Samsung India| ಸ್ಯಾಮ್‌ಸಂಗ್‌ ಇಂಡಿಯಾಕ್ಕೆ 1,728 ಕೋಟಿ ರೂ. ತೆರಿಗೆ ನೋಟಿಸ್‌ ಜಾರಿ Vistara News

ಪ್ರಮುಖ ಸುದ್ದಿ

Samsung India| ಸ್ಯಾಮ್‌ಸಂಗ್‌ ಇಂಡಿಯಾಕ್ಕೆ 1,728 ಕೋಟಿ ರೂ. ತೆರಿಗೆ ನೋಟಿಸ್‌ ಜಾರಿ

ಸ್ಯಾಮ್‌ಸಂಗ್‌ ಇಂಡಿಯಾ ಆಮದು ಮಾಡಿಕೊಂಡಿರುವ 6.72 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳಿಗೆ ಸಂಬಂಧಿಸಿ ಸರ್ಕಾರಕ್ಕೆ 1728 ಕೋಟಿ ರೂ. ಸುಂಕ ನೀಡಬೇಕಾಗಿದೆ (Samsung India) ಎಂದು ಡಿಆರ್‌ಐ ತಿಳಿಸಿದೆ.

VISTARANEWS.COM


on

samsung
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕಂದಾಯ ವಿಚಕ್ಷಣ ನಿರ್ದೇಶನಾಲಯವು (DRI) ಸ್ಯಾಮ್‌ಸಂಗ್‌ ಇಂಡಿಯಾ ಎಲೆಕ್ಟ್ರಾನಿಕ್ಸ್‌ ಕಂಪನಿಗೆ 1,728 ಕೋಟಿ ರೂ. ಸುಂಕವನ್ನು ಬಡ್ಡಿ ಸಮೇತ ಪಾವತಿಸುವಂತೆ (Samsung India) ನೋಟಿಸ್‌ ಜಾರಿಗೊಳಿಸಿದೆ.

ದಕ್ಷಿಣ ಕೊರಿಯಾದ ಸ್ಯಾಮ್‌ ಸಂಗ್‌ ಎಲೆಕ್ಟ್ರಾನಿಕ್ಸ್‌ನ ಅಧೀನ ಕಂಪನಿಯಾಗಿರುವ ಸ್ಯಾಮ್‌ಸಂಗ್‌ ಇಂಡಿಯಾ ವಿರುದ್ಧ ಡಿಆರ್‌ಐ ಕಸ್ಟಮ್ಸ್‌ ಸುಂಕ ವಿವಾದ ಕುರಿತ ಪ್ರಕರಣ ದಾಖಲಿಸಿದೆ.

ತೆರಿಗೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಪ್ರೈಸ್‌ವಾಟರ್‌ ಹೌಸ್‌ ಕೂಪರ್ಸ್‌ ಕಂಪನಿಗೂ ನೋಟಿಸ್‌ ಜಾರಿಗೊಳಿಸಲಾಗಿದೆ. ಸ್ಯಾಮ್‌ಸಂಗ್‌ ಇಂಡಿಯಾ ಆಮದು ಮಾಡಿಕೊಂಡಿರುವ 6,72,821 ಕೋಟಿ ರೂ. ಮೌಲ್ಯದ ಸರಕುಗಳಿಗೆ ಒಟ್ಟು 1,728 ಕೋಟಿ ರೂ. ಕಸ್ಟಮ್ಸ್‌ ಸುಂಕವನ್ನು ನೀಡಬೇಕಾಗಿದೆ ಎಂದು ಡಿಆರ್‌ಐ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Car Accident: ಚಿಕ್ಕಬಳ್ಳಾಪುರ ಬಳಿಯ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ವೇಗವಾಗಿ ಬಂದಾಗ ಕಾರು ಅಪಘಾತ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ.

VISTARANEWS.COM


on

Car accident
Koo

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದು ನಾಲ್ವರು ದುರ್ಮರಣ ಹೊಂದಿದ ಘಟನೆ (Car Accident) ನಗರದ ಬೈಪಾಸ್ ಬಳಿಯ ಅಂಜನೇಯ ಸ್ವಾಮಿ ದೇವಾಲಯದ ಬಳಿ ನಡೆದಿದೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ವೇಗವಾಗಿ ಬಂದು ಗುಂಡಿಯೊಳಗೆ ಬಿದ್ದಿದ್ದರಿಂದ ಕಾರಿನೊಳಗಿದ್ದ ನಾಲ್ವರು ಜಲಸಮಾಧಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಕಾರನ್ನು ಗುಂಡಿಯಿಂದ ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಮೃತರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಾರು ಹರಿದು ಅಯ್ಯಪ್ಪ ಮಾಲಾಧಾರಿ ಸಾವು, ಇಬ್ಬರಿಗೆ ಗಂಭೀರ ಗಾಯ

ಚಿಕ್ಕಬಳಾಪುರ: ಕಾರು ಹರಿದ ಪರಿಣಾಮ ಅಯ್ಯಪ್ಪಸ್ವಾಮಿ ಮಾಲಾಧಾರಿಯೊಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಬಳಿ ನಡೆದಿದೆ.

ಹಿಂದೂಪುರ ಮೂಲದ ಪ್ರಹ್ಲಾದ (36) ಮೃತರು. ಗಾಯಗೊಂಡ ಮಣಿಕಂಠ ಹಾಗು ವೆಂಕಟೇಶ್ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಹಿಂದೂಪುರದಿಂದ ಶಬರಿಮಲೆಗೆ ಪಾದಯಾತ್ರೆ ಮಾಡುತಿದ್ದ ವೇಳೆ ಕಾರು ಹರಿದಿದ್ದರಿಂದ ದುರಂತ ಸಂಭವಿಸಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bus Accident: ಬಸ್‌ ಪಲ್ಟಿಯಾಗಿ ನಾಲ್ವರ ಸಾವು; ಮದುವೆಗೆ ಹೊರಟಿದ್ದವರು ಮಸಣ ಸೇರಿದರು

ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರ ಸವಾರರ ಸಾವು

Bike accident

ಆನೇಕಲ್: ಬೈಕ್‌ನಿಂದ ಬಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಜಿಗಣಿ ಸಮೀಪದ ಮಾದ ಪಟ್ಟಣದ ಬಳಿ ಶನಿವಾರ ನಡೆದಿದೆ. ರಸ್ತೆ ಹಂಪ್ ಗೊತ್ತಾಗದೇ ಸಾಗಿದ್ದರಿಂದ ಬೈಕ್ ಸ್ಕಿಡ್ ಆಗಿ ಅಪಘಾತ (Bike Accident) ಸಂಭವಿಸಿದೆ.

ಒಡಿಶಾ ಮೂಲದ ಕಾರ್ಮಿಕರಾದ ಫೋಕೀರ್ ಚರಣ್ ಪ್ರಧಾನ್ (29), ಬೀರ್ ಸಿಂಗ್ ನಾಯಕ್(24) ಮೃತರು. ಕೆಲಸ ಮುಗಿಸಿಕೊಂಡು ಜಿಗಣಿಯಿಂದ ಇಂಡ್ಲವಾಡಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾದಪಟ್ಟಣ ಬಳಿ ರಸ್ತೆ ಹಂಪ್ ಗೊತ್ತಾಗದೆ ಸವಾರ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಮುಂಭಾಗದಲ್ಲಿ ನಿಂತಿದ್ದ ಬಸ್‌ಗೆ ಬೈಕ್‌ ಡಿಕ್ಕಿಯಾಗಿದೆ. ಇದರಿಂದ ಸವಾರರು ಹಾರಿ ಬಿದ್ದಾಗ ಬಸ್‌ಗೆ ತಲೆ ತಗುಲಿ ಗಂಭೀರ ಗಾಯಗೊಂಡಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Someshwara Beach: ದ್ವಿತೀಯ ಪಿಯುಸಿ ಇಬ್ಬರು ವಿದ್ಯಾರ್ಥಿಗಳು ಸೋಮೇಶ್ವರದಲ್ಲಿ ಸಮುದ್ರಪಾಲು

L&t ಕಂಪನಿಯಲ್ಲಿ ಹೆಲ್ಪರ್‌ ಆಗಿ ಫೋಕೀರ್ ಚರಣ್ ಪ್ರಧಾನ್, ಶಕ್ತಿ ಪ್ರೊಸೆಸಿಂಗ್ ಕಂಪನಿಯಲ್ಲಿ ಸಹಾಯಕನಾಗಿ ಬೀರ್ ಸಿಂಗ್ ನಾಯಕ್ ಕೆಲಸಮಾಡುತ್ತಿದ್ದ. ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

PMAY Houses: ವಸತಿ ಮತ್ತು ನಗರ ವ್ಯವಹಾರಗಳ ಸ್ಥಾಯಿ ಸಮಿತಿಯು ಲೋಕಸಭೆಯಲ್ಲಿ ತನ್ನ ವರದಿಯನ್ನು ಮಂಡಿಸಿದ್ದು, ಹಲವು ಸುಧಾರಣೆಗಳಿಗೆ ಸೂಚಿಸಿದೆ.

VISTARANEWS.COM


on

Houses without infrastructure are not completed PMAY houses
Koo

ನವದೆಹಲಿ: ರಸ್ತೆಗಳು (Roads), ಒಳಚರಂಡಿ(sewerage), ನೀರು (Water) ಮತ್ತು ವಿದ್ಯುತ್ ಸಂಪರ್ಕಗಳಂಥ (electricity connections) ಮೂಲಭೂತ ಸೌಕರ್ಯಗಳನ್ನು (Basic Infrastructure) ಒದಗಿಸದೇ ಹೊರತು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ (PMAY Houses) ನಿರ್ಮಿಸಲಾದ ವಸತಿ ಮನೆಗಳನ್ನು ಪೂರ್ಣಗೊಂಡ ಮನೆಗಳೆಂದು ಕೇಂದ್ರ ಸರ್ಕಾರವು ಪರಿಗಣಿಸಬಾರದು ಎಂದು ವಸತಿ ಮತ್ತು ನಗರ ವ್ಯವಹಾರಗಳ ಸ್ಥಾಯಿ ಸಮಿತಿ ಹೇಳಿದೆ. ಈ ಸಮಿತಿಯು ಲೋಕಸಭೆಯಲ್ಲಿ ಮಂಡಿಸಿದ ವರದಿಯಲ್ಲಿ ಈ ಕುರಿತು ಸವಿಸ್ತಾರವಾಗಿ ತಿಳಿಸಲಾಗಿದೆ.

2015ರಲ್ಲಿ ಪ್ರಾರಂಭವಾದ ಪಿಎಂಎವೈ(ಯು) ಬಡತನವನ್ನು ನಿವಾರಿಸುವ ಗುರಿಯನ್ನು ಹೊಂದಿರುವ ಕೇಂದ್ರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ ಮತ್ತು 2022 ರ ವೇಳೆಗೆ ಎಲ್ಲರಿಗೂ ವಸತಿ ಒದಗಿಸುವ ಉದ್ದೇಶವನ್ನು ಹೊಂದಿತ್ತು. ಬಾಕಿ ಉಳಿದಿರುವ ಯೋಜನೆಗಳ ನಡುವೆ, ಯೋಜನೆಯ ಗಡುವನ್ನು ನಂತರ ಡಿಸೆಂಬರ್ 2024 ಕ್ಕೆ ವಿಸ್ತರಿಸಲಾಗಿದೆ.

ಮನೆಯ ಅಗತ್ಯವಿರುವ “ಯಾರೂ” ಅವಕಾಶವಂಚಿತರಾಗಬಾರದು ಎಂದು ಖಚಿತಪಡಿಸಿಕೊಳ್ಳಲು, ಮುಂಗೇರ್‌ನ ಜೆಡಿಯು ಸಂಸದ ರಾಜೀವ್ ರಂಜನ್ ಸಿಂಗ್ ನೇತೃತ್ವದ ಸದನ ಸಮಿತಿಯು ಪಿಎಂಎವೈ (ಯು)ದ ಸಾಮಾಜಿಕ ಪರಿಣಾಮದ ಕುರಿತು ಅಧ್ಯಯನ ನಡೆಸುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದೆ.

ಪಿಎಂಎವೈ ಮೂಲ ಉದ್ದೇಶವು ಎಲ್ಲರಿಗೂ ವಸತಿ ಒದಗಿಸುವುದು, ನಗರ ಪ್ರದೇಶಗಳಲ್ಲಿನ ವಸತಿ ಅಗತ್ಯಗಳಲ್ಲಿನ ಅಂತರವನ್ನು ಅಳೆಯಲು ಪ್ರಭಾವದ ಮೌಲ್ಯಮಾಪನ ಅಧ್ಯಯನವನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಅನುದಾನವನ್ನು ಗಣನೆಗೆ ತೆಗೆದುಕೊಂಡ ನಂತರವೂ ಫಲಾನುಭವಿಗಳು ಇನ್ನೂ ಒಟ್ಟು ವೆಚ್ಚದ ಸುಮಾರು 60% ಅನ್ನು ಪಾವತಿಸಬೇಕಾಗುತ್ತದೆ ಎಂದು ಸಮಿತಿ ಹೇಳಿದೆ. ಈ ಫಲಾನುಭವಿಗಳಲ್ಲಿ ಹೆಚ್ಚಿನವರು ಸ್ಥಿರ ಆದಾಯವನ್ನು ಹೊಂದಿಲ್ಲದ ಕಾರಣ, ಅವರು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆದರೆ, 2024ರ ಡಿಸೆಂಬರ್ ವರೆಗೆ ಇದಕ್ಕಾಗಿ 1.5 ಲಕ್ಷ ರೂ. ಮೀರಿ ನಿಧಿಯನ್ನು ಹೆಚ್ಚಿಸುವುದಿಲ್ಲ ಹೇಳಿದೆ. ಕೇಂದ್ರದ ನೆರವು ನಿರ್ಮಾಣದ ವೆಚ್ಚವನ್ನು ಅವಲಂಬಿಸಿ ಬದಲಾಗಬೇಕು, ಇದು ಸ್ಥಳಾಕೃತಿ ಮತ್ತು ಇತರ ಅಂಶಗಳನ್ನು ಅವಲಂಬಿಸಿರುತ್ತದೆ ಎಂದು ಸಮಿತಿ ಹೇಳಿದೆ.

ಈ ಸುದ್ದಿಯನ್ನೂ ಓದಿ: ಪ್ರಧಾನಮಂತ್ರಿ ಆವಾಸ್ ಯೋಜನೆ ಮನೆ ನಿರ್ಮಾಣದಲ್ಲಿ ಗೋಲ್ಮಾಲ್​; ಇಡಿ ಅಧಿಕಾರಿಗಳಿಂದ ದಾಳಿ, ತೀವ್ರ ಶೋಧ

Continue Reading

ದೇಶ

ಈರುಳ್ಳಿ ರಫ್ತು ನಿಷೇಧ! ಎಥೆನಾಲ್‌ ಉತ್ಪಾದನೆಗೆ ಕಬ್ಬು ಬಳಸುವಂತಿಲ್ಲ

bars onion export: ಬರದ ಕಾರಣದಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಕುಂಠಿತವಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆಯನ್ನು ತಡೆಯಲು ಸರ್ಕಾರ ಕ್ರಮ ಕೈಗೊಂಡಿದೆ.

VISTARANEWS.COM


on

Central government bars onion export to curb inflation
Koo

ನವದೆಹಲಿ: ಬೆಲೆ ಏರಿಕೆಯನ್ನು (Price Rise) ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು (Central Government) ಶುಕ್ರವಾರ ಹಲವು ಕ್ರಮಗಳನ್ನು ಘೋಷಣೆ ಮಾಡಿದ್ದು, ಈ ಪೈಕಿ ಈರುಳ್ಳಿ ರಫ್ತು ಮೇಲೆ ನಿಷೇಧ ಹೇರಿದೆ(bars onion export). ಜತೆಗೆ, ಎಥೆನಾಲ್‌ ತಯಾರಿಕೆಗಾಗಿ ಕಬ್ಬು ಬಳಕೆಯನ್ನು ತಡೆಯಲಾಗುತ್ತಿದೆ. ಅನಗತ್ಯವಾಗಿ ಗೋಧಿ ದಾಸ್ತಾನು ಮಾಡಿಕೊಳ್ಳುವ ವ್ಯಾಪಾರಿಗಳ ವಿರುದ್ಧ ಬಿಗಿಯಾದ ನಿಯಂತ್ರಣಗಳನ್ನು ವಿಧಿಸಲಾಗುತ್ತಿದೆ.

ಕೆಲವು ರಾಜ್ಯಗಳಲ್ಲಿ ಬರ ಹಾಗೂ ಬೇಸಿಗೆ ಮಳೆಯಿಂದಾಗಿ ಸಕ್ಕರೆ, ಬೇಳೆ ಕಾಳುಗಳು ಸೇರಿದಂತೆ ಹಲವು ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕಬ್ಬಿನ ಉತ್ಪಾದನೆಯಲ್ಲಿ ತೀವ್ರ ಕುಸಿತದ ನಿರೀಕ್ಷೆ ಇರುವುದರಿಂದ ಸರ್ಕಾರವು ಕಬ್ಬಿನ ರಸವನ್ನು ಪೆಟ್ರೋಲ್‌ನೊಂದಿಗೆ ಬೆರೆಸಿದ ಎಥೆನಾಲ್ ಉತ್ಪಾದನೆ ಮಾಡುವುದನ್ನು ನಿರ್ಬಂಧಿಸಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ.

ಎಥೆನಾಲ್ ತಯಾರಿಕೆಗಾಗಿ ಕಬ್ಬಿನ ರಸದ ಮಾರಾಟವನ್ನು ನಿಲ್ಲಿಸುವ ನಿರ್ಧಾರವು 2025-26ರ ವೇಳೆಗೆ ಪೆಟ್ರೋಲ್‌ನೊಂದಿಗೆ 20% ಎಥೆನಾಲ್ ಮಿಶ್ರಣವನ್ನು ಸಾಧಿಸುವ ಭಾರತದ ಮಹತ್ವಾಕಾಂಕ್ಷೆಯ ಒತ್ತಡದ ಮೇಲೆ ಪರಿಣಾಮ ಬೀರುವುದಿಲ್ಲ, ಇದನ್ನು ಇ20 ಎಂದು ಕರೆಯಲಾಗುತ್ತದೆ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಪಂಕಜ್ ಜೈನ್ ಹೇಳಿದ್ದಾರೆ.

ಈ ನಿಷೇಧವು ತಾತ್ಕಾಲಿಕವಾಗಿದೆ ಮತ್ತು ಪರಿಸ್ಥಿತಿಯು ಸುಧಾರಿಸಿದ ಬಳಿಕ ನೀತಿಯನ್ನು ಮರುಮಾಪನ ಮಾಡಲಾಗುವುದು. ಎಥೆನಾಲ್-ಬ್ಲೆಂಡಿಂಗ್ ಪ್ರೋಗ್ರಾಂ ಮತ್ತು ಗ್ಲೋಬಲ್ ಜೈವಿಕ ಇಂಧನ ಒಕ್ಕೂಟ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಬೇಡಿಕೆಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಂಪೂರ್ಣ ಯೋಜನೆಯನ್ನು ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ದೇಶದ ಸುಮಾರು 25% ಎಥೆನಾಲ್ ಅನ್ನು ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ, ಆದರೆ ಇನ್ನೊಂದು 50% ಮೊಲಾಸಸ್‌ನಿಂದ ಉತ್ಪಾದಿಸಲಾಗುತ್ತದೆ. ಆದರೆ ಉಳಿದವು ಅಕ್ಕಿ ಮತ್ತು ಜೋಳದಂತಹ ಧಾನ್ಯಗಳಿಂದ ತಯಾರಿಸಲಾಗುತ್ತದೆ.

ಚಿಲ್ಲರೆ ಹಣದುಬ್ಬರವು ಹೆಚ್ಚಾಗುವ ನಿರೀಕ್ಷೆಯಿದೆ, ಮೂರು ತಿಂಗಳ ಕಾಲ ಇಳಿಮುಖವಾದ ನಂತರ ಹೆಚ್ಚಿನ ಆಹಾರ ಬೆಲೆಗಳಿಂದ ಅದು ಮತ್ತೆ ಹೆಚ್ಚಾಗಬಹುದು. ಈರುಳ್ಳಿ, ಟೊಮ್ಯಾಟೊ ಮತ್ತು ಬೇಳೆಕಾಳುಗಳಂತಹ ತರಕಾರಿಗಳು ಬೆಲೆ ಏರಿಕೆಗೆ ಕಾರಣವಾಗಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ 4.87% ಆಗಿತ್ತು, ಇದು ನಾಲ್ಕು ತಿಂಗಳ ಕನಿಷ್ಠವಾಗಿದೆ.

ಈ ಸುದ್ದಿಯನ್ನೂ ಓದಿ: Retail Inflation: ಶೇ.4.87ಕ್ಕೆ ಇಳಿಕೆಯಾದ ಚಿಲ್ಲರೆ ಹಣದುಬ್ಬರ!

Continue Reading

ಕ್ರಿಕೆಟ್

INDW vs ENGW: ಹೀನಾಯವಾಗಿ ಸೋತು ಸರಣಿ ಕಳೆದುಕೊಂಡ ಭಾರತ ಮಹಿಳಾ ತಂಡ

ಇಂಗ್ಲೆಂಡ್(INDW vs ENGW)​ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 4 ವಿಕೆಟ್​ಗಳ ಅಂತರದಿಂದ ಸೋತು ಸರಣಿಯನ್ನು ಕಳೆದುಕೊಂಡಿದೆ.

VISTARANEWS.COM


on

Nat Sciver-Brunt celebrates dismissing Harmanpreet Kaur
Koo

ಮುಂಬಯಿ: ಪ್ರವಾಸಿ ಇಂಗ್ಲೆಂಡ್(INDW vs ENGW)​ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿಯೂ ಭಾರತ ಮಹಿಳಾ ತಂಡ ಮುಗ್ಗರಿಸಿದೆ. ಅತ್ಯಂತ ಕಳಪೆ ಬ್ಯಾಟಿಂಗ್​ ನಡೆಸಿದ ಭಾರತ 4 ವಿಕೆಟ್​ಗಳ ಅಂತರದಿಂದ ಸೋತು ಸರಣಿಯನ್ನು ಕಳೆದುಕೊಂಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡ ಇಂಗ್ಲೆಂಡ್​ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆಲುವು ದಾಖಲಿಸಿದೆ. ಅಂತಿಮ ಪಂದ್ಯ ನಾಳೆ(ಭಾನುವಾರ) ನಡೆಯಲಿದೆ.

ಮುಂಬೈಯ ವಾಂಖೆಡೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ ಬ್ಯಾಟಿಂಗ್​ ಮರೆತವರಂತೆ ಆಡಿ 16.2 ಓವರ್​ಗಳಲ್ಲಿ ಕೇವಲ 80 ರನ್​ಗೆ ಸರ್ವಪತನ ಕಂಡಿತು. ಜವಾಬಿತ್ತ ಇಂಗ್ಲೆಂಡ್​ ಕೂಡ 6 ವಿಕೆಟ್​ ಕಳೆದುಕೊಂಡು 11.2 ಓವರ್​ನಲ್ಲಿ 82 ರನ್​ ಬಾರಿಸಿ ಕಷ್ಟದ ಗೆಲುವು ಸಾಧಿಸಿತು. ಭಾರತ ಕನಿಷ್ಠ 120 ರನ್​ ಬಾರಿಸುತ್ತಿದ್ದರೆ ಗೆಲ್ಲುವ ಸಾಧ್ಯತೆ ಇತ್ತು.

ಮಾನ ಉಳಿಸಿದ ಜೆಮಿಮಾ

ಪಟಪಟನೆ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ಆಸರೆಯಾದದ್ದು ಜೆಮಿಮಾ ರೋಡ್ರಿಗಸ್.​ ಅವರು ಏಕಾಂಗಿಯಾಗಿ ಹೋರಟ ನಡೆಸಿದ ಪರಿಣಾಮ ಭಾರತ 50 ಗಡಿ ದಾಟಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮೊದಲ ಓವರ್​ನ 2ನೇ ಎಸೆತದಲ್ಲೇ ಎಲ್​ಬಿಡಬ್ಲ್ಯೂ ಆಗಿ ಶೂನ್ಯ ಸುತ್ತಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು.

ಅನುಭವಿ ಆಟಗಾರ್ತಿ ಎನಿಸಿಕೊಂಡ ಸ್ಮೃತಿ ಮಂಧಾನ ಅವರ ಕಳಪೆ ಬ್ಯಾಟಿಂಗ್​ ಪ್ರದರ್ಶನ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಕಳೆದೊಂದು ವರ್ಷದಿಂದ ಅವರು ತಂಡದಲ್ಲಿ ಕೇವಲ ಲೆಕ್ಕ ಭರ್ತಿಗೆ ಇದ್ದಂತೆ ತೋರುತ್ತಿದೆ. ಪತ್ರಿ ಪಂದ್ಯದಲ್ಲಿಯೂ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಈ ಪಂದ್ಯದಲ್ಲಿ ಅವರ ಗಳಿಕೆ 10 ರನ್​. ಇನ್ನು ನಾಯಕಿ ಹರ್ಮನ್​ಪ್ರೀತ್​ ಕೌರ್​ ಕಥೆಯೂ ಕೂಡ ಇದೇ ಆಗಿದೆ. ಅವರು ಕೂಡ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ.

ಈ ಪಂದ್ಯದಲ್ಲಿ ಕೌರ್ ಗಳಿಕೆ 9 ರನ್​. ಆ ಬಳಿಕ ಬಂದ ಆಲ್​ರೌಂಡರ್​ ದೀಪ್ತಿ ಶರ್ಮಾ ಕೂಡ ಖಾತೆ ತೆರೆಯುವಲ್ಲಿ ವಿಫಲರಾದರು. ರಿಚಾ ಘೋಷ್ (4) ಹಾಗೂ ಪೂಜಾ ವಸ್ತ್ರಾಕರ್ (6) ಒಂದಂಕಿಗೆ ಸೀಮಿತವಾಯಿತು. ಕರ್ನಾಟಕದ ಯುವ ಆಟಗಾರ್ತಿ ಶ್ರೇಯಾಂಕ ಪಾಟೀಲ್​ ಈ ಪಂದ್ಯದಲ್ಲಾದರೂ ಉತ್ತಮ ಪ್ರದರ್ಶನ ತೋರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಇದು ಹುಸಿಗೊಂಡಿತು. ಅವರು ಕೂಡ 4 ರನ್​ಗೆ ಸೀಮಿತರಾದರು.

ಇದನ್ನೂ ಓದಿ IND vs SA: ಬೌನ್ಸಿ ಪಿಚ್​ನಲ್ಲಿ ಹರಿಣಗಳ ಸವಾಲು ಮೆಟ್ಟಿ ನಿಂತಿತೇ ಯಂಗ್​ ಇಂಡಿಯಾ?

ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಟೊಂಕ ಕಟ್ಟಿ ನಿಂತ ಜೆಮಿಮಾ 33 ಎಸೆತಗಳಲ್ಲಿ 30 ರನ್ ಬಾರಿಸಿದರು. ಸಾರ ಗ್ಲೆನ್ ಓವರ್​ನಲ್ಲಿ ಸತತ 2 ಬೌಂಡರಿ ಬಾರಿಸಿದ ಮರು ಎಸೆತದಲ್ಲಿ ಸಿಂಗಲ್​ ತೆಗೆಯುವ ಪ್ರಯತ್ನದಲ್ಲಿ ನುಗ್ಗಿ ಬಂದ ಚೆಂಡು ಪ್ಯಾಡ್​ಗೆ ಬಡಿದು ಎಲ್​ಬಿಡಬ್ಲ್ಯು ಆದರು. ಅಂತಿಮವಾಗಿ ಸೈಕಾ ಇಶಾಖ್ 8 ರನ್​ಗಳಿಸಿ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಟೀಮ್ ಇಂಡಿಯಾದ ಬ್ಯಾಟಿಂಗ್​ ಇನಿಂಗ್ಸ್​ ಕೂಡ ಕೊನೆಗೊಂಡಿತು. ಭಾರತ ಪರ ಕೇವಲ 2 ಬ್ಯಾಟರ್​ ಮಾತ್ರ ಎರಡಂಕಿ ಮೊತ್ತ ಕಲೆಹಾಕಿದರು.

ಇಂಗ್ಲೆಂಡ್​ಗೂ ಆರಂಭಿಕ ಆಘಾತ

81 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಕೂಡ ಉತ್ತಮ ಆರಂಭಿಕ ಆಘಾತ ಎದುರಿಸಿತು. ಮೂರನೇ ಓವರ್​ನಲ್ಲಿ ಸೋಫಿಯಾ ಡಂಕ್ಲಿ (6) ಹಾಗೂ ಡೇನಿಯಲ್ ವ್ಯಾಟ್ (0) ಅವರನ್ನು ಬೌಲ್ಡ್ ಮಾಡುವ ಮೂಲಕ ರೇಣುಕಾ ಸಿಂಗ್ ಭಾರತಕ್ಕೆ ಆರಂಭಿಕ ಮುನ್ನಡೆ ತಂದು ಕೊಟ್ಟರು. ಆದರೆ ಮೂರನೇ ವಿಕೆಟ್​ಗೆ ಜತೆಯಾದ ಆಲಿಸ್ ಕ್ಯಾಪ್ಸಿ ಮತ್ತು ನ್ಯಾಟ್ ಸ್ಕಿವರ್​ ಬ್ರಂಟ್ ರಕ್ಷಣಾತ್ಮಕ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿ ಗೆಲುವಿನ ದಡ ಸೇರಿಸಿದರು. ಈ ಜೋಡಿ ಮೂರನೇ ವಿಕೆಟ್​ಗೆ 42 ರನ್​ಗಳಿಸಿತು. ಆಲಿಸ್ ಕ್ಯಾಪ್ಸಿ (25) ಮತ್ತು ಸ್ಕಿವರ್​ ಬ್ರಂಟ್(16) ರನ್​ ಬಾರಿಸಿದರು.

Continue Reading
Advertisement
HD Kumaraswamy
ಕರ್ನಾಟಕ5 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ6 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ6 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ6 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Central government bars onion export to curb inflation
ದೇಶ7 hours ago

ಈರುಳ್ಳಿ ರಫ್ತು ನಿಷೇಧ! ಎಥೆನಾಲ್‌ ಉತ್ಪಾದನೆಗೆ ಕಬ್ಬು ಬಳಸುವಂತಿಲ್ಲ

Nat Sciver-Brunt celebrates dismissing Harmanpreet Kaur
ಕ್ರಿಕೆಟ್7 hours ago

INDW vs ENGW: ಹೀನಾಯವಾಗಿ ಸೋತು ಸರಣಿ ಕಳೆದುಕೊಂಡ ಭಾರತ ಮಹಿಳಾ ತಂಡ

Farmers Protest
ಕರ್ನಾಟಕ7 hours ago

Farmers Protest: ಸ್ವಾಮೀಜಿಗಳ ಸಂಧಾನ ಯಶಸ್ವಿ; ಕಿತ್ತೂರಲ್ಲಿ ಪ್ರತಿಭಟನೆ ಹಿಂಪಡೆದ 9 ಹಳ್ಳಿ ರೈತರು

Muslim woman beaten up for voting bjp
ದೇಶ7 hours ago

ಬಿಜೆಪಿಗೆ ಮತ ಹಾಕಿದ್ದಕ್ಕೆ ಮುಸ್ಲಿಂ ಮಹಿಳೆಗೆ ಮನೆಯವರಿಂದಲೇ ಹಲ್ಲೆ!

bengaluru bulls vs haryana steelers
ಕ್ರೀಡೆ7 hours ago

Pro Kabaddi: ಸತತ 4ನೇ ಸೋಲು ಕಂಡ ಬೆಂಗಳೂರು ಬುಲ್ಸ್​

High Court
ಕರ್ನಾಟಕ8 hours ago

BBMP Works: ಬಿಬಿಎಂಪಿ ಕಾಮಗಾರಿಗಳ ಎಸ್ಐಟಿ ತನಿಖೆ; ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema1 day ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ2 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ2 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

ಟ್ರೆಂಡಿಂಗ್‌