ರಾಜ ಮಾರ್ಗ ಅಂಕಣ : ಜ್ಯೋತಿ ರೆಡ್ಡಿ ಎಂಬ ಅನಾಥ ಹುಡುಗಿ ಅಮೆರಿಕನ್‌ ಕಂಪನಿಯ ಸಿಇಒ ಆದ ಕಥೆ! Vistara News
Connect with us

ಅಂಕಣ

ರಾಜ ಮಾರ್ಗ ಅಂಕಣ : ಜ್ಯೋತಿ ರೆಡ್ಡಿ ಎಂಬ ಅನಾಥ ಹುಡುಗಿ ಅಮೆರಿಕನ್‌ ಕಂಪನಿಯ ಸಿಇಒ ಆದ ಕಥೆ!

Raja Marga column: ಯಾವಾಗ ನಿನ್ನ ಆಕಾಂಕ್ಷೆಗಳು ಬಲವಾಗಿ ಇರುತ್ತವೆಯೋ, ಆಗ ನಿನ್ನೊಳಗೆ ಅತಿ ಮಾನುಷವಾದ ಶಕ್ತಿಗಳು ಪ್ರವೇಶಿಸುತ್ತವೆ.- ನೆಪೋಲಿಯನ್ ಹಿಲ್- ಈ ಮಾತಿಗೆ ಸಾಕ್ಷಿಯಾಗಿ ತನ್ನ ಬದುಕನ್ನು ತಾನೇ ರೂಪಿಸಿಕೊಂಡ ಒಬ್ಬ ಅನಾಥ ಹುಡುಗಿಯ ಕಥೆ ಇಂದು ನಿಮ್ಮ ಮುಂದೆ.

VISTARANEWS.COM


on

Jyothi Reddy- Raja Marga column
Koo
RAJAMARGA

ಆಕೆಯ ಹೆಸರು ಜ್ಯೋತಿ ರೆಡ್ಡಿ (Jyothi Reddy). ಆಕೆ ಆಂಧ್ರಪ್ರದೇಶದ ವಾರಂಗಲ್‌ನ ಅತ್ಯಂತ ಬಡ ಕುಟುಂಬದ ಹುಡುಗಿ. ಆಕೆಯ ಹೆತ್ತವರಿಗೆ ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಬಡತನ, ಹಸಿವು ಹೆಚ್ಚಾದ ಕಾರಣ ಅವಳ ಹೆತ್ತವರು ಇಬ್ಬರು ಹೆಣ್ಣು ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಮತ್ತೆ ಅವರನ್ನು ನೊಡಲಿಕ್ಕೂ ಬರಲಿಲ್ಲ! ಹಿರಿಯ ಮಗಳಾದ ಜ್ಯೋತಿ ರೆಡ್ಡಿ ಅನಾಥ ಮಕ್ಕಳ ಸರಕಾರಿ ಶಾಲೆಗೆ ಹೋಗಿ 12ನೆಯ ತರಗತಿ ಪಾಸಾದಳು. ಅದರ ಬೆನ್ನಿಗೆ ಅವರ ಕಸಿನ್ ಜೊತೆಗೆ ಮದುವೆ ನಡೆದು ಹೋಯಿತು. ಆಗ ಅವರಿಗೆ 16 ವರ್ಷ.

ಹಸಿವು ಅವರಿಂದ ಎಲ್ಲ ಕೆಲಸಗಳನ್ನೂ ಮಾಡಿಸಿತು

ಹದಿನೆಂಟು ತುಂಬುವಾಗ ಎರಡು ಹೆಣ್ಣು ಮಕ್ಕಳ ತಾಯಿ! ಗಂಡನಿಗೆ ಎಲ್ಲಿಯೂ ಪರ್ಮನೆಂಟ್ ಕೆಲಸ ಇರಲಿಲ್ಲ. ಆಗ ಮಕ್ಕಳ ಜವಾಬ್ದಾರಿ ಕೂಡ ಅವರೇ ಹೊತ್ತರು. ಬತ್ತದ ಗದ್ದೆಯಲ್ಲಿ ನೇಜಿ ನೆಡುವ ಕೆಲಸ, ಕಲ್ಲನ್ನು ಒಡೆಯುವ ಕೆಲಸ ಕೂಡ ಅವರು ಮಾಡಿದರು. ತನ್ನ ಜೀವನದಲ್ಲಿ ಸ್ವಾವಲಂಬಿ ಆಗಬೇಕು ಎನ್ನುವ ತುಡಿತವು ಅವರನ್ನು ಅಂತಹ ಕೆಲಸಕ್ಕೆ ದೂಡಿತು.

ನೆರವಿಗೆ ಬಂದ ನೆಹರೂ ಯುವ ಕೇಂದ್ರ

ಆಗ ಅವರ ನೆರವಿಗೆ ಬಂದದ್ದು ‘ನೆಹರೂ ಯುವ ಕೇಂದ್ರ’ ಎನ್ನುವ ಸರಕಾರದ ಅಧೀನ ಸಂಸ್ಥೆ. ಅದರಲ್ಲಿ ಸ್ವಯಂಸೇವಕಿಯಾಗಿ ಮಕ್ಕಳಿಗೆ ಪಾಠ ಮಾಡುವ ಕೆಲಸ ಮಾಡಿದರು. ಅಂಬೇಡ್ಕರ್ ಮುಕ್ತ ವಿವಿಯ ಮೂಲಕ ಪದವಿ, ಸ್ನಾತಕೋತ್ತರ ಪದವಿ ಎರಡನ್ನೂ ಮುಗಿಸಿದರು. ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಕೂಡ ಪೂರ್ತಿ ಆಯಿತು. ಆಗ ಅವರಿಗೆ ಸರಕಾರಿ ಶಾಲೆಯ ಟೀಚರ್ ಕೆಲಸ ದೊರೆಯಿತು. ತಿಂಗಳಿಗೆ 6,000 ರೂಪಾಯಿ ಸಂಬಳ. ಪುಟ್ಟ ಬಾಡಿಗೆ ಮನೆ. ಆ ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ಶಾಲೆಗೆ ಎರಡು ಗಂಟೆ ನಡೆದು ಹೋಗುವ ಕಷ್ಟ ಬೇರೆ. ಆಗ ದಾರಿಯಲ್ಲಿ ಸೀರೆ ಮಾರುತ್ತ ಒಂದಿಷ್ಟು ಹಣ ಗಳಿಸಿದರು. ಮನೆಯಲ್ಲಿ ಒಂದು ಹೊಲಿಗೆ ಯಂತ್ರ ಇಟ್ಟುಕೊಂಡು ಸ್ವಲ್ಪ ಸಂಪಾದನೆ ಮಾಡಿದರು.

ಅಮೆರಿಕದಲ್ಲಿ ಕೆಲಸದ ಹುಸಿ ಭರವಸೆ

2001ರ ಹೊತ್ತಿಗೆ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಬಂದಿತು. ಅವರ ಸೋದರ ಮಾವ ಒಬ್ಬರು ಅಮೆರಿಕದಿಂದ ಊರಿಗೆ ಬಂದವರು ಜ್ಯೋತಿ ರೆಡ್ಡಿ ಅವರನ್ನು ಭೇಟಿ ಮಾಡಿದರು. ಅಮೆರಿಕದಲ್ಲಿ ಉದ್ಯೋಗದ ಭರವಸೆ ನೀಡಿದರು. ಆಗ ಅವರ ಮನಸ್ಸಿನಲ್ಲಿ ಗೊಂದಲವು ಆರಂಭ ಆಯಿತು.

ಒಂದು ಕಡೆ ಸಂಸಾರದ ಜವಾಬ್ದಾರಿ. ಇನ್ನೊಂದು ಕಡೆ ಸರಕಾರಿ ನೌಕರಿ. ಮತ್ತೊಂದು ಕಡೆ ಅವರದ್ದೇ ಆದ ಬಹಳ ‘ದೊಡ್ಡ ಕನಸು’. ಅವುಗಳಲ್ಲಿ ಯಾವುದನ್ನು ಆರಿಸುವುದು? ಕೊನೆಗೆ ಅವರು ಗಟ್ಟಿ ನಿರ್ಧಾರ ಮಾಡಿ ಮೂರನೆಯದನ್ನು ಆರಿಸಿಕೊಂಡರು. ಪ್ರೀತಿಸುವ ಎರಡು ಹೆಣ್ಣು ಮಕ್ಕಳನ್ನು ಒಂದು ಮಿಷನರಿ ಹಾಸ್ಟೆಲಿನಲ್ಲಿ ಬಿಟ್ಟರು. ವೀಸಾ ಮಾಡಿಸಲು ತುಂಬಾ ಕಷ್ಟಪಟ್ಟರು. ಕೊನೆಗೆ ಧೈರ್ಯ ಜೋಡಿಸಿಕೊಂಡು ವಾರಂಗಲ್ ಟು ಅಮೆರಿಕ ವಿಮಾನದಲ್ಲಿ ಹಾರಿದರು!

Jyothi Reddy: old and New avtar
ಹೇಗಿದ್ದ ಜ್ಯೋತಿ ರೆಡ್ಡಿ ಹೇಗಾದರು ನೋಡಿ

ಈಗ ಅವರಿಗೆ ನಿಜವಾದ ಸಮಸ್ಯೆಗಳು ಆರಂಭವಾದವು. ಕೆಲಸ ಕೊಡಿಸುವ ಭರವಸೆ ಕೊಟ್ಟಿದ್ದ ಸೋದರ ಮಾವ ಅಲ್ಲಿ ಕೈ ಎತ್ತಿ ಬಿಟ್ಟರು. ಮಹಾನಗರದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಬಿಟ್ಟ ಅನುಭವ ಅವರಿಗೆ ಆಯಿತು. ಅವರು ಯಾವತ್ತೂ ಅಮೆರಿಕ ನೋಡಿದವರೇ ಅಲ್ಲ! ಹಿಂದೆ ಬರುವ ಬಾಗಿಲು ಕೂಡ ಮುಚ್ಚಿತ್ತು.

ಆದರೆ ಗುಂಡಿಗೆಯಲ್ಲಿ ಧೈರ್ಯ ಇತ್ತು. ತಮ್ಮ ಪದವಿ, ಸ್ಟೇಟಸ್ ಎಲ್ಲವನ್ನೂ ಮರೆತು ಗ್ಯಾಸ್ ಸ್ಟೇಶನ್, ಬೇಬಿ ಸಿಟ್ಟಿಂಗ್, ವಿಡಿಯೋ ಗೇಮ್ಸ್ ಶಾಪ್ ಎಲ್ಲಾ ಕಡೆ ದುಡಿದರು. ಆಗ ಸೂಕ್ಷ್ಮವಾಗಿ ಅಮೆರಿಕದ ಜನ ಜೀವನವನ್ನು, ಉದ್ಯೋಗದ ಅವಕಾಶಗಳನ್ನು ಅಭ್ಯಾಸ ಮಾಡಿದರು. ಅವರು ಒಂದೂವರೆ ವರ್ಷದಲ್ಲಿ 40,000 ಅಮೆರಿಕನ್ ಡಾಲರ್ ಸಂಪಾದನೆ ಮಾಡಿದ್ದರು! ಅಮೆರಿಕಾ ಎಂಬ ಮಾಯಾನಗರದ ದೇಶದಲ್ಲಿ ಒಬ್ಬಳೇ ಹೆಂಗಸು ಯಾರ ನೆರವೂ ಇಲ್ಲದೆ ದುಡಿಯುತ್ತಿದ್ದರು ಎಂದರೆ ನಮಗೆ ಅವರ ಸಾಹಸದ ಅರಿವಾಗುತ್ತದೆ.

ಅಮೆರಿಕಾದಲ್ಲಿ ಅವಕಾಶಗಳ ಹುಡುಕಾಟ

ತನ್ನ ಸಂಪಾದನೆಯನ್ನು ಬಂಡವಾಳ ಮಾಡಿಕೊಂಡು ಅಮೆರಿಕದ ಫೀನಿಕ್ಸ್ ಎಂಬಲ್ಲಿ ಒಂದು ಕಚೇರಿ ತೆರೆದು ‘KEY SOFTWARE SOLUTIONS’ ಎಂಬ ಕನ್ಸಲ್ಟೆನ್ಸಿ ಕಂಪೆನಿ ತೆರೆದರು. ಅವರು ಕಲಿತಿದ್ದ ಕಂಪ್ಯೂಟರ್ ತರಬೇತಿಯು ಈಗ ಅವರಿಗೆ ಸಹಾಯಕ್ಕೆ ಬಂದಿತು. ಅಮೆರಿಕದಲ್ಲಿ ಹೊರಗಿಂದ ಬರುವವರಿಗೆ ಅಲ್ಲಿನ ಉದ್ಯೋಗದ ಅವಕಾಶಗಳ ಬಗ್ಗೆ, ವೀಸಾ ಇತ್ಯಾದಿ ಪಡೆಯುವ ಬಗ್ಗೆ ಮಾರ್ಗದರ್ಶನ ನೀಡುವ ಸಂಸ್ಥೆಯಾಗಿ ತಮ್ಮ ಸಂಸ್ಥೆಯನ್ನು ಬೆಳೆಸಿದರು. ಒಬ್ಬರೇ ಹೆಣ್ಣು ಮಗಳು ಅಮೆರಿಕದಲ್ಲಿ ಮಾಡಿದ ಭಾರಿ ಹೋರಾಟ ಕೊನೆಗೂ ಫಲ ನೀಡಿತು. ಅವರ ಕಠಿಣ ಪರಿಶ್ರಮ, ಬದ್ಧತೆ, ಬಲವಾದ ನಂಬಿಕೆ ಇವುಗಳು ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು.

ಭಾರತದಿಂದ ಬಂದ ಅನಾಥ ಹುಡುಗಿ ಅಮೇರಿಕನ್ ಕಂಪೆನಿಯ ಸಿಇಒ ಆದರು

ಕೇವಲ ಒಂದು ದಶಕದಲ್ಲಿ ಈಗ ಅವರ ಕಂಪೆನಿಯು ವಾರ್ಷಿಕ ಹದಿನೈದು ಮಿಲಿಯನ್ ಡಾಲರ್ಸ್ ಟರ್ನ್ ಓವರನ್ನು ಹೊಂದಿತು. ನೂರಾರು ಮಂದಿಗೆ ಉದ್ಯೋಗ ನೀಡಿತು. ಅವರ ಇಬ್ಬರು ಮಕ್ಕಳನ್ನು ಕೂಡ ಜ್ಯೋತಿ ರೆಡ್ಡಿ ಅಲ್ಲಿಗೆ ಕರೆಸಿ ಸಾಫ್ಟವೇರ್ ಎಂಜಿನಿಯರ್ ಆಗಿ ಓದಿಸಿ ಮದುವೆಯನ್ನು ಕೂಡ ಮಾಡಿದ್ದಾರೆ. ಅವರಿಗೆ ಅಮೆರಿಕದಲ್ಲಿ NRI OF THE YEAR ಪ್ರಶಸ್ತಿ ದೊರೆತಿದೆ!

Jyothi Reddy: powerful woman
ಜ್ಯೋತಿ ರೆಡ್ಡಿ ಪವರ್‌ಫುಲ್‌ ಮಹಿಳೆ

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಬಾರ್‌ ಡ್ಯಾನ್ಸರ್‌ to ಕಥೆಗಾರ್ತಿ; ಲೇಖಕಿ ಶಗುಫ್ತ ರಫೀಕ್ ಬರ್ಬಾದಿ ಬದುಕಿನ ರೋಚಕ ಕಥೆ!

ಭಾರತದ ಬಡ ಮಕ್ಕಳ ನೆರವಿಗೆ ನಿಂತಿದ್ದಾರೆ ಜ್ಯೋತಿ

ವಿಶೇಷ ಎಂದರೆ ಜ್ಯೋತಿ ರೆಡ್ಡಿ ಇಂದಿಗೂ ತನ್ನ ಬಾಲ್ಯದ ಕಷ್ಟಗಳನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಆದರೂ ಭಾರತಕ್ಕೆ ಬಂದೇ ಬರುತ್ತಾರೆ. ಅನಾಥಾಶ್ರಮಗಳಿಗೆ ಭೇಟಿ ನೀಡಿ ನೆರವು ನೀಡುತ್ತಾರೆ. ಸರಕಾರಿ ಶಾಲೆಯ ಮಕ್ಕಳ ಶಿಕ್ಷಣದ ವೆಚ್ಚವನ್ನು ತುಂಬಿಸುತ್ತಾರೆ. ತಮ್ಮ ವಾರಂಗಲ್ ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಬಡಮಕ್ಕಳಿಗೆ ತಲಾ ಐದು ಸಾವಿರ ರೂಪಾಯಿ ಬಹುಮಾನ ಕೊಟ್ಟು ಬೆನ್ನು ತಟ್ಟುತ್ತಾರೆ.

“ಬಾಲ್ಯದ ಬಡತನ ನನ್ನ ಮನಸ್ಸು ಮತ್ತು ಹೃದಯವನ್ನು ನೋಯಿಸಿತ್ತು. ಆದರೆ ಭಾರತದ ಪ್ರತಿ ಅನಾಥ ಮಗು ನನ್ನಂತೆ ಬೆಳೆಯಬೇಕು ಎಂದು ಆಸೆ ಪಡುತ್ತೇನೆ” ಎಂದು ಆಕೆ ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Raja Marga Column : ಸೆ. 27, ವಿಶ್ವ ಪ್ರವಾಸೋದ್ಯಮ ದಿನ; ನೀವು ಹೋಗಲೇಬೇಕಾದ ಭಾರತದ TOP 10 ತಾಣ

Raja Marga Column: ಸೆಪ್ಟೆಂಬರ್ 27 – ಇಂದು ವಿಶ್ವ ಪ್ರವಾಸೋದ್ಯಮ ದಿನ.
ಭಾರತದ ಟಾಪ್ ಟೆನ್ ಪ್ರವಾಸೀ ತಾಣಗಳ ನೋಟ ಇಲ್ಲಿದೆ. ಜೀವನದಲ್ಲಿ ಒಮ್ಮೆಯಾದರೂ ಸಂದರ್ಶನ ಮಾಡಬೇಕಾದ ಸ್ಥಳಗಳು ಇವು. ಯುರೋಪ್ ಮೀರಿಸುವ ಪ್ರಾಕೃತಿಕ ಸೌಂದರ್ಯ ನಮ್ಮದು.

VISTARANEWS.COM


on

Edited by

Raja Marga coulmn : World tourism day
Koo
RAJAMARGA

ಭಾರತವು ಎಲ್ಲ ವಿಭಾಗದಲ್ಲಿ ಕೂಡ ವಿಶ್ವಗುರು ಆಗಿರುವ ಹಾಗೆ ಪ್ರಾಕೃತಿಕ ಸೌಂದರ್ಯದಲ್ಲಿ (Beauty of Nature) ಕೂಡ ಶ್ರೇಷ್ಠವೇ ಆಗಿದೆ. ಹುಡುಕುತ್ತ ಹೋದರೆ ಹೆಜ್ಜೆಗೆ ಒಂದರಂತೆ ಅಚ್ಚರಿಯ ಮತ್ತು ವಿಸ್ಮಯದ ತಾಣಗಳು ಕಾಲಿಗೆ ತೊಡರುತ್ತವೆ. ಇಂದು (ಸೆಪ್ಟೆಂಬರ್ 27) ವಿಶ್ವ ಪ್ರವಾಸೋದ್ಯಮ ದಿನದ (September 27 World Tourism day) ನೆಪದಲ್ಲಿ ಭಾರತದ ಟಾಪ್ ಟೆನ್ ಪ್ರವಾಸಿ ತಾಣಗಳನ್ನು (Top 10 Tourist spots of INDIA) ಸುತ್ತಾಡಿಕೊಂಡು ಬರೋಣ ಬನ್ನಿ (Raja Marga Column).

1. ಆಗ್ರಾ – ನೆನಪುಗಳ ಮೆರವಣಿಗೆ

Agra Tajmahal

ಭಾರತದಲ್ಲಿ ಅತೀ ಹೆಚ್ಚು ಪ್ರವಾಸಿಗಳು ಭೇಟಿ ನೀಡುವ ತಾಣ ಎಂದರೆ ತಾಜ್‌ ಮಹಲ್‌ (Taj Mahal). ಆಗ್ರಾದ ಹೃದಯ ಭಾಗದಲ್ಲಿ ಯಮುನಾ ನದಿಯ ದಡದಲ್ಲಿ ಇರುವ ಮೋಹಕ ವಾಸ್ತುಶಿಲ್ಪ ಇದು. ಅದರ ಐತಿಹಾಸಿಕ ಹಿನ್ನೆಲೆ ಏನೇ ಇದ್ದರೂ ಅದರ ಸೌಂದರ್ಯಕ್ಕೆ ಮಾರು ಹೋಗದವರು ಯಾರೂ ಇಲ್ಲ. ಸಂಪೂರ್ಣ ಅಮೃತಶಿಲೆಯ ಕಟ್ಟಡ ಇದು. ನಾಲ್ಕು ಕಡೆಯಿಂದ ನೋಡಿದರೂ ಒಂದೇ ರೀತಿ ಕಾಣುವ ಸೌಂದರ್ಯ. ಹುಣ್ಣಿಮೆ ರಾತ್ರಿಯಂದು ಇಲ್ಲಿ ಬಂದು ಕೂತರೆ ಹಿಂದೆ ಬರಲು ಮನಸ್ಸೇ ಆಗುವುದಿಲ್ಲ. ಅದಕ್ಕೆ ತಾಗಿ ಕೊಂಡಿರುವ ಆಗ್ರಾ ಕೋಟೆ, ಅಕ್ಬರ್ ಕಟ್ಟಿದ ಫತ್ತೇಪೂರ ಸಿಕ್ರಿ ನೋಡದೇ ಹಿಂದೆ ಬರುವ ಹಾಗೆ ಇಲ್ಲ. ಆಗ್ರಾ ಅಂದರೆ ನೆನಪುಗಳ ಮೆರವಣಿಗೆ.

2. ಗೋವಾ – ಬಿಳಿ ಮರಳಿನ ಬೀಚುಗಳೇ ಆಕರ್ಷಣೆ

Beaches of Goa

ಗೋವಾದಲ್ಲಿ ಇರುವ 51 ಅತ್ಯದ್ಭುತ ಬೀಚುಗಳೇ ಪ್ರವಾಸಿಗಳ ಸ್ವರ್ಗಗಳು (White Beaches of Goa)! ತಾಳೆ ಮರದ ನೆರಳಿನಲ್ಲಿ ಮೈ ಚಾಚಿ ಮಲಗಿರುವ ಬಿಳಿ ಮರಳಿನ ಚಾದರಗಳು. ಕಲಂಗೂಟ್ ಬೀಚ್ ಅವುಗಳಲ್ಲಿ ನಿಜವಾಗಿಯು ಮೈ ಮರೆಸುತ್ತದೆ. ಸಾರಸ್ವತರ ಶ್ರೀಮಂತ ದೇವಸ್ಥಾನಗಳು, ಕೋಟೆಗಳು, ಪೋರ್ಚುಗೀಸರ ಆಳ್ವಿಕೆಯ ಅವಶೇಷಗಳು, ಬೆಸ್ತರ ಬಸ್ತಿಗಳು ಗೋವಾವನ್ನು ಆಕರ್ಷಣೆಯ ಕೇಂದ್ರವನ್ನಾಗಿ ಮಾಡಿವೆ. ಗೋವಾದಲ್ಲಿ ಪ್ರವಾಸೋದ್ಯಮವೇ ಪ್ರಮುಖ ಆದಾಯದ ಮೂಲ ಅಂದರೆ ಆ ರಾಜ್ಯದ ಶಕ್ತಿ ನಮಗೆ ಗೊತ್ತಾಗುತ್ತದೆ.

3. ಅಮೃತಸರ – ಸ್ವರ್ಣ ದೇಗುಲದ ಆಕರ್ಷಣೆ

Golden Temple Amritsara

ಪಂಜಾಬ್ ರಾಜ್ಯದ ಪ್ರವಾಸೀ ತಾಣಗಳಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ (Golden Temple of Amritsara) ಪ್ರಮುಖ ಆಕರ್ಷಣೆ ಆಗಿದೆ. 1577ರಲ್ಲಿ ಗುರು ರಾಮದಾಸ್ ಅವರಿಂದ ಸ್ಥಾಪನೆ ಆದ ಈ ದೇಗುಲವು ಹೊಳೆಯುವ ಸರೋವರದ ನಡುವೆ ಇದೆ. ಪಕ್ಕದಲ್ಲಿಯೇ ಇರುವ ಅಖಾಲ್ ತಕ್ತ್, ಮಾತಾ ಟೆಂಪಲ್, ಐತಿಹಾಸಿಕ ಪ್ರಾಮುಖ್ಯದ, ಬ್ರಿಟಿಷ್‌ ಅಧಿಕಾರಿ ಸಾವಿರಾರು ಭಾರತೀಯರನ್ನು ಕೊಂದು ಹಾಕಿದ ಜಲಿಯಾನ್‌ ವಾಲಾ ಭಾಗ್ ನೋಡಿ ಬಂದರೆ ಕಣ್ಣು ತುಂಬಿ ಬರುತ್ತದೆ ಮಾತ್ರವಲ್ಲ ಸಿಖ್ ಧರ್ಮದ ಶ್ರದ್ಧೆಯ ಸಂಕೇತವಾಗಿಯೂ ಕಂಡು ಬರುತ್ತದೆ.

4. ಶಿಮ್ಲಾ – ಹಿಮಾಲಯದ ಕ್ಯಾನ್ವಾಸ್

Beauty of Shimla

ಶಿಮ್ಲಾ ಹಿಮಾಚಲ ಪ್ರದೇಶದ ರಾಜಧಾನಿ ಮತ್ತು ಕೀರ್ತಿ ಪಡೆದ ಹಿಲ್ ಸ್ಟೇಷನ್ (Himalayan Hill Station Shimla). ಎಲ್ಲಿ ನಿಂತು ನೋಡಿದರೂ ಹಿಮಾಲಯದ ಆಹ್ಲಾದಕರ ದೃಶ್ಯ ಕಣ್ಣು ತುಂಬುತ್ತದೆ. ಬೀಸಿ ಬರುವ ಶೀತಲ ಗಾಳಿ ಮೈಯ್ಯನ್ನು ಚುಂಬಿಸುತ್ತಾ ಹೋಗುತ್ತದೆ. ಭೂಮಿಯ ನೆತ್ತಿಯ ಮೇಲೆ ನಿಂತ ಅನುಭೂತಿ ಮೂಡುವುದು ಖಂಡಿತ. ಶಿಮ್ಲಾ ಭೂಮಿಯ ಸೌಂದರ್ಯದ ಶಿಖರ ಎಂದರೆ ಅದರಲ್ಲಿ ಒಂದಕ್ಷರವೂ ಉತ್ಪ್ರೇಕ್ಷೆ ಇಲ್ಲ.

5. ಊಟಿ – ಇಂಚಿಂಚಲ್ಲಿಯೂ ಬ್ಯೂಟಿ

Beauty of OOTY

ತಮಿಳುನಾಡಿನ ಉದ್ದಕ್ಕೂ ಹಾದುಹೋಗುವ ಸಹ್ಯಾದ್ರಿ ಪರ್ವತ ಶ್ರೇಣಿಯ ಮಗ್ಗುಲಲ್ಲಿ ಮೊಗ್ಗಾಗಿ ಮಲಗಿರುವ ಉದಕ ಮಂಡಲ(ಊಟಿ) ನಿಜವಾಗಿ ಪ್ರವಾಸಿಗಳ ಸ್ವರ್ಗ (Beauty of Ooty). ಟೀ ತೋಟಗಳ ಉದ್ದಕ್ಕೂ ಹಸಿರು ಹಾಸು, ವಿಶಾಲವಾದ ಮೈದಾನಗಳು, ಕೇಂದ್ರ ಭಾಗದಲ್ಲಿ ಇರುವ ವಿಶಾಲವಾದ ಸರೋವರ, ಪ್ರಕೃತಿಯ ರಮಣೀಯ ಬೊಟಾನಿಕಲ್ ಗಾರ್ಡನ್, ಎತ್ತರಕ್ಕೆ ಬೆಳೆಯುವ ನೀಲಗಿರಿ ಮರಗಳು ಇವುಗಳು ಊಟಿಯ ಪ್ರಮುಖ ಆಕರ್ಷಣೆಗಳು. ಇಡೀ ವರ್ಷ ಒಂದಲ್ಲ ಒಂದು ಸಿನಿಮಾ ಶೂಟಿಂಗ್ ಸ್ಪಾಟ್ ಆಗಿರುವ ಊಟಿ ಪ್ರೇಮಿಗಳ ಹಾಟ್ ಸ್ಪಾಟ್ ಕೂಡ ಹೌದು.

6. ಅಲೆಪ್ಪಿ – ಮಲಬಾರದ ಕರಾವಳಿಯ ಪಚ್ಚೆ ಹವಳ

Back waters of Aleppy

ಜಗತ್ತಿನ ಅತ್ಯಂತ ಸುಂದರವಾದ ಹತ್ತು ತಾಣಗಳಲ್ಲಿ ಆಲೆಪ್ಪಿ (Back waters of Alleppy) ಒಂದು ಎಂದರೆ ಅದು ಹೆಚ್ಚು ಸರಿ. ಬ್ಯಾಕ್ ವಾಟರಿನಲ್ಲಿ ವೈಭವದ ಬೋಟ್ ಹೌಸಿನಲ್ಲಿ ಇಡೀ ದಿನ ಕಳೆದರೆ ಅದು ಲೈಫ್ ಟೈಮ್ ಮೆಮೊರಿ ಆಗಬಲ್ಲದು. ಅಲೆಪ್ಪಿಯ ವಿಸ್ತಾರವಾದ ಬೀಚುಗಳು ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಅಲ್ಲಿರುವ ಆಯುರ್ವೇದಿಕ್ ರೆಸಾರ್ಟ್ಸ್, ಅಲ್ಲಿ ಇರುವ ಎಣ್ಣೆಯ ಮಸಾಜ್, ಸೂರ್ಯ ಸ್ನಾನ ನಿಮ್ಮನ್ನು ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ.

7. ಜೈಪುರ – ಖಗೋಳ ವಿಜ್ಞಾನದ ವಿಸ್ಮಯ

Hawa Mahal jaipur

ಭಾರತದ ‘ಪಿಂಕ್ ಸಿಟಿ’ ಎಂಬ (Pink City Jaipur) ಕೀರ್ತಿಯು ಒಂದೆಡೆ ಆದರೆ ರಾಜಾ ಜಯಸಿಂಹನ ಖಗೋಳ ವಿಜ್ಞಾನದ ಸಂಕೇತವಾದ ಹವಾ ಮಹಲ್, ಸಿಟಿ ಪ್ಯಾಲೇಸ್, ಜಂತರ್ ಮಂತರ್ ಎಲ್ಲವೂ ಜೈಪುರದ ಚುಂಬಕ ಆಕರ್ಷಣೆಗಳು. ಅಮಿತಾಬ್ ಬಚ್ಚನ್ ನಿರೂಪಣೆ ಮಾಡಿದ ಅಂಬರ್ ಕೋಟೆಯ ದೃಶ್ಯಗಳು ನಮ್ಮನ್ನು ಹಿಂದೆ ಬರಲು ಬಿಡುವುದಿಲ್ಲ.

8. ಲಡಾಖ್ – ತಂಪು ತಂಪು ಸರೋವರಗಳ ಗಣಿ

Ladak lakes

ಜಮ್ಮು ಕಾಶ್ಮೀರಕ್ಕೆ ಹೋದವರು ಲಡಾಖ್ (Beauty of Ladakh) ನೋಡದೆ ಬಂದರೆ ಅದು ಖಾಲಿ ಖಾಲಿ. ತಂಪು ಗಾಳಿ ಬೀಸಿ ಬರುವ ಹಿಮ ಶಿಖರಗಳ ತೆಕ್ಕೆಯಲ್ಲಿ ಇರುವ ಸರೋವರಗಳನ್ನು ಸೀಳಿಕೊಂಡು ಹೋಗುವ ಬೋಟ್ ಪ್ರಯಾಣ ನಿಮಗೆ ಆನಂದದ ಶಿಖರದ ಅನುಭವ ಕೊಡದಿದ್ದರೆ ಮತ್ತೆ ಹೇಳಿ. ಲಡಾಖ್ ಅಂದರೆ ಹಿಮ ಪರ್ವತಗಳ ಶಿರೋಮಣಿ ಅಂದರೆ ಅದು ಉತ್ಪ್ರೇಕ್ಷೆ ಅಲ್ಲ. ಹಳದಿ ಮರಳ ದಿಬ್ಬಗಳು ಇಲ್ಲಿ ಹೆಚ್ಚುವರಿ ಆಕರ್ಷಣೆಗಳು.

9. ಮೈಸೂರು – ಚಾಮುಂಡಿ ಹರಸಿದ ಸೂರು

Mysore Palace

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಏನುಂಟು ಏನಿಲ್ಲ? 1399-1947ರವರೆಗೆ ಅದು ಮೈಸೂರು ಒಡೆಯರ ರಾಜಧಾನಿ ಆಗಿತ್ತು. ಅಲ್ಲಿ ರಾಜ ವೈಭವವು ಹೆಜ್ಜೆ ಹೆಜ್ಜೆಗೂ ಕಣ್ಣಿಗೂ ರಾಚುತ್ತದೆ. ಮೈಸೂರು ನಗರದ ನಡುವೆ ಇರುವ ಅಂಬಾ ವಿಲಾಸ ಅರಮನೆ‌ (Mysore Palace) ಜಗತ್ತಿನ ಅತೀ ಶ್ರೀಮಂತ ಅರಮನೆ ಎಂದೇ ಕರೆಯಲ್ಪಡುತ್ತದೆ. ಚಾಮುಂಡಿ ಬೆಟ್ಟ, ದೊಡ್ಡ ಮೃಗಾಲಯ, ಲಲಿತ ಮಹಲ್ ಅರಮನೆ, ಬೃಂದಾವನ ಗಾರ್ಡನ್, ಸಂಗೀತ ಕಾರಂಜಿ ನಮ್ಮನ್ನು ಮೋಹಕವಾಗಿ ಸೆಳೆದು ಬಿಡುತ್ತವೆ. ಮೈಸೂರು ಕರ್ನಾಟಕದ ಹೆಮ್ಮೆ ಎಂದರೆ ಅದು ನಿಜವಾದ ಮಾತು.

10. ಡಾರ್ಜಿಲಿಂಗ್ – ಹಿಮಾಲಯದ ಡಾರ್ಲಿಂಗ್

Beauty of Darjiling

ಹಿಮಾಲಯದ ತಪ್ಪಲಿನಲ್ಲಿ ಚಳಿ ಗಾಳಿಯನ್ನು ಹೊದ್ದು ಮಲಗಿದ ವೈಭವದ ನಗರ ಡಾರ್ಜಿಲಿಂಗ್ (Darjiling). ಎಲ್ಲಿ ನಿಂತು ನೋಡಿದರೂ ಹಿಮಾಲಯದ ಎತ್ತರದ ಶಿಖರ ಕಾಂಚನ ಜಂಗಾ ಕಣ್ಣಿಗೆ ತಂಪು ಅನುಭವ ನೀಡುತ್ತದೆ. ಸಮುದ್ರ ಮಟ್ಟದಿಂದ 2050 ಮೀ. ಎತ್ತರ ಇರುವ ಈ ಬೆಟ್ಟದಾಣದ ಉದ್ದಕ್ಕೂ ಹಸಿರು ಚೆಲ್ಲುವ ಟೀ ತೋಟಗಳ ಸಾಲು, ಸ್ವರ್ಗಸದೃಶವಾದ ಹಿಮಾಲಯದ ಶಿಖರಗಳು ಮರೆಯಾಗುವುದೆ ಇಲ್ಲ. ಅಲ್ಲಿರುವ ಆಟಿಕೆ ರೈಲಿನಲ್ಲಿ ನಗರವನ್ನು ಒಂದು ಸುತ್ತು ಬಂದರೆ ಡಾರ್ಜಿಲಿಂಗ್ ನಮಗೆ ಡಾರ್ಲಿಂಗ್ ಅನುಭವ ನೀಡುತ್ತದೆ.

ಇದನ್ನೂ ಓದಿ: Raja Marga Column : ನಿಮ್ಮ ಮಕ್ಕಳನ್ನು ಸೂಪರ್‌ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!

ಭರತ ವಾಕ್ಯ

ಈ ತಾಣಗಳ ಒಂದು ಪ್ರವಾಸ ಮುಗಿಸಿಕೊಂಡು ಬಂದು ನನಗೆ ಹೇಳಿ. ನೀವು ಭಾರತವನ್ನು ಮೊದಲಿಗಿಂತ ಹೆಚ್ಚು ಪ್ರೀತಿ ಮಾಡಲು ನಿಮಗೆ ಸಾಧ್ಯವಾಗದೆ ಹೋದರೆ ನಾನು ಮತ್ತೆ ಲೇಖನ ಬರೆಯುವುದಿಲ್ಲ!!

Continue Reading

ಅಂಕಣ

ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!

ಯಾಕಷ್ಟು ಆಸಕ್ತಿ ನಮಗೆ ಪ್ರವಾಸ ಹೋಗುವುದೆಂದರೆ? ಪ್ರವಾಸ, ಪ್ರಯಾಣಗಳಿಗಾಗಿ ಅಷ್ಟೊಂದು ಖರ್ಚು ಮಾಡುವುದು ನಮಗೆ ಹೇಗೆ ಹೊರೆ ಎನಿಸುವುದಿಲ್ಲ? ಪ್ರವಾಸದ ಅನುಭವದ ಮೂಲಕ ಏನನ್ನು ನಿರೀಕ್ಷಿಸುತ್ತೇವೆ? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹೋಗುವ ತವಕ ಹೀಗೆ ವ್ಯಕ್ತವಾಗುತ್ತದೆಯೇ?

VISTARANEWS.COM


on

Edited by

solo travel
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ಟ್ರಾಫಿಕ್ ಸಿಗ್ನಲ್‌ನಲ್ಲಿದ್ದೆ. ನಾ ಪ್ರಯಾಣಿಸುತ್ತಿದ್ದ ಆಟೋದ ಚಾಲಕ ಸ್ವಲ್ಪ ಸಿಡಿಮಿಡಿ ಮಾಡುತ್ತಿದ್ದ. ಹೇಳುವಂಥ ಟ್ರಾಫಿಕ್ ಇಲ್ಲದ ನಮ್ಮೂರಲ್ಲಿ ಹಬ್ಬದ ವಾರಾಂತ್ಯಗಳು (weekend with festival) ಬಂದರೆ ಇದ್ದಕ್ಕಿದ್ದಂತೆ ರಸ್ತೆಗಳು ತುಂಬಿಬಿಡುತ್ತವೆ. ಹೆಚ್ಚಿನ ಸಾರಿ ಯಾವ್ಯಾವುದೋ ಊರು, ರಾಜ್ಯಗಳ ನೋಂದಣಿ ಹೊಂದಿರುವ ಕಾರುಗಳದ್ದೇ ಕಾರುಭಾರು. ಅದರಲ್ಲೂ ಊರಿನ ನಡುವೆ ಹಾದುಹೋಗುವ ಹೆದ್ದಾರಿಯ ಸಿಗ್ನಲ್‌ಗಳು ಕಳೆಯುವಾಗ ನಾಲ್ಕಾರು ಬಾರಿ ಕೆಂಪುದೀಪ ಬರಬೇಕು. ಆನಂತರವೇ ನಮ್ಮ ಪಾಲಿಗೆ ಮುಂದೆ ಹೋಗಲು ಗ್ರೀನ್ ಸಿಗ್ನಲ್ ಸಿಗುವುದು. ಅಂದೂ ಸಹ ಗಣೇಶ ಚತುರ್ಥಿಯ (Ganesh chaturthi) ವಾರಾಂತ್ಯವಾದ್ದರಿಂದ ಸಿಗ್ನಲ್‌ನಲ್ಲಿ ಸಿಲುಕಿ ಆಟೋದವ ಚಡಪಡಿಸುತ್ತಿದ್ದ. ʻಇನ್ನೂ ದಸರಾ ಬರ್ಲಿ, ಬೇರೆ ಊರ್ಗೊಳಿಂದ ಜನ ಯದ್ವಾತದ್ವಾ ಬತ್ತರೆ. ರಸ್ತೆ ಮೇಲೆ ಗಾಡಿ ಓಡ್ಸದೇ ಹಿಂಸೆʼ ಎಂದು ತನ್ನ ಕಷ್ಟ ಹೇಳಿಕೊಳ್ಳುತ್ತಿದ್ದ.

ಆತನ ಮಾತು ಸುಳ್ಳಲ್ಲ ಬಿಡಿ. ರಜೆ ಬಂತೆಂದರೆ ಎಲ್ಲಿಗೆ ಪ್ರವಾಸ (travel plan) ಹೊರಡುವುದೆಂದೇ ಲೆಕ್ಕ ಹಾಕುತ್ತೇವೆ. ಕೆಲವು ದೇಶಗಳಲ್ಲಿ ವರ್ಷದ ಆರಂಭಕ್ಕೆ ಮಾಡುವ ಮೊದಲ ಕೆಲಸವೆಂದರೆ ಈ ವರ್ಷ ಯಾವ್ಯಾವ ರಜೆಯಲ್ಲಿ ಎಲ್ಲೆಲ್ಲಿ ಪ್ರವಾಸ ಮಾಡುವುದು ಎಂಬ ತಿರುಗಾಟದ ನಿಶ್ಚಯ. ಎಷ್ಟೊ ತಿಂಗಳ ಮೊದಲು ವಿಮಾನ, ಹೊಟೇಲ್‌ಗಳನ್ನೂ ಕಾಯ್ದಿರಿಸಿಬಿಡುತ್ತಾರೆ ಇಂಥವರು. ಅದಕ್ಕಾಗಿಯೇ ಮೀಸಲಾದ ಟ್ರಾವೆಲ್ ವೆಬ್‌ಸೈಟ್‌ಗಳು (Travel website) ಸಿಕ್ಕಾಪಟ್ಟೆ ಇವೆ. ಈ ಪೈಕಿ ಯಾವುದರಲ್ಲಿ ಕಡಿಮೆ ಬೆಲೆಗೆ ವಿಮಾನ, ಕಾರು, ಹೊಟೇಲ್ ಇತ್ಯಾದಿಗಳ ಬುಕಿಂಗ್ ಲಭ್ಯವಿದೆ ಎಂಬುದನ್ನು ಅಳೆದು- ತೂಗಿ ಬದುಕುತ್ತಿರುವ ವೆಬ್‌ಸೈಟ್‌ಗಳಿಗೆ ಬರವಿಲ್ಲ. ಅಂದರೆ ಅಷ್ಟೊಂದು ಉತ್ಸಾಹದಿಂದ ನಾವೆಲ್ಲ ಪ್ರವಾಸ ಹೊರಡುತ್ತೇವೆ ಎಂದರ್ಥವಲ್ಲವೇ?

ಯಾಕಷ್ಟು ಆಸಕ್ತಿ ನಮಗೆ ಪ್ರವಾಸ ಹೋಗುವುದೆಂದರೆ? ಪ್ರವಾಸ, ಪ್ರಯಾಣಗಳಿಗಾಗಿ ಅಷ್ಟೊಂದು ಖರ್ಚು ಮಾಡುವುದು ನಮಗೆ ಹೇಗೆ ಹೊರೆ ಎನಿಸುವುದಿಲ್ಲ? ಪ್ರವಾಸದ ಅನುಭವದ ಮೂಲಕ ಏನನ್ನು ನಿರೀಕ್ಷಿಸುತ್ತೇವೆ? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹೋಗುವ ತವಕ ಹೀಗೆ ವ್ಯಕ್ತವಾಗುತ್ತದೆಯೇ? ಹೊಸದೇನನ್ನೋ ಹುಡುಕುವ ತುಡಿತವೇ? ನಂನಮ್ಮ ಆಸಕ್ತಿಗಳನ್ನು ಪೋಷಿಸಿಕೊಳ್ಳುವ ದಾರಿಗಳಲ್ಲಿ ಇದೂ ಒಂದೇ? ಒಂಟಿಯಾಗಿ, ಜಂಟಿಯಾಗಿ, ಗುಂಪಿನಲ್ಲಿ- ಹೇಗೇ ಪ್ರವಾಸ ಹೋದರೂ ಬಂದಿದ್ದಕ್ಕೆಲ್ಲಾ ಹೊಂದಿಕೊಳ್ಳುವ ನಾವು, ಉಳಿದಂತೆ ಬದುಕಿನಲ್ಲಿ ಸಣ್ಣ ಹೊಂದಾಣಿಕೆಗೂ ಸಿಡಿಮಿಡಿ ಮಾಡುತ್ತೇವಲ್ಲ, ಏನಿದರರ್ಥ? ಹಾಗಾದರೆ ಕೋಶ ಓದುವುದಕ್ಕಿಂತ ದೇಶ ಸುತ್ತುವುದೇ ಸೂಕ್ತವೇ?

ಪ್ರವಾಸಕ್ಕೆ ಸುದೀರ್ಘ ಇತಿಹಾಸವಿದೆ. ಭಾರತಕ್ಕೆ ಬಂದ ಪ್ರವಾಸಿಗರ ಚರಿತ್ರೆ ಪ್ರಾರಂಭವಾಗುವುದು ಕ್ರಿಸ್ತ ಪೂರ್ವದಲ್ಲಿ. ಗ್ರೀಕ್ ದೊರೆ ಸೆಲ್ಯೂಕಸ್ ನಿಕೇಟರ್ನ ರಾಯಭಾರಿ ಮೆಗಾಸ್ತನೀಸ್ನು ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಭೇಟಿ ನೀಡಿದ್ದ. ನಂತರ ಚಂದ್ರಗುಪ್ತನ ಮಗ ಬಿಂದುಸಾರನ ಕಾಲದಲ್ಲಿ ಡಿಮಾಕಸ್, ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ ವಿಕ್ರಮಾದಿತ್ಯನ ಕಾಲದಲ್ಲಿ ಫಾಹಿಯಾನ್, ಹರ್ಷವರ್ಧನನ ಕಾಲದಲ್ಲಿ ಹ್ಯೂಯೆನ್ ತ್ಸಾಂಗ್… ಹೀಗೆ ಅರಬ್, ಪರ್ಷಿಯಾ, ಗ್ರೀಸ್, ಪೋರ್ಚುಗಲ್ ಮುಂತಾದ ಹಲವಾರು ದೇಶಗಳ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದರು. ಭಾರತಕ್ಕೆ ಬರುವುದಕ್ಕೆ ಪ್ರತಿಯೊಬ್ಬರಿಗೂ ಅವರವರದ್ದೇ ಕಾರಣಗಳಿದ್ದರೂ, ಅವರು ತಮ್ಮ ಭಾರತ ಭೇಟಿಯನ್ನು ವರ್ಣಿಸಿದ ಪುಸ್ತಕಗಳಿಂದು ಆ ಕಾಲಘಟ್ಟದ ಚಾರಿತ್ರಿಕ ದಾಖಲೆಗಳಾಗಿ ಮಹತ್ವ ಪಡೆದಿವೆ. ವ್ಯಾಪಾರದ ನೆವದಲ್ಲಿ ಭಾರತಕ್ಕೆ ಬಂದವರು ಮಾಡಿದ ಅನಾಹುತಗಳನ್ನಂತೂ ಮರೆಯಲೇ ಸಾಧ್ಯವಿಲ್ಲ.

ಇವೆಲ್ಲಾ ಯಾರಾರೋ ಪ್ರವಾಸಿಗರ ಮಾತಾಯಿತು. ನಮ್ಮದೂಂತ ಒಂದಿಷ್ಟು ಅನುಭವಗಳು ಇರಬೇಡವೇ? ಮಕ್ಕಳಿದ್ದಾಗ ಹೆತ್ತವರ ಮಡಿಲಲ್ಲಿ ಕೂತು ಲೋಕ ನೋಡಿದ್ದು ಬಿಟ್ಟರೆ, ನಮ್ಮದೇ ಅನುಭವಗಳು ಬಿಚ್ಚಿಕೊಳ್ಳುವುದು ಸಾಮಾನ್ಯವಾಗಿ ಶಾಲೆಯ ಪ್ರವಾಸದ ದಿನಗಳಲ್ಲಿ. ಶಾಲೆಯ ಪ್ರವಾಸವೆಂದರೆ ಅಂದಿನ ಕಾಲದ ಕೆಂಪು ಬಸ್ಸಿನ ಸವಾರಿ. ಡಿಸೆಂಬರ್ ಚಳಿಯಲ್ಲಿ ನಡುಗುತ್ತ ಬೆಳಗ್ಗೆ ಬೇಗ ಆರಂಭವಾಗುತ್ತಿದ್ದ ಬಸ್ ಪ್ರಯಾಣ, ಕಿಟಕಿ ಪಕ್ಕದ ಜಾಗಕ್ಕೆ ಜಗಳಾಟ, ಪ್ರಯಾಣದ ಮೋಜು-ಮಸ್ತಿ, ಜಗಳದಲ್ಲಿ ಅಂತ್ಯವಾಗುತ್ತಿದ್ದ ಅಂತ್ಯಾಕ್ಷರಿ, ಇಂಥ ಜಗಳವನ್ನೆಲ್ಲಾ ಮರೆಸುತ್ತಿದ್ದ ಗುಬ್ಬಿ ಎಂಜಲಿನ ತಿನಿಸುಗಳು, ಬಿಸಿಬೇಳೆಭಾತ್-ಮೊಸರನ್ನದ ಬುತ್ತಿಯೂಟ, ಇವೆಲ್ಲ ಮುಗಿದು ದಿನವಿಡೀ ತಿರುಗಿ ಸುಸ್ತಾಗಿ ರಾತ್ರಿ ಎನ್ನುವಾಗ ಒಬ್ಬರ ಮೇಲೊಬ್ಬರು ಒರಗಿ ಬಿದ್ದಾಗಿರುತ್ತಿತ್ತು. ನಡುರಾತ್ರಿಗೆ ಮನೆ ಸೇರುವಷ್ಟರಲ್ಲಿ ನಿದ್ದೆಗಣ್ಣಲ್ಲೇ ನಡೆಯುತ್ತಿದ್ದೇವೆ ಎಂಬ ಭಾವ ಬರುತ್ತಿತ್ತು. ಮಾರನೇ ದಿನಕ್ಕೆ ಒಂದಿಷ್ಟು ಮಕ್ಕಳಿಗೆ ಕೈನೋವು- ಕಾಲು ನೋವು, ಥಂಡಿ, ಕೆಮ್ಮು, ಜ್ವರ ಬಂದರೆ ಪ್ರವಾಸದ ಅನುಭವ ಪೂರ್ಣಗೊಂಡಂತೆ.

ಕಾಲೇಜಿಗೆ ಬರುತ್ತಿದ್ದಂತೆ ಈ ಅನುಭವಗಳು ಇನ್ನಷ್ಟು ವಿಸ್ತಾರವಾಗುತ್ತಿದ್ದವು. ವಾರ್ಷಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ಸಾಂಸ್ಕೃತಿಕ ವಿನಿಮಯ ಮುಂತಾದ ನಾನಾ ಹೆಸರಿನ ಪ್ರವಾಸಗಳು ಹಲವಾರು ದಿನಗಳ ಮಟ್ಟಿಗೆ ಇರುತ್ತಿದ್ದವು. ಶಾಲೆಯ ಮುಗ್ಧ ಜಗತ್ತಿನ ಬದಲಿಗೆ ಕಾಲೇಜಿನಲ್ಲಿ ಕಾಣುತ್ತಿದ್ದ ರಂಗಿನ ಜಗತ್ತು ಈ ಪ್ರವಾಸಗಳ ಮೇಲೂ ಪರಿಣಾಮ ಬೀರುತ್ತಿತ್ತಲ್ಲ. ಆದರೆ ತರಗತಿಯಲ್ಲಿನ ಸ್ಪರ್ಧೆ, ಮತ್ಸರ, ಜಗಳ, ಮುನಿಸು ಮುಂತಾದವೆಲ್ಲಾ ಒಂದಿಷ್ಟು ಹಿಂದಾಗಿ ಸ್ನೇಹಿತರು, ಗೆಳೆತನ, ಆತ್ಮೀಯತೆ, ಅಲ್ಲೊಂದಿಲ್ಲೊಂದು ಪ್ರೀತಿ- ಇಂಥವೆಲ್ಲಾ ಗರಿಗೆದರುವುದು ಪ್ರವಾಸಗಳಲ್ಲೇ. ಶಾಖಾಹಾರಿ ಎನಿಸಿಕೊಂಡವರು ಚಿಕನ್ ಜಗಿಯುವುದು, ಗೌರಮ್ಮನಂತಿದ್ದವರು ಮಿನಿ ಹಾಕುವುದು, ʻಗಾಂಧಿʼ ಎಂಬ ಬಿರುದಾಂಕಿತರು ಅಮಲ್ದಾರರಾಗುವುದು- ಈ ರೀತಿಯ ಅಚ್ಚರಿಗಳೆಲ್ಲ ಸಂಭವಿಸುವುದಕ್ಕೆ ಇಂಥ ಸಂದರ್ಭಗಳೇ ಬೇಕು. ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ನೆಪದಲ್ಲಿ ಕನ್ನಡ ಓದುಗರ ಜ್ಞಾನದ ಮಟ್ಟವನ್ನೇ ಏರಿಸಿದ ಅದ್ಭುತ ಕೃತಿ ʻಹಸಿರುಹೊನ್ನುʼನ್ನು ಇಲ್ಲಿ ನೆನಪಿಸಿಕೊಳ್ಳದಿದ್ದರೆ ಹೇಗೆ? ಈ ಕೃತಿಯ ಲೇಖಕ ಬಿ.ಜಿ.ಎಲ್. ಸ್ವಾಮಿ ಅವರ ಹಲವಾರು ದಶಕಗಳ ಹಿಂದಿನ ಶೈಕ್ಷಣಿಕ ಪ್ರವಾಸದ ವಿವರಣೆಗಳು ಇಂದಿಗೂ ನಗೆಯುಕ್ಕಿಸುತ್ತವೆ.

solo travel

ಮಕ್ಕಳ ಕಥೆಗಳಲ್ಲಿ, ಗೊತ್ತಿಲ್ಲದ ಅನೂಹ್ಯ ಲೋಕಕ್ಕೆ ಕರೆದೊಯ್ಯುವ ಸರಣಿಗಳು ಎಷ್ಟೊಂದು ಹುಚ್ಚು ಹಿಡಿಸಿದ್ದವಲ್ಲ. ಗಲಿವರನ ಸಾಹಸ ಯಾತ್ರೆ, ಮ್ಯಾಜಿಕ್ ಟ್ರೀ ಹೌಸ್, ಫೇಮಸ್ ಫೈವ್ ಮುಂತಾದ ಸರಣಿಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಾ ಏನೇನೋ ಸಾಹಸ ಮಾಡುವ ಮಕ್ಕಳ ವಿವರಗಳು ಎಳೆಯ ಮನಸ್ಸುಗಳ ತುಂಬಾ ಬಣ್ಣದ ಚಿತ್ತಾರ ಮೂಡಿಸುತ್ತಿರಲಿಲ್ಲವೇ. ಲೋಕ ಸುತ್ತುತ್ತಲೇ ಕಥೆ ಹೇಳುತ್ತಿದ್ದ ಪೂರ್ಣಚಂದ್ರ ತೇಜಸ್ವಿ (Purnachandra Tejaswi) ಅವರ ಸಾಹಿತ್ಯವನ್ನು ಎದೆಗವಚಿಕೊಳ್ಳದೇ ಇರುವವರು ಯಾರು? ಭಾರತಕ್ಕೆ ಮರಳಿದ ಆರಂಭದ ದಿನಗಳಲ್ಲಿ ದೇಶದ ಉದ್ದಗಲ ಸಂಚರಿಸಿದ್ದರಲ್ಲ ಗಾಂಧೀಜಿ… ಪ್ರವಾಸದ ಹರವು ವಿಸ್ತರಿಸಿದಂತೆ, ಅರಿವೂ ವಿಸ್ತರಿಸುತ್ತದೆ ಎಂದರ್ಥವೇ?

ಪ್ರವಾಸಗಳೆಂದರೆ ಎಲ್ಲವೂ ಒಂದೇ ಅಲ್ಲ; ನಾನಾ ಬಗೆಯುಂಟು. ಕೃಷಿ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಆರೋಗ್ಯ- ಸಂಬಂಧೀ ಪ್ರವಾಸಗಳು, ಆಹಾರ ಸವಿಯಲೆಂದು, ಪರಂಪರೆಯ ದರ್ಶನಕ್ಕೆ, ಧಾರ್ಮಿಕ ಕಾರಣಗಳಿಗಾಗಿ- ಹೀಗೆ ಬಹಳಷ್ಟು ಇವೆ. ಒಂಟಿಯಾಗಿ ಲೋಕ ಸುತ್ತುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದಂತೆಯೇ, ಸೈಕಲ್, ಬೈಕ್‌ಗಳ ಮೇಲೆ ವಿಶ್ವ ಪರ್ಯಟನೆ (world tour) ಮಾಡುವ ಉಮೇದುವಾರರ ಬಳಗ ಬೆಳೆದಿದೆ. ತೀರ್ಥಯಾತ್ರೆಯೆಂದರೆ ತಿರುಗಿಬಾರದ ಯಾತ್ರೆ ಎಂದೇ ಹೇಳಲಾಗುತ್ತಿದ್ದ ಕಾಶಿ- ರಾಮೇಶ್ವರದಂಥ ಯಾತ್ರೆಗಳು ಈಗ ಪಕ್ಕದ ಮನೆಗೆ ಹೋದಷ್ಟೇ ಸುಲಭವಾಗಿವೆ. ತಿರುಗಾಟದ ಕಾರಣ ಏನೇ ಇರಲಿ, ಪ್ರವಾಸದ ಪ್ರಯಾಸ, ಪ್ರಹಸನ ಇತ್ಯಾದಿ ಯಾವುದಕ್ಕೂ ಜಗ್ಗದೆ ಬ್ಯಾಕ್ಪ್ಯಾಕ್ ಬೆನ್ನಿಗೇರಿಸುವವರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಿರುವುದಂತೂ ನಿಜ.

ಇದನ್ನೂ ಓದಿ: Dashamukha Column: ದಶಮುಖ ಅಂಕಣ: ಅಗಲುವಿಕೆಯೆಂಬ ಅಳು-ನಗುವಿನ ರಸಪಾಕ

ಪ್ರವಾಸದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಸಾಹಿತ್ಯಗಳು ಯಾವುದೇ ಭಾಷೆಯ ದೊಡ್ಡ ಆಸ್ತಿ. ಕನ್ನಡದಲ್ಲಿ ಪ್ರವಾಸ ಸಾಹಿತ್ಯಕ್ಕೆ ದೀರ್ಘ ಇತಿಹಾಸವೇ ಇದೆ. ೧೮೯೦ರಲ್ಲಿ ಪ್ರಕಟವಾದ, ಕರ್ಕಿ ವೆಂಕಟರಮಣ ಶಾಸ್ತ್ರಿ ಅವರ ʻದಕ್ಷಿಣ ಭಾರತ ಯಾತ್ರೆʼ ಎಂಬ ಪ್ರವಾಸ ಗ್ರಂಥ ಈ ನಿಟ್ಟಿನಲ್ಲಿ ನಾಂದಿ ಹಾಡಿರಬಹುದು. ವಿ. ಸೀತಾರಾಮಶಾಸ್ತ್ರಿ ಅವರ ʻಪಂಪಾಯಾತ್ರೆʼ, ವಿ.ಕೃ. ಗೋಕಾಕರ ʻಸಮುದ್ರದೀಚೆಯಿಂದʼ, ಶಿವರಾಮ ಕಾರಂತರ ʻಅಪೂರ್ವ ಪಶ್ಚಿಮʼ, ದಿನಕರ ದೇಸಾಯಿಯವರ ʻನಾ ಕಂಡ ಪಡುವಣʼ, ಬಿ. ಜಿ. ಎಲ್. ಸ್ವಾಮಿ ಅವರ ʻಅಮೆರಿಕೆಯಲ್ಲಿ ನಾನುʼ, ಶ್ರೀರಂಗ ಅವರ ʻಶ್ರೀರಂಗಯಾತ್ರೆʼ ಎ. ಎನ್. ಮೂರ್ತಿರಾಯರ ʻಅಪರವಯಸ್ಕನ ಅಮೆರಿಕಾ ಯಾತ್ರೆʼ, ಗೊರೂರು ರಾಮಸ್ವಾಮಿ ಅಯ್ಯಂಗಾರರ ʻಅಮೆರಿಕಾದಲ್ಲಿ ಗೊರೂರುʼ- ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಕುರಿತ ಪುಸ್ತಕ ಮತ್ತು ಬಿಡಿ ಲೇಖನಗಳನ್ನು ಸೇರಿಸಿದರೆ- ಲೆಕ್ಕ ಇಡುವುದಕ್ಕೇ ಸಾಧ್ಯವಿಲ್ಲದಷ್ಟಿದೆ ಪ್ರವಾಸ ಸಾಹಿತ್ಯ.

ಇವೆಲ್ಲಾ ಗದ್ಯ ಸಾಹಿತ್ಯದ ಮಾತಾಯಿತು. ಈ ಬಗ್ಗೆ ಮುದ ನೀಡುವಂಥ ಪದ್ಯಗಳೂ ದೊರೆಯಬಹುದು. ಪು.ತಿ.ನ ಅವರ ಪಯಣಿಗರ ಹಾಡನ್ನು ಮರೆಯಲಾಗದು. “ಗುಡಿಯಾಚೆ ಗಡಿಯಾಚೆ ಗಿಡದಾಚೆಗೆ/ ಹೋಗೋಣ ಬನ್ನಿರೋ ಹೊಸನಾಡಿಗೆ/ ಹೊಚ್ಚಹೊಸ ನೋಟಕ್ಕೆ ಅಚ್ಚ ಬಾಳಾಟಕ್ಕೆ/ ನೆಚ್ಚುಗೆಯ ಕೆಳೆಯರೇ ಹೊಸ ನಾಡಿಗೆ/ … ಒಂದು ಯಾದವಗಿರಿ ನಾಳೆ ಹಳೆಬೀಡು/ ಮುಂದೆ ಜಗದಚ್ಚರಿ ಗೊಮ್ಮಟನ ಮೇಡು/ ಕಡಲು ಕರೆಯಲು ಹಿರಿಯ ಕಮರಿಯನೆ ನೆಗೆವ/ ಪ್ರಣಯ ರುದ್ರೆಯ ಕಂಡು ಸೋಜಿಗವ ಪಡುವ” – ಹೀಗೆ ಕೂತಲ್ಲೇ ಬಹಳಷ್ಟು ಕಂಡರಿಸುವ ಕಾಣ್ಕೆ ಈ ಸಾಲುಗಳಿಗಿವೆ.

ಅಂದಹಾಗೆ, ನಾಳೆ ವಿಶ್ವ ಪ್ರವಾಸೋದ್ಯಮ ದಿನ (world tourism day). ಆ ನೆವದಲ್ಲಿ ಕೂತಲ್ಲೇ ಲೋಕ ಸುತ್ತಿದ್ದಾಯ್ತು. ಇದರಿಂದ ತಿರುಗಾಟದ ಉತ್ಸಾಹ ಬಂದರೆ, ತಡ ಮಾಡಬೇಡಿ; ಏಳಿ… ಹೊರಡಿ!

ಇದನ್ನೂ ಓದಿ: ದಶಮುಖ ಅಂಕಣ: ತರ್ಕ ಮೀರಿದ ಭಾವಗಳ ಆಪ್ತಗೊಳಿಸುವುದೇ ಹಬ್ಬ!

Continue Reading

ಅಂಕಣ

Raja Marga Column : ನಿಮ್ಮ ಮಕ್ಕಳನ್ನು ಸೂಪರ್‌ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!

Raja Marga Column‌ : ಟಿವಿ ವಾಹಿನಿಗಳ ಮಕ್ಕಳ ರಿಯಾಲಿಟಿ ಶೋಗಳಿಗೆ ಸ್ವಲ್ಪ ಬ್ರೇಕ್ ಬೇಕಿದೆ! ಯಾಕೆಂದರೆ ಅವು ಮಕ್ಕಳ ಬಾಲ್ಯವನ್ನು ಕಸಿಯುತ್ತಿವೆ. ದುಡ್ಡಿನ ದಂಧೆಯಾಗುತ್ತಿವೆ. ಈ ಬಗ್ಗೆ ಎಚ್ಚರವಿರಲಿ.

VISTARANEWS.COM


on

Edited by

Reality Shows neads a break
ಇಲ್ಲಿ ಬಳಸಿದ ಎಲ್ಲ ಮಕ್ಕಳ ಚಿತ್ರಗಳು ಕೇವಲ ಪ್ರಾತಿನಿಧಿಕ
Koo
RAJAMARGA

ಪ್ರಣವ್ ಧನವಾಡೇ : ಈ ಹೆಸರನ್ನು ಎಲ್ಲೋ ಕೇಳಿದ ನೆನಪು ನಿಮಗಿದೆಯಾ?
ಹೌದು! 2016ರಲ್ಲಿ ಮುಂಬೈಯ ಈ 16 ವರ್ಷದ ಹುಡುಗ (Pranav Dhanawade) ಒಂದು ಕ್ಲಾಸ್ ಒನ್ ಕ್ರಿಕೆಟ್ ಪಂದ್ಯದಲ್ಲಿ ಬರೋಬ್ಬರಿ 1000+ ರನ್ ಬಾರಿಸಿ ಮಿಂಚಿದ್ದ! ಅವನಿಗೆ ಆ ದಿನಗಳಲ್ಲಿ ಜಾಗತಿಕ ಮಟ್ಟದ ಪ್ರಚಾರ ಸಿಕ್ಕಿತ್ತು. ಸಚಿನ್ ತೆಂಡುಲ್ಕರ್ (Sachin Tendulkar) ಜೊತೆಗೆ ಆತನ ಭರ್ಜರಿ ಹೋಲಿಕೆಯು ಕೂಡ ನಡೆಯಿತು.ನೂರಾರು ಸನ್ಮಾನಗಳು ಮತ್ತು ನಗದು ಬಹುಮಾನಗಳು ಆತನಿಗೆ ದೊರೆತವು!

ಆದರೆ ಅವನು ಅದೇ ವೇಗದಲ್ಲಿ ಮುಂದೆ ಹೋಗಿರುತ್ತಿದ್ದರೆ ಅವನಿಗೆ ಈಗ 23 ವರ್ಷ ಆಗಿರಬೇಕಿತ್ತು! ಅವನು ಕನಿಷ್ಠ ಪಕ್ಷ ರಣಜಿ ಪಂದ್ಯ ಆದರೂ ಆಡಬೇಕಿತ್ತು! ಆದರೆ ಅವನು ಈಗ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎನ್ನುವುದು ನಮಗೆ ಯಾರಿಗೂ ಗೊತ್ತಿಲ್ಲ! (Raja Marga Column)

ನಮ್ಮ ಹೆಚ್ಚಿನ ಟಿವಿ ರಿಯಾಲಿಟಿ ಶೋ (Reality Show) ಹೀರೋಗಳ ಕಥೆ ಕೂಡ ಹೀಗೆಯೇ ಇದೆ!

ಖಾಸಗಿ ಟಿವಿಯ ವಾಹಿನಿಗಳಲ್ಲಿ (Private TV Channels) ಇಂದು ಪ್ರಸಾರ ಆಗುತ್ತಿರುವ ನೂರಾರು ರಿಯಾಲಿಟಿ ಶೋಗಳು ಮತ್ತು ಸ್ಪರ್ಧೆಗಳು ಹೆಚ್ಚು ಪ್ರಚಾರದಲ್ಲಿವೆ. ಅಂತ ಹಲವು ಟಿವಿ ಶೋಗಳು ಹಿಂದೆ ಕೂಡ ನಡೆದಿವೆ. ಅದರ ಎಲ್ಲ ವಿಜೇತರ ಪ್ರತಿಭೆಯ ಮೇಲೆ ಗೌರವ ಇರಿಸಿಕೊಂಡು ನಾನು ಕೇಳುವ ಒಂದೇ ಪ್ರಶ್ನೆ — ಅದರ ಸಾವಿರಾರು ವಿಜೇತರು ಮುಂದೆ ಎಲ್ಲಿಗೆ ಹೋಗುತ್ತಾರೆ? ಅವರ ಅನನ್ಯ ಪ್ರತಿಭೆಗಳನ್ನು ಅವರು ಎಷ್ಟು ಬೆಳೆಸಿದ್ದಾರೆ? ಅದರಿಂದ ನಾಡಿನ ಸಂಸ್ಕೃತಿಗೆ ಎಷ್ಟು ಲಾಭ ಆಗಿದೆ?

Pranav Dantwade
ಪ್ರಣವ್‌ ದಂತವಾಡೆ

ಶಾಲಾ ಮಟ್ಟದಲ್ಲಿ ನೂರಾರು ಸಾಂಸ್ಕೃತಿಕ ಸ್ಪರ್ಧೆಗಳು, ಪ್ರತಿಭಾ ಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲಿ ವಿಜೇತರ ಘೋಷಣೆ ಆಗುತ್ತದೆ. ಅದರಲ್ಲಿ ಎಷ್ಟು ಜನರು ಮುಂದೆ ಅವರ ಪ್ರತಿಭೆಯನ್ನು ತಮ್ಮ ಹೊಟ್ಟೆಪಾಡಾಗಿ ಮಾಡಿಕೊಳ್ಳುತ್ತಾರೆ? ಎಷ್ಟು ಮಂದಿ ತಮ್ಮ ಕಲೆಯನ್ನು ಪ್ರೀತಿಸುತ್ತಾರೆ? ತಮ್ಮ ಕಲೆಯಿಂದ ಸಮಾಜವನ್ನು ಬೆಳಗುತ್ತಾರೆ? ಕನಿಷ್ಠ ಪಕ್ಷ ಆತ್ಮ ಸಂತೋಷಕ್ಕಾಗಿ ಆದರೂ ಆ ಕಲೆಯನ್ನು ಮುಂದೆ ಕಲಿಯುತ್ತಾರಾ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಾಗ ನಮಗೆ ಹಲವು ಕಡೆ ನಿರಾಸೆಯೇ ಆಗುತ್ತದೆ ಮತ್ತು ಕಹಿ ಸತ್ಯಗಳು ಗೋಚರ ಆಗುತ್ತವೆ.

ಹಾಗಾದರೆ ಟಿವಿ ವಾಹಿನಿಗಳಿಂದ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಂದ ಪ್ರತಿಭಾ ಶೋಧ ಆಗ್ತಾ ಇಲ್ಲವೇ ಎನ್ನುವ ಪ್ರಶ್ನೆ ನೀವು ಕೇಳಬಹುದು. ಖಂಡಿತ ಆಗುತ್ತಿದೆ! ಆದರೆ ಅದರ ಅಡ್ಡ ಪರಿಣಾಮಗಳ ಬಗ್ಗೆ ಇದುವರೆಗೆ ಯಾರೂ ಯೋಚನೆ ಮಾಡಿದ ಹಾಗಿಲ್ಲ.

Childrens reality Shows

ಉದಾಹರಣೆಗೆ ಇಂದು ಬಾಲಿವುಡನ ಹಿನ್ನೆಲೆ ಗಾಯನ ಲೋಕದ ಸೂಪರ್ ಸ್ಟಾರ್‌ಗಳಾದ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಇವರೆಲ್ಲರೂ ಬೇರೆ ಬೇರೆ ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದವರು. ಕನ್ನಡದಲ್ಲಿಯೂ ಅಂತವರು ತುಂಬಾ ಮಂದಿ ಇದ್ದಾರೆ. ಆದರೆ ಅವರಲ್ಲಿ ಹೆಚ್ಚಿನ ಸ್ಟಾರ್‌ಗಳು ಒಳ್ಳೆಯ ನಿರ್ಣಾಯಕರ ಮೂಲಕ ಆಯ್ಕೆ ಆದವರು. ಇನ್ನೂ ವಿವರವಾಗಿ ಹೇಳಬೇಕೆಂದರೆ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಆಯ್ಕೆ ಆಗುವಾಗ ಲತಾ ಮಂಗೇಶ್ಕರ್ ಅಂತವರು ನಿರ್ಣಾಯಕರಾಗಿದ್ದರು!

ಪ್ರತಿಭೆಗಳಿಗೆ ಆಗ ಒಂದಿಷ್ಟೂ ಅನ್ಯಾಯ ಆಗುತ್ತಾ ಇರಲಿಲ್ಲ.

Shreya Ghoshal

ಅಪಾಯಕಾರಿ ಆದ ಇಂಟರ್ನೆಟ್ ವೋಟಿಂಗ್!

ಆದರೆ ಮುಂದೆ ಯಾವಾಗ ಇಂಟರ್ನೆಟ್ ಮೆಸೇಜ್‌ಗಳ ಮೂಲಕ ವೋಟಿಂಗ್ ಆರಂಭ ಆಯಿತೋ ಅಲ್ಲಿಗೆ ದುಡ್ಡು, ಪ್ರಭಾವ ಇದ್ದವರು ವೋಟುಗಳನ್ನು ಖರೀದಿ ಮಾಡುವುದು ಆರಂಭ ಆಯಿತು. ನಮಗೆ ವೋಟ್ ಮಾಡಿ ಎಂದು ಕೈ ಮುಗಿದು ಭಿಕ್ಷೆ ಬೇಡುವ ದೈನ್ಯತೆಯು ಆ ಪ್ರತಿಭೆಗಳಿಗೆ ಬರಬಾರದಿತ್ತು.

ಕನ್ನಡದಲ್ಲಿ ಕೂಡ ಆರಂಭದ ಎದೆ ತುಂಬಿ ಹಾಡುವೆನು, ಕಾಮಿಡಿ ಕಿಲಾಡಿ, ಮಜಾ ಟಾಕೀಸ್, ಡ್ರಾಮಾ ಜೂನಿಯರ್ ರಿಯಾಲಿಟಿ ಶೋನಲ್ಲಿ ಗೆದ್ದವರು ಮುಂದೆ ನೂರಾರು ಅವಕಾಶಗಳನ್ನು ಪಡೆದರು. ಅವರ ಪ್ರತಿಭೆಯನ್ನು ನಾಡು ಗುರುತಿಸಿ ಬೆಳೆಸಿತು.

Childrens reality Shows

ಆದರೆ ಇಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ಯಾವಾಗ ಇಂಟರ್ನೆಟ್ ವೋಟಿಂಗ್ ಆರಂಭ ಆಯಿತೋ ಅಲ್ಲಿಂದ ವೋಟ್ ಖರೀದಿಗಳು, ಪ್ರಭಾವಗಳು ಆರಂಭ ಆದವು. ಆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ತರಬೇತು ಕೊಡುವ ಹಲವು ಶಾಲೆಗಳು ಮಹಾನಗರಗಳಲ್ಲಿ ನಾಯಿಕೊಡೆಗಳ ಹಾಗೆ ಆರಂಭ ಆದವು. ಹೆತ್ತವರು ತಮ್ಮ ಮಕ್ಕಳನ್ನು ಸೂಪರ್ ಹೀರೋ ಮಾಡುವ ಜಿದ್ದಿಗೆ ಬಿದ್ದು ಅಂತಹ ಶಾಲೆಗಳಿಗೆ ದುಡ್ಡು ಸುರಿಯಲು ತೊಡಗಿದರು.

ಆದರೆ ಇಲ್ಲಿ ಕೂಡ ಬಡವರ ಮಕ್ಕಳು, ಗ್ರಾಮಾಂತರ ಭಾಗದ ಪ್ರತಿಭೆಗಳು ನಿಜವಾಗಿಯೂ ಅವಕಾಶಗಳಿಂದ ವಂಚಿತರಾದರು!

ಒಂದು ಸಮೀಕ್ಷೆ ಮಾಡಿ ನೋಡಿ. ಇತ್ತೀಚಿನ ರಿಯಾಲಿಟಿ ಶೋಗಳಲ್ಲಿ ಗೆದ್ದವರಲ್ಲಿ ಎಷ್ಟು ಮಂದಿ ಹಳ್ಳಿಯ ಮಕ್ಕಳು ಇದ್ದಾರೆ? ಎಷ್ಟು ಮಂದಿ ಬಡವರ ಮಕ್ಕಳಿದ್ದಾರೆ? ಎಷ್ಟು ಮಂದಿ ಕನ್ನಡ ಮಾಧ್ಯಮದ ಮಕ್ಕಳಿದ್ದಾರೆ?
ಖಂಡಿತ ಇದ್ದಾರೆ. ಆದರೆ ಅವರ ಪ್ರಮಾಣ ತುಂಬಾ ಕಡಿಮೆ ಇದೆ!

ಜಗತ್ತಿನ ಪ್ರತೀ ಮಗುವೂ ಪ್ರತಿಭಾವಂತ ಮಗುವೇ!

ಈ ಜಗತ್ತಿನ ಪ್ರತೀ ಮಕ್ಕಳೂ ಪ್ರತಿಭಾವಂತರೇ ಆಗಿದ್ದಾರೆ. ಅವರಲ್ಲಿ ಒಂದಲ್ಲ ಒಂದು ಪ್ರತಿಭೆಯನ್ನು ಲೋಡ್ ಮಾಡಿ ಭಗವಂತ ಈ ಜಗತ್ತಿಗೆ ಅವರನ್ನು ಕಳುಹಿಸಿರುತ್ತಾನೆ. ನೀವು ಯಾವ ಮಕ್ಕಳನ್ನು ವಿಶೇಷ ಚೇತನ ಮಕ್ಕಳು ಎಂದು ಕರೆಯುತ್ತೀರೋ ಅವರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯ ಪೋಷಣೆಗೆ ವೇದಿಕೆ ಬೇಕು. ತರಬೇತು ಬೇಕು. ಹೆತ್ತವರ, ಶಿಕ್ಷಕರ, ಸಮಾಜದ ಪ್ರೋತ್ಸಾಹ ಬೇಕು.

Childrens reality Shows

ಅವರ ಶಾಪ ಆದರೆ ನಮ್ಮ ಮಕ್ಕಳು ಎಷ್ಟು ಪ್ರತಿಭೆ ಹೊಂದಿದ್ದಾರೆ ಎಂದರೆ ಅವರು ಸ್ಪರ್ಧೆಯ ಸೋಂಕಿಲ್ಲದೆ ಕೂಡ ತಮ್ಮ ಅಗಾಧವಾದ ಪ್ರತಿಭೆಯನ್ನು ಬೆಳೆಸುವ ಸಾಮರ್ಥ್ಯವನ್ನು ಖಂಡಿತವಾಗಿ ಹೊಂದಿರುತ್ತಾರೆ! ಅವರನ್ನು ರೇಸಿನ ಕುದುರೆ ಮಾಡಿ ರೇಸಿಗೆ ನಿಲ್ಲಿಸುವ ಅಗತ್ಯ ಖಂಡಿತ ಇಲ್ಲ!

ಸ್ಪರ್ಧೆಗಳ ಬಗ್ಗೆ ಸಾಹಿತಿ ಶಿವರಾಮ ಕಾರಂತರು ಹೇಳಿದ್ದೇನು?

ಖ್ಯಾತ ಸಾಹಿತಿ ಮತ್ತು ಶಿಕ್ಷಣ ತಜ್ಞರಾದ ಕೋಟ ಶಿವರಾಮ ಕಾರಂತರು ಚಿಕ್ಕ ಮಕ್ಕಳನ್ನು ಸ್ಪರ್ಧೆಗೆ ನಿಲ್ಲಿಸಬೇಡಿ ಎಂದು ಹೇಳುತ್ತಿದ್ದರು. 12 ವರ್ಷಗಳವರೆಗೆ ಮಕ್ಕಳಿಗೆ ಯಾವ ಸ್ಪರ್ಧೆಯನ್ನು ಕೂಡ ಮಾಡಬಾರದು ಎನ್ನುವುದು ಅವರ ಖಚಿತ ಅಭಿಪ್ರಾಯ. ಸ್ಪರ್ಧೆ ಮಾಡಿದರೂ ಎಲ್ಲ ಮಕ್ಕಳಿಗೂ ಸಮಾನ ಬಹುಮಾನ ಕೊಡಿ ಎನ್ನುತ್ತಿದ್ದರು ಕಾರಂತರು.

Kota Shivarama Karant

ಆದರೆ ಇಂದು ಆಗುತ್ತಿರುವುದೆನು?

ಆದರೆ ಸ್ಪರ್ಧೆಯ ಗೆಲುವನ್ನು ತಮ್ಮ ಪ್ರತಿಷ್ಠೆಯನ್ನಾಗಿ ಮಾಡಿಕೊಂಡ ಶಿಕ್ಷಕರು ಮತ್ತು ಹೆತ್ತವರು ಮಕ್ಕಳನ್ನು ರೇಸಿನ ಕುದುರೆ ಮಾಡಿ ಈಗಾಗಲೇ ನಿಲ್ಲಿಸಿ ಆಗಿದೆ! ಈ ಸ್ಪರ್ಧೆಯಲ್ಲಿ ಸೋತವರ ಕಣ್ಣೀರನ್ನು ಮತ್ತು ಗೆದ್ದು ಬೀಗಿದವರ ಆನಂದ ಬಾಷ್ಪವನ್ನು ತಮ್ಮ ಟಿ ಆರ್ ಪಿ ಸರಕನ್ನಾಗಿ ಮಾಡಿಕೊಂಡ ಟಿವಿ ವಾಹಿನಿಗಳಿಗೆ ಈ ಸ್ಪರ್ಧೆಗಳು ಬೇಕೇ ಬೇಕು! ಮಕ್ಕಳ ಗೆಲುವನ್ನು ತಮ್ಮ ಪ್ರತಿಷ್ಠೆ ಎಂದು ಭಾವಿಸುವ ಹೆತ್ತವರು ಇರುವವರೆಗೆ ಈ ಮಕ್ಕಳ ರಿಯಾಲಿಟಿ ಶೋಗಳು ಖಂಡಿತ ನಿಲ್ಲುವುದಿಲ್ಲ. ಈ ಸ್ಪರ್ಧೆಗಳು ಮೆಗಾ ಮನರಂಜನೆಯ ಭಾಗ ಎಂದು ಪರಿಗಣಿಸುವ ವೀಕ್ಷಕರು ಕೂಡ ರಿಯಾಲಿಟಿ ಶೋ ಬೇಕು ಅಂತಾರೆ!

ತಮ್ಮ ಮಕ್ಕಳನ್ನು ಸೂಪರ್ ಹೀರೋ ಅಥವ ಸೂಪರ್ ಹೀರೋಯಿನ್ ಮಾಡಲು ಹೊರಟ ಹೆತ್ತವರು ಮಕ್ಕಳ ಬಾಲ್ಯವನ್ನು ಬರಿದು ಮಾಡುತ್ತಿದ್ದಾರೆ. ತಮ್ಮ ಮಕ್ಕಳು ಒಮ್ಮೆ ಟಿವಿಯಲ್ಲಿ ಕಂಡರೆ ಸಾಕು ಎಂದು ತೆವಲಿಗೆ ಪೋಷಕರು ಬಿದ್ದಿರುವ ಈ ದಿನಗಳಲ್ಲಿ ಅವರು ಬುದ್ಧಿ ಕಲಿಯುವುದು ಯಾವಾಗ?

Reality Shows in TV

ಇಲ್ಲೊಬ್ಬರು ತಾಯಿ ತನ್ನ ಎರಡನೇ ಕ್ಲಾಸಿನ ಮುಗ್ಧವಾದ ಮಗಳನ್ನು ದಿನವೂ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಕರಾಟೆ, ಚೆಸ್, ಕ್ರಿಕೆಟ್, ಯಕ್ಷಗಾನ, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್ ಕೋಚಿಂಗ್ ಎಂದೆಲ್ಲ ಉಸಿರು ಬಿಗಿ ಹಿಡಿದು ಓಡುತ್ತಿರುವಾಗ ಆ ಮುಗ್ಧ ಮಗುವಿನ ಮೇಲಾಗುತ್ತಿರುವ ಒತ್ತಡವನ್ನು ನನಗೆ ಊಹೆ ಮಾಡಲು ಕಷ್ಟ ಆಗುತ್ತಾ ಇದೆ! ಯಾವುದೇ ಕಲಿಕೆಯು ಮಕ್ಕಳಿಗೆ ಹೊರೆ ಆಗಬಾರದು ಎಂಬ ಸಾಮಾನ್ಯ ಪ್ರಜ್ಞೆಯು ಅಂತಹ ಹೆತ್ತವರಿಗೆ ಬೇಡವಾ?

ಇದನ್ನೂ ಓದಿ: Raja Marga Column : ನೀವು ಜ್ಯೂಲಿ ನೋಡಿದ್ದೀರಾ? ಇದು KGFಗೂ ಮೊದಲು ಬಾಲಿವುಡ್‌ನ ಅಹಂ ಮುರಿದ ಸಿನಿಮಾ

ಡ್ಯಾಡಿ ನಂಬರ್ ಒನ್, ಮಮ್ಮಿ ನಂಬರ್ ಒನ್ ಮೊದಲಾದ ನಾನಸೆನ್ಸ್ ಸ್ಪರ್ಧೆಯ ಮೂಲಕ ಅಪ್ಪ, ಅಮ್ಮನ ಪ್ರೀತಿಯು ಅಳೆಯಲ್ಪಡಬೇಕಾ?

ನನ್ನ ಸಲಹೆ ಏನೆಂದರೆ ಮುಂದಿನ ಕೆಲವು ವರ್ಷಗಳ ಕಾಲ ಎಲ್ಲ ಟಿವಿ ವಾಹಿನಿಗಳ ಸ್ಪರ್ಧಾತ್ಮಕವಾದ ರಿಯಾಲಿಟಿ ಶೋಗಳನ್ನು ನಿಲ್ಲಿಸುವುದು ಒಳ್ಳೆಯದು! ಅಥವಾ ಅವುಗಳಿಗೆ ಒಂದು ಸಣ್ಣ ಬ್ರೇಕ್ ಆದರೂ ಬೇಕು. ವರ್ಷಾನುಗಟ್ಟಲೆ ಈ ಸ್ಪರ್ಧೆಗಳು ಮುಂದುವರಿದರೆ ಆ ಮಕ್ಕಳ ಶಿಕ್ಷಣದ ಮೇಲೆ ಆಗುವ ಕರಾಳತೆಯ ಬಗ್ಗೆ ಕೂಡ ನಾವು ಯೋಚನೆ ಮಾಡಬೇಕು ಅಲ್ಲವೇ?

ರಿಯಾಲಿಟಿ ಶೋಗಳ ಹಂಗಿಲ್ಲದೆ ಇಂದು ಸ್ಟಾರ್ ಆಗಿ ಮಿಂಚುತ್ತಿರುವ ನೂರಾರು ಪ್ರತಿಭೆಗಳು ನನ್ನ ಪಟ್ಟಿಯಲ್ಲಿ ಇವೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು.

Continue Reading

ಅಂಕಣ

ವಿಧಾನಸೌಧ ರೌಂಡ್ಸ್‌: ಜೆಡಿಎಸ್‌ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್‌ ಅಚ್ಚರಿ ಅಭ್ಯರ್ಥಿ?

ವಿಧಾನಸೌಧ ರೌಂಡ್ಸ್‌: ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾತುಕತೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರಿಂದ ಯಾವ ಪಕ್ಷಕ್ಕೆ ಲಾಭ? ಯಾವ ಪಕ್ಷಕ್ಕೆ ನಷ್ಟ ಎಂಬ ಚರ್ಚೆ ಶುರುವಾಗಿದೆ.

VISTARANEWS.COM


on

Edited by

HD Kumaraswamy And BS Yediyurappa
Koo
Vidhana Soudha Rounds

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೂರು ಪಕ್ಷಗಳಲ್ಲೂ ಸಂಘಟನೆ ಚುರುಕಾಗಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲುವ ಅನಿವಾರ್ಯತೆ ಇದೆ. ಇತ್ತ ಬಿಜೆಪಿಯು ಜೆಡಿಎಸ್ ಜತೆ ಸಖ್ಯ ಬೆಳೆಸಿ ಕಾಂಗ್ರೆಸ್‌ಗೆ ತಿರುಗೇಟು ಕೊಡಲು ದೆಹಲಿ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಆದರೆ ಈ ಮೈತ್ರಿಗೆ ರಾಜ್ಯ ಬಿಜೆಪಿ ನಾಯಕರನ್ನು ದೂರವಿಟ್ಟಿದ್ದು ಸ್ಥಳೀಯ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಇನ್ನು ಈ ಮೈತ್ರಿ ಮೂಲಕ ಸುಮಲತಾ ಅವರನ್ನು ಮಂಡ್ಯದಿಂದ ಎತ್ತಂಗಡಿ ಮಾಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಬಹುದು. ಸುಮಲತಾಗೆ ಕ್ಷೇತ್ರ ಹುಡುಕಿಕೊಡುವ ಜವಾಬ್ದಾರಿ ರಾಜ್ಯ ಬಿಜೆಪಿ ನಾಯಕರ ಹೆಗಲಿಗೇರಲಿದೆ. ಈ ನಡುವೆ, ಬೆಂಗಳೂರು ದಕ್ಷಿಣದಿಂದ ಈ ಬಾರಿ ತೇಜಸ್ವಿ ಅನಂತಕುಮಾರ್ ಅವರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈ ನಡುವೆ, ವಲಸಿಗ ಬಿಜೆಪಿ ಶಾಸಕರ ನಡೆಯನ್ನು ಎಲ್ಲರೂ ಕಾತುರದಿಂದ ನೋಡಲಾರಂಭಿಸಿದ್ದಾರೆ.

ರಾಜಕೀಯ ಮೈತ್ರಿ ಮದುವೆ ಫಿಕ್ಸ್!

ಗ್ಯಾರಂಟಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಯುದ್ಧ ಮಾಡಲು ನಿರ್ಧಾರ ಮಾಡಿವೆ. ಹೀಗಾಗಿ ಕಳೆದ ವಾರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ದೆಹಲಿಯಲ್ಲಿ ಸುದೀರ್ಘ ಚರ್ಚೆ ನಡೆಸಿ ಬಿಜೆಪಿ ವರಿಷ್ಠರ ಮುಂದೆ ಮೈತ್ರಿ ಸೂತ್ರ ಇಟ್ಟಿದ್ದಾರೆ. ದೊಡ್ಡ ಗೌಡರ ಕುಟುಂಬ ಇಟ್ಟ ಬಹುದೊಡ್ಡ ಬೇಡಿಕೆ ಈಡೇರಿಕೆ ಕಷ್ಟಸಾಧ್ಯ ಎನ್ನುವುದು ಮನವರಿಕೆ ಆಗಿದೆ. ಬಿಜೆಪಿ ನಾಯಕರುಗಳ ಪ್ರಕಾರ ಜೆಡಿಎಸ್ ಯೋಗ್ಯತೆಗೆ ಎರಡು ಲೋಕಸಭಾ ಕ್ಷೇತ್ರಗಳು ಕೊಟ್ಟರೆ ಅದೇ ಹೆಚ್ಚು. ಒಂದು ಸ್ಥಾನ ಹೆಚ್ಚುವರಿ ಕೊಟ್ಟರೆ ಅದು ಬೋನಸ್. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿದ್ದನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಪಡೆದುಕೊಳ್ಳಬೇಕು ಅನ್ನೋದು ದೊಡ್ಡ ಗೌಡರ ಪ್ಲಾನ್. ಹೀಗಾಗಿ ಗೋವಾ ಸಿಎಂ ಮುಂದೆ ಐದು ಲೋಕಸಭಾ ಕ್ಷೇತ್ರಗಳು, ಎರಡು ಪರಿಷತ್ ಹಾಗೂ ಪರಿಷತ್‌ನಲ್ಲಿ ವಿಪಕ್ಷ ನಾಯಕ ಸ್ಥಾನ, ಒಂದು ರಾಜ್ಯಸಭೆ ಸ್ಥಾನ, ಜತೆಗೆ ಕೇಂದ್ರದಲ್ಲಿ ಮಂತ್ರಿಗಿರಿ ಕೊಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿದ ಬಿಜೆಪಿ ವರಿಷ್ಠರು ಮೈತ್ರಿ ಓಕೆ, ಆದ್ರೆ ಸೀಟ್ ಹಂಚಿಕೆ ವಿಚಾರವನ್ನ ನಿಧಾನವಾಗಿ ಮಾಡೋಣ ಎಂದು ಹೇಳಿ ಕಳಿಸಿದ್ದಾರೆ.

HD Kumaraswamy Meets Amit Shah

ಟೀಮ್ ಚೇಂಜ್ ಮಾಡಿದ ವಲಸಿಗ ಬಿಜೆಪಿ ಶಾಸಕರು

ರಾಜ್ಯ ಬಿಜೆಪಿಯಲ್ಲಿ ವಲಸಿಗ ಶಾಸಕರನ್ನು ಇಂದಿಗೂ ಅನುಮಾನದಿಂದಲೇ ನೋಡಲಾಗುತ್ತಿದೆ. ‌ಕಾರಣ ಅವರು ಅಂದು ಸಮ್ಮಿಶ್ರ ಸರ್ಕಾರ ಬೀಳಿಸಿ ಬಂದಿದ್ದು ಸಿದ್ಧಾಂತ್ಕಕ್ಕೋ ಅಭಿವೃದ್ಧಿಗಾಗಿಯೋ ಅಲ್ಲ, ಹಣಕ್ಕಾಗಿ ಅನ್ನೋ ಅಭಿಪ್ರಾಯ ರಾಜ್ಯ ಬಿಜೆಪಿಯಲ್ಲಿ ಇದೆ. ಅದೇ ರೀತಿ ಇವರು ಸಹ ಹಲವು ವಿಚಾರಗಳಲ್ಲಿ ಬಿಜೆಪಿ ನಾಯಕರಿಗೆ ಅನುಮಾನ ಬರುವಂತೆ ನಡೆದುಕೊಂಡಿದ್ದಾರೆ‌. ಯಡಿಯೂರಪ್ಪ ಇದ್ದಾಗ ಅವರಿಗೆ ಜೈ ಅಂದ್ರು. ಬಳಿಕ ಬೊಮ್ಮಾಯಿ ಸಮಯದಲ್ಲಿ ಬೊಮ್ಮಾಯಿ ಸುತ್ತಲೂ ಇದ್ದಿದ್ದು ಇವರೇ. ಈಗ ಮೈತ್ರಿ ಮಾತುಕತೆ ನಡೆಯುತ್ತಿರುವಾಗ ಕುಮಾರಸ್ವಾಮಿ ಭೇಟಿ ಮಾಡಲು ಸುಧಾಕರ್ ದೆಹಲಿಗೆ ತೆರಳಿದ್ರು. ದೆಹಲಿಯಿಂದ ಎಚ್ಡಿ ಕುಮಾರಸ್ವಾಮಿ ಬೆಂಗಳೂರಿಗೆ ಎಂಟ್ರಿ ಆದ ಕ್ಷಣದಿಂದಲೂ ಮುನಿರತ್ನ ಅವರು ಎಚ್ಡಿಕೆ ಕಾರಿನೊಳಗೆ ಜಿಗಿದಿದ್ದಾರೆ! ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಪಡೆಯಲು ಬಿಜೆಪಿಗಿಂತಲೂ ಮೈತ್ರಿ ನಾಯಕರ ಬೆಂಬಲ ಸಂಪರ್ಕ ಮಾಡ್ತಿರುವುದು ಮೂಲ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

ಪ್ರಾಣಪಕ್ಷಿ ಹಾರಿ ಹೋಗ್ತಿದ್ದ ಜೆಡಿಎಸ್‌ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ

ಸದ್ಯ ಮಹಿಳೆ ತಲೆ ಮೇಲೆ ಇರೋ ತೆನೆ ದಿನೇದಿನೇ ಒಣಗಿ ಇನ್ನೇನು ಸುಟ್ಟು ಹೋಗುವ ಹಂತದಲ್ಲಿದ್ದಾಗ ಬಿಜೆಪಿ ಸಂಜೀವಿನಿಯಾಗಿ ಪರಿಣಮಿಸಿದೆ. ಕೇವಲ 19 ಸ್ಥಾನಗಳನ್ನ ಗೆಲ್ಲಲಷ್ಟೇ ಸಾಧ್ಯವಾದ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ನಾಲ್ಕು ಸ್ಥಾನ ಬಿಡಲು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಪರಿಷತ್‌ನಲ್ಲೂ ಜೆಡಿಎಸ್ ಗೆ ಅವಕಾಶ ಸಿಗಬಹುದು. ಹೀಗಾಗಿ ಈ ಆರು ವರ್ಷ ಪರಿಷತ್‌ನಲ್ಲಿ ಒಂದು ಸ್ಥಾನ ಗೆಲ್ಲಲು ಆಗದ ಜೆಡಿಎಸ್ ಗೆ ಬಿಜೆಪಿ ಸ್ನೇಹ ಭಾರಿ ಲಾಭ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಬಿಜೆಪಿಗೆ ಇದರಿಂದ ನಷ್ಟ ಆದ್ರೂ ಅಚ್ಚರಿ ಇಲ್ಲ. ಯಾಕೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರು ಕೈ ಮೇಲೆತ್ತಿದ್ದರೂ, ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ನಡುವೆ ಇದ್ದ ಮನಸ್ತಾಪ ಮರೆತು ವೋಟ್ ಹಾಕಿರಲಿಲ್ಲ. ಹೀಗಾಗಿ ಬಿಜೆಪಿ 25+1 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಾಂಗ್ರೆಸ್‌ಗೆ ಇಷ್ಟು ದೊಡ್ಡ ಮಟ್ಟದ ಲಾಭ ಸಿಗದಿದ್ದರೂ ಕನಿಷ್ಠ 12-15 ಸ್ಥಾನ ಗೆಲ್ಲುವ ವಾತಾವರಣವನ್ನು ಈ ಮೈತ್ರಿ ಸೃಷ್ಟಿ ಮಾಡಬಹುದು.

ಅಂಬರೀಶ್ ಬಳಿಕ ಸಿನಿಮಾದವರಿಗೆ ಮಂಡ್ಯದಲ್ಲಿ ಡಬಲ್ ಚಾನ್ಸ್ ಸಿಕ್ತಿಲ್ಲ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಿನಿಮಾದವರನ್ನ ಜನ ಎರಡನೇ ಬಾರಿ ಆರಿಸಿದ್ದಿಲ್ಲ. 2013ರ ಮಧ್ಯಂತರ ಚುನಾವಣೆಯಲ್ಲಿ ಗೆದ್ದ ನಟಿ ರಮ್ಯ ಅವರನ್ನ ಬಳಿಕ ನಡೆದ ಚುನಾವಣೆಯಲ್ಲಿ ಸೋಲಿಸಿ ಜನ ಮನೆಗೆ ಕಳುಹಿಸಿದ್ರು. ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನ ಗೆಲ್ಲಿಸಿ ಕಳುಹಿಸಿದ್ರು. ಆದ್ರೆ ಈ ಬಾರಿ ಬಿಜೆಪಿಗೆ ಹೋಗಿ ಟಿಕೆಟ್ ಪಡೆಯಬೇಕು ಅನ್ನೋ ಸುಮಲತಾ ಆಸೆ ಈಡೇರುತ್ತಿಲ್ಲ. ಈ ಬಾರಿ ಮಂಡ್ಯ ಮೈತ್ರಿಯಿಂದ ಜೆಡಿಎಸ್ ಪಾಲಾಗುವುದು ಕನ್ಫರ್ಮ್. ಹೀಗಾಗಿ ನಟಿ ಸುಮಲತಾಗೂ ಈ ಬಾರಿ ಮಂಡ್ಯದ ಜನ ಸೆಂಡ್ಆಪ್ ಕೊಡಲು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ವಿಧಾನಸೌಧ ರೌಂಡ್ಸ್‌: ಬಯಲಾಯ್ತು ಎಲೆಕ್ಷನ್‌ ಟಿಕೆಟ್‌ ಒಳ ಆಟ; ಕಾಂಗ್ರೆಸ್‌ಗೆ ಶೀತಲಸಮರದ ಸಂಕಟ

Tejaswini Ananth Kumar meets DK Shivakumar

ಬೆಂಗಳೂರು ದಕ್ಷಿಣಕ್ಕೆ ಕೈಗೆ ಅಭ್ಯರ್ಥಿ ಕೊರತೆ, ತೇಜಸ್ವಿ ಅನಂತಕುಮಾರ್‌ರನ್ನು ಆಹ್ವಾನಿಸಿದ ಡಿಕೆಶಿ

ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಸ್ಪರ್ಧೆ ಮಾಡಿದ್ದ ಕ್ಷೇತ್ರ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯಿಂದ ಯಾರನ್ನ ನಿಲ್ಲಿಸಿದರೂ ಗೆಲುವು ಖಚಿತ. ಆದರೆ ಕಳೆದ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿ ಅನಂತಕುಮಾರ್‌ಗೆ ಅವಕಾಶ ಕೊಡದೆ, ಬಿಜೆಪಿ ವರಿಷ್ಠರು ಸಂಪ್ರದಾಯ ಮುರಿದು ಯುವ ನಾಯಕನಿಗೆ ಮಣೆ ಹಾಕಿದ್ರು. ಆದ್ರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ. ತೇಜಸ್ವಿ ಅನಂತಕುಮಾರ್ ಪರ ಕೈ ನಾಯಕರು ಮಾತನಾಡುತ್ತಿದ್ದಾರೆ. ಅನಂತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ ಕೆ ಶಿವಕುಮಾರ್, ನಿಮ್ಮನ್ನ ನಂಬಿದ ದೊಡ್ಡ ಕಾರ್ಯಕರ್ತರ ಗುಂಪು ಇದೆ. ಅವರನ್ನ ತಬ್ಬಲಿ ಮಾಡಬೇಡಿ. ಚುನಾವಣೆಗೆ ಧುಮುಕಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟ್ ಕೊಡದಿದ್ರೆ ನಾವು ರೆಡಿ ಇದ್ದೇವೆ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ!

Continue Reading
Advertisement
tamil nadu
ಕರ್ನಾಟಕ9 mins ago

Cauvery Dispute:‌ ಕಾವೇರಿ ಕಿಚ್ಚು; ಸತ್ತ ಇಲಿಯನ್ನು ಬಾಯಿ ಬಳಿ ಇಟ್ಟು ಪ್ರತಿಭಟನೆ ನಡೆಸಿದ ರೈತರು

Virat kohli
ಕ್ರಿಕೆಟ್17 mins ago

ind vs Aus : ಆಸೀಸ್​ ವಿರುದ್ಧ ಆರಂಭಿಕರಾಗಿ ಆಡಲಿದ್ದಾರೆ ರೋಹಿತ್​- ವಿರಾಟ್​ ಜೋಡಿ

Election officers attacked in Ramanagara
ಕರ್ನಾಟಕ37 mins ago

Rowdism in Ramanagara : ರೋಡಲ್ಲೇ ರೌಡಿಸಂ; ಚುನಾವಣಾಧಿಕಾರಿಗಳ ಮೇಲೆ ಕಾರು ಹಾಯಿಸಿ ಬ್ಯಾಲೆಟ್‌ ಪೇಪರ್‌ ಲೂಟಿ

Kolara MP Muniswamy complaint to governor of Karnataka
ಕರ್ನಾಟಕ52 mins ago

MP Muniswamy : ಸಚಿವ ಬೈರತಿ, ಶಾಸಕ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟ ಸಂಸದ ಮುನಿಸ್ವಾಮಿ

Nepal Team
ಕ್ರಿಕೆಟ್1 hour ago

Asian Games 2023 : ಏಷ್ಯನ್ ಗೇಮ್ಸ್​ನಲ್ಲಿ ನೇಪಾಳ ತಂಡ ಸೃಷ್ಟಿಸಿದ ಮಾಡಿದ ದಾಖಲೆಗಳ ವಿವರ ಇಲ್ಲಿದೆ

Malayalam Film 2018
South Cinema1 hour ago

Oscars 2024: ‘ಆಸ್ಕರ್‌’ಗೆ ಪ್ರವೇಶ ಪಡೆದ ಮಲಯಾಳಂ ಸಿನಿಮಾ; ನೀವೂ ಇದನ್ನು ನೋಡಿರುತ್ತೀರಿ!

Mulayam Singh Yadav Statue
ದೇಶ1 hour ago

Mulayam Singh Yadav: ಮುಲಾಯಂ ಸಿಂಗ್‌ ಮೂರ್ತಿ ತೆರವು; ಯೋಗಿ ನಾಡಲ್ಲಿ ರೂಲ್ಸ್‌ ಎಂದರೆ ರೂಲ್ಸ್!

Parineeti Chopra with Raghav
ಬಾಲಿವುಡ್1 hour ago

Parineeti Chopra: ‘ಓ ಪ್ರಿಯಾ’; ಪತಿಗಾಗಿ ವಿಶೇಷ ಹಾಡು ರೆಕಾರ್ಡ್‌ ಮಾಡಿದ ಪರಿಣಿತಿ ಚೋಪ್ರಾ!

demat account
ಮನಿ ಗೈಡ್1 hour ago

Demat Account: ಡಿಮ್ಯಾಟ್ ಖಾತೆದಾರರಿಗೆ ಗುಡ್‌ ನ್ಯೂಸ್:‌ ನಾಮಿನಿ ಘೋಷಣೆಗೆ ಸಮಯ ವಿಸ್ತರಣೆ

HD Kumaraswamy Press meet vs congress government
ಕರ್ನಾಟಕ1 hour ago

BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್‌: ಎಚ್.ಡಿ. ಕುಮಾರಸ್ವಾಮಿ ಕಿಡಿ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

bangalore bandh
ಕರ್ನಾಟಕ1 day ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

dina bhavishya
ಪ್ರಮುಖ ಸುದ್ದಿ10 hours ago

Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ2 days ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ2 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ2 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ2 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ3 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

ಟ್ರೆಂಡಿಂಗ್‌