Marriage Problem: ವಿವಾಹವೆಂಬ ಬಂಧನದಿಂ ದೂರ ನಿಲ್ವನೇ ಮಾಡರ್ನ್ ಇಂಡಿಯನ್ ಪುರುಷ? - Vistara News

ಅಂಕಣ

Marriage Problem: ವಿವಾಹವೆಂಬ ಬಂಧನದಿಂ ದೂರ ನಿಲ್ವನೇ ಮಾಡರ್ನ್ ಇಂಡಿಯನ್ ಪುರುಷ?

ವಿವಾಹವೆನ್ನುವುದು ಗಂಡು ಹೆಣ್ಣಿನ ಲಿಂಗಾನುಪಾತ, ವಿವಿಧ ಸಂಪ್ರದಾಯಗಳು, ಆಧುನಿಕ ಸ್ಪರ್ಧಾತ್ಮಕ ಜಗತ್ತು ಸೇರಿ ಅನೇಕ ಅಂಶಗಳನ್ನು ಆಧರಿಸಿದೆ.

VISTARANEWS.COM


on

marriage-problem-in-youth
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Human intelligence

ಸೋಮೇಶ್ವರ ಗುರುಮಠ
ಮದುವೆ ಎಂಬುದು ಪ್ರತಿಯೋರ್ವ ವ್ಯಕ್ತಿಯ ಬಾಳಿನ ಅತ್ಯಂತ ಪ್ರಮುಖ ಘಟ್ಟ. ಭಾರತೀಯ ಪರಂಪರೆಯಲ್ಲಂತೂ ಗೃಹಸ್ಥ ಜೀವನ ಅತ್ಯಂತ ಹೊಣೆಗಾರಿಕೆಯುಳ್ಳದ್ದೆಂಬುದು ಸಾರ್ವಕಾಲಿಕವಾಗಿ ಸಾಬೀತಾಗುತ್ತಲೇ ಬಂದಿದೆ. ಯೋಗ್ಯನು ಮಾತ್ರವೇ ವಿವಾಹಕ್ಕೆ ಅರ್ಹನೆಂಬ ನಂಬುಗೆಯಿಲ್ಲಿದೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಒಂದೆಡೆ ವಿವಾಹವನ್ನು ತಿರಸ್ಕರಿಸಿ ನಿಂತ ಯುವಕರೊಂದೆಡೆಯಾದರೆ, ವಿವಾಹಕ್ಕೆ ಅರ್ಹತೆಯನ್ನು ಹೊಂದಿಯೂ ಕನ್ಯೆ ಸಿಗದ ಕಾರಣಕ್ಕೆ ಅವಿವಾಹಿತರಾಗಿಯೇ ಉಳಿದ ಪ್ರವರ್ಗ ಮತ್ತೊಂದೆಡೆ.

2014ರಲ್ಲಿ ಲೋಕಸಭಾ ಚುನಾವಣೆಯ ಕಾಲಘಟ್ಟದಲ್ಲಿ ಹರಿಯಾಣದ ಪ್ರದೀಪ್ ಸಿಂಗ್ ಸೇರಿದಂತೆ ಇತರೆ ಯುವಕರ ಪಡೆಯೊಂದು ರಾಜಕಾರಣಿಗಳ ಸನಿಹ ತೆರಳಿ ವಿಚಿತ್ರವಾದ ಬೇಡಿಕೆಯೊಂದನ್ನು ಇಟ್ಟರಂತೆ. ಏನೆಂದರೆ, ”ಬಹು ದಿಲಾವೋ ವೋಟ್ ಪಾವೋ”( ಮತಪಡೆಯಲು ಮನೆಗೆ ಸೊಸೆಯನ್ನು ನೀಡಿ) ಎಂಬ ಬೇಡಿಕೆ. ”ಜಿಂದ್ ಕುವಾರಾ ಯೂನಿಯನ್” ಎಂಬ ಅವಿವಾಹಿತ ಯುವಕರ ಸಂಘವೇ ಇಂತಹ ಬೇಡಿಕೆಯನ್ನು ಮುಂದೆ ಇಟ್ಟಿತ್ತು. ಇನ್ನು ಪ್ರದೀಪ್ ಸಿಂಗ್ ಇದೇ ಸಂಘಟನೆಯ ಭಾಗವಾಗಿದ್ದರು. ನಿಮಗೆ ತಕ್ಷಣವೇ ಮತವನ್ನು ನೀಡಲು ನಾವು ಸಿದ್ದರಿದ್ದೇವೆ, ಆದರೆ ನಮಗೆ ವರಿಸಲು ಕನ್ಯೆಯನ್ನು ಅರ್ಥಾತ್ ಹೆಂಡತಿಯನ್ನು ಹುಡುಕಿ ಕೊಡುವ ಹೊಣೆಗಾರಿಕೆಯನ್ನು ನೀವು ಹೊತ್ತುಕೊಳ್ಳಬೇಕು ಎಂದಿದ್ದರು. ಆಗ ಆಡಳಿತ ಪಕ್ಷದ ಸಂಸದರೊಬ್ಬರು ”ನಮ್ಮ ಪಕ್ಷಕ್ಕೆ ಮತ ಹಾಕಿದರೆ, ಮದುವೆಯಾಗದ ಹುಡುಗರಿಗೆ ಹೆಂಡತಿ ಸಿಕ್ಕಂತೆಯೇ” ಎಂದು ನೀಡಿದ ಹೇಳಿಕೆ ಭಾರಿ ವೈರಲ್ ಆಗಿತ್ತು.

2007ರಲ್ಲಿ ನಡೆದ ಲೋಕನೀತಿ ಸಿ.ಯಸ್.ಡಿ.ಎಸ್ ಯೂಥ್ ಸ್ಟಡೀಸ್‌ರವರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇಕಡಾ 51 ರಷ್ಟು ಯುವಕರು ಅಂದಿನ ಸಂದರ್ಭದಲ್ಲಿ ಅವಿವಾಹಿತರಾಗಿ ಉಳಿದಿದ್ದರು. ತದನಂತರ, 2016 ರಲ್ಲಿ, ಅಂದರೆ ಸರಿಯಾಗಿ 7 ವರ್ಷಗಳ ಆನಂತರ ನಡೆದ ಲೋಕನೀತಿ ಸಿ.ಯಸ್.ಡಿ.ಎಸ್ ಯೂಥ್ ಸ್ಟಡೀಸ್ ರವರ ಸಮೀಕ್ಷೆಯಲ್ಲಿ ಶೇಕಡಾವಾರು ಪ್ರಮಾಣ 61% ಗೆ ಏರಿಕೆಯಾಗಿತ್ತು. ಹಾಗಿದ್ದಲ್ಲಿ ಯುವಕರಿಗೇನು ಮದುವೆಯಲ್ಲಿ ಆಸಕ್ತಿಯಿಲ್ಲವೆಂದೇನಿಲ್ಲ, ಬದಲಿಗೆ ಮದುವೆಯಾಗಲು ಎಲ್ಲಿಯೂ ಕನ್ಯೆಯೇ ಸಿಗುತ್ತಿಲ್ಲವೆಂಬುದು ಅವರ ಆಪಾದನೆಯಾಗಿತ್ತು. ಹೀಗಾಗಿಯೇ ಹರಿಯಾಣ ರಾಜ್ಯದಲ್ಲಿ ವಧುವನ್ನು ಹುಡುಕಲು ಪಕ್ಕದ ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳ ಮೊರೆ ಹೋಗುತ್ತಾರೆ. ಅಲ್ಲಿಂದ ಬಂದಂತಹ ವಧುವನ್ನು ”ಮೋಲ್ ಕಿ ಬಹುಯೇ” (ಖರೀದಿಸಿ ತಂದ ಹೆಂಡತಿಯರು) ಎಂದಿವರು ಸಂಬೋಧಿಸುತ್ತಾರೆ. ಮೇಲ್ಕಂಡ ಕೆಲ ರಾಜ್ಯಗಳಲ್ಲಿ ಕಡುಬಡತನದ ಕುಟುಂಬಗಳ ಸಂಖ್ಯೆಯೇ ಹೆಚ್ಚಿರುವ ಕಾರಣ ವರದಕ್ಷಿಣೆಯನ್ನು ನೀಡಿಯೋ ಅಥವಾ ಹಣ ಪಡೆದು ಅನ್ಯ ಅನೈತಿಕ ಮಾರ್ಗಗಳಿಂದ ತಮ್ಮ ಮಕ್ಕಳನ್ನು ಹಸ್ತಾಂತರಿಸುವ ಎಷ್ಟೋ ಕುಟುಂಬಗಳು ಮತ್ತು ಜಾಲಗಳಿವೆ. ಇದುವೇ ಹ್ಯೂಮನ್ ಟ್ರಾಫಿಕಿಂಗ್ ನಂತಹ ಸಮಸ್ಯೆಗಳಿಗೆ ನಾಂದಿ ಹಾಡುತ್ತವೆ.

ಹಾಗಿದ್ದಲ್ಲಿ ನವಯುಗದಲ್ಲಿ ಬಹುಯುವಕರು ಅವಿವಾಹಿತರಾಗಿಯೇ ಉಳಿಯಲು ಪ್ರಮುಖವಾದ ಕಾರಣಗಳೇನೆಂದರೆ –

1. ಲಿಂಗ ಅನುಪಾತದಲ್ಲಿನ ಅಜಗಜಾಂತರ ವ್ಯತ್ಯಾಸ – ಪ್ರದೀಪ್ ಸಿಂಗ್ ಅವರೇ ಹೇಳುವಂತೆ ಬಹುಪಾಲು ಯುವಕರಿಗೆ ಮದುವೆಯಾಗೋಣವೆಂದರೆ ಕನ್ಯೆ ಸಿಗುತ್ತಿಲ್ಲ. ಇದಕ್ಕೆ ಕಾರಣವೇ ಲಿಂಗ ಅನುಪಾತದಲ್ಲಿನ ವ್ಯತ್ಯಾಸ. ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ 2015 -16 ರ ಪ್ರಕಾರ ಮತ್ತು ವರ್ಷದ ಹಿಂದಷ್ಟೇ ನೀಡಿದ ಅಂಕಿ ಅಂಶಗಳನ್ನು ಗಮನಿಸಿದರೆ ಸದ್ಯ ವಯಸ್ಕರ ಮಟ್ಟದಲ್ಲಿ 1000 ಪುರುಷರಿಗೆ 1020 ಸಂಖ್ಯೆಯಲ್ಲಿ ಮಹಿಳೆಯರಿದ್ದರೂ ಹೆಣ್ಣು ಮಗುವಿನ ಜನನ ಪ್ರಮಾಣದಲ್ಲಿ ಯಾವುದೇ ಪ್ರಗತಿಯಿಲ್ಲವಂತೆ. PEW  ರಿಸರ್ಚ್ ಪ್ರಕಾರ ಭಾರತದಲ್ಲಿ ಪ್ರತೀ 1000 ಗಂಡು ಮಗುವಿಗೆ 925 ರಂತೆ ಹೆಣ್ಣು ಮಗುವಿನ ಜನನವಾಗುತ್ತಿದೆ. ಅಂತೆಯೇ UNFPA ರವರ 2020 ರಲ್ಲಿ ಪ್ರಕಟಿತವಾದ ವರದಿಯ ಪ್ರಕಾರ 2013 ರಿಂದ 2017 ರವರೆಗೂ ಅಂದಾಜು 4,60,000 ದಷ್ಟು ಹೆಣ್ಣುಮಕ್ಕಳ ಜನನ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಮೇಲಿನ ಅನುಪಾತವೂ ಸಹ ಅಪಾಯಕಾರಿ ಹಂತದಲ್ಲಿಯೇ ಉಂಟು. ಹಾಗಿದ್ದಲ್ಲಿ ಇದಕ್ಕೆ ಪ್ರಮುಖ ಕಾರಣವೇನು? ನಮ್ಮ ದೇಶದ ಕೆಲ ಸಮುದಾಯಗಳಲ್ಲಿ ಇಂದಿಗೂ ಮನೆ ಮಾಡಿರುವ ಪೂರ್ವಾಗ್ರಹ ಪೀಡಿತವಾದ ತಾರತಮ್ಯ ಮನೋಭಾವವೆನ್ನಬಹುದು. ಹೆಣ್ಣು ಮಗುವಿಗಿಂತ ಗಂಡು ಮಗು ಜನಿಸಿದರೆ ಹೆಚ್ಚಿನ ಸಂಭ್ರಮ. ಏಕೆಂದರೆ, ವರದಕ್ಷಿಣೆಯ ಚಿಂತೆಯೆಲ್ಲ, ಆಕೆಯನ್ನು ರಕ್ಷಿಸುವ ಹೊಣೆಗಾರಿಕೆಯಿಲ್ಲ, ಅಲ್ಪ ಎಡವಿದರೂ ಅವಮಾನಕ್ಕೀಡುಮಾಡುವ ಗಂಡಿನ ಮನೆಯವರ ಕುರಿತು ಯೋಚನೆಯಿಲ್ಲ. ಇದೆ ಜತೆಗೆ, ವಂಶವನ್ನು ಮುನ್ನಡೆಸಲು ಮತ್ತು ನಿಧನನಾದ ನಂತರ ಅಂತಿಮ ಸಂಸ್ಕಾರ ಮತ್ತು ಕ್ರಿಯಾವಿಧಿ ನೆರವೇರಿಸಲು ಗಂಡು ಮಗಯವೇ ಬೇಕು ಎಂಬ ಮನಃಸ್ಥಿತಿಯೂ ಕಾರಣ. ಇದೇ ಕಾರಣಕ್ಕೆ ಹರಿಯಾಣದಂತೆಯೇ ಬಹುಪಾಲು ರಾಜ್ಯಗಳಲ್ಲಿಯೂ ಇಂತಹುದೇ ಸಮಸ್ಯೆ ತಲೆದೂರುತ್ತಿದೆ. 

ಹಾಗಿದ್ದಲ್ಲಿ ಈ ಅನುಪಾತದಲ್ಲಿನ ವ್ಯತ್ಯಾಸ ಸೃಷ್ಟಿಸಿರುವ ಅಲ್ಲೋಲ ಕಲ್ಲೋಲಗಳ ಪರಿಣಾಮ ಕೇವಲ ಪುರುಷರ ಮೇಲಾಗುತ್ತಿದೆಯೇ? ಇಲ್ಲ. ಇದರ ಪರಿಣಾಮ ಮಹಿಳೆಯರ ಮೇಲೂ ಬೀರುತ್ತಿದೆ. ಇತ್ತೀಚಿನ ಯುವತಿಯರನ್ನು ಎರೆಡು ವಿಭಾಗಗಳಲ್ಲಿ ವಿಂಗಡಿಸಬಹುದಾಗಿದೆ. ಮೊದಲನೇಯದಾಗಿ ಸಾಮಾಜಿಕವಾಗಿ, ಶಯಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಧೃಢತೆಯನ್ನು ಹೊಂದಿದ ಯುವತಿ. ಆಕೆ ತನ್ನಿಚ್ಚೆಯಂತೆ ಯೋಗ್ಯ ವರನನ್ನು ಹುಡುಕಿ ಮದುವೆಯಾಗುವ ಅಥವಾ ಅವನನ್ನು ಅಷ್ಟೇ ಅಧಿಕಾರದಿಂದ ತಿರಸ್ಕರಿಸುವ ಶಕ್ತಿಯನ್ನು ಹೊಂದಿದ್ದಾಳೆ.

ಉತ್ತರ ಪ್ರದೇಶದಲ್ಲಂತೂ ‘ವರ’ನೋರ್ವ ಕನ್ನಡಕವನ್ನು ಧರಿಸುತ್ತಾನೆಂಬ ಕಾರಣಕ್ಕೆ ಮತ್ತೋರ್ವ ಯುವತಿ ತನ್ನ ಹುಡುಗನಿಗೆ ಗಣಿತದ ಸಮಸ್ಯೆಗಳನ್ನು ಬಿಡಿಸಲು ಬರದೆಂಬ ಕಾರಣಕ್ಕೆ ಮದುವೆ ನಿರಾಕರಿಸಿದಂತಹ ಉದಾಹರಣೆಗಳು ಒಂದೆಡೆಯಿವೆ. ಆದರೆ ಮತ್ತೊಂದೆಡೆ ಹರಿಯಾಣದ ”ಮೋಲ್ ಕಿ ಬಹುಯೇ” ರೂಪದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ದುರ್ಬಲರಾಗಿರುವ ಯುವತಿಯರ ಕುಟುಂಬಗಳು ಬಹುಬೇಗನೆ ಅವರನ್ನು ಸಂಸಾರಕ್ಕೆ ನೂಕಿ ಬಿಡುತ್ತವೆ. ಇನ್ನು ತಮಿಳುನಾಡಿನ ತಮಿಳ್ ಬ್ರಾಹ್ಮಣ ಅಸೋಸಿಯೇಷನ್ ಅಧ್ಯಕ್ಷರಾದ ‘ನಾರಾಯಣನ್’ ಹೇಳುವಂತೆ  ತಮ್ಮ ಸಮಾಜದ ಪ್ರತೀ 10 ಯುವಕರಿಗೆ ತಮಿಳುನಾಡಿನಲ್ಲಿ ಕೇವಲ 6 ಜನ ಕನ್ಯೆಯರಿರುವ ಕಾರಣ ಕೋ ಆರ್ಡಿನೇಟರ್ಗಳ ಸಹಾಯದಿಂದ ಯು.ಪಿ ಮತ್ತು ಬಿಹಾರದಂತಹ ರಾಜ್ಯದಿಂದ ಕನ್ಯೆ ತರುವ ಅಥವಾ ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರಂತೆ.

2. ಸರ್ಕಾರಿ ನೌಕರಿ ಹೊಂದಿರುವ ವರನ ಅನ್ವೇಷಣೆ – ಬಹುಶಃ ಇತ್ತೀಚಿನ ದಿನಮಾನಗಳಲ್ಲಿ ವಧುವರರ ಅನ್ವೇಷಣಾ ಕೇಂದ್ರಗಳ ಬದಲು ಸರ್ಕಾರಿ ನೌಕರಿ ವರ ಅನ್ವೇಷಣಾ ಕೇಂದ್ರಗಳು ಅಘೋಷಿತವಾಗಿ ಸಮಾಜದಲ್ಲಿ ಪ್ರಾರಂಭಿಸಲ್ಪಟ್ಟಿವೆಯೆಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ, ಪ್ರತೀ ಕುಟುಂಬವೂ ತಮ್ಮ ಹುಡುಗಿಯನ್ನು ವರಿಸುವ ಹುಡುಗನ ಕೈಯಲ್ಲಿ ಸರ್ಕಾರಿ ಕೆಲಸವಿರಬೇಕೆಂದು ಬಯಸುತ್ತದೆ. ಕಾರಣ ಅದು ಮಾತ್ರವೇ ಸುರಕ್ಷಿತ ಮತ್ತು ನಿರಂತರ ಆರ್ಥಿಕ ನೆರವನ್ನು ನೀಡಬಲ್ಲದೆಂಬುದು ಅವರ ಅಭಿಪ್ರಾಯ. ಕಾಶ್ಮೀರ, ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ, ಮಹಾರಾಷ್ಟ್ರಾದ ಮರಾಠವಾಡದಲ್ಲಿ ಇಂತಹ ಬೇಡಿಕೆಗಳಿವೆ. ಮರಾಠವಾಡದಲ್ಲಿಯಂತೂ ಯಾವ ರೈತಾಪಿ ಕುಟುಂಬವೂ ತಮ್ಮ ಮಗಳನ್ನು ಮತ್ತೋರ್ವ ರೈತನಿಗೆ ನೀಡಿ ಮದುವೆ ಮಾಡಿಸುವುದಿಲ್ಲ. ಕಾರಣವೇನೆಂದರೆ, ತಮ್ಮ ಬದುಕಿನಂತೆಯೇ ಆಕೆಯ ಬದುಕೂ ಸಹ ಆರ್ಥಿಕವಾಗಿ ಅಸ್ಥಿರವಾಗಿರಬಾರದೆಂದು ಹೇಳುತ್ತಾರೆ. ಈ ಸಮಸ್ಯೆಯನ್ನು ಕಳೆದ ವರ್ಷ ಮಂಡ್ಯದಲ್ಲಿಯಾದ ವಧು ಹುಡುಕಿ ಕೊಡಿ ಎಂಬ ಘಟನೆಗೂ ತಾಳೆ ಹಾಕಿ ನೋಡಿದರೆ ನಿಜವಾದ ಸಮಸ್ಯೆಯ ಮೂಲವನ್ನು ಅರಿಯಬಹುದು. ಖಾಸಗಿ ಕ್ಷೇತ್ರಗಳಲ್ಲಿಯೂ ಲಕ್ಷಾಂತರ ರೂಪಾಯಿಯನ್ನು ಗಳಿಸಬಹುದೆಂಬ ಪರಿಕಲ್ಪನೆಯನ್ನು ಇಂತಹ ಕುಟುಂಬಗಳಿಗೆ ಕಟ್ಟಿಕೊಡಲು ಬಹುಶಃ ಅಂಬಾನಿಯವರೇ ಬರಬೇಕೇನೋ?

3. ಆರ್ಥಿಕ ಅಸುರಕ್ಷತೆಯ ಭಾವ – ಇತ್ತೀಚಿಗೆ, ಭಾರತದ ಸುಮಾರು 10,000 ಸಂಖ್ಯೆಯ ತರುಣವರ್ಗವನ್ನು ಗುರಿಯಾಗಿಸಿಕೊಂಡು ನಡೆಸಿದ YouGov-Mint-CPR Millenial ಅಧ್ಯಯನದ ಪ್ರಕಾರ ಶೇಕಡಾ 40 ರಷ್ಟು ತರುಣರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರಂತೆ. ಇದಕ್ಕೆ ಪ್ರಮುಖ ಕಾರಣವೇ ಆರ್ಥಿಕ ಅಸುರಕ್ಷತೆಯ ಭಾವ. ಜೀವನದಲ್ಲಿ ಸೆಟಲ್ ಆಗಬೇಕೆಂದು ಸುಮ್ಮನಿರುವರು. ವಯಸ್ಸು ಮೂವತ್ತೈದಾದರೂ ಮದುವೆಯ ಗೋಜಲಿಗೆ ತೆರಳದ ಹಲವಾರು ಯುವಕರನ್ನಿಂದು ಕಾಣಬಹುದು.

ಇದರ ಜೊತೆಜೊತೆಗೆ ತಮ್ಮ ಮಗನಿಗೆ ಕನ್ಯೆ ಸಿಗದ ಕಾರಣ ಮಾನಸಿಕ ಒತ್ತಡಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ ಪಾಲಕರ ಉದಾಹರಣೆಗಳೂ ಉಂಟು. ಮಹಾರಾಷ್ಟ್ರದಲ್ಲಿಯಂತೂ ಯುವಕರ ಪಡೆಯೊಂದು ಕುದುರೆಯ ಮೇಲೆ ಕುಳಿತು ವರರಂತೆ ಸಿಂಗಾರಗೊಂಡು ಡಿಸ್ಟ್ರಿಕ್ ಕಲೆಕ್ಟರ್ ಆಫೀಸಿನ ಎದುರು ತೆರಳಿ ತಮಗೆ ವಧುವನ್ನು ಹುಡುಕಿ ಕೊಡುವಂತೆ ಮನವಿ ಸಲ್ಲಿಸಿದ್ದ ಘಟನೆಯೂ ಉಂಟು. ಅವರಲ್ಲಿ 37 ವರ್ಷದ ವ್ಯಕ್ತಿಯೊಬ್ಬರು ಅವಿವಾಹಿತರಾಗಿರುವ ಕಾರಣ ತಮ್ಮ ಮೇಲೆ ಉಂಟಾಗುತ್ತಿರುವ ಮಾನಸಿಕ ದುಷ್ಪಾರಿಣಾಮಗಳನ್ನು ಮಾಧ್ಯಮದ ಮುಂದೆ ಬಹಿರಂಗವಾಗಿಯೇ ಹೇಳಿಕೊಂಡಿದ್ದೂ ಇದೆ. ನಮ್ಮ ಪುರುಷ ಪ್ರಧಾನ ಸಮಾಜದಲ್ಲಂತೂ ಪುರುಷರ ಮಾನಸಿಕ ಒತ್ತಡ, ಕ್ಷೋಭೆಗಳಂತಹ ಸಮಸ್ಯೆಗಳನ್ನು ಚರ್ಚಿಸಲು ಮುಕ್ತವಾದ ವಾತಾವರಣ ದೊರೆಯುವುದೇ ವಿರಳಾತೀವಿರಳವೆನ್ನಬಹುದು.

ಈ ಮೂರು ಪ್ರಮುಖ ಕಾರಣಗಳ ಜೊತೆಗೆ ವಿವಾಹವಾದರೆ ಪುರುಷನು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುವ ಸಂಭವ ಅತ್ಯಂತ ಕಡಿಮೆಯಾಗಿರುತ್ತದೆಂಬ ಸಮೀಕ್ಷಾ ವರದಿಗಳೂ ಉಂಟು. ಏಕೆಂದರೆ, ಆತನಿಗೆ ಕೌಟುಂಬಿಕ ಜವಾಬ್ದಾರಿಯಿರುತ್ತದೆ, ಜೊತೆಜೊತೆಗೆ ಸಮಾಜ ಆತನನ್ನು ನೋಡುವ ರೀತಿಯಲ್ಲೂ ವ್ಯತ್ಯಾಸವಿರುತ್ತದೆ. ಆತ ಸ್ವಲ್ಪವೇ ಎಡವಿದರೂ ಗೌರವಕ್ಕೆ ಧಕ್ಕೆಯಾಗುವ ಸಂದರ್ಭಗಳು ಬಂದೊದಗಬಹುದು. ಹೀಗಾಗಿಯೇ ಆತ ಕುಕೃತ್ಯಗಳಲ್ಲಿ ಭಾಗಿಯಾಗನೆಂದು ಅಮೆರಿಕೆಯ ಬ್ಯುರೋ ಆಫ್ ಜಸ್ಟಿಸ್  ಸಮೀಕ್ಷೆ ಹೇಳುವುದು. ಆದರೆ ಭಾರತದ ಗೃಹಸ್ಥ ಆಶ್ರಮದ ಪ್ರವೇಶ ನಿಬಂಧನೆಗಳ ಅಂತರ್ಯವೇ ಇವುಗಳಿಗಿಂತ ಭಿನ್ನವಾಗಿ ಆತ ಅತ್ಯಂತ ಯೋಗ್ಯನಾದ ಮೇಲೆಯೇ ವಿವಾಹಕ್ಕೆ ಅರ್ಹನೆಂದು ನುಡಿಯುತ್ತವೆ. ಯಾರೇನೇ ನುಡಿಯಲಿ ”ವಿವಾಹವೆಂಬ” ಬಂಧನದಿಂ ನಮ್ಮ ಮಾಡರ್ನ್ ಇಂಡಿಯನ್ ಪುರುಷ ದೂರ ನಿಂತಿರುವುದಂತೂ ಸುಳ್ಳಲ್ಲ.

ಲೇಖಕ: ಸೋಮೇಶ್ವರ ಗುರುಮಠ ಅವರು ಉದಯೋನ್ಮುಖ ಲೇಖಕ, ವಾಗ್ಮಿ, ಕಿರುಚಿತ್ರ ನಿರ್ದೇಶಕ, ಹಾಡುಗಾರ, ಕವಿ, ನಿರೂಪಕ, ಅಂಕಣಗಾರ ಹಾಗೂ ರಾಗ ಸಂಯೋಜಕ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
1 Comment

1 Comments

  1. H M Sriguruprakash

    16 February 2023, 2:44 PM at 2:44 pm

    Very well explained….

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

ರಾಜಮಾರ್ಗ ಅಂಕಣ: ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ. ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

VISTARANEWS.COM


on

ರಾಜಮಾರ್ಗ ಅಂಕಣ virat kohli rohit sharma
Koo

ಚಾಂಪಿಯನ್ ಆಟಗಾರರು ಮತ್ತು ಟೀಮ್ ಇಂಡಿಯಾ ಗೆಲುವು

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಭಾವುಕ ಕ್ಷಣಗಳನ್ನು ಭಾರತದ ಕೋಟಿ ಕೋಟಿ ಕ್ರಿಕೆಟ್ (Cricket) ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ.

ಸೂರ್ಯಕುಮಾರ್ (Suryakumar yadav) ಹಿಡಿದ ಅದ್ಭುತವಾದ ಕ್ಯಾಚ್, ವಿರಾಟ್ ಕೊಹ್ಲಿಯ ಹೀರೋಯಿಕ್ ಇನ್ನಿಂಗ್ಸ್, ಬುಮ್ರಾ, ಹಾರ್ದಿಕ್, ಆರ್ಷದೀಪ್ ಬೌಲಿಂಗ್‌ನಲ್ಲಿ ತೋರಿದ ಮ್ಯಾಜಿಕ್, ರೋಹಿತ್ ಶರ್ಮಾ (Rohit Sharma) ತೋರಿಸಿದ ತಾಳ್ಮೆ, ಅಕ್ಷರ್ ಪಟೇಲ್ ಆಲ್ರೌಂಡ್ ಆಟ……ಇದ್ಯಾವುದೂ ನಮಗೆ ಮರೆತು ಹೋಗೋದಿಲ್ಲ.

ಭರವಸೆ ನಮ್ಮನ್ನು ಗೆಲ್ಲಿಸಿತು

ಚಾಂಪಿಯನ್ ಆಟಗಾರರ ಮೇಲೆ ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಇಟ್ಟ ಭರವಸೆ ನಿಜ ಆಗಿದೆ. ವಿಶ್ವಕಪ್ಪಿನ ಹಿಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸತತವಾಗಿ ವೈಫಲ್ಯ ಕಂಡಾಗ ಆತನಿಗೆ ವಿಶ್ರಾಂತಿ ಕೊಡಿ, ಆತನಿಗೆ ಓಪನಿಂಗ್ ಸ್ಲಾಟ್ ಬೇಡವೇ ಬೇಡ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸಿ ಎಂದೆಲ್ಲ ಟ್ರೋಲ್ ಮಾಡಿದವರಿಗೆ ಈ ಬಾರಿ ಸರಿಯಾದ ಉತ್ತರ ದೊರೆತಿದೆ. ಚಾಂಪಿಯನ್ ಆಟಗಾರ ಯಾವತ್ತೂ ದೊಡ್ಡ ಮ್ಯಾಚಲ್ಲಿ ಮಿಂಚು ಹರಿಸುತ್ತಾನೆ.

ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು!

ಆತ ಸತತವಾಗಿ ಸೋತು ಅಳುತ್ತಾ ಕೂತಾಗ ರಾಹುಲ್ ದ್ರಾವಿಡ್ ಹೇಳಿದ ಮಾತನೊಮ್ಮೆ ಸೂಕ್ಷ್ಮವಾಗಿ ಗಮನಿಸಿ.
‘ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು. ನಮಗೆ ನಂಬಿಕೆ ಇದೆ’ ಎಂದು. ಆತನ ಬ್ಯಾಟಿಂಗ್ ಕ್ರಮಾಂಕವನ್ನು ಕೂಡ ಬದಲಾವಣೆ ಮಾಡದೆ ಆತನ ನೆರವಿಗೆ ನಿಂತವರು ಟೀಮ್ ಮ್ಯಾನೇಜ್ಮೆಂಟ್ ಮತ್ತು ಟೀಮ್ ಕೋಚ್ ರಾಹುಲ್ ದ್ರಾವಿಡ್. ಚಾಂಪಿಯನ್ ವಿರಾಟ್ ಕೊಹ್ಲಿ ಇಂದು ಆವರ
ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ಹಾರ್ದಿಕ ಪಾಂಡ್ಯನನ್ನು ಟ್ರೋಲ್ ಮಾಡಿದವರಿಗೆ ಈ ಗೆಲುವು ಅರ್ಪಣೆ!

ಅದೇ ರೀತಿ ನಮ್ಮ ಹಾರ್ದಿಕ್ ಪಾಂಡ್ಯನ ಬಗ್ಗೆ ಗಮನಿಸಿ. ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಆತನು ಸತತವಾಗಿ ಬೈಗುಳ ತಿಂದ ಆಟಗಾರ. ಆತ ವಿಶ್ವಕಪ್ ತಂಡಕ್ಕೆ ಆಯ್ಕೆ ಆದಾಗ ಎಷ್ಟೊಂದು ಜನರು ರೊಚ್ಚಿಗೆದ್ದು ಬೈದವರಿದ್ದರು! ಆತನ ಖಾಸಗಿ ಜೀವನದ ಮೇಲೆ ಕೆಸರು ಎರಚುವ ಕೆಲಸ ಕೂಡ ಆಗಿತ್ತು. ಅಂತವನ ಕೈಗೆ ಪಂದ್ಯದ 20ನೇ ಓವರು ಕೊಡುವುದೆಂದರೆ? ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಆತನ ಮೇಲಿಟ್ಟ ನಂಬಿಕೆಗೆ ಆತನು ಎಷ್ಟೊಂದು ಅದ್ಭುತವಾಗಿ ಉತ್ತರ ಕೊಟ್ಟು ಬಿಟ್ಟ ನೋಡಿ. ಚಾಂಪಿಯನ್ ಎಂದಿಗೂ ಚಾಂಪಿಯನ್ ಆಗಿರುತ್ತಾನೆ.

ರೋಹಿತ್ ಶರ್ಮಾ ನಾಯಕತ್ವವನ್ನು ಪ್ರಶ್ನೆ ಮಾಡಿದವರಿಗೆ, ಆತ ಸ್ವಾರ್ಥಿ ಎಂದು ಟೀಕೆ ಮಾಡಿವರಿಗೆ ಇಲ್ಲಿ ಸರಿಯಾದ ಉತ್ತರ ದೊರೆತಿದೆ. ಟೀಮ್ ಆಡಳಿತ ಯುವ ಆಟಗಾರರ ಮೇಲೆ ತೋರಿದ ಕಾಳಜಿಯಿಂದ ಶಿವಂ ದುಬೆ, ಆಕ್ಷರ್ ಪಟೇಲ್ ಮೊದಲಾದ ಯಂಗಸ್ಟರ್ಸ್ ಒಳ್ಳೆ ಆಟಗಾರರಾಗಿ ಮಿಂಚಲು ಸಾಧ್ಯವಾಯಿತು. ಅವರಿಗೆ ಖಚಿತವಾಗಿ ಒಳ್ಳೆಯ ಭವಿಷ್ಯವಿದೆ.

ಒಂದು ಪಂದ್ಯ – ಹಲವು ಪಾಠ!

ಭಾರತ ಟಿ 20 ವಿಶ್ವಕಪ್ಪನ್ನು ಅರ್ಹವಾಗಿ ಗೆದ್ದು ಬೀಗಿತು, ವಿರಾಟ್ ಕೊಹ್ಲಿ (Virat Kohli) ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಗೆಲುವಿನ ವಿದಾಯ ನೀಡಿತು, ರೋಹಿತ್ ಶರ್ಮಾ ತನ್ನ ಮೊದಲ ಐಸಿಸಿ ಟ್ರೋಫಿ ಲಿಫ್ಟ್ ಮಾಡಿದರು ಅನ್ನುವುದು ಮುಂದಿನ ಇತಿಹಾಸದ ಭಾಗ. ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ.

ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

ಐಪಿಎಲ್ ಪಂದ್ಯಗಳ ಉದ್ದಕ್ಕೂ ಬಾಸುಂಡೆ ಬರುವ ಹಾಗೆ ಹೊಡೆಸಿಕೊಂಡಿದ್ದ ಭಾರತದ ಬೌಲರಗಳಿಗೆ ಈ ವಿಶ್ವಕಪ್ ಸ್ಟಾರ್ ವ್ಯಾಲ್ಯೂ ಕೊಟ್ಟಿತು ಅನ್ನುವುದು ಭರತವಾಕ್ಯ.

ಕಂಗ್ರಾಚ್ಯುಲೇಶನ್ ರೋಹಿತ್ ಆಂಡ್ ಹುಡುಗರು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

Continue Reading

ಅಂಕಣ

ನನ್ನ ದೇಶ ನನ್ನ ದನಿ: ಜಗತ್ತಿನ ಇತಿಹಾಸ ಕನ್ನಡದಲ್ಲಿ ತರಲು ಆಸೆಪಟ್ಟಿದ್ದ ನಿರಂಜನ

ನನ್ನ ದೇಶ ನನ್ನ ದನಿ ಅಂಕಣ: ಐವತ್ತು ವರ್ಷಗಳ ಹಿಂದೆಯೇ ನಿರಂಜನರು “ಕಿರಿಯರ ವಿಶ್ವಕೋಶ” ತಂದರು. ಇಂದಿನಂತೆ ಕಂಪ್ಯೂಟರ್, ಅಂತರಜಾಲ, ಫೋನ್, ಇತ್ಯಾದಿ ಇಲ್ಲದ ಆ ಕಾಲಘಟ್ಟದಲ್ಲಿ ನಿರಂಜನ ಅವರ ಸಂಗ್ರಹ, ಸಂಪಾದನೆ ಮತ್ತು ಪ್ರಸ್ತಾವನೆಗಳು ನಿಜವಾಗಿಯೂ ಸಾಹಸವೇ. ವಿವಿಧ ಪ್ರವರ್ಗಗಳ ಅವರ ಕೃತಿಗಳನ್ನು, ಸಂಪಾದಿತ ಕೃತಿಗಳನ್ನು ನೋಡುವಾಗ, ನಿರಂಜನರು ಅದೆಂತಹ ಅದ್ಭುತ ಸಾಧಕರು, ಎನಿಸಿ ಗೌರವ ಇನ್ನಷ್ಟು ಹೆಚ್ಚಾಗುತ್ತದೆ.

VISTARANEWS.COM


on

niranjana ನನ್ನ ದೇಶ ನನ್ನ ದನಿ ಅಂಕಣ
Koo

ನಿರಂಜನ ಅವರ ಜನ್ಮ ಶತಮಾನೋತ್ಸವ

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: “ಇಡೀ ಜಗತ್ತಿನ ಇತಿಹಾಸವನ್ನು (History) ಕನ್ನಡದಲ್ಲಿ ಬರೆಯಬೇಕು ಎನಿಸುತ್ತಿದೆ” ಎಂದು ಆಸೆಪಟ್ಟಿದ್ದರು ನಿರಂಜನ (Niranjana).

ಇದೀಗ ಲೇಖಕ, ಸಂಪಾದಕ, ಕಾದಂಬರಿಕಾರ, ಅಪರೂಪದ ಸಾಧಕ “ನಿರಂಜನ” (ಜನನ : ಜೂನ್ 1924) ಅವರ ಶತಮಾನೋತ್ಸವ. ನಿರಂಜನ ಎಂದರೆ ಜ್ಞಾನ, ದೋಷರಹಿತವಾದುದು ಎಂಬೆಲ್ಲಾ ಅರ್ಥಗಳಿವೆ. ಶಿವ ಎನ್ನುವ ಅರ್ಥವೂ ಇದೆ. ಮೂಲತಃ ಕುಳಕುಂದ ಶಿವ ರಾವ್ ಆಗಿದ್ದ ಅವರು “ನಿರಂಜನ” ಎಂಬ ಕಾವ್ಯನಾಮ ಬಳಸಿದುದು ಅನ್ವರ್ಥವೇ ಆಗಿತ್ತು. ಕನ್ನಡ ಸಾಹಿತ್ಯದಲ್ಲಿ ಶಿವರಾಮ ಕಾರಂತರಂತೆ, ಮಹತ್ತ್ವದ ಮತ್ತು ಬಹು-ಆಯಾಮದ ಸಾಹಿತ್ಯ ರಚನೆ ಮಾಡಿದವರು ವಿರಳ. ಆದರೆ ಎಚ್ಚೆಸ್ಕೆ, ನಿರಂಜನ ಅವರನ್ನು ಈ ಕ್ಷಣಕ್ಕೆ ನೆನಪು ಮಾಡಿಕೊಳ್ಳಬಹುದು. ಸ್ವಯಂಭೂ, ಸ್ವಯಂಘೋಷಿತ ಸಾಹಿತ್ಯ ಧುರಂಧರ ಭಯಂಕರರ ಮಾಫಿಯಾದ ಅಬ್ಬರದಲ್ಲಿ, ಪ್ರಶಸ್ತಿ – ಸ್ಥಾನಮಾನ ಇತ್ಯಾದಿಗಳಿಗೆ ಹಾತೊರೆಯದೆ ತಮ್ಮ ಪಾಡಿಗೆ ತಾವು ಶುದ್ಧ ಸಾಹಿತ್ಯ ಸೇವೆಯನ್ನು ವ್ರತದಂತೆ ಪಾಲಿಸಿದವರು ಈ ಎಚ್ಚೆಸ್ಕೆ, ನಿರಂಜನ ಅಂತಹವರು.

1982ರಲ್ಲಿ ಒಮ್ಮೆ ಹೀಗಾಯಿತು. ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆಗಳು ಆರಂಭವಾದವು. ಕನ್ನಡದ ನಮ್ಮ ಸಮಾಜವಾದೀ, ಸಾಮ್ಯವಾದೀ ಲೇಖಕರು ಭಾರೀ ಗದ್ದಲವೆಬ್ಬಿಸಿದರು. ಅವರದ್ದೇ ನಿಯಂತ್ರಣದ ಪತ್ರಿಕೆಗಳನ್ನು ಓದಿದರೆ, ಏನೋ ಆಗಬಾರದ್ದು ಆಗಿಹೋಗಿದೆ, ಪ್ರಳಯವೇ ಆಗುತ್ತಿದೆ, ಎಂಬಂತಹ ಅಭಿಪ್ರಾಯ ಮೂಡುತ್ತಿತ್ತು. ಒಂದು ಪ್ರತಿಭಟನಾ ಸಭೆಯನ್ನೇ ಆಯೋಜಿಸಲಾಯಿತು. ನಾನೂ ಸಭಿಕನಾಗಿ ಹೋಗಿದ್ದೆ. ನಿರಂಜನ ಅವರದ್ದೇ ಅಧ್ಯಕ್ಷತೆ. ಒಬ್ಬೊಬ್ಬರಾಗಿ “ಕೆಲವೇ ಕೆಲವು ನಿಮಿಷಗಳ ಈ ಸಂಸ್ಕೃತ ವಾರ್ತೆಯ ಪ್ರಸಾರದಿಂದ” ಹೇಗೆ ಮತ್ತು ಎಷ್ಟು ಅನಾಹುತವಾಗುತ್ತಿದೆ, ಎಂದೆಲ್ಲಾ ಕೂಗಾಡತೊಡಗಿದರು. ಅನಂತರ ನಮ್ಮ ಸಮಾಜವಾದೀ ಲೇಖಕ ಮಿತ್ರ ಕಾಳಪ್ಪನವರು ಎದ್ದು ಮೈಕ್ ಮುಂದೆ ನಿಂತು ರೋದಿಸಲು ಪ್ರಾರಂಭಿಸಿದರು. “ನೋಡಿ, ಸತ್ತ ಭಾಷೆ ಸಂಸ್ಕೃತಕ್ಕೆ ಮಣೆ ಹಾಕಲಾಗುತ್ತಿದೆ. ಆದರೆ ಜನಭಾಷೆ ಉರ್ದುವಿಗೆ ಸ್ಥಾನವಿಲ್ಲ” ಇತ್ಯಾದಿ ಗಳಹತೊಡಗಿದರು. ತಡೆಯಲಾರದೆ, ನಾನು ಎದ್ದು ನಿಂತು ಗಟ್ಟಿಯಾಗಿ “ಎರಡಕ್ಕೂ ಹೋಲಿಕೆಯಿಲ್ಲ, ಉರ್ದುವಿಗೆ ಆಕಾಶವಾಣಿಯಲ್ಲಿ ಪ್ರತ್ಯೇಕ ಸ್ಟೇಷನ್ ಇದೆ” ಎಂದು ಆಕ್ಷೇಪಿಸಿದೆ. ನಮ್ಮ ಕಾಳಪ್ಪನವರಿಗೆ ಬರೀ ದ್ವೇಷ, ಪೂರ್ವಗ್ರಹಗಳೇ ಹೊರತು ಮಾಹಿತಿಯೂ ಇಲ್ಲ, ತಿಳಿವಳಿಕೆಯೂ ಇಲ್ಲ. ಸಭಾಂಗಣದಲ್ಲಿ ಆಗ ಗಲಾಟೆಯೇ ಆಗಿಹೋಯಿತು. ಸಭೆಯನ್ನೇ ಮುಗಿಸಬೇಕಾಯಿತು. ನಾನು ನೇರವಾಗಿ ಸಭಾಧ್ಯಕ್ಷರಾದ ನಿರಂಜನ ಅವರಲ್ಲಿಗೇ ಹೋಗಿ, ಪ್ರತ್ಯೇಕ ಉರ್ದು ಸ್ಟೇಷನ್ ಇರುವುದನ್ನು, ಸಂಸ್ಕೃತದಲ್ಲಿ ಕೇವಲ ಕೆಲವು ನಿಮಿಷಗಳ ವಾರ್ತೆ ಮಾತ್ರ ಬರುತ್ತಿದೆ, ಎಂಬಿತ್ಯಾದಿ ವಿವರ ಹೇಳಿದೆ. ಸಜ್ಜನರಾದ ಅವರು “You have a valid point” ಎಂದು ಒಪ್ಪಿಕೊಂಡರು.

ನವಕರ್ನಾಟಕ ಪ್ರಕಾಶನದ ಮಹತ್ತ್ವದ ಯೋಜನೆಗಳಲ್ಲೊಂದು ನಿರಂಜನ ಅವರು ಸಂಪಾದಕರಾಗಿದ್ದ 25 ಸಂಪುಟಗಳ “ವಿಶ್ವಕಥಾಕೋಶ” ಸರಣಿ. ಈ ಕಟ್ಟಿನಲ್ಲಿ ಧರಣಿ ಮಂಡಲ ಮಧ್ಯದೊಳಗೆ, ಆಫ್ರಿಕಾದ ಹಾಡು, ಕಾಡಿನಲ್ಲಿ ಬೆಳದಿಂಗಳು, ಚೆಲುವು, ಸುಭಾಷಿಣಿ, ವಿಚಿತ್ರ ಕಕ್ಷಿದಾರ, ಮಂಜು ಹೂವಿನ ಮದುವಣಿಗ, ಬೂದು ಬಣ್ಣದ ಕಾಂಗರೂ, ಹೆಜ್ಜೆಗುರುತು, ಅರಬಿ, ನೆತ್ತರು ದೆವ್ವ, ಬಾವಿ ಕಟ್ಟೆಯ ಬಳಿ, ಅದೃಷ್ಟ, ಸಜ್ಜನನ ಸಾವು, ಡೇಗೆ ಹಕ್ಕಿ, ಅವಸಾನ, ತಾತನ ಹುಟ್ಟುಹಬ್ಬ, ಬಾಲ ಮೇಧಾವಿ, ಇಬ್ಬರು ಗೆಳೆಯರು, ಅಬಿಂದಾ ಸಯೀದಾ, ನಿಗೂಢಸೌಧ, ಬೆಳಗಾಗುವ ಮುನ್ನ, ಮರಳುಗಾಡಿನ ಮದುವೆ, ಕಿವುಡು ವನದೇವತೆ, ಸಾವಿಲ್ಲದವರು ಸಂಪುಟಗಳಿವೆ.

ಜಗತ್ತಿನ ನೂರಾರು ದೇಶಗಳ ಹಲವು ನೂರು ಪ್ರಾತಿನಿಧಿಕ ಕಥೆಗಳು. ಅತ್ಯದ್ಭುತ ಸಂಚಯವದು. ನಿರಂಜನ ಅವರ ಸಂಪಾದಕತ್ವ ಎಂದರೆ, ಅಂತಹ ಯೋಜನೆಯ ಸತ್ತ್ವ ಏನು, ಪ್ರಾಮುಖ್ಯ ಏನು ಎಂದು ಅರಿಯಲು ಆ ಸಂಪುಟಗಳನ್ನೇ ಓದಬೇಕು, ಮುಖ್ಯವಾಗಿ ಆ ಎಲ್ಲ ಸಂಪುಟಗಳಿಗೆ ನಿರಂಜನ ಅವರು ಸಂಪಾದಕರಾಗಿ ಬರೆದ ಪ್ರಸ್ತಾವನೆಗಳನ್ನೂ ಓದಬೇಕು. ಆಯಾ ಸಂಕಲನದಲ್ಲಿ ಇರುವ ಕತೆಗಳು ಯಾವೆಲ್ಲ ದೇಶಗಳಿಗೆ ಸೇರಿವೆಯೋ, ಆ ದೇಶಗಳ ಪುಟ್ಟ ಸಾಂಸ್ಕೃತಿಕ ಇತಿಹಾಸವನ್ನೇ ಅವರು ನೀಡಿದ್ದಾರೆ. ಅದೊಂದು ದಾಖಲೆ, ಅದೊಂದು ಅದ್ಭುತ. ನಿರಂಜನ ಅವರು ಒಂದು ಚಿಕ್ಕ ಕಿಂಡಿಯಲ್ಲಿ ಜಗತ್ತಿನ ವಿಶ್ವರೂಪ ದರ್ಶನವನ್ನೇ ಮಾಡಿಸಿದ್ದರು, ಮಾಡಿಸಿದ್ದಾರೆ (ಮುಂದೆ ಪ್ರಕಾಶಕರು ಈ ಪ್ರಸ್ತಾವನೆಗಳನ್ನೇ ಪ್ರತ್ಯೇಕ ಸಂಪುಟವನ್ನಾಗಿ ಹೊರತಂದು ಮೆಚ್ಚುವಂತಹ ಕೆಲಸ ಮಾಡಿದರು).

ಈ “ವಿಶ್ವಕಥಾಕೋಶ” ಸಂಪುಟಗಳ ಒಂದು ಸರಣಿಯ ಲೋಕಾರ್ಪಣೆಗೆ, ನನ್ನ ನೆಚ್ಚಿನ ಅಂಕಣಕಾರರಾದ ಹಾ.ಮಾ.ನಾಯಕರು ಬಂದಿದ್ದರು. ಒಂದೇ ವೇದಿಕೆಯಲ್ಲಿ ಹಾ.ಮಾ.ನಾಯಕರನ್ನು, ನಿರಂಜನರನ್ನು ನೋಡುವ ಭಾಗ್ಯ ನಮ್ಮದು. ಲೋಕಾರ್ಪಣೆಯಾದ ಸರಣಿಗಳಲ್ಲಿ ರಷ್ಯನ್ ಕತೆಗಳೂ ಇದ್ದವು. ಲೋಕಾರ್ಪಣೆ ಮಾಡಿದ ಹಾ.ಮಾ.ನಾಯಕರು “ಈ ಸಂಕಲನಗಳಲ್ಲಿ ದಸ್ತಯೇವ್ ಸ್ಕಿ, ತೋಲ್ಸ್ ತೋಯ್ ಎಂಬ ಪ್ರಯೋಗಗಳಿವೆ, ನಮಗೆಲ್ಲಾ ಸುಪರಿಚಿತವಾಗಿರುವ ದಾಸ್ತೋವಸ್ಕಿ, ಟಾಲ್ ಸ್ಟಾಯ್ ಎಂಬ ಪದಗಳನ್ನೇ ಪ್ರಯೋಗಿಸಬಹುದಿತ್ತು” ಎಂದು ಅಭಿಪ್ರಾಯಪಟ್ಟರು. ಅದಕ್ಕೆ ಉತ್ತರವಾಗಿ ನಿರಂಜನರು “ನಾಯಕರೇ, ನಮಗೆ ಹೆಚ್ಚು ಪರಿಚಯವಿರುವ ಹೆಸರುಗಳು ಎರಡೋ ಮೂರೋ. ಆದರೆ, ಈ ಎಲ್ಲ ದೇಶಗಳ ಕತೆಗಳಲ್ಲಿ ಅಲ್ಲಿನ ನೂರಾರು ಹೆಸರುಗಳಿವೆ. ಅಲ್ಲಿನ ಸ್ಥಳೀಯವಾದ ಮತ್ತು ಅವರು ಬಳಸುವ ಮೂಲ-ಪ್ರಯೋಗಗಳನ್ನೇ ಬಳಸಿದ್ದೇವೆ. ನಮಗೆ ಪರಿಚಯವಿರುವ ಕೆಲವು (ಅಪಭ್ರಂಶವಾಗಿಹೋಗಿರುವ) ಪ್ರಯೋಗಗಳನ್ನು ಮಾತ್ರ ಉಳಿಸಿಕೊಳ್ಳಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.

ನನಗಂತೂ ನಿರಂಜನರ ಪರಿಕಲ್ಪನೆ ಅದ್ಭುತ ಎನಿಸಿತು.

ಕಾರಣಾಂತರಗಳಿಂದ ನಮ್ಮ ಮೇಲೆ ಮುಗಿಬಿದ್ದಿರುವ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಧ್ವಾನದ ಕಾರಣಕ್ಕೆ ಮೂಲ ಉಚ್ಚಾರಣೆಗಳಿಗೂ, ನಾವು ಬಳಸುತ್ತಿರುವ ಉಚ್ಚಾರಣೆಗಳಿಗೂ ಅರ್ಥಾತ್ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಹತ್ತಾರು ವರ್ಷಗಳಿಂದ ಸೀತಾರಾಮ ಗೋಯಲ್ ಅವರ “ವಾಯ್ಸ್ ಆಫ್ ಇಂಡಿಯಾ” ಸರಣಿಯ ಸಂಪಾದಕನಾಗಿ, ಈ ಗ್ರಂಥಗಳಲ್ಲಿ ಬರುವ ಸಾವಿರಾರು ಹೆಸರುಗಳಿಗೆ, ಸ್ಥಳನಾಮಗಳಿಗೆ ಮೂಲ ಉಚ್ಚಾರಣೆಗಳನ್ನು ದೊರಕಿಸಿಕೊಳ್ಳಲು, ಪ್ರತಿಬಾರಿಯೂ ಅಪಾರ ಪರಿಶ್ರಮ ಹಾಕಬೇಕಾಗುತ್ತಿದೆ. ಪ್ರತಿಬಾರಿಯೂ ನಿರಂಜನರಂತಹ ಧೀಮಂತರು ನೆನಪಾಗುತ್ತಾರೆ, ಎಂದರೆ ಉತ್ಪ್ರೇಕ್ಷೆಯಲ್ಲ.

ಉದಾಹರಣೆಗೆ, ಉತ್ತರ ಪ್ರದೇಶದ “ಅಮೇಠಿ” (ಸರಿಯಾದ ಪ್ರಯೋಗ) ಕ್ಷೇತ್ರವು, ಸಂಜಯ ಗಾಂಧಿ ಅವರ ಕಾಲದಿಂದಲೂ “ಖ್ಯಾತಿ” ಪಡೆದಿದೆ. ರೋಮನ್ ಲಿಪಿಯ ಅದ್ವಾನದ ಕಾರಣದಿಂದ (ನಾಲ್ಕೈದು ದಶಕಗಳಿಂದಲೂ) ಕನ್ನಡದ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬಹುಪಾಲು “ಅಮೇಥಿ” ಎಂದೇ ಬಳಸಲಾಗುತ್ತಿದೆ! ಅಂತೆಯೇ, ಚೀನಾ ದೇಶದ Sinkiang / Xinjiang ಅನ್ನು ಸಿಂಕಿಯಾಂಗ್ ಎಂದೇ ಅನೇಕ ಕಡೆ ಉಲ್ಲೇಖಿಸಲಾಗಿದೆಯಾದರೂ, ಸರಿಯಾದ ಪ್ರಯೋಗ “ಶಿಂಜಾಂಗ್” ಆಗಿದೆ.

ನಿರಂಜನ ಅವರು ಆ ಕಾಲದಲ್ಲಿ ಮೂಲ ಉಚ್ಚಾರಣೆಗಳಿಗಾಗಿ ಅದೆಷ್ಟು ಶ್ರಮ ಹಾಕಿದರೋ, ಏನೋ?! ಐವತ್ತು ವರ್ಷಗಳ ಹಿಂದೆಯೇ ನಿರಂಜನರು “ಕಿರಿಯರ ವಿಶ್ವಕೋಶ” ತಂದರು. ಇಂದಿನಂತೆ ಕಂಪ್ಯೂಟರ್, ಅಂತರಜಾಲ, ಫೋನ್, ಇತ್ಯಾದಿ ಇಲ್ಲದ ಆ ಕಾಲಘಟ್ಟದಲ್ಲಿ ನಿರಂಜನ ಅವರ ಸಂಗ್ರಹ, ಸಂಪಾದನೆ ಮತ್ತು ಪ್ರಸ್ತಾವನೆಗಳು ನಿಜವಾಗಿಯೂ ಸಾಹಸವೇ. ವಿವಿಧ ಪ್ರವರ್ಗಗಳ ಅವರ ಕೃತಿಗಳನ್ನು, ಸಂಪಾದಿತ ಕೃತಿಗಳನ್ನು ನೋಡುವಾಗ, ನಿರಂಜನರು ಅದೆಂತಹ ಅದ್ಭುತ ಸಾಧಕರು, ಎನಿಸಿ ಗೌರವ ಇನ್ನಷ್ಟು ಹೆಚ್ಚಾಗುತ್ತದೆ.

ಅಂದಿನ ಆ ಲೋಕಾರ್ಪಣೆ ಸಮಾರಂಭದಲ್ಲಿ, ನಿರಂಜನರು “ಇಡೀ ಜಗತ್ತಿನ ಇತಿಹಾಸವನ್ನು ಕನ್ನಡದಲ್ಲಿ ಬರೆಯಬೇಕು ಎನಿಸುತ್ತಿದೆ” ಎಂದು ಆಸೆಪಟ್ಟಿದ್ದರು. ವಿಲ್ ಡ್ಯೂರಾಂಟ್ ಅವರ “ದ ಸ್ಟೋರಿ ಆಫ್ ಸಿವಿಲೈಸೇಷನ್” ಬೃಹತ್ ಸಂಪುಟಗಳನ್ನು ನೋಡುವಾಗ, ನಿರಂಜನರದ್ದೇ ನೆನಪು. ಆರೋಗ್ಯ ಚೆನ್ನಾಗಿದ್ದಿದ್ದರೆ ಅಂತಹುದನ್ನು ಅವರು ಖಂಡಿತವಾಗಿಯೂ ಸಾಧಿಸುತ್ತಿದ್ದರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?” ಎಮರ್ಜೆನ್ಸಿಯ ಕರಾಳ ನೆನಪು

Continue Reading

ಅಂಕಣ

ದಶಮುಖ ಅಂಕಣ: ಮಳೆಯ ನಡುವೆ ಮರಳಿ ಶಾಲೆಗೆ!

ದಶಮುಖ ಅಂಕಣ: ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ.

VISTARANEWS.COM


on

ದಶಮುಖ back to school
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಶಾಲೆಗಳು (School) ಪ್ರಾರಂಭವಾಗಿ ಕೆಲದಿನಗಳಾಗಿವೆ. ಬಣ್ಣದ ಚಿಟ್ಟೆಗಳಂತೆ ಹಾರಾಡುತ್ತಾ ಶಾಲೆಯ ದಾರಿ ಹಿಡಿದಿರುವ (Back to School) ಮಕ್ಕಳನ್ನು (Children) ಕಾಣುತ್ತಿದ್ದಂತೆ ಮನಸ್ಸು ತುಂಬಿ ಬರುತ್ತದೆ. ಬೇಸಿಗೆ (Summer holidays) ರಜೆಯಲ್ಲಿ ಅವರೇನೇ ಮಾಡಿದರೂ, ಮಾಡದಿದ್ದರೂ… ರಜೆ ಕಳೆದಿದ್ದಂತೂ ಹೌದು. ಈಗ ಮರಳಿ ಶಾಲೆಗೆ. ಬಹುಪಾಲು ಮಕ್ಕಳು ಶಾಲೆಗೆ ಮರಳಿ ಹೋಗುತ್ತಿದ್ದರೆ, ಒಂದಿಷ್ಟು ಪುಟಾಣಿಗಳು ಮೊದಲ ಬಾರಿಗೆ ಶಾಲೆಗೆ ಹೋಗುವವರು. ಶಾಲೆಯ ಹಾದಿ ಹಿಡಿದಿರುವ ತಂತಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ತುಂಬಿಸಿಟ್ಟಿದ್ದಾರೆ. ಸಮವಸ್ತ್ರ (Uniform) ಹಾಕಿ ಹೊರಟವರು, ಅದಿನ್ನೂ ದೊರೆಯದೆ ಬಣ್ಣದ ಬಟ್ಟೆಗಳಲ್ಲೇ ಹೊರಟವರು, ಅಕ್ಕ-ಅಣ್ಣನ ಕೈ ಹಿಡಿದು ನಿಂತವರು, ಹೋಗಲು ಮನಸ್ಸಿಲ್ಲದ ಪೆಚ್ಚ ಮೋರೆಯವರು, ಫೋಟೊ ಇಷ್ಟವಿಲ್ಲದ ಗಂಭೀರ ಭಾವದವರು, ರಜೆಯ ಬೋರು ಕಳೆದ ಬಿಡುಗಡೆಯ ಭಾವದವರು, ಮೊದಲ ಬಾರಿಗೆ ಹೊರಟ ಅಳು ಮೋರೆಯವರು… ಅಂತೂ ಸಂಭ್ರಮ, ನಗು, ದುಗುಡ, ಆತಂಕ, ಅಳು ಮುಂತಾದ ಹಲವಾರು ಭಾವಗಳನ್ನು ಹೊತ್ತ ಪುಟ್ಟ ಬೊಂಬೆಗಳಂತೆ ಅವರೆಲ್ಲ ಕಂಡುಬರುತ್ತಾರೆ.

ಇದೇನು ಹೊಸದಲ್ಲ, ಪ್ರತಿವರ್ಷವೂ ಕಾಣುವಂಥದ್ದು. ಇವೆಲ್ಲ ಎಷ್ಟು ಹಳೆಯದ್ದೆಂದರೆ, ಬಾಲ್ಯದಲ್ಲಿ ನಾವೂ ಇದನ್ನೇ ಮಾಡಿದ್ದೆವಲ್ಲ ಎನಿಸಬಹುದು. ಶಾಲೆಗೆ ಹೋಗುವಾಗ ನಮಗೆಲ್ಲ ಈಗಿನಂತೆ ಪ್ರೀಸ್ಕೂಲ್‌ಗಳೆಲ್ಲ ಇರಲಿಲ್ಲ. ನೇರವಾಗಿ ಕಿಂಡರ್‌ಗಾರ್ಟ್‌ನ್‌ಗೆ ಹೋಗುವುದಾಗಿತ್ತು. ಅದಕ್ಕೆ ಬರುವವರೂ ಕಡಿಮೆಯೇ. ಒಂದನೇ ತರಗತಿಗೆ ಹೋದರೆ ಸಾಲದೇ ಎಂಬ ಮನಸ್ಥಿತಿ ಹಲವರಿಗಿತ್ತು ಆಗ. ಮನೆಯೊಂದನ್ನು ಶಾಲೆಯಾಗಿ ಮಾಡಿ, ನಮ್ಮ ಬಾಲವಾಡಿಯನ್ನು ನಡೆಸಲಾಗುತ್ತಿತ್ತು. ಬಾಲವಾಡಿಗೆ ಹೋದ ಮೊದಲ ದಿನ ನಾವೊಂದಿಷ್ಟು ಜನ ನಗುನಗುತ್ತಲೇ ಇದ್ದೆವು. ಆದರೆ ಇನ್ನೊಂದಿಷ್ಟು ಮಕ್ಕಳು ಚೀರಾಡಿ, ಭೋರಾಡಿ, ಉರುಳಾಡಿ, ಘಟ್ಟಿಸಿಕೊಂಡು ಅತ್ತಿದ್ದರು. ಸಮಾಧಾನ ಮಾಡುವ ಸಲುವಾಗಿ ಅವರಿಗೆಲ್ಲ ಒಂದೊಂದು ನಿಂಬೆಹುಳಿ ಪೆಪ್ಪರಮಿಂಟ್‌ ಸಿಕ್ಕಿದ್ದವು. ಮಾರನೇ ದಿನ ಅತ್ತವರ ಸಂಖ್ಯೆ ಹೆಚ್ಚಾಗಿತ್ತು, ನನ್ನನ್ನೂ ಸೇರಿ!

ನಮ್ಮ ಬಾಲವಾಡಿಯಲ್ಲಿ ಸಹಾಯಕ್ಕಿದ್ದವರನ್ನೂ ಸೇರಿಸಿದರೆ ಒಟ್ಟೂ ನಾಲ್ವರು ಸಿಬ್ಬಂದಿ ಇದ್ದರು. ಪಂಕಜಾ ಮಿಸ್‌, ಫಿರ್ದೂಸ್‌ ಮಿಸ್‌, ಸುಶೀಲಮ್ಮ ಆಂಟಿ ಮತ್ತು ಆಯಮ್ಮ ಆಂಟಿ- ಇವರಿಷ್ಟು ಮಂದಿ ಸೇರಿ, ಸುಮಾರು ೩೦ ಮಕ್ಕಳನ್ನು ಸುಧಾರಿಸುತ್ತಿದ್ದರು. ಕುಳಿತುಕೊಳ್ಳುವುದಕ್ಕೆಂದು ಬೆಂಚು- ಕುರ್ಚಿಗಳಲ್ಲ, ಮಕ್ಕಳಿಗೆಲ್ಲ ಪುಟ್ಟ ಕಾಲುಮಣೆಗಳು ಇರುತ್ತಿದ್ದವು. ಆ ಕಾಲುಮಣೆಗಳ ಅಡಿಗಿನ ಖಾಲಿ ಜಾಗವಂತೂ, ನಮ್ಮ ಬೆಣ್ಣೆ ಬಳಪಗಳು ಮತ್ತು ಸೀಮೆಸುಣ್ಣಗಳನ್ನು ಆಗಾಗ ತಿಂದು ಹಾಕುತ್ತಿತ್ತು. ಕೆಲವೊಮ್ಮೆ ಪಾಟಿಗಳೂ ಅದರಡಿಗೆ ಮರೆಯಾಗಿ, ಅದನ್ನು ಹುಡುಕುವುದಕ್ಕೆಂದು ಕಾಲುಮಣೆಗಳನ್ನು ಸರಿಸಿದಾಗ ಎಂದೋ ಕಣ್ಮರೆಯಾಗಿದ್ದ ಯಾರಾರದ್ದೋ ಬಣ್ಣಬಣ್ಣದ ಸೀಮೆ ಸುಣ್ಣಗಳೆಲ್ಲ- ಇಡಿಯಾಗಿ, ಪುಡಿಯಾಗಿ ದೊರೆಯುತ್ತಿದ್ದವು.

ನಮಗೆಲ್ಲ ಬಾಲವಾಡಿಯಲ್ಲಿ ಪುಸ್ತಕ-ಪೆನ್ಸಿಲ್ಲು ಇರಲಿಲ್ಲ. ಪೆನ್ಸಿಲ್ಲು, ರಬ್ಬರು, ಮೆಂಡರ್‌ಗಳನ್ನೆಲ್ಲ ನಾವು ಕಂಡಿದ್ದು ಪ್ರಾಥಮಿಕ ಶಾಲೆ ಆರಂಭವಾದ ಮೇಲೆಯೆ. ಅಲ್ಲಿಯವರೆಗೆ ಸ್ಲೇಟು-ಬಳಪದಲ್ಲೇ ಗೀಚುತ್ತಿದ್ದೆವು. ʻನನ್ನ ಪಾಟಿ ಕರಿಯದು, ಸುತ್ತುಕಟ್ಟು ಬಿಳಿಯದುʼ ಎಂಬ ಶಿಶುಗೀತೆ ಹೇಳಿದವರಿಗೆ, ಅದನ್ನು ಬಳಸಿಯೂ ಗೊತ್ತಿದ್ದೀತು. ಹಾಗಂತ ಪ್ಲಾಸ್ಟಿಕ್‌ ಮಣಿಗಳ ಪಾಟಿ ಇರುತ್ತಿತ್ತು ಕೆಲವರ ಬಳಿ. ಯಾರದ್ದೋ ಸ್ಲೇಟಿನಲ್ಲಿ ಬರೆದಿದ್ದನ್ನು ಇನ್ಯಾರೊ ಅಳಿಸುವುದು, ಯಾರದ್ದೋ ಬಟ್ಟೆ ತಾಗಿ, ಬರೆದಿದ್ದೆಲ್ಲ ತನ್ನಷ್ಟಕ್ಕೆ ಒರೆಸಿ ಹೋಗುವುದು, ಅದಕ್ಕಾಗಿ ʻಹೋʼ ಎಂದು ಅತ್ತು ರಂಪ ಮಾಡುವುದು, ಹಾಗೆ ಅಳಿಸಿಹೋಗಬಾರದೆಂದು ಸೀಮೆ ಸುಣ್ಣವನ್ನು ನೀರಲ್ಲಿ ಅದ್ದಿಕೊಂಡು ಬರೆಯುವುದು, ಹಾಗೆ ಬರೆದಿದ್ದನ್ನು ಅಳಿಸಲೇ ಆಗದೆ ʻಥೂʼ ಎಂದು ಎಂಜಲು ಉಗಿದು ಅಳಿಸುವುದು… ಇಂಥವೆಲ್ಲ ಬಾಲವಾಡಿಯ ದಿನಗಳ ಮಾಮೂಲಿ ಪ್ರಕ್ರಿಯೆ.

ಅಂದಿನ ಬಾಲವಾಡಿಯ ಜಗಳಗಳೂ ಇಂದಿನ ಹಾಗೆಯೇ, ಯಾವ ಕಾರಣಕ್ಕೆ ಬೇಕಿದ್ದರೂ ಹುಟ್ಟುತ್ತಿದ್ದವು. ತೊಟ್ಟ ಅಂಗಿಯ ಚುಂಗನ್ನು ಪಕ್ಕದವರು ಜಗ್ಗಿದರು ಎನ್ನುವುದರಿಂದ ಹಿಡಿದು, ಬಳಪ ಮುರಿದರು, ಮೊಣಕೈಯಲ್ಲಿ ತಿವಿದರು, ಜುಟ್ಟೆಳೆದರು, ಸ್ಲೇಟು ಮುಟ್ಟಿದರು ಎನ್ನುವವರೆಗೆ ಯಾವುದೇ ಕಾರಣಕ್ಕೂ ಹೊಡೆದಾಟ ಶುರುವಾಗುತ್ತಿತ್ತು. ಮನೆಯಲ್ಲಿ ಅತಿ ಮುದ್ದಿನಿಂದ ಬೆಳೆದವರು, ಬಾಲವಾಡಿಯಲ್ಲೂ ಹಠ ಮಾಡಿ, ಪೆಟ್ಟು ತಿಂದು, ಅತ್ತು ವಾಂತಿ ಮಾಡಿದ ಉದಾಹರಣೆಗಳಿದ್ದವು. ಮಕ್ಕಳ ಉಳಿದೆಲ್ಲ ಚಾಕರಿಯ ಜೊತೆಗೆ ಬಾಲವಾಡಿಯ ಆಯಮ್ಮ ಆಂಟಿಗೆ ಇಂಥ ಸ್ವಚ್ಛತೆಗೆ ಕೆಲಸಗಳೂ ಗಂಟು ಬೀಳುತ್ತಿದ್ದವು.

ಒಮ್ಮೆ ಬಾಲವಾಡಿ ಮುಗಿದ ಮೇಲೆ ಮುಂದಿನ ತರಗತಿಗಳಲ್ಲಿ, ಶಾಲೆಯ ಮೊದಲ ದಿನ ಅಷ್ಟೊಂದು ಕಷ್ಟ ಎನಿಸಿರಲಿಲ್ಲ. ಆದರೂ ಕೆಲವು ಮಕ್ಕಳಿಗೆ ಎರಡೇಟು ಬಿಗಿದು ಪಾಲಕರು ಬಿಟ್ಟು ಹೋಗುವ ದೃಶ್ಯಗಳು ಅಲ್ಲಲ್ಲಿ ಕಾಣುತ್ತಲೇ ಇರುತ್ತಿದ್ದವು. ಶಾಲೆಯ ಮುಖ ಕಾಣುತ್ತಿದ್ದಂತೆ, ʻಹೋಗಲೊಲ್ಲೆʼ ಎಂದು ರಸ್ತೆಯಲ್ಲೇ ಬಿದ್ದು ಉರುಳಾಡುವ ಮಕ್ಕಳ ಚಿತ್ರಗಳು ಈಗಲೂ ನೆನಪಿಗೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಮೊದಲ ದಿನವೆಂದರೆ ಹಬ್ಬದ ವಾತಾವರಣವನ್ನೇ ನಿರ್ಮಿಸಲಾಗುತ್ತಿದೆ. ಶಾಲೆಯ ಆವರಣವನ್ನು ತಳಿರು-ತೋರಣ, ಬಾಳೆ ಕಂಬಗಳಿಂದ ಅಲಂಕರಿಸಿ, ಮಕ್ಕಳಿಗೆಲ್ಲ ಆರತಿ ಎತ್ತಿ ಬರಮಾಡಿಕೊಂಡು, ಮಿಠಾಯಿ ಹಂಚುವುದೋ ಅಥವಾ ಸಿಹಿಯೂಟ ಉಣಿಸುವುದನ್ನು ಕಾಣಬಹುದು. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಯ ಮೇಲೆ, ಟ್ರಾಕ್ಟರ್‌ಗಳ ಮೇಲೆ ಮೆರವಣಿಗೆಯ ಮೂಲಕ ಶಾಲೆಗೆ ಕರೆದೊಯ್ದ ಸುದ್ದಿಗಳಿವೆ. ಹಿಂದೆ ಶಾಲೆಗಳನ್ನು ಕರೆಯುತ್ತಿದ್ದುದೇ ʻಶಾಲೆಮನೆʼಗಳೆಂದು. ಹಿಂದಲ್ಲ, ಇಂದಿಗೂ ಮಕ್ಕಳು ಮನೆಗೆ ಹೋದಷ್ಟೇ ನಿರುಮ್ಮಳವಾಗಿ ಶಾಲೆಗೆ ಹೋಗಬೇಕೆಂಬ ಕಳಕಳಿ ನಿಜಕ್ಕೂ ಶ್ಲಾಘನೆಗೆ ಅರ್ಹ.

Maharashtra proposed to change School timings to ensure children get enough sleep

ನಮ್ಮಲ್ಲಿ ಮಾತ್ರವಲ್ಲ, ಹಲವಾರು ದೇಶಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ಎಂಬುದು ಸಂಭ್ರಮದ ಸಮಯ. ಇದಕ್ಕಾಗಿ ಬಹುತೇಕ ಅಂಗಡಿ-ಮಳಿಗೆಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ರಿಯಾಯ್ತಿಗಳು ರಾರಾಜಿಸುತ್ತವೆ. ಪೆನ್ನು, ಪೆನ್ಸಿಲ್ಲು, ಇರೇಸರ್‌ಗಳಿಂದ ಹಿಡಿದು ಬಣ್ಣದ ಪೆನ್ಸಿಲ್ಲುಗಳು, ಕ್ರೇಯಾನ್‌, ಚಿತ್ರಕಲೆಯ ತರಹೇವಾರಿ ಉಪಕರಣಗಳು, ನೋಟ್ ಪುಸ್ತಕಗಳು, ಶಾಲೆಯ ಬ್ಯಾಗು, ಊಟದ ಡಬ್ಬಿ, ನೀರಿನ ಬಾಟಲಿಗಳು, ಶೂಗಳು, ವಸ್ತ್ರಗಳು, ಕ್ಯಾಲ್ಕುಲೇಟರ್‌, ಲ್ಯಾಪ್‌ಟಾಪ್‌… ಹೀಗೆ, ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಬೇಕಾಗುವ ಲೆಕ್ಕವಿಲ್ಲದಷ್ಟು ಸಾಮಗ್ರಿಗಳು ʻಸೇಲ್‌ʼ ಎಂಬ ಹಣೆಪಟ್ಟಿ ಹೊತ್ತು ಕುಳಿತಿರುತ್ತವೆ. ಇದೇ ಸಮಯದಲ್ಲಿ, ಉಪಯೋಗಿಸಲು ಯೋಗ್ಯ ಸ್ಥಿತಿಯಲ್ಲೇ ಇರುವ ಶಾಲೆಯ ಸಾಮಗ್ರಿಗಳ ‌ʻಗರಾಜ್‌ ಸೇಲ್ʼ ಸಹ ಕಂಡುಬರುತ್ತದೆ. ಆ ವಸ್ತುಗಳ ಮಾಲೀಕರಿಗೆ ಮನೆಯಲ್ಲಿ ಜಾಗ ಖಾಲಿಯಾಯಿತು, ಜೊತೆಗೆ ನಾಲ್ಕು ಕಾಸೂ ಕೈಗೆ ಬಂತು; ಹೊಸದನ್ನು ಖರೀದಿಸಲು ಅನುಕೂಲ ಇಲ್ಲದವರಿಗೆ ಕಡಿಮೆ ಖರ್ಚಿನಲ್ಲಿ ಅಗತ್ಯ ವಸ್ತುಗಳೂ ದೊರೆತವು- ಉಪಾಯ ಒಳ್ಳೆಯದಲ್ಲವೇ? ನಮ್ಮಲ್ಲಿ… ಇವನ್ನೆಲ್ಲ ಯೋಚಿಸುವುದೂ ಕಷ್ಟ.

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ಇನ್ನೂ ಒಂದು ಕುತೂಹಲ ಬಹುದಿನಗಳವರೆಗೆ ಬಾಲ್ಯದಲ್ಲಿ ಕಾಡಿದ್ದಿತ್ತು. ಜೂನ್‌ 1ರಂದು ಅಷ್ಟೆಲ್ಲಾ ಜನರ ಬರ್ತ್‌ಡೇ ಇರುವುದಕ್ಕೆ ಹೇಗೆ ಸಾಧ್ಯ ಎಂಬುದು! ಪ್ರತಿ ಕ್ಲಾಸಿನಲ್ಲಿ ಇರುತ್ತಿದ್ದ 60-70 ಮಕ್ಕಳಲ್ಲಿ, ನಾಲ್ಕಾರು ಜನರಾದರೂ ಜೂನ್‌ 1ಕ್ಕೆ ಹುಟ್ಟಿದವರು ಇರುತ್ತಿದ್ದರು. ನಮ್ಮ ಕೆಲವು ಟೀಚರ್‌ಗಳು ತಾವೂ ಜೂನ್‌ 1ಕ್ಕೇ ಹುಟ್ಟಿದವರೆಂದು ಹೇಳಿ ನಕ್ಕಾಗ, ಅದೊಂದೇ ದಿನ ಯಾಕಾಗಿ ಅಷ್ಟೊಂದು ಜನ ಹುಟ್ಟುತ್ತಾರೆ ಎಂಬ ಕುತೂಹಲ ಮೂಡಿತ್ತು. ಹುಟ್ಟಿದ ದಿನಾಂಕ ಸ್ಪಷ್ಟವಾಗಿ ಗೊತ್ತಿಲ್ಲದವರೆಲ್ಲ, ಶಾಲೆಗೆ ಹೆಸರು ಕೊಡುವಾಗ ಅನಿವಾರ್ಯವಾಗಿ ಜೂನ್‌ 1ಕ್ಕೇ ಹುಟ್ಟುತ್ತಿದ್ದರು ಎಂಬುದು ತಿಳಿದಾಗ, ಟೀಚರ್‌ಗಳ ನಗೆಯೊಂದಿಗೆ ನಮ್ಮದೂ ಸೇರಿತ್ತು.

ಮಿತ್ರರ ಹುಟ್ಟಿದ ದಿನಗಳಂದು, ನಮ್ಮ ರಫ್‌ ಪುಸ್ತಕದ ಹಾಳೆಗಳನ್ನು ಹಿಂದಿನಿಂದ ಹರಿದು ಅವರಿಗಾಗಿ ತಯಾರಿಸುತ್ತಿದ್ದ ಗ್ರೀಟಿಂಗ್‌ ಕಾರ್ಡ್‌ಗಳು, ಪುಸ್ತಕದ ನಡುವೆ ಮರಿ ಹಾಕಲೆಂದು ಇರಿಸಿಕೊಳ್ಳುತ್ತಿದ್ದ ಹಕ್ಕಿಪುಕ್ಕಗಳು, ಸಾಮಾನ್ಯ ಇಂಕ್‌ ಪೆನ್ನುಗಳ ನಡುವೆ ರಾರಾಜಿಸುತ್ತಿದ್ದ ಹೀರೊ ಪೆನ್ನುಗಳು, ಆರೆಂಟು ಹನಿ ಇಂಕಿನ ಕಡ ಹಿಂತಿರುಗಿಸದ್ದಕ್ಕೆ ಹುಟ್ಟುತ್ತಿದ್ದ ಮುನಿಸು, ಫೌಂಟೆನ್‌ ಪೆನ್ನುಗಳಿಂದ ಚಿಮ್ಮುವ ಇಂಕಿಗೆ ಮುಂದಿನ ಬೆಂಚಿನವರ ವಸ್ತ್ರ ಕಲೆಯಾಗಿ ಏಳುತ್ತಿದ್ದ ಜಗಳ, ಮಧ್ಯಾಹ್ನ ಊಟದ ಡಬ್ಬಿಯ ಹಂಚಿಕೆಯಲ್ಲಿ ಆಗುತ್ತಿದ್ದ ರಾಜಿ ಪಂಚಾಯ್ತಿ, ಪ್ರತಿದಿನವೂ ಇರುತ್ತಿದ್ದ ಆಟದ ಪಿರಿಯೆಡ್‌, ಬೆತ್ತ ಹಿಡಿದೇ ಹುಟ್ಟಿದವರಂತೆ ಕಾಣುತ್ತಿದ್ದ ಪಿ.ಟಿ. ಮೇಷ್ಟ್ರು … ಹೆಕ್ಕುತ್ತಾ ಹೋದರೆ ಶಾಲೆಯ ಜೀವನದ ನೆನಪುಗಳು ಅಡಿಗಡಿಗೆ ಸಿಗುತ್ತವೆ.

ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ… ಎಂದೋ ದಾಟಿ ಬಂದ ನಮ್ಮದೇ ಶಾಲೆಯ ಅಂಗಳಕ್ಕೆ. ಈಗ ನಿಮ್ಮ ಶಾಲೆಯ ದಿನಗಳು ನಿಮಗೂ ನೆನಪಾಗದಿದ್ದರೆ ಕೇಳಿ!

ಇದನ್ನೂ ಓದಿ: ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?” ಎಮರ್ಜೆನ್ಸಿಯ ಕರಾಳ ನೆನಪು

ನನ್ನ ದೇಶ ನನ್ನ ದನಿ ಅಂಕಣ: ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ!

VISTARANEWS.COM


on

indira gandhi ನನ್ನ ದೇಶ ನನ್ನ ದನಿ
Koo

ಇಂದು ತುರ್ತುಪರಿಸ್ಥಿತಿ ಹೇರಿಕೆಯ ʼಚಿನ್ನದ “ಹಬ್ಬʼ !

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ಅವು ತುರ್ತುಪರಿಸ್ಥಿತಿಯ (internal Emergency) ದಿನಗಳು. ತಮ್ಮ ಅಧಿಕಾರ ಉಳಿಸಿಕೊಳ್ಳುವ ಏಕೈಕ ದುರುದ್ದೇಶದಿಂದ ಇಂದಿರಾ ಗಾಂಧಿಯವರು (Indira Gandhi) ದೇಶದಾದ್ಯಂತ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಎಲ್ಲ ಮಾಧ್ಯಮದವರು, ಓರಾಟಗಾರರು, ಬುದ್ಧಿಜೀವಿಗಳು, ಬಹುತೇಕ ವಿರೋಧ ಪಕ್ಷಗಳವರು ಶರಣಾಗತರಾಗಿಬಿಟ್ಟಿದ್ದರು, ಅಷ್ಟೇ ಅಲ್ಲ, ಮನೆಯಲ್ಲಿ ಮಂಚದ ಅಡಿಯಲ್ಲಿ ಅಡಗಿಕೊಂಡುಬಿಟ್ಟಿದ್ದರು. ತುರ್ತುಪರಿಸ್ಥಿತಿಯನ್ನು ರಾಷ್ಟೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಪರಿವಾರ ಸಂಘಟನೆಗಳು ಮಾತ್ರವೇ ವಿರೋಧಿಸುತ್ತಿದ್ದುದರಿಂದ ಇಂದಿರಾ ಗಾಂಧಿಯವರು ಆರೆಸ್ಸೆಸ್ ಎಂದರೆ ಸಿಡಿಮಿಡಿಗೊಳ್ಳುತ್ತಿದ್ದರು.

1975ರ ಆ ವರ್ಷದ ಗಾಂಧೀ ಜಯಂತಿ (Gandhi Jayanthi) ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶ, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧೀಜಯಂತಿ ಆಚರಿಸಿದವರು ಸಂಘದ ಭೂಗತ ಕಾರ್ಯಕರ್ತರು. ಎದೆಯ ಮೇಲೆ ಧರಿಸಲು ಗಾಂಧೀ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧೀ ಭಿತ್ತಿಚಿತ್ರಗಳು. ಎರಡರಲ್ಲೂ ಗಾಂಧೀ ಚಿತ್ರದ ಕೆಳಗೆ “ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆಬಾಗುವುದು ಹೇಡಿತನ” ಎನ್ನುವ ಗಾಂಧೀ ಉಕ್ತಿ. ಆದರೆ ಅಂದಿನ ಇಂದಿರಾ – ದೇವರಾಜ ಅರಸು ಅವರ ಕಾಂಗ್ರೆಸ್ ಸರ್ಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.

ಗಾಂಧೀ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದವರ ಚಿತ್ರ ಹಿಡಿದಿದ್ದಕ್ಕೆ ಹೊಡೆದು ಬಡಿದು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ, ನ್ಯಾಯಾಧೀಶರು ತಮ್ಮ ಕಣ್ಣು – ಕಿವಿಗಳನ್ನು ನಂಬದಾದರು. “ಏನು, ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸಿನವರು ಏನು ಹೇಳಿಯಾರು! “ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು” ಎಂಬ ನೆಪ ಹೇಳಿದರು. “ಇರಬಹುದು, ಆದರೆ ಇವರು ಮಾಡಿದ ಅಪರಾಧವೇನು?” ಎಂದ ನ್ಯಾಯಾಧೀಶರ ಪ್ರಶ್ನೆಗಳಿಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು (ಕೆಲವೆಡೆ) ಪೊಲೀಸರಿಗೆ ಛೀಮಾರಿ ಹಾಕಿ ಬಂಧಿತರನ್ನು ಬಿಡುಗಡೆ ಮಾಡಿದರು.

ಹಿಂದೆ ಉಪ್ಪಿನ ಸತ್ಯಾಗ್ರಹದಲ್ಲಿ, ಭಾರತ್ ಛೋಡೋ ಚಳವಳಿಯಲ್ಲಿ ಭಾಗವಹಿಸಿ ‘ವಂದೇ ಮಾತರಂ’, ‘ಮಹಾತ್ಮಾ ಗಾಂಧೀ ಕೀ ಜೈ’, ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಿಸುತ್ತಿದ್ದವರ ಮೇಲೆ ಬ್ರಿಟಿಷ್ ಪೊಲೀಸರ ಲಾಠಿಯೇಟು, ಬೂಟಿನೇಟು ಬೀಳುತ್ತಿತ್ತು. ‘ಸ್ವಾತಂತ್ರ್ಯ’ ಬಂದ ಮೇಲೂ ಹಾಗೆ ಘೋಷಣೆ ಕೂಗಿದವರ ಮೇಲೆ, ಕಾಂಗ್ರೆಸ್ ಸರಕಾರದ ಪೊಲೀಸರ ಲಾಠಿಯೇಟು ಬಿದ್ದುದು, ಬರಿಯ ವಿಸ್ಮಯದ – ವಿಷಾದಭಾವದ ಮಾತಲ್ಲ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದೆಯೇ, ಕಾಂಗ್ರೆಸ್ಸಿನಂತಹ ಪಕ್ಷಗಳನ್ನು ಬೆಂಬಲಿಸಿ ಮತ ಹಾಕುವುದರ ದುಷ್ಪರಿಣಾಮಗಳ ಅಂತಿಮ ಹಂತವಿದು.

1975ರ ನವೆಂಬರ್ 14ರಿಂದ ದೇಶಾದ್ಯಂತ ಪ್ರತಿಭಟನೆಯನ್ನು ಆರೆಸ್ಸೆಸ್ ಪರಿವಾರ ಸಂಘಟನೆಗಳು ಹಮ್ಮಿಕೊಂಡಿದ್ದವು. ಬಹುಪಾಲು ರಾಜಕಾರಣಿಗಳು, ನಾಯಕರು ಸೆರೆಮನೆಯಲ್ಲಿದ್ದರು. ಪ್ರತಿಭಟನೆಯನ್ನು ವಿಫಲಗೊಳಿಸಲು ಅಂದಿನ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಬಂಧನಗಳಿಗೆ (Preventive Arrests) ಆಜ್ಞೆ ಮಾಡಿತ್ತು. ಆ ಕಾರಣಕ್ಕೆ ನಾವೆಲ್ಲಾ ಬಂಧನಕ್ಕೆ ಒಳಗಾದುದು ನವೆಂಬರ್ 13ರಂದು. ಪೊಲೀಸರು “ನೀವು ಭಾರತೀಯರೋ ರಾಷ್ಟ್ರೀಯರೋ?” ಎಂದು ಪ್ರಶ್ನೆ ಹಾಕಿದಾಗ ನಾನೂ ನನ್ನ ಉಳಿದ ಸ್ವಯಂಸೇವಕ ಬಂಧುಗಳೂ ಕಕ್ಕಾಬಿಕ್ಕಿಯಾದೆವು. ನಮ್ಮ ಮುಂದೆ PSR (Prisoners’ Search Register) ಹರಡಿಕೊಂಡಿತ್ತು. ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಮುಗ್ಧತೆಯಿಂದ “ನಾವೆಲ್ಲಾ ಭಾರತೀಯರೂ ಹೌದು, ರಾಷ್ಟ್ರೀಯರೂ ಹೌದು” ಎಂದೆವು. “ಎರಡರಲ್ಲಿ ಒಂದು ಹೇಳ್ರೀ” ಎಂದು ಅವರು ಅಬ್ಬರಿಸಿದಾಗ ಇನ್ನಷ್ಟು ಗೊಂದಲ. ಕೊನೆಗೆ ಆ ಪ್ರಶ್ನೆ ನಾವು ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದವರೋ, ಭಾರತೀಯ ಜನಸಂಘಕ್ಕೆ ಸಂಬಂಧಿಸಿದವರೋ ಎಂಬುದಾಗಿತ್ತು ಎಂದು ತಿಳಿದಾಗ, ಗೊಂದಲದಿಂದ ಪರಿಹಾರ. ನಾವೆಲ್ಲಾ ಒಕ್ಕೊರಲಿನಿಂದ “ನಾವು ರಾಷ್ಟೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು” ಎಂದೆವು. ಅಂದಿನ ದಿನಮಾನಗಳಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಹೆಸರನ್ನು ಸರಿಯಾಗಿ ಉಚ್ಚರಿಸಲು, ಉಲ್ಲೇಖಿಸಲು ಬಹಳ ಜನರಿಗೆ ಬರುತ್ತಿರಲಿಲ್ಲ (ಕೆಲವರಿಗೆ ಈಗಲೂ ಗೊಂದಲ!).

ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ ಎಂಬುದು ಇಂದಿಗೂ ಪ್ರಶ್ನೆಯಾಗಿ ಕಾಡುತ್ತದೆ. ಎಂತಹ ಪಕ್ಷವಿದು. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ! ಕಾಂಗ್ರೆಸ್ಸಿನ ಒಬ್ಬನೇ ಒಬ್ಬ MP ,MLA, MLC ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಇಲ್ಲ. ಕಾಸು ಮಾಡಿಕೊಳ್ಳುವ ಧಂಧೆಯನ್ನು ಎಲ್ಲ ಕಾಂಗ್ರೆಸ್ಸಿಗರೂ ಇನ್ನಷ್ಟು ನಿರಾಳವಾಗಿ ಮುಂದುವರಿಸಿಕೊಂಡುಹೋದರು. ಕಳೆದ ಏಳೆಂಟು ದಶಕಗಳ ಭಾರತೀಯ ಇತಿಹಾಸವನ್ನು ಅವಲೋಕಿಸಿದರೆ ಈ ಕಾಂಗ್ರೆಸ್ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಾಗಿರದೆ, ದೇಶಕ್ಕೆ ಅಂಟಿದ ಒಂದು ಶಾಪ, ಒಂದು ರೋಗ ಎಂಬುದು ಖಚಿತವಾಗುತ್ತದೆ.

ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಪ್ಯಾರೇಲಾಲರು, ‘Mahatma Gandhi : The Last Phase’ ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನು ಗಾಂಧೀವಾದಿ ಕೆ.ವಿ.ಶಂಕರಗೌಡರು ‘ಮಹಾತ್ಮಾಗಾಂಧಿ: ಅಂತಿಮ ಹಂತ’ ಎಂದು ಅನುವಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯವು ಹೊರತಂದಿರುವ ಈ ಸಂಪುಟಗಳು ಓದಲೇಬೇಕಾದ ಅಪೂರ್ವ ಮಾಹಿತಿಗಳನ್ನು ದಾಖಲೆಗಳನ್ನು ಸಂಗತಿಗಳನ್ನು ಒಳಗೊಂಡಿದೆ.

“ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರನೇಕರು, ಗಾಳಿ ಬಂದಾಗ ತೂರಿಕೋ ಎನ್ನುವ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‍ನಲ್ಲಿ ತಲೆದೋರಿರುವ ಗುಂಪುಗಾರಿಕೆ ಮತ್ತು ಮಂತ್ರಿಗಳ ದೌರ್ಬಲ್ಯವನ್ನು ಕಂಡ ಜನರಲ್ಲಿ ಒಂದು ಬಗೆಯ ದಂಗೆಯ ಮನೋಭಾವ ಮೂಡುತ್ತಿದೆ. ಜನರು ಬ್ರಿಟಿಷ್ ಸರ್ಕಾರವೇ ವಾಸಿಯಾಗಿತ್ತು ಎನ್ನುತ್ತಿದ್ದಾರಲ್ಲದೆ, ಕಾಂಗ್ರೆಸ್ಸನ್ನು ಹಳಿಯುತ್ತಿದ್ದಾರೆ” ಎಂದರು. ಗಾಂಧೀಜಿ. ಸರಿಯಾಗಿ ಗಮನಿಸಿ. ಇದು ಸ್ವಾತಂತ್ರ್ಯ ಬಂದ ಕೆಲವೇ ದಿನಗಳ ಅನಂತರ ಗಾಂಧೀಜಿಯವರು ಹೇಳಿದ ಮಾತುಗಳು. ಡಿಸೆಂಬರ್ 1947ರಲ್ಲಿ ಮತ್ತೆ ಗಾಂಧೀಜಿ ಹೇಳಿದರು “ಕಾಂಗ್ರೆಸ್‍ನಂತಹ ಬೃಹತ್ ಸಂಸ್ಥೆಗಳಿಂದ ಭ್ರಷ್ಟಾಚಾರ, ಅಸತ್ಯ ಮುಂತಾದ ಪೀಡೆಗಳನ್ನು ಉಚ್ಚಾಟಿಸದೇ ಹೋದರೆ, ನಾಲ್ಕೂ ಕಡೆಗಳಿಂದ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ಮುತ್ತಿ, ಈ ಸಂಸ್ಥೆಯು ಧೂಳೀಪಟವಾಗುತ್ತದೆ ಮತ್ತು ಹಾಗಾದಾಗ ನಾನು ಒಂದು ತೊಟ್ಟು ಕಣ್ಣೀರನ್ನೂ ಸುರಿಸುವುದಿಲ್ಲ. ದೊಡ್ಡ ರೋಗದಿಂದ ಬಳಲುತ್ತಿರುವ ರೋಗಿಯನ್ನು ಗುಣಮಾಡಲು ಸಾಧ್ಯವಿಲ್ಲದೆ ಹೋದರೆ, ರೋಗಿ ಸಾಯುವುದು ಮೇಲು” (ಪುಟ 721).

ಈ ಪರಿಪ್ರೇಕ್ಷ್ಯದಲ್ಲಿ, ತುರ್ತುಪರಿಸ್ಥಿತಿಯ ಹೇರಿಕೆಯ (25/6/1975) ವಾರ್ಷಿಕೋತ್ಸವದ ಕಹಿನೆನಪುಗಳ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ.

ಇತಿಹಾಸ, ಸ್ವಾತಂತ್ರ್ಯ ಹೋರಾಟಗಳ ಸರಿಯಾದ ವಿಮರ್ಶಾತ್ಮಕ ವಿಶ್ಲೇಷಣೆಗಳು ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ಮತ್ತೊಮ್ಮೆ ನೀಗಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ

Continue Reading
Advertisement
Georgina Rodriguez
ಕ್ರೀಡೆ18 mins ago

Georgina Rodriguez : ಬಿಕಿನಿ ದಿನದಂದು ಬಗೆಬಗೆಯ ಬಿಕಿನಿಗಳಲ್ಲಿ ಮೈಮಾಟ ತೋರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಪ್ರೇಯಸಿ ಜಾರ್ಜಿಯಾ ರೋಡ್ರಿಗಸ್​

Stock Market
ವಾಣಿಜ್ಯ23 mins ago

Stock Market: 1 ಲಕ್ಷ ಪಾಯಿಂಟ್‌ ಮೈಲಿಗಲ್ಲಿನತ್ತ ಸೆನ್ಸೆಕ್ಸ್‌; ಅಂಕಿ-ಅಂಶ ಹೇಳೋದೇನು?

Virat Kohli's Phone Wallpaper
ಕ್ರೀಡೆ24 mins ago

Virat Kohli’s Phone Wallpaper: ಕೊಹ್ಲಿಯ ಮೊಬೈಲ್​ ​ವಾಲ್​ ಪೇಪರ್​ನಲ್ಲಿರುವ ವ್ಯಕ್ತಿ ಯಾರು? ಇವರ ಹಿನ್ನಲೆ ಏನು?

natana Tarangini 20th anniversary celebration on July 6 and 7 in Bengaluru
ಕರ್ನಾಟಕ33 mins ago

Bengaluru News: ಬೆಂಗಳೂರಿನಲ್ಲಿ ಜು. 6,7ರಂದು ʼನಟನ ತರಂಗಿಣಿʼ 20ನೇ ವರ್ಷೋತ್ಸವ

HDFC Life certified as one of Indias Best Companies to Work For in 2024
ಬೆಂಗಳೂರು34 mins ago

HDFC Life: ‘ಕೆಲಸ ಮಾಡಲು ಅತ್ಯುತ್ತಮವಾಗಿರುವ ಭಾರತದ ಕಂಪನಿ’ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಲೈಫ್

Baby Death
Latest38 mins ago

Baby Death: ಹೋಮ್‌ ವರ್ಕ್‌ ಮಾಡುತ್ತಿದ್ದ ಬಾಲಕಿಗೆ ಸಾವಾಗಿ ಕಾಡಿದ ಪೆನ್‌!

Medical negligence
ದಾವಣಗೆರೆ40 mins ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

Prajwal Revanna Case
ಕರ್ನಾಟಕ46 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಿಚಾರಣೆ 2 ವಾರ ಮುಂದೂಡಿಕೆ

kumble sridhara rao
ಶ್ರದ್ಧಾಂಜಲಿ49 mins ago

Kumble Sridhara Rao: ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ನಿಧನ

Kung Fu Panda 4 OTT Jio cinema july 15th onwards
ಒಟಿಟಿ50 mins ago

Kung Fu Panda 4 OTT: ಪುಟಾಣಿಗಳ ಫೇವರಿಟ್‌ ʻಕುಂಗ್ ಫು ಪಾಂಡಾ 4 ಸಿನಿಮಾʼ ಒಟಿಟಿಗೆ; ಕನ್ನಡ ಭಾಷೆಯಲ್ಲೂ ಲಭ್ಯ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka rain
ಮಳೆ3 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ4 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು5 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು6 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ10 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ22 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ23 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ1 day ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ1 day ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

ಟ್ರೆಂಡಿಂಗ್‌