Financial planning : ನೀವು ನಿವೃತ್ತಿಗೆ, ಮಕ್ಕಳ ಶಿಕ್ಷಣಕ್ಕೆ ಉಳಿತಾಯ ಮಾಡಿದ್ದೀರಾ? - Vistara News

ಮನಿ-ಗೈಡ್

Financial planning : ನೀವು ನಿವೃತ್ತಿಗೆ, ಮಕ್ಕಳ ಶಿಕ್ಷಣಕ್ಕೆ ಉಳಿತಾಯ ಮಾಡಿದ್ದೀರಾ?

Financial planning ಮಕ್ಕಳ ಶಿಕ್ಷಣ, ವಿವಾಹ, ನಿವೃತ್ತಿಯ ಬದುಕಿಗೆ ಉಳಿತಾಯ ನಿರ್ಣಾಯಕ. ದೀರ್ಘಕಾಲೀನವಾದ್ದರಿಂದ ಕೆಲ ಅಂಶಗಳನ್ನು ಮರೆಯದಿರಿ. ಇಲ್ಲಿದೆ ವಿವರ.

VISTARANEWS.COM


on

cash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

Financial planning : ನೀವು ಈಗ ದುಡಿಯುವ ವಯಸ್ಸಿನಲ್ಲಿ ಇದ್ದೀರಿ ಎಂದು ಇಟ್ಟುಕೊಳ್ಳಿ. ಉದಾಹರಣೆಗೆ 18-45 ವರ್ಷ ವಯಸ್ಸಿನವರು ಎಂದು ಭಾವಿಸಿ. ಹಾಗಿದ್ದರೆ ನಿಮ್ಮ ನಿವೃತ್ತಿಯ ಬದುಕಿನ ಖರ್ಚುವೆಚ್ಚ ಹಾಗೂ ಮಕ್ಕಳ ಶಿಕ್ಷಣ ವೆಚ್ಚದ ಗುರಿ ಸಾಧನೆಗೆ ಅಗತ್ಯ ತಯಾರಿ ನಡೆಸಿದ್ದೀರಾ? ಸರಿಯಾದ ಹೂಡಿಕೆಯ ಪ್ರಾಡಕ್ಟ್‌ ಅನ್ನು ಆಯ್ಕೆ ಮಾಡಿದ್ದೀರಾ?

ಹಣಕಾಸು ಪ್ಲಾನಿಂಗ್‌ (financial planning) ಅಡಿಯಲ್ಲಿ ಸರಿಯಾದ ಹೂಡಿಕೆಯ ಆಯ್ಕೆ ನಿರ್ಣಾಯಕ. ಎರಡನೆಯದಾಗಿ ಹಣಕಾಸು ಗುರಿಗೆ ತಕ್ಕಂತೆ ಹೂಡಿಕೆಯ ಮೊತ್ತವನ್ನು ನಿರ್ಧರಿಸಬೇಕು. (money goals) ಅದು ಹೇಗೆ ಎಂಬುದನ್ನು ಈಗ ನೋಡೋಣ.

ಆದಾಯದಿಂದ ಉಳಿತಾಯವನ್ನು ಕಳೆಯುವ ಪದ್ಧತಿ: ಅನೇಕ ಮಂದಿ ಕುಟುಂಬದ ಖರ್ಚು ವೆಚ್ಚಗಳನ್ನು ಮಾಡಿದ ಬಳಿಕ ಉಳಿತಾಯಕ್ಕೆ ಆದ್ಯತೆ ನೀಡುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ. ಮೊದಲು ಉಳಿತಾಯದ ಹಣವನ್ನು ತೆಗೆದಿಟ್ಟು, ಉಳಿದ ಹಣವನ್ನು ಕುಟುಂಬದ ಖರ್ಚು ವೆಚ್ಚ ನೋಡಿಕೊಳ್ಳಲು ಬಳಸುವುದು ಸೂಕ್ತ.

ಮೊದಲ ವಿಧಾನದಲ್ಲಿ ಎಂಥಾ ಸಮಸ್ಯೆಯಾಗುತ್ತದೆ ಎಂಬುದನ್ನು ನೋಡೋಣ. ಈ ಪದ್ಧತಿಯಲ್ಲಿ ಹೂಡಿಕೆಗೂ ಮುನ್ನ ಕುಟುಂಬದ ಖರ್ಚು ವೆಚ್ಚಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ ಖರ್ಚು ಕಳೆದು ತಿಂಗಳಿಗೆ 15,000 ರೂ. ಉಳಿತಾಯವಾಗುತ್ತದೆ. ಆದರೆ ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ನಿಮ್ಮ 15 ವರ್ಷಗಳ ಗುರಿ ಸಾಧನೆಗೆ ಪ್ರತಿಯಾಗಿ ಮಾಸಿಕ 18,000 ರೂ. ಬೇಕು ಎಂದಿಟ್ಟುಕೊಳ್ಳಿ. 3000 ರೂ. ಕೊರತೆಯಿಂದ ಏನಾಗುತ್ತದೆ ಎಂದು ನೀವು ಕೇಳಬಹುದು. ಆದರೆ 3,000 ರೂ. ಕೊರತೆಯಿಂದ ನಿಮ್ಮ ಹಣಕಾಸು ಯೋಜನೆಯ ಗುರಿಯೇ ಹಳಿ ತಪ್ಪಬಹುದು!

ಹೇಗೆ ಎನ್ನುತ್ತೀರಾ? ಮಾಸಿಕ 3,000 ಸಿಪ್‌ ಅನ್ನು 15 ವರ್ಷಗಳ ಅವಧಿಗೆ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿದರೆ, 12% ಆದಾಯ ಸಿಕ್ಕಿದರೆ 15 ಲಕ್ಷ ರೂ. ಸಂಪತ್ತು ಸೃಷ್ಟಿಯಾಗುತ್ತದೆ.

ನಿಮ್ಮ ಗುರಿಗಳಿಗೆ ಹಣದುಬ್ಬರವೇ ಶತ್ರು: ದೀರ್ಘಕಾಲೀನ ಗುರಿಗಳನ್ನು ಹಣಕಾಸು ಯೋಜನೆ ಹೊಂದಿರುವಾಗ, ಭವಿಷ್ಯದ ಹಣದುಬ್ಬರದ ಗತಿಯ ಬಗ್ಗೆಯೂ ಯೋಚಿಸಬೇಕು. ಹಣದುಬ್ಬರ ನಿಧಾನವಾಗಿ ನಿಮ್ಮ ಉಳಿತಾಯದ ಮೌಲ್ಯವನ್ನು ಸವಕಳಿಸುವಂತೆ ಮಾಡಿ ಹಾಕುತ್ತದೆ. ಆದ್ದರಿಂದ ಹೂಡಿಕೆಯ ಮೊದಲ ದಿನದಿಂದಲೇ ಹಣದುಬ್ಬರವನ್ನು ಸೋಲಿಸುವಂತೆ ನೋಡಿಕೊಳ್ಳಬೇಕು. ಉದಾಹರಣೆಗೆ ಈಗ ಮಕ್ಕಳ ಮದುವೆಗೆ 25 ಲಕ್ಷ ರೂ. ಖರ್ಚಾದರೆ 21 ವರ್ಷಗಳ ಬಳಿಕ 70 ಲಕ್ಷ ರೂ. ಖರ್ಚಾಗಬಹುದು. (ವಾರ್ಷಿಕ 5 ಪರ್ಸೆಂಟ್ ಹಣದುಬ್ಬರದ ಲೆಕ್ಕ) ಹೀಗಾಗಿ 21 ವರ್ಷದ ಬಳಿಕ ಮಕ್ಕಳ ಮದುವೆ ಮಾಡಬೇಕಾಗಿರುವವರು 70 ಲಕ್ಷ ರೂ.ಗೆ ತಕ್ಕಂತೆ ಹೂಡಿಕೆ ಮಾಡಬೇಕು. 25 ಲಕ್ಷ ರೂ.ಗೆ ತಕ್ಕಂತೆ ಅಲ್ಲ.

ಮಕ್ಕಳ ಶಿಕ್ಷಣಕ್ಕೆ ಈಗ 10 ಲಕ್ಷ ರೂ. ಖರ್ಚು ತಗಲುತ್ತದೆ ಎಂದು ಭಾವಿಸಿ. 15 ವರ್ಷಗಳ ಬಳಿಕ 28 ಲಕ್ಷ ರೂ. ಆಗುತ್ತದೆ. (7 % ಹಣದುಬ್ಬರದ ಲೆಕ್ಕದಲ್ಲಿ). ಹೀಗಾಗಿ ಪೂರ್ವಸಿದ್ಧತೆ ಮತ್ತು ಲೆಕ್ಕಾಚಾರ ಇಲ್ಲಿ ಮುಖ್ಯ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಈ ರಜೆಯಲ್ಲಿ ಮಕ್ಕಳಿಗೆ ಆರ್ಥಿಕತೆಯ ಪ್ರಾಕ್ಟಿಕಲ್‌ ಪಾಠ ಮಾಡಿ

Money Guide: ಇಂದಿನ ಮಕ್ಕಳೇ ಮುಂದಿನ ಜನಾಂಗ. ಹೀಗಾಗಿ ಮಕ್ಕಳಲ್ಲಿ ಆರ್ಥಿಕ ಶಿಸ್ತು ಬೆಳೆಸುವುದು ಮುಖ್ಯ. ಇದರಿಂದ ಭವಿಷ್ಯದಲ್ಲಿ ಅವರು ಸಾಲಕ್ಕೆ ಕೈ ಚಾಚುವುದು ತಪ್ಪುತ್ತದೆ. ನೀವು ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ಪ್ರಾಕ್ಟಿಕಲ್‌ ಆಗಿ ಅವರಿಗೆ ತಿಳಿ ಹೇಳಲು ಈ ರಜಾ ಅವಧಿ ಅತ್ಯಂತ ಪ್ರಶಸ್ತ ಸಮಯ. ಹಾಗಾದರೆ ಹೇಗೆ ಮಕ್ಕಳಿಗೆ ಪ್ರಾಯೋಗಿಕ ಪಾಠ ಮಾಡಬಹುವುದು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ಮಕ್ಕಳಿಗೆ ಈಗ ರಜಾ ಅವಧಿ. ಪಾಠ, ಪರೀಕ್ಷೆ, ಸೆಮಿನಾರ್‌ ಹೀಗೆ ವರ್ಷಪೂರ್ತಿ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿದ್ದ ಅವರು ರಿಲೀಫ್‌ ಆಗುವ ಸಮಯ. ಈಗ ಬೆಳಗ್ಗೆ ಬೇಗ ಎದ್ದು ಗಡಿಬಿಡಿಯಲ್ಲಿ ಶಾಲೆ, ಕಾಲೇಜಿಗೆ ಓಡಬೇಕೆಂಬ ಧಾವಂತ ಇರುವುದಿಲ್ಲ. ತಮಗೆ ಬೇಕಾದಂತೆ ಕಾಲ ಕಳೆಯಬಹುದು. ಹಾಗಂತ ಅವರನ್ನು ಅವರ ಪಾಡಿಗೆ ಪೂರ್ತಿಯಾಗಿ ಬಿಡಬೇಡಿ. ಅವರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸಲು ಇದು ತಕ್ಕ ಸಮಯ. ಎಳವೆಯಲ್ಲಿಯೇ ಆರ್ಥಿಕತೆಯ ವಿಚಾರದಲ್ಲಿ ಅವರಲ್ಲಿ ಶಿಸ್ತು ಮೂಡಿದರೆ ಭವಿಷ್ಯದಲ್ಲಿ ಎದುರಾಗುವ ಅದೆಷ್ಟೋ ಸಮಸ್ಯೆಗಳಿಂದ ಪಾರಾಗಬಹುದು. ನೀವು ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ಪ್ರಾಕ್ಟಿಕಲ್‌ ಆಗಿ ಅವರಿಗೆ ತಿಳಿ ಹೇಳಲು ಈ ರಜಾ ಅವಧಿ ಅತ್ಯಂತ ಪ್ರಶಸ್ತ ಸಮಯ. ಹಾಗಾದರೆ ಹೇಗೆ ಮಕ್ಕಳಿಗೆ ಪ್ರಾಯೋಗಿಕ ಪಾಠ ಮಾಡಬಹುವುದು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).

ಉಳಿತಾಯದ ಮಹತ್ವ ತಿಳಿ ಹೇಳಿ

ಹಣದ ಉಳಿತಾಯ ಎಲ್ಲರಿಗೂ, ಎಲ್ಲ ಕಾಲಕ್ಕೂ ಅನಿವಾರ್ಯ. ಒಂದಷ್ಟು ಉಳಿತಾಯ ನಿಮ್ಮ ಬಳಿ ಇದ್ದರೆ ಸಾಲ ಮಾಡುವುದರಿಂದ ಪಾರಾಗಬಹುದು. ಆರಂಭದಲ್ಲಿ ಈ ಪಾಠವನ್ನು ಮಕ್ಕಳಿಗೆ ತಿಳಿ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಇದನ್ನು ಅವರಿಗೆ ಮನದಟ್ಟಾಗುವಂತೆ ವಿವರಿಸಿ. ಮಕ್ಕಳ ಹೆಸರಿನಲ್ಲಿ ಸೇವಿಂಗ್ಸ್‌ ಅಕೌಂಟ್‌ ಓಪನ್‌ ಮಾಡಿ. ಪೋಸ್ಟ್‌ ಆಫೀಸ್‌ನಲ್ಲಿಯೂ ಖಾತೆ ತೆರೆಯಬಹುದು. ಅದರಲ್ಲಿ ನಿಯಮಿತವಾಗಿ ಠೇವಣಿ ಇಡಲು ಹೇಳಿ. ನೀವು ಅವರ ಅಕೌಂಟ್‌ಗೆ ಹಣ ಹಾಕುವುದಕ್ಕಿಂತ ಈ ಕೆಲಸವನ್ನು ಸ್ವತಃ ಅವರೇ ನಿರ್ವಹಿಸಲಿ. ಇದರಿಂದ ಅವರಿಗೆ ಉಳಿತಾಯದ ಪ್ರಾಧಾನ್ಯತೆ ಅರಿವಾಗುತ್ತದೆ. ಇದರ ಜತೆಗೆ ಚಿಕ್ಕ ಮಕ್ಕಳಾಗಿದ್ದರೆ ಮನೆಯಲ್ಲಿಯೇ ಉಳಿತಾಯ ಮಾಡಲು ಪಿಗ್ಗಿ ಬ್ಯಾಂಕ್‌ನ ವ್ಯವಸ್ಥೆ ಮಾಡಿ. ಭವಿಷ್ಯದ ಗುರಿಗಳಿಗಾಗಿ ಉಳಿತಾಯದ ಪ್ರಾಮುಖ್ಯತೆ ಮತ್ತು ಕಾಲಾನಂತರದಲ್ಲಿ ಸಣ್ಣ ಮೊತ್ತಗಳು ಹೇಗೆ ಉತ್ತಮ ಸಂಗ್ರಹವಾಗಿ ಬದಲಾಗಬಹುದು ಎಂಬುದನ್ನು ಅರ್ಥ ಮಾಡಿಸಿ. ಅದಕ್ಕಾಗಿ ಹೀಗೆ ಮಾಡಿ: ಅವರು ಯಾವುದಾದರೂ ವಸ್ತುವಿಗೆ ಬೇಡಿಕೆ ಇಟ್ಟರೆ (ಸೈಕಲ್‌, ಬ್ಯಾಗ್‌ ಇತ್ಯಾದಿ) ಕೂಡಲೇ ತಂದು ಕೊಡಬೇಡಿ. ಅವರ ಉಳಿತಾಯದ ಹಣದಿಂದ ಅವರ ಅಗತ್ಯವನ್ನು ಕಂಡುಕೊಳ್ಳುವ ಬಗ್ಗೆ ಪ್ರಸ್ತಾವಿಸಿ. ನಿರ್ದಿಷ್ಟ ಸಮಯದವರೆಗೆ ಹಣ ಉಳಿಸಿದರೆ ಹೇಗೆ ನಮ್ಮ ಅಗತ್ಯಗಳನ್ನು ಪೂರೈಸಬಹುದು ಎನ್ನುವದನ್ನು ಅವರಿಗೆ ಮನದಟ್ಟು ಮಾಡಿ.

ಪಾರ್ಟ್‌ ಟೈಮ್‌ ಜಾಬ್‌

ಸ್ವಲ್ಪ ದೊಡ್ಡ ಮಕ್ಕಳಾದರೆ (ಎಸ್ಸೆಸ್ಸೆಲ್ಸಿ / ಪಿಯು / ಪದವಿ) ಅವರಿಗೆ ರಜೆಯಲ್ಲಿ ಸಣ್ಣ ಪುಟ್ಟ ಪಾರ್ಟ್‌ ಟೈಮ್‌ ಜಾಬ್‌ ಕೊಡಿಸಿ. ಈ ಮೂಲಕ ಅವರಿಗೆ ಹಣದ ಮಹತ್ವ ತಿಳಿಸಿಕೊಡಿ. ಕಾರ್ಖಾನೆಗಳಲ್ಲಿ ಲೆಕ್ಕ ಪತ್ರ ನೋಡಿಕೊಳ್ಳುವುದು, ಪ್ಯಾಕ್‌ ಮಾಡುವುದು, ಕಂಪ್ಯೂಟರ್‌ ಕೆಲಸ, ಸೇಲ್‌ ಮ್ಯಾನ್‌ / ಸೇಲ್ಸ್‌ ಗರ್ಲ್‌, ಬೆಳಗ್ಗೆ ದಿನ ಪತ್ರಿಕೆ ಹಂಚುವುದು ಇತ್ಯಾದಿ ಕೆಲಸ ಮಾಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ. ಹಳ್ಳಿಯವರಾದರೆ ಹೊಲ, ತೋಟದ ಕೆಲಸಕ್ಕೆ ತಮ್ಮೊಂದಿಗೆ ಬರುವಂತೆ ಹೇಳಿ. ಅವರ ಕೆಲಸಕ್ಕೆ ಅನುಗುಣವಾಗಿ ಇಂತಿಷ್ಟು ಸಂಬಳ ನಿಗದಿ ಪಡಿಸಿ. ಬೇಕಿದ್ದರೆ ಅವರ ಟ್ಯೂಷನ್‌ ಕೂಡ ಮಾಡಬಹುದು. ಒಟ್ಟಿನಲ್ಲಿ ಅವರು ಸಂಪಾದಿಸುವಂತೆ ಮಾಡಿ ಅವರಿಗೆ ದುಡಿಮೆಯ ಮಹತ್ವ ತಿಳಿಸಿ.

ಸಂಬಳವನ್ನು ಸರಿಯಾಗಿ ಹಂಚಿಕೆ ಮಾಡಿ

ಮಕ್ಕಳ ಸಂಪಾದನೆಯನ್ನು ಮುಂದಿಟ್ಟುಕೊಂಡು ಅದನ್ನು ಯಾವೆಲ್ಲ ರೀತಿ ಹಂಚಿಕೆ ಮಾಡಬಹುದು ಎನ್ನುವುದನ್ನು ಅವರೊಂದಿಗೆ ಚರ್ಚಿಸಿ. ಅವರ ಖರ್ಚಿಗೆ, ಮನೆ ಖರ್ಚಿಗೆ, ಇತರ ಅಗತ್ಯಗಳಿಗೆ ಹಂಚಿಕೆ ಮಾಡಿ ಕಡ್ಡಾಯವಾಗಿ ಒಂದಷ್ಟು ಮೊತ್ತ ಉಳಿತಾಯ ಮಾಡುವುದು ಹೇಗೆ ಎನ್ನುವುದರ ಯೋಜನೆ ತಯಾರಿಸಿ. ಇನ್ನು ಅನಗತ್ಯ ವಸ್ತುಗಳನ್ನು ಅವರು ಖರೀದಿಸುವುದನ್ನು ತಪ್ಪಿಸಿ. ಅವರ ಆನ್‌ಲೈನ್‌ ಶಾಪಿಂಗ್‌ ಬಗ್ಗೆ ನಿಗಾ ಇಡಿ.

ಬಜೆಟ್‌ ತಯಾರಿಸಲಿ

ಬಜೆಟ್‌ ಯಾಕೆ ಮುಖ್ಯ ಎನ್ನುವುದರ ಕುರಿತು ಮಾಹಿತಿ ನೀಡಿ. ಇದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮಂಡಿಸುವ ಬಜೆಟ್‌ನ ಉದಾಹರಣೆ ಕೊಡಬಹುದು. ಬಳಿಕ ಅವರೇ ಬಜೆಟ್‌ ತಯಾರಿಸಲಿ. ಅವರ ಬಳಿ ಇರುವ ಪಾಕೆಟ್‌ ಮನಿ, ಉಡುಗೊರೆ ಸಿಕ್ಕ ಹಣ, ಸಂಬಳವನ್ನು ಆಟದ ವಸ್ತು ಖರೀದಿ, ತಿಂಡಿ ಖರೀದಿ ಮತ್ತು ಉಳಿತಾಯಕ್ಕೆ ಹೇಗೆ ಹಂಚಿಕೆ ಮಾಡಬಹುದು ಎನ್ನುವುದನ್ನು ಅವರೇ ಪ್ಲ್ಯಾನ್‌ ಮಾಡಲಿ.

ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಪಾಠ

ಮನೆ ಸಾಮಗ್ರಿ ಖರೀದಿಗೆ ಹೋಗುವಾಗ ಅವರನ್ನು ಕರೆದುಕೊಂಡು ಹೋಗಿ. ಕೈಯಲ್ಲಿ ಇರುವ ಹಣದಿಂದ ಹೇಗೆ ನಮ್ಮ ಅಗತ್ಯಗಳನ್ನು ಪೂರೈಸಬಹುದು ಎನ್ನುವುದು ಅವರ ಗಮನಕ್ಕೆ ಬರಲಿ. ನೆನಪಿಡಿ, ಮಕ್ಕಳು ನಿಮ್ಮನ್ನು ನೋಡಿ ಕಲಿಯುವುದರಿಂದ, ನಿಮ್ಮ ಪ್ರಭಾವ ಹೆಚ್ಚೇ ಬೀರುವುದರಿಂದ ನೀವು ಕೂಡ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಿ. ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ, ಭವಿಷ್ಯಕ್ಕಾಗಿ ಉಳಿತಾಯ ಮಾಡಿ. ಎಲ್ಲದಕ್ಕಿಂತ ಮುಖ್ಯವಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವುದನ್ನು ರೂಢಿಸಿಕೊಳ್ಳಿ. ಅದನ್ನೇ ಮಕ್ಕಳಿಗೂ ತಿಳಿಸಿ. ಮಾತ್ರವಲ್ಲ ಹೂಡಿಕೆಯ ಪ್ರಾಧಾನ್ಯತೆಯ ಬಗ್ಗೆ ಮಕ್ಕಳಿಗೆ ವಿವರಿಸಿ. ಸಂಪತ್ತು ವೃದ್ಧಿಗೆ ಹೂಡಿಕೆ ಎನ್ನುವುದು ಅತ್ಯುತ್ತಮ ಮಾರ್ಗ ಎನ್ನವುದನ್ನು ತಿಳಿಸಿ. ಹೂಡಿಕೆಗೆ ವಿವಿಧ ವಿಧಾನಗಳಿದ್ದರೂ ಸುರಕ್ಷಿತ ಮಾರ್ಗವನ್ನು ಆಯ್ದುಕೊಳ್ಳುವ ಬಗ್ಗೆ ತಿಳಿಸಿ.

ಇದನ್ನೂ ಓದಿ: Money Guide: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳಿವು

Continue Reading

ಮನಿ-ಗೈಡ್

Money Guide: ಕಾರ್ಪೊರೇಟ್- ವೈಯಕ್ತಿಕ ಆರೋಗ್ಯ ವಿಮೆಯ ನಡುವಿನ ವ್ಯತ್ಯಾಸ ತಿಳಿದಿರಲಿ

Money Guide: ಕೆಲಸವಿರುವಾಗ ಆರೋಗ್ಯ ವಿಮೆಯ ಚಿಂತೆ ಇರುವುದಿಲ್ಲ. ಕೈಯಲ್ಲಿ ಹಣವಿರುವುದರಿಂದ ಹೂಡಿಕೆ ಮಾಡುವ ಒಲವು ಇರುವುದಿಲ್ಲ. ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿ ಎಲ್ಲವನ್ನೂ ದೋಚಿಕೊಂಡು ಹೋದಾಗಲೇ ನಾನು ಮೊದಲೇ ಆರೋಗ್ಯ ವಿಮೆಯ ಬಗ್ಗೆ ಯೋಚಿಸಬೇಕಿತ್ತು ಎನ್ನುವಂತೆ ಮಾಡುತ್ತದೆ.

VISTARANEWS.COM


on

By

Health Plan
Koo

ನಿತ್ಯದ ಕೆಲಸದ ಒತ್ತಡದಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಜನರು ಆರೋಗ್ಯದ ಅಪಾಯವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಆರೋಗ್ಯದ ಸುರಕ್ಷತೆಯಿಂದ (Health Plan) ಸಣ್ಣ ವಯಸ್ಸಿನಲ್ಲೇ ಉಳಿತಾಯ (saving) ಮಾಡುವುದು ಅನಿವಾರ್ಯವಾಗುತ್ತಿದೆ. ಹೀಗಾಗಿ ಹೆಚ್ಚಿನವರಿಗೆ ಮ್ಯೂಚುಯಲ್ ಫಂಡ್‌ (Mutual fund) ಮತ್ತು ಎಸ್‌ಐಪಿಗಳು (SIP) ದೀರ್ಘಾವಧಿಗೆ ಉತ್ತಮ ಹಣಕಾಸಿನ ಸಾಧನಗಳಾಗಿ ಕಾಣುತ್ತದೆ. ಇದರ ಮಧ್ಯೆ ವೈಯಕ್ತಿಕ ಆರೋಗ್ಯ ವಿಮೆ (personal health insurance) ಕೂಡ ಹಣಕಾಸಿನ ಉತ್ಪನ್ನವಾಗಿ ಕಾಣುತ್ತಿದೆ. ಆದರೆ ಇಲ್ಲಿ ವೈಯಕ್ತಿಕ ಆರೋಗ್ಯ ವಿಮಾ ಪಾಲಿಸಿಗಿಂತ ಉದ್ಯೋಗದಾತರ ಕಾರ್ಪೊರೇಟ್ ವಿಮೆಯ (corporate insurance) ಮೇಲಿನ ಅವಲಂಬನೆ ಹೆಚ್ಚಾಗಿದೆ (Money Guide).

ಕೆಲವೊಂದು ಬಾರಿ ಇದು ಎಲ್ಲ ವೆಚ್ಚಗಳನ್ನು ಸರಿದೂಗಿಸಲು ಸಾಕಾಗುವುದಿಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿ, ಅನಿರೀಕ್ಷಿತ ಘಟನೆಗಳಲ್ಲಿ ಹಣಕಾಸಿನ ಒತ್ತಡಕ್ಕೆ ಇದು ಕಾರಣವಾಗುತ್ತದೆ.

ಯುವ ವೃತ್ತಿಪರರ ಮುಂದೆ ಇರುವ ಹೆಚ್ಚಿನ ಸವಾಲೆಂದರೆ ದೀರ್ಘಾವಧಿಯ ಉಳಿತಾಯಕ್ಕಿಂತ ತಕ್ಷಣದ ತೃಪ್ತಿಯ ಕಡೆಗೆ ಅವರ ಒಲವು. ತಕ್ಷಣದ ವೈಯಕ್ತಿಕ, ವೃತ್ತಿ ಗುರಿಗಳನ್ನು ಅನುಸರಿಸುವುದರ ಮೇಲೆಯೇ ಅವರು ಗಮನ ಕೇಂದ್ರೀಕರಿಸುವುದರಿಂದ ಭವಿಷ್ಯದ ಅನಿಶ್ಚಯಗಳಿಗೆ ಅವರು ಸಿದ್ಧವಾಗಿರುವುದಿಲ್ಲ. ಹೀಗಾಗಿ ವೈಯಕ್ತಿಕ ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡುವುದನ್ನು ಅವರು ಸಾಮಾನ್ಯವಾಗಿ ಕಡೆಗಣಿಸುತ್ತಾರೆ. ಅವರ ಈ ಮನಸ್ಥಿತಿಯು ಮುಂದೆ ಎದುರಾಗುವ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳಿಂದ ಗಮನಾರ್ಹ ಆರ್ಥಿಕ ಹೊರೆಗಳಿಗೆ ಕಾರಣವಾಗುತ್ತದೆ.


ಇದನ್ನೂ ಓದಿ: Money Guide: ಫೊರೆಕ್ಸ್‌ ಕಾರ್ಡ್‌ V/S ಕ್ರೆಡಿಟ್‌ ಕಾರ್ಡ್‌: ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ?

ಯುವ ವೃತ್ತಿಪರರ ಒಂದು ವರ್ಗವು ಉದ್ಯಮಿ ಮತ್ತು ಸ್ವಯಂ ಉದ್ಯೋಗಿಗಳನ್ನು ಒಳಗೊಂಡಿದೆ. ಇವರಿಗೆ ವ್ಯವಹಾರದ ಬೆಳವಣಿಗೆ ಮತ್ತು ಪೋಷಣೆಗಾಗಿ ಹಣವನ್ನು ನಿಯೋಜಿಸುವ ಅಗತ್ಯವು ಆದ್ಯತೆಯಾಗಿ ಕಾಣುತ್ತದೆ. ಇದರಿಂದ ದೀರ್ಘಾವಧಿಯ ಆರೋಗ್ಯ ರಕ್ಷಣೆಯನ್ನು ಕಡೆಗಣಿಸುತ್ತಾರೆ.

ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ವಿಮೆಯು ಎಲ್ಲರಿಗೂ ಕಡ್ಡಾಯವಾಗಿದೆ. ಇದರಿಂದ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. ದೈಹಿಕ ಮತ್ತು ಆರ್ಥಿಕ ಯೋಗಕ್ಷೇಮವನ್ನು ನೋಡಿಕೊಳ್ಳಬಹುದು.

ವೃತ್ತಿಜೀವನವನ್ನು ಪ್ರಾರಂಭಿಸುತ್ತಿರುವಾಗ ಕಾರ್ಪೊರೇಟ್ ಮತ್ತು ವೈಯಕ್ತಿಕ ಆರೋಗ್ಯ ವಿಮೆಯ ನಡುವಿನ ವ್ಯತ್ಯಾಸವನ್ನು ಮೊದಲು ತಿಳಿದುಕೊಳ್ಳಬೇಕು. ಇದರಿಂದ ಆರೋಗ್ಯದ ಅಗತ್ಯಗಳನ್ನು ಹೆಚ್ಚು ಸಮಗ್ರವಾಗಿ ಪರಿಹರಿಸಲು ಸಾಧ್ಯವಾಗುವುದು. ಜೇಬಿನಲ್ಲಿ ಸೀಮಿತ ಆದಾಯದೊಂದಿಗೆ ಒಬ್ಬರ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಆರ್ಥಿಕ ಹೊರೆಯನ್ನು ನಿವಾರಿಸುವ ಒಟ್ಟಾರೆ ಹಣಕಾಸುಗಳನ್ನು ಯೋಜಿಸಲು ಇದು ಸಹಾಯ ಮಾಡುತ್ತದೆ.

ಕಾರ್ಪೊರೇಟ್ ವಿಮೆ ಮತ್ತು ವೈಯಕ್ತಿಕ ಆರೋಗ್ಯ ವಿಮೆಯ ನಡುವೆ ಇರುವ ವ್ಯತ್ಯಾಸ.

ಸುಧಾರಿತ ಮತ್ತು ಸೇರಿಸಿದ ಕವರೇಜ್

ಅನೇಕ ಕಾರ್ಪೊರೇಟ್ ವಿಮಾ ಯೋಜನೆಗಳು ಕಡಿಮೆ ಕವರೇಜ್ ಮೊತ್ತದೊಂದಿಗೆ ಸೀಮಿತ ವ್ಯಾಪ್ತಿಯನ್ನು ನೀಡುತ್ತವೆ ಮತ್ತು ಕಾಪೇಗಳು, ಸಬ್‌ಲಿಮಿಟ್‌ಗಳಂತಹ ಇತರ ಷರತ್ತುಗಳು ವೈದ್ಯಕೀಯ ಆರೈಕೆಗಾಗಿ ಗಮನಾರ್ಹವಾದ ಔಟ್-ಆಫ್-ಪಾಕೆಟ್ ವೆಚ್ಚಗಳಿಗೆ ಕಾರಣವಾಗುತ್ತವೆ. ವೈಯಕ್ತಿಕ ಆರೋಗ್ಯ ವಿಮೆಯು ವ್ಯಕ್ತಿಗಳಿಗೆ ತಮ್ಮ ವಿಶಿಷ್ಟ ಅಗತ್ಯಗಳಿಗೆ ತಕ್ಕಂತೆ ಕವರೇಜ್ ಮಾಡಲು ಅನುಮತಿಸುತ್ತದೆ. ಹೆಚ್ಚು ಸಮಗ್ರ ವ್ಯಾಪ್ತಿಯನ್ನು ಒದಗಿಸುತ್ತದೆ.

ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳಿಂದ ಪರಿಹಾರ

ವೈಯಕ್ತಿಕ ಆರೋಗ್ಯ ವಿಮೆಯನ್ನು ಹೊಂದಿರುವುದು ವ್ಯಕ್ತಿಯ ಮನಸ್ಸಿನ ಶಾಂತಿ ಮತ್ತು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಗಂಭೀರವಾದ ಅನಾರೋಗ್ಯ ಅಥವಾ ಗಾಯದ ಸಂದರ್ಭದಲ್ಲಿ ವೈಯಕ್ತಿಕ ಆರೋಗ್ಯ ವಿಮೆಯು ಸುರಕ್ಷತಾ ನಿವ್ವಳವಾಗಿ ಕಾರ್ಯನಿರ್ವಹಿಸುತ್ತದೆ. ವೈದ್ಯಕೀಯ ಆರೈಕೆಯ ಹೆಚ್ಚಿನ ವೆಚ್ಚಗಳಿಂದ ಗ್ರಾಹಕರನ್ನು ರಕ್ಷಿಸುತ್ತದೆ.

ಪರ್ಯಾಯವಾಗಿ ಗ್ರಾಹಕರು ವೈಯಕ್ತಿಕ ಆರೋಗ್ಯ ಯೋಜನೆಯನ್ನು ಆಯ್ಕೆ ಮಾಡದಿರಲು ಆದ್ಯತೆ ನೀಡಿದರೆ ಅವರು ತಮ್ಮ ಪ್ರಸ್ತುತ ಕಾರ್ಪೊರೇಟ್ ಆರೋಗ್ಯ ಯೋಜನೆಗೆ ಹೆಚ್ಚುವರಿಯಾಗಿ ಟಾಪ್-ಅಪ್ ಆರೋಗ್ಯ ನೀತಿಯ ಆಯ್ಕೆಯನ್ನು ಹೊಂದಿರುತ್ತಾರೆ. ಟಾಪ್-ಅಪ್ ಆರೋಗ್ಯ ಯೋಜನೆಯನ್ನು ಆರಿಸಿಕೊಳ್ಳುವ ಮೂಲಕ ಕ್ಲೈಮ್ ಸಮಯದಲ್ಲಿ ತಮ್ಮ ಕಾರ್ಪೊರೇಟ್ ಆರೋಗ್ಯ ನೀತಿಯಿಂದ ಒದಗಿಸಲಾದ ವ್ಯಾಪ್ತಿಯನ್ನು ಮೀರಿದರೆ ಉಂಟಾಗಬಹುದಾದ ಅನಿರೀಕ್ಷಿತ ವೆಚ್ಚಗಳಿಂದ ವ್ಯಕ್ತಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು.


ಜೀವನ ಆಯ್ಕೆಗಳಿಗೆ ಹೊಂದಿಕೊಳ್ಳುವಿಕೆ

ಉದ್ಯೋಗಿಗಳ ಆರೋಗ್ಯ ರಕ್ಷಣೆಯ ಮೇಲೆ ಕಡಿಮೆ ಅವಲಂಬನೆ – ಬೆಳವಣಿಗೆಯ ಅವಕಾಶಗಳನ್ನು ಹುಡುಕಲು ಅಥವಾ ಕೈಗಾರಿಕೆಗಳನ್ನು ಬದಲಾಯಿಸಲು ಅಥವಾ ಉನ್ನತ ಶಿಕ್ಷಣಕ್ಕೆ ಮುಂದುವರಿಯಲು ಅಥವಾ ಸ್ವಂತವಾಗಿ ವ್ಯಾಪಾರವನ್ನು ಪ್ರಾರಂಭಿಸಲು ಉದ್ಯೋಗ ಪರಿವರ್ತನೆಗಳನ್ನು ಅನುಭವಿಸಬಹುದು. ಈ ಸ್ಥಿತ್ಯಂತರಗಳ ಸಮಯದಲ್ಲಿ, ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಗೆ ವ್ಯಕ್ತಿಗಳು ಗುರಿಯಾಗುವಂತೆ ಆರೋಗ್ಯ ವಿಮಾ ರಕ್ಷಣೆಯಲ್ಲಿ ಅಂತರಗಳಿರಬಹುದು. ವೈಯಕ್ತಿಕ ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿರಂತರ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಬಹುದು ಮತ್ತು ಉದ್ಯೋಗ ಪರಿವರ್ತನೆಯ ಸಮಯದಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸುವ ಅಪಾಯವನ್ನು ತಗ್ಗಿಸಬಹುದು.

ಕಡಿಮೆ ಪ್ರೀಮಿಯಂನ ಪ್ರಯೋಜನ

ವಿಮಾ ಕಂತುಗಳನ್ನು ನಿರ್ಧರಿಸುವಲ್ಲಿ ವಯಸ್ಸು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಯುವ ಪಾಲಿಸಿದಾರರಿಗೆ ಹಳೆಯ ಗ್ರಾಹಕರಿಗಿಂತ ಕಡಿಮೆ ಪ್ರೀಮಿಯಂ ವಿಧಿಸಲಾಗುತ್ತದೆ. ಭವಿಷ್ಯದಲ್ಲಿ ಅವರು ಯಾವುದೇ ಜೀವನಶೈಲಿ ಕಾಯಿಲೆಗೆ ಒಳಗಾದಾಗ ಹೆಚ್ಚಿದ ಪ್ರೀಮಿಯಂಗಳು ಅಥವಾ ವ್ಯಾಪ್ತಿಗೆ ನಿರ್ಬಂಧಗಳ ಬಗ್ಗೆ ಚಿಂತಿಸದೆಯೇ ಅದನ್ನು ತಕ್ಷಣವೇ ಆವರಿಸಲಾಗುತ್ತದೆ ಎಂದು ಇದು ಖಚಿತಪಡಿಸುತ್ತದೆ.

ತೆರಿಗೆ ಪ್ರಯೋಜನ

ವೈಯಕ್ತಿಕ ಆರೋಗ್ಯ ವಿಮೆಗೆ ಪಾವತಿಸಿದ ಪ್ರೀಮಿಯಂಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಡಿ ಅಡಿಯಲ್ಲಿ ತೆರಿಗೆ ವಿನಾಯಿತಿಗಳಿಗೆ ಅರ್ಹವಾಗಿವೆ. ಈ ನಿಬಂಧನೆಯು ವ್ಯಕ್ತಿಗಳಿಗೆ ತೆರಿಗೆಗಳನ್ನು ಉಳಿಸಲು ಅನುಮತಿಸುತ್ತದೆ. ಸಂಭಾವ್ಯ ಉಳಿತಾಯ ತೆರಿಗೆಯ ಆದಾಯವು 75,000 ರೂ. ವರೆಗೆ ಇರುತ್ತದೆ. ವೈಯಕ್ತಿಕ ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡುವ ಮೂಲಕ ವ್ಯಕ್ತಿಗಳು ತಮ್ಮ ಯೋಗಕ್ಷೇಮವನ್ನು ಭದ್ರಪಡಿಸಿಕೊಳ್ಳುವುದಲ್ಲದೆ ಒಟ್ಟಾರೆ ಆರ್ಥಿಕ ಆರೋಗ್ಯಕ್ಕೆ ಕೊಡುಗೆ ನೀಡುವ ಗಮನಾರ್ಹ ತೆರಿಗೆ ಪ್ರಯೋಜನಗಳನ್ನು ಸಹ ಪಡೆದುಕೊಳ್ಳುತ್ತಾರೆ.

ಪ್ರಾಮುಖ್ಯತೆ ತಿಳಿಯಿರಿ

ವೈಯಕ್ತಿಕ ಆರೋಗ್ಯ ವಿಮೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದು ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು ಆರೋಗ್ಯ ಆಯ್ಕೆಗಳ ಮೇಲೆ ಹೆಚ್ಚಿನ ಸ್ವಾಯತ್ತತೆಯನ್ನು ಹೊಂದಲು ನಿರ್ಣಾಯಕವಾಗಿದೆ.

ಬಹು ವಿಮಾ ಪಾಲಿಸಿಗಳ ಕುರಿತು ಸಂಪೂರ್ಣ ಸಂಶೋಧನೆ ನಡೆಸುವುದು, ಅವುಗಳ ವೈಶಿಷ್ಟ್ಯಗಳು, ಪ್ರಯೋಜನಗಳು ಮತ್ತು ವೆಚ್ಚಗಳನ್ನು ಹೋಲಿಸುವುದು ಮತ್ತು ಯೋಜನೆಯನ್ನು ಆಯ್ಕೆ ಮಾಡುವ ಮೊದಲು ಪ್ರತಿ ವೈಶಿಷ್ಟ್ಯವು ಕ್ಲೈಮ್‌ಗಳು ಮತ್ತು ವಿಮಾ ಮೊತ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸೂಕ್ತವಾಗಿದೆ. ವೈಯಕ್ತಿಕ ಆರೋಗ್ಯ ಅಗತ್ಯತೆಗಳನ್ನು ನಿರ್ಣಯಿಸಿ ಮತ್ತು ಹೆಚ್ಚು ಸೂಕ್ತವಾದ ಮತ್ತು ಸಾಕಷ್ಟು ವ್ಯಾಪ್ತಿಯನ್ನು ಒದಗಿಸುವಯೋಜನೆಯನ್ನು ಆಯ್ಕೆ ಮಾಡಿ.


ಗಮನದಲ್ಲಿ ಇರಲಿ

ವೈಯಕ್ತಿಕ ಆರೋಗ್ಯ ವಿಮೆಯನ್ನು ಆಯ್ಕೆ ಮಾಡುವಾಗ ಕೆಲವು ವಿಷಯಗಳು ಗಮನದಲ್ಲಿ ಇರಲಿ. ಖರೀದಿಸುವ ಮೊದಲು ಪಾಲಿಸಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ. ಪಾಲಿಸಿಯ ಕಾಯುವ ಅವಧಿ, ಹೊರಗಿಡುವಿಕೆ, ಸಹ-ಪಾವತಿ, ಕೊಠಡಿ ಬಾಡಿಗೆ ಮಿತಿ ಮತ್ತು ರೋಗದ ಉಪ-ಮಿತಿಗಳನ್ನು ಅರ್ಥಮಾಡಿಕೊಳ್ಳಿ. ಸರಿಯಾದ ಕವರೇಜ್ ಮೊತ್ತವನ್ನು ಹೊಂದಿರುವ ಪಾಲಿಸಿಯನ್ನು ಆಯ್ಕೆ ಮಾಡಿ. ಏಕೆಂದರೆ ಗಂಭೀರ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚವನ್ನು ಸರಿದೂಗಿಸಲು ಸಿದ್ಧರಾಗಿರಿ

ಯೋಜನೆಯನ್ನು ಆಯ್ಕೆ ಮಾಡುವ ಮೊದಲು ವಿಮಾದಾರರ ಕ್ಲೈಮ್ ಸೆಟಲ್‌ಮೆಂಟ್ ಅನುಪಾತವನ್ನು ನೋಡಿ. ಇದು ವಿಮಾದಾರರು ಇತ್ಯರ್ಥಪಡಿಸಿದ ಕ್ಲೈಮ್‌ಗಳ ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ
ವೈದ್ಯಕೀಯ ತುರ್ತು ಸ್ಥಿತಿಯ ಸಮಯದಲ್ಲಿ ನಗದು ರಹಿತ ಆಸ್ಪತ್ರೆಗೆ ನೀಡುವ ನೀತಿಗಳನ್ನು ಗಮನಿಸಿ.

ಪಾಲಿಸಿ ಖರೀದಿಯ ಸಮಯದಲ್ಲಿ ಎಲ್ಲಾ ಪೂರ್ವ ಅಸ್ತಿತ್ವದಲ್ಲಿರುವ ಷರತ್ತುಗಳನ್ನು ತಿಳಿದುಕೊಳ್ಳಿ. ವಿಮೆಗಾರರು ಹಲವಾರು ವರ್ಷಗಳ ಪ್ರೀಮಿಯಂ ಪಾವತಿಯ ಅನಂತರವೂ ಗಮನಾರ್ಹ ಶೇಕಡಾವಾರು ಕ್ಲೈಮ್‌ಗಳನ್ನು ತಿರಸ್ಕರಿಸುತ್ತಾರೆ. ಏಕೆಂದರೆ ಖರೀದಿಯ ಸಮಯದಲ್ಲಿ ಗ್ರಾಹಕರು ವೈದ್ಯಕೀಯ ಸ್ಥಿತಿಯನ್ನು ಘೋಷಿಸಲಿಲ್ಲ ಎಂದು ಅವರು ನಿರ್ಧರಿಸಬಹುದು.

ವೈಯಕ್ತಿಕ ಆರೋಗ್ಯ ವಿಮೆಯು ಯುವ ವೃತ್ತಿಪರರಿಗೆ ಅಮೂಲ್ಯವಾದ ಹೂಡಿಕೆಯಾಗಿದೆ. ವಿಶೇಷ ವ್ಯಾಪ್ತಿಯನ್ನು ನೀಡುತ್ತದೆ. ಕೆಲಸದ ವರ್ಗಾವಣೆಯ ಸಮಯದಲ್ಲಿ ರಕ್ಷಣೆ, ಮತ್ತು ಅಗತ್ಯವಿರುವ ಸಮಯದಲ್ಲಿ ಅವರ ಒಟ್ಟಾರೆ ಇತರ ಹೂಡಿಕೆಗಳನ್ನು ಆರೋಗ್ಯ ವೆಚ್ಚಗಳಿಗೆ ತಿರುಗಿಸದಿರುವಂತೆ ಮಾಡುತ್ತದೆ. ಇದು ಸಮಗ್ರ ವ್ಯಾಪ್ತಿಯನ್ನು ಒದಗಿಸುತ್ತದೆ. ಆರೋಗ್ಯ ನಿರ್ಧಾರಗಳ ಮೇಲೆ ಹೆಚ್ಚಿನ ನಿಯಂತ್ರಣ ಮತ್ತು ಆರ್ಥಿಕ ಭದ್ರತೆಗೆ ಆರೋಗ್ಯ ವಿಮೆ ಪೂರಕವಾಗಿದೆ.

Continue Reading

ಮನಿ-ಗೈಡ್

Money Guide: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳಿವು

Money Guide: ಹೆಣ್ಣು ಈ ಸಮಾಜದ ಕಣ್ಣು ಎನ್ನುವ ಮಾತಿದೆ. ಹಿಂದಿನಿಂದಲೂ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಮಹತ್ವದ, ಪೂಜನೀಯ ಸ್ಥಾನ-ಮಾನ ನೀಡಲಾಗಿತ್ತು. ಆದರೆ ಕ್ರಮೇಣ ಲಿಂಗ ತಾರತಮ್ಯ ಹೆಚ್ಚಾಗಿ ಮಹಿಳೆಯರನ್ನು ಮೂಲೆಗುಂಪು ಮಾಡಲಾಯಿತು. ಇದೀಗ ಮತ್ತೆ ಪರಿಸ್ಥಿತಿ ಬದಲಾಗಿದೆ. ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾದನೆಯನ್ನು ತೋರುತ್ತಿದ್ದಾರೆ. ದೇಶದಲ್ಲಿ ಈಗಲೂ ಕಂಡು ಬರುವ ಲಿಂಗ ತಾರತಮ್ಯವನ್ನು ತೊಲಗಿಸಲು ಸರ್ಕಾರ ಜಾರಿಗೆ ತಂದ ಹಲವು ಯೋಜನೆಗಳ ಮಾಹಿತಿ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಹೆಣ್ಣು ಮಕ್ಕಳನ್ನು ಈ ದೇಶದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇಂದು ಹೆಣ್ಣು ಮಕ್ಕಳು ತಮ್ಮ ಇತಿಮಿತಿಯನ್ನು ಮೀರಿ ಎಲ್ಲ ರಂಗದಲ್ಲಿಯೂ ಸಾಧನೆ ತೋರುತ್ತಿದ್ದಾರೆ. ಆದರೂ ಲಿಂಗ ಅಸಮಾನತೆ ಎನ್ನುವುದು ಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಹೆಣ್ಣು-ಗಂಡು ಎಂಬ ತಾರತಮ್ಯ ಚಾಲ್ತಿಯಲ್ಲಿದೆ. ಇದೇ ಕಾರಣಕ್ಕೆ ಸಾಕಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ಪರಿಸ್ಥಿತಿಯನ್ನು ತೊಡೆದು ಹಾಕಲು, ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಲು ಸಾಕಷ್ಟು ಯೋಜನೆ ಜಾರಿಗೊಳಿಸುತ್ತಿದೆ. ಇಂದಿನ ಮನಿಗೈಡ್‌ (Money Guide)ನಲ್ಲಿ ದೇಶದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ವಿವರಿಸಲಾಗಿದೆ.

ಬೇಟಿ ಬಚಾವೋ, ಬೇಟಿ ಪಡಾವೋ (BBBP) ಯೋಜನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ರಲ್ಲಿ ಪ್ರಾರಂಭಿಸಿದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಲಿಂಗ ಆಧಾರಿತ ತಾರತಮ್ಯವನ್ನು ಪರಿಹರಿಸುವ ಮತ್ತು ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಜಿಲ್ಲಾ ಮಟ್ಟದ ಉಪಕ್ರಮಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಲಿಂಗ ಆಧಾರಿತ ಗರ್ಭಪಾತವನ್ನು ತಡೆಗಟ್ಟುವುದು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಶಿಕ್ಷಣವನ್ನು ಬೆಂಬಲಿಸುವುದು ಮುಂತಾದ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ.

ಸಿಬಿಎಸ್ಇ ಉಡಾನ್ (CBSE Udaan) ಯೋಜನೆ

ಈ ಯೋಜನೆಯನ್ನು ಮುಖ್ಯವಾಗಿ 11 ಮತ್ತು 12ನೇ ತರಗತಿಯ ಹುಡುಗಿಯರನ್ನು ಗುರಿಯಾಗಿಸಿಕೊಂಡು ಜಾರಿಗೆ ತರಲಾಗಿದೆ. ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಉಚಿತ ಕಲಿಕಾ ಉಪಕರಣಗಳ ವಿತರಣೆ, ವರ್ಚುವಲ್ ತರಗತಿ ಆಯೋಜನೆ ಮತ್ತು ವೃತ್ತಿ ಮಾರ್ಗದರ್ಶನವನ್ನು ನೀಡುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲು 10ನೇ ತರಗತಿಯಲ್ಲಿ ವಿಜ್ಞಾನ ಮತ್ತು ಗಣಿತದಲ್ಲಿ ಕನಿಷ್ಠ ಶೇ. 70 ಅಂಕ ಪಡೆಯುವುದು ಕಡ್ಡಾಯ.

ಬಾಲಿಕಾ ಸಮೃದ್ಧಿ (Balika Samriddhi) ಯೋಜನೆ

ಈ ವಿದ್ಯಾರ್ಥಿ ವೇತನವನ್ನು ಆರ್ಥಿಕವಾಗಿ ದುರ್ಬಲ ಕುಟುಂಬಗಳ ಹೆಣ್ಣು ಮಕ್ಕಳಿಗೆ ನೀಡಲಾಗುತ್ತದೆ. ಅವರ ಶಿಕ್ಷಣಕ್ಕೆ ನೆರವಾಗುವುದು ಈ ಯೋಜನೆ ಉದ್ದೇಶ. ಜನನದ ಸಮಯದಲ್ಲಿ ನಗದು ಹಸ್ತಾಂತರ ಮತ್ತು 18 ವರ್ಷದವರೆಗೆ ವಾರ್ಷಿಕ ವಿದ್ಯಾರ್ಥಿ ವೇತನವನ್ನು ಒದಗಿಸಲಾಗುತ್ತದೆ.

ಸುಕನ್ಯಾ ಸಮೃದ್ಧಿ (Sukanya Samriddhi) ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗೆ ಧನ ಸಹಾಯ ಮಾಡಲು ನೆರವಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಹೆಣ್ಣು ಮಗು ಮತ್ತು ಅವಳ ಆರ್ಥಿಕ ಅಗತ್ಯಗಳಿಗಾಗಿ ಸರ್ಕಾರದ ಬೆಂಬಲಿತ ಸಣ್ಣ ಡೆಪಾಸಿಟ್ ಯೋಜನೆಯಾಗಿದೆ. ‘ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನವನ್ನು ನೀಡುತ್ತದೆ. ಯೋಜನೆಯಿಂದ ಸಿಗುವ ಬಡ್ಡಿ ಅಥವಾ ಉಳಿತಾಯ ಹಣಕ್ಕೆ ತೆರಿಗೆ ಕಟ್ಟುವ ಆವಶ್ಯಕತೆ ಕೂಡ ಇರುವುದಿಲ್ಲ. ಹೆಣ್ಣು ಮಗುವಿನ ಜನನದ ನಂತರ ಆಕೆ 10 ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು, ಅಲ್ಲಿ ನೀವು ಕನಿಷ್ಠ 250 ರೂಪಾಯಿಗಳನ್ನು ಡೆಪಾಸಿಟ್ ಮಾಡಬೇಕಾಗುತ್ತದೆ. ನಂತರದ ವರ್ಷಗಳಲ್ಲಿ, ಕನಿಷ್ಠ 250 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ. ಒಂದು ಆರ್ಥಿಕ ವರ್ಷದಲ್ಲಿ ಡೆಪಾಸಿಟ್ ಇಡಬೇಕು.

ಮಾಧ್ಯಮಿಕ ಶಿಕ್ಷಣದ ಬಾಲಕಿಯರಿಗೆ ರಾಷ್ಟ್ರೀಯ ಪ್ರೋತ್ಸಾಹಕ (National Scheme of Incentive for Girls of Secondary Education) ಯೋಜನೆ

ಶಿಕ್ಷಣ ವಂಚಿತ ಹುಡುಗಿಯರ ಮಾಧ್ಯಮಿಕ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹಿಸುವ ಈ ಯೋಜನೆಯು 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ 3,000 ರೂ.ಗಳ ಸ್ಥಿರ ಠೇವಣಿಯನ್ನು ನೀಡುತ್ತದೆ. ಅರ್ಹ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು, 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ: Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್‌ ಅಪ್‌ ಲೋನ್‌ಗೆ ಅಪ್ಲೈ ಮಾಡಿ

ಇದಲ್ಲದೆ ವಿವಿಧ ರಾಜ್ಯಗಳಲ್ಲಿಯೂ ಹೆಣ್ಣು ಮಕ್ಕಳಿಗೆ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ. ಕರ್ನಾಟಕದ ಭಾಗ್ಯಶ್ರೀ ಯೋಜನೆ, ಮಧ್ಯಪ್ರದೇಶದ ಲಾಡ್ಲಿ ಲಕ್ಷ್ಮೀ ಯೋಜನೆ, ಮಹಾರಾಷ್ಟ್ರದ ಮಾಝಿ ಕನ್ಯಾ ಭಾಗ್ಯಶ್ರೀ ಯೋಜನೆ, ತಮಿಳುನಾಡಿನ ಮುಖ್ಯಮಂತ್ರಿಯ ಹೆಣ್ಣು ಮಕ್ಕಳ ರಕ್ಷಣೆ ಯೋಜನೆ ಇತ್ಯಾದಿ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿವೆ.

Continue Reading

ವಾಣಿಜ್ಯ

RBI Guideline: ಬ್ಯಾಂಕುಗಳಿಗೆ ಬಿಸಿ ಮುಟ್ಟಿಸಿದ ಆರ್‌ಬಿಐ; ಸಂಗ್ರಹಿಸಿದ ಹೆಚ್ಚುವರಿ ಶುಲ್ಕ ಮರುಪಾವತಿಗೆ ಸೂಚನೆ

RBI Guideline: ಮಹತ್ವದ ಬೆಳವಣಿಗೆಯೊಂದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವೈಜ್ಞಾನಿಕವಾಗಿ ಬಡ್ಡಿ ವಿಧಿಸಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಬ್ಯಾಂಕುಗಳು ಮತ್ತು ಇತರ ಸಾಲ ನೀಡುವ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದೆ. ಸಂಗ್ರಹಿಸಿದ ಹೆಚ್ಚುವರಿ ಬಡ್ಡಿ ಮತ್ತು ಇತರ ಶುಲ್ಕಗಳನ್ನು ಗ್ರಾಹಕರಿಗೆ ಮರುಪಾವತಿಸಲು ಸಲಹೆ ನೀಡಿದೆ. ಈ ಬಗ್ಗೆ ವಿವರ ಇಲ್ಲಿದೆ.

VISTARANEWS.COM


on

RBI Guideline
Koo

ನವದೆಹಲಿ: ಕೆಲವು ಬ್ಯಾಂಕುಗಳು ಮತ್ತು ಸಾಲ ನೀಡುವ ಸಂಸ್ಥೆಗಳು ಅವೈಜ್ಞಾನಿಕವಾಗಿ ಬಡ್ಡಿ ವಿಧಿಸಿ ಗ್ರಾಹಕರಿಗೆ ಅನ್ಯಾಯ ಎಸಗುತ್ತಿರುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕೂಡಲೇ ಈ ತಪ್ಪು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಹಕರಿಂದ ಪಡೆದುಕೊಂಡ ಹೆಚ್ಚುವರಿ ಶುಲ್ಕವನ್ನು ಮರುಪಾವತಿಸಬೇಕು ಎಂದು ನಿರ್ದೇಶನ ನೀಡಿದೆ (RBI Guideline).

2003ರಲ್ಲಿ ವಿವಿಧ ನಿಯಂತ್ರಿತ ಘಟಕಗಳಿಗೆ (REs) ಹೊರಡಿಸಲಾದ ನ್ಯಾಯೋಚಿತ ಆಚರಣೆಗಳ ಸಂಹಿತೆಯ ಮಾರ್ಗಸೂಚಿ ಪ್ರಕಾರ, ಸಾಲ ನೀಡುವವರು ಬಡ್ಡಿ ವಿಧಿಸುವಾಗ ನಿಯಮಗಳನ್ನು ಪಾಲಿಸಬೇಕು ಮತ್ತು ಪಾರದರ್ಶಕತೆಯನ್ನು ಪ್ರದರ್ಶಿಸಬೇಕು. “2023ರ ಮಾರ್ಚ್ 31ಕ್ಕೆ ಕೊನೆಗೊಂಡ ಅವಧಿಯ ಆರ್‌ಇಗಳ ಆನ್‌ಸೈಟ್‌ ಪರಿಶೀಲನೆಯ ಸಮಯದಲ್ಲಿ, ಸಾಲದಾತರು ಬಡ್ಡಿ ವಿಧಿಸುವಾಗ ಕೆಲವೊಂದು ನಿಯಮಗಳನ್ನು ಮುರಿದಿರುವುದು ಕಂಡು ಬಂದಿದೆʼʼ ಎಂದು ಆರ್‌ಬಿಐ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

“ನ್ಯಾಯಸಮ್ಮತ ಮತ್ತು ಪಾರದರ್ಶಕತೆಯ ಹಿತದೃಷ್ಟಿಯಿಂದ ಸಾಲಗಳ ವಿತರಣೆಯ ವಿಧಾನ, ಬಡ್ಡಿ ವಿಧಿಸುವುದು ಮತ್ತು ಇತರ ಶುಲ್ಕಗಳಿಗೆ ಸಂಬಂಧಿಸಿದಂತೆ ಈಗಿರುವ ನಿಯಮಗಳನ್ನು ಪರಿಶೀಲಿಸಲು ಮತ್ತು ಅಗತ್ಯವಿದ್ದರೆ ಸಿಸ್ಟಮ್ ಮಟ್ಟದ ಬದಲಾವಣೆಗಳು ಸೇರಿದಂತೆ ಹಲವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲ ಆರ್‌ಇಗಳಿಗೆ ನಿರ್ದೇಶಿಸಲಾಗಿದೆ” ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಆರ್‌ಬಿಐ ಗಮನಿಸಿದ್ದೇನು?

ಆರ್‌ಇಗಳ ಆನ್‌ಸೈಟ್‌ ಪರಿಶೀಲನೆ ವೇಳೆ ಗ್ರಾಹಕರಿಗೆ ಹಣವನ್ನು ವಿತರಿಸಿದ ದಿನಾಂಕದ ಬದಲಾಗಿ ಸಾಲ ಮಂಜೂರಾದ ದಿನದಿಂದ ಅಥವಾ ಸಾಲ ಒಪ್ಪಂದವನ್ನು ನಡೆಸಿದ ತಾರೀಕಿನಿಂದ ಬಡ್ಡಿ ವಿಧಿಸುವುದನ್ನು ಆರ್‌ಬಿಐ ಗಮನಿಸಿದೆ. ಅಲ್ಲದೆ ಚೆಕ್ ಅನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೊದಲೇ ಬಡ್ಡಿ ವಿಧಿಸಿದ ನಿದರ್ಶನವೂ ಬೆಳಕಿಗೆ ಬಂದಿದೆ ಎಂದು ಆರ್‌ಬಿಐ ಹೇಳಿದೆ.

ಗ್ರಾಹಕರಿಗೆ ಮರುಪಾವತಿಸಲು ಸೂಚನೆ

ಕೆಲವು ಸಂದರ್ಭಗಳಲ್ಲಿ ಒಂದು ಅಥವಾ ಹೆಚ್ಚಿನ ಕಂತುಗಳನ್ನು ಮುಂಚಿತವಾಗಿ ಸಂಗ್ರಹಿಸುತ್ತಿರುವುದು ಮತ್ತು ಬಡ್ಡಿಯನ್ನು ವಿಧಿಸಲು ಪೂರ್ಣ ಸಾಲದ ಮೊತ್ತವನ್ನು ಲೆಕ್ಕ ಹಾಕುತ್ತಿರುವುದನ್ನೂ ಗಮನಿಸಲಾಗಿದೆ. ಜತೆಗೆ ಗ್ರಾಹಕರೊಂದಿಗೆ ವ್ಯವಹರಿಸುವಾಗ ಬಡ್ಡಿ ವಿಧಿಸುವ ಕೆಲವೊಂದು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕೂಡ ಕಂಡು ಬಂದಿದೆ ಎಂದಿರುವ ಆರ್‌ಬಿಐ, “ಇವು ರಿಸರ್ವ್ ಬ್ಯಾಂಕ್‌ಗೆ ಅತ್ಯಂತ ಗಂಭೀರ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಸಂಗ್ರಹಿಸಿದ ಹೆಚ್ಚುವರಿ ಬಡ್ಡಿ ಮತ್ತು ಇತರ ಶುಲ್ಕಗಳನ್ನು ಗ್ರಾಹಕರಿಗೆ ಮರುಪಾವತಿಸಲು ಸಲಹೆ ನೀಡಲಾಗಿದೆʼʼ ಎಂದು ತಿಳಿಸಿದೆ.

ತಕ್ಷಣದಿಂದ ಜಾರಿ

ಸಾಲ ವಿತರಣೆಯ ಸಂದರ್ಭಗಳಲ್ಲಿ ನೀಡಲಾಗುವ ಚೆಕ್‌ಗಳಿಗೆ ಬದಲಾಗಿ ಆನ್‌ಲೈನ್‌ ಖಾತೆ ವರ್ಗಾವಣೆಗಳನ್ನು ಬಳಸಲು ಆರ್‌ಇಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಈ ನಿಯಮ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಆರ್‌ಬಿಐ ಪ್ರಕಟಿಸಿದೆ. ಸದ್ಯ ಆರ್‌ಬಿಐ ಹೊರಟಿಸಿರುವ ಈ ಪ್ರಕಟಣೆಯಿಂದ ದೇಶದ ಅನೇಕ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Kotak Mahindra Bank: ಹೊಸ ಕ್ರೆಡಿಟ್ ಕಾರ್ಡ್ ನೀಡದಂತೆ ಕೊಟಕ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ; ಕಾರಣ ಇಲ್ಲಿದೆ

Continue Reading
Advertisement
Gadag News
ಕರ್ನಾಟಕ17 mins ago

Gadag News: ಮುಂಡರಗಿ ಬಳಿ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರ ಸಾವು

Drought Relief
ಕರ್ನಾಟಕ60 mins ago

Drought Relief: ಚುನಾವಣೆ ಖರ್ಚಿಗಾಗಿ ಬರ ಪರಿಹಾರ ತಡೆಹಿಡಿದ ಕಾಂಗ್ರೆಸ್‌ ಸರ್ಕಾರ: ಆರ್‌.ಅಶೋಕ್‌

Prajwal Revanna Case No evidence against me its a conspiracy says HD Revanna
ಕರ್ನಾಟಕ1 hour ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Beef smuggling suspected Hindu activists pelt stones at vehicle
ಯಾದಗಿರಿ1 hour ago

Beef Smuggling: ಗೋಮಾಂಸ ಸಾಗಾಟ ಶಂಕೆ; ಹಿಂದುಪರ ಕಾರ್ಯಕರ್ತರಿಂದ ವಾಹನಕ್ಕೆ ಕಲ್ಲು ತೂರಾಟ

Narendra Modi
ದೇಶ1 hour ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Vijay Namdevrao Wadettiwar
ದೇಶ2 hours ago

ಮುಂಬೈ ದಾಳಿ ಉಗ್ರ ಅಜ್ಮಲ್‌ ಕಸಬ್‌ ನಿರಪರಾಧಿ ಎಂದ ಕಾಂಗ್ರೆಸ್‌ ನಾಯಕ; ಭುಗಿಲೆದ್ದ ವಿವಾದ!

Beer Shortage
ಕರ್ನಾಟಕ2 hours ago

Beer Shortage: ಬೇಸಿಗೆಯಲ್ಲಿ ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್; ಇನ್ನೆರಡು ತಿಂಗಳು ಬಿಯರ್‌ ಸಿಗೋದು ಕಷ್ಟ!

Torn Jeans Styling Tips
ಫ್ಯಾಷನ್2 hours ago

Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

lok sabha Election 2024 Bus Fare Hike
Lok Sabha Election 20242 hours ago

Lok Sabha Election 2024 : ಮತದಾನದ ಹಬ್ಬದಲ್ಲೂ ಲೂಟಿಗೆ ಇಳಿದ ಖಾಸಗಿ ಬಸ್‌! ವೋಟ್‌ ಹಾಕಲು ಬಸ್‌ ಏರುವವರಿಗೆ ಟಿಕೆಟ್ ದುಬಾರಿ!‌

IPL 2024
Latest2 hours ago

IPL 2024 : ಚೆನ್ನೈ ತಂಡದ ಮಾರಕ ಬೌಲರ್ ಮಹೀಶ್​ ಪತಿರಾನಾ​ ಐಪಿಎಲ್​ನಿಂದ ಹೊರಕ್ಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case No evidence against me its a conspiracy says HD Revanna
ಕರ್ನಾಟಕ1 hour ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 hour ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌