ವಿಸ್ತಾರ Explainer: Adani Group: ಅದಾನಿ ಗ್ರೂಪ್‌ ಕಂಪನಿಗಳ ಭವಿಷ್ಯವೇನು? ಷೇರು ಮಾರುಕಟ್ಟೆ ಚೇತರಿಸುತ್ತಿದೆಯೇ? - Vistara News

EXPLAINER

ವಿಸ್ತಾರ Explainer: Adani Group: ಅದಾನಿ ಗ್ರೂಪ್‌ ಕಂಪನಿಗಳ ಭವಿಷ್ಯವೇನು? ಷೇರು ಮಾರುಕಟ್ಟೆ ಚೇತರಿಸುತ್ತಿದೆಯೇ?

ಅದಾನಿ ಗ್ರೂಪ್‌ ಷೇರುಗಳ ಭಾರಿ ಕುಸಿತದ ಬಳಿಕ ಪ್ರತಿ ದಿನ ಹೊಸ ತಿರುವುಗಳನ್ನು ಪಡೆಯುತ್ತಿದೆ. ಹೂಡಿಕೆದಾರರ ವಿಶ್ವಾಸ ಗಳಿಸಲು ಕಂಪನಿ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. (Adani Group) ಅದಾನಿ ಬಿಕ್ಕಟ್ಟಿನ ಹೊರತಾಗಿಯೂ ಭಾರತೀಯ ಷೇರು ಪೇಟೆ ಗಣನೀಯ ಚೇತರಿಕೆಯ ವಿಶ್ವಾಸದಲ್ಲಿದೆ. ಇಲ್ಲಿದೆ ವಿವರ.

VISTARANEWS.COM


on

Adani Stocks surge Adani Group shares surge market value rises to Rs 10 lakh crore
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅದಾನಿ ಸಮೂಹದ ಷೇರುಗಳ ಪತನ ಭಾರತೀಯ ಕಂಪನಿಗಳ ಮೇಲಿನ ದಾಳಿಯೇ? ಇದರಿಂದ ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಗೆ ಹೊಡೆತ ಉಂಟಾಗಲಿದೆಯಾ?

ಅದಾನಿ ಗ್ರೂಪ್‌ ಕಂಪನಿಗಳ ಷೇರುಗಳ ಬಿಕ್ಕಟ್ಟು ಅಥವಾ ಎಫ್‌ಪಿಒ ಹಿಂತೆಗೆತದ ಪರಿಣಾಮ ಭಾರತದ ಆರ್ಥಿಕತೆಯ ಮೇಲೆ ಯಾವುದೇ ನಕಾರಾತ್ಮಕ ಪ್ರಭಾವ ಆಗದು ಎಂದು ಸ್ವತಃ ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದಾರೆ. ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ೫,೦೦೦ಕ್ಕೂ ಹೆಚ್ಚು ಷೇರುಗಳು ನೊಂದಣಿಯಾಗಿವೆ. ಅವುಗಳಲ್ಲಿ 3 ಸಾವಿರಕ್ಕೂ ಹೆಚ್ಚು ಷೇರುಗಳು ನಿತ್ಯ ಸಕ್ರಿಯವಾಗಿ ವಹಿವಾಟು ನಡೆಸುತ್ತಿವೆ. ಅದಾನಿ ಷೇರುಗಳ ಬಿಕ್ಕಟ್ಟಿನ ಹೊರತಾಗಿಯೂ ಭಾರತೀಯ ಷೇರು ಮಾರುಕಟ್ಟೆ ಗಣನೀಯವಾಗಿ ಚೇತರಿಸುವ ವಿಶ್ವಾಸದಲ್ಲಿದೆ ಎನ್ನುತ್ತಾರೆ ವಿಶ್ಲೇಷಕರು.

ಅದಾನಿ ಗ್ರೂಪ್‌ ವಿರುದ್ಧ ಹಿಂಡೆನ್‌ ಬರ್ಗ್‌ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಸೆಬಿ, ಸುಪ್ರೀಂಕೋರ್ಟ್‌ ಮತ್ತು ಸರ್ಕಾರದ ಮಟ್ಟದಲ್ಲಿ ಇತ್ತೀಚಿನ ಬೆಳವಣಿಗೆಗಳೇನು? ಏನಾಗಬಹುದು?

ಸೆಬಿ ಸುಪ್ರೀಂಕೋರ್ಟ್‌ಗೆ ತಿಳಿಸಿರುವ ಮಾಹಿತಿಯ ಪ್ರಕಾರ ಹಿಂಡೆನ್‌ ಬರ್ಗ್‌ ವಿರುದ್ಧದ ಆರೋಪಗಳು ಹಾಗೂ ಅದಾನಿ ಕಂಪನಿಗಳ ಷೇರುಗಳ ದಿಢೀರ್‌ ಕುಸಿತದ ಬಗ್ಗೆ ತನಿಖೆ ಆರಂಭಿಸಿದೆ. ಆದರೆ ತನಿಖೆ ಪ್ರಾಥಮಿಕ ಹಂತದಲ್ಲಿ ಇರುವುದರಿಂದ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ತಿಳಿಸಿದೆ.

ಹಿಂಡೆನ್‌ ಬರ್ಗ್‌ ಉದ್ದೇಶವೇನು? ಅದಾನಿ ಗ್ರೂಪ್‌ ವಿರುದ್ಧ ಹಿಂಡೆನ್‌ ಬರ್ಗ್‌ ಮಾಡಿರುವ ಪ್ರಮುಖ ಆರೋಪವೇನು? ಭಾರತದ ಹಿತಾಸಕ್ತಿಯೇ ಅಥವಾ ಬೇರೆ ಏನಾದರೂ ವ್ಯವಹಾರದ ಉದ್ದೇಶ ಇತ್ತೇ?

ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಜನವರಿ 24ರಂದು ಅದಾನಿ ಗ್ರೂಪ್‌ ವಿರುದ್ಧ ಒಟ್ಟು 88 ಪ್ರಶ್ನೆಗಳನ್ನು ಮಾಡಿತ್ತು. ಇದಕ್ಕೆ ಅದಾನಿ ಗ್ರೂಪ್‌ ಕೆಲ ದಿನಗಳ ಬಳಿಕ 413 ಪುಟಗಳ ಉತ್ತರವನ್ನು ಕೊಟ್ಟಿತ್ತು. ಆದರೆ ಅದಾನಿ ಗ್ರೂಪ್‌ ತನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿಲ್ಲ ಎಂದು ಹಿಂಡೆನ್‌ ಬರ್ಗ್‌ ಆರೋಪಿಸಿತ್ತು. ಆದರೆ ಅದಾನಿ ಕಂಪನಿಗಳ ವಿರುದ್ಧ ಶಾರ್ಟ್‌ ಸೆಲ್ಲರ್‌ ಮಾಡುತ್ತಿರುವುದಾಗಿ ತಿಳಿಸಿದೆ.

    ಅದಾನಿ ಕಂಪನಿಗಳ ಷೇರು ದರಗಳು ಈಗಲೂ ಸರಾಸರಿ 40% ಕುಸಿತದ ದರದಲ್ಲಿಯೇ ಮುಂದುವರಿದಿದೆ. ಇದರ ಚೇತರಿಗೆ ಇನ್ನೂ ಸಾಕಷ್ಟು ಕಾಲಾವಕಾಶ ಬೇಕಾಗಬಹುದು. ಹೂಡಿಕೆದಾರರಲ್ಲಿ ಆತ್ಮ ವಿಶ್ವಾಸ ಬರಬೇಕು. ಹಿಂಡೆನ್‌ ಬರ್ಗ್‌ ವರದಿಯ ಬಳಿಕ ಹೂಡಿಕೆದಾರರಲ್ಲಿ ಆತ್ಮ ವಿಶ್ವಾಸ ಮೂಡಿಸುವುದು ಹೇಗೆ ಎಂಬುದು ಅತಿ ದೊಡ್ಡ ಸವಾಲು. ಎರಡನೆಯದಾಗಿ ಎಫ್‌ಪಿಒ ಹಿಂತೆಗೆತದ ಬಳಿಕ ಕ್ಯೂ ಐಪಿ, ಪ್ರಿಫರೆನ್ಷಿಯಲ್‌ ಷೇರುಗಳ ಬಿಡುಗಡೆಯ ವಿಧಾನವನ್ನು ಅನುಸರಿಸಬೇಕಾಗಿದೆ. ಕ್ಯೂ ಐಪಿಯಲ್ಲಿ ಮಾರುಕಟ್ಟೆ ನಿಯಂತ್ರಕದ ಅನುಮತಿ ಇಲ್ಲದೆಯೂ ಷೇರುಗಳನ್ನು ಬಿಡುಗಡೆಗೊಳಿಸಿ ಹಣ ಸಂಗ್ರಹಿಸಬಹುದು.

    5. ಅದಾನಿ ಸಾಲ ಮರುಪಾವತಿಸುತ್ತಿದೆಯೇ? ಎಷ್ಟು ಸಾಲ ಇದೆ?

      ಅದಾನಿ ಗ್ರೂಪ್‌ ಇದುವರೆಗೆ ಸಾಲವನ್ನು ಸರಿಯಾಗಿ ಮರು ಪಾವತಿಸುತ್ತಲೇ ಬಂದಿದೆ. ಒಟ್ಟಾರೆಯಾಗಿ 2.26 ಲಕ್ಷ ಕೋಟಿ ರೂ. ಸಾಲವನ್ನು ಅದು ಹೊಂದಿದೆ. 29,754 ಕೋಟಿ ರೂ. ನಗದನ್ನು ಹೊಂದಿದೆ. ಹೀಗಾಗಿ 1.96 ಲಕ್ಷ ಕೋಟಿ ನಿವ್ವಳ ಸಾಲವನ್ನು ಹೊಂದಿದೆ. ಹೀಗಿದ್ದರೂ, ಹಿಂಡೆನ್‌ ಬರ್ಗ್‌ ವರದಿಯಿಂದ ಭವಿಷ್ಯದಲ್ಲಿ ಅದಾನಿ ಗ್ರೂಪ್‌ಗೆ ಹೊಸತಾಗಿ ಸಾಲ ಪಡೆಯಲು ಕಷ್ಟವಾಗಬಹುದು ಎಂದು ಮೂಡೀಸ್‌ ರೇಟಿಂಗ್‌ ಏಜೆನ್ಸಿ ಎಚ್ಚರಿಸಿದೆ. ಮತ್ತೊಂದು ಕಡೆ ಫಿಚ್‌ ರೇಟಿಂಗ್‌ ಸದ್ಯಕ್ಕೆ ಅದಾನಿ ಗ್ರೂಪ್‌ನ ರೇಟಿಂಗ್‌ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಇಲ್ಲ ಎಂದಿದೆ.

      ಎಲ್‌ಐಸಿ ಮತ್ತು ಎಸ್‌ಬಿಐ ಹಾಗೂ ಅದಾನಿ ಸಮೂಹದ ನಡುವಣ ವ್ಯವಹಾರಗಳೇನು? ಅದಾನಿ ಗ್ರೂಪ್‌ ಕಂಪನಿಗಳು ಒಂದು ವೇಳೆ ಸಾಲ ಮರು ಪಾವತಿಸದಿದ್ದರೆ, ಷೇರುಗಳ ದರ ಚೇತರಿಸದಿದ್ದರೆ ಇವುಗಳಿಗೆ ಭವಿಷ್ಯದಲ್ಲಿ ತೊಂದರೆ ಆಗಲಿದೆಯೇ?

      ಎಲ್‌ಐಸಿ ಬಿಡುಗಡೆಗೊಳಿಸಿರುವ ಹೇಳಿಕೆ ಪ್ರಕಾರ 35,917 ಕೋಟಿ ರೂ. ಮೌಲ್ಯದ ಷೇರುಗಳನ್ನು ಅದಾನಿ ಕಂಪನಿಗಳಲ್ಲಿ ಹಲವು ವರ್ಷಗಳಿಂದ ಖರೀದಿಸಿದೆ. ಅವುಗಳ ಮಾರುಕಟ್ಟೆ ಮೌಲ್ಯ 56,142 ಕೋಟಿ ರೂ. ಎಸ್‌ಬಿಐ 27,000 ಕೋಟಿ ರೂ. ಸಾಲವನ್ನು ಅದಾನಿ ಕಂಪನಿಗೆ ನೀಡಿದೆ.

      ಅದಾನಿ ಗ್ರೂಪ್‌ ಬಿಕ್ಕಟ್ಟಿನ ರಾಜಕೀಯ ಆಯಾಮಗಳೇನು? ಇದರಿಂದ ಮೋದಿ ಸರ್ಕಾರಕ್ಕೆ ಹಿನ್ನಡೆ ಹಾಗೂ ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಗಲಿದೆಯೇ?

      ಅದಾನಿ ಗ್ರೂಪ್‌ ವಿರುದ್ಧ ಜಂಟಿ ಸಂಸದೀಯ ತನಿಖೆ ನಡೆಸಬೇಕು ಹಾಗೂ ಸಂಸತ್ತಿನಲ್ಲಿ ಅದರ ಬಗ್ಗೆ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಆದರೆ ಅದಾನಿ ಬಿಕ್ಕಟ್ಟಿನಿಂದ ಮೋದಿಯವರ ವರ್ಚಸ್ಸಿಗೆ ಧಕ್ಕೆ ಆಗಿಲ್ಲ ಎಂದು ಇತ್ತೀಚಿನ ಸಮೀಕ್ಷೆಗಳು ತಿಳಿಸಿವೆ.

      ಷೇರು ಹೂಡಿಕೆದಾರರು ಅದಾನಿ ಸಮೂಹದ ಷೇರುಗಳ ದಿಢೀರ್‌ ಕುಸಿತದಿಂದ ಕಲಿಯಬೇಕಾದ ಪಾಠವೇನು?

      ಯಾವುದೇ ಕಂಪನಿಯ ಷೇರು ದರ ತೀವ್ರಗತಿಯಲ್ಲಿ ಏರುತ್ತಿದ್ದರೆ, ಅದರಲ್ಲಿ ಹೂಡಿಕೆಗೆ ಮುನ್ನ ಸಾಕಷ್ಟು ಅಧ್ಯಯನ ನಡೆಸಬೇಕು. ಕಂಪನಿಯ ಫಂಡಮೆಂಟಲ್‌ ಬಗ್ಗೆ ತಿಳಿದುಕೊಳ್ಳಬೇಕು. ಎರಡನೆಯದಾಗಿ ಅದಾನಿ ಸಮೂಹದ ಕಂಪನಿಗಳಲ್ಲಿ ರಿಸ್ಕ್‌ ತೆಗೆದುಕೊಂಡು ಹೂಡಿಕೆ ಮಾಡುವವರಿಗೆ ಖರೀದಿಯ ಅವಕಾಶವೂ ಸಿಕ್ಕಿದೆ.

      ಅದಾನಿ ಎಂಟರ್‌ಪ್ರೈಸಸ್‌ ಮತ್ತು ಅದಾನಿ ಪೋರ್ಟ್ಸ ಷೇರು ದರಗಳು ಏರಿಕೆ ದಾಖಲಿಸಿವೆ. ಮ್ಯೂಚುವಲ್‌ ಫಂಡ್‌ ಕಂಪನಿಗಳು ಈ ಎರಡು ಕಂಪನಿಗಳ ಷೇರುಗಳನ್ನು ಖರೀದಿಸುತ್ತಿವೆ. ಹಿಂಡೆನ್‌ ಬರ್ಗ್‌ ವರದಿಯ ಬಳಿಕ ಅದಾನಿ ಸಮೂಹದ 10 ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ 75% ಏರಿಕೆಯಾಗಿದೆ. ಅದಾನಿ ಪೋರ್ಟ್‌, ಅದಾನಿ ಎಂಟರ್‌ಪ್ರೈಸಸ್‌ ಷೇರು ಏರಿದ್ದರೂ, ಇತರ ಕಂಪನಿಗಳ ಷೇರು ದರಗಳು ಇಳಿದಿವೆ.

      ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
      ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
      Continue Reading
      Click to comment

      Leave a Reply

      ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

      ವಿದೇಶ

      Monkey Pox: ಏನಿದು ಡೇಂಜರಸ್ ಮಂಕಿ ಪಾಕ್ಸ್? ಇದು ಹೇಗೆ ಹರಡುತ್ತದೆ? ಪಾರಾಗೋದು ಹೇಗೆ?

      ಮಂಕಿ ಪಾಕ್ಸ್ (Monkey Pox) ವೈರಸ್ ಸೋಂಕಿತರಲ್ಲಿ ಸುಮಾರು ನಾಲ್ಕು ವಾರಗಳವರೆಗೆ ವಿವಿಧ ರೀತಿಯ ರೋಗ ಲಕ್ಷಣಗಳನ್ನು ಉಂಟು ಮಾಡುತ್ತದೆ. ಸೋಂಕಿತರ ಮಧ್ಯೆಯೇ ಇದ್ದರೂ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಹಲವು ದಾರಿಗಳಿವೆ. ಇದಕ್ಕಾಗಿ ಮಂಕಿ ಪಾಕ್ಸ್ ಎಂದರೇನು, ಇದು ಹೇಗೆ ಬರುತ್ತದೆ, ಇದರ ಲಕ್ಷಣಗಳು ಏನು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

      VISTARANEWS.COM


      on

      By

      Monkey Pox
      Koo

      ಮಧ್ಯ ಆಫ್ರಿಕಾದ (Central Africa) ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ( Democratic Republic of the Congo) ಮತ್ತು ನೆರೆಹೊರೆಯ ದೇಶಗಳಲ್ಲಿ ಮಂಕಿ ಪಾಕ್ಸ್ (Monkey Pox) ವೈರಸ್‌ನ ಹೊಸ ರೂಪಾಂತರ ಆತಂಕ ಮೂಡಿಸಿದೆ. ಸುಮಾರು ನಾಲ್ಕು ವಾರಗಳವರೆಗೆ ಕಾಡುವ ಈ ಸೋಂಕು ಕೀವು ತುಂಬಿದ ಚರ್ಮದ ದದ್ದುಗಳಿಗೆ ಕಾರಣವಾಗುತ್ತದೆ, ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಸೋಂಕಿತರ ಮಧ್ಯೆಯೇ ಇದ್ದರೂ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಹಲವು ದಾರಿಗಳಿವೆ. ಇದಕ್ಕಾಗಿ ಮಂಕಿ ಪಾಕ್ಸ್ ಎಂದರೇನು, ಇದು ಹೇಗೆ ಬರುತ್ತದೆ, ಇದರ ಲಕ್ಷಣಗಳು ಏನು ಎನ್ನುವ ಕುರಿತು ತಿಳಿದುಕೊಳ್ಳಬೇಕು.

      ಮಂಕಿ ಪಾಕ್ಸ್ ಎಂದರೇನು?

      ಮಂಕಿ ಪಾಕ್ಸ್ ಎಂಬುದು ವೈರಸ್‌ನಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಮೊದಲ ಬಾರಿಗೆ 1958ರಲ್ಲಿ ಡೆನ್ಮಾರ್ಕ್‌ನಲ್ಲಿ ಪತ್ತೆಯಾಯಿತು. ಇದು ಸಿಡುಬು ರೋಗವನ್ನು ಹೋಲುತ್ತದೆ.

      “ಮಂಕಿಪಾಕ್ಸ್ ವೈರಸ್” ಎಂದು ಕರೆಯಲಾಗಿದ್ದರೂ ಈ ವೈರಸ್‌ನ ಮೂಲವು ಇನ್ನೂ ತಿಳಿದಿಲ್ಲ. ಅಳಿಲು, ಸಸ್ತನಿಗಳಲ್ಲಿ ಈ ವೈರಸ್ ಕಂಡು ಬರುತ್ತದೆ ಎನ್ನುತ್ತಾರೆ ಸಂಶೋಧಕರು.

      ಈ ವೈರಸ್ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಎರಡು ಬಾರಿ ಮಂಕಿ ಪಾಕ್ಸ್ ಹರಡುವಿಕೆಯ ಬಗ್ಗೆ ಎಚ್ಚರಿಕೆಯನ್ನು ನೀಡಿತ್ತು. 2022ರಲ್ಲಿ 70 ಕ್ಕೂ ಹೆಚ್ಚು ದೇಶಗಳಿಗೆ ಮಂಕಿ ಪಾಕ್ಸ್ ಹರಡಿತ್ತು. ಈ ವರ್ಷದ ಮಂಕಿ ಪಾಕ್ಸ್ ನ ಹೊಸ ರೂಪಾಂತರವು ಕಾಂಗೋ ಮತ್ತು ನೆರೆಯ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸಾವಿನ ಉಲ್ಬಣಕ್ಕೆ ಕಾರಣವಾಗಿದೆ.

      Monkey Pox
      Monkey Pox


      ಎಂಪಾಕ್ಸ್‌‌ಗೆ ಚಿಕಿತ್ಸೆ

      ಇದಕ್ಕೆ ನಿರ್ದಿಷ್ಟವಾಗಿ ಯಾವುದೇ ಚಿಕಿತ್ಸೆಗಳಿಲ್ಲ. ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದರೆ ಮತ್ತು ಚರ್ಮ ರೋಗವನ್ನು ಹೊಂದಿಲ್ಲದಿದ್ದರೆ ನೋವು ನಿವಾರಣೆ ಸೇರಿದಂತೆ ಸೂಕ್ತವಾದ ವೃತ್ತಿಪರ ಆರೈಕೆಯಿಂದ ಚೇತರಿಸಿಕೊಳ್ಳಬಹುದು. 2022ರಲ್ಲಿ ಎಂಪಾಕ್ಸ್ ಚಿಕಿತ್ಸೆಗಾಗಿ tecovirimat ಎಂದು ಕರೆಯಲ್ಪಡುವ ಒಂದು ಆಂಟಿವೈರಲ್ ಔಷಧವನ್ನು ಅನುಮತಿಸಲಾಗಿದೆ.

      ಪಾಕ್ಸ್ ಹೇಗೆ ಹರಡುತ್ತದೆ?

      ಕಣ್ಣು, ಬಾಯಿ, ಚರ್ಮ, ಮೂಗಿನಿಂದ ಸ್ರವಿಸುವ ದ್ರವ ಮತ್ತು ಉಸಿರಾಟದ ಮೂಲಕ ಈ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಎಂಪಾಕ್ಸ್ ಇರುವ ಜನರ ನಿಕಟ ಸಂಪರ್ಕಕ್ಕೆ ಬಂದಾಗ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೋಗಲಕ್ಷಣಗಳನ್ನು ತೋರಿಸುವ ಮೊದಲೇ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.

      ಎಂಪಾಕ್ಸ್ ನ ಲಕ್ಷಣಗಳು ಯಾವುವು?

      ಸಾಮಾನ್ಯವಾಗಿ ಈ ವೈರಲ್ ಸೋಂಕು ಗುದದ್ವಾರ, ಜನನಾಂಗ, ಎದೆ, ಮುಖ ಅಥವಾ ಬಾಯಿಯ ಮೇಲೆ ದದ್ದುಗಳಿಂದ ಪ್ರಾರಂಭವಾಗುತ್ತದೆ. ಅನಂತರ ದೇಹದ ಇತರ ಭಾಗಗಳಿಗೆ ವಿಸ್ತರಿಸಬಹುದು. ದದ್ದುಗಳು ನೋವಿನಿಂದ ಕೂಡಿರುತ್ತವೆ. ತುರಿಕೆಯು ಹೆಚ್ಚಾಗಿರುತ್ತದೆ. ಈ ದದ್ದುಗಳು ಮೊಡವೆ ಅಥವಾ ಗುಳ್ಳೆಗಳನ್ನು ಹೋಲುತ್ತವೆ. ಜ್ವರ, ತಲೆನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಸ್ನಾಯು ನೋವು ಅಥವಾ ಶೀತ ಇತರ ರೋಗಲಕ್ಷಣಗಳಾಗಿವೆ.

      ವೈರಸ್‌ಗೆ ಒಡ್ಡಿಕೊಂಡ 21 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಪ್ರಾರಂಭವಾಗುತ್ತವೆ. ಗಾಯಗಳು ಸೋಂಕಿಗೆ ಒಳಗಾದಾಗ ಅಪಾಯಕಾರಿಯಾಗಬಹುದು. ಅತಿಸಾರ, ವಾಂತಿ, ನ್ಯುಮೋನಿಯಾ, ಮೆದುಳಿನ ಉರಿಯೂತ, ನಿರ್ಜಲೀಕರಣ, ಉಸಿರಾಟದ ತೊಂದರೆಗಳೂ ಕೆಲವರಲ್ಲಿ ಕಾಣಿಸಿಕೊಳ್ಳಬಹುದು.


      ಯಾರಿಗೆ ಹೆಚ್ಚು ಅಪಾಯ?

      ರೋಗನಿರೋಧಕ ಶಕ್ತಿ ಹೊಂದಿಲ್ಲದವರು ಈ ಸೋಂಕಿನಿಂದ ಹೆಚ್ಚು ಅಪಾಯವನ್ನು ಎದುರಿಸಬೇಕಾಗುತ್ತದೆ. ಲೈಂಗಿಕ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ. ಗರ್ಭಿಣಿಯರು, ವರ್ಷದೊಳಗಿನ ಮಕ್ಕಳು, ಎಸ್ಜಿಮಾದಂತಹ ಕಾಯಿಲೆ ಹೊಂದಿರುವವರಿಗೆ ಇದರ ಅಪಾಯ ಅಧಿಕವಾಗಿರುತ್ತದೆ.

      ಇದನ್ನೂ ಓದಿ: MonkeyPox: ತೀವ್ರಗೊಳ್ಳುತ್ತಿದೆ ಮಂಕಿ ಪಾಕ್ಸ್; ಮತ್ತೊಮ್ಮೆ ಲಾಕ್‌ಡೌನ್ ಘೋಷಣೆ?

      ಮಂಕಿ ಪಾಕ್ಸ್ ಬರುವುದನ್ನು ತಡೆಯುವುದು ಹೇಗೆ?

      ಸೋಂಕಿತರು ಎರಡರಿಂದ ನಾಲ್ಕು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಸೋಂಕಿತರಿಂದ ದೂರವಿರುವುದು, ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿ ಅವರ ಕಾಳಜಿ ಮಾಡುವುದರಿಂದ ಸೋಂಕು ಹರಡುವ ಅಪಾಯವನ್ನು ಕಡಿಮೆ ಮಾಡಬಹುದು. ಸೋಂಕಿತರು ಮನೆಯಲ್ಲಿ ಇದ್ದರೆ ಆದಷ್ಟು ಸ್ವಚ್ಛತೆ ಪಾಲಿಸಿ.

      ಸೋಂಕು ಹರಡುವುದನ್ನು ತಡೆಯಲು ಲಸಿಕೆಯನ್ನು ಸಹ ಪಡೆಯಬಹುದು. ಅಮೆರಿಕದಲ್ಲಿ ಸೋಂಕು ಅಥವಾ ತೊಡಕುಗಳ ಹೆಚ್ಚಿನ ಅಪಾಯವನ್ನು ತಡೆಗಟ್ಟಲು ಸಿಡುಬಿನ ಲಸಿಕೆಯನ್ನು ನೀಡಲಾಗಿತ್ತು.

      Continue Reading

      ದೇಶ

      What is Lateral Entry?: ಏನಿದು ಲ್ಯಾಟರಲ್ ಎಂಟ್ರಿ ವಿವಾದ? ಕಾಂಗ್ರೆಸ್‌ ಆರೋಪವೇನು? ಬಿಜೆಪಿಯ ವಾದವೇನು?

      ಲ್ಯಾಟರಲ್ ಎಂಟ್ರಿ (What is Lateral Entry?) ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಆಗಿದ್ದರೂ ಇದೀಗ ವಿಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. ಲ್ಯಾಟರಲ್ ಎಂಟ್ರಿ ಎಂದರೇನು, ವಿಪಕ್ಷಗಳ ವಿರೋಧ ಯಾಕೆ, ಇದಕ್ಕೆ ಕೇಂದ್ರ ಆಡಳಿತ ಸರ್ಕಾರದ ಸ್ಪಷ್ಟನೆ ಏನು ಎಂಬ ಕುರಿತು ಇಲ್ಲಿದೆ ಮಾಹಿತಿ.

      VISTARANEWS.COM


      on

      By

      What is Lateral Entry?
      Koo

      ಜಂಟಿ ಕಾರ್ಯದರ್ಶಿ, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ (What is Lateral Entry?) ವಿಧಾನದ ಮೂಲಕ ನೇಮಕಾತಿ ನಡೆಸುವುದಾಗಿ ಭಾರತದ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (Union Public Service Commission) ಇತ್ತೀಚೆಗೆ ಪ್ರಕಟಿಸಿದ್ದು, ಇದು ಭಾರೀ ಟೀಕೆಗೆ ಗುರಿಯಾಗಿದೆ. ಇದರಿಂದ ಮೀಸಲಾತಿ ಹಕ್ಕು (reservation rights) ದುರ್ಬಲವಾಗುತ್ತದೆ ಎಂಬುದು ವಿರೋಧ ಪಕ್ಷಗಳ ವಾದವಾಗಿದೆ. ಇದೀಗ ಈ ಕುರಿತ ಜಾಹೀರಾತನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿದೆ.

      ಯಾವಾಗ ಮೊದಲ ಪ್ರಸ್ತಾಪ?

      1966ರಲ್ಲಿ ಸ್ಥಾಪನೆಯಾದ ಮೊದಲ ಆಡಳಿತ ಸುಧಾರಣಾ ಆಯೋಗವು ಆರಂಭದಲ್ಲಿ ಮೊರಾರ್ಜಿ ದೇಸಾಯಿ ಮತ್ತು ಅನಂತರ ಕೆ. ಹನುಮಂತಯ್ಯ ಅವರ ಅಧ್ಯಕ್ಷತೆಯಲ್ಲಿ ನಾಗರಿಕ ಸೇವೆಗಳಲ್ಲಿ ವಿಶೇಷ ಕೌಶಲಗಳ ಅಗತ್ಯತೆಯ ಚರ್ಚೆಗಳಿಗೆ ಅಡಿಪಾಯ ಹಾಕಿತು. ಇದು ನೇಮಕಾತಿ ಬಗ್ಗೆ ನಿರ್ದಿಷ್ಟವಾಗಿ ಪ್ರತಿಪಾದಿಸದಿದ್ದರೂ ಬದಲಾಗುತ್ತಿರುವ ರಾಷ್ಟ್ರದ ಬೇಡಿಕೆಗಳನ್ನು ಪೂರೈಸಲು ವೃತ್ತಿಪರತೆ, ತರಬೇತಿ ಮತ್ತು ಸುಧಾರಣೆಗಳ ಪ್ರಾಮುಖ್ಯತೆಯನ್ನು ತಿಳಿಸಿತ್ತು.

      ಲ್ಯಾಟರಲ್ ಎಂಟ್ರಿ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಆಗಿದೆ. ವೀರಪ್ಪ ಮೊಯ್ಲಿ ಅವರ ಅಧ್ಯಕ್ಷತೆಯಲ್ಲಿ 2005ರಲ್ಲಿ ಸ್ಥಾಪಿಸಲಾದ ಎರಡನೇ ಆಡಳಿತ ಸುಧಾರಣಾ ಆಯೋಗದಿಂದ (ARC) ಇದು ಬೆಂಬಲವನ್ನೂ ಪಡೆದಿತ್ತು.

      ಲ್ಯಾಟರಲ್ ಎಂಟ್ರಿ ಬಗ್ಗೆ ಎಆರ್‌ಸಿ ಹೇಳಿದ್ದೇನು?


      ವೀರಪ್ಪ ಮೊಯ್ಲಿ ಪ್ರಸ್ತಾಪಿಸಿರುವ ಲ್ಯಾಟರಲ್ ಎಂಟ್ರಿ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಸಂಗತಿಗಳಿವೆ.
      ನಾಗರಿಕ ಸೇವೆಗಳಲ್ಲಿ ಲಭ್ಯವಿಲ್ಲದ ಕೆಲವು ಸರ್ಕಾರಿ ಹುದ್ದೆಗಳಿಗೆ ವಿಶೇಷ ಜ್ಞಾನದ ಅಗತ್ಯವಿದೆ. ಇದನ್ನು ಪರಿಹರಿಸಲು ಖಾಸಗಿ ಉದ್ಯಮ, ಶೈಕ್ಷಣಿಕ ಮತ್ತು ಸಾರ್ವಜನಿಕ ಉದ್ಯಮಗಳ ವಲಯಗಳಿಂದ ವೃತ್ತಿಪರರನ್ನು ನೇಮಿಸಿಕೊಳ್ಳಲು ಎಆರ್‌ಸಿ ಶಿಫಾರಸು ಮಾಡಿದೆ.

      ಸರ್ಕಾರದ ಸಾಮರ್ಥ್ಯಗಳನ್ನು ಹೆಚ್ಚಿಸಲು ಅಲ್ಪಾವಧಿ ಅಥವಾ ಒಪ್ಪಂದದ ಆಧಾರದ ಮೇಲೆ ಸರ್ಕಾರಿ ಹುದ್ದೆಗಳನ್ನು ತುಂಬಲು ತಜ್ಞರ ಪ್ರತಿಭಾ ಸಮುದಾಯ ಸ್ಥಾಪಿಸಲು ಎಆರ್‌ಸಿ ಪ್ರಸ್ತಾಪಿಸಿದೆ. ಇದು ಅರ್ಥಶಾಸ್ತ್ರ, ಹಣಕಾಸು, ತಂತ್ರಜ್ಞಾನ ಮತ್ತು ಸಾರ್ವಜನಿಕ ನೀತಿಯಂತಹ ಕ್ಷೇತ್ರಗಳಲ್ಲಿ ಹೊಸ ದೃಷ್ಟಿಕೋನಗಳು ಮತ್ತು ಪರಿಣತಿಯನ್ನು ತುಂಬುತ್ತದೆ ಎಂಬುದು ಅದರ ವಾದವಾಗಿದೆ.

      ಲ್ಯಾಟರಲ್ ಪ್ರವೇಶಿಸುವವರಿಗೆ ಪಾರದರ್ಶಕ ಮತ್ತು ಅರ್ಹತೆ ಆಧಾರಿತ ಆಯ್ಕೆ ಪ್ರಕ್ರಿಯೆಯ ಅಗತ್ಯವನ್ನು ಆಯೋಗವು ಒತ್ತಿ ಹೇಳಿದ್ದು, ಈ ವೃತ್ತಿಪರರ ನೇಮಕಾತಿ ಮತ್ತು ಮೇಲ್ವಿಚಾರಣೆಯನ್ನು ನಿರ್ವಹಿಸಲು ಮೀಸಲಾದ ಏಜೆನ್ಸಿಯನ್ನು ರಚಿಸುವಂತೆ ಅದು ಸಲಹೆ ನೀಡಿದೆ.

      ಲ್ಯಾಟರಲ್‌ಗೆ ಪ್ರವೇಶಿಸುವವರು ತಮ್ಮ ಕೊಡುಗೆಗಳಿಗೆ ಜವಾಬ್ದಾರರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಕಾರ್ಯಕ್ಷಮತೆಯನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡಲು ದೃಢವಾದ ಕಾರ್ಯಕ್ಷಮತೆ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಲು ಎಆರ್‌ಸಿ ಶಿಫಾರಸು ಮಾಡಿದೆ.

      ವಿಶೇಷ ಕೌಶಲಗಳನ್ನು ಬಳಸಿಕೊಂಡು ನಾಗರಿಕ ಸೇವೆಯ ಸಮಗ್ರತೆ ಮತ್ತು ಮೌಲ್ಯಗಳನ್ನು ಕಾಯ್ದುಕೊಳ್ಳಲು ನಾಗರಿಕ ಸೇವಾ ಚೌಕಟ್ಟಿನೊಳಗೆ ಲ್ಯಾಟರಲ್ ಎಂಟ್ರಿಗಳನ್ನು ಸಂಯೋಜಿಸುವ ಪ್ರಾಮುಖ್ಯತೆಯನ್ನು ಕೂಡ ಎಆರ್‌ಸಿ ತಿಳಿಸಿದೆ.

      ಲ್ಯಾಟರಲ್ ಎಂಟ್ರಿ ಎಂದರೇನು?

      ಮಧ್ಯಮ ಮತ್ತು ಹಿರಿಯ ಹಂತದ ಸ್ಥಾನಗಳನ್ನು ತುಂಬಲು ಸಾಂಪ್ರದಾಯಿಕ ನೇಮಕಾತಿ ಪ್ರಕ್ರಿಯೆಯನ್ನು ಕೈಬಿಟ್ಟು ಹೊರಗಿನ ವ್ಯಕ್ತಿಗಳ ನೇಮಕ ಮಾಡುವುದಾಗಿದೆ.

      Lateral Entry
      Lateral Entry


      ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪರಿಚಯಿಸಿದ್ದಾರೆ. ಮೊದಲ ಬಾರಿಗೆ ಈ ನೇಮಕಾತಿ ಅಡಿಯಲ್ಲಿ ಖಾಲಿ ಹುದ್ದೆಗಳನ್ನು 2018ರಲ್ಲಿ ಘೋಷಿಸಲಾಯಿತು. ಇದಕ್ಕೆ ಅಭ್ಯರ್ಥಿಗಳನ್ನು ಸಾಮಾನ್ಯವಾಗಿ ಮೂರರಿಂದ ಐದು ವರ್ಷಗಳವರೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಕಾರ್ಯಕ್ಷಮತೆಯ ಆಧಾರದ ಮೇಲೆ ಅಧಿಕಾರ ವಿಸ್ತರಣೆಯಾಗುವ ಸಾಧ್ಯತೆ ಇರುತ್ತದೆ.

      ಇದರ ಉದ್ದೇಶವೇನು?

      ವಿವಿಧ ಕ್ಷೇತ್ರಗಳ ತಜ್ಞರನ್ನು ನೇಮಿಸಿಕೊಂಡು ಆಡಳಿತ ಮತ್ತು ನೀತಿ ಅನುಷ್ಠಾನದ ಎದುರಾಗುವ ಸವಾಲುಗಳನ್ನು ಎದುರಿಸುವುದು ಇದರ ಮುಖ್ಯ ಗುರಿಯಾಗಿದೆ.

      ವಿವಾದ ಪ್ರಾರಂಭ

      ಕೇಂದ್ರ ಸರ್ಕಾರದ 24 ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಸೇರಿದಂತೆ ಒಟ್ಟು 45 ಹಿರಿಯ ಹುದ್ದೆಗಳಿಗೆ ಲ್ಯಾಟರಲ್ ನೇಮಕಾತಿಗಾಗಿ ಅರ್ಜಿಗಳನ್ನು ಕೋರಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಜಾಹೀರಾತನ್ನು ಬಿಡುಗಡೆ ಮಾಡಿದೆ.

      ಈ ಹುದ್ದೆಗಳಿಗೆ ವಿವಿಧ ಇಲಾಖೆಗಳ ನಿರ್ದೇಶಕರು, ಆಡಳಿತಾತ್ಮಕ ಮುಖ್ಯಸ್ಥರು, ರಾಜ್ಯ ಮತ್ತು ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳು, ಶಾಸನಬದ್ಧ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯ ಮತ್ತು ಖಾಸಗಿ ವಲಯದ ಸೂಕ್ತ ವಿದ್ಯಾರ್ಹತೆ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

      ಸಾರ್ವಜನಿಕ ಉದ್ಯೋಗ ಮತ್ತು ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿಯನ್ನು 13 ಪಾಯಿಂಟ್ ರೋಸ್ಟರ್ ನೀತಿಯ ಮೂಲಕ ಜಾರಿಗೊಳಿಸಲಾಗಿದೆ. ಇದರಲ್ಲಿ ಒಂದು ಇಲಾಖೆಯಲ್ಲಿ ಮೊದಲ, ದ್ವಿತೀಯ, ತೃತೀಯ, ಐದು ಮತ್ತು ಆರನೇ ಹುದ್ದೆಗಳಿಗೆ ಯಾವುದೇ ಕಡ್ಡಾಯ ಮೀಸಲಾತಿಗಳಿಲ್ಲ ಎಂಬುದು ಸ್ಪಷ್ಟವಾಗಿದೆ.

      ವಿಪಕ್ಷಗಳಿಂದ ವಿರೋಧ ಯಾಕೆ?

      ಪ್ರತಿಪಕ್ಷದ ನಾಯಕರು ಇದನ್ನು ಸ್ಪಷ್ಟವಾಗಿ ವಿರೋಧಿಸುತ್ತಿದ್ದಾರೆ. ಯಾಕೆಂದರೆ ಇದು ಅನುಷ್ಠಾನವಾದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿ ಕೊರತೆಯಾಗುವುದಾಗಿ ವಾದಿಸುತ್ತಿದ್ದಾರೆ. ಆದರೆ ಸರ್ಕಾರವು ವಿಶೇಷ ಪ್ರತಿಭೆ ಮತ್ತು ಪರಿಣತಿಯನ್ನು ತರುವ ಸಾಧನವನ್ನು ಸಮರ್ಥಿಸುತ್ತದೆ.


      ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನಿಷ್ಠರಾಗಿರುವ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಮೋದಿ ಸರ್ಕಾರವು ಹಿಂಬಾಗಿಲನ್ನು ಬಳಸುತ್ತಿದೆ. ಲ್ಯಾಟರಲ್ ಎಂಟ್ರಿಯು ದಲಿತರು, ಒಬಿಸಿಗಳು ಮತ್ತು ಆದಿವಾಸಿಗಳ ಮೇಲಿನ ದಾಳಿಯಾಗಿದೆ. ಬಿಜೆಪಿಯ ರಾಮರಾಜ್ಯದ ತಿರುಚಿದ ಆವೃತ್ತಿಯು ಸಂವಿಧಾನವನ್ನು ನಾಶಮಾಡಲು ಮತ್ತು ಬಹುಜನರಿಂದ ಮೀಸಲಾತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.


      ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಲ್ಯಾಟರಲ್ ಎಂಟ್ರಿಯು ಸರ್ಕಾರಿ ಉದ್ಯೋಗಗಳಿಂದ ಕೆಳವರ್ಗದ ಸಮುದಾಯಗಳನ್ನು ಹೊರಗಿಡುವ ‘ಉತ್ತಮ ಯೋಜಿತ ಪಿತೂರಿಯ ಭಾಗವಾಗಿದೆ ಎಂದು ಹೇಳಿದ್ದಾರೆ.
      ರಾಷ್ಟ್ರೀಯ ಜನತಾ ದಳದ ತೇಜಸ್ವಿ ಯಾದವ್ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಕೂಡ ಇದನ್ನು ಖಂಡಿಸಿದ್ದು, ಇದು ಹಿಂದುಳಿದ ಅಭ್ಯರ್ಥಿಗಳಿಗೆ ಸರ್ಕಾರದೊಳಗೆ ಮುನ್ನಡೆಯುವ ಅವಕಾಶಗಳಿಂದ ವಂಚಿತಗೊಳಿಸುತ್ತದೆ ಎಂದು ದೂರಿದ್ದಾರೆ.


      ಬಿಜೆಪಿಯ ವಾದವೇನು?

      ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಲ್ಯಾಟರಲ್ ಎಂಟ್ರಿ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸೂಚಿಸುವ ಮೂಲಕ ಬಿಜೆಪಿ ಈ ಟೀಕೆಗಳನ್ನು ಎದುರಿಸಿದೆ.

      ಇದನ್ನೂ ಓದಿ: Lateral Entry : ಪ್ರಧಾನಿ ಮೋದಿ ಮಧ್ಯಪ್ರವೇಶ; ಲ್ಯಾಟರಲ್ ಎಂಟ್ರಿ ಮೂಲಕ ನೇಮಕಕ್ಕೆ ತಡೆ

      ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿ ಲ್ಯಾಟರಲ್ ಎಂಟ್ರಿ ವಿಷಯದಲ್ಲಿ ಕಾಂಗ್ರೆಸ್‌ನ ಬೂಟಾಟಿಕೆ ಸ್ಪಷ್ಟವಾಗಿದೆ. ಇದು ಯುಪಿಎ ಸರ್ಕಾರವು ಲ್ಯಾಟರಲ್ ಎಂಟ್ರಿ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿತು. ಎರಡನೇ ಆಡಳಿತ ಸುಧಾರಣಾ ಆಯೋಗವನ್ನು 2005 ರಲ್ಲಿ ಯುಪಿಎ ಸರ್ಕಾರದ ಅಡಿಯಲ್ಲಿ ಸ್ಥಾಪಿಸಲಾಯಿತು. ವೀರಪ್ಪ ಮೊಯ್ಲಿ ಅವರು ಇದರ ಅಧ್ಯಕ್ಷತೆ ವಹಿಸಿದ್ದರು ಎಂದು ಹೇಳಿದ್ದಾರೆ.


      ಕಳೆದ ಐದು ವರ್ಷಗಳಲ್ಲಿ 63 ನೇಮಕಾತಿಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ ಮಾಡಲಾಗಿದೆ. ಪ್ರಸ್ತುತ 57 ಲ್ಯಾಟರಲ್ ಎಂಟ್ರಿಗಳು ವಿವಿಧ ಸಚಿವಾಲಯ, ಇಲಾಖೆಗಳಲ್ಲಿ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಡಿಒಪಿಟಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

      Continue Reading

      EXPLAINER

      Vistara Explainer: ಪುಟ್ಟ ಹೆಣ್ಣುಮಕ್ಕಳ ಮೇಲೆ ಕಾಮುಕ ಅಟೆಂಡರ್‌ನಿಂದ ಅತ್ಯಾಚಾರದ ಬಳಿಕ ಬದ್ಲಾಪುರ ಉದ್ವಿಗ್ನ; ಏನಾಗ್ತಿದೆ ಅಲ್ಲಿ?

      Vistara Explainer: ಬದ್ಲಾಪುರದ ಶಾಲೆಯೊಂದರಲ್ಲಿ ಶಿಶುವಿಹಾರದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಪುರುಷ ಅಟೆಂಡರ್‌ನಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು. ಆರೋಪಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಮಂಗಳವಾರ, ಕ್ರೋಧತಪ್ತರಾದ ಪೋಷಕರು ಮತ್ತು ನಾಗರಿಕರು ಶಾಲೆಗೆ ನುಗ್ಗಿ ಶಾಲೆಯನ್ನು ಧ್ವಂಸಗೊಳಿಸಿದ್ದರು.

      VISTARANEWS.COM


      on

      badlapur tension vistara explainer
      Koo

      ಥಾಣೆ: ಮಹಾರಾಷ್ಟ್ರದ ಥಾಣೆಯ ಬದ್ಲಾಪುರ ಎಂಬಲ್ಲಿನ ಕಿಂಡರ್‌ ಗಾರ್ಟನ್‌ ಶಾಲೆಯೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ (Physical Abuse) ಕೃತ್ಯ ನಡೆದ ನಂತರ ಪ್ರದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಶಾಲೆಯ ಶೌಚಾಲಯದಲ್ಲಿ ಕಾಮುಕ ಅಟೆಂಡರನೊಬ್ಬ ಈ ಮಕ್ಕಳ ಮೇಲೆ ಅಮಾನುಷ ಕೃತ್ಯ ಎಸಗಿದ್ದಾನೆ. ಇದರ ಬಳಿಕ ಉದ್ವಿಗ್ನ ಪರಿಸ್ಥಿತಿ (Badlapur tension) ಉಂಟಾಗಿದ್ದು, ಹಲವೆಡೆ ಗಲಭೆ ತಲೆದೋರಿದೆ. ಈ ಕುರಿತ ವಿವರ (Vistara Explainer) ಇಲ್ಲಿದೆ.

      ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪದ ಮೇಲೆ ಬಂಧಿತ ಆರೋಪಿಯ ವಿರುದ್ಧ ಅತ್ಯಾಚಾರ ಆರೋಪ ದಾಖಲಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂಗಳವಾರ ಪೊಲೀಸರಿಗೆ ಆದೇಶಿಸಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಿ ಪ್ರಕರಣವನ್ನು ಫಾಸ್ಟ್‌ ಟ್ರ್ಯಾಕ್‌ನಲ್ಲಿ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ. “ನಾನು ಥಾಣೆ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣವನ್ನು ತ್ವರಿತವಾಗಿ ತನಿಖೆ ಮಾಡಿ ಆರೋಪಿ ಮೇಲೆ ಅತ್ಯಾಚಾರ ಯತ್ನ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಆರೋಪ ದಾಖಲಿಸುವಂತೆ ಸೂಚಿಸಿದ್ದೇನೆ” ಎಂದು ಅವರು ಹೇಳಿದರು.

      ಬದ್ಲಾಪುರದಲ್ಲಿ ಏನಾಯ್ತು?

      ಬದ್ಲಾಪುರದ ಶಾಲೆಯೊಂದರಲ್ಲಿ ಶಿಶುವಿಹಾರದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಪುರುಷ ಅಟೆಂಡರ್‌ನಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು. ಆರೋಪಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಮಂಗಳವಾರ, ಕ್ರೋಧತಪ್ತರಾದ ಪೋಷಕರು ಮತ್ತು ನಾಗರಿಕರು ಶಾಲೆಗೆ ನುಗ್ಗಿ ಶಾಲೆಯನ್ನು ಧ್ವಂಸಗೊಳಿಸಿದ್ದರು. ಬೆಳಗ್ಗೆ 8.30ರಿಂದ ಬದ್ಲಾಪುರ ರೈಲು ನಿಲ್ದಾಣದಲ್ಲಿ ರೈಲ್‌ ರೋಕೋ ನಡೆಸಿ ರೈಲುಗಳನ್ನು ತಡೆದರು. ಪ್ರತಿಭಟನೆಯ ವೇಳೆ ಕೆಲ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು.

      ಕಾಮುಕನ ಕೈಗೆ ಸಿಕ್ಕಿದ ಸಂತ್ರಸ್ತರು ಮೂರು ಮತ್ತು ನಾಲ್ಕು ವರ್ಷ ವಯಸ್ಸಿನವರು. ಈತ ಶಾಲೆಯ ಶೌಚಾಲಯದಲ್ಲಿ ದೌರ್ಜನ್ಯ ಎಸಗಿದ್ದಾನೆ. ಕೃತ್ಯಕ್ಕೆ ಸಂಬಂಧಿಸಿ ಪ್ರಾಂಶುಪಾಲರು, ತರಗತಿ ಶಿಕ್ಷಕಿ ಹಾಗೂ ಮಹಿಳಾ ಅಟೆಂಡರ್‌ನನ್ನು ಶಾಲೆಯ ಆಡಳಿತ ಮಂಡಳಿ ಅಮಾನತುಗೊಳಿಸಿದೆ.

      ಆರೋಪಿ 23 ವರ್ಷದ ಪುರುಷ ಸ್ವಚ್ಛತಾ ಸಿಬ್ಬಂದಿ. ಬಾಲಕಿಯರು ಶೌಚಾಲಯ ಬಳಸಲು ಹೋದಾಗ ಹಲ್ಲೆ ನಡೆದಿದೆ. ಬಾಲಕಿಯರ ಶೌಚಾಲಯಕ್ಕೆ ಶಾಲೆಯಿಂದ ಮಹಿಳಾ ಸಿಬ್ಬಂದಿಯನ್ನು ನೇಮಿಸಿಲ್ಲ. ಆರೋಪಿ ಅಕ್ಷಯ್ ಶಿಂಧೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು. ಹಲ್ಲೆಗೊಳಗಾದ ಬಾಲಕಿ ತನ್ನ ಖಾಸಗಿ ಅಂಗದಲ್ಲಿ ನೋವಿನ ಕುರಿತು ದೂರು ನೀಡಿದಾಗ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಶೌಚಾಲಯಕ್ಕೆ ತೆರಳಿದ್ದ ವೇಳೆ ಆರೋಪಿ ತನ್ನ ಖಾಸಗಿ ಅಂಗಗಳನ್ನು ಮುಟ್ಟಿದ್ದಾನೆ ಎಂದು ಪೋಷಕರಿಗೆ ಆಕೆ ತಿಳಿಸಿದ್ದಾಳೆ. ಪೋಷಕರು ಹುಡುಗಿಯ ಸ್ನೇಹಿತೆಯ ಪೋಷಕರನ್ನು ಸಂಪರ್ಕಿಸಿದ್ದು, ಅವರೂ ತಮ್ಮ ಮಗಳಿಗೆ ಶಾಲೆಗೆ ಹೋಗಲು ಭಯವಾಗುತ್ತಿದೆ ಎಂದು ಹೇಳಿದ್ದಾರೆ. ನಂತರ ಪೋಷಕರು ಬಾಲಕಿಯರನ್ನು ಸ್ಥಳೀಯ ವೈದ್ಯರ ಬಳಿ ಪರೀಕ್ಷಿಸಿದಾಗ, ಇಬ್ಬರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು ಬೆಳಕಿಗೆ ಬಂದಿದೆ.

      ಸಿಎಂಒ ಕ್ರಮದ ಭರವಸೆ

      ಶಾಲೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರಕರಣವನ್ನು ಅತ್ಯಂತ ತುರ್ತು ಮತ್ತು ದಕ್ಷತೆಯಿಂದ ನಿಭಾಯಿಸುವಂತೆ ಖಚಿತಪಡಿಸಿಕೊಳ್ಳಲು ಅವರು ಥಾಣೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಬೆಂಬಲಿಸಲು ಮತ್ತು ರಕ್ಷಿಸಲು ವಿನ್ಯಾಸಗೊಳಿಸಲಾದ ಸಖಿ ಸಾವಿತ್ರಿ ಸಮಿತಿಗಳನ್ನು ಶಾಲೆಗಳಲ್ಲಿ ಸ್ಥಾಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಮುಖ್ಯಮಂತ್ರಿಗಳು ಪರಿಶೀಲನೆಗೆ ಕರೆ ನೀಡಿದ್ದಾರೆ.

      ಶಾಲಾ ಸುರಕ್ಷತೆಯನ್ನು ಸುಧಾರಿಸುವ ಮತ್ತು ಭವಿಷ್ಯದ ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ, ಪ್ರತಿ ಶಾಲೆಯಲ್ಲೂ ದೂರು ಪೆಟ್ಟಿಗೆಗಳನ್ನು ಅಳವಡಿಸುವುದು, ವಿದ್ಯಾರ್ಥಿಗಳೊಂದಿಗೆ ಆಗಾಗ ಸಂವಹನ ನಡೆಸುವ, ಶಾಲಾ ಸಿಬ್ಬಂದಿಗಳ ಪರಿಶೀಲನೆ ಹೆಚ್ಚಿಸುವ ಮತ್ತಿತರ ಕ್ರಮಗಳನ್ನು ಸಿಎಂ ಪ್ರಸ್ತಾಪಿಸಿದ್ದಾರೆ.

      ಇದನ್ನೂ ಓದಿ: Stabbing Case: ಮುಸ್ಲಿಂ ಸಹಪಾಠಿಯಿಂದ ಇರಿತಕ್ಕೊಳಗಾದ ವಿದ್ಯಾರ್ಥಿ, ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಅಸುನೀಗಿದ

      Continue Reading

      ದೇಶ

      Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

      Independence Day 2024: ಪ್ರಸ್ತುತ ನಾವು ಬಳಸುವ ರೂಪಾಯಿಗೂ (Indian Currency) ಕ್ರಿಸ್ತಪೂರ್ವ 6ನೇ ಶತಮಾನದ ನಾಣ್ಯಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇದರ ಹಿನ್ನಲೆ ಸಾಕಷ್ಟು ಆಸಕ್ತಿದಾಯಕವಾಗಿದೆ. ಭಾರತೀಯ ಕರೆನ್ಸಿ ನೋಟುಗಳು ಬ್ರಿಟಿಷರ ಆಡಳಿತದ ಬಳಿಕ ಹೇಗೆ ವಿಕಸನಗೊಂಡಿವೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ.

      VISTARANEWS.COM


      on

      By

      Independence Day 2024
      Koo

      ಭಾರತದಲ್ಲಿ ನಾಣ್ಯ, ನೋಟುಗಳು (Indian Currency) ಚಲಾವಣೆಗೆ ಬಂದು ಹಲವು ಶತಮಾನಗಳೇ ಕಳೆದಿವೆ. ಇದರ ಬಹುದೊಡ್ಡ ಇತಿಹಾಸವೇ ಇದೆ. “ರೂಪಾಯಿ” (Rupee) ಪದದ ಮೂಲ ಸಂಸ್ಕೃತ ಪದ ‘ರೂಪ್ಯ’ದಿಂದ (Rupya) ಬಂದಿದೆ. ಇದರರ್ಥ ಆಕಾರ, ಮುದ್ರೆಯೊತ್ತಲ್ಪಟ್ಟ, ಪ್ರಭಾವಿತ ಅಥವಾ ನಾಣ್ಯ ಎಂಬುದಾಗಿದೆ. ಸಂಸ್ಕೃತ ಪದ “ರೌಪ್ಯ” ಅಂದರೆ ಬೆಳ್ಳಿಯಿಂದ ಮುದ್ರಿಸಲ್ಪಟ್ಟದ್ದು ಎಂಬ ಅರ್ಥವನ್ನು ಹೊಂದಿದೆ.

      ನಾವು ಪ್ರಸ್ತುತ ಬಳಸುವ ರೂಪಾಯಿಗೂ ಕ್ರಿಸ್ತಪೂರ್ವ 6ನೇ ಶತಮಾನದ ನಾಣ್ಯಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇದರ ಹಿನ್ನೆಲೆ ಸಾಕಷ್ಟು ಆಸಕ್ತಿದಾಯಕವಾಗಿದೆ. 19ನೇ ಶತಮಾನದಲ್ಲಿ ಬ್ರಿಟಿಷರು (British govt) ಮೊದಲ ಬಾರಿಗೆ ಕಾಗದದ ಕರೆನ್ಸಿಯನ್ನು ಪರಿಚಯಿಸಿದರು. 1861ರ ಕಾಗದದ ಕರೆನ್ಸಿ ಕಾಯಿದೆಯು ಬ್ರಿಟಿಷ್ ಭಾರತದ ವಿಶಾಲವಾದ ವಿಸ್ತಾರದ ಉದ್ದಕ್ಕೂ ನೀಡಲಾದ ನೋಟಿನ ಏಕಸ್ವಾಮ್ಯವನ್ನು ಸರ್ಕಾರಕ್ಕೆ ನೀಡಿತು.

      ಭಾರತೀಯ ಕರೆನ್ಸಿ ನೋಟುಗಳು ಬ್ರಿಟಿಷರ ಆಡಳಿತದ ಬಳಿಕ ಹೇಗೆ ವಿಕಸನಗೊಂಡಿವೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ:

      ಭಾರತದಲ್ಲಿ ನಾಣ್ಯಗಳನ್ನು ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಮುದ್ರಿಸಲಾಯಿತು. ಆಗ ಇದನ್ನು ಕರ್ಷಪಣಗಳು ಅಥವಾ ಪಣಗಳು ಎಂದು ಕರೆಯಲಾಗುತ್ತಿತ್ತು. ಈ ನಾಣ್ಯಗಳು ಅನಿಯಮಿತ ಆಕಾರ, ಪ್ರಮಾಣಿತ ತೂಕವನ್ನು ಹೊಂದಿತ್ತು.

      ಬ್ರಿಟಿಷರ ಕಾಲದ ನಾಣ್ಯಗಳು

      ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಸಮಯದಲ್ಲಿ ಅಂದರೆ 1600ರಲ್ಲಿ ಮೊಘಲ್ ಕರೆನ್ಸಿಯು ಜನಪ್ರಿಯವಾಗಿತ್ತು. ಆದರೆ 1717ಎ.ಡಿನಲ್ಲಿ ಮೊಘಲ್ ಚಕ್ರವರ್ತಿ ಫರೂಖ್ ಸಿಯಾರ್ ಅವರು ಬ್ರಿಟಿಷರಿಗೆ ಬಾಂಬೆ ಟಂಕಸಾಲೆಯಲ್ಲಿ ಮೊಘಲ್ ಹಣವನ್ನು ನಾಣ್ಯ ಮಾಡಲು ಅನುಮತಿ ನೀಡಿದರು. ಅನಂತರ ಬ್ರಿಟಿಷರು ಚಿನ್ನದ ನಾಣ್ಯಗಳನ್ನು ಕ್ಯಾರೊಲಿನಾ ಎಂಬ ಹೆಸರಿನಲ್ಲಿ ತಂದರು. ಬೆಳ್ಳಿಯ ನಾಣ್ಯಗಳನ್ನು ಏಂಜಲೀನಾ ಎಂದು, ತಾಮ್ರದ ನಾಣ್ಯಗಳನ್ನು ಕಪ್ಪೆರೂನ್ ಮತ್ತು ತವರ ನಾಣ್ಯಗಳನ್ನು ಟಿನ್ನಿ ಎಂದು ಕರೆಯಲಾಯಿತು.


      ಮೊದಲ ನೋಟು

      18ನೇ ಶತಮಾನದಲ್ಲಿ ಬಂಗಾಳದಲ್ಲಿರುವ ಬ್ಯಾಂಕ್ ಆಫ್ ಹಿಂದೂಸ್ತಾನ್ ಜನರಲ್ ಬ್ಯಾಂಕ್ ಮತ್ತು ಬಂಗಾಳ ಬ್ಯಾಂಕ್ ಪೇಪರ್ ಕರೆನ್ಸಿಯನ್ನು ವಿತರಿಸಿದ ಭಾರತದ ಮೊದಲ ಬ್ಯಾಂಕುಗಳಾಗಿವೆ. 1812ರ ಸೆಪ್ಟೆಂಬರ್ 3ರಂದು ಬ್ಯಾಂಕ್ ಆಫ್ ಬೆಂಗಾಲ್ ಮೂಲಕ ಬ್ರಿಟಿಷರು ಇವುಗಳನ್ನು ಹೊರತಂದರು. ಇದು ಎರಡು ನೂರ ಐವತ್ತು ಸಿಕ್ಕಾ ರೂಪಾಯಿ ನೋಟಾಗಿತ್ತು.

      ನಾಣ್ಯಗಳ ಕಾಯಿದೆ

      1835ರ ನಾಣ್ಯಗಳ ಕಾಯಿದೆಯೊಂದಿಗೆ ದೇಶಾದ್ಯಂತ ಏಕರೂಪದ ನಾಣ್ಯವು ಚಲಾವಣೆಗೆ ಬಂದಿತ್ತು. 1858ರಲ್ಲಿ ಮೊಘಲ್ ಸಾಮ್ರಾಜ್ಯವು ಕೊನೆಗೊಂಡಿತು ಮತ್ತು ಬ್ರಿಟಿಷರು ನೂರು ರಾಜಪ್ರಭುತ್ವದ ರಾಜ್ಯಗಳ ಮೇಲೆ ಹಿಡಿತ ಸಾಧಿಸಿದರು. ಹೀಗಾಗಿ ಬಳಿಕ ನಾಣ್ಯಗಳ ಮೇಲೆ ಗ್ರೇಟ್ ಬ್ರಿಟನ್ ಪ್ರಭುತ್ವದ ರಾಜನ ಚಿತ್ರವನ್ನು ಮುದ್ರಿಸಲಾಯಿತು.

      Indian Currency
      Indian Currency


      6ನೇ ಕಿಂಗ್ ಜಾರ್ಜ್ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳ ಮೇಲಿನ ವಿನ್ಯಾಸಗಳನ್ನು ಬದಲಿಸಿದರು. ಆದರೆ 1857ರ ದಂಗೆಯ ನಂತರ, ಅವರು ವಸಾಹತುಶಾಹಿ ಭಾರತದ ಅಧಿಕೃತ ಕರೆನ್ಸಿಯಾಗಿ ರೂಪಾಯಿಯನ್ನು ಮಾಡಿದರು.
      1862ರಲ್ಲಿ ರಾಣಿ ವಿಕ್ಟೋರಿಯಾ ಗೌರವಾರ್ಥವಾಗಿ, ವಿಕ್ಟೋರಿಯಾ ಭಾವಚಿತ್ರದೊಂದಿಗೆ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳ ಸರಣಿಯನ್ನು ಬಿಡುಗಡೆ ಮಾಡಲಾಯಿತು.

      ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ

      ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು 1935ರಲ್ಲಿ ಸ್ಥಾಪಿಸಲಾಯಿತು. ಭಾರತ ಸರ್ಕಾರದ ನೋಟುಗಳನ್ನು ವಿತರಿಸಲು ಅಧಿಕಾರ ನೀಡಲಾಯಿತು. ಇದು ಮೊದಲಿಗೆ 10,000 ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸಿತ್ತು. ಆದರೆ ಸ್ವಾತಂತ್ರ್ಯದ ಅನಂತರ ಇದನ್ನು ಅಮಾನ್ಯಗೊಳಿಸಲಾಯಿತು.


      ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ನೋಟು

      ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ಕಾಗದದ ಕರೆನ್ಸಿ 1938ರ ಜನವರಿಯಲ್ಲಿ 6ನೇ ಕಿಂಗ್ ಜಾರ್ಜ್ ಆವರ ಭಾವಚಿತ್ರವನ್ನು ಹೊಂದಿರುವ 5 ರೂಪಾಯಿ ನೋಟಾಗಿತ್ತು.


      ಸ್ವಾತಂತ್ರ್ಯ ಅನಂತರದ ನೋಟು

      1947ರಲ್ಲಿ ಸ್ವಾತಂತ್ರ್ಯ ಪಡೆದ ಅನಂತರ ಮತ್ತು 1950ರ ದಶಕದಲ್ಲಿ ಭಾರತ ಗಣರಾಜ್ಯವಾದಾಗ ಭಾರತದ ಆಧುನಿಕ ರೂಪಾಯಿಯ ವಿನ್ಯಾಸ ಪಡೆಯಿತು. ಪೇಪರ್ ಕರೆನ್ಸಿಗೆ ಆಯ್ಕೆ ಮಾಡಲಾದ ಚಿಹ್ನೆಯು ಸಾರಾನಾಥದಲ್ಲಿರುವ ಸಿಂಹದ ಚಿಹ್ನೆಯನ್ನು ಒಳಗೊಂಡಿತ್ತು. ಇದು 6ನೇ ಜಾರ್ಜ್ ನ ಬ್ಯಾಂಕ್ ನೋಟುಗಳನ್ನು ಬದಲಾಯಿಸಿತು. ಆದ್ದರಿಂದ, ಸ್ವತಂತ್ರ ಭಾರತವು ಮುದ್ರಿಸಿದ ಮೊದಲ ನೋಟು 1 ರೂಪಾಯಿ ನೋಟು.

      1 ರೂಪಾಯಿ ನೋಟಿನ ಇತಿಹಾಸ ಹೀಗಿದೆ

      ಬ್ರಿಟಿಷ್ ಆಡಳಿತದ ಅವಧಿಯಲ್ಲಿ 1917ರ ನವೆಂಬರ್ 30ರಂದು ಒಂದು ರೂಪಾಯಿ ನೋಟನ್ನು ಬಿಡುಗಡೆ ಮಾಡಲಾಯಿತು. ಅದೂ ಮೊದಲನೇ ಮಹಾಯುದ್ಧದ ಸಮಯದಲ್ಲಿ.


      ಆ ಕಾಲದಲ್ಲಿ ಒಂದು ರೂಪಾಯಿ ನಾಣ್ಯ ಬೆಳ್ಳಿಯದ್ದಾಗಿತ್ತು. ಆದರೆ ಯುದ್ಧದ ಕಾರಣ ಪರಿಸ್ಥಿತಿ ಹದಗೆಟ್ಟಿತು ಮತ್ತು ಒಂದು ರೂಪಾಯಿ ಬೆಳ್ಳಿಯ ನಾಣ್ಯವನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಮೊದಲ ಬಾರಿಗೆ ಜನರ ಮುಂದೆ ಒಂದು ರೂಪಾಯಿ ನೋಟು ಬಿಡುಗಡೆಯಾಯಿತು. ಇದರಲ್ಲಿ 5ನೇ ಜಾರ್ಜ್ ನ ಚಿತ್ರವನ್ನು ನೋಟಿನಲ್ಲಿ ಅಳವಡಿಸಲಾಗಿತ್ತು. ಇಂಗ್ಲೆಂಡಿನಲ್ಲಿ ಮುದ್ರಿತವಾಗಿರುವ ಈ ಒಂದು ರೂಪಾಯಿ ನೋಟಿನ ಮೌಲ್ಯ ಇತರ ನೋಟುಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇತ್ತು.

      ನೋಟುಗಳ ಮೈಲುಗಲ್ಲು

      1917-1918ರಲ್ಲಿಯೂ ಹೈದರಾಬಾದ್ ನಿಜಾಮರು ತಮ್ಮ ಸ್ವಂತ ಕರೆನ್ಸಿಯನ್ನು ಮುದ್ರಿಸಿ ಬಿಡುಗಡೆ ಮಾಡುವ ಸೌಲಭ್ಯ ಹೊಂದಿದ್ದರು. ಮೊದಲನೆಯ ಮಹಾಯುದ್ಧದಲ್ಲಿ ಲೋಹದ ಕೊರತೆಯಿಂದಾಗಿ ಮೊರ್ವಿ ರಾಜಪ್ರಭುತ್ವದ ರಾಜ್ಯಗಳು ಹರ್ವಾಲಾ ಎಂದು ಕರೆಯಲ್ಪಡುವ ಸೀಮಿತ ಹೊಣೆಗಾರಿಕೆಯ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಿದ್ದವು.


      1959ರಲ್ಲಿ ಭಾರತೀಯ ಹಜ್ ಯಾತ್ರಿಕರಿಗೆ ಹತ್ತು ರೂಪಾಯಿ ಮತ್ತು ನೂರು ರೂಪಾಯಿಗಳ ನೋಟನ್ನು ಬಿಡುಗಡೆ ಮಾಡಲಾಯಿತು. ಇದನ್ನು ಅವರು ಸೌದಿ ಅರೇಬಿಯಾದಲ್ಲಿ ಸ್ಥಳೀಯ ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿತ್ತು.

      1969ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 5 ಮತ್ತು 10 ರೂ. ನೋಟುಗಳ ಮೇಲೆ ಮಹಾತ್ಮ ಗಾಂಧಿ ಜನ್ಮ ಶತಮಾನೋತ್ಸವದ ಸ್ಮರಣಾರ್ಥದ ವಿನ್ಯಾಸವನ್ನು ಮಾಡಿ ಬಿಡುಗಡೆ ಮಾಡಿತ್ತು.


      ನಾಣ್ಯಗಳ ಬದಲಿಗೆ ಟೋಕನ್

      ಎರಡನೇ ಮಹಾಯುದ್ಧದ ಸಮಯದಲ್ಲಿ ಲೋಹದ ಕೊರತೆಯಿಂದಾಗಿ 36 ರಾಜಪ್ರಭುತ್ವದ ರಾಜ್ಯಗಳು ಮುಖ್ಯವಾಗಿ ಗುಜರಾತ್, ರಾಜಸ್ಥಾನ, ಸಿಂಧ್, ಬಲೂಚಿಸ್ತಾನ್ ಮತ್ತು ಕೇಂದ್ರ ಪ್ರಾಂತ್ಯಗಳು ನಾಣ್ಯಗಳ ಬದಲಿಗೆ ಕಾಗದದ ಟೋಕನ್‌ಗಳನ್ನು ನೀಡಿದವು!


      ನೋಟುಗಳಲ್ಲಿ ಮಹಾತ್ಮಾ ಗಾಂಧಿ ಚಿತ್ರ

      ಅಂತಿಮವಾಗಿ 1996ರಲ್ಲಿ ಮಹಾತ್ಮಾ ಗಾಂಧಿ ಚಿತ್ರವನ್ನು ಹೊಂದಿರುವ ಕಾಗದದ ನೋಟುಗಳನ್ನು ಪರಿಚಯಿಸಲಾಯಿತು.

      ಛಾಯಾಗ್ರಾಹಕನೊಬ್ಬ ತೆಗೆದ ಗಾಂಧಿಯ ಚಿತ್ರ

      ಪ್ರಸ್ತುತ ನೋಟಿನಲ್ಲಿರುವ ಮಹಾತ್ಮ ಗಾಂಧಿಯವರ ನಗುಮುಖದ ಚಿತ್ರ ವ್ಯಂಗ್ಯಚಿತ್ರವೆಂದು ಕೆಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಈ ಚಿತ್ರವನ್ನು 1946ರಲ್ಲಿ ಅಜ್ಞಾತ ಛಾಯಾಗ್ರಾಹಕರೊಬ್ಬರು ತೆಗೆದಿದ್ದು, ಅದನ್ನು ಕತ್ತರಿಸಿ ಮುದ್ರಿಸಲಾಗಿದೆ.


      ರಾಜಕಾರಣಿ ಮತ್ತು ಗ್ರೇಟ್ ಬ್ರಿಟನ್‌ನಲ್ಲಿ ಮಹಿಳಾ ಮತದಾರರ ಚಳವಳಿಯ ನಾಯಕರಾಗಿದ್ದ ಲಾರ್ಡ್ ಫ್ರೆಡ್ರಿಕ್ ವಿಲಿಯಂ ಪೆಥಿಕ್-ಲಾರೆನ್ಸ್ ಅವರ ಪಕ್ಕದಲ್ಲಿ ನಿಂತಿದ್ದ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಪ್ರಸ್ತುತ ರಾಷ್ಟ್ರಪತಿ ಭವನ ಎಂದು ಕರೆಯಲ್ಪಡುವ ಹಿಂದಿನ ವೈಸರಾಯ್ ಹೌಸ್‌ನಲ್ಲಿ ತೆಗೆಯಲಾಗಿತ್ತು. ಈ ಚಿತ್ರವನ್ನು 1996ರಲ್ಲಿ ಆರ್‌ಬಿಐ ಪರಿಚಯಿಸಿದ ಮಹಾತ್ಮ ಗಾಂಧಿ ಸರಣಿಯ ಬ್ಯಾಂಕ್ ನೋಟುಗಳಲ್ಲಿ ಬಳಸಲಾಗಿದೆ.


      ವಿಭಿನ್ನ ಚಿತ್ರ ಬಳಕೆ

      1981ರಲ್ಲಿ 10 ರೂ. ನೋಟು ಸಿಂಹದ ಲಾಂಛನ ಮತ್ತು ರಾಷ್ಟ್ರೀಯ ಪಕ್ಷಿಯಾದ ನವಿಲಿನ ಚಿತ್ರವನ್ನು ಹೊಂದಿತ್ತು.

      1983- 84ರಲ್ಲಿ ಮುದ್ರಿಸಿರುವ 20 ರೂಪಾಯಿಯ ಬ್ಯಾಂಕ್ ನೋಟಿನ ಹಿಂಭಾಗದಲ್ಲಿ ಬೌದ್ಧರ ಚಕ್ರವನ್ನು ಒಳಗೊಂಡಿತ್ತು.

      1996 ಜೂನ್‌ನಲ್ಲಿ ಮುದ್ರಿಸಲಾದ 100 ರೂ.ನ ನೋಟಿನಲ್ಲಿ ಮಹಾತ್ಮಾ ಗಾಂಧಿಯವರ ಮುಂಭಾಗದ ಚಿತ್ರದೊಂದಿಗೆ ಹಿಂಭಾಗದಲ್ಲಿ ಹಿಮಾಲಯ ಪರ್ವತಗಳನ್ನು ಚಿತ್ರಿಸಲಾಗಿದೆ.


      1996ರ ಜೂನ್‌ನಲ್ಲಿ 10 ರೂ. ನೋಟಿನ ಮುಂಭಾಗದಲ್ಲಿ ಗಾಂಧಿ ಮತ್ತು ಹಿಂಭಾಗದಲ್ಲಿ ಜೀವವೈವಿಧ್ಯವನ್ನು ಸಂಕೇತಿಸುವ ಭಾರತದ ಪ್ರಾಣಿಗಳನ್ನು ಪ್ರತಿನಿಧಿಸುವ ಚಿತ್ರವನ್ನು ಚಿತ್ರಿಸಲಾಯಿತು.

      1997ರ ಮಾರ್ಚ್‌ನಲ್ಲಿ ಮುದ್ರಿಸಲಾದ 50 ರೂ.ಗಳ ನೋಟಿನ ಹಿಂಭಾಗ ಮತ್ತು ಮುಂಭಾಗದಲ್ಲಿ ಭಾರತೀಯ ಸಂಸತ್ತು ಮತ್ತು ಮಹಾತ್ಮ ಗಾಂಧಿಯವರ ಚಿತ್ರವನ್ನು ನೀಡಲಾಗಿದೆ.


      1997ರ ಅಕ್ಟೋಬರ್‌ನಲ್ಲಿ ಮಹಾತ್ಮಾ ಗಾಂಧಿಯವರ ಮುಂಭಾಗದ ಚಿತ್ರವಿರುವ 500 ರೂ.ಗಳನ್ನು ನೀಡಲಾಯಿತು ಮತ್ತು ಅದರ ಹಿಂಭಾಗದಲ್ಲಿ ದಂಡಿ ಮೆರವಣಿಗೆಯನ್ನು ಪ್ರತಿನಿಧಿಸುವ ಚಿತ್ರವನ್ನು ಹೊಂದಿತ್ತು.


      ಇದು 1930ರ ಮಾರ್ಚ್ 12ರಂದು ಪ್ರಾರಂಭಿಸಿದ ಉಪ್ಪಿನ ಸತ್ಯಾಗ್ರಹವನ್ನು ಪ್ರತಿಬಿಂಬಿಸುತ್ತದೆ. ಗಾಂಧೀಜಿ ಅವರು ಆರಂಭಿಸಿದ ವ್ಯಾಪಕ ನಾಗರಿಕ ಅಸಹಕಾರ ಚಳವಳಿ ಇದು ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಉಪ್ಪಿನ ಮೇಲೆ ಬ್ರಿಟಿಷ್‌ ಪ್ರಾಬಲ್ಯದ ವಿರುದ್ಧ ಗಾಂಧೀಜಿ ತಮ್ಮ ಅನುಯಾಯಿಗಳೊಂದಿಗೆ ಅಹಮದಾಬಾದ್ ಬಳಿಯ ಅವರ ಸಬರಮತಿ ಆಶ್ರಮದಿಂದ ನವಸಾರಿ ಜಿಲ್ಲೆ ಗುಜರಾತ್‌ನ ಕರಾವಳಿ ಗ್ರಾಮವಾದ ದಂಡಿಗೆ ಮೆರವಣಿಗೆ ನಡೆಸಿದರು. ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಪಾವತಿಸದೆ ಉಪ್ಪನ್ನು ತಯಾರಿಸಿದರು. ಈ ರೀತಿಯಲ್ಲಿ 1930ರ ಏಪ್ರಿಲ್ 5ರಂದು ಗಾಂಧಿಯವರು ಉಪ್ಪಿನ ಕಾನೂನನ್ನು ಮುರಿದರು.


      2000ರ ನವೆಂಬರ್‌ನಲ್ಲಿ ಗಾಂಧಿಯವರ ಮುಂಭಾಗದ ಚಿತ್ರದೊಂದಿಗೆ 1000 ರೂ.ಯನ್ನು ನೀಡಲಾಯಿತು. ಅದರ ಹಿಂಭಾಗದಲ್ಲಿ ಧಾನ್ಯ ಕೊಯ್ಲು ಅಂದರೆ ಕೃಷಿ ವಲಯ, ತೈಲ ಸಂಸ್ಕರಣೆ ಇತ್ಯಾದಿ ಹೊಂದಿರುವ ಭಾರತದ ಆರ್ಥಿಕತೆಯನ್ನು ಪ್ರತಿನಿಧಿಸುವ ಚಿತ್ರವನ್ನು ಹೊಂದಿದೆ.

      2001ರ ಆಗಸ್ಟ್‌ನಲ್ಲಿ ಗಾಂಧಿಯವರ ಚಿತ್ರದೊಂದಿಗೆ 20 ರೂ. ನೀಡಲಾಯಿತು. ಇದರಲ್ಲಿ ತಾಳೆ ಮರಗಳ ಚಿತ್ರವನ್ನು ಹಿಂಭಾಗದಲ್ಲಿ ಮುದ್ರಿಸಲಾಯಿತು.

      ಇದನ್ನೂ ಓದಿ: Independence Day 2024: ವಾಟ್ಸ್‌ಆಪ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸ್ಟಿಕ್ಕರ್‌, ಮೆಸೆಜ್‌, ಇಮೇಜ್‌ ಪಡೆಯುವುದು ಹೇಗೆ?

      2001ರ ನವೆಂಬರ್ ನಲ್ಲಿ 5 ರೂ. ಮುಖಬೆಲೆಯ ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿ ಮತ್ತು ಹಿಂಭಾಗದಲ್ಲಿ ಕೃಷಿ ಯಾಂತ್ರೀಕರಣದ ಚಿತ್ರವನ್ನು ಚಿತ್ರಿಸಲಾಯಿತು.

      2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣದ ವಿರುದ್ಧ ಸಮರ ಸಾರುವ ಸಲುವಾಗಿ ಹಿಂದಿನ 500 ಮತ್ತು 1000 ರೂ. ನೋಟುಗಳನ್ನು ಇದ್ದಕ್ಕಿದ್ದಂತೆ ರದ್ದು ಮಾಡಿ ದೇಶಾದ್ಯಂತ ಸಂಚಲನ ಮೂಡಿಸಿದರು. 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದರು. ಮುಂದೆ 500 ರೂ.ಯ ಹೊಸ ಮಾದರಿ ನೋಟುಗಳೂ ಬಂದವು. ಬಳಿಕ ಇದೀಗ 2000 ರೂ. ಮೌಲ್ಯದ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದ್ದು, ಚಲಾವಣೆಯಲ್ಲಿರುವ ಅದನ್ನು ಆರ್‌ಬಿಐ ಹಿಂಪಡೆದಿದೆ. 2024ರ ಅಕ್ಟೋಬರ್ ಬಳಿಕ ಈ 2000 ರೂ. ನೋಟುಗಳು ಅಧಿಕೃತವಾಗಿ ಇತಿಹಾಸದ ಪುಟವನ್ನು ಸೇರಲಿದೆ!

      Continue Reading
      Advertisement
      Gode Bengaluru
      ಬೆಂಗಳೂರು6 ಗಂಟೆಗಳು ago

      Gode Bengaluru : ಬೆಂಗಳೂರು ಗೋಡೆಗಳ ಮೇಲೆ ಚಿತ್ತಾರ; ʻಗೋಡೆ ಬೆಂಗಳೂರುʼ ಘೋಷಿಸಿದ ಅನ್‌ಬಾಕ್ಸಿಂಗ್‌

      Pralhad Joshi
      ದೇಶ6 ಗಂಟೆಗಳು ago

      Pralhad Joshi : ನನಗೆ ಸಹೋದರಿಯೇ ಇಲ್ಲ! ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ತಪ್ಪು ಮಾಡಿದ್ದರೆ ಕಾನೂನು ಕ್ರಮವಾಗಲಿ- ಪ್ರಲ್ಹಾದ ಜೋಶಿ

      African boy successfully undergoes surgery for rare aplastic anemia
      ಬೆಂಗಳೂರು7 ಗಂಟೆಗಳು ago

      Aplastic anemia : ಅತಿ ವಿರಳ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆಯಿಂದ ಬಳಲುತ್ತಿದ್ದ ಆಫ್ರಿಕಾ ಮೂಲದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

      Self Harming
      ಚಿತ್ರದುರ್ಗ10 ಗಂಟೆಗಳು ago

      Self Harming: ಪ್ರೀತ್ಸೆ ಅಂತ ಪ್ರಾಣ ತಿಂದ ಯುವಕ; ಕಾಲೇಜು ಕಟ್ಟಡದ ಮೇಲಿಂದು ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

      Actress Amulyas brother film director Deepak aras passes away
      ಸಿನಿಮಾ12 ಗಂಟೆಗಳು ago

      Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ನಿಧನ

      Fraud case Union Minister Pralhad Joshis brother duped of ticket for Lok Sabha polls
      ಬೆಂಗಳೂರು12 ಗಂಟೆಗಳು ago

      Fraud Case : ಲೋಕಸಭೆ ಚುನಾವಣೆಗೆ ಟಿಕೆಟ್‌ ಕೊಡಿಸುವುದಾಗಿ ಕೋಟಿ ರೂ. ಲೂಟಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರನ ವಿರುದ್ಧ ಎಫ್‌ಐಆರ್‌ ದಾಖಲು

      Dina bhavishya
      ಭವಿಷ್ಯ19 ಗಂಟೆಗಳು ago

      Dina Bhavishya : ಅತಿಯಾದ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಪಿತೂರಿ ಮಾಡುವ ಜನರ ಬಗ್ಗೆ ಇರಲಿ ಎಚ್ಚರ

      Gosavi samaj lathicharged Sri Ram Sene calls for bandh in Lakshmeshwara town on October 19
      ಗದಗ1 ದಿನ ago

      Lakshmeshwara Town: ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್; ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಶ್ರೀರಾಮಸೇನೆ ಕರೆ

      A man killed his wife and her lover then committed suicide
      ಬೆಂಗಳೂರು1 ದಿನ ago

      Murder Case: ಪ್ರಿಯಕರ ಜತೆ ಏಕಾಂತದಲ್ಲಿ ಇರುವಾಗಲೆ ಪತ್ನಿ ಲಾಕ್‌; ಇಬ್ಬರನ್ನು ಕೊಂದು ಪತಿ ಸೂಸೈಡ್‌

      Parvati Nair to play dual role in suspense thriller un Paravail Tamil film
      ಸಿನಿಮಾ2 ದಿನಗಳು ago

      Parvati Nair : ಸಸ್ಪೆನ್ಸ್ ಥ್ರಿಲ್ಲರ್‌ ʻಊಣ್‌ ಪರವೈಲ್‌ʼ ತಮಿಳು ಚಿತ್ರದಲ್ಲಿ ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಮಿಂಚಿಂಗ್‌

      galipata neetu
      ಕಿರುತೆರೆ11 ತಿಂಗಳುಗಳು ago

      Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

      Kannada Serials
      ಕಿರುತೆರೆ1 ವರ್ಷ ago

      Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

      Sharmitha Gowda in bikini
      ಕಿರುತೆರೆ1 ವರ್ಷ ago

      Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

      Kannada Serials
      ಕಿರುತೆರೆ1 ವರ್ಷ ago

      Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

      Bigg Boss- Saregamapa 20 average TRP
      ಕಿರುತೆರೆ1 ವರ್ಷ ago

      Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

      Kannada Serials
      ಕಿರುತೆರೆ1 ವರ್ಷ ago

      Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

      Bigg Boss' dominates TRP; Sita Rama fell to the sixth position
      ಕಿರುತೆರೆ12 ತಿಂಗಳುಗಳು ago

      Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

      geetha serial Dhanush gowda engagement
      ಕಿರುತೆರೆ10 ತಿಂಗಳುಗಳು ago

      Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

      Kannada Serials
      ಕಿರುತೆರೆ1 ವರ್ಷ ago

      Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

      varun
      ಕಿರುತೆರೆ11 ತಿಂಗಳುಗಳು ago

      Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

      Action Prince Dhruva Sarja much awaited film Martin to hit the screens on October 11
      ಸಿನಿಮಾ2 ವಾರಗಳು ago

      Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

      Sudeep's birthday location shift
      ಸ್ಯಾಂಡಲ್ ವುಡ್2 ತಿಂಗಳುಗಳು ago

      Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

      Actor Darshan
      ಸ್ಯಾಂಡಲ್ ವುಡ್2 ತಿಂಗಳುಗಳು ago

      Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

      ಮಳೆ2 ತಿಂಗಳುಗಳು ago

      Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

      karnataka Weather Forecast
      ಮಳೆ2 ತಿಂಗಳುಗಳು ago

      Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

      Bellary news
      ಬಳ್ಳಾರಿ2 ತಿಂಗಳುಗಳು ago

      Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

      Maravoor bridge in danger Vehicular traffic suspended
      ದಕ್ಷಿಣ ಕನ್ನಡ2 ತಿಂಗಳುಗಳು ago

      Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

      Wild Animals Attack
      ಚಿಕ್ಕಮಗಳೂರು2 ತಿಂಗಳುಗಳು ago

      Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

      Karnataka Weather Forecast
      ಮಳೆ2 ತಿಂಗಳುಗಳು ago

      Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

      assault case
      ಬೆಳಗಾವಿ3 ತಿಂಗಳುಗಳು ago

      Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

      ಟ್ರೆಂಡಿಂಗ್‌