purnima 2024: ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು, ಗುರುಗೋವಿಂದ ಭಟ್ಟರು-ಸಂತ ಶಿಶುನಾಳ ಶರೀಫ , ರಾಮಕೃಷ್ಣ ಪರಮಹಂಸರು- ಸ್ವಾಮಿ ವಿವೇಕಾನಂದರು, ಬ್ರಹ್ಮಚೈತನ್ಯ ಗೊಂದಾವಲಿಕರ ಮಹಾರಾಜ-ಬ್ರಹ್ಮಾನಂದ ಮಹಾರಾಜ… ಹೀಗೆ ಗುರು-ಶಿಷ್ಯರಿಗೆ ಪರಂಪರೆಗಳ ಐತಿಹ್ಯವಿದೆ.

VISTARANEWS.COM


on

Guru Purnima 2024
Koo

ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ
(ಲೇಖಕರು, ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು ಹಾಗೂ ಜ್ಯೋತಿಷಿಗಳು)

ಆಷಾಢ ಮಾಸ ಶುಕ್ಲ ಪಕ್ಷದಲ್ಲಿ ಬರುವ “ಕಡ್ಲಿಗರ ಹುಣ್ಣಿಮೆ”ಯನ್ನು ನಾವು ಆಚರಿಸ್ಪಡುವ, ಶ್ರೇಷ್ಠವಾದ ಪರ್ವವೆಂದರೆ ಅದು “ಗುರು ಪೂರ್ಣಿಮೆ”.
ಈ ದಿನ ನಾವು ನಂಬಿದ ನಮ್ಮಲ್ಲಿಯ ಅಂಧಕಾರವನ್ನು ತೊಲಗಿಸಿ ಜ್ಞಾನ ಸಾಕ್ಷಾತ್ಕಾರ ಮಾಡಿಸಿದ ನಮ್ಮ ಗುರುಗಳಿಗೆ ವಂದನೆ (Guru Purnima 2024) ಸಲ್ಲಿಸುವ ದಿನ. ಆ ಗುರುವನ್ನು ನೆನೆದು ಅವರ ಮಹತ್ವವನ್ನು ಸಾರುವ ದಿನ. ಗುರುಗಳು ನಮಗೆ ನಮ್ಮ ಜೀವನಕ್ಕೆ ಸರಿಯಾದ ಮಾರ್ಗ ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ ದಿಕ್ಸೂಚಿ,ದಾರಿದೀಪ. ಪರಮಾತ್ಮನ, ಪರಮಾರ್ಥದ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮಜ್ಯೋತಿಯನ್ನು ಜ್ಞಾನವೆಂಬ ತೈಲ ಹಾಕಿ ಬೆಳುಗುವಂತೆ ಮಾಡಿ ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಆಧ್ಯಾತ್ಮದ ಜತೆಗೆ ಲೌಕಿಕ ಪ್ರಪಂಚದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟವ ತನಕ ಸಹಾಯ ಮಾಡುವವನೇ “ ಶ್ರೇಷ್ಠಗುರು”.

ಅಲೆದು ಅಲೆದು ಹುಡಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವುಗಳೆಲ್ಲರೂ ಆ ಗುರುವಿನ ಮುಖಾಂತರವೇ ಪರಮಾತ್ಮನ ಅರಿವು, ಪ್ರಪಂಚದ ಅರಿವು, ಅರಿಯಬೇಕಾಗಿರುವುದರಿಂದ, ನಾವು ಪ್ರತಿ ಆಷಾಢ ಮಾಸದ ಈ ಪೌರ್ಣಿಮೆಯಂದು ಮಾತ್ರ ಗುರುವನ್ನು ಪೂಜಿಸದೆ.. ಅನು ದಿನ, ಅನು ಕ್ಷಣ, ಗುರುವನ್ನು ನಮ್ಮ ಅಂತರಂಗದಲ್ಲೇ ಪ್ರತಿಷ್ಠಾಪಿಸಿ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲ ಎಂದು ಅಂತಹ ಗುರುವಿಗೆ ಶರಣಾದಾಗ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಫಲಪ್ರದವಾಗುತ್ತದೆ.

ಉಪನಿಷತ್ತಿನಲ್ಲಿ ಗುರು

ಉಪನಿಷತ್ತಿನಲ್ಲಿ ಗುರು ಎಂಬುದನ್ನು ಈ ರೀತಿಯಾಗಿ ವಿವರಿಸಿದ್ದಾರೆ. “ಗು” ಎಂದರೆ ಅಂಧಕಾರವೆಂದು “ರು” ಎಂದರೆ ದೂರೀಕರಿಸುವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಯ ಕಡೆಗೆ ನಡೆಸುವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ನಿಜವಾದ ಗುರು ಎಂದು ಅರ್ಥೈಸಬಹುದೇನೋ ಎಂಬ ಅಭಿಪ್ರಾಯ.

ಆದಿಗುರು ಶ್ರೀ ಶಂಕರಭಗವತ್ಪಾದಚಾರ್ಯರು ಗುರು ಮಹಿಮೆ ಕುರಿತು ಹೀಗೆ ಸ್ತೋತ್ರವನ್ನು ಹೇಳಿದ್ದಾರೆ:

ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||

ಗುರುವು ತ್ರೀಮೂರ್ತಿ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ. ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಲ್ಪಟಿದೆ :

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ।
ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ॥
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ।
ಚಕ್ಷುರುನ್ಮೀಲಿತಂ ಯೇನ
ತಸ್ಮೈ ಶ್ರೀ ಗುರವೇ ನಮಃ॥

ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳ್ಗಿಗೆ ಬೇಕಾದ ಸೋಪಾನವನ್ನು ಹತ್ತಿಸುವ ಹಾಗೂ ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.
ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ ಬಂದಿದ್ದಾರೆ..

ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ।
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ॥

ಅಂದರೆ ಗುರುವಿಗಿಂತ ಮೀರಿದ ತತ್ವ, ತಪಸ್ಸು ಯಾವುದೂ ಇಲ್ಲ. ಜ್ಞಾನವೆಂಬ ದಾರಿದೀಪವಾಗಿರುವ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ. ಶಾಶ್ವತವಾದ ಆನಂದವನ್ನು ಪಡೆಯುವುದು ಆ ಸದ್ಗುರುವಿನಿಂದಲೆ ಮಾತ್ರವೇ ಸಾಧ್ಯ ಎಂದು ಶ್ರೀ ಶಂಕರಾಚಾರ್ಯರು ತಮ್ಮ “ಗುರ್ವಷ್ಟಕಮ್” ಎಂಬ ಸ್ತೂತ್ರದಲ್ಲಿ ಹೀಗೆ ಹೇಳಿದ್ದಾರೆ :
ಶರೀರಂ ಸುರೂಪಂ ತಥಾ ವಾ ಕಲತ್ರಂ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ।

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್।।

ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ, ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ ಎಂದು.ಏನೆಲ್ಲ ಸಾಧಿಸಿದ್ದರೂ, ತ್ಯಜಿಸಿದ್ದರೂ,ಗುರುವಿನ ಕರುಣೆಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಯುತ್ತದೆ.ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟಸಾದ್ಯ ಎನ್ನುತ್ತಾ ಗುರುವಿನ ಮಹತ್ವನ್ನು ವಿವರಿಸುತ್ತಾರೆ ಆಚಾರ್ಯರು.

ನಮ್ಮ ಈ ಸನಾತನ ಪರಂಪರೆಯಲ್ಲಿ ಈಗಿರುವ “ಗುರುವಿನ ಗುರುವಿಗೆ ಪರಮಗುರು”ಎಂದೂ, “ಪರಮ ಗುರುವಿನ ಗುರುವನ್ನು ಪರಾಪರ ಗುರು”ಎಂದೂ,”ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು”ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ಯಂದು ಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ. ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರ ವಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನ ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜತೆಗೇ “ಗುರು ಪೂರ್ಣಿಮೆ”ಯಂದು ಪೂಜಿಸುತ್ತೇವೆ. ಲೋಕಗುರು, ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು. ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ. “ಗುರು” ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬ ಚೈತನ್ಯದಾಯಕವಾಗಿರುತ್ತದೆ.

ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ ಸಿದ್ಧ ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ. ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ,ಗುರುಗೋವಿಂದ ಭಟ್ಟರು-ಸಂತ ಶಿಶುನಾಳ ಶರೀಫ , ರಾಮಕೃಷ್ಣ ಪರಮಹಂಸರು- ಸ್ವಾಮಿ ವಿವೇಕಾನಂದರು,ಬ್ರಹ್ಮಚೈತನ್ಯ ಗೊಂದಾವಲಿಕರ ಮಹಾರಾಜ-ಬ್ರಹ್ಮಾನಂದ ಮಹಾರಾಜ… ಇವರೆಲ್ಲ ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.

ಗುರುವಿನ ಬಗೆಗೆ ವರ್ಣಿಸುತ್ತಾ ಹೊರಟರೆ ಅದು ಸಾಗರದಷ್ಟು ಆಳ, ಅಗಲ. ಆಗಸದಷ್ಟು ವಿಶಾಲ, ವಿಸ್ತಾರ. ಗುರು ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಅದ್ಬುತ ಶಕ್ತಿ ಎಂದು ಅರ್ಥೈಸಿ ತಿಳಿದುಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ….

ಇದನ್ನೂ ಓದಿ: Guru Purnima 2024: ಭಾರತದ ಮಹೋನ್ನತ ಕ್ರೀಡಾ ತಾರೆಗಳನ್ನು ಸೃಷ್ಟಿಸಿದ 6 ‘ಗುರು’ಗಳಿವರು

Continue Reading
Advertisement
Paris Olympics
ಕ್ರೀಡೆ3 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆ; ಜೂಡೊಪಟು ತಾತ್ಕಾಲಿಕ ಅಮಾನತು

illicit relationship raichur siravara
ಕ್ರೈಂ13 mins ago

Illicit Relationship: ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

Gold Rate Today
ಚಿನ್ನದ ದರ13 mins ago

Gold Rate Today: ಬಜೆಟ್‌ ಬಳಿಕ ಇದೇ ಮೊದಲ ಬಾರಿ ಏರಿಕೆ ಕಂಡ ಚಿನ್ನದ ದರ; ಇಂದು ಇಷ್ಟು ದುಬಾರಿ

Actor Darshan Astrologer Chanda Pandey Said Facing Problems Because Of His vig
ಕ್ರೈಂ33 mins ago

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Encounter in Kupwara
ದೇಶ60 mins ago

Encounter in Kupwara: ಕುಪ್ವಾರಾದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೈನಿಕರಿಗೆ ಗಾಯ; ಓರ್ವ ಉಗ್ರ ಹತ

Champions Trophy 2025
ಕ್ರೀಡೆ1 hour ago

Champions Trophy 2025: ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ; ಟೀಮ್ ಇಂಡಿಯಾಗೆ ಪಾಕ್​ ಆಟಗಾರನ ಮನವಿ

Murder in PG Case
ಕ್ರೈಂ1 hour ago

Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

kaveri aarti
ಪ್ರಮುಖ ಸುದ್ದಿ1 hour ago

Kaveri Aarti: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ; ದಸರಾ ಹೊತ್ತಿಗೆ ರೆಡಿ

Malaika Arora breakup rumours rushes past Arjun Kapoor
ಬಾಲಿವುಡ್1 hour ago

Malaika Arora: ಒಂದೇ ಈವೆಂಟ್‌ನಲ್ಲಿ ಇದ್ದರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡಿಲ್ಲ! ಅರ್ಜುನ್​-ಮಲೈಕಾ ಬ್ರೇಕಪ್‌ ಖಚಿತ?

Narendra Modi
ದೇಶ2 hours ago

Narendra Modi: ರಷ್ಯಾ ಬಳಿಕ ಮುಂದಿನ ತಿಂಗಳು ಯುದ್ಧ ಪೀಡಿತ ಉಕ್ರೇನ್‌ಗೆ ಪ್ರಧಾನಿ ಮೋದಿ ಭೇಟಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ16 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ17 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ18 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ19 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌