ನನ್ನ ದೇಶ ನನ್ನ ದನಿ ಅಂಕಣ: ಲೋಹಿಯಾರನ್ನೇ ಮರೆತ ಸಮಾಜವಾದಿಗಳು Vistara News

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಲೋಹಿಯಾರನ್ನೇ ಮರೆತ ಸಮಾಜವಾದಿಗಳು

ನಮ್ಮ ಸಾಹಿತ್ಯ ಲೋಕದ ತಾರೆಯರು ತುಂಬ ತುಂಬ “ಬುದ್ಧಿವಂತರು”. ಕರ್ನಾಟಕದ “ಸಂದರ್ಭ”ದಲ್ಲಿ ಲೋಹಿಯಾ ಮತ್ತು ಸಮಾಜವಾದಗಳು ಚಿನ್ನದ ಮೊಟ್ಟೆ ಇಡುವ ಕೋಳಿಗಳಲ್ಲ, ಎಂಬುದನ್ನು ಅರಿತರು. ಲೋಹಿಯಾ ಅವರನ್ನು ನೇಪಥ್ಯಕ್ಕೆ ಸರಿಸಲಾಯಿತು.

VISTARANEWS.COM


on

Dr. ram manohar lohia
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ಅಂಕಣವನ್ನು ಇಲ್ಲಿ ಕೇಳಿ:

ajjampura manjunath

ಡಾ।। ರಾಮಮನೋಹರ ಲೋಹಿಯಾ ಅವರು ಭಾರತದ ವಿಶಿಷ್ಟ ರಾಜಕಾರಣಿ. ಸಮಾಜವಾದಿ. ಅಷ್ಟೇ ಅಲ್ಲ. ಅವರು ಭಾರತವನ್ನು ಅರ್ಥಮಾಡಿಕೊಂಡಿದ್ದ ಮತ್ತು ಕಮ್ಯೂನಿಸ್ಟ್ ವಿಚಾರಧಾರೆಯನ್ನು ವಿರೋಧಿಸುತ್ತಿದ್ದ ಅಪರೂಪದ ರಾಜಕಾರಣಿ. ಲೋಹಿಯಾ ಅವರು ನೆಹರೂ-ರಾಜಕಾರಣದ ಉಗ್ರ ಟೀಕಾಕಾರರಾಗಿದ್ದರು. ಅರ್ಧ ಶತಮಾನದ ಹಿಂದೆ, ನಮ್ಮ ಕನ್ನಡ ಸಾಹಿತಿಗಳಿಗೆ, ವಿಶೇಷವಾಗಿ ನವ್ಯರಿಗೆ, ಸಮಾಜವಾದವು ಅಚ್ಚುಮೆಚ್ಚಿನ ಸಿದ್ಧಾಂತವಾಗಿತ್ತು. ಬಹುಪಾಲು ಅವರೆಲ್ಲರೂ ನೆಹರೂ ಅವರನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದರು. ಲೋಹಿಯಾ ಅವರು ಒಳ್ಳೆಯ ಲೇಖಕರೂ, ಚಿಂತಕರೂ, ಆಗಿದ್ದರು. ಅವರ ಕಣ್ಣೆದುರಿಗೇ ಸಮಾಜವಾದಿಗಳೆಂದು pose ಕೊಡುತ್ತಿದ್ದ ಬಹಳ ಜನ ರಾಜಕಾರಣಿಗಳು ಲಾಭವಿರುವ ಪಕ್ಷಗಳನ್ನು ಸೇರಿಕೊಂಡರು. ಅನಂತರವಂತೂ ಸಮಾಜವಾದದ ಶತ್ರುಗಳೂ ಕಣ್ಣೀರು ಹಾಕುವಂತೆ, ಸಮಾಜವಾದಿ ರಾಜಕಾರಣ ಗಬ್ಬೆದ್ದುಹೋಯಿತು.

ಲೋಹಿಯಾ ಅವರ “Interval during Politics” ಒಂದು ಒಳ್ಳೆಯ ಕೃತಿ. ಅದನ್ನು ಕೆ.ವಿ.ಸುಬ್ಬಣ್ಣನವರು “ರಾಜಕೀಯದ ಮಧ್ಯೆ ಬಿಡುವು” ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದರು.

1960ರ ದಶಕದಲ್ಲಿ “ಸಮಾಜವಾದಿ ಯುವಜನ ಸಭಾ” ಹುಟ್ಟಿಕೊಂಡಿತು. ನಾವು ಆರಾಧಿಸುತ್ತಿದ್ದ ನವ್ಯ ಲೇಖಕರು, ವಿದ್ಯಾರ್ಥಿಗಳು, ಕಲಾವಿದರು, ನ್ಯಾಯವಾದಿಗಳು ಈ ಸಂಘಟನೆಯಲ್ಲಿ ಪಾಲ್ಗೊಂಡರು. ಜಾತೀಯತೆ, ಮೌಢ್ಯ, ಅಸಮಾನತೆಗಳನ್ನು ತೊಡೆದುಹಾಕಲು ಎಲ್ಲರೂ ಕಟಿಬದ್ಧರಾದರು. Of Course, ಈ ಎಲ್ಲ ಸಂಗತಿಗಳು ಹಿಂದೂ ಸಮಾಜಕ್ಕೆ ಮಾತ್ರ ಅನ್ವಯವಾಗುತ್ತಿದ್ದವು. ಅಂದಿಗೂ, ಇಂದಿಗೂ, ಎಂದೆಂದಿಗೂ ಇಸ್ಲಾಮೀ ಮತ್ತು ಕ್ರೈಸ್ತ ಸಮುದಾಯಗಳಲ್ಲಿ ಸಮಾನತೆ, ಭ್ರಾತೃಪ್ರೇಮ, ವೈಜ್ಞಾನಿಕ ದೃಷ್ಟಿಕೋನಗಳು ತಾಂಡವವಾಡುತ್ತಿದ್ದುದರಿಂದ (ಈಗಲೂ ತಾಂಡವವಾಡುವುದರಿಂದ) ಅವುಗಳ ವಿಷಯಗಳನ್ನು ಯಾರೂ ಎತ್ತುತ್ತಿರಲೇ ಇಲ್ಲ, ಎತ್ತುವುದೂ ಇಲ್ಲ.

ಆ ಕಾಲದಲ್ಲಿ ನಮಗೆ ತುಂಬಾ ಆಕರ್ಷಣೆ ಎನ್ನಿಸಿದ್ದ ಈ ನಮ್ಮ ನವ್ಯ ಸಾಹಿತಿಗಳು ಅದೆಷ್ಟು ವೈಭವೀಕರಿಸಿ ಹೊಗಳುತ್ತಿದ್ದರೆಂದರೆ ಈ “ರಾಜಕೀಯದ ಮಧ್ಯೆ ಬಿಡುವು” ಪುಸ್ತಕ ಓದದಿದ್ದರೆ, ನಮಗೆ ಬದುಕಿದ್ದಾಗ ಮತ್ತು ಸತ್ತಮೇಲೆ ಸ್ವರ್ಗ ಸಿಗುವುದು ಸಾಧ್ಯವಿಲ್ಲ ಎನ್ನಿಸಿತು. ಸಾಮಾನ್ಯವಾಗಿ ನಾವು ಬಾಲ್ಯದ ಗೆಳೆಯರು, ಒಬ್ಬೊಬ್ಬರು ಒಂದೊಂದು ಪುಸ್ತಕ ಕೊಂಡುಕೊಂಡು, ಅನಂತರ ಎಲ್ಲರೂ ಎಲ್ಲ ಪುಸ್ತಕಗಳನ್ನೂ ಹಂಚಿಕೊಂಡು ಓದುತ್ತಿದ್ದೆವು. ಈ ಪದ್ಧತಿಯು, ನಮ್ಮ ಸಶರೀರ ಸ್ವರ್ಗಪ್ರಾಪ್ತಿಗೆ ಇನ್ನು ಸಹಾಯ ಮಾಡಲಾರದು ಎನ್ನಿಸಿ ಬೆದರಿ, ರಾಜಕೀಯದ ಮಧ್ಯೆ ಬಿಡುವು, ಅವಸ್ಥೆ, ಭಾರತೀಪುರ, ಸಂಸ್ಕಾರ, ಸಂಕ್ರಾಂತಿ ಮುಂತಾದವುಗಳನ್ನು ನಾವು ಪ್ರತಿಯೊಬ್ಬರೂ ಕೊಂಡುಕೊಳ್ಳಬೇಕಾಯಿತು. ಹಾಗೆ ಮಾಡಲು ನಮ್ಮ ಜೇಬು ಅವಕಾಶ ಕೊಡುತ್ತಿರಲಿಲ್ಲ. ಆದರೇನು, ಇದು ನಮ್ಮ ಜೀವನ್ಮರಣಗಳ ಪ್ರಶ್ನೆಯಾಗಿತ್ತು.

ಒಮ್ಮೆಯೂ ನಾವು ಶೆಹನಾಯ್ ವಾದನವನ್ನು ಕೇಳಿರದಿದ್ದರೂ, ನಮಗೆ ಬಿಸ್ಮಿಲ್ಲಾ ಖಾನರ ಹೆಸರು ಸುಪರಿಚಿತವಾಗಿತ್ತು. ಅಂತೆಯೇ, ಸಮಾಜವಾದದ ಪ್ರಾಥಮಿಕ ಸಂಗತಿಗಳು ನಮಗೆ ಗೊತ್ತಿರದಿದ್ದರೂ ಡಾ।। ರಾಮಮನೋಹರ ಲೋಹಿಯಾ ಅವರ ಹೆಸರು ನಮ್ಮಲ್ಲಿ ಜನಜನಿತವಾಗಿತ್ತು. ನಮ್ಮ ಸಾಹಿತಿವರೇಣ್ಯರು 1951ರ (ಶಿವಮೊಗ್ಗ ಜಿಲ್ಲೆಯ, ಸಾಗರ ತಾಲ್ಲೂಕಿನ) ಕಾಗೋಡು ಸತ್ಯಾಗ್ರಹದಲ್ಲಿ ಲೋಹಿಯಾ ಅವರು ಭಾಗವಹಿಸಿ ಬಂಧನಕ್ಕೆ ಒಳಗಾದುದನ್ನು ಮಾತ್ರ ಹೇಳುತ್ತಿದ್ದರು. ಆದರೆ, ಅಪ್ಪಿತಪ್ಪಿಯೂ ಲೋಹಿಯಾ ಅವರ “GUILTY MEN OF PARTITION” ಕೃತಿಯ ಹೆಸರು ಎತ್ತುತ್ತಿರಲಿಲ್ಲ.

ಕರ್ನಾಟಕದಲ್ಲಿ ಸಮಾಜವಾದಿ ರಾಜಕಾರಣಿ ಶಾಂತವೇರಿ ಗೋಪಾಲ ಗೌಡರನ್ನು ಬಿಟ್ಟರೆ, ಬೇರಾವ ರಾಜಕಾರಣಿಗಳ ಹೆಸರುಗಳನ್ನೂ ಇವರು ಎತ್ತುತ್ತಿರಲಿಲ್ಲ. ಎಲ್ಲ ಲೇಖಕರೂ ಸಮಾಜವಾದಿಗಳೇ, ಎಲ್ಲ ರಾಜಕಾರಣಿಗಳೂ ಲೇಖಕರೇ ಆಗಿ, ರಾಜಕಾರಣಿಗಳು ಯಾರು – ಸಾಹಿತಿಗಳು ಯಾರು ಎಂಬುದೇ ನಮ್ಮಂತಹವರಿಗೆ ತಿಳಿಯುತ್ತಿರಲಿಲ್ಲ.

ನಾಲ್ಕು ದಶಕಗಳ ಹಿಂದೆ, ಸಮಾಜವಾದಿ ಒಲವಿನ ಫ್ರಾನ್ಸ್ವಾ ಮಿತ್ತರಾ (François Mitterrand) ಅವರು, ಫ್ರಾನ್ಸ್ ದೇಶದ ಅಧ್ಯಕ್ಷರಾದಾಗ ನಮ್ಮ ಕನ್ನಡ ಪತ್ರಕರ್ತರು – ಸಾಹಿತಿಗಳು ಅದೆಷ್ಟು ಬಣ್ಣಿಸಿದರೆಂದರೆ, ನನಗೆ ಮಿತ್ತರಾ ಅವರು ಭಾರತದ ಅಧ್ಯಕ್ಷರೇನಾದರೂ ಆಗಿಬಿಟ್ಟರೇ ಎಂಬ ಅನುಮಾನ ಹುಟ್ಟಿಬಿಟ್ಟಿತು!


ಸುಭಾಷ್ ಚಂದ್ರ ಬೋಸರು ಜಪಾನ್ ದೇಶದೊಂದಿಗೆ ಸೇರಿ ಬ್ರಿಟಿಷರ ಮೇಲೆ ಯುದ್ಧ ಸಾರಿದ್ದರು. ರಾಷ್ಟ್ರೀಯ ಸೈನ್ಯವನ್ನೇ ಸಂಘಟಿಸಿದ್ದರು. ಸುಭಾಷರ ಮೇಲೆ ನೆಹರೂ ಅವರಿಗೆ ಅದೆಷ್ಟು ಹೊಟ್ಟೆಕಿಚ್ಚು, ಉರಿ ಎಂದರೆ ೧೯೪೨ ರಲ್ಲಿಯೇ ಜಪಾನ್ ಮತ್ತು ಬೋಸ್ ವಿರುದ್ಧ ಲಕ್ಷಾಂತರ ಗೆರಿಲ್ಲಾಗಳನ್ನು ಒಟ್ಟು ಮಾಡುತ್ತೇನೆ, ಎಂದು ಹ್ಞೂಂಕರಿಸಿದ್ದರು. ಅವರ ಆ ಎಲ್ಲ ಮಾತುಗಳೂ, ಹೇಳಿಕೆಗಳೂ, ಘರ್ಜನೆಗಳೂ ಬ್ರಿಟಿಷರ ಸೇವೆಯನ್ನೇ ತಮ್ಮ ಜೀವನದ ಪರಮೋದ್ದೇಶ ಎಂಬಂತೆ ನೆಹರೂ ಪರಿಗಣಿಸಿದ್ದರು (GUILTY MEN OF PARTITION, ಪ್ರಕಟಣೆ 1960, ಪುಟ 13) ಎಂಬುದನ್ನು ಸಾರುತ್ತವೆ, ಎಂದಿದ್ದಾರೆ ಲೋಹಿಯಾ.

ಭಾರತದ ಸಹಸ್ರಾರು ವರ್ಷಗಳ ಇತಿಹಾಸದಲ್ಲಿ ದೇಶವಿಭಜನೆಯದ್ದು ಕರಾಳ ಅಧ್ಯಾಯ. ಕನಿಷ್ಠ ಇಪ್ಪತ್ತು ಲಕ್ಷ ಜನರು ನರಹತ್ಯಾಕಾಂಡಕ್ಕೆ ಬಲಿಯಾದರು. ಅಂದಿನ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಾಗ ಎರಡು ಕೋಟಿ ಜನರು ಮನೆಮಠ ಆಸ್ತಿಪಾಸ್ತಿ ಮಾನಮರ್ಯಾದೆ ಕಳೆದುಕೊಂಡು ನಿರ್ಗತಿಕರಾದುದು, ನಿರಾಶ್ರಿತರಾದುದು ಮರೆಯಲಾಗದ ದುರಂತ. ಇನ್ನು ಹೆಣ್ಣುಮಕ್ಕಳ ಮೇಲಾದ ಅತ್ಯಾಚಾರ, ಬರ್ಬರ ಹಿಂಸೆಗಳು ಅನೂಹ್ಯ, ಅಸಹನೀಯ, ಅಕ್ಷಮ್ಯ.

ದೇಶವಿಭಜನೆಗೆ ಕಾಂಗ್ರೆಸ್ಸಿಗರು ಬೇರೆ ಯಾರುಯಾರನ್ನೋ ದೂರುತ್ತಾರೆ. ಡಾ।। ಲೋಹಿಯಾ ತಮ್ಮ ಈ GUILTY MEN OF PARTITION ಗ್ರಂಥದಲ್ಲಿ ದಾಖಲಿಸಿರುವ ಸಂಗತಿಗಳು ಓದಿದವರ ರಕ್ತವನ್ನೇ ಹೆಪ್ಪುಗಟ್ಟಿಸುತ್ತವೆ. ವಿಭಜನೆಯ ನಿರ್ಧಾರದ ಮುಖ್ಯ ಪಾತ್ರಧಾರಿಗಳಾದ ನೆಹರೂ ಮತ್ತು ಇನ್ನಿತರ ಕಾಂಗ್ರೆಸ್ಸಿಗರನ್ನು ಲೋಹಿಯಾ ಖಂಡತುಂಡವಾಗಿ ಟೀಕಿಸಿದ್ದಾರೆ. ದೇಶವನ್ನು ತುಂಡು ತುಂಡು ಮಾಡಲು ಕಾತರರಾಗಿದ್ದ ಮತ್ತು ಅಧಿಕಾರ ಗ್ರಹಣಕ್ಕೆ ಹಾತೊರೆಯುತ್ತಿದ್ದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಆ ಐತಿಹಾಸಿಕ (ಜೂನ್ 1947) ಸಭೆಗೆ ಸಮಾಜವಾದಿಗಳಾದ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣರು ವಿಶೇಷ ಆಹ್ವಾನಿತರಾಗಿ ಹೋಗಿದ್ದರು. ಈರ್ವರೂ ವಿಭಜನೆಯನ್ನು ವಿರೋಧಿಸಿದರು (ಪುಟ 9). ನೆಹರೂ, ಪಟೇಲ್ ನೇತೃತ್ವವು ಆ ಸಭೆಗೆ ಮೊದಲೇ ಎಲ್ಲವನ್ನೂ ತೀರ್ಮಾನಿಸಿಬಿಟ್ಟಿತ್ತು. ಆ ಸಭೆಯು ಕೇವಲ ಔಪಚಾರಿಕವಾಗಿಹೋಗಿತ್ತು. ಅಧಿಕಾರಕ್ಕಾಗಿ ನೆಹರೂ (ಪುಟ 12) ಬ್ರಿಟಿಷರೊಂದಿಗೆ ಕೈಜೋಡಿಸಿಬಿಟ್ಟಿದ್ದರು, ಎಂದು ವಿಷಾದಿಸಿದ್ದಾರೆ, ಡಾ।। ಲೋಹಿಯಾ.


1969ರ ಹೊತ್ತಿಗೇ ಇಂದಿರಾ ಅವರು ಹಳೆಯ ಕಾಂಗ್ರೆಸ್ಸಿಗರನ್ನು ಗುಡಿಸಿ ತಿಪ್ಪೆಗೆ ಎಸೆದಿದ್ದರು. ಕಮ್ಯೂನಿಸ್ಟರಿಗೆ ಮಣೆ ಹಾಕಿದರು. ಆಯಕಟ್ಟಿನ ಸ್ಥಾನಗಳನ್ನೂ ನೀಡಿದರು. ಅನಂತರದ ಕಾಲಾವಧಿಯಲ್ಲಿ, ಕಮ್ಯೂನಿಸ್ಟರು ಬಹಳ ಮಹತ್ತ್ವದ NCERT, ICHR, ICSSR ಇತ್ಯಾದಿ ಎಲ್ಲವನ್ನೂ ಆಪೋಶನ ತೆಗೆದುಕೊಂಡುಬಿಟ್ಟರು.

ನಮ್ಮ ಸಾಹಿತ್ಯ ಲೋಕದ ತಾರೆಯರು ತುಂಬ ತುಂಬ “ಬುದ್ಧಿವಂತರು”. ಕರ್ನಾಟಕದ “ಸಂದರ್ಭ”ದಲ್ಲಿ ಲೋಹಿಯಾ ಮತ್ತು ಸಮಾಜವಾದಗಳು ಚಿನ್ನದ ಮೊಟ್ಟೆ ಇಡುವ ಕೋಳಿಗಳಲ್ಲ, ಎಂಬುದನ್ನು ಅರಿತರು. ಲೋಹಿಯಾ ಅವರನ್ನು ನೇಪಥ್ಯಕ್ಕೆ ಸರಿಸಲಾಯಿತು. ಬದಲಾದ “ಸನ್ನಿವೇಶ”ದಲ್ಲಿ, ಕಾಂಗ್ರೆಸ್ಸಿನ ಮತ್ತು ಕಾಂಗ್ರೆಸ್ ಮೂಲದ ರಾಜಕಾರಣಿಗಳನ್ನು ಓಲೈಸತೊಡಗಿದರು.

ತಾವು ಸಮಾಜವಾದಿಗಳೆಂದು ದಿನವೂ ಐದು ಬಾರಿ ಒದರುತ್ತಿದ್ದ ನಮ್ಮ ಈ ಸಾಹಿತಿಗಳು ಅನಂತರ ನೇರವಾಗಿ ಕಾರ್ಲ್ ಮಾರ್ಕ್ಸ್ ಆರಾಧನೆಗೆ ತೊಡಗಿದರು. ತಾವು ಕಮ್ಯೂನಿಸ್ಟರೆಂದೇ ಸ್ಪಷ್ಟವಾಗಿಯೂ ಘೋಷಿಸತೊಡಗಿದರು. ಈ paradigm shift ನಮ್ಮಂತಹ ಅಭಿಮಾನಿಗಳನ್ನು ಕಂಗೆಡಿಸಿತು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ದುರದೃಷ್ಟವಶಾತ್ ಬಾಲವೇ ನಾಯಿಯನ್ನು ಅಲ್ಲಾಡಿಸುವಂತಾಯಿತು!

ಪ್ರಸ್ತುತ ಕಾಲಘಟ್ಟದಲ್ಲಿ ಹಿಂತಿರುಗಿ ಭಾರತದ ರಾಜಕಾರಣದ ಪರಿಪ್ರೇಕ್ಷ್ಯದಲ್ಲಿ ಕನ್ನಡ ಸಾಹಿತ್ಯಲೋಕವನ್ನು ನೋಡಿದರೆ ವಿಷಾದಭಾವವೇ ಮೂಡುತ್ತದೆ. ಹುಟ್ಟಾ ಕಾಂಗ್ರೆಸ್ಸಿಗ ರಾಮಕೃಷ್ಣ ಹೆಗ್ಗಡೆ ಅವರನ್ನು ಸ್ಮರಿಸುವವರು, ಕಮ್ಯೂನಿಸಂ ಒಲವಿನ ಕಾಂಗ್ರೆಸ್ಸಿಗ ದೇವರಾಜ ಅರಸು ಅವರನ್ನು ನೆನಪು ಮಾಡಿಕೊಳ್ಳುವವರು ಮತ್ತು ಪ್ರತಿವರ್ಷ ಇಂತಹವರ ವಾರ್ಷಿಕ ಕಾರ್ಯಕ್ರಮಗಳನ್ನೂ ಆಚರಿಸುವವರು, ಅಪ್ಪಿತಪ್ಪಿಯೂ ಡಾ।। ರಾಮಮನೋಹರ ಲೋಹಿಯಾ ಅವರನ್ನು ಸ್ಮರಿಸುವುದಿಲ್ಲ. ಇನ್ನು ಅವರ ಸಾಹಿತ್ಯವನ್ನು, ಅವರ ವಿಚಾರಗಳನ್ನು ಕುರಿತು ವಿಚಾರ ಸಂಕಿರಣಗಳನ್ನು ಮಾಡುತ್ತಿದ್ದವರು ಈಗ ಅಂತರ್ಧಾನರಾಗಿಬಿಟ್ಟಿದ್ದಾರೆ!

ನಮ್ಮ ಬೀಚಿ ಅವರಂತೆ, ಜಾರ್ಜ್ ಬರ್ನಾರ್ಡ್ ಶಾ ಅವರೂ ಸಹ ಹಾಸ್ಯದ ಮಾತಿನೊಳಗೆ ವಿಶಿಷ್ಟ ಚಿಂತನೆಯ ಹೂರಣ ಹುದುಗಿಸಿರುತ್ತಿದ್ದರು. ಅವರು ಹೇಳಿದ “Entire Europe would have been socialist, but for socialists” ಎಂಬ ಮಾರ್ಮಿಕವಾದ ಮಾತು, ವಿಶೇಷತಃ ನಮ್ಮ ಕರ್ನಾಟಕದ ಸಾಹಿತಿಗಳಿಗೆ ಮತ್ತು ಸಮಾಜವಾದಿ ರಾಜಕಾರಣಿಗಳಿಗೆ ಹೆಚ್ಚು ಅನ್ವಯವಾಗುತ್ತದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಸಾಬ್, ಇದರ ಮೇಲೆಯೇ ದೇಶವಿಭಜನೆಯ ಡೀಲ್ ಆದದ್ದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

Raja Marga Column : ಎಷ್ಟೊಂದು ಕಷ್ಟ ಆ ಜೀವಕ್ಕೆ; ಲೀಲಮ್ಮನಿಗೆ ಸ್ವರ್ಗದಲ್ಲಾದರೂ ಸುಖ ಸಿಗಲಿ!

Raja Marga Column : 60 ವರ್ಷ ಸಿನಿ ಬದುಕು, 650 ಸಿನಿಮಾಗಳು. ಇದು ಮಾತ್ರ ಲೀಲಾವತಿ ಅಮ್ಮ ಅಲ್ಲ. ಅವರು ಹೇಳಿದ್ದಕ್ಕಿಂತಲೂ, ನಟಿಸಿದ್ದಕ್ಕಿಂತಲೂ ಭಿನ್ನವಾದ ಕಷ್ಟದ ಬದುಕು ಅವರು ಅನುಭವಿಸಿದ್ದಾರೆ. ಕಳೆದುಹೋದ ಅವರ ಬದುಕಿನ ಒಂದು ಮರುಪಯಣ ಇಲ್ಲಿದೆ. ಇದು
ಲೀಲಾವತಿ ಅಮ್ಮನಿಗೆ ಒಂದು ನುಡಿ ನಮನ

VISTARANEWS.COM


on

Raja Marga Leelavathi amma
Koo
RAJAMARGA Rajendra Bhat

ತನ್ನ ಪ್ರತಿಭೆಯಿಂದ 50 ವರ್ಷ ಕನ್ನಡ ಸಿನಿಮಾ ರಂಗವನ್ನು ಶ್ರೀಮಂತ ಮಾಡಿದ ಲೀಲಾವತಿ (Actress Leelavathi) ಅಮ್ಮ ನಿನ್ನೆ (ಡಿಸೆಂಬರ್ 8) ನಮ್ಮನ್ನು ಅಗಲಿದ್ದಾರೆ. ಅದರಿಂದ ಅವರ ಮಗ ವಿನೋದ್ ರಾಜ್ (Actor Vinod raj) ಮಾತ್ರ ಅನಾಥರಾದದ್ದು ಅಲ್ಲ, ಇಂದು ಕನ್ನಡ ಸಿನಿಮಾ ರಂಗವೇ ಅನಾಥವಾಗಿದೆ (Actress Leelavathi No more). ಅವರು ಬಿಟ್ಟುಹೋದ ಶೂನ್ಯವನ್ನು ತುಂಬುವ ಇನ್ನೊಬ್ಬ ಕಲಾವಿದೆ ಸದ್ಯಕ್ಕೆ ಯಾರೂ ಕನ್ನಡದಲ್ಲಿ ಇಲ್ಲ (Raja Marga Column).

ಲೀಲಾವತಿ ಅಮ್ಮನ ಬವಣೆಯ ಬಾಲ್ಯ

ಅವರದ್ದು ಒಂಥರಾ ಗೊತ್ತುಗುರಿ ಇಲ್ಲದ ಬದುಕು. ಇಡೀ ಬದುಕಿನಲ್ಲಿ ಆಕೆಗೆ ನೋವು ಮತ್ತು ನೋವು ಮಾತ್ರ ದೊರೆತದ್ದು. ಹುಟ್ಟಿದ್ದು ಕರಾವಳಿ ಕರ್ನಾಟಕದ ಬೆಳ್ತಂಗಡಿಯಲ್ಲಿ. ಕಲಿತದ್ದು ಕೇವಲ ಎರಡನೇ ಕ್ಲಾಸು. ಒಮ್ಮೆ ಬಾಲ್ಯದಲ್ಲಿ ಬಿಸಿ ಎಣ್ಣೆಯ ಬಾಣಲೆಯಲ್ಲಿ ಕಾಲು ಬಿದ್ದು ಎರಡು ತಿಂಗಳು ನೋವು ಪಟ್ಟು ಮಲಗಿದರು. ಅಲ್ಲಿಗೆ ಶಾಲೆಯ ಆಸೆಗೆ ಕಲ್ಲು ಬಿತ್ತು. ಒಂಬತ್ತನೇ ವಯಸ್ಸಿಗೆ ಅಪ್ಪ, ಅಮ್ಮ ಇಬ್ಬರೂ ತೀರಿಹೋದರು. ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕಿ, ಚಾಕರಿ ಮಾಡಿ ಆಕೆ ತನ್ನ ಬಾಲ್ಯವನ್ನು ಕಳೆದರು. ಒಮ್ಮೆ ಟೆಂಟ್ ಥಿಯೇಟರ್‌ನಲ್ಲಿ ನೆಲದ ಮೇಲೆ ಕೂತು ‘ಚಂದ್ರಲೇಖ ‘ ಎಂಬ ಸಿನಿಮಾ ನೋಡಿದ್ದೇ ಅವರಿಗೆ ತಾನೂ ನಟಿ ಆಗಬೇಕು ಅನ್ನುವ ಕನಸು ಆರಂಭ ಆಯಿತು. ಆ ಕನಸು ಅವರನ್ನು ಮಲಗಲು ಬಿಡಲಿಲ್ಲ.

ನನಗೊಂದು ಅವಕಾಶ ಕೊಡಿ, ಒಂದು ಹೊತ್ತಿನ ಊಟ ಕೊಡಿ!

ಆಗ ಕರಾವಳಿಯಲ್ಲಿ ತುಳು ಸಿನಿಮಾಗಳು ಆರಂಭ ಆಗಿದ್ದವು. ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾ ಬಿಡುಗಡೆ ಆಗುತ್ತಿದ್ದವು. ಅದೂ ಕಪ್ಪು ಬಿಳುಪು ಸಿನಿಮಾಗಳು. ಸಿನಿಮಾದಲ್ಲಿ ಅಭಿನಯದ ಹುಚ್ಚು ಅಂಟಿಸಿಕೊಂಡು ಆಕೆ ತುಳು ಸಿನಿಮಾಗಳ ನಿರ್ಮಾಪಕರ ಮನೆಗಳಿಗೆ ಅಲೆದರು. ಅವರ ಪರವಾಗಿ ಮಾತಾಡುವವರು ಯಾರೂ ಇರಲಿಲ್ಲ. ‘ನನಗೊಂದು ಅವಕಾಶ ಕೊಡಿ, ಒಂದು ಹೊತ್ತಿನ ಊಟ ಕೊಡಿ ‘ ಎಂದು ಕೇಳಿಕೊಂಡು ಹದಿನಾಲ್ಕು ವರ್ಷದ ಒಬ್ಬಳು ಚಂದವಾದ ಹುಡುಗಿ ಅಲೆದಾಡಬೇಕಾದ ಅನಿವಾರ್ಯತೆ ಊಹೆ ಮಾಡಿದರೆ ನೀವು ಖಂಡಿತ ಬೆಚ್ಚಿ ಬೀಳುತ್ತೀರಿ. ಹುಡುಗಿಯರು ಸಿನಿಮಾದಲ್ಲಿ ಅಭಿನಯ ಮಾಡುವುದೇ ತಪ್ಪು ಎಂದು ಅಭಿಪ್ರಾಯ ಇದ್ದ ಕಾಲ ಅದು. ಅಂತಹ ಸನ್ನಿವೇಶದಲ್ಲಿ ಲೀಲಾವತಿ (ಅವರ ಮೊದಲ ಹೆಸರು ಲೀಲಾ ಕಿರಣ್) ನಾನು ಯಾವ ಪಾತ್ರವಾದರೂ ಮಾಡಲು ಸಿದ್ಧ ಎಂದು ಘೋಷಣೆ ಮಾಡಿದ್ದರು. ಅದರ ಪರಿಣಾಮವಾಗಿ ಸಾವಿರೊಡೊರ್ತಿ ಸಾವಿತ್ರಿ, ದಾರೆದ ಬುಡೆದಿ, ಬಿಸತ್ತಿ ಬಾಬು ಮೊದಲಾದ ತುಳು ಸಿನಿಮಾಗಳಲ್ಲಿ ಆಕೆ ಮುಖ್ಯಪಾತ್ರಗಳನ್ನು ಮಾಡಿದ್ದರು.

ಕನ್ನಡ ಸಿನಿಮಾಗಳಲ್ಲಿ ಅವಕಾಶ ಹುಡುಕಿಕೊಂಡು ಮೈಸೂರಿಗೆ

‘ಹಿಂದೂ ಯಾರಿಲ್ಲ. ಮುಂದೂ ಯಾರಿಲ್ಲ’ ಎಂದು ಹೇಳಿಕೊಂಡಿದ್ದ ಲೀಲಾವತಿ ಅಭಿನಯದ ಅವಕಾಶ ಹುಡುಕಿಕೊಂಡು ಮೈಸೂರಿಗೆ ಬಂದಿದ್ದರು. ಆಗ ಬದುಕಿಗೊಂದು ಆಸರೆ ಬೇಕಿತ್ತು. ಆಗ ಮಹಾನ್ ಕಲಾವಿದ ಆಗಿದ್ದ ಮಹಾಲಿಂಗ ಭಾಗವತರ್ ಅವರ ಪ್ರಸಿದ್ಧ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮಾ ಕಂಪನಿ’ಯಲ್ಲಿ ಪಾತ್ರಗಳನ್ನು ಮಾಡುವ ಅವಕಾಶ ದೊರೆಯಿತು. ಅಭಿನಯ ಅವರ ರಕ್ತದಲ್ಲಿಯೇ ಬಂದಿತ್ತು ಅನ್ನಿಸುತ್ತದೆ. ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅವರು ಅಭಿನಯ ಮಾಡುತ್ತಿದ್ದರು. ತನ್ನ ಪಾತ್ರಗಳಲ್ಲಿ ತಲ್ಲೀನತೆ ಅವರಿಗೆ ಸಣ್ಣ ಪ್ರಾಯದಲ್ಲಿ ಸಾಧ್ಯವಾಗಿತ್ತು. ಮುಂದೆ ಸುಬ್ಬಯ್ಯ ನಾಯ್ಡು ಅವರ ಪರಿಚಯ ಆಗಿ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಒಂದು ಪಾತ್ರವು ದೊರೆಯಿತು. ಒಂದೊಂದು ಪಾತ್ರವನ್ನೂ ಆವಾಹನೆ ಮಾಡುವ ಶಕ್ತಿ ಅವರನ್ನು ಗೆಲ್ಲಿಸುತ್ತಾ ಹೋಯಿತು.

Actress Leelavati No More

ಅದೇ ಸಂದರ್ಭದಲ್ಲಿ ಮಹಾಲಿಂಗ ಭಾಗವತರ್ ಅವರನ್ನು ಮದುವೆ ಆದ ಲೀಲಾವತಿ ಆ ಮದುವೆಯನ್ನು ರಹಸ್ಯವಾಗಿ ಇಟ್ಟರು. ಆಗ ಹೆಚ್ಚಿನ ನಟಿಯರು ತಮ್ಮ ಬೇಡಿಕೆ ಉಳಿಸಿಕೊಳ್ಳಲು ಮದುವೆಯನ್ನು ಬಹಿರಂಗ ಮಾಡುತ್ತಿರಲಿಲ್ಲ. ಮುಂದೆ ಲೀಲಾವತಿ ಜೀವನದಲ್ಲಿ ಮಹಾಲಿಂಗ ಭಾಗವತರ್ ಅವರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದರು.

ಸಿನಿಮಾದಲ್ಲಿಯೂ ಒಳ್ಳೆಯ ಅವಕಾಶಗಳು ದೊರೆತವು. ಆದರೆ ಹಳ್ಳಿಯ ಹುಡುಗಿ ಲೀಲಾವತಿಗೆ ಅಭಿನಯ ಮಾತ್ರ ಗೊತ್ತಿತ್ತು. ವ್ಯವಹಾರ ಜ್ಞಾನ ಇರಲಿಲ್ಲ. ಅದರಿಂದಾಗಿ ಅವರು ಹಲವು ಬಾರಿ ಕೈ ಸುಟ್ಟುಕೊಂಡರು. ತುಂಬಾ ಜನ ಮೋಸ ಮಾಡಿದರು. ಆಗ ಕನ್ನಡ ಸಿನಿಮಾ ರಂಗದ ಚಟುವಟಿಕೆಗಳು ಮದ್ರಾಸಿನಲ್ಲಿ ನಡೆಯುತ್ತಿದ್ದ ಕಾರಣ ಆಕೆ ಅಲ್ಲಿಗೆ ಹೋಗಿ ಒಂದು ಬಾಡಿಗೆ ಮನೆ ಹಿಡಿದರು.

60 ವರ್ಷಗಳು – 650 ಶ್ರೇಷ್ಠ ಸಿನಿಮಾಗಳು

ನಾನಿಂದು ಅವರ ಸಿನಿಮಾಗಳ ಬಗ್ಗೆ ಹೆಚ್ಚು ಬರೆಯುವುದಿಲ್ಲ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಸಾಟಿ ಇಲ್ಲದ ಕಲಾವಿದೆ ಆಗಿ ಮೆರೆದ ಲೀಲಾವತಿ ಭಾರೀ ಹೆಸರು ಪಡೆದರು. ದಕ್ಷಿಣ ಭಾರತದ ಎಲ್ಲ ಮಹಾನ್ ನಟರ ಜೊತೆ ಅಭಿನಯ ಮಾಡಿದ ಆಕೆ ಅದ್ಭುತ ನಟಿ ಆಗಿ ಮಿಂಚಿದರು. ಅತೀ ಹೆಚ್ಚು ನಟಿಸಿದ್ದು ಕನ್ನಡ ಸಿನಿಮಾಗಳಲ್ಲಿ. ಡಾಕ್ಟರ್ ರಾಜಕುಮಾರ್ ಜೊತೆಗೆ ಅವರದ್ದು ಅದ್ಭುತವಾದ ಕೆಮಿಸ್ಟ್ರಿ. ಈ ಜೋಡಿ ಮೋಡಿ ಮಾಡಿದ್ದು ಬರೋಬ್ಬರಿ 36 ಸಿನೆಮಾಗಳಲ್ಲಿ. ಭೂದಾನ, ಸಿಪಾಯಿ ರಾಮು, ಕಿತ್ತೂರು ಚೆನ್ನಮ್ಮ, ಭಾಗ್ಯ ದೇವತೆ, ಭಕ್ತ ಕುಂಬಾರ, ಉಪಾಸನೆ, ಬಿಳಿ ಹೆಂಡತಿ, ದೇವರ ಗುಡಿ, ಗಾಳಿ ಗೋಪುರ, ನಾಗರ ಹಾವು, ವೀರ ಕೇಸರಿ, ಕರುಣೆಯೇ ಕುಟುಂಬದ ಕಣ್ಣು ಇವುಗಳೆಲ್ಲ ಲೀಲಾವತಿ ಅವರ ಕ್ಲಾಸಿಕಲ್ ಸಿನಿಮಾಗಳು.

ರಾಜ್ – ಲೀಲಾವತಿ ಸೂಪರ್ ಜೋಡಿ

ಇಬ್ಬರೂ ಕಲಾವಿದರು ತಮ್ಮ ಪಾತ್ರಗಳಲ್ಲಿ ಮುಳುಗಿ ಅಭಿನಯ ಮಾಡುತ್ತಿದ್ದರೆ ಜನರು ಅವರನ್ನು ಗಂಡ ಹೆಂಡತಿ ಎಂದೇ ಕರೆಯಲು ಆರಂಭ ಮಾಡಿದರು. ಇದು ಲೀಲಾವತಿ ಅವರ ಗಮನಕ್ಕೂ ಬಂದಿತ್ತು. ಆದರೆ ಲೀಲಾವತಿ ಅದಕ್ಕೆ ರೆಸ್ಪಾನ್ಸ್ ಮಾಡಲು ಹೋಗಲಿಲ್ಲ. ರಾಜ್ ಕೂಡ ಲೀಲಾವತಿ ಅವರನ್ನು ಭಾರೀ ಇಷ್ಟ ಪಟ್ಟರು. ಲೀಲಾವತಿ ಅಮ್ಮ ರಾಜ್ ಅವರನ್ನು ಭಕ್ತಿಯಿಂದ ‘ದೊಡ್ಡೋರು’ ಎಂದೇ ಭಕ್ತಿಯಿಂದ ಕರೆಯುತ್ತಿದ್ದರು.

Leelavathi no more

ರಾಜ್ ಲೀಲಾವತಿ ಜೋಡಿಯ ಒಂದು ಐತಿಹಾಸಿಕ ದಾಖಲೆ ಇದೆ. ಅದನ್ನು ಮುಂದೆ ಕೂಡ ಯಾರೂ ಮುರಿಯಲು ಸಾಧ್ಯವಿಲ್ಲ. ಅದೆಂದರೆ ಲೀಲಾವತಿ ಬೇರೆ ಬೇರೆ ಸಿನಿಮಾಗಳಲ್ಲಿ ಡಾಕ್ಟರ್ ರಾಜ್ ಪ್ರೇಯಸಿಯಾಗಿ, ಹೆಂಡತಿಯಾಗಿ, ಮಗಳಾಗಿ, ಅತ್ತಿಗೆಯಾಗಿ, ತಂಗಿಯಾಗಿ, ಅತ್ತೆಯಾಗಿ, ಸೊಸೆಯಾಗಿ, ಸೋದರತ್ತೆಯಾಗಿ, ಅಮ್ಮನಾಗಿ, ಅಜ್ಜಿಯಾಗಿ ಕೂಡ ಯಶಸ್ವಿಯಾಗಿ ನಟಿಸಿದ್ದು!

ಪೋಷಕ ಪಾತ್ರಗಳ ಕಡೆಗೆ….

ಹಣೆಯಲ್ಲಿ ಒಂದೊಂದೇ ನರೆಗೂದಲು ಕಾಣಿಸಲು ತೊಡಗಿದಾಗ ಲೀಲಾವತಿ ವಾಸ್ತವಕ್ಕೆ ಇಳಿದರು. ಪೋಷಕ ಪಾತ್ರಗಳನ್ನು ಬೊಗಸೆ ಬೊಗಸೆಯಾಗಿ ಪಡೆದರು. ಕನ್ನಡದಲ್ಲಿ ಪೋಷಕ ನಟಿಯಾಗಿ ಅವರಷ್ಟು ಯಶಸ್ವೀ ಆದ ಇನ್ನೊಬ್ಬ ಕಲಾವಿದೆ ನಮಗೆ ದೊರೆಯುವುದಿಲ್ಲ. ಅಜ್ಜಿ, ಅತ್ತೆ, ಅಮ್ಮ, ಅಕ್ಕ, ಅತ್ತಿಗೆ… ಹೀಗೆ ಯಾವ ಪಾತ್ರಕ್ಕೂ ಅವರು ಸೂಟ್ ಆಗ್ತಾ ಇದ್ದರು. ಗೆಜ್ಜೆ ಪೂಜೆ, ಸಿಪಾಯಿ ರಾಮು, ಡಾಕ್ಟರ್ ಕೃಷ್ಣ ಈ ಸಿನಿಮಾಗಳ ಅಭಿನಯಕ್ಕೆ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳು ಲಭಿಸಿವೆ. ಇಂದಿನ ರಾಮಾಯಣ, ಸ್ವಾತಿ ಮುತ್ತು, ನಾ ನಿನ್ನ ಮರೆಯಲಾರೆ, ಬಿಳಿ ಹೆಂಡ್ತಿ ಸಿನಿಮಾಗಳ ಅವರ ಅಭಿನಯ ನೋಡಿದರೆ ನಮಗೆ ಲೀಲಾವತಿ ಅಮ್ಮನ ಪ್ರತಿಭೆಯ ವಿಶ್ವರೂಪ ದರ್ಶನ ಆಗುತ್ತದೆ. ಆಕೆ ಮಹಾನ್ ಕಲಾವಿದೆ ಅನ್ನುವುದರಲ್ಲಿ ಎರಡನೇ ಮಾತೇ ಇಲ್ಲ.

ಲೀಲಾವತಿ ಅಮ್ಮನಿಗೆ ನೋವು ಕೊಡುವ ಘಟನೆಗಳು

ಎಂತಹ ಮಹಾನ್ ಕಲಾವಿದೆ ಆದರೂ ಲೀಲಾವತಿ ಅಮ್ಮನ ಬದುಕಿನ ಸಂಧ್ಯಾಕಾಲದಲ್ಲಿ ನೂರಾರು ನೋವು ಕೊಡುವ ಘಟನೆಗಳು ನಡೆದವು. ಅದರಲ್ಲಿಯೂ ತುಂಬಾ ನೋವು ಕೊಟ್ಟದ್ದು ರಾಜ್ ಲೀಲಾವತಿ ದಂಪತಿಗಳು ಎನ್ನುವ ಆಪಾದನೆ. ಆಕೆಯ ಮಗ ವಿನೋದ್ ರಾಜ್ ರಾಜಕುಮಾರ್ ಮಗ ಎನ್ನುವ ಸುದ್ದಿ ಹರಡಲು ತೊಡಗಿದಾಗ ಲೀಲಾವತಿ ಅಮ್ಮ ನಡುಗಿಹೋದರು. ಅದಕ್ಕೆ ಪೂರಕವಾಗಿ ರವಿ ಬೆಳಗೆರೆ ‘ರಾಜ್ ಲೀಲಾ ವಿನೋದ’ ಎಂಬ ಪುಸ್ತಕ ಬರೆದರು. ಆಗ ಬಹಿರಂಗವಾಗಿ ಬಂದು ಲೀಲಾವತಿ ಅಮ್ಮ ಸ್ಪಷ್ಟೀಕರಣ ಕೊಡಬೇಕಾದ ಅನಿವಾರ್ಯತೆ ಬಂದಿತು. ಆಕೆ ಕಣ್ಣೀರು ಹಾಕಿದ ನೂರಾರು ಘಟನೆಗಳು ನಡೆದವು.

Raja Marga Leelavathi2

ಒಮ್ಮೆ ಏನಾಯಿತು ಅಂದರೆ ಪ್ರತೀ ವರ್ಷವೂ ಅಮ್ಮ ಮತ್ತು ಮಗ ತಿರುಪತಿಗೆ ಹೋಗಿ ಮುಡಿ ಕೊಟ್ಟು ಬರುವ ಸಂಪ್ರದಾಯ ಇತ್ತು. ಒಮ್ಮೆ ಹೋಗಿ ಮುಡಿ ಕೊಟ್ಟು ಹಿಂದೆ ಬರುವಾಗ ರಾಜ್ ಕುಮಾರ್ ತೀರಿಹೋದ ಸುದ್ದಿ ಬಂದು ತಾಯಿ ಮಗ ಬೆಂಗಳೂರಿಗೆ ಧಾವಿಸಿ ಬಂದರು. ಆದರೆ ರಾಜ್ ಅಭಿಮಾನಿಗಳು ಅವರಿಗೆ ರಾಜ್ ಅಂತಿಮ ದರ್ಶನದ ಅವಕಾಶ ನೀಡದೇ ಅಪಮಾನ ಮಾಡಿ ಕಳುಹಿಸಿದರು. ತಾಯಿ ಮತ್ತು ಮಗ ಇಬ್ಬರೂ ಕಣ್ಣೀರು ಹಾಕಿ ಹಿಂದೆ ಹೋದ ದಿನ ಅದು. ಲೀಲಾವತಿ ಅಮ್ಮ ಸಾಯುವತನಕ ಇಂತಹ ಹಲವು ಘಟನೆಗಳಿಂದ ಜರ್ಜರಿತ ಆಗಿದ್ದರು. ಒಬ್ಬ ಅಮ್ಮನಾಗಿ ವಿನೋದ್ ರಾಜ್ ಅವರನ್ನು ಸ್ಟಾರ್ ಮಾಡಲು ಪಡಬಾರದ ಪಾಡು ಪಟ್ಟರು. ಆತನೂ ಅಮ್ಮನ ಹಾಗೆ ಪ್ರತಿಭಾವಂತ. ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡಿ ಆಕೆ ತುಂಬಾ ದುಡ್ಡು ಕಳೆದುಕೊಂಡರು.

ಇದನ್ನೂ ಓದಿ : Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

ನೆಲಮಂಗಲದಲ್ಲಿ ಹಸಿರು ತೋಟ

ಮುಂದೆ ತಾಯಿ ಮಗ ಸೇರಿಕೊಂಡು ನೆಲಮಂಗಲ ತಾಲೂಕಿನ ಸೋಲದೇವನ ಹಳ್ಳಿ ಎಂಬ ಗ್ರಾಮದಲ್ಲಿ ಜಾಗವನ್ನು ಖರೀದಿ ಮಾಡಿ ಬೆವರು ಸುರಿಸಿ ಭಾರಿ ದೊಡ್ಡ ಹಸಿರು ತೋಟ ಮಾಡಿದರು. ಲೀಲಾವತಿ ಅಮ್ಮ ತನ್ನ ಸಂಪಾದನೆಯ ಎಲ್ಲ ದುಡ್ಡು ಅಲ್ಲಿ ಸುರಿದು ಬೆವರು ಬಸಿದಿದ್ದಾರೆ. ಬಡವರಿಗಾಗಿ ಒಂದು ಸಾರ್ವಜನಿಕ ಆಸ್ಪತ್ರೆ ಮಾಡಿದ್ದಾರೆ. ಇತ್ತೀಚೆಗೆ ಒಂದು ಪಶು ಆಸ್ಪತ್ರೆ ಮಾಡಿ ಸರಕಾರಕ್ಕೆ ಹಸ್ತಾಂತರ ಮಾಡಿದ್ದಾರೆ.

Leelavathi Hospital

ಅವರಿಗೆ ಡಾಕ್ಟರ್ ರಾಜಕುಮಾರ್ ಅವರ ಹೆಸರಿನ ಪ್ರಶಸ್ತಿ, ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್ ಎಲ್ಲವೂ ದೊರೆತಿದೆ. ಬದುಕಿನ ಎಲ್ಲ ಹಂತಗಳಲ್ಲಿಯೂ ನೋವು ಪಡುತ್ತಾ ಬಂದ ಲೀಲಾವತಿ ಅಮ್ಮ ಸ್ವರ್ಗದಲ್ಲಿ ಆದರೂ ಸುಖವಾಗಿರಲಿ ಅನ್ನುವುದೇ ಭರತವಾಕ್ಯ. ಅವರಿಗೆ ನಮ್ಮೆಲ್ಲರ ಶ್ರದ್ಧಾಂಜಲಿ ಅರ್ಪಣೆ ಆಗಲಿ.

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಅಗಸ್ತ್ಯರ ಆಶ್ರಮದಲ್ಲಿ ರಾವಣ ವಧೆಗೆ ಸಿದ್ಧವಾದ ವೇದಿಕೆ

ಜನಪೀಡಕನಾದ ರಾವಣನ ವಧೆಗಾಗಿಯೇ ದೇವತೆಗಳು ರಚಿಸಿದ ಮಹಾನಾಟಕದಲ್ಲಿ ರಾಮ ಲಕ್ಷ್ಮಣ ಸೀತೆಯರು ಮಾಡಿದ ಪಾತ್ರಪೋಷಣೆಯನ್ನು ವಾಲ್ಮೀಕಿ ಕವಿ ರಸಪೂರ್ವಕವಾಗಿ ರಾಮಾಯಣದಲ್ಲಿ ಕಂಡರಸಿದ್ದಾರೆ.

VISTARANEWS.COM


on

mayamruga
Koo

ರಾವಣತ್ವದ ದರ್ಪಕ್ಕೆ ಸೀತಾಕಂಪನವನ್ನು ತಂದ ಅಕಂಪ

dhavala dharini by Narayana yaji

ಹಿಂದಿನ ಸಂಚಿಕೆಯಲ್ಲಿ ಸೀತಾಪಹರಣದ ಘಟನೆಯ ಹಿಂದಿನ ಮುಖ್ಯವಾದ ವಿಷಯಗಳನ್ನು ಗಮನಿಸಿದೆವು. ಅಕಂಪನ ಮೂಲಕ ರಾವಣನ ಮನಸ್ಥಿತಿಯನ್ನು ತಿಳಿದುಕೊಳ್ಳೋಣ.

ಭಾರ್ಯಾ ತಸ್ಯೋತ್ತಮಾ ಲೋಕೇ ಸೀತಾ ನಾಮ ಸುಮಧ್ಯಮಾ.
ಶ್ಯಾಮಾ ಸಮವಿಭಕ್ತಾಙ್ಗೀ ಸ್ತ್ರೀರತ್ನಂ ರತ್ನಭೂಷಿತಾ৷৷ಅ.31.29৷৷

ರಾಮನಿಗೆ ಸುಂದರವಾದ ನಡುವುಳ್ಳ ಸೀತಾ ಎನ್ನುವ ಹೆಸರಿನ ಉತ್ತಮಳಾದ ಹೆಂಡತಿಯಿದ್ದಾಳೆ. ಅವಳು ಯೌವನಮಧ್ಯಸ್ಥಳು. ಆಕೆಯ ಅಂಗಗಳು ಯಾವ ಯಾವ ಪರಿಮಾಣದಲ್ಲಿರಬೇಕೋ ಅಷ್ಟೇ ಪರಿಣಾಮದಲ್ಲಿ ಸಮವಾಗಿ ವಿಭಕ್ತವಾಗಿವೆ. ರತ್ನಾಭರಣಗಳಿಂದ ಭೂಷಿತೆಯಾಗಿರುವ ಆಕೆ ಸ್ತ್ರೀ ರತ್ನವೇ ಆಗಿದ್ದಾಳೆ.

ಅಕಂಪನೆನ್ನುವ ರಾವಣನ ಗೂಢಚರ. ಆತ ಜನಸ್ಥಾನದಲ್ಲಿ ಖರನೊಂದಿಗೆ ಇದ್ದ. ರಾಮನ ಬಾಣದಿಂದ ಅದು ಹೇಗೋ ತಪ್ಪಿಸಿಕೊಂಡು ಲಂಕೆಗೆ ಬಂದು ರಾವಣನನ್ನು ಕಂಡು ಜನಸ್ಥಾನದಲ್ಲಿ ರಾಮನ ಪರಾಕ್ರಮಕ್ಕೆ ಖರ ದೂಷಣ ತ್ರಿಶಿರಾದಿಗಳ ಸಹಿತ ಹದಿನಾಲ್ಕು ಸಾವಿರ ರಾಕ್ಷಸರನ್ನು ರಾಮ ಏಕಾಂಗಿಯಾಗಿ ಸಂಹರಿಸಿದ ವಿವರಗಳನ್ನು ತಿಳಿಸಿದ. ಇದಕ್ಕೆ ಕಾರಣಳಾದ ಶೂರ್ಪನಖಿಯ ವಿಷಯವನ್ನು ರಾವಣನಿಂದ ಮುಚ್ಚಿಟ್ಟ. ಕ್ರುದ್ಧನಾದ ರಾವಣ ಆಗಲೇ ಎದ್ದು ರಾಮನನ್ನು ಕೊಂದುಬಿಡುವೆ ಎಂದು ಜನಸ್ಥಾನಕ್ಕೆ ಹೊರಡಲು ಸಿದ್ಧನಾದನು. ಆಗ ಆತನನ್ನು ತಡೆಯುವ ಅಕಂಪ ರಾವಣನಿಗೆ ರಾಮನ ಪರಾಕ್ರಮವನ್ನು ವಿವರವಾಗಿ ತಿಳಿಸುತ್ತಾನೆ. ಚಿನ್ನದ ರೆಕ್ಕೆಗಳುಳ್ಳ ರಾಮನ ಬಾಣಗಳಿಗೆ ಹುಸಿಯಿಲ್ಲವೆಂದು ಎಚ್ಚರಿಸುತ್ತಾನೆ, ದೇವತೆಗಳಿಂದಲೂ ರಾಮನು ಅವಧ್ಯನೆಂದು ಹೇಳುತ್ತಾನೆ. ರಾವಣ ತನ್ನ ಪರಾಕ್ರಮದಿಂದ ದೇವತೆಗಳನ್ನು ಸೋಲಿಸಿದವ. ಯಮಧರ್ಮನ ಕಾಲ ದಂಡವನ್ನೇ ಕಸಿದುಕೊಂಡವ. ಅಂತಹಾ ರಾವಣ ರಾಮನ ಪರಾಕ್ರಮದ ಕುರಿತು ಅಕಂಪ ಹೇಳಿದ ಮಾತುಗಳನ್ನು ಕೇಳುತ್ತಾನೆ ಎಂದರೆ ಆತನೋರ್ವ ನಂಬಿಗಸ್ಥ ದೂತನಾಗಿರಲೇಬೇಕು. ರಾವಣ ಎಲ್ಲ ಯುದ್ಧವನ್ನು ಗೆದ್ದಿದ್ದೂ ಕುಟಿಲತನದಿಂದಲೇ. ಅಜೇಯನೇನೂ ಅಲ್ಲ; ಅದಾಗಲೇ ಆತ ಕಾರ್ತವೀರ್ಯ, ಬಲಿ, ವಾನರರಾಜನಾದ ವಾಲಿಯ ಹತ್ತಿರ ಸೋತಿದ್ದ. ತನ್ನ ವರದ ಮಿತಿಯ ಅರಿವು (ಮನುಷ್ಯರನ್ನು ಹೊರತು ಪಡಿಸಿ ಬೇರೆ ಯಾರೂ ತನ್ನನ್ನು ಕೊಲ್ಲಲು ಸಾಧ್ಯವಾಗದಿರಲಿ ಎನ್ನುವುದು ಆತ ಬೇಡಿ ಪಡಕೊಂಡ ವರ) ಆತನಿಗೆ ಆಗಿರಬೇಕು. ಅಕಂಪನೇ ರಾವಣನಿಗೆ ರಾಮನನ್ನು ನೇರವಾದ ಯುದ್ಧದಲ್ಲಿ ಕೊಲ್ಲಲು ಸಾಧ್ಯವಾಗದಿದ್ದರೂ ಕುಟಿಲತೆಯಿಂದ ಆತನನ್ನು ಕೊಲ್ಲಬಹುದು ಎನ್ನುತ್ತಾ ಸ್ತ್ರೀ ಚಪಲಚಿತ್ತನಾದ ರಾವಣನಿಗೆ ಸೀತೆಯ ಸೌಂದರ್ಯದ ಕುರಿತು ಮೇಲೆ ಹೇಳಿದ ಶ್ಲೋಕದಲ್ಲಿದ್ದಂತೆ ವರ್ಣಿಸುತ್ತಾನೆ.

ರಾಮಾಯಣದಲ್ಲಿ ರಾವಣನ ಪರಿಚಯವಾಗುವದೇ ಅಕಂಪನ ಮೂಲಕವಾಗಿ. ಅಲ್ಲಿಯ ತನಕ ಅವನ ವಿವರ ಬರುವುದೇ ಇಲ್ಲ. ರಾವಣನ ಶೌರ್ಯ ರೂಪ ಮತ್ತು ತೇಜಸ್ಸಿನ ಕುರಿತು ಕವಿ ವಿವರಿಸುವುದು ಶೂರ್ಪನಖಿ ರಾವಣನಲ್ಲಿಗೆ ಬಂದಾಗ. ಅರಣ್ಯಕಾಂಡದ 32ನೆಯ ಸರ್ಗ ಸಂಪೂರ್ಣವಾಗಿ ರಾವಣನ ವರ್ಣನೆಗಾಗಿ ಮೀಸಲಾಗಿದೆ. ಅದ್ಭುತ ತೇಜಸ್ಸು ಆತನದ್ದು. ಆಮೇಲೆ ಹನುಮಂತ ಸೀತಾನ್ವೇಷಣೆಯಲ್ಲಿ ಲಂಕೆಗೆ ಹೋದಾಗ ಅಶೋಕವನವನ್ನು ಹಾಳುಗೆಡವಿ ರಾವಣನ ಆಸ್ಥಾನಕ್ಕೆ ಬಂಧಿಯಾಗಿ ಬಂದಾಗ ರಾವಣನನ್ನು ನೋಡಿ ಅವನ ರೂಪವನ್ನು ವರ್ಣಿಸುತ್ತಾನೆ. ರಾಕ್ಷಸರಾಜನ ರೂಪ ಹನುಮಂತನನ್ನೇ ಸೆರೆಹಿಡಿದು ಬಿಟ್ಟಿತ್ತು. ಅಂತಹಾ ವರ್ಚಸ್ಸುಳ್ಳವ ರಾವಣ. ರಾಮ ಕಥಾ ನಾಯಕನಾದರೆ ರಾವಣ ರಾಮಾಯಣದ ಪ್ರತಿನಾಯಕ. ರಾವಣ ಇಲ್ಲದಿದ್ದರೆ ರಾಮನ ಅವತಾರವೇ ಆಗುತ್ತಿರಲಿಲ್ಲ. ಆತನ ಶೌರ್ಯ ಎಷ್ಟು ಪ್ರಖರವೋ ಅದೇ ರೀತಿ ಆತನ ಹೆಣ್ಣುಬಾಕತನವೂ ಅಷ್ಟೇ ತೀವ್ರವಾಗಿತ್ತು.

ಉತ್ತರಕಾಂಡದಲ್ಲಿರುವ ರಾವಣನ ಶೌರ್ಯ ಮತ್ತು ಆತನ ಸಾಹಸವನ್ನು ಮೊದಲೇ ಕವಿ ಬರೆದಿದ್ದರೆ ಓದುಗರೂ ಸಹ ರಾಮನಿಗಿಂತಲೂ ರಾವಣನ ಪಕ್ಷಪಾತಿಯಾಗಿಬಿಡುವ ಸಾಧ್ಯತೆ ಇತ್ತು. ರಾವಣನಂತಹ ವ್ಯಕ್ತಿಗಳ ಸಾವು ಏಕಾಗಬೇಕೆಂದು ತಿಳಿಸಬೇಕಾದರೆ ಆತನ ದುರ್ಗುಣಗಳ ಪರಿಚಯ ಮೊದಲು ಆಗಲೇ ಬೇಕು. ರಾವಣನ ವಿದ್ವತ್ತು ಹೇಗೇ ಇರಲಿ, ಆರು ಕೋಟಿ ವರ್ಷಗಳ ಕಾಲ ಲೋಕವನ್ನು ಆಳಿದವ. ರಾವಣನ ವ್ಯಕ್ತಿತ್ವದ ಸ್ಥಾಯಿ ಭಾವ ದುರುಳತನ, ಪರಸ್ತ್ರೀಯರ ಅಪಹರಣ, ಸುಲಿಗೆ ಮತ್ತು ವಿಪರೀತ ಆತ್ಮಪ್ರಶಂಸೆ. ಭೂಗತ ಲೋಕದ ಪಾಪಿಗಳು ದಾನ ಧರ್ಮ ಮಾಡಿ ಜನರ ಅನುಕಂಪ ಗಳಿಸಿಕೊಂಡಂತೆ ಆಗಕೂಡದು. ವಾಲ್ಮೀಕಿಯ ಈ ರಸಪ್ರಜ್ಞೆಯನ್ನು ಕಾವ್ಯದುದ್ದಕ್ಕೂ ಕಾಣಬಹುದಾಗಿದೆ. ಪ್ರಪಂಚದಲ್ಲಿರುವ ಸುಂದರಿಯರೆಲ್ಲರೂ ತನ್ನ ಅಂತಃಪುರಕ್ಕೆ ಸೇರಬೇಕೆನ್ನುವ ಆತನ ವ್ಯಕ್ತಿತ್ವಕ್ಕೆ ತಕ್ಕ ರೀತಿಯಲ್ಲಿ ಅವನ ದೂತ ವರ್ಣಿಸುತ್ತಾನೆ. ಶೂರ್ಪನಖಿಗೆ ರಾಮ ಲಕ್ಷ್ಮಣರು ನೀಡಿದ ಶಿಕ್ಷೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾನೆ. ಸೀತೆಯ ಅಂದವನ್ನು ಬಿಟ್ಟಬಾಯಿಯಿಂದ ಕಿವಿಯನ್ನು ನೆಟ್ಟಗೆ ಮಾಡಿಕೊಂದು ಕೇಳಿದ ರಾವಣನಿಗೆ ಅವಳನ್ನು ತಂದೇ ತರಬೇಕೆನ್ನುವ ಬಯಕೆ ಹುಟ್ಟಿತು. ಸೀತೆಯ ಸೌಂದರ್ಯವನ್ನು ಅಕಂಪ ವರ್ಣಿಸಿರುವುದು ಸಂಭೋಗ ಶೃಂಗಾರದ ವಿಶೇಷಣಗಳಾದ ಶಾಮಾ, ಸಮವಿಭಕ್ತಾಙ್ಗೀ ಮತ್ತು ಸುಮಧ್ಯಮಾ ಎನ್ನುವುದರ ಮೂಲಕ. ಸುಮಧ್ಯಮಾ ಸುಂದರವಾದ ನಡುವುಳ್ಳವಳು ಇದಕ್ಕಿಂತ ಮುಖ್ಯವಾಗಿ ಸಮವಿಭಕ್ತಾಙ್ಗೀ ಎಂದರೆ ಯಾವ ಯಾವ ಅಂಗಗಳು ಎಷ್ಟು ಪ್ರಮಾಣದಲ್ಲಿ ಇರಬೇಕೋ ಅಷ್ಟೇ ಪರಿಣಾಮದಲ್ಲಿ ಸಮವಾಗಿ ವಿಭಕ್ತವಾಗಿದೆ. ಉತ್ತಮ ಜಾತಿಯ ಅಥವಾ ಪ್ರಸವಿಸದ ಹೆಂಗಸಿಗೆ ಶಾಮಾ ಎನ್ನುತ್ತಾರೆ. ಶೀತೇ ಸುಖೋಷ್ಣಸರ್ವಾಙ್ಗೀ ಗ್ರೀಷ್ಮೇ ಚ ಸುಖ ಶೀತಲಾ – ಶೀತಕಾಲದಲ್ಲಿ ಸುಖಕರವಾದ ಉಷ್ಣವಿರುವ ಮತ್ತು ಗ್ರೀಷ್ಮದಲ್ಲಿ ಹಿಮದಂತೆ ತಂಪಾಗಿ ಇರುವ ಸರ್ವಾಂಗಗಳಿಂದ ಕೂಡಿರುವವಳು.

seethapahara

ಈ ಬಣ್ಣನೆಗಳು ರಾವಣನಿಗೆ ಮಂಗನಿಗೆ ಹೆಂಡ ಕುಡಿಸಿದಂತೆ ಆಯಿತು. ಆ ಕ್ಷಣದಿಂದಲೇ ಸೀತೆಯನ್ನು ಪಡೆಯುವ ಬಯಕೆ ಉಂಟಾಯಿತು. ರಾಜನಿಗೆ ಏನನ್ನು ಹೇಳಬೇಕೋ ಅಂತಹ ಮಾತುಗಳನ್ನೇ ಭೃತ್ಯರು ಆಡುತ್ತಾರೆ. “ನೇರ ಯುದ್ಧದಲ್ಲಿ ರಾಮನನ್ನು ಎದುರಿಸುವುದು ಅಸಾಧ್ಯ. ನೀನೀಗಲೇ ಆ ಮಹಾರಣ್ಯಕ್ಕೆ ಹೋಗಿ ಅವನನ್ನು ವಂಚಿಸಿ ಅವನ ಭಾರ್ಯೆಯನ್ನು ಬಲತ್ಕಾರವಾಗಿ ಅಪಹರಿಸು, ಸೀತೆಯಿಲ್ಲದೇ ರಾಮನು ಖಂಡಿತವಾಗಿ ಬದುಕಿರುವುದಿಲ್ಲ” ಎಂದು ಹೇಳುತ್ತಾನೆ. ಅದನ್ನು ಕೇಳಿದ ರಾವಣನಿಗೆ ಈ ಮಾರ್ಗವೇ ಸರಿಯೆನಿಸಿತು. ಮಾರನೆಯ ದಿನವೇ ಹೇಸರಗತ್ತೆ ಎಳೆಯುತ್ತಿರುವ ರಥವನ್ನು ಏರಿ ಸೀದಾ ಮಾರೀಚನಲ್ಲಿಗೆ ಬಂದು ಸೀತಾಪಹರಣದಲ್ಲಿ ತನಗೆ ನೆರವಾಗುವಂತೆ ಕೇಳಿದ. ಮಾರೀಚ ಮೊದಲಿನ ರಾಕ್ಷಸನಾಗಿ ಉಳಿದಿಲ್ಲ. ಹಾಗಂತ ಸಾತ್ವಿಕನೂ ಅಲ್ಲ. ವಿಶ್ವಾಮಿತ್ರರ ಯಾಗವನ್ನು ಕೆಡಿಸಲಿಕ್ಕೆ ಹೋದಾಗ ರಾಮ ಬಾಣದಿಂದ ಆತನ ತಾಯಿ ಮತ್ತು ಅಣ್ಣನನ್ನು ಕಳೆದುಕೊಂಡ. ರಾಮ ಬಿಟ್ಟ ಮಾನವಾಸ್ತ್ರದಿಂದ ಸಮುದ್ರದಲ್ಲಿ ಬಿದ್ದು ಹೇಗೋ ಬದುಕಿಕೊಂಡಿದ್ದ.

ಆದರೂ ಪೂರ್ವ ವಾಸನೆ ಇನ್ನೂ ಇತ್ತು. ಆತನಿಗೆ ಮೃಗಗಳ ವೇಷವನ್ನು ತಾಳುವ ವಿದ್ಯೆ ತಿಳಿದಿತ್ತು. ಆಗಾಗ ದಂಡಕಾರಣ್ಯಕ್ಕೆ ಹೋಗಿ ಮೃಗವಾಗಿ ಇನ್ನಿತರ ಸಾಧು ಮೃಗಗಳನ್ನು ತಿನ್ನುತ್ತಿದ್ದ. ರಾಮ ಲಕ್ಷ್ಮಣ ಸೀತೆಯರು ದಂಡಕಾರಣ್ಯಕ್ಕೆ ಬಂದಾಗ ಅವರನ್ನು ಮಾರು ವೇಷದಲ್ಲಿರುವ ಮಾರೀಚ ಗಮನಿಸಿದ್ದ. ಪೂರ್ವದ್ವೇಷದಿಂದ ತಾಪಸಿವೇಷದಲ್ಲಿದ್ದ ರಾಮ ಸುಲಭದ ತುತ್ತಾಗಬಹುದೆಂದೂ ಮತ್ತು ಆತನನ್ನು ಕೊಲ್ಲಲು ಇದೇ ಸಮಯವೆಂದು ತಿಳಿದು ಆತ ಒಂದು ಮೃಗವಾಗಿ ತನ್ನ ಕೋರೆ ದಾಡೆಗಳಿಂದ ರಾಮನನ್ನು ಇರಿಯಲು ಬಂದಾಗ ರಾಮ ಮೂರು ಬಾಣಗಳನ್ನು ಬಿಟ್ಟ ರಭಸಕ್ಕೆ ಆತನ ಇಬ್ಬರು ಸಹಚರರು ಅದಕ್ಕೆ ಬಲಿಯಾದರು. ಈತ ಹೇಗೋ ತಪ್ಪಿಸಿಕೊಂಡು ಬಂದು ಗಜಪಚ್ಛವೆನ್ನುವ ಪ್ರದೇಶದಲ್ಲಿ ಆಶ್ರಮವನ್ನು ಕಟ್ಟಿಕೊಂಡಿದ್ದ. ಹಾಗಂತ ಆತನಲ್ಲಿದ್ದ ತಾಮಸ ಬುದ್ಧಿ ಹೋಗಿರಲಿಲ್ಲ; ರಾಮನ ಪರಾಕ್ರಮದ ಭಯ ಆತನನ್ನು ಆವರಿಸಿತ್ತು. ಮಾರೀಚ ರಾಮನನ್ನು ಗಂಧಹಸ್ತಿ (ಮದ್ದಾನೆ) ಎನ್ನುತ್ತಾ ಅವನ ಪರಾಕ್ರಮವನ್ನು ರಾವಣನಿಗೆ ವಿವರಿಸುತ್ತಾನೆ. ಸೀತಾಪಹರಣದ ಸಲಹೆಯನ್ನು ನೀಡಿ ನಿನ್ನ ತಲೆಯನ್ನು ಕೆಡಿಸಿದವ ಯಾರು, ಅವರನ್ನು ಶಿಕ್ಷಿಸು ಎನ್ನುತ್ತಾನೆ. ರಾವಣನಿಗೆ ತಲೆಗೇರಿದ ಪಿತ್ಥವಿಳಿದು “ಸರಿ ಹಾಗಾದರೆ” ಎಂದು ಲಂಕೆಗೆ ಮರಳುತ್ತಾನೆ.

ಸುಮ್ಮನಿದ್ದ ರಾವಣನನ್ನು ಕೆರಳಿಸಿ ಎಬ್ಬಿಸಿದವಳು ಶೂರ್ಪನಖಿ. ಆಕೆ ಬೊಬ್ಬಿಡುತ್ತಾ ಬಂದು ರಾವಣನಲ್ಲಿ ಖರ ದೂಷಣ ತ್ರಿಶಿರಸ್ಸುಗಳ ವಧೆಯನ್ನು ರಾಮನೊಬ್ಬನೇ ಮಾಡಿರುವುದನ್ನು ವಿವರವಾಗಿ ವರ್ಣಿಸುತ್ತಾಳೆ. ಖರನಲ್ಲಿ ತನಗೆ ರಾಮಾದಿಗಳ ಮಾಂಸದ ಆಸೆಯಿದೆ ಎಂದು ಯುದ್ಧಕ್ಕೆ ಪ್ರಚೋದಿಸಿ ಕೊಲ್ಲಿಸಲು ಕಾರಣಳಾದ ರಾಕ್ಷಸಿ ರಾವಣನ ಹತ್ತಿರ ಸೀತೆಯ ಸೌಂದರ್ಯವನ್ನು ಹೊಗಳುತ್ತಾ ಆಕೆ ರಾವಣನಿಗೆ ಯೋಗ್ಯಳೆಂದು ತಿಳಿದು ಅವಳನ್ನು ತರುವ ಸಲುವಾಗಿ ಹೋದಾಗ ಈ ಎಲ್ಲ ಕೃತ್ಯ ಆಯಿತೆನ್ನುತ್ತಾಳೆ. ರಾಮನ ಪರಾಕ್ರಮವನ್ನು ಯಥಾವತ್ತಾಗಿ ವರ್ಣಿಸಿ ಆಮೇಲೆ ಸೀತೆಯ ಸೌಂದರ್ಯವನ್ನೂ ವಿವರವಾಗಿ ತಿಳಿಸುತ್ತಾಳೆ. ಒಂದು ಹೆಣ್ಣೇ ಇನ್ನೊಬ್ಬ ಹೆಣ್ಣಿನ ರೂಪವನ್ನು ವರ್ಣಿಸಿದರೆ ಗಂಡಸಿಗೆ ಹೇಗಾಗಬೇಡ. ಸದ್ಧರ್ಮನಾಶಕನಾದ ಮತ್ತು ಪರಸ್ತ್ರೀಯಲ್ಲಿ ಆಸಕ್ತನಾದ ರಾವಣನ ದೌರ್ಬಲ್ಯವನ್ನು ಆಕೆ ಚೆನ್ನಾಗಿ ಬಲ್ಲಳು. (ಸರ್ಗ 32) ರಾವಣ ಜನಸ್ಥಾನವನ್ನು ಅಲಕ್ಷ್ಯ ಮಾಡಿದ ಪರಿಣಾಮವಾಗಿ ಆತನ ಸಾಮ್ರಾಜ್ಯ ರಾಮನಿಂದ ಅಪಾಯದಲ್ಲಿದೆ. ಖರಾದಿಗಳಿಗೆ ಮತ್ತು ತನಗೆ ಆ ಸ್ಥಿತಿ ಬರಲು ಕಾರಣವಾಗಿರುವುದು ಸೀತೆಯನ್ನು ರಾವಣನಿಗೆ ತರಬೇಕೆನ್ನುವ ತಮ್ಮ ಕಾರ್ಯಗಳಿಂದಾಗಿ. ಹಾಗಾಗಿ ಪ್ರತೀಕಾರಕ್ಕಾಗಿ ರಾವಣ ಸೇಡನ್ನು ತೀರಿಸಿಕೊಳ್ಳಲೇಬೇಕು ಎಂದು ಅವಳು ಆಗ್ರಹಿಸುತ್ತಾಳೆ.

shurpanakha

ಅವಳ ಈ ಕುಮ್ಮಕ್ಕಿನಿಂದ ವೈದೇಹಿಯ ವಿಷಯದಲ್ಲಿ ರಾವಣ ಕಾಮಪೀಡಿತನಾದ. ಅವಳನ್ನು ತರಲೇ ಬೇಕೆಂದು ನಿಶ್ಚಯಿಸಿ ಮತ್ತೆ ಮಾರೀಚನಲ್ಲಿಗೆ ಬಂದು ಆತ ಸೀತಾಪಹರಣದ ಕಾರ್ಯದಲ್ಲಿ ಮೃಗವಾಗಿ ಸಹಕರಿಸಲೇಬೇಕು. ಇಲ್ಲದಿದ್ದರೆ ಆತನನ್ನು ಕೊಲ್ಲುವೆ ಎಂದು ಬೆದರಿಕೆ ಹಾಕುತ್ತಾನೆ. ರಾವಣನಿಂದಲೋ ರಾಮನಿಂದಲೋ ತಾನು ಸಾಯಲೇಬೇಕಾಗಿರುವಾಗ ರಾಮನಿಂದ ಸಾಯುವುದೇ ಲೇಸು ಎಂದು ಆತ ರಾವಣನಿಗೆ ಸಹಕರಿಸಲು ಒಪ್ಪುತ್ತಾನೆ. ಇಲ್ಲಿಂದ ಮುಂದೆ ಪಂಚವಟಿಯ ಪ್ರದೇಶದಲ್ಲಿ ಚಿನ್ನದ ಜಿಂಕೆಯನ್ನು ನೋಡಿ ಸೀತೆ ಆಕರ್ಷಿತಳಾಗುವುದು ಎಲ್ಲವೂ ನಮಗೆ ತಿಳಿದಿರುವ ಕಥೆಯಂತೆಯೇ ಸಾಗುತ್ತದೆ. ಆ ಮಿಗವನ್ನು ಗಮನಿಸಿದ ಲಕ್ಷ್ಮಣನಿಗೆ ಅದು ಮಾಯಾಮೃಗ, ಮಾರೀಚನೇ ಈ ವೇಷವನ್ನು ತಾಳಿ ಬಂದಿದ್ದಾನೆಂದು ತಿಳಿಯಿತು. ಅದನ್ನೇ ಅಣ್ಣನಿಗೆ ಹೇಳುತ್ತಾನೆ. ಸೀತೆ ಲಕ್ಷ್ಮಣನ ಮಾತನ್ನು ಅರ್ಧಕ್ಕೇ ತಡೆದು ತನಗೆ ಅದು ಬೇಕು ಎಂದು ಹಟಹಿಡಿಯುತ್ತಾಳೆ. ತಾನು ಈ ಮೃಗವನ್ನು ಬಯಸುವುದು ಯುಕ್ತವಲ್ಲವೆಂದೂ ಸಹ ಅವಳಿಗೆ ಅನಿಸಿದೆ. “ಕಾಮವೃತ್ತಮಿದಂ ರೌದ್ರಂ ಸ್ತ್ರೀಣಾಮಸದೃಶಂ ಮತಮ್”- ತನಗುಂಟಾದ ಮೃಗದ ಮೇಲಿನ ಕಾಮನೆಯು ಸಾಧ್ವಿಯರಿಗೆ ಉಚಿತವಲ್ಲವೆಂದು ತಿಳಿದಿದೆ. ಆದರೂ ಇದು ತನಗೆ ಬೇಕು ಎಂದು ಹಟ ಹಿಡಿಯುತ್ತಾಳೆ.

ಲಕ್ಷ್ಮಣನಿಗೆ ತಿಳಿದ ಸತ್ಯ ರಾಮ ಸೀತೆಯರಿಗೆ ಅರಿವಾಗದೇ ಹೋದೀತೋ! ಆದರೂ ಏನೂ ತಿಳಿದಿಲ್ಲದಂತೆ ನಟಿಸುತ್ತಿದ್ದಂತೆ ಅನಿಸುತ್ತದೆ. ವನವಾಸ ಮುಗಿಸಿ ಅಯೋಧ್ಯೆಗೆ ತೆರಳುವಾಗ ಈ ಜಿಂಕೆಯನ್ನು ಕೊಂಡೊಯ್ದರೆ ಕೌಸಲ್ಯೆ, ಸುಮಿತ್ರೆಯರೂ ಸಂತಸ ಪಡುತ್ತಾರೆ ಎಂದು ಹೇಳುವ ಸೀತೆ ನಂತರ “ಇದು ಜೀವಂತ ಸಿಗದೇ ಇದ್ದರೆ ಇದನ್ನು ಕೊಂದು ಅದರ ಚರ್ಮವನ್ನು ತೆಗೆದುಕೊಂಡು ಬಾ. ನಾನು ಅದರ ಮೇಲೆ ಕುಳಿತುಕೊಳ್ಳುವೆ” ಎನ್ನುತ್ತಾಳೆ. ಜೀವಂತವಾಗಿ ಹಿಡಿದು ತಾ, ಎನ್ನುವ ಮಾತಾಡಿದವಳು ತಕ್ಷಣವೇ ಅದನ್ನು ಕೊಂದು ಚರ್ಮವನ್ನಾದರೂ ತೆಗೆದುಕೊಂಡು ಬಾ ಎನ್ನುವ ಮಾತುಗಳಿಂದ ರಾಮ ಸೀತೆಯರಿಗೂ ಈ ಕುರಿತು ಅರಿವಿತ್ತು. ಎಲ್ಲವನ್ನೂ ಲೆಕ್ಕಾಚಾರದ ಮೂಲಕವೇ ದಾಳ ಹಾಕುತ್ತಿರುವಂತಹ ಅರ್ಥವನ್ನೂ ನೀಡುತ್ತದೆ. ಆದರೆ ಸೀತೆಗೆ ಸ್ಪಷ್ಟವಾಗಿ ತಾನು ಪಾತ್ರಧಾರಿಯೋ ಅಥವಾ ಅಲ್ಲವೋ ಎನ್ನುವುದರ ಅರಿವಿದೆ ಎನ್ನುವುದಕ್ಕೆ ಸಾಕ್ಷಿ ರಾಮನ ವಿಷಯದಲ್ಲಿ ಸಿಗುವಷ್ಟು ಸಿಗುವುದಿಲ್ಲ. ಇಲ್ಲಿ ಹೇಳಿದ “ಮಿಗವನ್ನು ಕೊಂದಾದರೂ ಜಿಂಕೆಯನ್ನು ತಾ, ಚರ್ಮದ ಮೇಲೆ ಕುಳಿತುಕೊಳ್ಳುವೆ” ಎನ್ನುವ ಮಾತುಗಳು ಈ ವಿಷಯದಲ್ಲಿ ಪುಷ್ಟಿ ಕೊಡಲಾರವು. ಹಾಗಾಗಿ ಸೀತೆಗಾಗಲೀ, ಲಕ್ಷ್ಮಣನಿಗಾಗಲೀ ಇದೊಂದು ದೇವತೆಗಳು ಬಯಸಿದ ವ್ಯೂಹ, ಅದರ ಲಕ್ಷ್ಯ ರಾವಣ, ಅವನ ವಧೆಯಲ್ಲಿ ಇವುಗಳೆಲ್ಲವೂ ಪರ್ಯಾವಸಾನವಾಗಬೇಕು ಎನ್ನುವುದರ ಅರಿವಿಲ್ಲ.

ರಾಮ “ಲಕ್ಷ್ಮಣ, ಈ ಜಿಂಕೆ ಮಾರೀಚನ ಮೋಸವೇ ಹೌದಾದರೆ ಅವನನ್ನು ಕೊಲ್ಲುವುದು ತನ್ನ ಧರ್ಮ, ಅದನ್ನು ಕೊಂದು ಅದರ ಚರ್ಮವನ್ನು ತರುತ್ತೇನೆ, ಸೀತೆಯ ರಕ್ಷಣೆಯನ್ನು ಜಾಗರೂಕತೆಯಿಂದ ಮಾಡುತ್ತಿರು, ಜಟಾಯುವಿನ ಸಹಾಯವನ್ನೂ ಅಗತ್ಯವಿದ್ದರೆ ಪಡೆ” ಎನ್ನುವ ಮಾತುಗಳ ಅರ್ಥವನ್ನು ವಿಶ್ಲೇಷಿಸಿದರೆ ಇವೆಲ್ಲವೂ ಯಾವುದೋ ಒಂದು ತಂತ್ರಗಾರಿಕೆಯ ಮರ್ಮದಿಂದ ಕೂಡಿದೆ ಎನ್ನುವುದು ಸ್ಪಷ್ಟ. ಪತಂಗದ ಹುಳ ತಾನಾಗಿಯೇ ಹೋಗಿ ದೀಪದ ಜ್ವಾಲೆಗೆ ಬೀಳುವಂತೆ ಇಲ್ಲಿನ ಸನ್ನಿವೇಶದಲ್ಲಿ ಸ್ಪಷ್ಟವಾಗಿದೆ.

ಪ್ರದಕ್ಷಿಣೇನಾತಿಬಲೇನ ಪಕ್ಷಿಣಾ ಜಟಾಯುಷಾ ಬುದ್ಧಿಮತಾ ಚ ಲಕ್ಷ್ಮಣ.
ಭವಾಪ್ರಮತ್ತಃ ಪರಿಗೃಹ್ಯ ಮೈಥಿಲೀಂ ಪ್ರತಿಕ್ಷಣಂ ಸರ್ವತ ಏವ ಶಙ್ಕಿತಃ৷৷ಅ.43.50৷৷

“ಲಕ್ಷ್ಮಣ ! ಬಹಳ ದಕ್ಷನಾದ, ಅತಿಬಲಿಷ್ಠನಾದ, ಬುದ್ಧಿವಂತನಾದ, ಸುತ್ತಲೂ ಹಾರುತ್ತಿರುವ ಜಟಾಯುವಿನ ಸಹಕಾರವನ್ನು ಪಡೆದು ಪ್ರತಿಕ್ಷಣದಲ್ಲಿಯೂ ಆಪತ್ತು ಸಂಭವಿಸುವದೆನ್ನುವ ಶಂಕೆ ಪಡುತ್ತಾ ಜಾಗರೂಕನಾಗಿರುತ್ತಾ ಸೀತೆಯನ್ನು ಎಲ್ಲಾ ದಿಕ್ಕುಗಳಿಂದಲೂ ರಕ್ಷಿಸು”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೀತಾಪಹಾರದ ಹಿಂದಿನ ಕುತೂಹಲಕಾರಿ ವಿಷಯಗಳು

ಜಟಾಯುವಿನ ಹೆಸರನ್ನು ರಾಮ ಉಲ್ಲೇಖಿಸಿರುವುದನ್ನು ಗಮನಿಸಿದರೆ ರಾಮನಿಗೆ ಜಟಾಯುವಿನ ಮಿತ್ರತ್ವವೂ ಇತ್ತೆನ್ನುವುದು ಅರಿವಾಗುತ್ತದೆ. ರಾಮನ ಈ ಎಲ್ಲ ಕಾರ್ಯಗಳ ಹಿಂದೆ ಅಗಸ್ತ್ಯಾಶ್ರಮ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅಗಸ್ತ್ಯರು ರಾಮನಿಗೆ ವೈಷ್ಣವ ಧನುಸ್ಸನ್ನೂ, ಇಂದ್ರನಿಂದ ಅಗಸ್ತ್ಯರಿಗೆ ಕೊಡಲ್ಪಟ್ಟಂತಹ ಚಿನ್ನದ ರೆಕ್ಕೆಗಳಿರುವ ಅಕ್ಷಯವಾದ ಎರಡು ಬತ್ತಳಿಕೆಗಳನ್ನೂ ಕೊಡುತ್ತಾರೆ. ದೇವತೆಗಳ ಕೋರಿಕೆಯ ಮೇರೆಗೆ ರಾವಣನ ವಧೆಗಾಗಿಯೇ ರಾಮಾವತಾರವಾಗಿರುವುದು. ಅದಕ್ಕೆ ಪೂರ್ವಭಾವಿಯಾಗಿ ಅಗಸ್ತ್ಯರ ಆಶ್ರಮದಲ್ಲಿ ರಾಮನಿಗೆ ಕೊಡಲ್ಪಟ್ಟ ಧನುಸ್ಸು ಮಹಾವಿಷ್ಣುವೇ ಹಿಂದೆ ರಾಕ್ಷಸರನ್ನು ಕೊಲ್ಲಲು ಬಳಸಿರುವಂತಹದ್ದು. ಆಗ ಬಿಲವನ್ನು ಸೇರಿರುವ ರಾಕ್ಷಸರೆಲ್ಲರೂ ರಾವಣನಿಂದಾಗಿ ಲಂಕೆಯನ್ನು ಆಶ್ರಯಿಸಿರುವ ವಿಷಯಗಳೆಲ್ಲವೂ ಒಂದಕ್ಕೊಂದು ಸೇರಿಕೊಂಡಿದೆ. ರಾಮನನ್ನು ಸದಾ ಅಗಸ್ತ್ಯರು ಗಮನಿಸುತ್ತಿದ್ದರು ಎನ್ನುವುದಕ್ಕೆ ರಾವಣನನ್ನು ಕೊಲ್ಲಲಾಗದೇ ರಾಮ ಆಯಾಸಗೊಂಡಾಗ ಲಂಕೆಯ ರಣಭೂಮಿಗೆ ಬಂದು ಆದಿತ್ಯಹೃದಯವನ್ನು ಬೋಧಿಸಿರುವುದನ್ನು ಉದಾಹರಿಸಬಹುದು.

ಅವರ ಆಶ್ರಮದಿಂದ ಎರಡು ಯೋಜನ ದೂರದಲ್ಲಿ ಇರುವ ಪಂಚವಟಿ ಪ್ರದೇಶದಲ್ಲಿ ವಾಸಮಾಡಲು ಸೂಚಿಸಿದ ಉದ್ದೇಶವೂ ತನ್ನ ಕಣ್ಣಳತೆಯಲ್ಲಿ ರಾಮ ಇರಬೇಕೆನ್ನುವುದು. ಅಗಸ್ತ್ಯರ ಆಶ್ರಮದ ಹೊರ ಆವರಣದಲ್ಲಿಯೇ ರಾಮನಿಗೆ ಜಟಾಯುವಿನ ಪರಿಚಯವಾಗಿ ಆತನೇ ರಾಮ ಲಕ್ಷ್ಮಣರಿಬ್ಬರೂ ಆಶ್ರಮದಿಂದ ಹೊರ ಹೋಗಬೇಕಾಗಿರುವ ಸಂದರ್ಭಗಳಲ್ಲಿ ತಾನು ಸೀತಾದೇವಿಯನ್ನು ಸಂರಕ್ಷಿಸುತ್ತೇನೆ ಎಂದು ಮಾತನ್ನು ಜಟಾಯು ಆಡುತ್ತಾನೆ. ಹೀಗಾಗಿ ಇವೆಲ್ಲವೂ ರಾವಣನ ವಧೆಗಾಗಿ ರಾಮನಿಗೆ ಅರಿವಿದ್ದೋ ಅಥವಾ ಮುಂಗಾಣ್ಕೆಯನ್ನು ಬಲ್ಲ ದೇವತೆಗಳೇ ಹೀಗೆ ವ್ಯೂಹವನ್ನು ಬಲಿದಿದ್ದಾರೆ ಎಂದುಕೊಳ್ಳಬಹುದು.

ಈ ವ್ಯೂಹದಲ್ಲಿ ರಾವಣ ತನಗರಿವಿಲ್ಲದೇ ಸಿಕ್ಕಿಬಿದ್ದ ವಿವರವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾಗಿ ಮುಸುಕಿದ ಇಳೆಯ ಬೆಳಗುವ ನೀರಾಜನ: ದೀಪಾವಳಿ

Continue Reading

ಅಂಕಣ

ವಿಸ್ತಾರ ಅಂಕಣ: ಮನಮೋಹನ್‌ ಸಿಂಗ್‌ ಮಾದರಿ ಅಥವಾ ನರೇಂದ್ರ ಮೋದಿ ಮಾದರಿ: ಮುಸ್ಲಿಂ ಕಲ್ಯಾಣಕ್ಕೆ ಯಾವುದು ಸರಿ?

ಎಷ್ಟೇ ಕಾಲವಾಗಲಿ, ಎಷ್ಟೇ ಚುನಾವಣೆ ಬರಲಿ, ಮುಸ್ಲಿಮರ ಕುರಿತು ಕಾಂಗ್ರೆಸ್‌ ಆಲೋಚನೆ ಬದಲಾಗಿಲ್ಲ. ಮುಸ್ಲಿಮರನ್ನು ಓಲೈಸುತ್ತ, ಅವರಿಗೆ ಸಣ್ಣಪುಟ್ಟ ಅನುದಾನ, ಸವಲತ್ತುಗಳನ್ನು ನೀಡುತ್ತ ಮುಖ್ಯವಾಹಿನಿಯಿಂದ ಅವರನ್ನು ದೂರ ಇಡುವುದೇ ಕಾಂಗ್ರೆಸ್ ಆಲೋಚನೆ.

VISTARANEWS.COM


on

modi and singh
Koo
Vistara Column @ Hariprakash Konemane

ʼ’ದೇಶದಲ್ಲಿ ಯಾರ್ಯಾರ ಜನಸಂಖ್ಯೆ ಎಷ್ಟೆಷ್ಟಿದೆಯೋ ಅಷ್ಟೇ ಸವಲತ್ತುಗಳನ್ನು ನೀಡಬೇಕು. ದೇಶದಲ್ಲಿ ಹಿಂದುಗಳ ಸಂಖ್ಯೆಯೇ ಹೆಚ್ಚಿರುವ ಕಾರಣ ಅವರಿಗೆ ಹೆಚ್ಚು ಸವಲತ್ತು ಸಿಗಬೇಕು, ಮುಸ್ಲಿಮರು ಕಡಿಮೆ ಇರುವುದರಿಂದ ಕಡಿಮೆ ಸವಲತ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕು.’ʼ ಹೀಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರೆ ಏನಾಗುತ್ತದೆ? ಹೀಗೆ ಹೇಳಲು ಸಾಧ್ಯವಿದೆಯೇ? ಖಂಡಿತ ಇಲ್ಲ. ಅಲ್ಪಸಂಖ್ಯಾತರ ವಿಚಾರದಲ್ಲಿ, ಅದರಲ್ಲೂ ಮುಸ್ಲಿಂ ವಿಚಾರದಲ್ಲಿ ಕಾಂಗ್ರೆಸ್‌ ಹೀಗೆ ಹೇಳಲು ಸಾಧ್ಯವೇ ಇಲ್ಲ.

ಇದೇ ರಾಹುಲ್‌ ಗಾಂಧಿ 2023ರ ಮೇ ತಿಂಗಳಲ್ಲಿ, ʼಎಷ್ಟು ಜನಸಂಖ್ಯೆಯೋ ಅಷ್ಟು ಹಕ್ಕುʼ ಎಂದಿದ್ದರು. ಗಮನಿಸಿ, ರಾಹುಲ್ ಅವರು ಈ ಮಾತು ಹೇಳಿದ್ದು ಸಮಗ್ರ ದೃಷ್ಟಿಕೋನದಲ್ಲಿ ಅಲ್ಲ. ಆ ರೀತಿ ಗ್ರಹಿಸಿದರೆ, ಅಲ್ಪಸಂಖ್ಯಾತರಿಗೆ ಸ್ವಲ್ಪವೇ ಹಕ್ಕುಗಳು ಲಭಿಸಬೇಕಾಗುತ್ತದೆ. ಹಾಗಾದರೆ, ರಾಹುಲ್ ಈ ಮಾತು ಹೇಳಿದ್ದೇಕೆ ಗೊತ್ತೆ ? ಅದು, ಹಿಂದೂಗಳೊಳಗೆ ಮೀಸಲು ನಿಗದಿಗೆ ಹಾಗೂ ಜಾತಿಗಣತಿ ನಡೆಸುವ ವಿಷಯವನ್ನು ಪ್ರತಿಪಾದಿಸಲು ಈ ಹಕ್ಕಿನ ಮಾತನಾಡಿದ್ದರು. ಕಾಂಗ್ರೆಸ್‌ ಹಿಂದಿನಿಂದಲೂ ಈ ದ್ವಂದ್ವ ನೀತಿಯನ್ನು ಅನುಸರಿಸಿಕೊಂಡೇ ಬರುತ್ತಿದೆ. 2006ರಲ್ಲಿ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡ, ಅಲ್ಪಸಂಖ್ಯಾತರಿಗೆ ದೇಶದ ಸಂಪನ್ಮೂಲ ಬಳಕೆಯಲ್ಲಿ ಮೊದಲ ಸ್ಥಾನ ಸಿಗಬೇಕು ಎಂದಿದ್ದರು. ಆದರೆ ಸಮಗ್ರ ಹಿಂದುಗಳ ವಿಚಾರ ಬಂದಾಗ ಈ ಮಾತು ಹೇಳುವುದಿಲ್ಲ. ಅದರೆ, ಹಿಂದೂ ಜಾತಿಯೊಳಗಿನ ಬಹುಸಂಖ್ಯಾತರಿಗೆ ಹೆಚ್ಚು ಸವಲತ್ತು ಸಿಗಬೇಕು ಎಂಬುದನ್ನು ಪ್ರತಿಪಾದಿಸಲು ಜಾತಿಗಣತಿಯ ಮೊರೆ ಹೋಗುತ್ತಾರೆ. ಹಿಂದುಗಳನ್ನು ಜಾತಿಗಳಾಗಿ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ನೇತಾರರು ಇನ್ನೂ ಬಿಟ್ಟಿಲ್ಲ.

ಇತ್ತೀಚೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಇದೇ ಧಾಟಿಯ ಮಾತನಾಡಿದ್ದಾರೆ. ಮುಸ್ಲಿಮರಿಗೆ ಹೆಚ್ಚು ಹಕ್ಕುಗಳು ಸಿಗಬೇಕು, ಅವರಿಗೆ ಲಭಿಸುತ್ತಿರುವ ಅನುದಾನವನ್ನು 4 ಸಾವಿರ ಕೋಟಿ ರೂ. ನಿಂದ 10 ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗುತ್ತದೆ ಎಂದಿದ್ದಾರೆ. ಅಲ್ಪಸಂಖ್ಯಾತರಿಗೆ ಹಕ್ಕುಗಳ ಕಡೆಗಣನೆ ಆಗಬಾರದು ಎನ್ನುತ್ತಾರೆ ಸಿದ್ದರಾಮಯ್ಯ. ಹಾಗಾದರೆ ಭಾರತದಲ್ಲಿ ಮುಸ್ಲಿಂ ಹಕ್ಕುಗಳು ದಮನವಾಗಿವೆಯೇ?

ಸ್ವತಂತ್ರ್ಯ ದೇಶದ ಮೊದಲ ಶಿಕ್ಷಣ ಸಚಿವ(ಮೌಲಾನಾ ಅಬುಲ್‌ ಕಲಾಂ ಆಜಾದ್‌) ಸ್ಥಾನದಿಂದ ಆರಂಭವಾಗಿ ರಾಷ್ಟ್ರಪತಿವರೆಗೆ (ಎ.ಪಿ.ಜೆ. ಅಬ್ದುಲ್‌ ಕಲಾಂ) ಮುಸ್ಲಿಮರಿಗೆ ಈ ದೇಶ ಸ್ಥಾನ ಕಲ್ಪಿಸಿದೆ. ದೇಶದ ಬಹುತೇಕ ರಾಜ್ಯಗಳ ಮಂತ್ರಿಗಳಾಗಿ ಮುಸ್ಲಿಂ ಸಮುದಾಯದವರು ಕಾರ್ಯನಿರ್ವಹಿಸಿದ್ದಾರೆ. ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಇನ್ನೂ ಮುಸ್ಲಿಂ ಹಕ್ಕುಗಳು ಎಂದು ಕಣ್ಣೀರು ಸುರಿಸುತ್ತಿರುವುದೇಕೇ?

Anticipatory bail

ದೇಶವನ್ನು ಅತಿ ಹೆಚ್ಚು ಕಾಲ ಆಳಿರುವುದು ಕಾಂಗ್ರೆಸ್‌ ಪಕ್ಷ. ಹಾಗಾದರೆ ಮುಸ್ಲಿಂ ಸಮುದಾಯದ ಈಗಿನ ಸ್ಥಿತಿ ಹೇಗಿದೆ ಮತ್ತು ಅದಕ್ಕೆ ಯಾರು ಕಾರಣ ? ಮುಸ್ಲಿಂ ಸಮುದಾಯದಲ್ಲಿ ಶಿಕ್ಷಿತರ ಸಂಖ್ಯೆ ಕೇವಲ 50% ಆಸುಪಾಸಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಕೆಳಗಿದೆ. ಇತರೆ ಸಮುದಾಯಗಳ ಹೋಲಿಕೆಯಲ್ಲಿ ಮುಸ್ಲಿಂ ಮಹಿಳೆಯರು ಸಬಲೀಕರಣ ಹಿಂದಿದೆ. ಮುಸ್ಲಿಂ ಜನಸಂಖ್ಯೆಯು ಉದ್ಯೋಗದಲ್ಲಿರುವ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ನವಜಾತ ಶಿಶು ಮರಣ ಸಂಖ್ಯೆ, ಮಕ್ಕಳಲ್ಲಿ ಅಪೌಷ್ಠಿಕತೆ, ಅನಾರೋಗ್ಯ ಸಮಸ್ಯೆಗಳು ಮುಸ್ಲಿಂ ಸಮುದಾಯದಲ್ಲಿ ಹೆಚ್ಚಿವೆ. 1-5ನೇ ತರಗತಿಗೆ ಬರುವ ವೇಳೆಗ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಈ ಅಂಕಿ ಅಂಶಗಳನ್ನು ವಿವಿಧ ಸಮೀಕ್ಷೆಗಳು, ಸಂಶೋಧನೆಗಳು ಹೊರಗೆಡಹಿವೆ.

ಸ್ವಾತಂತ್ರ್ಯದ ಇಷ್ಟು ವರ್ಷದ ನಂತರವೂ ಮುಸ್ಲಿಂ ಸಮುದಾಯ ಎಲ್ಲ ಸಾಮಾಜಿಕ ಮಾನದಂಡಗಳಲ್ಲೂ ಹಿಂದುಳಿದಿದೆ ಎಂದರೆ ಅದಕ್ಕೆ ಕಾಂಗ್ರೆಸ್‌ ಪಕ್ಷವೇ ಕಾರಣ ? ದೇಶ ಆಳಿದ ಹೊತ್ತಲ್ಲಿ ಮುಸ್ಲಿಮರಿಗಾಗಿ ಕಾಂಗ್ರೆಸ್ ಏನು ಮಾಡಿತು? ಸತ್ಯ ಹೇಳಬೇಕೆಂದರೆ, ಅವರ ಪ್ರಗತಿಗೆ ಏನೂ ಮಾಡಿಲ್ಲ. ಬದಲಿಗೆ, ೭೫ ವರ್ಷಗಳಿಂದಲೂ ಮುಸ್ಲಿಮರನ್ನು ಓಲೈಸುತ್ತಲೇ ಬಂದಿದೆ. ಬಡವರನ್ನು ಬಡವರನ್ನಾಗಿಯೇ ಇಟ್ಟುಕೊಂಡು, ಹಗಲು ಮೂರು ಹೊತ್ತು ಬಡವರ ಪರವಾಗಿ ಮಾತನಾಡುತ್ತಾ, ಬಡವರ ಪಾಲಿಗೆ ಕರುಣಾಳಾಗಿ ಉಳಿಯುವ ಉಸಾಬರಿಯನ್ನೂ ತುಷ್ಟೀಕರಣ ನೀತಿ ಎನ್ನಬಹುದು. ಬಡವರು ಉದ್ಧಾರವಾದರೆ, ಇವರ ಕರುಣಾಳು ಪಟ್ಟವೇ ಕದಲುತ್ತದೆಯಲ್ಲ ?

ಹಾಗಾಗಿ, ಬಡತನವನ್ನು ಇಲ್ಲವಾಗಿಸದೇ ಬಡವರ ಪರವಾಗಿ ಮಾತನಾಡಿದರೆ ಲಾಭ ಹೆಚ್ಚು ! ಕಾಂಗ್ರೆಸ್ ಮುಸ್ಲಿಮರ ವಿಷಯದಲ್ಲಿ ಇಂಥದ್ದೇ ತುಷ್ಟೀಕರಣ ನೀತಿ ಅನುಸರಿಸಿಕೊಂಡು ಬಂದಿದೆ. ಮುಸ್ಲಿಮರಿಗೆ ಮಸೀದಿ ಕಟ್ಟಿಕೊಡುವುದು, ಸಮುದಾಯದ ಕೆಲವರು ಸರ್ಕಾರದ ಜಮೀನು ಅತಿಕ್ರಮಣಕ್ಕೆ ಅವಕಾಶ ಮಾಡಿಕೊಡುವುದು, ಹಿಂದೂಗಳಲ್ಲಿರುವ ಮೌಢ್ಯಗಳನ್ನು ಮಾತ್ರ ತೆಗಳುತ್ತಾ, ಮುಸ್ಲಿಂ ಮೌಢ್ಯದ ಕುರಿತು ತುಟಿ ಬಿಚ್ಚದಿರುವುದು, ಸದಾ ಆರ್‌ಎಸ್‌ಎಸ್‌ ವಿರುದ್ಧ ಸುಳ್ಳು ಆರೋಪ ಮಾಡುತ್ತಲೇ ಇರುವುದು- ಇದೆಲ್ಲವೂ ಆಳದಲ್ಲಿ ಮುಸ್ಲಿಮರ ಬಡತನವನ್ನು ಪೋಷಿಸುವುದೇ ಆಗಿದೆ !ಹೀಗಾಗಿಯೇ ಮುಸ್ಲಿಂ ಸಮುದಾಯ ಇನ್ನೂ ಹಿಂದುಳಿದಿದೆ !

ದೇಶದಲ್ಲಿ ಮುಸ್ಲಿಂ ಸಮುದಾಯದ ಸ್ಥಿತಿಗತಿಯನ್ನು ಅಳೆಯಲು 2005ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಮುಂದಾಯಿತು. ನ್ಯಾಯಮೂರ್ತಿ ರಾಜಿಂದರ್‌ ಸಾಚಾರ್‌ ನೇತೃತ್ವದಲ್ಲಿ ಸಮಿತಿ ರಚಿಸಿ, ವರದಿ ನೀಡಲು ತಿಳಿಸಿತು. ವಿವಿಧ ಇಲಾಖೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಎಷ್ಟಿದೆ ಎನ್ನುವುದನ್ನು ಸಮಿತಿ ತಿಳಿಯಬೇಕಿತ್ತು. ಅದೇ ರೀತಿ ಸರ್ಕಾರದ ಎಲ್ಲ ಇಲಾಖೆಗಳಿಗೂ ಸಮಿತಿ ಮನವಿಪತ್ರ ತಲುಪಿಸಿತು. ಇದೇ ಮನವಿ ಪತ್ರವನ್ನು ಭಾರತೀಯ ಸೇನೆಗೂ ಕಳಿಸಿತು. ಸೇನೆಯಲ್ಲಿ ಎಷ್ಟು ಮುಸಲ್ಮಾನರಿದ್ದಾರೆ? ಎಂದು ಕೇಳಿತು. ಕೂಡಲೆ ಈ ಮನವಿಯನ್ನು ಅಂದಿನ ಸೇನಾ ಮುಖ್ಯಸ್ಥ ಜೆ.ಕೆ. ಸಿಂಗ್‌ ತಿರಸ್ಕರಿಸಿ, ಸರ್ಕಾರ ಹಾಗೂ ಅದರ ಸಮಿತಿಗೆ ಕಪಾಳಮೋಕ್ಷ ಮಾಡಿದರು. ಸೇನೆಯಲ್ಲಿ ಭಾರತ ಎನ್ನುವ ಧರ್ಮ, ಮತ ಬಿಟ್ಟರೆ ಯಾವುದೂ ಲೆಕ್ಕವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು.

ಆದರೂ ಅಂದಿನ ಪ್ರಧಾನಮಂತ್ರಿ ಮನಮೋಹನ್‌ ಸಿಂಗರಿಗೆ ಇದು ಮನವರಿಕೆ ಆಗಲಿಲ್ಲ. ಸಾಚಾರ್‌ ಸಮಿತಿ ತನ್ನ ವರದಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ್ದ ಮನಮೋಹನ್‌ ಸಿಂಗ್‌, ದೇಶದ ಸಂಪನ್ಮೂಲದಲ್ಲಿ ಮೊದಲ ಹಕ್ಕು ಅಲ್ಪಸಂಖ್ಯಾತರಿಗಿದೆ ಎಂದರು. ಈಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿರುವುದೂ ಇದೇ ಮಾತನ್ನು. ಅಂದರೆ ಎಷ್ಟೇ ಕಾಲವಾಗಲಿ, ಎಷ್ಟೇ ಚುನಾವಣೆ ಬರಲಿ, ಮುಸ್ಲಿಮರ ಕುರಿತು ಕಾಂಗ್ರೆಸ್‌ ಆಲೋಚನೆ ಬದಲಾಗಲಿಲ್ಲ. ಮುಸ್ಲಿಮರನ್ನು ಓಲೈಸುತ್ತ, ಅವರಿಗೆ ಸಣ್ಣಪುಟ್ಟ ಅನುದಾನ, ಸವಲತ್ತುಗಳನ್ನು ನೀಡುತ್ತ ಮುಖ್ಯವಾಹಿನಿಯಿಂದ ಅವರನ್ನು ದೂರ ಇಡುವುದೇ ಕಾಂಗ್ರೆಸ್ ಆಲೋಚನೆ.

ಹಾಗಾದರೆ, ಮುಸ್ಲಿಂ ವಿರೋಧಿ ಎಂದು ಕಾಂಗ್ರೆಸ್‌ ಆರೋಪಿಸುವ ಬಿಜೆಪಿ ಅಥವಾ ನರೇಂದ್ರ ಮೋದಿ ಸರ್ಕಾರ ಮುಸ್ಲಿಮರಿಗೆ ಏನು ಮಾಡಿದೆ? ಹಾಗೆ ನೋಡಿದರೆ, ಯಾವುದೇ ಕಾಂಗ್ರೆಸ್‌ ಸರ್ಕಾರಕ್ಕಿಂತಲೂ ಮುಸ್ಲಿಮರ ಪರವಾದ ಯೋಜನೆಗಳನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ.

Narendra Modi With Muslims

2014ರವರೆಗೆ ಸರ್ಕಾರಿ ಕೆಲಸದಲ್ಲಿ ಕೇವಲ ಶೇ.4.5 ಮುಸ್ಲಿಮರಿದ್ದರು. ಮೋದಿ ಆಡಳಿತದಲ್ಲಿ ಈ ಸಂಖ್ಯೆ ಶೇ.10.5ಕ್ಕೆ ಏರಿದೆ. 2022ರಲ್ಲಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತರಿಗಾಗಿ 15 ಅಂಶಗಳ ಕಾರ್ಯಕ್ರಮವನ್ನು ಘೋಷಿಸಿದರು. 1. ಶಿಕ್ಷಣದಲ್ಲಿ ಅವಕಾಶ ಹೆಚ್ಚಿಸುವುದು, 2. ಉದ್ಯೋಗ, ಆರ್ಥಿಕ ಚಟುವಟಿಕೆಯಲ್ಲಿ ಸಮಾನ ಸಹಭಾಗಿತ್ವ ಒದಗಿಸುವುದು, 3. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಸಮಾನತೆ ನೀಡುವ ಮೂಲಕ ಅಲ್ಪಸಂಖ್ಯಾತರ ಜೀವನಮಟ್ಟ ಸುಧಾರಿಸುವುದು, 4. ಕೋಮು ಗಲಭೆಗಳು ಹಾಗೂ ಅಶಾಂತಿಯನ್ನು ನಿಯಂತ್ರಿಸುವುದು ಎಂಬ ವಿಚಾರಗಳನ್ನಿಟ್ಟುಕೊಂಡು ವಿವಧ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಇವುಗಳಲ್ಲಿ ವಿದ್ಯಾರ್ಥಿವೇತನ, ಕೌಶಲ ತರಬೇತಿ, ಸುಲಭ ಸಾಲ ಸೇರಿ ಎಷ್ಟೊಂದು ಅನುಕೂಲಗಳು ಈಗಾಗಲೆ ಜಾರಿಯಲ್ಲಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಮುಸ್ಲಿಂ ಮಹಿಳೆಯರನ್ನು ಅತಿಯಾಗಿ ಬಾಧಿಸುತ್ತಿದ್ದ ತ್ರಿವಳಿ ತಲಾಖ್‌ ಅನ್ನು ನಿಷೇಧಿಸಿದ್ದು ಸ್ವತಂತ್ರ ಭಾರತದ ಮಹತ್ವದ ತೀರ್ಮಾನಗಳಲ್ಲೊಂದು.

ಇದನ್ನೂ ಓದಿ: ವಿಸ್ತಾರ ಅಂಕಣ: ಕನ್ನಡ ಶಾಲೆ ಉಳಿವಿಗೆ ಎಸ್ಇಪಿ ಜಾರಿಯೇ ಅಡ್ಡಿ!

ನರೇಂದ್ರ ಮೋದಿಯವರಿಗೆ ಅನೇಕ ದೇಶಗಳು ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ಅತಿ ಹೆಚ್ಚು ಗೌರವಗಳು ಮುಸ್ಲಿಂ ದೇಶಗಳಿಂದ ಲಭಿಸಿವೆ. ಸಂಪೂರ್ಣ ಮುಸ್ಲಿಂ ದೇಶಗಳೇ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿಕೊಳ್ಳುತ್ತಿವೆ. ಆದರೆ ದೇಶದೊಳಗೆ ಮಾತ್ರ ಕೆಲವರು ಮುಸ್ಲಿಮರ ಎದುರು ʼನರೇಂದ್ರ ಮೋದಿ ಬೆದರು ಬೊಂಬೆʼ ಮಾಡಿ ನಿಲ್ಲಿಸಿದ್ದಾರೆ. ಯಾವಾಗ ತಮಗೆ ಮತ ಕಡಿಮೆ ಆಗುತ್ತದೆ ಎನ್ನಿಸುತ್ತದೆಯೋ ಆಗ ನರೇಂದ್ರ ಮೋದಿಯವರ ಫೋಟೊ ತೋರಿಸಿ ಬೆದರಿಸುತ್ತಾರೆ.

ನರೇಂದ್ರ ಮೋದಿ ಸರ್ಕಾರ ಮುಸ್ಲಿಮರಿಗೂ ಅನೇಕ ಉತ್ತಮ ಯೋಜನೆಗಳನ್ನು ಜಾರಿ ಮಾಡುತ್ತಿದ್ದರೂ ಅದೇಕೆ ಹೊರಜಗತ್ತಿನಲ್ಲಿ ಈ ಅಂಶ ಚರ್ಚೆ ಆಗುವುದಿಲ್ಲ? ದೇಶದ ಹಿಂದುಗಳು, ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಅಭಿವೃದ್ಧಿ ಆದರೆ ಮಾತ್ರವೇ ದೇಶ ಆತ್ಮನಿರ್ಭರ ಆಗಲು ಸಾಧ್ಯ. ಮುಸ್ಲಿಮರಷ್ಟೆ ಅಲ್ಲ, ಮಹಿಳೆಯರ ಲೆಕ್ಕವೂ ಇದರಲ್ಲಿ ಬರುತ್ತದೆ. ದೇಶದ ಜನಸಂಖ್ಯೆಯ ಅರ್ಧದಷ್ಟು ಅಂದರೆ 60 ಕೋಟಿಯಷ್ಟು ಮಹಿಳೆಯರಿದ್ದಾರೆ. ಅವರಲ್ಲಿ ಕೇವಲ ಅಂದಾಜು 20% ಮಾತ್ರ ಔದ್ಯೋಗಿಕ ಕ್ಷೇತ್ರದಲ್ಲಿದ್ದಾರೆ. ಇಷ್ಟು ದೊಡ್ಡ ಮಹಿಳಾ ಶಕ್ತಿಯನ್ನು ಹೊರಗಿಟ್ಟು ದೇಶ ಅಭಿವೃದ್ಧಿ ಆಗುವುದು ಸಾಧ್ಯವಿಲ್ಲ. ಅದೇ ರೀತಿ ದೇಶದ ಸುಮಾರು 15-20 ಕೋಟಿಯಷ್ಟಿರುವ ಮುಸ್ಲಿಂ ಜನಸಂಖ್ಯೆಯನ್ನು ಕತ್ತಲಲ್ಲಿಟ್ಟು ಅಭಿವೃದ್ಧಿ ಆಗುವುದು ಸಾಧ್ಯವಿಲ್ಲ. ಆದರೆ ಮುಸ್ಲಿಂ ಕಡೆ ಹಾಗೂ ಹಿಂದುಗಳ ಕಡೆಯೂ ಕೆಲವರಿಗೆ ಈ ಅಂಶಗಳು ಹೊರಗೆ ಚರ್ಚೆ ಆಗುವುದು ಬೇಕಿಲ್ಲ. ಮೋದಿ ಮುಸ್ಲಿಂ ವಿರೋಧಿ ಎಂಬ ನರೇಟಿವ್‌ನಿಂದಾಗಿ ಅನೇಕರಿಗೆ ಅನುಕೂಲ ಆಗುತ್ತದೆ. ಹಾಗಾಗಿ ಇದೀಗ ಜನರು ಅರ್ಥ ಮಾಡಿಕೊಳ್ಳಬೇಕು. ದೇಶದ ಎಲ್ಲ ಜನರಿಗೂ ಸಿಗುವಂತೆಯೇ ಮುಸ್ಲಿಮರಿಗೂ ಸಮಾನ ಹಕ್ಕು, ಸೌಲಭ್ಯ, ಅವಕಾಶಗಳು ಸಿಗಬೇಕು. ಆದರೆ ಅವರನ್ನು ಓಲೈಸುವಂತಹ ಲಾಲಿಪಪ್‌ ನೀಡುತ್ತ ಹಿಂದುಳಿದವರಾಗಿಯೇ ಇಟ್ಟವರಾರು ಎನ್ನುವುದನ್ನೂ ಸ್ವತಃ ಮುಸ್ಲಿಮರೂ ಅರಿಯಬೇಕು. ಮುಸ್ಲಿಂ ಕಲ್ಯಾಣ ಆಗಬೇಕೆಂದರೆ ಮನಮೋಹನ್‌ ಸಿಂಗ್‌ ಮಾದರಿ ಬೇಕೊ, ನರೇಂದ್ರ ಮೋದಿ ಮಾದರಿ ಬೇಕೊ ಎನ್ನುವುದನ್ನು ತೀರ್ಮಾನಿಸಿಕೊಳ್ಳಬೇಕು.

ಇದನ್ನೂ ಓದಿ: ವಿಸ್ತಾರ ಅಂಕಣ: ಉಪರಾಷ್ಟ್ರೀಯತೆಯನ್ನು ಬೆಂಬಲಿಸುವ ರಾಷ್ಟ್ರೀಯ ಕಾಂಗ್ರೆಸ್‌!

Continue Reading

ಅಂಕಣ

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Raja Marga Column : ಚೆನ್ನಾಗಿಯೇ ಇದ್ದ ಮಗಳು ಒಮ್ಮಿಂದೊಮ್ಮೆಗೆ ಮೌನಕ್ಕೆ ಜಾರಿದಳು. ಚಿಗರೆಯಂತಿದ್ದವಳು ಜಿಗಿಯುವುದನ್ನೇ ಮರೆತಳು. 13 ವರ್ಷದ ಹುಡುಗಿಗೆ ಏನಾಯಿತು.? ನಾನು ಆಕೆಯನ್ನು ಈ ಸಂಕಟದಿಂದ ಹೊರತಂದಿದ್ದು ಹೇಗೆ?

VISTARANEWS.COM


on

Raja Marga Father and Daughter
Koo
RAJAMARGA Rajendra Bhat

ಮೊನ್ನೆ ಮೊನ್ನೆ ತನ್ನ 13ನೆಯ ಹುಟ್ಟುಹಬ್ಬವನ್ನು ಸೆಲೆಬ್ರೇಟ್ (13 year old daughter) ಮಾಡಿದ ನನ್ನ ಮಗಳು ಇಂದಿಗೂ ರಾತ್ರಿ ಮಲಗುವುದು ಅಪ್ಪನ ಕಾಲಿನ ಮೇಲೆಯೇ. ಅಪ್ಪನ ಬಾಯಿಂದ ಅದ್ಭುತವಾದ ಕಾಲ್ಪನಿಕ ಕಥೆಗಳನ್ನು ಕೇಳುತ್ತ, ಜೋಗುಳದ ಹಾಡುಗಳನ್ನು ಕೇಳುತ್ತ ಆಕೆ ದೊಡ್ಡವಳಾದವಳು. ಅವಳೀಗ ಪ್ರೈಮರಿ ಶಿಕ್ಷಣವನ್ನು (Primary Education) ಮುಗಿಸಿ ಹೊಸತೊಂದು ಖಾಸಗಿ ಹೈಸ್ಕೂಲಿಗೆ (Private High school) ಸೇರಿದವಳು. ನನ್ನ ಮಗಳು ಈಗ ಎಂಟನೇ ಕ್ಲಾಸ್ (Raja Marga Column).

ಅವಳೀಗ ಮೊದಲಿನ ಹಾಗೆ
ಮನಸ್ಸು ಬಿಚ್ಚಿ ಮಾತಾಡುವುದಿಲ್ಲ!

ರಾತ್ರಿ ಮಲಗುವ ಮೊದಲು ಅವಳು ಇಡೀ ದಿನ ನಡೆದ ಪ್ರತೀ ಒಂದು ಘಟನೆಯನ್ನೂ ಅಪ್ಪನಿಗೆ ಹೇಳುತ್ತಾಳೆ. ಆಗ ಅವಳಿಗೆ ಯಾವ ಫಿಲ್ಟರ್ ಅಡ್ಡ ಬರುವುದಿಲ್ಲ. ಇದನ್ನು ಹೇಳಬೇಕೋ ಬೇಡವೋ ಎಂಬ ಗೊಂದಲ ಇರುವುದಿಲ್ಲ. ಟೀಚರ್ ಹೊಗಳಿದ್ದು, ಕ್ಲಾಸ್‌ಮೇಟ್ ಗೀರಿದ್ದು, ಆಕೆಯ ಓರಗೆಯ ಹುಡುಗ ಕಣ್ಣು ಹೊಡೆದು ಲವ್ ಯು ಅಂದದ್ದು….ಎಲ್ಲವನ್ನೂ ಅವಳು ಹೇಳಿಯೇ ಹೇಳುತ್ತಾಳೆ.

ಆದರೆ ಇತ್ತೀಚೆಗೆ ಯಾವುದನ್ನೂ ಹೇಳದೆ ಆಕೆ ಮೌನವಾಗಿದ್ದಾಳೆ. ಆಕೆಯ ಕಣ್ಣುಗಳಲ್ಲಿ ಅಗಾಧವಾದ ಭಯ ಹೊರಗೆ ಇಣುಕುತ್ತದೆ. ಉತ್ಸಾಹದ ಚಿಲುಮೆ ಆಗಿದ್ದ ನನ್ನ ಪ್ರಿನ್ಸೆಸ್ ಈಗ ಮಂಕಾಗಿರುವುದು ನನಗೆ ಅಚ್ಚರಿ ತರುತ್ತದೆ. ಆರಂಭದಲ್ಲಿ ಹೊಸ ಶಾಲೆಗೆ ಸೇರಿದ್ದಾಳೆ, ಹೊಂದಾಣಿಕೆ ಕಷ್ಟ ಆಗಿರಬಹುದು ಎಂದು ನಾನು ಭಾವಿಸಿದ್ದೆ. ಅಥವಾ ಪ್ರಾಯಕ್ಕೆ ಬಂದಿದ್ದ ಕಾರಣ ಗೊಂದಲಗಳು ಇರಬಹುದು ಎಂದು ಯೋಚಿಸಿದ್ದೆ. ಆದರೆ ಅವಳ ನೋವಿಗೆ ಅದ್ಯಾವುದೂ ಕಾರಣ ಅಲ್ಲ ಎಂದು ಗೊತ್ತಾದಾಗ ನಾನು ಅವಳ ಬಾಯಿ ಬಿಡಿಸುವುದು ಅನಿವಾರ್ಯ ಆಯಿತು. ಒಮ್ಮೆಗೇ ಅವಳು ನನ್ನ ಕುತ್ತಿಗೆಯ ಸುತ್ತ ಬಳಸಿ ಹಿಡಿದು ಜೋರಾಗಿ ಅಳಲು ಆರಂಭ ಮಾಡಿದಳು! ಎಷ್ಟೋ ದಿನಗಳಿಂದ ಒತ್ತಿ ಹಿಡಿದ ಅಣೆಕಟ್ಟು ಪ್ರವಾಹವಾಗಿ ಹರಿಯಲು ಆರಂಭ ಆಯಿತು.

Raja Marga Father and Daughter

ಅಪ್ಪಾ, ನನಗೆ ಈ ಶಾಲೆ ಬೇಡ!

ನನ್ನ ಪ್ರಿನ್ಸೆಸ್ ಹಾಗೆಂದು ಹಠ ಹಿಡಿದು ಅಳುವಾಗ ನನಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ. ಅವಳು ಸೇರಿದ ಹೈಸ್ಕೂಲ್‌ ನಮ್ಮೂರಲ್ಲಿಯೆ ಪ್ರಸಿದ್ಧವಾದ ಶಾಲೆ. ಒಳ್ಳೆಯ ಅಧ್ಯಾಪಕರು ಇದ್ದಾರೆ. ಚಂದ ಪಾಠ ಮಾಡುವ ಶಾಲೆ ಅದು. ಪರೀಕ್ಷೆಯ ರಿಸಲ್ಟ್ ತುಂಬ ಚೆನ್ನಾಗಿದೆ. ಸೌಲಭ್ಯಗಳು ಚೆನ್ನಾಗಿವೆ. ಹಾಗಿರುವಾಗ ಅವಳು ಯಾಕೆ ಆ ಶಾಲೆ ಬೇಡ ಅಂತಾಳೆ? ನನಗೆ ಅರ್ಥ ಆಗಲಿಲ್ಲ.

ಆಗ ಅವಳ ಅಳು ನಿಯಂತ್ರಣಕ್ಕೆ ಬಂದಿತ್ತು. ನನ್ನ ಪ್ರಿನ್ಸೆಸ್ ಈಗ ಒಂದೊಂದಾಗಿ ಕಾರಣವನ್ನು ಹೇಳುತ್ತಾ ಹೋದಂತೆ ನಾನು ಬೆಚ್ಚಿ ಬಿದ್ದೆ.

ಓವರ್ ಟು ಮೈ ಪ್ರಿನ್ಸೆಸ್….

ಅಪ್ಪ, ನಾನು ಓದಿದ ಪ್ರೈಮರಿ ಶಾಲೆಯಲ್ಲಿ ನನಗೆ ಯಾವ ಒತ್ತಡವೂ ಇರಲಿಲ್ಲ. ತುಂಬಾ ಗೆಳೆಯರು, ನೂರಾರು ಚಟುವಟಿಕೆಗಳು, ಚಂದ ಚಂದ ಕನಸುಗಳು, ಆಟಗಳು, ನೃತ್ಯಗಳು, ಹಾಡುಗಳು ಎಲ್ಲವೂ ಇದ್ದವು. ಒಂದು ದಿನವೂ ನಮ್ಮ ಅಧ್ಯಾಪಕರು ಪರೀಕ್ಷೆಗಳ ಬಗ್ಗೆ ಮಾತಾಡಿರಲಿಲ್ಲ. ನಮ್ಮ ಓರಗೆಯ ಗೆಳೆಯರು ಒಬ್ಬರಿಗೆ ಒಬ್ಬರು ಸಪೋರ್ಟ್ ಮಾಡುತ್ತಿದ್ದರು. ಚಂದ ಕಲಿಯುವ ವಾತಾವರಣ ಇತ್ತು. ನಮ್ಮ ಮಧ್ಯೆ ಸ್ಪರ್ಧೆ ಇರಲೇ ಇಲ್ಲ. ಶಿಕ್ಷಕರು ತಾರತಮ್ಯ ಮಾಡಿದ್ದೇ ಇಲ್ಲ.

ಈಗ ಎಲ್ಲವನ್ನೂ ಬಾಯಿಪಾಠ ಮಾಡಿಸುತ್ತಾರೆ!

ಆದರೆ ಈಗ ನಮ್ಮ ಹೈಸ್ಕೂಲ್ ಅದಕ್ಕೆ ವಿರುದ್ಧವಾಗಿದೆ. ಅಧ್ಯಾಪಕರು ಚಂದ ಪಾಠ ಮಾಡುತ್ತಾರೆ. ಆದರೆ ಪ್ರತೀ ದಿನವೂ ಪರೀಕ್ಷೆ, ಪರೀಕ್ಷೆ ಎಂದು ಗೋಳು ಹೊಯ್ದುಕೊಳ್ಳುತ್ತಾರೆ. ಅನಾವಶ್ಯಕವಾಗಿ ಬಾಯಿಪಾಠ ಮಾಡಲು ಒತ್ತಾಯ ಮಾಡುತ್ತಾರೆ. ನಾನು ಪ್ರೈಮರಿ ಶಾಲೆಯಲ್ಲಿ ಎಂದಿಗೂ ಬಾಯಿಪಾಠ ಮಾಡಿದ್ದು ಇಲ್ಲ. ಎಲ್ಲವನ್ನೂ ನಮ್ಮ ಅಧ್ಯಾಪಕರು ಅರ್ಥ ಮಾಡಿ ಬಿಡುತ್ತಿದ್ದರು. ಬಾಯಿಪಾಠದ ಅಗತ್ಯವೇ ಬೀಳಲಿಲ್ಲ. ಆದರೆ ಈಗ ಇಲ್ಲಿನ ಅಧ್ಯಾಪಕರು ಬಲವಂತವಾಗಿ ಬಾಯಿಪಾಠ ಮಾಡಿಸುತ್ತಾರೆ. ನಮ್ಮದೇ ವಾಕ್ಯ ಮಾಡಿ ಉತ್ತರ ಬರೆದರೆ ಮಾರ್ಕ್ ಕೊಡುವುದೇ ಇಲ್ಲ! ಒಂದೊಂದು ಉತ್ತರವನ್ನು ಹತ್ತು ಸಲ ಬರೆಸುತ್ತಾರೆ. ಅದರಿಂದ ನಮಗೇನು ಲಾಭ? ನಾನು ಬಾಲ್ಯದಿಂದಲೂ ಕ್ರಿಯೇಟಿವ್ ಆಗಿ ಕಲಿತವಳು. ಯಾಂತ್ರಿಕವಾಗಿ ಕಲಿಯುವುದು ನನ್ನಿಂದ ಆಗೋದಿಲ್ಲ ಅಪ್ಪ. ಅವರು ಕೊಟ್ಟ ನೋಟ್ಸ್ ಬಾಯಿಪಾಠ ಮಾಡಿ ಉತ್ತರ ಬರೆಯುವುದು ಅದ್ಯಾವ ಬುದ್ಧಿವಂತಿಕೆ?

ನನಗೆ ಒಮ್ಮೆ ಹೇಳಿದರೆ ಎಲ್ಲವೂ ಅರ್ಥ ಆಗುತ್ತದೆ ಅಪ್ಪ. ಮತ್ತೆ ಅವರು ಯಾಕೆ ಒಂದೊಂದು ವಾಕ್ಯ ಮೂರು ಮೂರು ಬಾರಿ ಹೇಳುತ್ತಾರೆ?

Raja Marga Father and Daughter

ಶಿಕ್ಷಕರು ನಮಗೆ ಚುಚ್ಚಿ ನೋವು ಕೊಟ್ಟು ಮಾತಾಡ್ತಾರೆ

ನಮ್ಮ ಶಿಕ್ಷಕರು ತರಗತಿಯಲ್ಲಿ ಅನಾವಶ್ಯಕವಾಗಿ ಕಂಪೇರ್ ಮಾಡ್ತಾರೆ. ಅವಳನ್ನು ನೋಡಿ ಕಲಿ, ಇವನನ್ನು ನೋಡಿ ಕಲಿ ಎಂದೆಲ್ಲ ಹೇಳುತ್ತಾರೆ. ನನಗದು ಇಷ್ಟ ಆಗೋದಿಲ್ಲ ಅಪ್ಪ. ನಾನು ನಾನೇ ಆಗಿರೋದು ನನಗೆ ಇಷ್ಟ. ನಾನ್ಯಾಕೆ ಅವನ ಹಾಗೆ, ಅವಳ ಹಾಗೆ ಇರಬೇಕು? ಮಾತು ಮಾತಿಗೂ ಚುಚ್ಚಿ ಮಾತಾಡ್ತಾರೆ.

ಮೊನ್ನೆ ನಮ್ಮ ಗಣಿತ ಮ್ಯಾಮ್ ಬೋರ್ಡ್ ಮೇಲೆ ಒಂದು ಲೆಕ್ಕ ತಪ್ಪು ಮಾಡಿದರು. ನಾನು ಎದ್ದು ನಿಂತು ಅದು ತಪ್ಪು ಅಂತ ಹೇಳಿದ್ದೆ. ಆಗ ಆ ಮ್ಯಾಮ್ ಗಟ್ಟಿಯಾಗಿ ‘ಕೂತ್ಕೋ ಕೂತ್ಕೋ. ನೀನು ಗಣಿತ ಮೇಷ್ಟ್ರ ಮಗಳು ಎಂದು ಗೊತ್ತಿದೆ!’ ಎಂದರು. ನನಗೆ ಅಳು ಬಂತು ಅಪ್ಪ. ನಾನೇನು ತಪ್ಪು ಹೇಳಿದ್ದೇನೆ? ಅವರ್ಯಾಕೆ ನಿಮ್ಮ ಬಗ್ಗೆ ಹಗುರವಾಗಿ ಮಾತಾಡಬೇಕು? ನನಗದು ಇಷ್ಟ ಆಗೋದಿಲ್ಲ ಅಪ್ಪ.

ಶಿಕ್ಷಕರು ಇಲ್ಲಿ ತಾರತಮ್ಯ ಮಾಡ್ತಾರೆ ಅಪ್ಪ

ನಮ್ಮ ಶಾಲೆಯಲ್ಲಿ ಬಡವರ ಮಕ್ಕಳು, ಶ್ರೀಮಂತರ ಮಕ್ಕಳು ಎಂಬ ತಾರತಮ್ಯ ಇದೆ ಅಪ್ಪ. ಶ್ರೀಮಂತರ ಮಕ್ಕಳು ಶಾಲೆಗೆ ಹೆಚ್ಚು ಡೊನೇಶನ್ ಕೊಡುವ ಕಾರಣ ಅವರಿಗೆ ಹೆಚ್ಚು ಮಾರ್ಕ್, ಅವರಿಗೆ ಹೆಚ್ಚು ಬಹುಮಾನ, ಅವರಿಗೆ ಹೆಚ್ಚು ಹೊಗಳಿಕೆ. ನನಗದು ಇಷ್ಟ ಆಗೋದಿಲ್ಲ ಅಪ್ಪ.

ಮೊನ್ನೆ ಒಂದು ಸಣ್ಣ ಸ್ಪೆಲ್ಲಿಂಗ್ ತಪ್ಪು ಮಾಡಿದ್ದಕ್ಕೆ ಬೈದರು. ನೂರು ಸಲ ಬರೆಯಲು ಹೇಳಿದರು. ನಾನೇನಾದರೂ ಬೇಕೆಂದೇ ತಪ್ಪು ಮಾಡುತ್ತೇನಾ? ತಪ್ಪು ಮಾಡಲು ಅವಕಾಶ ಇಲ್ಲದ ಶಾಲೆ ನನಗೆ ಬೇಡ. ನನ್ನ ಕ್ರಿಯೇಟಿವ್ ಟ್ಯಾಲೆಂಟ್ ಅವರಿಗೆ ಬೇಡ ಅಂದರೆ ನನಗೆ ಶಾಲೆಯೇ ಬೇಡ!‌ ನಮ್ಮದು ಶಾಲೆ ಎಂಬ ಭಾವನೆ ಬರುವುದಿಲ್ಲ ಅಪ್ಪ.

Raja Marga Father and Daughter

ಅದು ರ‍್ಯಾಂಕ್ ಪಡೆಯುವ ಒಂದು ಕಾರ್ಖಾನೆ!

ಒಂದೇ ಒಂದು ಬದುಕಿನ ಪಾಠ ಇಲ್ಲ. ಎಲ್ಲರೂ ಮಾರ್ಕ್, ಮಾರ್ಕ್ ಎಂದು ಅರಚುತ್ತಾರೆ. ರ‍್ಯಾಂಕ್ ಪಡೆಯುವ ಮಕ್ಕಳಿಗೆ ಸಪರೇಟ್ ಕ್ಲಾಸಸ್ ಮಾಡ್ತಾರೆ. ಕಡಿಮೆ ಮಾರ್ಕ್ ತೆಗೆದುಕೊಳ್ಳುವ ಮಕ್ಕಳಿಗೆ ಬೇರೆ ಅಧ್ಯಾಪಕರು ಪಾಠ ಮಾಡ್ತಾರೆ. ಪರೀಕ್ಷೆಗೆ ಬರುವ ಪ್ರಶ್ನೆಗಳನ್ನು ಮಾತ್ರ ಹೇಳಿಕೊಡುತ್ತಾರೆ. ನಾವೇನಾದರೂ ಕುತೂಹಲಕ್ಕೆ ಪ್ರಶ್ನೆ ಕೇಳಿದರೆ ಅಧಿಕ ಪ್ರಸಂಗಿ ಎಂದು ಬೈತಾರೆ. ನನಗೆ ಈ ಶಾಲೆ ಬೇಡ ಅಪ್ಪ.

ಓರಗೆಯ ಗೆಳೆಯರಲ್ಲ ಅವರು‌, ಸ್ಪರ್ಧಿಗಳು!

ಇನ್ನು ನಮ್ಮ ಓರಗೆಯ ಇತರರು ನನಗೆ ಗೆಳೆಯರಾಗಿ ಕಾಣುತ್ತಿಲ್ಲ. ಅವರು ನನ್ನ ಜೊತೆಗೆ ರೇಸಿಗೆ ನಿಂತ ಹಾಗೆ ವರ್ತಿಸುತ್ತಾರೆ. ಅವರಿಗಿಂತ ನನಗೆ ಒಂದು ಮಾರ್ಕ್ ಹೆಚ್ಚು ಬಂದರೂ ಉರಿದು ಸಾಯುತ್ತಾರೆ. ಯಾವುದೇ ಸ್ಪರ್ಧೆಯಲ್ಲಿ ನನಗೆ ಬಹುಮಾನ ಬಂದರೆ ಪಾರ್ಶಿಯಾಲಿಟಿ ಎಂದು ಬೊಬ್ಬೆ ಹೊಡೆಯುತ್ತಾರೆ. ನನ್ನ ವಿರುದ್ಧ ಶಿಕ್ಷಕರ ಬಳಿ ಹೋಗಿ ಚಾಡಿ ಹೇಳುತ್ತಾರೆ. ನಾನು ಓದಬಾರದು ಎಂದು ನಾನು ಕಷ್ಟ ಪಟ್ಟು ಬರೆದ ನೋಟ್ಸ್ ಪುಟಗಳನ್ನು ಹರಿಯುತ್ತಾರೆ. ಹಿಂಸೆ ಕೊಡುತ್ತಾರೆ. ಶಿಕ್ಷಕರಿಗೆ ಗಿಫ್ಟ್ ತಂದುಕೊಟ್ಟು ಪ್ಲೀಸ್ ಮಾಡ್ತಾರೆ.

ಅಂತಹ ಮಕ್ಕಳನ್ನು ನಮ್ಮ ಟೀಚರ್ಸ್ ತಲೆಯ ಮೇಲೆ ಹೊತ್ತು ಪೂಜೆ ಮಾಡ್ತಾರೆ. ಸ್ಕೂಲ್ ಡೇನಲ್ಲಿಯೂ ಅಂತಹ ಮಕ್ಕಳಿಗೆ ಮಾತ್ರ ವೇದಿಕೆ. ಅವರಿಗೆ ಸಾಲು ಸಾಲು ಬಹುಮಾನಗಳು! ಉಳಿದವರಿಗೆ ಏನೂ ಇಲ್ಲ.

ನಮ್ಮ ಶಾಲೆಯಲ್ಲಿ ಮಾರ್ಕ್ ಪಡೆಯುವುದು ಮಾತ್ರ ಟ್ಯಾಲೆಂಟ್!

ಬೇರೆ ಯಾವ ಟ್ಯಾಲೆಂಟ್ ಕೂಡ ನಮ್ಮ ಶಿಕ್ಷಕರಿಗೆ ಬೇಡ. ಸ್ಪೋರ್ಟ್ಸ್, ಗೇಮ್ಸ್, ನಾಟಕ, ಸ್ಕಿಟ್, ಹಾಡು, ಡ್ಯಾನ್ಸ್ ಇದ್ಯಾವುದಕ್ಕೂ ನಮ್ಮ ಶಾಲೆಯಲ್ಲಿ ವೇದಿಕೆ ಇಲ್ಲ. ಗೇಮ್ಸ್ ಪೀರಿಯಡ್ ಇದ್ದಾಗಲೂ ಟೀಚರ್ಸ್ ಬಂದು ಗಣಿತ, ವಿಜ್ಞಾನ, ಇಂಗ್ಲಿಷ್ ಪಾಠ ಮಾಡ್ತಾರೆ. ನಮ್ಮ ಇಂಗ್ಲಿಷ್ ಟೀಚರ್ ಇವತ್ತಿಗೂ ಭಾಷಾಂತರ ವಿಧಾನದಲ್ಲಿ ಪಾಠ ಮಾಡ್ತಾರೆ. ನಮಗೆ ಇಂಗ್ಲೀಷ್ ಭಾಷೆಯಲ್ಲಿಯೇ ಮಾತಾಡಬೇಕು ಅನ್ನುತ್ತಾರೆ. ಅವರು ಸ್ಟಾಫ್ ರೂಂನಲ್ಲಿ ಇಂಗ್ಲಿಷ್‌ ಬಿಟ್ಟು ಬೇರೆಲ್ಲಾ ಭಾಷೆ ಮಾತಾಡುತ್ತಾರೆ! ನನಗೆ ಈ ಶಾಲೆ ಬೇಡವೇ ಬೇಡ ಅಪ್ಪ. ಪ್ಲೀಸ್ ಬೇರೆ ಕಡೆ ಸೇರಿಸಿ.

ಇದನ್ನೂ ಓದಿ : Raja Marga Column : ಗಂಡ, ಮಕ್ಕಳ ಕೊಂದವರ ಕ್ಷಮಿಸಿದ್ದೇನೆ ಎಂದು ಹೇಳಿದ್ದರು ಆಕೆ!

ಭರತವಾಕ್ಯ

ನನ್ನ ಮಗಳ ನಿರ್ಧಾರ ಸರಿ ಇತ್ತು. ನಾಳೆಯೇ ಅವಳನ್ನು ಬೇರೆ ಶಾಲೆಗೆ ಸೇರಿಸುವ ಭರವಸೆ ಕೊಟ್ಟೆ. ಅವಳು ಥ್ಯಾಂಕ್ಸ್ ಅಪ್ಪ ಎಂದು ನನ್ನ ಕೆನ್ನೆಗೆ ಮುತ್ತು ಕೊಟ್ಟು ನಿದ್ದೆಗೆ ಜಾರಿದಳು.

Continue Reading
Advertisement
Vistara Editorial, Let the strengthening government schools
ಕರ್ನಾಟಕ14 mins ago

ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

Dina Bhavishya
ಪ್ರಮುಖ ಸುದ್ದಿ1 hour ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Sphoorti Salu
ಸುವಚನ1 hour ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

HD Kumaraswamy
ಕರ್ನಾಟಕ7 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ7 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ7 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ7 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Central government bars onion export to curb inflation
ದೇಶ8 hours ago

ಈರುಳ್ಳಿ ರಫ್ತು ನಿಷೇಧ! ಎಥೆನಾಲ್‌ ಉತ್ಪಾದನೆಗೆ ಕಬ್ಬು ಬಳಸುವಂತಿಲ್ಲ

Nat Sciver-Brunt celebrates dismissing Harmanpreet Kaur
ಕ್ರಿಕೆಟ್8 hours ago

INDW vs ENGW: ಹೀನಾಯವಾಗಿ ಸೋತು ಸರಣಿ ಕಳೆದುಕೊಂಡ ಭಾರತ ಮಹಿಳಾ ತಂಡ

Farmers Protest
ಕರ್ನಾಟಕ8 hours ago

Farmers Protest: ಸ್ವಾಮೀಜಿಗಳ ಸಂಧಾನ ಯಶಸ್ವಿ; ಕಿತ್ತೂರಲ್ಲಿ ಪ್ರತಿಭಟನೆ ಹಿಂಪಡೆದ 9 ಹಳ್ಳಿ ರೈತರು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ1 hour ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema1 day ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ2 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ3 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ಟ್ರೆಂಡಿಂಗ್‌