ರಾಜ ಮಾರ್ಗ ಅಂಕಣ : ಅತುಲ ಪರಾಕ್ರಮಿ ಈ ಕ್ರಾಂತಿಯ ಕಿಡಿ ನೇತಾಜಿ ಸುಭಾಸ್‌ ಚಂದ್ರ ಬೋಸ್‌ Vistara News

ಅಂಕಣ

ರಾಜ ಮಾರ್ಗ ಅಂಕಣ : ಅತುಲ ಪರಾಕ್ರಮಿ ಈ ಕ್ರಾಂತಿಯ ಕಿಡಿ ನೇತಾಜಿ ಸುಭಾಸ್‌ ಚಂದ್ರ ಬೋಸ್‌

ರಾಜ ಮಾರ್ಗ ಅಂಕಣ : ದೇಶದ ಸ್ವಾತಂತ್ರ್ಯದ ಕ್ರಾಂತಿಯ ಕಿಡಿ ನೇತಾಜಿ ಸುಭಾಷ್ ಚಂದ್ರ ಬೋಸ್‌. ಈ ಅನುಪಮ ಪರಾಕ್ರಮಿಯ ಜನ್ಮದಿನವನ್ನು ಕೇಂದ್ರ ಸರಕಾರ ಪರಾಕ್ರಮ ದಿನ ಎಂದು ಘೋಷಿಸಿದೆ. ಈ ಪರಾಕ್ರಮ ದಿನಕ್ಕೆ ಈಗ ಎರಡು ವರ್ಷ. ನೇತಾಜಿ ಜನಿಸಿ 126 ವರ್ಷ (ಜನವರಿ 23, 1897).

VISTARANEWS.COM


on

Subhas chandra bose birthday
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
RAJAMARGA

2004ರಲ್ಲಿ ಶಾಮ್ ಬೆನಗಲ್ ನಿರ್ದೇಶನ ಮಾಡಿದ ಶ್ರೇಷ್ಠ ಸಿನೆಮಾ ‘ನೇತಾಜಿ ಸುಭಾಸ್ ಚಂದ್ರ ಬೋಸ್ – ದ ಫಾರ್ಗೊಟನ್ ಹೀರೋ’ ನೋಡಿ ನಾನು ಧಾರೆಯಾಗಿ ಕಣ್ಣೀರು ಸುರಿಸಿದ್ದೆ. ಅವರು ಬದುಕಿದ ರೀತಿಯೇ ಹಾಗಿತ್ತು! ಸಾವನ್ನು ಎದುರಿಸುವ ಧೈರ್ಯವು ಅವರಿಗೆ ರಕ್ತಗತವಾಗಿ ಬಂದಿತ್ತು.

ಕಟಕ ನಗರದ ಅತ್ಯಂತ ಶ್ರೀಮಂತ ವಕೀಲನ ಮಗನಾಗಿ ಜನಿಸಿದ (1897 ಜನವರಿ 23) ಸುಭಾಷರು ತನ್ನ ಹೆತ್ತವರ ಆಸೆಯಂತೆ ಲಂಡನ್ನಿಗೆ ಹೋಗಿ ಕೇಂಬ್ರಿಜ್ ವಿವಿಯಲ್ಲಿ ನಾಲ್ಕನೇ ರಾಂಕ್ ಪಡೆದು ಐಸಿಎಸ್ ಪರೀಕ್ಷೆಯನ್ನು ಪಾಸ್ ಆಗಿದ್ದರು! ಅವರ ಪದವಿಗೆ ಅನುಗುಣವಾಗಿ ಬ್ರಿಟಿಷ್ ಸರಕಾರವು ಅವರಿಗೆ ಅತ್ಯಂತ ದೊಡ್ಡ ಹುದ್ದೆಯ ಆಫರ್ ನೀಡಿತ್ತು. ಆದರೆ, ಆಗಲೇ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹರಡಿತ್ತು. ಭಾರತ ಅವರನ್ನು ಕೈ ಬೀಸಿ ಕರೆದಾಗ ಅವರು ಐಸಿಎಸ್ ಪದವಿಯನ್ನು ತ್ಯಜಿಸಿ ಭಾರತಕ್ಕೆ ಬಂದರು.

ಬಾಲ್ಯದಲ್ಲಿ ಅವರ ಮೇಲೆ ವಿವೇಕಾನಂದರ ದಟ್ಟ ಪ್ರಭಾವ ಆಗಿತ್ತು. ರಾಷ್ಟ್ರ ಪ್ರೇಮದ ಬೆಂಕಿಯು ಮೊದಲೇ ಅವರ ಒಳಗಿತ್ತು. ಭಾರತಕ್ಕೆ ಬಂದಾಗ ಅವರ ಮೇಲೆ ಆರಂಭದಲ್ಲಿ ಗಾಂಧೀಜಿಯವರ ಪ್ರಭಾವವು ಆಗಿತ್ತು. ಆದರೆ ಮುಂದೆ ಕಲ್ಕತ್ತಾದಲ್ಲಿ ಸ್ವರಾಜ್ ಎಂಬ ಪತ್ರಿಕೆಗೆ ಅವರು ಅಗ್ರ ಲೇಖನಗಳನ್ನು ಬರೆಯಲು ತೊಡಗಿದಾಗ ಮಹಾನ್ ಕ್ರಾಂತಿಕಾರಿ ಚಿತ್ತರಂಜನ ದಾಸ್ ಅವರ ಪರಿಚಯವು ಆಯಿತು. ಅದು ಅವರ ಜೀವನದ ಮೇಜರ್ ಟರ್ನಿಂಗ್ ಪಾಯಿಂಟ್ ಆಯಿತು. ಅಲ್ಲಿಂದ ಅವರು ಮಹಾ ಕ್ರಾಂತಿಕಾರಿ ಆದರು. ಮಹಾತ್ಮ ಗಾಂಧಿಯವರ ಪ್ರಭಾವ ಕಡಿಮೆ ಆಯಿತು. ಅವರ ಬೆಂಕಿ ಉಗುಳುವ ಭಾಷಣಗಳು ಇನ್ನಷ್ಟು ಪ್ರಖರ ಆದವು.

‘ನನಗೆ ಗಾಂಧೀಜಿ ಮೇಲೆ ಗೌರವ ಇದೆ. ಆದರೆ ತಕಲಿಯನ್ನು ನೂಲುವುದರಿಂದ, ಉಪವಾಸ ಕೂರುವುದರಿಂದ ಭಾರತಕ್ಕೆ ಸ್ವಾತಂತ್ರ್ಯವು ಖಂಡಿತವಾಗಿ ದೊರೆಯಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯವು ಭಿಕ್ಷೆ ಅಲ್ಲ! ಅದಕ್ಕೆ ಅಪ್ರತಿಮ ತ್ಯಾಗ ಮತ್ತು ಹೋರಾಟದ ಅಗತ್ಯ ಇದೆ ‘ ಎಂದು ಅವರು ಹೇಳಿದ್ದರು!

ಕಲ್ಕತ್ತಾದಲ್ಲಿ ಸರಣಿ ಕ್ರಾಂತಿಕಾರಿ ಚಟುವಟಿಕೆ, ರ‍್ಯಾಲಿಗಳು, ಅಸಹಕಾರ ಚಳುವಳಿಗಳು ನಿರಂತರ ನಡೆದಾಗ ಬ್ರಿಟಿಷ್ ಸರಕಾರ ಅವರನ್ನು ಬಂಧಿಸಿ ಸೆರೆಮನೆಗೆ ತಳ್ಳಿತು. ಆಗಲೂ ಗಾಂಧೀಜಿಯವರು ಸುಭಾಸ್ ಬೋಸ್ ಅವರನ್ನು ಕರೆದು ಪ್ರೀತಿಯಿಂದ ಮಾತಾಡಿಸಿದರು.

ಆಗ ಕೂಡಾ ಬೋಸರು ಹೇಳಿದ್ದು – ಮಹಾತ್ಮರೇ ನಿಮ್ಮ ದಾರಿ ನಿಮಗೆ. ನನ್ನ ದಾರಿ ನನಗೆ. ನನಗೆ ನಿಮ್ಮ ಬಗ್ಗೆ ಗೌರವವಿದೆ. ನಮ್ಮಿಬ್ಬರ ಗುರಿಯೂ ಒಂದೇ. ಆದರೆ ದಾರಿ ಬೇರೆ ಬೇರೆ!

ಮುಂದೆ ಸುಭಾಸರು ಕೋಲ್ಕತ್ತಾ ನಗರದ ಮೇಯರ್ ಆಗಿ ಆಯ್ಕೆ ಆದರು. 1923ರಲ್ಲಿ ಅಖಿಲ ಭಾರತ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೂಡ ಆಯ್ಕೆ ಆದರು. ಆಗೆಲ್ಲವೂ ಸುಭಾಷರನ್ನು ಬ್ರಿಟಿಷ್ ಸರಕಾರವು ಬಂಧಿಸಿ ಮತ್ತೆ ಮತ್ತೆ ಸೆರೆಮನೆಗೆ ಹಾಕುತ್ತಿತ್ತು. ಒಮ್ಮೆ ಕ್ಷಯ ರೋಗ ಉಲ್ಬಣಿಸಿ ಬದುಕಿದ್ದೆ ಒಂದು ಪವಾಡ!

1930ರಲ್ಲಿ ಯುರೋಪ್ ಖಂಡದ ಪ್ರವಾಸ ಮಾಡಿ ಅಲ್ಲಿನ ಭಾರತೀಯರನ್ನು ಸಂಘಟನೆ ಮಾಡಿ ಬಂದರು. ಅದೇ ಸಂದರ್ಭದಲ್ಲಿ ವರ್ಚಸ್ವೀ ನಾಯಕ ಮುಸೊಲಿನಿಯನ್ನು ಭೇಟಿ ಮಾಡಿದರು. ಸುಭಾಸರ ವರ್ಚಸ್ವಿ ವ್ಯಕ್ತಿತ್ವ ಮತ್ತು ನೇರಾ ನೇರವಾದ ಮಾತುಗಳು ಅವರಿಗೆ ಯುರೋಪ್‌ನಲ್ಲಿ ಭಾರಿ ಹೆಸರು, ಕೀರ್ತಿ ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟವು.

1938ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಅವರು ಆಯ್ಕೆ ಆದರು. ಆಗ ಅವರಿಗೆ ಕೇವಲ 41 ವರ್ಷ ಪ್ರಾಯ ಆಗಿತ್ತು! ಆಗ ಅವರು ತುರುಸಿನ ಚುನಾವಣೆಯಲ್ಲಿ ಸೋಲಿಸಿದ್ದು ಗಾಂಧೀಜಿಯವರ ಕಟ್ಟಾ ಅನುಯಾಯಿ ಆದ ಪಟ್ಟಾಭಿ ಸೀತಾರಾಮಯ್ಯ ಅವರನ್ನು!

ಅಂದು ಬೋಸರು ಮಾಡಿದ ಚಾರಿತ್ರಿಕ ಭಾಷಣ ಹೀಗಿತ್ತು.
‘ನನ್ನ ಭಾರತಕ್ಕೆ ಸ್ವಾತಂತ್ರ್ಯವು ಕ್ರಾಂತಿ ಮತ್ತು ಸಂಘರ್ಷದ ಮೂಲಕವೇ ಬರುತ್ತದೆ. ಅದನ್ನು ಯಾವ ಪ್ರಬಲ ಶಕ್ತಿಯೂ ತಡೆಯಲು ಸಾಧ್ಯವೇ ಇಲ್ಲ. ಆದರೆ ನಮ್ಮಲ್ಲಿ ಈಗಲೇ ತುಷ್ಟೀಕರಣ ನೀತಿಯು ನುಸುಳಲು ಆರಂಭ ಆಗಿದೆ. ಮುಂದೆ ಭಾರತವು ಸ್ವಾತಂತ್ರ್ಯ ಪಡೆಯುವಾಗ ವಿಭಜನೆ ಆಗುವ ಸಾಧ್ಯತೆ ಇದೆ!’ ಎಂದಿದ್ದರು.
ಮುಂದೆ ಅವರ ಮಾತು ಎಷ್ಟೊಂದು ನಿಜ ಆಯ್ತು ನೋಡಿ!

ರಾಷ್ಟ್ರೀಯ ಅಧ್ಯಕ್ಷರಾದರೂ ಅವರಿಗೆ ಆಂತರಿಕವಾದ ಕಿರುಕುಳ ತಪ್ಪಲಿಲ್ಲ. ಅದರಿಂದ ತುಂಬಾ ನೊಂದುಕೊಂಡ ಬೋಸರು ತಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷನ ಹುದ್ದೆಗೆ ರಾಜೀನಾಮೆ ನೀಡಿ ‘ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್’ ಎಂಬ ಪಕ್ಷವನ್ನು ಕಟ್ಟಿದರು. ಬಂಗಾಳದ ಮೂಲೆ ಮೂಲೆಯಲ್ಲಿ ಬಿಸಿರಕ್ತದ ಯುವಕ, ಯುವತಿಯರನ್ನು ದೊಡ್ಡ ಮಟ್ಟದಲ್ಲಿ ಸಂಘಟನೆ ಮಾಡಿ ಹೋರಾಟಕ್ಕೆ ಸಜ್ಜು ಗೊಳಿಸಿದರು.

ಬ್ರಿಟಿಷ್ ಸರಕಾರವು ಈ ಬಾರಿ ಅವರನ್ನು ಗೃಹ ಬಂಧನ ಮಾಡಿತು. ಆದರೆ ಸಿಂಹವನ್ನು ಗುಹೆಯಲ್ಲಿ ಬಂಧಿಸಿ ಇಡಲು ಸಾಧ್ಯವೇ ಇರಲಿಲ್ಲ! 1941ರಲ್ಲೀ ಅವರು ತನ್ನ ವೇಷವನ್ನು ಮರೆಸಿಕೊಂಡು ಮನೆಯಿಂದ ಹೊರಬಂದರು. ರಶಿಯಾ ಮೂಲಕ ಜರ್ಮನಿಗೆ ಬಂದು ತಲುಪಿದರು. ಹಿಟ್ಲರನನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸರ್ವಾಧಿಕಾರಿ ಹಿಟ್ಲರ್ ಸುಭಾಸರ ವ್ಯಕ್ತಿತ್ವಕ್ಕೆ ಮಾರು ಹೋದರು.

ಬ್ರಿಟಿಷ್ ವಿರೋಧಿಗಳನ್ನು ಒಗ್ಗೂಡಿಸುವ ಅವರ ಪ್ರಯತ್ನಕ್ಕೆ ಭಾರಿ ಬೆಂಬಲವು ದೊರೆಯಿತು. ಜರ್ಮನಿಯ ಬರ್ಲಿನ್‌ನಲ್ಲಿ 4,500 ದೇಶಭಕ್ತ ಸೈನಿಕರ ಬಹಳ ದೊಡ್ಡದಾದ ಪಡೆಯನ್ನು ಕಟ್ಟಲು ಅವರಿಗೆ ಸಾಧ್ಯವಾಯಿತು. ಮುಂದೆ ಸುಭಾಸರು ಸಿಂಗಾಪುರ್, ಬರ್ಮಾ, ಜಪಾನ್ ದೇಶಗಳನ್ನು ತಿರುಗಿದರು. ಅಲ್ಲೆಲ್ಲ ಅವರು ಮಾಡಿದ ಐತಿಹಾಸಿಕ ಭಾಷಣದ ಕೊನೆಯ ವಾಕ್ಯ ಹೀಗಿರುತ್ತಿತ್ತು – ನನಗೆ ನಿಮ್ಮ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ!

‘ಜೈ ಹಿಂದ್’ ಎಂದು ಸಿಂಹ ನಾದವನ್ನು ಮಾಡಿದ್ದು, ಜಪಾನ್ ಸರಕಾರವನ್ನು ಬೆಂಬಲಕ್ಕೆ ಆಗ್ರಹಿಸಿದ್ದು, ಜಪಾನ್ ದೇಶದಲ್ಲಿ 40,000 ಬಲಿಷ್ಠ ಸೈನಿಕರ ಇಂಡಿಯನ್ ನ್ಯಾಷನಲ್ ಆರ್ಮಿ ಎಂಬ ಮಹಾ ಸೈನ್ಯವನ್ನು ಕಟ್ಟಿ ಅವರಿಗೆ ಶಸ್ತ್ರಾಸ್ತ್ರಗಳ ತರಬೇತಿಯನ್ನು ಕೊಟ್ಟದ್ದು, ‘ಚಲೋ ದಿಲ್ಲಿ’ ಎಂಬ ಮಹಾ ಘೋಷಣೆಯನ್ನು ಕೂಗಿದ್ದು.. ಹೀಗೆ ಹತ್ತು ಹಲವು ರೀತಿ ಸುಭಾಸಚಂದ್ರ ಬೋಸರು ವಿದೇಶದ ನೆಲದಲ್ಲಿ ಕುಳಿತು ಬ್ರಿಟಿಷರನ್ನು ಮಣಿಸುವ ಎಲ್ಲಾ ಪ್ರಯತ್ನವನ್ನು ಮಾಡಿದರು.

1943ರ ಅಕ್ಟೋಬರ್ 21ರಂದು ಸಿಂಗಾಪುರದಲ್ಲಿ ಅವರು ‘ಸ್ವತಂತ್ರ ಭಾರತದ ಪ್ರಾವಿಷನಲ್ ಸರಕಾರ’ವನ್ನು ಭಾರಿ ಧೈರ್ಯವಾಗಿ ರಚಿಸಿಯೇ ಬಿಟ್ಟರು! ಈ ಭಾರತ ಸರಕಾರದ ಪ್ರಸ್ತಾವನೆಗೆ ಅತ್ಯಂತ ಬಲಿಷ್ಟ ರಾಷ್ಟ್ರಗಳಾದ ಜರ್ಮನಿ, ಇಟೆಲಿ, ಜಪಾನ್ ಮತ್ತು ಮ್ಯಾನ್ಮಾರ್‌ಗಳು ಮಾನ್ಯತೆ ಕೂಡ ಕೊಟ್ಟವು.

ಅಲ್ಲಿಗೆ ಭಾರತದ ಕಂಪೆನಿಯ ಸರಕಾರವು ನಡುಗಲು ಆರಂಭ ಆಗಿತ್ತು! ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಇದು ಕೂಡ ಮುಖ್ಯ ಕಾರಣ ಎಂದು ಬ್ರಿಟಿಷ್ ಪ್ರಧಾನಿಯೇ ಮುಂದೆ ಒಪ್ಪಿಕೊಂಡಿದ್ದಾರೆ!

ಆಗ ಭಾರತದ ಯುವಕರಲ್ಲಿ ಯಾವ ರೀತಿ ಬೋಸರ ಕ್ರೇಜ್ ಇತ್ತು ಅಂದರೆ ಭಾರತ ಸ್ವಾತಂತ್ರ್ಯವು ಪಡೆಯುವುದು ಖಂಡಿತ, ಆಗ ನೇತಾಜಿ ಭಾರತದ ಮೊದಲ ಪ್ರಧಾನಿ ಆಗುತ್ತಾರೆ ಎಂದು ಅವರು ಗಾಢವಾಗಿ ನಂಬಿದ್ದರು!

ಆದರೆ ಸ್ವಾತಂತ್ರ್ಯದ ಮೊದಲ ಕಿರಣಗಳನ್ನು ನೋಡುವ ಭಾಗ್ಯವು ಅವರಿಗೆ ಬರಲೇ ಇಲ್ಲ. ಅಥವಾ ಸುಭಾಸರನ್ನು ಉಳಿಸಿಕೊಳ್ಳುವ ಭಾಗ್ಯವು ನಮಗೆ ದೊರೆಯಲಿಲ್ಲ.

1945ರ ಆಗಸ್ಟ್ 18ರಂದು ಜಪಾನಿನಿಂದ ಭಾರತಕ್ಕೆ ಬರುತ್ತಿದ್ದ ವಿಮಾನ ಅಪಘಾತದಲ್ಲಿ ಅವರು ನಿಧನರಾದರು ಎಂದು ಬಿಬಿಸಿಯು ವಾರ್ತೆ ನುಡಿಯಿತು. ಆದರೆ ಅದರ ದೇಹದ ಅವಶೇಷಗಳು ದೀರ್ಘ ಅವಧಿಗೆ ದೊರೆಯಲಿಲ್ಲ. ಅವರು ಸತ್ತಿಲ್ಲ, ಇನ್ನೂ ಬದುಕಿದ್ದಾರೆ ಎಂಬ ಊಹೆಗಳು, ಸುದ್ದಿಗಳು ಎಲ್ಲೆಡೆಯಿಂದ ಕೇಳಿಬಂದವು. ಆದರೆ ಮುಂದೆ ಬಂದ ಸ್ವತಂತ್ರ ಭಾರತದ ಮೊದಲ ಕೆಲವು ಸರಕಾರಗಳು ಈ ಬಗ್ಗೆ ತನಿಖೆಗೆ ಆಗ್ರಹವನ್ನು ಮಾಡಲಿಲ್ಲ. ಎಲ್ಲಕ್ಕಿತ ಹೆಚ್ಚಾಗಿ ಇತಿಹಾಸದ ಪುಟಗಳಿಂದ ನೇತಾಜಿಯವರ ಹೆಸರನ್ನು ಅಳಿಸಿ ಹಾಕುವ ಎಲ್ಲಾ ಒಳಗಿನ ಪ್ರಯತ್ನಗಳೂ ನಡೆದವು.

ಆದರೆ ನೇತಾಜಿಯವರ ಹೋರಾಟ, ಆಸೀಮ ತ್ಯಾಗ ಮತ್ತು ದಿಟ್ಟತನವನ್ನು ಭಾರತ ದೇಶವು ಎಂದಿಗೂ ಮರೆಯಲಿಲ್ಲ! ದೇಶಪ್ರೇಮಿಗಳಿಗೆ ಅವರು ಇಂದಿಗೂ ರಿಯಲ್ ಹೀರೋ! ಇಂದು ಜನವರಿ 23ರಂದು ಅವರ ಜನ್ಮದಿನ. ಭಾರತದಲ್ಲಿ ಪರಾಕ್ರಮ ದಿನ. ಭಾರತ ಮಾತೆಯ ಶ್ರೇಷ್ಟವಾದ ವರಪುತ್ರನಿಗೆ ನಮ್ಮ ಕೋಟಿ ನಮನಗಳು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಸ್ವದೇಶಿ ಬ್ರಾಂಡ್‌ ರಾಯಭಾರಿ; ಪೆಪ್ಸಿ, ಕೋಕ್ ಬೇಡ; ಎಳನೀರು, ಮಜ್ಜಿಗೆ ಕುಡೀರಿ ಅಂತಿದ್ದರು ರಾಜೀವ್‌ ದೀಕ್ಷಿತ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

Raja Marga Column : ಸ್ಯಾಮ್‌ ಬಹಾದೂರ್;‌ ಭಾರತೀಯರು ನೋಡಲೇಬೇಕಾದ ಮಾಣೆಕ್‌ ಷಾ ಬಯೋಪಿಕ್

Raja Marga Column : ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಸ್ಯಾಮ್‌ ಮಾಣೆಕ್‌ ಷಾ ಅವರ ಬದುಕು ಭಾರತೀಯ ಸೇನಾ ಇತಿಹಾಸದ ಅನಾವರಣವೂ ಹೌದು. ಈಗ ಸ್ಯಾಮ್‌ ಬಹಾದ್ದೂರ್‌ ಸಿನಿಮಾ ಬಂದಿದೆ. ಇದು ಅವರ ಬದುಕಿನ ಅನಾವರಣ.

VISTARANEWS.COM


on

Sam Manek Shaw
Koo
RAJAMARGA Rajendra Bhat

ಸ್ವತಂತ್ರ ಭಾರತದ ಮೊಟ್ಟ ಮೊದಲ ಫೀಲ್ಡ್ ಮಾರ್ಷಲ್ ಎಂಬ ಕೀರ್ತಿ ಒಂದೆಡೆ! 1971ರ ಭಾರತ- ಪಾಕ್ ಯುದ್ಧವನ್ನು (Indo-pak war 1971) ಮುಖ್ಯಸ್ಥ ಎಂಬ ಶ್ರೇಯಸ್ಸು ಇನ್ನೊಂದೆಡೆ! ಏಳು ದಶಕಗಳ ಕಾಲ ಸೈನಿಕನಾಗಿ ಭಾರತವನ್ನು ಸೇವೆ ಮಾಡಿದ ದಾಖಲೆ ಮತ್ತೊಂದೆಡೆ! ತನ್ನ ಬದುಕಿನಲ್ಲಿ ಐದು ಯುದ್ಧಗಳಲ್ಲಿ ಭಾಗವಹಿಸಿದ ಸಾಹಸ ಇನ್ನೊಂದೆಡೆ. ಅದು ಫೀಲ್ಡ್ ಮಾರ್ಷಲ್‌ ಮಾಣೆಕ್ ಷಾ (Field Marshal Manek Shaw) ವ್ಯಕ್ತಿತ್ವ! (Raja Marga Column)

1914ರಲ್ಲಿ ಅಮೃತಸರದ ಪಾರ್ಸಿ ಕುಟುಂಬದಲ್ಲಿ ಹುಟ್ಟಿದ ಅವರ ತಂದೆ ವೈದ್ಯರಾಗಿದ್ದರು. ಮಗನಿಗೂ ಡಾಕ್ಟರ್‌ ಆಗುವ ಆಸೆ. ತನ್ನ 15ನೆ ವರ್ಷದಲ್ಲಿ ಅಪ್ಪನ ಮುಂದೆ ನಿಂತು ಗಟ್ಟಿಯಾಗಿ ‘ನನ್ನನ್ನು ಲಂಡನಿಗೆ ಕಳುಹಿಸಿಕೊಡಿ. ಮೆಡಿಸಿನ್ ಓದಿ ಬರುತ್ತೇನೆ’ ಎಂದಾಗ ಅಪ್ಪ ‘ ಹುಡುಗ, ನಿನಗೆ ಪ್ರಾಯ ತುಂಬಾ ಕಡಿಮೆ. ಅವಸರ ಮಾಡಬೇಡ’ ಅಂದರು.

ಸಿಟ್ಟಿನಲ್ಲಿ ಹುಡುಗನ ರಕ್ತ ಬಿಸಿ ಆಯ್ತು. ಅಪ್ಪನ ಮೇಲೆ ಸೇಡು ತೀರಿಸಿಕೊಳ್ಳಲು ಹುಡುಗ ಆರಿಸಿದ ದಾರಿ ಎಂದರೆ ಅಪ್ಪನಿಗೆ ಹೇಳದೆ ಹೋಗಿ ಸೈನ್ಯಕ್ಕೆ ಸೇರುವುದು! ಹಾಗೆ ಭಾರತೀಯ ಸೇನಾ ಕಾಲೇಜಿನ ತರಬೇತಿಗೆ ಹೋಗಿ ಸೇರಿದಾಗ ಸಾಮ್ ವಯಸ್ಸು ಬರೇ 18! ಅಲ್ಲಿಂದ ಆರಂಭಿಸಿ 94ನೇ ವಯಸ್ಸಲ್ಲಿ ತೀರಿ ಹೋಗುವತನಕ ಅವರು ತನ್ನ ಇಡೀ ಬದುಕನ್ನು ಸೇನೆಯ ಸೇವೆಯಲ್ಲಿಯೇ ಕಳೆದರು ಅಂದರೆ ಅದು ಭಾರತದ ಭಾಗ್ಯ. ಅವರದ್ದು ಅತ್ಯುನ್ನತ ದೇಶಪ್ರೇಮ ಮತ್ತು ಹೋರಾಟದ ಯಶೋಗಾಥೆ!

Sam Manek Shaw

ಒನ್ಸ್ ಅ ಸೋಲ್ಜರ್ ಇಸ್ ಆಲ್ವೇಸ್ ಅ ಸೋಲ್ಜರ್

ಫೀಲ್ಡ್ ಮಾರ್ಷಲ್ ಸಾಮ್ ಮಾಣೆಕ್ ಷಾ ಅವರ ಪ್ರಸಿದ್ಧ ಮಾತಿದು: ಒನ್ಸ್ ಅ ಸೋಲ್ಜರ್ ಇಸ್ ಆಲ್ವೇಸ್ ಅ ಸೋಲ್ಜರ್. ಅವರು ಬದುಕಿದ್ದೆ ಹಾಗೆ! ತನ್ನ ಸೇನಾ ಕರ್ತವ್ಯದ ಅವಧಿಯಲ್ಲಿ ಐದು ಯುದ್ಧಗಳಲ್ಲಿ ಹೋರಾಡಿದ ಇನ್ನೊಬ್ಬ ಸೈನಿಕ ಜಗತ್ತಿನಲ್ಲಿಯೇ ದೊರೆಯುವುದಿಲ್ಲ!

ಸ್ವಾತಂತ್ರ್ಯಕ್ಕೂ ಮೊದಲು ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಅವರು ಎರಡನೇ ವಿಶ್ವ ಯುದ್ಧದಲ್ಲಿ ಹೋರಾಡಿದರು. ಅವರ ಸಾಹಸವನ್ನು ಮೆಚ್ಚಿದ ಇಂಗ್ಲೆಂಡ್ ರಾಣಿ ಅವರಿಗೆ ಆಗಲೇ ಅತ್ಯುನ್ನತವಾದ ‘ಮಿಲಿಟರಿ ಕ್ರಾಸ್’ ಗೌರವ ನೀಡಿ ಸನ್ಮಾನಿಸಿದರು.

ಮುಂದೆ ಭಾರತವು ಸ್ವಾತಂತ್ರ್ಯ ಪಡೆದ ತಕ್ಷಣ ನಡೆದ ಭಾರತ- ಪಾಕ್ ಯುದ್ಧ, ಮುಂದೆ ನಡೆದ ಇಂಡಿಯಾ -ಚೀನಾ ಯುದ್ಧ, 1965ರ ಇಂಡಿಯಾ- ಪಾಕಿಸ್ತಾನ್ ಯುದ್ಧ ಮತ್ತು 1971ರ ಭೀಕರವಾದ ಭಾರತ- ಪಾಕಿಸ್ತಾನದ ಯುದ್ಧ ಇವುಗಳನ್ನು ಅವರು ಭಾರತಕ್ಕಾಗಿ ಹೋರಾಡಿದರು. ಅದರಲ್ಲಿಯೂ ಅವರು ಆರ್ಮಿ ಮುಖ್ಯಸ್ಥರಾಗಿ ಹೋರಾಡಿದ 1971ರ ಯುದ್ಧವು ಅವರನ್ನು ರಾಷ್ಟ್ರೀಯ ಹೀರೋ ಆಗಿ ಮಾಡಿತು.

Sam Manek shaw with Indira Gandhi
ಇಂದಿರಾ ಗಾಂಧಿ ಅವರ ಜತೆ ಮಾಣೆಕ್‌ ಷಾ

ಅದು 1971ರ ಬಾಂಗ್ಲಾ ವಿಮೋಚನಾ ಯುದ್ಧ

1971ರ ಭಾರತ ಪಾಕ್ ಯುದ್ಧವು ಮುಂದೆ ಬಾಂಗ್ಲಾದೇಶ ಎಂಬ ರಾಷ್ಟ್ರದ ಸ್ಥಾಪನೆಗೆ ಕಾರಣವಾಯಿತು ಎಂದು ನಾವೆಲ್ಲ ಓದಿಕೊಂಡ ಇತಿಹಾಸ. ಆ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಆಗಿದ್ದವರು ಇಂದಿರಾ ಗಾಂಧಿ. ಅವರು ಸೇನೆಯ ಅಭಿಪ್ರಾಯ ಕೇಳದೆ ಯುದ್ಧದ ಘೋಷಣೆಗೆ ಹೊರಟಾಗ ಎದ್ದು ನಿಂತು ಪ್ರತಿಭಟನೆ ಮಾಡಿದವರು ಸ್ಯಾಮ್.‌ ‘ನಮ್ಮ ಸೇನೆ ಯುದ್ಧಕ್ಕೆ ಮಾನಸಿಕವಾಗಿ ಸಿದ್ಧವಾಗಿಲ್ಲ. ತರಬೇತಿಯ ಕೊರತೆ ಇದೆ. ಈಗ ಯುದ್ಧ ಮಾಡಲು ಹೊರಟರೆ ನಾವು ಸೋಲುವುದು ಖಂಡಿತ. ನನಗೆ ಸಮಯ ಬೇಕು. ನನ್ನ ಯೋಜನೆಯ ಪ್ರಕಾರ ಯುದ್ಧವು ನಡೆಯಬೇಕು. ನಾನು ಭಾರತವನ್ನು ಗೆಲ್ಲಿಸಿಕೊಡುತ್ತೇನೆ. ಇಲ್ಲಾಂದರೆ ನನ್ನ ರಾಜೀನಾಮೆ ತೆಗೆದುಕೊಳ್ಳಿ!’ ಎಂದು ಗುಡುಗಿದರು.

ಅವರ ಹಟಕ್ಕೆ ಉಕ್ಕಿನ ಮಹಿಳೆ ಎಂದು ಆಗ ಕರೆಸಿಕೊಂಡ ಇಂದಿರಾ ಗಾಂಧಿ ಕೂಡ ಕರಗಿದರು. ಸ್ಯಾಮ್‌ ಯೋಜನೆಯ ಪ್ರಕಾರ ಯುದ್ಧವು ನಡೆದು ಭಾರತವು ಆ ಯುದ್ಧವನ್ನು ಭಾರೀ ದೊಡ್ಡದಾಗಿ ಗೆದ್ದಿತು. 12 ದಿನಗಳ ಯುದ್ಧದಲ್ಲಿ ಭಾರತವು ಗೆದ್ದು 94,000 ಪಾಕ್ ಸೈನಿಕರು ಅರೆಸ್ಟ್ ಆದರು. ಹತ್ತು ಮಿಲಿಯನ್ ನಿರಾಶ್ರಿತರ ಬಾಂಗ್ಲಾ ದೇಶದ ಸ್ಥಾಪನೆಗೆ ಕಾರಣವಾದ ಯುದ್ಧ ಅದು.

Sam Manek shaw  And vicky kaushal
ಸ್ಯಾಮ್‌ ಮಾಣೆಕ್‌ ಷಾ ಮತ್ತು ವಿಕ್ಕಿ ಕೌಶಲ್

ಬೇಗಂ ಕಂಡಾಗ ನನ್ನ ನೆನಪು ಮಾಡಿ!

ವಿಜಯದ ಉನ್ಮಾದದಲ್ಲಿ ಮೈಮರೆತ ಭಾರತೀಯ ಸೈನಿಕರು ಎದುರಾಳಿ ಗ್ರಾಮಗಳಿಗೆ ಹೊಂಚು ಹಾಕಿ ನುಗ್ಗುವ ಅಪಾಯ ಆಗ ಎದುರಾಗಿತ್ತು. ಆಗ ಸ್ಯಾಮ್‌ ತನ್ನ ಸೈನಿಕರಿಗೆ ಹೇಳಿದ ಮಾತು ತುಂಬಾ ಅದ್ಭುತ ಆಗಿತ್ತು.

“ಬೇಗಂ ಎದುರು ಸಿಕ್ಕರೆ ಅವರನ್ನು ಗೌರವಿಸಿ. ನಿಮ್ಮ ಮನಸ್ಸು ಚಂಚಲ ಆದರೆ ಎರಡೂ ಕೈಗಳನ್ನು ನಿಮ್ಮ ಪಾಂಟ್ ಕಿಸೆಯಲ್ಲಿ ಇಟ್ಟುಕೊಳ್ಳಿ ಮತ್ತು ಸ್ಯಾಮ್‌ ನೆನಪು ಮಾಡಿ!”

ಅವರ ಹಾಸ್ಯ ಪ್ರವೃತ್ತಿ, ರಾಷ್ಟ್ರಪ್ರೇಮ ಮತ್ತು ಹೋರಾಟದ ಮನೋವೃತ್ತಿಗೆ ನಮಗೆ ನೂರಾರು ನಿದರ್ಶನಗಳು ಅವರ ಬದುಕಿನಲ್ಲಿ ದೊರೆಯುತ್ತವೆ. ಆಗಿನ ಕಾಲದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಜೊತೆಗೆ ಸಲಿಗೆಯಿಂದ ಮಾತಾಡುವ ಗಟ್ಸ್ ಹೊಂದಿದ್ದ ಏಕೈಕ ವ್ಯಕ್ತಿ ಅಂದರೆ ಅದು ಸ್ಯಾಮ್‌ ಮಾಣೆಕ್ ಷಾ ಮಾತ್ರ!

ಭಾರತದ ಮೊಟ್ಟ ಮೊದಲ ಫೀಲ್ಡ್ ಮಾರ್ಷಲ್

ಮುಂದೆ ಭಾರತ ಸರಕಾರವು ಮೂರೂ ಸೇನೆಗಳ ಸಮನ್ವಯ ಮತ್ತು ಆಧುನಿಕತೆಗೆ ಮುಂದಾದಾಗ ಅತ್ಯುನ್ನತ ‘ಫೀಲ್ಡ್ ಮಾರ್ಷಲ್ ‘ ಎಂಬ ರ‍್ಯಾಂಕ್ ಸೃಷ್ಟಿಸಲು ಮುಂದಾಯಿತು. ಆಗ ಎಲ್ಲಾ ಅರ್ಹತೆ ಮತ್ತು ಅನುಭವಗಳ ಮೇಲೆ ಆಯ್ಕೆ ಆದದ್ದು ಇದೇ‌ ಸ್ಯಾಮ್‌ ಮಾಣೆಕ್ ಷಾ. ಆ ಪದವಿಗೆ ಏರಿದ ಮೊದಲ ಭಾರತೀಯ ಅಂದರೆ ಅದು ಅವರೇ. ಆಗ ಅವರು ಭಾರತೀಯ ಸೇನೆಯ ಆಧುನಿಕತೆಗೆ ಕೈಗೊಂಡ ಕ್ರಮಗಳು ಮತ್ತು ಪ್ರೇರಣಾ ಶಿಬಿರಗಳು ಮುಂದೆ ಭಾರತವನ್ನು ಗೆಲ್ಲಿಸುತ್ತಾ ಹೋದವು. ಸೇನಾ ಸಮವಸ್ತ್ರ ಧರಿಸಿ ಕೈಯ್ಯಲ್ಲಿ ಬಂಗಾರದ ಹಿಡಿ ಇರುವ ಊರು ಗೋಲು ಹಿಡಿದು ಅವರು ತರಬೇತಿಗೆ ಬಂದು ನಿಂತರೆ ಸೇನಾ ವಲಯದಲ್ಲಿ ಸಹಜವಾದ ಶಿಸ್ತು ಬಂದು ಬಿಡುತ್ತಿತ್ತು.

ಹೋರಾಟ, ಹೋರಾಟ ಮತ್ತು ಹೋರಾಟ!

ಯುದ್ಧ ಭೂಮಿಯಲ್ಲಿ ಮಾತ್ರ ಅವರು ಹೋರಾಟ ಮಾಡದೆ ಅವರು ಬದುಕಿನಲ್ಲಿ ಕೂಡ ಹಲವು ಹೋರಾಟಗಳನ್ನು ಮಾಡಿದರು. ಫೀಲ್ಡ್ ಮಾರ್ಷಲ್ ಹುದ್ದೆ ನೀಡಿದ ಭಾರತ ಸರಕಾರವು ಅದರ ಸಂಭಾವನೆ ನೀಡಲು ತಾರಮ್ಮಯ್ಯ ಮಾಡಿದಾಗ ಮೂರು ದಶಕಗಳ ಕಾಲ ಹೋರಾಡಿದರು. ಮುಂದೆ 2007ರಲ್ಲಿ ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಸ್ಯಾಮ್‌ ಅವರನ್ನು ವೆಲ್ಲಿಂಗ್ಟನ್ ನಗರದಲ್ಲಿ ಭೇಟಿ ಆಗಿ ಸಂಭಾವನೆಯ ಬಾಕಿ 1.3 ಕೋಟಿಯ ಚೆಕ್ ನೀಡಿದ ನಂತರವೇ ಜ್ವಾಲಾಮುಖಿ ತಣ್ಣಗಾದದ್ದು! 2008ರಲ್ಲಿ ತನ್ನ 94ನೆ ವಯಸ್ಸಿನಲ್ಲಿ ಅವರು ನಿಧನರಾದರು.

Sam Bahadur film  Vicky kaushal

ಇದನ್ನೂ ಓದಿ : Raja Marga Column : ಎಷ್ಟೊಂದು ಕಷ್ಟ ಆ ಜೀವಕ್ಕೆ; ಲೀಲಮ್ಮನಿಗೆ ಸ್ವರ್ಗದಲ್ಲಾದರೂ ಸುಖ ಸಿಗಲಿ!

‘ಸ್ಯಾಮ್‌ ಬಹದ್ದೂರ್’ ಅವರದ್ದೇ ಬಯೋಪಿಕ್ ಸಿನೆಮಾ ಬಂದಿದೆ

Sam Bahadur film  Vicky kaushal

ಫೀಲ್ಡ್ ಮಾರ್ಷಲ್ ಸ್ಯಾಮ್‌ ಮಾಣೆಕ್ ಷಾ ಅವರ ಬದುಕಿನ ಹೋರಾಟದ ಕಥೆಗಳನ್ನು ಆಧಾರವಾಗಿ ಇಟ್ಟುಕೊಂಡು
‘ಸ್ಯಾಮ್‌ ಬಹಾದ್ದೂರ್’ ಎಂಬ ಹಿಂದೀ ಸಿನಿಮಾ ಈಗ ತೆರೆಗೆ ಬಂದಿದೆ. ಮೇಘನಾ ಗುಲ್ಜಾರ್ ಈ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಈ ರೀತಿಯ ಪಾತ್ರಗಳಿಗೆ ತುಂಬಾ ಚೆನ್ನಾಗಿ ಸೂಟ್ ಆಗುವ ವಿಕ್ಕಿ ಕೌಶಲ್ ಎಂಬ ನಟ ಸ್ಯಾಮ್‌ ಪಾತ್ರ ಮಾಡಿದ್ದಾರೆ. ಭಾರತೀಯ ಮಿಲಿಟರಿ ಇತಿಹಾಸದ ಅದ್ಭುತ ಅನಾವರಣವು ಈ ಸಿನಿಮಾದಲ್ಲಿ ಆಗಿದೆ. ಹಾಗೆಯೇ ಫೀಲ್ಡ್ ಮಾರ್ಷಲ್ ಸಾಮ್ ಮಾಣೆಕ್ ಷಾ ಅವರ ವ್ಯಕ್ತಿತ್ವ ಕೂಡ. ಭಾರತೀಯರು ನೋಡಲೇ ಬೇಕಾದ ಸಿನಿಮಾ ಅದು.

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ‘ಡೀಪ್ ಫೇಕ್’ ತಂತ್ರಜ್ಞಾನದಿಂದ ಸೆಕ್ಸ್‌ಟಾರ್ಷನ್

ಡೀಪ್‌ಫೇಕ್ (Deep fake) ತಂತ್ರಜ್ಞಾನ ಸುಧಾರಿತ ಆಳವಾದ ಕಲಿಕೆಯ ತಂತ್ರಗಳನ್ನು ಬಳಸಿಕೊಂಡು ನಿಮ್ಮ ಆಡಿಯೋ, ವಿಡಿಯೋ ಮತ್ತು ಚಿತ್ರಗಳನ್ನು ತನಗೆ ಬೇಕಾದಂತೆ ವಿಕೃತವಾಗಿ (Sextortion) ಬದಲಿಸುತ್ತದೆ. ಹಾಗಾಗಿ ಈಗಲೇ ಸೋಶಿಯಲ್‌ ಮೀಡಿಯಾದಲ್ಲಿ (Social media) ನಿಮ್ಮ ಫೊಟೋ, ವಿಡಿಯೋ ಸರಿಯಾಗಿ ಭದ್ರ ಮಾಡಿಕೊಳ್ಳಿ.

VISTARANEWS.COM


on

sextortion
Koo
cyber safty logo

ಸಾಮಾಜಿಕ ಜಾಲತಾಣಗಳಲ್ಲಿ (social media) ಹಂಚಿಕೊಳ್ಳುವ ನಮ್ಮ ಫೋಟೊ, ವೀಡಿಯೊಗಳನ್ನು ಕ್ರಿಮಿನಲ್‌ಗಳು ವಿರೂಪಗೊಳಿಸಿ ದುರುಪಯೋಗಿಸುವ ಬಗ್ಗೆ ಕಳೆದೆರಡು ವಾರ ಓದಿರಬಹುದು. ಜೊತೆಗೆ ನೀವು ಹಂಚಿಕೊಳ್ಳುವುದನ್ನು ಯಾರೆಲ್ಲಾ ನೋಡಬಹುದು ಎಂದು ನಿಯಂತ್ರಿಸುವುದೂ ನಿಮ್ಮ ಕೈಯಲ್ಲಿಯೇ ಇರುವ ಬಗ್ಗೆಯೂ ತಿಳಿಸಿದ್ದೆ. ಹಾಗೆ ಎಲ್ಲರೂ ನಿಮ್ಮ ಫೇಸ್‌ಬುಕ್, ಇನ್ಸ್‌ಟಾಗ್ರಾಂ ಖಾತೆಗಳನ್ನು ಭದ್ರಗೊಳಿಸಿಕೊಂಡಿದ್ದೀರಾ? ನಿಮ್ಮ ಸಂತೋಷದ ಕ್ಷಣಗಳನ್ನು ನೆನಪಿಸಲು ಇರುವ ಫೋಟೊ ಮತ್ತು ವೀಡಿಯೊಗಳು ನಿಮಗೆ ದುಃಸ್ವಪ್ನವಾಗಿ ಕಾಡಬಾರದಲ್ವಾ?

ಈಗಂತೂ ತಂತ್ರಜ್ಞಾನದ ದಾಪುಗಾಲಿನ ಓಟದಿಂದಾಗಿ ಎಲ್ಲಾಕಡೆ ಅನುಕ್ಷಣವೂ ಹೊಸತನ. ನಾವು ವ್ಯವಹರಿಸುವ ರೀತಿಯಿರಬಹದು, ಸಂವಹಿಸುವ ವಿಧಾನವಿರಬಹುದು. ಎಲ್ಲಾ ಬದಲಾಗುತ್ತಲೇ ಇದೆ. ಬದಲಾವಣೆ ಜಗದ ನಿಯಮ. ಆದರೆ ಸೈಬರ್‌ ಲೋಕದಲ್ಲಂತೂ ಬದಲಾವಣೆಯೇ ನಿತ್ಯ, ನಿರಂತರ. ಹಾಗೆಯೇ ಸೈಬರ್ ಕ್ರೈಮ್‌ಗಳೂ (cyber crime) ದಿನದಿಂದ ದಿನಕ್ಕೆ ಹೆಚ್ಚಿನ ಮಜಲಿಗೆ ಹೋಗುತ್ತಿವೆ.

ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ, ಸೈಬರ್ ಅಪರಾಧಿಗಳು ಉಕ್ರೇನಿಯನ್ ಟೆಲಿವಿಷನ್ ಚಾನೆಲ್ ಅನ್ನು ಹ್ಯಾಕ್ ಮಾಡಿದರು ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಶರಣಾಗುವುದನ್ನು ತೋರಿಸಿದರು. ಡೀಪ್ ಫೇಕ್ (Deep fake) ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ವಿಡಿಯೋವನ್ನು ರಚಿಸಲಾಗಿದೆ.

ಕೆಲವು ವರ್ಷಗಳ ಹಿಂದೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮನೋಜ್ ತಿವಾರಿ ಹರ್ಯಾನ್ವಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುವ ಆಳವಾದ ನಕಲಿ ವೀಡಿಯೊವನ್ನು ರಚಿಸಲಾಗಿದೆ ಎಂದು ವರದಿಯಾಗಿದೆ. 2020ರಲ್ಲಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಈ ವಿಡಿಯೋವನ್ನು ವಿವಿಧ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಪ್ರಸಾರ ಮಾಡಲಾಗಿತ್ತು.

ಕಳೆದ ವಾರ ನೀವೂ ಗಮನಿಸಿರಬಹುದು. ವಿವಿಧ ಆಂಗ್ಲ ಭಾಷಾ ದಿನಪತ್ರಿಕೆಗಳಲ್ಲಿ ರಾರಾಜಿಸಿದ ಶೀರ್ಷಿಕೆ: ಉತ್ತರಪ್ರದೇಶದಲ್ಲಿ ಸೆಕ್ಸ್‌ಟಾರ್ಷನಿಸ್ಟ್‌ಗಳು (Sextortion) ನಿವೃತ್ತ ಐಪಿಎಸ್ ಅಧಿಕಾರಿಯ ಡೀಪ್‌ಫೇಕ್ ಅನ್ನು ಬಳಸಿ ಹಿರಿಯ ನಾಗರಿಕರನ್ನು ವಂಚಿಸಿದ ಪ್ರಕರಣ.

ಮೊದಲಿಗೆ ಈ ಸೆಕ್ಸ್‌ಟಾರ್ಷನಿಸ್ಟ್‌ಗಳೆಂದರೆ ಯಾರು ಅಂತ ತಿಳಿಯೋಣ. ಯಾರೊಬ್ಬರ ಖಾಸಗಿ ಲೈಂಗಿಕ ವಿಷಯವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಹಣವನ್ನು ಸುಲಿಗೆ ಮಾಡುವವರನ್ನು ಸೆಕ್ಸ್‌ಟಾರ್ಷನಿಸ್ಟ್‌ ಎನ್ನುತ್ತಾರೆ. ಈ ಅಪರಾಧಿಗಳ ಏಕಮಾತ್ರ ಗುರಿ ಸುಲಭವಾಗಿ “ಹಣ” ಮಾಡುವುದು. ಅವರು ನಿಮ್ಮ ಸಾಮಾಜಿಕ ಜೀವನವನ್ನೇ ಬುಡಮೇಲು ಮಾಡುವ ಬೆದರಿಕೆಗಳನ್ನು ಒಡ್ದಿದಾಗ ನೀವು ಅವರ ಎಲ್ಲಾ ಬೇಡಿಕೆಗಳನ್ನು ಒಪ್ಪಿ ಹಣ ಕೊಡುತ್ತೀರಿ. ಇದು ಕೂಡ ಒಂದು ರೀತಿಯ ಲೈಂಗಿಕ ದೌರ್ಜನ್ಯ. ಭೌತಿಕವಾಗಿಯಲ್ಲದಿದ್ದರೂ ಮಾನಸಿಕವಾಗಿ ನೀವು ದೌರ್ಜನ್ಯಕ್ಕೆ ಒಳಗಾದವರ ಹಾಗೆ ಕ್ಷೋಭೆಗೊಳಗಾಗುತ್ತೀರಿ.‌

ಒಮ್ಮೆ ನೀವು ಅವರಿಗೆ ಹೆದರಿ ಹಣ ಕೊಟ್ಟರೆ ಮುಗೀತು. ನಿಮ್ಮ ಮೈಗೆ ಹತ್ತಿ ಅಂಟಿಕೊಂಡ ಜಿಗಣೆಯಂತೆ ನಿಮ್ಮಿಂದ ಹಣ ಹೀರುತ್ತಲೇ ಇರುತ್ತಾರೆ. ಅವರ ಬಳಿ ಇರುವ ನಿಮ್ಮ ರಹಸ್ಯ ಬಯಲಾಗುವ ಭಯದಿಂದ ನೀವು ಅವರ ಬಲೆಯಿಂದ ಹೊರಬರಲಾರದೆ ನರಳುತ್ತೀರಿ.

ಈಗ ಪ್ರಕರಣಕ್ಕೆ ಬರೋಣ. ಬಲೆಗೆ ಬಿದ್ದ ಹಿರಿಯ ನಾಗರೀಕರ ಸೆಕ್ಸ್‌ನಲ್ಲಿ ನಿರತರಾಗಿರುವಂತಿರುವ ಚಿತ್ರವನ್ನು ಬಳಸಿ
ಪೊಲೀಸ್ ಅಧಿಕಾರಿಯಂತೆ ಮಾತಾಡಿ ಕಾನೂನು ಕ್ರಮಗಳ ಬಗ್ಗೆ ಹೆದರಿಸಿದ್ದಾರೆ. ಪಾಪ, ವೃದ್ಧರು ತಮ್ಮ ಚಿತ್ರವೇ ಅಲ್ಲದಿದ್ದರೂ ಮರ್ಯಾದೆಗೆ ಅಂಜಿದರು ಜೊತೆಗೆ ಮಾತಾಡಿದವರು ನಿಜವಾದ ಪೋಲೀಸ್ ಅಧಿಕಾರಿಯೇ ಎಂದು ನಂಬಿದರು. ಅವರು ಕೇಳಿದ ಹಣವನ್ನು ಹೇಳಿದ ಹಾಗೆ ಹಲವು ಬಾರಿ ಪಾವತಿಸಿದರು. ನಿಜವಾದ ಪೊಲೀಸ್ ಅಧಿಕಾರಿಗಳು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಡೀಪ್‌ಫೇಕ್ ತಂತ್ರಜ್ಞಾನದ ನೆರವಿನಿಂದ ಸೈಬರ್ ವಂಚನೆಯು ಅಪಾಯಕಾರಿ ಹೊಸ ಆಯಾಮವನ್ನು ಪಡೆದುಕೊಂಡಿರುವುದನ್ನು ಈ ಪ್ರಕರಣವು ಗುರುತಿಸುತ್ತದೆ. ಡೀಪ್‌ಫೇಕ್ ತಂತ್ರಜ್ಞಾನ ಸುಧಾರಿತ ಆಳವಾದ ಕಲಿಕೆಯ (advanced deep learning) ತಂತ್ರಗಳನ್ನು ಬಳಸಿಕೊಂಡು ಆಡಿಯೋ, ವಿಡಿಯೋ ಮತ್ತು ಚಿತ್ರಗಳನ್ನು ಬದಲಿಸುವ ಡಿಜಿಟಲ್ ಕುಶಲತೆಯನ್ನು ಸೂಚಿಸುತ್ತದೆ. ಅದಕ್ಕೆ ನಿಮ್ಮ ಫೊಟೋ, ವಿಡಿಯೋಗಳು ಯಾರು ನೋಡಬಹುದು ಎಂದು ಸರಿಯಾಗಿ ಭದ್ರ ಮಾಡಿಕೊಳ್ಳಿ ಅಂತ ಕಳೆದೆರಡು ವಾರಗಳಿಂದ ಹೇಳ್ತಿರೋದು.

Rashmika Mandanna Deepfake Video Goes Viral

ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಡೀಪ್‌ಫೇಕ್‌ಗಳು ಮತ್ತು ತಪ್ಪು ಮಾಹಿತಿಗಳ ಪ್ರಸರಣವನ್ನು ಎದುರಿಸಲು ನಿಯಮಾವಳಿಗಳನ್ನು ರೂಪಿಸುವ ಸರ್ಕಾರದ ಉದ್ದೇಶವನ್ನು ಘೋಷಿಸಿದ ಸಮಯದಲ್ಲಿ ಈ ಘಟನೆ ನಡೆದಿದೆ. ನಟಿ ರಶ್ಮಿಕಾ ಮಂದಣ್ಣ ಒಳಗೊಂಡ ಡೀಪ್‌ಫೇಕ್ ವೀಡಿಯೊ ಪ್ರಸಾರವಾದ ನಂತರ ಸಚಿವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಕಂಪನಿಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಫೋಟೊಗಳು, ಸೆಲ್ಫಿಗಳು, ಮತ್ತು ರೀಲ್ಸ್‌ಗಳ ನಿಯಂತ್ರಣ

ಕಳೆದ ತಿಂಗಳ ಆರಂಭದಲ್ಲಿ ಜಿ20 ರಾಷ್ಟ್ರಗಳ ವರ್ಚುವಲ್ ಶೃಂಗಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ‘ಕೃತಕ ಬುದ್ಧಿಮತ್ತೆಯ (Artificial Intelligence/AI) ಋಣಾತ್ಮಕ ಪರಿಣಾಮಗಳ’ ಬಗ್ಗೆ ಗಮನ ಸೆಳೆದರು ಮತ್ತು ಕೃತಕ ಬುದ್ಧಿಮತ್ತೆಯ ಸುರಕ್ಷಿತ ನಿಯೋಜನೆಯನ್ನು ಖಚಿತಪಡಿಸಿಕೊಳ್ಳಲು ಜಾಗತಿಕ ನಿಯಂತ್ರಣಗಳನ್ನು ಬೆಳೆಸುವ ಭಾರತದ ಬದ್ಧತೆಯ ಬಗ್ಗೆ ಹೇಳಿದ್ದರು. ಸಮಾಜವನ್ನು ಅದರ ಸಂಭಾವ್ಯ ಅಪಾಯಗಳಿಂದ ರಕ್ಷಿಸುವ ಜೊತೆಗೆ ಕೃತಕ ಬುದ್ಧಿಮತ್ತೆಯ ಉಪಯೋಗವೂ ಜನಸಾಮಾನ್ಯರಿಗೆ ದೊರಕಬೇಕು ಎಂದು ಹೇಳಿದ್ದರು.

ಇತ್ತೀಚೆಗೆ ನಮ್ಮ ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಕೂಡ ‘ಡೀಪ್ ಫೇಕ್ ಸಮಸ್ಯೆ’ ಯ ಬಗ್ಗೆ ಮಾತಾಡುತ್ತಾ ಪೊಲೀಸರು ತಮ್ಮ ತಂತ್ರಜ್ಞಾನವನ್ನು ನವೀಕರಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ವಿಶ್ವದಾದ್ಯಂತ ಎಲ್ಲಾ ನಾಯಕರೂ ಹೊಸ ತಂತ್ರಜ್ಞಾನದಿಂದ ಶುರುವಾದ ತೊಂದರೆಯನ್ನು ಬಗೆಹರಿಸಲು ಒತ್ತು ಕೊಡ್ತಿದ್ದಾರೆ. ಆದರೆ ಯಾರೂ ಆ ತಂತ್ರಜ್ಞಾನವನ್ನೇ ಕೈಬಿಡುವ ಮಾತು ಆಡ್ತಿಲ್ಲ ಎನ್ನುವುದು ಮುಂದಿನ ದಾರಿಯ ಬಗ್ಗೆ ಬರವಸೆ ಮೂಡಿಸುತ್ತದೆ. ತಂತ್ರಜ್ಞಾನದ ದುರುಪಯೋಗವನ್ನು ನಿಯಂತ್ರಿಸಲು ಆಗಲಿಲ್ಲ ಆಂತ ಅದರ ಉಪಯೋಗವನ್ನೇ ನಿಲ್ಲಿಸುವುದು ನೆಗಡಿ ಜಾಸ್ತಿಯಾಯಿತು ಅಂತ ಮೂಗು ಕೊಯ್ಯಿದುಕೊಂಡಂತೆ ಅಲ್ಲವೇ?

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ನಿಮ್ಮ ಸೋಶಿಯಲ್‌ ಮೀಡಿಯಾದಿಂದಲೇ ನಿಮ್ಮ ಸುರಕ್ಷತೆಗೆ ಅಪಾಯ!

Continue Reading

ಅಂಕಣ

ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

ಮಾನವ ಜನ್ಮವು ಪರಮಾತ್ಮನ ಕೃಪೆ. ಪರಮಾತ್ಮನ ಕೃಪೆಯಿಂದ ದೊರಕಿರುವ ಈ ಮಾನವ ಜನ್ಮವನ್ನು ವ್ಯರ್ಥವಾಗಿ ಕಳೆದುಕೊಳ್ಳಬಾರದೆಂಬ ಕಳಕಳಿಯಿಂದ ಗುರುವರ್ಯರಾದ ತಾತಯ್ಯನವರು ಈ ಭಕ್ತಿತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ.

VISTARANEWS.COM


on

kaivara tatayya
Koo
jayaram-column

ಕೈವಾರದ ತಾತಯ್ಯನವರು ಮಾನವ ಜನ್ಮದ ಶ್ರೇಷ್ಠತೆಯನ್ನು ಹಲವಾರು ಬೋಧನೆಗಳಲ್ಲಿ ಎತ್ತಿಹಿಡಿದಿದ್ದಾರೆ. ನರಜನ್ಮದಲ್ಲಿ ಮಾತ್ರ ಮೋಕ್ಷವನ್ನು ಕಂಡುಕೊಳ್ಳಲು ಸಾಧ್ಯವಿದೆ. ನಿನ್ನನ್ನು ನೀನು ತಿಳಿದು ಆತ್ಮಜ್ಞಾನಿಯಾಗು. ಮತಿಹೀನನಾಗಿ ವರ್ತಿಸುತ್ತಾ, ಇಂದ್ರಿಯಗಳನ್ನು ನಿಗ್ರಹಿಸದಿದ್ದರೆ ಅಧ್ಯಾತ್ಮವಿದ್ಯೆ ಅಂಟುವುದಿಲ್ಲ. ಹೀಗೆ ಹಲವಾರು ಮಹತ್ವದ ವಿಷಯಗಳನ್ನು ತಾತಯ್ಯನವರು ಸರಳವಾದ ಮಾತುಗಳಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬೋಧಿಸಿದ್ದಾರೆ.

ಮಾನವ ಜನ್ಮವು ಪರಮಾತ್ಮನ ಕೃಪೆ. ಪರಮಾತ್ಮನ ಕೃಪೆಯಿಂದ ದೊರಕಿರುವ ಈ ಮಾನವ ಜನ್ಮವನ್ನು ವ್ಯರ್ಥವಾಗಿ ಕಳೆದುಕೊಳ್ಳಬಾರದೆಂಬ ಕಳಕಳಿಯಿಂದ ಗುರುವರ್ಯರಾದ ತಾತಯ್ಯನವರು ಈ ಭಕ್ತಿತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ. ಪ್ರತಿಯೊಂದು ಜೀವಿಗೂ ಮರಣವಿದೆ. ಇದು ಸತ್ಯ. ಮರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮರಣದ ನಂತರ ಹುಟ್ಟುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿದೆ. ಈ ಚಿಂತನೆಯನ್ನು ತಾತಯ್ಯನವರು ಮುಂದಿಡುತ್ತಿದ್ದಾರೆ.

ಯೆಂತ ಕಾಲಮೈನ ಯೆರುಕ ಲೇಕನು ಜೀವಿ
ಚಚ್ಚಿ ಪುಟ್ಟುಚುನುಂಡು ಸಹಜಮಿದಿಯು

ತಾತಯ್ಯನವರು ಈ ಪದ್ಯದಲ್ಲಿ ಮಾನವರಿಗೆ ನೇರವಾಗಿ ತತ್ವಬೋಧೆಯನ್ನು ಮಾಡಿದ್ದಾರೆ. ಎಷ್ಟೇ ಕಾಲ ಕಳೆದರೂ ಅಜ್ಞಾನದಿಂದ ಕೂಡಿರುವ ಜೀವಿಯು ಮತ್ತೆ ಮತ್ತೆ ಸತ್ತು ಹುಟ್ಟುತ್ತಿರುತ್ತಾನೆ. ಇದು ಸಹಜವಾದ ಪ್ರಕ್ರಿಯೆ. ಕಾರಣವೆಂದರೇ ಅಜ್ಞಾನ. ಯಾರಿಗಾದರೇ ಕೇವಲ ಪ್ರಾಪಂಚಿಕವಾದ ವ್ಯವಹಾರದಲ್ಲಿ ಮಾತ್ರ ಆಸಕ್ತಿ ಇರುತ್ತದೋ ಅವರು ಅಜ್ಞಾನಿಗಳು. ಮಾನವಜನ್ಮದಲ್ಲಿ ಹುಟ್ಟಿದ ಮೇಲೆ ಪರಲೋಕದ ಚಿಂತನೆಯನ್ನು ಮಾಡುತ್ತಿರಬೇಕು. ಅಜ್ಞಾನಿಯಾಗದೇ ಆತ್ಮಜ್ಞಾನಿಯಾಗಿ ಈ ಸಹಜಸ್ಥಿತಿಯಿಂದ ತಪ್ಪಿಸಿಕೊಂಡು ಪಾರಾಗು ಎನ್ನುತ್ತಿದ್ದಾರೆ ತಾತಯ್ಯನವರು.

ಜನನ ಮರಣಮುಲೆನ್ನೋ..

ಮಾನವನಾಗಿ ಹುಟ್ಟುವುದಕ್ಕೆ ಮೊದಲು ಏನಾಗಿದ್ದೇವೋ? ಯಾರಿಗೂ ಗೊತ್ತಿಲ್ಲ. ಮಾನವ ಜನ್ಮದಲ್ಲಿರುವ ಆತ್ಮ ಹಿಂದೆ ಯಾವ ಯಾವ ಜೀವರಾಶಿಗಳಲ್ಲಿ ಸೇರಿಕೊಂಡು ಜೀವಿಸಿತ್ತೋ? ಯಾರಿಗೂ ಗೊತ್ತಿಲ್ಲ. ಇದರ ಮನವರಿಕೆಯನ್ನು ತಾತಯ್ಯನವರು ಮಾಡಿಕೊಡುತ್ತಿದ್ದಾರೆ.

ಜನನಮರಣಮುಲೆನ್ನೊ ಜಾತುಲೆನ್ನಾಯೆನೋ
ತಲಿದಂಡ್ರುಲೆಂದರೋ ತನುವುಲೆನ್ನೋ
ಇಪ್ಪುಡು ಧರಲೋನ ಯಿಟುವಂಟಿ ಮಾನವ
ದೇಹಂಬು ನಿರ್ಮಿಂಚೆ ಮಾಧವುಂಡು||

ಈವರೆಗೆ ಅದೆಷ್ಟು ಸಲ ಜನನ ಮರಣಗಳಾದವೋ, ಅದೆಷ್ಟು ಜಾತಿಗಳಾದವೋ, ಅದೆಷ್ಟು ಮಂದಿ ತಾಯಿತಂದೆಗಳನ್ನು ಪಡೆದದ್ದಾಯಿತೋ, ಅದಕ್ಕೆ ಲೆಕ್ಕವೇ ಇಲ್ಲ. ಎಷ್ಟೆಷ್ಟು ಶರೀರಗಳನ್ನು ಪಡೆದು ಮಣ್ಣುಗೂಡಿಸಿದ್ದಾಯಿತೋ, ಲೆಕ್ಕವಿಲ್ಲ. ಹಿಂದಿನ ಜನ್ಮಗಳು ಏನೇ ಇರಲಿ, ಕಳೆದು ಹೋಯಿತು. ಚಿಂತೆ ಮಾಡಬೇಡ. ಈಗಲಾದರೂ, ಜ್ಞಾನ ಸಂಪಾದನೆಗೆ ಅವಕಾಶವಿರುವ ವಿವೇಕದಿಂದ ಕೂಡಿರುವ ಮಾನವಜನ್ಮ ಬಂದಿದೆ. ಲೋಕೇಶ್ವರನಾದ ಮಾಧವನು ಇಂತಹ ಶ್ರೇಷ್ಠವಾದ ಮಾನವದೇಹವನ್ನು ಕೊಟ್ಟಿದ್ದಾನೆ, ಹಾಳುಮಾಡಿಕೊಳ್ಳಬೇಡ ಎಂದು ಎಚ್ಚರಿಸುತ್ತಿದ್ದಾರೆ ತಾತಯ್ಯನವರು.

ಭೂಮಿಯಲ್ಲಿ ಇಂತಹ ಮಾನವದೇಹವನ್ನು ಪಡೆದ ಮೇಲೆ ಮಾಡಬೇಕಾದ ಕರ್ತವ್ಯವೇನು? ಅದರ ಫಲಶ್ರುತಿಯೇನು? ಪದ್ಯದ ಕೊನೆಯಲ್ಲಿ ಈ ರೀತಿಯಾಗಿ ಬೋಧಿಸುತ್ತಿದ್ದಾರೆ ತಾತಯ್ಯನವರು.
ಹಿಂದೆ ಮಾಡಿದ ತಪ್ಪನ್ನು ಮಾಡದಿರು..

ನಮ್ಮ ಕಣ್ಣ ಮುಂದೆಯೇ ಮಾನವ ದೇಹವಿಲ್ಲದ ಅದೆಷ್ಟೋ ಜಂತುಗಳಿವೆ. ಆದರೆ ಈ ಜಂತುಗಳಿಗೆ ಮಾನವನಿಗಿರುವಷ್ಟು ಜ್ಞಾನವಿಲ್ಲ, ಅನುಕೂಲಗಳಿಲ್ಲ. ಆ ಜಂತುಗಳು ಪರಮಾತ್ಮನಾದ ಜಗದೀಶ್ವರನ ಸ್ಮರಣೆ ಮಾಡುವುದಿಲ್ಲ. ಮಾನವನಾಗಿ ಹುಟ್ಟಿದ ಮೇಲೆ ನೀನು ಪರಮಾತ್ಮನ ಸ್ಮರಣೆಯನ್ನು ಮಾಡದಿದ್ದರೆ ಏನು ಪ್ರಯೋಜನ? ಮಾನವಜನ್ಮದ ಸಾರ್ಥಕವೇನು? ಆ ಜಂತುವಿಗೂ ಮಾನವರಿಗೂ ಇರುವ ವ್ಯತ್ಯಾಸವೇನು? ತಾತಯ್ಯನವರು ಹೀಗೆ ಬೋಧಿಸಿದ್ದಾರೆ.

ಮುನುಪಟಿ ವಿಧಂಬುನ ಮೂರ್ಖುಡೈ ಪೋವಲದು
ಜಗದೀಶ್ವರುನಿ ಜಪಮು ಚೇಸಿ ನೀವು
ಪಟ್ಟು ವದಲಕ ಪರಮಂದೆ ದೃಷ್ಟಿವುಂಚಿ
ಚಾವು-ಪುಟ್ಟು ಲೇನಿ ಸೌಖ್ಯಸಂಪದಲನುಂಡು||

kaivara tatayya2

ಹಿಂದಿನ ಜನ್ಮಗಳಲ್ಲಿ ಮಾಡಿದದಂತೆ ಈ ಸಲವೂ ಮೂರ್ಖನಾಗಿ ಹೊರಡುವವನಾಗಬೇಡ. ಮಾನವಜನ್ಮವನ್ನು ಎಷ್ಟೋ ಪೂರ್ವಜನ್ಮಗಳ ಪುಣ್ಯದಿಂದ ಪಡೆದಿದ್ದೀಯ. ಈ ಸದಾವಕಾಶವನ್ನು ಕಳೆದುಕೊಳ್ಳಬೇಡ. ಪರಮಾತ್ಮನಾದ ಜಗದೀಶ್ವರನ ಜಪಸ್ಮರಣೆಯನ್ನು ಮಾಡು. ಪಟ್ಟು ಬಿಡದೆ ಪರಮಲಕ್ಷ್ಯವಾಗಿರುವ ಮೋಕ್ಷದಲ್ಲೇ ದೃಷ್ಟಿಯನ್ನಿಟ್ಟು, ಸಾವು-ಹುಟ್ಟುಗಳಿಲ್ಲದ ಸೌಖ್ಯ ಸಂಪತ್ತುಗಳನ್ನು ಅನುಭವಿಸು ಎನ್ನುತ್ತಿದ್ದಾರೆ ತಾತಯ್ಯನವರು.

“ಪಟ್ಟು ವದಲಕ ಮರಮಂದೆ ದೃಷ್ಠಿವುಂಚಿ” ತಾತಯ್ಯನವರು ಮಾನವರಿಗೆ ನೀಡುತ್ತಿರುವ ಎಚ್ಚರಿಕೆ ಇದು. ಪರಮಾತ್ಮನ ಸ್ಮರಣೆ ಮಾಡು, ಇದು ತಾತಯ್ಯನವರು ಬೋಧಿಸುತ್ತಿರುವ ಉಪದೇಶ. ದೃಢ ಸಂಕಲ್ಪದಿಂದ, ಹಿಡಿದ ಪಟ್ಟು ಬಿಡದೆ ಪರಮಾತ್ಮನ ಸ್ಮರಣೆಯನ್ನು ಮಾಡಬೇಕು ಎನ್ನುತ್ತಿದ್ದಾರೆ. ಉದಾಸೀನದ ಸ್ಮರಣೆಯಿಂದ ಪ್ರಯೋಜನವಿಲ್ಲ. ಆದುದರಿಂದ ಜಪಸ್ಮರಣೆಯಲ್ಲಿ ಸಡಿಲವಾಗದೆ ಬಿಗಿಯಾದ, ದೃಢವಾದ ಹಿಡಿತವಿರಬೇಕು.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ನವರಾತ್ರಿ ವಿಶೇಷ: ಅಖಿಲಾಂಡೇಶ್ವರಿಯ ವರ್ಣನೆ

ಪರದಲ್ಲಿ ದೃಷ್ಠಿ ಇರಿಸಬೇಕೆಂದು ಹೇಳಿದ್ದಾರೆ. ಇದು ಬಹಳ ಮುಖ್ಯವಾದುದು. ಲೌಕಿಕ ಭೋಗಗಳನ್ನು ಬಯಸಿ ಮಾಡುವ ಅನೇಕ ಜಪಗಳು ಶಾಶ್ವತವಾದ ಸುಖಗಳನ್ನು ನೀಡುವುದಿಲ್ಲ. ಅಜ್ಞಾನಿ ಜನರು ಧನಕನಕ ಭೋಗಗಳೆಂಬ ಅಲ್ಪಲಾಭಕ್ಕೆ ಮರುಳಾಗಿ ಅದನ್ನೇ ಸುಖವೆಂದು ಭ್ರಮಿಸುತ್ತಾರೆ. ಆದರೆ ಸ್ವಲ್ಪವೇ ಕಾಲದ ನಂತರ ಭೋಗವು ರೋಗವಾಗಿ ಪರಿಣಮಿಸುತ್ತದೆ. ಕೊನೆಗೆ ತಮ್ಮ ತಪ್ಪಿನ ಅರಿವಾಗುತ್ತದೆ. ನೀನು ಹಾಗಾಗಬೇಡ, ಜ್ಞಾನಿಯಾಗಿ ಹುಟ್ಟುಸಾವುಗಳಿಲ್ಲದ ಭಗವಂತನ ಸಾನ್ನಿಧ್ಯವನ್ನು ಸೌಖ್ಯ ಸಂಪದವೆಂದು ಅರಿತುಕೋ. ಲೋಕದ ಇನ್ನಿತರ ಅಲ್ಪವಸ್ತುಗಳಿಗೆ ಆಸೆಪಡದೆ ಮೋಕ್ಷತತ್ವದಲ್ಲಿ ಮನಸ್ಸಿಟ್ಟು ಸ್ಮರಿಸು, ಆಗ ಜಗದೀಶ್ವರನು ನಿನ್ನನ್ನು ತನ್ನ ಲೋಕಕ್ಕೆ ಕರೆದುಕೊಂಡು ತನ್ನ ಬಳಿ ಇರಿಸಿಕೊಳ್ಳುತ್ತಾನೆ. ಇದು ಮೋಕ್ಷಪದವಿ. ಇಲ್ಲಿಗೆ ಹೋದಮೇಲೆ ಪುನ: ಈ ಲೋಕಕ್ಕೆ ಹಿಂತಿರುಗಿ ಬರಬೇಕಾಗಿಲ್ಲ. ಹುಟ್ಟುಸಾವುಗಳ ತಂಟೆ ಇರುವುದಿಲ್ಲ. ಇದೇ ನಿಜವಾದ ಆನಂದ. ಭಗವಂತನ ನಾಮಜಪದ ಸ್ಮರಣೆಯಿಂದ ಈ ಮೋಕ್ಷಸಾಧನೆಯನ್ನು ಮಾಡು, ಹಿಂದಿನ ಜನ್ಮಗಳಲ್ಲಿ ಮೂರ್ಖತನದಿಂದ ಮಾಡಿದ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೋ ಎನ್ನುತ್ತಿದ್ದಾರೆ ತಾತಯ್ಯನವರು.

ಹುಟ್ಟು ಸಾವುಗಳಿಲ್ಲದ ಮೋಕ್ಷ ಪಡೆಯಲು ಈ ಮಾನವದೇಹದಲ್ಲಿಯೇ ಸಾಧನೆ ಮಾಡಬೇಕು. ಈ ಸಾಧನೆಗೆ ಪರಮಾತ್ಮನ ನಿರಂತರ ಸ್ಮರಣೆಯೇ ಉತ್ತಮವಾದ ಸಾಧನ ವಿಧಾನವಾಗಿದೆ. ಮಾನವಜನ್ಮ ಲಭಿಸಿರುವ ಈ ಸಮಯದಲ್ಲೂ ಮೋಕ್ಷ ಸಾಧನೆಗಾಗಿ ಭಗವಂತನ ಸ್ಮರಣೆಮಾಡದೆ, ಇಹಭೋಗಗಳಿಗೆ ಆಸೆಪಟ್ಟರೇ ಯಮಪಾಶಕ್ಕೆ ತುತ್ತಾಗಬೇಕಾಗುತ್ತದೆ. ಭಕ್ತನಾಗು, ಭಜನೆ ಮಾಡು, ಹುಟ್ಟುಸಾವುಗಳಿಲ್ಲದ ಸೌಖ್ಯಸಂಪತ್ತನ್ನು ಅನುಭವಿಸು ಎಂದು ತಾತಯ್ಯನವರು ಮಾನವರನ್ನು ಈ ಬೋಧನೆಯ ಮೂಲಕ ಜಾಗೃತಗೊಳಿಸಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ ಅಂಕಣ: ಮೂಢಭಕ್ತಿಯಿಂದ ಶೀಘ್ರಮುಕ್ತಿ

Continue Reading

ಅಂಕಣ

ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

ಒಳಜಗಳದಲ್ಲಿ ಪಕ್ಷದ ಮಾನವನ್ನು ಹಾದಿಬೀದಿ ರಂಪಕ್ಕೆ ಬಳಸಿಕೊಳ್ಳುತ್ತಿರುವ ಇಬ್ಬರು ಶಾಸಕರ ವಿರುದ್ಧ ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಕಾಂಗ್ರೆಸ್ ವರಿಷ್ಟರು ಕೈಚೆಲ್ಲಿರುವುದು ಸದ್ಯದ ನೋಟ.

VISTARANEWS.COM


on

Madhu Bangarappa Beluru Gopalakrishna
Koo
mogasale logo

ಈ ವರ್ಷ ಮಳೆಗಾಲ ರಾಜ್ಯದಲ್ಲಿ ಸಂಪೂರ್ಣ ಕೈಕೊಟ್ಟಿದೆ. ವಾಡಿಕೆಯ ಒಂದಂಶದಷ್ಟೂ ಮಳೆ ಸುರಿದಿಲ್ಲ, ಒರತೆ ಒತ್ತಸಿಲ್ಲ. ಬಹುತೇಕ ಎಲ್ಲ ನದಿ ಹಳ್ಳ ತೊರೆಗಳೂ ಬತ್ತಿ ಹೋಗುವ ಹಂತದಲ್ಲಿವೆ. ಸರ್ವಋತು ನದಿಗಳೂ ಬಟಾಬಯಲಾಗುತ್ತಿವೆ. ದೊಡ್ಡ ದೊಡ್ಡ ಅಣೆಕಟ್ಟಿನ ಹಿಂಭಾಗದಲ್ಲಿ ನೂರಾರು ಹೆಕ್ಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಜಲಾಶಯಗಳು ದೊಡ್ಡ ದೊಡ್ಡ ಆಟದ ಮೈದಾನದಂತೆ ಭಾಸವಾಗುತ್ತಿವೆ. ಕೆರೆ ಕಟ್ಟೆಗಳಂತೂ ಒಣಗಿ ಹೋಗಿವೆ. ಜಾನುವಾರುಗಳು ಹುಲ್ಲಿಗಾಗಿ ಒಣಗಿ ಬಾಯ್ಬಿರಿದ ನೆಲ ನೆಕ್ಕುವ ಸ್ಥಿತಿ ಸಾಮಾನ್ಯವಾಗಿದೆ. ಕರ್ನಾಟಕಕ್ಕೆ ಹೆಸರು ತಂದ ಜೋಗದ ಜಲಪಾತವೂ ಸೇರಿದಂತೆ ಬಹುತೇಕ ದಭೆದಭೆಗಳಲ್ಲಿ ಧುಮ್ಮಿಕ್ಕುವ ಸುಂದರ ನೋಟ ನೀರೇ ಇಲ್ಲದೆ ನೀರವವಾಗಿದೆ. ಜೋಗ ಎಂದಾಕ್ಷಣ ಶರಾವತಿ ನೆನಪಿಗೆ ಬರುತ್ತದೆ. ಅಂಬುತೀರ್ಥದಲ್ಲಿ ಹುಟ್ಟಿ ಜೋಗದಲ್ಲಿ ಧುಮುಕುವವರೆಗೂ ಅದು ಸರಿಯುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಅದಕ್ಕೆ ವಿಶ್ವ ಖ್ಯಾತಿ ತಂದ ಜೋಗ್ ಫಾಲ್ಸ್ ಎನ್ನುವುದು ಮಳೆ ಇಲ್ಲದೆ ಜೋಕ್ ಫಾಲ್ಸ್ ಆಗಿದೆ.

ರಾಜಕಾರಣಕ್ಕೆ ಹೊರಳಿದರೆ ಜಲಪಾತಕ್ಕಿಂತ ಹೆಚ್ಚಿನ ಸದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಅಡರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ 135 ಶಾಸಕ ಬಲದೊಂದಿಗೆ ಅಧಿಕಾರ ಹಿಡಿದು ಹೊಯ್‍ಕೈ ಒಳ ಜಗಳದಲ್ಲಿ ಮುಳುಗಿರುವುದು ರಾಜಧಾನಿ ಬೆಂಗಳೂರಿನ ಸಮಾಚಾರವಾದರೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ರಾಜಕೀಯದಲ್ಲಿ ಅಲ್ಲೋಲಕಲ್ಲೋಲವೇ ನಡೆದಿದೆ. ಆರು ತಿಂಗಳಿನಿಂದಲೂ ಅನಿಯಂತ್ರಿತವಾಗಿರುವ ಅಲ್ಲೋಲ ಕಲ್ಲೋಲದ ಒಂದು ತುದಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸೊರಬ ಶಾಸಕ ಮಧು ಬಂಗಾರಪ್ಪ ಇದ್ದಾರೆ. ಇನ್ನೊಂದು ತುದಿಯಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಇದ್ದಾರೆ. ಇವರಿಬ್ಬರ ಜಗಳ ಮಲೆನಾಡ ಜಿಲ್ಲೆಯ ಪ್ರಶಾಂತ ವಾತಾವರಣದಲ್ಲಿ ಬಗ್ಗಡವೆಬ್ಬಿಸಿದೆ. ಸಮೃದ್ಧ ಮಳೆಗಾಲದ ದಿನಗಳಲ್ಲಿ ಭೋರ್ಗರೆದು ಧುಮ್ಮಿಕ್ಕುವ ಜೋಗ ಜಲಪಾತದ ನೆನಪನ್ನು ಈ ಇಬ್ಬರ ಜಗಳ ನೆನಪಿಸುತ್ತಿದೆ.

ಸಿದ್ದರಾಮಯ್ಯ ಸಂಪುಟ ರಚನೆ ಮಾಡಿದಾಗ ಹೃದಯ ಒಡೆದುಕೊಂಡವರು ಮುಖ್ಯವಾಗಿ ಇಬ್ಬರು. ಅದರಲ್ಲಿ ಮೊದಲಿಗರು ವಿಧಾನ ಪರಿಷತ್‍ನಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಹಾಲಿ ಎಂಎಲ್‍ಸಿಯಗಿರುವ ಬಿ.ಕೆ. ಹರಿಪ್ರಸಾದ್. ಎರಡನೆಯವರು ಬೇಳೂರು ಗೋಪಾಲಕೃಷ್ಣ. ಈ ಇಬ್ಬರೂ ಮಧು ಬಂಗಾರಪ್ಪನವರಂತೆ ಪ್ರಬಲ ರಾಜಕೀಯ ಪ್ರಭಾವ ಹೊಂದಿರುವ ಈಡಿಗ ಸಮುದಾಯಕ್ಕೆ ಸೇರಿದ ಮುಖಂಡರು. ಇಬ್ಬರೂ ಸಚಿವರಾಗುವ ಕನಸು ಕಟ್ಟಿಕೊಂಡಿದ್ದವರು. ಹರಿಪ್ರಸಾದ್ ಮೂರು ಅವಧಿ ರಾಜ್ಯಸಭಾ ಸದಸ್ಯರಾಗಿದ್ದು ಕಾಂಗ್ರೆಸ್ ಹೈಕಮಾಂಡ್‍ಗೆ ಬಹಳ ಬಹಳ ಬೇಕಾದವರೆಂದು ಪ್ರತೀತಿ. ಒಂದು ಒಂದೂವರೆ ವರ್ಷ ಹಿಂದಷ್ಟೇ ರಾಜ್ಯ ರಾಜಕಾರಣಕ್ಕೆ ಮರಳಿ ತಾವು ನೆಟ್ಟ ಸಚಿವ ಪಟ್ಟದ ಕನಸಿಗೆ ನೀರು ಗೊಬ್ಬರ ಹಾಕುತ್ತ ಬಂದವರು. ಬಿಜೆಪಿ ಆಡಳಿತ ಹೋಗುತ್ತದೆ; ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆಂಬ ಬಹುತೇಕರ ನಿರೀಕ್ಷೆ ಹರಿಪ್ರಸಾದ್ ಅವರದೂ ಆಗಿತ್ತು. ಮತ್ತು ಸಚಿವರಾಗುವ ಎಲ್ಲ ಅರ್ಹತೆಯೂ ಯೋಗ್ಯತೆಯೂ ಅವರಲ್ಲಿತ್ತು. ತಾನೊಂದು ಬಗೆದರೆ ವಿಧಿಯೊಂದು ಬಗೆಯಿತು ಎಂಬಂತೆ ಸಿದ್ದರಾಮಯ್ಯ ಅವರನ್ನು ಸಂಪುಟದಿಂದ ಹೊರಗಿಟ್ಟರಷ್ಟೇ ಅಲ್ಲ ದೂರವೂ ಇಟ್ಟರು. ಹರಿಪ್ರಸಾದ್ ಸಚಿವರಾಗುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಕಾಲತ್ತು ವಹಿಸಿದ್ದರು. ಸ್ವತಃ ಸೋನಿಯಾ ಗಾಂಧಿಯವರು ಕೂಡಾ ಸಚಿವ ಪಟ್ಟಕ್ಕೆ ಹರಿಪ್ರಸಾದ್‍ರ ಹೆಸರನ್ನು ಶಿಫಾರಸು ಮಾಡಿದ್ದರು ಎಂಬ ಸುದ್ದಿಯೂ ಇದೆ. ಆದರೆ ಸಿದ್ದರಾಮಯ್ಯ ಅದ್ಯಾವುದನ್ನೂ ಪರಿಗಣಿಸಲಿಲ್ಲ.

Madhu Bangarappa in Belagavi Winter Session

ಬೇಳೂರರದು ಇನ್ನೊಂದು ಬಗೆಯ ಕಥೆ. ಸಾಗರದಿಂದ ಮೂರು ಬಾರಿ ಶಾಸಕರಾದವರು ಅವರು. ಬಿಜೆಪಿ ಶಾಸಕರೂ ಆಗಿದ್ದರು. ಆ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ಮೇಲುಗೈ ಪಡೆದಿತ್ತು. ಅವರು ಮುಖ್ಯಮಂತ್ರಿಯಾದರು. ಅವರ ಸಂಪುಟದಲ್ಲಿ ಈಡಿಗ ಕೋಟಾದಲ್ಲಿ ತಾವು ಸಚಿವರಾಗುವ ಹಂಬಲ ಬೇಳೂರು ಅವರದಾಗಿತ್ತು. ಅಲ್ಲೂ ಕೂಡಾ ಅವರಿಗೆ ತಾನೊಂದು ಬಗೆದರೆ ವಿಧಿಯೊಂದು ಬಗೆಯಿತು ಎಂಬಂತಾಯಿತು. ಅದೇ ಚುನಾವಣೆಯಲ್ಲಿ ಹರತಾಳು ಹಾಲಪ್ಪ ಪಕ್ಕದ ಸೊರಬ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈಡಿಗ ಕೋಟಾದ ಲಾಭ ಅವರಿಗೆ ದಕ್ಕಿ ಸಚಿವರಾದರಷ್ಟೇ ಅಲ್ಲ ಜಿಲ್ಲಾ ಉಸ್ತುವರಿ ಸಚಿವರೂ ಆದರು. ಈಗ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸದೇ ಇರುವ ಬೇಳೂರರು ಆಗ ಬಿಜೆಪಿ ವಿರುದ್ಧವೂ ಬಂಡಾಯದ ಬಾವುಟ ಹಾರಿಸಲಿಲ್ಲ. ಆದರೆ ಹರತಾಳರ ನಿದ್ದೆಗೆಡಿಸಲು ಏನೆಲ್ಲ ಬೇಕೋ ಆ ಎಲ್ಲ ರಾಜಕೀಯವನ್ನು ಮಾಡಿದರು ಎನ್ನುವುದು ಹರತಾಳರ ಶಿಬಿರದಿಂದ ಕೇಳಿಬರುವ ಆರೋಪ. ಹಗರಣವೊಂದರಲ್ಲಿ ಸಿಕ್ಕು ಬಿದ್ದ ಹರತಾಳರು ಸಚಿವ ಸ್ಥಾನ ಕಳೆದುಕೊಂಡರು. ಅವರು ಕಳೆದುಕೊಂಡಿದ್ದು ತನಗೇ ಸಿಗುತ್ತದೆಂಬ ಬೇಳೂರರ ಆಸೆ ಹಳಿ ಹತ್ತಲಿಲ್ಲ.

ಯಡಿಯೂರಪ್ಪ ಅಥವಾ ನಂತರದ ಬಿಜೆಪಿ ಸರ್ಕಾರದಲ್ಲಿ ಬೇಳೂರರಿಗೆ ಸಚಿವ ಸ್ಥಾನದ ರಾಜ ಮರ್ಯಾದೆ ಸಿಗಲೇ ಇಲ್ಲ. ಮುನಿಸಿಕೊಂಡ ಅವರು ಶಾಸಕ ಸ್ಥಾನದ ಅವಧಿ ಮುಗಿದ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಾಳಯ ಸೇರಿದರು. ಸಾಗರ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪನವರದು ಬಹಳ ಆಳಕ್ಕೆ ಇಳಿದ ಕಾಡು ಮರದ ಬೇರಿನ ಬಗೆಯ ರಾಜಕೀಯ. ಚುನಾವಣಾ ಸೋಲು ಗೆಲುವು ಮೀರಿದ ರಾಜಕೀಯ ಶಕ್ತಿ ಅವರದು. ಅವರ ಹತ್ತಿರದ ಸೋದರ ಸಂಬಂಧಿ ಬೇಳೂರರು. ಕಾಗೋಡರಿಗೆ ವಯಸ್ಸು ಬಹಳ ಆಗಿರುವುದರಿಂದ ಬೇರೆ ಮುಖದ ಹುಡುಕಾಟ ಕಾಂಗ್ರೆಸ್‍ನಲ್ಲಿ ನಡೆದಿದೆ ಎಂಬ ವಾಸನೆ ಹಿಡಿದ ಬೇಳೂರರು ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರಷ್ಟೇ ಅಲ್ಲ 135 ಶಾಸಕರಲ್ಲಿ ಒಬ್ಬರಾಗಿ ಆಯ್ಕೆಯೂ ಆದರು. 1989ರಲ್ಲಿ ಕಾಂಗ್ರೆಸ್ ಪಕ್ಷ 178 ಶಾಸಕ ಬಲದೊಂದಿಗೆ ಅಧಿಕಾರಕ್ಕೆ ಬಂದಿತ್ತು. 1918ರಲ್ಲಿ 122 ಸದಸ್ಯ ಬಲದೊಂದಿಗೆ ಅಧಿಕಾರ ಹಿಡಿದಿತ್ತು. ಈಗ 2023ರಲ್ಲಿ ಪಕ್ಷ 135 ಶಾಸಕ ಬಲದಲ್ಲಿ ಅಧಿಕಾರ ಹಿಡಿಯಿತು. ಬೇಳೂರರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ಅವರು ಅಂದುಕೊಂಡತೆಯೇ ಎಲ್ಲವೂ ನಡೆದಿದ್ದರೆ ಅವರಿಟ್ಟ ಆಸೆ ಈಡೇರುತ್ತಿತ್ತೋ ಏನೋ, ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ನೇತೃತ್ವದ ಇಬ್ಬಣದಲ್ಲಿ ನಲುಗಿದ ಕಾಂಗ್ರೆಸ್ ಪಕ್ಷದ ಒಳಸುಳಿ ರಾಜಕೀಯ ಬೇಳೂರರ ಕನಸನ್ನು ಕಮರುವಂತೆ ಮಾಡಿತು.

Beluru Gopalakrishna

ಈಗ ಬೇಳೂರರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯನ್ನು ತಮಗೆ ಆಗಿರುವ ಅನ್ಯಾಯಕ್ಕೆ ಗುರಿ ಮಾಡಿಲ್ಲ. ಬದಲಿಗೆ ಅವರ ಆಕ್ರೋಶ ಪುಟಿಯುತ್ತಿರುವುದು ಸಚಿವ ಮಧು ಬಂಗಾರಪ್ಪ ವಿರುದ್ಧ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕರಾಗಿರುವ ಮಧು ಅವರನ್ನು ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ಮಾಡಿರುವ ರೀತಿಯ ಬಗ್ಗೆ. ಶಿವಮೊಗ್ಗ ಜಿಲ್ಲೆ ರಾಜಕೀಯದಲ್ಲಿ ಈಡಿಗರದು ಗಣನೀಯ ಪಾತ್ರ. ಈ ಸಮುದಾಯದಿಂದ ಬೆಳೆದು ರಾಜಕೀಯದಲ್ಲಿ ವರ್ಚಸ್ವೀ ನಾಯಕರಾಗಿ ಬೆಳೆದ ಸಾರೆಕೊಪ್ಪ ಬಂಗಾರಪ್ಪ ರಾಜಕೀಯಕ್ಕೆ ಕರೆತಂದು ಬೆಳೆಸಿದ ಕೆಲವರಲ್ಲಿ ಬೇಳೂರು, ಹರತಾಳು ಕೂಡಾ ಇದ್ದಾರೆ. ಹಿಂದುಳಿದ ವರ್ಗಗಳ ರಾಜ್ಯ ಮಟ್ಟದ ನಾಯಕರೆನಿಸಿದವರು ಬಂಗಾರಪ್ಪ. ಅವರ ಭೌತಿಕ ನಿರ್ಗಮನದ ಬಳಿಕ ಆ ಮಟ್ಟಕ್ಕೆ ಏರುವುದು ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಅವರಿಗೆ ಈವರೆಗೆ ಸಾಧ್ಯವಾಗಿಲ್ಲ. (ಮುಂದೆ ಅಂಥ ಅವಕಾಶ ಅವರಿಗೆ ಒಲಿದೀತೇ ಈಗಲೇ ಹೇಳಲಾಗದು) ಕಾಗೋಡು ತಿಮ್ಮಪ್ಪ ದಶಕಗಳ ಕಾಲ ರಾಜಕೀಯ ಮಾಡಿದರೂ ಸಿಎಂ ಹೊರತಾಗಿ ವಿವಿಧ ಹುದ್ದೆಗಳಲ್ಲಿ ವಿರಾಜಮಾನರಾದರೂ ಅವರು ಜಿಲ್ಲಾ ನಾಯಕ ಮಟ್ಟದಲ್ಲೇ ಉಳಿದರು, ರಾಜ್ಯದ ನಾಯಕ ಆಘುವ ಅವಕಾಶ ಅವರಿಗೆ ಒದಗಿ ಬರಲಿಲ್ಲ. ರಾಜ್ಯಮಟ್ಟದ ನಾಯಕರಾಗುವುದು ಅಷ್ಟೆಲ್ಲ ಸುಲಭದ ಮಾತಲ್ಲ ಎನ್ನುವುದು ಮಧು ಮತ್ತು ಬೇಳೂರರಿಬ್ಬರಿಗೂ ಗೊತ್ತಿದೆ. ಎಂದೇ ಜಿಲ್ಲೆಯ ನಾಯಕತ್ವ ಪಡೆಯುವುದಕ್ಕೆ ಪೈಪೋಟಿ ಸಾಗಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಲೋಕಸಭೆ ಚುನಾವಣೆಗೆ ತಯಾರಿ ಮತ್ತು ರಾಜ್ಯ ಬಿಜೆಪಿಯ ತಳಮಳ

ಮಧು ಅವರನ್ನು ಈಡಿಗ ಕೋಟಾದಲ್ಲಿ ಸಚಿವರನ್ನಾಗಿ ಮಾಡುವ ಮೂಲಕ ಸಿದ್ದರಾಮಯ್ಯ, ಹರಿಪ್ರಸಾದರನ್ನು ವ್ಯವಸ್ಥಿತವಾಗಿ ದೂರವಿಟ್ಟರು. ಅದೇ ಕಾಲಕ್ಕೆ ಶಿವಮೊಗ್ಗದಿಂದ ಇನ್ನೊಬ್ಬ ಈಡಿಗ ಮಂತ್ರಿ ಸ್ಥಾನಕ್ಕೆ ಏರದಂತೆ ತಡೆಯುವ ಯತ್ನವೂ ಯಶಸ್ವಿಯಾಯಿತು. ತನ್ನ ರಾಜಕೀಯ ಭವಿಷ್ಯಕ್ಕೆ ಮಧು ಬಂಗಾರಪ್ಪ ಕೊಡಲಿ ಕಾವಿನಂತಾಗಿದ್ದಾರೆಂಬ ಸೆಡವು ಸಿಟ್ಡು ಅಸಮಾಧಾನ ಆಕ್ರೋಶ ಬೇಳೂರರಲ್ಲಿ ಮಡುಗಟ್ಟಿದೆ. ಹೋದಲ್ಲಿ ಬಂದಲ್ಲಿ ಅವರು ಕುದಿ ಎಸರಿನಂತಾಗಿರುವ ಸಿಟ್ಟನ್ನು ಕಾರಿಕೊಳ್ಳುತ್ತಿದ್ದಾರೆ. ಮಧು ಬಂಗಾರಪ್ಪ ಈ ವಿಚಾರದಲ್ಲಿ ಮೌನ ವ್ರತಧಾರಿಯೇನೂ ಅಲ್ಲ. ಬೇಳೂರರಿಗೆ ಕಿರಿಕಿರಿ ಮಾಡುವ ತಂತ್ರ ಅವರಿಗೂ ಗೊತ್ತಿದೆ, ಮಾಡುತ್ತಿದ್ದಾರೆ ಕೂಡಾ. ಮಧು ತಾವು ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಅಧಿಕೃತ ಪ್ರವಾಸ ಮಾಡುವಾಗಲೆಲ್ಲ ಸ್ಥಳೀಯ ಶಾಸಕರಾದ ತಮ್ಮನ್ನು ಕಡೆಗಣಿಸುತ್ತಿದ್ದಾರೆಂಬ ಆರೋಪ ಬೇಳೂರರದು. ತಮ್ಮ ಕ್ಷೇತ್ರದಲ್ಲಿ ಅಧಿಕೃತ ಪ್ರವಾಸ ಮಾಡುವಾಗ ಶಿರಸಿ-ಸಿದ್ದಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೀಮಣ್ಣ ನಾಯ್ಕರನ್ನು ಜೊತೆಗಿಟ್ಟುಕೊಂಡು ಓಡಾಡುತ್ತಾರೆಂಬ ಮಾತನ್ನೂ ಬೇಳೂರರು ಆಡಿದ್ದು ವರದಿಯಾಗಿದೆ; ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅವರು ಸುಮ್ಮನೆ ಹೇಳಿರಲಿಕ್ಕಿಲ್ಲ ಎನ್ನಲು ಸಾಕಷ್ಟು ಪೂರಕ ಪುರಾವೆ ಅವರಲ್ಲಿರಲೇಬೇಕು. ಭೀಮಣ್ಣ ನಾಯ್ಕರು, ಮಧು ಬಂಗಾರಪ್ಪನವರ ಸೋದರ ಮಾವ. ತಾಯಿಯ ತಮ್ಮ. ಇವರಿಬ್ಬರದು ರಕ್ತ ಸಂಬಂಧ ಒಂದೆಡೆಯಾದರೆ ಮಿತ್ರತ್ವ ಇನ್ನೊಂದೆಡೆ. ಮಧು ಅವರಿಗೆ ರಾಜಕೀಯವಾಗಿ ಅನುಕೂಲ ಆಗುತ್ತದೆ ಎಂದಾದರೆ ಪಕ್ಷ ರಾಜಕಾರಣವನ್ನು ಬದಿಗೆ ತಳ್ಳುವ ಸ್ವಭಾವ ಭೀಮಣ್ಣ ನಾಯ್ಕರದು.

Karnataka Election 2023 The Congress top leadership divided on the CM issue

ಇವರಿಬ್ಬರನ್ನೂ ಕರೆದು ಚರ್ಚೆ ನಡೆಸಿ ಹೊಂದಿಕೊಂಡು ಹೋಗಿ ಎನ್ನುವ ಅಧಿಕಾರ ಅರ್ಹತೆ ಇರುವ ಕಗೋಡು ತಿಮ್ಮಪ್ಪನವರು ಮೌನ ತಾಳಿದ್ದಾರೆ. ಪಕ್ಷದೊಳಗೆ ನಡೆಯುತ್ತಿರುವ ನಿತ್ಯ ಜಗಳಕ್ಕೆ ಒಂದು ತೆರೆ ಎಳೆಯುವ ಕೆಲಸಕ್ಕೆ ಅವರು ಮುಂದಾಗದೇ ಇರುವುದಕ್ಕೆ ಅವರದೇ ಆದ ರಾಜಕಾರಣದ ಕಾರಣವಿರಬಹುದು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ತಮಗೆ ಟಿಕೆಟ್ ನಿರಾಕರಿಸಿದ್ದರ ಬಗ್ಗೆ ಅವರಲ್ಲಿ ಅಸಮಾಧಾನವಿದೆ; ತಮಗೆ ಕೊಡದಿದ್ದರೆ ಮಗಳು ರಾಜನಂದಿನಿಗಾದರೂ ಕೊಡಿ ಎಂಬ ಅವರ ಅವಹಾಲು ಕೆಲಸ ಮಾಡಲಿಲ್ಲ. ಜೀವನದ ಉದ್ದಕ್ಕೂ ಸಮಾಜವಾದಿ ಸಿದ್ಧಾಂತದ ಬಗ್ಗೆ ಹೇಳುತ್ತ ಬಂದಿರುವ ಕಾಗೋಡರ ಮಗಳು ಇದೀಗ ಬಿಜೆಪಿ ಪಾಳಯದಲ್ಲಿದ್ದಾರೆ. ಇದೆಲ್ಲ ಅವರನ್ನು ರಾಜಕೀಯದಿಂದ ಒಂದಿಷ್ಟು ದೂರ ಇರುವಂತೆ ಮಾಡಿರಬಹುದು. ಇನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸ್ಥಿತಿ. ಒಳಜಗಳದಲ್ಲಿ ಪಕ್ಷದ ಮಾನವನ್ನು ಹಾದಿಬೀದಿ ರಂಪಕ್ಕೆ ಬಳಸಿಕೊಳ್ಳುತ್ತಿರುವ ಇಬ್ಬರು ಶಾಸಕರ ವಿರುದ್ಧ ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಜಿಲ್ಲಾ ಕಾಂಗ್ರೆಸ್ ವರಿಷ್ಟರು ಕೈಚೆಲ್ಲಿರುವುದು ಸದ್ಯದ ನೋಟ. ಹಾಗಂತ ಕೆಪಿಸಿಸಿಗೆ ಇದು ಗೊತ್ತಿಲ್ಲವೆಂದೇನೂ ಅಲ್ಲ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಸಿದ್ದರಾಮಯ್ಯ ವಿರುದ್ಧ ಶೀತಲ ಸಮರ ಸಾರಿರುವಾಗ, ನೀವು ಕಚ್ಚಾಡಬಾರದು ಎಂದು ಅವರು ಯಾವ ಬಾಯಲ್ಲಿ ಹೇಳಿಯಾರು. ಮಧು ಮತ್ತು ಬೇಳೂರರ ನಡುವಣ ನಿತ್ಯ ಪ್ರಹಸನ ವರ್ತಮಾನ ಕರ್”ನಾಟಕ”ದ ಮುಂದುವರಿದ ಅಂಕವಾಗಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂತರಾಜು ವರದಿ ಹೆಸರಿನಲ್ಲಿ ಜನತೆಯ ಕಣ್ಣಿಗೆ ಮಣ್ಣು

Continue Reading
Advertisement
Nagamurthy Swamy
ಕರ್ನಾಟಕ19 mins ago

Ayodhya Ram Mandir: ರಾಮಮಂದಿರ ನಿರ್ಮಾಣಕ್ಕೆ ತೆರಳಿದ ಗದಗದ ಯುವ ಶಿಲ್ಪಿ

Saika Ishaque ran through the England middle order
ಕ್ರಿಕೆಟ್33 mins ago

ENGW vs INDW; ಅಂತಿಮ ಪಂದ್ಯದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟ ಭಾರತ ಮಹಿಳಾ ಕ್ರಿಕೆಟ್​ ತಂಡ

CLAT Result 2024 announced
ದೇಶ34 mins ago

CLAT Result 2024: ಕಾನೂನು ಪ್ರವೇಶ ಪರೀಕ್ಷೆ ಸಿಎಲ್ಎಟಿ ರಿಸಲ್ಟ್ ಪ್ರಕಟ

girl students fall ill
ಕರ್ನಾಟಕ1 hour ago

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

Fans brave the dampness, waiting for India's tour of South Africa to kick off
ಕ್ರಿಕೆಟ್1 hour ago

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

Gautam Gambhir
ಕ್ರಿಕೆಟ್2 hours ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ2 hours ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ3 hours ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

WPL 2024 Auction
ಕ್ರಿಕೆಟ್3 hours ago

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

Naveen Ammembala
ದಕ್ಷಿಣ ಕನ್ನಡ3 hours ago

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ8 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ10 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ18 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌