Ajinomoto: ಅಜಿನೊಮೊಟೊ ಎಂಬ ಸೈಲೆಂಟ್‌ ಕಿಲ್ಲರ್: ನಾಲಿಗೆಗೆ ರುಚಿ, ಆರೋಗ್ಯಕ್ಕೆ ಕಹಿ - Vistara News

ಅಂಕಣ

Ajinomoto: ಅಜಿನೊಮೊಟೊ ಎಂಬ ಸೈಲೆಂಟ್‌ ಕಿಲ್ಲರ್: ನಾಲಿಗೆಗೆ ರುಚಿ, ಆರೋಗ್ಯಕ್ಕೆ ಕಹಿ

ಅಜಿನೊಮೊಟೊ (Ajinomoto) ಈಗ ಯಥೇಚ್ಛವಾಗಿ ಸಿಗುವುದರಿಂದ ಅತಿಯಾಗಿ ಬಳಸಲಾಗುತ್ತಿದೆ. ಒಂದು ಚಿಟಿಕೆ ಬಳಕೆಗೆ ಸೂಕ್ತವಾದ ಈ ಟೇಸ್ಟಿಂಗ್ ಪುಡಿಯನ್ನು ನಾಲಿಗೆಯ ರುಚಿ ಹೆಚ್ಚಿಸಲು ಟೇಬಲ್ ಚಮಚಕ್ಕೂ ಹೆಚ್ಚು ಸುರಿಯುತ್ತಿರುವುದು ಭಯಾನಕ.

VISTARANEWS.COM


on

ajinomoto
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
supreetha-b-s-washington

:: ಸುಪ್ರೀತಾ ಬಿ.ಎಸ್., ವಾಷಿಂಗ್ಟನ್

ಬಾಯಲ್ಲಿ ನೀರೂರಿಸುವ ಗೋಬಿ ಮಂಚೂರಿಯನ್, ಫ್ರೈಡ್ ರೈಸ್, ನ್ಯೂಡಲ್ಸ್, ಹೀಗೆ ಹಲವಾರು ಸಂಜೆಯ ಸ್ನಾಕ್ಸ್‌ಗಳನ್ನು ಮನೆಯಲ್ಲಿ ತಯಾರಿಸಿ, ಎಷ್ಟೇ ಅನುಭವವಿದ್ದರೂ, ಕೈ ಪಳಗಿದ್ದರೂ, ಈ ಸ್ನಾಕ್ಸ್‌ಗಳನ್ನು ಹೊರಗಿನ ಈಟರಿಗಳಲ್ಲಿ ತಿನ್ನುವಾಗ ಸಿಗುವ ರುಚಿ ಬರಿಸಲು ಸಾಧ್ಯವೇ ಇಲ್ಲ. ಪಾಕತಜ್ಞರಿಗೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿದ್ದರೂ ಇದು ಒಪ್ಪಲೇಬೇಕಾದ ಸಂಗತಿ. ಏಕೆ ಹೀಗೆ ಎಂದು ಈ ವಿಷಯವನ್ನು ಬೆನ್ನಟ್ಟಿ ಹೋದಾಗ ನಮಗೆ ಸಿಗುವುದೇ ಟೇಸ್ಟಿಂಗ್ ಪೌಡರ್ ಎನಿಸಿಕೊಳ್ಳುವ ಅಜಿನೊಮೋಟೊ (Ajinomoto). ಅಸಲಿಗೆ ಇದು ಮೋನೊಸೋಡಿಯಂ ಗ್ಲುಟಾಮೇಟ್ (MSG). ಸೋಡಿಯಂ (ಉಪ್ಪು), ಅಮೈನೊ ಆಮ್ಲ ಮತ್ತು ಗ್ಲುಟಾಮೇಟ್‌ಗಳ ಸಂಯೋಜನೆಯಿದು.

ಒಮ್ಮೆ ನೀವು ಚೈನೀಸ್ ಫುಡ್ ಅಥವಾ ಸ್ನಾಕ್ಸ್‌ಗಳನ್ನು ಸವಿದರೆ ಮತ್ತೆ ಮತ್ತೆ ತಿನ್ನುವ ತವಕ. ನಾಲಿಗೆಯಲ್ಲಿ ಸಿಗುವ ರುಚಿಯ ಮಜಲನ್ನು ಪುನಃ ನೆನಪಿಸಿಕೊಂಡು ಪದೇ ಪದೆ ತಿನ್ನುವಂತೆ ಮಾಡುತ್ತಾ ಈ ಟೇಸ್ಟ್ enhancer (ರುಚಿ ಪ್ರವರ್ತಕ) ಕಾರ್ಯ ನಿರ್ವಹಿಸಿ ನಮಗೆ ಉಮಾಮಿ ರುಚಿಯನ್ನು ಅಂದರೆ ಉಪ್ಪು, ಹುಳಿ, ಖಾರ, ಸಿಹಿಗೆ ಮೀರಿದ ರುಚಿಯನ್ನು ನೀಡುತ್ತಾ ನಮ್ಮ ನಾಲಿಗೆಯನ್ನು ಮರಳು ಮಾಡುತ್ತಾ ಹೋಗುತ್ತದೆ. ಇದು ಚೀನಾದ ವಸ್ತುವಾದರೂ, ತಯಾರು ಮಾಡುವುದು ಜಪಾನಿನ ಟೋಕಿಯೋದ ಕಂಪನಿ ಅಜಿನೊಮೋಟೊ. ಹೀಗಾಗಿ ಅಜಿನೊಮೋಟೊ ಎಂಬುದೇ ಈ ಟೇಸ್ಟ್ ಪೌಡರ್‌ಗೆ ಪರ್ಯಾಯ ಹೆಸರಾಗಿದೆ.

ಇದೇನೂ ಹೊಸ ಸಂಶೋಧನೆಯಲ್ಲ. 1908ರಲ್ಲಿ ಜಪಾನಿ ಸಂಶೋಧಕ ‘ಕಿಕುನೆ ಇಕೆಡಾ’ ಎಂಬಾತ ಈ ರಾಸಾಯನಿಕವನ್ನು ಕಂಡು ಹಿಡಿದ. ಇದನ್ನು ಕಬ್ಬು, ಸಕ್ಕರೆ, ಜೋಳ ಅಥವಾ ಸೋಡಿಯಂ ಕ್ಯಸವ (cassava) ಇವುಗಳನ್ನು ಬಳಸಿ ತಯಾರಿಸುತ್ತಾರೆ. ಮೊದಲು ಅಂಗಡಿ ಮುಂಗಟ್ಟುಗಳಲ್ಲಿ ಸಿಗಲೊಲ್ಲದ್ದು, ಈಗ ಯಥೇಚ್ಛವಾಗಿ ಸಿಗುತ್ತಿರುವುದರಿಂದ ಅಸಮರ್ಪಕ ಬಳಕೆಯ ಬೆಳವಣಿಗೆ ಕಂಡುಬಂದಿದೆ. ಒಂದು ಚಿಟಿಕೆ ಬಳಕೆಗೆ ಸೂಕ್ತವಾದ ಈ ಟೇಸ್ಟಿಂಗ್ ಪುಡಿಯನ್ನು ನಾಲಿಗೆಯ ರುಚಿ ಹೆಚ್ಚಿಸಲು ಟೇಬಲ್ ಚಮಚಕ್ಕೂ ಹೆಚ್ಚು ಸುರಿಯುತ್ತಿರುವುದು ಖಂಡನೀಯ. ಅಷ್ಟೇ ಏಕೆ, ಹಿಂದೆ ಮುಂದೆ ತಿಳಿಯದೇ, ಸುಲಭವಾಗಿ ಸಿಗುತ್ತಿರುವ ಈ ಟೇಸ್ಟಿಂಗ್ ಪೌಡರ್ ಅನ್ನು ರುಚಿ ಒಂದನ್ನೇ ಗುರಿಯಾಗಿಟ್ಟುಕೊಂಡು ಇಡ್ಲಿ, ಸಾಂಬಾರ್, ಚಟ್ನಿ, ಸಾರು, ಚಿತ್ರಾನ್ನಕ್ಕೂ ಗೃಹಿಣಿಯರು ಬಳಸುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು.

ಅಜಿನೊಮೊಟೊದಲ್ಲಿ ಯಾವುದೇ ವಿಟಮಿನ್ಸ್, ಪ್ರೋಟೀನ್‌, ಫ್ಯಾಟ್‌ ಅಥವಾ ಇತರೆ ಆರೋಗ್ಯಕರ ಅಂಶಗಳು ಇಲ್ಲ. ಅಜಿನೊಮೊಟೊ ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ಆಹಾರದಲ್ಲಿನ ಇತರ ಎಲ್ಲಾ ರುಚಿಗಳನ್ನು ಸಮನ್ವಯಗೊಳಿಸುತ್ತದೆ. ಇದನ್ನು ಸಕ್ಕರೆ ಅಥವಾ ಮೊಲಾಸಸ್ ಬಳಸಿ ತಯಾರಿಸುತ್ತಾರೆ.

ಅಜಿನೊಮೊಟೊ ದುಷ್ಪರಿಣಾಮಗಳು

MSG ಮೊದಲಾಗಿ ನರಮಂಡಲಕ್ಕೇ ದಾಳಿ ಮಾಡುತ್ತದೆ. ಇದನ್ನು ಸೇವಿಸಿದ ಬಳಿಕ ಕೊಬ್ಬು ಶೇಖರಣೆಗೊಂಡು ದಪ್ಪಗಾಗುತ್ತಾರೆ. ರಕ್ತದೊತ್ತಡ ಏರಿಳಿತವಾಗುವುದು, ಮೆದುಳಿನ ಮೇಲೆ ಕೆಟ್ಟ ಪರಿಣಾಮ, ಮೈಗ್ರೇನ್ ಅಥವಾ ತಲೆನೋವು, ಉಸಿರಾಟದ ಸಮಸ್ಯೆಗಳು, ಹೆಚ್ಚು ಗೊರಕೆ, ನಿದ್ರಾಹೀನತೆ, ಎದೆ ನೋವು, ತಲೆ ಸುತ್ತುವಿಕೆ, ಹೊಟ್ಟೆ ನೋವು, ಹಸಿವಾಗದಿರುವುದು ಕಂಡುಬರುತ್ತದೆ. ಅಷ್ಟೇ ಏಕೆ, ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೂ ಕಾರಣವಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಅಜಿನೊಮೊಟೊದ ಹೆಚ್ಚಿನ ಸೇವನೆಯು ಕ್ಯಾನ್ಸರ್ ಕೋಶಗಳನ್ನು ಪುನರುತ್ಪಾದಿಸುತ್ತದೆ, ಕ್ಯಾನ್ಸರ್ ಹರಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಹೀಗಾಗಿ ಸೈಲೆಂಟ್ ಕಿಲ್ಲರ್ ಆದ MSG ಆಹಾರಗಳಿಂದ ಹುಷಾರಾಗಿರಿ.‌

ಇದನ್ನೂ ಓದಿ: Health Tips: ಮಲಬದ್ಧತೆ ಎಂಬ ಯಾತನೆ: ನಿತ್ಯ ಜೀವನದಲ್ಲಿದೆ ಸರಳ ಪರಿಹಾರ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಭಾರತೀಯ ಸೋದರತೆಯ ಮಹಾ ಪರ್ವ – ರಕ್ಷಾ ಬಂಧನ

ರಾಜಮಾರ್ಗ ಅಂಕಣ: ಹಲವು ನೂಲಿನ ದಾರಗಳನ್ನು ಒಂದೇ ಗಟ್ಟಿ ದಾರದ ಮೂಲಕ ಬಂಧಿಸುವುದೇ ರಕ್ಷೆ. ಅಂದರೆ ಜಾತಿ, ವರ್ಣಬೇಧಗಳನ್ನು ಮೆಟ್ಟಿ ನಿಂತು ಇಡೀ ಹಿಂದೂಸಮಾಜವು ಒಗ್ಗಟ್ಟಾಗಿ ನಿಲ್ಲಬೇಕು ಎನ್ನುವುದು ಈ ರಕ್ಷಾಬಂಧನ ಹಬ್ಬದ ಅಲ್ಟಿಮೇಟ್ ಸಂದೇಶ.

VISTARANEWS.COM


on

raksha bandhan 2024 ರಾಜಮಾರ್ಗ ಅಂಕಣ
Koo

ಅದರ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಆಯಾಮ

:: ರಾಜೇಂದ್ರ ಭಟ್ ಕೆ.

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ನಾಡಿನ ಸಮಸ್ತ ಸೋದರ, ಸೋದರಿಯವರಿಗೆ ರಕ್ಷಾಬಂಧನ (Raksha bandhan) ಹಬ್ಬದ ಶುಭಾಶಯಗಳು. ಶ್ರಾವಣ ಪೌರ್ಣಮಿಯ ಈ ದಿನ ಪ್ರತಿಯೊಬ್ಬ ಸೋದರಿಯೂ ತನ್ನ ಸೋದರನಿಗೆ ರಕ್ಷೆ ಕಟ್ಟಿ ತನ್ನ ಮಾನ, ಪ್ರಾಣ ಮತ್ತು ಸ್ವಾಭಿಮಾನದ ರಕ್ಷಣೆ ಮಾಡು ಅಣ್ಣಾ ಎಂದು ವಿನಂತಿಸುವ ಹಬ್ಬವೇ ರಕ್ಷಾಬಂಧನ (Rakhi Festival 2024). ಅದನ್ನು ನಿಭಾಯಿಸಬೇಕಾದದ್ದು ಪ್ರತಿಯೊಬ್ಬ ಅಣ್ಣನ ಕರ್ತವ್ಯ.

ನಾವು ಆಚರಿಸುವ ಫಾದರ್ಸ್ ಡೇ, ಮದರ್ಸ್ ಡೇ, ಲವರ್ಸ್ ಡೇ ಇವೆಲ್ಲವೂ ಪಾಶ್ಚಾತ್ಯ ಅನುಕರಣೆಯಿಂದ ಬಂದ ಹಬ್ಬಗಳು. ಆದರೆ ರಕ್ಷಾಬಂಧನ (ಅಥವಾ ರಾಖೀ ಹಬ್ಬ) ಅಪ್ಪಟ ಭಾರತೀಯ ಸಂಸ್ಕೃತಿಯ ಹಬ್ಬ ಎಂಬ ಕಾರಣಕ್ಕೆ ಅದು ನಮಗೆ ಹೆಚ್ಚು ಆಪ್ತವಾಗಬೇಕು. ಇಲ್ಲಿ ಸೋದರತೆಯು ರಕ್ತ ಸಂಬಂಧವನ್ನು ಮೀರಿದ್ದು, ಜಾತಿ, ಮತ, ಭಾಷೆ, ರಾಷ್ಟ್ರಗಳ ಸೀಮೆಗಳನ್ನು ಮೀರಿದ್ದು ಎನ್ನುವುದು ನೂರಾರು ಬಾರಿ ಸಾಬೀತಾಗಿದೆ.

ಪುರಾಣಗಳ ಹಿನ್ನೆಲೆ

ಮಹಾಭಾರತದಲ್ಲಿ ಯಾವುದೋ ಸನ್ನಿವೇಶದಲ್ಲಿ ಯುದ್ಧ ಮಾಡುತ್ತಿರುವಾಗ ಕೃಷ್ಣ ದೇವರ ಬೆರಳಿಗೆ ಗಾಯವಾಗಿ ರಕ್ತ ಹರಿಯುತ್ತದೆ. ಆಗ ಸಮೀಪದಲ್ಲಿ ಇದ್ದ ದ್ರೌಪದಿ ಆತಂಕಗೊಂಡು ತನ್ನ ಕೇಸರಿ ಬಣ್ಣದ ಸೀರೆಯ ಸೆರಗನ್ನು ಹರಿದು ಅದನ್ನು ಕೃಷ್ಣ ದೇವರ ಬೆರಳಿಗೆ ಕಟ್ಟಿದ್ದೇ ರಕ್ಷೆ ಆಯಿತು. ಕೃಷ್ಣ ದ್ರೌಪದಿಯನ್ನು ಆ ಕ್ಷಣಕ್ಕೆ ಸೋದರಿಯಾಗಿ ತೆಗೆದುಕೊಳ್ಳುತ್ತಾನೆ. ಮುಂದೆ ಕೌರವನ ಆಸ್ಥಾನದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಪ್ರಸಂಗ ಬಂದಾಗ ಅದೇ ಕೃಷ್ಣನು ದ್ರೌಪದಿಗೆ ಅಕ್ಷಯಾಂಬರವನ್ನು ನೀಡಿ ತನ್ನ
ಸೋದರತ್ವದ ಋಣವನ್ನು ತೀರಿಸಿದನು ಅನ್ನುವುದು ಮಹಾಭಾರತದ ಕಥೆ. ಹಾಗೆಯೇ ಮುಂದೆ ದ್ರೌಪದಿಯು ಆಸೆ ಪಟ್ಟಂತೆ ಕೃಷ್ಣನು ಕುರುಕ್ಷೇತ್ರದ ಯುದ್ಧವನ್ನು ಪೂರ್ತಿ ಮಾಡಿಕೊಟ್ಟದ್ದೂ ತನ್ನ ಸೋದರಿಯ ಮೇಲಿನ ಪ್ರೀತಿಯಿಂದ.

ಬಲಿ ಚಕ್ರವರ್ತಿಗೆ ಲಕ್ಷ್ಮಿದೇವಿಯು ರಕ್ಷೆ ಕಟ್ಟಿದ್ದು ಯಾಕೆ?

ಮಹಾಪರಾಕ್ರಮಿಯಾದ ದಾನವ ಬಲಿ ಚಕ್ರವರ್ತಿಗೆ ಲಕ್ಷ್ಮಿಯು ಕೇಸರಿ ಬಣ್ಣದ ನೂಲಿನ ದಾರವನ್ನು ಕಟ್ಟಿ ಕೈಮುಗಿದು ನಿಲ್ಲುತ್ತಾಳೆ. ಆಗ ಬಲಿಯು ಕರಗಿ ಏನಾಗಬೇಕು ತಂಗಿ? ಎಂದು ಕೇಳುತ್ತಾನೆ. ಆಗ ಲಕ್ಷ್ಮಿಯು ನನ್ನ ಗಂಡ ಮಹಾವಿಷ್ಣುವು ಶಾಪಗ್ರಸ್ತನಾಗಿ ನಿನ್ನ ದ್ವಾರಪಾಲಕ ಆಗಿದ್ದಾನೆ. ಆತನನ್ನು ಬಿಡುಗಡೆ ಮಾಡಿ ಅಣ್ಣ ಎನ್ನುತ್ತಾಳೆ. ಒಂದು ಕ್ಷಣವೂ ವಿಳಂಬ ಮಾಡದೆ ವಿಷ್ಣುವನ್ನು ಬಿಡುಗಡೆ ಮಾಡಿ ಲಕ್ಷ್ಮಿಯ ಜೊತೆಗೆ ವೈಕುಂಠಕ್ಕೆ ಕಳುಹಿಸಿಕೊಟ್ಟನು ಅನ್ನುವುದು ಇನ್ನೊಂದು ಉಲ್ಲೇಖ. ಇಂತಹ ನೂರಾರು ಉಲ್ಲೇಖಗಳು ನಮ್ಮ ಪುರಾಣಗಳಲ್ಲಿ ದೊರೆಯುತ್ತವೆ.

ರಕ್ಷೆಯ ಐತಿಹಾಸಿಕ ಹಿನ್ನೆಲೆ

ಭಾರತದ ಮೇಲೆ ಅಲೆಕ್ಸಾಂಡರ್ ದಂಡೆತ್ತಿ ಬಂದಾಗ ಅಳುಕಿದ್ದು ವಾಯುವ್ಯದ ದೊರೆ ಪುರೂರವನ ಬಲಿಷ್ಠ ಸೇನೆಯನ್ನು ನೋಡಿ. ಆಗ ಅಲೆಕ್ಸಾಂಡರನ ಪತ್ನಿ ರೋಕ್ಸಾನಾ ಪುರೂರವನ ಬಳಿಗೆ ಬಂದು ರಕ್ಷೆಯನ್ನು ಕಟ್ಟಿ ಪತಿಯ ಪ್ರಾಣ ಭಿಕ್ಷೆಯನ್ನು ಬೇಡಿದ್ದಳು. ಮುಂದೆ ಯುದ್ಧ ನಡೆದು ಅಲೆಕ್ಸಾಂಡರ್ ಸೋತು ಧರಾಶಾಯಿಯಾದಾಗ ಅದೇ ಪುರೂರವ ಆತನ ಪ್ರಾಣರಕ್ಷೆ ಮಾಡಿ ತನ್ನ ಸೋದರನ ಕರ್ತವ್ಯವನ್ನು ನಿಭಾಯಿಸಿದ್ದನು!

ಅದೇ ರೀತಿ ರಜಪೂತ ರಾಣಿ ಕರ್ಣಾವತಿಯು ತನ್ನ ಗಂಡನನ್ನು ಕಳೆದುಕೊಂಡರೂ ಧೃತಿಗೆಡದೆ ಮೇವಾಡವನ್ನು ಅಳುತ್ತಿದ್ದಳು. ಆಗ ಗುಜರಾತ್ ದೊರೆ ಬಹಾದ್ದೂರ್ ಶಾ ದುರಾಸೆಯಿಂದ ಮೇವಾಡದ ಮೇಲೆ ದಂಡೆತ್ತಿಕೊಂಡು ಬರುತ್ತಾನೆ. ಆಗ ಅಭಯವನ್ನು ಕೇಳಿ ರಾಣಿಯು ಪತ್ರವನ್ನು ಬರೆದು ರಕ್ಷೆ ಕಳುಹಿಸಿದ್ದು ಮೊಘಲ್ ದೊರೆ ಹುಮಾಯೂನನಿಗೆ. ಅದಕ್ಕೆ ಗೌರವ ಕೊಟ್ಟು ಹುಮಾಯೂನ್ ಆಕೆಯ ರಕ್ಷಣೆಗೆ ಓಡೋಡಿ ಬಂದ ಘಟನೆಯು ಇತಿಹಾಸದಲ್ಲಿ ಇದೆ.

Raksha Bandhan 2024
Raksha Bandhan 2024

ಬಂಗಾಳವನ್ನು ಒಗ್ಗೂಡಿಸಿದ ರಕ್ಷೆ!

1905ರಲ್ಲಿ ಬ್ರಿಟಿಷರು ಬಲಿಷ್ಠ ಬಂಗಾಳ ಪ್ರಾಂತ್ಯವನ್ನು ಒಡೆದು ಭಾರತೀಯರ ಐಕ್ಯತೆಯನ್ನು ಒಡೆದರು. ಆಗ ಹಿಂದೂ ಮುಸಲ್ಮಾನರು ಬೀದಿಗೆ ಇಳಿದು ಪರಸ್ಪರ ರಕ್ತ ಚೆಲ್ಲುವ ಕೆಲಸ ಆರಂಭ ಆಯಿತು. ಆಗ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರರು ಶ್ರಾವಣ ಹುಣ್ಣಿಮೆಯಂದು ಹಿಂದೂ ಮುಸಲ್ಮಾನರು ಪರಸ್ಪರ ರಕ್ಷೆಯನ್ನು ಕಟ್ಟಿ ಸೋದರತೆಯ ಸಂದೇಶವನ್ನು ಸಾರಬೇಕು ಎಂದು ಕರೆನೀಡಿದರು. ಬ್ರಿಟಿಷ್ ಸರಕಾರ ಈ ಆಚರಣೆಯನ್ನು ತಡೆಯಲು ಶತಪ್ರಯತ್ನ ಮಾಡಿದರೂ ಇಡೀ ಬಂಗಾಳ ರಕ್ಷಾಬಂಧನದ ಹಬ್ಬ ಆಚರಣೆ ಮಾಡಿ ಐಕ್ಯತೆಯ ಸಂದೇಶವನ್ನು ಸಾರಿತು!

ಕೇಸರಿ ಬಣ್ಣವು ತ್ಯಾಗದ ಸಂಕೇತ, ರಕ್ಷೆಯು ಐಕ್ಯತೆಯ ಸಂಕೇತ

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಕೇಸರಿ ಬಣ್ಣವು ತ್ಯಾಗ ಮತ್ತು ಬಲಿದಾನದ ಸಂಕೇತ. ಹಿಂದೆ ಋಷಿಮುನಿಗಳು ಧರಿಸುತ್ತಿದದ್ದು ಕಾವಿ ( ಕೇಸರಿ) ಬಣ್ಣದ ದಿರಿಸು. ಅವರು ಮಾಡುತ್ತಿದ್ದ ಯಜ್ಞದ ಅಗ್ನಿಯ ಬಣ್ಣ ಕೇಸರಿ. ಸೂರ್ಯ ಬೆಳಿಗ್ಗೆ ಉದಯಿಸುವಾಗ, ಸಂಜೆ ಮುಳುಗುವಾಗ ಅದೇ ಕೇಸರಿ ಬಣ್ಣವನ್ನು ಪಡೆಯುತ್ತಾನೆ. ಇಲ್ಲಿನ ಮಣ್ಣಿನ ಬಣ್ಣವೂ ಕೇಸರಿ.

ಹಾಗೆಯೇ ಹಲವು ನೂಲಿನ ದಾರಗಳನ್ನು ಒಂದೇ ಗಟ್ಟಿ ದಾರದ ಮೂಲಕ ಬಂಧಿಸುವುದೇ ರಕ್ಷೆ. ಅಂದರೆ ಜಾತಿ, ವರ್ಣಬೇಧಗಳನ್ನು ಮೆಟ್ಟಿ ನಿಂತು ಇಡೀ ಹಿಂದೂಸಮಾಜವು ಒಗ್ಗಟ್ಟಾಗಿ ನಿಲ್ಲಬೇಕು ಎನ್ನುವುದು ಈ ರಕ್ಷಾಬಂಧನ ಹಬ್ಬದ ಅಲ್ಟಿಮೇಟ್ ಸಂದೇಶ.

ಬದಲಾದ ಸಾಮಾಜಿಕ ಘಟ್ಟದಲ್ಲಿ ರಕ್ಷೆ

ಸ್ತ್ರೀಯು ದುರ್ಬಲಳು ಅಥವಾ ಪರಾಧೀನಳು ಎಂದು ಭಾವಿಸಿದ ಕಾಲ ಒಂದಿತ್ತು. ಈಗ ಕಾಲವು ಸಂಪೂರ್ಣ ಬದಲಾವಣೆ ಆಗಿದೆ. ಈಗ ಸ್ತ್ರೀ ಸ್ವಯಂಭೂ ಶಕ್ತಿಸಂಪನ್ನೆಯಾಗಿ ಇರುವ ಈ ಆಧುನಿಕ ಕಾಲದಲ್ಲಿಯೂ ಆಕೆ ತನ್ನ ಮಾನ, ಪ್ರಾಣ, ಸ್ವಾಭಿಮಾನಗಳ ರಕ್ಷಣೆಗಾಗಿ ರಕ್ಷೆಯನ್ನು ಕಟ್ಟುತ್ತಾಳೆ ಎನ್ನುವುದಕ್ಕಿಂತ ಆ ರಕ್ಷೆಯು ಸೋದರರ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸಗಳ ಪ್ರತೀಕವಾಗಿ ಬದಲಾಗಿದೆ. ಪ್ರತೀ ವರ್ಷವೂ ಈ ಹಬ್ಬ ಬಂದಾಗ ತನ್ನ ಅಣ್ಣನನ್ನು (ಇಲ್ಲಿ ಮತ್ತೆ ರಕ್ತಸಂಬಂಧ ಮೀರಿದ್ದು ಕೂಡ ಹೌದು) ಹುಡುಕಿಕೊಂಡು ಬಂದು ರಕ್ಷೆ ಕಟ್ಟಿ ,ಆರತಿ ಎತ್ತಿ, ಸಿಹಿ ತಿನ್ನಿಸಿ ಇಡೀ ವರ್ಷ ಅಣ್ಣಾ ಎಂದು ಬಾಯ್ತುಂಬ ಕರೆಯುವ ತಂಗಿಯರ ಸಂಭ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗೆಯೇ ಅಂಚೆಯ ಮೂಲಕ ರಕ್ಷೆ ಕಳುಹಿಸಿಕೊಟ್ಟು ಕೂಡ ಅಣ್ಣನ ನೆನಪು ಮಾಡುವ ಸೋದರಿಯರು ಇದ್ದಾರೆ.

ಹಾಗೆಯೇ ಅವಳು ನನ್ನ ತಂಗಿ, ಇವಳು ನನ್ನ ತಂಗಿ ಕಣೋ ಎಂದು ಜಂಬದಲ್ಲಿ ಹೇಳಿಕೊಂಡು ಅಂಗೈ ತುಂಬಾ ಕೇಸರಿಯ ರಕ್ಷೆಗಳನ್ನು ಕಟ್ಟಿಕೊಂಡು ಸಂಭ್ರಮಿಸುವ ಅಣ್ಣಂದಿರಿಗೇನೂ ಕಡಿಮೆ ಇಲ್ಲ!

ಬದಲಾದ ಕಾಲಘಟ್ಟದಲ್ಲಿ ಕೂಡ ಈ ರಕ್ಷಾಬಂಧನದ ಹಬ್ಬವು ಹಿಂದೂ ಸಂಸ್ಕೃತಿಯನ್ನು ಜಾಗೃತಿ ಮಾಡುತ್ತದೆ ಎಂಬ ಕಾರಣಕ್ಕೆ ಪ್ರಾಮುಖ್ಯತೆ ಪಡೆಯುತ್ತದೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕನ್ನಡ ಚಿತ್ರರಂಗದ ಬಂಗಾರದ ಹುಡುಗ ರಿಶಬ್ ಶೆಟ್ಟಿ

Continue Reading

ಅಂಕಣ

ರಾಜಮಾರ್ಗ ಅಂಕಣ: ಕನ್ನಡ ಚಿತ್ರರಂಗದ ಬಂಗಾರದ ಹುಡುಗ ರಿಶಬ್ ಶೆಟ್ಟಿ

ರಾಜಮಾರ್ಗ ಅಂಕಣ: ರಾಷ್ಟ್ರಪ್ರಶಸ್ತಿಗಳು ಆರಂಭವಾಗಿ 75 ವರ್ಷಗಳಲ್ಲಿ ಕನ್ನಡಕ್ಕೆ ದೊರೆತದ್ದು ಕೇವಲ ನಾಲ್ಕನೆಯ ಪ್ರಶಸ್ತಿ ಇದು! 1975ರಲ್ಲಿ ಚೋಮನ ದುಡಿ ಸಿನೆಮಾದಲ್ಲಿ ಎಂ.ವಿ. ವಾಸುದೇವ್ ರಾವ್, 1986ರಲ್ಲಿ ತಬರನ ಕಥೆ ಸಿನೆಮಾದಲ್ಲಿ ಚಾರುಹಾಸನ್, 2014ರಲ್ಲಿ ನಾನು ಅವನಲ್ಲ, ಅವಳು ಸಿನೆಮಾದಲ್ಲಿ ಸಂಚಾರಿ ವಿಜಯ್ ಈವರೆಗೆ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದವರು.

VISTARANEWS.COM


on

ರಾಜಮಾರ್ಗ ಅಂಕಣ kantara Movie
Koo

75 ವರ್ಷಗಳಲ್ಲಿ ಕನ್ನಡಕ್ಕೆ ದೊರಕಿದ ಕೇವಲ ನಾಲ್ಕನೇ ಪ್ರಶಸ್ತಿ ಇದು!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ಕೋರೋನಾ ಮಹಾಮಾರಿಯಿಂದ ರಾಡಿ ಆಗಿದ್ದ ಕನ್ನಡದ ಮನಸ್ಸುಗಳಿಗೆ 2022ರಲ್ಲಿ ಒಂದು ಬಿಗ್ ಎಕ್ಸೈಟ್‌ಮೆಂಟ್ ಕೊಡುವ ಸಿನೆಮಾ ಆಗಿ ಬಂದದ್ದು ಕಾಂತಾರ! ಆ ಸಿನೆಮಾ (Kantara Movie) ಯಾವ ರೀತಿ ಹಿಟ್ ಆಯ್ತು ಅಂದರೆ ನೋಡಿದವರೇ ಮತ್ತೆ ಮತ್ತೆ ನೋಡಿದರು. ಹೊಂಬಾಳೆ ಫಿಲಂಸ್ (Hombale Films) ಕೇವಲ 16 ಕೋಟಿ ದುಡ್ಡಲ್ಲಿ ನಿರ್ಮಾಣ ಮಾಡಿದ ಈ ಸಿನೆಮಾ 450 ಕೋಟಿ ದುಡಿಯಿತು! ಆರಂಭದಲ್ಲಿ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಆದ ಸಿನೆಮಾ ಒಂದು ವರ್ಷದ ಅವಧಿಯಲ್ಲಿ ತಮಿಳು, ತೆಲುಗು, ಮಲಯಾಳಂ, ತುಳು, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಡಬ್ ಅಥವಾ ರೀಮೇಕ್ ಆಗಿ ಪಾನ್ ಇಂಡಿಯಾ ಹಿಟ್ ಆಯ್ತು. ರಿಷಬ್ ಶೆಟ್ಟಿ (Rishab Shetty) ಪಾನ್ ಇಂಡಿಯಾ ಸ್ಟಾರ್ (Pan India) ಆದರು. ಕನ್ನಡದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಎರಡನೇ ಸಿನಿಮಾ ಆಗಿ ಕಾಂತಾರ ರಿಜಿಸ್ಟರ್ ಆಯ್ತು. ಅದರಲ್ಲಿ ಮೂಡಿಬಂದಿದ್ದ ಗ್ರಾಮೀಣ ಸೊಗಡಿನ ದೃಶ್ಯಗಳು, ಕರಾವಳಿಯ ಸಂಸ್ಕೃತಿ ಮತ್ತು ದೈವದ ಮೇಲಿನ ನಂಬಿಕೆ, ಸುಂದರವಾದ ಹಾಡುಗಳು ಎಲ್ಲವೂ ಅದ್ಭುತವಾಗಿಯೇ ಇದ್ದವು.

ಆ ಸಿನೆಮಾದ ಮಾಸ್ಟರ್ ಬ್ರೈನ್ ಮತ್ತು ಸ್ಟಾರ್ ಆಕರ್ಷಣೆ ಆಗಿದ್ದರು ರಿಶಭ್! 80% ಸ್ಥಳೀಯ ಕಲಾವಿದರು ಅದ್ಭುತವಾಗಿ ಅಭಿನಯ ಮಾಡಿದ್ದು ಕೂಡ ಸಿನೆಮಾದ ಹೆಚ್ಚುಗಾರಿಕೆ.

75 ವರ್ಷಗಳಲ್ಲಿ ಕನ್ನಡಕ್ಕೆ ಇದು ಕೇವಲ 4ನೆಯ ರಾಷ್ಟ್ರಪ್ರಶಸ್ತಿ!

ಶುಕ್ರವಾರ 70ನೆಯ ಸಿನೆಮಾ ರಾಷ್ಟ್ರಪ್ರಶಸ್ತಿಗಳ ಘೋಷಣೆ ಆಗಿದ್ದು ಕಾಂತಾರ ಸಿನೆಮಾಕ್ಕೆ 2 ಪ್ರಶಸ್ತಿಗಳು ದೊರೆತಿವೆ. ಅದರಲ್ಲಿ ಬೆಲೆ ಕಟ್ಟಲು ಸಾಧ್ಯವೇ ಇಲ್ಲದ್ದು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ! ಏಕೆಂದರೆ ರಾಷ್ಟ್ರಪ್ರಶಸ್ತಿಗಳು ಆರಂಭವಾಗಿ 75 ವರ್ಷಗಳಲ್ಲಿ ಕನ್ನಡಕ್ಕೆ ದೊರೆತದ್ದು ಕೇವಲ ನಾಲ್ಕನೆಯ ಪ್ರಶಸ್ತಿ ಇದು! 1975ರಲ್ಲಿ ಚೋಮನ ದುಡಿ ಸಿನೆಮಾದಲ್ಲಿ ಎಂ.ವಿ. ವಾಸುದೇವ್ ರಾವ್, 1986ರಲ್ಲಿ ತಬರನ ಕಥೆ ಸಿನೆಮಾದಲ್ಲಿ ಚಾರುಹಾಸನ್, 2014ರಲ್ಲಿ ನಾನು ಅವನಲ್ಲ, ಅವಳು ಸಿನೆಮಾದಲ್ಲಿ ಸಂಚಾರಿ ವಿಜಯ್ ಈವರೆಗೆ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದವರು. ಕನ್ನಡಕ್ಕೆ ರಿಶಭ್ ಶೆಟ್ಟಿ ಮೂಲಕ ನಾಲ್ಕನೆಯ ರಾಷ್ಟ್ರಪ್ರಶಸ್ತಿಯು ಈ ವಿಭಾಗದಲ್ಲಿ ಬಂದಿದೆ. ಅದರಲ್ಲಿಯೂ ರಿಶಭ್ ಈ ಬಾರಿ ಮಲಯಾಳಂ ಲೆಜೆಂಡ್ ನಟ ಮಮ್ಮುಟ್ಟಿ ಜೊತೆಗೆ ಸ್ಪರ್ಧೆಯಲ್ಲಿ ಇದ್ದರು ಅಂದಾಗ ಪ್ರಶಸ್ತಿಯ ಮೌಲ್ಯವು ಭಾರೀ ಎತ್ತರಕ್ಕೆ ತಲುಪುತ್ತದೆ. ಕಾಂತಾರ ಸಿನೆಮಾ ನೋಡಿದವರು ಆಗಲೇ ಕಾಡಬೆಟ್ಟು ಶಿವನ ಅಭಿನಯಕ್ಕೆ ಫಿದಾ ಆಗಿದ್ದರು. ಅದರಲ್ಲಿಯೂ ಸಿನೆಮಾದ ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ಕನ್ನಡಕ್ಕೆ ಹೊಸದಾಗಿತ್ತು. ಅದು ಮೈ ರೋಮಾಂಚನ ಮಾಡುವ ಅಭಿನಯ ಆಗಿತ್ತು. ಅದಕ್ಕೆ ಅರ್ಹವಾಗಿ ರಿಶಭ್ ಶೆಟ್ಟರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಅದರಲ್ಲಿ ಕೂಡ ತಾನೇ ನಿರ್ದೇಶಿಸಿ, ಅಭಿನಯ ಮಾಡಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ನಟ ಎನ್ನುವ ಕೀರ್ತಿ ನಮ್ಮ ಕುಂದಾಪುರದ ಹೈದನಿಗೆ ಸಿಕ್ಕಿದೆ. ಇನ್ನೇನು ಬೇಕು?

Rishab Shetty cinema Journey before Kantara
Kantara Movie Massive Set Constructed In Kundapura

ರಿಶಭ್ ಸಾಗಿ ಬಂದ ದಾರಿ ಕೇವಲ ಹೂವಿನದ್ದು ಆಗಿರಲಿಲ್ಲ!

1983ರಲ್ಲಿ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ರಿಶಭ್ ಶೆಟ್ಟಿ ಅಲ್ಲಿಯೇ ತಮ್ಮ ಬಾಲ್ಯವನ್ನು, ಶಿಕ್ಷಣವನ್ನು ಸಂಭ್ರಮಿಸಿದವರು. ಮುಂದೆ ಪದವಿ ಪಡೆಯಲು ಬೆಂಗಳೂರು ವಿಜಯಾ ಕಾಲೇಜಿಗೆ ಸೇರಿದಾಗ ನಾಟಕ, ಯಕ್ಷಗಾನಗಳ ಸೆಳೆತ ತೀವ್ರವಾಯಿತು. ಹೊಟ್ಟೆಪಾಡಿಗಾಗಿ ನೀರಿನ ಬಾಟಲಿ ವ್ಯಾಪಾರ, ಸಣ್ಣ ಹೋಟೆಲ್, ರಿಯಲ್ ಎಸ್ಟೇಟ್ ಮಾಡಿದರೂ ವ್ಯವಹಾರ ಕೈಗೆ ಹತ್ತಲಿಲ್ಲ. ಸಿನೆಮಾಗಳ ಮೂಲಕವೇ ಅದೃಷ್ಟ ಪರೀಕ್ಷೆ ಮಾಡಬೇಕು ಎಂದು ನಿರ್ಧರಿಸಿ ಆರಂಭದಲ್ಲಿ ಕ್ಲಾಪ್ ಬಾಯ್, ಸ್ಪಾಟ್ ಬಾಯ್, ಸಹಾಯಕ ನಿರ್ದೇಶಕ…..ಹೀಗೆಲ್ಲ ಮುಂದುವರೆದರು. ಸಿನೆಮಾ ನಿರ್ದೇಶನದಲ್ಲಿ ಡಿಪ್ಲೊಮಾ ಪದವಿ ಪಡೆದದ್ದು ಇದೇ ಹಸಿವಿನ ದಿನಗಳಲ್ಲಿ!

ಆಗ ಅವರಿಗೆ ದೊರೆತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಗೆಳೆತನ ಅವರ ಬದುಕಿನ ದಾರಿಯನ್ನೇ ಬದಲಾಯಿಸಿತು. ಈ ಇಬ್ಬರು ಶೆಟ್ಟರು ಸೇರಿ ಕನ್ನಡ ಸಿನೆಮಾಗಳನ್ನು ನೆಕ್ಸ್ಟ್ ಲೆವಲಿಗೆ ತೆಗೆದುಕೊಂಡು ಹೋಗುವ ಕನಸು ಕಂಡರು.

2012, ಸ್ಪ್ಲೆಂಡರ್ ಬೈಕ್, ಗೆಳೆಯರು ಮತ್ತು ತುಫಲಕ್!

ಇಬ್ಬರು ಶೆಟ್ಟರು ತುಂಬಾ ಆಸೆ ಪಟ್ಟು ಮಾಡಿದ ಸಿನೆಮಾ ಅಂದರೆ ಅದು ತುಘಲಕ್. ಅದರ ಮೊದಲ ದಿನ ಸಿನೆಮಾ ಥಿಯೇಟರಗೆ ಬೈಕಲ್ಲಿ ಬಂದು ಗೆಳೆಯರು ಸಿಗರೇಟ್ ಸೇದುತ್ತಾ ಪ್ರೇಕ್ಷಕರನ್ನು ಕಾದು ನಿಂತಿದ್ದರು. ಎಷ್ಟು ಸಿಗರೇಟ್ ಖಾಲಿಯಾದರೂ ಥಿಯೇಟರಿಗೆ ಪ್ರೇಕ್ಷಕರೇ ಬರಲಿಲ್ಲ! ಇದು ರಿಶಭ್ ಅವರ ಓಪನಿಂಗ್ ಇನ್ನಿಂಗ್ಸ್! ಮುಂದೆ ಲೂಸಿಯಾ, ಉಳಿದವರು ಕಂಡಂತೆ, ರಿಕ್ಕಿ ಯಾವುದೂ ಆರ್ಥಿಕವಾಗಿ ಗೆಲ್ಲಿಸಲಿಲ್ಲ. ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿ ಅವರಿಗೆ ಭಾರೀ ಬ್ರೇಕ್ ಕೊಟ್ಟರೂ ದುಡ್ಡು ಮಾಡಲಿಲ್ಲ. ರಿಶಭ್ ಹೀರೋ ಆಗಿ ಅಭಿನಯಿಸಿದ ಬೆಲ್ ಬಾಟಮ್ ಸಿನೆಮಾ ನಿರ್ಮಾಪಕರನ್ನು ಗೆಲ್ಲಿಸಿತ್ತು.

ಕಿಸೆ ಮತ್ತು ಹೊಟ್ಟೆ ಖಾಲಿಯಾದಾಗ ಹೆಚ್ಚು ಕ್ರಿಯೇಟಿವ್ ಯೋಚನೆಗಳು ಬರುತ್ತವೆ ಎನ್ನುತ್ತಾರೆ ರಿಶಭ್! ಎಂತಹ ಬಿಕ್ಕಟ್ಟು ಬಂದಾಗಲೂ ರಿಶಭ್ ಮತ್ತು ರಕ್ಷಿತ್ ಧೈರ್ಯ ಕೆಡಲಿಲ್ಲ ಮತ್ತು ಗೆಳೆತನ ಬಿಡಲಿಲ್ಲ.

Kantara Movie Massive Set Constructed In Kundapura
Kantara Movie Massive Set Constructed In Kundapura

ಕಿರಿಕ್ ಪಾರ್ಟಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ!

ವರ್ಷಾನುಗಟ್ಟಲೆ ಸ್ಕ್ರಿಪ್ಟ್ ಬರೆದು ಆಸ್ತೆಯಿಂದ ಮಾಡಿದ ಸಿನೆಮಾಗಳು ಇವು. ಇಬ್ಬರು ಶೆಟ್ಟರು ಸೇರಿ ಮಾಡಿದ ಇವೆರಡೂ ಸಿನೆಮಾಗಳು ಸಾಂಡಲ್ ವುಡನಲ್ಲಿ ಸುನಾಮಿಯನ್ನೇ ಕ್ರಿಯೇಟ್ ಮಾಡಿದವು. ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳು ಹರಿದು ಬಂದವು. ಹಿಂದಿನ ಸಿನೆಮಾಗಳಲ್ಲಿ ಕೈಕೊಟ್ಟಿದ್ದ ಅದೃಷ್ಟವು ಈಗ ಕೈ ಹಿಡಿಯಿತು.

ಆಗ ಇನ್ನೊಬ್ಬ ಸೃಜನಶೀಲವಾಗಿ ಯೋಚನೆ ಮಾಡುವ ಶೆಟ್ಟರು ಈ ತಂಡವನ್ನು ಸೇರಿಕೊಂಡರು. ಅದು ರಾಜ್ ಬಿ ಶೆಟ್ಟಿ! ಇವರ ಕಾಂಬಿನೇಶನ್ ಕನ್ನಡ ಸಿನೆಮಾ ಉದ್ಯಮವನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋಯಿತು. ರಿಶಭ್ ಶೆಟ್ಟರಿಗೆ ಲಕ್ ಖುಲಾಯಿಸಿತು. ಇದೀಗ ಅವರ ಪ್ರತಿಭೆಗೆ ನ್ಯಾಶನಲ್ ಅವಾರ್ಡ್ ಕೂಡ ಒಲಿದಿದೆ. ಮುಂದಿನ ಹತ್ತಾರು ವರ್ಷಗಳ ಕಾಲ ಈ ಮೂವರು ಗೆಳೆಯರು ಸಾಂಡಲ್ ವುಡನ್ನು ರೂಲ್ ಮಾಡುವುದು ಖಂಡಿತ. ರಾಷ್ಟ್ರಪ್ರಶಸ್ತಿ ಗೆದ್ದ ರಿಶಭ್ ಶೆಟ್ಟರಿಗೆ ಅಭಿನಂದನೆಗಳು.

ಈ ಬಾರಿ ಕನ್ನಡದ ನಾಲ್ಕು ಸಿನೆಮಾಗಳಿಗೆ ದೊರೆತಿವೆ 7 ರಾಷ್ಟ್ರಪ್ರಶಸ್ತಿಗಳು!

ಕಳೆದ ಒಂದೆರಡು ವರ್ಷಗಳಿಂದ ಪ್ರಖರ ಸೂರ್ಯನಿಗೆ ಮೋಡ ಮುಸುಕಿದ ಹಾಗೆ ಆಗಿದ್ದ ಕನ್ನಡ ಚಿತ್ರರಂಗಕ್ಕೆ ಚೇತೋಹಾರಿ ಸುದ್ದಿ ಇದು. ಬಹಳ ಶ್ರಮದಿಂದ ಜನರ ಮುಂದೆ ಬಂದ ಕೆ ಜಿ ಎಫ್ (ಚಾಪ್ಟರ್ 2) ಚಿತ್ರಕ್ಕೆ ಕೂಡ ಎರಡು ಪ್ರಶಸ್ತಿಗಳು ಬಂದಿವೆ.

ಪ್ರಶಸ್ತಿ ಗೆದ್ದ ಎಲ್ಲ ಸಿನೆಮಾಗಳಿಗೆ ನಮ್ಮ ಅಭಿನಂದನೆ ಇರಲಿ. ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಪದಕವೊಂದೇ ಲಕ್ಷ್ಯ – ಲಕ್ಷ್ಯ ಸೇನ್!

Continue Reading

ಅಂಕಣ

ರಾಜಮಾರ್ಗ ಅಂಕಣ: ಪದಕವೊಂದೇ ಲಕ್ಷ್ಯ – ಲಕ್ಷ್ಯ ಸೇನ್!

ರಾಜಮಾರ್ಗ ಅಂಕಣ: ಇಡೀ ಕೋರ್ಟಿನಲ್ಲಿ ಚಿರತೆಯಂತೆ ಪಾದ ಚಲನೆ ಹೊಂದಿರುವ ಲಕ್ಷ್ಯ ಸೇನ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸನಲ್ಲಿ ಒಂದು ಪದಕಕ್ಕೆ ಲಕ್ಷ್ಯ ಇಡುವುದನ್ನು ಯಾರೂ ತಡೆಯಲು ಅಸಾಧ್ಯ ಎನ್ನುವುದು ಭಾರತೀಯರ ನಂಬಿಕೆ.

VISTARANEWS.COM


on

lakshya sen ರಾಜಮಾರ್ಗ ಅಂಕಣ
Koo

ಭಾರತದ ಬ್ಯಾಡ್ಮಿಂಟನ್ ಭರವಸೆಗೆ ಇಂದು ಹುಟ್ಟಿದ ಹಬ್ಬ(ಆಗಸ್ಟ್ 16)

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮೊನ್ನೆ ಮುಗಿದುಹೋದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ಭಾರತದ (India) ಕನಿಷ್ಠ ಆರು ಕ್ರೀಡಾಪಟುಗಳು ಕೂದಲೆಳೆಯ ಅಂತರದಲ್ಲಿ ಪದಕ ಮಿಸ್ ಮಾಡಿದ್ದರು. ಅದರಲ್ಲಿ ಒಂದು ಪ್ರಮುಖವಾದ ಹೆಸರು ಬ್ಯಾಡ್ಮಿಂಟನ್ (Badminton) ಪ್ರತಿಭೆ ಲಕ್ಷ್ಯ ಸೇನ್ (Lakshya Sen) . ಈ ಒಲಿಂಪಿಕ್ಸ್ ಕೂಟದಲ್ಲಿ ವಿಶ್ವ ಚಾಂಪಿಯನ್ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ( Victor Axelsen)ಗೆ ಬೆವರು ಇಳಿಸಿದ ಕೀರ್ತಿ ಈತನದ್ದು. ಇಂದಾತನಿಗೆ 24ನೇ ಹುಟ್ಟಿದ ಹಬ್ಬ (2001,ಆಗಸ್ಟ್ 16).

ಭಾರತದ ಬ್ಯಾಡ್ಮಿಂಟನ್ ಭರವಸೆ – ಲಕ್ಷ್ಯ ಸೇನ್

ಉತ್ತರಾಖಂಡ್ ರಾಜ್ಯದ ಅಲ್ಮೋರ ಎಂಬ ನಗರದಲ್ಲಿ ಹುಟ್ಟಿದ ಈತನಿಗೆ ಬಾಲ್ಯದಿಂದಲೂ ಅಪ್ಪ ಡಿ ಕೆ ಸೇನ್ ಅವರೇ ಕೋಚ್. ಹಾಗೆಯೇ ಆತನಿಗೆ ಲೆಜೆಂಡ್ ಪ್ರಕಾಶ್ ಪಡುಕೋಣೆ ಅವರೇ ಸ್ಫೂರ್ತಿ. ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಸಾಗಿದ ದಾರಿಯಲ್ಲಿ ಬೆಳೆಯಬೇಕು ಎಂದು ಹುರುಪು ತುಂಬಿದ್ದೇ ಅಪ್ಪ. ಈ ಹುಡುಗ ಕಠಿಣ ಪರಿಶ್ರಮಿ. ಬೆವರು ಹರಿಸುವುದರಲ್ಲಿ ಹೆಚ್ಚು ನಂಬಿಕೆ. ಈಗ ಅವನ ಕೋಚ್ ಆಗಿರುವ ವಿಮಲ್ ಕುಮಾರ್ ಹೇಳಿದ ಪ್ರತೀಯೊಂದು ಮಾತು ವೇದವಾಕ್ಯ. ‘ನಿನ್ನ ಹಿಂಗೈ ಹೊಡೆತ ಸ್ವಲ್ಪ ವೀಕ್ ಇದೆ ಹುಡುಗಾ’ ಎಂದು ಕೋಚ್ ಹೇಳಿದರೆ ‘ಮೂರು ದಿನ ಟೈಮ್ ಕೊಡಿ ಸರ್. ಸರಿ ಮಾಡಿಕೊಂಡು ಬರುತ್ತೇನೆ ‘ ಎಂದವನು. ನುಡಿದಂತೆಯೇ ನಡೆದವನು.

ಕೋಚ್ ಆತನಿಗೆ ಹೇಳಿದ ಮಾತುಗಳು

ಬ್ಯಾಡ್ಮಿಂಟನ್ ಆಟಕ್ಕೆ ದೇಹದ ಕಸುವು ತುಂಬಾ ಮುಖ್ಯ. ಫೋಕಸ್ ಅದಕ್ಕಿಂತ ಮುಖ್ಯ. ಕೊನೆಯ ಸರ್ವಿಸ್ ತನಕ ಆಟವನ್ನು ಕೈ ಚೆಲ್ಲಬಾರದು. ಎಷ್ಟು ಪಾಯಿಂಟ್ ಹಿಂದೆ ಇದ್ದರೂ ನಿನಗೆ ಕಮ್ ಬ್ಯಾಕ್ ಮಾಡಲು ಅವಕಾಶ ಇರುತ್ತದೆ. ಎದುರಾಳಿ ಎಷ್ಟು ಬಲಿಷ್ಠ ಎಂದು ತಲೆಗೆ ತೆಗೆದುಕೊಳ್ಳಬಾರದು. ನಿನ್ನ ಸಾಮರ್ಥ್ಯಗಳ ಮೇಲೆ ಭರವಸೆ ಇಟ್ಟು ಆಡು – ಇದು ಅವರ ಕೋಚ್ ಪದೇ ಪದೇ ಹೇಳುತ್ತಿದ್ದ ಮಾತುಗಳು. ಪ್ಯಾರಿಸ್ ಒಲಿಂಪಿಕ್ಸನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ವಿಕ್ಟರ್ ಅವರನ್ನು
ಎದುರಿಸುವಾಗಲೂ ಕಿವಿಯಲ್ಲಿ ರಿಬೌಂಡ್ ಆಗ್ತಾ ಇದ್ದದ್ದು ಕೋಚ್ ಹೇಳಿದ ಈ ಮಾತುಗಳೇ.

ಪ್ರಕಾಶ್ ಪಡುಕೋಣೆ – ನನ್ನ ಸ್ಫೂರ್ತಿ ದೇವತೆ

ಯಾಕೆಂದರೆ ಒಂದು ಕಾಲದಲ್ಲಿ ಇಂಡೋನೇಷಿಯಾ ಮತ್ತು ಚೀನಾ ಪ್ರಭುತ್ವ ಸ್ಥಾಪನೆ ಮಾಡಿದ್ದ ಈ ಕ್ರೀಡೆಯನ್ನು ಭಾರತದ ಮಗ್ಗುಲಿಗೆ ತಂದವರೇ ಪಡುಕೋಣೆ ಸರ್. 80ರ ದಶಕದಲ್ಲಿ ಅವರು ವರ್ಲ್ಡ್ ನಂಬರ್ ಒನ್ ಆಗಿದ್ದರು ಮತ್ತು ಅದೇ ವರ್ಷ ಅವರು ಆಲ್ ಇಂಗ್ಲೆಂಡ್ ಓಪನ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾದರು. ಆವಾಗ ಲಕ್ಷ್ಯ ಸೇನ್ ಹುಟ್ಟಿರಲೇ ಇಲ್ಲ. ಮುಂದೆ ಅವರನ್ನು ಅವರ ಟ್ರೈನಿಂಗ್ ಆಕಾಡೆಮಿಯಲ್ಲಿ ಭೇಟಿ ಆದಾಗ ಅವರು ಕೊಟ್ಟ ಟಿಪ್ಸ್, ಆಶೀರ್ವಾದ ನನ್ನನ್ನು ಬೆಳೆಸುತ್ತಿದೆ. ನಾನು ಅವರಿಗೆ ಆಭಾರಿ ಎನ್ನುತ್ತಾರೆ ನಮ್ಮ ಚಾಂಪ್.

ಈ ಬಾರಿ ಪ್ಯಾರಿಸ್ ಒಲಿಂಪಿಕ್ಸನಲ್ಲಿ..

ಪ್ರತೀಯೊಂದು ಪಂದ್ಯವು ಅವರಿಗೆ ಸ್ಪರ್ಧಾತ್ಮಕವಾಗಿಯೇ ಇತ್ತು. ಅವುಗಳನ್ನು ಗೆದ್ದು ಸೆಮೀಸ್ ಪ್ರವೇಶ ಮಾಡಿದಾಗ ಭಾರತಕ್ಕೆ ಒಂದಾದರೂ ಪದಕವನ್ನು ಗೆಲ್ಲಬೇಕು ಎಂಬ ಕನಸು ಸ್ಟ್ರಾಂಗ್ ಆಗಿತ್ತು. ಆದರೆ ಪಂದ್ಯದ ಆರಂಭದಲ್ಲಿಯೇ ಮೊಣಕೈಗೆ ಬಲವಾದ ಗಾಯವಾಗಿ ರಕ್ತ ಸುರಿಯಲು ಆರಂಭವಾಯಿತು. ಹಲವು ಬಾರಿ ಫಿಸಿಯೋ ಮೈದಾನಕ್ಕೆ ಕಿಟ್ ತೆಗೆದುಕೊಂಡು ಬಂದರೂ ನೋವು ಕಡಿಮೆ ಆಗಲಿಲ್ಲ. ಆದರೂ ವಿಶ್ವ ಚಾಂಪಿಯನ್ ಆಟಗಾರನಿಗೆ ಫೈಟ್ ಕೊಟ್ಟ ತೃಪ್ತಿ ಇದೆ. ಭಾರತಕ್ಕೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ನೋವು ಅದಕ್ಕಿಂತ ದೊಡ್ಡದು. ಮುಂದಿನ ಒಲಿಂಪಿಕ್ಸ್ ಕೂಟಕ್ಕೆ ಈಗಿನಿಂದಲೇ ಸಿದ್ಧತೆ ಮಾಡುತ್ತೇನೆ ಎಂದು ಲಕ್ಷ್ಯ ಸೇನ್ ಹೇಳಿದ್ದಾರೆ.

ಆತನ ಬಗ್ಗೆ ವಿಶ್ವಚಾಂಪಿಯನ್ ವಿಕ್ಟರ್ ಹೇಳಿದ ಮಾತುಗಳು ಇನ್ನೂ ಸ್ಫೂರ್ತಿದಾಯಕ ಆಗಿವೆ. ʼನಾನು ಇದುವರೆಗೂ ಎದುರಿಸಿದ ಅತ್ಯಂತ ಕಠಿಣ ಸ್ಪರ್ಧಿ ಎಂದರೆ ಲಕ್ಷ್ಯ ಸೇನ್. ಆತನಿಗೆ ಉಜ್ವಲ ಭವಿಷ್ಯ ಇದೆ. ಮುಂದಿನ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ನಾನು ಇರುವುದಿಲ್ಲ. ಆತನು ಖಂಡಿತವಾಗಿ ಪದಕ ಗೆಲ್ಲುವ ಫೇವರಿಟ್ ಆಗಿರುತ್ತಾನೆ!’ ಈ ಮಾತುಗಳು ಪದಕಕ್ಕಿಂತ ಹೆಚ್ಚು ಮೌಲ್ಯ ಹೊಂದಿವೆ ಎಂದು ನಿಮಗೆ ಅನ್ನಿಸುತ್ತದೆಯಾ?

ಅದ್ಭುತವಾದ ಟ್ರಾಕ್ ರೆಕಾರ್ಡ್

ವರ್ಲ್ಡ್ ಜ್ಯೂನಿಯರ್ ವಿಭಾಗದಲ್ಲಿ ಆತನು ನಂಬರ್ ಒನ್ ರಾಂಕ್ ಹೊಂದಿದ್ದ ಆಟಗಾರ. ಯೂತ್ ಒಲಿಂಪಿಕ್ಸನಲ್ಲಿ ಎರಡು ಪದಕ, ವರ್ಲ್ಡ್ ಚಾಂಪಿಯನ್ ಶಿಪ್ ಕೂಟದಲ್ಲಿ ಕಂಚಿನ ಪದಕ, ಥಾಮಸ್ ಕಪ್, ಕಾಮನ್ ವೆಲ್ತ್ ಗೇಮ್ಸ್, ಏಷಿಯನ್
ಬ್ಯಾಡ್ಮಿಮಿಂಟನ್ ಕೂಟ…ಎಲ್ಲ ಕಡೆಯಲ್ಲಿಯೂ ಲಕ್ಷ್ಯ ಸೇನ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಈಗಾಗಲೇ ಒಟ್ಟು 15 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಅವರ ಸಕ್ಸೆಸ್ ರೇಟ್ 236 ಗೆಲುವು/102 ಸೋಲು! ಇಂದಿನ ದಿನಕ್ಕೆ ಆತನ ವರ್ಲ್ಡ್ ರಾಂಕಿಂಗ್ 16. ಅದು ಇಂಪ್ರೂವ್ ಆಗ್ತಾ ಇದೆ ಅನ್ನೋದು ನಮಗೆ ಸಿಹಿಸುದ್ದಿ.

ಐದು ಅಡಿ 10 ಇಂಚು ಎತ್ತರದ, ಅಹಂಕಾರದ ಸೊಂಕೂ ಇಲ್ಲದ, ಕೀರ್ತಿ ಶನಿ ಇನ್ನೂ ತಲೆಗೆ ಹತ್ತದೆ ಇರುವ, ಬಲಿಷ್ಠ ಹಿಂಗೈ ಮತ್ತು ಮುಂಗೈ ಹೊಡೆತಗಳ ಆಟಗಾರ, ಇಡೀ ಕೋರ್ಟಿನಲ್ಲಿ ಚಿರತೆಯಂತೆ ಪಾದ ಚಲನೆ ಹೊಂದಿರುವ ಲಕ್ಷ್ಯ ಸೇನ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸನಲ್ಲಿ ಒಂದು ಪದಕಕ್ಕೆ ಲಕ್ಷ್ಯ ಇಡುವುದನ್ನು ಯಾರೂ ತಡೆಯಲು ಅಸಾಧ್ಯ ಎನ್ನುವುದು ಭಾರತೀಯರ ನಂಬಿಕೆ.

ಆಲ್ ದ ಬೆಸ್ಟ್ ಮತ್ತು ಹ್ಯಾಪಿ ಬರ್ತಡೇ ಚಾಂಪಿಯನ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸ್ವಾತಂತ್ರ್ಯದ ಕನವರಿಕೆಯಲ್ಲಿ ಮಿಂದೆದ್ದ ಭಾರತ

Continue Reading

ಅಂಕಣ

ರಾಜಮಾರ್ಗ ಅಂಕಣ: ಸ್ವಾತಂತ್ರ್ಯದ ಕನವರಿಕೆಯಲ್ಲಿ ಮಿಂದೆದ್ದ ಭಾರತ

ರಾಜಮಾರ್ಗ ಅಂಕಣ: ಆ ಘಟನೆ ನಡೆದು 78 ವರ್ಷಗಳೇ ಕಳೆದುಹೋದವು. ಬ್ರಿಟಿಷ್ ಚಕ್ರಾಧಿಪತ್ಯವು ನಮ್ಮನ್ನು ತೊರೆದು ಸ್ವಾತಂತ್ರ್ಯದ ನಸುಕು ಹರಿದು ಅಷ್ಟೇ ವರ್ಷಗಳು ಪೂರ್ತಿಯಾದವು. ಆದರೆ ಆ ಸ್ವಾತಂತ್ರ್ಯವು ನಮಗೆ ಸುಲಭವಾಗಿ ದೊರೆಯಿತು ಎಂದು ಯಾರೂ ತಿಳಿಯುವುದು ಬೇಡ.

VISTARANEWS.COM


on

Rajamarga
Koo

ಸ್ವಾತಂತ್ರ್ಯ ಎಂಬ ಹೆರಿಗೆ ನೋವನ್ನು ದಾಟಿ!

ರಾಜಮಾರ್ಗ ಅಂಕಣ: ಮೊಘಲ್ ದೊರೆ ಶಹಜಾಹನ್ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಈಸ್ಟ್ ಇಂಡಿಯಾ ಕಂಪನಿಗೆ ಸತಾರಾ ನಗರದಲ್ಲಿ ವಸಾಹತು ಮಾಡಲು ಅನುಮತಿ ನೀಡಿದ್ದೇ ಆರಂಭ. ಆ ಕಂಪೆನಿಯ ಹಿಂದೆ ಬಂದದ್ದು ಇಂಗ್ಲೆಂಡಿನ ಪ್ರಭುತ್ವ. ಅದರ ಬೆನ್ನಿಗೆ ಬಂದದ್ದು ಮತಾಂತರದ ಆಮಿಷಗಳು. ಕೊನೆಯದಾಗಿ ಬಂದದ್ದು ಭಾರತದ ಅನರ್ಘ್ಯ ಸಂಪತ್ತನ್ನು ಲೂಟಿ ಮಾಡುವ, ಭಾರತದ ಒಂದೊಂದೇ ಪ್ರದೇಶವನ್ನು ಆಪೋಶನ ಮಾಡುವ ಹುನ್ನಾರಗಳು. ಅದಕ್ಕೆ ಪೂರಕವಾದ ಇಂಗ್ಲಿಷರ ಕುಟಿಲ ನೀತಿಗಳು ಮತ್ತು ಷಡ್ಯಂತ್ರಗಳು! ಆಗೊಮ್ಮೆ ಕೂತು ನನ್ನ ಮನಸ್ಸು ಯೋಚಿಸುತ್ತದೆ, 1757ರ ಕದನದಲ್ಲಿ ಬ್ರಿಟಿಷರ 3000 ಸೈನಿಕರ ಒಂದು ಪುಟಗೋಸಿ ಸೇನೆಯನ್ನು ಬಂಗಾಲದ ನವಾಬನ ಸಿರಾಜುದ್ದೌಲನ 30,000 ಸೈನಿಕರ ಬಲಿಷ್ಠ ಸೇನೆ ಸೋಲಿಸಿದ್ದರೆ? ಹಾಗೇನಾದರೂ ಆಗಿದ್ದರೆ ಆಗಲೇ ಬ್ರಿಟಿಷ್ ಸಾಮ್ರಾಜ್ಯ ಭಾರತದಿಂದ ಗಂಟು ಮೂಟೆ ಕಟ್ಟಬೇಕಿತ್ತು. ಯಾಕೆ ಹಾಗಾಗಲಿಲ್ಲ ಎಂದರೆ ಭಾರತದ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚು ಬಲಿಷ್ಠರಾಗಿದ್ದರು!

223 ವರ್ಷಗಳ ಸುದೀರ್ಘ ಸ್ವಾತಂತ್ರ್ಯದ ಹೋರಾಟ!

ನೂರಾರು ವಿದೇಶಿ ಆಕ್ರಮಣಕಾರರು ಭಾರತದ ಮೇಲೆ ದಂಡೆತ್ತಿಕೊಂಡು ಬಂದರು ಎಂದು ನಮಗೆ ಇತಿಹಾಸ ಪಠ್ಯಗಳು ಹೇಳುತ್ತಿದ್ದವು. ಆದರೆ ಯಾಕೆ ಬಂದರು ಎಂದು ನಮಗೆ ಅರ್ಥವಾದದ್ದು ನಾವು ಮುಂದೆ ಭಾರತದ ನೈಜ ಇತಿಹಾಸವನ್ನು ಓದಿದ ನಂತರವೇ! ಬ್ರಿಟಿಷರು ಭಾರತಕ್ಕೆ ಬರುವ ಮೊದಲು ನಮ್ಮ ದೇಶವು ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗಿತ್ತು. ಸಂಪತ್ತಿನಲ್ಲಿಯೂ ಮತ್ತು ಜ್ಞಾನದಲ್ಲಿಯೂ! ಅದೇ ಆಕರ್ಷಣೆ ಈ ಬ್ರಿಟಿಷರಿಗೆ ಕೂಡ. ಆಗ ಭಾರತದಲಿದ್ದ ಸಣ್ಣ ಸಣ್ಣ ರಾಜ್ಯಗಳ ನಡುವೆ ಒಮ್ಮತವಿರಲಿಲ್ಲ. ಸ್ವಾರ್ಥ ತುಂಬಿದ್ದ ಆ ರಾಜಮಹಾರಾಜರು ಏನಾದರೂ ಒಟ್ಟಾಗಿ ನಿಂತಿದ್ದರೆ ನಮಗೆ 100 ವರ್ಷಗಳ ಹಿಂದೆಯೇ ಸ್ವಾತಂತ್ರ್ಯವು ದೊರೆಯುತ್ತಿತ್ತು! ಆಗಲೂ ಭಾರತದ ಸ್ವಾತಂತ್ರ್ಯಕ್ಕೆ ಗೋಡೆಯಾಗಿ ನಿಂತವರು ಈ ಒಳಗಿನ ಶತ್ರುಗಳೇ! ಹಿಂದೂ ಮತ್ತು ಮುಸಲ್ಮಾನರು ಒಟ್ಟಾಗಿ ಸ್ವಾತಂತ್ರ್ಯಕ್ಕೆ ಹೋರಾಡುವುದನ್ನು ಬ್ರಿಟಿಷರು ಸಹಿಸಿಕೊಳ್ಳಲೇ ಇಲ್ಲ. ಈ ಒಡೆದು ಆಳುವ ನೀತಿಯಿಂದಾಗಿ ಭಾರತದ ಸ್ವಾತಂತ್ರ್ಯ ಹೋರಾಟವು ಬೇರೆ ರಾಷ್ಟ್ರಗಳ ಹೋರಾಟಕ್ಕಿಂತ ದೀರ್ಘ ಆಯಿತು.

ಸ್ವಾತಂತ್ರ್ಯದ ಕನವರಿಕೆಯಲ್ಲಿ ದೇಶ ಇಬ್ಭಾಗವಾಯಿತು!

ಜಗತ್ತಿನ ಯಾವ ರಾಷ್ಟ್ರವು ಕೂಡ ಸ್ವಾತಂತ್ರ್ಯವನ್ನು ಪಡೆದಾಗ ಎರಡಾಗಿ ಒಡೆದು ಹೋದ ನಿದರ್ಶನ ದೊರೆಯುವುದಿಲ್ಲ! ಆದರೆ ಆಗಸ್ಟ್ 14ರ ಮಧ್ಯರಾತ್ರಿ ಪ್ರಧಾನಿ ನೆಹರೂ ಯುನಿಯನ್ ಜ್ಯಾಕನ್ನು ಕೆಳಗೆ ಇಳಿಸಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೊದಲೇ ಭಾರತವು ಎರಡು ಭಾಗವಾಗಿ ಪಾಕಿಸ್ಥಾನದ ಉದಯ ಆಗಿತ್ತು! ಆ ಕ್ಷಣದಲ್ಲಿ ಬ್ರಿಟಿಷ್ ಪ್ರಭುತ್ವ ಮೀಸೆ ತಿರುವಿ ನಗುತ್ತಿತ್ತು. ಏಕೆಂದರೆ ಅಖಂಡ ಭಾರತವು ಮುಂದೆ ವಿಶ್ವದ ಬಲಿಷ್ಠ ಶಕ್ತಿಯಾಗಿ ಹೊಮ್ಮುವ ಕನಸಿಗೆ ಅಂದೇ ಅವರು ಕೊಳ್ಳಿಯಿಟ್ಟಾಗಿತ್ತು! ಭಾರತೀಯರ ಆ ಒಂದು ಸಂಭ್ರಮದ ಮೈಮರೆತವು ಪಾಕಿಸ್ತಾನದ ರೂಪದಲ್ಲಿ ಇಂದಿಗೂ ನಮಗೆ ಮಗ್ಗುಲ ಮುಳ್ಳಾಗಿ ನಿಂತದ್ದು ವಿಪರ್ಯಾಸ!

ರಾವಿ ನದಿಯನ್ನು ದಾಟಿ ರೈಲು ತುಂಬ ಭಾರತಕ್ಕೆ ಬಂದ ರಕ್ತಸಿಕ್ತ ಹೆಣಗಳು ಭಾರತದ ಸ್ವಾತಂತ್ರ್ಯದ ಕನವರಿಕೆಯಲ್ಲಿ ಮುಳುಗಿದ್ದ ಆಗಿನ ಕೆಲವು ನಾಯಕರಿಗೆ ದ್ರೋಹ ಎಂದು ಅನ್ನಿಸಲೇ ಇಲ್ಲ. ಭೀಷ್ಮ ಸಾಹನಿ ಬರೆದ ಹಿಂದೀ ಕಾದಂಬರಿ
‘ತಮಸ್ ‘ಇದನ್ನುಒಮ್ಮೆ ಓದಿದಾಗ ನಮ್ಮ ರಕ್ತ ಕುದಿಯದೆ ಹೋದರೆ ನಾವು ಭಾರತೀಯರೇ ಅಲ್ಲ ಬಿಡಿ! ಆಗಲೂ ಭಾರತವನ್ನು ಕಾಡಿದ್ದು ಒಳಗಿನ ಶತ್ರುಗಳೇ! ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಟ್ಟೆವು ಎಂದು ಹೊರಗಿಂದ ಶೋ ಮಾಡಿ ಒಳಗೊಳಗೆ ‘ಡೊಮಿನಿಯನ್ ರಿಪಬ್ಲಿಕ್ ‘ ಎಂಬ ಢೋಂಗಿ ಒಪ್ಪಂದಕ್ಕೆ ನಮ್ಮ ವರಿಷ್ಟರಿಂದ ಸಹಿಮಾಡಿಸಿದ, ಮತ್ತೆ ಮೂರು ವರ್ಷಗಳ ಕಾಲ ಭಾರತವನ್ನು ಕಾಡಿದ ಈಸ್ಟ್ ಇಂಡಿಯಾ ಕಂಪೆನಿಯ ವರಿಷ್ಠರಿಗೆ ಅದೇ ತಾನೇ ಬೇಕಾಗಿತ್ತು!

ಸ್ವಾತಂತ್ರ್ಯದ ನಂತರದ 78 ವರ್ಷಗಳು!

1945ರ ಹಿರೋಶಿಮಾ ಬಾಂಬ್ ಸ್ಫೋಟದ ನಂತರ ಜಪಾನ್ ಮತ್ತೆ ಎದ್ದು ಬಂದದ್ದು ದೇಶಪ್ರೇಮದ ಜಾಗೃತಿಯಿಂದ. ಭಾರತಕ್ಕೂ ಅಂತಹದ್ದೇ ಅವಕಾಶ ಇತ್ತು. 223 ವರ್ಷಗಳ ಸುದೀರ್ಘ ಸ್ವಾತಂತ್ರ್ಯದ ಹೋರಾಟದ ಕಾವು ಕಣ್ಣ ಮುಂದೆ ಇತ್ತು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳು ಇದ್ದವು. ಕ್ರಾಂತಿಕಾರಿಗಳ ರಕ್ತಸಿಕ್ತ ಹೋರಾಟದ ಘಟನೆಗಳು ಇದ್ದವು. ನೇತಾಜಿ ಸುಭಾಸರ ‘ನನಗೆ ರಕ್ತ ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ!’ ಮೊದಲಾದ ಘೋಷಣೆಗಳು ಇದ್ದವು. ಬಂಕಿಮ ಚಂದ್ರರ ಕ್ಷಾತ್ರತೇಜಸ್ಸಿನ ವಂದೇ ಮಾತರಂ ಗೀತೆ ಇತ್ತು. ಒಡೆದು ಹೋದ ಭಾರತವನ್ನು ಮತ್ತೆ ಏಕೀಕರಣ ಮಾಡಿದ ಸರ್ದಾರ್ ಪಟೇಲ್ ಅವರ ನೇತೃತ್ವ ಇತ್ತು. ಇದನ್ನೆಲ್ಲ ಬಂಡವಾಳವಾಗಿ ತೆಗೆದುಕೊಂಡಿದ್ದರೆ ಭಾರತವು ಯಾವಾಗಲೋ ‘ವಿಶ್ವಗುರು’ ಆಗುತ್ತಿತ್ತು. ಇನ್ನೂ ಪೂರ್ತಿ ಆಗಲಿಲ್ಲ ಅಂದರೆ ಅದಕ್ಕೂ ಕಾರಣ ಒಳಗಿನ ಶತ್ರುಗಳು.

ಭಾರತದ ಕ್ಷಾತ್ರತೇಜಸ್ಸು ಮತ್ತೆ ಎದ್ದು ಬರಬೇಕಾಗಿದೆ.

ನಾನು ಈವರೆಗೆ ಪಟ್ಟಿ ಮಾಡಿದ ಯಾವ ದೋಷವೂ ತಾಯಿ ಭಾರತಿಯದ್ದು ಅಲ್ಲ. ಆಕೆ ಹಿಂದೆಯೂ, ಇಂದಿಗೂ, ಮುಂದೆಯೂ ಸ್ವಯಂಭೂ ಸುವರ್ಣಗರ್ಭೆ! ಮಾತೃ ಸ್ವರೂಪಿಣಿ! ಜಗತ್ತಿನ ಬೇರೆ ಯಾವ ರಾಷ್ಟ್ರಕ್ಕೂ 10,000 ವರ್ಷಗಳ ಬರೆದಿಟ್ಟ ಇತಿಹಾಸ ಇಲ್ಲ, ಅದು ಭಾರತಕ್ಕಿದೆ ಎಂಬಲ್ಲಿಗೆ ಭಾರತವು ಫೀನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದುಬರುವ ಸಾಧ್ಯತೆಗಳು ನಮ್ಮ ಕಣ್ಣ ಮುಂದಿವೆ. ಭಾರತವು ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕ ಶಕ್ತಿ ಆಗ್ತಾ ಇದೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ಇಮೇಜ್ ಹೆಚ್ಚಾಗ್ತಾ ಇದೆ. ನಮ್ಮ ಸುತ್ತಮುತ್ತಲಿನ ಪಾಕಿಸ್ತಾನ್, ಬಾಂಗ್ಲಾ ದೇಶ, ಶ್ರೀಲಂಕಾ, ಅಫ್ಘಾನಿಸ್ತಾನಗಳು ಆರ್ಥಿಕವಾಗಿ ನಡುಗಿದರೂ ಭಾರತದ ಆರ್ಥಿಕತೆಯ ಒಂದು ಇಟ್ಟಿಗೆ ಕೂಡ ಅಲುಗಾಡಿಲ್ಲ ಅನ್ನೋದು ನಮ್ಮ ಭರವಸೆಯ ಕಾರಣ. ಕೊರಾನಾ ಮಹಾಮಾರಿಯನ್ನು ಹೇಗೆ ಲಸಿಕೆಗಳ ಅಭಿಯಾನದ ಮೂಲಕ ಭಾರತವು ಗೆದ್ದಿತು ಎನ್ನುವ ನಿದರ್ಶನ ನಮ್ಮ ಮುಂದಿದೆ. ಇಸ್ರೋ ಕೈಗೊಳ್ಳುತ್ತಿರುವ ವ್ಯೋಮ ಕಾರ್ಯಕ್ರಮಗಳನ್ನು ಜಗತ್ತು ಬೆರಗುಗಣ್ಣಿಂದ ನೋಡುತ್ತಿದೆ. ಸ್ವಾತಂತ್ರ್ಯದ ನಂತರ ನಡೆದ ಪ್ರತೀಯೊಂದು ಯುದ್ಧವನ್ನು
(ಒಂದನ್ನು ಬಿಟ್ಟು) ಭಾರತವು ದೊಡ್ಡಮಟ್ಟದಲ್ಲಿ ಗೆದ್ದಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಈಗ ಭಾರತದ ಗೆಳೆತನಕ್ಕಾಗಿ ಕಾಯುತ್ತಿವೆ ಅಂದರೆ ಅದು ಎಷ್ಟೊಂದು ಅದ್ಭುತವಾದ ಪರಿವರ್ತನೆ.

2047ರ ಹೊತ್ತಿಗೆ ಭಾರತವು ವಿಕಸಿತ ರಾಷ್ಟ್ರವಾಗುವ ಭರವಸೆ ನಮ್ಮೆಲ್ಲರನ್ನೂ ಸದ್ಯಕ್ಕೆ ಕೈ ಹಿಡಿದು ಮುನ್ನಡೆಸಲಿ.

ಜೈ ಹಿಂದ್!

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

Continue Reading
Advertisement
Kidnap Case
ಬೆಂಗಳೂರು21 mins ago

Kidnap case: ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರು ಹೇಳಿ ವಿದ್ಯಾರ್ಥಿಯ ಕಿಡ್ನಾಪ್!

Woman Using an Asthma Inhaler
ಆರೋಗ್ಯ42 mins ago

Myths About Asthma: ಇವು ಅಸ್ತಮಾ ಕುರಿತು ಇರುವ 9 ಸುಳ್ಳುಗಳು!

food poison bangalore
ಬೆಂಗಳೂರು58 mins ago

Food Poison: ಊಟ ಮಾಡುವಾಗ ಇಲಿ ವಿಷ ಸಿಂಪಡಣೆ, ವಿದ್ಯಾರ್ಥಿಗಳು ಅಸ್ವಸ್ಥ

raksha bandhan 2024 ರಾಜಮಾರ್ಗ ಅಂಕಣ
ಪ್ರಮುಖ ಸುದ್ದಿ1 hour ago

ರಾಜಮಾರ್ಗ ಅಂಕಣ: ಭಾರತೀಯ ಸೋದರತೆಯ ಮಹಾ ಪರ್ವ – ರಕ್ಷಾ ಬಂಧನ

karnataka weather Forecast
ಮಳೆ2 hours ago

Karnataka Weather : ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Raksha Bandhan 2024
Latest2 hours ago

Raksha Bandhan 2024: ಇಂದು ರಕ್ಷಾ ಬಂಧನ; ಈ ಹಬ್ಬದ ವಿಶೇಷವೇನು?

Dina Bhavishya
ಭವಿಷ್ಯ3 hours ago

Dina Bhavishya : ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಡಬಲ್‌ ಲಾಭ

Viral Video
ವೈರಲ್ ನ್ಯೂಸ್8 hours ago

Viral Video: ಪಬ್ಲಿಕ್‌ನಲ್ಲೇ ಲಂಚದ ಹಣ ಹಂಚಿಕೊಂಡ ಟ್ರಾಫಿಕ್‌ ಪೊಲೀಸರು; ಖಾಕಿಯ ಲಂಚಾವತಾರ ಸಿಸಿಟಿವಿಯಲ್ಲಿ ಸೆರೆ

Viral Video
ವೈರಲ್ ನ್ಯೂಸ್9 hours ago

Viral Video: ಅಬ್ಬಾ.. ಸಾವು ಹೀಗೂ ಬರುತ್ತಾ? ಸ್ನೇಹಿತನೊಂದಿಗೆ ಮಾತಾಡ್ತಾ ನಿಂತಿದ್ದವನ ಮೇಲೆ ದೊಪ್ಪೆಂದು ಬಿದ್ದ ಎಸಿ-ವಿಡಿಯೋ ಇದೆ

Rakesh pal
ಪ್ರಮುಖ ಸುದ್ದಿ9 hours ago

Rakesh Pal: ಭಾರತೀಯ ನೌಕಾಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಹೃದಯಾಘಾತದಿಂದ ವಿಧಿವಶ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌