Ideological caste politics and voting ತತ್ತ್ವ-ಸಿದ್ಧಾಂತ, ಜಾತಿ ರಾಜಕಾರಣ ಮತ್ತು ಮತದಾನ: ವಾಸ್ತವವೋ? ಅಸಂಬದ್ಧ ಪ್ರಲಾಪವೋ? - Vistara News

ಅಂಕಣ

ತತ್ತ್ವ-ಸಿದ್ಧಾಂತ, ಜಾತಿ ರಾಜಕಾರಣ ಮತ್ತು ಮತದಾನ: ವಾಸ್ತವವೋ? ಅಸಂಬದ್ಧ ಪ್ರಲಾಪವೋ?

ಪಕ್ಷಾಂತರ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷದ ಚಿನ್ಹೆಯ ಬದಲಾವಣೆಯಲ್ಲ, ಬದಲಿಗೆ ಅದು ತತ್ತ್ವ-ಸಿದ್ಧಾಂತಗಳ ಪರ-ವಿರೋಧದ ರಾಜಕಾರಣವಾಗಿ ರಾಜಕಾರಣಿಯು ತೆಗೆದುಕೊಳ್ಳುವ ನಿಲುವು ಎಂದು ವಾದಿಸಲಾಗುತ್ತದೆ.

VISTARANEWS.COM


on

BJP candidate came to polling booth with party flag, Congress leaders objected
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಮ್.ಎಸ್.ಚೈತ್ರ, ರಾಮಕೃಷ್ಣ ಭಟ್ಟ, ಶಿವಾನಂದ ಸೈದಾಪುರ
ಭಾರತದ ರಾಜಕೀಯ ವ್ಯವಸ್ಥೆಯ ಕುರಿತು ಚಿಂತಕರ ಚಾವಡಿಯಲ್ಲಿ, ಒಂದೆಡೆ ಭಾರತವು ಅಪ್ರತಿಮ ಪ್ರಜಾತಂತ್ರವೆಂತಲೂ ಮತ್ತೊಂದೆಡೆ ಭಾರತವು ಫ್ಯಾಸಿಸ್ಟ್, ಕೋಮುವಾದಿ ಹಾಗೂ ಪ್ರಜಾತಂತ್ರ ವಿರೋಧಿ ಸರ್ಕಾರವನ್ನು ಹೊಂದಿದೆ ಎಂದು ಇಂದು ಚರ್ಚಿಸುತ್ತಾರೆ. ಈ ವೈರುದ್ಧ್ಯಪೂರ್ಣ ರಾಜಕೀಯ ವಿಚಾರ-ವಿಮರ್ಶೆಗಳು ನಮಗೆ ಭಾರತದ ರಾಜಕೀಯದ ಕುರಿತು ಏನನ್ನು ತಿಳಿಸಿಕೊಡಬಲ್ಲವು ಎನ್ನುವ ಪ್ರಶ್ನೆಯು ಸಹಜವಾಗಿಯೇ ಮೂಡುತ್ತದೆ. ಅಂತಹ ಪ್ರಶ್ನೆಯೊಂದಕ್ಕೆ ಉತ್ತರ ಕಂಡುಕೊಳ್ಳುವುದು ಅತ್ಯಂತ ಕಷ್ಟಕರವಾದರೂ ಕೆಲವು ಚರ್ಚೆಗಳನ್ನು ಗಮನಿಸಿದರೆ ನಮಗೆ ಭಾರತದ ರಾಜಕೀಯದ ಕುರಿತು ಏನು ತಿಳಿವಳಿಕೆ ಹುಟ್ಟಬಹುದು ಎಂಬುದನ್ನು ಯೋಚಿಸುವುದು ಸೂಕ್ತ.

ತತ್ತ್ವ-ಸಿದ್ಧಾಂತದ(ಐಡಿಯಾಲಜಿ) ರಾಜಕಾರಣವೆಂಬ ಪ್ರಹಸನ
ಭಾರತಕ್ಕೆ ಈಗ ಚುನಾವಣೆಯ ಹಬ್ಬ. ಈ ಸಂದರ್ಭದಲ್ಲಿ ಸುದ್ಧಿ ಮಾಧ್ಯಮಗಳು, ಅಂತರ್ಜಾಲ ತಾಣಗಳು, ಬುದ್ಧಿಜೀವಿಗಳು, ರಾಜಕೀಯತಜ್ಞರು ಮೊದಲಾದವರು ರಾಜಕೀಯದ ಬಗ್ಗೆ ತಮ್ಮ ವಿಚಾರ ವಿಮರ್ಶೆಯನ್ನು ಮುಂದಿಡುತ್ತಾರೆ. ಭಾರತದ ರಾಜಕೀಯದ ಕುರಿತಂತೆ ಇವರೆಲ್ಲರ ಕೆಲ ಒಮ್ಮತಗಳಿವೆ. ಅವುಗಳಲ್ಲಿ ಒಂದು ತತ್ತ್ವ-ಸಿದ್ಧಾಂತದ ರಾಜಕಾರಣ. ಭಾರತದಲ್ಲಿ ರಾಜಕಾರಣಿಗಳು ಒಂದೆಲ್ಲ ಒಂದು ತತ್ತ್ವ-ಸಿದ್ಧಾಂತಕ್ಕೆ ಅಥವಾ ಐಡಿಯಾಲಜಿಗೆ ಬದ್ಧರಾಗಿರುತ್ತಾರೆ ಎಂಬುದು ಇವರೆಲ್ಲರ ಅಭಿಪ್ರಾಯ. ಉದಾಹರಣೆಗೆ – ಬಿಜೆಪಿಯ ರಾಜಕಾರಣಿಗಳು ಹಿಂದುತ್ವದ ಸಿದ್ಧಾಂತಕ್ಕೆ ಬದ್ಧರಾಗಿದ್ದು, ಮುಸಲ್ಮಾನರ, ದಲಿತರ, ಬಡವರ ಮತ್ತು ಶ್ರಮಿಕರ ವಿರೋಧಿಗಳಾಗಿರುತ್ತಾರೆ. ಕಾಂಗ್ರೆಸ್ಸಿನ ರಾಜಕಾರಣವು ಹಿಂದುತ್ವದ ವಿರೋಧಿಯಾಗಿದೆ ಹಾಗೂ ನಿಜವಾದ ಸೆಕ್ಯುಲರ್ ಪಕ್ಷವಾಗಿದೆ. ಈ ರೀತಿಯಾಗಿ ಒಂದೊಂದು ಪಕ್ಷದ ರಾಜಕಾರಣಿಗಳು ಒಂದೊಂದು ನಿರ್ದಿಷ್ಟ ತತ್ತ್ವ-ಸಿದ್ಧಾಂತಗಳನ್ನು ಇಟ್ಟುಕೊಂಡು ರಾಜಕಾರಣವನ್ನು ಮಾಡುತ್ತಾರೆ ಎನ್ನುವುದು ವಿಮರ್ಶಕರ ಅಭಿಪ್ರಾಯ. ಕರ್ನಾಟಕದ ಇತ್ತೀಚನ ಕೆಲ ರಾಜಕೀಯ ಬೆಳವಣಿಗೆಯ ಆಧಾರದ ಮೇಲೆ ಈ ವಿಮರ್ಶೆಯ ಸತ್ತ್ವವನ್ನು ಗ್ರಹಿಸಲು ಪ್ರಯತ್ನಿಸೋಣ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕಾವು ಏರಿದೆ. ಕರ್ನಾಟಕದ ಕೆಲ ಪ್ರತಿಷ್ಠಿತ ರಾಜಕೀಯ ನಾಯಕರು ಟಿಕೆಟಿನಿಂದ ವಂಚಿತರಾಗಿದ್ದಾರೆ. ಹಾಗಾಗಿ ಪಕ್ಷಾಂತರ ಪರ್ವವೇ ನಡೆಯುತ್ತಿದೆ. ಟಿಕೆಟ್ ಸಿಗದ ರಾಜಕೀಯ ನಾಯಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುತ್ತಿದ್ದಾರೆ. ಕೆಲವರು ಬಿಜೆಪಿಯಿಂದ ಕಾಂಗ್ರೆಸ್ಸಿಗೂ, ಇನ್ನು ಕೆಲವರು ಕಾಂಗ್ರೆಸ್ಸಿನಿಂದ ಬಿಜೆಪಿಗೂ, ಇವೆರಡನ್ನೂ ಬಿಟ್ಟು ಆಮ್ ಆದ್ಮಿ ಪಕ್ಷಕ್ಕೆ ಹೋಗುವುದು ಇತ್ಯಾದಿಯಾಗಿ ಪಕ್ಷಾಂತರವು ನಡೆಯುತ್ತಿದೆ. ಇತ್ತೀಚೆಗೆ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಇಬ್ಬರೂ ಸಹ ಬಿಜೆಪಿ ಪಕ್ಷದಲ್ಲಿ ಟಿಕೆಟಿನಿಂದ ವಂಚಿತರಾದರು. ಬಿಜೆಪಿ ಪಕ್ಷದ ಸಿದ್ಧಾಂತಕ್ಕೆ ಕಟಿಬದ್ದರಾಗಿದ್ದು, ಪಕ್ಷಕ್ಕಾಗಿ ದುಡಿದು ಪ್ರಬಲ ನಾಯಕರಾಗಿ ಬೆಳೆದಾಗಲೂ ಸಹ ಟಿಕೆಟ್ ಕೊಡದಿರುವುದು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯನ್ನು ತಂದಿದೆ ಎಂಬುದು ಈ ನಾಯಕರುಗಳ ಆಕ್ಷೇಪ. ಆದ್ದರಿಂದ ಇವರೀರ್ವರು, ಇಲ್ಲಿಯ ತನಕವು ತಮಗೆ ಶತ್ರುವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು. ತಮಗೆ ಅನ್ಯಾಯ ಮಾಡಿದ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಪಣವನ್ನು ಸಹ ತೊಟ್ಟಿದ್ದಾರೆ.

ಇಲ್ಲಿ ಪಕ್ಷಾಂತರ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷದ ಚಿನ್ಹೆಯ ಬದಲಾವಣೆಯಲ್ಲ, ಬದಲಿಗೆ ಅದು ತತ್ತ್ವ-ಸಿದ್ಧಾಂತಗಳ ಪರ-ವಿರೋಧದ ರಾಜಕಾರಣವಾಗಿ ರಾಜಕಾರಣಿಯು ತೆಗೆದುಕೊಳ್ಳುವ ನಿಲುವು ಎಂದು ವಾದಿಸಲಾಗುತ್ತದೆ. ಒಂದು ರಾಜಕೀಯ ಪಕ್ಷವನ್ನು ನಮ್ಮ ತಾಯಿ, ನಾವು ಈ ಸಿದ್ಧಾಂತಗಳಿಗೆ ಕಟಿಬದ್ದರಾಗಿದ್ದೇವೆ ಎಂದು ದಶಕಗಳ ಕಾಲ ಹೆಳಿಕೊಂಡಿದ್ದ ಬಿಜೆಪಿಯ ಇಬ್ಬರು ನಾಯಕರುಗಳು ತಮಗೆ ಟಿಕೆಟ್ ಸಿಗದ ಕಾರಣಕ್ಕಾಗಿ ರಾತ್ರೋರಾತ್ರಿ ಪಕ್ಷಾಂತರವನ್ನು ಮಾಡುತ್ತಾರೆ. ಈ ಘಟನೆಯನ್ನು ನೋಡುತ್ತಿದ್ದರೆ ಭಾರತೀಯ ರಾಜಕೀಯದಲ್ಲಿ ತತ್ತ್ವ-ಸಿದ್ಧಾಂತದ ಸ್ಥಾನಮಾನಗಳೇನು ಎನ್ನುವ ಪ್ರಶ್ನೆಯು ಬರುತ್ತದೆ. ಯಾಕೆಂದರೆ ತಾವು ಯಾರನ್ನು ವಿರೋಧಿಗಳು ಎನ್ನುತ್ತಿದ್ದರೋ ಅದೇ ಕಾಂಗ್ರೆಸ್ ಪಕ್ಷವನ್ನು ಇಂದು ಈ ಇಬ್ಬರು ನಾಯಕರೂ ಸಹ ಗೆಲ್ಲಿಸಲು ಹೊರಟಿದ್ದಾರೆ. ಇಲ್ಲಿ ವಿರೋಧವಿರುವುದು ತತ್ತ್ವ-ಸಿದ್ಧಾಂತಗಳಿಗೆ ವಯಕ್ತಿಕವಾಗಿ ಅಲ್ಲ. ಹಾಗಾದರೆ ಈ ತರಹದ ವೈಯಕ್ತಿಕ ಪಕ್ಷಾಂತರದ ಅರ್ಥವೇನು? ಮೇಲಿನ ಉದಾಹರಣೆಯಲ್ಲಿ ಇಬ್ಬರ ರಾಜಕಾರಣ ಬಹಳ ತತ್ತ್ವ ಸಿದ್ಧಾಂತಗಳಿಗೆ ಸಂಬಂಧಿಸಿದಂತೆ ಕಾಣುವುದಿಲ್ಲ. ಬಿಜೆಪಿಯಲ್ಲಿ ಈ ಇಬ್ಬರೂ ನಾಯಕರಿಗೆ ಟಿಕೆಟ್ ಸಿಗದಿರುವುದು ಅವರ ಈ ನಿರ್ಧಾರಕ್ಕೆ ಕಾರಣ.

ಅಂದರೆ ಒಬ್ಬ ವ್ಯಕ್ತಿ ಯಾವುದೇ ತತ್ತ್ವ-ಸಿದ್ಧಾಂತಗಳ ಜೊತೆಗಿರುವುದು ತನಗೆ ರಾಜಕೀಯ ಅಧಿಕಾರ ದೊರೆಯುತ್ತದೆ ಎನ್ನುವ ಕಾರಣಕ್ಕಾಗಿ ಮಾತ್ರವೇ. ತಮಗೆ ರಾಜಕೀಯ ಅಧಿಕಾರ ಲಾಭಗಳನ್ನು ದೊರಕಿಸದ ತತ್ತ್ವ-ಸಿದ್ಧಾಂತಗಳನ್ನು ಬಿಟ್ಟು, ಅಧಿಕಾರವನ್ನು ಕೊಡಿಸುವ ಹೊಸ ತತ್ತ್ವ-ಸಿದ್ಧಾಂತಗಳನ್ನು ಅಪ್ಪಿಕೊಳ್ಳುತ್ತಾನೆ. ಅಂದರೆ ಇಲ್ಲಿ ರಾಜಕಾರಣಿಗಳು ಯಾವುದೇ ತತ್ತ್ವ-ಸಿದ್ಧಾಂತದ ಆಧಾರದ ಮೇಲೆ ರಾಜಕಾರಣವನ್ನು ಮಾಡುತ್ತಿಲ್ಲ. ಬದಲಾಗಿ ತಮಗೆ ಲಾಭದಾಯಕವಾದ ರಾಜಕಾರಣವನ್ನು ಅಪ್ಪಿಕೊಳ್ಳುತ್ತಾರಷ್ಟೇ. ಅಂದರೆ ಒಂದೊಂದು ಪಕ್ಷದ ರಾಜಕಾರಣಿಯು ಒಂದೊಂದು ತತ್ತ್ವ-ಸಿದ್ಧಾಂತದ ಆಧಾರದ ಮೇಲೆ ಕೆಲಸ ಮಾಡುತ್ತಾನೆ ಎಂದುಕೊಂಡರೆ ಕಣ್ಮುಂದೆ ಕಾಣುತ್ತಿರುವ ಈ ರಾಜಕೀಯ ವಿದ್ಯಮಾನಗಳನ್ನು ವಿವರಿಸಿಕೊಳ್ಳಲಾಗದು. ತಮ್ಮ ರಾಜಕೀಯ ಲಾಭ, ಅಧಿಕಾರಕ್ಕಾಗಿ ಈ ರಾಜಕಾರಣಿಗಳು ಯಾವ ತತ್ತ್ವ-ಸಿದ್ಧಾಂತಗಳಗನ್ನು ಬೇಕಾದರು ತಮ್ಮದಾಗಿಸಿಕೊಳ್ಳುತ್ತಾರೆ.

ಲಾಭದಾಯಕವಾಗಿಲ್ಲವೆಂದರೆ ಆ ತತ್ತ್ವ-ಸಿದ್ಧಾಂತಗಳನ್ನು ತೊರೆಯುತ್ತಾರೆ. ಈ ಸಂದರ್ಭಗಳನ್ನು ನೋಡುತ್ತಿದ್ದರೆ ಯಾವುದೇ ಭಾರತದ ವಿವಿಧ ರಾಜಕೀಯ ಪಕ್ಷದ ರಾಜಕಾರಣಿಯು ಯಾವುದೇ ಒಂದು ತತ್ತ್ವ-ಸಿದ್ಧಾಂತದ ಆಧಾರದ ಮೇಲೆ ರಾಜಕಾರಣವನ್ನು ನಡೆಸುತ್ತಿರುವಂತೆ ತೋರುವುದಿಲ್ಲ. ಹಾಗಾದರೆ ಈ ಪಕ್ಷ ರಾಜಕಾರಣದಲ್ಲಿ ತತ್ತ್ವ ಸಿದ್ಧಾಂತಗಳ ಚರ್ಚೆಯು ಒಂದು ಪ್ರಹಸನವಷ್ಟೇ.

ವ್ಯಕ್ತಿಗಳ ಪಕ್ಷಾಂತರದ ಜೊತೆಗೆ ವಾಸ್ತವದಲ್ಲಿ ಪಕ್ಷ-ರಾಜಕಾರಣವೂ ಕೂಡ ಬೇರೆಯದೇ ರೀತಿಯಲ್ಲಿ ಇರುವಂತೆ ತೋರುತ್ತದೆ. ಚುನಾವಣೆಯ ಈ ಸಂದರ್ಭಗಳಲ್ಲಂತೂ ಈ ವಿಮರ್ಶೆಗಳ ವಾಸ್ತವಕ್ಕೆ ಎಷ್ಟು ವಿಪರೀತವಾಗಿವೆ ಎನ್ನುವುದು ಸ್ಪಷ್ಟವಾಗಿ ತೋರುತ್ತದೆ. ಚುನಾವಣೆಯ ಪೂರ್ವದಲ್ಲಿ ಈ ಪಕ್ಷಗಳಿಗೆ ಆಯಾ ಕ್ಷೇತ್ರಕ್ಕೆ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಬೇಕಾಗುತ್ತದೆ. ಪ್ರಚಲಿತ ವಿಮರ್ಶೆಗಳ ಪ್ರಕಾರ ತತ್ತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಹಲವಾರು ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿ ದುಡಿದ ವ್ಯಕ್ತಿಯೊಬ್ಬನನ್ನು ಪಕ್ಷಗಳು ತಮ್ಮ ಅಭ್ಯರ್ಥಿಯನ್ನಾಗಿ ಆರಿಸಬೇಕು ಎಂದು ನಿರೀಕ್ಷಿಸಬೇಕಾಗುತ್ತದೆ. ಆದರೆ ಪಕ್ಷಗಳು ತಮ್ಮ ಅಭ್ಯರ್ಥಿಯ ಆಯ್ಕೆಯಲ್ಲಿ ಈ ವಿಮರ್ಶೆಗಳ ನಿರೀಕ್ಷೆಯನ್ನು ಹುಸಿ ಮಾಡುತ್ತವೆ. ಪಕ್ಷದ ತತ್ತ್ವ-ಸಿದ್ಧಾಂತಗಳನ್ನು ಒಪ್ಪಿಕೊಂಡು ಹಲವಾರು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ವ್ಯಕ್ತಿಗೆ ಪಕ್ಷವು ಟಿಕೆಟನ್ನು ಕೊಡುವುದೇ ಇಲ್ಲ, ಇನ್ನಾರಿಗೋ ಟಿಕೆಟನ್ನು ಕೊಟ್ಟುಬಿಡುತ್ತದೆ. ಪ್ರತಿಯೊಂದು ಪಕ್ಷವೂ ಸಹ ತಾನು ಈ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವುದನ್ನು ಗುರಿಯಾಗಿಸಿಕೊಂಡಿರುತ್ತದೆ. ಹಾಗೆ ಗೆಲ್ಲಬೇಕಾದರೆ ಯಾವ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಆರಿಸಿದಲ್ಲಿ ತಮ್ಮ ಪಕ್ಷ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂಬುದಷ್ಟೇ ಪಕ್ಷಕ್ಕೆ ಮುಖ್ಯವಾಗುತ್ತದೆ. ಪ್ರಾಮಾಣಿಕನಾಗಿ ಪ್ರಜಾಂತತ್ರದ ಆಶಯ, ಪಕ್ಷದ ತತ್ತ್ವ-ಸಿದ್ಧಾಂತಗಳಿಗೆ ಬದ್ಧನಾಗಿ ನಡೆದ ವ್ಯಕ್ತಿ ಚುನಾವಣೆಯಲ್ಲ ಗೆಲ್ಲಲಾರ ಎಂದು ಪಕ್ಷಗಳು ಭಾವಿಸಿರುವಂತೆ ತೋರುತ್ತದೆ. ಅಂದರೆ ಇಂದಿನ ರಾಜಕೀಯ ವಿಮರ್ಶೆಗಳು ಪ್ರಜಾಂತಂತ್ರ, ತತ್ತ್ವ-ಸಿದ್ಧಾಂತದಗಳ ಆಶಯದ ಹಿನ್ನೆಲೆಯಲ್ಲಿ ಯಾವ ವ್ಯಕ್ತಿಗೆ ಪಕ್ಷವು ಟಿಕೆಟನ್ನು ಕೊಡುತ್ತದೆಂದು ಅಥವಾ ಈ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಆರಿಸಿದರೆ ಚುನಾವಣೆಯಲ್ಲಿ ಗೆಲ್ಲುತ್ತಾನೆಂದು ಊಹಿಸತ್ತದೆಯೋ, ಅದಕ್ಕೆ ತದ್ವಿರುದ್ಧವಾಗಿ ಪಕ್ಷಗಳು ಆ ರೀತಿಯ ವ್ಯಕ್ತಿಯನ್ನು ಆತನು ಚುನಾವಣೆಯಲ್ಲಿ ಗೆಲ್ಲಲಾರ ಎಂದು ಗುರುತಿಸಿಕೊಂಡು ಟಿಕೆಟನ್ನು ಕೊಡುವುದಿಲ್ಲ. ಅಂದರೆ ಜನರ ಮತದಾನಕ್ಕೂ, ಪಕ್ಷಗಳು ತಮ್ಮ ಅಭ್ಯರ್ಥಿಯ ಆಯ್ಕೆಗೂ ಮತ್ತು ತತ್ತ್ವ-ಸಿದ್ಧಾಂತಗಳ ಚರ್ಚೆಗೂ ಸಂಬಂಧವಿದ್ಧಂತೆ ತೋರುವುದಿಲ್ಲ. ಆದರೂ ಕೂಡ ಭಾರತೀಯ ರಾಜಕಾರಣದ ಚರ್ಚೆಗಳಲ್ಲಿ ಪ್ರಜಾತಂತ್ರ ಮತ್ತು ಪಕ್ಷಗಳು ತಮ್ಮ ತತ್ತ್ವ-ಸಿದ್ಧಾಂತದ ಆಧಾರಿತವಾಗಿ ಜನರಿಂದ ಆಯ್ಕೆಗೊಳ್ಳುವುದರ ಕುರಿತು ವಿಶೇಷ ಚರ್ಚೆಮಾಡಲಾಗುತ್ತದೆ.

ಇಲ್ಲಿ ಇನ್ನೊಂದು ಸೋಜಿಗದ ಸಂಗತಿಯಿದೆ. ಶೆಟ್ಟರ್ ಮತ್ತು ಸವದಿಯವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದನ್ನು ಪ್ರಗತಿಪರರು ಅಭಿನಂದಿಸಿದರು. ಅದಲ್ಲದೆ ಈ ಇಬ್ಬರು ಪ್ರಬಲ ಲಿಂಗಾಯತ ನಾಯಕರ ಈ ನಡೆ ಫ್ಯಾಸಿಸ್ಟ್ ಪಕ್ಷವಾದ ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟಿದೆ. ಆದ್ದರಿಂದ ಇನ್ಮುಂದೆ ಫ್ಯಾಸಿಸ್ಟ್ ಸರ್ಕಾರವಾದ ಬಿಜೆಪಿಯನ್ನು ಸದೆಬಡೆದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಈ ನಾಯಕರುಗಳು ಎತ್ತಿ ಹಿಡಿಯುತ್ತಾರೆಂಬುದು ಪ್ರಗತಿಪರರ ಅಭಿಪ್ರಾಯ. ಆದರೆ ಇದೇ ಪ್ರಗತಿಪರರ ಪ್ರಕಾರ ಶೆಟ್ಟರ್ ಮತ್ತು ಸವದಿಯವರು ಬಿಜೆಪಿ ಪಕ್ಷದಲ್ಲಿ ಇರುವಾಗ ಫ್ಯಾಸಿಸ್ಟ್ ನಾಯಕರಗಳಾಗಿದ್ದರು. ಆದರೆ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದ ತಕ್ಷಣಕ್ಕೆ ಪ್ರಜಾಪ್ರಭುತ್ವದ ಮೌಲ್ಯದ ಪ್ರತಿಪಾದಕರಾದರು. ಅಂದರೆ ಪ್ರಗತಿಪರರಿಗೆ ಒಪ್ಪಿತವಾದ ಒಂದು ಪಕ್ಷವಿದೆ. ಆ ಪಕ್ಷದ ಜೊತೆ ಕಾಣಿಸಿಕೊಂಡವರು ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷರು. ಪ್ರಗತಿಪರರಿಗೆ ಒಪ್ಪಿತವಲ್ಲದ ಪಕ್ಷದ ಜೊತೆ ಕಾಣಿಸಿಕೊಂಡವರು ಫ್ಯಾಸಿಸ್ಟ್ ಗಳು, ಕೋಮುವಾದಿಗಳೂ ಆಗುತ್ತಾರೆ. ಅಂದರೆ ತಮ್ಮವರು ಇತರರು ಎಂದು ಗುರಿತಿಸುವ ಕಪ್ಪು ಬಿಳುಪಿನ ರಾಜಕಾರಣ ಪ್ರಗತಿಪರರದ್ದು. ಈ ಸಮಸ್ಯೆ ಕೇವಲ ಪ್ರಗತಿಪರರದ್ದು ಮಾತ್ರವಲ್ಲ, ಹಿಂದುತ್ವದ ಗುಂಪಿನವರಿಗೂ ಪ್ರಸ್ತುತವೇ.

ಜಾತಿರಾಜಕಾರಣವೆಂಬ ಅರ್ಥವಾಗದ ಮಾತು
ಶೆಟ್ಟರ್ ಮತ್ತು ಸವದಿಯವರು ಬಿಜೆಪಿಯನ್ನು ತೊರೆದ ಮೇಲೆ ಲಿಂಗಾಯತರ ಅವಮಾನದ ಕೂಗು ಕೇಳಿಬರುತ್ತಿದೆ. ಯಾಕೆಂದರೆ ಶೆಟ್ಟರ್ ಮತ್ತು ಸವದಿಯವರು ಪ್ರಬಲವಾದ ಲಿಂಗಾಯತ ನಾಯಕರು. ಲಿಂಗಾಯತರನ್ನು ಅವಮಾನಿಸುವ ಉದ್ದೇಶದಿಂದಲೇ ಬಿಜೆಪಿಯು ಈ ಇಬ್ಬರು ನಾಯಕರುಗಳಿಗೆ ಟಿಕೆಟನ್ನು ಕೊಟ್ಟಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲೇ ರಾಜಕೀಯ ವಿಮರ್ಶೆಯು ಜಾತಿರಾಜಕಾರಣದತ್ತ ಸಾಗಿದೆ. ಜಾತಿಯ ಆಧಾರದ ಮೇಲೆ ಭಾರತದ ಮತದಾನವು ನಿರ್ಧರಿಸಲ್ಪಡುತ್ತದೆ ಎನ್ನುವುದು ರಾಜಕೀಯ ವಿಮರ್ಶಕರ ಮತ್ತು ಹಲವು ಚಿಂತಕರ ಅಭಿಪ್ರಾಯವಾಗಿದೆ. ಆದ್ದರಿಂದ ಈಗಿನ ಚುನಾವಣೆಯಲ್ಲಿ, ಜಾತಿ ರಾಜಕಾರಣದ ನಿರೂಪಣೆಯ ಪ್ರಕಾರ, ಲಿಂಗಾಯತರ ಮತಗಳು ಬಿಜೆಪಿಗೆ ದಕ್ಕುವುದಿಲ್ಲ ಎನ್ನಲಾಗುತ್ತಿದೆ.

ಈ ವಿಮರ್ಶೆಯು ಇನ್ನೂ ಮುಂದಕ್ಕೆ ಸಾಗಿದೆ. ಹುಬ್ಬಳ್ಳಿ ಸೆಂಟ್ರಲ್ನಲ್ಲಿ ಶೆಟ್ಟರ್ ಅವರಿಗೆ ಟಿಕೆಟ್ ಸಿಕ್ಕಿಲ್ಲ ಹಾಗೂ ಯಡಿಯೂರಪ್ಪನವರನ್ನು ಚುನಾವಣೆಯಿಂದ ಹೊರಗಿಡಲಾಗಿದೆ, ಆದ್ದರಿಂದ ಎಲ್ಲ ಲಿಂಗಾಯತರ ಮತಗಳು ಈ ಸಾರಿ ಕಾಂಗ್ರೆಸ್ಸಿಗೆ ಬರುತ್ತವೆ ಅನ್ನುವ ಚರ್ಚೆ ಒಂದು ಕಡೆ. ಇನ್ನೊಂದೆಡೆ ಈ ಬಾರಿ ಬಿಜೆಪಿಯಲ್ಲಿ ಲಿಂಗಾಯತರಿಗೆ ಅತಿ ಹೆಚ್ಚು ಟಿಕೆಟ್ ಗಳನ್ನು ಕೊಟ್ಟಿದ್ದಾರೆ, ಹಾಗಾಗಿ ಲಿಂಗಾಯತರ ಮತಗಳು ಬಿಜೆಪಿಗೆ ಬರದೆ ಕಾಂಗ್ರೆಸ್ಸಿಗೆ ಬರುತ್ತವೆ ಎನ್ನುವುದು ಸರಿಯಲ್ಲ ಎಂದು ವಾದಿಸಲಾಗುತ್ತಿದೆ. ರಾಜಕೀಯ ವಿಶ್ಲೇಷಣೆಕಾರರ ವಿಶ್ಲೇಷಣೆಗಳು ಇಷ್ಟಕ್ಕೆ ಮುಗಿಯುವುದಿಲ್ಲ. ಹುಬ್ಬಳ್ಳಿ ಸೆಂಟ್ರಲ್ ವಿಚಾರಕ್ಕೆ ಬಂದಾಗ ಇದು ಇನ್ನೂ ಒಂದು ನಿರ್ದಿಷ್ಟ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಈ ಕ್ಷೇತ್ರದಲ್ಲಿ ಯಾವ ಸಮುದಾಯದವರು ಎಷ್ಟಿದ್ದಾರೆ ಎಂಬ ಲೆಕ್ಕಾಚಾರ ಹಾಕಿ ವಿಶ್ಲೇಷಣೆ ನಡೆಸಲಾಗುತ್ತದೆ. ಹುಬ್ಬಳ್ಳಿ ಸೆಂಟ್ರಲ್-ನಲ್ಲಿ ಬಣಜಿಗರು ಮತ್ತು ಪಂಚಮಸಾಲಿ ಲಿಂಗಾಯತರು ಜಾಸ್ತಿ ಇದ್ದಾರೆ. ಬಿಜೆಪಿಯವರು ಪಂಚಮಸಾಲಿಗೆ ಮೀಸಲಾತಿ ಕೊಟ್ಟಿದ್ದಾರೆ. ಹಾಗಾಗಿ ಜಗದೀಶ್ ಶೆಟ್ಟರ್ ಬಣಜಿಗರಾಗಿವುದರಿಂದ ಅವರಿಗೆ ಪೂರಕವಾಗುತ್ತೋ ಮಾರಕವಾಗುತ್ತೋ ಅನ್ನುವ ಲೆಕ್ಕಾಚಾರ ನಡೆಯುತ್ತಿದೆ. ಕೆಲ ರಾಜಕೀಯ ವಿಶ್ಲೇಷಕರು ಶೆಟ್ಟರ್ ವಿರುದ್ಧ ನಿಂತಿರುವ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ, ಇವರ ತಾಯಿ ಬಣಜಿಗ ಮತ್ತು ತಂದೆ ಪಂಚಮಸಾಲಿ, ಹಾಗಾಗಿ ಈ ಎರಡೂ ಸಮುದಾಯದ ಮತಗಳು ಮಹೇಶರಿಗೆ ಬರುತ್ತವೆ ಎನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ. ಇದಲ್ಲದೇ ಈ ಜಾತಿರಾಜಕಾರಣದ ವಿಮರ್ಶೆಯಲ್ಲಿ ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡಗಳ(ST) ಮತದಾನದ ಚರ್ಚೆಯೂ ಸಹ ನಡೆಯುತ್ತದೆ.

ಈ ವಿಮರ್ಶೆಗಳನ್ನು ಇಟ್ಟುಕೊಂಡು ರಾಜಕೀಯವನ್ನು ಗ್ರಹಿಸುವುದಕ್ಕೆ ಸಾಧ್ಯವಿದೆಯೇ? ಈ ವಿಮರ್ಶೆಗಳ ಮೂಲಕ ಯಾವ ರಾಜಕಾರಣಿಯು ಗೆಲ್ಲುತ್ತಾನೆಂದು ಊಹಿಸಬಹುದಾಗಿದೆಯೇ? ಈ ವಿಮರ್ಶೆಗಳು ನಮ್ಮ ರಾಜಕೀಯವು ಹೇಗೆ ನಡೆಯುತ್ತದೆ ಎಂಬುದನ್ನಾಗಲಿ ಯಾವ ರಾಜಕಾರಣಿ ಗೆಲ್ಲುತ್ತಾನೆ ಎಂಬುದನ್ನಾಗಲಿ ವಿವರಿಸುವುದಿಲ್ಲ. ಕೇವಲ ಲಿಂಗಾಯತರ ಮತಗಳ ಆಧಾರದ ಮೇಲೆ ಯಾರು ಗೆಲ್ಲುತ್ತಾರೆ ಎನ್ನಲು ಸಾಧ್ಯವಿಲ್ಲ. ಇತರ ಜಾತಿಗಳ ಲೆಕ್ಕಾಚಾರ ಇಟ್ಟುಕೊಂಡು ರಾಜಕೀಯವನ್ನು ವಿವರಿಸಲು ಸಾಧ್ಯವೇ? ಅದೂ ಸಾಧ್ಯವಿಲ್ಲ. ಯಾಕೆಂದರೆ ಕೆಲವೇ ಬ್ರಾಹ್ಮಣರ ಮತಗಳಿರುವ ಯಾವುದೋ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಅಭ್ಯರ್ಥಿ ಗೆದ್ದು ಬರುತ್ತಾನೆ.

ಜಾತಿರಾಜಕಾರಣದ ವಿಮರ್ಶೆಯು ಈ ರೀತಿಯ ವಿದ್ಯಮಾನಗಳನ್ನು ವಿವರಿಸಲು ಸೋಲುತ್ತದೆ. ಇಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಲಿಂಗಾಯತರೆಲ್ಲ ಶೆಟ್ಟರಿಗೆ ಮತ್ತು ಸವದಿಯವರಿಗೆ ಮತದಾನ ಮಾಡುತ್ತಾರೆ ಎನ್ನಲು ಸಾಧ್ಯವೇ? ಶೆಟ್ಟರ್ ಬಣಜಿಗರು ಮತ್ತು ಸವದಿಯವರು ಗಾಣಿಗರಾಗಿರುವ ಕಾರಣಕ್ಕೆ ಎಲ್ಲ ಬಣಜಿಗರು ಮತ್ತು ಗಾಣಿಗರ ಮತಗಳು ಇವರಿಗೆ ಬರುತ್ತವೆಯೇ? ಶೆಟ್ಟರಿಗೆ ಮತ್ತು ಸವದಿಯವರಿಗೆ ಟಿಕೆಟ್ ಕೊಡದ ಕಾರಣಕ್ಕೆ ಬಣಜಿಗ ಮತ್ತು ಗಾಣಿಗ ಲಿಂಗಾಯತರು ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದಾದರೆ, ಮೀಸಲಾತಿ ಸೌಕರ್ಯವನ್ನು ಒದಗಿಸಿದ್ದಕ್ಕೆ ಪಂಚಮಸಾಲಿ ಲಿಂಗಾಯತರು ಮತ್ತು ಸಾದರ ಲಿಂಗಾಯತರು ಬಿಜೆಪಿ ಪರವಾಗಿದ್ದಾರೆ ಎಂದು ಹೇಳಬೇಕಾಗುತ್ತದೆ. ಈ ರಾಜಕೀಯ ವಿಮರ್ಶೆಯಲ್ಲಿ ಯಾರೂ ಏನನ್ನು ಬೇಕಾದರೂ ಹೇಳಬಹುದು. ಜಗದೀಶ್ ಶೆಟ್ಟರ್ ಅಥವಾ ಮಹೇಶ್ ಟೆಂಗಿನಕಾಯಿ ಇಬ್ಬರಲ್ಲಿ ಒಬ್ಬರು ಗೆಲ್ಲುತ್ತಾರೆ ಅಂದುಕೊಳ್ಳೋಣ. ಶೆಟ್ಟರ್ ಗೆದ್ದರೆ ಅಲ್ಲಿ ಬಣಜಿಗರ ಮತಗಳು ಜಾಸ್ತಿ ಇದ್ದವು ಹಾಗಾಗಿ ಗೆದ್ದರು ಎನ್ನುವುದು. ಅದೇ ಮಹೇಶರು ಗೆದ್ದರೆ ಅವರ ತಾಯಿ ಬಣಜಿಗರು, ತಂದೆ ಪಂಚಮಸಾಲಿ ಹೀಗಾಗಿ ಗೆದ್ದರು ಎನ್ನುವುದು. ಒಟ್ಟಾರೆಯಾಗಿ ಜಾತಿ ಎಂದರೇನು ಎಂಬುದರ ಅರಿವೇ ಇಲ್ಲದೆ ಜಾತಿರಾಜಕಾರಣದ ಸುತ್ತ ಚರ್ಚೆ ನಡೆಯುತ್ತಿದೆ.

ಜಾತಿರಾಜಕಾರಣದ ಈ ಚರ್ಚೆಯಲ್ಲಿ ಲಿಂಗಾಯತ ಜಾತಿಯೋ? ಬಣಜಿಗ, ಗಾಣಿಗ, ಪಂಚಮಸಾಲಿ ಇವುಗಳು ಜಾತಿಗಳೋ ಎನ್ನುವುದು ಗೊತ್ತಾಗುವುದಿಲ್ಲ. ಅಥವಾ ಲಿಂಗಾಯತ ಜಾತಿಯಲ್ಲಿ ಬಣಜಿಗ, ಗಾಣಿಗ, ಪಂಚಮಸಾಲಿ ಇವುಗಳು ಉಪಜಾತಿಗಳೋ? ಇವು ಉಪಜಾತಿಗಳಾದರೆ ಇದು ಜಾತಿರಾಜಕಾರಣವು ಹೇಗಾಗುತ್ತದೆ? ಇದನ್ನು ಉಪಜಾತಿ ರಾಜಕಾರಣ ಎಂದು ಕರೆಯಬೇಕಾಗುತ್ತದೆ. ಜಾತಿ ರಾಜಕಾರಣದ ಈ ರಾಜಕೀಯ ವಿಮರ್ಶೆಗಳನ್ನು ಗಮನಿಸಿದರೆ ಜಾತಿ ಎಂದು ಚರ್ಚಿಸುವಾಗ ಯಾವ ರೀತಿಯ ಗುಂಪುಗಳ ಕುರಿತು ಚರ್ಚಿಸಲಗುತ್ತಿದೆ ಎಂದು ತಿಳಿಯುವುದಿಲ್ಲ. ಇಲ್ಲಿ ಲಿಂಗಾಯತ ಜಾತಿಯೇ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಲಿಂಗಾಯತ ಯಾಕೆ ಜಾತಿಯಾಗಬೇಕು? ಬಣಜಿಗ, ಗಾಣಿಗ, ಪಂಚಮಸಾಲಿ ಇವುಗಳು ಯಾಕೆ ಜಾತಿಗಳಾಗಬಾರದು? ಇವುಗಳೆಲ್ಲ ಉಪಜಾತಿಗಳಾದರೆ ಯಾಕಿವು ಉಪಜಾತಿಗಳು? ಇವು ಈ ಜಗತ್ತಿನ ಯಾವ ರೀತಿಯ ವಿದ್ಯಮಾನಗಳು ಎನ್ನುವುದರ ಬಗ್ಗೆ ನಮಗಿಂದು ತಿಳಿವಳಿಕೆ ಇದ್ದಂತಿಲ್ಲ.

ಅಂದರೆ ಭಾರತದಲ್ಲಿ ಚುನಾವಣೆಯ ರಾಜಕಾರಣ ಜಾತಿಯ ಮೇಲೆ ನಿರ್ಧಾರಿತವಾಗುತ್ತದೆ ಎನ್ನುವವರಿಗೆ ತಾವು ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದರ ಸ್ಪಷ್ಟತೆಯಿಲ್ಲ. ಚುನಾವಣೆಯ ಫಲಿತಾಂಶಗಳನ್ನು ಯಾವುದೋ ಒಂದು ಚೌಕಟ್ಟಿನಲ್ಲಿ ಇರಿಸುವ ಪ್ರಯತ್ನವು ರಾಜಕೀಯ ವಿಮರ್ಶಕರದ್ದು. ಹೊರತಾಗಿ ತಮ್ಮ ಚೌಕಟ್ಟಿನಿಂದ ಇವರು ಗೆಲ್ಲುತ್ತಾರೆ, ಈ ರೀತಿಯ ರಾಜಕಾರಣವು ನಡೆಯುತ್ತಿದೆ, ಈ ರೀತಿಯ ಫಲಿತಾಂಶವು ಬರುತ್ತದೆ ಎನ್ನುವುದನ್ನು ವಿವರಿಸಲು ಸಾಧ್ಯವಿಲ್ಲ. ಹಾಗಾಗಿ ಜಾತಿರಾಜಕಾರಣದ ಚರ್ಚೆಯು ವಿಮರ್ಶೆಯು ಒಂದು ಅರ್ಥಹೀನ ಮಾತಿನಂತೆ ಭಾಸವಾಗುತ್ತದೆ.

ಎತ್ತು ಏರಿಗೆ ಕೋಣ ನೀರಿಗೆ
ಈಗಾಗಲೇ ನೋಡಿದಂತೆ ಇಂದಿನ ರಾಜಕೀಯ ವಿಮರ್ಶೆಗಳು, ರಾಜಕಾರಣವು ತತ್ತ್ವ-ಸಿದ್ಧಾಂತ, ಐಡಿಯಾಲಜಿಗಳ ಮೇಲೆ ನಿಂತಿದೆ ಎಂದು ವಿವರಿಸಲು ಯತ್ನಿಸುತ್ತವೆ. ಜಾತಿಗಳ ಆಧಾರದ ಮೇಲೆ ರಾಜಕಾರಣವು ನಿಂತಿದೆಯೆಂದು ಬಿಂಬಿಸಲು ಯತ್ನಿಸುತ್ತವೆ. ಆದರೆ ವಿಮರ್ಶೆಗಳಾಚೆಗಿನ ರಾಜಕೀಯ ಪಕ್ಷದ ಮತ್ತು ರಾಜಕಾರಣಿಗಳ ನಡೆ, ನಿಲುವುಗಳು ಈ ವಿಮರ್ಶೆಯನ್ನು ತಲೆಕೆಳಗೆ ಮಾಡುತ್ತವೆ. ಈ ವಿಮರ್ಶೆಗಳ ವಿಫಲತೆಯನ್ನು ಎತ್ತಿ ತೋರಿಸುತ್ತವೆ.
ಭಾರತದ ಪ್ರಜಾತಂತ್ರದ ರಾಜಕಾರಣದ ಚರ್ಚೆಯ ಬಹುಮುಖ್ಯ ವಿಷಯವೆಂದರೆ ಜನ ಪ್ರತಿನಿಧಿಗಳ ಆಯ್ಕೆ. ಕೆಲವು ರಾಜಕಾರಣಿಗಳು ಚುನಾವಣೆಯ ಮೂಲಕ ಜನರನ್ನು ಪ್ರತಿನಿಧಿಸುವ ಅಧಿಕಾರವನ್ನು ಪಡೆದುಕೊಳ್ಳುವ ಪ್ರಕ್ರಿಯೆ ಇಲ್ಲಿ ಅತ್ಯಂತ ಮುಖ್ಯವೂ ಹಾಗೂ ಪ್ರಜಾತಂತ್ರದ ಹೃದಯವೂ ಆಗಿದೆಯೆಂದು ವಿವರಿಸಲಾಗುತ್ತದೆ.

ಇಲ್ಲಿ ನಮಗಿರುವ ಮುಖ್ಯ ಪ್ರಶ್ನೆಯೆಂದರೆ ಜನರ ಪರವಾಗಿ ಒಬ್ಬ ರಾಜಕಾರಣಿಯು ಭಾರತದಲ್ಲಿ ಏನನ್ನು ಪ್ರತಿನಿಧಿಸುತ್ತಾನೆ? ಜನರು ಯಾವ ಜನ-ಪ್ರಾತಿನಿಧ್ಯಕ್ಕೆ ತಮ್ಮ ಮತದಾನವನ್ನು ಮಾಡುತ್ತಾರೆ ಎನ್ನುವುದಾಗಿದೆ. ಇಲ್ಲಿ ಒಬ್ಬ ರಾಜಕಾರಣಿಯು ಯಾವುದೇ ತತ್ತ್ವ-ಸಿದ್ಧಾಂತವನ್ನು ಪ್ರತಿನಿಧಿಸುತ್ತಾನೆ ಎನ್ನಲು ಬಾರದು. ಯಾಕೆಂದರೆ ಈಗ ಫ್ಯಾಸಿಸ್ಟ್ ಮತ್ತು ಕೋಮುವಾದಿಯಾಗಿರುವ ರಾಜಕಾರಣಿಯು ಗಂಟೆಯೊಳಗಾಗಿ ಸೆಕ್ಯುಲರ್ ಆಗಬಲ್ಲ. ಎಸ್.ವಿ.ದತ್ತರಂತಹ ಕೆಲ ರಾಜಕಾರಣಿಗಳು ಸರಾಗವಾಗಿ ಜೆಡಿಎಸ್, ಕಾಂಗ್ರೆಸ್ ಅಥವಾ ಇನ್ನು ಯಾವುದೇ ಪಕ್ಷಕ್ಕೆ ಬೇಕಾದರೂ, ಯಾವಾಗ ಬೇಕಾದರೂ ಹೋಗಿ ಬರಬಲ್ಲರು. ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ ಹಿಂದೆ ಬಿಜೆಪಿಯನ್ನು ಫ್ಯಾಸಿಸ್ಟ್, ಕೋಮುವಾದಿಯೆಂದು ಬಯ್ಯುತ್ತಿದ್ದರು. ಇವತ್ತು ಅವರೆಲ್ಲ ಅದೇ ಬಿಜೆಪಿಯ ನಾಯಕರು, ಹಿಂದುತ್ವವಾದಿಗಳು ಆಗಿರುವರು. ಹಿಂದಿನ ಸೆಕ್ಯುಲರ್ ನಾಯಕರುಗಳು ಇಂದು ಬಿಜೆಪಿಯ ಹಿಂದುತ್ವವಾದಿಗಳು. ಹಾಗೆಯೇ ನಿನ್ನೆಯ ತನಕ ಪ್ರಖರ ಹಿಂದುತ್ವವಾದಿಯಾಗಿದ್ದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ರಾತ್ರೋರಾತ್ರಿ ಸೆಕ್ಯುಲರ್-ಗಳಾಗಿದ್ದಾರೆ. ಹಾಗಿದ್ದರೆ ರಾಜಕಾರಣಿಯೊಬ್ಬನನ್ನು ಮತದಾರ ತನ್ನ ಪರವಾಗಿ ಯಾವುದೋ ಒಂದು ತತ್ತ್ವ-ಸಿದ್ಧಾಂತವನ್ನು ಪ್ರತಿನಿಧಿಸಲು ಚುನಾಯಿಸಿದ್ದಾನೆ ಎನ್ನುವುದು ಕಷ್ಟ.

ಅಂತೆಯೇ ಈ ಜನಪ್ರತಿನಿಧಿಯನ್ನು ಜನರು ಯಾವುದೋ ಜಾತಿಯನ್ನು ಪ್ರತಿನಿಧಿಸಲು ಚುನಾಯಿಸಿದ್ದಾರೆ ಎನ್ನಲಾಗದು. ಅಷ್ಟೇ ಅಲ್ಲದೇ ಯಾವ ರಾಜಕೀಯ ವಿಮರ್ಶೆಗಳಿಗೂ ಸಹ ಜಾತಿ ಎಂದರೇನು ಎಂಬುದೇ ಸ್ಪಷ್ಟವಿಲ್ಲದಿರುವಾಗ ಒಬ್ಬ ರಾಜಕಾರಣಿಯು ಜಾತಿಯನ್ನು ಪ್ರತಿನಿಧಿಸುತ್ತಾನೆ ಎನ್ನುವುದು ಅರ್ಥಹೀನ ಮಾತು. ಹಾಗಿರುವಾಗ ರಾಜಕಾರಣಿಯೊಬ್ಬ ಏನನ್ನು ಪ್ರತಿನಿಧಿಸುತ್ತಿದ್ದಾನೆ ಮತ್ತು ಜನರು ಯಾವ ಜನ-ಪ್ರಾತಿನಿಧ್ಯಕ್ಕೆ ತಮ್ಮ ಮತದಾನ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯು ಬರುತ್ತದೆ.

ಈ ಎಲ್ಲ ಘಟನೆಗಳನ್ನು ನೋಡಿದಾಗ ಭಾರತೀಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾತಿನಿಧ್ಯ ಮತ್ತು ಮತದಾನಗಳ ಕುರಿತು ಪ್ರಶ್ನೆಯು ಮೂಡುತ್ತದೆ. ಭಾರತದ ರಾಜಕೀಯದ ಕುರಿತ ನಮ್ಮ ಅರಿವಿಗೆ ಈ ಘಟನಾವಳಿಗಳು ಸವಾಲನ್ನು ಒಡ್ಡುತ್ತವೆ. ನಮಗೆ ಸಂಬಂಧವೇ ಇಲ್ಲದ ಪ್ರಭುತ್ವದ ಒಂದು ಮಾದರಿಯನ್ನು ನಾವು ತಂದುಕೊಂಡಿದ್ದೇವೆ. ಅದನ್ನು ನಾವು ‘ಉದಾರವಾದಿ ಪ್ರಜಾಪ್ರಭುತ್ವ ವ್ಯವಸ್ಥೆ’ ಎಂದು ಕರೆಯುತ್ತೇವೆ. ಅಂದರೆ ಅದು ಪ್ರಾತಿನಿಧ್ಯದ ಒಂದು ವ್ಯವಸ್ಥೆ. ನನ್ನ ಮತದಿಂದ ನನ್ನ ಪ್ರತಿನಿಧಿಯನ್ನು ಚುನಾಯಿಸುವುದು ಎನ್ನುವುದು ಇದರ ಅರ್ಥವಿದೆ. ಇದು ಸಂವಿಧಾನದ ಅಡಿಯಲ್ಲಿ ನಾವು ಸಾಂಸ್ಥಿಕವಾಗಿ ಕಟ್ಟಿಕೊಂಡಿರುವ ಒಂದು ವ್ಯವಸ್ಥೆ. ಆದರೆ ಇದರ ಜೊತೆಗೆ ನಾವು ವ್ಯವಹಾರ ಮಾಡುತ್ತಿರುವುದು ಹೇಗೆ? ಮತದಾರರು ಮತ ಹಾಕುತ್ತಿರುವುದು ಯಾವ ಕಾರಣಕ್ಕಾಗಿ ಎನ್ನುವುದು ಇನ್ನೂ ನಮಗೆ ಗೊತ್ತಿಲ್ಲ.

ಪಶ್ಚಿಮದಿಂದ ಆಮದು ಮಾಡಿಕೊಂಡ ಈ ಪ್ರಜಾಪ್ರಭುತ್ವದ ವ್ಯವಸ್ಥೆಯೊಡನೆ ಭಾರತೀಯರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಇಲ್ಲಿ ಅರ್ಥವಾಗುತ್ತಿಲ್ಲ. ರಾಜಕೀಯ ವಿಮರ್ಶೆಗಳು ಪಶ್ಚಿಮದಲ್ಲಿ ಬೆಳೆದ ರಾಜಕೀಯ ಸಿದ್ಧಾಂತಗಳ ಆಧಾರದ ಹಿನ್ನೆಲೆಯಲ್ಲಿ ಭಾರತದ ರಾಜಕೀಯವನ್ನು ಗ್ರಹಿಸಿಕೊಳ್ಳಲು ಯತ್ನಿಸುತ್ತಿವೆ. ಆದರೆ ಪ್ರತಿಬಾರಿಯೂ ಈ ರಾಜಕೀಯ ವಿಮರ್ಶೆಗಳೂ ಸಹ ಭಾರತದ ರಾಜಕೀಯವನ್ನು ಗ್ರಹಿಸಿಕೊಳ್ಳಲು ಮತ್ತು ವಿವರಿಸಲು ಸೋಲುತ್ತವೆ. ಎತ್ತು ಏರಿಗೆ, ಕೋಣ ನೀರಿಗೆ ಎನ್ನುವ ಮಾತಿನಂತೆ ರಾಜಕೀಯ ವಿಮರ್ಶೆಗಳು ಒಂದೆಡೆಯಾದರೆ, ಈ ವಿಮರ್ಶೆಗಳಾಚೆಗೆ ರಾಜಕೀಯವು ಇನ್ನೊಂದು ದಿಕ್ಕಿನಲ್ಲಿ ನಡೆಯುತ್ತ ಸಾಗಿದೆ. ರಾಜಕೀಯ ವಿಮರ್ಶೆಗೂ ಭಾರತದಲ್ಲಿ ನಡೆಯುವ ರಾಜಕೀಯಕ್ಕೂ ಏನೂ ಸಂಬಂಧವಿದ್ಧಂತೆ ತೋರುವುದಿಲ್ಲ. ರಾಜಕೀಯ ಸಿದ್ಧಾಂತಗಳು ಪಶ್ಚಿಮದ್ದು ಎನ್ನುವ ಕಾರಣಕ್ಕೆ ಈ ಮೇಲಿನ ಸಮಸ್ಯೆಗಳಿವೆ ಎಂಬುದು ನಮ್ಮ ವಾದವಲ್ಲ. ಈ ರಾಜಕೀಯ ಸಿದ್ಧಾಂತಗಳು ಪಶ್ಚಿಮಕ್ಕಿಂತ ವಿಭಿನ್ನವಾಗಿ ಭಿನ್ನವಾಗಿರುವ ಭಾರತೀಯ ಸಂಸ್ಕೃತಿಯ ರಾಜಕೀಯ ವಿದ್ಯಮಾನಗಳನ್ನು ವಿವರಿಸಲು ಅಸಫಲವಾಗುತ್ತಿರುವುದು ಸಮಸ್ಯೆ. ಆದ್ದರಿಂದ ಭಾರತದ ರಾಜಕೀಯವನ್ನು ಗ್ರಹಿಸುವಂತಹ ಪರ್ಯಾಯ ರಾಜಕೀಯ ಚಿಂತನೆ ಮತ್ತು ಸಿದ್ಧಾಂತಗಳನ್ನು ಬೆಳೆಸುವ ಅವಶ್ಯಕತೆಯು ಅನಿವಾರ್ಯತೆಯೂ ಇದೆ. ಆ ರೀತಿಯ ಚಿಂತನೆಗಳನ್ನು ಗ್ರಹಿಸದಿದ್ದರೆ ಪ್ರಜಾತಂತ್ರದ ಹೆಸರಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ.

ಲೇಖಕರು:
ಎಮ್.ಎಸ್.ಚೈತ್ರ: ಸಹ ಪ್ರಾಧ್ಯಾಪಕರು ಮತ್ತು ನಿರ್ದೇಶಕರು, ಸೆಂಟರ್ ಫಾರ್ ಸ್ಟಡೀಸ್ ಆಫ್ ಕಲ್ಚರ್ಸ್, ಚಾಣಕ್ಯ ವಿಶ್ವವಿದ್ಯಾನಿಲಯ, ಬೆಂಗಳೂರು
ರಾಮಕೃಷ್ಣ ಭಟ್ಟ: ಸಂಶೋಧಕರು, ಚಾಣಕ್ಯ ವಿಶ್ವವಿದ್ಯಾನಿಲಯ, ಬೆಂಗಳೂರು
ಶಿವಾನಂದ ಸೈದಾಪುರ: ಸಂಶೋಧಕರು, ಚಾಣಕ್ಯ ವಿಶ್ವವಿದ್ಯಾನಿಲಯ, ಬೆಂಗಳೂರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
1 Comment

1 Comments

  1. Rajaram Hegde

    7 ಮೇ 2023, 7:05 ಅಪರಾಹ್ನ at 7:05 ಅಪರಾಹ್ನ

    ಒಳ್ಳೆಯ ವಿಶ್ಲೇಷಣೆ.ನಮ್ಮ ರಾಜಕೀಯ ಚಿಂತಕರಿಗೇಕೆ ಇಂಥ ಪ್ರಶ್ನೆಗಳು ಏಳುವುದಿಲ್ಲವೆಂದರೆ ಅವರು ತಮ್ಮ ಅನುಭವದ ಕುರಿತು ಆಲೋಚಿಸುವುದನಗನು ನಿಲ್ಲಿಸಿದ್ದಾರೆ. ಭಾರತೀಯರಾಜಕಾರಣಕ್ಕೆ ಇಂಥ ಅವಾಸ್ತವಿಕ, ಅಪ್ರಸ್ತುತ ಚಿಂತನೆಗಳು ವಸಾಹತು ಪ್ರಜ್ಞೆಯನ್ನು ಗಟ್ಟಿಗೊಳಿಸುವ ಮಹತ್ಕಾರ್ಯವನ್ನಷ್ಟೆ ಮಾಡಬಲ್ಲವು.

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಅಂಕಣ

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧ ಹೇಗಿತ್ತು?

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧದ ಅಪರೂಪದ ಸನ್ನಿವೇಶ ಇಲ್ಲಿದೆ. ವಾನರೇಂದ್ರನ ಮಂತ್ರಿ ಕೋಸಲೇಂದ್ರನ ದಾಸನಾದ ಪ್ರಸಂಗವಿದು.

VISTARANEWS.COM


on

By

dhavala dharini column Hanuman's setubandha to meet Sugriva in ramayana by narayana yaji
Koo

ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧದ ಅಪರೂಪದ ಸನ್ನಿವೇಶ

dhavala dharini by Narayana yaji

ಧವಳ ಧಾರಿಣಿ ಅಂಕಣ: ಭವತಾ ಸಖ್ಯಕಾಮೌ ತೌ ಭ್ರಾತರೌ ರಾಮಲಕ್ಷ್ಮಣೌ.
ಪ್ರತಿಗೃಹ್ಯಾರ್ಚಯಸ್ವೈತೌ ಪೂಜನೀಯತಮಾವುಭೌ৷৷ ಕಿ.5.7৷৷

ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು

ರಾಮಾಯಣದ ಕಿಷ್ಕಿಂಧಾಕಾಂಡದಿಂದ ತೊಡಗಿ ಯುದ್ಧ ಕಾಂಡದಕೊನೆಯ ತನಕ ಸುಗ್ರೀವ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. ಅನೇಕ ಸಲ ಆತನ ವ್ಯಕ್ತಿತ್ವ ಮರ್ಕಟ ಸ್ವಭಾವಕ್ಕೆ ಅನುಗುಣವಾಗಿದೆ. ವಾಲಿಯನ್ನು ಸಂಹರಿಸಿದ ನಂತರದಲ್ಲಿ ಸೀತಾನ್ವೇಷಣೆಗೆ ಪ್ರಾರಂಭಿಸಿದನೋ, ಅಲ್ಲಿಂದ ಆತ ತುಂಬಾ ಪ್ರೌಢತ್ವದಿಂದಲೇ ವ್ಯವಹರಿಸುತ್ತಾನೆ. ಸುಗ್ರೀವನ ಜೊತೆ ರಾಮನ ಸಖ್ಯದಲ್ಲಿ ಆತನ ವ್ಯವಹಾರ ಮೇಲ್ನೋಟಕ್ಕೆ ಚಂಚಲತೆಯಿಂದ ಕೂಡಿತ್ತು ಎಂದು ತೋರಿದರೂ ವಾಸ್ತವವಾಗಿ ಆತ ಸೂಕ್ಷ್ಮವಾಗಿ ಎದುರಾದವರನ್ನು ಅಭ್ಯಸಿಸುತ್ತಿದ್ದ. ವಾಲಿ ಆತನನ್ನು ರಾಜ್ಯದಿಂದ ಹೊರಗಟ್ಟಿ ಆತನನ್ನು ಕೊಲ್ಲಬೇಕೆಂದು ಇಡೀ ಪ್ರಪಂಚವನ್ನೆಲ್ಲಾ ಓಡಾಡಿಸಿದ ವಿಷಯವನ್ನು ಸವಿಸ್ತಾರವಾಗಿ ಹಿಂದಿನ ಸಂಚಿಕೆಯಲ್ಲಿ ಗಮನಿಸಿದ್ದೇವೆ. ಮತಂಗ ಋಷಿಯ ಶಾಪದ ಕಾರಣಕ್ಕೆ ವಾಲಿಗೆ ಮತಂಗಾಶ್ರಮವಿರುವ ಋಷ್ಯಮೂಕ ಪರ್ವತವನ್ನು ತನ್ನ ಅಡಗುದಾಣವನ್ನಾಗಿಸಿಕೊಂಡ. ಋಷ್ಯಮೂಕ ಪರ್ವತಕ್ಕೆ ಆ ಹೆಸರು ಬಂದಿರುವುದಕ್ಕೆ ಕಾರಣ ಅದು ತಪಸ್ವಿಗಳ ಜ್ಞಾನಾರ್ಜನಗೆ ಹೇಳಿ ಮಾಡಿಸಿದ ಸ್ಥಳವಾಗಿತ್ತು ಎನ್ನುವ ಕಾರಣಕ್ಕಾಗಿ. ಋಷೀಣಾಂ ತತ್ರ ಪ್ರಾಪ್ವಾನಾಂ ಅಮೂಕಃ- ಅಲ್ಲಿಗೆ ಹೋದ ಋಷಿಗಳ ಅಜ್ಞಾನವು ಹೋಗಿಬಿಡುತ್ತಿತ್ತು ಹಾಗಾಗಿ ಆ ಪರ್ವತಕ್ಕೆ ಋಷ್ಯಮೂಕವೆನ್ನುವ ಹೆಸರು ಬಂತು. ಮೌನಿಗಳಾದ ಋಷಿಗಳ ಪರ್ವತ ಎನ್ನುವ ಇನ್ನೊಂದು ಅರ್ತವೂ ಋಷ್ಯಮೂಕಕ್ಕೆ ಇದೆ. ಅಲ್ಲಿ ಮತಂಗ ಮುನಿಗಳು ಮೌನವಾಗಿಯೇ ತಪಸ್ಸಿಗೆ ಕುಳಿತಿರುತ್ತಿದ್ದರು.

ದುಂದುಭಿಯಂತಹ ರಾಕ್ಷಸನನ್ನು ಕೊಂದು ವಾಲಿ ಲೋಕಕ್ಕೆ ಉಪಕಾರವನ್ನು ಮಾಡಿದರೂ ಆತನಿಗೆ ಶಾಪ ಏತಕ್ಕೆ ಬಂತು ಎಂದು ಅನುಕಂಪ ಬರುವುದು ಸಹಜ. ವಾಲಿ ಮತ್ತು ದುಂದುಭಿಯ ಜಗಳದ ಹಿನ್ನೆಲೆಯನ್ನು ಗಮನಿಸಬೇಕು. ದುಂದುಭಿ ಕೋಣನ ಆಕಾರವನ್ನು ಹೊಂದಿದ್ದ ರಾಕ್ಷಸ. ಆತನಿಗೆ ಸಾವಿರ ಆನೆಯ ಬಲವಿತ್ತು. ತನ್ನ ಪರಾಕ್ರಮವನ್ನು ತೋರುವ ಹುಚ್ಚು. ಆ ಕಾರಣಕ್ಕಾಗಿ ಆತ “ಮಹ್ಯಂ ಯುದ್ಧ ಪ್ರಯಚ್ಛ- ನನಗೆ ಯುದ್ಧದ ಆತಿಥ್ಯವನ್ನು ನೀಡಿ” ಎಂದು ಎಲ್ಲಾ ಬಲಶಾಲಿಗಳ ಹತ್ತಿರ ಹೋಗಿ ಕೇಳಿದ್ದ. ಮೊದಲು ಆತ ಹೋಗಿದ್ದು ಸಮುದ್ರ ರಾಜನಲ್ಲಿಗೆ.

ಮುದ್ರದೊಡಯನಿಗೆ ಆತನೊಡನೆ ಯುದ್ಧ ಮಾಡುವ ಸಾಮರ್ಥ್ಯವಿಲ್ಲವೆಂದು ಅರ್ಥವಲ್ಲ; ಇದು ವೃಥಾ ಜಗಳ, ಅದರಿಂದ ತನ್ನೊಡಲಲ್ಲಿದ್ದ ಜಲಚರಗಳಿಗೆ ತೊಂದರೆಯಾಗುತ್ತದೆ ಎಂದು ಆತ ಪರ್ವತಗಳ ರಾಜನಾದ ಹಿಮವಂತನನ್ನು ತೋರಿಸಿದ. ಆತ ದುಂದುಭಿಯ ಆಹ್ವಾನವನ್ನು ನಿರಾಕರಿಸುವ ಕಾರಣ ತನ್ನಲ್ಲಿ ಸತ್ವಗುಣಶೀಲರಾದ ತಪಸ್ವಿಗಳು ತಪಸ್ಸನ್ನು ಮಾಡುತ್ತಿದ್ದಾರೆ. ಅವರ ತಪಸ್ಸಿಗೆ ಭಂಗಬಾರದೆನ್ನುವಕಾರಣಕ್ಕಾಗಿ ಜಗಳಕ್ಕೆ ಬರಲು ಒಪ್ಪುವುದಿಲ್ಲ. ಜಗಳವೆನ್ನುವುದು ಇನ್ನೊಬ್ಬರ ಶಾಂತತೆಗೆ ಭಂಗತರುವಂತಹುದಾಗಬಾರದು ಎನ್ನುವ ವಿವೇಕ ಇರಬೇಕು. ಸಮುದ್ರರಾಜನಾಗಲಿ, ಹಿಮವಂತನಾಗಲೀ ದುಂದುಭಿಯ ಯುದ್ಧಾಹ್ವಾನವನ್ನು ತಿರಸ್ಕರಿಸಿದರು ಎಂದ ಕಾರಣಕ್ಕೆ ಅವರು ಸಣ್ಣವರೇನೂ ಆಗಲಿಲ್ಲ. ವಾಲಿ ಜಗಳಕ್ಕೆ ಒಪ್ಪಿದ್ದೂ ಅಲ್ಲದೇ ಯುದ್ಧಮಾಡಿ ಆ ರಾಕ್ಷಸನನ್ನು ಕೊಂದಮೇಲೆ ಆತನ ದೇಹವನ್ನು ಒಂದು ಯೋಜನದಷ್ಟು ದೂರ ಎಸೆದನು. ಆಗ ಸಿಡಿದ ರಕ್ತದ ಹನಿಗಳೂ ಮತಂಗ ಆಶ್ರಮದಲ್ಲಿ ಬಿದ್ದು ಆಶ್ರಮ ಮಲಿನವಾಯಿತು. ಸತ್ತಮೇಲೆ ವೈರವಿರಕೂಡದು ಎನ್ನುತ್ತದೆ ಧರ್ಮಶಾಸ್ತ್ರ. ವಾಲಿ ಸತ್ತಮೇಲೆಯಾಗಲೀ, ರಾವಣ ಸತ್ತಮೇಲೆಯಾಗಲಿ ಅವರ ಕಳೇಬರಕ್ಕೆ ರಾಮ ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ಮಾಡಿಸುತ್ತಾನೆ. ವಿಭೀಷಣ ರಾವಣನ ಸಂಸ್ಕಾರಕ್ಕೆ ಒಪ್ಪದಿದ್ದರೆ ತಾನೇ ರಾವಣನ ಅಂತ್ಯಸಂಸ್ಕಾರವನ್ನು ಮಾಡುತ್ತೇನೆ ಎನ್ನುತ್ತಾನೆ. ಮತಂಗರು ಶಾಪವನ್ನು ಕೊಡುವಾಗ ಹೇಳುವ ಮಾತು

ಯೇನಾಹಂ ಸಹಸಾ ಸ್ಪೃಷ್ಟಶ್ಶೋಣಿತೇನ ದುರಾತ್ಮನಾ.

ಕೋಯಂ ದುರಾತ್ಮಾ ದುರ್ಭುದ್ಘಿರಕೃತಾತ್ಮಾ ಚ ಬಾಲಿಶಃ II ಕಿ.11.50৷৷

ನನ್ನನ್ನು ಅಪವಿತ್ರವಾದ ರಕ್ತದ ಮೂಲಕ ಮುಟ್ಟಿದ ದುರಾತ್ಮನು ಯಾವನು. ಮೂಢನಾದ, ದುರಾತ್ಮನಾದ, ದುರ್ಬುದ್ಧಿಯುಳ್ಳ, ಜಿತೇಂದ್ರಿಯನಲ್ಲದ (ಅಕೃತಾತ್ಮಾ) ಆ ಮೂರ್ಖನು ಯಾರಾಗಿಬಹುದು”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

ಇಲ್ಲಿ ಜಿತೇಂದ್ರಿಯ ಎನ್ನುವ ಶಬ್ಧವನ್ನು ಬಳಸಿದ್ದಾರೆ. ಮೈತೀಟೆಯನ್ನು ತೀರಿಸಿಕೊಳ್ಳುವುದಕ್ಕೆ ಯುದ್ಧವಲ್ಲ. ಲೋಕ ಹಿತಕ್ಕಾಗಿ ಯುದ್ಧ ಅಪರಾಧವಲ್ಲ. ಇಲ್ಲಿ ವಾಲಿ ಕೇವಲ ರಕ್ತದಿಂದ ಆಶ್ರಮವನ್ನು ಮಲಿನಮಾಡಿದ್ದಲ್ಲ. ಪರ್ವತಮಯವಾದ ದುಂದುಭಿಯ ದೇಹವನ್ನು ಬಿಸುಟು ಆಶ್ರಮದ ವೃಕ್ಷಗಳೆಲ್ಲವನ್ನೂ ಧ್ವಂಸಮಾಡಿದ್ದಾನೆ. ಅವರಿಗೆ ಈ ಕೃತ್ಯವನ್ನು ನಡೆಸಿದವ ವಾಲಿ ಎನ್ನುವುದು ತಿಳಿಯಿತು. “ಯಾವಾತ ಈ ಕೃತ್ಯವನ್ನು ಎಸಗಿದವೋ ಆತನೇನಾದರೂ ಇನ್ನುಮುಂದೆ ಈ ಆಶ್ರಮದ ಪ್ರದೇಶಕ್ಕೆ ಬಂದರೆ ಇಲ್ಲಿಯೇ ಮರಣ ಹೊಂದುವನು. ಪುತ್ರನಂತೆ ಅಕ್ಕರೆಯಿಂದ ಬೆಳೆಸಿದ ಅವರ ಆಶ್ರಮದ ಗಡ್ಡೆಗೆಣಸುಗಳ ವಿನಾಶಾರ್ಥವಾಗಿ ಆತನ ಮಂತ್ರಿಗಳೇನಾದರೂ ಆತನ ಆಶ್ರಮದ ಪರಿಸರದಲ್ಲಿದ್ದರೆ ಅವರು ಒಂದು ದಿನಗಳೊಳಗಾಗಿ ಆ ಪ್ರದೇಶದಿಂದ ಹೊರಟುಬಿಡಬೇಕು. ಹೋಗದೇ ಉಳಿದರೆ ಅಂತವರು ಹಲವಾರು ಸಾವಿರ ವರುಷಗಳ ಕಾಲ ಕಲ್ಲಾಗಿಬಿಡುವರು” ಎನ್ನುವ ಶಾಪ ಕೊಟ್ಟರು. ವಿಷಯ ಅರಿತ ವಾಲಿ ಓಡೋಡಿ ಬಂದು ಮತಂಗ ಮುನಿಗಳಿಗೆ ತನ್ನನ್ನು ಕ್ಷಮಿಸಿ ಎಂದರೂ ಅವರು ಕ್ಷಮಿಸದೇ ಆಶ್ರಮವನ್ನೇ ಬಿಟ್ಟು ಹೊರಟುಹೋದರು. ಆ ನಂತರದಲ್ಲಿ ವಾಲಿಯಾಗಲೀ ಆತನ ಕಡೆಯವರಾಗಲೀ, ಶಾಪದ ಭಯದಿಂದ ಮತಂಗಾಶ್ರಮದ ಪರಿಸರಕ್ಕೆ ಬರುತ್ತಿರಲಿಲ್ಲ. ವಾಲಿ ಸುಗ್ರೀವ ಎಲ್ಲಿಯೇ ಅಡಗಿದ್ದರೂ ಆತನನ್ನು ಹುಡುಕಿ ಕೊಲ್ಲಲು ಬರುತ್ತಿದ್ದ ಎಂದು ಅನಿಸುತ್ತದೆ. ತನ್ನ ಜೀವ ಉಳಿಸಿಕೊಳ್ಳಲು ಸುಗ್ರೀವ ಪ್ರಪಂಚದ ಎಲ್ಲಾ ಕಡೆ ನಿರಂತರವಾಗಿ ಎಲ್ಲಿಯೂ ನಿಲ್ಲದೇ ಹಾರುತ್ತಿದ್ದ. ಶಾಪದ ಘಟನೆ ಹನುಮಂತನಿಗೆ ಅದುಹೇಗೋ ತಿಳಿಯಿತು. ಆತ ಈ ವಿಷಯವನ್ನು ಸುಗ್ರೀವನಿಗೆ ಹೇಳಿದ. ಮತಂಗಮುನಿಗಳ ಶಾಪದ ಕಾರಣದಿಂದ ಋಷ್ಯಮೂಕ ಪರ್ವತ ಸುಗ್ರೀವನಿಗೆ ಸುರಕ್ಷಿತ ತಾಣವಾಗಿ ಉಳಿಯಿತು. ಸುಗ್ರೀವ ತನ್ನ ಹತ್ತಿರವೇ ಬಂದು ಉಳಿದದ್ದು ನೋಡಿದ ವಾಲಿಗೆ ಮೈ ಪರಚಿಕೊಳ್ಳುವಂತಾಗಿದ್ದಂತೂ ಸತ್ಯ.

ಲಕ್ಷ್ಮಣನಿಂದ ಸಮಾಧಾನಿಸಲ್ಪಟ್ಟ ರಾಮ ಋಷ್ಯಮೂಕ ಪರಿಸರದಲ್ಲಿ ತಿರುಗಾಡುತ್ತಿರುವುದನ್ನು ದೂರದಲ್ಲಿಯೇ ನೋಡಿದ ಸುಗ್ರೀವನಿಗೆ ನಡುಕ ಉಂಟಾಯಿತು. ಅವರ ತೇಜಸ್ಸು ಆತನನ್ನು ಭಯಪಡಿಸಿತು. ವಾಲಿಯೇನಾದರೂ ತನ್ನನ್ನು ಕೊಲ್ಲಲು ಬೇರೆಯವರನ್ನು ಕಳುಹಿಸಿರಬಹುದೆನ್ನುವ ಸಂಶಯದಿಂದ ಆತನ ಚಲನವಲನಗಳೇ ನಿಂತು ಹೋಯಿತು. ಆತ ಹೆದರಿಕೆಯಿಂದ ಏನು ಮಾಡುವುದು ಎಂದು ತಿಳಿಯದೇ ಒಂದು ಪರ್ವತದಿಂದ ಇನ್ನೊಂದು ಪರ್ವತಕ್ಕೆ ಹಾರತೊಡಗಿದ. ಆಗ ಹನುಮಂತ ಸುಗ್ರೀವನಿಗೆ ಸಮಾಧಾನವನ್ನು ಹೇಳಿ “ನೀನು ರಾಜನಾದವನು, ಹೀಗೆ ಹೆದರಕೂಡದು. ಚನ್ನಾಗಿ ಆಲೋಚಿಸಿ ಅವರ ಹಾವ ಭಾವವನ್ನು ತಿಳಿದು ಶತ್ರುವೋ ಅಲ್ಲವೋ ಎನ್ನುವುದನ್ನು ತಿಳಿಯಬೇಕೆನ್ನುತ್ತಾನೆ. ಸುಗ್ರೀವ ಹನುಮಂತನಿಗೆ ಬಂದವರು ಯಾರು ಎಂದು ತಿಳಿದುಕೊಂಡು ಬರಲು ಕಳಿಸುತ್ತಾನೆ.

ನಮ್ಮ ರಾಜ್ಯದ ಆನೆಗೊಂದಿಯಲ್ಲಿ ಹನುಮಂತ ಮೊದಲು ರಾಮ ಲಕ್ಷ್ಮಣರನ್ನು ಭೆಟ್ಟಿಮಾಡಿರುವುದು. ಇಲ್ಲಿಯತನಕ ಸುಗ್ರೀವನ ಸಚಿವನಾಗಿದ್ದ ಹನುಮಂತ ಇಲ್ಲಿಂದ ಮುಂದೆ “ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ” ಎಂದು ಪ್ರಸಿದ್ದನಾಗುವುದಕ್ಕೆ ಪೀಠಿಕೆ ಇದು. ಕಪಿಯ ರೂಪದಲ್ಲಿದ್ದರೆ ಯಾರಿಗೂ ನಂಬಿಕೆ ಹುಟ್ಟಲು ಸಾಧ್ಯವಿಲ್ಲವೆಂದು ಹನುಮಂತ ಬಿಕ್ಷುವಿನ ರೂಪದಲ್ಲಿ ರಾಮನ ಪರಿಚಯವನ್ನು ಕೇಳುತ್ತಾನೆ. ಕಿಷ್ಕಿಂಧಾ ಕಾಂಡದ 3 ನೆಯ ಸರ್ಗದಲ್ಲಿ ಹನುಮಂತ ರಾಮನ್ನು ಮಾತಾಡಿಸುವಾಗ ಉಪಯೋಗಿಸುವ ಭಾಷೆ, ದೇಹದ ಭಂಗಿ, ವಿನೀತ ಭಾವ, ತನ್ನ ಒಡೆಯನ ಕುರಿತು ಗೌರವ ಇವೆಲ್ಲವೂ ಸಮ್ಮಿಳಿತವಾಗಿದ್ದವು. ದೀರ್ಘವಾಗಿ ಮಾತಾಡಿದ್ದರಲ್ಲಿ ಒಂದೇ ಒಂದು ಅಪಶಬ್ಧವೂ ಇಲ್ಲವಾಗಿತ್ತು. ದೇಹದ ಯಾವ ಅವಯವಗಳಲ್ಲಿಯೂ ಯಾವುದೇ ದೋಷವಿರಲಿಲ್ಲ. ವಿಷಯನಿರೂಪಣೆಯಲ್ಲಿ ವಿಸ್ತಾರವಿರಲಿಲ್ಲ. ಸಮಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದ್ದನು. ಸಂಶಯಕ್ಕೆಡೆಮಾಡುವಂತಹ ಯಾವ ಮಾತನ್ನೂ ಆತ ಆಡಲಿಲ್ಲ. ಮದ್ಯಸ್ವರದಲ್ಲಿ ವ್ಯಾಕರಣದಿಂದ ಸಂಸ್ಕೃತವಾದ ಶಬ್ದಗಳನ್ನು ಬಳಸಿ ಯಾವ ಯಾವ ವಾಕ್ಯಗಳನ್ನು ಎಲ್ಲೆಲ್ಲಿ ಆಡಬೇಕೋ ಅದನ್ನು ಮಾತ್ರವೇ ಆಡಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಕೇಳುವವರ ಮನಸ್ಸಿಗೆ ಹರ್ಷವನ್ನುಂಟುಮಾಡುವ ಶುಭಕರವಾದ ಮಾತುಗಳನ್ನೇ ಆಡಿದ್ದ. ಇಲ್ಲಿ ಒಂದು ಸಂಶಯ ಬರುತ್ತದೆ. ಅಷ್ಟೊಂದು ಸುಂದರವಾಗಿ ಮಾತನಾಡಿದ್ದ ಹನುಮಂತ ತನ್ನ ವೇಷವನ್ನು ಮರೆಮಾಚಿ ಬಿಕ್ಶುವಿನ ವೇಷವನ್ನು ಧರಿಸಿರುವುದು ವಂಚನೆಯಲ್ಲವೇ. ಅದಕ್ಕೆ ವಾಲ್ಮೀಕಿ ಪ್ರಾರಂಬದಲ್ಲಿಯೇ ಹೇಳಿದ್ದಾನೆ. ನೇರವಾಗಿ ಆತ ಕಪಿಯ ರೂಪದಲ್ಲಿಯೇ ಹೋದರೆ ಆತ ಆಡುವ ಮಾತಿನ ಶೈಲಿಗೂ ಆತನ ಬಹಿರಂಗ ರೂಪಕ್ಕೂ ಅಂತರ ಕಂಡು ಇದು ಯಾವುದೋ ಮಾಯೆ ಎನ್ನುವ ಭಾವಕ್ಕೆ ರಾಮ ಲಕ್ಷ್ಮಣರು ಬರುವ ಸಾಧ್ಯತೆಯಿದೆ. ಬಿಕ್ಷುವಿನ ವೇಷವಾದರೆ ಆಡುವ ಮಾತಿಗೆ ಸಾಮ್ಯತೆ ಬರುತ್ತದೆ. ಅದೂ ಅಲ್ಲದೇ ರಾಮ ಲಕ್ಷ್ಮಣರೂ ಸಹ ತಾಪಸಿಗಳಂತೆ ಇದ್ದರು. ಆದರೆ ಅವರ ಕೈಯಲ್ಲಿ ಬಿಲ್ಲು ಬಾಣಗಳಿದ್ದವು. ಬತ್ತಳಿಕೆ ಬಿಗಿದ್ದರು. ಹೀಗಿರುವಾಗ ಅವರನ್ನು ಮೊದಲು ನೋಡಲು ಸರ್ವಮಾನ್ಯವಾದ ಬಿಕ್ಷುವಿನ ರೂಪ ಧರಿಸಿದರೆ ಅವರು ತನ್ನ ಕಡೆಗೆ ಗಮನವನ್ನು ಹರಿಸುತ್ತಾರೆ ಎನ್ನುವುದಾಗಿದೆ. ರಾಮ ಲಕ್ಷ್ಮಣರನ್ನು ಹತ್ತಿರದಿಂದ ಕಂಡಾಗ ಅವರಲ್ಲಿ ದಿವ್ಯ ಪ್ರಭೆ ದೇದೀಪ್ಯಮಾನವಾಗಿ ಬೆಳಗುತ್ತಿತ್ತು. ಆ ಪ್ರಭೆಯ ಎದುರು ಹನುಮಂತನಿಗೆ ತಾನು ವೇಷವನ್ನು ಮರೆಮಾಚಿರುವ ವಿಷಯವನ್ನು ಮುಚ್ಚಿಟ್ಟುಕೊಳ್ಳಲಾವದಾಗಲಿಲ್ಲ. ಆತ ತಾನು ಬಿಕ್ಷುವಿನ ವೇಷವನ್ನು ಧರಿಸಿ ಬಂದವ. ಕಾಮರೂಪಿಯಾದ ತಾನು ಇಚ್ಛೆಬಂದ ಕಡೆ ಹೋಗಬಲ್ಲೆ, ಇಚ್ಛೆಬಂದ ರೂಪವನ್ನು ಧರಿಸಬಲ್ಲೆ ಎಂದು ಪ್ರಾರಂಭದಲ್ಲಿಯೇ ಹೇಳಿಬಿಡುತ್ತಾನೆ. ಸುಗ್ರೀವನ ಸಚಿವ ತಾನು, ಆತನಿಗೆ ಪ್ರಿಯವನ್ನುಂಟುಮಾಡಬೇಕೆಂಬ ಆಶಯದಿಂದ ಈ ವೇಷದಲ್ಲಿ ಬಂದಿರುವೆ ಎನ್ನುತ್ತಾನೆ. ಆತನ ಮಾತಿನಲ್ಲಿ ಎಲ್ಲಿಯೂ ಕಪಟತೆ ತಿಲಮಾತ್ರವೂ ಇರಲಿಲ್ಲ. ಧ್ವನಿ ಹೃದಯ ಕಂಠ ಮತ್ತು ಮುಖಗಳ ಮೂಲಕವಾಗಿ ಹೊರಬರುತ್ತಿತ್ತು. ತನ್ನೊಡೆಯನ ಕ್ಷೇಮಕ್ಕಾಗಿ ವೇಷಧರಿಸುವುದು ಅಗತ್ಯವಿತ್ತು. ಆದರೆ ಅವರನ್ನು ನೋಡಿದಾಗ ಅದರ ಅವಶ್ಯಕತೆ ಉಳಿದಿಲ್ಲ ಎನ್ನುವುದು ಆತನ ಮಾತಿನ ಸಾರಾಂಶವಾಗಿತ್ತು. ರಾಮನಿಗೆ ಆತನ ಸರಳ ಮತ್ತು ಸುಂದರವಾದ ಭಾಷೆಯನ್ನು ಕೇಳಿ ಆನಂದವಾಯಿತು. ಅದಕ್ಕಿಂತಲೂ ಆತ ಸುಗ್ರೀವನ ಸಚಿವನೆನ್ನುವುದನ್ನು ಕೇಳಿ ಇಮ್ಮಡಿ ಆನಂದವಾಯಿತು. ಯಾರನ್ನು ತಾವು ಹುಡುಕಲು ಬಂದ್ದೇವೆಯೋ ಆತನ ಸಚಿವನೇ ತನ್ನನ್ನು ಎದುರುಗೊಳ್ಳಲು ಬಂದಿದ್ದಾನೆ. ಇದರಿಂದ ಅಯೋಧ್ಯೆಯ ಚಕ್ರವರ್ತಿ ಮನೆತನದವರು ಅಪರಿಚಿತರಂತೆ ಬೇರೊಬ್ಬರ ಭೇಟಿಗೆ ಹೋಗಿರುವುದಲ್ಲ, ರಾಜಪರಂಪರೆಯ ನಡಾವಳಿಯಂತೆ (Protocol) ಸಚಿವನೋರ್ವ ಎದುರುಗೊಳ್ಳಲು ಬಂದಿದ್ದಾನೆ. ರಾಜರುಗಳನ್ನು ಎದುರುಗೊಳ್ಳಲು ಯಾರು ಯಾರು ಹೋಗಬೇಕೆನ್ನುವ ನಡಾವಳಿಕೆಗಳು ಪ್ರಾಚೀನ ಕಾಲದಲ್ಲಿಯೂ ಇತ್ತು. ರಾಮನಿಗೆ ಆತನ ವ್ಯಕ್ತಿತ್ವ ಮೊದಲ ಭೇಟಿಯಲ್ಲಿಯೇ ಇಷ್ಟವಾಯಿತು. ಲಕ್ಷ್ಮಣನಿಗೆ ಆತ ಹೇಳುವ ಮಾತು

ನಾನೃಗ್ವೇದವಿನೀತಸ್ಯ ನಾಯಜುರ್ವೇದಧಾರಿಣಃ.
ನಾಸಾಮವೇದವಿದುಷಶ್ಶಕ್ಯಮೇವಂ ವಿಭಾಷಿತುಮ್ ৷৷ಕಿ.3.27৷৷

ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ಅಧ್ಯಯನಮಾಡಿ ಶಿಕ್ಷಣ ಪಡೆಯದವನಿಗೆ ಹೀಗೆ ಮಾತಾಡಲು ಸಾಧ್ಯವಿಲ್ಲ. ಎನ್ನುತ್ತಾನೆ. ಇಲ್ಲಿ ಪ್ರತಿಯೊಂದು ವೇದದ ವಿಶೇಷವನ್ನುಹೇಳುವಾಗ “ವಿನೀತ”, “ಧಾರಿ” ಮತ್ತು “ವಿತ್” ಶಬ್ಧಗಳನ್ನು ವಿಶೇಷಣಗಳನ್ನಾಗಿ ಬಳಸಿದ್ದಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

ಸಂಭಾಷಣೆಯಲ್ಲಿ ಸಂವಹನ ಕ್ರಿಯೆ ತುಂಬಾ ಮುಖ್ಯ. ಇದೊಂದು ಮಾತಿನಲ್ಲಿ ಹನುಮಂತನ ವಾಕ್ ಪಟುತ್ವವನ್ನು ರಾಮ ಶ್ಲಾಘಿಸುತ್ತಾನೆ. ಋಗ್ವೇದದ ಪ್ರತಿವರ್ಣವೂ ಸ್ವರಪೂರ್ಣವಾಗಿರುತ್ತದೆ. ಅದನ್ನು ಉಚ್ಛರಿಸಬೇಕಾದರೆ ಸಾವಧಾನವಾಗಿ, ವಿನಿಯೋಗಿಸಬೇಕಾದ ಛಂದಸ್ಸು, ವ್ಯಾಕರಣ ಶುದ್ಧತೆ ಮತ್ತು ಗಂಭೀರ ಸ್ವರಬೇಕಾಗುತ್ತದೆ. ಅದನ್ನು ಸರಿಯಾಗಿ ಅಧ್ಯಯನ ಮಾಡಿದವನಿಂದಲೇ ಹೀಗೆ ಮಾತಾಡಲು ಸಾಧ್ಯ. ಹಾಗಾಗಿ ವಿನೀತ ಎನ್ನುವ ಶಬ್ದವನ್ನು ಬಳಸಿದ್ದಾನೆ. ವಿನೀತ ಎಂದರೆ ಆಚಾರ್ಯಮುಖೇನ ಶಾಸ್ತ್ರಬದ್ಧವಾಗಿ ಕಲಿತವ ಎಂದು ಅರ್ಥ. ಯಜುರ್ವೇದದಲ್ಲಿ ಪ್ರತಿಯೊಂದು ಅನುವಾಕನ್ನೂ ಇತರ ಅನುವಾಕಗಳೊಡನೆ ಸಂಕರ ಆಗದ ರೀತಿಯಲ್ಲಿ ಉಚ್ಛರಿಸಬೇಕು. ಅದಕೆ ಅಸಾಧಾರಣ ಧಾರಣಶಕ್ತಿಯ ಅವಶ್ಯಕತೆ ಇದೆ. ಸಾಮವೇದವು ಊಹರಹಸ್ಯಗಳಿಂದ ಗಾನರೂಪವಾಗಿದೆ. ಹನುಮಂತ ಆಡುವ ಮಾತಿನಲ್ಲಿ ಪದ್ಯದ ಗೇಯತೆಯೂ ಇತ್ತು. ಕಿವಿಗೆ ಇಂಪಾಗಿ ಆದರೆ ಅರ್ಥಗರ್ಭಿತವಾಗಿ ಇತ್ತು ಎನ್ನುವುದನ್ನು ಮೂರು ಶಬ್ದಗಳಾದ ವಿನೀತ, ಧಾರಿ ಮತ್ತು ವಿತ್ ಶಬ್ದಗಳ ಮೂಲಕ ರಾಮ ತಿಳಿಸುತ್ತಾನೆ. ರಾಮನೂ ಮೂರೂ ವೇದಗಳಲ್ಲಿ ಪಾರಂಗತನಾಗಿರುವುದರಿಂದಲೇ ಹನುಮಂತನ ಮಾತನ್ನು ಗ್ರಹಿಸಲು ಸಾಧ್ಯವಾಯಿತು ಎಂದೂ ಇಲ್ಲಿ ಅರ್ಥೈಸಬಹುದಾಗಿದೆ. ಮಂತ್ರಿ ಎದುರಾದಾಗ ರಾಜನಾದವ ಮಾತನ್ನಾಡುವುದಲ್ಲ. ಆತನ ಪರವಾಗಿ ಮಂತ್ರಿಯೋ ಅಥವಾ ಸಮರ್ಥ ದೂತನೋ ಮಾತನ್ನಾಡಬೇಕು. ಹಾಗಾಗಿ ಇಲ್ಲಿ ಹನುಮಂತನೊಡನೆ ಮುಂದಿನ ವಿಷಯವನ್ನು ಲಕ್ಷ್ಮಣ ಮಾತಾಡಲಿ ಎಂದು ರಾಮ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಹಾಗಾಗಿ ಮುಂದೆ ಲಕ್ಷ್ಮಣ ಹನುಮಂತನಲ್ಲಿ ತಮ್ಮ ಅರಣ್ಯವಾಸದ ವಿಷಯವನ್ನು, ಸೀತಾಪಹರಣದ ವಿಷಯವನ್ನೂ ಸಹ ಸಮಗ್ರವಾಗಿ ತಿಳಿಸಿ ತಮ್ಮ ಭೇಟಿಯ ಉದ್ಧೇಶ ಸೀತೆ ಎಲ್ಲಿರುತ್ತಾಳೆಂದು ಕಂಡುಹಿಡಿಯಲು ಕಬಂಧನ ಸೂಚನೆಯ ಮೇರೆಗೆ ಸುಗ್ರೀವನೊಡನೆ ಆಶ್ರಯಕೋರಲು ಬಂದಿದ್ದೇವೆ ಎನುತ್ತಾ ಮೊದಲು ಹೇಳಿದ ಸುಗ್ರೀವಂ ಶರಣಂ ಗತಃ ಎನ್ನುವ ಆರು ಬಗೆಯ ಉಲ್ಲೇಖವನ್ನು ಮಾಡುತ್ತಾನೆ.

ಹನುಮಂತನು ಸೂರ್ಯನ ಹತ್ತಿರ ಸೂತ್ರ, ವೃತ್ತಿ, ವಾರ್ತಿಕ, ಮಹಾಭಾಷ್ಯ, ಶಾಸ್ತ್ರ, ಛಂದಃಶಾಸ್ತ್ರಗಳನ್ನೂ, ನವವ್ಯಾಕರಣಗಳನ್ನೂ ಕಲಿತವ. ಅಗಸ್ತ್ಯರು ಹನುಮಂತನ ಕುರಿತು ಆತ ಶಾಸ್ತ್ರವಿಷಯದಲ್ಲಿ ಬ್ರಹಸ್ಪತಿಯೊಡನೆ ಹೋಲಿಸಬಹುದು ಎನ್ನುತ್ತಾರೆ. ಆತನಿಗೆ ಲಕ್ಷ್ಮಣ ಸುಗ್ರೀವನೊಡನೆ ಶರಣಾಗತಿಗಾಗಿ ಬಂದಿದ್ದಾರೆ ಎಂದು ಹೇಳಿರುವುದು ಮನಸ್ಸಿಗೆ ಸರಿಕಾಣಲಿಲ್ಲ. ಅತನಿಗೆ ಸೂರ್ಯವಂಶದ ವಿಷಗಳೆಲ್ಲವೂ ತಿಳಿದಿದೆ. ಅವರ ಶ್ರೇಷ್ಠತೆಯ ಮತ್ತು ಮಹಾತ್ಮತೆಯ ಕುರಿತು ಗೌರವವಿದೆ. ಆದರೆ ಈ ವಾಕ್ ದೋಷವನ್ನು ಟೀಕಿಸಲೂ ಹೋಗುವುದಿಲ್ಲ. ರಾಮಲಕ್ಷ್ಮಣರನ್ನು ತನ್ನ ಭುಜದಮೇಲೆ ಹೊತ್ತು ಅವರನ್ನು ಋಷ್ಯಮೂಕ ಪರ್ವತಕ್ಕೆ ಕರೆತರುತ್ತಾನೆ. ಸುಗ್ರೀವ ಆಗ ಆಗಂತುಕರ ವಿಷಯದಲ್ಲಿ ಭಯಪಟ್ಟು ಅಲ್ಲೇ ಪಕದಲ್ಲಿದ್ದ ಮಲಯ ಪರ್ವತದಲ್ಲಿ ಇದ್ದ. ಆತನಲ್ಲಿ ರಾಮ ಲಕ್ಷ್ಮಣರ ಮತ್ತು ದಶರಥನ ಸಹಿತವಾಗಿ ಸೂರ್ಯವಂಶದ ದೊರೆಗಳ ಮಹಿಮೆಯನ್ನು ಹೇಳುತ್ತಾನೆ. ಅಂತಹ ಮಹಿಮಾನ್ವಿತರು ಸೀತಾನ್ವೇಷಣೆಯ ಸಲುವಾಗಿ ನಿನ್ನ ಸಹಾಯವನ್ನು ಬಯಸಿ ಬಂದಿದ್ದಾರೆ ಎನ್ನುತ್ತಾನೆ. ಇಲ್ಲಿ ಹನುಮಂತನ ಜಾಣ್ಮೆಯನ್ನು ಗಮನಿಸಬೇಕು. “ಸುಗ್ರೀವನಲ್ಲಿ ಶರಣಾಗತಿಯನ್ನು ಹೊಂದಲು ಬಂದಿದ್ದಾರೆ ಎನ್ನುವ ಮಾತಿನ ದೋಷವನ್ನು ಹನುಮಂತ ಪ್ರಾರಂಭದಲ್ಲಿ ಹೇಳಿದ ಶ್ಲೋಕದಂತೆ “ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು” ಎಂದು ಬದಲಾಯಿಸಿ ಹೇಳುತ್ತಾನೆ.

“ನವವ್ಯಾಕರಣವೇತ್ತಾ -ಒಂಬತ್ತು ವ್ಯಾಕರಣ ಸಿದ್ಧಾಂತವನ್ನು ತಿಳಿದವ ಹನುಮಂತ ಎಂದು ಅಗಸ್ತ್ಯರು ಈತನನ್ನು ಹೊಗಳಿದ್ದು ಆತನ ಜಾಣ್ಮೆ ಮತ್ತು ಶಾಸ್ತ್ರಕೌಶಲ್ಯದ ಪರಿಣಿತಿಗಾಗಿ. ರಾಮನ ಅನುಗ್ರಹದಿಂದ ಹನುಮಂತ ಬ್ರಹ್ಮನೇ ಆಗುವನು- “ಬ್ರಹ್ಮಾ ಭವಿಷ್ಯತ್ಯಪಿ ತೇ ಪ್ರಸಾದಾತ್” ಎನ್ನುವ ಮಾತನ್ನೂ ಆಡುತ್ತಾರೆ. ಸುಂದರನೆನ್ನುವುದು ಆತನ ಇನ್ನೊಂದು ಹೆಸರು. ಅದು ಬಾಹ್ಯರೂಪದಿಂದ ಅಲ್ಲ, ಆತನ ವಿದ್ಯೆ ಮತ್ತು ವಿನಯಗಳ ಶೋಭೆಯಿಂದಾಗಿ. ಸುಗ್ರೀವನ ಸಚಿವ ರಾಮನೆಡೆಗೆ ಆಕರ್ಷಿತನಾಗುವುದು ಆತನ ಮೊದಲ ನೋಟದಲ್ಲಿಯೇ. ರಾಮನನ್ನು ನೋಡಿದ ತಕ್ಷಣ ಆತನ ಶಾಪ ವಿಮೋಚನೆಯಾಯಿತು ಎನ್ನುವ ಕಥೆ ಮೂಲ ರಾಮಾಯಣದಲ್ಲಿಲ್ಲ.

ಸುಗ್ರೀವನ ಚಂಚಲತೆಯ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

Continue Reading

ದೇಶ

ರಾಜಮಾರ್ಗ ಅಂಕಣ: ಅನಾಥಾಶ್ರಮದ ಹುಡುಗಿಯು ಅಮೇರಿಕನ್ ಕಂಪೆನಿಯ ಸಿಇಒ ಆದ ಕಥೆ

ರಾಜಮಾರ್ಗ ಅಂಕಣ: ವಿಶೇಷ ಎಂದರೆ ಜ್ಯೋತಿ ರೆಡ್ಡಿ ಅವರು ಇಂದಿಗೂ ತನ್ನ ಬಾಲ್ಯದ ಕಷ್ಟಗಳನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಆದರೂ ಭಾರತಕ್ಕೆ ಬಂದೇ ಬರುತ್ತಾರೆ. ಅನಾಥಾಶ್ರಮಗಳಿಗೆ ಭೇಟಿ ನೀಡಿ ನೆರವು ನೀಡುತ್ತಾರೆ. ಹಲವು ಸರಕಾರಿ ಶಾಲೆಗಳ ನೂರಾರು ಬಡ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುತ್ತಾರೆ.

VISTARANEWS.COM


on

ರಾಜಮಾರ್ಗ ಅಂಕಣ Jyothi Reddy
Koo

ವಾರಂಗಲ್ ನಗರದ ಕಲ್ಲು ಒಡೆಯುವ ಹುಡುಗಿ ಜ್ಯೋತಿ ರೆಡ್ಡಿ ಬಿಲಿಯನ್ ಡಾಲರ್ ಕಂಪೆನಿ ಕಟ್ಟಿದ್ದು ಹೇಗೆ?

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ‘ಯಾವಾಗ ನಿನ್ನ ಆಕಾಂಕ್ಷೆಗಳು ಪ್ರಬಲವಾಗಿ ಇರುತ್ತವೆಯೋ, ಆಗ ನಿನ್ನೊಳಗೆ ಅತಿಮಾನುಷ ಶಕ್ತಿಗಳು ಪ್ರವಹಿಸುತ್ತವೆ.ʼ
(ನೆಪೋಲಿಯನ್ ಹಿಲ್)

ಈ ಮಾತಿಗೆ ನಿದರ್ಶನ ಆಗುವ ಸಾಧನೆ ಮಾಡಿ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿರುವ ಒಬ್ಬ ಅನಾಥ ಹುಡುಗಿಯ ಕಥೆಯು ಇಂದು ನಿಮ್ಮ ಮುಂದೆ.

ಆಕೆಯ ಹೆಸರು ಜ್ಯೋತಿ ರೆಡ್ಡಿ (Jyothi Reddy). ಆಕೆ ತೆಲಂಗಾಣ ರಾಜ್ಯದ ವಾರಂಗಲನ ಅತ್ಯಂತ ಬಡ ಕುಟುಂಬದ ಹುಡುಗಿ ಆಗಿದ್ದಳು. ಆಕೆಯ ಹೆತ್ತವರಿಗೆ ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಬಡತನ ಮತ್ತು ಹಸಿವು ಹೆಚ್ಚಾದ ಕಾರಣ ಅವಳ ಹೆತ್ತವರು ಇಬ್ಬರು ಹೆಣ್ಣು ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಮತ್ತೆ ಅವರನ್ನು ನೋಡಲಿಕ್ಕೂ ಬರಲಿಲ್ಲ! ಅದರಲ್ಲಿ ಒಬ್ಬರು ಜ್ಯೋತಿ! ಆಕೆ ತನ್ನ ಬಾಲ್ಯದ ಐದು ವರ್ಷಗಳನ್ನು ಅನಾಥಾಶ್ರಮದಲ್ಲಿ ಕಳೆಯಬೇಕಾಯಿತು.

ಅಸಹಾಯಕ ಬದುಕು, ನೂರಾರು ಸವಾಲು!

ಹಿರಿಯ ಮಗಳಾದ ಜ್ಯೋತಿ ಅನಾಥ ಮಕ್ಕಳ ಸರಕಾರಿ ಶಾಲೆಗೆ ಹೋಗಿ 12ನೆಯ ತರಗತಿ ಪಾಸಾದಳು. ಅದರ ಬೆನ್ನಿಗೆ ಅವರ ಕಸಿನ್ ಜೊತೆಗೆ ಮದುವೆ ಕೂಡ ನಡೆದು ಹೋಯಿತು. ಆಗ ಅವರಿಗೆ 16 ವರ್ಷ! ಹದಿನೆಂಟು ತುಂಬುವ ಹೊತ್ತಿಗೆ ಮಡಿಲಲ್ಲಿ ಎರಡು ಹೆಣ್ಣು ಮಕ್ಕಳು ಮಲಗಿದ್ದವು! ಗಂಡನಿಗೆ ಎಲ್ಲಿಯೂ ಪರ್ಮನೆಂಟ್ ಕೆಲಸ ಇರಲಿಲ್ಲ. ಆಗ ಮಕ್ಕಳ ಜವಾಬ್ದಾರಿ ಕೂಡ ಜ್ಯೋತಿ ಅವರೇ ಹೊತ್ತರು.

ಕಠಿಣ ದುಡಿಮೆಯ ಜೊತೆಗೆ ಒಂದಷ್ಟು ಕನಸು!

ಬತ್ತದ ಗದ್ದೆಯಲ್ಲಿ ನೇಜಿಯನ್ನು ನೆಡುವ ಕೆಲಸ, ಕಲ್ಲನ್ನು ಒಡೆಯುವ ಕೆಲಸವನ್ನು ಕೂಡ ಅವರು ಮಾಡಿದರು. ತನ್ನ ಬದುಕು ಸ್ವಾವಲಂಬಿ ಆಗಬೇಕು ಎನ್ನುವ ತುಡಿತ ಅವರನ್ನು ಅಂತಹ ಕೆಲಸಕ್ಕೆ ದೂಡಿತು.

ಆಗ ಅವರ ನೆರವಿಗೆ ಬಂದದ್ದು ‘ನೆಹರೂ ಯುವ ಕೇಂದ್ರ’ ಎನ್ನುವ ಸರಕಾರದ ಅಧೀನ ಸಂಸ್ಥೆ. ಅದರಲ್ಲಿ ಜ್ಯೋತಿ ರೆಡ್ಡಿ ಅವರು ಸ್ವಯಂಸೇವಕಿಯಾಗಿ ಮಕ್ಕಳಿಗೆ ಪಾಠ ಮಾಡುವ ಕೆಲಸ ಮಾಡಿದರು. ಅದರ ಜೊತೆಗೆ ಅಂಬೇಡ್ಕರ್ ಬಯಲು ವಿವಿಯ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿ ಎರಡನ್ನೂ ಅವರು ಮುಗಿಸಿದರು. ಹಾಗೆಯೇ ಅವರ ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಕೂಡ ಪೂರ್ತಿ ಆಯಿತು.

ಟೀಚರ್ ಆಗಿ ಉದ್ಯೋಗ ಆರಂಭ ಮಾಡಿದರು

ಆಗ ಅವರಿಗೆ ಸರಕಾರಿ ಶಾಲೆಯ ಟೀಚರ್ ಉದ್ಯೋಗವು ದೊರೆಯಿತು. ತಿಂಗಳಿಗೆ 6,000 ರೂಪಾಯಿ ಸಂಬಳ ಕೈ ಸೇರುತ್ತಿತ್ತು. ಪುಟ್ಟ ಬಾಡಿಗೆ ಮನೆ. ಅವರ ಕುಟುಂಬಕ್ಕೆ ಆ ಸಂಬಳವು ಯಾವುದಕ್ಕೂ ಸಾಲುತ್ತಿರಲಿಲ್ಲ. ಶಾಲೆಗೆ ಎರಡು ಘಂಟೆ ನಡೆದು ಹೋಗುವ ಕಷ್ಟ ಬೇರೆ. ಆಗ ದಾರಿಯಲ್ಲಿ ಸೀರೆಗಳನ್ನು ಮಾರುತ್ತ ಒಂದಿಷ್ಟು ಹಣ ಗಳಿಸಿದರು. ಮನೆಯಲ್ಲಿ ಒಂದು ಹೊಲಿಗೆ ಯಂತ್ರ ಇಟ್ಟುಕೊಂಡು ಸ್ವಲ್ಪ ಸಂಪಾದನೆ ಮಾಡಿದರು.

ಅಮೆರಿಕಾದಲ್ಲಿ ಉದ್ಯೋಗದ ಆಫರ್ ಬಂತು!

2000ರ ಹೊತ್ತಿಗೆ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಬಂದೇ ಬಿಟ್ಟಿತು. ಅವರ ಸೋದರ ಮಾವ ಒಬ್ಬರು ಅಮೆರಿಕಾದಿಂದ ಊರಿಗೆ ಬಂದವರು ಜ್ಯೋತಿ ಅವರನ್ನು ಭೇಟಿ ಮಾಡಿದರು. ಅಮೆರಿಕಾದಲ್ಲಿ ಉದ್ಯೋಗದ ಭರವಸೆ ನೀಡಿದರು. ಆಗ ಅವರ ಮನಸ್ಸಿನಲ್ಲಿ ಗೊಂದಲವು ಆರಂಭ ಆಯಿತು.

ಒಂದು ಕಡೆ ತನ್ನ ಸಂಸಾರದ ಜವಾಬ್ದಾರಿ. ಇನ್ನೊಂದು ಕಡೆ ಸರಕಾರಿ ನೌಕರಿ. ಮತ್ತೊಂದು ಕಡೆ ಅವರದ್ದೇ ಆದ ಬಹಳ ದೊಡ್ಡ ಕನಸು! ಇವುಗಳಲ್ಲಿ ಯಾವುದನ್ನು ಆರಿಸುವುದು? ಕೊನೆಗೆ ಅವರು ಗಟ್ಟಿ ನಿರ್ಧಾರ ಮಾಡಿ ಮೂರನೆಯದನ್ನು ಆರಿಸಿದರು. ಅದರಲ್ಲಿ ತೀವ್ರವಾದ ರಿಸ್ಕ್ ಇತ್ತು. ಆದರೆ ರಿಸ್ಕ್ ಇಲ್ಲದೆ ಕನಸು ಪೂರ್ತಿ ಆಗುವುದು ಹೇಗೆ?

ವಾರಂಗಲ್ ಟು ಅಮೆರಿಕಾ ಹಾರಿದರು!

ಪ್ರೀತಿಸುವ ತನ್ನ ಎರಡು ಹೆಣ್ಣು ಮಕ್ಕಳನ್ನು ಒಂದು ಮಿಷನರಿ ಹಾಸ್ಟೆಲಿನಲ್ಲಿ ಬಿಟ್ಟರು. ವೀಸಾ ಮಾಡಿಸಲು ತುಂಬಾ ಕಷ್ಟಪಟ್ಟರು. ಕೊನೆಗೆ ಧೈರ್ಯ ಜೋಡಿಸಿಕೊಂಡು ವಾರಂಗಲ್ ಟು ಅಮೆರಿಕ ವಿಮಾನದಲ್ಲಿ ಹಾರಿದರು! ಈಗ ಅವರಿಗೆ ನಿಜವಾದ ಸಮಸ್ಯೆಗಳು ಆರಂಭವಾದವು. ಕೆಲಸ ಕೊಡಿಸುವ ಭರವಸೆ ಕೊಟ್ಟಿದ್ದ ಸೋದರ ಮಾವ ಅಲ್ಲಿ ಕೈ ಎತ್ತಿದರು. ಮಹಾನಗರದಲ್ಲಿ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಬಿಟ್ಟ ಅನುಭವ ಅವರಿಗೆ ಆಯಿತು. ತಂದಿದ್ದ ಸ್ವಲ್ಪ ದುಡ್ಡು ಪೂರ್ತಿ ಖಾಲಿ ಆಗಿತ್ತು.

ಮಾಯಾ ನಗರಿಯಲ್ಲಿ ಒಂಟಿ ಹೆಣ್ಣಿನ ಹೋರಾಟ!

ಅವರು ಯಾವತ್ತೂ ಅಮೆರಿಕಾ ನೋಡಿದವರೇ ಅಲ್ಲ! ಅಲ್ಲಿ ಅವರಿಗೆ ಸಂಬಂಧಿಕರು ಅಥವಾ ಪರಿಚಯದವರು ಅಂತ ಯಾರೂ ಇರಲಿಲ್ಲ. ಆದರೆ ಗುಂಡಿಗೆಯಲ್ಲಿ ಧೈರ್ಯ ಇತ್ತು. ತಮ್ಮ ಪದವಿ, ಸ್ಟೇಟಸ್ ಎಲ್ಲವನ್ನೂ ಗಾಳಿಗೆ ತೂರಿ ಗ್ಯಾಸ್ ಸ್ಟೇಶನ್, ಬೇಬಿ ಸಿಟ್ಟಿಂಗ್, ವಿಡಿಯೋ ಗೇಮ್ಸ್ ಶಾಪ್… ಹೀಗೆ ಹಲವು ಕಡೆ ದುಡಿದರು. ಆ ಸಂದರ್ಭ ಸೂಕ್ಷ್ಮವಾಗಿ ಅಮೆರಿಕಾದ ಜನ ಜೀವನವನ್ನು, ಉದ್ಯೋಗದ ಅವಕಾಶಗಳನ್ನು ಅಭ್ಯಾಸ ಮಾಡಿದರು. ಅವರು ಒಂದೂವರೆ ವರ್ಷದಲ್ಲಿ 40,000 ಅಮೇರಿಕನ್ ಡಾಲರ್ ಸಂಪಾದನೆ ಮಾಡಿದ್ದರು!

ಆರಂಭ ಆಗಿಯೇ ಬಿಟ್ಟಿತು ಕನಸಿನ ಕಂಪೆನಿ!

ಅದನ್ನು ಬಂಡವಾಳ ಮಾಡಿಕೊಂಡು ಅಮೆರಿಕಾದ ಫೀನಿಕ್ಸ್ ಎಂಬಲ್ಲಿ ಒಂದು ಸಣ್ಣದಾದ ಕಚೇರಿಯನ್ನು ತೆರೆದು ‘KEY SOFTWARE SOLUTIONS’ ಎಂಬ ಕನ್ಸಲ್ಟೆನ್ಸಿ ಕಂಪೆನಿ ತೆರೆದರು( 2001). ಅವರು ಕಲಿತಿದ್ದ ಕಂಪ್ಯೂಟರ್ ತರಬೇತಿಯು ಅವರಿಗೆ ಈಗ ಸಹಾಯಕ್ಕೆ ಬಂದಿತು.

ಅಮೆರಿಕಾದಲ್ಲಿ ಹೊರಗಿಂದ ಬರುವವರಿಗೆ ಉದ್ಯೋಗದ ಅವಕಾಶಗಳ ಬಗ್ಗೆ ಮಾಹಿತಿ ಮತ್ತು ವೀಸಾ ಪಡೆಯುವ ಬಗ್ಗೆ ಮಾರ್ಗದರ್ಶನ ನೀಡುವ ಸಂಸ್ಥೆಯಾಗಿ ತಮ್ಮ ಸಂಸ್ಥೆಯನ್ನು ಬೆಳೆಸಿದರು. ಒಬ್ಬರೇ ಸ್ವಾವಲಂಬಿಯಾದ ಹೆಣ್ಣು ಮಗಳು ಅಮೆರಿಕಾದಲ್ಲಿ ಮಾಡಿದ ಭಾರೀ ಹೋರಾಟವು ಕೊನೆಗೂ ಫಲ ನೀಡಿತು. ಒಂದರ ಹಿಂದೆ ಒಂದು ಅವರ ಕಂಪೆನಿಯ ಫ್ರಾಂಚೈಸಿಗಳು ಆರಂಭ ಆದವು. ಅವರ ಕಠಿಣ ಪರಿಶ್ರಮ, ಬದ್ಧತೆ ಮತ್ತು ಬಲವಾದ ನಂಬಿಕೆ ಇವುಗಳು ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು.

ಇಂದವರ ಕಂಪೆನಿ ಬಿಲಿಯನ್ ಡಾಲರ್ ಆದಾಯ ಹೊಂದಿದೆ!

ಈಗ ಅವರ ಬಿಲಿಯನ್ ಡಾಲರ್ ಕಂಪೆನಿಯು ನೂರಾರು ಮಂದಿಗೆ ಉದ್ಯೋಗ ನೀಡಿದೆ. ತನ್ನ ಇಬ್ಬರು ಮಕ್ಕಳನ್ನು ಕೂಡ ಅವರು ಅಮೆರಿಕಕ್ಕೆ ಕರೆಸಿ ಸಾಫ್ಟವೇರ್ ಇಂಜಿನಿಯರಿಂಗ್ ಓದಿಸಿ ಮದುವೆ ಮಾಡಿದ್ದಾರೆ. ಅವರಿಗೆ NRI OF THE YEAR ಪ್ರಶಸ್ತಿ ದೊರೆತಿದೆ!

ಕೆರೆಯ ನೀರನು ಕೆರೆಗೆ ಚೆಲ್ಲಿ…

ವಿಶೇಷ ಎಂದರೆ ಜ್ಯೋತಿ ರೆಡ್ಡಿ ಅವರು ಇಂದಿಗೂ ತನ್ನ ಬಾಲ್ಯದ ಕಷ್ಟಗಳನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಆದರೂ ಭಾರತಕ್ಕೆ ಬಂದೇ ಬರುತ್ತಾರೆ. ಅನಾಥಾಶ್ರಮಗಳಿಗೆ ಭೇಟಿ ನೀಡಿ ನೆರವು ನೀಡುತ್ತಾರೆ. ಹಲವು ಸರಕಾರಿ ಶಾಲೆಗಳ ನೂರಾರು ಬಡ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುತ್ತಾರೆ. ಎಸೆಸೆಲ್ಸಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಬಡಮಕ್ಕಳಿಗೆ ತಲಾ ಐದು ಸಾವಿರ ರೂಪಾಯಿ ಬಹುಮಾನ ಕೊಟ್ಟು ಬೆನ್ನು ತಟ್ಟುತ್ತಾರೆ.

“ಬಾಲ್ಯದ ಬಡತನ ನನ್ನ ಮನಸ್ಸು ಮತ್ತು ಹೃದಯವನ್ನು ನೋಯಿಸಿತ್ತು. ಆದರೆ ಭಾರತದ ಪ್ರತಿ ಅನಾಥ ಮಗು ನನ್ನಂತೆ ಬೆಳೆಯಬೇಕು ಎಂದು ಆಸೆ ಪಡುತ್ತೇನೆ” ಎಂದು ಆಕೆಯು ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ ಕಥೆ

Continue Reading

ಅಂಕಣ

ರಾಜಮಾರ್ಗ ಅಂಕಣ: ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ ಕಥೆ

ರಾಜಮಾರ್ಗ ಅಂಕಣ: ಅನಾಥಾಶ್ರಮದಲ್ಲಿ ಇದ್ದ ಹುಡುಗ, ಪೇಪರ್‌ ಹಂಚುತ್ತಿದ್ದ ಬಾಲಕ, ಕಠಿಣ ಪರಿಶ್ರಮದಿಂದ ಬೆಳೆದು ಜಿಲ್ಲಾಧಿಕಾರಿ ಆದ ಕಥೆ ಎಂಥವರಿಗೂ ಸ್ಫೂರ್ತಿ.

VISTARANEWS.COM


on

ರಾಜಮಾರ್ಗ ಅಂಕಣ abudal nasar ias
Koo

ಕೇರಳದ ಅಬ್ದುಲ್ ನಾಸರ್ ಬದುಕಿನ ಯಶೋಗಾಥೆ ಅದ್ಭುತ!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ಆತ ತನ್ನ ಐದನೇ ವರ್ಷಕ್ಕೆ ಸರಿಯಾಗಿ ತನ್ನ ಅಪ್ಪನನ್ನು ಕಳೆದುಕೊಂಡಿದ್ದರು. ಅವರಿಗೆ ಐದು ಜನ ಸೋದರ, ಸೋದರಿಯರು. ಅವರನ್ನೆಲ್ಲ ಸಾಕಲು ಅವರ ಅಮ್ಮ ಯಾರ್ಯಾರದೋ ಮನೆಯಲ್ಲಿ ಪಾತ್ರೆ ಪಗಡಿಗಳನ್ನು ತೊಳೆಯಬೇಕಾಯಿತು. ಹಸಿವು ಮತ್ತು ಅಪಮಾನ ಬದುಕಿನ ಪಾಠ ಕಲಿಸಿತು.

13 ವರ್ಷ ಅನಾಥಾಶ್ರಮದಲ್ಲಿ ಕಳೆದವರು ನಾಸರ್

ಅಮ್ಮನಿಗೆ ಅವರನ್ನು ಸಾಕುವುದು ಕಷ್ಟ ಆದಾಗ ಮಗನನ್ನು ಒಂದು ಅನಾಥಾಶ್ರಮದಲ್ಲಿ ತಂದು ಬಿಟ್ಟರು. ಅಲ್ಲಿನ ಅರೆಹೊಟ್ಟೆಯ ಊಟ, ಅನಾರೋಗ್ಯಕರ ವಾತಾವರಣ ಮತ್ತು ಬೆವರು ಹರಿಸುವ ದುಡಿಮೆ ಅವರ ಸಂಗಾತಿಗಳು ಆದದ್ದು ಆಗ. ಅಲ್ಲಿನ ಹಿಂಸೆಯು ಅತಿಯಾದಾಗ ಅನಾಥಾಶ್ರಮ ಬಿಟ್ಟು ಓಡಿ ಹೋಗುವ ನೆನಪು ಅವರಿಗೆ ಆದದ್ದು ಉಂಟು. ರಾಗಿಂಗ್ ಕೂಡ ಜೋರಾಗಿತ್ತು. ಓಡಿ ಹೋಗೋಣ ಎಂದು ಅನ್ನಿಸಿದಾಗಲೆಲ್ಲ ಅಮ್ಮನ ಅಸಹಾಯಕತೆಯು ಕಣ್ಣ ಮುಂದೆ ಬಂದು ಕಣ್ಣೀರು ಗಲ್ಲವನ್ನು ತೋಯಿಸುತ್ತಿತ್ತು. ಆಗ ತನ್ನ ಶಿಕ್ಷಣದ ಖರ್ಚು ತಾನೇ ಭರಿಸಲು ಅವರು ನಿರ್ಧಾರ ಮಾಡುತ್ತಾರೆ.

ಹೊಟ್ಟೆಪಾಡಿಗಾಗಿ ಹಲವೆಡೆಗಳಲ್ಲಿ ದುಡಿಮೆ

ಬಿಡುವಿನ ಅವಧಿಯಲ್ಲಿ ಪೇಪರ್ ಹಂಚುವ, ಬಸ್ಸುಗಳಲ್ಲಿ ಕ್ಲೀನರ್ ಆಗಿ ದುಡಿಯುವ, ಹೋಟೆಲುಗಳಲ್ಲಿ ಸಪ್ಲಾಯರ್ ಆಗಿ ದುಡಿಯುವ ಅವಕಾಶ ಅವರಿಗೆ ಒದಗಿತು. ತಲಸ್ಸೇರಿಯ ಪದವಿ ಕಾಲೇಜಿನಲ್ಲಿ ಓದುವಾಗ ತನಗಿಂತ ಕಿರಿಯ ವಿದ್ಯಾರ್ಥಿಗಳಿಗೆ ಟ್ಯೂಶನ್ ಕೊಡುವುದು, ಫೋನ್ ಆಪರೇಟರ್ ಮೊದಲಾದ ಉದ್ಯೋಗವನ್ನು ಮಾಡಿದರು.

ಕಲಿಕೆಯಲ್ಲಿ ಸಾಧಾರಣ ವಿದ್ಯಾರ್ಥಿ

ಅಬ್ದುಲ್ ನಾಸರ್ ಹೇಳುವ ಪ್ರಕಾರ ಅವರೊಬ್ಬ ಸಾಮಾನ್ಯರಲ್ಲಿ ಸಾಮಾನ್ಯ ಬುದ್ಧಿಮತ್ತೆಯ ವಿದ್ಯಾರ್ಥಿ. ಹೈಸ್ಕೂಲ್, ಪಿಯುಸಿ, ಪದವಿ ಎಲ್ಲ ಕಡೆಯೂ ಅವರಿಗೆ ದೊರೆತದ್ದು ಕೇವಲ ದ್ವಿತೀಯ ದರ್ಜೆ ಮಾತ್ರ. ಆದರೆ MSW ಮಾಡುವಾಗ ಅವರ ಅದ್ಭುತವಾದ ಪ್ರತಿಭೆ ಹೊರಬಂದಿತು. ಅದರಲ್ಲಿ ಅವರಿಗೆ ಅತ್ಯುನ್ನತ ಶ್ರೇಣಿ ಫಲಿತಾಂಶ ಬಂದಿತು. 1994ರಲ್ಲಿ ಕೇರಳ ಸರಕಾರದ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿ ಆಗಿ ಕೆಲಸಕ್ಕೆ ಸೇರಿದರು.

ಓದುವ ಹಸಿವು ಕಡಿಮೆ ಆಗಲೇ ಇಲ್ಲ

ಸರಕಾರಿ ಉದ್ಯೋಗಕ್ಕೆ ಸೇರಿದ ಕೂಡಲೇ ಅವರು ತನ್ನ ಅಮ್ಮನನ್ನು ಮನೆಕೆಲಸವನ್ನು ಬಿಡಿಸಿ ತನ್ನ ಕ್ವಾರ್ಟರ್ಸಗೆ ಕರೆದುಕೊಂಡು ಬಂದರು. ಅಲ್ಲಿ ಅವರಿಗೆ ನೆಮ್ಮದಿಯ ಬದುಕು ದೊರೆಯಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡಿಕೊಟ್ಟರು.

ವರ್ಷಕ್ಕೆ ಎರಡೆರಡು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾ ಸಾಗಿದರು

ಈ ಕಡೆ ಅವರ ಓದುವ ಅಭ್ಯಾಸವು ತೀವ್ರವಾಗಿ ಹೆಚ್ಚಾಯಿತು. ರಸ್ತೆ ಬದಿಯಲ್ಲಿ ಅರ್ಧ ಬೆಲೆಗೆ ಮಾರಾಟ ಆಗುತ್ತಿದ್ದ ಪುಸ್ತಕಗಳನ್ನು ಆಯ್ದು ತಂದು ಓದಿದರು. ನಂತರ ಅವುಗಳನ್ನು ಅದೇ ರೇಟಿಗೆ ತನ್ನ ಗೆಳೆಯರಿಗೆ ಮಾರಿದರು. ವರ್ಷಕ್ಕೆ ಎರಡೆರಡು ಪರೀಕ್ಷೆಗಳನ್ನು ಬರೆದು ಭಡ್ತಿ ಪಡೆಯುತ್ತಾ ಮುಂದೆ ಹೋದರು. ಸಮರ್ಪಣಾ ಭಾವದಿಂದ ದುಡಿದು ಸರಕಾರದ ಮನ್ನಣೆ ಪಡೆದರು. 2015ರಲ್ಲಿ ಅವರು ಸ್ವಂತ ಸಾಮರ್ಥ್ಯದ ಮೇಲೆ ಡೆಪ್ಯೂಟಿ ಕಲೆಕ್ಟರ್ ಹುದ್ದೆಗೆ ಏರಿದರು. 2019ರಲ್ಲಿ ಕೊಲ್ಲಂ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ಕೂಡ ಆಯ್ಕೆ ಆದರು. ಭ್ರಷ್ಟಾಚಾರ ಇಲ್ಲದ ಶುದ್ಧಾಂಗ ಅಧಿಕಾರವನ್ನು ಉಪಯೋಗ ಮಾಡಿ ಗೆದ್ದರು.

ತನ್ನ ಹುದ್ದೆಯನ್ನು ಪ್ರಭಾವಯುತವಾಗಿ ಬಳಕೆ ಮಾಡಿಕೊಂಡು ಜನರ ಸೇವೆ ಮಾಡಿದರು. ತನ್ನನ್ನು ಜನಸೇವೆಗೆ ಮುಡಿಪಾಗಿಟ್ಟರು. ಅಬ್ದುಲ್ ನಾಸರ್ ಅವರ ಹೋರಾಟದ ಬದುಕು ಯಾರಿಗಾದರೂ ಸ್ಫೂರ್ತಿದಾಯಕ ಆಗಬಹುದು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೆನಪಾದಳು ಅರುಣಾ ಶಾನುಭಾಗ್!‌

Continue Reading

ಅಂಕಣ

ರಾಜಮಾರ್ಗ ಅಂಕಣ: ನೆನಪಾದಳು ಅರುಣಾ ಶಾನುಭಾಗ್!‌

ರಾಜಮಾರ್ಗ ಅಂಂಕಣ: ಕೋಲ್ಕತಾದಲ್ಲಿ ನಡೆದ ವೈದ್ಯೆಯ ಬರ್ಬರ ಅತ್ಯಾಚಾರ ಹಾಗೂ ಕೊಲೆಯ ಘಟನೆ ಸುದ್ದಿಯಾಗುತ್ತಿರುವಂತೆಯೇ ನನಪಾಗುತ್ತಿರುವವಳು ಅಂಥದೇ ಒಂದು ಕೃತ್ಯಕ್ಕೆ ಬಲಿಯಾಗಿ ಜೀವಂತ ಶವವಾಗಿ ನರಳಿದ ಅರುಣಾ ಶಾನುಭಾಗ್.

VISTARANEWS.COM


on

ರಾಜಮಾರ್ಗ ಅಂಕಣ aruna shanubhag
Koo

41 ವರ್ಷ ಆಸ್ಪತ್ರೆಯಲ್ಲಿ ಜೀವಚ್ಛವವಾಗಿ ನರಳಿದ ಅತ್ಯಾಚಾರ ಸಂತ್ರಸ್ತೆಯ ಕಥೆ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕೋಲ್ಕತ್ತಾದಲ್ಲಿ (Kolkata horror) ಮೊನ್ನೆ ಓರ್ವ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯ (Physical abuse) ಪ್ರಕರಣದ ಸುದ್ದಿಯು ಸ್ಫೋಟವಾಗಿ ಇಡೀ ಭಾರತ ನ್ಯಾಯಕ್ಕಾಗಿ ಹೋರಾಡಿ ಬೀದಿಗೆ ಇಳಿದ ಘಟನೆ ನಡೆಯಿತು. ಅದೇ ರೀತಿಯಾಗಿ, ಅದಕ್ಕಿಂತ ಬರ್ಬರವಾದ ಒಂದು ಅತ್ಯಾಚಾರದ ಘಟನೆಯು 50 ವರ್ಷಗಳ ಹಿಂದೆ ಮುಂಬಯಿಯಲ್ಲಿ (Aruna Shanbhag) ನಡೆದಿತ್ತು. ಅದಕ್ಕೆ ಬಲಿಯಾದವರು ಬಹಳ ದೊಡ್ಡ ಕನಸು ಹೊತ್ತಿದ್ದ ಓರ್ವ ಸ್ಟಾಫ್ ನರ್ಸ್.

ಆಕೆ ಅರುಣಾ ಶಾನುಭೋಗ

ಹುಟ್ಟಿದ ಊರು ಉತ್ತರ ಕನ್ನಡದ ಹಲ್ಡೀಪುರ (1948). ಸ್ವಾಭಿಮಾನದ ಸಾರಸ್ವತ ಕುಟುಂಬ ಆಕೆಯದ್ದು. ಮಾತೃಭಾಷೆ ಕೊಂಕಣಿ. ನರ್ಸ್ ಆಗಿ ಸೇವೆ ಸಲ್ಲಿಸಬೇಕು ಎಂದು ಕನಸು ಹೊತ್ತು ನರ್ಸಿಂಗ್ ಕೋರ್ಸ್ ಮಾಡಿದಾಕೆ ಅರುಣಾ. ಮುಂದೆ ಆಕೆ ಕೆಲಸಕ್ಕೆ ಸೇರಿದ್ದು ಮುಂಬಯಿಯ ಪರೆಲ್ ಎಂಬಲ್ಲಿ ಇದ್ದ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ. ಕೆಲವೇ ದಿನಗಳಲ್ಲಿ ಆಕೆಯ ಪರಿಚಯ ಆಸ್ಪತ್ರೆಯ ಎಲ್ಲರಿಗೂ ಆಗಿತ್ತು ಅಂದರೆ ಅದಕ್ಕೆ ಕಾರಣ ಆಕೆಯ ಸೇವಾ ಮನೋಭಾವ, ಸೌಂದರ್ಯ ಮತ್ತು ಚುರುಕುತನ. ಆಕೆಯ ಗೆಜ್ಜೆಯ ಘಲ್ ಎಂಬ ಶಬ್ದ ಕೇಳಿದರೆ ರೋಗಿಗಳ ಮುಖದಲ್ಲಿ ನಗು ಚಿಮ್ಮುತ್ತಿತ್ತು. ಅಂತಹ ಅರುಣಾ ಬದುಕಿನಲ್ಲಿಯೂ ಒಂದು ಕರಾಳ ದಿನ ಬಂದೇ ಬಿಟ್ಟಿತು.

27 ನವೆಂಬರ್, 1973ರ ರಾತ್ರಿ!

ಎಂದಿನಂತೆಯೇ ತನ್ನ ಡ್ಯೂಟಿ ಮುಗಿಸಿ ಆಸ್ಪತ್ರೆಯ ನೆಲ ಅಂತಸ್ತಿನ ತನ್ನ ಖಾಸಗಿ ಕೊಠಡಿಯಲ್ಲಿ ಡ್ರೆಸ್ ಬದಲಾವಣೆ ಮಾಡುತ್ತಿದ್ದ ಅರುಣಾ ಮೇಲೆ ಮಸುಕು ಕತ್ತಲೆಯಲ್ಲಿ ತೋಳದಂತೆ ಎರಗಿದ್ದ ಅದೇ ಆಸ್ಪತ್ರೆಯ ಓರ್ವ ಸ್ವೀಪರ್ ಸೋಹನ್ ಲಾಲ್! ಆಕೆ ಪ್ರತಿಭಟನೆ ಮಾಡಿದಾಗ ಆಕೆಯ ಧ್ವನಿ ಅಡಗಿಸಲು ನಾಯಿಯ ಗಟ್ಟಿಯಾದ ಸಂಕಲೆಯನ್ನು ಕುತ್ತಿಗೆಗೆ ಬಿಗಿದು ಕ್ರೂರವಾಗಿ ಅತ್ಯಾಚಾರ ಮಾಡಿಬಿಟ್ಟಿದ್ದ. ಆಗ ಆಕೆಯ ವಯಸ್ಸು ಕೇವಲ 25.
ದುರಂತ ಏನಾಯ್ತು ಎಂದರೆ ಆ ಬಲವಾದ ಕಬ್ಬಿಣದ ಸಂಕಲೆ ಕುತ್ತಿಗೆಗೆ ಬಿಗಿದ ಕಾರಣ ಮೆದುಳಿಗೆ ರಕ್ತ ಸಂಚಾರ ನಿಂತು ಹೋಯಿತು. ಬೆಳಿಗ್ಗಿನತನಕ ಆಕೆ ನರಳಲೂ ತ್ರಾಣ ಇಲ್ಲದೆ ಅರೆಪ್ರಜ್ಞಾವಸ್ಥೆಯಲ್ಲಿ ಅಲ್ಲಿಯೇ ಬಿದ್ದುಕೊಂಡಿದ್ದಳು! ಮರುದಿನ ಬೆಳಿಗ್ಗೆ ಕಸಗುಡಿಸಲು ಬಂದ ಓರ್ವ ಮಹಿಳೆ ಬೊಬ್ಬೆ ಹೊಡೆದು ಜನ ಸೇರಿಸಿ ಆಕೆಯನ್ನು ತುರ್ತುಚಿಕಿತ್ಸಾ ವಿಭಾಗಕ್ಕೆ ಸೇರಿಸಿದರು. ಆಗ ಆಕೆಯ ದೇಹದಲ್ಲಿ ಉಸಿರು ಇತ್ತು ಆದರೆ ಯಾವುದೇ ಸಂವೇದನೆ, ಭಾವನೆ ಇರಲಿಲ್ಲ. ಕಣ್ಣು ತೆರೆದು ಮರದ ಕೊರಡಿನ ಹಾಗೆ ಮಲಗಿದ್ದಳು.

ಪರ್ಸಿಸ್ಟೆಂಟ್ ವೇಜಿಟೆಟಿವ್ ಸ್ಟೇಟ್!

ಮೆದುಳಿನ ಒಂದು ಭಾಗಕ್ಕೆ ತೀವ್ರವಾದ ಆಘಾತವಾದಾಗ ಉಂಟಾಗುವ ಆರೋಗ್ಯ ಸಮಸ್ಯೆ ಇದು. ಅರ್ಧ ಜೀವ, ಅರ್ಧ ಶವ ಅನ್ನುವ ದೈನೇಸಿ ಸ್ಥಿತಿ. ನಿಧಾನ ಉಸಿರಾಟ, ನಾಡಿ ಮಿಡಿತ, ಹೃದಯ ಬಡಿತ ಬಿಟ್ಟರೆ ಬೇರೆ ಯಾವ ಬದುಕಿನ ಲಕ್ಷಣಗಳೂ ಇಲ್ಲ. ಶೂನ್ಯದ ಕಡೆಗೆ ನೆಟ್ಟ ದೃಷ್ಟಿ ನೋಟ, ಭಾವನೆಗಳೇ ಇಲ್ಲದ ಮುಖ, ಸಂವೇದನೆಗಳೇ ಇಲ್ಲದ ದೇಹ, ದೇಹದ ಯಾವ ಭಾಗದಲ್ಲಿಯೂ ಚಲನೆ ಇಲ್ಲದ ಸ್ಥಿತಿ ಆಕೆಯದ್ದು. ಆಕೆ ಅದೇ ಸ್ಥಿತಿಯಲ್ಲಿ, ಅದೇ ಆಸ್ಪತ್ರೆಯ, ಅದೇ ಹಾಸಿಗೆಯಲ್ಲಿ 41 ವರ್ಷಗಳನ್ನು ಹಾಗೆಯೇ ಕಳೆದರು ಅಂದರೆ ಅದು ಎಷ್ಟೊಂದು ಹೃದಯವಿದ್ರಾವಕ ಎಂದು ಊಹೆ ಮಾಡಿಕೊಳ್ಳಿ.

ರಾಜಮಾರ್ಗ ಅಂಕಣ aruna shanubhag
ರಾಜಮಾರ್ಗ ಅಂಕಣ aruna shanubhag

ಆಸ್ಪತ್ರೆಯ ನರ್ಸುಗಳು ಆಕೆಯ ಸೇವೆಗೆ ನಿಂತರು!

ಆಕೆಯ ಊರಿನ ಅಥವಾ ಸಂಬಂಧಿಕರ ಸಂಪರ್ಕವೇ ಇಲ್ಲದ ಸಂದರ್ಭ ಅದೇ ಎಡ್ವರ್ಡ್ ಆಸ್ಪತ್ರೆಯ ನರ್ಸುಗಳು ಆಕೆಯನ್ನು ಪುಟ್ಟ ಮಗುವಿನ ಹಾಗೆ ನೋಡಿಕೊಂಡರು. ಹಲವಾರು ಜನ ಸೇರಿ ಚಿಕಿತ್ಸೆಯ ವೆಚ್ಚವನ್ನು ಭರಿಸಿದರು. ಪ್ರತೀ ದಿನವೂ ಆಕೆಯನ್ನು ಖುಷಿಯಾಗಿಡುವ ಎಲ್ಲ ಪ್ರಯತ್ನವನ್ನೂ ಮಾಡಿದರು. ವರ್ಷವೂ ಆಕೆಯ ಹುಟ್ಟುಹಬ್ಬ ಆಚರಣೆ ಮಾಡಿದರು. ಅದೇ ಹೊತ್ತಿನಲ್ಲಿ ದೇಶದಾದ್ಯಂತ ದಯಾಮರಣದ ಬಗ್ಗೆ ಚರ್ಚೆ ಆಗಿ ಅದನ್ನು ಸುಪ್ರೀಂ ಕೋರ್ಟ್ ಕೈಗೆ ಎತ್ತಿಕೊಂಡರೂ ಆ ನರ್ಸುಗಳು ಆಕೆಯನ್ನು ಜೀವಂತವಾಗಿ ಇಡುವ ಎಲ್ಲಾ ಪ್ರಯತ್ನವನ್ನೂ ಮಾಡಿದರು ಅನ್ನೋದು ಮಾನವೀಯತೆಯ ವಿಶ್ವರೂಪ ಎಂದು ನನ್ನ ಭಾವನೆ.

ಕೊಲೆಗಡುಕನಿಗೆ ಶಿಕ್ಷೆ ಆಯಿತಾ?

ಅದು ಸೋಷಿಯಲ್ ಮೀಡಿಯಾ ಕಾಲ ಅಲ್ಲ. ಕ್ಯಾಂಡಲ್ ಮಾರ್ಚ್, ಪ್ರತಿಭಟನೆ ಯಾವುದೂ ದೊಡ್ಡ ಮಟ್ಟದಲ್ಲಿ ನಡೆಯಲಿಲ್ಲ. ಆದರೂ ಅತ್ಯಾಚಾರಿ ಸೋಹನ್ ಲಾಲ್ ಬಂಧನ ಆಯಿತು. ಕೋರ್ಟಿನಲ್ಲಿ ವಾದ, ಪ್ರತಿವಾದ ಜೋರಾಗಿಯೇ ನಡೆದವು. ಆದರೆ ಸಾಕ್ಷಿಗಳ ಕೊರತೆ ಒಂದೆಡೆ ಆದರೆ ಎಡ್ವರ್ಡ್ ಆಸ್ಪತ್ರೆಯ ಅಸಹಕಾರ (ಅವರು ತಮ್ಮ ಆಸ್ಪತ್ರೆಯ ರೆಪ್ಯೂಟೇಶನ್ ಬಗ್ಗೆ ಹೆದರಿರಬೇಕು)ಗಳಿಂದ ಅತ್ಯಾಚಾರ ಕೇಸ್ ಬಿಗು ಆಗಲೇ ಇಲ್ಲ. ಅವನು ನಮ್ಮ ಸಿಬ್ಬಂದಿಯೇ ಅಲ್ಲ ಎಂದಿತು ಆಸ್ಪತ್ರೆ! ಪರಿಣಾಮವಾಗಿ ಅವನಿಗೆ ಏಳು ವರ್ಷಗಳ ಲಘುವಾದ ಶಿಕ್ಷೆ ಆಯಿತು. ಆತನು ಆ ಶಿಕ್ಷೆಯನ್ನು ಮುಗಿಸಿ ರಾಜಾರೋಷವಾಗಿ ಹೊರಗೆ ಬಂದು ಉತ್ತರಪ್ರದೇಶದ ಒಂದು ಹಳ್ಳಿಗೆ ಹೋಗಿ, ಅಲ್ಲಿ ಮದುವೆಯಾಗಿ ನೆಮ್ಮದಿಯಿಂದ ಬದುಕಿದನು ಎಂದು ಮುಂದೆ ಮಾಧ್ಯಮಗಳು ವರದಿ ಮಾಡಿದವು. ಪಿಂಕಿ ವಿರಾನಿ ಎಂಬ ಪತ್ರಕರ್ತೆಯು ಅರುಣಾಗೆ ನ್ಯಾಯ ಕೊಡಿಸಲು ಎಷ್ಟೋ ಪ್ರಯತ್ನಗಳನ್ನು ಮಾಡಿದರೂ ಸಫಲವಾಗಲಿಲ್ಲ ಅನ್ನೋದು ದುರಂತ!

ಅರುಣಾ ಏನಾದಳು?

42 ವರ್ಷಗಳ ಜೀವನ್ಮರಣದ ಹೋರಾಟದಲ್ಲಿ ನಲುಗಿದ ಅರುಣಾ 2015ರಲ್ಲಿ ನ್ಯುಮೋನಿಯಾ ಕಾಯಿಲೆಯಿಂದ ನಿಧನ ಹೊಂದಿದಳು. ಆಗ ಆಕೆಗೆ 66 ವರ್ಷ. ಅದೇ ನರ್ಸುಗಳು ಆಕೆಯ ಅಂತ್ಯಕ್ರಿಯೆ ಪೂರ್ತಿ ಮಾಡಿದರು. ಮುಂದೆ ಅದೇ ಪಿಂಕಿ ವಿರಾನಿ ಆಕೆಯ ಬದುಕಿನ ಬಗ್ಗೆ ‘ದ ಸ್ಟೋರಿ ಆಫ್ ಅರುಣಾ ‘ ಪುಸ್ತಕವನ್ನು ಬರೆದರು. ಅದು ಭಾರೀ ಜನಪ್ರಿಯ ಆಯಿತು. ‘ಕಥಾ ಅರುಣಾಚೀ ‘ ಎಂಬ ಮರಾಠಿ ನಾಟಕವೂ ವೇದಿಕೆಗೆ ಬಂದು ಕಣ್ಣೀರು ತರಿಸಿತು. ಗುಜರಾತಿ ಭಾಷೆಯಲ್ಲಿ ‘ಜಡ ಚೇತನ ‘ಎಂಬ ಕಾದಂಬರಿ ಬಂದು ಪ್ರಶಸ್ತಿಯನ್ನು ಪಡೆಯಿತು. ಮಲಯಾಳಿ ಭಾಷೆಯಲ್ಲಿ ‘ಮರಂ ಪೇಯ್ಯಂಬೋಲ್’ ಎಂಬ ಸಿನಿಮಾ ಆಕೆಯ ಬದುಕನ್ನು ಆಧರಿಸಿ ಬಂದು ಬೆಳ್ಳಿತೆರೆಯನ್ನು ಏರಿತು.

ಅರುಣಾ ಅಮರತ್ವ ಪಡೆದಳು, ತನ್ನ ಸಾವಿಗೆ ನ್ಯಾಯ ಸಿಗಲಿಲ್ಲ ಎಂಬ ಕೊರಗು ಉಳಿಸಿಕೊಂಡು…

ಇದನ್ನೂ ಓದಿ: ರಾಜಮಾರ್ಗ ಅಂಕಣ: ಆತನ ಬದುಕು ಆತನ ಸಿನೆಮಾ ಕಥೆಗಳಿಗಿಂತ ರೋಚಕ!

Continue Reading
Advertisement
karnataka Weather Forecast
ಮಳೆ1 ಗಂಟೆ ago

Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಮಳೆಯಾಟ; ಗುಡುಗು, ಮಿಂಚು ಸಾಥ್‌

Dina Bhavishya
ಭವಿಷ್ಯ2 ಗಂಟೆಗಳು ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

navaratri
ಬೆಂಗಳೂರು13 ಗಂಟೆಗಳು ago

Navaratri : ನವರಾತ್ರಿ ಸಂಭ್ರಮದಲ್ಲಿ ಗೊಂಬೆಗಳಂತೆ ಮಿಂಚಿದ ಹೆಂಗಳೆಯರು

Mysuru News
ಮೈಸೂರು13 ಗಂಟೆಗಳು ago

Mysuru News : ಪರ್ಯಾವರಣ ಸಂರಕ್ಷಣ ಗತಿವಿಧಿಯಿಂದ ತ್ಯಾಜ್ಯ ಸಂಗ್ರಹಣ ಅಭಿಯಾನಕ್ಕೆ ಚಾಲನೆ

Kodagu News
ಕೊಡಗು13 ಗಂಟೆಗಳು ago

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Actor Darshan Renukaswamy murder case
ಬೆಂಗಳೂರು14 ಗಂಟೆಗಳು ago

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Bomb threat to BMS, MS Ramayya and four other colleges in Basavanagudi Bengaluru
ಬೆಂಗಳೂರು14 ಗಂಟೆಗಳು ago

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Medical Seat
ಬೆಂಗಳೂರು15 ಗಂಟೆಗಳು ago

Medical Seat : ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಉದ್ಯಮಿಗೆ 1.5 ಕೋಟಿ ರೂ. ವಂಚನೆ

Murder case
ಚಿತ್ರದುರ್ಗ16 ಗಂಟೆಗಳು ago

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Namma metro ticket prices will be hiked soon
ಬೆಂಗಳೂರು17 ಗಂಟೆಗಳು ago

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ದಿನ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌