weekly horoscope ; check astrological predictions for all zodiac signs for april may first week Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಏಪ್ರಿಲ್‌ 30 ರಿಂದ ಮೇ 06 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೇಷ: ಕಸದಿಂದಲೇ ರಸ ಎಂಬುದ ಅರಿಯಿರಿ!

Weekly Horoscope

ಪೂರ್ವಾಪರ ವಿಚಾರಗಳ ಬಗೆಗೆ ಸೂಕ್ತವಾಗಿ ತಿಳಿದು ಹೆಜ್ಜೆ ಇರಿಸುವ ಪ್ರಯತ್ನ ಮಾಡಿ. ಎಂತದೇ ಕ್ಲಿಷ್ಟ ಸಂದರ್ಭಗಳಲ್ಲೂ ಶನೈಶ್ವರನೇ ನಿಮ್ಮನ್ನು ಕಾಯುವ ರುದ್ರ ಶಕ್ತಿಯಾಗಿ ಮಾರ್ಪಾಡುಗೊಳ್ಳುತ್ತಾನೆ. ದುಡಿಯುವ ಶಕ್ತಿಯನ್ನು ಕೈಗಳಿಗೆ ಒದಗಿಸುತ್ತಾನೆ. ಮನಸ್ಸನ್ನು ನಿಯಂತ್ರಿಸಿ. ಯುದ್ಧದ ಮುನ್ನವೇ ಸೋಲಲು ತಯಾರಾಗಲು ಮುಂದಾಗದಿರಿ. ಕಸದಿಂದಲೇ ರಸ ಎಂಬುದನ್ನು ಅರಿತಿರಿ. ಚಿನ್ನ, ಬೆಳ್ಳಿ, ಮುತ್ತು ರತ್ನ ವ್ಯಾಪಾರಗಳಿಗಿಂತ ರದ್ದಿ ಸಾಮಾನು, ಕಬ್ಬಿಣದ ವಸ್ತುಗಳು ಭಾಗ್ಯ ತರಬಹುದಾಗಿದೆ. ಶ್ರೀ ಹರಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪೂರ್ವ

ವೃಷಭ: ಶನೈಶ್ವರನಿಂದ ಬದುಕು ಬಂಗಾರ

Weekly Horoscope

ಸುಖದ ದಾರಿಯು ಜರೂರಾಗಿ ಸಿಕ್ಕಿದರೆ ದುಡಿದು ಕೋಟಿ ಕೋಟಿ ಸಂಪಾದಿಸಬಲ್ಲೆ ಎಂಬ ಯೋಚನೆಯಲ್ಲೇ ಇರಬೇಡಿ. ಜೀವನದ ಓಟದಲ್ಲಿ ಕಟ್ಟ ಕಡೆಗೆ ನೂರಕ್ಕೆ ನೂರು ಸುಖಿ ತಾನು ಎಂದು ತಿಳಿಯುವ ವ್ಯಕ್ತಿ ಇಲ್ಲವೇ ಇಲ್ಲ. ಜಗತ್ತಿನಲ್ಲಿ ಇರುವ ಸುಖವೇ ಅದ್ಭುತ ಎಂದರಿತು ಮುಂದಡಿ ಇರಿಸಿ. ನಿಮ್ಮ ಬದುಕನ್ನು ಬಂಗಾರವಾಗಿಸುವ ಶನೈಶ್ವರ ಹಾಗೂ ಕೇತು ಗ್ರಹಗಳು ಅಮಿತ ಉತ್ಸಾಹವನ್ನು, ಲವಲವಿಕೆಯನ್ನು ನಿಮ್ಮಲ್ಲಿ ತುಂಬಿ ಅಗಾಧವಾದುದನ್ನು ಸಾಧಿಸುವ ದಾರಿ ತೋರಬಲ್ಲರು. ಗಣೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ನೈಋತ್ಯ

ಮಿಥುನ: ಗೊಂದಲ ಬಿಡಿ, ಗುರಿಯತ್ತ ಮುನ್ನೆಡೆಯಿರಿ

Weekly Horoscope

ಅಗಾಧವಾದ ಗುರು ಬಲ, ಕೃಷ್ಣವೇಣಿ ತಟಿನೀ ತೀರದಲ್ಲಿ ಸಂಸ್ಥಾಪಿತಳಾದ ಮಾಯಿ ದುರ್ಗಾಂಬಾ ನಿಮಗೆ ಸಂಭ್ರಮ ತರುವ ವಿಚಾರದಲ್ಲಿ ಕಟಿಬದ್ಧ ಎನ್ನಬಹುದು. ನಿಮ್ಮ ದ್ವಿಸ್ವಭಾವದ ರೀತಿ ನೀತಿಗಳಾಗಿರುವ, ಅದು, ಇದು, ಹಾಗೆ, ಹೀಗೆ ಎಂದು ಬದಲಾಗುವ ಯೋಚನೆಗಳ ಕಾರಣದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ವಿಷಕಕ್ಕುವ ರಾಹುವೇ ಲಾಭ ಒದಗಿಸುವ ಶ್ರೀ ಮನ್ನಾರಾಯಣನಾಗಿರುವಾಗ ನಿಮ್ಮ ಗುರಿ ತಲುಪಲು ಪ್ರಯತ್ನಿಸಿ. ಗೆಲುವಿಗೆ ಶ್ರೀ ದೇವಿಯ ಸಹಾಯವಿದೆ. ಅವಳನ್ನು ಸ್ತುತಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಉತ್ತರ

ಕಟಕ: ಕಾಲಾಯ ತಸ್ಮೈ ನಮಃ ಎಂಬುದ ತಿಳಿದಿರಿ

Weekly Horoscope

ಮನೆಯಲ್ಲಿಯೇ ಶಾಂತಿ ಸಿಗದು ಎಂದಾದರೆ ಮನಸ್ಸು ರೋಸಿ ಹೋಗುತ್ತದೆ. ನಿರಂತರವಾದ ಶೂಲದಿಂದ ಶನೈಶ್ವರ ತಿವಿದು ತತ್ತರಿಸುವಂತೆ ಮಾಡುತ್ತಿದ್ದಾನೆ ಎಂಬುದು ಸರಿಯೇ. ಅಷ್ಟಮ ಶನಿ ಕಾಟದಿಂದ ಒದ್ದಾಟದಲ್ಲಿ ಇದ್ದೀರಿ. ಬಿರುಗಾಳಿಯಾಗುವ ಮನದ ಸ್ಥಿತಿಗತಿಗಳನ್ನು ನಿಯಂತ್ರಿಸಿ. ಮಾತು ಕಡಿಮೆ ಮಾಡಿ. ನೀವು ಬುದ್ಧಿವಂತರೇ ಸರಿ. ಆದರೆ ಕಾಲ ಘಟ್ಟದ ಈ ಬಿಂದುವಿನಲ್ಲಿ ಮಹಾ ದಡ್ಡನೊಬ್ಬ ವಿದ್ವಾಂಸ ಎಂದು ಪೂಜಿತನಾಗಬಹುದು. ಕಾಲ ಹಾಗಿದೆ. ಕಾಲಾಯ ತಸ್ಮೈ ನಮಃ ಎಂಬುದನ್ನು ತಿಳಿದಿರಿ. ಮಾರುತಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಈಶಾನ್ಯ

ಸಿಂಹ: ಹೊಸ ಕೆಲಸ, ಪ್ರಮೋಷನ್‌ ಪಡೆಯಲು ಸಕಾಲ

Weekly Horoscope

ನಿಮ್ಮಲ್ಲಿ ಸಿಂಹ ಶಕ್ತಿಯೂ ಯುಕ್ತಿಯೂ ಇದೆ. ಬಿರುಸಾಗಿ ಇರುವ ಧೂರ್ತರನ್ನು ನಿಗ್ರಹಿಸುವ ಒರಟುತನವೂ ಇದೆ. ಆದರೆ ಒರಟುತನ ಬೇಡ. ನುಡಿದರೆ ಮುತ್ತಿನ ಹಾರದಂತಿರಬೇಕು. ಬಸವಣ್ಣನವರ ಈ ವಚನವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಧೈರ್ಯ, ಸಾಹಸ, ಬೌದ್ಧಿಕ ಶಕ್ತಿ ಇತ್ಯಾದಿ ಸರ್ವ ಸಂಪನ್ನತೆಗಳನ್ನು ಹೊಂದಿದ ನೀವು ಈಗ ಹೊಸ ಕೆಲಸವನ್ನು ಸಂಪಾದಿಸಿಕೊಳ್ಳಬಲ್ಲಿರಿ. ಇರುವಲ್ಲೇ ಪ್ರಮೋಷನ್‌ ಪಡೆಯಬಲ್ಲಿರಿ. ವಿದೇಶಕ್ಕೆ ಹೋಗಿ ಕೆಲಸ ಮಾಡುವ ಯೋಚನೆ ಕೈ ಬಿಡದಿರಿ. ದುರ್ಗಾಳನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ದಕ್ಷಿಣ

ಕನ್ಯಾ: ಆಳಾಗಿ ದುಡಿದರೆ ಅರಸನಾಗಿ ಆಳುವಿರಿ!

Weekly Horoscope

ನಿಮ್ಮ ಮನೆಯಂಗಳದಲ್ಲಿ ಪಂಡಿತರು, ವಿದ್ವಾಂಸರು ಸೇರಿ ನಿಮ್ಮ ಜತೆಗಿನ ಸ್ನೇಹ ಬಯಸುವ ಕಾಲ ಇದು. ಯಾಕೆಂದರೆ ನಿಮಗೀಗ ಚುನಾವಣೆಯಿರಲಿ, ಯಾರನ್ನೇ ದೊರೆಯಾಗಿಸುವ ಕಿಂಗ್‌ ಮೇಕರ್‌ ಶಕ್ತಿ ಇರಲಿ, ನಿಯಂತ್ರಣ ಸಾಧಿಸಿ ಸೊಗಸಾಗಿ ಮಾತನಾಡಿ ಜನಮನ ಗೆಲ್ಲುವ ಪ್ರತಿಭೆಯೇ ಇರಲಿ, ಒಳ್ಳೆಯ ವರ್ಚಸ್ಸನ್ನು ಒದಗಿಸುವ ಸಂಪನ್ನತೆಯನ್ನು ಪಡೆದಿದೆ. ಆಳಾಗಿ ದುಡಿಯುವ ಉತ್ಸಾಹ ತೋರಿದರೆ ಅರಸನಾಗಿ ಉಣ್ಣುವ ಅದೃಷ್ಟವೂ ಘನವಾಗಿದೆ. ಶ್ರೀ ಲಕ್ಷ್ಮೀ ವಲ್ಲಭ ವೇಣುಗೋಪಾಲಸ್ವಾಮಿಯನ್ನು ಆರಾಧಿಸಿ, ಒಳಿತಿದೆ.
ಶುಭ ಸಂಖ್ಯೆ : 8 ಶುಭ ದಿಕ್ಕು: ವಾಯವ್ಯ

ತುಲಾ: ಆತ್ಮವಿಶ್ವಾಸವೇ ಗೆಲುವಿನ ಮೆಟ್ಟಿಲು

Weekly Horoscope

ಮಾತು ತೂಕಬದ್ಧವಾಗಿರಲಿ. ಮೌನವೂ ತೊಂದರೆ ತರಬಹುದು. ಪಂಚಮಶನಿ ಕಾಟದಿಂದಾಗಿ ನಿಮಗೆ ರಾಹು, ಕೇತು, ಚಂದ್ರ, ಶನೈಶ್ವರರು ಹಲವು ತೊಂದರೆಗಳಿಗೆ ಕಾರಣರಾಗುವ ಸಂದರ್ಭ ಅಧಿಕವೇ ಆದರೂ ಆತ್ಮವಿಶ್ವಾಸವಿರಲಿ. ಯಾವುದೋ ಕಿವಿಗಳು ಎಷ್ಟೇ ಗೋಗರೆದರೂ ನಿಮ್ಮ ನೋವಿನ ಮಾತುಗಳನ್ನು ಕೇಳಿಸಿಕೊಳ್ಳಲಾರವು. ಕೇಳಿಸಿಕೊಳ್ಳುವ ಹೃದಯವಂತಿಕೆ ದೇವರಿಂದ ಮಾತ್ರ ಸಾಧ್ಯ. ಮನೆದೇವರು, ಮಾರುತಿ, ದುರ್ಗಾ ಹಾಗೂ ಗಣೇಶರನ್ನು ಆರಾಧಿಸಿ. ಅನಿರೀಕ್ಷಿತ ಸಹಾಯ ನಿಮಗೆ ಪ್ರಾಪ್ತವಾಗುತ್ತದೆ.
ಶುಭ ಸಂಖ್ಯೆ : 4 ಶುಭ ದಿಕ್ಕು: ನೈಋತ್ಯ

ವೃಶ್ಚಿಕ: ವಿವಾಹಾಪೇಕ್ಷಿಗಳಿಗೆ ಶುಭ ಕಾಲ

Weekly Horoscope

ಎಂದೂ ಸಹಕಾರಿಯಾಗದ ಶನೈಶ್ವರ ನಿಮಗೆ ಅತುಳ ಬಲವನ್ನು ಒದಗಿಸುತ್ತಾನೆ. ನಂಬಿಕೆ ಇಡಿ. ಅಂದುಕೊಂಡಿದ್ದು ತುಸು ವಿಳಂಬ ನೆರವೇರಿದರೆ ತಾಳ್ಮೆ ಕಳಕೊಳ್ಳದಿರಿ. ವಿಳಂಬವಾದರೂ ಸರಿ ಪರಿಪೂರ್ಣವಾದ ಯಶಸ್ಸು ಶತಃಸಿದ್ಧ. ದಾಂಪತ್ಯದ ವಿಷಯದಲ್ಲಿ ಸಹಕಾರ, ಹೊಂದಾಣಿಕೆ ನಿಮಗೆ ಲಭ್ಯವಾಗಲಿದೆ. ವಿವಾಹಾಪೇಕ್ಷಿಗಳಿಗೆ ಇದು ಕನಸು ಈಡೇರಲು ಶುಭ ಸಂದರ್ಭವೂ ಆಗಿದೆ. ಹಠತ್ತಾದ ಆರೋಗ್ಯದಲ್ಲಿನ ಏರುಪೇರುಗಳ ಬಗೆಗೆ ನಿಗಾ ಇರಲಿ. ನಿರ್ಜಲೀಕರಣದ ತೊಂದರೆ ಎದುರಾದೀತು. ದುರ್ಗಾಳ ಆರಾಧನೆಯಿಂದ ಒಳಿತು.
ಶುಭ ಸಂಖ್ಯೆ : 2 ಶುಭ ದಿಕ್ಕು: ದಕ್ಷಿಣ

ಧನಸ್ಸು: ಬಾಳ ಸಂಗಾತಿಯೊಂದಿಗೆ ಆಪ್ತವಾಗಿರಿ!

Weekly Horoscope

ನಿಮ್ಮ ಬೆಂಬಲಕ್ಕೆ ಘನವಾದ ಶಕ್ತಿಯ ಮೂಲ ನಿಧಿಯೇ ಶನೈಶ್ವರನಾಗಿದ್ದಾನೆ. ವೈರಿಗಳನ್ನು ಹಣಿಯುವ ಶಕ್ತಿ ಪಡೆಯುತ್ತೀರಿ. ದೈವ ಬಲ ನಿಮ್ಮ ದೊಡ್ಡ ಆಸ್ತಿ. ಗಣೇಶನ ಆರಾಧನೆ ಮುಖ್ಯವಾಗಲಿ. ಹಿರಿಯರ ಆಸ್ತಿಯೇ ಇರಲಿ. ಇನ್ನೇನೋ ವಿಧದ ಪ್ರಾಪ್ತಿಗಳೇ ಇರಲಿ ನಿಮಗೆ ಲಭ್ಯವಾಗಲು ಇದು ಸಕಾಲ. ಬಾಳ ಸಂಗಾತಿಯ ಜತೆ ಆಪ್ತವಾಗಿ ಮಾತನಾಡಿ. ಹಲವು ರೀತಿಯ ಒತ್ತಡಗಳಿಂದ ದೂರ ಸರಿಯಲು ಇದು ಸಂಜೀವಿನಿಯಾಗಿದೆ. ರಾಹು ಪೀಡೆಯಿಂದಾಗಿ ಕಿರಿಕಿರಿ ಇದೆ. ಮಕ್ಕಳನ್ನು ಮೃದುಮಾತುಗಳಿಂದ ಸಂತೈಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪೂರ್ವ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ಎಲ್ಲರನ್ನೂ ಯೋಚಿಸದೇ ನಂಬಬೇಡಿ!

Weekly Horoscope

ಹೊಸ ಹೊಸ ಅನುಭವ ಪಡೆಯಲಿದ್ದೀರಿ. ʻʻದುಷ್ಮಾನ್‌ ಕಹಾ ಹೈʼʼ ಎಂದು ಕೇಳಿದರೆ ʻʻದುಷ್ಮನ್‌ ಬಗಲ್‌ ಮೇ ಹೈʼʼ ಎಂಬ ಆಶ್ಚರ್ಯ ಚಕಿತ ಉದ್ಗಾರ ನಿಮ್ಮ ಬಾಯಿಂದ ಹೊರಬರಬಹುದು. ಹೀಗಾಗಿ ಎಲ್ಲರನ್ನೂ ಸರ್ರನೆ ನಂಬದಿರಿ. ಬೆನ್ನಿಗೆ ಚೂರಿ ಹಾಕುವ ಜನ ಧೂರ್ತತನ ತೋರಬಲ್ಲ, ದರಿದ್ರತನದಿಂದ ನಿಮ್ಮ ಮನಸ್ಸಿಗೆ ಖೇದ ತರುವ ಸಂದರ್ಭ ಆಪ್ತರಿಂದಲೇ ನಿರ್ಮಾಣವಾಗುತ್ತದೆ. ಆರ್ಥಿಕ ಬಲಾಢ್ಯತೆ ನಿಮಗೆ ಒದಗಿದರೂ ಟೋಪಿ ಹಾಕುವವರಿದ್ದಾರೆ ಎಚ್ಚರ. ರಾಮರಕ್ಷಾಸ್ತ್ರೋತ್ರ ಓದಿ. ಬಿರುಗಾಳಿಯನ್ನು ತಡೆಯಿರಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಆಗ್ನೇಯ

ಕುಂಭ: ತಪ್ಪು ಆಗದಂತೆ ಎಚ್ಚರಿಕೆ ವಹಿಸಿ

Weekly Horoscope

ಶುಕ್ರ ಹಾಗೂ ಬುಧರಿಂದ ಸಮಾಧಾನದ ನಿಟ್ಟುಸಿರು ಬಿಡಬಲ್ಲಿರಿ. ಬಿಟ್ಟರೆ ಕುಜ, ಕೇತು, ರಾಹು, ರವಿ ಕಾಡಬಲ್ಲರು. ಯಾಕೆಂದರೆ ಸಾಡೇಸಾತಿ ದಿನಗಳಿವು. ಶತ್ರುಗಳು ಮಾನಸಿಕ ಹಿಂಸೆ ಕೊಡುತ್ತಾರೆ. ಹೀಗಾಗಿ ವೈರಿಗಳನ್ನು ಸೃಷ್ಟಿಸಿಕೊಳ್ಳಬೇಡಿ. ವಾದವಿವಾದಗಳು ಬೆಳೆಯದಂತೆ ಜಾಣ್ಮೆ ತೋರಿ. ತಪ್ಪು ಸಂಭವಿಸಲಿ ನಿಮ್ಮಿಂದ ಎಂದು ಸೂಕ್ತ ಸಂದರ್ಭಕ್ಕಾಗಿ ಕಾದಿರುವ ಜನ ಸರತಿ ಸಾಲಲ್ಲಿ ನಿಂತಿದ್ದಾರೆ. ನೀವು ಅಯೋಗ್ಯರು ಎಂದು ಪ್ರಚಾರ ಮಾಡುತ್ತಾರೆ. ಎಚ್ಚರ ಇರಲಿ. ಹನುಮಾನ್‌ ಚಾಲೀಸಾ ಓದಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ಮೀನ: ಮಕ್ಕಳಿಂದ ಕಿರಿಕಿರಿ ಸಾಧ್ಯತೆ

Weekly Horoscope

ಹಲವಾರು ಹಸಿರು ಫಲವಂತಿಕೆಯ ದೊಡ್ಡ ಅಂಗಳ ಕಂಡರೂ ವಾಸ್ತವದಲ್ಲಿ ಅದು ಬರಡು ಭೂಮಿಯಾಗಿ ಬಿಡುತ್ತದೆ. ಗುರು ಬಲ ಇದ್ದರೂ ರಾಹುವು ಗುರುವಿನ ಕೈ ಕಟ್ಟಿದ್ದಾನೆ. ಉತ್ತಮವಾದರೂ ಚಂದ್ರನ ಬಲ ಸಾಕಾಗದು. ಮಕ್ಕಳು ಕಿರಿಕಿರಿ ತರಬಹುದಾಗಿದೆ. ಕುಜನಿಂದ ಒಂದು ದೃಢ ಚಿತ್ತವು ಒದಗಿ ಬರಲು ಸಾಧ್ಯವಿದೆ. ಆದರೆ ಇದೊಂದೇ ಬಲ ಸಾಕಾಗದು. ಆದರೂ ಕೆಲಸದ ಸ್ಥಳದಲ್ಲಿ ಕೆಲವು ಸಹೃದಯರು ಸಿಗಲು ಸಾಧ್ಯತೆ ಇದೆ. ದಶರಥರಾಜ ವಿರಚಿತ ಶನೈಶ್ವರ ಸ್ತ್ರೋತ್ರ ಪಠಿಸಿದರೆ ಕ್ಷೇಮ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ, ಕೊಹ್ಲಿಯ ನೆರವು ಸ್ಮರಿಸಿದ ಕೆ. ಎಲ್ ರಾಹುಲ್​

IPL 2024 : ರಣಜಿ ಟ್ರೋಫಿಯನ್ನು ಆಡುವ ಮೂಲಕ
ಉತ್ತಮ ಆಟಗಾರನಾಗಲು ನಾನು ತೆಗೆದುಕೊಂಡ ಸಮಯವು ಬಹುಶಃ 7-8 ಋತುಗಳು. ಆದರೆ ಐಪಿಎಲ್​​ನಲ್ಲಿ ಆ ಎರಡು ತಿಂಗಳುಗಳು ನಾನು ತುಂಬಾ ಜ್ಞಾನ ಮತ್ತು ಅನುಭವ ಪಡೆದುಕೊಂಡೆ. ಎಲ್ಲವೂ ವೇಗವಾಗಿ ಮುಂದುವರಿಯಿತು ಎಂದು ರಾಹುಲ್ ಹೇಳಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಕೆಎಲ್ ರಾಹುಲ್ 2022ರಲ್ಲಿ ಪ್ರಾರಂಭವಾದಾಗಿನಿಂದ ಸಾಕಷ್ಟು ಸ್ಥಿರವಾಗಿರುವ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ನಾಯಕನಾಗಿದ್ದಾರೆ. ಆದರೆ ಅವರ ಹೃದಯದ ಒಂದು ಭಾಗವು ಅವರ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆಗಿದೆ ಎನ್ನಲಾಗುತ್ತಿದೆ.

2013 ರ ಋತುವಿಗೆ ಮುಂಚಿತವಾಗಿ ಜನಪ್ರಿಯ ಫ್ರಾಂಚೈಸಿಗೆ ಆಡುವುದಾಗಿ ಸಹಿ ಹಾಕಿದ ನಂತರ ರಾಹುಲ್ ಐಪಿಎಲ್​​ನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ರಾಯಲ್ ಚಾಲೆಂಜರ್ಸ್ ತಂಡ ಸೇರಲು ವಿರಾಟ್ ಕೊಹ್ಲಿ ಅವರನ್ನು ಕೇಳಿಕೊಂಡಿದರು. ಎಂದು ವಿಕೆಟ್ ಕೀಪರ್- ಬ್ಯಾಟರ್​ ಬಹಿರಂಗಪಡಿಸಿದ್ದಾರೆ. ವಾಸ್ತವವಾಗಿ, ಕೊಹ್ಲಿ ನನಗೆ ಆಯ್ಕೆ ನೀಡಲಿಲ್ಲ. ಆರ್​ಸಿಬಿ ಪರ ಆಡುವುದು ಯಾವಾಗಲೂ ತನ್ನ ಕನಸು ಎಂದು ಕರ್ನಾಟಕದ ಬ್ಯಾಟರ್​ ಹೇಳಿದ್ದಾರೆ.

ಸಹಿ ಹಾಕು ಅಂದಿದ್ದ ಕೊಹ್ಲಿ

ವಿರಾಟ್ ತರಬೇತುದಾರ ರೇ ಜೆನ್ನಿಂಗ್ಸ್ ಮತ್ತು ಇತರ ಸಹಾಯಕ ಸಿಬ್ಬಂದಿ ಹೋಟೆಲ್​ನಲ್ಲಿದ್ದರು. ವಿರಾಟ್ ‘ನೀವು ಈ ಒಪ್ಪಂದಕ್ಕೆ ಸಹಿ ಹಾಕಿ ಆರ್​ಸಿಬಿಗಾಗಿ ಆಡಲು ಬಯಸುವಿರಾ?’ ಎಂದು ಕೇಳಿದರು. ನಾನು, ‘ನೀವು ತಮಾಷೆ ಮಾಡುತ್ತಿದ್ದೀರಾ? ಅದು ಯಾವಾಗಲೂ ನನ್ನ ಕನಸಾಗಿತ್ತು ಎಂದು ಹೇಳಿದೆ. ಈ ವೇಳೆ ವಿರಾಟ್ ನಾನು ತಮಾಷೆ ಮಾಡುತ್ತಿದ್ದೇನೆ. ಇದು ಆಯ್ಕೆಯಲ್ಲ, ಈ ಒಪ್ಪಂದಕ್ಕೆ ಸಹಿ ಹಾಕಿ ಎಂದು ಹೇಳಿದರು. ಎಂದು ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ರಾಹುಲ್ ಮಾತನಾಡಿದ್ದಾರೆ.

ಆ ಎರಡು ತಿಂಗಳಲ್ಲಿ ನಾನು ಕಲಿತ ವಿಷಯಗಳು ಸಾಕಷ್ಟಿವೆ. ಕೇವಲ ರಣಜಿ ಟ್ರೋಫಿಯನ್ನು ಆಡುವ ಮೂಲಕ ಆಟಗಾರನಾಗಲು ನಾನು ತೆಗೆದುಕೊಂಡ ಸಮಯವು ಬಹುಶಃ 7-8 ಋತುಗಳು. ಆದರೆ ಐಪಿಎಲ್​​ನಲ್ಲಿ ಆ ಎರಡು ತಿಂಗಳುಗಳು ನಾನು ತುಂಬಾ ಜ್ಞಾನ ಮತ್ತು ಅನುಭವ ಪಡೆದುಕೊಂಡೆ. ಎಲ್ಲವೂ ವೇಗವಾಗಿ ಮುಂದುವರಿಯಿತು, “ಎಂದು ರಾಹುಲ್ ಹೇಳಿದ್ದಾರೆ.

ನಾನು ಆರ್ಸಿಬಿಯಲ್ಲಿ ಮುಗಿಸಲು ಬಯಸಿದ್ದೆ: ಕೆಎಲ್ ರಾಹುಲ್

ಕೆಎಲ್ ರಾಹುಲ್ ತಮ್ಮ ಅಧಿಕಾರಾವಧಿಯಲ್ಲಿ ಆರ್​ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. ಆದಾಗ್ಯೂ, ಅವರು ಇಲೆವೆನ್​ನಲ್ಲಿ ಶಾಶ್ವತ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅಂತಿಮವಾಗಿ 2016 ರ ಋತುವಿನ ನಂತರ ಬಿಡುಗಡೆ ಮಾಡಲಾಯಿತು. ತಮ್ಮ ಇಡೀ ಐಪಿಎಲ್ ವೃತ್ತಿಜೀವನವನ್ನು ಬೆಂಗಳೂರು ಮೂಲದ ಫ್ರಾಂಚೈಸಿಯಲ್ಲಿ ಕಳೆಯಲು ಇಷ್ಟಪಡುತ್ತೇನೆ ಎಂದು 32 ವರ್ಷದ ಆಟಗಾರ ಹೇಳಿದ್ದಾರೆ ಆರ್​ಸಿಬಿಯಿಂದ ಬಿಡುಗಡೆಯಾದ ನಂತರ, ರಾಹುಲ್ ಲಕ್ನೋಗೆ ಹೋಗುವ ಮೊದಲು ಸನ್ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದರು.

ಇದನ್ನೂ ಓದಿ: IPL 2024 : ಪಾಂಡ್ಯನನ್ನು ವಿಚಿತ್ರ ನಾಯಕ ಎಂದ ಮುಂಬೈ ಇಂಡಿಯನ್ಸ್​ ಆಲ್​ರೌಂಡರ್​​

“ನಾನು ಬೆಂಗಳೂರು ಪರ ಆಡಲು ಇಷ್ಟಪಡುತ್ತಿದ್ದೆ. ನಾನು ಅಲ್ಲಿಂದ ಪ್ರಾರಂಭಿಸಿದ್ದೆ, ನಾನು ಅಲ್ಲಿಯೇ ಮುಗಿಸಲು ಬಯಸಿದ್ದೆ. ಅದು ನನ್ನ ತಲೆಯಲ್ಲಿತ್ತು. ಆದರೆ ಐಪಿಎಲ್​ನ ಸೌಂ ದರ್ಯವೆಂದರೆ ನೀವು ವಿಭಿನ್ನ ಆಟಗಾರರೊಂದಿಗೆ ವಿಭಿನ್ನ ತಂಡಗಳಿಗೆ ಹೋಗಬಹುದು ,” ಎಂದು ರಾಹುಲ್ ಹೇಳಿದರು.

Continue Reading

ಕ್ರೀಡೆ

IPL 2024 : ಪಾಂಡ್ಯನನ್ನು ವಿಚಿತ್ರ ನಾಯಕ ಎಂದ ಮುಂಬೈ ಇಂಡಿಯನ್ಸ್​ ಆಲ್​ರೌಂಡರ್​​

IPL 2024: ಅಫ್ಘಾನಿಸ್ತಾನದ ಅನುಭವಿ ಸ್ಪಿನ್ ಆಲ್ರೌಂಡರ್ ಮೊಹಮ್ಮದ್ ನಬಿ ಅವರನ್ನು ಐಪಿಎಲ್ 2024 ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿತು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಬಿ ಶೂನ್ಯಕ್ಕೆ ಔಟಾಗಿದ್ದರು. ಅವರು ಬೌಲಿಂಗ್ ಮಾಡದಿದ್ದರೂ, ಅವರು ಅಶುತೋಷ್ ಶರ್ಮಾ ಮತ್ತು ಶಶಾಂಕ್ ಸಿಂಗ್ ಅವರ ಕ್ಯಾಚ್​​ಗಳನ್ನು ಪಡೆದಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಗುರುವಾರ ನಡೆದ ಐಪಿಎಲ್​​ 2024ರ (IPL 2024) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ 9 ರನ್​ಗಳ ರೋಚಕ ಗೆಲುವಿನ ನಂತರ, ಆಸಕ್ತಿದಾಯಕ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್​ ಮೊಹಮ್ಮದ್ ನಬಿ (Mohammed Nabi) ಆ ಪೋಸ್ಟ್​ ಅನ್ನು ಮರು ಹಂಚಿಕೊಂಡಿದ್ದಾರೆ. ಆ ಪೋಸ್ಟ್​​ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ವಿಚಿತ್ರ ಎಂದು ಹೇಳಲಾಗಿತ್ತು. ಅದನ್ನು ನಬಿ ಹಂಚಿಕೊಳ್ಳುವ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ. ಹಾರ್ದಿಕ್ ಪಾಂಡ್ಯ (Hardik Pandya) ಅವರ ಕೆಲವೊಂದು ನಿರ್ಧಾರಗಳ ಬಗ್ಗೆ ಈಗಾಗಲೇ ಐಪಿಎಲ್ ವಲಯದಲ್ಲಿ ಜೋರು ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ನವಿ ಕೂಡ ಅವರ ವಿರುದ್ಧ ತಿರುಗಿ ಬಿದ್ದರೇ ಎಂಬ ಅನುಮಾನ ವ್ಯಕ್ತಗೊಂಡಿದೆ.

ಇಜಾಜ್.ಅಜೀಜಿ 07 ಎಂಬ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೀಗೆ ಬರೆದಿದ್ದಾರೆ. ಅದು ಮುಂಬೈ ಇಂಡಿಯನ್ಸ್ ತಂಡದ ಕುರಿತಾಗಿದೆ. “ನಿಮ್ಮಲ್ಲಿ ನಾಯಕನ ಕೆಲವು ನಿರ್ಧಾರವು ತುಂಬಾ ವಿಚಿತ್ರ ಮತ್ತು ಆಶ್ಚರ್ಯಕರ. ತಂಡ ಜನರನ್ನು ಆಶ್ಚರ್ಯಗೊಳಿಸುತ್ತದೆ. ಅಂತೆಯೇ ನಬಿ ಇಂದು ಬೌಲಿಂಗ್ ಮಾಡಲಿಲ್ಲ ಎಂದು ಬರೆದುಕೊಂಡಿದೆ.

ಮತ್ತೊಂದು ಸ್ಟೋರಿಯಲ್ಲಿ ಹೀಗೆ ಬರೆಯಲಾಗಿದೆ. ” ಪ್ರೆಸಿಡೆಂಟ್​ (ಅಧ್ಯಕ್ಷ) ಬಹಳ ಅಗತ್ಯ ಸಮಯದಲ್ಲಿ ಗೇಮ್ ಚೇಂಜರ್! ಎರಡು ಕ್ಯಾಚ್ ಗಳು ಮತ್ತು ಒಂದು ರನ್ ಔಟ್ ಮಾಡಿದ್ದಾರೆ.

ಅಫ್ಘಾನಿಸ್ತಾನದ ಅನುಭವಿ ಸ್ಪಿನ್ ಆಲ್ರೌಂಡರ್ ಮೊಹಮ್ಮದ್ ನಬಿ ಅವರನ್ನು ಐಪಿಎಲ್ 2024 ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿತು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಬಿ ಶೂನ್ಯಕ್ಕೆ ಔಟಾಗಿದ್ದರು. ಅವರು ಬೌಲಿಂಗ್ ಮಾಡದಿದ್ದರೂ, ಅವರು ಅಶುತೋಷ್ ಶರ್ಮಾ ಮತ್ತು ಶಶಾಂಕ್ ಸಿಂಗ್ ಅವರ ಕ್ಯಾಚ್​​ಗಳನ್ನು ಪಡೆದಿದ್ದಾರೆ. ಇಬ್ಬರು ಆಟಗಾರರು ಪಿಬಿಕೆಎಸ್ ತಂಡವನ್ನು ಮುಂಬೈ ವಿರುದ್ಧ ಗೆಲುವಿನತ್ತ ಕೊಂಡೊಯ್ಯಲು ಮುಂದಾಗಿದ್ದರು. ಕೊನೆಯ ವಿಕೆಟ್ ಆಗಿ ರನ್​ ಔಟ್​ ಕಗಿಸೊ ರಬಾಡ ಅವರ ವಿಕೆಟ್​ ಕೂಡ ನಬಿಯ ಬೆಸ್ಟ್​ ಫೀಲ್ಡಿಂಗ್​ ಕೊಡುಗೆಯಾಗಿದೆ.

ಡಿಲೀಟ್ ಮಾಡಿದ ನಬಿ

ಮೊಹಮ್ಮದ್ ನಬಿ ಅವರು ಈ ಇನ್​ಸ್ಟಾಗ್ರಾಮ್ ಸ್ಟೋರಿಯನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಅವರು ಶೇರ್​ ಮಾಡಿದ್ದಾರೆ ಎನ್ನಲಾಗುವ ಪೋಸ್ಟ್ ಶುಕ್ರವಾರ ಮಧ್ಯಾಹ್ನ ಅವರ ಪ್ರೊಫೈಲ್​ನಲ್ಲಿ ಕಂಡಿರಲಿಲ್ಲ.

ಇನ್ಸ್ಟಾಗ್ರಾಮ್ ಬಳಕೆದಾರರು ಇಜಾಜ್.ಅಜೀಜಿ 07 ಎಂಬ ಡಿಸ್​ಪಲೇ ಹೆಸರಿನಿಂದ ಮಾಡಿದ ಮೂಲ ಪೋಸ್ಟ್ ಇನ್ನೂ ವ್ಯಕ್ತಿಯ ಹ್ಯಾಂಡಲ್​​ನಲ್ಲಿದೆ. ಹೀಗಾಗಿ ಮೊಹಮ್ಮದ್ ನಬಿ ಈ ಪೋಸ್ಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ವೈರಲ್ ಆಗಿರುವ ಸ್ಕ್ರೀನ್ ಶಾಟ್ ಎಂಐ ಶಿಬಿರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಆದಾಗ್ಯೂ, ಘಟನೆಗೆ ಸಂಬಂಧಿಸಿದಂತೆ ಎಂಐ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈನ ನಿಧಾನಗತಿಯ ಓವರ್ ರೇಟ್​​ಗಾಗಿ ಪಾಂಡ್ಯಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: Preity Zinta : ರೋಹಿತ್​ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್​

“ಏಪ್ರಿಲ್ 18 ರಂದು ಮುಲ್ಲಾನ್ಪುರದ ಪಿಸಿಎ ನ್ಯೂ ಇಂಟರ್​ನ್ಯಾಷನಲ್​​ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ತಂಡವು ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದರು. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್​ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧ. ಪಾಂಡ್ಯಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ” ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ

Continue Reading

ಪ್ರಮುಖ ಸುದ್ದಿ

Lok Sabha Election : ಕಾಂಗ್ರೆಸ್​ ಪರ ಶಾರುಖ್​ ಖಾನ್​ ಪ್ರಚಾರ; ಬಿಜೆಪಿಯಿಂದ ಆಕ್ಷೇಪ!; ವಿಡಿಯೊ ಇದೆ

Lok Sabah Election: ಪ್ರಣೀತಿ ಶಿಂಧೆ ಅವರು 2003-2004ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ. ಅವರು ಸೋಲಾಪುರ ಸಿಟಿ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ. ಲೋಕಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಸೋಲಾಪುರದಲ್ಲಿ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

VISTARANEWS.COM


on

lok sabha Election
Koo

ಮುಂಬಯಿ: ಮಹಾರಾಷ್ಟ್ರದ ಸೋಲಾಪುರದಲ್ಲಿ (Lok Sabha Election) ಕಾಂಗ್ರೆಸ್ ಅಭ್ಯರ್ಥಿ ಪ್ರಣೀತಿ ಶಿಂಧೆ ಪರ ಬಾಲಿವುಡ್ ಬಾದ್​ ಶಾ ಶಾರುಖ್ ಖಾನ್ (Shah Rukh Khan) ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಪ್ರಚಾರ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಜೆಪಿ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದು. ಕಾಂಗ್ರೆಸ್ ಪಕ್ಷದ ‘ಹಗರಣ’ ಎಂದು ಕರೆದಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಚುನಾವಣಾ ಆಯೋಗ ಮತ್ತು ಶಾರುಖ್ ಖಾನ್ ಅವರನ್ನು ಟ್ಯಾಗ್ ಮಾಡಿ ಪ್ರಚಾರದ ಬಗ್ಗೆ ಕೆಲವು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ . “ಕಾಂಗ್ರೆಸ್ ಪಕ್ಷವು ಜನರನ್ನು ನಾಚಿಕೆಯಿಲ್ಲದೆ ಮತ್ತು ಬಹಿರಂಗವಾಗಿ ಮೂರ್ಖರನ್ನಾಗಿಸಲು ಮುಂದಾಗಿದೆ.. ನಕಲಿ ಸಮೀಕ್ಷೆಗಳನ್ನು ಹರಡುವುದು, ಭಾರತ ವಿರೋಧಿ ನಿರೂಪಣೆಗಳನ್ನು ರಚಿಸುವುದು, ಎಐ ಬಳಸಿ ಸೆಲೆಬ್ರಿಟಿಗಳ ಡೀಪ್ ಫೇಕ್​​ಗಳನ್ನು ನಿರ್ಮಿಸುತ್ತದೆ. ಈ ಪಕ್ಷವು ಈಗಾಗಲೇ ಇವಿಎಂಗಳನ್ನು ದೂಷಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

ವರದಿಗಳ ಪ್ರಕಾರ ಇದು ಶಾರುಖ್ ಖಾನ್ ಅವರ ಹೋಲುವ ಇಬ್ರಾಹಿಂ ಖಾದ್ರಿ ಎಂಬುವರು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಇಬ್ರಾಹಿಂ ಖಾದ್ರಿ ಶಾರುಖ್ ಖಾನ್ ಅವರ ತದ್ರೂಪಿ ಎಂದೇ ಪ್ರಸಿದ್ದರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಅಭಿಮಾನಿಗಳನ್ನು ಹೊಂದಿದ್ದಾರೆ. ಶಾರುಖ್​ ಖಾನ್​ ಅವರ ರಯೀಸ್ ಸಿನಿಮಾ ಬಿಡುಗಡೆಯಾದಾಗ ಗುಜರಾತ್ ಮೂಲದ ಇಬ್ರಾಹಿಂ ಖಾದ್ರಿ ಖ್ಯಾತಿ ಪಡೆದುಕೊಂಡಿದ್ದರು. ಏಕೆಂದರೆ ಶಾರುಖ್​ ಅವರೊಂದಿಗಿನ ಖಾದ್ರಿ ಅವರ ಹೋಲಿಕೆ ಈ ವೇಳೆ ಗಮನಕ್ಕೆ ಬಂದಿತ್ತು. ಖಾದ್ರಿ ಶಾರುಖ್​ ಅವರಂತೆಯೇ ಮಾತನಾಡುವ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಶಾರುಖ್ ಅವರ ಸಿಗ್ನೇಚರ್ ಸ್ಟೈಲ್​ಗಳನ್ನು ನಕಲ ಮಾಡುತ್ತಾರೆ. ಅವರ ನೃತ್ಯ ಚಲನೆಗಳನ್ನೂ ಅನುಕರಣೆ ಮಾಡುತ್ತಾರೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶಾರುಖ್ ಅವರ ತದ್ರೂಪಿ ಖಾದರ್​ ಪೋನಿಟೈಲ್ ಹೊಂದಿದ್ದಾರೆ. ಜನರತ್ತ ಕೈ ಬೀಸುತ್ತಾ ತೆರೆದ ವಾಹನದಲ್ಲಿ ಸಾಗಿದ್ದಾರೆ. ಆವಾಹನದಲ್ಲಿ ರಾಹುಲ್ ಗಾಂಧಿ, ಪ್ರಣೀತಿ ಶಿಂಧೆ ಅವರ ಭಾವಚಿತ್ರವಿರುವ ಕಾಂಗ್ರೆಸ್ ಬ್ಯಾನರ್ ಇತ್ತು.

ಪ್ರಣೀತಿ ಶಿಂಧೆ ಅವರು 2003-2004ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ. ಅವರು ಸೋಲಾಪುರ ಸಿಟಿ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ. ಲೋಕಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಸೋಲಾಪುರದಲ್ಲಿ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. 2019 ರಲ್ಲಿ ಸುಶೀಲ್ ಶಿಂಧೆ ಸೋಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಜೈಸಿದ್ದೇಶ್ವರ ಸ್ವಾಮಿ ವಿರುದ್ಧ ಸೋತಿದ್ದರು. ಈ ಬಾರಿ ಸುಶೀಲ್ ಶಿಂಧೆ ಅವರ ಪುತ್ರಿಯ ವಿರುದ್ಧ ಬಿಜೆಪಿ ರಾಮ್ ಸಾತ್ಪುತೆ ಅವರನ್ನು ಕಣಕ್ಕಿಳಿಸಿದೆ. ರಾಮ್ ಅವರು ಮಹಾರಾಷ್ಟ್ರದ ಮಾಲ್ಶಿರಾಸ್ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.

ಇತ್ತೀಚೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ವೀಡಿಯೊ ವೈರಲ್ ಆಗಿತ್ತು.

Continue Reading

ಪ್ರಮುಖ ಸುದ್ದಿ

Narayana Murthy : 4.2 ಕೋಟಿ ರೂಪಾಯಿ ಡಿವಿಡೆಂಡ್​ ಜೇಬಿಗಿಳಿಸಿದ ನಾರಾಯಣ ಮೂರ್ತಿಯ 5 ತಿಂಗಳ ಮೊಮ್ಮಗ!

Narayana Murthy : ಕಳೆದ ವರ್ಷ ನವೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದ ಏಕಾಗ್ರ ರೋಹನ್ ಮೂರ್ತಿ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮೂರನೇ ಮೊಮ್ಮಗಳು. ಏಕಾಗ್ರಹ ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ಅವರ ಪುತ್ರ. ಕೃಷ್ಣ ಮತ್ತು ಅನೌಷ್ಕಾ, ಅಕ್ಷತಾ ಮೂರ್ತಿ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿಯರಾಗಿದ್ದಾರೆ.

VISTARANEWS.COM


on

Narayana Murthy
Koo

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರ ಮೊಮ್ಮಗ ಏಕಾಗ್ರ ರೋಹನ್ ಕೇವಲ ಐದು ತಿಂಗಳ ವಯಸ್ಸಿನಲ್ಲಿ ಇನ್ಫೋಸಿಸ್​ ಸಂಸ್ಥೆಯಿಂದ 4.2 ಕೋಟಿ ರೂ.ಗಳ ಲಾಭಾಂಶವನ್ನು ಪಡೆದುಕೊಂಡಿದ್ದಾರೆ. ನಾರಾಯಣ ಮೂರ್ತಿ ಅವರು ಕಳೆದ ತಿಂಗಳು ಇನ್ಫೋಸಿಸ್​​ನ 240 ಕೋಟಿ ಮೌಲ್ಯದ 15 ಲಕ್ಷ ಷೇರುಗಳನ್ನು (0.04% ಪಾಲನ್ನು ಪುಟ್ಟ ಬಾಲಕನಿಗೆ ನೀಡಿದ್ದರು. ಆ ಷೇರುಗಳಿಗೆ ಈಗ ದೊಡ್ಡ ಮೊತ್ತದ ಡಿವಿಡೆಂಡ್​ ಸಿಕ್ಕಿದೆ.

ಎಕ್ಸ್​ಚೇಂಜ್​ ಫೈಲಿಂಗ್ ಪ್ರಕಾರ, ಏಕಾಗ್ರ ಇನ್ಫೋಸಿಸ್​ನ 15,00,000 ಷೇರುಗಳನ್ನು ಹೊಂದಿದ್ದಾನೆ. ಈ ವ್ಯವಹಾರವನ್ನು “ಆಫ್-ಮಾರ್ಕೆಟ್” ನಡೆಸಲಾಯಿತು ಎಂದು ಫೈಲಿಂಗ್ ಬಹಿರಂಗಪಡಿಸಿದೆ.

ಕಳೆದ ವರ್ಷ ನವೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದ ಏಕಾಗ್ರ ರೋಹನ್ ಮೂರ್ತಿ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮೂರನೇ ಮೊಮ್ಮಗಳು. ಏಕಾಗ್ರಹ ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ಅವರ ಪುತ್ರ. ಕೃಷ್ಣ ಮತ್ತು ಅನೌಷ್ಕಾ, ಅಕ್ಷತಾ ಮೂರ್ತಿ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿಯರಾಗಿದ್ದಾರೆ.

ಶೇಕಡಾ 30ರಷ್ಟು ಲಾಭ ಹೆಚ್ಚಳ

ಇನ್ಫೋಸಿಸ್ ನಾಲ್ಕನೇ ತ್ರೈಮಾಸಿಕದಲ್ಲಿ ಲಾಭದಲ್ಲಿ 30% ಹೆಚ್ಚಳವನ್ನು ಘೋಷಿಸಿದೆ. ಕಳೆದ ವರ್ಷದ 6,128 ಕೋಟಿ ರೂ.ಗೆ ಹೋಲಿಸಿದರೆ 7,969 ಕೋಟಿ ರೂ.ಗೆ ತಲುಪಿದೆ. ಆದಾಯವು 37,923 ಕೋಟಿ ರೂ.ಗೆ ಸ್ವಲ್ಪ ಏರಿಕೆ ಕಂಡಿದೆ. ಮಾರ್ಚ್ 2024 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ, ಒಟ್ಟು ಲಾಭವು 8.9% ರಷ್ಟು ಏರಿಕೆಯಾಗಿ 26,233 ಕೋಟಿ ರೂ.ಗೆ ತಲುಪಿದೆ/ ಕಾರ್ಯಾಚರಣೆಗಳಿಂದ ವಾರ್ಷಿಕ ಆದಾಯವು 4.7% ರಷ್ಟು ಏರಿಕೆಯಾಗಿ 1,53,670 ಕೋಟಿ ರೂ.ಗೆ ತಲುಪಿದೆ. ಇನ್ಫೋಸಿಸ್ ಮಂಡಳಿಯು 2024ರ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 20 ರೂ.ಗಳ ಅಂತಿಮ ಲಾಭಾಂಶ ಶಿಫಾರಸು ಮಾಡಿದೆ. ಜೊತೆಗೆ ಪ್ರತಿ ಷೇರಿಗೆ 8 ರೂ.ಗಳ ವಿಶೇಷ ಲಾಭಾಂಶವನ್ನು ಶಿಫಾರಸು ಮಾಡಿದೆ. ಹೆಚ್ಚುವರಿಯಾಗಿ, ಇನ್ಫೋಸಿಸ್ ಜರ್ಮನಿಯ ಇನ್-ಟೆಕ್ ಸಂಸ್ಥೆಯನ್ನು 450 ಮಿಲಿಯನ್ ಯುರೋಗಳ ಒಪ್ಪಂದದಲ್ಲಿ ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ.

ಇದನ್ನೂ ಓದಿ: CET 2024 Exam: ಗಣಿತ, ಜೀವಶಾಸ್ತ್ರದ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ ವಿರುದ್ಧ ದೂರು; ಏಪ್ರಿಲ್‌ 24ಕ್ಕೆ ಸಮಿತಿ ರಚನೆಗೆ ಕೆಇಎ ನಿರ್ಧಾರ

ಮುಂದಿನ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ 1-3% ಆದಾಯದ ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ. ಸಂಶೋಧನಾ ಸಂಸ್ಥೆ ಮೋತಿಲಾಲ್ ಓಸ್ವಾಲ್ ಪ್ರಕಾರ, 2025ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಆದಾಯ ನಿರೀಕ್ಷೆಗಿಂತ ಕಡಿಮೆಯಾಗಿದೆ. ಆದರೆ ಇನ್ಫೋಸಿಸ್ ಮಧ್ಯಮಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ಅವರು ಊಹೆ ಮಾಡಿದ್ದಾರೆ. ಇನ್ಫೋಸಿಸ್ 2025 ರ ಹಣಕಾಸು ವರ್ಷದ ನಂತರ ವೇಗವಾಗಿ ಬೆಳೆಯಲು ಪ್ರಾರಂಭಿಸಬಹುದು ಎಂದು ಹೇಳಿದೆ. ಟಿಸಿಎಸ್​ನಂತ ಕಂಪನಿಗಳಿಗೆ ಹೋಲಿಸಿದರೆ ಇನ್ಪೋಸಿಸ್​ ಷೇರುಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ.

Continue Reading
Advertisement
IPL 2024
ಪ್ರಮುಖ ಸುದ್ದಿ5 mins ago

IPL 2024 : ಆರ್​ಸಿಬಿ, ಕೊಹ್ಲಿಯ ನೆರವು ಸ್ಮರಿಸಿದ ಕೆ. ಎಲ್ ರಾಹುಲ್​

Lok Sabha Election 2024
ಕರ್ನಾಟಕ17 mins ago

Lok Sabha Election 2024: ಕಾಂಗ್ರೆಸ್‌-ಬಿಜೆಪಿ ಮಧ್ಯೆ ʼಚೆಂಬುʼ ವಾರ್; ಗ್ಯಾರಂಟಿಗಳಿಂದ ಜನರಿಗೆ ಕಾಂಗ್ರೆಸ್‌ ಟೋಪಿ ಎಂದ ವಿಜಯೇಂದ್ರ

Summer Fashion
ಫ್ಯಾಷನ್22 mins ago

Summer Fashion: ಬದಲಾಯ್ತು ಜೆನ್‌ ಜಿ ಹುಡುಗರ ಸಮ್ಮರ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌

Instagram Reel
ದೇಶ33 mins ago

Instagram Reel: ಪ್ರಾಣಕ್ಕೇ ಕುತ್ತು ತಂದ ಇನ್‌ಸ್ಟಾಗ್ರಾಮ್‌ ರೀಲ್ಸ್‌; ಸಾಹಸ ಪ್ರದರ್ಶಿಸಲು ಹೋಗಿ 21 ವರ್ಷದ ಯುವಕ ಸಾವು

IPL 2024
ಕ್ರೀಡೆ48 mins ago

IPL 2024 : ಪಾಂಡ್ಯನನ್ನು ವಿಚಿತ್ರ ನಾಯಕ ಎಂದ ಮುಂಬೈ ಇಂಡಿಯನ್ಸ್​ ಆಲ್​ರೌಂಡರ್​​

Karnataka Weather Forecast
ಮಳೆ54 mins ago

Karnataka Weather : ವರ್ಷಾಘಾತಕ್ಕೆ ಉತ್ತರ ಕರ್ನಾಟಕ ಸುಸ್ತು; ರಾತ್ರಿಯೆಲ್ಲ ಗಾಳಿ ಸಹಿತ ಮಳೆಯಾರ್ಭಟ

lok sabha Election
ಪ್ರಮುಖ ಸುದ್ದಿ1 hour ago

Lok Sabha Election : ಕಾಂಗ್ರೆಸ್​ ಪರ ಶಾರುಖ್​ ಖಾನ್​ ಪ್ರಚಾರ; ಬಿಜೆಪಿಯಿಂದ ಆಕ್ಷೇಪ!; ವಿಡಿಯೊ ಇದೆ

Road accident between bike and Bolero near Mudgal Two dead
ಕರ್ನಾಟಕ1 hour ago

Road Accident: ಮುದ್ಗಲ್‌ ಬಳಿ ಬೈಕ್‌ – ಬುಲೇರೋ ನಡುವೆ ಅಪಘಾತ; ಸ್ಥಳದಲ್ಲೇ ಇಬ್ಬರು ಸಾವು

Wedding Saree Selection
ಫ್ಯಾಷನ್1 hour ago

Wedding Saree Selection: ಮದುವೆ ಸೀರೆಗಳನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಸೀರೆ ಎಕ್ಸ್‌ಫರ್ಟ್‌ಗಳ ಟಿಪ್ಸ್

ಶಿವಮೊಗ್ಗ2 hours ago

Book Release: ರಾಮನೇನು ದೇವನೇ? ಪುಸ್ತಕ ಲೋಕಾರ್ಪಣೆ ಮಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ3 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ14 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌