ನನ್ನ ದೇಶ ನನ್ನ ದನಿ ಅಂಕಣ: ವೇದಕಾಲದಲ್ಲಿ ಗೋ ಮಾಂಸ ಭಕ್ಷಣೆ ಇತ್ತೇ? Vistara News

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ವೇದಕಾಲದಲ್ಲಿ ಗೋ ಮಾಂಸ ಭಕ್ಷಣೆ ಇತ್ತೇ?

ನಮ್ಮ ಪರಂಪರೆಯ ಮಹತ್ತ್ವದ ತತ್ತ್ವ, ವಿಚಾರ, ಸಿದ್ಧಾಂತಗಳನ್ನು ನಾವು ಸರಿಯಾಗಿ ಗ್ರಹಿಸುವಲ್ಲಿ ಸೋತಿದ್ದೇವೆ. ಅಷ್ಟೇ ಅಲ್ಲ, ಸರಿಯಾಗಿ ಅನುವಾದಿಸಲೂ ವಿಫಲರಾಗಿದ್ದೇವೆ. ಕಳೆದ ಎರಡು – ಮೂರು ಶತಮಾನಗಳಲ್ಲಿ ನಮ್ಮ ಅನುವಾದ, ಅರ್ಥೈಸುವಿಕೆಗಳ ಪ್ರಕ್ರಿಯೆಯಲ್ಲಿ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳು ಪ್ರಧಾನ ಪಾತ್ರ ವಹಿಸಿವೆ ಮತ್ತು ಎಲ್ಲ ಅಧ್ವಾನಗಳಿಗೂ ಮೂಲಕಾರಣಗಳಾಗಿವೆ.

VISTARANEWS.COM


on

harappa drawing
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಜ್ಞ ಯಾಗಗಳಿಗೆ ಹಸು, ಹೋರಿ, ಮೇಕೆ, ಕುದುರೆಗಳನ್ನು ಬಲಿ ಕೊಡುವುದೇ ಪ್ರಮುಖವಾಗಿತ್ತೇ?

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ವೇದಕಾಲದಲ್ಲಿ (vedic period) ಬ್ರಾಹ್ಮಣರು (ಈ ಪದ ಇಲ್ಲಿ ವರ್ಣವನ್ನು ಪ್ರತಿನಿಧಿಸುತ್ತದೆ, ಜಾತಿಯನ್ನಲ್ಲ) ಗೋ ಮಾಂಸ (Eating cow meat) ತಿನ್ನುತ್ತಿದ್ದರು, ಯಜ್ಞ ಯಾಗಗಳಲ್ಲಿ ಗೋವುಗಳನ್ನು ಬಲಿ ಕೊಡುತ್ತಿದ್ದರು, ಇತ್ಯಾದಿ ನೂರೆಂಟು ಅಬದ್ಧಗಳನ್ನು ಓದುತ್ತಲೇ ಇರುತ್ತೇವೆ, ಕೇಳುತ್ತಲೇ ಇರುತ್ತೇವೆ. ಕೆಲ ಪ್ರಭೃತಿಗಳು “ಉಲ್ಲೇಖಗಳನ್ನೂ ನೀಡಿ” ಹಿಂದೂ ಸಮಾಜವನ್ನು ಹಂಗಿಸಲು ಅವಮಾನಿಸಲು ಪ್ರಯತ್ನ ಪಡುತ್ತಿರುತ್ತಾರೆ. ಅವರಿಗೆ ಕುತೂಹಲವಿಲ್ಲ, ಆಸಕ್ತಿ ಮೊದಲೇ ಇಲ್ಲ. ಅಂತಹವರ ಉದ್ದೇಶವೇ ಲೇವಡಿ, ಅಪಹಾಸ್ಯ.

ನಿಜವೇ? ನಿಜವೇ ಆಗಿದ್ದರೆ ಖಂಡಿತವಾಗಿಯೂ ಒಪ್ಪಿಕೊಳ್ಳೋಣ. ತಿದ್ದಿಕೊಳ್ಳೋಣ, ಸರಿಪಡಿಸಿಕೊಳ್ಳೋಣ.

ಈ ಕುರಿತಂತೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಮೊದಲನೆಯದಾಗಿ ನಮ್ಮ ಪರಂಪರೆಯ ಮಹತ್ತ್ವದ ತತ್ತ್ವ, ವಿಚಾರ, ಸಿದ್ಧಾಂತಗಳನ್ನು ನಾವು ಸರಿಯಾಗಿ ಗ್ರಹಿಸುವಲ್ಲಿ ಸೋತಿದ್ದೇವೆ. ಅಷ್ಟೇ ಅಲ್ಲ, ಸರಿಯಾಗಿ ಅನುವಾದಿಸಲೂ ವಿಫಲರಾಗಿದ್ದೇವೆ. ಕಳೆದ ಎರಡು – ಮೂರು ಶತಮಾನಗಳಲ್ಲಿ ನಮ್ಮ ಅನುವಾದ, ಅರ್ಥೈಸುವಿಕೆಗಳ ಪ್ರಕ್ರಿಯೆಯಲ್ಲಿ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳು ಪ್ರಧಾನ ಪಾತ್ರ ವಹಿಸಿವೆ ಮತ್ತು ಎಲ್ಲ ಅಧ್ವಾನಗಳಿಗೂ ಮೂಲಕಾರಣಗಳಾಗಿವೆ. ಇಂಗ್ಲಿಷ್ ಭಾಷೆಯ ಮಿತಿ ಮತ್ತು ರೋಮನ್ ಲಿಪಿಯ ಕೊರತೆಗಳು ನಮ್ಮ ಗ್ರಹಿಕೆಗಳನ್ನೇ ಬಹುಪಾಲು ವಿಕೃತಗೊಳಿಸಿವೆ. ತಕಾರ – ಟಕಾರ, ಡಕಾರ – ದಕಾರ , ಅಲ್ಪಪ್ರಾಣ – ಮಹಾಪ್ರಾಣ; ಅಷ್ಟೇಕೆ, ಹ್ರಸ್ವ – ದೀರ್ಘಗಳ ಸ್ಪಷ್ಟಾಭಿವ್ಯಕ್ತಿಗೆ ಇವು ತುಂಬಾ ಕಿರಿಕಿರಿ ಮಾಡುತ್ತಿವೆ.

ಕಳೆದೆರಡು ಸಾವಿರ ವರ್ಷಗಳ ನಮ್ಮ ಇತಿಹಾಸದಲ್ಲಿ ನಾವು ನಮ್ಮ ಶತ್ರುಗಳನ್ನು, ಮುಖ್ಯವಾಗಿ ನಮ್ಮ ಮೇಲೆ ದಾಳಿ ಮಾಡಲು ಬಂದ ಅಬ್ರಹಾಮಿಕ್ ರಿಲಿಜನ್ನುಗಳನ್ನು, ಅರ್ಥವೇ ಮಾಡಿಕೊಳ್ಳಲಿಲ್ಲ. ಆಸುರೀ ಆಕ್ರಮಣಕಾರಿಗಳನ್ನೂ ಅನಗತ್ಯವಾದ ಔದಾರ್ಯದಿಂದ ಕಂಡು ನಾವೇ ಬಹುಪಾಲು ನಾಶವಾಗಿಬಿಟ್ಟೆವು. ನಮ್ಮ ಶಿಲ್ಪಕಲೆ, ಉದ್ಯಮ, ಕೃಷಿಗಳಷ್ಟೇ ಅಲ್ಲ; ನಮ್ಮ ಸಾಹಿತ್ಯ ಮತ್ತು ಗ್ರಂಥಾಲಯಗಳೇ ನಾಶವಾಗಿಬಿಟ್ಟವು. ನಾವು ಉಳಿಸಿಕೊಳ್ಳಲು ಸಾಧ್ಯವಾದುದು ಬಹಳ ಕಡಿಮೆ.

ತದನಂತರ ಮುದ್ರಣೋದ್ಯಮದ ಆವಿಷ್ಕಾರವು ಒಂದು ರೀತಿಯಲ್ಲಿ ನಮ್ಮ ಅನೇಕ ಗ್ರಂಥಗಳನ್ನು ಉಳಿಸಿಕೊಳ್ಳಲು ನೆರವಾದರೂ, ಭಾಷಾಂತರದ ಆಯಾಮದ ಅಸಮರ್ಪಕತೆಯಿಂದಾಗಿ, ಈ ಸಂಸ್ಕೃತಿಗೆ ಸೇರಿದ ಸ್ವತಃ ನಾವೇ ತಪ್ಪುತಪ್ಪಾಗಿ ಪರಿಭಾವಿಸುವಂತಾಯಿತು. ಕಳೆದ ನಾಲ್ಕೈದು ಶತಮಾನಗಳಲ್ಲಿ ನಮ್ಮ ಅನೇಕ ಗ್ರಂಥಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಲಾಗಿದೆ. ಅನುವಾದಿಸಿದವರು ಯೂರೋಪ್ ಮೂಲದ ಕ್ರೈಸ್ತಮತೀಯ ಮಾನಸಿಕತೆಯವರು. ಅವರು ಅವರ ದೃಷ್ಟಿಕೋನದಿಂದಲೇ ಅನುವಾದಿಸಿದರು. ಕೆಲವು ವರ್ಷಗಳ ಹಿಂದೆ, ಅಪರೂಪದ ಚಿಂತಕರಾದ ಪ್ರೊ|| ಎಸ್.ಎನ್.ಬಾಲಗಂಗಾಧರ ಅವರು ಭಗವದ್ಗೀತೆಯ ಪೂರ್ವಗ್ರಹಪೀಡಿತ ಮತ್ತು ಅಸಮರ್ಪಕ ಅನುವಾದದ ಬಗೆಗೆ ಹೇಳಿದಾಗ, ನನಗಂತೂ ಜೀವಮಾನದ ಆಘಾತವೇ ಆಗಿಬಿಟ್ಟಿತು. ಅಜ್ಜಂಪುರದಲ್ಲಿ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದುಕೊಂಡೇ ಹುಟ್ಟಿದ ನಮಗೆ – ನಮ್ಮಂತಹವರಿಗೆ ಇದು ಅನಿರೀಕ್ಷಿತ ಶಾಕ್. ದುಷ್ಟ ಬೇರೆ, ವ್ಯಭಿಚಾರಿ ಬೇರೆ. ವರ್ಣಸಂಕರ ಅಥವಾ ಬದಲಾವಣೆ / ಮಿಶ್ರಣ ಬೇರೆ. ಹಾದರದ ಸಂತಾನ ಬೇರೆ.

“ಸ್ತ್ರೀಷು ದುಷ್ಟಾಸು ವಾರ್ಷ್ಣೇಯ, ಜಾಯತೇ ವರ್ಣಸಂಕರಃ” (ಭಗವದ್ಗೀತೆಯ 1ನೆಯ ಅಧ್ಯಾಯ, 41ನೆಯ ಶ್ಲೋಕ)

ಬಾಲಗಂಗಾಧರರ ವಿವರಣೆ, ವಿಶ್ಲೇಷಣೆಗಳು ತುಂಬಾ ತುಂಬಾ ಮಹತ್ತ್ವಪೂರ್ಣವಾಗಿದ್ದವು. ವಿಷಾದದ ಸಂಗತಿಯೆಂದರೆ, ಈ ಅನುವಾದದ ಅಧ್ವಾನಕ್ಕೆ ಕಾರಣನಾದವನು ಚಾರ್ಲ್ಸ್ ವಿಲ್ಕಿನ್ಸ್. 1785ರಲ್ಲಿ ಈ ವಿಲ್ಕಿನ್ಸ್ ಭಗವದ್ಗೀತೆಯ ಇಂಗ್ಲಿಷ್ ಅನುವಾದವನ್ನು ಪ್ರಕಟಿಸಿದ. ವಿಚಿತ್ರ ನೋಡಿ. ಈತ ಭಾರತಶಾಸ್ತ್ರಕ್ಕೆ (Indology) ಸಂಬಂಧಿಸಿದಂತೆ ವಿದ್ವಾಂಸನೂ ಅಲ್ಲ. ಅನಿರೀಕ್ಷಿತವಾಗಿ ಅನುವಾದ ಮಾಡಿ “ವಿಶ್ವಖ್ಯಾತಿ” ಗಳಿಸಿಬಿಟ್ಟ. ಯೂರೋಪ್ ಮೂಲದ ಕ್ರೈಸ್ತ ಮಾನಸಿಕತೆಯ ಈತ, “ದುಷ್ಟ” ಎಂಬುದನ್ನು “ವ್ಯಭಿಚಾರಿ” ಎಂದೂ, “ವರ್ಣ ಸಂಕರ”ವನ್ನು “ಹಾದರದ ಸಂತಾನ”ವೆಂದೂ ಅನುವಾದಿಸಿಬಿಟ್ಟ. ವಿಚಿತ್ರವೆಂದರೆ, ಕಳೆದೆರಡು ಶತಮಾನಗಳಲ್ಲಿ ಈ ಹಿನ್ನೆಲೆಯಲ್ಲಿಯೇ ಈ ಮಾನಸಿಕತೆ ಇಟ್ಟುಕೊಂಡೇ, ಭಾರತೀಯ ವಿದ್ವಜ್ಜನರೂ ಈ ಹಾದಿಯಲ್ಲಿಯೇ ಹೀಗೆಯೇ ವಿಶ್ಲೇಷಿಸಿದರು, ವ್ಯಾಖ್ಯಾನ ಮಾಡಿದರು (ಬೇರೆ ಬೇರೆ ಭಾರತೀಯ ಭಾಷೆಗಳಿಗೂ ತಪ್ಪುತಪ್ಪಾಗಿ ಅನುವಾದಿಸಿದರು). ಸಾಲದೆಂಬಂತೆ, ವರ್ಣ ಮತ್ತು ಜಾತಿ ಕುರಿತು ದುರದೃಷ್ಟವಶಾತ್ ನಮ್ಮ ಭಾರತೀಯ ವಿದ್ವಜ್ಜನರಿಗೇ ಗೊಂದಲವಿದೆ, ಅಸ್ಪಷ್ಟತೆಯಿದೆ. ಏಳು ಸಾವಿರ ವರ್ಷಗಳ ಹಿಂದಿನ ಭಗವದ್ಗೀತೆಯ ಪರಿಕಲ್ಪನೆಗಳನ್ನೇ ಸರಿಯಾಗಿ ಗ್ರಹಿಸಲು ಸೋತ ನಾವು, ಇಪ್ಪತ್ತೊಂದು ಸಾವಿರ ವರ್ಷಗಳ ಹಿಂದಿನ ವಿಶಿಷ್ಟ ವೇದವಾಙ್ಮಯವನ್ನು ಖಚಿತವಾಗಿ – ಸಮರ್ಪಕವಾಗಿ ಅರ್ಥೈಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಂಡಿದ್ದೇವೆಯೇ?

ಅನೇಕ ಭಾರತೀಯ ವಿದ್ವಾಂಸರ ವ್ಯಾಖ್ಯಾನ, ವಿಶ್ಲೇಷಣೆಗಳನ್ನು ತಾಳೆ ನೋಡಿದರೆ, ಎಲ್ಲರೂ ಎಲ್ಲರೂ ಈ ವಿಲ್ಕಿನ್ಸನ ಅಸಮರ್ಪಕ ಅನುವಾದದ ಆಧಾರಿತವಾದ ತಪ್ಪು ಗ್ರಹಿಕೆಯ ಮೇಲೆಯೇ ತಮ್ಮ ವಿದ್ವದ್ಸೌಧಗಳನ್ನು ನಿರ್ಮಿಸಿಬಿಟ್ಟಿದ್ದರು. ತಮಿಳುನಾಡು ಮೂಲದ ಸ್ವಾಮಿ ದಯಾನಂದ ಸರಸ್ವತಿಗಳಂತಹ ಅಪರೂಪದ ಕೆಲವರನ್ನು ಬಿಟ್ಟರೆ, ಉಳಿದ ಎಲ್ಲರದ್ದೂ ಇದೇ ಕಥೆ, ಇದೇ ವ್ಯಥೆ. ನಮ್ಮ ಭಾರತೀಯ ಪರಂಪರೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರದ ಅನುವಾದಕನೊಬ್ಬನ ತಪ್ಪಿನಿಂದಾಗಿ ಭಯಾನಕ ಎಡವಟ್ಟು ಆಗಿಹೋಯಿತು.

ಇನ್ನೊಂದು ಇಷ್ಟೇ ಆಘಾತಕಾರಿಯಾದುದೆಂದರೆ, 19ನೆಯ ಶತಮಾನದಲ್ಲಿ ಮ್ಯಾಕ್ಸ್ ಮುಲ್ಲರ್ ಹುಟ್ಟುಹಾಕಿದ ಆರ್ಯ-ದ್ರಾವಿಡ ಜನಾಂಗೀಯ ಸಿದ್ಧಾಂತ. ಈ ಸಿದ್ಧಾಂತದಿಂದ ಕನಿಷ್ಠ ಒಂದು ಶತಮಾನದ ಕಾಲ, ಭಾರತೀಯ ವಿದ್ವಲ್ಲೋಕಕ್ಕೆ ಅಂಧಕಾರವು ಕವಿಯಿತು. ದೊಡ್ಡ ದೊಡ್ಡ ವಿದ್ವಾಂಸರೂ ಇದನ್ನೇ ನಂಬಿ – ಒಪ್ಪಿ, ತಪ್ಪು ಗ್ರಹಿಕೆಗಳನ್ನೇ ಅನುಸರಿಸಿ ರಾಶಿ ರಾಶಿ ಗ್ರಂಥಗಳನ್ನು ಬರೆದುಬಿಟ್ಟರು. ಇನ್ನೂ ಭಯಾನಕವಾದುದೆಂದರೆ ಈ ಅವೈಜ್ಞಾನಿಕ ಸಿದ್ಧಾಂತವನ್ನೇ ಆಧರಿಸಿ ತಮಿಳುನಾಡಿನ ರಾಜಕೀಯವು ಇಂದಿಗೂ ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಕಳೆದ ಐದಾರು ದಶಕಗಳಿಂದ ಈ ಕುರಿತಾದ ವೈಜ್ಞಾನಿಕ ಸಂಶೋಧನೆ – ವಿಶ್ಲೇಷಣೆಗಳು, ಆರ್ಯ ಎನ್ನುವುದು ಜನಾಂಗಸೂಚಕವಲ್ಲ, ಅದು ಗೌರವವಾಚಕ ಎಂದೂ, ದ್ರಾವಿಡ ಎನ್ನುವುದು ಪ್ರದೇಶವಾಚಕವೇ (ದಕ್ಷಿಣ ಭಾರತ) ಹೊರತು ಜನಾಂಗವಾಚಕವಲ್ಲ ಎಂದೂ ಖಚಿತಪಡಿಸಿದ್ದರೂ, ನಮ್ಮ ಬಹುತೇಕ ಪಠ್ಯಪುಸ್ತಕಗಳು ಹಳೆಯ ಅಸಂಬದ್ಧವಾದವನ್ನೇ ಒಸರುತ್ತಿವೆ.

Max muller

ವಿಜ್ಞಾನ ಮತ್ತು ವೈಜ್ಞಾನಿಕ ಅನುಸಂಧಾನಗಳು ಬಹಳ ಬಹಳ ಮುಖ್ಯ ಹಾಗೂ ಅನಿವಾರ್ಯ ಸಹ. ನಕ್ಷತ್ರಗಳ ಚಲನೆ, ಸಮುದ್ರ ಸಾಗರಗಳ ಉಬ್ಬರವಿಳಿತಗಳು, ಗ್ರಹಣಗಳು ಇತ್ಯಾದಿ ವೈಜ್ಞಾನಿಕ ದತ್ತಾಂಶವನ್ನು ಆಧರಿಸಿ, ಸಂಶೋಧಕರಾದ ನೀಲೇಶ್ ಓಕ್ ಅವರು ಋಗ್ವೇದ, ರಾಮಾಯಣ ಮತ್ತು ಮಹಾಭಾರತಗಳ ಕಾಲನಿರ್ಣಯವನ್ನು ಮಾಡಿದ್ದಾರೆ.

ನಮ್ಮ ವೇದಗಳು, ಮಹಾಕಾವ್ಯಗಳು, ಪುರಾಣಗಳು ಎಂದರೆ ಕೇವಲ ಒಂದು ಆಯಾಮದ ರಚನೆಗಳಲ್ಲ. ಅವು ಇತಿಹಾಸ, ಭೂಗೋಳ, ಕಥೆ, ಕಲ್ಪನೆ, ನೀತಿ, ಸಂಕೇತ, ಸೂತ್ರ ಮತ್ತು ಅಧ್ಯಾತ್ಮಗಳ ಅಪೂರ್ವ ಸಂಯೋಜನೆಗಳು, ರಚನೆಗಳು. ರಾಮಾಯಣದ ಶ್ಲೋಕಗಳಲ್ಲಿ ಅರುಂಧತಿ ನಕ್ಷತ್ರವು ವಸಿಷ್ಠ ನಕ್ಷತ್ರಕ್ಕಿಂತಲೂ ಮುಂದೆ ಹೋಗುವ ಅಪರೂಪದ ಖಗೋಳ ವಿದ್ಯಮಾನದ ಉಲ್ಲೇಖವಿದೆ. ಅಂತೆಯೇ, ಸುಗ್ರೀವನ ಒಂದು ವಾನರಸೇನೆಯ ತಂಡದ ಪಶ್ಚಿಮಾಭಿಮುಖ ಸೀತಾನ್ವೇಷಣೆಯ ವಿವರಗಳಲ್ಲಿ, ಇಂದಿನ ಯೂರೋಪ್ ಖಂಡದ ದೇಶಗಳ ಭೌಗೋಳಿಕ ಚಿತ್ರಣವಿದೆ. ಇಂತಹ ನೂರೆಂಟು ಸಂಗತಿಗಳ – ವಿವರಗಳ ಆಧಾರದ ಮೇಲೆ, ಓಕ್ ಅವರು ಮಹಾಭಾರತವು ಇಂದಿಗೆ ಏಳು ಸಾವಿರ ವರ್ಷಗಳ ಹಿಂದಿನ ವಿದ್ಯಮಾನವೆಂದೂ, ರಾಮಾಯಣದ ಯುದ್ಧವು ಹದಿನಾಲ್ಕು ಸಾವಿರ ವರ್ಷಗಳ ಹಿಂದೆ ಘಟಿಸಿತೆಂದೂ ಕಾಲನಿರ್ಣಯ ಮಾಡಿದ್ದಾರೆ. ಇನ್ನೂ ಅದ್ಭುತವಾದುದೆಂದರೆ, ಋಗ್ವೇದದ ರಚನೆಯಾಗಿ ಇಪ್ಪತ್ತೊಂದು ಸಹಸ್ರ ವರ್ಷಗಳಾಗಿವೆಯೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂತಹುದೇ ಅಚ್ಚರಿಯ ವೈಜ್ಞಾನಿಕ ಮಾಹಿತಿಯೆಂದರೆ, ಇತಿಹಾಸಕಾರ – ವಿಜ್ಞಾನಿ ನವರತ್ನ ರಾಜಾರಾಮ್ ಅವರು ವಿದ್ವಾಂಸರ ಭಾಷೆಯಾದ ಸಂಸ್ಕೃತವು ರೂಪುಗೊಂಡಿದ್ದು ಮೂಲತಃ ಮೂವತ್ತು ಸಾವಿರ ವರ್ಷಗಳ ಹಿಂದಿನ ನಮ್ಮ ಕನ್ನಡ, ತೆಲುಗು ಮತ್ತು ತಮಿಳಿನಂತಹ ಅನೇಕ ಜನಭಾಷೆಗಳಿಂದ ಎಂದಿದ್ದಾರೆ. ಈ ಭಾಷೆಗಳು ಸಂಸ್ಕೃತಕ್ಕೆ ತಾಯಿಯೂ ಹೌದು ಮತ್ತು ಸಂಸ್ಕೃತ ಭಾಷೆಯ ಅಪೂರ್ವ ವಾಙ್ಮಯದಿಂದ ಸುಪುಷ್ಟಗೊಂಡ ಸಂತಾನ ಭಾಷೆಗಳೂ ಹೌದು.

ಈ ಎಲ್ಲ ಮಹತ್ತ್ವದ ಅಂಶಗಳ ಬಗೆಗೆ, ನಮ್ಮ ಗ್ರಹಿಕೆ – ಮಾನಸಿಕತೆಗಳನ್ನು ನಾವು ಪರಿವರ್ತಿಸಿಕೊಳ್ಳಬೇಕಾಗಿದೆ, ಸರಿಮಾಡಿಕೊಳ್ಳಬೇಕಾಗಿದೆ.

ಕಳೆದ ನೂರು ವರ್ಷಗಳಲ್ಲಿ ನಮ್ಮ ಕನ್ನಡ ಭಾಷೆಯು ಅದೆಷ್ಟು ಬದಲಾಗಿದೆ, ಎಂಬುದರ ಸಿಂಹಾವಲೋಕನದಿಂದ ಹಾಗೂ ಕನ್ನಡ ಕಾವ್ಯದ, ಕಾದಂಬರಿಗಳ, ನಾಟಕಗಳ, ಮುಖ್ಯವಾಗಿ ಪತ್ರಿಕೆಗಳ ಭಾಷೆಯೂ ಹೇಗೆಲ್ಲಾ ಬದಲಾಗಿದೆ ಎಂಬುದನ್ನು ಗಮನಿಸಿದರೆ, ಕಾಲಧರ್ಮದ ಆಯಾಮಗಳ ಪರಿಚಯವಾಗುತ್ತದೆ. ಅಂತೆಯೇ, ವೇದಗಳ ಭಾಷೆಯನ್ನೂ ನಾವು ಪೂರ್ವಗ್ರಹ, ದ್ವೇಷ, ಎಲ್ಲವನ್ನೂ ಬಿಟ್ಟು ಓದಬೇಕು, ಅಧ್ಯಯನ ಮಾಡಬೇಕು, ಅರ್ಥೈಸಬೇಕು. ಅವು ಜ್ಞಾನಸಂಪುಟಗಳು. ಅವು ಸೂತ್ರರೂಪದಲ್ಲಿವೆ, ಸಂಕೇತರೂಪದಲ್ಲಿವೆ. ಕಳೆದ ಒಂದು ಸಾವಿರ ವರ್ಷಗಳ ಸಂಸ್ಕೃತ ಭಾಷೆಗೂ ವೇದಗಳ ಸಂಸ್ಕೃತಕ್ಕೂ ವ್ಯತ್ಯಾಸವಿರುವುದನ್ನೂ ಗಮನಿಸಬೇಕಾಗುತ್ತದೆ.

ವೇದಗಳಲ್ಲಿ ಬರೀ ಗೋಮಾಂಸ ಭಕ್ಷಣೆ, ಕುದುರೆ – ಮೇಕೆಗಳನ್ನು ಬಲಿಕೊಡುವುದು, ಅವುಗಳನ್ನು ತಿನ್ನುವುದು, ತಿನ್ನಿಸುವುದು ಇದೆ ಎಂದಾದರೆ ಅವು ಜ್ಞಾನ ಗ್ರಂಥಗಳು ಹೇಗೆ ಆಗುತ್ತವೆ? ಕೆಲವು ಶ್ಲೋಕಗಳ, ಕೆಲವು ಪದಗಳ ಅಪವ್ಯಾಖ್ಯಾನವನ್ನು ಕೈಬಿಟ್ಟು, ಅವುಗಳನ್ನು ವೇದಗಳ ಒಟ್ಟಾರೆ ಆಶಯಗಳ ಹಿನ್ನೆಲೆಯಲ್ಲಿಯೇ ಗಮನಿಸುವಂತೆ, ನಮ್ಮ ಚಿಂತನೆಯು ಸಾಗಬೇಕಲ್ಲವೇ?

Bhagavad Gita

ಭಗವದ್ಗೀತೆಯನ್ನು ರಚಿಸಿದ ಮಹಾಕವಿ, ಅದರ 17ನೆಯ ಅಧ್ಯಾಯದಲ್ಲಿ ಸತ್ತ್ವ, ರಜೋ ಹಾಗೂ ತಮೋಗುಣಗಳ ತೌಲನಿಕ ವ್ಯಾಖ್ಯಾನ ನೀಡಿದ್ದಾರೆ. ಯಾವ ಆಹಾರ ಸೇವಿಸಿದರೆ ಎಂತಹ ಸ್ವಭಾವ ನಮ್ಮದಾಗುತ್ತದೆ, ಎಂಬುದರ ಆರೋಗ್ಯಶಾಸ್ತ್ರೀಯ ವರ್ಣನೆ, ವಿವರಗಳನ್ನು ಅಲ್ಲಿ ಕಾಣಬಹುದು. ಗೋಮಾಂಸ ಭಕ್ಷಣೆ, ಕುದುರೆ ಮೇಕೆಗಳನ್ನು ತಿನ್ನುವುದು, ತಿನ್ನಿಸುವುದು, ಇಂತಹ ಪುಣ್ಯಕಾರ್ಯಗಳಿಂದ ವೇದಗಳನ್ನು ರಚಿಸಲು ಸಾಧ್ಯ, ಜ್ಞಾನಸಂಪುಟಗಳನ್ನು ಲೋಕಕ್ಕೆ ಕೊಡುವುದು ಸಾಧ್ಯ ಎನ್ನುವುದನ್ನು ಅಂಗೀಕರಿಸೋಣವೇ? ನಿಜವೇ ಆಗಿದ್ದರೆ ಪಶು, ಪಕ್ಷಿ, ಪ್ರಾಣಿ, ಕೀಟ, ಉರಗ ಹೀಗೆ ಸಕಲ ಜೀವಜಂತುಗಳನ್ನೂ ತಿನ್ನುವ ಚೀನೀಯರೇ ವೇದಗಳನ್ನು ರಚಿಸುತ್ತಿದ್ದರು!

ಎರಡೂವರೆ ಸಾವಿರ ವರ್ಷಗಳ ಹಿಂದಿನ ನಮ್ಮ ತಕ್ಷಶಿಲೆ ವಿಶ್ವವಿದ್ಯಾಲಯವಾಗಲೀ, ಒಂದೂವರೆ ಸಾವಿರ ವರ್ಷಗಳ ಹಿಂದಿನ ನಳಂದ ವಿಶ್ವವಿದ್ಯಾಲಯವಾಗಲೀ ಜಗದ್ವಿಖ್ಯಾತ ಜ್ಞಾನಕೇಂದ್ರಗಳು. ಅನೇಕ ದೇಶಗಳಿಂದ ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ಬಂದು ಅಧ್ಯಯನ ಮಾಡುತ್ತಿದ್ದರು. ಇಸ್ಲಾಮೀ ದುರಾಕ್ರಮಣಗಳಿಂದ ನಾಶವಾದ ನಳಂದದ ಗ್ರಂಥಾಲಯದಲ್ಲಿ ತೊಂಬತ್ತು ಲಕ್ಷ ಗ್ರಂಥಗಳಿದ್ದವು ಎಂದು ಸಾಕ್ಷ್ಯಾಧಾರಗಳು ತಿಳಿಸುತ್ತವೆ. ಈ ಗ್ರಂಥಗಳಲ್ಲಿ ಕೇವಲ ಹಸು, ಹೋರಿ, ಕುದುರೆ, ಮೇಕೆಗಳನ್ನು ಕೊಲ್ಲುವುದು ಹೇಗೆ, ಯಾಗಗಳಲ್ಲಿ ಬಲಿ ಕೊಡುವುದು ಹೇಗೆ, ತಿಂದು ತೇಗುವುದು ಹೇಗೆ ಎಂಬಂತಹ ಅನೃತ – ಅಬದ್ಧಗಳೇ ತುಂಬಿದ್ದವು ಎಂದೇ ಆದರೆ, ಸಾವಿರಾರು ವರ್ಷಗಳ ಕಾಲ, ಬೇರೆ ಬೇರೆ ದೇಶಗಳಿಂದ ಇಂತಹ nonsense ಓದಲು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರೇ?

ನಮ್ಮ ಪರಂಪರೆಯನ್ನು ನಮ್ಮ ಶಾಸ್ತ್ರಗ್ರಂಥಗಳನ್ನು ಯುಕ್ತವಾಗಿ ಅಧ್ಯಯನ ಮಾಡಿದವರು ಗೋ ಎಂದರೆ ಬೆಳಕು, ಜ್ಞಾನ ಎಂಬುದಾಗಿ ಅರ್ಥೈಸಬೇಕು ಎನ್ನುತ್ತಾರೆ. ಆದುದರಿಂದ ನಾವು, ನಾವೆಲ್ಲರೂ ಒಂದಿಷ್ಟು ವಿವೇಕದಿಂದ ಸಕಾರಾತ್ಮಕತೆಯಿಂದ ಸೆನ್ಸಿಬಲ್ ಆಗಿ ಯೋಚಿಸಬೇಕು, ವಿಚಾರ ಮಾಡಬೇಕು, ಅಲ್ಲವೇ?

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ನೆಹರೂ ಮನಸ್ಸು ಮಾಡಿದ್ದರೆ, ಗಾಂಧೀ ಹತ್ಯೆಯನ್ನು ತಪ್ಪಿಸಬಹುದಿತ್ತು!

ಸಂಶೋಧನೆ, ವಿಶ್ಲೇಷಣೆಗಳ ಕ್ಷೇತ್ರದಲ್ಲಿ ಆಧುನಿಕ ವಿಜ್ಞಾನವು ನಮಗೆ ಇಂದು ನೂರೆಂಟು ಬಗೆಯ ಅದ್ಭುತವಾದ ಸಾಧನಗಳನ್ನು, ಸಲಕರಣೆಗಳನ್ನು ಒದಗಿಸಿದೆ. ಹೀಗಿದ್ದೂ ಐದು ಸಾವಿರ ವರ್ಷಗಳ ಹಿಂದಿನ ಹರಪ್ಪ – ಮೊಹೆಂಜೋದಾರೋ ಲಿಪಿಯನ್ನು ಇದಮಿತ್ಥಂ ಎನ್ನುವಂತೆ, ಖಚಿತವಾಗಿ, ಸಮರ್ಪಕವಾಗಿ decoding ಮಾಡುವುದು ನಮಗೆ ಇನ್ನೂ ಸಾಧ್ಯವಾಗಿಲ್ಲ.

20ನೆಯ ಶತಮಾನದಲ್ಲಿ ಸನಾತನ ಧರ್ಮ, ಹಿಂದೂ ಸಂಸ್ಕೃತಿಗಳನ್ನು ಸಮೂಲವಾಗಿ ನಾಶ ಮಾಡಲು ಬ್ರಿಟಿಷರು, ಮೆಕಾಲೆವಾದಿಗಳು, ಅಲಿಗಢ ಮೂಲದ ಜಿಹಾದೀ ವಿದ್ವಾಂಸರು, ಕಮ್ಯೂನಿಸ್ಟರು ಇನ್ನಿಲ್ಲದಂತೆ ಪ್ರಯತ್ನಿಸಿದರು. ಈಗಲೂ ಈ ದುಷ್ಟರ ಸಂತತಿ ತನ್ನ ವಿನಾಶಕಾರ್ಯವನ್ನು ಮುಂದುವರಿಸುತ್ತಿದೆ. ಇವೆಲ್ಲವೂ ಜಾಗತಿಕ ಷಡ್ಯಂತ್ರದ ಭಾಗ, ಕೇವಲ ಆಕಸ್ಮಿಕ ದುಷ್ಕಾರ್ಯಗಳಲ್ಲ, ಎಂಬುದನ್ನು ನಮ್ಮ ವಿದ್ವದ್ಸಮೂಹ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಿದೆ.

ಅಲ್ಲದೇ, ಇನ್ನೂ ಒಂದು ಮಾತು ಹೇಳಬಹುದು. ವೇದಕಾಲದಲ್ಲಿ ಗೋ ಮಾಂಸ ಭಕ್ಷಣೆ ಇತ್ತು, ಎಂದೇ ಇಟ್ಟುಕೊಳ್ಳೋಣ. ಅವರಿಗೆ ಗೋ ಮಾಂಸ ಭಕ್ಷಣೆಯ ವಿನಃ ಬೇರೆ ಏನೂ ಕೆಲಸವಿರಲಿಲ್ಲ, ನಿಜ. ಅನಂತರದ ಹತ್ತಾರು ಸಾವಿರ ವರ್ಷಗಳಲ್ಲಿ ನಮ್ಮ ಪರಂಪರೆಯಲ್ಲಿ, ನಮ್ಮ ಆಚಾರ – ವಿಚಾರಗಳಲ್ಲಿ, ಆಹಾರ ಪದ್ಧತಿಯಲ್ಲಿ, ನಮ್ಮ ಧಾರ್ಮಿಕ ನಂಬಿಕೆ – ಶ್ರದ್ಧೆಗಳಲ್ಲಿ ಬದಲಾವಣೆ ಆಗಿರಬಾರದು, ಎಂದೇನಿಲ್ಲವಲ್ಲ. ನಮ್ಮ ಹಿಂದೂ ಧರ್ಮವು ಪರಿವರ್ತನಶೀಲ, ಪ್ರಗತಿಶೀಲ, ಸಮಾಜ-ಮುಖಿ. ಯಾವುದೇ ಬದಲಾವಣೆ, ಯಾವುದೇ ತಿದ್ದುಪಡಿ, ಯಾವುದೇ ವ್ಯತ್ಯಾಸಗಳಿಗೆ – ಸೇರ್ಪಡೆಗಳಿಗೆ ಅವಕಾಶವೇ ಇಲ್ಲದ ಅಬ್ರಹಾಮಿಕ್ ರಿಲಿಜನ್ನುಗಳಂತೆ “ಒಂದೇ ಒಂದು ಗ್ರಂಥ” ಎನ್ನುವ ಪರಿಕಲ್ಪನೆಯೇ ನಮ್ಮಲ್ಲಿಲ್ಲ.

ನಮ್ಮ ಪರಂಪರೆಯ ಸಹಸ್ರಾರು ವರ್ಷಗಳ ಸಾಮಾಜಿಕ ಮೌಲ್ಯಗಳಲ್ಲಿ ಗೋವು ಪಾವಿತ್ರ್ಯದ – ಶ್ರದ್ಧೆಯ ಸಂಕೇತ.

ನಮಗೆ ಇಂದು ಈಗ ಗೋವು ಪೂಜ್ಯ ಎನಿಸಿದರೆ ತಪ್ಪೇ?

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಮಹಾನ್ ಬೌದ್ಧಿಕ ಕ್ಷತ್ರಿಯ ಸೀತಾರಾಮ ಗೋಯಲ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
1 Comment

1 Comment

  1. ಅನೂಪ್ ಕುಲಕರ್ಣಿ

    21 November 2023, 1:53 PM at 1:53 pm

    ಬಹಳ ಅದ್ಭುತ ಲೇಖನ, ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಅಭ್ರಹಮಿಕ್ ರಿಲಿಜನ್ ಹಾಗೂ ಐರೋಪ್ಯರ ಅಪರ್ಥರ್ವಾಗಿ ಅನೇಕ ಅಪಬ್ರಂಶಗಳು ನಡೆದಿವೆ.

Leave a Reply

Your email address will not be published. Required fields are marked *

ಅಂಕಣ

Raja Marga Column : ಕ್ಯಾ. ಪ್ರಾಂಜಲ್‌ ಮಾತ್ರವಲ್ಲ ಅವರ ಹೆತ್ತವರು, ಪತ್ನಿ ಕೂಡಾ ವೀರ ಯೋಧರೆ!

Raja Marga Column : ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರ ಪತ್ನಿಯು ರಾಷ್ಟ್ರಧ್ವಜವನ್ನು ಸ್ವೀಕರಿಸುವಾಗ ತೋರಿದ ದಿಟ್ಟತನ ಹೇಗಿತ್ತು ಎನ್ನುವುದನ್ನು ಸಾಧ್ಯವಾದರೆ ಒಮ್ಮೆ ವಿಡಿಯೊದಲ್ಲಿ ನೋಡಿ.. ಮಗನನ್ನು ಸೈನಿಕನಾಗು ಎಂದು ಕಳುಹಿಸಿಕೊಟ್ಟ ಎಲ್ಲರೂ ನಿಜಾರ್ಥದಲ್ಲಿ ಸೈನಿಕರೆ ಎನ್ನುವುದು ನಮಗೆ ಗೊತ್ತಾಗುತ್ತದೆ.

VISTARANEWS.COM


on

Family of Captain MV Pranjal
Koo
RAJAMARGA Rajendra Bhat

ನಿನ್ನೆ ನಾನು ನೋಡಿದ ಒಂದು ವಿಡಿಯೋ ನನ್ನನ್ನು ಅಲ್ಲಾಡಿಸಿ ಬಿಟ್ಟಿತು. ನನ್ನ ನಿದ್ದೆಯು ಹಾರಿ ಹೋಯಿತು. ಅದು ಮೊನ್ನೆ ಹುತಾತ್ಮನಾದ ಸೈನಿಕ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ (Captain MV Pranjal) ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ವಿಡಿಯೊ. ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್ ಅವರ ಅಪ್ಪ ಎಂ. ವೆಂಕಟೇಶ್ ಮಂಗಳೂರಿನ ಎಂಆರ್‌ಪಿಎಲ್‌ ಎಂಬ ಮಹಾನ್ ಕೈಗಾರಿಕಾ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ (MD in MRPL) ಆಗಿ ನಿವೃತ್ತರಾದವರು. ತಮ್ಮ ಒಬ್ಬನೇ ಮಗನನ್ನು ಆತನ ಆಸೆಯಂತೆ ಸೈನ್ಯಕ್ಕೆ ಕಳುಹಿಸಿ ಕೊಟ್ಟಿದ್ದರು. ವೀರ ಮರಣವನ್ನು ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ ಆಗಿದ್ದರು (Raja Marga Column).

ತ್ರಿವರ್ಣ ಧ್ವಜವನ್ನು ಹೊದ್ದು ಮಗನ ಶವ ಮನೆಯ ಅಂಗಳಕ್ಕೆ ಬಂದಾಗ ಅಪ್ಪ ಎಂ ವೆಂಕಟೇಶ್ ಕಾಲಿಗೆ ಚಪ್ಪಲಿ ಹಾಕದೆ ಭಾರವಾದ ಹೆಜ್ಜೆಗಳನ್ನು ಜೋಡಿಸಿ ತನ್ನ ಪತ್ನಿಯ ಜತೆ ನಡೆದು ಬಂದಿದ್ದರು. ಮಗನ ಮುಖವನ್ನು ನೋಡಿದಾಗ ಒಳಗೆ ದುಃಖ ಸ್ಫೋಟ ಆಗಿತ್ತು. ಅಮ್ಮ ಒಂದರೆ ಕ್ಷಣ ಸೆರಗಿನಿಂದ ಮುಖ ಮುಚ್ಚಿಕೊಂಡರು. ಆದರೆ ಅವರಿಬ್ಬರೂ ಕಣ್ಣೀರು ಹಾಕಲಿಲ್ಲ! ಅದೇ ಹೊತ್ತಿಗೆ ಪ್ರಾಂಜಲ್ ಪತ್ನಿ ಪತಿಯ ಶವಪೆಟ್ಟಿಗೆಯ ಹತ್ತಿರ ನಡೆದು ಬಂದರು. ಪತಿಯ ಮುಖವನ್ನೇ ದಿಟ್ಟಿಸಿ ತುಂಬಾ ಹೊತ್ತು ನಿಂತರು. ಆಕೆಗಿನ್ನೂ ಎಳೆಯ ಪ್ರಾಯ. ಸಂಪ್ರದಾಯದಂತೆ ಹುತಾತ್ಮ ಪತಿಯ ಶವಕ್ಕೆ ಹೊದ್ದ ತ್ರಿವರ್ಣ ಧ್ವಜವನ್ನು ಚಂದವಾಗಿ ಮಡಚಿ ಸೇನಾ ಮುಖ್ಯಸ್ಥರು ಆಕೆಯ ಕೈಗೆ ನೀಡಿದರು. ಆಗಲೂ ಆಕೆಯ ಮುಖದಲ್ಲಿ ಅಗಾಧವಾದ ಪ್ರಶಾಂತತೆ. ಒಂದು ಬಿಕ್ಕಳಿಕೆ ಕೂಡ ಇಲ್ಲ. ಸೇನಾ ಗೌರವ ಸಲ್ಲಿಕೆ ಆಗಿ ಶವ ಪೆಟ್ಟಿಗೆ ಹೊರಡುವ ತನಕವೂ ಆಕೆಯ ಮುಖದಲ್ಲಿ ಅದೇ ಪ್ರಶಾಂತ ಭಾವ! ಆಕೆ ತನ್ನ ಅತ್ತೆ ಮಾವನಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು! ಆಕೆ ತೋರಿದ ಧೈರ್ಯ, ತಾಳ್ಮೆಗಳನ್ನು ದೇಶವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

Family of Captain MV Pranjal
ಹುತಾತ್ಮ ಕ್ಯಾಪ್ಟನ್‌ ಎಂವಿ ಪ್ರಾಂಜಲ್‌ ಪಾರ್ಥಿವ ಶರೀರದ ಮುಂದೆ ಕುಟುಂಬ

ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಬಗ್ಗೆ, ಅವರ ದೇಶಪ್ರೇಮದ ಬಗ್ಗೆ ಈಗಾಗಲೇ ಸಾಕಷ್ಟು ಜನ ಬರೆದಿದ್ದಾರೆ. ಮಾಧ್ಯಮಗಳೂ ವರದಿ ಮಾಡಿವೆ. ಆದರೆ ಅಂತಹ ಸೈನಿಕರ ಕುಟುಂಬದ ಬಗ್ಗೆ, ಅವರ ಪತ್ನಿಯ ಬಗ್ಗೆ ಯಾರೂ ಹೆಚ್ಚು ಬರೆದಿಲ್ಲ. ಅವೆಲ್ಲವೂ ಸೈನಿಕರ ತ್ಯಾಗ ಮತ್ತು ಬಲಿಗಾನಗಳಷ್ಟೆ ಪ್ರಖರವಾದ ಕಥೆಗಳು.

ಹುತಾತ್ಮ ಸೈನಿಕರ ಪತ್ನಿ ಮತ್ತು ತಾಯಂದಿರು ಅಳುವುದಿಲ್ಲ!

ನಾನು ಪರಮವೀರ ಚಕ್ರ, ಶೌರ್ಯ ಚಕ್ರ ಮೊದಲಾದ ಸೈನ್ಯದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳ ಪ್ರಸಾರವನ್ನು ಟಿವಿ ಪರದೆಯ ಮೇಲೆ ನೋಡಿದ್ದೇನೆ. ಅಲ್ಲಿ ಕೂಡ ಸೈನಿಕರ ತಾಯಂದಿರು ಮತ್ತು ಹೆಂಡತಿಯರು ಬಹಿರಂಗವಾಗಿ ಅಳುವುದಿಲ್ಲ. ಹಾಗೆಂದು ಅವರಿಗೆ ಭಾವನೆಗಳು ಇಲ್ಲ, ಪ್ರೀತಿ ಇಲ್ಲ ಎಂದರ್ಥ ಅಲ್ಲ. ಅಳಬಾರದು ಎಂಬ ನಿಯಮವೂ ಇಲ್ಲ. ಆದರೆ ಕಣ್ಣೀರು ಹಾಕಿದರೆ ಹುತಾತ್ಮ ಯೋಧರಿಗೆ ಅಪಮಾನ ಎಂದು ಅವರು ಮಾನಸಿಕವಾಗಿ ಸ್ಟ್ರಾಂಗ್ ಆಗುತ್ತಾರೆ. ಆ ಕ್ಷಣಗಳು ನಮ್ಮ ಕಣ್ಣನ್ನು ಒದ್ದೆ ಮಾಡುತ್ತವೆ. ಆದರೆ ಅವರು ತಪ್ಪಿಯೂ ಆಳುವುದಿಲ್ಲ. ಉಜ್ವಲ ರಾಷ್ಟ್ರಪ್ರೇಮದ ಪರಾಕಾಷ್ಠೆ ಅದು. ಮುಂದೆ ಸರಕಾರವು ಅವರಿಗೆ ಪಿಂಚಣಿ ನೀಡುತ್ತದೆ ಎಂದು ನಾವು ಯೋಚನೆ ಮಾಡಿ ಅವರನ್ನು ಮರೆತೇ ಬಿಡುತ್ತೇವೆ. ಆದರೆ ಅವರ ಬದುಕು ಮುಂದೆ ಎಷ್ಟು ಶೂನ್ಯ ಆಗಿರುತ್ತದೆ, ಅವರೆಷ್ಟು ನೋವು ಪಡುತ್ತಾರೆ ಅನ್ನುವುದು ನಮ್ಮ ಕಲ್ಪನೆಗೆ ಮೀರಿದ್ದು. ಅವರ ಬಗ್ಗೆ ಯೋಚನೆ ಮಾಡಿದಾಗ ನಮ್ಮ ಎದೆ ಭಾರವಾಗುತ್ತದೆ.

Family of Captain MV Pranjal
ಪ್ರಾಂಜಲ್‌ ಕುಟುಂಬ

ಇದ್ಯಾವುದೂ ಕಟ್ಟು ಕಥೆ ಅಲ್ಲ!

ಹುತಾತ್ಮ ಯೋಧರ ಕುಟುಂಬದ ಬಗ್ಗೆ ಅಧ್ಯಯನ ಮಾಡುತ್ತ ಮುಂದುವರೆದಾಗ ನನಗೆ ಅಂಥ ನೂರಾರು ಕಥೆಗಳು ದೊರೆತವು. ಅದ್ಯಾವುದೂ ಕಟ್ಟುಕಥೆಗಳು ಅಲ್ಲ. ಸಿನೆಮಾ ಕಥೆಗಳು ಅಲ್ಲ. ಅವುಗಳ ಹಿಂದೆ ಭಾವ ಸ್ಪರ್ಶದ ಕಣ್ಣೀರು ಇದೆ. ತ್ಯಾಗದ, ಬಲಿದಾನದ, ರಾಷ್ಟ್ರಪ್ರೇಮದ ಶಿಖರಗಳು ಇವೆ. ಅವುಗಳಲ್ಲಿ ಕೆಲವನ್ನು ನಾನು ತಮ್ಮ ಮುಂದೆ ಇಡಬೇಕು. ಅವರು ಎದುರು ಸಿಕ್ಕರೆ ಖಂಡಿತವಾಗಿ ಅವರ ಪಾದ ಸ್ಪರ್ಶ ಮಾಡಬೇಕು ಎಂದು ನನಗೆ ಅನ್ನಿಸುತ್ತದೆ.

 Captain MV Pranjal

1. ಹರಿಯಾಣದ ರಾಣಾ ಸಿಂಘ್ ನಿವೃತ್ತ ಸೈನಿಕ. ಆತನ ಮಗ ಹವಾಲ್ದಾರ್ ಜೈಪ್ರಕಾಶ್ ಸಿಂಘ್ ಯುದ್ಧದಲ್ಲಿ ಹುತಾತ್ಮ ಆದಾಗ ಶವವು ಗುರುತು ಸಿಗದಷ್ಟು ವಿಕಾರ ಆಗಿತ್ತು. ಯುದ್ಧ ಭೂಮಿಯಲ್ಲಿಯೇ ದಹನ ನಡೆಸಿ ಮನೆಗೆ ಚಿತಾಭಸ್ಮ ಮಾತ್ರ ಬಂದಿತ್ತು. ಆಗ ಅಪ್ಪ ನಿವೃತ್ತ ಸೈನಿಕ ಅಳಲಿಲ್ಲ. ಚಿತಾಭಸ್ಮ ತಂದವರಿಗೆ ‘ನನ್ನ ಮಗ ಎದೆಗೆ ಗುಂಡೇಟು ತಿಂದು ಸತ್ತನಲ್ಲ, ಅಷ್ಟು ಸಾಕು. ಅವನ ಬೆನ್ನಿಗೆ ಗುಂಡೇಟು ಬಿದ್ದಿದ್ದರೆ ಅವನು ನನ್ನ ಮಗನೇ ಅಲ್ಲ ಎನ್ನುತ್ತಿದ್ದೆ!’ ಎಂದು ಬಿಟ್ಟಿದ್ದರು. ಅಳುತ್ತಿದ್ದ ಹೆಂಡತಿಯನ್ನು ಅಪ್ಪಿಕೊಂಡು ಅವರು ಹೇಳುತ್ತಿದ್ದರು – ಅಳಬೇಡ ಇವಳೇ, ಧೀರರು ಮಾತ್ರ ದೇಶಕ್ಕಾಗಿ ಹುತಾತ್ಮರಾಗುವ ಅವಕಾಶ ಪಡೆಯುತ್ತಾರೆ!

2. ಕ್ಯಾಪ್ಟನ್ ಅಮೋಲ್ ಕಾಲಿಯಾ ಶವ ಪೆಟ್ಟಿಗೆ ಮನೆಗೆ ಬಂದಿದ್ದಾಗ ಆತನ ಅಪ್ಪ ‘ಮಗು, ನಿನ್ನನ್ನು ನಾನು ಕಿರಿಯ ಮಗ ಎಂದು ಕೊಂಡಿದ್ದೆ. ಆದರೆ ನೀನು ಇಷ್ಟೊಂದು ವೀರ ಎಂದು ಗೊತ್ತಿರಲಿಲ್ಲ. ಇಂದು ನೀನು ದೇಶಕ್ಕೇ ಹಿರಿಯ ಮಗ ಆಗಿದ್ದೀಯಾ ‘ ಎಂದು ಹೇಳಿ ಸೆಲ್ಯೂಟ್ ಹೊಡೆದಿದ್ದರು.

3. ಗ್ರೆನೇಡಿಯರ್ ಅಮರ್ ದೀಪ್ ಸಿಂಘ್ ದೇಶಕ್ಕಾಗಿ ಹುತಾತ್ಮ ಆಗಿದ್ದ. ಅವನ ಪಾರ್ಥಿವ ಶರೀರ ತ್ರಿವರ್ಣ ಧ್ವಜವನ್ನು ಹೊದ್ದು ಮನೆಗೆ ಬಂದಾಗ ಅಪ್ಪ ಹೇಳಿದ್ದು – ನನ್ನ ಮಗ ಯಾವಾಗಲೂ ಸೂಚನೆ ಕೊಡದೆ ಮನೆಗೆ ಬಂದು ನಮಗೆಲ್ಲ ಶಾಕ್ ಕೊಡುತ್ತಿದ್ದ. ಈ ಬಾರಿಯೂ ಸೂಚನೆ ಕೊಡದೆ ಬಂದಿದ್ದಾನೆ. ಆದರೆ ಹೀಗೆ ಬರುತ್ತಾನೆ ಎಂದು ಗೊತ್ತಿರಲಿಲ್ಲ.

4. ಸಿಖ್ ರೆಜಿಮೆಂಟ್ ಸೈನಿಕ ಜಸ್ವಿಂದರ್ ಸಿಂಘ್ ತನ್ನ ಕುರುಡು ಅಪ್ಪನಿಗೆ ಮತ್ತು ಅಮ್ಮನಿಗೆ ಧೈರ್ಯ ಹೇಳಿ ಯುದ್ಧಕ್ಕೆ ತೆರಳಿದ್ದ. ಹುತಾತ್ಮ ಆಗುವ ಹಿಂದಿನ ದಿವಸ ಆತ ಅಮ್ಮನಿಗೆ ಫೋನ್ ಮಾಡಿ ‘ಅಮ್ಮ, ಧೈರ್ಯ ಕೆಡಬೇಡಿ. ಇಂತಹ ನೂರಾರು ಸೈನಿಕರ ಜೊತೆಗೆ ಕಾಶ್ಮೀರದಲ್ಲಿ ಮೂರು ವರ್ಷ ಹೋರಾಡಿ ಬಂದವನು ನಾನು. ಆತಂಕ ಮಾಡಬೇಡಿ’ ಅಂದಿದ್ದ. ಅಂತಹ ಮಗನ ಪಾರ್ಥಿವ ಶರೀರವು ಮನೆಯ ಅಂಗಳಕ್ಕೆ ಬಂದಾಗ ಆಕೆಯ ಸ್ಥಿತಿ ಹೇಗಿರಬಹುದು?

ಆಕೆಯ ಕುರುಡು ಗಂಡ ತನ್ನ ಹೆಂಡತಿಗೆ ‘ಅಳಬೇಡ. ಶತ್ರುಗಳನ್ನು ತಡೆಯಲು ಯಾರಾದರೂ ಸಾಯಲೇ ಬೇಕು. ನಮ್ಮ ಮಗನಿಗೆ ಅಂತಹ ಅವಕಾಶ ಸಿಕ್ಕಿದೆ!’ ಎಂದು ಹೇಳಿ ಸಮಾಧಾನ ಮಾಡಿದ್ದರು.

Final procession of Captain MV Pranjal

5. ಕೇವಲ 24ರ ಹರೆಯದಲ್ಲಿ ಪ್ರಾಣ ಕಳೆದುಕೊಂಡು ಹುತಾತ್ಮನಾದ ಸೈನಿಕ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆಯ ಅಪ್ಪ ಮಗನನ್ನು ಯುದ್ಧದಲ್ಲಿ ಕಳೆದುಕೊಂಡಿದ್ದರು. ನಂತರ ಮಗನಿಗೆ ‘ಈಗ ನೀನು ನನ್ನ ಮಾರ್ಗದರ್ಶಕ. ನನಗೆ ಸಮಸ್ಯೆಗಳು ಬಂದಾಗ ನಿನ್ನ ಫೋಟೋ ಮುಂದೆ ನಿಂತು ನಿನ್ನ ನಗು ಮುಖ ನೋಡುತ್ತೇನೆ. ತಕ್ಷಣ ನನಗೆ ಸಮಸ್ಯೆ ಎದುರಿಸುವ ಶಕ್ತಿ ಬರುತ್ತದೆ!’ ಎನ್ನುತ್ತಿದ್ದರು.

6. ‘ಬುಲೆಟ್ ಮೇಲೆ ನನ್ನ ಹೆಸರು ಬರೆದಿದ್ದರೆ ನನ್ನನ್ನು ಯಾರೂ ಉಳಿಸಲು ಸಾಧ್ಯ ಇಲ್ಲ!’ ಎಂದು ಯಾವಾಗಲೂ ಹೇಳುತ್ತಿದ್ದ ಗ್ರೇನೆಡಿಯರ್ ನಾಯಕ್ ರಾಜಕುಮಾರ್ ಪೂನಿಯಾ ತೀರಿ ಹೋದಾಗ ಆತನ ಹೆಂಡತಿಯ ಪ್ರಾಯ ಕೇವಲ 19 ವರ್ಷ. ಆಕೆಯೂ ಸೈನಿಕರ ಕುಟುಂಬದಿಂದ ಬಂದವಳು. ನನ್ನ ಗಂಡನ ಸಾವಿಗೆ ಕಣ್ಣೀರು ಸುರಿಸುವುದೇ ಇಲ್ಲ ಎಂದು ಹೇಳಿ ಎದೆ ಗಟ್ಟಿ ಮಾಡಿಕೊಂಡಳು .ಆಕೆ ಈಗ ಗಂಡನ ಕೃಷಿ ಭೂಮಿಯಲ್ಲಿ ಟ್ರಾಕ್ಟರ್ ಓಡಿಸಿ ಕೃಷಿಯನ್ನು ಮಾಡುತ್ತಿದ್ದಾರೆ. ತನ್ನ ಅತ್ತೆ, ಮಾವನಿಗೆ ಆಧಾರ ಆಗಿದ್ದಾಳೆ!

7. ರೈಫಲ್ ಮ್ಯಾನ್ ಯೋಗಿಂದ್ರ ಸಿಂಘ್ ಭಯೋತ್ಪಾದಕರ ಜೊತೆ ಹೋರಾಡಿ ಪ್ರಾಣವನ್ನು ಕಳೆದುಕೊಂಡಾಗ ಆತನ ವಯಸ್ಸು ಕೇವಲ 23! ಆತನಿಗೆ ಮದುವೆ ನಿಶ್ಚಯ ಆಗಿತ್ತು. ಮದುಮಗನಾಗಿ ದಿಬ್ಬಣ ತೆಗೆದುಕೊಂಡು ಬರಬೇಕಾಗಿದ್ದ ಆತ ತ್ರಿವರ್ಣ ಧ್ವಜ ಸುತ್ತಿಕೊಂಡು ಬಂದಿದ್ದ. ಆತನಿಗೆ ನಿಶ್ಚಯ ಆಗಿದ್ದ ಹುಡುಗಿಯು ಅಲ್ಲಿಗೆ ಬಂದು ಕಣ್ಣೀರು ಹಾಕದೆ ಬಳೆ ಒಡೆದುಕೊಂಡು ಹೋಗಿದ್ದಳು. ಮುಂದೆ ಆಕೆ ಮದುವೆಯೇ ಆಗಲಿಲ್ಲ!

8. ಸಿಪಾಯಿ ಯಶವಂತ್ ಸಿಂಘ್ ಹುತಾತ್ಮನಾದಾಗ ಆತನ ವಯಸ್ಸು ಕೇವಲ 20 ವರ್ಷ! ‘ನನ್ನ ಮಗ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾನೆ. ನಾನು ಅಳಬಾರದು. ನನಗೆ ಅವನ ಬಗ್ಗೆ ಹೆಮ್ಮೆ ಇದೆ ‘ ಎನ್ನುತ್ತಿದ್ದರು ಆತನ ಅಪ್ಪ ಮತ್ತು ಅಮ್ಮ. ತಾವು ಸೈನಿಕನ ಹೆತ್ತವರು ಎನ್ನುವ ಹೆಮ್ಮೆ ಅವರ ಕಣ್ಣಲ್ಲಿ ಯಾವಾಗಲೂ ಇಣುಕುತ್ತಿತ್ತು.9

9. ಕಾರ್ಗಿಲ್ ಹೋರಾಟದ ವೇಳೆ ಕಕ್ಸಾರ್ ಪ್ರದೇಶದಲ್ಲಿ ಹೋರಾಡುತ್ತಿದ್ದ ಒಂದೇ ಮನೆಯ ನಾಲ್ಕು ಜನ ಸೈನಿಕರು ಹುತಾತ್ಮ ಆಗಿದ್ದರು. ಅಂತಹ ಸೈನಿಕರ ತಾಯಿಯ ಹೃದಯವನ್ನು ಸಂತೈಸುವವರು ಯಾರು?

ಇದನ್ನೂ ಓದಿ: Raja Marga Column : ಕನ್ನಡ ಶಾಲೆಗಳೆಂಬ ಭೂಲೋಕದ ಸ್ವರ್ಗಗಳು!

ಹಾಳೆಕಟ್ಟೆ( ಕಲ್ಯ) ಶಾಲೆಯಲ್ಲಿ ಪ್ರಾಂಜಲ್ ಸ್ಮಾರಕಕ್ಕೆ ಸಿದ್ಧತೆ

ಯಾವುದೇ ಸೈನಿಕ ಹುತಾತ್ಮ ಆದಾಗ ಆತನ ಕುಟುಂಬ ಮಾತ್ರವಲ್ಲ ಇಡೀ ದೇಶವೇ ಆತನ ಪರವಾಗಿ ನಿಲ್ಲುವುದು ನಮ್ಮ ಭಾರತದ ಸಂಸ್ಕೃತಿ. ಈ ಬಾರಿಯೂ ಹಾಗೇ ಆಗಿದೆ. ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಬಲಿದಾನದ ಬಗ್ಗೆ ಇಡೀ ದೇಶ, ಅದರಲ್ಲಿಯೂ ಕನ್ನಡ ನಾಡು ದುಃಖತಪ್ತ ಆಗಿದೆ. ದೇಶದಾದ್ಯಂತ ಸಂಸ್ಮರಣ ಕಾರ್ಯಕ್ರಮಗಳು ನಡೆಯುತ್ತಿವೆ.

Kallya Halekatte School

ನನ್ನ ಕಾರ್ಕಳ ತಾಲೂಕಿನ ಹಾಳೆಕಟ್ಟೆಯ ಸರಕಾರಿ ಪ್ರಾಥಮಿಕ ಶಾಲೆಯು ಈ ವರ್ಷ ಶತಮಾನೋತ್ಸವ ಆಚರಣೆ ಮಾಡುತ್ತಿದೆ. ಆ ಶತಮಾನೋತ್ಸವ ಆಚರಣಾ ಸಮಿತಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರ ಸ್ಮಾರಕವನ್ನು ಶಾಲಾ ಮುಂಭಾಗದಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಇಂದು (ನವೆಂಬರ್‌ 29) ಸಂಜೆ ನಾಲ್ಕು ಗಂಟೆಗೆ ಅದರ ಭೂಮಿ ಪೂಜೆ. ಕಾರ್ಕಳದ ಶಾಸಕ ವಿ ಸುನೀಲ್ ಕುಮಾರ್ ಮತ್ತು ಇಬ್ಬರು ನಿವೃತ್ತ ಸೈನಿಕರು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ. ಈ ಭಾಗದ ಶಾಲೆಗಳಲ್ಲಿ ಇದು ಮೊದಲನೆಯ ಪ್ರಯತ್ನ. ಅದಕ್ಕಾಗಿ ಅವರನ್ನು ಅಭಿನಂದಿಸೋಣ. ಏನಂತೀರಿ?

Continue Reading

ಅಂಕಣ

Raja Marga Column : ಕನ್ನಡ ಶಾಲೆಗಳೆಂಬ ಭೂಲೋಕದ ಸ್ವರ್ಗಗಳು!

Raja Marga Column: ಕನ್ನಡ ಶಾಲೆಗಳು ಅಂದರೆ ನಾಲ್ಕು ಗೋಡೆಗಳ ಕಟ್ಟಡ ಮಾತ್ರ ಅಲ್ಲ, ಅದು ಇಮೋಷನ್! ಹಿಂದೆ ಭೂಮಿಯ ಮೇಲಿನ ಸ್ವರ್ಗದಂತಿದ್ದ ಈ ಶಾಲೆಗಳು ಈಗ ಹೇಗಿವೆ ಎನ್ನುವುದನ್ನು ನೀವೇ ಕಲ್ಪಿಸಿಕೊಳ್ಳಿ.

VISTARANEWS.COM


on

Kannada School Children
Koo
RAJAMARGA Rajendra Bhat

ನಾನು ಪ್ರಾಥಮಿಕ ಶಿಕ್ಷಣ (Primary Education) ಪಡೆದದ್ದು ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ (Kannada Medium School) ಅನ್ನೋದನ್ನು ಮೊದಲಾಗಿ ಹೆಮ್ಮೆಯಿಂದ ಹೇಳುತ್ತೇನೆ. ನಾನು ಓದಿದ್ದು ಕಾರ್ಕಳ ತಾಲೂಕಿನ ಕಾಬೆಟ್ಟು ಶಾಲೆಯಲ್ಲಿ. ನಾನು ಕಲಿಯುವಾಗ (1970-77) ನನ್ನ ಪ್ರಾಥಮಿಕ ಶಾಲೆಯಲ್ಲಿ (Primary School) 500+ ಮಕ್ಕಳು ಇದ್ದರು. ಒಂದು ಡಜನ್ ಅತ್ಯದ್ಭುತವಾದ ಶಿಕ್ಷಕರು ಇದ್ದರು. ಶಾಲೆಯಲ್ಲಿ ಎಲ್ಲ ಸಮುದಾಯದ ಮಕ್ಕಳು ಇದ್ದರೂ ಎಲ್ಲರೂ ಕನ್ನಡದಲ್ಲಿ ಮಾತಾಡುತ್ತಿದ್ದರು. ಈಗ ಸರಕಾರವು ಶಾಲೆಯಲ್ಲಿ ಕೊಡುವ ಯಾವ ಉಚಿತ ಸೌಲಭ್ಯವೂ ಆಗ ಇರಲಿಲ್ಲ. ಓದುವ, ಬರೆಯುವ ಪುಸ್ತಕಗಳು, ಯೂನಿಫಾರ್ಮ್, ಮಧ್ಯಾಹ್ನದ ಬಿಸಿ ಊಟ, ಬ್ಯಾಗ್ ಯಾವುದೂ ಉಚಿತ ಇರಲಿಲ್ಲ. ಆದರೆ ಅತ್ಯುತ್ತಮ ಶಿಕ್ಷಕರು ಇದ್ದ ಕಾರಣ ಆ ಉಚಿತಗಳ ಬಗ್ಗೆ ಯಾರೂ ಆಸೆ ಪಡುತ್ತಿರಲಿಲ್ಲ. (Raja Marga Column)

ಜಾನೇ ಕಹಾನ್ ಗಯೇ ಓ ದಿನ್..

ಮಧ್ಯಾಹ್ನ ಎಲ್ಲರೂ ಮನೆಯಿಂದ ಬುತ್ತಿ ಊಟ ತೆಗೆದುಕೊಂಡು ಬರುವುದು ಅಭ್ಯಾಸ. ಹತ್ತಿರ ಮನೆ ಇದ್ದವರು ಓಡಿ ಹೋಗಿ ಮನೆಯಲ್ಲಿ ಊಟ ಮಾಡಿ ಬರುತ್ತಿದ್ದರು. ಒಬ್ಬರ ಬುತ್ತಿಯಲ್ಲಿ ಒಬ್ಬರು ಕೈ ಹಾಕಿ ಕಿತ್ತಾಡಿ ತಿಂದರೆ ಆ ಊಟ ಜೀರ್ಣ ಆಗುತ್ತಿತ್ತು. ನಮ್ಮ ಶಾಲೆಯ ಒಬ್ಬೊಬ್ಬ ಶಿಕ್ಷಕರೂ ಒಂದೊಂದು ಮೌಲ್ಯವೇ ಆಗಿದ್ದರು. ಮಧ್ಯಾಹ್ನ ಊಟ ತಾರದ ಮಕ್ಕಳಿಗೆ ಟೀಚರ್ ತಮ್ಮ ಬುತ್ತಿಯಿಂದ ಕೈ ತುತ್ತು ಕೊಟ್ಟು ಊಟ ಮಾಡಿಸುತ್ತಿದ್ದರು! ಶಾಲೆಯಲ್ಲಿ ಪ್ರತೀ ಶುಕ್ರವಾರ ಭಜನೆ ಇತ್ತು. ಎಲ್ಲ ಸಮುದಾಯದ ಮಕ್ಕಳೂ ಭಜನೆಗೆ ಭಕ್ತಿಯಿಂದ ಕುಳಿತುಕೊಂಡು ಭಜನೆ ಹಾಡುತಿದ್ದರು. ವರ್ಷಕ್ಕೊಮ್ಮೆ ಶಾರದಾ ಪೂಜೆ ಇದ್ದೇ ಇರುತ್ತಿತ್ತು.

ಆಲದ ಮರದ ಬುಡದ ಬಯಲು ತರಗತಿಗಳು

ದಿನಕ್ಕೊಮ್ಮೆ ಶಿಕ್ಷಕರು ಮಕ್ಕಳನ್ನು ಶಾಲೆಯ ಹೊರಗಿರುವ ಅಶ್ವತ್ಥ ವೃಕ್ಷದ ಬುಡದಲ್ಲಿ ಇರುವ ಕಟ್ಟೆಯ ಮೇಲೆ ಕೂರಿಸಿ ಪಾಠವನ್ನು ಮಾಡುತ್ತಿದ್ದರು. ಅದು ವಿದ್ಯಾರ್ಥಿಗಳಿಗೆ ನಿಜವಾದ ಜೀವನ ಪಾಠ ಆಗಿತ್ತು. ಶಿಕ್ಷಣ ಅನ್ನುವುದು ಆಗ ಪರೀಕ್ಷೆಗೆ ತಯಾರಿ ಆಗಿರಲಿಲ್ಲ. ಅದು ಬದುಕಿಗೇ ಸಿದ್ಧತೆ ಆಗಿರುತ್ತಿತ್ತು. ಶಿಕ್ಷಕರು ತಪ್ಪಿಯೂ ತರಗತಿಯಲ್ಲಿ ಪರೀಕ್ಷೆಗಳ ಬಗ್ಗೆ ಮಾತಾಡುತ್ತಿರಲಿಲ್ಲ. ಪರೀಕ್ಷೆಯಲ್ಲಿ ಎಷ್ಟು ಅಂಕ ಬಂದರೂ ಹೆತ್ತವರು ಪ್ರಗತಿ ಪತ್ರದಲ್ಲಿ ಕಣ್ಣು ಮುಚ್ಚಿ ಸಹಿ ಮಾಡುತ್ತಿದ್ದರು. ಶಾಲೆಯಲ್ಲಿ ಅವನು ಫಸ್ಟ್, ಇವನು ಸೆಕೆಂಡ್ ಎಂದು ಯಾರೂ ಮಾತಾಡಿದ್ದು ನನಗೆ ಗೊತ್ತೇ ಇರಲಿಲ್ಲ.

Government School Children

ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕೋತ್ಸವ ಅದು ಅದ್ಭುತ. ಅದು ಇಡೀ ಊರಿನ ಉತ್ಸವ ಆಗಿತ್ತು. ರಾತ್ರಿ ಇಡೀ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳು. ಪೂರ್ವ ವಿದ್ಯಾರ್ಥಿಗಳ ಸಾಮಾಜಿಕ ನಾಟಕ. ಅದಕ್ಕಾಗಿ ಕನಿಷ್ಠ ಒಂದೂವರೆ ತಿಂಗಳ ರಿಹರ್ಸಲ್ ಇದ್ದೇ ಇರುತ್ತಿತ್ತು. ಏಳು ವರ್ಷಗಳ ಕಾಲ ಏಳು ಪಾತ್ರಗಳು ನಮ್ಮೊಳಗೆ ಇಳಿಯುತ್ತ ಹೋಗಿದ್ದವು. ಲವನಿಂದ ಆರಂಭ ಮಾಡಿ ಸತ್ಯ ಹರಿಶ್ಚಂದ್ರನವರೆಗೆ!

ಸ್ಪರ್ಧೆಯೇ ಇಲ್ಲದ ಮುಕ್ತವಾದ ಕಲಿಕೆಯ ವಾತಾವರಣ

ಒಬ್ಬ ಶಿಕ್ಷಕರೂ ಸಿಲೆಬಸ್ ಮುಗಿಸಲು ತೊಂದರೆ ಆಯ್ತು ಎಂದು ಗೊಣಗಿದ್ದು ನಮಗೆ ಗೊತ್ತೇ ಇಲ್ಲ! ಆದರೂ ಸಿಲೆಬಸ್ ಮುಗಿಯುತ್ತಿತ್ತು. ತರಗತಿಯಲ್ಲಿ ಫಸ್ಟ್ ಬರಬೇಕು ಎಂದು ಯಾವ ವಿದ್ಯಾರ್ಥಿಯೂ ರೇಸಿಗೆ ನಿಲ್ಲುತ್ತಿರಲಿಲ್ಲ. ವರ್ಷಕ್ಕೆ ನೂರಾರು ಸ್ಪರ್ಧೆಗಳು ನಡೆಯುತ್ತಿದ್ದವು. ಅಲ್ಲಿ ಕೂಡ ಭಾಗವಹಿಸುವುದೇ ಖುಷಿ. ಬಹುಮಾನದ ಬಗ್ಗೆ ಯಾರೂ ಯೋಚನೆ ಮಾಡಿದ್ದು ಇಲ್ಲ. ಶಾಲೆಗಳಲ್ಲಿ ಶ್ರೀಮಂತ ಮತ್ತು ಬಡವರ ಮಕ್ಕಳು ಎಲ್ಲರೂ ಇದ್ದರು. ಆದರೆ ಬೇಧ ಭಾವ ಇರಲಿಲ್ಲ. ಸಮಾನತೆಯೇ ಅಲ್ಲಿ ಮೂಲಮಂತ್ರ ಆಗಿತ್ತು.

Kannada School Children

ಶಾಲೆಗಳಲ್ಲಿ ಒಳ್ಳೆಯ ಕನ್ನಡ ಅಧ್ಯಾಪಕರು ಇದ್ದರು. ವಿದ್ಯಾರ್ಥಿಗಳು ದೇವರಾಣೆಗೂ ಯಾವುದನ್ನೂ ಬಾಯಿಪಾಠ ಮಾಡುತ್ತಿರಲಿಲ್ಲ. ಎಲ್ಲವನ್ನೂ ಶಿಕ್ಷಕರು ಅರ್ಥ ಮಾಡಿಸುತ್ತಿದ್ದರು. ಶಿಕ್ಷಕರೇ ಅಭಿನಯ ಮಾಡಿ ಪಾಠ ಮಾಡುವ ವ್ಯವಸ್ಥೆಯು ತುಂಬಾ ಚೆನ್ನಾಗಿತ್ತು. ಶಿಕ್ಷಕರ ಬಗ್ಗೆ ಗೌರವದ ಭಾವನೆ ಹೆಚ್ಚಿತ್ತು. ಶಿಕ್ಷಕರು ತರಗತಿಗೆ ಬರುವಾಗ ಬೆತ್ತವನ್ನು ತರುತ್ತಿದ್ದರು. ಆದರೆ ಹೊಡೆದದ್ದು ಕಡಿಮೆ. ಶಿಕ್ಷಕರು ಒಂದೆರಡು ಪೆಟ್ಟು ಕೊಟ್ಟರೂ ಹೆತ್ತವರು ಶಾಲೆಗೆ ಬಂದು ‘ಯಾಕೆ ಹೊಡೆದದ್ದು?’ ಎಂದು ಕೇಳುತ್ತಿರಲಿಲ್ಲ. ಶಿಕ್ಷಕರಿಗೆ ಹೆಚ್ಚು ದಾಖಲೆಗಳ ನಿರ್ವಹಣೆ ಇರಲಿಲ್ಲ. ತುಂಬಾ ಸುತ್ತೋಲೆ ಇರಲಿಲ್ಲ. ಇಲಾಖೆಗಳ ಟಾರ್ಗೆಟ್ ಇರಲಿಲ್ಲ. ಆದರೆ ವರ್ಷಕ್ಕೊಮ್ಮೆ ತಪಾಸಣೆ ಜೋರಿತ್ತು. ಶಿಕ್ಷಕರು ಆತಂಕ ಇಲ್ಲದೇ ನೆಮ್ಮದಿಯಿಂದ ಪಾಠ ಮಾಡುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಕರಿಗೆ ಶಾಲೆಯೇ ದೇವಸ್ಥಾನ ಆಗಿತ್ತು. ನನ್ನ ಅಮ್ಮ ಅದೇ ಶಾಲೆಯಲ್ಲಿ ಟೀಚರ್ ಆಗಿದ್ದರು. ಕೇವಲ 15 ದಿನ ಹೆರಿಗೆ ರಜೆ ಹಾಕಿ 16ನೆ ದಿನ ಶಾಲೆಗೆ ಬಂದು ಪಾಠ ಮಾಡಿದವರು ಅವರು!

ಶಾಲೆಗೆ ದೊಡ್ಡ ಕ್ರೀಡಾಂಗಣ

ಶಾಲೆಗೆ ದೊಡ್ಡ ಕ್ರೀಡಾಂಗಣ ಇತ್ತು. ದಿನಕ್ಕೊಂದು ಆಟದ ಪೀರಿಯಡ್ ಇರುತ್ತಿತ್ತು. ಪರೀಕ್ಷೆಗಳ ದಿನಗಳಲ್ಲಿ ಕೂಡ ಮಕ್ಕಳು ಆಟ ಆಡ್ತಾ ಇದ್ದರು. ಶಾಲೆಯಲ್ಲಿ ದೊಡ್ಡ ಗ್ರಂಥಾಲಯ, ತರಕಾರಿ ತೋಟ, ವಿಜ್ಞಾನ ಲ್ಯಾಬ್ ಇರುತ್ತಿತ್ತು. ಶಿಕ್ಷಕರು ತುಂಬಾ ಓದುತ್ತಿದ್ದರು. ಅದರಿಂದಾಗಿ ಸಹಜವಾಗಿ ಮಕ್ಕಳು ಓದುತ್ತಿದ್ದರು. ವಿದ್ಯಾರ್ಥಿಗಳು ಯಾವುದನ್ನೂ ಬಾಯಿಪಾಠ ಮಾಡುತ್ತಿರಲಿಲ್ಲ. ಮಕ್ಕಳಿಗೆ ಸ್ವಂತ ಉತ್ತರ ಬರೆಯುವ ಶಕ್ತಿಯನ್ನು ಶಿಕ್ಷಕರು ತುಂಬುತ್ತಿದ್ದರು.

Children playing at Government schools

ಆಗಿನ ಶಾಲೆಗಳಲ್ಲಿ ಪಾಸ್ ಮತ್ತು ಫೇಲ್ ಇರುತ್ತಿತ್ತು. ಫೇಲ್ ಆದರೆ, ಅಥವಾ ಮಾರ್ಕ್ ಕಡಿಮೆ ಬಂದರೆ ಒಬ್ಬ ಹುಡುಗನೂ ದುಃಖ ಪಡುತ್ತಿರಲಿಲ್ಲ. ಆತ್ಮಹತ್ಯೆಯ ಮಾತೇ ಇಲ್ಲ.

ಹೃದಯವಂತ ಕನ್ನಡ ಶಾಲೆಗಳು

ಶಾಲೆಗಳು ಆಗ ನಮಗೆ ಕೇವಲ ನಾಲ್ಕು ಗೋಡೆಗಳ ಕಟ್ಟಡ ಆಗಿರಲಿಲ್ಲ. ಅದೊಂದು ಇಮೋಷನ್ ಆಗಿತ್ತು! ಈಗಲೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವರಿಗೆ ಅದು ಇಮೋಶನ್ ಆಗಿದೆ.

ಮಾಸಿದ ಗೋಡೆಗಳು, ಹರಿದು ಹೋದ ಚಲ್ಲಣ, ಕಿತ್ತುಹೋದ ಚಪ್ಪಲಿ, ಒಡೆದು ಹೋದ ಸ್ಲೇಟು, ಮುರಿದ ಕಡ್ಡಿಯ ಚೂರು….. ಇವ್ಯಾವುದೂ ಅಪಮಾನ ಎಂಬ ಭಾವನೆಯೇ ನಮಗೆ ಇರಲಿಲ್ಲ. ಶಿಕ್ಷಕರು ತಾರತಮ್ಯ ಮಾಡಿದ್ದು ನಮಗೆ ಗೊತ್ತೇ ಇರಲಿಲ್ಲ. ವಿದ್ಯಾರ್ಥಿಗಳು ಒಬ್ಬರಿಗೆ ಒಬ್ಬರು ಸಹಾಯ ಮಾಡುತ್ತಿದ್ದರು. ಹಂಚಿ ತಿನ್ನುವ ಬುದ್ಧಿ ಇತ್ತು. ಶಾಲೆಯಲ್ಲಿ ತರಕಾರಿ ಮತ್ತು ಹೂವಿನ ತೋಟವನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿ ಮಾಡಿದ್ದರು. ಮಕ್ಕಳಿಗೆ ಶಾಲೆಯ ಯಾವುದೇ ಕೆಲಸ ಮಾಡಲು ನಾಚಿಕೆ ಇರಲಿಲ್ಲ. ಹೆತ್ತವರು ಅದನ್ನು ಆಕ್ಷೇಪಣೆ ಮಾಡುತ್ತಲೇ ಇರಲಿಲ್ಲ.

Government Schools Children

ಶಾಲೆಯಲ್ಲಿ ಎಲ್ಲ ಮಕ್ಕಳೂ ಭಾಗವಹಿಸುವ ಅಸೆಂಬ್ಲಿ ದಿನವೂ ನಡೆಯುತ್ತಿತ್ತು. ‘ತಾಯಿ ಶಾರದೆ’ ಹಾಡಿನಿಂದ ಆರಂಭ. ನಾಡಗೀತೆ ಆಗ ಇರಲಿಲ್ಲ. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯ. ಅದರ ನಡುವೆ ವಾರ್ತೆಗಳು, ಚಿಂತನ, ಹುಟ್ಟುಹಬ್ಬದ ಶುಭಾಶಯ ವಿನಿಮಯ, ದಿನಕ್ಕೊಂದು ಶಿಕ್ಷಕರ 3-5 ನಿಮಿಷ ಭಾಷಣ. ವಿದ್ಯಾರ್ಥಿಗಳು ಬಿಸಿಲಿಗೆ ನಿಂತು ಇದನ್ನೆಲ್ಲ ಕೇಳುತ್ತಿದ್ದರು. ಅಸೆಂಬ್ಲಿ ಅಂದರೆ ಎಲ್ಲರಿಗೂ ಖುಷಿ. ಯಾಕೆಂದರೆ ಅಲ್ಲಿ ಎಲ್ಲ ತರಗತಿಯ ವಿದ್ಯಾರ್ಥಿಗಳು ಸೇರುತ್ತಿದ್ದರು. ಶಿಕ್ಷಕರು ಶಿಕ್ಷೆ ಕೊಡದಿದ್ದರೂ ಶಾಲೆಯಲ್ಲಿ ಸಹಜ ಶಿಸ್ತು ಇರುತ್ತಿತ್ತು. ಸ್ವಚ್ಛತೆಯ ಬಗ್ಗೆ ಜಾಗೃತಿ ಮಕ್ಕಳಲ್ಲಿ ತುಂಬಾ ಇತ್ತು.

ಆಗಲೂ ಶಾಲಾಮಟ್ಟದ ವಿದ್ಯಾರ್ಥಿ ಸರಕಾರ ಇರುತ್ತಿತ್ತು. ಚುನಾವಣೆ ನಡೆಯುತ್ತಿತ್ತು. ಆದರೆ ಯೋಗ್ಯರು ಆರಿಸಿ ಬರುತ್ತಿದ್ದರು. ಯಾವ ರಾಜಕೀಯ ಪಕ್ಷಗಳು ಶಾಲೆಯ ಕ್ಯಾಂಪಸ್ ಒಳಗೆ ಬರುತ್ತಿರಲಿಲ್ಲ. ಈಗಿನ ಪ್ರೋಟೋಕಾಲ್ ತೊಂದರೆಗಳು ಆಗ ಇರಲಿಲ್ಲ.

ಕನ್ನಡ ಶಾಲೆಗಳಲ್ಲಿ ಉತ್ತಮವಾಗಿ ಪಾಠ ಮಾಡುವ ಇಂಗ್ಲಿಷ್ ಶಿಕ್ಷಕರು ಇರುತ್ತಿದ್ದರು. ಮಕ್ಕಳು ಕನ್ನಡದಷ್ಟೆ ಸುಲಭವಾಗಿ ಇಂಗ್ಲೀಷ್ ಭಾಷೆ ಮಾತಾಡುತ್ತಿದ್ದರು. ಶಿಕ್ಷಕರ ವರ್ಗಾವಣೆ ಈಗಿನಷ್ಟು ಜಟಿಲ ಆಗಿರಲಿಲ್ಲ. ಆದರೆ ಶಿಕ್ಷಕರು ಒಂದು ಶಾಲೆಯಲ್ಲಿ ಸೇರಿಕೊಂಡರೆ ಬೇರೆಡೆ ವರ್ಗಾವಣೆ ಕೇಳಿಕೊಂಡು ಹೋಗುತ್ತಿರಲಿಲ್ಲ. ಹಾಗೊಮ್ಮೆ ಶಿಕ್ಷಕರಿಗೆ ವರ್ಗಾವಣೆ ಆದರೆ ವಿದ್ಯಾರ್ಥಿಗಳು ಕಣ್ಣೀರು ಸುರಿಸಿ ಅವರನ್ನು ಕಳುಹಿಸಿಕೊಡುವ ದೃಶ್ಯಗಳು ಶಾಲೆಯಲ್ಲಿ ಸಾಮಾನ್ಯ ಆಗಿದ್ದವು. ವರ್ಷದ ಕೊನೆಗೆ ಸೆಂಡಾಫ್ ಕಾರ್ಯಕ್ರಮ ಬಂದಾಗ ಎಲ್ಲರೂ ಅಳುವುದು ಕಾಮನ್.

Kannada Schools

ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣವು ವ್ಯಾಪಾರ ಆಗಿರಲಿಲ್ಲ

ವಿದ್ಯೆಯನ್ನು ಮಾರಬಾರದು ಎಂದರು ನಮ್ಮ ಹಿರಿಯರು. ಆದರೆ ಇಂದು ಶಿಕ್ಷಣವು ನಮ್ಮ ದೇಶದ ಅತೀ ದೊಡ್ಡ ವ್ಯಾಪಾರ ಅಂದರೆ ನೀವು ನಂಬಲೇ ಬೇಕು!
ಆಗಿನ ಶಿಕ್ಷಕರು ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಲು ಯಾವಾಗಲೂ ಮುಂದೆ ಇರುತ್ತಿದ್ದರು. ಶಿಕ್ಷಕರಿಗೆ ಯಾವ ದುರಭ್ಯಾಸ ಇರಲಿಲ್ಲ. ಆಸಕ್ತಿ ಇದ್ದವರು ಮಾತ್ರ ಶಿಕ್ಷಕ ವೃತ್ತಿಗೆ ಬರುತ್ತಿದ್ದ ಕಾಲ ಅದು. ಯಾವ ಶಿಕ್ಷಕರೂ ಬೇರೆ ಬಿಸಿನೆಸ್ ಮಾಡ್ತಾ ಇರಲಿಲ್ಲ.

ಒತ್ತಡ ಇಲ್ಲದ ಸಂತಸದ ಕಲಿಕೆಗೆ ಪೂರಕವಾಗಿ ಏನೆಲ್ಲ ಬೇಕೋ ಅದನ್ನೆಲ್ಲ ಕನ್ನಡ ಶಾಲೆಗಳು ಖಾತರಿ ಮಾಡುತ್ತಿದ್ದವು. ಕನ್ನಡ ಶಾಲೆಗಳಲ್ಲಿ ಓದಿದವರು ಡಾಕ್ಟರ್, ಲೆಕ್ಚರರ್, ಎಂಜಿನಿಯರ್, ವಿಜ್ಞಾನಿ, ಉದ್ಯಮಿ, ಕಲಾವಿದ, ಶಿಕ್ಷಕ…. ಎಲ್ಲವೂ ಆಗುತ್ತಿದ್ದರು. ಈಗಲೂ ಆಗುತ್ತಿದ್ದಾರೆ.

ಹೃದಯ ಶ್ರೀಮಂತಿಕೆಯಲ್ಲಿ ಆಗಿನ ಕನ್ನಡ ಶಾಲೆಯ ವಿದ್ಯಾರ್ಥಿಗಳು ಸದಾ ಮುಂದೆ ಇರುತ್ತಿದ್ದರು. ಶಿಕ್ಷಕರಿಗೆ ಆಗ ಸಂಬಳ ಕಡಿಮೆ ಇರುತ್ತಿತ್ತು. ಆದರೆ ಸಮಾಜದಲ್ಲಿ ಗೌರವ ಹೆಚ್ಚಿತ್ತು. ಆದರೆ ಈಗ ಉಲ್ಟಾ ಆಗಿದೆ ಅಲ್ವಾ?

ಈಗೆಲ್ಲ ಕನ್ನಡ ಶಾಲೆಗಳು ಹಾಳಾಗಿವೆ ಎಂದು ಹೇಳುವುದು ಈ ಲೇಖನದ ಉದ್ದೇಶ ಅಲ್ಲ.

ಈಗಲೂ ಕನ್ನಡ ಶಾಲೆಗಳು ತುಂಬ ಚೆನ್ನಾಗಿವೆ. ತುಂಬಾ ಪರಿಣತ ಶಿಕ್ಷಕರನ್ನು ಸರಕಾರ ನೇಮಕ ಮಾಡಿದೆ. ಆದರೆ ಎಲ್ಲ ಶಾಲೆಗಳಲ್ಲಿ ಶಿಕ್ಷಕರ ಕೊರತೆಯು ಇದೆ. ತರಗತಿಗೊಬ್ಬ ಶಿಕ್ಷಕರ ನೇಮಕ ಆಗಬೇಕು ಅನ್ನುವುದು ಆಶಯ. ಒಂದು ಅದ್ಭುತವಾದ ದೇವಸ್ಥಾನ ಕಟ್ಟಿ ಗರ್ಭಗುಡಿಯಲ್ಲಿ ದೇವರನ್ನು ಸ್ಥಾಪನೆ ಮಾಡದಿದ್ದರೆ ಹೇಗೆ?

ಇದನ್ನೂ ಓದಿ: Raja Marga Column: ಸಚಿನ್ ‘ಟೆನ್ನಿಸ್ ಎಲ್ಬೋ’ ಗೆದ್ದದ್ದು ಚಿಕಿತ್ಸೆಯಿಂದ ಅಲ್ಲ, ಮತ್ತೆ ಹೇಗೆ?

ಉಳಿದಂತೆ ಸರಕಾರದ ಎಲ್ಲ ಉಚಿತ ಸೌಲಭ್ಯಗಳು ಮಕ್ಕಳಿಗೆ ದೊರೆಯುತ್ತಿವೆ. ಅವುಗಳು ವರ್ಷದ ಮೊದಲೇ ಸಿಕ್ಕಿದರೆ ತುಂಬ ಒಳ್ಳೆಯದು. ಇಂದು ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯು ಪಾತಾಳಕ್ಕೆ ಹೋಗಿದೆ. ಕೆಲವು ಮಾದರಿ ಶಾಲೆಗಳು ಇಂದಿಗೂ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿವೆ. ಅದಕ್ಕೆ ಶಿಕ್ಷಕರ ಪ್ರಭಾವ ಕಾರಣವೇ ಹೊರತು ಬೇರೆ ಏನೂ ಅಲ್ಲ.

ಸರಕಾರವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ತುಂಬಿದರೆ, ಇಂಗ್ಲಿಷ್ ಮಾಧ್ಯಮದ ಶಾಲೆಗಳ ಪರವಾಗಿರುವ ಹೆತ್ತವರ ಮೈಂಡ್‌ಸೆಟ್‌ ಕನ್ನಡ ಮಾಧ್ಯಮ ಶಾಲೆಗಳ ಪರವಾಗಿ ಬದಲಾದರೆ, ನಮ್ಮ ಕನ್ನಡದ ಶಾಲೆಗಳು ಖಂಡಿತವಾಗಿ ಭೂಲೋಕದ ಸ್ವರ್ಗವೇ ಆಗುತ್ತವೆ. ಏನಂತೀರಿ?

Continue Reading

ಅಂಕಣ

Tejas Aircraft: ಸ್ವದೇಶಿ ʼತೇಜಸ್ʼ ವಿಮಾನದಲ್ಲಿ ಮೋದಿ ಹಾರಾಟ: ಪಾಕಿಸ್ತಾನ, ಚೀನಾಗೆ ನಡುಕ!

ತೇಜಸ್ ವಿಮಾನ (Tejas Aircraft) ಭಾರತದ ಹೆಮ್ಮೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ತೇಜಸ್ ವಿಮಾನ ಭಾರತದ 140 ಕೋಟಿ ಜನರ ಸಾಮರ್ಥ್ಯ ಮತ್ತು ಕೌಶಲಗಳನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ. ಈ ವಿಮಾನದ ಕುರಿತ ತಾಂತ್ರಿಕ ಮಾಹಿತಿ ಇಲ್ಲಿದೆ.

VISTARANEWS.COM


on

modi tejas viman
Koo
Girish Linganna

ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 25ರಂದು ಭಾರತದ ಸ್ವದೇಶಿ ನಿರ್ಮಾಣದ ಯುದ್ಧ ವಿಮಾನ ‘ತೇಜಸ್’ನಲ್ಲಿ (Tejas Aircraft) 30 ನಿಮಿಷಗಳ ಕಾಲ ಹಾರಾಟ ನಡೆಸಿದರು. ಆ ಮೂಲಕ ತೇಜಸ್ ವಿಮಾನದಲ್ಲಿ (Tejas Aircraft) ಹಾರಾಟ ನಡೆಸಿದ ಭಾರತದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ಬೆಳವಣಿಗೆ ಭಾರತದ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾಗೆ ನಡುಕ ಮೂಡಿಸಿದೆ. ಮೋದಿಯವರು ಗ್ರೂಪ್ ಕ್ಯಾಪ್ಟನ್ ದೇಬಂಜನ್ ಮಂಡಲ್ ಅವರೊಡನೆ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಿದರು. ಪ್ರಧಾನಿಯವರನ್ನು ವಾಯುಪಡೆಯ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಸ್ವಾಗತಿಸಿ, ಸನ್ಮಾನಿಸಿದರು. ಗಮನಾರ್ಹ ಅಂಶವೆಂದರೆ, ವಿವಿಐಪಿಗಳು ಸಾಮಾನ್ಯವಾಗಿ ಸು-30ಎಂಕೆಐನಂತಹ ಅವಳಿ ಎಂಜಿನ್ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸುತ್ತಾರೆ. ಪ್ರಧಾನಿ ಮೋದಿಯವರು ತೇಜಸ್ ವಿಮಾನ ಹಾರಾಟದ ಕುರಿತು ತಮ್ಮ ಅನುಭವವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಅವರು ಭಾರತದ ಸ್ವದೇಶೀ ನಿರ್ಮಾಣ ಸಾಮರ್ಥ್ಯದ ಕುರಿತು ಭರವಸೆ ವ್ಯಕ್ತಪಡಿಸಿದ್ದು, ತೇಜಸ್ ವಿಮಾನ ಭಾರತದ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ. ಅವರು ಈ ವಿಮಾನ ಒಂದು ಆಶಾವಾದವನ್ನು ಒದಗಿಸಿದ್ದು, ತೇಜಸ್ ವಿಮಾನ (Tejas Aircraft) ಭಾರತದ 140 ಕೋಟಿ ಜನರ ಸಾಮರ್ಥ್ಯ ಮತ್ತು ಕೌಶಲಗಳನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

ತಂತ್ರಜ್ಞರಿಗೆ ಉತ್ತೇಜನ

ಮೋದಿಯವರು ತೇಜಸ್ ವಿಮಾನದ (Tejas Aircraft) ನಿರ್ಮಾಣ ಘಟಕಕ್ಕೆ ಭೇಟಿ ನೀಡಿ, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಉತ್ತೇಜಿಸಿದರು. ಎಚ್ಎಎಲ್ ತೇಜಸ್ ಒಂದು ಎಂಜಿನ್ ಮತ್ತು ಡೆಲ್ಟಾ ವಿಂಗ್ ಹೊಂದಿರುವ, ಹಗುರವಾರ ಬಹುಪಾತ್ರಗಳ ಯುದ್ಧ ವಿಮಾನವಾಗಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಎಡಿಎ ಮತ್ತು ಎಚ್ಎಎಲ್‌ಗಳು ಜಂಟಿಯಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿವೆ. ತೇಜಸ್ ತನ್ನ ವರ್ಗದಲ್ಲಿ ಅತ್ಯಂತ ಸಣ್ಣದಾದ, ಹಗುರವಾದ ಸೂಪರ್‌ಸಾನಿಕ್ ಯುದ್ಧ ವಿಮಾನವಾಗಿದ್ದು, ಸ್ವದೇಶೀ ನಿರ್ಮಾಣದ ಫ್ಲೈ ಬೈ ವೈರ್ ವ್ಯವಸ್ಥೆ ಹಾಗೂ ಭಾರತೀಯ ನಿರ್ಮಾಣದ ಸಂಯುಕ್ತ ವಸ್ತುಗಳನ್ನು ಒಳಗೊಂಡಿದೆ. ತೇಜಸ್ 2001ರಲ್ಲಿ ತನ್ನ ಪ್ರಥಮ ಹಾರಾಟ ನಡೆಸಿತು. ಅದಾದ ಬಳಿಕ, 2016ರಲ್ಲಿ ‘ಫ್ಲೈಯಿಂಗ್ ಡ್ಯಾಗರ್ಸ್’ ಎಂಬ ಅದರ ಮೊದಲ ಕಾರ್ಯಾಚರಿಸುವ ಸ್ಕ್ವಾಡ್ರನ್ ನಿರ್ಮಾಣಗೊಂಡಿತು.

 tejas aircraft

ಖರೀದಿಗೆ ಆದೇಶ ಸಲ್ಲಿಕೆ

ಭಾರತೀಯ ವಾಯುಪಡೆ (ಐಎಎಫ್) ಈಗಾಗಲೇ 32 ಎಲ್‌ಸಿಎ ಮಾರ್ಕ್ 1, 73 ಮಾರ್ಕ್ 1ಎ, ಹಾಗೂ 18 ಮಾರ್ಕ್ 1 ಎರಡು ಆಸನಗಳ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದೆ. ಅದರೊಡನೆ, ವಾಯುಪಡೆ ಇನ್ನೂ 97 ಹೆಚ್ಚುವರಿ ಮಾರ್ಕ್ 1ಎ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದೆ. ಭವಿಷ್ಯದಲ್ಲಿ ಅಂದಾಜು 200ರಷ್ಟು ಎಲ್‌ಸಿಎ ಮಾರ್ಕ್ 2 ಯುದ್ಧ ವಿಮಾನಗಳು ಬೇಕಾಗಬಹುದೆಂದು ವಾಯುಪಡೆ ಅಂದಾಜಿಸಿದೆ.
ಎಲ್‌ಸಿಎ ಮಾರ್ಕ್1ಎ ವಿಮಾನದ ಆರಂಭಿಕ ಹಾರಾಟ ಮೇ 2022ರಲ್ಲಿ ನೆರವೇರಿತು. ಈ ವಿಮಾನ ಮ್ಯಾಕ್ 1.6ರ ಗರಿಷ್ಠ ವೇಗದಲ್ಲಿ ಚಲಿಸಬಲ್ಲದಾಗಿದ್ದು, 5,300 ಕೆಜಿಯ ತನಕ ಹೊತ್ತು ಸಾಗಬಲ್ಲ ಬಾಹ್ಯ ಹಾರ್ಡ್ ಪಾಯಿಂಟ್‌ಗಳನ್ನು ಹೊಂದಿದೆ. ಇದು ಸ್ಟ್ಯಾಂಡ್ ಆಫ್ ರೇಂಜ್‌ನಿಂದ ವಿವಿಧ ಬಗೆಯ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಬಾಂಬ್‌ಗಳನ್ನು ಹೊತ್ತು ಸಾಗಬಲ್ಲದು. (ಸ್ಟ್ಯಾಂಡ್ ಆಫ್ ರೇಂಜ್ ಎಂದರೆ ಒಂದು ಯುದ್ಧ ವಿಮಾನ ಗುರಿಗೆ ಅತ್ಯಂತ ಸಮೀಪಕ್ಕೆ ತೆರಳದೆ, ಶತ್ರುವಿನ ದಾಳಿಯ ನಿಲುಕಿಗೆ ಒಳಗಾಗದೆ ಶತ್ರುವಿನ ಮೇಲೆ ದಾಳಿ ನಡೆಸಬಲ್ಲ ಸುರಕ್ಷಿತ ಅಂತರವಾಗಿದೆ).

rafale2

ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್

ಎಲ್‌ಸಿಎ ಎಂಕೆ1ಎ ವಿಮಾನದ ಆರಂಭಿಕ ತಂಡಗಳು ಎಲ್ಟಾ ಇಎಲ್/ಎಂ-2052 ರೇಡಾರ್‌ಗಳನ್ನು ಹೊಂದಿದ್ದು, ಅದರ ಬದಲಿಗೆ ದೇಶೀಯ ನಿರ್ಮಾಣದ ಎಲ್ಆರ್‌ಡಿಇ ಉತ್ತಮ್ ರೇಡಾರ್ ಅಳವಡಿಸಲಾಗುತ್ತದೆ. ಇದು ಬಹುತೇಕ 40 ಅಭಿವೃದ್ಧಿಗಳನ್ನು ಹೊಂದಿದ್ದು, ಸಮರ್ಥವಾದ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್ ಹೊಂದಿದೆ. ಈ ವಿಮಾನ ಅಸ್ತ್ರ ಮತ್ತು ಎಎಸ್ಆರ್‌ಎಎಎಂ ಕ್ಷಿಪಣಿಗಳನ್ನು ಹೊಂದಲಿದ್ದು, ಅವೆಲ್ಲವೂ ದೇಶೀಯ ನಿರ್ಮಾಣದವಾಗಿವೆ. ಇವುಗಳ ಸೇರ್ಪಡೆ 2024ರಲ್ಲಿ ಆರಂಭಗೊಳ್ಳಲಿದೆ.
ತೇಜಸ್ ಎಂಕೆ2 ಅಥವಾ ಮೀಡಿಯಂ ವೆಯ್ಟ್ ಫೈಟರ್ ದೊಡ್ಡ ಗಾತ್ರದ ಯುದ್ಧ ವಿಮಾನವಾಗಿದ್ದು, ಹೆಚ್ಚಿನ ಪೇಲೋಡ್ ಹೊಂದಬಲ್ಲದು. ಇದಕ್ಕೆ ಜನರಲ್ ಇಲೆಕ್ಟ್ರಿಕ್ ಜಿಇ ಎಫ್414 ಐಎನ್ಎಸ್6 ಇಂಜಿನ್ ಶಕ್ತಿ ನೀಡುತ್ತದೆ. ಈ ಎಂಜಿನ್‌ಗಳು ಭಾರತದ ದೇಶೀಯ ನಿರ್ಮಾಣದ ಐದನೇ ತಲೆಮಾರಿನ ಯುದ್ಧ ವಿಮಾನವಾದ ಎಎಂಸಿಎಯಲ್ಲೂ ಬಳಕೆಯಾಗಲಿದೆ.

2024ರಲ್ಲಿ ಹಾರಾಟ ನಡೆಸುವ ನಿರೀಕ್ಷೆ

ತೇಜಸ್ ಎಂಕೆ2 ವಿಮಾನ 2024ರಲ್ಲಿ ಹಾರಾಟ ನಡೆಸುವ ನಿರೀಕ್ಷೆಗಳಿದ್ದು, ಆಧುನಿಕ ಗಾಜಿನ ಕಾಕ್‌ಪಿಟ್, ಆಧುನಿಕ ಎಇಎಸ್ಎ ರೇಡಾರ್, ಹಾಗೂ ಅಂತರ್ಗತ ಇನ್‌ಫ್ರಾರೆಡ್ ಸರ್ಚ್ ಆ್ಯಂಡ್ ಟ್ರ್ಯಾಕ್ (ಐಆರ್‌ಎಸ್‌ಟಿ) ವ್ಯವಸ್ಥೆಗಳನ್ನು ಒಳಗೊಂಡಿದೆ. ಇದರಲ್ಲಿ ಆಮ್ಲಜನಕ ಉತ್ಪಾದನಾ ವ್ಯವಸ್ಥೆ, ಅಂತರ್ಗತ ಇಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್, ಹಾಗೂ ಹೆಚ್ಚಿನ ಕದನ ವ್ಯಾಪ್ತಿಯನ್ನು ಒಳಗೊಂಡಿದೆ. ಈ ವಿಮಾನ ಅಂತಿಮವಾಗಿ ಮಿರೇಜ್-2000, ಜಾಗ್ವಾರ್ ಹಾಗೂ ಮಿಗ್-29 ವಿಮಾನಗಳ ಬದಲಿಗೆ ಕಾರ್ಯ ನಿರ್ವಹಿಸುವ ಸಾಧ್ಯತೆಗಳಿವೆ.

ಯಶಸ್ವಿ ಲ್ಯಾಂಡಿಂಗ್‌

ನೌಕಾಪಡೆಯ ಆವೃತ್ತಿಗೆ ಸಂಬಂಧಿಸಿದ ಮಹತ್ತರ ಮೈಲುಗಲ್ಲು ಎಂಬಂತೆ, ಎಲ್‌ಸಿಎ ಐಎನ್ಎಸ್ ವಿಕ್ರಮಾದಿತ್ಯ ನೌಕೆಯ ಮೇಲೆ 2020ರಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿ, ಬಳಿಕ 18 ಬಾರಿ ಟೇಕಾಫ್ ಮತ್ತು ಲ್ಯಾಂಡಿಂಗ್ ಕೈಗೊಂಡಿತ್ತು. ಫೆಬ್ರವರಿ 2023ರಲ್ಲಿ ಎಲ್‌ಸಿಎ ಮಿಗ್-29ಕೆ ವಿಮಾನದ ಜೊತೆಗೆ ಸ್ವದೇಶೀ ನಿರ್ಮಾಣದ ವಿಮಾನ ವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಮೇಲೆ ಇಳಿಯಿತು.
2022ರ ವೇಳೆಗೆ, ತೇಜಸ್ ಮಾರ್ಕ್ 1 ಯುದ್ಧ ವಿಮಾನ ತನ್ನ ಮೌಲ್ಯದ 59.7% ಮತ್ತು ಬದಲಾಯಿಸಬಲ್ಲ ಭಾಗಗಳ 75.5% ಸ್ವದೇಶೀ ವಸ್ತುಗಳನ್ನು ಹೊಂದಿತ್ತು. ತೇಜಸ್ ಎಂಕೆ 1ಎ ಆರಂಭದಲ್ಲಿ 50% ಸ್ವದೇಶೀ ವಸ್ತುಗಳನ್ನು ಒಳಗೊಂಡು, ಬಳಿಕ ಯೋಜನೆ ಪೂರ್ಣಗೊಳ್ಳುವ ವೇಳೆಗೆ 60% ಸಾಧಿಸುವ ಗುರಿ ಹೊಂದಿದೆ.

ಎಚ್‌ಎಎಲ್‌ನಿಂದ ನೂತನ ಉತ್ಪಾದನಾ ಘಟಕ

ಎಚ್ಎಎಲ್ ಬೆಂಗಳೂರಿನಲ್ಲಿ ವಾರ್ಷಿಕವಾಗಿ 16 ಎಲ್‌ಸಿಎ ಎಂಕೆ-1ಎ ವಿಮಾನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ನಾಶಿಕ್‌ನಲ್ಲಿ ನೂತನ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಈ ಮೂಲಕ ಎಚ್ಎಎಲ್ ವಾರ್ಷಿಕವಾಗಿ 24 ಜೆಟ್‌ಗಳನ್ನು ಉತ್ಪಾದಿಸಬಲ್ಲದು. ಈ ಹೆಚ್ಚಳದ ಕಾರಣದಿಂದ, ಎಚ್ಎಎಲ್ ಒಪ್ಪಂದ ಮಾಡಿಕೊಂಡಿರುವ 83 ಯುದ್ಧ ವಿಮಾನಗಳನ್ನು ಅವಧಿಗಿಂತಲೂ ಒಂದು ವರ್ಷ ಮೊದಲೇ, ಅಂದರೆ 2027-28ರಲ್ಲಿ ಒದಗಿಸಬಹುದು. ಭಾರತೀಯ ವಾಯುಪಡೆ ಶೀಘ್ರವಾಗಿ ತನ್ನ ಹಳೆಯದಾಗುತ್ತಿರುವ ಮಿಗ್ 21 ಯುದ್ಧ ವಿಮಾನ ಸ್ಕ್ವಾಡ್ರನ್‌ಗಳನ್ನು ನಿವೃತ್ತಿಗೊಳಿಸಿ, ಅವುಗಳ ಬದಲಿಗೆ ನೂತನ ವಿಮಾನಗಳನ್ನು ಹೊಂದಬೇಕಿರುವುದರಿಂದ, ವಿಮಾನಗಳು ಶೀಘ್ರವಾಗಿ ಪೂರೈಕೆಯಾದಷ್ಟೂ ಅನುಕೂಲಕರವಾಗಿರಲಿದೆ.

rafale1

ಸಮರ್ಥ ಯುದ್ಧ ವಿಮಾನವಾಗಿ ಸಾಬೀತು

ಎಲ್‌ಸಿಎ ವಿಮಾನ ಭಾರತದ ಏರೋ ಇಂಡಿಯಾ ಪ್ರದರ್ಶನಗಳಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ, ತಾನು ಸಮರ್ಥ ಯುದ್ಧ ವಿಮಾನ ಎಂದು ಸಾಬೀತುಪಡಿಸಿದೆ. ಎಚ್ಎಎಲ್ ಈಗ ಎಲ್‌ಸಿಎ ವಿಮಾನದ ಎರಡು ಆಸನಗಳ ಲೀಡ್ ಇನ್ ಫೈಟರ್ ಟ್ರೈನರ್ (ಎಲ್ಐಎಫ್‌ಟಿ) ತರಬೇತಿ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಎಚ್ಎಎಲ್ ಈಗಾಗಲೇ ಸಂಭಾವ್ಯ ವಿಮಾನ ರಫ್ತಿಗಾಗಿ ಬೋಟ್ಸ್‌ವಾನಾ ಮತ್ತು ಈಜಿಪ್ಟ್‌ನಂತಹ ದೇಶಗಳೊಡನೆ ಮಾತುಕತೆ ನಡೆಸುತ್ತಿದೆ. ತೇಜಸ್ ರಫ್ತಿನ ಅಂಗವಾಗಿ, ಇಂಡೋನೇಷ್ಯಾ, ಮಲೇಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂಗಳಲ್ಲಿ ಸಾಗಾಣಿಕಾ ವ್ಯವಸ್ಥೆಯನ್ನು ಸ್ಥಾಪಿಸಲು ಯೋಚಿಸುತ್ತಿದೆ.
ವಿಮಾನ ಉತ್ಪಾದನೆಗೆ ಆಧುನಿಕ ತಂತ್ರಜ್ಞಾನಗಳು ಅತ್ಯವಶ್ಯಕವಾಗಿರುವುದರಿಂದ, ವೈಮಾನಿಕ ವಲಯ ರಕ್ಷಣಾ ವಿಭಾಗದಲ್ಲಿ ಸ್ವಾವಲಂಬನೆ ಸಾಧಿಸಲು ಹೆಚ್ಚಿನ ಅವಕಾಶ ಕಲ್ಪಿಸುತ್ತದೆ. ತಂತ್ರಜ್ಞಾನಗಳ ಹಂಚಿಕೊಳ್ಳುವಿಕೆ ಅತ್ಯಂತ ಅಪರೂಪವಾಗಿರುವುದರಿಂದ, ಭಾರತ ತನ್ನದೇ ಆದ ಬೌದ್ಧಿಕ ಆಸ್ತಿಯನ್ನು ಅಭಿವೃದ್ಧಿಪಡಿಸಬೇಕು. ವಿಮಾನಗಳು ಬಳಕೆಯಾಗದೆ ಹಳೆಯದಾಗುವುದೂ ಒಂದು ಸವಾಲಾಗಿದ್ದು, ಭಾರತೀಯ ವಾಯುಪಡೆ ಎಲ್‌ಸಿಎ ಯೋಜನೆಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ವಾಯುಪಡೆಯ ಮುಖ್ಯಸ್ಥರಾದ ವಿ ಆರ್ ಚೌಧರಿ ಅವರು ಎಲ್‌ಸಿಎ ಯೋಜನೆ ಸ್ವದೇಶೀ ಸಮರ ಪಡೆಗಳನ್ನು ಅಭಿವೃದ್ಧಿ ಪಡಿಸುವ ಭಾರತೀಯ ವಾಯುಪಡೆಯ ಬದ್ಧತೆಯ ಸಂಕೇತವಾಗಿದೆ ಎಂದಿದ್ದಾರೆ. ಎಚ್ಎಎಲ್ ಹಾಗೂ ಡಿಆರ್‌ಡಿಓ ತಂತ್ರಜ್ಞಾನವನ್ನು ಖಾಸಗಿ ಸಂಸ್ಥೆಗಳಿಗೆ ಒದಗಿಸಿದ್ದು, ರಕ್ಷಣಾ ಉಪಕರಣಗಳ ಉತ್ಪಾದನೆಗೆ ಸೂಕ್ತ ಕ್ರಮಗಳನ್ನು ಒದಗಿಸಲಿದೆ. ಪ್ರಧಾನಿ ಮೋದಿಯವರೂ ಈ ಯೋಜನೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿ, ಬೆಂಬಲ ಸೂಚಿಸಿದ್ದು, ಇದರಿಂದ ಎಲ್‌ಸಿಎ ಮತ್ತು ಎಎಂಸಿಎ ಯೋಜನೆಯ ಸ್ಥೈರ್ಯ ಹೆಚ್ಚಿ, ವಿನ್ಯಾಸ, ಅಭಿವೃದ್ಧಿ ಇನ್ನಷ್ಟು ವೇಗ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಅದರೊಡನೆ, ಅವುಗಳ ಭವಿಷ್ಯದ ಹಂತಗಳಿಗೂ ಶೀಘ್ರವಾಗಿ ಅನುಮತಿ ಲಭಿಸಲು ಸಾಧ್ಯವಾಗುತ್ತದೆ. ಚೀನಾ ಮತ್ತು ಪಾಕಿಸ್ತಾನದ ಬೆದರಿಕೆ ಎದುರಿಸುವಲ್ಲಿ ತೇಜಸ್‌ ಮಹತ್ವದ ಪಾತ್ರ ವಹಿಸಲಿದೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

ಇದನ್ನೂ ಓದಿ: LCA Tejas: ವಾಯುಪಡೆ ಬತ್ತಳಿಕೆ ಸೇರಿದ ಲಘು ಯುದ್ಧ ವಿಮಾನ ತೇಜಸ್! 8 ಏರ್‌ಕ್ರಾಫ್ಟ್‌ಗೆ ಎಚ್‌ಎಎಲ್‌ ಜತೆ ಸೇನೆ ಒಪ್ಪಂದ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಅಂಕಣ

Raja Marga Column: ಸಚಿನ್ ‘ಟೆನ್ನಿಸ್ ಎಲ್ಬೋ’ ಗೆದ್ದದ್ದು ಚಿಕಿತ್ಸೆಯಿಂದ ಅಲ್ಲ, ಮತ್ತೆ ಹೇಗೆ?

Raja Marga Column : ಎಲ್ಲರೂ ಆತನ ಕ್ರಿಕೆಟ್ ಭವಿಷ್ಯ ಮುಗಿಯಿತು ಎನ್ನುವಾಗ ಆತ ಬೂದಿಯಿಂದ ಎದ್ದು ಬಂದಿದ್ದ! ಇದು ಟೆನ್ನಿಸ್‌ ಎಲ್ಬೋ ಎಂಬ ಘಾತಕ ನೋವಿನಿಂದ ಸಚಿನ್‌ ತೆಂಡೂಲ್ಕರ್‌ ಮೇಲೆದ್ದು ಬಂದ ಕಥೆ. ಇಲ್ಲಿ ವರ್ಕ್‌ ಮಾಡಿದ್ದು ಸರ್ಜರಿ ಒಂದೇ ಅಲ್ಲ.. ಮತ್ತೇನು?

VISTARANEWS.COM


on

Sachin Tendulkar Tennis Elbow
Koo
RAJAMARGA Rajendra Bhat

‘ಗಾಡ್ ಆಫ್ ಕ್ರಿಕೆಟ್’ ಎಂದು ಎಲ್ಲರಿಂದ ಕರೆಸಿಕೊಂಡ ಸಚಿನ್ ತೆಂಡೂಲ್ಕರ್ (Sachin Tendulkar) 24 ವರ್ಷ ಭಾರತಕ್ಕಾಗಿ ಆಡಿದ್ದು, ಶತಕಗಳ ಶತಕವನ್ನು ಪೂರ್ತಿ ಮಾಡಿದ್ದು, ಕ್ರಿಕೆಟಿನ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆದದ್ದು ನಮಗೆ ಗೊತ್ತೇ ಇದೆ. ಅದೇ ಸಚಿನ್ ಸಾಧನೆಯ ಉತ್ತುಂಗದಲ್ಲಿ ಇದ್ದಾಗ ಸಂಭವಿಸಿದ ಒಂದು ತೀವ್ರವಾದ ದೈಹಿಕ ನೋವು, ಅದನ್ನು ಆತ ಗೆದ್ದ ರೀತಿ ಅದು ಕೂಡಾ ಅದ್ಭುತವೇ ಆಗಿದೆ (Raja Marga Column).
ಅದು ಟೆನ್ನಿಸ್ ಎಲ್ಬೋ (Tennis Elbow) ಎಂಬ ಮಹಾ ನೋವಿನ ಸಮಸ್ಯೆ!
ಆ ಕಾಯಿಲೆ ಬಂತು ಅಂದರೆ ಒಬ್ಬ ಕ್ರಿಕೆಟ್ ಆಟಗಾರನ ಕ್ರಿಕೆಟ್ ಜೀವನ ಮುಗಿದೇ ಹೋಯಿತು ಅನ್ನೋದು ವೈದ್ಯಕೀಯ ವಿಜ್ಞಾನದ ಸತ್ಯ. ಅದೇ ಕಾಯಿಲೆಯು ಸಚಿನ್ ಬಲಗೈ ಮೊಣಗಂಟಿಗೆ ಅಮರಿತ್ತು. ಒಂದು ಕ್ರಿಕೆಟ್ ಬಾಲನ್ನು ಎತ್ತಲು ಸಾಧ್ಯವಾಗದೆ ಸಚಿನ್ ನೋವಿನಲ್ಲಿ ನರಳಿದರು. ಎದುರಿನ ವ್ಯಕ್ತಿಗೆ ಶೇಕ್ ಹ್ಯಾಂಡ್ ಮಾಡಲು ಕೂಡ ಆಗದ ಪರಿಸ್ಥಿತಿ. ದೇಶದಾದ್ಯಂತ ಕ್ರಿಕೆಟ್ ಪ್ರೇಮಿಗಳಿಗೆ ಸಿಡಿಲು ಬಡಿದ ಅನುಭವ. ನಮ್ಮ ಕ್ರಿಕೆಟ್ ದೇವರು ಇನ್ನು ಮುಂದೆ ಆಡುವುದಿಲ್ಲವಂತೆ ಎಂಬ ಸುದ್ದಿ ಭಾರತೀಯರಿಗೆ ತುಂಬಾ ನೋವು ಕೊಟ್ಟಿತ್ತು. ಹಲವು ಕಡೆ ಯುವಕರು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಬಂದವು.

ಇಂಗ್ಲೆಂಡಿನಲ್ಲಿ ನಡೆಯಿತು ಸಂಕೀರ್ಣ ಶಸ್ತ್ರಚಿಕಿತ್ಸೆ

ಸಚಿನ್ ಇಂಗ್ಲೆಂಡಿಗೆ ಹೋಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದರು. ಅದು ತೀವ್ರ ಯಾತನಾಮಯ ಸರ್ಜರಿ. ವೈದ್ಯರು ಇನ್ನು ಕ್ರಿಕೆಟ್ ಆಡುವುದು ಬೇಡ ಎಂಬ ಸಲಹೆ ಕೊಟ್ಟರು. ಸಚಿನ್ ಅದಕ್ಕೆ ಏನೂ ಹೇಳಲಿಲ್ಲ. ಭಾರತಕ್ಕೆ ಮರಳಿದ ನಂತರ ರಿಹ್ಯಾಬಿಲಿಟೇಷನ್‌ ದಿನಗಳು ಇನ್ನಷ್ಟು ಯಾತನಾಮಯ ಆಗಿದ್ದವು. ತುಂಬಾ ಶಕ್ತಿಶಾಲಿ ಆಗಿದ್ದ ವ್ಯಕ್ತಿಯೊಬ್ಬ ಸುಮ್ಮನೆ ಮಲಗಿ ವಿಶ್ರಾಂತಿ ಪಡೆಯಬೇಕು ಎಂದರೆ ಹೇಗೆ? ಸಚಿನ್ ಪೂರ್ತಿಯಾಗಿ ಬಸವಳಿದು ಹೋದ ದಿನಗಳು ಅವು.

Sachin Tendulkar Tennis Elbow

ಬೆಂಗಳೂರಿನಲ್ಲಿ ಕಠಿಣ ತರಬೇತು ಆರಂಭ

ರಿಹ್ಯಾಬಿಲಿಟೇಷನ್ ಅವಧಿಯು ಮುಗಿಯುವುದನ್ನೆ ಕಾಯುತ್ತಿದ್ದ ಸಚಿನ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಂದರು. ಅವರ ಒಳಗಿನ ಬೆಂಕಿ ಅವರನ್ನು ಬೆಳಗ್ಗೆ ಆರು ಘಂಟೆಗೆ ಮೈದಾನಕ್ಕೆ ಕರೆದುಕೊಂಡು ಬರುತ್ತಿತ್ತು. ಸಚಿನ್ ಮೊದಲಿಗಿಂತ ಹೆಚ್ಚು ಭಾರವಾದ ಬ್ಯಾಟ್ ಹಿಡಿದು ಆಡಲು ಆರಂಭ ಮಾಡಿದರು. ಆ ತರಬೇತು ಹೇಗಿತ್ತು ಅಂದರೆ ಅಲ್ಲಿದ್ದ ಹುಡುಗರು ಎರಡು ಬಕೆಟ್ ಚೆಂಡು ತಂದು ಆತನ ಮುಂದೆ ಇಡುತ್ತಿದ್ದರು. ಸಚಿನ್ ಬಾಲನ್ನು ಎತ್ತಿಕೊಂಡು ಎಡಗೈಯಲ್ಲಿ ತೂರೋದು, ಬಲಗೈಯಲ್ಲಿ ಭಾರವಾದ ಬ್ಯಾಟ್ ಮೂಲಕ ಆ ಬಾಲನ್ನು ಎತ್ತಿ
ಹೊಡೆಯುವುದು ಮಾಡುತ್ತಿದ್ದರು. ಇದು ತುಂಬಾ ಕಠಿಣವಾದ ತರಬೇತು. ಒಂದು ಘಂಟೆ ಸಚಿನ್ ಇದನ್ನು ಪೂರ್ತಿ ಮಾಡುವಾಗ ಬೆವೆತು ಚಂಡಿ ಆಗುತ್ತಿದ್ದರು. ನಂತರ ಒಳಗೆ ಹೋಗಿ ಟೀ ಶರ್ಟ್ ಬದಲಾಯಿಸಿ ಸಚಿನ್ ಮತ್ತೆ ಮೈದಾನಕ್ಕೆ ಬರುತ್ತಿದ್ದರು.

Sachin Tendulkar Tennis Elbow

ಮೈದಾನದಲ್ಲಿ 20 ರೌಂಡ್ ಜಾಗ್ಗಿಂಗ್

ಆ ದೊಡ್ಡ ಮೈದಾನದ ಸುತ್ತ ಸಚಿನ್ ಅವರ ಜಾಗ್ಗಿಂಗ್ ಆರಂಭ ಆಗುತ್ತಿತ್ತು. ಸತತವಾಗಿ 20 ರೌಂಡ್ ಓಡದೇ ಸಚಿನ್ ಜಾಗ್ಗಿಂಗ್ ನಿಲ್ಲಿಸಿದ್ದೇ ಇಲ್ಲ. ಮಧ್ಯೆ ವಿಶ್ರಾಂತಿ ಕೂಡ ಪಡೆಯುತ್ತಿರಲಿಲ್ಲ.

ನಂತರ ಮತ್ತೆ ಒಳಗೆ ಬಂದು ಸಚಿನ್ ಸ್ನಾನ ಮಾಡಿ, ಉಪಾಹಾರ ಮುಗಿಸಿ ಗ್ರೌಂಡಿಗೆ ಬಂದರೆ ನೆಟ್ ಪ್ರಾಕ್ಟೀಸ್ ಆರಂಭ. ಅದೇ ಭಾರವಾದ ಬ್ಯಾಟ್ ಹಿಡಿದು ಸಚಿನ್ ಅಲ್ಲಿದ್ದ ಎಲ್ಲ ನೆಟ್ ಬೌಲರ್‌ಗಳ ಬಾಲ್ ಎದುರಿಸಿ ಆಡುತ್ತಿದ್ದರು. ಆ ನೆಟ್ ಪ್ರಾಕ್ಟೀಸ್ ಮಧ್ಯಾಹ್ನ 12 ಘಂಟೆಯವರೆಗೆ ನಿಲ್ಲುತ್ತಲೇ ಇರಲಿಲ್ಲ. ಏಕಾಗ್ರತೆಯಿಂದ ಪ್ರತೀ ಬಾಲ್ ಎದುರಿಸಿ ನಿಲ್ಲುವುದು, ತೀವ್ರವಾದ ಬಿಸಿಲಿಗೆ ಬೆವರು ಬಸಿಯುವುದು…ಇದ್ಯಾವುದೂ ಸುಲಭ ಅಲ್ಲ. ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೆ ಮರಳಬೇಕು ಎನ್ನುವ ತುಡಿತ, ತೀವ್ರವಾದ ಸಾಧನೆಯ ಹಸಿವು ಅವರನ್ನು ಪ್ರತೀ ದಿನವೂ ಮೈದಾನಕ್ಕೆ ಎಳೆದು ತರುತ್ತಿತ್ತು.

ಮಧ್ಯಾಹ್ನ ಒಂದಷ್ಟು ಹೊತ್ತು ವಿಶ್ರಾಂತಿ ತೆಗೆದುಕೊಂಡು ಸಂಜೆ ಮತ್ತೆ ನೆಟ್ ಪ್ರಾಕ್ಟೀಸ್ ಆರಂಭ. ಕತ್ತಲಾಗುವವರೆಗೂ ಸಚಿನ್ ಆಡುತ್ತಲೇ ಇರುತ್ತಿದ್ದರು. ಮಬ್ಬು ಕತ್ತಲಲ್ಲಿ ಆಡುವುದರಿಂದ ದೃಷ್ಟಿ ಸೂಕ್ಷ್ಮ ಆಗುತ್ತದೆ ಎನ್ನುವುದು ಅವರ ನಂಬಿಕೆ.

ರಾತ್ರಿ ಮಲಗುವ ಮೊದಲು ಲಗಾನ್, ಚಕ್ ದೇ ಇಂಡಿಯಾ, ಮೊದಲಾದ ಪ್ರೇರಣಾದಾಯಕ ಸಿನೆಮಾ ನೋಡಿ ಮಲಗುವುದು. ಮತ್ತೆ ಬೆಳಿಗ್ಗೆ ಬೇಗ ಎದ್ದು ಯೋಗ, ಧ್ಯಾನ ಮೊದಲಾದ ಚಟುವಟಿಕೆಗಳ ಮೂಲಕ ಮಾನಸಿಕವಾಗಿ ಬಲಿಷ್ಠ ಆಗುವುದು ನಿರಂತರ ನಡೆಯುತ್ತಿತ್ತು.

ಅವರ ಅಭ್ಯಾಸದ ತೀವ್ರತೆ ನೋಡಿ ಅವರ ಫಿಸಿಯೋ ಎಷ್ಟೋ ಬಾರಿ ಬೆಚ್ಚಿ ಬೀಳುತ್ತಿದ್ದರು. ಹಲವು ತಿಂಗಳ ಕಾಲ ಈ ತಪಸ್ಸಿನ ಹಾಗೆ ತರಬೇತಿಯಲ್ಲಿ ಮುಳುಗಿದ್ದ ಸಚಿನ್ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳುವುದು ಕಷ್ಟ ಆಗಲಿಲ್ಲ.

ಇದನ್ನೂ ಓದಿ : Raja Marga Column : ನಿಮ್ಮ 10-14 ವಯಸ್ಸಿನ ಮಕ್ಕಳು ಓದಬೇಕಾದ ಪುಸ್ತಕಗಳು ಇವು!

Sachin Tendulkar Tennis Elbow

ಅದೇ ಭಾರವಾದ ಬ್ಯಾಟ್, ಇನ್ನಷ್ಟು ಅಗ್ರೆಸ್ಸಿವ್ ಆದ ಸಚಿನ್!

ಟೆನ್ನಿಸ್ ಎಲ್ಬೋ ಕಾರಣಕ್ಕೆ ಸಚಿನ್ ಅವರ ಎರಡು ವರ್ಷಗಳ (2004-2006) ಕ್ರಿಕೆಟ್ ಜೀವನ ನಷ್ಟ ಆಗಿತ್ತು. ಮುಂದೆ
ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಮರಳಿದ ಸಚಿನ್ ಮೊದಲಿಗಿಂತ ಭಾರವಾದ ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡಲು ತೊಡಗಿದರು. ಮೊದಲಿಗಿಂತ ಹೆಚ್ಚು ಆಕ್ರಮಣಕಾರಿ ಆಗಿತ್ತು ಅವರ ಆಟ. ಸಚಿನ್ ಅವರ ಹೆಚ್ಚಿನ ದಾಖಲೆಗಳು ಉಂಟಾದದ್ದು ಈ ಕಾಯಿಲೆಯನ್ನು ಗೆದ್ದ ನಂತರವೇ!

ಏಕದಿನ ಕ್ರಿಕೆಟನ ದ್ವಿಶತಕ ಅವರ ಬ್ಯಾಟಿನಿಂದ ಸ್ಫೋಟ ಆಯಿತು. ಆಗ ವೀಕ್ಷಕ ವಿವರಣೆ ಮಾಡುತ್ತಿದ್ದ ರವಿ ಶಾಸ್ತ್ರಿ ಅವರ ಮುಂದೆ ಮೈಕ್ ಹಿಡಿದು ಅದು ಹೇಗೆ ಸಾಧ್ಯ ಆಯಿತು ಎಂದು ಹೇಳಿದ್ದರು.

ಆಗ ಸಚಿನ್ ಹೇಳಿದ ಮಾತು ತುಂಬ ಮುಖ್ಯವಾದದ್ದು. ‘ನಾವು ಚೆನ್ನಾಗಿ ಆಡದೆ ಹೋದಾಗ ಜನರು ನಮ್ಮ ಕಡೆಗೆ ಕಲ್ಲು ಎಸೆಯುತ್ತಾರೆ. ನಾವು ಆ ಕಲ್ಲುಗಳನ್ನು ಎತ್ತಿಕೊಂಡು ನಮ್ಮ ಕನಸಿನ ಸೌಧವನ್ನು ಪೂರ್ತಿ ಮಾಡಬೇಕು!’ ಎಂದಿದ್ದರು. ಸಚಿನ್ ತೆಂಡೂಲ್ಕರ್ ಭಾರತರತ್ನ ಆದದ್ದು ಸುಮ್ಮನೆ ಅಲ್ಲ!

Continue Reading
Advertisement
Fashion Show
ದೇಶ33 mins ago

Fashion Show : ಏಕತೆಗೆ ಧಕ್ಕೆ; ಫ್ಯಾಶನ್​ ಶೋದಲ್ಲಿ ಬುರ್ಖಾ ಹಾಕಿದ್ದಕ್ಕೆ ಮುಸ್ಲಿಂ ನಾಯಕನ ಆಕ್ಷೇಪ!

kalpamrutha cold pressed oil production unit inaugurated
ಕರ್ನಾಟಕ33 mins ago

ಕಲ್ಪಾಮೃತ ಶುದ್ಧ ಗಾಣದ ಎಣ್ಣೆ ಉತ್ಪಾದನಾ ಘಟಕಕ್ಕೆ ಚಾಲನೆ

Gadaga accident two bike riders dead
ಕರ್ನಾಟಕ34 mins ago

Road Accident : ಸೋದರನ ನಿಶ್ಚಿತಾರ್ಥ ಮುಗಿಸಿ ಹೊರಟ ಇಬ್ಬರು ಅಪಘಾತದಲ್ಲಿ ಮೃತ್ಯು

Anju who went to Pakistan for to marry her lover, returns to India
ದೇಶ36 mins ago

Anju Love Story: ಪಾಕ್‌ಗೆ ಹೋಗಿ ಪ್ರಿಯಕರನ ಮದ್ವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್!

vijaypura accident
ಕರ್ನಾಟಕ50 mins ago

Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

Task force committee meeting at Kottur
ವಿಜಯನಗರ1 hour ago

Vijayanagara News: ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ನೇಮಿರಾಜ ನಾಯ್ಕ

Pooja Gandhi and Vijay Ghorpade
ಕರ್ನಾಟಕ1 hour ago

Pooja Gandhi: ಮಳೆ ಹುಡುಗಿಗೆ ಮಂತ್ರ ಮಾಂಗಲ್ಯ; ಹೊಸ ಬಾಳಿಗೆ ಕಾಲಿಟ್ಟ ಪೂಜಾ ಗಾಂಧಿ

Bombay High court orders to son to vacate his mother flat
ಕೋರ್ಟ್1 hour ago

ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

TV Mohandas Pai Priyank Kharge
ಕರ್ನಾಟಕ1 hour ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

physical abuse
ದೇಶ2 hours ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌