ಧವಳ ಧಾರಿಣಿ ಅಂಕಣ: ಘನ ದಶರಥನಿಗೆ ನಿಲುಕದ ಅಪೂರ್ವ ಮಿಲನ - Vistara News

ಅಂಕಣ

ಧವಳ ಧಾರಿಣಿ ಅಂಕಣ: ಘನ ದಶರಥನಿಗೆ ನಿಲುಕದ ಅಪೂರ್ವ ಮಿಲನ

ಧವಳ ಧಾರಿಣಿ ಅಂಕಣ: ಧೃತರಾಷ್ಟ್ರನದ್ದು ಕುರುಡು ಮೋಹವಾದರೆ ದಶರಥನದ್ದು ಹುಚ್ಚುಮೋಹ. ಮೊದಲಿನ ಘನತೆಯ ಚಕ್ರವರ್ತಿ ನಂತರ ಈ ಅಂಧಪ್ರೀತಿಯ ಕಾರಣ ಅಳುಮುಂಜಿಯಾದ.

VISTARANEWS.COM


on

king dasharatha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾಗ 2:

ಶ್ರೀರಾಮದರ್ಶನಕ್ಕೆ ಅಡ್ಡಿಯಾದ ಪುತ್ರವ್ಯಾಮೋಹ

dhavala dharini by Narayana yaji

ಧವಳ ಧಾರಿಣಿ ಅಂಕಣ: ಕೋಸಲ ಸೀಮೆಯ ಚಕ್ರವರ್ತಿಯಾದ ದಶರಥ ಘನತೆಯಿಂದ ರಾಜ್ಯವನ್ನಾಳುತ್ತಿದ್ದನು ಎನ್ನುವುದಕ್ಕೆ ವಾಲ್ಮೀಕಿಯಷ್ಟು ವಿವರವಾಗಿ ಬೇರೆ ಯಾರೂ ಕೊಡಲಿಲ್ಲ. ಕಾಳಿದಾಸನೂ ಸಹ ತನ್ನ ರಘುವಂಶದಲ್ಲಿ ದಿಲೀಪ, ರಘು ಅಜರಿಗೆ ಕೊಟ್ಟಷ್ಟು ಮಹತ್ವವನ್ನು ದಶರಥನಿಗೆ ನೀಡಿಲ್ಲ. ಸೂರ್ಯವಂಶದ ದೊರೆಗಳಲ್ಲಿ ಕಾಳಿದಾಸನ ಪ್ರಕಾರ ರಘುವಿನಷ್ಟು ಘನತೆಯುಳ್ಳ ದೊರೆಗಳು ಬೇರೆ ಯಾರೂ ಇಲ್ಲ. ಪಾತ್ರವನ್ನು ಭಂಜಿಸಿ ಪುನಃ ನವೀನವಾಗಿ ಕಟ್ಟುವುದು ಕಾವ್ಯದಲ್ಲಿ ಇರುವ ಒಂದು ಕ್ರಮ. ಆದರೆ ಇಂತಹ ಕ್ರಿಯೆಯಿಂದ ಮೂಲ ಪಾತ್ರದ ನಿರ್ವಚನೆವೇ ಸೂತ್ರ ತಪ್ಪಿಹೋಗುವಾಗ ಅದನ್ನು ಆಗಾಗ ನೆನಪಿಸಿಕೊಳ್ಳುವುದೂ ಸಹ ಅಷ್ಟೇ ಮುಖ್ಯವಾಗುತ್ತದೆ. ಜನಸಾಮಾನ್ಯರಲ್ಲಿ ಮೂಲಕಾವ್ಯದ ಪಾತ್ರಕ್ಕಿಂತ ಅದರಿಂದ ಹೊರಬಂದ ಟಿಸಿಲುಗಳು ಜನಪ್ರಿಯವಾಗಿವೆ. ಕೆಲವೊಂದು ರಾಮಾಯಣದಲ್ಲಿ ಪರಶುರಾಮ ಯುದ್ಧಕ್ಕೆ ಬಂದಾಗಲೆಲ್ಲ ದಶರಥ ಹೆಣ್ಣುಗಳ ನಡುವೆ ಇದ್ದ ಎನ್ನುವ ಕಥೆಯನ್ನೂ ಹೆಣೆದಿವೆ. ರಾಮಾಯಣ ದರ್ಶನದಲ್ಲಿ ಕುವೆಂಪು ದಶರಥನನ್ನು ಬಣ್ಣಿಸುವುದು ಹೀಗೆ:

ಚಕ್ರವರ್ತಿಯದಕ್ಕೆ ದಶರಥಂ ದೊರೆ ಸಗ್ಗದೊಡೆಯಂಗೆ. ಇಕ್ಷ್ವಾಕು
ರಘು ದೀಲೀಪರ ಕುಲಪಯೋಧಿ ಸುಧಾಸೂತಿ.
ರಾಜರ್ಷಿಯಾ ದೀರ್ಘದರ್ಶಿಯಾ ಸಮದರ್ಶಿ ತಾಂ…
…ಸರ್ವ ಪ್ರಜಾಮತಕೆ ತಾನು ಪ್ರತಿನಿಧಿಯೆಂಬ
ಮೇಣವರ ಹಿತಕೆ ಹೊಣೆಯೆಂದೆಂಬ ಬುಧರೊಲಿದ
ಸಮದರ್ಶನವನೊಪ್ಪಿ

ವಾಲ್ಮೀಕಿ ಕಟ್ಟಿದ ಪಾತ್ರದ ʼದರ್ಶನʼ ಕುವೆಂಪು ಅವರಿಗೆ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ದಶರಥ ಅಪ್ರತಿಮ ಪರಾಕ್ರಮಿಯಾಗಿದ್ದ ಎನ್ನುವುದನ್ನು ಮತ್ತು ಆತನಿಗೆ ಶಬ್ಧವೇಧಿ ವಿದ್ಯೆ ಸಿದ್ಧಿಸಿತ್ತು. ಆತನ ಕಾಲದಲ್ಲಿ ರಾವಣನ ಪ್ರತಿರೋಧವನ್ನು ತಡೆಯಲಿಲ್ಲವೇ ಎನ್ನುವುದು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ರಾವಣ ಅನರಣ್ಯನ ವಧೆಯನ್ನು ಮಾಡಿದ ನಂತರ ರಾವಣ ದಂಡಕಾರಣ್ಯದ ಆಚೆ ಬಂದಿರಲಿಲ್ಲ. ದಂಡಕಾರಣ್ಯದಲ್ಲಿ ರಾಮ ಖರನೊಡನೆ ಯುದ್ಧ ಮಾಡುವಾಗ,

ಪಾಪಮಾಚರತಾಂ ಘೋರಂ ಲೋಕಸ್ಯಾಪ್ರಿಯಮಿಚ್ಛತಾಮ್.
ಅಹಮಾಸಾದಿತೋ ರಾಜಾ ಪ್ರಾಣಾನ್ಹನ್ತುಂ ನಿಶಾಚರ৷৷ಅ.29.10৷৷

“ನಿಶಾಚರನೇ ಘೋರವಾದ ಪಾಪಗಳನ್ನು ಮಾಡುವವರ ಮತ್ತು ಜನರಿಗೆ ಅಹಿತವನ್ನು ಬಯಸುವವರ ಸಂಹಾರಕ್ಕಾಗಿಯೇ ರಾಜನಾದ (ದಶರಥ) ನಿಂದ ನಿಯುಕ್ತನಾಗಿ ಇಲ್ಲಿಗೆ ಬಂದಿರುತ್ತೇನೆ” ಎನ್ನುವ ಮಾತುಗಳನ್ನು ವಿಮರ್ಶಿಸುವುದಾದರೆ ದಶರಥ ರಾಕ್ಷಸರನ್ನು ಹಿಮ್ಮೆಟ್ಟಿಸುವತ್ತ ಸದಾ ಪ್ರಯತ್ನವನ್ನು ನಡೆಸುತ್ತಿದ್ದ ಎನ್ನುವುದು ಸ್ಪಷ್ಟವಗುತ್ತದೆ. ಜಟಾಯು ಮತ್ತು ಸಂಪಾತಿ ಎನ್ನುವ ಪಕ್ಷಿಗಳು ದಶರಥನ ಶೌರ್ಯತನಕ್ಕೊಲಿದು ಆತನ ಸ್ನೇಹವನ್ನು ಸಂಪಾದಿಸಿದ್ದವು. ಅವು ಇರುವುದೂ ಸಹ ದಂಡಕಾರಣ್ಯದಲ್ಲಿಯೇ. ಶಂಭರನನ್ನು ನಿಗ್ರಹಿಸಿರುವುದೂ ಸಹ ದಂಡಕಾರಣ್ಯದಲ್ಲಿಯೇ. ಶಂಭರರೆಂದರೆ ರಾಕ್ಷಸರ ಒಂದು ಪ್ರಬೇಧ. ಧಶರಥನ ಕಾಲದಲ್ಲಿ ಇದ್ದವ ತಿಮಿದ್ವಜ ಎನ್ನುವಾತ. ಆತ ದಂಡಕಾರಣ್ಯದ ನಡುವೆ ವೈಜಯಂತಪುರ ಎನ್ನುವಲ್ಲಿ ತನ್ನ ರಾಜ್ಯವನ್ನು ನಿರ್ಮಿಸಿಕೊಂಡಿದ್ದ. ಇಂದ್ರನ ಕೋರಿಕೆಯ ಮೇರೆಗೆ ದಶರಥ ದಕ್ಷಿಣದಲ್ಲಿರುವ ದಂಡಕಾರಣ್ಯದ ನಡುವೆ ಇರುವ ತಿಮಿಧ್ವಜನನ್ನು ಎದುರಿಸಲು ಹೋದಾಗ ಯುದ್ಧದಲ್ಲಿ ಕ್ಷತ-ವಿಕ್ಷತವಾಗಿ ರಥದಲ್ಲಿ ಮೂರ್ಚಿತನಗಿದ್ದ ಕಾಲದಲ್ಲಿ ಆತನ ಸಂಗಡವೇ ಇದ್ದ ಕೈಕೆ ಆತನನ್ನು ಯುದ್ಧರಂಗದಿಂದ ದೂರ ಒಯ್ದು ರಕ್ಷಿಸಿದ್ದಳು. ಬಹುಶಃ ಆ ಸಮಯದಲ್ಲಿ ಕೈಕೆ ದಶರಥನ ಸಾರಥಿ ಆಗಿರಬೇಕು. ಸಾರಥಿ ಮಾತ್ರವೇ ತನ್ನ ರಥಿಕನ ಪ್ರಾಣವನ್ನು ಇಂಥ ಹೊತ್ತಿನಲ್ಲಿ ಕಾಪಾಡಬಲ್ಲನೆಂದು ಮಹಾಭಾರತ ಯುದ್ಧದಲ್ಲಿ ಅನೇಕ ಕಡೆ ಬರುತ್ತದೆ.

ತನ್ನ ಜೀವವನ್ನು ಉಳಿಸಿದವಳೆನ್ನುವ ಕಾರಣಕ್ಕೆ ದಶರಥ ಕೈಕೆಗೆ ಎರಡು ವರವನ್ನು ಕೊಟ್ಟಿರುವುದು ಗೊತ್ತಿರುವ ಸಂಗತಿಯೇ ಆಗಿದೆ. ರಾಮಾಯಣದಲ್ಲಿ ಮತ್ತೆ ಈ ತಿಮಿಧ್ವಜನ ಪ್ರಕರಣ ಎಲ್ಲಿಯೂ ಬರುವುದಿಲ್ಲ ಬಹುಶಃ ಮೂರ್ಛೆಯಿಂದ ಎದ್ದ ನಂತರ ದಶರಥ ತಿಮಿಧ್ವಜನನ್ನು ನಿಗ್ರಹಿಸಿರಬೇಕೆನ್ನುವುದು ಖರನಲ್ಲಿ ರಾಮ ಹೇಳುವ ಮೇಲಿನ ಮಾತುಗಳಿಂದ ಸ್ಪಷ್ಟವಾಗುತ್ತದೆ. ಆ ನಂತರದಲ್ಲಿ ರಾವಣನಿಂದ ನಿಯುಕ್ತರಾಗಿ ಖರ ದೂಷಣರು ದಂಡಕಾರಣ್ಯದಲ್ಲಿ ತಮ್ಮ ರಾಜ್ಯವನ್ನು ನಿರ್ಮಿಸಿಕೊಂಡಿರಬಹುದು. ಹಾಗಾದರೆ ಸಿದ್ಧಾಶ್ರಮಕ್ಕೆ ತಾಟಕಿ ಮತ್ತು ಆಕೆಯ ಮಕ್ಕಳು ಬಂದಿರುವ ಘಟನೆಯನ್ನು ಪರಿಶೀಲಿಸುವುದಾದರೆ ಅವರು ಅಲ್ಲಿ ವಾಸ ಮಾಡುತ್ತಿರಲಿಲ್ಲ. ಆಕಾಶಮಾರ್ಗದಿಂದ ಬಂದು ತಪಸ್ಸನ್ನು ಕೆಡಿಸಿ ಹೋಗುತ್ತಿದ್ದರು. ಆ ಕಾಲಕ್ಕೆ ದಶರಥ ವೃದ್ಧನೂ ಆಗಿರುವುದರಿಂದ ಮತ್ತು ಮಕ್ಕಳಾಗದಿರುವುದರಿಂದ ಆತ ಕೊನೆ ಕೊನೆಗೆ ಅನ್ಯಮನಸ್ಕನಾಗಿದ್ದ ಎಂತಲೂ ಊಹಿಸಬಹುದಾಗಿದೆ.

ರಾಮ ಮೋಹಿತ:
ಚತುರ್ಣಾಮಾತ್ಮಜಾನಾಂ ಹಿ ಪ್ರೀತಿ:ಪರಮಿಕಾ ಮಮ৷৷
ಜ್ಯೇಷ್ಠಂ ಧರ್ಮಪ್ರಧಾನಂ ಚ ನ ರಾಮಂ ನೇತುಮರ್ಹಸಿ. ৷৷ಅ-20-11 ৷৷

ಈ ನಾಲ್ವರು ಮಕ್ಕಳಲ್ಲಿ ನನಗೆ ಅತ್ಯಂತ ಪ್ರಿಯನಾದವನು ರಾಮನೇ. ಇವನು ಜ್ಯೇಷ್ಠಪುತ್ರನಾಗಿದ್ದಾನೆ; ಧರ್ಮರಕ್ಷಕನಾಗಿರುವನು. ಆದುದರಿಂದ ನೀವು ರಾಮನನ್ನು ಒಯ್ಯುವುದು ಖಂಡಿತವಾಗಿಯೂ ಯುಕ್ತವಾದುದಲ್ಲ.

ದಶರಥನ ರಾಮನ ಮೇಲಿನ ಅತಿಯಾದ ವ್ಯಾಮೋಹಕ್ಕೆ ಈ ಮೇಲಿನ ಶ್ಲೋಕವೊಂದು ಸಾಕು. ಮಕ್ಕಳೇ ಆಗುವುದಿಲ್ಲ ಎನ್ನುವ ಹೊತ್ತಿಗೆ ದಶರಥನಿಗೆ ಪಾಯಸದ ಅನುಗ್ರಹದಿಂದ ಮಕ್ಕಳಾದರು. ರಾಮ, ಭರತ, ಲಕ್ಷ್ಮಣ ಮತ್ತು ಶತೃಘ್ನರು ಕ್ರಮವಾಗಿ ಪುನರ್ವಸು , ಪುಷ್ಯ ಮತ್ತು ಆಶ್ಲೇಷಾ ನಕ್ಷತ್ರಗಳಲ್ಲಿ ಜನಿಸಿದ್ದಾರೆಂದು ವಾಲ್ಮೀಕಿ ತಿಳಿಸುತ್ತಾನೆ. ಬಹುಕಾಲದ ನಂತರ ಅರಮನೆಯಲ್ಲಿ ಮಕ್ಕಳ ಗಜ್ಜೆಗಳ ಸದ್ದು ಸಹಜವಾಗಿಯೇ ತಂದೆತಾಯಿಗಳಲ್ಲಿ ಸಂತಸವನ್ನು ಉಕ್ಕೇರಿಸಿದೆ. ಅದಕ್ಕೂ ಮೊದಲು ಅರಮನೆಯ ಬಿಡಿಸಿದ ರಂಗೋಲಿ ಮಾರನೆಯ ದಿನ ಹೊಸ ರಂಗೋಲಿ ಹಾಕುವವರೆಗೂ ನಳಿನಳಿಸುತ್ತಿರುತ್ತಿತ್ತು, ಈಗ ಚಿತ್ರಿಸಿದ ಮರುಕ್ಷಣದಲ್ಲಿಯೇ ಮಕ್ಕಳು ಕ್ಷಣಮಾತ್ರದಲ್ಲಿ ಅದನ್ನು ಅಳಿಸಿ ಹಾಕಿಬಿಡುವುದನ್ನು ನೋಡಿ ತಾಯಿಯಂದಿರು ಸಂಭ್ರಮದಿಂದ ದಾಸಿಯರ ಸಂಗಡ ಕುಣಿದು ಕುಪ್ಪಳಿಸುತ್ತಿದ್ದರಂತೆ. ದಶರಥನಿಗೆ ಮಕ್ಕಳಾಗಿರುವ ಸಂತಸ ಸಹಜವಾಗಿ ಆಗಿರುವುದು ಒಂದು ಕಡೆ ಆದರೆ ಹಿರಿಯ ಮಗನಾದ ರಾಮನ ಮೇಲೆ ಎಲ್ಲಕ್ಕಿಂತ ಹೆಚ್ಚಿನ ಪ್ರೀತಿಯುಂಟಾಗಿ ಅದು ವ್ಯಾಮೋಹಕ್ಕೆ ತಿರುಗಿಬಿಟ್ಟಿತ್ತು.

ಕೈಕೆಯನ್ನು ಮದುವೆಯಾದ ಮೇಲೆ ದಶರಥನಿಗೆ ತನ್ನ ಇನ್ನಿಬ್ಬರು ರಾಣಿಯರನ್ನು ಅಲಕ್ಷ್ಯ ಮಾಡಿದ್ದ. ಆದರೆ ಕೌಸಲ್ಯೆಯ ಮಗನಾದ ಶ್ರೀ ರಾಮನೆಂದರೆ ಹುಚ್ಚು ಕಕ್ಕುಲತೆಯಾಗಿತ್ತು. ರಾಮಾಯಣವನ್ನು ಬರೆದ ಎಲ್ಲಾ ಕವಿಗಳೂ ದಶರಥನ ಈ ಪುತ್ರವ್ಯಾಮೋಹವನ್ನೇ ಪ್ರಧಾನವಾಗಿ ಬಣ್ಣಿಸಿದ್ದಾರೆ. ಅದರಲ್ಲಿಯೂ ಭಾಸ ತನ್ನ ಪ್ರತಿಮಾ ನಾಟಕದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಶರಥ ರಾಮನನ್ನು ಸರಿಯಾಗಿ ನೋಡಲೇ ಇಲ್ಲವೆನ್ನುವ ರೀತಿಯಲ್ಲಿ ಚಿತ್ರಿಸುತ್ತಾನೆ. ರಾಮ ರಾಜಸಭೆಗೆ ಬಂದು ದಶರಥನಿಗೆ ನಮಸ್ಕರಿಸಿದಾಗ ಧಶರಥನಿಗೆ ಆನಂದ ಭಾಷ್ಪದಿಂದ ಹರಿದ ಕಣ್ಣೀರು ರಾಮನ ನೆತ್ತಿಯನ್ನು ತೋಯಿಸಿತಂತೆ. ತಂದೆಯ ಇಂತಹ ಪ್ರೀತಿಯನ್ನು ಅನುಭವಿಸಿದ ರಾಮನ ಆನಂದಭಾಷ್ಪ ದಶರಥನ ಪಾದವನ್ನು ತೋಯಿಸಿತಂತೆ. ಭಾಸನ ಪ್ರಕಾರ ಯಾವಾಗಲೂ ದಶರಥನಿಗೆ ರಾಮನನ್ನು ಸರಿಯಾಗಿ ನೋಡಲು ಆತನ ಆನಂದಭಾಷ್ಪ ಅಡ್ಡಿಬರುತ್ತಿತ್ತೆಂದು ವಿಮರ್ಶಕರು ಹೇಳುತ್ತಾರೆ. ರಾಮ ಮಹಾತೇಜಸ್ವಿಯೂ, ಸತ್ಯವಾದ ಪರಾಕ್ರಮಿಯೂ, ಪ್ರಜೆಗಳಿಗೆ ಪ್ರಿಯನಾಗಿಯೂ ಇದ್ದನು. ದಶರಥನಿಗಂಟೂ ರಾಮ ತನ್ನ ವಂಶದ ಕಲಶಪ್ರಾಯನಾಗಿಬಿಟ್ಟಿದ್ದ. ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಹದಿನೈದು ವರ್ಷಗಳಾದಾಗ ಒಂದು ದಿವಸ ವಿಶ್ವಾಮಿತ್ರರು ರಾಜಸಭೆಗೆ ಆಗಮಿಸಿ ಸಿದ್ಧಾಶ್ರಮದಲ್ಲಿ ನಡೆಸಲಿರುವ ಯಜ್ಞಗಳಿಗೆ ತಾಟಕಿ ಮತ್ತು ಆಕ್ಯೆಯ ಮಕ್ಕಳಾದ ಸುಭಾಹು ಮಾರೀಚರೆನ್ನುವ ರಾಕ್ಷಕರ ಕಾಟ ವಿಪರೀತವಾಗಿದೆ. ಅವರನ್ನು ನಿಗ್ರಹಿಸಲು ರಾಮನನ್ನು ತನ್ನೊಡನೆ ಕಳುಹಿಸಬೇಕು ಎಂದಾಗ ದಶರಥನಿಗೆ ಆಘಾತವುಂಟಾಯಿತು. ಮೂರ್ಛಿತನಾಗಿ ಬಿಟ್ಟ. ರಾಕ್ಷಸರ ವಿರುದ್ಧ ಹೋರಾಡಲು ಸಹಾಯವನ್ನು ಯಾಚಿಸುವಂತಹ ಪರಾಕ್ರಮಿಯಾಗಿದ್ದ ದಶರಥನ ಜಂಘಾಬಲವೇ ಉಡುಗಿಹೋಯಿತು.

ವಿಶ್ವಾಮಿತ್ರರು ರಾಮನನ್ನು ಕೇವಲ ಹತ್ತುದಿನಗಳ ಮಟ್ಟಿಗೆ ಕಳುಹಿಸು ಎನ್ನುತ್ತಾರೆ. ಅದು ತನಕ ರಾಮನ ರಥಯುದ್ಧ ಕೌಶಲವನ್ನೂ, ಆನೆ ಅಶ್ವಗಳ ಸವಾರಿಯ ಚಾಕಚಕ್ಯತೆಯನ್ನೂ ಬಿಲ್ಲು ವಿದ್ಯೆಯ ನಿಪುಣತೆಯನ್ನೂ ನೋಡಿ ಆನಂದಿಸುತ್ತಿದ್ದ ದಶರಥ ಏಕಾಏಕಿಯಾಗಿ ಮಾರೀಚ ಸುಭಾಹು ಮತ್ತು ರಾವಣನಂತವರನ್ನು ಎದುರಿಸಲು ತಾನು ಅಸಮರ್ಥ, ರಾಮನಿಗೆ ಬಿಲ್ಲು ವಿದ್ಯೆಯ ಪರಿಪೂರ್ಣತೆ ಆಗಿಲ್ಲ, ಅವನಿನ್ನೂ ಎಳೆಸು, ರಾಮನ ಬದಲು ತಾನು ಬಂದು ಹೋರಾಡುತ್ತೇನೆ, ಆದರೆ ಯುದ್ಧದಲ್ಲಿ ತನ್ನ ಪ್ರಾಣವೇ ಹೋಗಬಹುದು. ಆದರೂ ಚಿಂತೆಯಿಲ್ಲ ಎಂದೆಲ್ಲಾ ಹೇಳುತ್ತಾ ಅಳುತ್ತಾನೆ. ಆತ ಈಗ ಮೊದಲಿನ ದಶರಥನಾಗಿ ಉಳಿಯದೇ ತನ್ನ ಮಗ ರಾಮನನ್ನು ಕಳುಹಿಸಲು ಮನಸ್ಸಿಲ್ಲದೇ ಆತ ವಯಸ್ಸಿನ ಕಾರಣಕ್ಕೆ ಮತ್ತು ತನ್ನಲ್ಲಿನ ವೃದ್ಧಾಪ್ಯದ ಕಾರಣಕ್ಕೆ ರಾಕ್ಷಸರನ್ನು ಎದುರಿಸುವ ಬಲ ತನ್ನಲ್ಲಿ ಈಗ ಉಳಿದಿಲ್ಲ ಎನ್ನುವ ಸುಳ್ಳುಗಳನ್ನೂ ಹೇಳುತ್ತಾನೆನ್ನುವ ಎನ್ನುವುದು ವಿಶ್ವಾಮಿತ್ರರಿಗೆ ತಿಳಿಯಿತು. ಒಂದರ್ಥದಲ್ಲಿ ಇದು ವಶಿಷ್ಠರು ಕಲಿಸಿದ ವಿದ್ಯೆಗೂ ಅವಮಾನ ಎನ್ನುವುದನ್ನು ರಾಜ ಮರೆತು ಬಿಟ್ಟಿದ್ದ. ತಾನೋರ್ವ ಹೇಡಿ ಎನ್ನುವ ಭಾವ ಬರುವ ಮಾತುಗಳನ್ನೂ ಆಡಿದ ಕೇಳಿದ ವಿಶ್ವಾಮಿತ್ರರಿಗೆ ಕ್ರೋಧ ಬಂತು. ಮಕ್ಕಳನ್ನು ಕಳುಹಿಸಲಾರೆ ಎನ್ನುವ ಕಾರಣಕ್ಕೆ ಕ್ರೋಧ ಬಂದಿಲ್ಲ. ದಶರಥ ಮಗನ ಮೇಲಿನ ಮೋಹದಿಂದ ಸೂರ್ಯವಂಶದ ತೇಜಸ್ಸನ್ನೇ ಅವಮಾನ ಮಾಡುತ್ತಿದ್ದಾನೆ (ನರಪತಿಜಲ್ಪನಾತ್) ಎನ್ನುವ ಕಾರಣಕ್ಕಾಗಿ.

ಸಿಟ್ಟುಗೊಂಡು “ಆಯಿತು, ಸತ್ಯಪ್ರತಿಜ್ಞರ ಮಹಾ ವಂಶದಲ್ಲಿ ಮಿಥ್ಯಾವಾದಿಯೋರ್ವ ಹುಟ್ಟಿದನು” ಎನ್ನುವ ಅಪವಾದ ನಿನಗೆ ಬರುತ್ತದೆ, ತಾನಿನ್ನು ಹೊರಡುತ್ತೇನೆ ಎಂದು ಸಿಟ್ಟಿನಿಂದ ಹೊರಡಲುದ್ಯುಕ್ತನಾದ. ತಪಸ್ವಿಯಾದ ವಿಶ್ವಾಮಿತ್ರರಿಗೆ ತಾವೇ ರಾಕ್ಷಸರನ್ನು ನಿಗ್ರಹಿಸುವ ಶಕ್ತಿಯಿತ್ತು. ಆದರೆ ಅವರೀಗ ಬ್ರಹ್ಮರ್ಷಿಗಳಾಗಿದ್ದಾರೆ. ತಪಸ್ಸನ್ನು ಪುಣ್ಯಕ್ಕಾಗಿ ಉಪಯೋಗಿಸಬೇಕು, ರಕ್ಕಸರ ನಿರ್ಮೂಲನೆಗೆ ಕ್ಷತ್ರಿಯರ ದಂಡು ಸಿದ್ಧವಾಗಬೇಕು ಎನ್ನುವ ಸಂಕಲ್ಪದಿಂದ ಬಂದಿದ್ದರು. ದೇರಾಜೆ ಸೀತಾರಾಮನವರ “ರಾಮ ರಾಜ್ಯದ ರುವಾರಿ” ಎನ್ನುವ ಕೃತಿಯನ್ನು ಓದಿದರೆ ಇದರ ಸಂಪೂರ್ಣ ವಿವರ ಸಿಗುತ್ತದೆ. ತನ್ನ ಯೌವನದ ಕಾಲದಲ್ಲಿ ಇಂದ್ರನಿಗೆ ಸಮನಾದ ಶೌರ್ಯವಂತನಾಗಿದ್ದ ದಶರಥನಿಗೆ ಪುತ್ರಮೋಹವೆನ್ನುವುದು ಆತನ ಎಲ್ಲ ಘನತೆ ಮತ್ತು ಗುಣಗಳನ್ನು ಮರೆಮಾಚಿ ಬಿಟ್ಟಿತ್ತು. ಮಕ್ಕಳ ಮೇಲಿನ ಅತಿಯಾದ ಮೋಹದಿಂದ ಅನೇಕ ಪಾಲಕರು ತಮ್ಮಮಕ್ಕಳಿಗೆ ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ ಎನ್ನುವ ರೀತಿಯಲ್ಲಿ ವರ್ತಿಸುವದನ್ನು ಇಂದಿಗೂ ಕಾಣಬಹುದು. ದಶರಥ ಹೀಗೆ ತನ್ನ ಮಕ್ಕಳ ಕುರಿತು ಅದರಲ್ಲಿಯೂ ವಿಶೇಷವಾಗಿ ರಾಮನ ವಿಷಯದಲ್ಲಿ ಮೋಹಪರವಶನಾಗಿದ್ದ.

ವಿಶ್ವಾಮಿತ್ರರು ಬಂದಾಗ ಅವರಿಗೆ ಯಾವ ಸಹಾಯ ತನ್ನಿಂದ ಬೇಕು ಅದನ್ನು “ಕರ್ತಾ ಚಾಹಮಶೇಷೇಣ ದೈವತಂ ಹಿ ಭವಾನ್ಮಮ” ‘ಎಂತಹ ಕ್ಲಿಷ್ಟವಾದ ಕಾರ್ಯವನ್ನಾದರೂ ಅದನ್ನು ಮರುಮಾತಿಲ್ಲದೇ ನಡೆಸಿಕೊಡುತ್ತೇನೆ. ನೀವೇ ನನಗೆ ಪರದೈವ’ ಎಂದು ಮಾತುಕೊಟ್ಟ ದೊರೆ ಪುತ್ರ ವ್ಯಾಮೋಹದಿಂದ ಅದನ್ನು ಈಡೇರಿಸಲು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿರುವುದನ್ನು ನೋಡಲು ವಶಿಷ್ಠರಿಂದಾಗಲಿಲ್ಲ. ದಶರಥನಿಗೆ “ರಾಮನನ್ನು ವಿಶ್ವಾಮಿತ್ರರ ಸಂಗಡ ಕಳುಹಿಸು, ಆತನ ಶ್ರೇಯೋಭಿವೃದ್ದಿಗೆ ಇದು ನಾಂದಿಯಾಗುತ್ತದೆ. ಒಂದುವೇಳೆ ಕಲುಹಿಸದಿದ್ದರೆ ನೀನು ಇದುತನಕ ಮಾಡಿದ ಅಶ್ವಮೇದ ಯಾಗದ ಫಲ, ವಾಪಿ-ಕೂಪ-ತಟಾಕಾದಿಗಳನ್ನು ನಿರ್ಮಿಸಿದ ಫಲಗತಿಗಳೆಲ್ಲ ನಾಶವಾಗುತ್ತದೆ ಎಂದು ಎಚ್ಚರಿಸಿದರೋ ಆಗ ಅಂತೂ ಅನ್ಯಮನಸ್ಕನಾಗಿಯೇ ರಾಮನನ್ನು ವಿಶ್ವಾಮಿತ್ರರ ಜೊತೆಯಲ್ಲಿ ಯಜ್ಞರಕ್ಷಣೆಗಾಗಿ ಕಳುಹಿಸಿಕೊಟ್ಟ. ಕೇವಲ ಹತ್ತು ದಿನಗಳ ಮಟ್ಟಿಗೆ ಕರೆದುಕೊಂಡು ಹೋಗುತ್ತೇನೆಂದು ಹೋದ ವಿಶ್ವಾಮಿತ್ರರು ಯಜ್ಞ ಮುಗಿದ ಮೇಲೆ ಅಲ್ಲಿಂದ ಮಿಥಿಲೆಗೆ ಕರೆದುಕೊಂಡು ಹೋಗಿ ರಾಮ ಶಿವಧನಸ್ಸನ್ನು ಮುರಿದು ಸೀತೆಯನ್ನು ಮದುವೆಯಾಗುವ ಸಂಗತಿ ದಶರಥನಿಗೆ ತಿಳಿಯುವ ತನಕ ಆತ ಎಷ್ಟು ಒದ್ದಾಡಿದ್ದನೋ ಏನೋ! ದಶರಥನನ್ನು ಮಿಥಿಲೆಗೆ ಆಹ್ವಾನಿಸಲು ಹೋದ ದೂತರು ಅಯೋಧ್ಯೆಯನ್ನು ತಲುಪಲು ನಾಲ್ಕು ದಿನಗಳನ್ನು ತೆಗೆದುಕೊಂಡಿದ್ದರು. ರಾಮನಿಗೆ ಮದುವೆಯ ವಿಷಯ ಕೇಳಿದ ದಶರಥ ಸಂತಸಪಟ್ಟಿದ್ದು ಓರ್ವ ತಂದೆಯಾಗಿ ಸಹಜದ ಕ್ರಿಯೆ. ಮದುವೆಯೆಲ್ಲ ಸಾಂಗವಾಗಿ ಮುಗಿದು ನಾಲ್ವರೂ ಮಕ್ಕಳು ಮತ್ತು ಸೊಸೆಯೊಂದಿಗೆ ಅಯೋಧ್ಯೆಗೆ ಬರುವಾಗ ಬೀಸಿತೊಂದು ಭಯಂಕರ ಬಿರುಗಾಳಿ.

ರಾಮ ಮರ್ಧಿಸಿದ ಮಹಾಧನುಸ್ಸೆರಡನ್ನೂ ನೋಡಲಿಲ್ಲ ದೊರೆ:

ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ||

ಇದ್ದಕ್ಕಿಂತ ಸುಂಟರಗಾಳಿ ಬೀಸಿ ಮಹಾವೃಕ್ಷಗಳನ್ನೆಲ್ಲ ಬುಡಮೇಲು ಮಾಡತೊಡಗಿತು. ಭೂಮಿಯಿಂದ ಎದ್ದ ಧೂಳು ಸೂರ್ಯನನ್ನೇ ಮರೆಮಾಚಿತು. ದಿಕ್ಕುಗಳೇ ಕಾಂತಿಹೀನವಾಯಿತು. ಎಲ್ಲರೂ ತಮ್ಮ ಜೀವದ ಆಶೆಯನ್ನೇ ತೊರೆದರು. ವಸಿಷ್ಠರು ದಶರಥ ಆವನ ಮಕ್ಕಳು ಮಾತ್ರ ಈ ಬಿರುಗಾಳಿಗೆ ಹೆದರದೇ ಇದ್ದರು. ಆ ಅಂಧಕಾರದಿಂದ ಭಯಂಕರ ಪ್ರಕಾಶದಿಂದ ಕೂಡಿದ, ಜಟಾಮಂಡಲಧಾರಿಯಾದ ಕ್ಷತ್ರಿಯಕುಲವಿಧ್ವಂಸಕನಾದ ಪರಶುರಾಮರ ಆಕೃತಿ ಗೋಚರವಾಯಿತು.

king dasharatha

ನೇರವಾಗಿ ರಾಮನನ್ನು ಉದ್ಧೇಶಿಸಿ ಅವರು “ರಾಮ! ದಾಶರಥೇ! ವೀರ! ನೀನು ಇದುತನಕ ಗೈದ ಪರಾಕ್ರಮಗಳಾದ ತಾಟಕಾವಧೆಯಿಂದ ಹಿಡಿದು ಇತ್ತೀಚೆಗೆ ಶಿವಧನುರ್ಭಂಗದವರೆಗಿನ ಎಲ್ಲವನ್ನೂ ಕೇಳಿದ್ದೇನೆ. ನಿಜವಾಗಿಯೂ ನೀನು ಅಷ್ಟೊಂದು ಪರಾಕ್ರಮಿಯೇ ಹೌದಾದರೆ ನನ್ನ ಕೈಯಲ್ಲಿರುವ ಈ ವೈಷ್ಣವ ಧನಸ್ಸನ್ನು ನೋಡು. ಈ ಮಹಾಧನಸ್ಸಿಗೆ ನೀವು ಮೌರ್ವಿಯನ್ನು ಬಿಗಿದು ತೋಲನ-ಪೂರಣ-ಶರಸಂಧಾನದಿಗಳನ್ನು ಮಾಡಿದರೆ ನಾನು ನಿನಗೆ ವೀರ್ಯಶ್ಲಾಘ್ಯವಾದ ದ್ವಂದ್ವಯುದ್ಧವನ್ನು ಕೊಡುತ್ತೇನೆ” ಎಂದು ತನ್ನ ಕಂಚಿನ ಕಂಠದ ಧ್ವನಿಯಲ್ಲಿ ಹೇಳಿದನು. ಈ ಮಾತನ್ನು ಕೇಳಿದ ದಶರಥನಿಗೆ ಜಂಘಾಬಲವೇ ಉಡುಗಿಹೋಯಿತು. ಪರಶುರಾಮನ ಹತ್ತಿರ ಅಳಲಿಕ್ಕೇ ಮೊದಲಾಗುತ್ತಾನೆ. ರಾಮನಿಗೇನಾದರೂ ಆದರೆ ತಾವ್ಯಾರೂ ಬದುಕುವುದಿಲ್ಲ ಎಂದು ಗೋಳಿಡುತ್ತಾನೆ. ತಾನೋರ್ವ ಕ್ಷತ್ರಿಯ, ಮಹಾಪ್ರರಾಕ್ರಮಿಯಾದವ ಎನ್ನುವುದಕ್ಕಿಂತಲೂ ರಾಮನಿಗೆ ಏನಾದರೂ ಆಗಿಬಿಟ್ಟರೆ ಎನ್ನುವ ಕಲ್ಪನೆಯೇ ಆತನಲ್ಲಿ ಭೀತಿಯನ್ನು ಹುಟ್ಟಿಸಿತು. ಸಾಲದ್ದಕ್ಕೆ ಪರಶುರಾಮ ದಶರಥನ ಮಾತಿಗೆ ಲಕ್ಷ್ಯವನ್ನೇ ಕೊಡದೇ ರಾಮನಲ್ಲಿ ಪಂಥಾಹ್ವಾನವನ್ನು ಕೊಟ್ಟಾಗ ರಾಮ ಅದನ್ನು ಧೈರ್ಯದಿಂದಲೇ ಸ್ವೀಕರಿಸಿದ. ದಶರಥ ಇನ್ನು ಕಥೆ ಮುಗಿಯಿತು ಎಂದವನೇ ಕಣ್ಣುಮುಚ್ಚಿ ಗಡಗಡ ನಡುಗುತ್ತ ಹೆಣ್ಣುಗಳ ಹಿಂದೆ ಅಡಗಿಕೊಳ್ಳಲು ಜಾಗ ಹುಡುಕಿದ.

ರಾಮ ಮರು ಮಾತಾಡದೇ ತನ್ನ ಕಾಲಿನಲ್ಲಿ ಬಿಲ್ಲಿನ ಪಾದವನ್ನು ಹಿಡಿದು ಬಗ್ಗಿಸಿ ನಾಣನ್ನು ಕಟ್ಟಿದವನೇ ಬಾಣವನ್ನು ಹೂಡಿ ಪರಶುರಾಮನತ್ತ ತಿರುಗಿ ಗಂಬೀರಸ್ವರದಲ್ಲಿ “ನೀನು ಗೌರವಾನ್ವಿತನಾದವ ಮತ್ತು ನನ್ನ ಗುರು ವಿಶ್ವಾಮಿತ್ರರ ಜ್ಞಾತಿಬಂಧುವಾಗಿರುವೆ. ಈ ಕಾರಣದಿಂದ ನಿನ್ನ ಮೇಲೆ ಶರಪ್ರಯೋಗ ಮಾಡಲಾರೆ. ಎಲ್ಲೆಂದರಲ್ಲಿ ಸಾಗುವ ಸ್ವೇಚ್ಛಾಗಮನಕ್ಕೆ ಬಾಣವನ್ನು ಬಿಡಲೇ ಇಲ್ಲವೇ ತಪಸ್ಸಿನಿಂದ ಗಳಿಸಿರುವ ನಿನ್ನ ಅಪ್ರತಿಮ ಪುಣ್ಯದ ರಾಶಿಗೆ ಬಿಡಲೇ” ಎಂದು ಗಂಭೀರಸ್ವರದಲ್ಲಿ ಕೇಳಿದ.. ಪರಶುರಾಮ ಪ್ರಪಂಚದಲ್ಲಿಯೇ ಎರಡನೆಯದಿಲ್ಲದ ವೈಷ್ಣವ ಧನಸ್ಸನ್ನು ರಾಮ ಲೀಲಾಜಾಲವಾಗಿ ಹೆದೆಯೇರಿಸಿ ತನ್ನೆಡೆಗೇ ಗುರಿಯಿಟ್ಟ. ಪರಶುರಾಮ ರಾಮನ ಕಣ್ಣಿನ ತೇಜಸ್ಸನ್ನು ನೋಡಿದ. ಅರ್ಥವಾಯಿತು! “ಹಿಂದೆ ತಾನು ಗೆದ್ದ ಈ ಭೂಮಿಯನ್ನು ಕಶ್ಯಪರಿಗೆ ದಾನವಾಗಿ ಕೊಟ್ಟಮೇಲೆ ಇದು ತನ್ನದಲ್ಲ. ಹಾಗಾಗಿ ತಾನು ಇಲ್ಲಿ ಹೆಚ್ಚುಹೊತ್ತು ಇರಲಾರೆ. ತನ್ನ ಸ್ವೇಚ್ಛಾಗಮನಕ್ಕೆ ಹಾನಿ ಮಾಡಬೇಡ. ದಿವ್ಯಲೋಕಗಳಿಗೆ ಹೋಗಬಹುದಾದ ಸಾಮರ್ಥ್ಯವನ್ನು ಗಳಿಸಿರುವ ತನ್ನ ಪುಣ್ಯರಾಶಿಯ ಮೇಲೆಯೇ ಬಾಣಪ್ರಯೋಗ ಮಾಡು. ಆ ಶಕ್ತಿ ತನ್ನಿಂದ ಹ್ರಾಸವಾದರೂ ತೊಂದರೆಯಿಲ್ಲ” ಎಂದು ಹೇಳಿದನು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ

ಮೂಲತತ್ತ್ವದ ಅಂಶವೇ ಆದ ಪರಶುರಾಮನಿಗೆ ಪಾಪ ಪುಣ್ಯಗಳ ಹಂಗಿಲ್ಲ. ಇಲ್ಲಿ ಶಿವ ಮತ್ತು ವೈಷ್ಣವ ಈ ಎರಡು ಶಕ್ತಿಯ ಸಂಕೇತಗಳು. ರಾಮನೆನ್ನುವವ ನಾಮರೂಪಾತ್ಮಕವಾದ ಎರಡನ್ನೂ ಅಂಶಗಳನ್ನು ಮೀರಿನಿಂತವ ಎನ್ನುವುದನ್ನು ವಾಲ್ಮೀಕಿ ರೂಪಕದಮೂಲಕ ವಿವರಿಸಿದ್ದಾನೆ. ರಾಮನೆನ್ನುವವ ಪರತತ್ತ್ವ. ಪರಾವಸ್ತು. ಸೃಷ್ಟಿಯ ಎಲ್ಲವೂ ರಾವಣನನ್ನು ಗೆಲ್ಲಲು ಸಮರ್ಥವಾಗಲಾರದು. ಅದನ್ನು ಮೀರಿದ ಪರವಸ್ತುವೇ ಮಾನವ ರೂಪ ತಾಳಿ ರಾವಣತ್ವದ ವಧೆಗೆ ಕಾರಣವಾಗಬೇಕು. ಅಮೂರ್ತವಾಗಿರುವ ಈ ತತ್ತ್ವವೇ ಮಾನವ ಮೂರ್ತಿಯಾಗಿ ವೈಷ್ಣವ ಧನಸ್ಸನ್ನು ಎತ್ತಿರುವ ಅಪರೂಪದ ದೃಶ್ಯವನ್ನು ನೋಡಲು ಸ್ವತಃ ಬ್ರಹ್ಮನೇ ಅಲ್ಲಿಗೆ ಬಂದುನೋಡಿ ಆನಂದಿಸಿದ. ಅವರೆಲ್ಲರೂ ನೋಡುತ್ತಿರುವಂತೆ ರಾಮ ಹೆದೆಯೇರಿಸಿ ಬಾಣವನ್ನು ಬಿಟ್ಟ. ಕ್ಷತ್ರಿಯರನ್ನು ನಿಗ್ರಹಿಸಿದ ಭಯಂಕರ ಮುನಿಯ ತೇಜಸ್ಸು ಕ್ಷಾತ್ರ ತೇಜಸ್ಸಿನಲ್ಲಿ ಸೇರಿಹೋಯಿತು. ರಾಮನಿಗೆ ಜೈಕಾರ ಹಾಕಿದ ಪರಶುರಾಮ ಅಲ್ಲಿಂದ ಮಹೇಂದ್ರಾಚಲಕ್ಕೆ ಹೊರಟ. ಕೊಡಲಿರಾಮನ ಪುಣ್ಯ ರಘುರಾಮನಿಗೆ ಹೀಗೆ ಕೊಡಲ್ಪಟ್ಟಿರುವುದನ್ನು ನೋಡಿ ಸಂತೋಷಪಡುವ ಭಾಗ್ಯ ದಶರಥನಿಗೆ ಇಲ್ಲವಾಗಿತ್ತು. ಆತ ಈ ಸನ್ನೀವೇಶ ಪ್ರಾರಂಭವಾದಾಗಿನಿಂದಲೂ ಭಯದಿಂದ ಕಣ್ಣುಮುಚ್ಚಿಕೊಂಡಿದ್ದ. ಪರಶುರಾಮ ಹೊರಟ ಎಷ್ಟೋ ಹೊತ್ತಿನನಂತರ ಆತ ಕಣ್ಣುಬಿಟ್ಟು ಈ ಎಲ್ಲ ಸಂಗತಿಗಳನ್ನು ತಿಳಿದುಕೊಂಡ. ಅಯೋಧ್ಯೆಗೆ ಹೊರಟ್ಟಿತು ರಾಮನ ದಂಡು.

ಮಕ್ಕಳಿಲ್ಲದೇ ಕೊರಗಿದ್ದ ದಶರಥ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದ. ರಾಜ್ಯವನ್ನು ಸಮರ್ಥರಾದ ಮಂತ್ರಿಗಳು ಆಳುತ್ತಿದ್ದ ಕಾರಣ ರಾಜಕಾರಣದ ಚಿಂತೆ ಇರಲಿಲ್ಲ. ಮಕ್ಕಳ ಸಲುವಾಗಿ ಕಣ್ಣೀರು ಹಾಕುತ್ತಾ ಇರುವವನಿಗೆ ರಾಮನಂತಹ ಮಕ್ಕಳನ್ನು ಕಂಡವನೇ ಇನ್ನುಳಿದ ಮಕ್ಕಳಿಗಿಂತ ರಾಮನೇ ಆತನನ್ನು ಸಂಪೂರ್ಣವಾಗಿ ಆವರಿಸಿದ್ದ. ಧೃತರಾಷ್ಟ್ರನದ್ದು ಕುರುಡು ಮೋಹವಾದರೆ ದಶರಥನದ್ದು ಹುಚ್ಚುಮೋಹ. ರಾಮನಿಗೆ ಏನೂ ಆಗಬಾರದೆನ್ನುವ ಕಾರಣಕ್ಕೆ ಆತ ತಾನೋರ್ವ ಪರಾಕ್ರಮಿಯಾದ ದೊರೆಯೆನ್ನುವುದನ್ನೂ ಮರೆತು ದೀನನಾಗಿ ರಾಮನನ್ನು ಉಳಿಸಿಕೊಳ್ಳಲು ವಿಶ್ವಾಮಿತ್ರರಲ್ಲಿ, ಪರಶುರಾಮರಲ್ಲಿ ವಸ್ತುತಃ ಯಾಚಿಸಿದ್ದ. ಮೊದಲಿನ ಘನತೆಯ ಚಕ್ರವರ್ತಿ ನಂತರ ಈ ಅಂಧಪ್ರೀತಿಯ ಕಾರಣದಿಂದ ಅಳುಮುಂಜಿಯಾಗಿ ಬದಲಾಗಿ ಮಕ್ಕಳಿಲ್ಲದ ವೇಳೆಯಲ್ಲಿ ಗಂಗೋದಕವನ್ನೂ ಹಾಕುವವರಿಲ್ಲದ ಸ್ಥಿತಿಯಲ್ಲಿ ಕೊರಗಿ ಕೊರಗಿ ಸಾಯಬೇಕಾಯಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗಂಧವತಿಗೆ ಸಿರಿಗಂಧಲೇಪನನ ಆಗಮನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ರಾಜಮಾರ್ಗ ಅಂಕಣ: ಆಕ್ರಮಣಕಾರಿ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ. ಆದರೆ ಈಗ, ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

VISTARANEWS.COM


on

Rishabh Pant
Koo

ಹೋರಾಟಗಾರ ಕ್ರಿಕೆಟರ್ ಕ್ರಿಟಿಕಲ್ ಇಂಜುರಿ ಗೆದ್ದು ಬಂದ ಕಥೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 2022 ಡಿಸೆಂಬರ್ 30ರ ಮಧ್ಯರಾತ್ರಿ ರೂರ್ಕಿ ಎಂಬಲ್ಲಿ ಆ ಕ್ರಿಕೆಟರ್ ಕಾರು ಅಪಘಾತಕ್ಕೆ ಒಳಗಾಗಿತ್ತು. ಆ ಅಪಘಾತದ ತೀವ್ರತೆಯನ್ನು ನೋಡಿದವರು ಆತ ಬದುಕಿದ್ದೇ ಗ್ರೇಟ್ ಅಂದಿದ್ದರು. ಬಲಗಾಲಿನ ಮಂಡಿ ಚಿಪ್ಪು ಸಮೇತ 90 ಡಿಗ್ರೀಯಷ್ಟು ತಿರುಗಿ ನಿಂತಿತ್ತು! ಮೈಯೆಲ್ಲಾ ಗಾಯಗಳು ಮತ್ತು ಎಲುಬು ಮುರಿತಗಳು! ಡೆಹ್ರಾಡೂನ್ ಆಸ್ಪತ್ರೆಯ ವೈದ್ಯರು ಆತನ ದೇಹದಲ್ಲಾದ ಗಾಯ ಮತ್ತು ಮೂಳೆ ಮುರಿತಗಳನ್ನು ನೋಡಿದಾಗ ‘ನೀನಿನ್ನು ಕ್ರಿಕೆಟ್ ಆಡೋದು ಕಷ್ಟ’ ಅಂದಿದ್ದರು. ಒಬ್ಬರಂತೂ ‘ನೀನು ನಿನ್ನ ಕಾಲುಗಳ ಮೇಲೆ ನಿಂತರೆ ಅದೇ ದೊಡ್ಡ ಸಾಧನೆ’ ಅಂದಿದ್ದರು!

ಅಮ್ಮಾ ನನಗೆ ಸಹಾಯ ಮಾಡು, ನಾನು ವಿಶ್ವಕಪ್ ಆಡಬೇಕು!

ಆ ಕ್ರಿಕೆಟಿಗ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಚೀರಿ ಚೀರಿ ಹಾಗೆ ಹೇಳುತ್ತಿದ್ದರೆ ನರ್ಸ್ ಮತ್ತು ವೈದ್ಯರು ಕಣ್ಣೀರು ಸುರಿಸುತ್ತಿದ್ದರು! ಕ್ರಿಕೆಟ್ ವಿಶ್ವಕಪ್ ಆರಂಭವಾಗಲು ಕೇವಲ ಒಂದೂವರೆ ವರ್ಷ ಬಾಕಿ ಇತ್ತು. ವೈದ್ಯರು ‘ಅನಿವಾರ್ಯ ಆದರೆ ಆತನ ಒಂದು ಕಾಲು ತುಂಡು ಮಾಡಬೇಕಾಗಬಹುದು!’ ಎಂದು ಅವನ ಅಮ್ಮನ ಕಿವಿಯಲ್ಲಿ ಪಿಸುಗುಟ್ಟಿದ್ದು, ಆತನ ಅಮ್ಮ ಬಾತ್ ರೂಮ್ ಒಳಗೆ ಹೋಗಿ ಕಣ್ಣೀರು ಸುರಿಸಿದ್ದು ಎಲ್ಲವೂ ನಡೆದು ಹೋಗಿತ್ತು!

ಆತ ರಿಶಭ್ ಪಂತ್ – ಆಕ್ರಮಣಕ್ಕೆ ಇನ್ನೊಂದು ಹೆಸರು!

ಅಪಘಾತ ಆಗುವ ಮೊದಲು ಆತ ಭಾರತೀಯ ಕ್ರಿಕೆಟ್ ತಂಡದ ಮೂರೂ ಫಾರ್ಮಾಟಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದ! ಆಕ್ರಮಣಕ್ಕೆ ಹೆಸರಾಗಿದ್ದ. ಸಲೀಸಾಗಿ ಒಂದೇ ಅವಧಿಯಲ್ಲಿ ಡಬಲ್ ಸೆಂಚುರಿ ಹೊಡೆಯುತ್ತಿದ್ದ. ವಿಕೆಟ್ ಹಿಂದೆ ಪಾದರಸದ ಚುರುಕು ಇತ್ತು. ಆತನ ಆಟವನ್ನು ನೋಡಿದವರು ʻಈತ ಧೋನಿಯ ಉತ್ತರಾಧಿಕಾರಿ ಆಗುವುದು ಖಂಡಿತ’ ಅನ್ನುತ್ತಿದ್ದರು!

ಅಂತಹ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ.

ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ

ಮರಳಿ ಕ್ರಿಕೆಟ್ ಮೈದಾನಕ್ಕೆ ಇಳಿಯಬೇಕು ಎಂದು ನಿದ್ದೆಯಲ್ಲಿಯೂ ಕನವರಿಸುತ್ತಿದ್ದ ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ. ಅವರೆಲ್ಲರೂ ಆತನ ಕ್ರಿಕೆಟ್ ದೈತ್ಯ ಪ್ರತಿಭೆಯನ್ನು ಕಂಡವರು. ಒಬ್ಬರು ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದ ಮುಂಬಯಿಯ ಅಂಬಾನಿ ಆಸ್ಪತ್ರೆಯ ಖ್ಯಾತ ಸರ್ಜನ್ ದಿನ್ ಶಾ ಪಾದ್ರಿವಾಲ. ಇನ್ನೊಬ್ಬರು ಉತ್ತರಾಖಂಡದ ಶಾಸಕ ಉಮೇಶ್ ಕುಮಾರ್. ಇನ್ನೊಬ್ಬರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಕೋಚ್ ಆದ ಧನಂಜಯ್ ಕೌಶಿಕ್. ನಾಲ್ಕನೆಯರು ರಿಷಭನ ತಾಯಿ! ಆಕೆ ನಿಜಕ್ಕೂ ಗಾಡ್ಸ್ ಗ್ರೇಸ್ ಅನ್ನಬಹುದು. ಅವರೆಲ್ಲರಿಗೂ ಆತ ಭಾರತಕ್ಕೆ ಎಷ್ಟು ಅಮೂಲ್ಯ ಆಟಗಾರ ಎಂದು ಗೊತ್ತಿತ್ತು! ಆಸ್ಪತ್ರೆಯ ಹಾಸಿಗೆಗೆ ಒರಗಿ ಆತ ಪಟ್ಟ ಮಾನಸಿಕ ಮತ್ತು ದೈಹಿಕ ನೋವು, ಹೊರಹಾಕಿದ ನಿಟ್ಟುಸಿರು ಎಲ್ಲವೂ ಆ ನಾಲ್ಕು ಮಂದಿಗೆ ಗೊತ್ತಿತ್ತು.

ಆ ಹದಿನೈದು ತಿಂಗಳು…!

Rishabh Panth

ಆ ಅವಧಿಯಲ್ಲಿ ಏಷಿಯಾ ಕಪ್, ವಿಶ್ವ ಟೆಸ್ಟ್ ಚಾಂಪಿಯನಶಿಪ್, ವಿಶ್ವ ಕಪ್ ಎಲ್ಲವೂ ನಡೆದುಹೋಯಿತು! ಭಾರತ ಹಲವು ವಿಕೆಟ್ ಕೀಪರಗಳ ಪ್ರಯೋಗ ಮಾಡಿತು. ಭಾರತ ಒಂದೂ ಕಪ್ ಗೆಲ್ಲಲಿಲ್ಲ. ಭಾರತಕ್ಕೆ ಶಾಶ್ವತವಾದ ವಿಕೆಟ್ ಕೀಪರ್ ಸಿಗಲಿಲ್ಲ! ರಿಷಭ್ ಈ ಎಲ್ಲ ಪಂದ್ಯಗಳನ್ನು ನೋಡುತ್ತಿದ್ದ. ವಿಕೆಟ್ ಹಿಂದೆ ಅವನಿಗೆ ಅವನೇ ಕಾಣುತ್ತಿದ್ದ!

ಹಾಸಿಗೆಯಿಂದ ಎದ್ದು ಕ್ರಚಸ್ ಹಿಡಿದು ನಡೆದದ್ದು, ನಂತರ ಕ್ರಚಸ್ ಬದಿಗೆ ಇಟ್ಟು ಗೋಡೆ ಹಿಡಿದು ನಡೆದದ್ದು, ನಂತರ ಎಲ್ಲವನ್ನೂ ಬಿಟ್ಟು ನಿಧಾನವಾಗಿ ತನ್ನ ಕಾಲ ಮೇಲೆ ಗಟ್ಟಿಯಾಗಿ ನಿಂತದ್ದು, ಜಾಗಿಂಗ್ ಮಾಡಿದ್ದು, ಓಡಿದ್ದು, ಕಾಲುಗಳಿಗೆ ಫಿಸಿಯೋ ಥೆರಪಿ ಆದದ್ದು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಕೌನ್ಸೆಲಿಂಗ್ ನೆರವು ಪಡೆದದ್ದು….ಇವೆಲ್ಲವೂ ಕನಸಿನಂತೆ ಗೋಚರ ಆಗುತ್ತಿದೆ. ಮುಂದೆ ನಿರಂತರ ಕ್ರಿಕೆಟ್ ಕೋಚಿಂಗ್, ಮೈದಾನದಲ್ಲಿ ಬೆವರು ಹರಿಸಿದ್ದು, ಅಪಘಾತವಾದ ಕಾಲು ಬಗ್ಗಿಸಲು ತುಂಬ ಕಷ್ಟಪಟ್ಟದ್ದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ಅನ್ನಿಸುತ್ತಿದೆ.

2024 ಮಾರ್ಚ್ 12….

ಒಬ್ಬ ಕ್ರಿಕೆಟರ್ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಬಿಸಿಸಿಐ ಫಿಟ್ನೆಸ್ ಸರ್ಟಿಫಿಕೇಟ್ ಕೊಡಬೇಕು. ಅದು ಸುಲಭದ ಕೆಲಸ ಅಲ್ಲ. ಅಲ್ಲಿ ಕೂಡ ರಿಶಭ್ ಇಚ್ಛಾಶಕ್ತಿ ಗೆದ್ದಿತ್ತು. ಮಾರ್ಚ್ 12ರಂದು ಆತನು ಕ್ರಿಕೆಟ್ ಆಡಲು ಸಂಪೂರ್ಣ ಫಿಟ್ ಎಂದು ಬಿಸಿಸಿಐ ಘೋಷಣೆ ಮಾಡಿದಾಗ ಆತ ಮೈದಾನದ ಮಧ್ಯೆ ಕೂತು ಜೋರಾಗಿ ಕಣ್ಣೀರು ಹಾಕಿದ್ದನು! ಎರಡೇ ದಿನದಲ್ಲಿ ಡೆಲ್ಲಿ ಐಪಿಎಲ್ ತಂಡವು ಆತನನ್ನು ತೆರೆದ ತೋಳುಗಳಿಂದ ಸ್ವಾಗತ ಮಾಡಿ ನಾಯಕತ್ವವನ್ನು ಕೂಡ ಆತನಿಗೆ ನೀಡಿತ್ತು! ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

ಮುಂದಿನ T20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಒಬ್ಬ ಅದ್ಭುತ ಬ್ಯಾಟರ್ ಮತ್ತು ವಿಕೆಟ್ ಕೀಪರ್ ದೊರಕಿದ್ದನ್ನು ನಾವು ಸಂಭ್ರಮಿಸಲು ಯಾವ ಅಡ್ಡಿ ಕೂಡ ಇಲ್ಲ ಎನ್ನಬಹುದು. ಆತನಿಗೆ ಶುಭವಾಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Continue Reading

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಅಂಕಣ

JEE Main 2024 Result: ದೇಶಕ್ಕೇ ಮೊದಲ ರ‍್ಯಾಂಕ್ ಪಡೆದ ರೈತನ ಮಗ! ಈತನ ಯಶಸ್ಸು ಸ್ಫೂರ್ತಿದಾಯಕ

JEE Main 2024 Result: ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು.

VISTARANEWS.COM


on

Nilkrishna Gajare JEE main 2024 result AIR 1
Koo

ಹೊಸದಿಲ್ಲಿ: ಮಹಾರಾಷ್ಟ್ರದ ವಾಶಿಮ್‌ನ ರೈತರ ಮಗ (farmer’s son) ನೀಲಕೃಷ್ಣ ಗಜರೆ (Nilkrishna Gajare) ಅವರು ಜೆಇಇ ಮೇನ್ 2024 ಪರೀಕ್ಷೆಯಲ್ಲಿ (JEE Main 2024 Result) ದೇಶಕ್ಕೇ ಅಗ್ರಸ್ಥಾನ (AIR 1, First Rank) ಪಡೆದಿದ್ದಾರೆ. ಪರೀಕ್ಷೆಯಲ್ಲಿ ಪರಿಪೂರ್ಣ ಅಂಕಗಳನ್ನು (100) ಗಳಿಸಿದ್ದಾರೆ. ದಕ್ಷೇಶ್ ಸಂಜಯ್ ಮಿಶ್ರಾ ಮತ್ತು ಆರವ್ ಭಟ್ ಕ್ರಮವಾಗಿ AIR 2 ಮತ್ತು 3 ಪಡೆದಿದ್ದಾರೆ. ದೇಶದ ವಿವಿಧ ರಾಜ್ಯಗಳ ಒಟ್ಟು 56 ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿದ್ದಾರೆ.

ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು. “ಪರೀಕ್ಷೆಯನ್ನು ತೆಗೆದುಕೊಂಡ ನಂತರ, ನಾನು ಪ್ರಶ್ನೆ ಪತ್ರಿಕೆಯನ್ನು ವಿಶ್ಲೇಷಿಸಿದೆ. ನಾನು ದುರ್ಬಲ ವಿಷಯಗಳ ಮೇಲೆ ವಿಶೇಷ ಗಮನವನ್ನು ನೀಡುತ್ತಿದ್ದೇನೆ. JEEಯಂತಹ ಪರೀಕ್ಷೆಯನ್ನು ಉತ್ತರಿಸಲು ಸ್ಪಷ್ಟ ಪರಿಕಲ್ಪನೆಗಳನ್ನು ಹೊಂದಿರುವುದು ಬಹಳ ಮುಖ್ಯ. ಇದಲ್ಲದೆ ನಾನು ಒಂದಕ್ಕಿಂತ ಹೆಚ್ಚು ಬಾರಿ ಪ್ರಶ್ನೆಗಳನ್ನು ಅಭ್ಯಾಸ ಮಾಡುತ್ತೇನೆ” ಎಂದು ಗಜರೆ ಹೇಳಿದ್ದಾರೆ.

IIT- JEEಗೆ ತಯಾರಾಗಲು ಗಜರೆ 11ನೇ ತರಗತಿಯಲ್ಲಿ ALLEN ವೃತ್ತಿ ಸಂಸ್ಥೆಗೆ ಸೇರಿದರು. ಅವರು ತಮ್ಮ ಪ್ರಯಾಣದ ಅಡೆತಡೆಗಳನ್ನು ಹೇಗೆ ನಿವಾರಿಸಿಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ.

“ನನ್ನ ಜೆಇಇ ಪ್ರಯಾಣ 11ನೇ ತರಗತಿಯಲ್ಲಿ ಪ್ರಾರಂಭವಾದ ಮೊದಲ ಒಂದು ಅಥವಾ ಎರಡು ತಿಂಗಳುಗಳಲ್ಲಿ ನಾನು ಸ್ವಲ್ಪ ತೊಂದರೆಗಳನ್ನು ಎದುರಿಸಿದೆ. ಅಂದರೆ, 10ನೇ ತರಗತಿಗೆ ಹೋಲಿಸಿದರೆ 11 ಮತ್ತು 12ನೇ ತರಗತಿಗಳ ಪಠ್ಯಕ್ರಮವು ಸಾಕಷ್ಟು ವಿಸ್ತಾರವಾಗಿದೆ. ಆದ್ದರಿಂದ ನಾನು ಆರಂಭದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದೆ. ಆದರೆ ನಾನು ಕೈಬಿಡಲಿಲ್ಲ. ನನ್ನ ಅಧ್ಯಯನವನ್ನು ನಿರಂತರವಾಗಿ ಮುಂದುವರಿಸಿದೆ. ನಾನು ವಿದ್ಯಾರ್ಥಿಗಳಿಗೆ ನೀಡಲು ಬಯಸುವ ಸಂದೇಶ ಏನೆಂದರೆ, ನೀವು ಅಂತಹ ತೊಂದರೆಗಳನ್ನು ಎದುರಿಸಿದರೆ ಅಥವಾ ನನ್ನಿಂದ ಸಾಧ್ಯವೇ ಇಲ್ಲ ಎಂದು ಭಾವಿಸಿದರೆ, ಕೈಬಿಡಬೇಡಿ. ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮುಂದುವರಿಸಿ. ಒಳ್ಳೆಯ ಫಲಿತಾಂಶ ದಕ್ಕುತ್ತದೆ” ಎಂದು ಅವರು ಇನ್‌ಸ್ಟಿಟ್ಯೂಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೇಳೆ ಹೇಳಿದರು.

“ಜೆಇಇ ಅಡ್ವಾನ್ಸ್ಡ್‌ನಲ್ಲಿ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ ಸೀಟು ಪಡೆಯುವುದು ನನ್ನ ಗುರಿ. ಪ್ರಸ್ತುತ ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ” ಎಂದು ಗಜರೆ ಹೇಳಿದ್ದಾರೆ. ಐಐಟಿ-ಜೆಇಇ ಆಕಾಂಕ್ಷಿಗಳಿಗೆ ಗಜರೆ ಸಲಹೆಯನ್ನೂ ಹಂಚಿಕೊಂಡಿದ್ದಾರೆ. “ನಿಮ್ಮ ಗುರಿಯನ್ನು ಖಚಿತಪಡಿಸಿ. ಅದರ ಪ್ರಕಾರ ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮಾಡಿ. ವಿಷಯಗಳನ್ನು ನಿಜವಾದ ಆಸಕ್ತಿಯಿಂದ ಅಧ್ಯಯನ ಮಾಡಿ. ಇದರಿಂದ ಅವು ಹೊರೆಯಾಗುವುದಿಲ್ಲ. ನಿಮ್ಮ ಸಿದ್ಧತೆಯನ್ನು ಸ್ಥಿರವಾಗಿ ಮತ್ತು ನಿರಂತರವಾಗಿ ಮಾಡಿ.”

56 ಅಭ್ಯರ್ಥಿಗಳಿಗೆ ಶೇ.100 ಅಂಕ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಜೆಇಇ ಮುಖ್ಯ 2024 ಸೆಷನ್ 2 ಪರೀಕ್ಷಾ ಫಲಿತಾಂಶ (JEE Main 2024 Result session 2) ಪ್ರಕಟವಾಗಿದೆ. ಒಟ್ಟು 56 ಅಭ್ಯರ್ಥಿಗಳು (Students) ಶೇ.100 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿಗಿಂತ 13 ಹೆಚ್ಚು ವಿದ್ಯಾರ್ಥಿಗಳು ಇದನ್ನು ಪಡೆದಿದ್ದಾರೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ. ಕಟ್‌ಆಫ್‌ (Cut off marks) ಅಂಕಗಳನ್ನು ಕೂಡ 2.45%ರಷ್ಟು ಹೆಚ್ಚಿಸಲಾಗಿದೆ.

ಸಂಸ್ಥೆಯು ಇಂದು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ 2024 ಫಲಿತಾಂಶವನ್ನು ಬಿಡುಗಡೆ ಮಾಡಿದೆ. 2024ರ ಪರೀಕ್ಷೆಗಳಲ್ಲಿ ಒಟ್ಟು 9.24 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 8.2 ಲಕ್ಷ ಜನರು ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆದ JEE ಮುಖ್ಯ 2023 ಪರೀಕ್ಷೆಗಳಿಗೆ ಹಾಜರಾಗಿದ್ದರು. ಜೆಇಇ ಮುಖ್ಯ ಏಪ್ರಿಲ್ ಸೆಷನ್‌ಗೆ ಹಾಜರಾದವರು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು: jeemain.nta.ac.in.

ಇದನ್ನೂ ಓದಿ: JEE Main 2024 Result: ಜೆಇಇ ಮೇನ್‌ ಫಲಿತಾಂಶ ಪ್ರಕಟ, 56 ಅಭ್ಯರ್ಥಿಗಳಿಗೆ ಶೇ.100 ಅಂಕ, ಕಟ್‌ಆಫ್‌ 2.45% ಹೆಚ್ಚಳ

Continue Reading

ಅಂಕಣ

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

ರಾಜಮಾರ್ಗ ಅಂಕಣ (Rajamarga column): ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

VISTARANEWS.COM


on

arijit singh rajamarga column 2
Koo

ದ ಮ್ಯೂಸಿಕಲ್ ಲೆಜೆಂಡ್, ಜೇನು ದನಿಯ ಸರದಾರ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ (Rajamaraga Column): ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಸಿಂಗ್‌ (Arijit singh)) ಹುಟ್ಟಿದ ಹಬ್ಬ (Birthday)!

ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಆತನ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು….ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು!

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು.

ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು! ಮುಂದೆ TIPS ಸಂಗೀತ ಕಂಪೆನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ! ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟವು ಆತನಿಗಿಂತ ಮುಂದೆ ಇತ್ತು! ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ!

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು! ಅರ್ಜಿತ್ ಒಂದು ದೊಡ್ಡ ಬ್ರೇಕ್ ಥ್ರೂ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

arijit singh rajamarga column 2

2011ರಲ್ಲಿ ಅರ್ಜಿತ್ ಭಾಗ್ಯದ ಬಾಗಿಲು ತೆರೆಯಿತು!

ಆ ವರ್ಷ ಬಿಡುಗಡೆ ಆದ ಮರ್ಡರ್ 2 ಸಿನೆಮಾದ ‘ಫೀರ್ ಮೊಹಬ್ಬತೆ ‘ ಹಾಡು ಸೂಪರ್ ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ ( ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರೀ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಇಡೀ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿಯು ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದೀ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಯಿತು. ಭಾರೀ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರೀ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ.

ಸ್ಟುಡಿಯೋ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೋ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ!

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.

ಅಂತಹ ಅನನ್ಯ ಪ್ರತಿಭೆ, ಜೇನು ದನಿಯ ಸರದಾರ ಅರ್ಜಿತ್ ಸಿಂಗ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Continue Reading
Advertisement
Kavya Maran
ಪ್ರಮುಖ ಸುದ್ದಿ12 mins ago

Kavya Maran : ಎಸ್​ಆರ್​ಎಚ್​​​ ತಂಡದ ಫೀಲ್ಡಿಂಗ್ ನೋಡಿ ಮಗುವಿನಂತೆ ಕಣ್ಣೀರು ಹಾಕಿದ ಮಾಲಕಿ ಕಾವ್ಯಾ ಮಾರನ್​

ವೈರಲ್ ನ್ಯೂಸ್13 mins ago

Viral Video: ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿ; ಮಹಿಳಾ ಪೇದೆಯಿಂದ ರಕ್ಷಣೆ-ರೋಚಕ ವಿಡಿಯೋ ವೈರಲ್‌

viral video tn rao
ಪ್ರಮುಖ ಸುದ್ದಿ18 mins ago

Viral Video: ನಮಗೆ ಹಿಂದೂ ಮತಗಳ ಅಗತ್ಯವಿಲ್ಲ: ಕಾಂಗ್ರೆಸ್‌ ನಾಯಕನ ವಿಡಿಯೋ ವೈರಲ್‌

Ramana Avatara trailer out
ಸಿನಿಮಾ19 mins ago

Ramana Avatara Trailer: ರಿಷಿ ಅಭಿನಯದ ʻರಾಮನ ಅವತಾರʼ ಟ್ರೈಲರ್‌ ರಿಲೀಸ್

PM Narendra modi in Bagalakote for Election Campaign and here is Live telecast
Lok Sabha Election 202420 mins ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

Amith Shah
ಪ್ರಮುಖ ಸುದ್ದಿ35 mins ago

Fact Check: ಅಮಿತ್‌ ಶಾ ಎಸ್​​ಸಿ, ಎಸ್​ಟಿ ಮೀಸಲು ರದ್ದು ಮಾಡ್ತೀವಿ ಎಂದಿದ್ದು ನಿಜವೆ?​​

Mahanati Show complaint against Gagana Contestant and Ramesh
ಕಿರುತೆರೆ45 mins ago

Mahanati Show: ಮೆಕ್ಯಾನಿಕಲ್‌ ಲೈಫ್‌ ಬಗ್ಗೆ ಕೆಟ್ಟ ಡೈಲಾಗ್‌ ಹೊಡೆದ ಗಗನಾ; ರಮೇಶ್‌ ಸೇರಿ ಹಲವರ ವಿರುದ್ಧ ದೂರು!

Physical Abuse
ಪ್ರಮುಖ ಸುದ್ದಿ59 mins ago

Physical Abuse: ಮದುವೆಗೊಪ್ಪದ ಬಾಲಕಿಯ ಅತ್ಯಾಚಾರ; ಕೆನ್ನೆಯ ಮೇಲೆ ಬಿಸಿ ಕಬ್ಬಿಣದಿಂದ ಪಾಗಲ್‌ ಪ್ರೇಮಿ ಹೆಸರು!

ದೇಶ1 hour ago

Pakistan Spy: ATS ಭರ್ಜರಿ ಕಾರ್ಯಾಚರಣೆ; ಪಾಕಿಸ್ತಾನ ಗೂಢಾಚಾರ ಅರೆಸ್ಟ್‌

srinivasa prasad sutturu sri
ಕರ್ನಾಟಕ2 hours ago

Srinivasa Prasada Passes Away: ಕೊನೇ ಬಾರಿಗೆ ʼCoffee’ ಎಂದು ಬರೆದಿದ್ದ ಶ್ರೀನಿವಾಸ ಪ್ರಸಾದ್;‌ ನಾಳೆ ಅಂತ್ಯಕ್ರಿಯೆ; ಗಣ್ಯರ ಸಂತಾಪ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote for Election Campaign and here is Live telecast
Lok Sabha Election 202420 mins ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ7 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202419 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202422 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202423 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202424 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

ಟ್ರೆಂಡಿಂಗ್‌