ರಾಜ ಮಾರ್ಗ: ಅಯೋಧ್ಯೆಯ ರಾಮ ಮಂದಿರ ಹೀಗೇ ಇರಬೇಕು ಅಂತ ಡಿಸೈನ್‌ ಮಾಡಿಕೊಟ್ಟ ಕಲಾಕಾರ ಈ ಸೋಂಪುರ! - Vistara News

ಅಂಕಣ

ರಾಜ ಮಾರ್ಗ: ಅಯೋಧ್ಯೆಯ ರಾಮ ಮಂದಿರ ಹೀಗೇ ಇರಬೇಕು ಅಂತ ಡಿಸೈನ್‌ ಮಾಡಿಕೊಟ್ಟ ಕಲಾಕಾರ ಈ ಸೋಂಪುರ!

ರಾಜ ಮಾರ್ಗ ಅಂಕಣ : ಅಯೋಧ್ಯೆಯ ಭವ್ಯವಾದ ರಾಮ ಮಂದಿರದ ಚಿತ್ರವನ್ನು ನಾನು ಕಳೆದ ಮೂರು ದಶಕಗಳಿಂದ ಕಣ್ತುಂಬಿಕೊಳ್ಳುತ್ತಿದ್ದೇವೆ. ಮಂದಿರ ಇದೇ ರೀತಿ ಇರಬೇಕು ಎಂದು ಕಲ್ಪನೆ ಮಾಡಿಕೊಂಡಿದ್ದು ಒಬ್ಬ ಡಿಸೈನರ್‌. ಅವರೇ ಚಂದ್ರಕಾಂತ ಸೊಂಪೂರ್. ರಾಮಮಂದಿರವು ಲೋಕಾರ್ಪಣೆ ಆಗುವ ಸಂದರ್ಭ ಅವರನ್ನು ನೆನೆಯದಿದ್ದರೆ ಹೇಗೆ? ಅವರು ಜಗತ್ತಿನಾದ್ಯಂತ 150 ದೇವಸ್ಥಾನ ವಿನ್ಯಾಸ ಮಾಡಿದ್ದಾರೆ.

VISTARANEWS.COM


on

Chandrakant sompura
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA

ಮುಂದಿನ ವರ್ಷ ಜನವರಿ ತಿಂಗಳಲ್ಲಿ ಅಯೋಧ್ಯೆಯ ದಿವ್ಯ ಮತ್ತು ಭವ್ಯವಾದ ರಾಮಮಂದಿರ (Ayodhya Rama Mandir) ಲೋಕಾರ್ಪಣೆ ಆಗುತ್ತಿದೆ ಅನ್ನುವುದೇ ಭುವನದ ಭಾಗ್ಯ. ಜಗತ್ತಿನಾದ್ಯಂತ ಇರುವ ಶತಕೋಟಿ ಹಿಂದೂಗಳು ಆ ಮಂದಿರವನ್ನು ಕಣ್ಣ ತುಂಬಿಸಿಕೊಳ್ಳಲು ಈಗಲೇ ತುದಿಗಾಲಲ್ಲಿ ನಿಂತಿದ್ದಾರೆ.(ರಾಜ ಮಾರ್ಗ ಅಂಕಣ)

ಹಿಂದೂಗಳ 500 ವರ್ಷಗಳ ದೀರ್ಘ ನಿರೀಕ್ಷೆಯ ಬಳಿಕ ಆ ಅಮೃತ ಘಳಿಗೆಯು ಈಗ ಬಂದೇ ಬಿಟ್ಟಿದೆ! ಆ ಮಂದಿರವು ‘ನ ಭೂತೋ ನ ಭವಿಷ್ಯತಿ’ ಆಗಿರಬೇಕೆಂದು ಪ್ರತಿಯೊಬ್ಬ ಹಿಂದೂವಿನ ಕನಸು. ಆ ರಾಮ ಮಂದಿರದ ನೀಲನಕ್ಷೆ (Blue print of Rama Mandir) ಮತ್ತು ವಿನ್ಯಾಸವನ್ನು ಸಿದ್ಧಮಾಡಿದವರು ಗುಜರಾತ್ ಮೂಲದ ಓರ್ವ ಯಶಸ್ವಿ ದೇಗುಲ ವಿನ್ಯಾಸಕರು. ಅವರ ಹೆಸರು ಚಂದ್ರಕಾಂತ್ ಸೋಂಪುರ (Chandrakant Sompura). ಆ ವಿನ್ಯಾಸವು ಸಿದ್ಧವಾಗಿದ್ದು ಬರೋಬ್ಬರಿ 33 ವರ್ಷಗಳ ಹಿಂದೆ!

ಆ ಕುಟುಂಬ 15 ತಲೆಮಾರುಗಳಿಂದ ದೇಗುಲಗಳ ವಿನ್ಯಾಸ ಮಾಡುತ್ತಿದೆ!

ಹಿಂದೂ ದೇಗುಲಗಳ ವಿನ್ಯಾಸವನ್ನು ಮಾಡುವುದು ಸುಲಭದ ಕೆಲಸ ಅಲ್ಲವೇ ಅಲ್ಲ. ದೇವಸ್ಥಾನಗಳ ವಿನ್ಯಾಸ ಮಾಡುವಾಗ ಶಾಸ್ತ್ರ, ಸಂಪ್ರದಾಯ, ವಾಸ್ತು, ದಿಕ್ಕುಗಳು, ಪುರಾಣದ ಜ್ಞಾನ ಇವುಗಳು ಚೆನ್ನಾಗಿದ್ದರೆ ಮಾತ್ರ ಅದು ಸಾಧ್ಯವಿದೆ. ಅವರ ಕುಟುಂಬವು ಕಳೆದ 15 ತಲೆಮಾರುಗಳಿಂದ ದೇಗುಲಗಳ ವಿನ್ಯಾಸದಲ್ಲಿ ಭಾರೀ ದೊಡ್ಡ ಹೆಸರು ಮಾಡಿದೆ. ಚಂದ್ರಕಾಂತ್ ಅವರ ಅಜ್ಜ ಪ್ರಭುಶಂಕರ ಸೋಂಪುರ ಅವರು ಗುಜರಾತಿನ ಅತೀ ಪ್ರಸಿದ್ಧ ಸೋಮನಾಥ ಮಂದಿರದ (ಆಧುನಿಕ) ವಿನ್ಯಾಸವನ್ನು ಮಾಡಿದ್ದರು. ಇದೇ ಮನೆತನವು ಗುಜರಾತಿನ ಸ್ವಾಮಿ ನಾರಾಯಣ ಮಂದಿರ, ಪಾಲನ್ ಪುರದ ಅಂಬಾಜಿ ದೇವಸ್ಥಾನ, ಜಗತ್ಪ್ರಸಿದ್ಧ ಹವಾ ಮಹಲ್, ವಾಧ್ವ ಅರಮನೆ ಮೊದಲಾದವುಗಳನ್ನು ವಿನ್ಯಾಸ ಮಾಡಿದ ಕೀರ್ತಿಯನ್ನು ಕೂಡ ಹೊಂದಿದ್ದಾರೆ! ಅದರಲ್ಲಿಯೂ ಸ್ವಾಮಿ ನಾರಾಯಣ ಮಂದಿರವು ಜಗತ್ತಿನ ಗಮನ ಸೆಳೆದಿತ್ತು.

Chandrakant sompura designer of Rama Mandir

ಅಜ್ಜನಿಂದ ಮೊಮ್ಮಗನಿಗೆ ವಿನ್ಯಾಸದ ತರಬೇತಿ

ಚಂದ್ರಕಾಂತ್ ಅವರ ಅಜ್ಜ ಪ್ರಭಾಶಂಕರ್ ಅವರು ಸ್ವಾತಂತ್ರ್ಯದ ನಂತರ ಜೀರ್ಣೋದ್ಧಾರ ಆದ ಗುಜರಾತಿನ ಆಧುನಿಕ ಸೋಮನಾಥ ಮಂದಿರದ ವಿನ್ಯಾಸ ಮಾಡಿ ಭಾರೀ ಕೀರ್ತಿಗೆ ಭಾಜನರಾಗಿದ್ದರು. ಅವರಿಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಆ ದೇಗುಲದ ವಿನ್ಯಾಸವು ಕೂಡ ಜಗತ್ತಿನಾದ್ಯಂತ ಇರುವ ಹಿಂದೂಗಳನ್ನು ತನ್ನ ಕಡೆಗೆ ಸೂಜಿಗಲ್ಲಿನಂತೆ ಸೆಳೆದಿತ್ತು. ನಂತರದ ವರ್ಷಗಳಲ್ಲಿ ಈ ಕುಟುಂಬವು ದೇಶ ಮತ್ತು ವಿದೇಶಗಳಲ್ಲಿ 500ಕ್ಕಿಂತ ಅಧಿಕ ಬೃಹತ್ ಮಂದಿರಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವುಗಳಲ್ಲಿ ಜೈನ ಮಂದಿರಗಳು,ಬೌದ್ಧ ಮಂದಿರಗಳು ಕೂಡಾ ಇವೆ. ಸ್ವಾಮಿ ನಾರಾಯಣ ಮಂದಿರ, ಅಕ್ಷರ ಧಾಮ ಮಂದಿರ, ಅಮೆರಿಕಾದ ಟೆಕ್ಸಾಸಿನ ತಪೋ ಭೂಮಿ ಮಂದಿರ, ಲಂಡನ್ನಿನ ರಾಮ ಮಂದಿರ….ಇವುಗಳು ಅತೀ ಪ್ರಸಿದ್ಧಿ ಪಡೆದ ಮಂದಿರಗಳು. ಅವರು ಕಟ್ಟಿದ ಮಂದಿರಗಳೆಲ್ಲಾ ಲೋಕಪ್ರಸಿದ್ಧಿ ಪಡೆದಿವೆ.

ಚಂದ್ರಕಾಂತ್ ಅವರು ಅತೀ ಸಣ್ಣ ಪ್ರಾಯದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು. ನಂತರ ತಮ್ಮ ಅಜ್ಜನಿಂದ ಮಂದಿರಗಳ ವಿನ್ಯಾಸಗಳನ್ನು ತುಂಬಾ ಚೆನ್ನಾಗಿ ಅಧ್ಯಯನ ಮಾಡಿದರು. ಅವರ ಇಬ್ಬರು ಮಕ್ಕಳು ಕೂಡಾ ಸಿವಿಲ್ ಎಂಜಿನಿಯರಿಂಗ್ ಕಲಿತಿದ್ದು ಅಪ್ಪನ ವಿನ್ಯಾಸಗೊಳಿಸಿದ ದೇಗುಲಗಳಿಗೆ ಆಧುನಿಕ ಸ್ಪರ್ಶ ನೀಡುತ್ತಿದ್ದಾರೆ.

ಅಶೋಕ್ ಸಿಂಘಾಲ್ ಅವರು ಮೊದಲು ಕರೆ ಮಾಡಿದ್ದು ಇದೇ ಚಂದ್ರಕಾಂತ್‌ಗೆ

ಅಯೋಧ್ಯೆಯ ರಾಮ ಮಂದಿರದ ಸುದೀರ್ಘ ಹೋರಾಟಗಳು ಅಂದಾಜು ಐನೂರು ವರ್ಷ ನಡೆದು ಒಂದು ಮುಖ್ಯ ಹಂತಕ್ಕೆ ಬಂದಿತ್ತು. ರಾಮಮಂದಿರದ ನಿರ್ಮಾಣವು ಆಗಲೇ ಬೇಕು, ಅದು ರಾಮ ದೇವರು ಹುಟ್ಟಿದ್ದ ಅಯೋಧ್ಯಾ ನಗರದಲ್ಲಿಯೇ ಇರಬೇಕು ಎನ್ನುವುದು ಹಿಂದೂಗಳ ಶತಮಾನಗಳ ಕನಸಾಗಿತ್ತು.

Chandrakant sompura with Ashok singhal
ಚಂದ್ರಕಾಂತ್‌ ಸೋಂಪುರ ಅವರು ಅಶೋಕ್‌ ಸಿಂಘಾಲ್‌ ಜತೆಗೆ

ಆ ಕನಸು ಪೂರ್ತಿ ಮಾಡಲು ವಿಶ್ವ ಹಿಂದೂ ಪರಿಷತ್ತು ಹೊರಟಾಗ ಮೊದಲು ಆಯ್ಕೆ ಮಾಡಿದ್ದು ಇದೇ
ಚಂದ್ರಕಾಂತ್ ಸೋಮಪುರ ಅವರನ್ನು. 1989ರ ಸುಮಾರಿಗೆ ಆಗಿನ ವಿಶ್ವಹಿಂದೂ ಪರಿಷತ್ತಿನ ಮುಖಂಡರಾದ ಅಶೋಕ್ ಸಿಂಘಾಲ್ ಅವರು ಚಂದ್ರಕಾಂತ್ ಅವರನ್ನು ಸಂಪರ್ಕ ಮಾಡಿ ಆ ಮಂದಿರದ ಸ್ಥಳದ ಬಳಿ ಕರೆದುಕೊಂಡು ಹೋಗಿದ್ದರು. ಆಗಿನ್ನೂ ವಿವಾದಿತ ಕಟ್ಟಡ ಹಾಗೆ ಇತ್ತು ಮತ್ತು ವ್ಯಾಜ್ಯವು ಕೋರ್ಟಲ್ಲಿ ಇತ್ತು.

ಆದರೆ ಸಿಂಘಾಲ್ ಹೇಳಿದ ಮಾತು: ‘ಚಂದ್ರಕಾಂತ್ ಜಿ, ಇದೇ ಜಾಗದಲ್ಲಿ ಭವ್ಯವಾದ, ದಿವ್ಯವಾದ ಮತ್ತು ಜಗತ್ತಿನಲ್ಲಿ ಅನ್ಯತ್ರ ಅಲಭ್ಯವಾದ ರಾಮಮಂದಿರದ ನಿರ್ಮಾಣವು ಆಗುವುದು ಖಂಡಿತ. ನೀವು ವಿನ್ಯಾಸ ಮಾಡಿಕೊಡಬೇಕು!’ ಎಂದು.

Ram Mandir ayodhya

ಆಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಜಾಗವನ್ನು ಮೀಟರ್ ಟೇಪ್ ಹಿಡಿದು ಅಳತೆ ಮಾಡಲು ಅವಕಾಶ ಇರಲಿಲ್ಲ. ಆಗ ಚಂದ್ರಕಾಂತ್ ಅವರು ತಮ್ಮ ಪಾದದ ಸಹಾಯದಿಂದ ಅಳತೆ ಮಾಡಿ ಬರೆದು ಇಟ್ಟರು. ಅಶೋಕ್ ಸಿಂಘಾಲ್ ಮತ್ತೆ ಹೇಳಿದರು. ‘ಚಂದ್ರಕಾಂತ್ ಜಿ, ನೀವು ಕೋರ್ಟ್, ವ್ಯಾಜ್ಯ ಇವುಗಳ ಬಗ್ಗೆ ಚಿಂತೆ ಮಾಡಬೇಡಿ. ವಿನ್ಯಾಸ ಮಾಡಿಕೊಡಿ. ದೇಗುಲ ಆಗುವುದನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ!’ ಈ ಮಾತು ಹೇಳುವಾಗ ಅಶೋಕ್ ಸಿಂಘಾಲ್ ಅವರ ಕಣ್ಣಲ್ಲಿ ಆತ್ಮವಿಶ್ವಾಸ ಇತ್ತು ಮತ್ತು ಚಂದ್ರಕಾಂತ್ ಅವರ ಕಣ್ಣಲ್ಲಿ ನಂಬಿಕೆ ಇತ್ತು.

ಮುಂದಿನ ಮೂರು ತಿಂಗಳಿನಲ್ಲಿ ದೇಗುಲದ 3 ವಿನ್ಯಾಸಗಳು ಸಿದ್ಧವಾದವು!

ಮುಂದಿನ ಮೂರು ತಿಂಗಳು ಚಂದ್ರಕಾಂತ್ ಅವರಿಗೆ ಊಟ, ಹಸಿವು, ನಿದ್ರೆ ಎಲ್ಲವೂ ಮರೆತುಹೋಗಿತ್ತು. ಶ್ರೀರಾಮನ ಪರಮ ಭಕ್ತರಾದ ಅವರಿಗೆ ಕನಸಲ್ಲಿ ರಾಮ ದೇವರು ಬಂದು ಮಾರ್ಗ ತೋರಿಸುತ್ತಾ ಇದ್ದರು. ಕೇವಲ ಮೂರು ತಿಂಗಳ ಒಳಗೆ ದೇಗುಲದ ಮೂರು ವಿನ್ಯಾಸಗಳು ಸಿದ್ಧವಾದವು. ಅದನ್ನು ಸಂತರ ಮಂಡಳಿ ವೀಕ್ಷಣೆ ಮಾಡಿ ಒಂದು ವಿನ್ಯಾಸವನ್ನು ಆರಿಸಿತು.

Chandrakant sompura

ಎಲ್ಲವೂ ದೇವರ ಸಂಕಲ್ಪ ಎಂದರು ಚಂದ್ರಕಾಂತ್

ದಯವಿಟ್ಟು ಗಮನಿಸಿ. ಆಗ ಅಯೋಧ್ಯೆಯ ರಾಮ ಮಂದಿರದ ಹೋರಾಟ ಶಿಖರಕ್ಕೆ ಮುಟ್ಟಿತ್ತು. ಉತ್ತರಪ್ರದೇಶದ ಮುಲಾಯಂ ಸರಕಾರವು ಮಂದಿರದ ನಿರ್ಮಾಣಕ್ಕೆ ವಿರುದ್ಧ ಇತ್ತು. ಕೋರ್ಟು ತೀರ್ಪು ಯಾವಾಗ ಬರಬಹುದು ಎಂಬ ಸ್ಪಷ್ಟನೆ ಯಾರಿಗೂ ಇರಲಿಲ್ಲ.

ಮುಂದೆ ನಡೆದ ಅಷ್ಟೂ ಘಟನೆಗಳು ನಮ್ಮ ಮುಂದಿವೆ. ಅಡ್ವಾಣಿಜಿ ಅವರು ಮಾಡಿದ ಅಯೋಧ್ಯಾ ರಥಯಾತ್ರೆ, ಗ್ರಾಮ ಗ್ರಾಮಗಳಲ್ಲಿ ಶಿಲಾ ಪೂಜನ, ವಿವಾದಿತ ಕಟ್ಟಡದ ಪತನ, ಸರಕಾರಗಳ ಪತನ, ರಾಮ ಮಂದಿರದ ಪರವಾಗಿ ಸುಪ್ರೀಂ ಕೋರ್ಟಿನ ತೀರ್ಪು, ಶ್ರೀ ರಾಮ ಮಂದಿರ ಟ್ರಸ್ಟ್ ರಚನೆ…..ಎಲ್ಲವೂ ಒಂದೇ ಸರಳ ರೇಖೆಯಲ್ಲಿ ಪೋಣಿಸಿದ ಹಾಗೆ ಭಾಸವಾಗುತ್ತದೆ! ಅಶೋಕ್ ಸಿಂಘಾಲ್ ಅವರ ಸಂಕಲ್ಪ ಶಕ್ತಿ, ವಿಷನ್, ಕೋಟಿ ಕೋಟಿ ಹಿಂದೂಗಳ ಪ್ರಾರ್ಥನೆ ಎಲ್ಲವೂ ಶಕ್ತಿಶಾಲಿಯಾಗಿ ಕೆಲಸ ಮಾಡುತ್ತಿದ್ದವು.

ಸಂತರನ್ನು ಒಳಗೊಂಡ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಟ್ರಸ್ಟ್ ಚಂದ್ರಕಾಂತ್ ಅವರು ಮಾಡಿದ ಮೂರು ವಿನ್ಯಾಸಗಳಲ್ಲಿ ಉತ್ತಮವಾದ ಒಂದು ವಿನ್ಯಾಸವನ್ನು ಆಯ್ಕೆ ಮಾಡಿತು. ನಂತರ ಮರದ ಕೆತ್ತನೆಯ ದೇಗುಲದ ವಿನ್ಯಾಸ ಕೂಡ ಅವರು ಸಿದ್ಧ ಮಾಡಿಕೊಟ್ಟರು.

ಮುಂದೆ ಅಮೃತ ಮುಹೂರ್ತದಲ್ಲಿ ಸಂತರ ಮಾರ್ಗದರ್ಶನದಲ್ಲಿ ಭೂಮಿ ಪೂಜನವು ನಡೆಯಿತು. ಅದರ ನಂತರ ದೇಗುಲದ ನಿರ್ಮಾಣ ಕಾರ್ಯವು ಅತ್ಯಂತ ವೇಗವಾಗಿ ನಡೆಯುತ್ತಿದೆ. ಇತ್ತೀಚೆಗೆ ಸಂತರ ಸಲಹೆಯ ಮೇರೆಗೆ ಚಂದ್ರಕಾಂತ್ ಅವರು ತಮ್ಮ ವಿನ್ಯಾಸದಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಕೂಡ ಮಾಡಿ ಕೊಟ್ಟಿದ್ದಾರೆ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಅವನಿ ಲೇಖರ; ವೀಲ್‌ಚೇರ್‌ನಲ್ಲಿ ಕುಳಿತೇ ಜಗತ್ತನ್ನು ಗೆದ್ದವಳು, ಇದ್ದರೆ ಇಂಥ ಮಗಳಿರಬೇಕು!

Rama Mandir construction
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ

ಚಂದ್ರಕಾಂತ್ ಸೋಮಪುರ ಅವರ ಹೆಸರು ಚಿರಸ್ಥಾಯಿ

ಮುಂದಿನ ವರ್ಷದ ಜನವರಿ ತಿಂಗಳಲ್ಲಿ ರಾಮಮಂದಿರದ ನಿರ್ಮಾಣವು ಪೂರ್ತಿ ಆಗಲಿದೆ ಮತ್ತು ಭವ್ಯ ಮಂದಿರವು ಲೋಕಾರ್ಪಣೆ ಆಗಲಿದೆ.

ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ, ಅದರೊಂದಿಗೆ ಸೀತಾ ಮಂದಿರ, ಲಕ್ಷ್ಮಣ ಮಂದಿರ, ಭರತ ಮಂದಿರ ಮತ್ತು ಗಣಪತಿ ದೇವರ ಮಂದಿರಗಳು ತಲೆ ಎತ್ತಿ ನಿಲ್ಲಲಿವೆ. ಅಷ್ಟ ಭುಜಾಕೃತಿಯ ಪಂಚಾಂಗದ ಮೇಲೆ ಈ ಭವ್ಯ ದೇವಾಲಯ ಸಂಕೀರ್ಣವು ಜಗತ್ತಿನ ಹಿಂದೂಗಳ ಅತಿ ಶ್ರೇಷ್ಠ ಶ್ರದ್ಧಾಕೇಂದ್ರ ಆಗುವುದು ಖಂಡಿತ. ಅದರ ಮೂಲಕ ಭಾರತದ ಐನೂರು ವರ್ಷಗಳ ಕನಸು ನನಸು ಆಗಲಿದೆ. ಹಾಗೆಯೇ ಈ ಶತಮಾನಗಳ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಎರಡು ಲಕ್ಷ ಹಿಂದೂಗಳ ಆತ್ಮಕ್ಕೆ ಶಾಂತಿ ದೊರೆಯಲಿದೆ. ಈ ಮಂದಿರದ ವಿನ್ಯಾಸದ ಮೂಲಕ ಚಂದ್ರಕಾಂತ ಸೋಂಪುರ ಅವರು ಇತಿಹಾಸದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆಯಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಸ್ಮಾರ್ಟ್‌ ಫೋನಿನ ಸ್ಮಾರ್ಟ್ ಬಳಕೆಗೆ 12 ಸೂತ್ರಗಳು

ಸೈಬರ್‌ ಸೇಫ್ಟಿ ಅಂಕಣ: ಮೊಬೈಲನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಸೈಬರ್ ಜಗತ್ತಿನಲ್ಲಿ ಮಾಲ್‌ವೇರ್, ಫಿಶರ್ ಗಳು, ಅಶ್ಲೀಲ ವೆಬ್‌ಸೈಟ್‌ಗಳು, ಡೇಟಾ ಕಳ್ಳತನ, ಗುರುತಿನ ಕಳ್ಳತನ ಅಥವಾ ಹ್ಯಾಕಿಂಗ್ ಪ್ರಯತ್ನಗಳು, ಮೋಸದ ಯೋಜನೆಗಳು ಮತ್ತಿತರ ವಂಚನೆಗಳಿಗೀಡಾಗುವ ಸಾಧ್ಯತೆಗಳಿವೆ. ಸರಿಯಾದ ಮಾಹಿತಿ ತಿಳಿದುಕೊಂಡು ನಮ್ಮ ದೈನಂದಿನ ಅವಶ್ಯಕತೆಗೆ ಪೂರಕವಾಗಿ, ಜಾಗರೂಕರಾಗಿ ಮೊಬೈಲ್ ಬಳಸುವುದರಿಂದ ಸೈಬರ್ ಅಪರಾಧಗಳಿಗೆ ಬಲಿಯಾಗೋದು ತಪ್ಪುತ್ತದೆ.

VISTARANEWS.COM


on

ಸೈಬರ್‌ ಸೇಫ್ಟಿ cyber safety rules
Koo
cyber-safty-logo

ಸೈಬರ್‌ ಸೇಫ್ಟಿ ಅಂಕಣ: ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಒಟ್ಟು 1.12 ಬಿಲಿಯನ್‌ ಮೊಬೈಲ್‌ ಸಂಪರ್ಕಗಳು (mobile connections) ಸಕ್ರಿಯವಾಗಿವೆಯಂತೆ. ಅದರಲ್ಲಿ ಶೇಕಡ 68.4ರಷ್ಟು ಅಂದರೆ 974.69 ಮಿಲಿಯನ್‌ ಸ್ಮಾರ್ಟ್‌ ಫೋನ್‌ (Smartphone) ಬಳಕೆದಾರರು. ಇಷ್ಟೆಲ್ಲಾ ಜನರು ದಿನ ನಿತ್ಯ ತಮ್ಮ ಬಹುತೇಕ ಸಮಯವನ್ನು ಇದರೊಂದಿಗೆ ಕಳೆಯುತ್ತಾರೆ. ಡಿಜಿಟೈಸೇಶನ್‌ (digitisation) ಆದ ಮೇಲಂತೂ ಎಲ್ಲಿ ಹೊಗುವುದಾದರೂ ಮೊಬೈಲ್‌ ಕೈಯಲ್ಲಿರಲೇ ಬೇಕು. ಜೇಬಿನಲ್ಲಿ ಪರ್ಸ್ ಇರುತ್ತೋ ಇಲ್ವೊ, ಮೊಬೈಲ್‌ ಅಂತೂ ಬೇಕೇ ಬೇಕು. ದೂರವಾಣಿಯ ಬದಲಿಗೆ ಸಂಪರ್ಕ ಸಾಧನವಾಗಿ ಬಂದ ಮೊಬೈಲ್‌ ಇಂದು ನಮ್ಮ ಜೀವನದಿಂದ ಬಹಳಷ್ಟು ವಸ್ತುಗಳನ್ನು ನುಂಗಿ ನಮ್ಮ ಕೈಯಲ್ಲಿ ಬೇರೂರಿದೆ. ಸೆಲ್ಯುಲಾರ್ ಫೋನ್ ಅಥವಾ ಸೆಲ್‌ ಫೋನ್‌ ಎಂದು ಮಾರುಕಟ್ಟೆಗೆ ಬಂದು ತನ್ನ ಬಳಕೆದಾರರನ್ನೇ ತನ್ನ ಸೆಲ್‌ನಲ್ಲಿ ಬಂಧಿಸಿದೆ.

ಸ್ಮಾರ್ಟ್ ಫೋನ್‌ಗಳನ್ನೇನೋ ಬಳಸುತ್ತಿದ್ದೇವೆ. ಆದರೆ ನಾವೆಷ್ಟು ಸ್ಮಾರ್ಟ್‌ ಆಗಿದ್ದೇವೆ?

ಇಂದು ಇಂಟರ್ನೆಟ್ (ಅಂತರ್ಜಾಲ), ಕಂಪ್ಯೂಟರ್ (ಗಣಕ ಯಂತ್ರ), ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ಸ್ಮಾರ್ಟ್ ಸಾಧನಗಳಲ್ಲಿ ನಾವು ಪ್ರತಿದಿನ ಎಷ್ಟು ಸಮಯವನ್ನು ಕಳೆಯುತ್ತೇವೆ ಎಂದು ಯೋಚಿಸಿದ್ದೀರಾ? ಅಂಗೈಯಲ್ಲೇ ಅಂತರ್ಜಾಲ, ಅರಿವಿದೆಯೇ ಅಪಾಯ?

ನಾವು ಇಂಟರ್ನೆಟ್ ಸಂವಹನ ಮಾಧ್ಯಮಗಳಾದ Google, ಇಮೇಲ್‌ಗಳು, ವಾಟ್ಸಪ್ (WhatsApp), ಫೇಸ್ಬುಕ್ (Facebook), ಇನ್ಸಟಗ್ರಾಮ್ (Instagram), ಯೂ ಟ್ಯೂಬ್ (YouTube), ಟ್ವಿಟ್ಟರ್ (Twitter) ಇತ್ಯಾದಿಗಳನ್ನು ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿ ಮಾಡಿದ್ದೇವೆ. ಇದೆಲ್ಲವೂ ನಮಗೆ ಸ್ಮಾರ್ಟ್‌ಫೋನಿನಲ್ಲೇ ಲಭ್ಯ. ಜೊತೆಗೆ ವಿಧ ವಿಧವಾದ ಆಟಗಳು, ಆಕರ್ಷಿಸುವ ವಿಡಿಯೋಗಳು ನಮ್ಮ ಗಮನವನ್ನು ಯಾವಾಗಲೂ ತಮ್ಮತ್ತ ಸೆಳೆಯುತ್ತಿರುತ್ತದೆ. ಆನ್ಲೈನ್ ತರಗತಿಗಳಿಗೆ, ಮತ್ತು ಶೈಕ್ಷಣಿಕ ವಿಚಾರಗಳಿಗೆ, ಕಲಿಕೆಗೆ ಕೊಂಡ ಮೊಬೈಲ್ ದುರ್ಬಳಕೆ ಆಗಬಹುದು. ಈ ಸಂದರ್ಭದಲ್ಲಿ, ಸೈಬರ್ ಜಗತ್ತಿನ ಬಗ್ಗೆ, ಮತ್ತು ಅಲ್ಲಿ ಸುರಕ್ಷಿತವಾಗಿರಲು ಹೇಗಿರಬೇಕು ಅಥವಾ ಏನು ಮಾಡಬಾರದು ಎಂದು ತಿಳಿದಿರುವುದಿಲ್ಲ. ಜೊತೆಗೆ, ನಮ್ಮಲ್ಲಿ ಹೆಚ್ಚಿನವರಿಗೆ ಸೈಬರ್ ಸುರಕ್ಷತೆ ಮತ್ತು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಭದ್ರತಾ ಅಗತ್ಯಗಳ ಬಗ್ಗೆ ತಿಳಿದಿಲ್ಲ.

ಇಂಟರ್ನೆಟ್ ಒಂದು ಜಾಗತಿಕ ನೆಟ್ವರ್ಕ್. ಜಗದೆಲ್ಲಾ ಮಾಹಿತಿಗಳ ಆಗರ. ನಿಮ್ಮ ಮೆಸೇಜ್, ನೀವು ಓದುವ ವಿಷಯಗಳು, ವಾಟ್ಸಪ್, ಫೇಸ್ಬುಕ್, ಗೂಗಲ್ ಮುಂತಾದ ಆಪ್ಗಳು ಕೆಲಸಮಾಡಲು ಇಂಟರ್ನೆಟ್ ಸೌಲಭ್ಯ ಅತ್ಯವಶ್ಯಕ. ಇಂಟರ್ನೆಟ್‌ ಮುಖಾಂತರ ಹಂಚಿಕೊಳ್ಳಲಾದ ಯಾವುದೇ ಮಾಹಿತಿ ಅಥವಾ ವೈಯಕ್ತಿಕ ವಿವರಗಳು ಆನ್‌ಲೈನ್‌ನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ ಆನ್ಲೈನ್ ಗೆ ಅಪ್ ಲೋಡ್ ಆದ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸುವುದು ತುಂಬಾ ಕಷ್ಟ. ಮತ್ತು ನೀವು ನೋಡಿದ ಪ್ರತಿಯೊಂದು ವೆಬ್ ಸೈಟ್, ವಿಡಿಯೋ, ನೋಡಿದ ಯಾವುದೇ ತರಹದ ಮಾಹಿತಿ ನಿಮ್ಮ ಆನ್ಲೈನ್ ವರ್ತನೆಯನ್ನು ಯಾರಿಗಾದರೂ ತಿಳಿಸುತ್ತದೆ. ಇದನ್ನು ‘ಡಿಜಿಟಲ್ ಫುಟ್ ಪ್ರಿಂಟ್’ ಎನ್ನುತ್ತಾರೆ. ಈ ಫುಟ್ ಪ್ರಿಂಟನ್ನು ಅಳಿಸುವುದು ಅಸಾಧ್ಯ. ಅದು ನಿಮ್ಮ ಬಗ್ಗೆ ನಿಮ್ಮ ಸ್ನೇಹಿತರು, ಸಂಬಂಧಿಗಳ ಬಗ್ಗೆ, ನಿಮ್ಮ ಇಷ್ಟ ಮತ್ತು ಆಧ್ಯತೆಗಳ ಬಗ್ಗೆ ತಿಳಿಯುವ ಆಸಕ್ತರಿಗೆ ಸುಲಭವಾಗಿ ತಿಳಿಸುತ್ತದೆ.

ಮೊಬೈಲನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಸೈಬರ್ ಜಗತ್ತಿನಲ್ಲಿ ಮಾಲ್‌ವೇರ್, ಫಿಶರ್ ಗಳು, ಅಶ್ಲೀಲ ವೆಬ್‌ಸೈಟ್‌ಗಳು, ಡೇಟಾ ಕಳ್ಳತನ, ಗುರುತಿನ ಕಳ್ಳತನ ಅಥವಾ ಹ್ಯಾಕಿಂಗ್ ಪ್ರಯತ್ನಗಳು, ಮೋಸದ ಯೋಜನೆಗಳು ಮತ್ತಿತರ ವಂಚನೆಗಳಿಗೀಡಾಗುವ ಸಾಧ್ಯತೆಗಳಿವೆ. ಸರಿಯಾದ ಮಾಹಿತಿ ತಿಳಿದುಕೊಂಡು ನಮ್ಮ ದೈನಂದಿನ ಅವಶ್ಯಕತೆಗೆ ಪೂರಕವಾಗಿ, ಜಾಗರೂಕರಾಗಿ ಮೊಬೈಲ್ ಬಳಸುವುದರಿಂದ ಸೈಬರ್ ಅಪರಾಧಗಳಿಗೆ ಬಲಿಯಾಗೋದು ತಪ್ಪುತ್ತದೆ.

ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಜಾಗರೂಕತೆಯಿಂದಿದ್ದರೆ ನೀವು ಸೈಬರ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

ಸುರಕ್ಷಿತವಾಗಿ ಮೊಬೈಲ್ ಬಳಸಲು ಹನ್ನೆರಡು ಸೂತ್ರಗಳು:

1) ಪಿನ್‌ಗಳು ಮತ್ತು ಪಾಸ್‌ವರ್ಡ್‌ಗಳನ್ನು ಅಳವಡಿಸಿಕೊಳ್ಳಿ. ನಿಮ್ಮ ಫೋನ್‌ಗೆ ಅನಧಿಕೃತ ಪ್ರವೇಶವನ್ನು ತಡೆಯಲು, ನಿಮ್ಮ ಫೋನ್ ಕಳೆದುಹೋದರೆ ಅಥವಾ ಕಳುವಾದಾಗ ರಕ್ಷಣೆಯ ಮೊದಲ ಸಾಲಿನಂತೆ (first line of defence) ನಿಮ್ಮ ಫೋನ್‌ನ ಮುಖಪುಟದಲ್ಲಿ ಪಾಸ್‌ವರ್ಡ್ ಅಥವಾ ವೈಯಕ್ತಿಕ ಗುರುತಿನ ಸಂಖ್ಯೆಯನ್ನು (ಪಿನ್) ಹೊಂದಿಸಿ. ನಿಮ್ಮ ಪ್ರತಿಯೊಂದು ಪ್ರಮುಖ ಲಾಗ್-ಇನ್‌ಗಳಿಗೆ (ಇಮೇಲ್, ಬ್ಯಾಂಕಿಂಗ್, ವೈಯಕ್ತಿಕ ಸೈಟ್‌ಗಳು, ಇತ್ಯಾದಿ) ಬೇರೆ ಪಾಸ್‌ವರ್ಡ್ ಬಳಸಿ. ನಿಮ್ಮ ಫೋನ್ ನಿಷ್ಕ್ರಿಯವಾಗಿರುವಾಗ ಐದು ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದ ನಂತರ ಸ್ವಯಂಚಾಲಿತವಾಗಿ ಲಾಕ್ ಆಗುವಂತೆ ನಿಮ್ಮ ಫೋನಿನಲ್ಲಿ ಸಂಯೋಜಿಸಿಕೊಳ್ಳಿ.

2) ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಿ ಮತ್ತು ಸುರಕ್ಷಿತಗೊಳಿಸಿ. ನಿಮ್ಮ ಫೋನ್‌ನಲ್ಲಿ ಸಂಗ್ರಹವಾಗಿರುವ ಎಲ್ಲಾ ಡೇಟಾವನ್ನು ನೀವು ಬ್ಯಾಕಪ್ ಮಾಡಬೇಕು – ಉದಾಹರಣೆಗೆ ನಿಮ್ಮ ಸಂಪರ್ಕಗಳು, ಡಾಕ್ಯುಮೆಂಟ್‌ಗಳು ಮತ್ತು ಫೋಟೋಗಳು. ಈ ಫೈಲ್‌ಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ, ಅಥವಾ ಕ್ಲೌಡ್‌ನಲ್ಲಿ ಸಂಗ್ರಹಿಸಬಹುದು. ನಿಮ್ಮ ಫೋನ್ ಕಳೆದುಹೋದರೆ, ಕದ್ದಿದ್ದರೆ ಅಥವಾ ಅಳಿಸಿದರೆ ಅದನ್ನು ಅನುಕೂಲಕರವಾಗಿ ಮರುಸ್ಥಾಪಿಸಲು ಇದು ಸಹಾಯಮಾಡುತ್ತದೆ.

3) ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿ. ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಅಪ್ಲಿಕೇಶನ್ ಕಾನೂನುಬದ್ಧವಾಗಿದೆ ಎಂದು ಖಚಿತಪಡಿಸಿಕೊಡು ಅಳವಡಿಸಿಕೊಳ್ಳಿ. ಅಪ್ಲಿಕೇಶನ್‌ನ ನ್ಯಾಯಸಮ್ಮತತೆಯನ್ನು ಪರಿಶೀಲಿಸಲು ಅದರ ಬಗ್ಗೆ ಇರುವ ವಿಮರ್ಶೆಗಳನ್ನು ನೋಡಿ, ಅಪ್ಲಿಕೇಶನ್ ಸ್ಟೋರ್‌ನ ಕಾನೂನುಬದ್ಧತೆಯನ್ನು ದೃಢೀಕರಿಸಿಕೊಳ್ಳಿ, ಮತ್ತು ಅಪ್ಲಿಕೇಶನ್ ಪ್ರಾಯೋಜಕರ ಅಧಿಕೃತ ವೆಬ್‌ಸೈಟ್ ಅನ್ನು ನೋಡಿ. ವಿಶ್ವಾಸಾರ್ಹವಲ್ಲದ ಮೂಲಗಳಿಂದ ಅಳವಡಿಸುವ ಅನೇಕ ಅಪ್ಲಿಕೇಶನ್‌ಗಳು ಮಾಲ್‌ವೇರ್ ಅನ್ನು ಒಳಗೊಂಡಿರುತ್ತವೆ. ಅದು ಒಮ್ಮೆ ನಿಮ್ಮ ಫೋನಿನಲ್ಲಿ ಸ್ಥಾಪಿತವಾದರೆ ಮಾಹಿತಿಯನ್ನು ಕದಿಯಬಹುದು, ವೈರಸ್‌ಗಳನ್ನು ಸಕ್ರಿಯಗೊಳಿಸಬಹುದು ಮತ್ತು ನಿಮ್ಮ ಫೋನ್‌ನಲ್ಲಿರುವ ವಿಷಯಗಳಿಗೆ ಹಾನಿಯನ್ನು ಉಂಟುಮಾಡಬಹುದು.

cyber safety

4) ಅಪ್ಲಿಕೇಶನ್ ಅನುಮತಿಗಳನ್ನು ಸ್ವೀಕರಿಸುವ ಮೊದಲು ಅವುಗಳನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಫೋನ್‌ನಲ್ಲಿನ ವೈಯಕ್ತಿಕ ಮಾಹಿತಿಗೆ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುವ ಬಗ್ಗೆ ಅಥವಾ ನಿಮ್ಮ ಫೋನ್‌ನಲ್ಲಿ ಕಾರ್ಯಗಳನ್ನು ನಿರ್ವಹಿಸಲು ಅಪ್ಲಿಕೇಶನ್‌ಗೆ ಪ್ರವೇಶವನ್ನು ಅನುಮತಿಸುವ ಬಗ್ಗೆ ನೀವು ಜಾಗರೂಕರಾಗಿರಬೇಕು. ಸ್ಥಾಪಿಸುವ ಮೊದಲು ಪ್ರತಿ ಅಪ್ಲಿಕೇಶನ್‌ನ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸಹ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.

5) ಉಪಯೋಗಿಸದ ಆಪ್ ಗಳನ್ನು ತೆಗೆದು ಹಾಕಿ. ನಿಮ್ಮ ಮೊಬೈಲ್‌ನಲ್ಲಿ ನೀವು ನಿತ್ಯ ಬಳಸುವ ಎಷ್ಟು ಆ್ಯಪ್‌ಗಳಿವೆ? ಅವುಗಳು ಉಪಯೋಗ ಆಗದಿದ್ದರೂ ನಿಮ್ಮ ಫೋನಿನಿಂದ ಮಾಹಿತಿಯನ್ನು ಹೊರಗೆ ಕಳಿಸಬಹುದಲ್ಲವೇ? ಅನಗತ್ಯ ಆ್ಯಪ್‌ಗಳನ್ನು ‘ಅನ್‌ಇನ್ಸ್‌ಟಾಲ್‌’ ಮಾಡಿ. ನಿಮ್ಮ ಫೋನಿನ ಸೆಟ್ಟಿಂಗ್ಸ್‌ನಲ್ಲಿ ಅಪ್ಲಿಕೇಶನ್ಸ್ ವಿಭಾಗದಲ್ಲಿ ಅಳವಡಿಕೆಯಾಗಿರುವ ಎಲ್ಲಾ ಆ್ಯಪ್‌ಗಳನ್ನು ನೋಡಬಹುದು. ಅಲ್ಲಿಂದಲೇ ಅಸ್ಥಾಪಿಸಿ.

6) ನಿಮ್ಮ ಮೊಬೈಲ್ ನ ಆಪರೇಟಿಂಗ್ ಸಿಸ್ಟಮ್ ಅನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಿಕೊಳ್ಳಿ. ಜೊತೆಗೆ ನಿಮ್ಮ ಮೊಬೈಲ್ ಸುರಕ್ಷತೆಗೆ ಸರಿಯಾದ ಆಂಟಿವೈರಸ್ ಸಾಫ್ಟ್ ವೇರ್ ಬಳಸಿರಿ.

7) ನೀವು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆಯೇ ನಿಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಸುರಕ್ಷಿತಗೊಳಿಸಿ: ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೀವು ಸರಿಯಾದ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡದಿದ್ದರೆ, ಪೋಸ್ಟ್ ಮಾಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮಗೆ ತಿಳಿಯದೆ ಇತರರು ವೀಕ್ಷಿಸಬಹುದು, ಡೌನ್‌ಲೋಡ್ ಮಾಡಬಹುದು ಮತ್ತು ಬಳಸಬಹುದು.

8) ವೀಡಿಯೊ ಚಾಟ್ ಮತ್ತು ವೀಡಿಯೊ ಕರೆಗಳಲ್ಲಿ ನಿಮ್ಮ ಗೋಚರಿಸುವಿಕೆಯ ಬಗ್ಗೆ ಗಮನವಿರಲಿ: ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿನ ನಿಮ್ಮ ವೀಡಿಯೊ ಚಾಟ್‌ಗಳನ್ನು ಇನ್ನೊಂದು ಬದಿಯಲ್ಲಿರುವ ವ್ಯಕ್ತಿ ರೆಕಾರ್ಡ್ ಮಾಡಬಹುದು. ಅಪರಿಚಿತರಿಂದ ಚಾಟ್ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ.

9) ಸೂಕ್ಷ್ಮ ವೈಯಕ್ತಿಕ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆಯಲು ಸ್ಮಾರ್ಟ್‌ಫೋನ್ ಬಳಸಬೇಡಿ: ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಇಂಟರ್ನೆಟ್ ಮತ್ತು ಕ್ಲೌಡ್ ಸ್ಟೋರೇಜ್‌ಗೆ ಸಂಪರ್ಕ ಹೊಂದಿರುತ್ತದೆ. ಕ್ಲೌಡ್‌ನೊಂದಿಗೆ ಸಂಪರ್ಕಗೊಂಡಿರುವ ಸ್ಮಾರ್ಟ್‌ಫೋನ್ ಬಳಸಿ ಚಿತ್ರ ಅಥವಾ ವೀಡಿಯೊವನ್ನು ಕ್ಲಿಕ್ ಮಾಡಿದ್ದರೆ/ರೆಕಾರ್ಡ್ ಮಾಡಿದ್ದರೆ, ಅದು ಸ್ವಯಂಚಾಲಿತವಾಗಿ ಕ್ಲೌಡ್‌ನಲ್ಲಿ ಸೇವ್ ಆಗಬಹುದು. ಬಳಕೆದಾರರು ತಮ್ಮ ಫೋನ್‌ನಿಂದ ತಮ್ಮ ಫೋಟೋಗಳು ಅಥವಾ ವೀಡಿಯೊಗಳನ್ನು ಅಳಿಸಿದರೂ ಸಹ, ಅದೇ ಫೋಟೋ ಅಥವಾ ವೀಡಿಯೊವನ್ನು ಕ್ಲೌಡ್ ಖಾತೆಯಿಂದ ಅಥವಾ ಅದೇ ಖಾತೆಯನ್ನು ಬಳಸಿಕೊಂಡು ಕ್ಲೌಡ್‌ಗೆ ಸಂಪರ್ಕಗೊಂಡಿರುವ ಯಾವುದೇ ಇತರ ಸಾಧನ/ಪಿಸಿಯಿಂದ ಮರುಪಡೆಯಬಹುದು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

10) ಸೈಬರ್ ಹಿಂಬಾಲಿಸುವಿಕೆಯಿಂದ (stalking) ನಿಮ್ಮನ್ನು ರಕ್ಷಿಸಿಕೊಳ್ಳಿ: ನಿಮ್ಮಿಂದ ನಿರಾಸಕ್ತಿಯ ಸ್ಪಷ್ಟ ಸೂಚನೆಯ ಹೊರತಾಗಿಯೂ ಸೈಬರ್ ಹಿಂಬಾಲಕರು ನಿಮ್ಮ ಮೇಲೆ ಪದೇ ಪದೇ ಆಸಕ್ತಿಯನ್ನು ತೋರಿಸುತ್ತಾರೆ. ಅವರು ಹಿಂಬಾಲಿಸಲು ಇಂಟರ್ನೆಟ್, ಇಮೇಲ್, ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಂವಹನವನ್ನು ಬಳಸುತ್ತಾರೆ. ಸಾಮಾಜಿಕ ಮಾಧ್ಯಮ ಸೈಟ್‌ಗಳು, ಮೊಬೈಲ್ ಸಾಧನಗಳು ಇತ್ಯಾದಿಗಳಿಗೆ ಸ್ಥಳ ಸೇವೆಗಳನ್ನು(location) ನಿಷ್ಕ್ರಿಯಗೊಳಿಸಿ. ನಿಮ್ಮ ವೈಯಕ್ತಿಕ ಮಾಹಿತಿಯಾದ ಫೋನ್ ಸಂಖ್ಯೆ, ಇಮೇಲ್ ವಿಳಾಸ, ಛಾಯಾಚಿತ್ರಗಳನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದನ್ನು ತಡೆಯಿರಿ. ನೀವು ಸೈಬರ್ ಹಿಂಬಾಲಿಕೆಗೆ ಸಿಕ್ಕಿದ್ದೀರಿ ಎಂದು ನೀವು ಭಾವಿಸಿದರೆ, ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಸಹಾಯ ಪಡೆಯಿರಿ.

11) ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಎಚ್ಚರದಿಂದಿರಿ- ಎಲ್ಲಾ ಖಾತೆಗಳು ನಿಜವಲ್ಲ ಮತ್ತು ಖಾತೆಗಳಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಯು ನಿಜವಲ್ಲ. ಅಪರಿಚಿತರಿಂದ ಸ್ನೇಹಿತರ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ.

12) ಸೇವೆ/ದುರಸ್ತಿ/ಮಾರಾಟ ಅಥವಾ ರಿಚಾರ್ಜ್ ಗೆ ನಿಮ್ಮ ಮೊಬೈಲ್ ಸಾಧನಗಳನ್ನು ನೀಡುವಾಗ ಜಾಗರೂಕರಾಗಿರಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

Continue Reading

ಅಂಕಣ

ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

ರಾಜಮಾರ್ಗ ಅಂಕಣ: ಅದು 1984ರಲ್ಲಿ ಮುಂಬೈಯಲ್ಲಿ ಜನ್ಮ ತಾಳಿದ ಮತ್ತು ಇಂದು ಭಾರತದ ನೂರಾರು ನಗರಗಳಿಗೆ ವಿಸ್ತರಿಸಿರುವ ಭಾರತದ ಟಾಪ್ ಮೋಸ್ಟ್ ಐಸ್ ಕ್ರೀಮ್ ಬ್ರಾಂಡ್ ಬೆಳೆದು ನಿಂತ ಕಥೆ ತುಂಬಾ ರೋಚಕ. ಅದರ ಹಿಂದಿರುವ ವಿಶನರಿ ಒಬ್ಬ ಹಣ್ಣಿನ ವ್ಯಾಪಾರಿಯ ಮಗ. ಅವರು ಮೂಲತಃ ಮುಲ್ಕಿಯವರು. ಹೆಸರು ರಘುನಂದನ್ ಶ್ರೀನಿವಾಸ್ ಕಾಮತ್.

VISTARANEWS.COM


on

natural ice cream 1 rajamarga coumn
Koo

ಮಂಗಳೂರಿನ ಒಬ್ಬ ಸಾಮಾನ್ಯ ಹಣ್ಣಿನ ವ್ಯಾಪಾರಿಯ ಮಗ 300 ಕೋಟಿ ರೂ. ವಾರ್ಷಿಕ ಆದಾಯದ ಕಂಪೆನಿಯನ್ನು ಕಟ್ಟಿದ ಕಥೆ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ʼನ್ಯಾಚುರಲ್ ಐಸ್ ಕ್ರೀಮ್’ (ಣಾಇಂದು ಯಾರಿಗೆ ಗೊತ್ತಿಲ್ಲ ಹೇಳಿ? ವೆನಿಲ್ಲಾ, ಸ್ಟ್ರಾಬೆರಿ, ಚಾಕೊಲೇಟ್ ಮೊದಲಾದ ಕೃತಕ ಫ್ಲೇವರಗಳ ಈ ಕಾಲದಲ್ಲಿ ತಾಜಾ ಹಣ್ಣುಗಳ ರುಚಿ ರುಚಿಯಾದ ತಿರುಳನ್ನು ಬೆರೆಸಿ ತಯಾರಿಸಿರುವ ಸ್ವಾದಿಷ್ಟವಾದ ಐಸ್ ಕ್ರೀಂ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ?

ಅದು 1984ರಲ್ಲಿ ಮುಂಬೈಯಲ್ಲಿ ಜನ್ಮ ತಾಳಿದ ಮತ್ತು ಇಂದು ಭಾರತದ ನೂರಾರು ನಗರಗಳಿಗೆ ವಿಸ್ತರಿಸಿರುವ ಭಾರತದ ಟಾಪ್ ಮೋಸ್ಟ್ ಐಸ್ ಕ್ರೀಮ್ ಬ್ರಾಂಡ್ ಬೆಳೆದು ನಿಂತ ಕಥೆ ತುಂಬಾ ರೋಚಕ. ಅದರ ಹಿಂದಿರುವ ವಿಶನರಿ ಒಬ್ಬ ಹಣ್ಣಿನ ವ್ಯಾಪಾರಿಯ ಮಗ. ಅವರು ಮೂಲತಃ ಮುಲ್ಕಿಯವರು. ಹೆಸರು ರಘುನಂದನ್ ಶ್ರೀನಿವಾಸ್ ಕಾಮತ್.

15ನೆಯ ವರ್ಷಕ್ಕೆ ಮುಂಬೈಗೆ ಹೊರಟರು

ಅವರ ತಂದೆ ಮೂಲ್ಕಿಯಲ್ಲಿ ಒಬ್ಬ ಸಣ್ಣ ಹಣ್ಣಿನ ವ್ಯಾಪಾರಿ ಆಗಿದ್ದರು. ಈ ಹುಡುಗ ರಘುನಂದನ್ ಕಾಮತ್ ಮನೆಯ ಏಳು ಮಂದಿ ಮಕ್ಕಳಲ್ಲಿ ಅತ್ಯಂತ ಕಿರಿಯರು. ಹುಟ್ಟಿದ್ದು 1954ರಲ್ಲಿ. ಮನೆಯಲ್ಲಿ ತೀವ್ರ ಬಡತನ ಇದ್ದ ಕಾರಣ ಶಿಕ್ಷಣ ಅರ್ಧಕ್ಕೆ ನಿಂತಿತು. ಅಪ್ಪನ ಜೊತೆ ಹೋಗಿ ಹಣ್ಣುಗಳನ್ನು ಕಿತ್ತು ತರುವುದು, ಒಳ್ಳೆಯ ಹಣ್ಣುಗಳನ್ನು ಆಯುವುದು ಅವರ ಕೆಲಸ. ಮುಂದೆ ಹಸಿವು ತಡೆಯಲು ಕಷ್ಟ ಆದಾಗ ಹದಿನೈದನೇ ವರ್ಷಕ್ಕೇ ಮುಂಬೈಗೆ ಪ್ರಯಾಣ ಬೆಳೆಸಿದರು.

ಅಲ್ಲಿ ಅವರ ಅಣ್ಣನ ಸಣ್ಣ ಹೋಟೆಲು ಇತ್ತು. ಅಲ್ಲಿ ಕೆಲಸ ಮಾಡುತ್ತ ರಘುನಂದನ್ ಹೋಟೆಲ್ ಕೆಲಸ ಕಲಿತರು. ಅಣ್ಣನ ಹೋಟೆಲಿನಲ್ಲಿ ವಿವಿಧ ಕಂಪೆನಿಯ ಐಸ್ ಕ್ರೀಮ್ ದೊರೆಯುತ್ತಿದ್ದವು. ಅವುಗಳೆಲ್ಲವೂ ಕೃತಕವಾದ ಫ್ಲೇವರ್ ಹೊಂದಿದ್ದವು. ನಾವ್ಯಾಕೆ ತಾಜಾ ಹಣ್ಣಿನ ತಿರುಳು ಇರುವ ಐಸ್ ಕ್ರೀಂ ಮಾಡಬಾರದು? ಎಂಬ ಯೋಚನೆಯು ಅವರ ಪುಟ್ಟ ಮೆದುಳಿಗೆ ಬಂದಿತು. ಅದನ್ನು ಅವರ ತನ್ನ ಅಣ್ಣನ ಜೊತೆಗೆ ಚರ್ಚೆ ಮಾಡಿದಾಗ ಅಣ್ಣ ರಿಸ್ಕ್ ತೆಗೆದುಕೊಳ್ಳಲು ಒಪ್ಪಲಿಲ್ಲ. ಬಂಡವಾಳ ಹಾಕೋದು ಸಾಧ್ಯವೇ ಇಲ್ಲ ಎಂದು ಬಿಟ್ಟರು. ಆದರೆ ರಘುನಂದನ್ ಕನಸು ಸಾಯಲೇ ಇಲ್ಲ.

1983ರಲ್ಲಿ ಜುಹೂನಲ್ಲಿ ಅವರ ಒಂದು ಸಣ್ಣ ಹೋಟೆಲು ಆರಂಭ ಮಾಡಿದರು.

ರಘುನಂದನ್ ಆರಂಭ ಮಾಡಿದ 200 ಚದರಡಿ ಜಾಗದ ಉಸಿರು ಕಟ್ಟುವ ಸಣ್ಣ ಹೋಟೆಲು ಅದು. ನಾಲ್ಕು ಜನ ಕೆಲಸದವರು. ಒಟ್ಟು ಆರು ಟೇಬಲಗಳು. ಪಾವ್ ಬಾಜಿ ಮತ್ತು ಕೆಲವೇ ಕೆಲವು ತಾಜಾ ಹಣ್ಣಿನ ಐಸ್ ಕ್ರೀಂ ತಯಾರಿಸಿ ಗ್ರಾಹಕರ ಮುಂದೆ ಅವರು ಇರಿಸಿದರು. ಆರಂಭದಲ್ಲಿ ಅನಾನಸು, ದ್ರಾಕ್ಷಿ, ಪಪ್ಪಾಯ, ಚಿಕ್ಕು, ಸೀಬೆ, ಮಾವು, ದಾಳಿಂಬೆ ಮೊದಲಾದ ಹಣ್ಣುಗಳ ಐಸ್ ಕ್ರೀಮ್ ರೆಡಿ ಆದವು.

ಮುಂಬೈಯ ಗ್ರಾಹಕರಿಗೆ ಈ ನ್ಯಾಚುರಲ್ ಐಸ್ ಕ್ರೀಂ ಭಾರೀ ಇಷ್ಟ ಆಯ್ತು. ಜನರು ಕ್ಯೂ ನಿಂತು ಐಸ್ ಕ್ರೀಮ್ ಚಪ್ಪರಿಸಿ ತಿಂದರು. ಜುಹೂ ನಗರದ ರಸ್ತೆಗಳಲ್ಲಿ ಇವರ ಕ್ರೀಮ್ ಪಾರ್ಲರ್ ಕಾರಣಕ್ಕೆ ಟ್ರಾಫಿಕ್ ಜಾಮ್ ಆಯಿತು! ಒಂದು ವರ್ಷ ಮುಗಿಯುವುದರ ಒಳಗೆ ಹತ್ತು ಹಣ್ಣಿನ ತಿರುಳು ಇರುವ ಐಸ್ ಕ್ರೀಮಗಳನ್ನು ಅವರು ರೆಡಿ ಮಾಡಿದ್ದರು. ಜನರಿಗೆ ತುಂಬಾ ತಾಜಾ ಆದ ಹಾಗೂ ಸ್ವಾದಿಷ್ಟತೆ ಇರುವ ಈ ಹಣ್ಣುಗಳ ಐಸ್ ಕ್ರೀಂ ರುಚಿ ತುಂಬಾನೇ ಇಷ್ಟ ಆಯ್ತು. ಕ್ರಮೇಣ ಪಾವ್ ಭಾಜಿ ನಿಲ್ಲಿಸಿ ಅವರು ಐಸ್ ಕ್ರೀಂ ಕಾರ್ನರ್ ಮಾತ್ರ ಮುಂದುವರೆಸಿದರು.

ನ್ಯಾಚುರಲ್ ಐಸ್ ಕ್ರೀಮ್ ಅಂದರೆ ರಾಜಿಯೇ ಇಲ್ಲದ ಗುಣಮಟ್ಟ ಮತ್ತು ಸ್ವಾದ

ರಘುನಂದನ್ ಕಾಮತ್ ಅವರ ದಣಿವರಿಯದ ಅದ್ಭುತ ಉತ್ಸಾಹ, ಸಂಶೋಧನಾ ಪ್ರವೃತ್ತಿ, ಗ್ರಾಹಕರ ಅಭಿರುಚಿ ರೀಡ್ ಮಾಡುವ ಕೌಶಲ ಮತ್ತು ಗುಣಮಟ್ಟ ಕಾಪಾಡುವ ಆಸ್ತೆ………ಇವುಗಳಿಂದ NATURALS ICE CREAM ಮುಂಬೈ ಮಹಾನಗರದ ಭಾರೀ ದೊಡ್ಡ ಬ್ರಾಂಡ್ ಆಗಿ ಬೆಳೆಯಲು ಹೆಚ್ಚು ವರ್ಷ ಬೇಕಾಗಲಿಲ್ಲ. Taste the original ಅನ್ನುವುದು ಅದರ ಟ್ಯಾಗ್ ಲೈನ್ ಆಗಿತ್ತು.

ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಮುಂಬೈಯಲ್ಲಿ ಐದು ಸುಸಜ್ಜಿತ ಕ್ರೀಮ್ ಪಾರ್ಲರ್ ಉದ್ಘಾಟನೆ ಆದವು. ಪೇರಳೆ, ಸೀಯಾಳ, ಹಲಸಿನ ಹಣ್ಣು, ಮಸ್ಕ್ ಮೇಲನ್, ಕಲ್ಲಂಗಡಿ, ಮಾವಿನ ಹಣ್ಣು, ಲಿಚ್ಚಿ, ಫಿಗ್, ಸೀತಾ ಫಲ, ಜಾಮೂನ್, ತಾಳೆ ಹಣ್ಣು, ನೇರಳೆ ಹಣ್ಣುಗಳ ಐಸ್ ಕ್ರೀಂಗಳು ಭಾರೀ ಜನಪ್ರಿಯವಾದವು.

ಜಾಹೀರಾತಿಗೆ ವಿನಿಯೋಗ ಮಾಡಿದ್ದು 1% ದುಡ್ಡು ಮಾತ್ರ!

ಪಾರ್ಲರಗಳಲ್ಲಿ ಗ್ರಾಹಕರ ಅಭಿರುಚಿಗೆ ಅನುಗುಣವಾದ ವಾತಾವರಣವು ರೆಡಿ ಆಯ್ತು. ತರಬೇತು ಆದ ಸಿಬ್ಬಂದಿ ವರ್ಗ ಗ್ರಾಹಕರ ಸೇವೆಗೆ ಸಿದ್ಧವಾಯಿತು. ಗುಣಮಟ್ಟ ಮತ್ತು ಸ್ವಾದ ಚೆನ್ನಾಗಿದ್ದ ಕಾರಣ ಕಾಮತರು ಕೇವಲ ಒಂದು ಶೇಕಡಾ ವ್ಯಾಪಾರದ ದುಡ್ಡನ್ನು ಜಾಹೀರಾತಿಗೆ ಖರ್ಚು ಮಾಡಿದರು. ಅವರ ಐಸ್ ಕ್ರೀಮ್ ಗೆ ಅವರೇ ಬ್ರಾಂಡ್ ರಾಯಭಾರಿ ಆದರು. ಗ್ರಾಹಕರ ಬಾಯಿಂದ ಬಾಯಿಗೆ ತಲುಪುವ ಮೆಚ್ಚುಗೆಯ ಮಾತುಗಳೇ ಕಂಪೆನಿಗೆ ಜಾಹೀರಾತು ಆದವು. ಗ್ರಾಹಕರ ವಿಶ್ವಾಸವು ಹೆಚ್ಚಿದಂತೆ ಅವರ ಐಸ್ ಕ್ರೀಂ ಬಹಳ ದೊಡ್ಡ ಬ್ರಾಂಡ್ ಆಗಿ ಬೆಳೆಯಿತು.

ನಾವೀನ್ಯತೆ, ಸಂಶೋಧನೆ ಮತ್ತು ಬ್ರಾಂಡಿಂಗ್!

ಮುಂದೆ ದೂರದ ಊರುಗಳಿಂದ ಬೇಡಿಕೆ ಬಂದಾಗ ಐಸ್ ಕ್ರೀಂ ಸಾಗಾಟವು ತೊಂದರೆ ಆಯಿತು. ಆಗ ಕಾಮತರು ವಿಶೇಷವಾದ ಥರ್ಮೋಕೊಲ್ ಪ್ಯಾಕೇಜಿಂಗ್ ಇಂಡಸ್ಟ್ರಿ ಆರಂಭ ಮಾಡಿದರು. ಅದರಿಂದ ಐಸ್ ಕ್ರೀಮನ್ನು ದೀರ್ಘ ಕಾಲಕ್ಕೆ ಕಾಪಿಡಲು ಸಾಧ್ಯ ಆಯ್ತು. ರಘುನಂದನ್ ಕಾಮತ್ ಅವರ ಉತ್ಸಾಹಕ್ಕೆ ಎಣೆಯೇ ಇರಲಿಲ್ಲ. ಅವರು ಶುದ್ಧವಾದ ಹಾಲು, ಫಾರ್ಮ್ ಫ್ರೆಶ್ ತೋಟದ ಹಣ್ಣುಗಳು ಇಡೀ ವರ್ಷ ದೊರೆಯುವಂತೆ ಮಾಡಿದರು. ಕೆಲವೇ ಕೆಲವು ಸೀಸನಲ್ ಹಣ್ಣುಗಳ ಐಸ್ ಕ್ರೀಮ್ ಕೂಡ ಸಿದ್ಧವಾಯಿತು. ಎಲ್ಲಾ ಹಣ್ಣುಗಳನ್ನು ಅವರು ರೈತರಿಂದ ನೇರ ಖರೀದಿ ಮಾಡಿದರು. ಇದೆಲ್ಲದರ ಫಲವಾಗಿ ನ್ಯಾಚುರಲ್ ಐಸ್ ಕ್ರೀಂ ಕಂಪೆನಿಯು ಮುಂಬೈ ಮಹಾನಗರದ ಹೊರಗೆ ತನ್ನ ಶಾಖೆಗಳನ್ನು ತೆರೆಯಿತು. ಫ್ರಾಂಚೈಸಿಗಳಿಗೆ ಭಾರೀ ಬೇಡಿಕೆ ಬಂದಿತು.

ನ್ಯಾಚುರಲ್ ಐಸ್ ಕ್ರೀಂ ಬ್ರಾಂಡಿನ ಸೀಮೋಲ್ಲಂಘನ!

2015ರ ಹೊತ್ತಿಗೆ ಕಂಪೆನಿಯು 125 ಹಣ್ಣುಗಳ ತಿರುಳು ಇರುವ ಐಸ್ ಕ್ರೀಮ್ ರೆಡಿ ಮಾಡಿತು. ನೂರು ಕೋಟಿ ಟರ್ನ್ ಓವರ್ ದಾಖಲು ಮಾಡಿತು. ಭಾರತದ ನೂರಾರು ನಗರಗಳನ್ನು ತಲುಪಿತು. ಕೋಟಿ ಕೋಟಿ ಗ್ರಾಹಕರ ನಾಲಗೆಯಲ್ಲಿ ಸ್ವಾದದ ಸಿಗ್ನೇಚರ್ ಮಾಡಿ ಜನಪ್ರಿಯ ಆಯಿತು. 2020ರ ಹೊತ್ತಿಗೆ ಕಂಪೆನಿಯು ವಾರ್ಷಿಕ 330 ಕೋಟಿ ಟರ್ನ್ ಓವರ್ ದಾಖಲಿಸಿ ಭಾರೀ ದೊಡ್ಡ ದಾಖಲೆಯನ್ನು ಮಾಡಿತು. ಒಮ್ಮೆ 2009ರಲ್ಲಿ 3000 ಕಿಲೋಗ್ರಾಂ ತೂಗುವ ಒಂದೇ ಫ್ಲೇವರ್ ಇರುವ ಕ್ರೀಮ್ ಸ್ಲಾಬ್ ರೆಡಿ ಮಾಡಿ ಲಿಮ್ಕಾ ದಾಖಲೆ ಕೂಡ ಬರೆಯಿತು. ಅವರ ಸೌತೆಕಾಯೀ ತಿರುಳಿನ ಐಸ್ ಕ್ರೀಂ ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯಿತು.

ಈಗ ನ್ಯಾಚುರಲ್ ಐಸ್ ಕ್ರೀಂಗೆ ಸ್ಪರ್ಧೆಯೇ ಇಲ್ಲ!

ಈಗ ರಘುನಂದನ್ ಕಾಮತ್ ಅವರ ಮಗ ಸಿದ್ಧಾಂತ ಕಾಮತ್ ಅಪ್ಪನ ಉದ್ಯಮದಲ್ಲಿ ಕೈ ಜೋಡಿಸಿದ್ದಾರೆ. ಭಾರತದ 150 ಮಹಾನಗರಗಳಲ್ಲಿ ಇಂದು ನ್ಯಾಚುರಲ್ ಐಸ್ ಕ್ರೀಮಿನ ಔಟ್ ಲೆಟ್ ಇವೆ. ಹನ್ನೊಂದು ರಾಜ್ಯಗಳ ಮಾರ್ಕೆಟ್ ಗೆದ್ದು ಆಗಿದೆ. ನೂರಾ ಹತ್ತೊಂಬತ್ತು ಫ್ರಾಂಚೈಸಿ ಸ್ಟೋರ್ ಇವೆ. ವಿದೇಶದ ನಗರಗಳಿಗೆ ನ್ಯಾಚುರಲ್ ಐಸ್ ಕ್ರೀಂ ತಲುಪಿಸುವ ಪ್ರಯತ್ನಗಳು ಆರಂಭ ಆಗಿವೆ. ಇಂದು ನ್ಯಾಚುರಲ್ ಐಸ್ ಕ್ರೀಂ ಭಾರತದ ಟಾಪ್ 3 ಫ್ಲೇವರಗಳಲ್ಲಿ ಸ್ಥಾನ ಪಡೆದಿದೆ! ಅದರ ಹಿಂದೆ ರಘುನಂದನ್ ಕಾಮತ್ ಎಂಬ ಉದ್ಯಮಿಯ ಪರಿಶ್ರಮ ಮತ್ತು ದುಡಿಮೆ ಇವೆ.

ಸಜ್ಜನಿಕೆಯ ಸಾಕಾರ ಮೂರ್ತಿ ಅವರು.

ಅಂತಹ ರಘುನಂದನ್ ಕಾಮತ್ ಅವರನ್ನು ಒಂದು ಸಮ್ಮೇಳನದಲ್ಲಿ ನಾನು ಭೇಟಿ ಮಾಡಿದ್ದೆ. ಅಂದು ಅವರು ಹೇಳಿದ ಮಾತು ನನಗೆ ಅದ್ಭುತವಾದ ಸ್ಫೂರ್ತಿ ನೀಡಿತ್ತು.

‘ವೆನಿಲ್ಲಾ, ಸ್ಟ್ರಾಬೆರಿ, ಚಾಕೊಲೇಟ್ ಮೊದಲಾದ ಕೃತಕ ಫ್ಲೇವರ್ ರೆಡಿ ಮಾಡಲು ನಾನು ಹೊರಟಿದ್ದರೆ ಇಷ್ಟೆಲ್ಲ ಕಷ್ಟ ಪಡುವ ಅಗತ್ಯವೇ ಇರಲಿಲ್ಲ. ಗ್ರಾಹಕರಿಗೆ ತಾಜಾ ಹಣ್ಣುಗಳ ಸ್ವಾದವನ್ನು ಐಸ್ ಕ್ರೀಂ ಮಾಧ್ಯಮದ ಮೂಲಕ ನೀಡಬೇಕು ಎಂಬುದು ನನ್ನ ಬಯಕೆ ಆಗಿತ್ತು. ಜನರಿಗೂ ಅದು ಇಷ್ಟ ಆಯ್ತು. ಇದು ನನ್ನ ಸಾಧನೆ ಏನೂ ಇಲ್ಲ. ನಾನು ನಂಬಿರುವ ದೇವರು ನನ್ನ ಕೈಯನ್ನು ಹಿಡಿದು ಮುನ್ನಡೆಸುತ್ತಿದ್ದಾರೆ’ ಎಂದಿದ್ದರು.

ಅಂತಹ ಕಾಮತರು ನಿನ್ನೆ ಮುಂಬೈಯಲ್ಲಿ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸು. ಸೊನ್ನೆಯಿಂದ ಉದ್ಯಮದ ಮಹಾ ಸಾಮ್ರಾಜ್ಯವನ್ನು ಕಟ್ಟಿದ ಆ ಚೇತನಕ್ಕೆ ನಮ್ಮ ಶ್ರದ್ಧಾಂಜಲಿ ಇರಲಿ.

ಭರತ ವಾಕ್ಯ

ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಹೆಚ್ಚಿನ ನಗರಗಳಲ್ಲಿ ನ್ಯಾಚುರಲ್ ಐಸ್ ಕ್ರೀಂ ಔಟ್‌ಲೆಟ್‌ಗಳಿವೆ. ಒಮ್ಮೆ ಭೇಟಿ ಕೊಡಿ ಮತ್ತು ತೋಟದ ಹಣ್ಣುಗಳ ಫ್ರೆಶ್ ರುಚಿ ಇರುವ ಐಸ್ ಕ್ರೀಂ ನೀವು ಸವಿದು ಇಷ್ಟಪಟ್ಟರೆ ನಮ್ಮ ರಘುನಂದನ್ ಕಾಮತ್ ಅವರಿಗೊಂದು ಶ್ರದ್ಧಾಂಜಲಿ ಹೇಳಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

ಧವಳ ಧಾರಿಣಿ ಅಂಕಣ: ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು.

VISTARANEWS.COM


on

king dasharatha dhavala dharini
Koo

ಕರ್ಮಫಲವನ್ನು ತಾನೇ ಅರಿತು ಅನುಭವಿಸಿದ ಸೂರ್ಯವಂಶದ ಮಹಾನ್ ಚಕ್ರವರ್ತಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕವೆನ್ನುವುದು ದಶರಥನಿಗೆ ಮಹಾನ್ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ಆತ ಏನೆಲ್ಲ ಕಸರತ್ತನ್ನು ಮಾಡಿದ್ದ ಎನ್ನುವುದನ್ನು ನೋಡಿದ್ದೇವೆ.

ಕೈಕೇಯಿ ಮಂಥರೆಯ ದುರ್ಬೋಧನೆಯಿಂದ ಎಷ್ಟರಮಟ್ಟಿಗೆ ಪ್ರಭಾವಿತಳಾಗಿದ್ದಳೆಂದರೆ ಅರಸನ ಯಾವ ಒದ್ದಾಟವೂ ಅವಳನ್ನು ಕರಗಿಸಲಿಲ್ಲ. ರಾಮನನ್ನು ಬಿಟ್ಟರೆ ತಾನು ಬದುಕಿರಲಾರೆ ಎನ್ನುವ ಮಾತುಗಳು ಕಾದ ಮರಳಲ್ಲಿ ಬಿದ್ದ ನೀರಿನಂತೆಯೇ ಇಂಗಿಹೋಯಿತು. ಕೈಕೇಯಿ ತಿರುಗಿ ರಾಜನಿಗೆ ಧರ್ಮೋಪದೇಶ ಮಾಡುತ್ತಾಳೆ. ಶೈಭ್ಯ, ಅಲರ್ಕ ಮೊದಲಾದ ರಾಜರ್ಷಿಗಳು ಪ್ರತಿಜ್ಞಾಬದ್ಧರಾಗಿ ತಮ್ಮ ತಮ್ಮ ಜೀವವನ್ನೇ ಒತ್ತೆಯಾಗಿರಿಸಿದ ಸಂಗತಿಯನ್ನು ಹೇಳುತ್ತಾ ಪರೋಕ್ಷವಾಗಿ ದೊರೆಯ ಸಾವಿನ ಕುರಿತು ತಾನು ಅಂಜುವವಳಲ್ಲ ಎನ್ನುತ್ತಾಳೆ. ಅವಳಿಗೆ ತನ್ನ ಮಗ ಭರತ ಪಟ್ಟಕ್ಕೇರಲೇ ಬೇಕಾಗಿದೆ. ಆಕೆ ಕೌಸಲ್ಯೆಯನ್ನು ಎಷ್ಟರಮಟ್ಟಿಗೆ ದ್ವೇಷಿಸುತ್ತಿದಳೆಂದರೆ “ರಾಮ ಪಟ್ಟಾಭಿಷೇಕವಾದೊಡನೆಯೇ ರಾಜಮಾತೆಯಾಗಿ ಸಕಲಪ್ರಜೆಗಳಿಂದ ಗೌರವವನ್ನು ಸ್ವೀಕರಿಸುವ ಕೌಸಲ್ಯೆಯನ್ನು ತಾನು ಒಂದು ದಿನವೂ ನೋಡಿಸಹಿಸಲಾರೆ ಎನ್ನುತ್ತಾಳೆ. ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿ ಕೌಸಲ್ಯೆಯೊಂದಿಗೆ ನಿತ್ಯವೂ ರಮಿಸಲು ಇಚ್ಛಿಸುವ ನಿನ್ನ ಹುನ್ನಾರ ತನಗೆ ಗೊತ್ತು ಎಂದು ಜರಿಯುತ್ತಾಳೆ.

ದಶರಥನಿಗೆ ಮಾತು ಬಾರದಾಗಿದೆ. ಆತ ರಾಮನನ್ನು ಕಾಡಿಗೆ ಕಳುಹಿಸುವುದು ಬೇಡವೆಂದು ಬಗೆಬಗೆಯಲ್ಲಿ ಗೋಳಾಡುತ್ತಾನೆ. ಸ್ತ್ರೀಸುಖಕ್ಕೊಸ್ಕರವಾಗಿ ತನ್ನ ಪ್ರಿಯಸುತನನ್ನೇ ಅರಣ್ಯಕ್ಕೆ ಕಳುಹಿಸಿದ ತನ್ನನ್ನು ಅತಿಕಾಮಿಯೆಂದು ಪುರಜನರು ಆಡಿಕೊಳ್ಳುವರು, ಆ ಅಪವಾದ ಬರುತ್ತದೆಯೆಂದು ಗೋಗೆರೆಯುತ್ತಾನೆ. “ಹೆಂಗಸರೆಲ್ಲ ಮೋಸಗಾರರು, ಸ್ವಾರ್ಥಪರಾಯಣರು ಎಂದು ಉದ್ವೇಗದಿಂದ ಕೂಗಾಡುತ್ತಾನೆ. ಬಹುಶಃ ಆಗ ಆತನಿಗೆ ತನ್ನ ಹಿರಿಯ ಹೆಂಡತಿಯರಾದ ಕೌಸಲ್ಯೆ ಮತ್ತು ಸುಮಿತ್ರೆಯರ ನೆನಪಾಗಿರಬೇಕು. ಇಲ್ಲ, ಪ್ರಪಂಚದಲ್ಲಿ ಎಲ್ಲಾ ಹೆಂಗಸರೂ ಹಾಗಿಲ್ಲ’ ಕೇವಲ ಭರತನ ತಾಯಿಗೆ ಮಾತ್ರ ತನ್ನ ಮಾತು ಅನ್ವಯಿಸುತ್ತದೆ ಎಂದು ಕೂಗಾಡುತ್ತಾನೆ. ರಾಮನನ್ನು ಅರಣ್ಯಕ್ಕೆ ಕಳುಹಿಸುವ ಒಂದು ಮಾತನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು ಎನ್ನುವ ಮಾತುಗಳು ಕೈಕೇಯಿಯ ಮೇಲೆ ಪರಿಣಾಮ ಬೀರದಿದ್ದಾಗ ಕೊನೆಯ ಅಸ್ತ್ರವೆನ್ನುವಂತೆ ದಶರಥ ಲೋಕಮರ್ಯಾದೆಯನ್ನು ಮೀರಿ ಅನಾಥನಂತೆ ಗೋಳಾಡುತ್ತಾ ಆಕೆಯ ಕಾಲಿಗೆ ನಮಸ್ಕರಿಸಲು ಹೋಗುತ್ತಾನೆ. ಆಗ ಕೈಕೇಯಿ ತಿರಸ್ಕಾರದಿಂದ ತನ್ನ ಕಾಲನ್ನು ದೂರಕ್ಕೆ ಚಾಚಿದುದರಿಂದ ಅವೂ ಆತನಿಗೆ ಸಿಕ್ಕದೇ ರೋಗಿಯೊಬ್ಬ ತತ್ತರಿಸಿ ಬೀಳುವಂತೆ ನೆಲದಮೇಲೆ ಬೀಳುತ್ತಾನೆ. ಅವನ ಈ ಸ್ಥಿತಿಯನ್ನು ನೋಡಿದ ರಾಮಾಯಣದ ಕವಿ ವಾಲ್ಮೀಕಿಗೂ ದಶರಥನ ಮೇಲೆ ಹೇಸಿಗೆಯುಂತಾಗುತ್ತದೆ. ಚಕ್ರವರ್ತಿ ತನ್ನ ಘನತೆಯನ್ನು ಮರೆತು ಹೀಗೆ ಮಾಡಬಾರದಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ.

ಅತದರ್ಹಂ ಮಹಾರಾಜಂ ಶಯಾನಮತಥೋಚಿತಮ್.
ಯಯಾತಿಮಿವ ಪುಣ್ಯಾನ್ತೇ ದೇವಲೋಕಾತ್ಪರಿಚ್ಯುತಮ್৷৷ಅಯೋ. .13.1৷৷

ರಾಜಾಧಿರಾಜನಾದಂತಹ ದಶರಥನು ಕೈಕೇಯಿಯ ಪಾದಗಳ ಮೇಲೆ ಬೀಳಲು ಹೋಗಬಾರದಿತ್ತು(ಅತದರ್ಹಂ) ಎಂದು ಬಹಿರಂಗವಾಗಿಯೇ ಸಿಡಿಮಿಡಿಗೊಳ್ಳುತ್ತಾನೆ. ರಾಮಾಯಣದ ಈ ಸನ್ನಿವೇಶ ವಾಲ್ಮೀಕಿಯ ಕಣ್ಣಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಕಾಣುತ್ತಿದೆ. ನಿರುಧ್ವಿಘ್ನವಾಗಿ ಕಥೆಯನ್ನು ಹೇಳುತ್ತಾಹೋಗಬೇಕಾದ ಕವಿ ಸೀತೆಗೆ ತೊಂದರೆಯಾದ ಉತ್ಕಟಕ್ಷಣಗಳಲ್ಲಿ ರಸಭಾವವನ್ನು ಹತ್ತಿಕ್ಕಲಾರದೇ ತಾನೇ ಕಥೆಯೊಳಗೆ ಪ್ರವೇಶಿಸುವುದುಂಟು. ಆದರೆ ಇಲ್ಲಿ ಮಾತ್ರ ಆತನಿಗೆ ದಶರಥನ ಒಟ್ಟಾರೆಯ ವ್ಯವಹಾರವೇ ರೇಜಿಗೆ ಹುಟ್ಟಿಸಿದೆ. ಕೈಕೇಯಿಯನ್ನು ಇಕ್ಷಾಕುವಂಶಕ್ಕೇ ಅನರ್ಥಕಾರಿಣಿಯೆಂದು ತಿರಸ್ಕಾರದಿಂದ ಕವಿಹೇಳುತ್ತಾನೆ. ಸೂರ್ಯವಂಶದ ಪುಣ್ಯದ ಕಾರಣದಿಂದ ದಶರಥನಿಗೆ ಕೈಕೇಯಿಯ ಪಾದಗಳು ಸಿಗಲಿಲ್ಲ. ಎನ್ನುತ್ತಾನೆ. ಈ ಭಾಗವನ್ನು ದಶರಥವಿಲಾಪವೆನ್ನುವ ಹೆಸರಿನಿಂದ ಕರೆದರೂ ಇಲ್ಲಿ ಕಾಳಿದಾಸನ ಪ್ರಸಿದ್ಧಕಾವ್ಯ ರಘುವಂಶದ ಅಜವಿಲಾಪ ನೆನಪಿಗೆ ಬರುತ್ತದೆ. ರಘುವಂಶದಲ್ಲಿ ಅಜ ಮತ್ತು ಇಂದುಮತಿ ದಂಪತಿಗಳ ಪ್ರೇಮದ ವಿಷಯ ಪ್ರಸಿದ್ಧ. ದಿವ್ಯಪುಷ್ಪಮಾಲೆಯೊಂದು ಅಜನ ಪತ್ನಿ ಇಂದುಮತಿಯಮೇಲೆ ಬಿದ್ದಾಗ ಅವಳು ಮೃತಳಾಗುತ್ತಾಳೆ. ಆಗ ಅಜ ತನ್ನ ಪತ್ನಿಗಾಗಿ ಮಾಡುವ ದುಃಖವು ಅಜವಿಲಾಪವೆಂದೇ ಪ್ರಸಿದ್ಧಿಯಾಗಿದೆ. ಪತ್ನಿಯ ವಿರಹವನ್ನು ತಾಳಲಾರದೇ ಕುಗ್ಗಿ ಕುಗ್ಗಿ ಸಾಯುವ ಅಜನೂ ಸ್ತ್ರೀ ಕಾರಣದಿಂದ ಸಾಯುತ್ತಾನಾದರೂ ಅದು ಪ್ರೇಮಕಾವ್ಯದ ಉತ್ತುಂಗಗಳಲ್ಲೊಂದೆಂದು ಪರಿಗಳಿಸಲ್ಪಟ್ಟಿದೆ. ಅದರ ವಿರುದ್ಧವಾಗಿ ಅಜನ ಮಗನಾದ ದಶರಥನ ಒದ್ದಾಟವಿದೆ. ಅವನ ವಿಲಾಪಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಯಾರೂ ಬರುವುದಿಲ್ಲ. ಅವನ ವಿಲಾಪಕ್ಕೆ ರಾತ್ರಿಯೇ ಹೆದರಿ ಓಡಿಹೋಯಿತು.

ಬೆಳಗಾದರೂ ದೊರೆ ಗೋಳಾಡುವುದನ್ನು ಬಿಟ್ಟು ರಾಮನನ್ನು ಪಟ್ಟಗಟ್ಟುವ ಯಾವ ಸೂಚನೆಯನ್ನೂ ನೀಡುವುದಿಲ್ಲ. ಎಲ್ಲಿಯಾದರೂ ಬೇರೆಯವರಿಗೆ ತಿಳಿದರೆ ತನ್ನ ಕೆಲಸ ಕೆಟ್ಟಿತೆನ್ನುವ ಚಿಂತೆ ಕೈಕೇಯಿಯಲ್ಲುಂಟಾಯಿತು. ರಾಜನನ್ನು ಧರ್ಮಪರಿಪಾಲನೆಯೆನ್ನುವ ಹಗ್ಗದಲ್ಲಿ ಕಟ್ಟಿಹಾಕಿದ್ದಳು.

ಸತ್ಯಮೇಕಪದಂ ಬ್ರಹ್ಮ ಸತೇ ಧರ್ಮಃ ಪ್ರತಿಷ್ಠಿತಃ
ಸತ್ಯಮೇವಾಕ್ಷಯಾ ವೇದಾಃ ಸತ್ಯೇನೈವಾಪ್ಯತೇ ಪರಮ್ II ಅಯೋ.14-7II

ಸತ್ಯವೆನ್ನುವುದೇ ಬ್ರಹ್ಮವಾಚಕವಾದ ಪ್ರಣವಸ್ವರೂಪವು. ಸತ್ಯದಲ್ಲಿಯೇ ಸಮಸ್ತ ಧರ್ಮಗಳೂ ಅಡಗಿರುವವು. ಕ್ಷಯವೃದ್ಧಿಗಳಿಲ್ಲದ ವೇದಗಳು ಸತ್ಯದ ಸ್ವರೂಪಗಳೇ ಆಗಿವೆ. ಪರಮೋತ್ಕ್ರಷ್ಟವಾದ ಲೋಕಗಳೂ ಸತ್ಯದ ಅವಲಂಬನೆಯಿಂದಲೇ ಲಭಿಸುತ್ತವೆ.

ಸಮಗ್ರವಾದ ಉಪನಿಷತ್ತಿನ ಸಾರವನ್ನು ಸಾರುವ ಈ ಮಾತು ಕೈಕೇಯಿಯಿಂದ ಬೇರೆ ಯಾವ ಸಂದರ್ಭದಲ್ಲಿಯಾದರೂ ಬಂದಿದ್ದರೆ ಆಕೆಯನ್ನು ಗಾರ್ಗಿ, ಲೋಪಾಮುದ್ರಾ ಮೊದಲಾದವರಸಾಲಿಗೆ ಸೇರಿಸಿಬಿಡುತ್ತಿದ್ದರೇನೋ. ಆಕೆಯ ತಂದೆ ಅಶ್ವಪತಿ ವೈಶ್ವಾನರ ವಿದ್ಯೆಯನ್ನು ಉದ್ಧಾಲಕನಿಗೆ ಕಲಿಸಿದ ಕುರಿತು “ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ”. ರಾವಣನೂ ಸಹ ಎಲ್ಲಾ ವೇದಗಳನ್ನು ಓದಿಕೊಂಡಿದ್ದ. ಮೂಲತಃ ಸ್ವಭಾವದಲ್ಲಿ ಸಾತ್ವಿಕ ಗುಣಗಳಿಲ್ಲದಿದ್ದರೆ ಅವೆಲ್ಲವೂ ವ್ಯರ್ಥವಾಗುತ್ತದೆ. ಕೈಕೇಯಿಗಾಗಿರುವುದೂ ಅದೇ. ತನಗೆ ತಿಳಿದಿರುವ ಧರ್ಮಸೂತ್ರಗಳನ್ನು ತನ್ನ ಸ್ವಾಥಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ. ಗಂಗಾನದಿಯೇ ಆದರೂ, ಬಚ್ಚಲುಮನೆಯಿಂದ ಹೊರಬಂದರೆ ಅದನ್ನು ಯಾರೂ ತೀರ್ಥವೆಂದು ಪರಿಗಣಿಸುವುದಿಲ್ಲ. ರಾಜನನ್ನು ಕರೆದೊಯ್ಯಲು ಸುಮಂತ್ರ ಕೈಕೇಯಿಯ ಅರಮನೆಗೆ ಬಂದಾಗ ಎಲ್ಲದರಲ್ಲಿಯೂ ಸೋತ ರಾಜನೇ “ರಾಮನನ್ನು ನೋಡಬೇಕೆಂದಿದ್ದೇನೆ, ಅವನನ್ನಿಲ್ಲಿಗೆ ಕರೆದುಕೊಂಡು ಬಾ” ಎನ್ನುತ್ತಾನೆ. ಆಗಲೆಂದು ಹೊರಟ ಸುಮಂತ್ರನಿಗೆ ಮನಸ್ಸಿನಲ್ಲಿ ಏನೋ ಒಂಡು ಸಂಶಯಕಾಡಿತು. ಸಭೆಗೆಬಂದವ ಅದಾಗಲೇ ಬಂದುಸೇರಿದ್ದ ಅರಸರ ವಿಷಯಗಳನ್ನು ತಿಳಿಸುವ ನೆವಮಾಡಿ ಮತ್ತೊಮ್ಮೆ ಕೈಕೇಯಿಯ ಅಂತಃಪುರಕ್ಕೆ ಬಂದ. ಕೈಕೇಯಿಗೆ ರಾಮನನ್ನು ಗುಪ್ತವಾಗಿ ಅರಣ್ಯಕ್ಕೆ ಕಳುಹಿಸಿ ಭರತನನ್ನು ಪಟ್ಟಾಭಿಷೇಕಕ್ಕೆ ಏರಿಸಬೇಕಿತ್ತು. ಚಾಣಾಕ್ಷಳಾಗಿದ್ದ ಆಕೆಗೆ ಈ ವಿಷಯ ಬಹಿರಂಗಕ್ಕೆ ಬಂದರೆ ಸಾಮಂತರೆಲ್ಲರೂ ತಿರುಗಿಬೀಳುವರು ಎನ್ನುವುದರ ಅರಿವಿತ್ತು. ಅದಕ್ಕಾಗಿಯೇ ಅವಳು ರಾಮ ತನ್ನ ಮನೆಗೇ ಬರಲಿ ಎಂದು ರಾಜನನ್ನು ಒತ್ತಾಯಿಸಿದಳು. ಎರಡನೆಯ ಸಾರಿ ಸುಮಂತ ಬಂದಾಗ ಸ್ವಲ್ಪ ಸಿಟ್ಟಿನಿಂದಲೇ ರಾಮನನ್ನು ಇಲ್ಲಿಗೆ ಕರೆತರಬೇಕು. ಇದು ತನ್ನ ಆಜ್ಞೆ ಎಂದು ಕಠೋರವಾಗಿಯೇ ಹೇಳುತ್ತಾನೆ. “ದಶರಥನ ಮಾತು ಸೋತ ಹೊತ್ತು ಅದು”. ದೊರೆ ಅಸಹಾಯಕನಾಗಿದ್ದ. ತನ್ನೆದುರೇ ತನ್ನ ಪರವಾಗಿ ಕೈಕೇಯಿ ರಾಮನಲ್ಲಿ ತನ್ನ ವರದ ಕುರಿತು ಒಡಂಬರಿಸುತ್ತಿರುವಾಗ ಮೌನವಾಗಿದ್ದ. ನಾಲಿಗೆ ಮಾತನ್ನು ಆಡುವುದು ಬುದ್ಧಿಯಬಲದಿಂದ. ದಶರಥನ ಬುದ್ಧಿಯನ್ನು ಸಂಪೂರ್ಣವಾಗಿ ಕೈಕೇಯಿ ಆಕ್ರಮಿಸಿಕೊಂಡಿದ್ದಳು. ರಾಮನ ಪ್ರಿಯಮಾತೆ ಕೈಕೇಯಿ ರಾಜನ ಪರವಾಗಿ ಆಡುವ ಮಾತಾಗಿದ್ದಳು. ಸಮಯ ಸರಿದಷ್ಟೂ ತನಗೇ ಅಪಾಯವೆಂದು ಅವಳಿಗೆ ಅರಿವಾಗತೊಡಗಿತು. ತಂದೆಯ ನೋಡಲು ಬಂದ ರಾಮ ಆತನ ಚಿಂತೆಗೆ ಕಾರಣವನ್ನು ಕೇಳೆದರೆ ಆತನಲ್ಲಿ ದೊರೆಯ ಮನಸ್ಸಿನಲ್ಲಿರುವುದು ಭರತನು ರಾಜನಾಗುವ ಮತ್ತು ರಾಮನ ಅರಣ್ಯಗಮನದ ವರಗಳನ್ನು ಹೇಳುತ್ತಾಳೆ. ಅಷ್ಟೇ ಅಲ್ಲ,’ “ಎಲ್ಲಿಯವರೆಗೆ ನೀನು ಈ ಅಯೋಧ್ಯೆಯನ್ನು ಬಿಟ್ಟು ಅರಣ್ಯಕ್ಕೆ ಹೋಗುವುದಿಲ್ಲವೋ ಅಲ್ಲಿಯವರೆಗೆ ರಾಜನು ಸ್ನಾನವನ್ನೂ ಮಾಡುವುದಿಲ್ಲ, ಊಟವನ್ನೂ ಮಾಡುವುದಿಲ್ಲ” ಎನ್ನುವ ಮಾತನ್ನು ಹೇಳಿದಾಗ ರಾಮ ಇನ್ನು ತಡಮಾಡುವುದು ಸರಿಯಲ್ಲವೆಂದು ಅರಣ್ಯಕ್ಕೆ ಹೊರಟಕಥೆ ಎಲ್ಲರಿಗೂ ಚಿರಪರಿಚಿತ.

dhavala dharini king dasharatha

ದಶರಥನಿಗೆ ರಾಮನ ಅಗಲುವಿಕೆಯ ದುಃಖಕ್ಕಿಂತ ಆತ ಸುಮಂತ್ರನ ಹತ್ತಿರ ತನ್ನ ತಂದೆ ಮತ್ತು ತಾಯಿಗೆ ಹೇಳುವ ಸಂದೇಶ ಇನ್ನಷ್ಟು ಶೋಕವನ್ನು ಕೊಡುತ್ತದೆ. ರಾಮ ತನ್ನ ತಾಯಿಗೆ ತಾಳ್ಮೆಯಿಂದ ಇರಲು ಹೇಳಿಕಳುಹಿಸುತ್ತಾನೆ. ಹದಿನಾಲ್ಕುವರ್ಷಗಳ ತನಕ ಹೇಗೋ ಭರತನ ಜೊತೆ ಹೊಂದಿಕೊಂಡು ಹೋಗು ಎಂದಿದ್ದ. ಭರತನಿಗೂ ಕೈಕೇಯಿಯಂತೇ ತನ್ನ ತಾಯಯಿಂದರನ್ನು ನೋಡಿಕೊಳ್ಳುವಂತೆ ಕಾಠಿಣ್ಯದಿಂದ ತುಂಬಿದ ಎಚ್ಚರಿಕೆಯ ಸಂದೇಶನ್ನು ಕಳಿಹಿಸುತ್ತಾನೆ. ಕೌಸಲ್ಯಯ ಕುರಿತು ಹೇಳುವಾಗ ರಾಮನ ಕಣ್ಣಲ್ಲಿ ನೀರು ಹರಿಯುತ್ತಿರುವುದನ್ನು ಕಂಡ ಲಕ್ಷ್ಮಣ ಕ್ರುದ್ಧನಾಗಿರುವ ವಿಷಯವನ್ನು ಹೇಳುವಾಗ ಅರಸನಿಗೆ ಕಾಮಮೋಹಿತನಾಗಿದ್ದ ತಾನೇ ಅವಸರದಿಂದ ಕೈಕೇಯಿಯನ್ನು ಓಲೈಸಲು ಹೋದೆ ಅನಿಸುತ್ತದೆ. ರಾಜ ಯಾವ ನಿರ್ಣಯಗಳನ್ನು ಕೈಗೊಳ್ಳುವಾಲೂ ಮೊದಲು ಅಮಾತ್ಯರೊಡನೆ ಸಮಾಲೋಚಿಸಿ ಅವರ ಸಲಹೆಪಡೆದು, ಅದು ಧರ್ಮಸಮ್ಮತವಾಗಿದ್ದರೆ ತನಗೆ ಯುಕ್ತವಾದ ನಿರ್ಣಯವನ್ನು ಕೈಗೊಳ್ಳಬೇಕು. ಇಲ್ಲಿ ಅದೇನನ್ನೂ ಮಾಡದೇ ಇರುವ ಅಪರಾಧೀ ಭಾವ ಕಾಡುತ್ತದೆ. ವನವಾಸಕ್ಕೆ ಹೊರಟ ರಾಮ, ಸೀತಾ ಲಕ್ಷ್ಮಣರು ನಗುತ್ತಲೇ ಹೊರಟರು, ಗುಹನಲ್ಲಿ ಆಲದ ಹಾಲನ್ನು ತರಿಸಿ ತಪಸ್ವಿಗಳಂತೆ ಜಟಾಧಾರಿಯಾದ ವಿಷಯವನ್ನು ಕೇಳಿದ ಕೌಸಲ್ಯೆಯ ಮಾತ್ರಭಾವಕ್ಕೆ ಬಲವಾದ ನೋವನ್ನು ಕೊಡುತ್ತದೆ. ಅನೇಕವರ್ಷಗಳಕಾಲ ಧಶರಥನಿಂದ ಅಲಕ್ಷಕ್ಕೆ ಒಳಗಾದರೂ ಆಕೆ ಅದನ್ನೆಲ್ಲ ಸಹಿಸಿಕೊಂಡು ಮೌನಿಯಾಗಿದ್ದವಳು ಬಲುತೀಕ್ಷ್ಣವಾದ ಮಾತುಗಳಿಂದ ಗಂಡನನ್ನು ನಿಂದಿಸುತ್ತಾಳೆ. ಕೊನೆಯದಾಗಿ “ಮಹರಾಜಾ! ನಿನ್ನ ಈ ದುಶ್ಚರ್ಯೆಯಿಂದಾಗಿ ನಾನು ಮತ್ತು ನನ್ನ ಮಗನು ಮಾತ್ರ ವಿನಾಶ ಹೊಂದಲಿಲ್ಲ. ರಾಮನನ್ನು ಕಾಡಿಗಟ್ಟಿ ರಾಷ್ಟ್ರಸಹಿತವಾದ ರಾಜ್ಯವನ್ನು ಹಾಳುಮಾಡಿದೆ. (ಹತಂ ತ್ವಯಾ ರಾಜ್ಯಮಿದಂ ಸರಾಷ್ಟ್ರಂ ಹತಸ್ತಥಾತ್ಮಾ ಸಹ ಮಂನ್ತ್ರಿಭಿಶ್ಚ) ಮಂತ್ರಿಗಳೊಡನೇ ನೀನೂ ಹಾಳಾದೆ” ಎನ್ನುವ ಕಠೋರಮಾತುಗಳನ್ನಾಡುತ್ತಾಳೆ.

ಅದುತನಕ ಅದುಮಿಟ್ಟುಕೊಂಡ ಅವಮಾನ, ತಿರಸ್ಕಾರಗಳೆಲ್ಲವೂ ಸ್ಪೋಟಗೊಂಡಹೊತ್ತು ಅದು. ಆಕೆಯ ಮಾತುಗಳು ಎಷ್ಟು ತೀಕ್ಷ್ಣವಾಗಿತ್ತೆಂದರೆ ದಶರಥ ಅದನ್ನು ಕೇಳಿದವನೇ ಮೂರ್ಛಿತನಾದ. ಆತನನ್ನು ಉಪಚರಿಸಿದ ಕೌಸಲ್ಯೆ ತಾನು ಹಾಗೇ ಮಾತಾಡಬಾರದಾಗಿತ್ತೆಂದು ದುಃಖಪಡುತ್ತಾಳೆ. ದಶರಥನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಾಳೆ. ಕೌಸಲ್ಯಾ ಮತ್ತು ಸುಮಿತ್ರಾ ಇಬ್ಬರೂ ಸೇರಿ ಗಂಡನ ಶುಶ್ರೂಷೇ ಮಾಡುತ್ತಾ ತಾವೇ ದುಃಖಿಸುತ್ತಲೂ ಇರುತ್ತಾರೆ. ದಶರಥನಿಗೆ ತಾನು ಇಷ್ಟೆಲ್ಲಾ ಒಳ್ಳೆಯ ಕಾರ್ಯವನ್ನು ಮಾಡಿದರೂ ತನಗೆ ಏಕೆ ಹೀಗೆ ಆಯಿತು ಎಂದು ಚಿಂತಿಸುತ್ತಾ ಯಾವುದೋ ಒಂದು ವಿಷಯವನ್ನು ಹೇಳಲೋ ಬೇಡವೋ ಎನ್ನುವಂತೆ ಇದ್ದ. ಆರನೆಯದಿನದ ಅರ್ಧರಾತ್ರಿಯಲ್ಲಿ ಇದ್ದಕ್ಕಿದ್ದಂತೆ ತನ್ನ ಪುತ್ರವಿಯೋಗಕ್ಕೆ ಕಾರಣವಾದ ತನ್ನ ಕರ್ಮಫಲದ ಕುರಿತು ಹೇಳಲು ನಿಶ್ಚಯಿಸಿದ. ಅದು ಎಲ್ಲರಿಗೂ ತಿಳಿದ ಕಥೆಯಾದ ಶ್ರವಣಕುಮಾರನ ಕಥೆ, ರಾಮಾಯಣದಲ್ಲಿ ಶ್ರವಣಕುಮಾರ ಎನ್ನುವ ಹೆಸರಿಲ್ಲ. ಕರಣ ಎಂದು ಆತನ ಹೆಸರು. ಆತನ ತಂದೆ ಓರ್ವ ಋಷಿಯಾಗಿದ್ದ. ಈ ಕಥೆ ಒಂದೇ ರೀತಿಯದಾದರೂ ಕಾಲಾಂತರದಲ್ಲಿ ಬೇರೆ ಬೇರೆ ರಾಮಾಯಣಗಳಲ್ಲಿ ಶ್ರವಣಕುಮಾರ ಎನ್ನುವ ಹೆಸರು ಬಂತು.

ಈ ಘಟನೆ ನಡೆಯುವಾಗ ದಶರಥನಿಗೆ ಪ್ರಾಯದ ಕಾಲ. ಆತ ಶಬ್ದವೇಧಿ ವಿದ್ಯೆಯಲ್ಲಿ ಮಹಾಚತುರ ಎನ್ನುವ ಕೀರ್ತಿ ಹಬ್ಬಿತ್ತು. ಅದನ್ನು ಪ್ರಯೋಗಿಸುವ ಹವ್ಯಾಸ ದೊರೆಗೆ. ಹಾಗಾಗಿ ಕಾಡಿಗೆ ಹೋಗಿ ಬೇಟೆಯಾಡುವ ವ್ಯಸನವನ್ನು ಹಚ್ಚಿಕೊಂಡಿದ್ದ. ಯುವರಾಜನಾಗಿದ್ದ ಆತನಿಗೆ ಆಗಿನ್ನೂ ಮದುವೆಯಾಗಿರಲಿಲ್ಲ (ದೇವ್ಯನೂಢಾ ತ್ವಮಭವೋ ಯುವರಾಜೋ ಭವಾಮ್ಯಹಮ್). ಮಳೆಗಾಲದ ಒಂದು ದಿನ ಬೇಟೆಗೆ ಹೋದಾಗ ಅನೆ ನೀರು ಕುಡಿಯುತ್ತಿರುವ ಸದ್ದು ಕೇಳಿಬಂತು. ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು. ಆತನೇ ಕುರುಡರಾದ ತನ್ನ ತಂದೆಯ ವಿಷಯವನ್ನು ಹೇಳಿ ಅವರಿಗೆ ನೀರನ್ನು ತೆಗೆದುಕೊಂಡು ಹೋಗು ಎಂದು ಕೇಳಿದ. ದಶರಥ ಯೌವನ ಮದದಿಂದ ಅಪರಾಧವನ್ನು ಮಾಡಿದರೂ ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಕುರುಡ ದಂಪತಿಗಳ ಬಳಿಗೆ ಬಂದು ಪ್ರಾಮಾಣಿಕವಾಗಿ ನಡೆದ ಸಂಗತಿಯನ್ನು ಹೇಳಿದ. ಬಾಲಕನ ಶವ ಸಂಸ್ಕಾರವನ್ನು ಅವರ ಹತ್ತಿರವೇ ಮಾಡಿಸಿದ. ಉದ್ಧೇಶಪೂರ್ವಕವಾಗಿ ತನ್ನ ಮಗನನ್ನು ಕೊಲ್ಲದ ಕಾರಣ ದೊರೆಗೆ ಬ್ರಹ್ಮಹತ್ಯಾ ಶಾಪವು ತಟ್ಟದು ಎಂದು ಹೇಳಿದರು. ಸಾಯುವ ಕಾಲದಲ್ಲಿ ತಮಗೆ ಆದ ರೀತಿಯಲ್ಲಿಯೇ ನಿನಗೂ ಪುತ್ರವಿಯೋಗವುಂಟಾಗಲಿ ಎಂದು ಶಾಪವನ್ನಿತ್ತು ಮಗನ ಚಿತೆಯನ್ನು ಏರಿ ದಿವ್ಯ ಶರೀರವನ್ನು ಧರಿಸಿ ಸ್ವರ್ಗಕ್ಕೆ ಹೋದರು.

king dasharatha kaikeyi dhavala dharini column

ರಾಜ ಕಾಲಾಂತರದಲ್ಲಿ ಅದನ್ನೆಲ್ಲ ಮರೆತಿದ್ದ. ಈಗ ರಾಮನ ಅಗಲುವಿಕೆಯೆನ್ನುವದು ಆತನಲ್ಲಿ ಅಪರಾಧೀ ಭಾವವನ್ನು ಮೂಡಿಸಿದೆ. ತನ್ನ ಕೊನೆಯ ದಿನಗಳು ಹತ್ತಿರ ಬಂತು ಎಂದು ದೊರೆಗೆ ಅನಿಸಲು ಸುರುವಾಯಿತು. ಸತ್ಯವಂತನಾದ, ಧರ್ಮಮಾರ್ಗದಲ್ಲಿ ನಡೆದ ತನಗೆ ಈ ಗತಿ ಏಕೆ ಬಂತು ಎಂದು ಚಿಂತಾಮಗ್ನನಾಗಿರುವಾಗ ಅವನಿಗೆ ತಾನೆಸಗಿದ ಈ ದುಷೃತ್ಯ ನೆನಪಿಗೆ ಬಂತು. ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಮುನಿಯ ಶಾಪ ಫಲಿಸುವ ಕಾಲ ಬಂತು ಎಂದು ಕೌಸಲ್ಯೆಗೆ ಹೇಳಿ ಇದಕ್ಕೆ ಕಾರಣ ತನ್ನ ಕರ್ಮಫಲ ಎನ್ನುತ್ತಾನೆ. ಮಾಡಿದ್ದಕ್ಕೆ ತಕ್ಕ ಕರ್ಮಫಲವನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆ ಪುನರ್ಜನ್ಮದಷ್ಟೇ ಪ್ರಾಚೀನವಾದುದು. ತಾನು ಬದುಕಬೇಕೆಮ್ದರೆ ರಾಮ ಬಂದು ತನ್ನನ್ನು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ತಾನು ಬದುಕುವೆ ರಾಘವನ ವಿಷಯದಲ್ಲಿ ಘನತೆಯಿಂದ ತಾನು ನಡೆದುಕೊಳ್ಳಲಿಲ್ಲ ವೆಂದು ನಿರಂತರವಾಗಿ ಶೋಕಿಸುತ್ತಾನೆ. ಇಷ್ಟಾದರೂ ಪಾಯಸದ ಮಹಿಮೆಯಿಂದ ಜನಿಸಿದ ಮಕ್ಕಳು ಎನ್ನುವ ವಿಷಯವೇ ಮರೆತುಹೋಗಿದೆ. ಋಷಿಮುನಿಗಳಿಗೆ ಕಂಡ ರಾಮನ ನಿಜರೂಪದ ಅರಿವು ದಶರಥನಿಗೆ ಆಗಲೇ ಇಲ್ಲ. ಅತನನ್ನು ಸಮಾಧಾನ ಮಾಡುತ್ತಾ ಕೌಸಲ್ಯೆ ಮತ್ತು ಸುಮಿತ್ರೆಯರು ತಮ್ಮ ನಡುವೆ ಮಲಗಿಸಿಕೊಂಡಿದ್ದರು ಆರುದಿನಗಳಿಂದಲೂ ಬಾರದ ನಿದ್ರೆ ಇಬ್ಬರೂ ರಾಣಿಯರಿಗೂ ತಡರಾತ್ರಿ ಬಂತು. ರಾಘವನ ನೆನಪು ಮಾಡುತ್ತಲೇ ಇದ್ದ ರಾಜನನ್ನು ಚಿರನಿದ್ರೆ ಸೆಳೆದುಬಿಟ್ಟಿತು.

ರಘುವಂಶದ ಘನತೆಯ ಚಕ್ರವರ್ತಿಯೆಂದು ಹೆಸರು ಮಾಡಿದ ಯಶೋವಂತನಾದ ದೊರೆ ತನ್ನ ಕರ್ಮ ಫಲವನ್ನು ಅನುಭವಿಸಿ ಕೊನೆಗಾಲವನ್ನು ಕಂಡ. ಯಾವಾತ ತನ್ನ ಕರ್ಮಫಲವನ್ನು ಜೀವಿತಾವಧಿಯಲ್ಲಿ ಅನುಭವಿಸುತ್ತಾನೆಯೋ, ಆ ಕಾರಣದಿಂದ ಅವರು ಪಶ್ಚಾತ್ತಾಪ ಪಡುತ್ತಾರೆಯೋ ಅಂತವರು ಸತ್ತಮೇಲೆ ನರಕದಲ್ಲಿ ಆ ಶಿಕ್ಷೆ ಅನುಭವಿಸುವುದಿಲ್ಲ. ಈ ಎಲ್ಲಾ ಅವಸ್ಥೆಯನ್ನು ಅನುಭವಿಸಿದ ಸೂರ್ಯವಂಶದ ಯಶೋವಂತ ಅರಸನೂ ಸಹ ಸ್ವರ್ಗಕ್ಕೆ ನಡೆದ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

ಸೈಬರ್‌ ಸೇಫ್ಟಿ ಅಂಕಣ: ಸಾಮಾಜಿಕ ಮಾಧ್ಯಮದೊಂದಿಗೆ ಆರೋಗ್ಯಕರ ಸಮತೋಲನವನ್ನು ಸಾಧಿಸುವುದು ಮುಖ್ಯ. ಸಂಪರ್ಕಿಸಲು, ಹಂಚಿಕೊಳ್ಳಲು ಮತ್ತು ಮಾಹಿತಿ ಪಡೆಯಲು ಸಾಮಾಜಿಕ ಮಾಧ್ಯವನ್ನು ಬಳಸಿ. ಆದರೆ ನಿಮ್ಮ ಜೀವನದಲ್ಲಿ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ನಿಮ್ಮ ಫೋನ್ ಬಳಕೆಯ ಬಗ್ಗೆ ಗಮನಹರಿಸುವ ಮೂಲಕ ಮತ್ತು ಆರೋಗ್ಯಕರ ಅಭ್ಯಾಸಗಳ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಿ.

VISTARANEWS.COM


on

esim cyber safety column
Koo

ಭಾಗ-2

cyber safety logo

ಸೈಬರ್‌ ಸೇಫ್ಟಿ ಅಂಕಣ: ಸಾಮಾಜಿಕ ಮಾಧ್ಯಮದ ವ್ಯಸನದ (Social media addiction) ಬಗ್ಗೆ ಸ್ನೇಹಿತ ನೀರಜ್‌ ಕುಮಾರ್‌ ಅವರ ವೀಡಿಯೊಗಳನ್ನು ಆಧರಿಸಿ ಬರೆದ ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ? ಲೇಖನದ ಮುಂದುವರಿದ ಭಾಗ ಈ ವಾರ. ಕಾರಣಾಂತರದಿಂದ ಎರಡು ವಾರಗಳ ಬ್ರೇಕ್‌ ಕೊಡಬೇಕಾಯಿತು.

ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯೇ ಎಂದು ಸ್ವಪರೀಕ್ಷೆ ಮಾಡಿಕೊಳ್ಳಲು ನೀರಜ್‌ 5C ಫ್ರೇಮ್‌ವರ್ಕ್‌ ಬಗ್ಗೆ ತಮ್ಮ ವೀಡಿಯೊದಲ್ಲಿ ವಿವರಿಸಿದ್ದಾರೆ. ಕಡುಬಯಕೆ (Craving), ನಿಯಂತ್ರಣ (Control), ನಿಭಾಯಿಸುವಿಕೆ (Coping), ಒತ್ತಾಯ (Compulsioin) ಮತ್ತು ಪರಿಣಾಮ (Consequence) ಎಂಬ ಈ ಐದು C ಗಳು ನಿಮ್ಮಲ್ಲಿ ಎಷ್ಟು ಪ್ರಮಾಣದಲ್ಲಿದೆ ಎಂದು ಸೊನ್ನೆಯಿಂದ ಹತ್ತರವರೆಗಿನ ಮಾಪನದಲ್ಲಿ ಅಂಕ ಕೊಟ್ಟುಕೊಳ್ಳಬಹುದು. ಅದರ ಒಟ್ಟು ಮೊತ್ತ ಶೇಕಡ 60ಕ್ಕಿಂತ ಹೆಚ್ಚು ಅಂದರೆ ಮೂವತ್ತು ಅಥವಾ ಜಾಸ್ತಿ ಇದ್ದರೆ ನಿಮ್ಮ ವ್ಯಸನ ಗಂಭೀರಮಟ್ಟದಲ್ಲಿದೆ ಎನ್ನುತ್ತಾರೆ. ಇದರಿಂದ ಹೊರಬರಲು ಮಾನಸಿಕ ತಜ್ಞರೊಂದಿಗೆ ಸಮಾಲೋಚನೆ ಮಾಡುವುದು ಒಳ್ಳೆಯದು.

ಈಗ ಈ ವ್ಯಸನದಿಂದ ಹೊರಬರುವುದು ಹೇಗೆ ನೋಡೋಣ.

ಸಾಮಾಜಿಕ ಮಾಧ್ಯಮ ವ್ಯಸನವನ್ನು ನಿವಾರಿಸುವ ಮೊದಲ ಹೆಜ್ಜೆ ನಿಮಗೆ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದು. 5C ಫ್ರೇಮ್‌ವರ್ಕ್‌ನಲ್ಲಿ ನಿಮ್ಮ ಸ್ಕೋರ್‌ಗಳನ್ನು ಪರಿಶೀಲನೆ ಮಾಡಿ, ಯಾವ ಅಂಶದಲ್ಲಿ ನಿಮ್ಮ ಸ್ಕೋರ್ ಜಾಸ್ತಿ ಇದೆ ಎನ್ನುವುದನ್ನು ಕಂಡುಕೊಳ್ಳಿ. ಅವುಗಳನ್ನು ಕಡಿಮೆ ಮಾಡುವ ಸಲಹೆಗಳನ್ನು ಅನುಸರಿಸಿ. ಜೊತೆಗೆ ನಿಯಮಿತವಾಗಿ ಮರುಮೌಲ್ಯಮಾಪನ ಮಾಡಿಕೊಂಡು, ಆರೋಗ್ಯಕರ ಸಾಮಾಜಿಕ ಮಾಧ್ಯಮ ಅಭ್ಯಾಸಗಳ ಕಡೆಗೆ ನಿಮ್ಮ ಪ್ರಗತಿಯನ್ನು ನೀವು ಟ್ರ್ಯಾಕ್ ಮಾಡಿ. ನಿಮ್ಮ ಫೋನ್ ಬಳಕೆಯ ಬಗ್ಗೆ ಮಿತಿಗಳನ್ನು ರೂಪಿಸಿಕೊಳ್ಳುವ ಪ್ರಾಮುಖ್ಯತೆಯನ್ನು ನೀರಜ್ ಕುಮಾರ್ ಒತ್ತಿಹೇಳುತ್ತಾರೆ.

ಸಾಮಾಜಿಕ ಮಾಧ್ಯಮವು ಸಂಪರ್ಕ ಮತ್ತು ಮಾಹಿತಿಗಾಗಿ ಬಳಸುವ ಅಮೂಲ್ಯವಾದ ಸಾಧನವಾಗಿದೆ. ಆದರೆ ಜೀವನದಲ್ಲಿ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಇದು ನಿರ್ಣಾಯಕವಾಗಿದೆ. ವ್ಯಸನದ ಚಿಹ್ನೆಗಳನ್ನು ಗುರುತಿಸುವ ಮೂಲಕ ಮತ್ತು ಮಿತಿಮೀರಿದ ಬಳಕೆಯನ್ನು ನಿಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನಾವು ನಮ್ಮ ಸಮಯ ಮತ್ತು ಗಮನದ ನಿಯಂತ್ರಣವನ್ನು ಪುನಃ ಪಡೆದುಕೊಳ್ಳಬಹುದು. ಸಾಮಾಜಿಕ ಮಾಧ್ಯಮವು ನಮ್ಮ ಜೀವನವನ್ನು ವರ್ಧಿಸುವಂತೆ ಅಳವಡಿಸಿಕೊಳ್ಳಬಹುದು.

ಕೆಲವು ಉಪಯುಕ್ತ ಸಲಹೆಗಳು: ‌

ಸಮಯದ ಮಿತಿಗಳನ್ನು ಹೊಂದಿಸಿ: ದಿನಕ್ಕೆ ನಿರ್ದಿಷ್ಟ ಸಮಯವನ್ನು ಸಾಮಾಜಿಕ ಮಾಧ್ಯಮಕ್ಕೆ ಮೀಸಲಿಡಿ ಮತ್ತು ಅದಕ್ಕೆ ಬದ್ಧರಾಗಿರಿ.
ಅಧಿಸೂಚನೆಗಳನ್ನು ಆಫ್ ಮಾಡಿ: ಕಂಪಲ್ಸಿವ್ ಫೋನ್ ಬಳಕೆಗೆ ನಿರಂತರ ಅಧಿಸೂಚನೆಗಳು ಪ್ರಮುಖ ಪ್ರಚೋದಕವಾಗಬಹುದು. ಹೆಚ್ಚಿನ ಅಪ್ಲಿಕೇಶನ್‌ಗಳಿಂದ ಅವುಗಳನ್ನು ಆಫ್ ಮಾಡುವುದು ಒಳ್ಳೆಯದು.
ಫೋನ್-ಮುಕ್ತ ವಲಯಗಳನ್ನು ರಚಿಸಿ: ನಿಮ್ಮ ಮನೆಯಲ್ಲಿ ನಿಮ್ಮ ಮಲಗುವ ಕೋಣೆಯಲ್ಲಿ ಅಥವಾ ಊಟ ಮಾಡುವಾಗ ಫೋನ್ ಬಳಕೆಯನ್ನು ನಿರ್ಭಂದಿಸಿ.
ಪರ್ಯಾಯ ಚಟುವಟಿಕೆಗಳನ್ನು ಹುಡುಕಿ: ಸಮಯ ವ್ಯರ್ಥವಾಗುವ ಅನುಪಯೋಗಿ ಸ್ಕ್ರೋಲಿಂಗ್ ಅನ್ನು ನೀವು ಆನಂದಿಸುವ ಚಟುವಟಿಕೆಗಳೊಂದಿಗೆ ಬದಲಾಯಿಸಿ. ಉದಾಹರಣೆಗೆ ಓದುವುದು, ಹೊರಾಂಗಣದಲ್ಲಿ ಸಮಯ ಕಳೆಯುವುದು ಅಥವಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವೈಯಕ್ತಿಕವಾಗಿ ಬೆರೆಯುವುದು. ಸಂಗೀತ, ಸಾಹಿತ್ಯ, ಚಿತ್ರಕಲೆ ಅಲ್ಲದೆ ಅಂಚೆಚೀಟಿ ಸಂಗ್ರಹಣೆ, ನಾಣ್ಯಗಳ ಸಂಗ್ರಹಣೆ ಮುಂತಾದ ಹವ್ಯಾಸಗಳೂ ನಿಮ್ಮನ್ನು ಮೊಬೈಲ್‌ ಗೀಳಿನಿಂದ ವಿಮುಖಗೊಳಿಸುತ್ತವೆ.

World Social Media Day

ಸಾಮಾಜಿಕ ಮಾಧ್ಯಮ ಡಿಟಾಕ್ಸ್: ನಿಮ್ಮ ಮನಸ್ಸಿನ ರೀಬೂಟ್

ಸಾಮಾಜಿಕ ಮಾಧ್ಯಮ ನಿರ್ವಿಶೀಕರಣವನ್ನು (ಡಿಟಾಕ್ಸಿನೇಷನ್) ಪರಿಗಣಿಸಿ! ನಿರ್ದಿಷ್ಟ ಅವಧಿಗೆ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳಿ, ನಿಮ್ಮ ಮೊಬೈಲ್‌ನ್ನು ಕೇವಲ ಸಂಪರ್ಕಕ್ಕೆ ಮಾತ್ರ ಬಳಸಿ. ಯಾವುದೇ ಸೋಷಿಯಲ್‌ ಆ್ಯಪ್‌ಗಳಿಂದ ದೂರ ಇರಿ. ಅದು ಒಂದು ದಿನ, ವಾರಾಂತ್ಯ ಅಥವಾ ಒಂದು ವಾರವೂ ಆಗಿರಲಿ. ನೈಜ-ಜಗತ್ತಿನ ಸಂಪರ್ಕ ಮತ್ತು ನೀವು ನಿರ್ಲಕ್ಷಿಸಿರುವ ಚಟುವಟಿಕೆಗಳ ಸಂತೋಷಗಳನ್ನು ಮರುಶೋಧಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನಿರಂತರ ಸಾಮಾಜಿಕ ಮಾಧ್ಯಮ ಪುಲ್ ಇಲ್ಲದೆ ನೀವು ಎಷ್ಟು ಹೆಚ್ಚು ಉತ್ಪಾದಕ ಮತ್ತು ಪ್ರಸ್ತುತವನ್ನು ಅನುಭವಿಸುತ್ತೀರಿ ಎಂದು ನಿಮಗೇ ಆಶ್ಚರ್ಯವಾಗಬಹುದು.

ನೆನಪಿಡಿ, ನೀವು ಒಬ್ಬಂಟಿಯಲ್ಲ

ಸಾಮಾಜಿಕ ಮಾಧ್ಯಮ ವ್ಯಸನವು ಬೆಳೆಯುತ್ತಿರುವ ಸಮಸ್ಯೆಯಾಗಿದೆ. ಇದರಲ್ಲಿ ನೀವು ಮಾತ್ರ ಸಿಲುಕಿದವರಲ್ಲ. ಸಾಮಾಜಿಕ ಮಾಧ್ಯಮದೊಂದಿಗೆ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಅನೇಕ ಜನರು ಹೆಣಗಾಡುತ್ತಿದ್ದಾರೆ. ನಿಮ್ಮ ಫೋನ್ ಬಳಕೆಯ ಬಗ್ಗೆ ಗಮನಹರಿಸುವ ಮೂಲಕ, 5C ಫ್ರೇಮ್‌ವರ್ಕ್ ಅನ್ನು ಬಳಸಿಕೊಳ್ಳುವ ಮೂಲಕ ಮತ್ತು ಈ ಸಲಹೆಗಳನ್ನು ಕಾರ್ಯಗತಗೊಳಿಸುವುದರ ಮೂಲಕ, ನಿಮ್ಮ ಸಾಮಾಜಿಕ ಮಾಧ್ಯಮ ಅಭ್ಯಾಸಗಳನ್ನು ನೀವು ನಿಯಂತ್ರಿಸಬಹುದು ಮತ್ತು ಅದು ನಿಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿಯಾಗಬಲ್ಲದು.

ಸಾಮಾಜಿಕ ಮಾಧ್ಯಮ ಮತ್ತು ಮಾನಸಿಕ ಆರೋಗ್ಯ: ಕಾಳಜಿಗೆ ಕಾರಣ

ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯಿಂದ ಹೆಚ್ಚಿದ ಆತಂಕ, ಖಿನ್ನತೆ ಮತ್ತು ಅಸಮರ್ಪಕತೆಯ ಭಾವನೆಗಳ ನಡುವಿನ ಪರಸ್ಪರ ಸಂಬಂಧವನ್ನು ಅಧ್ಯಯನಗಳು ತೋರಿಸಿವೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಕಾಣುವ ಜೀವನದ ಕ್ಯುರೇಟೆಡ್ ಮತ್ತು ಅವಾಸ್ತವಿಕ ಚಿತ್ರಣಗಳು ನಿಮ್ಮಲ್ಲಿ ಹೋಲಿಕೆ ಮತ್ತು ಅಸಮರ್ಪಕತೆಯ ಭಾವನೆಗಳಿಗೆ ಕಾರಣವಾಗಬಹುದು. ಸಾಮಾಜಿಕ ಮಾಧ್ಯಮ ಫೀಡ್‌ಗಳು, ಸಾಮಾನ್ಯವಾಗಿ ಎಚ್ಚರಿಕೆಯಿಂದ ರಚಿಸಲಾದ ಹೈಲೈಟ್ ರೀಲ್‌ಗಳು, ವಾಸ್ತವದ ಪ್ರಾತಿನಿಧ್ಯವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ನೈಜ ಸಂಪರ್ಕಗಳ ಮೇಲೆ ಕೇಂದ್ರೀಕರಿಸಿ ಮತ್ತು ನೀವು ಪ್ರೀತಿಸುವ ಜೀವನವನ್ನು ನಿರ್ಮಿಸಿ

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮವು ಉತ್ತಮ ಸಾಧನವಾಗಿದೆ, ಆದರೆ ಇದು ನೈಜ-ಪ್ರಪಂಚದ ಸಂವಹನವನ್ನು ಬದಲಿಸಬಾರದು. ಮುಖಾಮುಖಿ ಸಂವಹನಗಳಿಗೆ ಆದ್ಯತೆ ನೀಡಲು ಮತ್ತು ನಿಮ್ಮ ಜೀವನದಲ್ಲಿ ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಲು ಪ್ರಯತ್ನವನ್ನು ಮಾಡಿ.

ಅಂತಿಮವಾಗಿ, ಸಾಮಾಜಿಕ ಮಾಧ್ಯಮದೊಂದಿಗೆ ಆರೋಗ್ಯಕರ ಸಮತೋಲನವನ್ನು ಸಾಧಿಸುವುದು ಮುಖ್ಯ. ಸಂಪರ್ಕಿಸಲು, ಹಂಚಿಕೊಳ್ಳಲು ಮತ್ತು ಮಾಹಿತಿ ಪಡೆಯಲು ಸಾಮಾಜಿಕ ಮಾಧ್ಯವನ್ನು ಬಳಸಿ. ಆದರೆ ನಿಮ್ಮ ಜೀವನದಲ್ಲಿ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ನಿಮ್ಮ ಫೋನ್ ಬಳಕೆಯ ಬಗ್ಗೆ ಗಮನಹರಿಸುವ ಮೂಲಕ ಮತ್ತು ಆರೋಗ್ಯಕರ ಅಭ್ಯಾಸಗಳ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಸಮಯ ಮತ್ತು ಗಮನದ ನಿಯಂತ್ರಣವನ್ನು ನೀವು ಮರುಪಡೆಯಬಹುದು. ಸಾಮಾಜಿಕ ಮಾಧ್ಯಮವು ನಿಮ್ಮ ಜೀವನವನ್ನು (ಸಮಯವನ್ನು) ಕಡಿಮೆಗೊಳಿಸುವುದಕ್ಕಿಂತ ಹೆಚ್ಚಿಸುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು. ಆದ್ದರಿಂದ, ನಿಮ್ಮ ಫೋನ್ ಅನ್ನು ಕೆಳಗೆ ಇರಿಸಿ, ಪರದೆಯಿಂದ ಮೇಲಕ್ಕೆ ನೋಡಿ ಮತ್ತು ಅಲ್ಲಿಗೆ ಹೋಗಿ ಮತ್ತು ನಿಮ್ಮ ಜೀವನವನ್ನು ಜೀವಿಸಿ.
ಮೋಬೈಲ್‌ ಸ್ಕ್ರೋಲಿಂಗ್‌ ನಿಲ್ಲಿಸಿ, ಜೀವನದಲ್ಲಿ ಸ್ಟ್ರೋಲಿಂಗ್ ಮಾಡಿ. Stop scrolling, Start Strolling.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಮುದ್ರಾ ಯೋಜನೆಯ ಹೆಸರಲ್ಲಿ ರಾಷ್ಟ್ರವ್ಯಾಪಿ ಸೈಬರ್ ವಂಚನೆ

Continue Reading
Advertisement
Mysuru News actress Vidhya Nandish congress leader killed by her husband
ಕ್ರೈಂ14 mins ago

Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

Anant Ambani Radhika 2nd pre wedding bash
ಬಾಲಿವುಡ್23 mins ago

Anant Ambani Radhika: ಐಷಾರಾಮಿ ಹಡಗಿನಲ್ಲಿ ನಡೆಯಲಿದೆ ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌ ಶೋ!

NIA raid rameshwaram cafe blast
ಪ್ರಮುಖ ಸುದ್ದಿ30 mins ago

Rameshwaram Cafe Blast: ಬೆಂಗಳೂರಿನ 4 ಕಡೆ ಸೇರಿ ದೇಶಾದ್ಯಂತ ಎನ್‌ಐಎ ದಾಳಿ

Viral Video
ವೈರಲ್ ನ್ಯೂಸ್39 mins ago

Viral Video: ಮದುವೆಗೆ ಬಂದ ಮಾಜಿ ಪ್ರಿಯಕರ; ಆಮೇಲೆ ನಡೆದಿದ್ದೇ ಬೇರೆ- ಸಿನಿಮಾ ಸ್ಟೈಲ್‌ನಲ್ಲಿ ಟ್ವಿಸ್ಟ್‌ ಎಂದ ನೆಟ್ಟಿಗರು

Love Case Father throws hot water on man who loved his daughter for coming home
ಕೊಡಗು48 mins ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

RCB IPL Records
ಕ್ರೀಡೆ55 mins ago

RCB IPL Records: ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಎಷ್ಟು ಬಾರಿ ಪ್ಲೇ ಆಫ್​ಪ್ರವೇಶಿಸಿದೆ?: ತಂಡದ ದಾಖಲೆ ಹೇಗಿದೆ?

Emirates Flight
ದೇಶ56 mins ago

Emirates Flight: ವಿಮಾನ ಡಿಕ್ಕಿ ಹೊಡೆದು 36 ಫ್ಲೆಮಿಂಗೊ ಪಕ್ಷಿಗಳಿಗೆ ದಾರುಣ ಅಂತ್ಯ

Actress Nayanthara twin sons on auto ride
ಕಾಲಿವುಡ್1 hour ago

Actress Nayanthara: ನಯನತಾರಾ ಅವಳಿ ಮಕ್ಕಳ ಭರ್ಜರಿ ಆಟೋ ಸವಾರಿ!

Mallikarjuna Kharge siddaramaiah
ಪ್ರಮುಖ ಸುದ್ದಿ1 hour ago

CM Siddaramaiah: ಖರ್ಗೆಯೂ ಪಿಎಂ ಆಗಲ್ಲ! ಸಿದ್ದರಾಮಯ್ಯ ಯಾಕಿಂಥಾ ಮಾತಾಡಿದ್ರು?

murder Case in Vijayapura
ವಿಜಯಪುರ1 hour ago

Murder Case : ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ, ಶವದ ಪಕ್ಕದಲ್ಲೇ ನಿದ್ರೆಗೆ ಜಾರಿದ ಕುಡುಕ ಪತಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌