ರಾಜ ಮಾರ್ಗ ಅಂಕಣ | ಜೋಹಾರಿ ವಿಂಡೋ: ಇದು ನಮ್ಮ ವ್ಯಕ್ತಿತ್ವದ ಅಂತರ್‌ ದರ್ಶನ ಮಾಡಿಸುವ ಮಹಾ ಕಿಟಕಿ! - Vistara News

ಅಂಕಣ

ರಾಜ ಮಾರ್ಗ ಅಂಕಣ | ಜೋಹಾರಿ ವಿಂಡೋ: ಇದು ನಮ್ಮ ವ್ಯಕ್ತಿತ್ವದ ಅಂತರ್‌ ದರ್ಶನ ಮಾಡಿಸುವ ಮಹಾ ಕಿಟಕಿ!

ರಾಜ ಮಾರ್ಗ ಅಂಕಣ | ನಮ್ಮೆಲ್ಲರ ಅಂತರಂಗ ಶೋಧದ ಹಾಗೂ ವ್ಯಕ್ತಿತ್ವ ವಿಕಸನದ ಅತ್ಯುತ್ತಮ ಮಾದರಿ ಜೋಹಾರಿ ವಿಂಡೋ.. ಏನಿದು ಜೋಹಾರಿ ವಿಂಡೋ? ಇಲ್ಲಿದೆ ಪೂರ್ಣ ಮಾಹಿತಿ.

VISTARANEWS.COM


on

johari window
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA

1955ರ ಹೊತ್ತಿಗೆ ಅಮೆರಿಕದ ಇಬ್ಬರು ಮನಶ್ಶಾಸ್ತ್ರಜ್ಞರು ಅಭಿವೃದ್ಧಿಪಡಿಸಿದ ಈ ವ್ಯಕ್ತಿತ್ವ ಶೋಧದ ಅನನ್ಯ ಮಾದರಿಯು ‘ಜೋಹಾರಿ ಕಿಟಕಿ’ ಎಂದು ಮುಂದೆ ಜಾಗತಿಕ ಮನ್ನಣೆ ಪಡೆಯಿತು. ಅವರೆಂದರೆ ಜೋಸೆಫ್ ಲುಫ್ಟ್ ಮತ್ತು ಹ್ಯಾರಿ ಇಂಘಮ್. ಅದು ನಮ್ಮೆಲ್ಲರ ಅಂತರಂಗ ಶೋಧದ ಹಾಗೂ ವ್ಯಕ್ತಿತ್ವ ವಿಕಸನದ ಅತ್ಯುತ್ತಮ ಮಾದರಿ ಎಂದು ಇಂದು ವಿಶ್ವದೆಲ್ಲೆಡೆ ಮಾನ್ಯತೆ ಪಡೆದಿದೆ. ಅದರ ಪರಿಚಯ ಈ ಲೇಖನದಲ್ಲಿ.

ನಾಲ್ಕು ಕಿಟಕಿಗಳ ಮೂಲಕ ನಮ್ಮ ವ್ಯಕ್ತಿತ್ವ!
ಜೋಹಾರಿ ಹೇಳುವ ಪ್ರಕಾರ ನಮ್ಮ ವ್ಯಕ್ತಿತ್ವವು ನಾಲ್ಕು ಕಿಟಕಿಗಳನ್ನು ಒಳಗೊಂಡಿದೆ. ಪ್ರತಿಯೊಂದು ಕಿಟಕಿಯು ನಮಗೆ ನಮ್ಮ ಅಂತರ್ ದರ್ಶನಕ್ಕೆ ಸಹಾಯ ಮಾಡುತ್ತದೆ. ಆ ಕಿಟಕಿಗಳ ವಿವರಣೆ ಇದೋ ಇಲ್ಲಿದೆ.

೧) ತೆರೆದ ಕಿಟಕಿ (ಓಪನ್ ವಿಂಡೋ)
ನಮಗೆ ನಮ್ಮ ಬಗ್ಗೆ ಗೊತ್ತಿರುವ ಮತ್ತು ಬೇರೆಯವರಿಗೆ ಕೂಡ ಗೊತ್ತಿರುವ ವಿಷಯಗಳು ಇಲ್ಲಿ ಸ್ಟೋರ್ ಆಗಿರುತ್ತವೆ. ಉದಾಹರಣೆಗೆ ನಮ್ಮ ಹೆಸರು, ಉದ್ಯೋಗ, ನಮ್ಮ ವಿಳಾಸ, ಸಾಮರ್ಥ್ಯಗಳು, ನಮ್ಮ ನಂಬಿಕೆಗಳು, ನಮ್ಮ ಮನೋಭಾವಗಳು, ನಮ್ಮ ಒಡನಾಡಿಗಳು, ನಮ್ಮ ಕೌಶಲಗಳು… ಹೀಗೆ ಸಾಕಷ್ಟು ಅಂಶಗಳನ್ನು ಈ ಕಿಟಕಿಯು ಒಳಗೊಂಡಿರುತ್ತದೆ. ಇಲ್ಲಿ ಯಾವುದೂ ಮುಚ್ಚಿಡುವ ಅಂಶಗಳು ಇರುವುದಿಲ್ಲ. ನಾನೊಬ್ಬ ಭಾವಜೀವಿ, ಭಾವತೀವ್ರತೆಯ ವ್ಯಕ್ತಿ ಎನ್ನುವುದು ನನಗೆ ಗೊತ್ತಿದೆ ಮಾತ್ರವಲ್ಲ ನನ್ನ ನೂರಾರು ಗೆಳೆಯರಿಗೆ ಗೊತ್ತಿದೆ. ನಾನು ಬೇರೆಯವರ ಕಷ್ಟಗಳಿಗೆ ಬೇಗ ಕರಗುತ್ತೇನೆ ಎಂದು ನನಗೂ, ಬೇರೆಯವರಿಗೂ ಸ್ಪಷ್ಟವಾಗಿ ಗೊತ್ತಿದೆ. ಹೀಗೆ ನೀವು ಪಟ್ಟಿ ಮಾಡುತ್ತ ಹೋದರೆ ನೂರಾರು ಸಂಗತಿಗಳು ನಿಮ್ಮ ಓಪನ್ ವಿಂಡೋದ ಭಾಗವಾಗಿರುತ್ತವೆ. ಈ ಪಟ್ಟಿ ಉದ್ದವಾದಷ್ಟು ನೀವು ಪಾಸಿಟಿವ್ ವ್ಯಕ್ತಿ ಆಗುತ್ತೀರಿ. ಈ ಕಿಟಕಿ ಅಗಲವಾಗುತ್ತಾ ಹೋದಂತೆ ನೀವು ಲೆಜೆಂಡ್ ಆಗುತ್ತೀರಿ. ಉದಾಹರಣೆಗೆ ಅಬ್ದುಲ್ ಕಲಾಂ ಅವರ ಜೀವನದಲ್ಲಿ ಮುಚ್ಚಿಡುವ ಸಂಗತಿ ಯಾವುದೂ ಇರಲಿಲ್ಲ. ಅವರ ಬಗ್ಗೆ ಅವರಿಗೆಷ್ಟು ಗೊತ್ತಿತ್ತೋ ಅಷ್ಟೂ ವಿಷಯಗಳು ಜಗತ್ತಿಗೆ ಗೊತ್ತಿತ್ತು! ಹಾಗೆ ಅವರ ಓಪನ್ ವಿಂಡೋ ಶ್ರೀಮಂತ ಆಗಿತ್ತು ಅನ್ನಬಹುದು!

ಜೊಹಾರಿ ವಿಂಡೋ ಮಾದರಿ

೨) ಕುರುಡು ಕಿಟಕಿ (ಬ್ಲೈಂಡ್ ವಿಂಡೋ)
ನಮ್ಮ ಬಗ್ಗೆ ಬೇರೆಯವರಿಗೆ ಗೊತ್ತಿರುವ ಎಷ್ಟೋ ಸಂಗತಿಗಳು ನಮಗೆ ಗೊತ್ತಿರುವುದಿಲ್ಲ! ಅವುಗಳ ಸಂಗ್ರಹವೇ ಈ ಕುರುಡು ಕಿಟಕಿ. ಉದಾಹರಣೆಗೆ ನಿಮಗೆ ಸ್ಟ್ರಾಂಗ್ ಆದ ಮೆಮೊರಿ ಇದೆ ಎಂದು ನಿಮಗೆ ಗೊತ್ತಿರುವುದಿಲ್ಲ. ಆದರೆ ಬೇರೆಯವರಿಗೆ ಗೊತ್ತಿರುತ್ತದೆ. ನಿಮ್ಮ ನಗು ಚಂದ ಇದೆ ಎಂದು ನಿಮಗೆ ಗೊತ್ತಿರುವುದಿಲ್ಲ. ಆದರೆ ಬೇರೆ ಯಾರೋ ಹೇಳಿದ ನಂತರ ನಿಮಗೆ ಗೊತ್ತಾಗುತ್ತದೆ.

ನಿಮ್ಮ ಎಷ್ಟೋ ಸಾಮರ್ಥ್ಯಗಳು, ದೌರ್ಬಲ್ಯಗಳು, ಕೌಶಲಗಳು ನಿಮಗೆ ಗೊತ್ತಿರುವುದಿಲ್ಲ. ಆದರೆ, ಬೇರೆಯವರಿಗೆ ಗೊತ್ತಿರುತ್ತದೆ. ಉದಾಹರಣೆಗೆ ಸಚಿನ್ ತೆಂಡೂಲ್ಕರ್ ಒಬ್ಬ ಕ್ರಿಕೆಟ್ ಲೆಜೆಂಡ್ ಆಗುತ್ತಾರೆ ಎಂದು ಸಚಿನ್ ಅವರಿಗೆ ಗೊತ್ತಿರಲಿಲ್ಲ. ಆದರೆ ಅವರ ಗುರು ರಮಾಕಾಂತ್ ಆಚ್ರೇಕರ್‌ ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು!

ಈ ಕಿಟಕಿಯ ಪ್ರಭಾವದಿಂದ ಎಷ್ಟೋ ಜನ ಉತ್ತಮ ಸಿಂಗರ್ಸ್ ಆಗುವವರು ಇಂದಿಗೂ ಬಾತ್‌ ರೂಂ ಸಿಂಗರ್ ಆಗಿ ಉಳಿದಿದ್ದಾರೆ. ಎಷ್ಟೋ ಜನ ಒಳ್ಳೆಯ ಭಾಷಣಕಾರ ಆಗಬಲ್ಲವರು ವೇದಿಕೆಗೆ ಬಾರದೇ ಕೆಳಗೇ ಕೂತು ಬಿಡುತ್ತಾರೆ! ಈ ಕಿಟಕಿಯ ಸಾಕ್ಷಾತ್ಕಾರ ಆಗಬೇಕಾದರೆ ನಿಮಗೆ ಹದಿಹರೆಯದ ಹೊತ್ತಿನಲ್ಲಿ ಒಳ್ಳೆಯ ಗುರು ಅಥವ ಮೆಂಟರ್ ಅಥವಾ ಒಳ್ಳೆಯ ತರಬೇತುದಾರರು ದೊರೆಯಬೇಕು. ಹೆಚ್ಚು ತರಬೇತಿಗಳು ದೊರೆಯಬೇಕು.

೩) ಮುಚ್ಚಿದ ಕಿಟಕಿ (ಹಿಡನ್ ವಿಂಡೋ)
ಇದು ಇನ್ನೂ ವಿಸ್ಮಯಕಾರಿ ಕಿಟಕಿ. ನಿಮ್ಮ ಬಗ್ಗೆ ನಿಮಗೆ ಮಾತ್ರ ಗೊತ್ತಿರುವ ಮತ್ತು ಬೇರೆಯವರಿಗೆ ಗೊತ್ತೇ ಇಲ್ಲದ ನೂರಾರು ಸಂಗತಿಗಳು ಈ ಕಿಟಕಿಯ ಭಾಗ ಆಗಿರುತ್ತವೆ. ಅಂದರೆ ನಿಮ್ಮ ಜೀವನದ ಟಾಪ್ ಮೋಸ್ಟ್ ರಹಸ್ಯಗಳು ಇಲ್ಲಿ ಹೆಪ್ಪುಗಟ್ಟಿರುತ್ತವೆ. ನಮ್ಮ ಜೀವನ ಎಷ್ಟು ತೆರೆದ ಪುಸ್ತಕ ಎಂದು ನಾವು ಹೇಳಿದರೂ ನಾವು ಯಾರ ಹತ್ತಿರವೂ ಶೇರ್ ಮಾಡಲು ಸಾಧ್ಯವೇ ಆಗದ ನೂರಾರು ಸಂಗತಿಗಳು ಒಳಗೆ ಇರುತ್ತವೆ! ನಾವು ಅಂತರ್ಮುಖಿಗಳು ಆದರೆ ಈ ಕಿಟಕಿ ಇನ್ನಷ್ಟೂ ಅಗಲ ಆಗುತ್ತದೆ. ಮುಚ್ಚಿದ ಕಿಟಕಿ ಕಿರಿದಾದಷ್ಟು ನಮಗೆ ನಿರಾಳ! ಈ ಕಿಟಕಿ ಅಗಲ ಆದಷ್ಟು ನಾವು ಫೇಕ್ ಆಗುತ್ತೇವೆ.

ಅದಕ್ಕೆ ಮನಸ್ಸು ತೆರೆದು ಮಾತಾಡಲು ಸಾಧ್ಯವಾಗುವ ಗೆಳೆಯರು, ಒಡನಾಡಿಗಳು ಬೇಕು ಅನ್ನುವುದು. ದಿನಕ್ಕೆ ಸ್ವಲ್ಪ ಹೊತ್ತು ಮನಸ್ಸು ತೆರೆದು ಮಾತಾಡಲು ನಮಗೆ ಸಾಧ್ಯವಾದರೆ ನಮ್ಮ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ.

೪) ಅಜ್ಞಾತ ಕಿಟಕಿ ( Unknown Window)
ನಮ್ಮ ಬಗ್ಗೆ ನಮಗೆ ಗೊತ್ತಿಲ್ಲದ ಮತ್ತು ಬೇರೆಯವರಿಗೂ ಗೊತ್ತಿಲ್ಲದ ಎಷ್ಟೋ ಸಂಗತಿಗಳು ಈ ಅಜ್ಞಾತ ಕಿಟಕಿಯಲ್ಲಿ ಸ್ಥಾನ ಪಡೆಯುತ್ತವೆ. ಈ ಸಂಗತಿಗಳು ನಿಜಕ್ಕೂ ನಮಗೇ ಕೆಲವು ಬಾರಿ ವಿಸ್ಮಯಕಾರಿ ಆಗಬಹುದು. ಎಷ್ಟೋ ಬಾರಿ ನಾವು ಮಾತಾಡುವಾಗ ಬಂದ ಮಾತು ಅದು ಎಲ್ಲಿಂದ ಬಂದದ್ದು ಎಂದು ನಮಗೇ ಆಶ್ಚರ್ಯ ಆಗಬಹುದು! ಒಬ್ಬರು ಅಜ್ಜಿ ತಾನು ಸಾಯುವ ದಿನ, ಘಳಿಗೆ ಎಲ್ಲವನ್ನು ಮೊದಲೇ ಬರೆದಿಟ್ಟು ತನ್ನ ಮನೆಯವರನ್ನು ಎಲ್ಲರನ್ನೂ ಕರೆದು ಪಾಯಸ ಮಾಡಿ ಕುಡಿದು ಉಸಿರು ನಿಲ್ಲಿಸಿತ್ತು! ಅದು ಹೇಗೆ ಸಾಧ್ಯವಾಯಿತು? ಗೊತ್ತಿಲ್ಲ. ಒಬ್ಬ ಗೆಳೆಯ ತನಗೆ ಬೈಕ್ ಅಪಘಾತ ಆಗುತ್ತದೆ ಎಂಬುದನ್ನು ಮುಂಚಿತವಾಗಿ ಎಲ್ಲರಿಗೂ ಹೇಳಿದ್ದ. ಹೇಗೆ? ನನಗಿನ್ನೂ ಗೊತ್ತಿಲ್ಲ. ಈ ಅಜ್ಞಾತ ಕಿಟಕಿಯಲ್ಲಿ ಸಂಗ್ರಹ ಆಗಿರುವ ಸಾವಿರಾರು ಸಂಗತಿಗಳಿಗೆ ಯಾವ ಕಾರ್ಯ ಕಾರಣ ಸಂಬಂಧ ಕೂಡ ಇರುವುದಿಲ್ಲ! ಅದು ಅತೀಂದ್ರಿಯ ಶಕ್ತಿಯನ್ನು ಕೂಡ ಮೀರಿದ್ದು.

ಘಟನೆ ನಡೆದ ನಂತರ ಅವುಗಳ ವಿಶ್ಲೇಷಣೆ ಮಾಡಿದರೆ ನಮಗೆ ಅವುಗಳ ರೂಟ್ ಯಾವುದು ಎಂದು ಗೊತ್ತಾಗಬಹುದು. ಆದರೆ ಈ ಅಜ್ಞಾತ ಕಿಟಕಿಯ ಬಗ್ಗೆ ವಿಜ್ಞಾನಿಗಳು ಎಷ್ಟು ಸಂಶೋಧನೆ ಮಾಡಿದರೂ ಈವರೆಗೆ ಅದರ ಆಳ, ಅಗಲ, ವಿಸ್ತಾರಗಳನ್ನು ಅಳೆಯಲು ಸಾಧ್ಯ ಆಗಿಲ್ಲ!

ಒಟ್ಟು ಸಾರಾಂಶ ಏನೆಂದರೆ, ನಾವು ಯಶಸ್ವೀ ಆಗಬೇಕು ಅಂತಾದರೆ ತೆರೆದ ಕಿಟಕಿಯು ಇನ್ನಷ್ಟು ಅಗಲ ಆಗಬೇಕು. ಕುರುಡು ಕಿಟಕಿಯು ಇನ್ನಷ್ಟು ಕಿರಿದು ಆಗಬೇಕು. ಅಂದರೆ ನಮ್ಮ ಒಳಗಿರುವ ಅನೇಕ ಸಾಮರ್ಥ್ಯಗಳು ಆದಷ್ಟು ಬೇಗ ಬೆಳಕಿಗೆ ಬರಬೇಕು. ಮುಚ್ಚಿದ ಕಿಟಕಿ ತೆರೆದು ಬೆಳಕು ಚೆಲ್ಲಬೇಕು. ಮನಸ್ಸನ್ನು ಬಿಚ್ಚಿ ಮಾತಾಡಿ ಹಗುರ ಆಗಬೇಕು. ಅಜ್ಞಾತ ಕಿಟಕಿಯ ಘಟನೆಗಳನ್ನು ವಿಶ್ಲೇಷಣೆ ಮಾಡಬೇಕು. ಅಂತರಾವಲೋಕನ ಮಾಡಬೇಕು. ಆಗ ನಾವು ಖಂಡಿತವಾಗಿ ಲೆಜೆಂಡ್ ಆಗುತ್ತೇವೆ. ಈ ವಿಕಸನದ ಅನನ್ಯ ಮಾದರಿಯನ್ನು ನಮಗೆ ನೀಡಿದ ಜೋಹಾರಿ ಗೆಳೆಯರಿಗೆ ನಮ್ಮ ಧನ್ಯವಾದ ಇರಲಿ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ನಾವು ನಾವಾಗಿಯೇ ಇರಬೇಕು, ಬೇರೆಯವರಂತಲ್ಲ: ಅನನ್ಯ ಅನ್ನುವುದೇ ನಮ್ಮ ಬ್ರಾಂಡ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಕೇರಂ ಬೋರ್ಡ್‌ ಅಂಕಣ: ಮಲೆನಾಡಿನ ಮಳೆಯಲ್ಲಿ ಶ್ರೀರಾಮ ಏನಾದ?

ಕೇರಂ ಬೋರ್ಡ್:‌ ಸೀತೆಯನ್ನು ಕಳೆದುಕೊಂಡು ವಿರಹತಪ್ತನಾದ ಶ್ರೀರಾಮ ಮಳೆಗಾಲದ ನಾಲ್ಕು ತಿಂಗಳುಗಳನ್ನು ಪರ್ವತದ ಗುಹೆಯೊಂದರಲ್ಲಿ ಕಳೆಯಬೇಕಾಗುತ್ತದೆ. ಈ ಮಳೆಕಾಡಿದ ಮುಂಗಾರಿನ ವನವಾಸ ರಾಮನಿಗೆ ಮಾಡಿದ್ದೇನು?

VISTARANEWS.COM


on

ಕೇರಂ ಬೋರ್ಡ್‌ rama and laxmana
Koo

ʼರಾಮಾಯಣ ದರ್ಶನಂʼ ಕಾಣಿಸಿದ ಒಂದು ದರ್ಶನ

kerum board

ಮಳೆಗಾಲ (Monsoon) ಎಂದರೆ ನೆನಪಾಗುವುದು ಬಾಲ್ಯದ ಮಲೆನಾಡಿನ ಎಡೆಬಿಡದ ಮುಂಗಾರು; ನಂತರ ಅದೇ ಮೈಯಾಂತು ಬಂದಂತೆ ‘ಶ್ರೀ ರಾಮಾಯಣ ದರ್ಶನಂ’ ಕೃತಿಯಲ್ಲಿ ಕುವೆಂಪು (Kuvempu) ಕಾಣಿಸಿದ ಕಾರ್ಗಾಲ. ಅದು ಅಂತಿಂಥ ಕಾವಳದ ಕಾಲವಲ್ಲ. ಮಲೆಗಳಲ್ಲಿ ಮದುಮಗಳು, ಕಾನೂರು ಕಾದಂಬರಿಗಳಲ್ಲೂ  ಅವರ ‘ಕದ್ದಿಂಗಳು ಕಗ್ಗತ್ತಲು’ ಮೊದಲಾದ ಪದ್ಯಗಳಲ್ಲೂ  ಅದರ ಝಲಕ್ ಇದೆ. ರಾಮಾಯಣ ದರ್ಶನಂನಲ್ಲಿ ಕತೆಯ ಭಾಗವಾಗಿ, ಶ್ರೀ ರಾಮನ (Sri Rama) ಮನಸ್ಸಿನ ಭಾವರೂಪಕವಾಗಿ, ಸೀತಾವಿರಹದ ವಸ್ತುಪ್ರತಿರೂಪವಾಗಿ ಅದು ಬರುತ್ತದೆ.

ಅದು ಶುರುವಾಗುವುದು ಹೀಗೆ: ವನವಾಸದ ವೇಳೆ ಸೀತೆಯನ್ನು ಕಳೆದುಕೊಂಡ ರಾಮ ಪಂಚವಟಿಯಿಂದ ಮುಂದೊತ್ತಿ ಬಂದು ಕಿಷ್ಕಿಂಧೆಯಲ್ಲಿ ಸುಗ್ರೀವನ ಸಖ್ಯ ಬೆಳೆಸಿ, ವಾಲಿವಧೆ ಮಾಡುತ್ತಾನೆ. ಅಷ್ಟರಲ್ಲಿ ಮಳೆಗಾಲ ಸಮೀಪಿಸುತ್ತದೆ. ವನವಾಸವಾದ್ದರಿಂದ ಅವನಿಗೆ ಪುರಪ್ರವೇಶವಿಲ್ಲ. ಹೀಗಾಗಿ ಪ್ರಸ್ರವಣ ಪರ್ವತದ ಗುಹೆಯೊಂದರಲ್ಲಿ ತಂಗುತ್ತಾನೆ. ಮುಂಗಾರಿಗಾಗಿ ತಿರೆ ಬಾಯಾರಿದೆ- ಸೀತೆಯ ವಿರಹತಪ್ತ ರಾಮನ ಹಾಗೆ. ದಿಗಂತದಂಚಲ್ಲಿ ಮೇಘಸ್ತೋಮ ಮೇಲ್ಮೇಲೆದ್ದು ಬರುತ್ತದೆ-

ಸೀತೆಗೆ ರಾಮನಂತೆ, ಮುಂಗಾರ್ಗೆ ತಿರೆ
ಬಾಯಾರುತಿರೆ, ಓ ಆ ದಿಗಂತದೆಡೆ, ವರದಂತೆವೋಲ್
ಕಾಣಿಸಿತು ವರ್ಷಶಾಪಂ, ರವಿಸಂಗಿ, ಶರಧಿಶಿಶು,
ನೀರದಸ್ತೂಪನೀಲಂ, ಶಿವನ ಜಟೆಯಂತೆವೋಲ್
ಶಿಖರಾಕೃತಿಯಿನುಣ್ಮಿ, ಮೇಲೆಮೇಲಕ್ಕೇರ್ದು
ಶೈಲಾಕೃತಿಯಿನುರ್ಬ್ಬಿ, ತೆಕ್ಕನೆ ಕದದ್ದತ್ತು.
ಕುಣಿವ ಕಾಳಿಯ ಕರಿಯ ಮುಡಿ ಬಿರ್ಚ್ಚಿ ಪರ್ವುವೋಲ್,
ಸಂಜೆಬಾನಂ ಮುಸುಕಿ ಮುಚ್ಚಿ. ಮೇಣ್ ಕಾರ್ಗಾಳಿ
ಬೀಸಿದುದು ಮಲೆಯ ಮಂಡೆಯ ಕಾಡುಗೂದಲಂ
ಪಿಡಿದಲುಬಿ ತೂಗಿ, ನೋವಿಂಗೊರಲಿದತ್ತಡವಿ :
ಹಳೆಮರಗಳುರುಳಿ ; ಮರಕೆ ಮರವುಜ್ಜಿ ; ಕೊಂಬೆಗೆ
ಕೊಂಬೆ ತೀಡಿ ; ಮಳೆಯೊಳ್ ಬಿದಿರು ಕರ್ಕಶವುಲಿಯ
ಕೀರಿ, ಸಿಡಿರೋಷದಿಂ ಕಿಡಿಯಿಡುವ ಮಸಿನವಿರ
ಪುರ್ಬ್ಬಿನಾ ಕಾರ ರಾಕ್ಷಸಿಯಕ್ಷಿಯಲೆವಂತೆ

ಈ ಮುಂಗಾರು ‘ವರ್ಷಶಾಪಂ’. ವಿರಹಾಗ್ನಿದಗ್ಧ ರಾಮನಂತಃಕರಣದ ಕ್ಷೋಭೆಯಂತೆ ಇಲ್ಲಿ ಕಾಣುವುದೆಲ್ಲ ಕರಾಳ ಪ್ರತಿಮೆಗಳು- ತಲೆಕುಚ್ಚು ಹಿಡಿದಲುಗಿಸುವ, ನೋವಿಗೆ ಒರಲುವ, ಕರ್ಕಶ ಕೀರುವ ಬಿದುರಿನ, ಕಡುಗಪ್ಪುಗೂದಲಿನ ಹುಬ್ಬಿನ ಯಕ್ಷಿರಾಕ್ಷಸಿ ಇತ್ಯಾದಿ. ಮಳೆ ಶುರುವಾಗುತ್ತದೆ:

ಮಿಂಚಿತು ಮುಗಿಲಿನಂಚು, ಸಂಘಟ್ಟಣೆಗೆ ಸಿಡಿಲ್
ಗುಡುಗಿದವು ಕಾರ್ಗಲ್ ಮುಗಿಲ್‌ಬಂಡೆ, ತೋರ ಹನಿ
ಮೇಣಾಲಿಕಲ್ ಕವಣೆವೀಸಿದುವು. ಬಿಸಿಲುಡುಗಿ,
ದೂಳುಂಡೆಗಟ್ಟಿ, ಮಣ್‌ತೊಯ್ದು, ಕಮ್ಮನೆ ಸೊಗಸಿ
ತೀಡಿದುದು ನೆಲಗಂಪು ನಲ್, ಝಣನ್ನೂಪುರದ
ಸುಸ್ವರದ ಮಾಧುರ್ಯದಿಂ ಕನತ್ಕಾಂತಿಯಿಂ
ಝರದ ಝಲ್ಲರಿಯ ಜವನಿಕೆಯಾಂತು ನರ್ತಿಸುವ
ಯೌವನಾ ಯವನಿಯ ಕರದ ಪೊಂಜುರಿಗೆಯಂತೆ
ಸುಮನೋಜ್ಞಮಾದುದಾ ಭೀಷ್ಮ ಸೌಂದರ್ಯದಾ
ಮುಂಗಾರ್ ಮೊದಲ್.

ಹಿಂಗಿದುದು ಬಡತನಂ ತೊರೆಗೆ,
ಮೊಳೆತುದು ಪಸುರ್‌ ತಿರೆಗೆ, ಪೀತಾಂಬರಕೆ
ಜರತಾರಿಯೆರಚುವೋಲಂತೆ ಕಂಗೊಳಿಸಿದುದು
ಹಸುರು ಗರುಕೆಯ ಪಚ್ಚೆವಾಸಗೆಯೊಳುದುರಿರ್ದ
ಪೂವಳದಿ ಪೊನ್, ಬಂಡೆಗಲ್ ಬಿರುಕಿನಿಂದಾಸೆ
ಕಣ್ದೆರೆಯುವಂತೆ ತಲೆಯೆತ್ತಿದುದು ಸೊಂಪುವುಲ್.
ಮಿಂದು ನಲಿದುದು ನಗಂ : ಮೇದು ತಣಿದುದು ಮಿಗಂ ;
ಗರಿಗೊಂಡೆರಂಕೆಗೆದರುತೆ ಹಾಡಿ ಹಾರಾಡಿ
ಹಣ್ಣುಂಡು ಹಿಗ್ಗಿದುದು ಹಕ್ಕಿಯ ಮರಿಯ ಸೊಗಂ.
ಮಳೆ ಹಿಡಿದುದತಿಥಿಯಾಗೈತಂದವಂ ಮನೆಗೆ
ತನ್ನೊಡೆತನವನೊಡ್ಡಿ ನಿಲ್ವಂತೆ.

ಮಳೆ ಹಿಡಿದದ್ದು ಮನೆಗೆ ಬಂದ ಅತಿಥಿ ಮನೆಗೇ ಒಡೆತನವನ್ನೊಡ್ಡಿದಂತಾಯ್ತು- ಭಿಕ್ಷೆ ಬೇಡಲು ಬಂದವನು ಗೃಹಿಣಿಯನ್ನೇ ಅಪಹರಿಸಿದಂತೆ! ಇಲ್ಲಿಂದ ರಾಮನ ಏಕಾಂತದುರಿಯ, ಭಗ್ನಮಾನಸದ ದುರ್ದಿನಗಳು ಆರಂಭವಾಗುತ್ತವೆ:

ದುರ್ದಿನಂ ದ್ರವರೂಪಿಯಾಗಿ ಕರಕರೆಯ ಕರೆದುದನಿಶಂ
ದೂರವಾದುದು ದಿನಪದರ್ಶನಂ,

(ದಿನಪಕುಲಜನಿಗೆ ದಿನಪದರ್ಶನ ದುರ್ಲಭವಾಯಿತು)

ಕವಿದುದಯ್
ಕರ್ಮುಗಿಲ ಮರ್ಬ್ಬಿನ ಮಂಕು ಪಗಲಮ್. ಇರುಳಂ
ಕರುಳನಿರಿದುದು ಕೀಟಕೋಟಿಯ ಕಂಠವಿಕೃತಿ.

ಸುಖದ ದಿನಗಳಲ್ಲಿ ಜೋಗುಳವೆನಿಸಬಹುದಾಗಿದ್ದ ಇರುಳ ಕೀಟಗಳ ದನಿಯೀಗ ಕಂಠವಿಕೃತಿ. ಇಲ್ಲಿಂದಾಚೆ ಮಲೆನಾಡಿನವರಿಗೆ ಸುಲಭವಾಗಿ ಅರ್ಥವಾಗಬಹುದಾದ ಚಿತ್ರಗಳು. ಗಟ್ಟಿ ಹಿಡಿದು ಸುರಿಯುವ ಮಳೆಗೆ ಮುದುಡುವ ಜೀವರಾಜಿಯ ನೋಟಗಳು.

ramayana forest
rama laxmana

ಗರಿ ತೊಯ್ದು ಮೆಯ್ದಂಟಿ ಕಿರಿಗೊಂಡ ಗಾತ್ರದಿಂ
ಮುದುರಿದೊದ್ದೆಯ ಮುದ್ದೆಯಾಗಿ ಕುಗುರಿತು ಹಕ್ಕಿ
ಹೆಗ್ಗೊಂಬನೇರಿ, ಕಾಡಂಚಿನಾ ಪಸಲೆಯಂ
ನಿಲ್ವಿರ್ಕೆ ಗೈದು, ರೋಮಂದೊಯ್ದಜಿನದಿಂದ
ಕರ್ಪು ಬಣ್ಣಂಬಡೆದವೋಲಿರ್ದು, ಹರಹರೆಯ
ಕೊಂಬಿನಿಂದಿಂಬೆಸೆವ ಮಂಡೆಯ ಮೊಗವನಿಳುಹಿ,
ಜಡಿಯ ಜಿನುಗಿಗೆ ರೋಸಿ, ತನ್ನ ಹಿಂಡಿನ ನಡುವೆ
ನಿಂದುದು ಮಳೆಗೆ ಮಲೆತು, ಕೆಸರು ಮುಚ್ಚಿದ ಖುರದ
ಕಾಲ್ಗಳ ಮಿಗದ ಹೋರಿ.

ಕಲ್ಲರೆಯನೇರಿದುದು
ಕಟ್ಟಿರುಂಪೆಯ ಪೀಡೆಗಾರದ ಮೊಲಂ, ಜಿಗಣೆ,
ನುಸಿ, ಹನಿಗಳಿಗೆ ಹೆದರಿ ಹಳುವನುಳಿಯುತ್ತೆ ಹುಲಿ
ಹಳು ಬೆಳೆಯದತ್ತರದ ಮಲೆಯ ನೆತ್ತಿಯನರಸಿ
ಚರಿಸಿದುದು. ಜೀರೆಂಬ ಕೀ‌ದನಿಯ ಚೀ‌ರ್‌ಚೀರಿ
ಪಗಲಿರುಳ ಗೋಳಗರೆದುದಯ್ ಝಿಲ್ಲಿಕಾ ಸೇನೆ :
ಬೇಸರದೇಕನಾದಮಂ ಓ ಬೇಸರಿಲ್ಲದೆಯೆ
ಬಾರಿಸುತನವರತಂ ಬಡಿದುದು ಜಡಿಯ ಸೋನೆ !

ಹೀಗೆ ಸಾಮಾನ್ಯರಿಗೂ ಮಂಕು ಹಿಡಿಸುವ ಕಾರ್ಗಾಲ, ಜೀವನದ ಗಾಢ ವಿಷಣ್ಣಕಾಲದಲ್ಲಿರುವವನಿಗೆ ಇನ್ನು ಹೇಗಿರಬಹುದು. ಒಂದೊಂದೇ ಮಾಸ ಯಾವಾಗ ಮುಗಿಯುತ್ತದೆ, ಯಾವಾಗ ಬಿಸಿಲೇಳುತ್ತದೆ ಎಂದು ಕಾಯುವ ಕರ್ಮ.

ಕಳೆದುದಯ್ ಜೇಷ್ಠಮಾಸಂ. ತೊಲಗಿತಾಷಾಢಮುಂ.
ತೀರ್ದುದಾ ಶ್ರಾವಣಂ. ಭಾದ್ರಪದ ದೀರ್ಘಮುಂ,
ಶಿವಶಿವಾ, ಕೊನೆಮುಟ್ಟಿದತ್ತೆಂತೊ ! ದಾಶರಥಿ ತಾಂ
ಮಾಲ್ಯವತ್ ಪರ್ವತ ಗುಹಾಶ್ರಮದಿ ಕೇಳ್, ಶ್ರಮದಿಂದ
ನೂಂಕುತಿರ್ದನ್ ಮಳೆಯ ಕಾಲಮಂ, ಕಾಲಮಂ
ಸತಿಯ ಚಿಂತೆಗೆ ಸಮನ್ವಯಿಸಿ, ಬೈಗು ಬೆಳಗ
ಮೇಣ್ ಪಗಲಿರುಳಂ ದಹಿಸಿತಗಲಿಕೆವೆಂಕೆ :
ಪಡಿದೋರ್ದುದಾ ವಿರಹಮಿಂದ್ರಗೋಪಂಗಳಿಂ ಮೇಣ್
ಮಿಂಚುಂಬುಳುಗಳಿಂ; ಇರುಳ್, ಅಣ್ಣತಮ್ಮದಿ‌ರ್
ಗವಿಯೊಳ್ ಮಲಗಿ, ನಿದ್ದೆ ಬಾರದಿರೆ, ನುಡಿಯುವರ್

ಹಗಲು ಕಾಮನಬಿಲ್ಲುಗಳು ವಿರಹವನ್ನು ವೆಗ್ಗಳಿಸುವುವು. ಇರುಳು ಅಗಲಿಕೆ ಬೆಂಕಿ ದಹಿಸಿ ನಿದ್ದೆ ಬಾರದು. ಅಣ್ಣ ತಮ್ಮಂದಿರು ಕತ್ತಲನ್ನು ದಿಟ್ಟಿಸುತ್ತಾ ಮಾತನಾಡುವರು. ಮಾತಿನಲ್ಲಿ ಅಸ್ಪಷ್ಟ ಭವಿಷ್ಯದ ಚಿತ್ರ.

ಕಡೆಯುವರ್ ತಮ್ಮ ಮುಂದಣ ಕಜ್ಜವಟ್ಟೆಯಂ.
ಕಾರಿರುಳ್‌. ಹೆಪ್ಪುಗಟ್ಟಿದ ಕಪ್ಪು, ಕಲ್ಲಂತೆವೋಲ್.
ಹೊರಗೆ, ಮಳೆ ಕರಕರೆಯ ಕರೆಯುತಿದೆ. ಕಪ್ಪೆ ಹುಳು
ಹಪ್ಪಟೆಯ ಕೊರಳ ಸಾವಿರ ಹಲ್ಲ ಗರಗಸಂ
ಗರ್ಗರನೆ ಕೊರೆಯುತಿದೆ ನಿಶೆಯ ನಿಶ್ಯಬ್ದತೆಯ
ಖರ್ಪರವನಾಲಿಸಿದ ಕಿವಿ ಮೂರ್ಛೆವೋಪಂತೆ :

ಸಹ್ಯಾದ್ರಿಯ ಇರುಳಮಳೆ ಎಂದರೆ ಕಪ್ಪೆ ಇತ್ಯಾದಿ ಕೀಟಕೋಟಿಯ ಘೋಷಗಳೂ ಸೇರಿದ ಸಹಸ್ರ ದಂತ ಗರಗಸದ ಕೊರೆತ!

“ಏನ್ ವೃಷ್ಟಿ ಘೋಷಮಿದು, ಆಲಿಸಾ, ಸೌಮಿತ್ರಿ !
ಮಲೆ ಕಾಡು ನಾಡು ಬಾನ್ ಒಕ್ಕೊರಲೊಳೊಂದಾಗಿ
ಬಾಯಳಿದು ಬೊಬ್ಬಿರಿಯುತಿಪ್ಪಂತೆ ತೋರುತಿದೆ.
ಈ ಪ್ರಕೃತಿಯಾಟೋಪದೀ ಉಗ್ರತೆಯ ಮಧ್ಯೆ
ನಾವ್ ಮನುಜರತ್ಯಲ್ಪ ಕೃತಿ ! ನಮ್ಮಹಂಕಾರ
ರೋಗಕಿಂತಪ್ಪ ಬೃಹದುಗ್ರತಾ ಸಾನ್ನಿಧ್ಯಮೇ
ದಿವ್ಯ ಭೇಷಜಮೆಂಬುದೆನ್ನನುಭವಂ. ಇಲ್ಲಿ,
ಈ ಗರಡಿಯೊಳ್ ಸಾಧನೆಯನೆಸಗಿದಾತಂಗೆ
ದೊರೆಕೊಳ್ವುದೇನ್ ದುರ್ಲಭಂ ಪಾರ್ವತಸ್ಥಿರತೆ ?
ಸಾಕ್ಷಿಯದಕಿರ್ಪನಾಂಜನೇಯಂ !..”

ಆಗ ರಾಮನ ಮನದಲ್ಲಿ ಮೂಡುವ ಮೂರ್ತಿ ಆಂಜನೇಯ. ಇಂಥ ಪ್ರ‌ಕೃತಿಯಾಟೋಪದ ಬೃಹದುಗ್ರತಾಸಾನಿಧ್ಯವೇ ನಮ್ಮ ಅಹಂಕಾರಗಳು ಅಳಿಯಲು ಸೂಕ್ತ ಮದ್ದು. ಇಂಥ ಗರಡಿಯ ಸಾಧನೆಯಲ್ಲಿಯೇ ಹನುಮನಂಥ ಪರ್ವತಸ್ಥಿರ ವ್ಯಕ್ತಿತ್ವ ರೂಪುಗೊಂಡೀತು ಎಂಬ ಕಾಣ್ಕೆ ಅವನದು. ಆಮೇಲೆ ನಳ ನೀಲ ಮುಂತಾದ ವಾನರವೀರರ ಕುರಿತೂ ಮಾತಾಗುತ್ತದೆ.

ಆದರೆ ಮಳೆಗಾಲದ ಐದು ತಿಂಗಳು ಕಳೆಯುತ್ತ ಬಂದರೂ ಸುಗ್ರೀವನ ಸುಳಿವಿಲ್ಲ. ವಾನರವೀರರನ್ನು ಕರೆದುಕೊಂಡು ಬಂದು ಸೀತಾನ್ವೇಷಣೆಗೆ ನೆರವಾಗುತ್ತೇನೆ ಎಂದಿದ್ದ ಕಪಿವೀರನ ಸದ್ದಿಲ್ಲ. ಆತಂಕ ಒಳಗೊಳಗೇ ಮಡುಗಟ್ಟುತ್ತದೆ. ಮರೆತನೇನು? ಲಕ್ಷ್ಮಣ ನಾನೇ ಹೋಗಿ ಸುಗ್ರೀವನ ಕಂಡು ಬರುವೆ ಎಂದು ಹೂಂಕರಿಸುತ್ತಾನೆ. ಆದರೆ ರಾಮನೇ ಅವನನ್ನು ಸುಮ್ಮನಿರಿಸುತ್ತಾನೆ. ಈ ಭಯಂಕರ ಮಳೆಯಲ್ಲಿ ಯಾರು ಎಲ್ಲಿ ಹೇಗೆ ಓಡಾಡಲು ಸಾಧ್ಯ? ಮಳೆ ಕಳೆದ ಮೇಲೆ ಬಾ ಎಂದು ನಾನೇ ಅವನಿಗೆ ಹೇಳಿದ್ದಾನೆ ಎನ್ನುತ್ತಾನೆ. ಅಷ್ಟರಲ್ಲಿ ಬಂತು ಅಶ್ವಯುಜ ಮಾಸ!

ನುಗ್ಗುತಿರ್ದ್ದತ್ತಾಶ್ವಯುಜ ವರ್ಷಾಶ್ವದಳದ
ಹೇಷಾರವದ ಘೋಷಂ !… ಆಲಿಸುತ್ತಿದ್ದಂತೆ,
ಅರಳಿದುವು ಕಣ್ಣಾಲಿ : ಘೋರಾಂಧಕಾರದಾ
ಸಾಗರದಿ ತೇಲಿ ಬಹ ಹನಿಮಿಂಚಿನಂತೆವೋಲ್,
ಮಿಂಚುಂಬುಳೊಂದೊಯ್ಯನೊಯ್ಯನೆಯೆ ಪೊಕ್ಕುದಾ
ಕಗ್ಗತ್ತಲೆಯ ಗವಿಗೆ, ತೇಲುತೀಜುತ ಮೆಲ್ಲ
ಮೆಲ್ಲನೆಯೆ ಹಾರಾಡಿ ನಲಿದಾಡಿತಲ್ಲಲ್ಲಿ,
ಮಿಂಚಿನ ಹನಿಯ ಚೆಲ್ಲಿ, ಮಿಂಚಿನ ಹನಿಯ ಸೋರ್ವ
ಮಿಂಚುಂಬನಿಯ ಪೋಲ್ವ ಮಿಂಚುಂಬುಳುವನಕ್ಷಿ
ಸೋಲ್ವಿನಂ ನೋಡಿ, ರಾಮನ ಕಣ್ಗೆ ಹನಿ ಮೂಡಿ,
ತೊಯ್ದತ್ತು ಕೆನ್ನೆ : ತೆಕ್ಕನೆ ತುಂಬಿದುದು ಶಾಂತಿ
ತನ್ನಾತ್ಮಮಂ ! ಮತ್ತೆಮತ್ತೆ ನೋಡಿದನದಂ.
ಸಾಮಾನ್ಯಮಂ, ಆ ಅನಿರ್ವಚನೀಯ ದೃಶ್ಯಮಂ !

rama laxmana
rama laxmana

ಕಗ್ಗತ್ತಲು ಕವಿದ ರಾಮನ ಬದುಕಿಗೆ ಭರವಸೆಯ ಬೆಳಕು ಬಂದುದು ಒಂದು ಸಣ್ಣ ಮಿಂಚುಹುಳದ ಮೂಲಕ! ವಾಲ್ಮೀಕಿಯಂಥ ಆದಿಕವಿಗೂ ಹೊಳೆಯದ ದೃಶ್ಯವೊಂದು ಮಲೆನಾಡಿನ ಈ ಕವಿಗೆ ಝಗ್ಗನೆ ಹೊಳೆದುಬಿಟ್ಟಿದೆ. ಕಾರ್ಗತ್ತಲಲ್ಲಿ ತಡಕಾಡುತ್ತಿರುವವನಿಗೆ ಅಶ್ವಯುಜ ಮಾಸದ ಮಳೆ ಇಳಿಯುತ್ತ ಬಂದ ಆ ರಾತ್ರಿಯಲ್ಲಿ ಗವಿಯೊಳಗೆ ಮೆಲ್ಲಮೆಲ್ಲನೆ ಹಾರಾಡುತ್ತ ಬಂದ ಮಿಂಚುಹುಳವೊಂದು ಆಸೆಯ ಹಣತೆಗೆ ಕಿಡಿಹಚ್ಚಿತು. ನೋಡಿದ ರಾಮನ ಕಣ್ಣು ಹನಿಗೂಡಿತು, ಆತ್ಮವನ್ನು ಶಾಂತಿ ತುಂಬಿತು. ಅನಿರ್ವಚನೀಯ ದೃಶ್ಯವನ್ನು ಮತ್ತೆ ಮತ್ತೆ ನೋಡಿದ, ಕೆನ್ನೆ ತೋಯಿಸಿಕೊಂಡ.

ಕುಳ್ಳಿರ್ದ ಮಳೆಗಾಲಮೆದ್ದು ನಿಂತುದು ತುದಿಯ
ಕಾಲಿನಲಿ, ನೂಲ್‌ಸೋನೆಯಾ ತೆರೆಮರೆಯನೆತ್ತಲ್ಕೆ
ಶೈಲವರನಕೊ, ಕಾಣಿಸಿತ್ತಾತನೆರ್ದೆಗೊರಗಿ
ರಮಿಸಿರ್ದ ಕಾನನ ವಧೂ ಶ್ಯಾಮಲಾಂಬರಂ !

ಹಗಲಾಯಿತು. ನೂಲಿನಂತೆ ಸುರಿಯುತ್ತಿದ್ದ ಸೋನೆಮಳೆಯ ತೆರೆಯನ್ನು ಸರಿಸಿದಾಗ ಕಂಡದ್ದು ಮಹಾ ಪರ್ವತವೆಂಬ ವರ! ಅವನ ತೆಕ್ಕೆಗೆ ಒರಗಿದ ಹಸಿರು ವನರಾಜಿಯೆಂಬ ವಧು! ಹೆಂಡತಿಯನ್ನು ಕಳೆದುಕೊಂಡು ಪರಿತಪಿಸುತ್ತಿದ್ದ ರಾಮನಿಗೆ ಇಂಥ ಚೇತೋಹಾರಿ ದೃಶ್ಯ ಇನ್ನೊಂದು ಇದ್ದೀತೆ?

ಲಂಬಮಾನಂ ಸೋರ್ವ ಮುತ್ತಿನ ಸರಗಳಂತೆ
ಕಾವಿಯನುಳಿದ ಮಲೆಯ ತೊರೆಯ ನೀರ್‌ಬೀಳಗಳು
ಕಣ್‌ಸೆಳೆದುವಲ್ಲಲ್ಲಿ.

ಅಬ್ಬರದ ಮಳೆಯಿಂದಾಗಿ ಮಣ್ಣುನೀರು ತುಂಬಿಕೊಂಡು ಕೆಂಪಾಗಿ ಹರಿಯುತ್ತಿದ್ದ ಕಾಡಿನ ತೊರೆಗಳು ಈಗ ʼಕಾವಿ ತೊರೆದುʼ ಮುತ್ತಿನ ಸರಗಳಂತೆ ಕಾಣಿಸತೊಡಗಿದವು. ಅಂದರೆ ರಾಮನಿಗೂ ಕಾವಿ ತೊರೆಯುವ ಕಾಲ ಬಂತು.

ಕೇದಗೆಗೆ ಮುಪ್ಪಡಸಿ,
ಬೀತುದೆ ಸೀತಾಳಿ ಹೂ, ಬಾನ್‌ಬಯಲೊಳಿರ್ದ
ಮೋಡಮೋರೆಗೆ ಕರ್ಪುವೋಗಿ, ಬೆಳ್ಳಿನ ನೆಳಲ್
ಸುಳಿದುದಲ್ಲಲ್ಲಿ. ನಿಸ್ತೇಜನಾಗಿರ್ದ ರವಿ
ಘನವನಾಂತರ ವಾಸಮಂ ಮುಗಿಸಿ ಮರುಳುತಿರೆ,
ಮೇಘಸಂಧಿಗಳಿಂದೆ, ಮುಸುಕೆತ್ತಿ, ನಸುನಾಣ್ಣಿ,
ಮೊಗಕೆ ನಾಣ್‌ಬೆಟ್ಟೇರಿದಪರಿಚಿತಳಂತೆವೋಲ್
ಇಣಿಕಿತು ಗತೋಷ್ಣಾತಪಂ.

ಸೂರ್ಯನಿಗೆ ವನಾಂತರ ವಾಸ ಮುಗಿಯಿತು. ರಾಮನಿಗೆ ಇನ್ನೂ ಮುಗಿದಿಲ್ಲ. ಆದರೆ ಮುಗಿಯುವ ಸೂಚನೆ ನೀಡಿತು. ಸಂದಿದ್ದ ಬೆಚ್ಚಗಿನ ಹವೆ ಮೆಲ್ಲಗೆ ಮೈದೋರಿತು- ಮುಸುಕೆತ್ತಿ ಮುಖಕ್ಕೆ ನಸುನಾಚಿಕೆಯಿಂದ ಬೆರಳನ್ನು ಕುತ್ತಿದ ಮುಗುದೆಯಂತೆ.

ಪಾಲ್ತುಂಬಿ ತುಳ್ಕಿ
ಗರುಕೆಪಚ್ಚೆಗೆ ಸೋರ್ವ ಕೊಡಗೆಚ್ಚಲಿನ ಗೋವು
ಹೊಸಬಿಸಿಲ ಸೋಂಕಿಂಗೆ ಸೊಗಸಿ ಮೆಯ್ ಕಾಯಿಸುತೆ
ಗಿರಿಸಾನು ಶಾದ್ವಲದಿ ನಿಂತು, ಬಾಲವನೆತ್ತಿ
ಕುಣಿದೋಡಿ ಬಂದು ತನ್ನೆಳಮುದ್ದುಮೋರೆಯಂ
ತಾಯ್ತನಕೆ ಪಡಿಯೆಣೆಯ ಮೆತ್ತೆಗೆಚ್ಚಲ್ಗಿಡಿದು,
ಜೊಲ್ಲುರ್ಕೆ, ಚಪ್ಪರಿಸಿ ಮೊಲೆಯನುಣ್ಬ ಕರುವಂ
ನೆಕ್ಕಿತಳ್ಕರೆಗೆ. ಲೋಕದ ಕಿವಿಗೆ ದುರ್ದಿನಂ
ಕೊನೆಮುಟ್ಟಿದತ್ತೆಂಬ ಮಂಗಳದ ವಾರ್ತೆಯಂ
ಡಂಗುರಂಬೊಯ್ಸಿದುದು ಪಕ್ಷಿಗೀತಂ.

ಮಳೆಗಾಲದ ಕೊನೆಯ ದಿನಗಳು ಸುಭಿಕ್ಷದ, ಹಸುರಿನ, ಹಾಲು ತುಂಬಿ ತುಳುಕುವ ಕೊಡಗೆಚ್ಚಲಿನ ಗೋವುಗಳ ಕಾಲ. ದುರ್ದಿನಗಳು ಮುಗಿದವು ಎಂಬ ಘೋಷವನ್ನು ಪಕ್ಷಿಗೀತೆಗಳು ಡಂಗುರ ಸಾರಿದವು.

ಹೀಗೆ ಮಳೆಗಾಲದ ವರ್ಣನೆ ಕೊನೆಯಾಗುತ್ತದೆ. ಇಲ್ಲಿಂದ ಮುಂದೆ ಸುಗ್ರೀವಾಜ್ಞೆ, ವಾನರವೀರರ ದಿಟ್ಟ ಹೋರಾಟದ ಸುಂದರ ಪುಟಗಳು ತೆರೆದುಕೊಳ್ಳುತ್ತವೆ. ಅಯೋಧ್ಯೆಯ ನಗರವಾಸಿ ರಾಮ, ಕರ್ನಾಟಕದ ಸಹ್ಯಾದ್ರಿಯ ಮಲೆಗಳ ನಡುವೆ ಗುಹೆಯಲ್ಲಿ, ಮುಂಗಾರಿನ ಬಿರುಹೊಯ್ಲಿನ, ಕಾರ್ಗತ್ತಲಿನ, ಸೋನೆಮಳೆಯ, ಮಿಂಚುಹುಳಗಳ, ದಿನಗಳ ನಡುವೆ ಆಶೆನಿರಾಶೆಗಳ ರಾಟವಾಳದಲ್ಲಿ ಕುಳಿತು ಏರಿಳಿಯುತ್ತಾನೆ. ಮಳೆಗಾಲ ಮುಗಿದಾಗ ಅವನು ಕತ್ತಲ ಗವಿಯನ್ನು ದಾಟಿ ಹೊಸ ಬೆಳಕನ್ನು ಕಾಣುತ್ತಿರುವ ಹೊಸ ಮನುಷ್ಯನಾಗಿದ್ದಾನೆ.

ಈತ ವಾಲ್ಮೀಕಿಗೆ ಕಾಣಿಸಿರದ, ಕುವೆಂಪುಗೆ ಮಾತ್ರ ಕಾಣಿಸಬಹುದಾದ ರಾಮ.

ಇದನ್ನೂ ಓದಿ: ಕೇರಂ ಬೋರ್ಡ್‌ | ಗಾಂಧಿಕ್ಲಾಸಿನಲ್ಲಿ ಕುಳಿತು ಒಂದೆರಡು ನೋಟ

Continue Reading

ಅಂಕಣ

ರಾಜಮಾರ್ಗ ಅಂಕಣ: ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿದರೆ ಗೋಲ್ಡನ್ ಮೆಮೊರಿ ನಿಮ್ಮದು!

ರಾಜಮಾರ್ಗ ಅಂಕಣ: ಗೋಲ್ಡನ್ ಮೆಮೊರಿ (Golden Memory) ನಿಮ್ಮದಾಗಿದ್ದರೆ ಅದು ನಿಮ್ಮ ಯಶಸ್ಸಿನ ಮೊದಲ ಮೆಟ್ಟಿಲು ಆಗಬಲ್ಲದು. ಈ ಗೋಲ್ಡನ್ ಮೆಮೊರಿಯನ್ನು ನಿಮ್ಮದಾಗಿಸಲು ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿ.

VISTARANEWS.COM


on

golden memory ರಾಜಮಾರ್ಗ ಅಂಕಣ
Koo

ಮೆಮೊರಿ ಒಂದು ಮಿರಾಕಲ್

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ನೆನಪು (Memory) ಒಂದು ವಿಸ್ಮಯಕಾರಿ ಆದ ವಿದ್ಯಮಾನ. ಒಳ್ಳೆಯ ಮೆಮೊರಿ ಪವರ್ (memory Power) ಇದ್ದವರು ಜಗತ್ತನ್ನು ಗೆಲ್ಲಬಹುದು. ಪರೀಕ್ಷೆಗಳಲ್ಲಿ ಟಾಪರ್ (Exam Topper) ಆಗಲು, ಉದ್ಯೋಗವನ್ನು ಚೆನ್ನಾಗಿ ಮಾಡಲು, ವ್ಯಕ್ತಿಗಳನ್ನು ಸರಿಯಾಗಿ ಗುರುತಿಸಲು, ಹಣಕಾಸಿನ ವ್ಯವಹಾರ ಚಂದವಾಗಿ ಮಾಡಲು, ಸಂಬಂಧಗಳನ್ನು ಸರಿಯಾಗಿ ನಿಭಾಯಿಸಲು, ಒಳ್ಳೆಯ ಲೇಖಕರಾಗಲು, ಉತ್ತಮ ಭಾಷಣಕಾರರಾಗಲು ಎಲ್ಲದಕ್ಕೂ ಮೆಮೊರಿ ಬೇಕು. ಗೋಲ್ಡನ್ ಮೆಮೊರಿ (Golden Memory) ನಿಮ್ಮದಾಗಿದ್ದರೆ ಅದು ನಿಮ್ಮ ಯಶಸ್ಸಿನ ಮೊದಲ ಮೆಟ್ಟಿಲು ಆಗಬಲ್ಲದು. ಈ ಗೋಲ್ಡನ್ ಮೆಮೊರಿಯನ್ನು ನಿಮ್ಮದಾಗಿಸಲು ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿ.

1) ಅರ್ಥ ಮಾಡಿಕೊಂಡು ಕಲಿಯಿರಿ. ಬಾಯಿಪಾಠವು ಲಾಂಗ್ ರೇಂಜಿನಲ್ಲಿ ಸೋಲುತ್ತದೆ.

2) ಯಾಕೆ ಓದಬೇಕು? ಎನ್ನುವುದು ಮೂಲಭೂತವಾದ ಪ್ರಶ್ನೆ. ಅದು ಕಲಿಕೆಯ ಉದ್ದೇಶ (PURPOSE). ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಉದಾಹರಣೆಗೆ ನಾನು ಜ್ಞಾನಕ್ಕಾಗಿ ಓದುತ್ತೇನೆ. ಇನ್ನೂ ಕೆಲವರು ಖುಷಿಗಾಗಿ ಓದುತ್ತಾರೆ. ಮತ್ತೂ ಕೆಲವರು ಓದಿದ ಅಂಶಗಳನ್ನು ಬೇರೆಯವರಿಗೆ ಹಂಚಲು ಓದುತ್ತಾರೆ. ವಿದ್ಯಾರ್ಥಿಗಳು ಉತ್ತಮ ಮಾರ್ಕ್ ಪಡೆಯಲು ಓದುತ್ತಾರೆ ಇತ್ಯಾದಿ.

3) ಕಲಿಯಬೇಕಾದ ವಿಷಯಗಳನ್ನು ವ್ಯವಸ್ಥಿತವಾಗಿ ಜೋಡಿಸಿ. ಅಂದರೆ ಸುಲಭವಾದ ವಿಷಯಗಳನ್ನು ಮೊದಲು ಕಲಿಯುವುದು, ಕಷ್ಟವಾದ ವಿಷಯಗಳನ್ನು ನಂತರ ಕಲಿಯುವುದು ಇತ್ಯಾದಿ.

4) ಶಬ್ದಗಳು ಬೇಗನೇ ಮರೆತು ಹೋಗುತ್ತವೆ. ಆದರೆ ಚಿತ್ರಗಳು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತವೆ. ದೀರ್ಘಕಾಲದ ಮೆಮೊರಿಗೆ ಚಿತ್ರಗಳ ನೆರವು ಪಡೆಯಿರಿ.

5) ನಾನು ನೆನಪು ಇಡಬಲ್ಲೆ ಎಂಬ ಆತ್ಮವಿಶ್ವಾಸವು ನಿಮ್ಮನ್ನು ಗೆಲ್ಲಿಸುತ್ತದೆ. ಆತ್ಮವಿಶ್ವಾಸವು ನಿಮ್ಮ ಅಷ್ಟೂ ಧನಾತ್ಮಕ ಯೋಚನೆಗಳ (POSSITIVE THINKING) ಉತ್ಪನ್ನ ಆಗಿರುತ್ತದೆ.

6) ಬಹುಮಾಧ್ಯಮ ಕಲಿಕೆಯು ನಿಮ್ಮ ಮೆಮೊರಿ ಪವರನ್ನು ಹೆಚ್ಚು ಮಾಡುತ್ತದೆ. ಅಂದರೆ ಬಣ್ಣದ ಚಿತ್ರಗಳ ಮೂಲಕ ಕಲಿಕೆ, ವಿಡಿಯೋಗಳ ಮೂಲಕ ಕಲಿಕೆ, ಮ್ಯೂಸಿಕ್ ಬಳಸಿಕೊಂಡು ಕಲಿಕೆ, ಆಡಿಯೋ ಬಳಸಿಕೊಂಡು ಕಲಿಕೆ ಇತ್ಯಾದಿ.

7) ಒತ್ತಡ ಇಲ್ಲದೆ ಕಲಿಯುವುದು ತುಂಬಾ ಮುಖ್ಯ. ಈ ಒತ್ತಡವು ನಿಮ್ಮ ಕಲಿಯುವ ಸಾಮರ್ಥ್ಯವನ್ನು ಮತ್ತು ಮೆಮೊರಿ ಪವರನ್ನು ಇಂಚಿಂಚು ಸಾಯಿಸುತ್ತದೆ.

8) ಭಾವನಾತ್ಮಕ ಕಲಿಕೆ ನಿಮ್ಮ ಮೆಮೊರಿ ಪವರನ್ನು ಹಲವು ಪಟ್ಟು ವೃದ್ಧಿಸುತ್ತದೆ. ಅಂದರೆ ನಾವು ಕಲಿಯುವ ವಿಷಯವನ್ನು ಪ್ರೀತಿ ಮಾಡುತ್ತಾ ಕಲಿಯುವುದು ಎಂದರ್ಥ. ಅದು ಹೇಗೆ ಎಂದು ಯೋಚಿಸಿ.

9) ಸಣ್ಣ ತರಗತಿಗಳಲ್ಲಿ ಗಟ್ಟಿಯಾಗಿ ಓದುವುದು (Loud Reading) ಹೆಚ್ಚು ಅನುಕೂಲಕರ. ಆದರೆ ಪ್ರೌಢಶಾಲೆಯ ಹಂತಕ್ಕೆ ಬಂದಾಗ ಮೌನ ಓದು (Silent Reading) ನಿಮಗೆ ಹೆಚ್ಚು ಫಲಿತಾಂಶ ನೀಡುತ್ತದೆ.

10) ಪ್ಯಾಸಿವ್ ರೀಡಿಂಗ್ (PASSIVE READING) ಮಾಡುವುದಕ್ಕಿಂತ ಕ್ರಿಯೇಟಿವ್ ರೀಡಿಂಗ್ ಹೆಚ್ಚು ಮೆಮೊರಿಯನ್ನು ಖಾತ್ರಿ ಪಡಿಸುತ್ತದೆ. ಅಂದರೆ ಹೊಸ ಹೊಸ ರೀತಿಯಿಂದ ಕಲಿಯಲು ತೊಡಗುವುದು.

11) ಹೆಚ್ಚು ಏಕಾಗ್ರತೆಯಿಂದ ಓದುವುದು ತುಂಬಾ ಮುಖ್ಯ. ಪ್ರಶಾಂತವಾದ ಮನಸ್ಸು ಹೆಚ್ಚು ಮೆಮೊರಿಯನ್ನು ಉತ್ತೇಜನ ಮಾಡುತ್ತದೆ.

reading hobby
golden memory

13) ನಮ್ಮ ಮೆದುಳಿನಲ್ಲಿ ಮೆಮೊರಿಯನ್ನು ಉತ್ತೇಜನ ಮಾಡುವ SEROTONIN ಎಂಬ ಹಾರ್ಮೋನ್ ಉತ್ಪತ್ತಿ ಆಗ್ತಾ ಇರುತ್ತದೆ. ಮೆದುಳಿಗೆ ಸರಿಯಾದ ವಿಶ್ರಾಂತಿ ಕೊಟ್ಟಾಗ, ದಿನಕ್ಕೆ ಕನಿಷ್ಟ 6-8 ಘಂಟೆ ನಿದ್ರೆ ಮಾಡಿದಾಗ, ಮೆದುಳಿಗೆ ಹೆಚ್ಚು ಖುಷಿ ಕೊಡುವ ಚಟುವಟಿಕೆಗಳನ್ನು ಕೊಟ್ಟಾಗ, ಉತ್ತಮ ಹವ್ಯಾಸಗಳನ್ನು ರೂಡಿ ಮಾಡಿದಾಗ ಆ ಹಾರ್ಮೋನ್ ಮಿರಾಕಲಸ್ ಮೆಮೊರಿ ಕ್ರಿಯೇಟ್ ಮಾಡುತ್ತದೆ.

14) ಮುಖ್ಯಾಂಶಗಳನ್ನು ಬರೆಯುವ ಅಭ್ಯಾಸವು ತುಂಬಾ ಒಳ್ಳೆಯದು. ಚೆಂದವಾಗಿ ಬರೆಯುವುದರಿಂದ ನಿಮ್ಮ ಬಲ ಮೆದುಳು (ರೈಟ್ ಬ್ರೈನ್) ಹೆಚ್ಚು ಚುರುಕು ಆಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಹಾಗೆಯೇ ಪ್ರತೀ ದಿನವೂ ದಿನಚರಿ (ಡೈರಿ) ಬರೆಯುವುದು ಕೂಡ ನಿಮ್ಮ ಮೆಮೊರಿಗೆ ಪೂರಕ.

15) ಯೋಗಾಸನ, ಪ್ರಾಣಾಯಾಮ , ಧ್ಯಾನ, ಪೌಷ್ಟಿಕ ಆಹಾರದ ಸೇವನೆ, ಮೌನವಾದ ವಾಕಿಂಗ್ ನಿಮ್ಮ ಮೆಮೊರಿ ಪವರನ್ನು ಹೆಚ್ಚು ಮಾಡುವ ಚಟುವಟಿಕೆಗಳು. ಮೆದುಳಿಗೆ ಹೆಚ್ಚು ರಕ್ತ ಸರಬರಾಜು ಆಗುವ ಆಸನಗಳನ್ನು ಒಳ್ಳೆಯ ಗುರುಗಳ ಮೂಲಕ ಕಲಿಯಲು ಪ್ರಯತ್ನಿಸಿ.

16) ಓದಲು ಆರಂಭಿಸುವ ಮೊದಲು 10-15 ನಿಮಿಷ ಕ್ಲಾಸಿಕಲ್ ಸಂಗೀತ ಅಥವಾ INSTRUMENTAL MUSIC (ಸಿತಾರ್, ವೀಣೆ, ವಯಲಿನ್ ಇತ್ಯಾದಿ) ಕೇಳುವುದರಿಂದ ನಿಮ್ಮ ಓದುವ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ಮೆಮೊರಿ ಪವರ್ ಕೂಡ ಹೆಚ್ಚುತ್ತದೆ.

golden memory
golden memory

17) ನೀವು ಓದಿದ್ದನ್ನು ಇನ್ನೊಬ್ಬರಿಗೆ ವಿವರಿಸುವಾಗ ಅದು ನಿಮ್ಮ ಮೆಮೊರಿ ಪವರನ್ನು ಉತ್ತೇಜನ ಮಾಡುತ್ತದೆ. ಆದ್ದರಿಂದ ಗ್ರೂಪ್ ಸ್ಟಡಿಯು ಮೆಮೊರಿ ಜಾಸ್ತಿ ಮಾಡಲು ಅತ್ಯುತ್ತಮ ವಿಧಾನ ಎಂದು ಮಾನ್ಯತೆ ಪಡೆದಿದೆ.

18) ಮೆಮೊರಿ ಹೆಚ್ಚು ಮಾಡಲು ಪುನರ್ ಮನನ (Recalling) ಅತ್ಯುತ್ತಮ ವಿಧಾನ. ರಾತ್ರಿ ಮಲಗುವ ಮೊದಲು ಒಂದು ಹತ್ತು ನಿಮಿಷ ಬಿಡುವು ಮಾಡಿಕೊಂಡು ಇಂದು ನಾನು ಯಾವುದನ್ನು ಯಾವ ಅನುಕ್ರಮದಲ್ಲಿ ಕಲಿತೆ? ಯಾರನ್ನು ಇಂದು ಭೇಟಿ ಮಾಡಿದೆ? ಯಾವ ಹೊಸ ಅನುಭವ ಪಡೆದುಕೊಂಡೆ? ಇತ್ಯಾದಿ ರಿಕಾಲ್ ಮಾಡುತ್ತಾ ಹೋದಾಗ ನಿಮ್ಮ ಮೆಮೊರಿ ನೂರು ಪಟ್ಟು ವೃದ್ಧಿ ಆಗುತ್ತದೆ. ಹಾಗೆಯೇ ಪ್ರತೀ ಒಂದು ಘಂಟೆಯ ಓದಿನ ನಂತರ 5-10 ನಿಮಿಷ ರಿಕಾಲ್ ಮಾಡುತ್ತಾ ಹೋದರೆ ಮೆಮೊರಿ ಗೆಲ್ಲುತ್ತದೆ.

19) ನಿಮ್ಮ ಮೆದುಳಿನಲ್ಲಿ ಜಂಕ್ (ತಂಗಳು) ಸಂಗತಿಗಳು ಹೆಚ್ಚು ಪ್ರವೇಶ ಮಾಡದ ಹಾಗೆ ಪ್ಲಾನ್ ಮಾಡಿಕೊಳ್ಳಿ. ಉದಾಹರಣೆಗೆ ಅನಗತ್ಯವಾದ ಇಸವಿಗಳು, ಉದ್ದುದ್ದವಾದ ಮೊಬೈಲ್ ನಂಬರು ಅನಗತ್ಯವಾದ ಕ್ರಿಕೆಟ್ ದಾಖಲೆಗಳು, ನೋವು ಕೊಡುವ ಸಂಗತಿಗಳು ಇತ್ಯಾದಿ.

20) ಮೆಮೊರಿ ಹೇಗೆ ಸಹಜವೋ ಮರೆಯುವುದು (Forgetting) ಕೂಡಾ ಅಷ್ಟೇ ಸಹಜ! ಯಾವ ಮೆಮೊರಿ ನಿಮಗೆ ಮುಂದೆ ಅಗತ್ಯ ಬೀಳುವುದಿಲ್ಲವೋ ಅವುಗಳನ್ನು ನಿಮ್ಮ ಮೆದುಳು ಚಂದವಾಗಿ ಒರೆಸುತ್ತಾ (Erasing) ಮುಂದೆ ಹೋಗುತ್ತದೆ. ಆದ್ದರಿಂದ ಏನಾದರೂ ಸಣ್ಣ ಪುಟ್ಟ ಮರೆವು ಉಂಟಾದರೆ ಆತಂಕ ಮಾಡದೇ ಮುಂದೆ ಹೋಗುವುದೇ ಒಳ್ಳೇದು.

ಅದ್ಭುತವಾದ ಗೋಲ್ಡನ್ ಮೆಮೊರಿ ನಿಮ್ಮದಾಗಲಿ ಎಂಬುದು ನಮ್ಮ ಹಾರೈಕೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಕೇಶ್ ಅಂದರೆ ಹಾಂಟಿಂಗ್ ಮೆಲಡಿ, ನೋವಿನಲ್ಲಿ ಅದ್ದಿ ತೆಗೆದ ದನಿ!

Continue Reading

ಅಂಕಣ

ರಾಜಮಾರ್ಗ ಅಂಕಣ: ಮುಕೇಶ್ ಅಂದರೆ ಹಾಂಟಿಂಗ್ ಮೆಲಡಿ, ನೋವಿನಲ್ಲಿ ಅದ್ದಿ ತೆಗೆದ ದನಿ!

ರಾಜಮಾರ್ಗ ಅಂಕಣ: ʼದಿಲ್ ಜಲ್ತಾ ಹೆ ತೋ’ ಎಂದು ನೋವಿನಲ್ಲಿ ಹಾಡುತ್ತ ನಮ್ಮ ʼದಿಲ್ ತೋಡಕರ್’ ಆತನು ಹೊರಟು ಹೋಗಿ 46 ವರ್ಷಗಳೇ ಕಳೆದುಹೋದವು! ಆದ್ರೂ ನಾವು ʼಜಾನೆ ಕಹಾ ಗಯೇ ಓ ದಿನ್’ ಎಂದು ಹಾಡುತ್ತ, ʼಕಭಿ ಕಭಿ ಮೇರೆ ದಿಲ್ ಮೆ’ ಎಂದು ಗುನುಗುತ್ತ ಅವನಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡುತ್ತಾ ಇದ್ದೇವೆ.

VISTARANEWS.COM


on

mukesh bollywood ರಾಜಮಾರ್ಗ ಅಂಕಣ
Koo

ಸಹಸ್ರಮಾನದ ಬಾಲಿವುಡ್ ಗಾಯಕ ಮುಕೇಶ್ – ನೂರಾ ಒಂದರ ನೆನಪು

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆತನು ಬದುಕಿದ್ದರೆ ಮೊನ್ನೆ ಜುಲೈ 22ಕ್ಕೆ ನೂರಾ ಒಂದು ವರ್ಷಗಳು ತುಂಬಿದ ಸಂಭ್ರಮವು ಇರುತ್ತಿತ್ತು! ಇಂದು ಮುಕೇಶ್ (Mukesh) ನಮ್ಮೊಂದಿಗಿಲ್ಲ! ಆದರೆ ಆ ಗಾಯಕ (Singer) ಹಾಡಿರುವ 1300 ಮಾಧುರ್ಯದ ಹಾಡುಗಳಿವೆ! ಸಾವಿಲ್ಲದ ಹಾಡುಗಳನ್ನು ಮುಕೇಶ್ ಬಾಲಿವುಡ್ (Bollywood) ಜಗತ್ತಿನಲ್ಲಿ ಹಾಡಿ ಸೂತಕದ ಛಾಯೆ ಮೂಡಿಸಿ ಹೊರಟೇ ಹೋದರು!

ದಿಲ್ ಜಲ್ತಾ ಹೈ ತೋ ಜಲನೇ ದೋ

ʼದಿಲ್ ಜಲ್ತಾ ಹೆ ತೋ’ ಎಂದು ನೋವಿನಲ್ಲಿ ಹಾಡುತ್ತ ನಮ್ಮ ʼದಿಲ್ ತೋಡಕರ್’ ಆತನು ಹೊರಟು ಹೋಗಿ 46 ವರ್ಷಗಳೇ ಕಳೆದುಹೋದವು! ಆದ್ರೂ ನಾವು ʼಜಾನೆ ಕಹಾ ಗಯೇ ಓ ದಿನ್’ ಎಂದು ಹಾಡುತ್ತ, ʼಕಭಿ ಕಭಿ ಮೇರೆ ದಿಲ್ ಮೆ’ ಎಂದು ಗುನುಗುತ್ತ ಅವನಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡುತ್ತಾ ಇದ್ದೇವೆ. ಬಾಲಿವುಡ್ಡಿಗೆ ಇನ್ನೊಬ್ಬ ಮುಕೇಶ್ ಮತ್ತೆ ಹುಟ್ಟಿ ಬರಲಿ ಎಂಬ ಹಾರೈಕೆಯೊಂದಿಗೆ!

ಆವಾರಾ ಹೂಂ…ಆವಾರಾ ಹೂಂ!

ಅವನ ಪೂರ್ತಿ ಹೆಸರು ಮುಕೇಶ್ ಚಂದ್ ಮಾಥುರ್. ಹುಟ್ಟಿದ್ದು ದೆಹಲಿಯಲ್ಲಿ. ಓದಿದ್ದು ಎಸೆಸೆಲ್ಸಿ. ಉದ್ಯೋಗ ಮಾಡಿದ್ದು PWD ಇಲಾಖೆಯಲ್ಲಿ. ಅವನ ಅಕ್ಕ ಸುಂದರ ಪ್ಯಾರಿಗೆ ಸಂಗೀತ ಕಲಿಸಲು ಗುರುಗಳು ಪ್ರತೀ ದಿನ ಮನೆಗೆ ಬಂದಾಗ ಪಕ್ಕದ ಕೋಣೆಯಲ್ಲಿ ಹಾಡುಗಳನ್ನು ಗುನುಗುತ್ತ ಸಂಗೀತವನ್ನು ಕಲಿತವನು ಮುಕೇಶ್. ಅವನ ಅಕ್ಕನ ಮದುವೆಯ ರಸಮಂಜರಿಯ ವೇದಿಕೆಯಲ್ಲಿ ಆತನು ಹಾಡುವಾಗ ಕೇಳಿದ್ದ ಹಿಂದಿಯ ಖ್ಯಾತ ನಟ ಮೋತಿಲಾಲ್ ಅವನಿಗೆ ಹೇಳಿದ್ದು ‘ನೀನು ಇರಬೇಕಾದ್ದು ಇಲ್ಲಿ ಅಲ್ಲ! ನಡಿ ಮುಂಬೈಗೆ!’

ಮುಂಬೈಗೆ ಕರೆದುಕೊಂಡು ಬಂದ ಮೋತಿಲಾಲ್ ಅವರು ಅವನ ಸಂಗೀತ ಕಲಿಕೆಗೂ ಅವಕಾಶ ಮಾಡಿಕೊಟ್ಟರು.

ಅದರ ನಡುವೆ ಎರಡು ಸಿನೆಮಾದಲ್ಲಿ ಹೀರೋ ಆಗಿ ಅಭಿನಯ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದ ಮುಕೇಶ್! ಸಿನೆಮಾ ಓಡಲಿಲ್ಲ. ಅವನಿಗೆ ತಕ್ಷಣವೇ ಅರ್ಥ ಆಗಿತ್ತು, ಇದು ನನ್ನ ಕ್ಷೇತ್ರ ಅಲ್ಲ!

ಮತ್ತೆ ಅವಕಾಶ ಹುಡುಕುತ್ತ ಸ್ಟುಡಿಯೋಗಳಿಗೆ ಅಲೆದಾಟ ತಪ್ಪಲಿಲ್ಲ. ಅನಿಲ್ ಬಿಸ್ವಾಸ್ ಕಂಪೋಸ್ ಮಾಡಿದ ‘ಪೇಹ್ಲಿ ನಜರ್’ ಸಿನಿಮಾದ ಸ್ಮರಣೀಯ ಹಾಡು ‘ದಿಲ್ ಜಲ್ತಾ ಹೈ ತೋ ಜಲನೇ ದೋ’ ಮುಕೇಶ್ ಹಾಡಿದ್ದೇ ಹಾಡಿದ್ದು, ಬಂಪರ್ ಹೊಡೆಯಿತು! ಆ ಹಾಡನ್ನು ಕೇಳಿದ ಆಗಿನ ಲೆಜೆಂಡ್ ಸಿಂಗರ್ ಸೈಗಲ್ ಹೇಳಿದರಂತೆ, ‘ಈ ಹಾಡು ನಾನೇ ಹಾಡಿದ್ದಲ್ಲವಾ! ಯಾವಾಗ ಹಾಡಿದ್ದು ಎಂದು ಮರೆತುಹೋಗಿದೆ!’

ಆಗ ಅವನಿಗೆ ಅರ್ಥ ಆದದ್ದು ʼನಾನು ಅರಿವಿಲ್ಲದೆ ಸೈಗಲ್ ಅವರ ಅನುಕರಣೆಯನ್ನು ಮಾಡುತ್ತಿರುವೆ’ ಎಂದು!

ಮುಖೇಶಗೆ ಒಲಿದ ಗುರು ನೌಶಾದ್

ಅನುಕರಣೆಯಿಂದ ಹೊರಬಂದು ಅವನದ್ದೇ ವಾಯ್ಸ್ ಡೆವೆಲಪ್ ಮಾಡಲು ತರಬೇತಿ ನೀಡಿದವರು ನೌಶಾದ್ ಸಾಬ್. ಅವರನ್ನು ಮುಕೇಶ್ ಕೊನೆತನಕ ಮರೆಯಲಿಲ್ಲ. ಸಂಗೀತ ಕ್ಷೇತ್ರದಲ್ಲಿ ತಾನು ಮಾಡಿದ ಅಷ್ಟೂ ಸಾಧನೆಯನ್ನು ತನ್ನ ಗುರುವಿಗೆ ಸಮರ್ಪಣೆ ಮಾಡಿದ್ದಾನೆ ಮುಕೇಶ್.

ಚಂಚಲ್ ಶೀತಲ್ ಸರಲಾ!

ಬಾಲಿವುಡ್ಡಿನಲ್ಲಿ ಗಟ್ಟಿಯಾಗಿ ಕಾಲು ಊರುವ ಮೊದಲೇ ಆತ ಪ್ರೀತಿಯ ಬಲೆಗೆ ಬಿದ್ದಾಗಿತ್ತು. ಅವಳ ಹೆಸರು ಸರಲಾ. ಕೋಟ್ಯಾಧಿಪತಿ ಅಪ್ಪನ ಪ್ರೀತಿಯ ಒಬ್ಬಳೇ ಮಗಳು. ಇವನೋ ʼಮಾನಾ ಆಪ್ನಿ ಜೇಬ್ ಸೆ ಫಕೀರ್ ಹೆ’ ಎಂದು ಹಾಡುತ್ತಿದ್ದ ಐಡೆಂಟಿಟಿ ಇಲ್ಲದ ಹಿನ್ನೆಲೆ ಗಾಯಕ! ʼಮೈನಾ ಭೂಲೂಂಗಾ’ ಎಂದು ಹಾಡುತ್ತ ಮುಕೇಶ್ ಅವಳಿಗೆ ಮೋಡಿಯನ್ನು ಮಾಡಿದ್ದ! ʼಚಂಚಲ ಶೀತಲ್’ ಸರಲಾ ಅವನನ್ನು ಬಿಟ್ಟಿರಲು ಆಗದೇ ಒಂದು ದಿನ ʼಭಾಗ್ ಚಲೇ’ ಎಂದಳು!

ಸಾವನ್ ಕಾ ಮಹೀನಾ..

ಸರಳವಾಗಿ ಒಂದು ʼಸಾವನ ಕಾ ಮಹೀನಾ’ ಅವರು ಒಂದು ದೇವಸ್ಥಾನದಲ್ಲಿ ಮದುವೆ ಆದರು. ಕೊನೆಯವರೆಗೂ ಪ್ರೀತಿಯಿಂದ ಬಾಳಿದರು.

1945-1978ರ ಅವಧಿಯಲ್ಲಿ ಅವನು ಹಾಡಿದ್ದು 1300 ಅಮರವಾದ ಹಾಡುಗಳನ್ನು! ಅವನ ಸಮಕಾಲೀನ ಗಾಯಕರಾದ ರಫೀ ಮತ್ತು ಕಿಶೋರ್ ಕುಮಾರ್ ಅವರಿಗೆ ಹೋಲಿಸಿದರೆ ಈ ಸಂಖ್ಯೆಯು ತುಂಬಾ ಕಡಿಮೆ. ಆದರೆ ಮುಕೇಶ್ ಹಾಡಿದ ಹಾಡುಗಳು ಎಲ್ಲವೂ ಸೂಪರ್ ಹಿಟ್. ಮಾಧುರ್ಯದ ಪರಾಕಾಷ್ಠೆ!

ಶೋಕ ಗೀತೆಗಳ ಸಾಮ್ರಾಟ ಮುಕೇಶ್!

ಅವನ ಧ್ವನಿಯಲ್ಲಿ ರಫಿಯ ವೈವಿಧ್ಯತೆ ಇರಲಿಲ್ಲ. ಕಿಶೋರ್ ಕುಮಾರನ ಕಶಿಷ್ ಇರಲಿಲ್ಲ. ಆದರೆ ಒಂದು ಹಾಂಟಿಂಗ್ ಮೆಲಡಿಯು ಖಂಡಿತವಾಗಿಯು ಇರುತ್ತಿತ್ತು. ಅದರಲ್ಲಿ ಕೂಡ ಭಗ್ನಪ್ರೇಮಿಗಳಿಗೆ ಒಂದಿಷ್ಟು ಸಾಂತ್ವನ ನೀಡುವ ವಿಷಾದ ಭಾವ ಇರುತ್ತಿತ್ತು. ಅದಕ್ಕೆ ಅವನನ್ನು ‘ಶೋಕ ಗೀತೆಗಳ ಸಾಮ್ರಾಟ’ ಎಂದು ಜನರು ಕರೆದರು. ನೋವಿನಲ್ಲಿ ಅದ್ದಿ ತೆಗೆದ ಆ ಆರ್ದ್ರ ಧ್ವನಿಯು ಬೇರೆ ಯಾವ ಗಾಯಕನಲ್ಲೂ ಇರಲಿಲ್ಲ! ಒಂದು ರೀತಿಯಲ್ಲಿ ಆತನದ್ದು ನಶೆ ಏರಿಸುವ ಧ್ವನಿ ಆಗಿತ್ತು. ಶಂಕರ್ ಜೈಕಿಷನ್, ಕಲ್ಯಾಣ್ ಜಿ ಆನಂದ ಜಿ, ಸಚಿನ್ ದೇವ್ ಬರ್ಮನ್, ಖಯ್ಯಾಂ, ಸಲೀಲ್ ಚೌಧರಿ ಮೊದಲಾದ ಸಂಗೀತ ನಿರ್ದೇಶಕರು ಮುಕೇಶನ ಒಳಗಿದ್ದ ಅದ್ಭುತ ಗಾಯಕನನ್ನು ಕಡೆದು ನಿಲ್ಲಿಸಿದರು.

ಆಗಿನ ಕಾಲದಲ್ಲಿ ಸ್ಟುಡಿಯೋ ವ್ಯವಸ್ಥೆ ಹೇಗಿತ್ತು ಎಂದರೆ ಎಲ್ಲಾ ವಾದ್ಯಗಳ ಕಲಾವಿದರು ಸಾಕಷ್ಟು ರಿಹರ್ಸಲ್ ಮಾಡಿ ಲೈವ್ ಆಗಿ ನುಡಿಸಬೇಕಾಗಿತ್ತು. ಹಿನ್ನೆಲೆ ಗಾಯಕರು ರೀ ಟೇಕ್ ಮಾಡಲು ಅವಕಾಶ ಇಲ್ಲದೆ ಒಂದೇ ಉಸಿರಲ್ಲಿ ಹಾಡಿ ಮುಗಿಸಬೇಕು. ಮುಕೇಶ್ ಇಂತಹ ಸವಾಲನ್ನು ಗೆದ್ದು ಬಂದಿದ್ದವರು!

ʼಮುಕೇಶ್ ನನ್ನ ಆತ್ಮ’ ಎಂದರು ರಾಜಕಪೂರ್

ಹಿಂದಿ ಸಿನೆಮಾರಂಗದ ಮಹಾನಟ, ಶೋಮ್ಯಾನ್ ರಾಜ್ ಕಪೂರ್ ಅವರ ವ್ಯಕ್ತಿತ್ವಕ್ಕೆ ಮುಕೇಶ್ ಧ್ವನಿಯು ತುಂಬಾ ಚೆನ್ನಾಗಿಯೇ ಹೊಂದಾಣಿಕೆ ಆಗುತ್ತಿತ್ತು. ಅದರಿಂದ ಹುಟ್ಟಿ ಬಂದದ್ದು ಎವರ್ ಗ್ರೀನ್ ಆದ ನೂರಾರು ಹಾಡುಗಳು! ಆವಾರಾ, ಬರ್ಸಾತ್, ಶ್ರೀ 420, ಸಂಗಂ, ಮೇರಾ ನಾಮ್ ಜೋಕರ್, ಅನಾರಿ, ಆಗ್, ಜಿಸ್ ದೇಶ್ ಮೆ ಗಂಗಾ ಬಹತಿ ಹೈ……….. ಈ ಸಿನಿಮಾಗಳ ಹಾಡುಗಳನ್ನು ಕೇಳಿ ನೋಡಿ. ಅಂತಹ ಹಾಡುಗಳಿಗೆ ಸಾವಿಲ್ಲ. ಅದಕ್ಕಾಗಿ ಮುಂದೆ ಮುಕೇಶ್ ನಿಧನರಾದಾಗ ರಾಜಕಪೂರ್ ಹೇಳಿದ್ದು – ನಾನು ನನ್ನ ಆತ್ಮವನ್ನು ಕಳೆದುಕೊಂಡೆ!

ಕಯಿ ಬಾರ್ ಯೂ ಹಿ ದೇಖಾ ಹೈ..

ಮುಕೇಶನಿಗೆ ‘ರಜನಿ ಗಂಧಾ’ ಹಿಂದೀ ಸಿನಿಮಾದ ಹಾಡಿಗೆ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ ದೊರೆಯಿತು( ಕಯಿ ಬಾರ್ ಯೂ ಹಿ ದೇಖಾ ಹೈ). ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿ, ಬೆಂಗಾಲಿ ಪತ್ರಕರ್ತರ ಸಂಘದ ಮೂರು ಪ್ರಶಸ್ತಿಗಳು ಅವನಿಗೆ ದೊರೆತಿವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆತನ ಮೆಲಡಿ ಹಾಡುಗಳನ್ನು ಈಗಲೂ ಕೇಳುವ, ಆಸ್ವಾದಿಸುವ, ಫೀಲ್ ಮಾಡಿಕೊಳ್ಳುವ ಬಹು ದೊಡ್ಡ ಅಭಿಮಾನಿಗಳ ಪ್ರೀತಿಯು ದೊರೆತಿತು. ಮುಖೇಶನಿಗೆ ವಿದೇಶದಲ್ಲಿ ಕೂಡ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗ ಇದೆ.

ʼದಿಲ್ ಜಲ್ತಾ ಹೈ’ ಮುಕೇಶ್ ಅವನ ಮೊದಲ ಮತ್ತು ಕೊನೆಯ ಹಾಡಾಯಿತು!

1976 ಆಗಸ್ಟ್ 27ರಂದು ಅಮೆರಿಕಾದ ಒಂದು ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ಹಾಡಲು ಹೋಗಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಮುಕೇಶ್ ಉಸಿರು ನಿಂತಿತು. ಅಲ್ಲಿ ಕೂಡಾ ಆತ ಹಾಡಿದ ಕೊನೆಯ ಹಾಡು – ದಿಲ್ ಜಲ್ತಾ ಹೈ ತೋ ಜಲನೆ ದೋ! ನೆನಪು ಮಾಡಿಕೊಳ್ಳಿ, ಅದು ಮುಕೇಶ್ ಹಾಡಿದ ಮೊದಲ ಹಾಡು ಕೂಡ ಆಗಿತ್ತು! ಉಸಿರು ನಿಂತಾಗ ಅವನಿಗೆ ಕೇವಲ 53 ವರ್ಷ ಆಗಿತ್ತು. ಮುಂದೆ ಆತನ ಮಗ ನಿತಿನ್ ಮುಕೇಶ್ ಅಪ್ಪನ ಹಾಗೆ ಹಿನ್ನೆಲೆ ಗಾಯಕರಾಗಿ ಜನಪ್ರಿಯತೆ ಪಡೆದರು.

ಮುಕೇಶನ ಹಾಡುಗಳನ್ನು ಆರಾಧಿಸುತ್ತಾ, ಅವುಗಳನ್ನು ನನಗೆ ದೊರೆತ ಎಲ್ಲಾ ಕಾಲೇಜಿನ ವೇದಿಕೆಯಲ್ಲಿ, ಸ್ಪರ್ಧೆಗಳಲ್ಲಿ ಆರ್ದ್ರವಾಗಿ ಹಾಡುತ್ತ ಇದ್ದ ನನ್ನ ಹಾಗೆ ಇರುವ ಕೋಟಿ ಕೋಟಿ ಅಭಿಮಾನಿಗಳ ಮೇಲೆ ಆತನು ದಟ್ಟವಾದ ಪ್ರಭಾವವನ್ನು ಬಿಟ್ಟು ಹೋಗಿದ್ದಾನೆ. ಆತನ ಟಾಪ್ 12 ಹಾಡುಗಳನ್ನು ಪಟ್ಟಿ ಮಾಡಿ ಇಲ್ಲಿಟ್ಟು ಅವನಿಗೆ ಶ್ರದ್ಧಾಂಜಲಿ ಕೊಡುತ್ತಿರುವೆ. ಅವನ ಸಾವಿರದ ಹಾಡುಗಳಿಗೆ ಕಿವಿ ಆಗಿ ಆಯ್ತಾ!

ಈ ಹಾಡುಗಳನ್ನೊಮ್ಮೆ ಕೇಳಿ, ನೀವು ಮುಕೇಶ್ ಫ್ಯಾನ್ ಆಗದಿದ್ದರೆ ಮತ್ತೆ ಹೇಳಿ!

1) ಹೊಂಟೋ ಪೆ ಸಚ್ಚಾಯಿ ರಹತಿ ಹೈ( ಜೀಸ್ ದೇಶ್ ಮೆ ಗಂಗಾ ಬೇಹತಿ ಹೈ)
2) ದೋಸ್ತ್ ದೋಸ್ತ್ ನಾ ರಹಾ( ಸಂಗಂ)
3) ಸಾವನ ಕಾ ಮಹೀನಾ ಪವನ್ ಕರೆ ಶೋರ್ (ಮಿಲನ್)
4) ಬಸ್ ಏಹಿ ಅಪರಾಧ್ ( ಪೆಹಾಚಾನ್)
5) ಜಾನೆ ಕಹಾನ್ ಗಯೇ ಓ ದಿನ್ (ಮೇರಾ ನಾಮ್ ಜೋಕರ್)
6) ಕಹೀನ್ ದೂರ್ ಜಬ್ ದಿನ್ ಧಲ ಜಾಯೆ ( ಆನಂದ್)
7) ಮೈ ನಾ ಭೂಲೂಂಗಾ(ರೋಟಿ ಕಪಡಾ ಔರ್ ಮಕಾನ್)
8) ಇಕ್ ದಿನ್ ಭಿಕ್ ಜಾಯೆಗಾ ( ಧರಂ ಕರಂ)
9) ಕಭೀ ಕಭಿ ಮೇರೆ ದಿಲ್ ಮೆ( ಕಭೀ ಕಭಿ)
10) ಮೇರಾ ಜೂತಾ ಹೈ ಜಪಾನಿ( ಆವಾರ)
11) ತಾಲ್ ಮಿಲೆ ನದೀ ಕೆ ಜಲ ಮೆ ( ಅನೋಖಿ ರಾತ)
12) ದಿಲ್ ತಡಪ್ ತಡಪ್ ಕೆ (ಮಧುಮತಿ)

ಸಹಸ್ರಮಾನದ ಮುಕೇಶ್ ಧ್ವನಿಗೆ ಕೋಟಿ ಪ್ರಣಾಮಗಳು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನಾಲ್ಕನೇ ತರಗತಿ ಮಾತ್ರ ಓದಿದ ಎನ್ ನರಸಿಂಹಯ್ಯ 550 ಪತ್ತೇದಾರಿ ಕಾದಂಬರಿ ಬರೆದರು!

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

ಧವಳ ಧಾರಿಣಿ ಅಂಕಣ: ಸುಗ್ರೀವನಿಗೆ ಸಮಗ್ರ ಭೂಮಂಡಲದ ಪರಿಚಯ ಹೇಗಾಯಿತು ಎನ್ನುವ ಕುತೂಹಲ ರಾಮನಿಗೆ ಇತ್ತು. “ಕಥಂ ಭವಾನ್ವಿಜಾನೀತೇ ಸರ್ವಂ ವೈ ಮಣ್ಡಲಂ ಭುವಃ” ಇಡೀ ಭೂಮಂಡಲದ ಪರಿಚಯ ನಿನಗೆ ಹೇಗಾಯಿತು ಎಂದು ಕೇಳಿದಾಗ ಸುಗ್ರೀವ ರಾಮನಲ್ಲಿ ತನ್ನ ಭೂಮಂಡಲದ ಯಾತ್ರೆಯ ಕಥೆಯನ್ನು ಹಂಚಿಕೊಂಡ.

VISTARANEWS.COM


on

vali sugreeva ಧವಳ ಧಾರಿಣಿ
Koo

ವಾಲಿಯ ಪರಾಕ್ರಮಕ್ಕೆ ಋಷ್ಯಮೂಕ ಎರವಾಗದ ಬಗೆ

dhavala dharini by Narayana yaji

ಧವಳ ಧಾರಿಣಿ ಅಂಕಣ: ವಾನರೇನ್ದ್ರೋ ಮಹಾವೀರ್ಯಸ್ತೇಜೋವಾನಮಿತಪ್ರಭಃ
ಸತ್ಯಸನ್ಧೋ ವಿನೀತಶ್ಚ ಧೃತಿಮಾನ್ಮತಿಮಾನ್ಮಹಾನ್৷৷ಅ.72.13৷৷

ವಾನರೇಂದ್ರನಾದ ಅವನು (ಸುಗ್ರೀವನು), ಮಹಾವೀರ್ಯನು, ತೇಜಸ್ಸುಳ್ಳವನು, ಅಮಿತವಾದ ಕಾಂತಿಯುಳ್ಳವನು, ಸತ್ಯಸಂಧನು, ವಿನಯಶೀಲನು, ಧರ್ಯವಂತನು, ಬುದ್ಧಿವಂತನು, ಮಹಾತ್ಮನು, ಕಾರ್ಯದಕ್ಷನು, ವಾಗ್ಮಿಯು, ಮಹಾಬಲಿಷ್ಠನು ಮತ್ತು ಅತಿಶಯವಾದ ಪರಾಕ್ರಮವುಳ್ಳವನು.

ಮಹಾಕಾವ್ಯವನ್ನು ಖಂಡವಾಗಿ ಓದುವುದರಿಂದ ಅಥವಾ ಅದರ ಯಾವುದೋ ಒಂದು ಭಾಗದ ಕಥೆ ಜನಪ್ರಿಯವಾಗಿರುವುದರಿಂದ ಅದರಲ್ಲಿ ಬರುವ ಪಾತ್ರದ ಗುಣಗಳನ್ನೇ ಆ ಪಾತ್ರದ ನಿಜವಾದ ಗುಣಾವಗುಣಗಳೆಂದು ಜನಮಾನಸದಲ್ಲಿ ಬಿಂಬಿತವಾಗಿಬಿಡುತ್ತದೆ. ರಾಮಾಯಣದಲ್ಲಿ (Ramayana) ಬಹುಚರ್ಚಿವಾಗುವ ಸಂಗತಿ ಎಂದರೆ ವಾಲಿವಧಾ (Vali Vadha) ಪ್ರಕರಣ. ಇಲ್ಲಿ ಬರುವ ಮೂರು ಮುಖ್ಯಪಾತ್ರಗಳಲ್ಲಿ ಮೊದಲನೆಯದು ವಾಲಿ, ಎರಡನೆಯದು ಹನುಮಂತ (Hanuman) ನಂತರ ಸುಗ್ರೀವ (Sugreeva). ಈ ಮೂರೂ ಪಾತ್ರಗಳೂ ರಾಮನಲ್ಲಿ ಮುಖಾಮುಖಿಯಾಗುತ್ತವೆ. ಹನುಮಂತ ರಾಮನ ದಾಸನಾಗಿ ತನ್ನ ಜೀವನವನ್ನು ಸವೆಸಿದರೆ ಸುಗ್ರೀವ ರಾಮನಿಗೆ ಸ್ನೇಹಿತನಾಗಿ ಕಿಷ್ಕಿಂಧಾ ರಾಜ್ಯವನ್ನೂ, ಪತ್ನಿಯನ್ನೂ ಅಣ್ಣನಿಂದ ಪಡೆದುಕೊಳ್ಳುತ್ತಾನೆ. ಈ ಇಬ್ಬರ ನಡುವೆ ವಾಲಿ ರಾಮನಲ್ಲಿ ಕೇಳುವ ಪ್ರಶ್ನೆಗಳು ಅದಕ್ಕೆ ರಾಮ ಕೊಡುವ ಉತ್ತರಗಳು ನಿರಂತರವಾಗಿ ರಾಮನ ವ್ಯಕ್ತಿತ್ವಕ್ಕೆ ಸವಾಲುಗಳನ್ನು ಎಸೆಯುತ್ತಲೇ ಬಂದಿವೆ. ಇದಕ್ಕೆ ಕಾರಣ ಮಹಾಕಾವ್ಯಕ್ಕಿಂತ, ಅದನ್ನು ಆಧರಿಸಿ ಬರೆದ ರೂಪಕಗಳಾದ ನಾಟಕ, ಯಕ್ಷಗಾನ ಮೊದಲಾದವುಗಳು. ಭಟ್ಟತೌತನದ್ದೆಂದು ನಂಬಲಾದ ಒಂದು ಶ್ಲೋಕದಲ್ಲಿ ಕಾವ್ಯ ಮತ್ತು ನಾಟಕಗಳ ಕುರಿತು ಹೀಗೆ ಹೇಳಲಾಗಿದೆ.

ಅನುಭಾವವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ I
ತೇಷಾಮೇವ ಪ್ರಯೋಗಸ್ತು ನಾಟ್ಯಂ ಗೀತಾದಿರಂಜಿತಂ II

ಅನುಭಾವ ವಿಭಾವಗಳ ವರ್ಣನೆಗೆ ಕಾವ್ಯವೆಂದು ಹೆಸರು; ಇವುಗಳನ್ನೇ ಗಾನಾದಿಗಳಿಂದ ರಂಜನೆಗೊಳಿಸಿ ಆಡಿ ತೋರಿಸಿದರೆ ನಾಟ್ಯವಾಗುತ್ತದೆ. (ಕೃಪೆ:- ತೀನಂಶ್ರೀಯವರ ಭಾರತೀಯ ಕಾವ್ಯಮೀಮಾಂಸೆಯಿಂದ).

ಇಲ್ಲಿ ರಂಜನೆಗಾಗಿ ನಾಟಕಕಾರ ಕಾವ್ಯವನ್ನು ತನಗೆ ಬೇಕಾದ ರೀತಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡರೆ ಅದು ನಾಟ್ಯವಾಗಿ ರಂಗದಮೇಲೆ ಬಂದಾಗ ಆ ಪಾತ್ರಗಳು ಮೂಲ ಕಾವ್ಯದ ಮೂಸೆಯಲ್ಲಿ ಇದ್ದಂತೆ ಮೂಡಿಬಂದವುಗಳು ಎಂದು ಅಂದುಕೊಳ್ಳುತ್ತೇವೆ.

ಅಪಾರೇ ಕಾವ್ಯಸಂಸಾರೆ ಕವಿರೇವ ಪ್ರಜಾಪತಿಃ
ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ II

ಕಾವ್ಯವೇ ಇರಲಿ ನಾಟಕ ರೂಪಕಗಳೇ ಇರಲಿ, ಇಲ್ಲಿ ಕವಿಯೇ ಸೃಷ್ಟಿಕರ್ತ. ತನಗೆ ಹೇಗೆ ರುಚಿಸುವುದೋ ಹಾಗೇ ವಿಶ್ವವನ್ನು ರೂಪಾಂತರಗೊಳಿಸುತ್ತಾನೆ ಎಂದು ಆನಂದವರ್ಧನ ತನ್ನ ಧ್ವನ್ಯಾಲೋಕದಲ್ಲಿ ಹೇಳುವುದನ್ನು ಗಮನಿಸಬಹುದು. ಈ ರೂಪಾಂತರಗೊಳಿಸಿದುದರ ಪರಿಣಾಮವೇ ಮಹಾಕಾವ್ಯಗಳ ಪ್ರತಿನಾಯಕಪಾತ್ರಗಳು ಉದಾತ್ತೀಕರಣಗೊಂಡು ನಾಯಕ ಪಾತ್ರಗಳು ಅವುಗಳ ಎದುರು ಮಂಕಾಗಿಹೋಗಿದೆ. ಅಂತಹ ಪಾತ್ರಗಳಲ್ಲಿ ಸುಗ್ರೀವನೂ ಓರ್ವ.

ಮೇಲೆ ಹೇಳಿದ “ಹನ್ನೆರಡು ಗುಣಗಳು ಸುಗ್ರೀವನಲ್ಲಿ ಇದೆ ಹಾಗಾಗಿ ನೀನು ಆತನೊಡನೆ ಸ್ನೇಹವನ್ನು ಮಾಡು’ ಎಂದು ರಾಮನಿಗೆ ಹೇಳುವುದು ಕಬಂಧನೆನ್ನುವ ರಾಕ್ಷಸ. ಕಬಂಧ ಸುಗ್ರೀವನ ಗುಣಗಳ ಕುರಿತು ಹೇಳುವಾಗ ಬಹಳ ಮುಖ್ಯವಾದ ಸಂಗತಿಯೊಂದನ್ನು ತಿಳಿಸುವುದು “ಎಲ್ಲಿಯವರೆಗೆ ಸೂರ್ಯನ ಬೆಳಕು ಪ್ರಸರಿರುವುದೋ ಅಲ್ಲಿಯವರೆಗೂ ಈ ಭೂಮಂಡಲದಲ್ಲಿ ಸುಗ್ರೀವನಿಗೆ ತಿಳಿಯದ ಸಂಗತಿಗಳು ಯಾವುದೋ ಇಲ್ಲ. ಪತ್ನಿವಿಯೋಗದಿಂದ ದುಃಖಪಡುತ್ತಿರುವ ನಿನ್ನ ಈ ಶೋಕವನ್ನು ಪರಿಹರಿಸಲು ಅವನೇ ಸಮರ್ಥನು. ಸುಂದರಿಯಾದ ಸೀತೆಯು ಮೇರುಪರ್ವತದ ತುತ್ತತುದಿಯಲ್ಲಿರಲಿ, ಪಾತಾಳದಲ್ಲಿಯೇ ಆಶ್ರಯ ಪಡೆದಿರಲಿ, ಯಾವದಿಕ್ಕಿನಲ್ಲಿಯೇ ಇರಲಿ, ಮಹಾಕಾಯರಾದ ವಾನರನ್ನು ಎಲ್ಲದಿಕ್ಕುಗಳಿಗೂ ಕಳುಹಿಸಿ ಸೀತೆಯನ್ನು ಹುಡುಕಿಸಿಕೊಡಬಲ್ಲ. ರಾವಣನ ಅರಮನೆಯಲ್ಲಿ ನಿನ್ನ ಮೈಥಿಲಿ ಇರಲಿ, ಅಲ್ಲಿಯೂ ಆತ ಸೀತೆಯನು ಹುಡುಕಿಸಬಲ್ಲ. ಅಗತ್ಯಬಿದ್ದರೆ ರಾಕ್ಷಸರನ್ನು ಸಂಹರಿಸಬಲ್ಲ” ಎನ್ನುವ ಮಾತುಗಳು ಸುಗ್ರೀವನ ನಿಪುಣತೆಯನ್ನು ತಿಳಿಸುತ್ತದೆ. ಇಲ್ಲಿ ಬರುವ ಒಂದು ವಾಕ್ಯ “ಸುಗ್ರೀವನಿಗೆ ಸೂರ್ಯನ ಕಿರಣಬೀಳುವ ಎಲ್ಲಾ ಪ್ರದೇಶಗಳ ಪರಿಚಯವಿದೆ” ಎನ್ನುವ ಮಾತಿನ ಹಿಂದೆ ಒಂದು ಘಟನೆಯ ಹಿನ್ನೆಲೆಯಿದೆ. ಅದು ವಾಲಿ ಮತು ಸುಗ್ರೀವರ ಪ್ರಸಿದ್ಧವಾದ ಜಗಳ.

ವಾನರರು ಎಂದರೆ ಮಂಗಗಳು ಎನ್ನುವುದಕ್ಕಿಂತ ಮುಖ್ಯವಾಗಿ ಅವರೊಂದು ಜನಾಂಗವಾಗಿರಬಹುದು ಎನ್ನುವ ವಿವರಣೆ ಕೆಲವುಕಡೆ ಇದೆ. ವಾಲ್ಮೀಕಿರಾಮಾಯಣದಲ್ಲಿ ಇದಕ್ಕೆ ಪುಷ್ಟಿಕೊಡುವ ಕೆಲಶ್ಲೋಕಗಳು ಇದೆ. ಆದರೂ ಹೆಚ್ಚಿನ ಕಡೆಯಲ್ಲಿ ಅವರನ್ನು ವಾನರರು, ಕಪಿಗಳು ಎಂದೆಲ್ಲ ವರ್ಣಿಸಿರುವುದರಿಂದ ಅವರು ಯಾವುದೋ ಒಂದು ಬುಡಕಟ್ಟು ಜನಾಂಗವೆನ್ನುವದನ್ನು ಸಿದ್ಢಪಡಿಸಲು ಸಾಕಾಗುವುದಿಲ್ಲ. ಹಾಗಂತ ಅಲ್ಲವೆಂದು ಹೇಳುವಂತೆಯೂ ಇಲ್ಲ. ವಾನರರ ಹಿನ್ನೆಲೆಯನ್ನು ಗಮನಿಸುವಾಗ ವಾಲಿ ಮತ್ತು ಸುಗ್ರೀವ ಇವರೆಲ್ಲರೂ ಬ್ರಹ್ಮನಿಗೆ ನೇರ ಸಂಬಂಧವುಳ್ಳವರು. ಅವರ ತಂದೆ ಋಕ್ಷರಜಸ್ ಎನ್ನುವಾತ. ಬ್ರಹ್ಮನೊಮ್ಮೆ ಮೇರುಪರ್ವತದಲ್ಲಿ ತಪಸ್ಸನ್ನು ಆಚರಿಸುವಾಗ ಆತನ ಕಣ್ಣಿನಿಂದ ಬಿದ್ದ ಒಂದು ಹನಿ ವಾನರರೂಪದ ಪುರಷಾಕಾರ ತಾಳಿತು. ಅಲ್ಲಿಯೇ ಆತ ವೇದಗಳನ್ನು ಕಲಿತ. ಒಂದು ದಿವಸ ಆತ ಮೇರು ಪರ್ವತದಲ್ಲಿ ತಿರುಗಾಡುತ್ತಿರುವಾಗ ಸರೋವರವೊಂದರಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ, ಯಾರೋ ಬೇರೆಯವನೆಂದು ಭಾವಿಸಿ ಅವನನ್ನುಹಿಡಿಯಲು ಸರೋವರದೊಳಗೆ ಧುಮುಕಿದ. ಅಲ್ಲಿಂದ ಮೇಲೆ ಬರುವಾಗ ಆತ ಸುಂದರಿಯಾದ ಸ್ತ್ರೀರೂಪವನ್ನು ತಾಳಿದ್ದ. ಸಂಜೆಯಾಗುತ್ತಿತ್ತು. ಅಸ್ತಮಿಸುತ್ತಿರುವ ಸೂರ್ಯ ಮತ್ತು ಬ್ರಹ್ಮನ ಸಂದರ್ಶನಕ್ಕಾಗಿ ಹೋಗುತ್ತಿರುವ ಇಂದ್ರ ಇಬ್ಬರೂ ಆತನನ್ನು ನೋಡಿ ಮೋಹಗೊಂಡರು. ಇಂದ್ರನ ತೇಜಸ್ಸು ಆತನ ಬಾಲದ ಮೇಲೆಯೂ, ಸೂರ್ಯನ ತೇಜಸ್ಸು ಕುತ್ತಿಗೆಯ ಮೇಲೂ ಬಿತ್ತು. ಅದರ ಪರಿಣಾಮ ಬಾಲದಿಂದ ವಾಲಿ, ಗ್ರೀವ-ಕುತ್ತಿಗೆಯಿಂದ ಸುಗ್ರೀವ ಜನಿಸಿದರು. ಮಾರನೆಯ ದಿನ ಬೆಳಗಾಗುತ್ತಿರುವಂತೆ ಋಕ್ಷರಜಸ್ ಪುನಃ ಗಂಡಸಾದ. ಆತನ ಅವಸ್ಥೆಯನ್ನು ಗಮನಿಸಿದ ಬ್ರಹ್ಮ, ಋಕ್ಷರಜಸ್ಸನಿಗೆ ಅಲ್ಲಿಂದ ಕಿಷ್ಕಿಂಧೆಗೆ ಹೋಗಿ ರಾಜ್ಯಭಾರಮಾಡುವಂತೆ ಅಪ್ಪಣೆಯಿತ್ತ.

ಆತ ತನ್ನ ಮಕ್ಕಳಾದ ವಾಲಿ ಸುಗ್ರೀವರೊಂದಿಗೆ ಕಿಷ್ಕಿಂಧೆಗೆ ಬಂದು ವಾನರರ ಸಾಮ್ರಾಜ್ಯವನ್ನು ಸ್ಥಾಪಿಸಿದ. ಕೆಲಕಾಲದ ನಂತರ ವಾಲಿಗೆ ಪಟ್ಟವನ್ನು, ಸುಗ್ರೀವನಿಗೆ ಯುವರಾಜ ಪಟ್ಟವನ್ನು ಕಟ್ಟಿ ತಪಸ್ಸಿಗೆ ತೆರಳಿದ. ವಾಲಿ ಕಿಷ್ಕಿಂಧೆಯಲ್ಲಿ ರಾಜನಾದ ಮೇಲೆ ಚದುರಿಹೋಗಿದ್ದ ವಾನರರನ್ನೆಲ್ಲಾ ಒಂದುಗೂಡಿಸಿ ಬಲಿಷ್ಠವಾದ ಸಾಮ್ರಾಜ್ಯವನ್ನು ಕಟ್ಟಿದ. ವಾನರರ ಆಚಾರಗಳೆಲ್ಲವೂ ಮನುಷ್ಯರ ನಡವಳಿಕೆಯಂತೆಯೇ ಇದ್ದವು. ಪಟ್ಟಾಭಿಷೇಕ, ಪಾಣಿಗ್ರಹಣಪೂರ್ವಕ ವಿವಾಹ, ಕುಟುಂಬಪದ್ಧತಿ, ರಾಜನೀತಿ ಇವೆಲ್ಲದರಲ್ಲಿಯೂ ಅವರ ಆಚಾರಗಳು ಅಗಸ್ತ್ಯರಿಂದ ಪ್ರಭಾವಿತರಾಗಿರಬಹುದು ಎನಿಸುತ್ತದೆ. ಸುಗ್ರೀವ ಅನೇಕ ಸಾರಿ ಅಗಸ್ತ್ಯರ ಆಶ್ರಮದ ವಿಷಯವನ್ನು ಪ್ರಸ್ತಾಪಿಸುತ್ತಾನೆ. ಸೀತಾನ್ವೇಷಣೆಗೆ ವಾನರರನ್ನು ಕಳಿಸುವಾಗ ಅಗಸ್ತ್ಯರ ಆಶ್ರಮದ ಸಮೀಪ ಯಾವಕಾರಣಕ್ಕೂ ಅಪಮಾನಕ್ಕೆ ಕಾರಣವಾಗಬಹುದಾದ ಕಾರ್ಯವನ್ನು ಎಸಗಬೇಡಿ ಎನ್ನುತ್ತಾನೆ. ಅವರ ಆಶ್ರಮದೆಡೆಗೆ ರಾಕ್ಷಸರು ಅಪ್ಪಿತಪ್ಪಿಯೂ ಕಾಲಿಡಿಸುತ್ತಿರಲಿಲ್ಲ. ಮುನಿಗಳು ರಾಕ್ಷಸರನ್ನು ಜನಸ್ಥಾನದಿಂದ ನಿಗ್ರಹಿಸಲು ವಾನರರನ್ನು ಉಪಯೋಗಿಸಕೊಳ್ಳಬೇಕೆಂದಿದ್ದರೇನೋ; ಆದರೆ ವಾಲಿ ಮತ್ತು ರಾವಣರ ಗೆಳೆತನದಿಂದಾಗಿ ಕಾರ್ಯಸಾಧ್ಯವಾಗದೇ ಹೋಗಿರಬೇಕು. ಈ ಹಂತದಲ್ಲಿಯೇ ಅಗಸ್ತ್ಯರು ಮತ್ತು ವಾನರರಿಗೆ ಸಂಪರ್ಕ ದೂರವಾಯಿತು. ಪರಿಣಾಮ ವಾನರರಿಗೆ ಅರ್ಷೇಯ ಮತ್ತು ಬುಡಕಟ್ಟು ಎರಡೂ ಸೇರಿದ ಅನುಕೂಲಕರ ಮಿಶ್ರ ಪದ್ಧತಿಗಳ ಆಚರಣೆ ರೂಢಿಗೆಬಂತು ಎನ್ನಬಹುದು.

ವಾನರರ ಸಾಮ್ರಾಜ್ಯವೆನ್ನುವುದು ಕೇವಲ ಕಿಷ್ಕಿಂಧೆಗೆ ಮಾತ್ರ ಸೀಮಿತವಾಗಿತ್ತೇ ಎನ್ನುವ ಪ್ರಶ್ನೆಗೆ ಉತ್ತರ ರಾಮಾಯಣದಲ್ಲಿಯೇ ಸಿಗುತ್ತದೆ. ವಾನರರ ಸಾಮ್ರಾಜ್ಯ ಮಹೇಂದ್ರಪರ್ವತ, ಹಿಮವತ್ಪರ್ವತ, ಕೈಲಾಸ ಪರ್ವತ, ವಿಂಧ್ಯಪರ್ವತ ಮತ್ತು ಬಿಳಿಯ ಬಣ್ಣದ ಶಿಖರಗಳಿರುವ ಮಂದರ ಪರ್ವತ ಇಲ್ಲೆಲ್ಲ ಹಂಚಿಹೋಗಿತ್ತು. ಇವುಗಳಲ್ಲಿ ಮಂದರ ಪರ್ವತ ಯಾವುದಾಗಿತ್ತು ಎನ್ನುವುದು ಸಿಗುತ್ತಿಲ್ಲ. (ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿರುವವರು ತಮ್ಮದು ವಾಲಿ ಹುಟ್ಟಿದ ಪ್ರದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಲ್ಲಿನ ದ್ವೀಪಗಳು ಪರ್ವತ ಮತ್ತು ದಿಣ್ಣೆಗಳಿಂದ ತುಂಬಿದೆ. ಉಲುವಾಟು ದೇವಾಲಯದಲ್ಲಿ ಪ್ರತಿನಿತ್ಯ ರಾಮಾಯಣ ನೃತ್ಯ ನಡೆಯುತ್ತದೆ. ಇಲ್ಲಿ ವಿಷಯಾಂತರವಾಗುವುದರಿಂದ ಆ ಕುರಿತು ಹೆಚ್ಚು ವಿವರಿಸುವುದಿಲ್ಲ). ಈ ಪ್ರದೇಶದ ವಾನರರ ಪ್ರಬೇಧಗಳ ವಿಷಯ ಕಿಷ್ಕಿಂಧಾ ಕಾಂಡದ್ದುದ್ದಕ್ಕೂ ಅಲ್ಲಲ್ಲಿ ವಿವರಿಸಿದೆ. ಅವರೆಲ್ಲರೂ ಕಾಮರೂಪಿಗಳಾಗಿದ್ದರು. ಮಹಾಬಲಿಷ್ಠರಾಗಿದ್ದರು. ಪರ್ವತಗಳಲ್ಲಿ ವಾಸಿಸುತ್ತಿದ್ದರು ಮತ್ತು ಅವರ್ಯಾರೂ ಮಂಸಾಹಾರಿಗಳಾಗಿರಲಿಲ್ಲ. ಅವರ ಭಾಷೆಗಳು ಸಂಸ್ಕೃತವನ್ನು ಹೋಲುತ್ತಿರುವ ಪ್ರಾಕೃತವಾಗಿತ್ತು. ಆದರೆ ವಾನರ ಮತ್ತು ಋಕ್ಷಪ್ರಮುಖರಿಗೆ ಗೀರ್ವಾಣ ಭಾಷೆ ಚನ್ನಾಗಿ ಬರುತ್ತಿತ್ತು ಎನ್ನುವುದು ಬಲುಮಹತ್ವವಾದ ಸಂಗತಿ.

ಹನುಮಂತ ಅಶೋಕವನದಲ್ಲಿ ಸೀತೆಯೊಡನೆ ತಾನು “ವಾಚಂ ಚೋದಾಹರಿಷ್ಯಾಮಿ ಮಾನಿಷೀಮಿಹ ಸಂಸ್ಕೃತಾಂ- ಸೀತೆಯಲ್ಲಿ ತಾನು ಮನುಷ್ಯರಾಡುವ ಸಂಸ್ಕೃತದಲ್ಲಿಯೇ ಮಾತಾಡುತ್ತೇನೆ, ದ್ವಿಜರಾಡುವ ಸಂಸ್ಕೃತದಲ್ಲಿ ಮಾತನ್ನಾಡಿಸಿದರೆ ಆಕೆ ತನ್ನನ್ನು ರಾವಣನೆಂದೇ ತಿಳಿದು ಭಯಪಡುತ್ತಾಳೆ” ಎನ್ನುತ್ತಾನೆ. ಈ ಎಲ್ಲದರೆ ಅರ್ಥ ವಾನರರೆಂದರೆ ಬುಡಕಟ್ಟು ಜನಾಂಗವೆನ್ನುವುದನ್ನು ಪುಷ್ಟೀಕರಿಸುತ್ತದೆ. ಇನ್ನು ಬಾಲಗಳ ವಿಷಯಕ್ಕೆ ಬಂದರೆ ಯುದ್ಧಕಾಂಡದಲ್ಲಿ ಕೆಂಪು, ಹಳದಿ, ಬಿಳಿ, ಮಿಶವರ್ಣದವು ಮೊದಲಾದ ಬಾಲಗಳಿರುವ ವಿಷಯ ಬರುತ್ತದೆ. ಕೆಲವು ವಾನರರು ಗೋಲಾಂಗುಲ- ಹಸುವಿನ ಬಾಲದ ಪುಚ್ಛವನ್ನು ಹೊಂದಿದವು, ಮತ್ತೆ ಕೆಲವು ಕಪಿಗಳು ಎಂದಿದೆ. ರಾಮ ಯುದ್ಧಕಾಂಡದಲ್ಲಿ ಇನ್ನು ನೀವು ಮನುಷ್ಯರೂಪದಲ್ಲಿ ಕಾಣಿಸಿಕೊಳ್ಳದೇ ವಾನರರ ಚಿನ್ಹೆ, ಲಕ್ಷಣದಲ್ಲೇ ಇರತಕ್ಕದ್ದು ಎನ್ನುತ್ತಾನೆ. ಸುಗ್ರೀವ ತನ್ನವರೆಲ್ಲರನ್ನೂ ಕಾಮರೂಪಿಗಳು ಎಂದು ಮೊದಲೇ ವರ್ಣಿಸಿದ್ದಾನೆ.

ವಿಶೇಷವೆಂದರೆ ವಾನರರ ಸ್ತ್ರೀಯರಿಗೆ ಬಾಲವಿರಲಿಲ್ಲ. ತಾರೆಯ ಸೌಂದರ್ಯದ ಕುರಿತು “ತಾರಾ ತಾರಾಧಿಪ ನಿಭಾನನಾ- ತಾರಾಧಿಪನಾದ ಚಂದ್ರನ ಕಾಂತಿಗೆ ಸಮಾನವಾದ ಮುಖಕಾಂತಿಯಿಂದ ಬೆಳಗುತ್ತಿದ್ದ ತಾರೆಯು” ಎಂದು ವರ್ಣಿಸಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಗೋಲಾಂಗೂಲವಾಗಲೀ, ಬಣ್ಣಬಣ್ಣದ ಬಾಲಗಳ ಪುಚ್ಛಗಳು ಅವರ ಚಿನ್ಹೆಗಳು ಎಂದು ದೇವದತ್ತ ಪಟ್ಟನಾಯಕ ಮೊದಲಾದ ವಿದ್ವಾಂಸರು ತರ್ಕಿಸುತ್ತಾರೆ. ವಿಕಾಸವಾದದ ಹಾದಿಯಲ್ಲಿ ಗಮನಿಸುವಾಗ ವಿಕಸನವಾದ ಅಂಗಗಳು ಮತ್ತೆ ಪೂರ್ವ ಸ್ವರೂಪಕ್ಕೆ ತಿರುಗುವುದಿಲ್ಲ. ಹಾಗಾಗಿ ಮಾತನ್ನಾಡಬಲ್ಲ ಮಂಗಗಳು ಮತ್ತೆ ಮಂಗನ ಭಾಷೆಯನ್ನು ಮಾತಾಡುವುದಿಲ್ಲ. ಈ ಎಲ್ಲ ಕಾರಣಗಳಿಂದ ಇನ್ನು ಋಕ್ಷ ಎಂದರೆ ಕರಡಿ. ವಾಲಿ ಸುಗ್ರೀವರ ತಂದೆ ತಾಯಿಯಾದ ಋಕ್ಷ ಕರಡಿಯಾಗಿ ಆತನ ಮಕ್ಕಳು ಮಂಗಗಳ ಜಾತಿಗೆ ಸೇರಿದವು ಎನ್ನುವುದು ಅಸಾಧ್ಯವೂ ಹೌದು. ಈ ಎಲ್ಲ ಹಿನ್ನೆಲೆಯಲ್ಲಿ ವಾಲಿ ಸುಗ್ರೀವ ಎನ್ನುವ ಸಹೋದರರ ವಿಷಯದಲ್ಲಿ ಹೋಲಿಸಿದಾಗ ಇವರು ವನದಲ್ಲಿರುವ ನರರು ಅಥವಾ Humanoid ಜಾತಿಯ ಪಳೆಯುಳಿಕೆಗಳು ಸಿಕ್ಕಿರುವುದರಿಂದ ಆ ಜಾತಿಗೆ ಸೇರಿರಬಹುದೆನ್ನುವುದು ಸೂಕ್ತ (Morphologically -similar to human but not identical).

ಪ್ರಪಂಚದಲ್ಲೆಲ್ಲ ಹರಡಿದ್ದ ವಾನರ ಸಾಮ್ರಾಜ್ಯವನ್ನು ವಾಲಿ ಮತ್ತು ಸುಗ್ರೀವರು ಕಿಷ್ಕೆಂಧೆಯಿಂದ ನಿಯಂತ್ರಿಸುತ್ತಿದ್ದರು. ವಾಲಿ ಮಹಾ ಪರಾಕ್ರಮಿಯಾಗಿದ್ದ. ತನ್ನ ತಮ್ಮನಾದ ಸುಗ್ರೀವನಲ್ಲಿ ಅಮಿತವಾದ ಪ್ರೀತಿಯೂ ಆತನಿಗೆ ಇತ್ತು. ತಾನೇ ಮುಂದೆ ನಿಂತು ತಾರನ ಮಗಳಾದ ರುಮೆಯನ್ನು ಸುಗ್ರೀವನಿಗೆ ಮದುವೆ ಮಾಡಿಸಿದ್ದನು. ಸಾಹಸಿಯಾಗಿದ್ದರೂ ಆತ ಅನ್ಯಾಕ್ರಮಣವನ್ನು ಮಾಡುತ್ತಿರಲಿಲ್ಲ. ವಾಲಿಯ ದೊಡ್ಡದಾದ ದೌರ್ಬಲ್ಯವೆಂದರೆ ಹೆಣ್ಣಿನ ಮೋಹ. ಒಮ್ಮೆ ಮಾಯಾವಿ ಎನ್ನುವ ರಾಕ್ಷಸನಿಗೂ ಮತ್ತು ವಾಲಿಗೂ ಹೆಣ್ಣಿನ ವಿಷಯದಲ್ಲಿ ಮಹಾವೈರವುಂಟಾಯಿತು.

ಮಾಯಾವೀ ನಾಮ ತೇಜಸ್ವೀ ಪೂರ್ವಜೋ ದುನ್ದುಭೇಃ ಸುತಃ.
ತೇನ ತಸ್ಯ ಮಹದ್ವೈರಂ ಸ್ತ್ರೀಕೃತಂ ವಿಶ್ಶ್ರುತಂ ಪುರಾ IIಕಿ. 9-4II

ದುಂದುಭೀರಾಕ್ಷಸನ ಅಣ್ಣನಾದ ಮಯಾಸುರನ ಮಗನಾದ ಮಾಯಾವಿ ಎನ್ನುವವ ಮಹಾಬಲಿಷ್ಠನಾಗಿದ್ದನು. ಅವನಿಗೂ ವಾಲಿಗೂ ಹೆಂಗಸೊಬ್ಬಳ ವಿಷಯದಲ್ಲಿ ಮಹಾವೈರವುಂಟಾಯಿತು. ಹೀಗೆ ಜಗಳಕ್ಕೆ ಕಾರಣವಾದ ಹೆಂಗಸು ಯಾರೆನ್ನುವ ವಿವರ ರಾಮಾಯಣದಲ್ಲಿಲ್ಲ. ಇದು ವಾಲಿಗಿರುವ ಸ್ತ್ರೀಯರ ಮೇಲಿರುವ ದೌರ್ಬಲ್ಯವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ವೈರ ಪ್ರಕರಣ ಎಲ್ಲಿಯೋ ಬೇರೆಕಡೆ ಆಗಿರಬೇಕು, ಅದರಲ್ಲಿ ವಾಲಿ ಮಾಯಾವಿ ಕಣ್ಣುಹಾಕಿದ್ದ ಹೆಂಗಸನ್ನು ತಾನು ಅನುಭವಿಸಿರಬೇಕು. ಆ ಸೇಡನ್ನು ತೀರಿಸಿಕೊಳ್ಳಲು ಮಾಯಾವಿ ರಾತ್ರಿಕಾಲದಲ್ಲಿ ಕಿಷ್ಕಿಂಧಾ ಪಟ್ಟಣಕ್ಕೆ ಬಂದು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದ. ವಾಲಿ ಹುಂಬತನದಿಂದ ಆತನೊಡನೆ ಯುದ್ಧಕ್ಕೆ ಧಾವಿಸಿದ. ಅವನನ್ನು ನೋಡಿ ಭಯಗೊಂಡು ಮಾಯಾವಿ ಪಲಾಯನ ಮಾಡಿ ಬಹುದೂರಕ್ಕೆ ಓಡಿದರೆ ಆತನನ್ನು ಅಟ್ಟಿಸಿಕೊಂಡು ವಾಲಿಯೂ ಅವನನ್ನು ಅನುಸರಿಸಿ ಸುಗ್ರೀವನೂ ಧಾವಿಸಿದರು.

ರಾಕ್ಷಸ ಬಹುದೂರಕ್ಕೆ ಓಡುತ್ತಾ ಹೋಗಿ ಪರ್ವತದ ಗುಹೆಯೊಂದನ್ನು ಹೊಕ್ಕ. ಅದು ಮಾಯಾವಿಯ ಪಟ್ಟಣವಾಗಿತ್ತು. ವಾಲಿ ಆತನನ್ನು ಕೊಲ್ಲುತ್ತೇನೆ ಎಂದು ಗುಹೆಯನ್ನು ಹೊಕ್ಕಿರುವುದು ಮತ್ತು ಹೊರಗಡೆ ಗುಹಾದ್ವಾರವನ್ನು ಕಾಯಲು ಸುಗ್ರೀವನನ್ನು ನಿಲ್ಲಿಸಿದ ಕಥೆ ಎಲ್ಲರಿಗೂ ಗೊತ್ತು. ಒಂದು ವರ್ಷವಾದರೂ ವಾಲಿ ಬರದೇ ಇರುವುದನ್ನು ಗಮನಿಸಿದ ಸುಗ್ರೀವ ಕಳವಳಗೊಂಡ. ಇದ್ದಕ್ಕಿದ್ದಂತೆ ರಕ್ತ ನೊರೆನೊರೆಯಾಗಿ ಹೊರಬಂದಾಗ ಅದು ವಾಲಿಯೇ ಇರಬೇಕು ಎಂದುಕೊಂಡ ಸುಗ್ರೀವ ಗುಹಾದ್ವಾರಕ್ಕೆ ದೊಡ್ಡದಾದ ಬಂಡೆಯನ್ನು ಮುಚ್ಚಿ, ಅಣ್ಣ ತೀರಿಕೊಂಡ ಎಂದು ಆತನಿಗೆ ತರ್ಪಣವನ್ನೂ ಬಿಟ್ಟು ಕಿಷ್ಕಿಂಧೆಗೆ ಮರಳಿ ಸುಮ್ಮನಿದ್ದ. ಮಂತ್ರಿಗಳು ಪ್ರಯತ್ನಪೂರ್ವಕವಾಗಿ ಈ ವಿಷಯತಿಳಿದುಕೊಂಡರು. ಸುಗ್ರೀವನನ್ನೇ ರಾಜನನ್ನಾಗಿ ಅಭಿಷೇಕಮಾಡಿದರು. ತಾರೆ ಮತ್ತು ರುಮೆಯ ಸಹಿತ ಸುಗ್ರೀವ ರಾಜನಾಗಿ ಆಳತೊಡಗಿದ. ವಾಲಿ ಪುನಃ ಬಂದರೆ ಈ ದೃಶ್ಯವನ್ನು ನೋಡಿ ಇದೆಲ್ಲ ಸುಗ್ರೀವನಿಗೆ ರಾಜ್ಯದ ಆಸೆಗಾಗಿ ಮಾಡಿದ ಬಂಡಾಯವೆಂದು ಅಂದುಕೊಂಡವನೇ ಆತನನ್ನು ಕೊಲ್ಲಲೆಂದು ಮೈಮೇಲೆ ಏರಿಬಂದ.

ಸುಗ್ರೀವನಲ್ಲಿ ಈ ಲೇಖನದ ಮೊದಲು ತಿಳಿಸಿದ ಗುಣಗಳಿರುವಂತೆಯೇ ವಾನರಸಹಜವಾದ ಅವಸರದ ಗುಣಗಳೂ ಇದ್ದವು. ಅದರಿಂದಲೇ ಆತ ತೊಂದರೆಗೆ ಸಿಕ್ಕುಬಿದ್ದಿದ್ದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಮಂಗೋಪಿಯಾದ ವಾಲಿಗೆ ಇಷ್ಟೇ ಸಾಕಾಯಿತು. ಆತ ಸುಗ್ರೀವನನ್ನು ಕೊಂದೇ ತೀರುತ್ತೇನೆ ಎಂದು ಅಟ್ಟಿಸಿಕೊಂಡು ಹೋದ. ಆತನ ಪತ್ನಿಯಾದ ರುಮೆಯನ್ನು ಬಲತ್ಕಾರದಿಂದ ಇಟ್ಟುಕೊಂಡ. ಜೀವ ಉಳಿಸಿಕೊಳ್ಳಲು ಸುಗ್ರೀವ ಓಡುವುದೂ, ವಾಲಿ ಆತನನ್ನು ಮುಗಿಸಿಯೇ ಬೀಡುವೆನೆಂದು ಬೆನ್ನಟ್ಟಿ ಬರುವುದೂ ನಡೆದಾಗ ಸುಗ್ರೀವ ಆಕಾಶಕ್ಕೆ ಹಾರಿದ. ಭೂಮಿ ಆತನಿಗೆ,

ಆದರ್ಶತಲಸಙ್ಕಾಶಾ ತತೋ ವೈ ಪೃಥಿವೀ ಮಯಾ.
ಅಲಾತಚಕ್ರಪ್ರತಿಮಾ ದೃಷ್ಟಾ ಗೋಷ್ಪದವತ್ತದಾ৷৷ಕಿ.46.13৷৷

ಅಲಾತಚಕ್ರದಂತೆ (ಬೆಂಕಿಹಚ್ಚಿದ ಕೊಳ್ಳಿಯನ್ನು ತಿರುಗಿಸಿದಾಗ ಕಾಣುವ ಚಕ್ರದಂತೆ) ಗೋಪಾದದಷ್ಟು ಚಿಕ್ಕದಾಗಿ ಕಂಡಿತು ಎನ್ನುತ್ತಾನೆ. ಅಂತರಿಕ್ಷದಿಂದ ಭೂಮಿಯನ್ನು ನೋಡಿದಾಗ ಭೂಮಿಕಾಣಿಸುವ ಬಗೆಯನ್ನು ಇಲ್ಲಿ ವರ್ಣಿಸಲಾಗಿದೆ. ಆತನ ಜೊತೆಯಲ್ಲಿ ಹನುಮಂತನೂ ಇದ್ದ. ಹೀಗೆ ವಾಲಿಯ ಭಯದಲ್ಲಿ ಅವರು ಪ್ರಪಂಚವನ್ನೆಲ್ಲಾ ಸುತ್ತಿ ಸುತ್ತಿ ಸಾಗುತ್ತಿರುವಾಗ ಬದುಕುವ ಸಾಧ್ಯತೆಯನ್ನೇ ಬಿಟ್ಟ. ಹೀಗೆ ಢಾವಿಸುವಾಗ ಇಡೀ ಭೂಮಂಡಲವನ್ನೇ ಅನೇಕ ಸಾರೆ ಪೂರ್ವದಿಂದ ಪಶ್ಚಿಮಕ್ಕೂ ಉತ್ತರದಿಂದ ದಕ್ಷಿಣಕ್ಕೂ, ಹಿಮಾಲಯದಿಂದ ಉತ್ತರಕುರು ಪ್ರದೇಶಕ್ಕೂ, ಹೀಗೆ ಭೂಮಿಯ ಎಲ್ಲಿಯಾದರೂ ತನಗೆ ಆಶ್ರಯಸಿಗುವುದೋ ಎಂದು ಹುಡುಕಾಡಿದ. ಅಲ್ಲಿಗೂ ಅವನನ್ನು ಕೊಲ್ಲಲು ವಾಲಿ ಘರ್ಜಿಸುತ್ತಾ ಬಂದಾಗ ಬದುಕುವ ಆಸೆಯನ್ನೇ ಬಿಟ್ಟ. ಪ್ರಾಣರಕ್ಷಣೆಗಾಗಿ ಭೂಮಂಡಲದ ಎಲ್ಲಾ ಸ್ಥಳವನ್ನೂ ಅಲೆದಿದ್ದ. ಅಂತಹ ಹೊತ್ತಿನಲ್ಲಿ ಹನುಮಂತ ಆತನಿಗೆ ಋಷ್ಯಮೂಕ ಪರ್ವತದ ಕಥೆಯನ್ನು ಹೇಳಿ ಅಲ್ಲಿಗೆ ವಾಲಿ ಬರುವುದಿಲ್ಲ: ಮತಂಗ ಮುನಿಗಳು ವಾಲಿ ಅಥವಾ ಆತನ ಮಂತ್ರಿಗಳೇನಾದರೂ ಋಷ್ಯಮೂಕ ಪರ್ವತಕ್ಕೆ ಬಂದರೆ ಆತನ ತಲೆಯು ನೂರು ಹೋಳಾಗಲಿ ಎನ್ನುವ ಶಾಪಕೊಟ್ಟ ವಿಷಯವನ್ನು ತಿಳಿಸಿದ. ಆ ಪ್ರದೇಶಕ್ಕೆ ವಾಲಿ ಬರಲಾರದ ಕಾರಣ ಅಲ್ಲಿ ಮಾತ್ರ ಸುರಕ್ಷಿತವಾಗಿ ಇರಬಹುದು ಎಂದು ಹೇಳಿದಾಗ, ಲಗುಬಗೆಯಿಂದ ಮತಂಗಮಹರ್ಷಿಗಳ ಆಶ್ರಮಮಂಡಲದಲ್ಲಿ ಉಳಿದುಕೊಂಡ.

ಸುಗ್ರೀವನಿಗೆ ಸಮಗ್ರ ಭೂಮಂಡಲದ ಪರಿಚಯ ಹೇಗಾಯಿತು ಎನ್ನುವ ಕುತೂಹಲ ರಾಮನಿಗೆ ಇತ್ತು. “ಕಥಂ ಭವಾನ್ವಿಜಾನೀತೇ ಸರ್ವಂ ವೈ ಮಣ್ಡಲಂ ಭುವಃ” ಇಡೀ ಭೂಮಂಡಲದ ಪರಿಚಯ ನಿನಗೆ ಹೇಗಾಯಿತು ಎಂದು ಕೇಳಿದಾಗ ಸುಗ್ರೀವ ರಾಮನಲ್ಲಿ ತನ್ನ ಭೂಮಂಡಲದ ಯಾತ್ರೆಯ ಕಥೆಯನ್ನು ಹಂಚಿಕೊಂಡ. ಪ್ರಚಲಿತದಲ್ಲಿರುವಂತೆ ಆತ ಸೂರ್ಯನಲ್ಲಿ ಆಶ್ರಯ ಕೋರಿ ಆತನ ಬೆನ್ನ ಹಿಂದೆ ಅಡಗಿಕೊಂಡಿದ್ದ ಎನ್ನುವುದು ಮೂಲ ರಾಮಾಯಣದಲ್ಲಿ ಇಲ್ಲ.

ಮುಂದಿನ ಭಾಗದಲ್ಲಿ ಕಿಷ್ಕಿಂಧಾಕಾಂಡದ ಇನ್ನಷ್ಟು ರೋಚಕ ವಿಷಯಗಳನ್ನು ಗಮನಿಸೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

Continue Reading
Advertisement
SL vs IND 3rd T20I
ಕ್ರೀಡೆ47 seconds ago

SL vs IND 3rd T20I: ಇಂದು ಅಂತಿಮ ಟಿ20; ವೈಟ್‌ವಾಶ್‌ ಭೀತಿಯಿಂದ ಪಾರಾದೀತೇ ಶ್ರೀಲಂಕಾ?

Liquor Price Karnataka
ಪ್ರಮುಖ ಸುದ್ದಿ12 mins ago

Liquor Price Karnataka: ನೊರೆ ನೊರೆ ಬಿಯರ್‌ ಮದ್ಯಪ್ರಿಯರ ಜೇಬಿಗೆ ಇನ್ನಷ್ಟು ಹೊರೆ

Parliament Session
ರಾಜಕೀಯ16 mins ago

Parliament Session: ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜು; Live ಇಲ್ಲಿ ವೀಕ್ಷಿಸಿ

Kerala Landslide
ದೇಶ22 mins ago

Kerala Landslide: ಕೇರಳದಲ್ಲಿ ಭೀಕರ ಭೂ ಕುಸಿತ; ಸಾವಿನ ಸಂಖ್ಯೆ 20ಕ್ಕೆ ಏರಿಕೆ, ಮತ್ತಷ್ಟು ಮಂದಿ ಸಿಲುಕಿರುವ ಭೀತಿ

ದೇಶ26 mins ago

Jio Games: ಜಿಯೋಗೇಮ್ಸ್‌ನಲ್ಲಿ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್ಸ್‌ ಲಭ್ಯ

Rebel star Prabhas starrer The Rajasaab short glimpse released
ದೇಶ39 mins ago

The RajaSaab Movie: ‘ದಿ ರಾಜಾಸಾಬ್’; ಎಲ್ಲರ ಗಮನ ಸೆಳೆಯುತ್ತಿದೆ ರೆಬೆಲ್‌ ಸ್ಟಾರ್‌ ಪ್ರಭಾಸ್‌ ಡ್ಯಾಶಿಂಗ್‌ ಲುಕ್‌!

IPL 2025
ಕ್ರೀಡೆ50 mins ago

IPL 2025: ಆರ್​ಸಿಬಿ ಇನ್​ಸ್ಟಾಗ್ರಾಮ್​ ಖಾತೆ ಅನ್​ಫಾಲೋ ಮಾಡಿದ ಮ್ಯಾಕ್ಸ್​ವೆಲ್; ಕಾರಣವೇನು?

ಪ್ರಮುಖ ಸುದ್ದಿ53 mins ago

Uttara Kannada Landslide: ನೀರಿನಡಿ ಇನ್ನೂ 9 ದೇಹಗಳಿವೆ ಎಂದ ಸ್ವಾಮೀಜಿ! ಬರಲಿದೆ ಕೇರಳದಿಂದ ಬಾರ್ಜ್‌ ಮೌಂಟೆಡ್‌ ಹಿಟಾಚಿ

Mahila Samman Savings Certificate
ಮನಿ-ಗೈಡ್55 mins ago

Mahila Samman Savings Certificate: ಮಹಿಳಾ ಸಮ್ಮಾನ್‌‌ನಲ್ಲಿ ಹೂಡಿಕೆಯಿಂದ ಏನು ಲಾಭ?

Kerala Landslide
ದೇಶ1 hour ago

Kerala Landslide: ಕೇರಳದಲ್ಲಿ ವರುಣನ ರೌದ್ರ ನರ್ತನ ಶುರು; ಭಾರೀ ಭೂಕುಸಿತಕ್ಕೆ ಐವರು ಬಲಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ17 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ20 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ3 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ3 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ3 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌