Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಮಾರ್ಚ್‌ 19 ರಿಂದ ಮಾರ್ಚ್‌ 25 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೇಷ: ಅವಸರದ ನಿರ್ಣಯ ಬೇಡ

Weekly Horoscope

ಹೂವಿನ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಕೋಳಿ ಫಾರ್ಮ್‌, ಹಳೆ ಸಾಮಾನು ಮಾರಾಟಗಾರರು ಸರ್ರನೆ ನಿರ್ಣಯಕ್ಕೆ ಬಂದು, ವಾಗ್ದಾನ ಕೊಡುವ ಅವಸರದ ಮಾತನಾಡಬೇಡಿ. ಯೋಚಿಸಿ ಹೇಳುತ್ತೇನೆ ಎನ್ನುವ ಮಾತು ಬಾಯಲ್ಲಿ ಬರಲಿ. ಏಕಾಏಕಿ ಸಗಟು ಧಾನ್ಯ ಖರೀದಿ, ಐಟಿ/ಬಿಟಿ ಕೆಲಸಗಾರರು ಕೆಲಸದ ಜಾಗದಲ್ಲಿ ವೈಮನಸ್ಸು ಕಟ್ಟಿಕೊಳ್ಳುವ ಉಸಾಬರಿಗೆ ಹೋಗದಿರಿ. ಒಂಟಿಯಾಗಿ ನಿರ್ಜನ ಪ್ರದೇಶದಲ್ಲಿ ತಿರುಗಾಡದಿರಿ. ಕಾಡು ಪ್ರಾಣಿಗಳ ಹಾವಳಿ ಆದೀತು ಎಚ್ಚರ. ಶಿವ ಸ್ತುತಿಯಿಂದ ಕ್ಷೇಮ.
ಶುಭ ಸಂಖ್ಯೆ: 6 ಶುಭ ದಿಕ್ಕು: ಈಶಾನ್ಯ

ವೃಷಭ: ಧನಲಾಭಕ್ಕೆ ಅವಕಾಶ ಜಾಸ್ತಿ

Weekly Horoscope

ನಿಮ್ಮನ್ನು ಕೆಲಸಕ್ಕಾಗಿ ಉಪಯೋಗಿಸಿಕೊಳ್ಳುವಾಗ ನೀನೇ ಇಂದ್ರ, ನೀನೇ ಚಂದ್ರ, ನೀನೇ ದುರ್ಗಾ, ನೀನೇ ಲಕ್ಷ್ಮೀ ಎಂಬ ಕೇವಲ ಪ್ರಶಂಸೆಯ ಮಾತನಾಡಿ, ಕೆಲಸವಾದ ಮೇಲೆ ತಕ್ಷಣ ಮೂಲೆಗುಂಪು ಮಾಡುವ ಜನ ಇರುತ್ತಾರೆ. ಮೋಸ ಹೋಗದಿರಿ. ಕೆಂಪು ವಸ್ತ್ರ ಧಾರಣೆ ಮಾಡಬೇಡಿ. ಇರುವೆ ಇರುವ ಜಾಗೆಯಲ್ಲಿ ತುಸು ಸಕ್ಕರೆ ಇರಿಸಿ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದ ಕೆಲಸಗಳು ಕೈಗೂಡಲು ಇದರಿಂದ ಸಹಾಯ. ಸದಾ ಶ್ರೀಕರನಾದ ಮಹಾವಿಷ್ಣುವನ್ನು ಆರಾಧಿಸಿ. ಧನಲಾಭಕ್ಕೆ ಅವಕಾಶ ಜಾಸ್ತಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಆಗ್ನೇಯ

ಮಿಥುನ: ಮಾತಿನ ಮೇಲೆ ಹಿಡಿತವಿರಲಿ

Weekly Horoscope

ನಿಮಗೆ ನೀವೇ ವೈರಿಗಳಾಗುವ ಅವಕಾಶವನ್ನು ನಿಮ್ಮ ಖಾರವಾದ ನಾಲಿಗೆಯಿಂದ ಮಾಡಿಕೊಳ್ಳಬೇಡಿ. ಸಹಾಯ ಮಾಡುವವರೂ ದೂರವಾಗಲು ಅವಕಾಶ ಒದಗಿಸಬೇಡಿ. ಲಾಟರಿ, ರೇಸು, ಬೆಟ್ಟಿಂಗ್‌ಗಳ ದಾರಿ ನಿಮ್ಮನ್ನು ಆಕರ್ಷಿಸಲು ರೋಚಕತೆಯನ್ನು ಸೃಷ್ಟಿಸಬಹುದು. ಹಣದ ವಿಷಯದಲ್ಲಿ ಎಚ್ಚರ, ಎಚ್ಚರ. ಹತ್ತಿರದವರನ್ನು ಹತ್ತಿರವಾಗಲಿ, ದೂರವಾಗಲಿ ಮಾಡಿಕೊಳ್ಳದಿರಿ. ಯಾವ ಹುತ್ತದಲ್ಲಿ ಯಾವ ಹಾವು ಎಂಬ ವಿಚಾರ ತಲೆ ತಿನ್ನುವುದು ನಿಶ್ಚಿತ. ಶ್ರೀ ಮಂಜುನಾಥನನ್ನು ಸ್ತುತಿಸಿದರೆ ಕ್ಷೇಮ.
ಶುಭ ಸಂಖ್ಯೆ : 8 ಶುಭ ದಿಕ್ಕು: ದಕ್ಷಿಣ

ಕಟಕ: ಗೊಂದಲದಿಂದ ಕೂಡಿದ ಸಮಯ

Weekly Horoscope

ನಿಮ್ಮನ್ನು ಶನೈಶ್ವರನು ಕಾಡುವ ದಿನಗಳಾಗಿವೆ. ವ್ಯವಧಾನವಿರದು. ಒಂದು ಕೆಲಸ ಮಾಡುವಾಗು ಇನ್ನೊಂದು ಕೆಲಸ ನೆನಪಿಗೆ ಬರುತ್ತದೆ. ಕಸಿವಿಸಿ ಪ್ರಾರಂಭವಾಗಿ ಯಾವ ಕೆಲಸವೂ ಸಾಧ್ಯವಾಗಲಾರದು. ಕವಡೆ ಕಾಸಿನ ಲಾಭವೂ ಇರದ ಜನ ತಾಸುಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಅವರಿಗೆ ಬೇಕಾದ ಅವಶ್ಯಕತೆ, ಸೂಕ್ತ ವೇಳೆ ಇದ್ದಾಗ ಮಾತು, ಮಾತು, ಮಾತು ಆಗುತ್ತದೆ. ನಂತರ ಮಾಡಿ ಎಂದು ಹೇಳಲಾಗದ ಅತಂತ್ರ ಸ್ಥಿತಿ ನಿರ್ಮಾಣ ಸಾಧ್ಯ. ಒಳಿತಿಗಾಗಿ ಮಹಾಬಲನಾದ ಮಾರುತಿ ಆರಾಧನೆ ಮಾಡಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಪೂರ್ವ

ಸಿಂಹ: ಸೋಲೇ ಗೆಲುವಿನ ಸೋಪಾನ

Weekly Horoscope

ನಿಮ್ಮ ಪಾಲಿಗೆ ಇದು ಸೂಕ್ತ ಹಿತಕಾರಿ ಸಂದರ್ಭ ಹೌದಾದರೂ ಸೂರ್ಯನ ಓಡಾಟದ ಸಂದರ್ಭ ನಿಮಗೆ ಅನುಕೂಲಕರವಾಗಿಲ್ಲ. ಬೆಳಕೇನೋ ಇದೆ. ಕತ್ತಲಿನ ಅನುಭವವೇ ಆಗುತ್ತಿರುತ್ತದೆ. ಆರೋಗ್ಯದ ಬಗೆಗೆ ಎಚ್ಚರ ಇರಲಿ. ಧನ ಲಾಭದ ದಾರಿ ನಿಮಗೆ ಲಭ್ಯವಾಗಲೂಬಹುದು. ಹಿರಿಯರ ಮಾರ್ಗದರ್ಶನದಿಂದಲೇ ಸಾಧ್ಯ. ಬಾಳ ಸಂಗಾತಿಯೊಡನೆ ವಾಗ್ಯುದ್ಧ ಬೇಡ. ಸೋಲಲು ಹಿಂಜರಿಯದಿರಿ. ಸೋತು ಗೆಲ್ಲುತ್ತೀರಿ. ಹೀಗಾಗಿ ತಾಳ್ಮೆ ನಿಮ್ಮ ಬದುಕಿನ ಈ ಸಂದರ್ಭದ ಸಂಜೀವಿನಿ. ರವಿ ಅಷ್ಟೋತ್ತರ ಪಠಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ವಾಯವ್ಯ

ಕನ್ಯಾ: ಹೊಸ ಕೆಲಸಕ್ಕೆ ಸೂಕ್ತ ಸಮಯ

Weekly Horoscope

ನಿಮ್ಮ ಮಕ್ಕಳ ಬಗೆಗೆ ಆರೈಕೆ, ಬೆಂಬಲ ಒದಗಿಸಲು ಅನುಕೂಲಕರ ಸಂದರ್ಭ. ಮಕ್ಕಳಿಂದ ಒಳ್ಳೆಯ ವಾರ್ತೆ ಇದೆ. ರಾಹು ಪೀಡೆಯೇ ತುಸು ಆತಂಕದ ವಿಷಯ. ಸುಖಾಸುಮ್ಮನೆ ಆಲಸ್ಯವನ್ನು ಬಿತ್ತುತ್ತಿರುತ್ತದೆ. ಏತನ್ಮಧ್ಯೆ ಹೊಸ ಕೆಲಸ ಸಿಗಲು ತಾಯಿ ಚಂಡಿಕಾಳ ದಯೆಯು ನಿಮಗೆ ಒದಗಿ ಬರಲು ಸಾಧ್ಯ. ಮೇಲಾಧಿಕಾರಿಗಳ ಬಳಿ ಲವಲವಿಕೆ ಮತ್ತು ಸ್ನೇಹದಿಂದಿರಿ. ಇತರರು ನಿಮ್ಮ ಕಾಲೆಳೆಯಲು ಪ್ರಯತ್ನಿಸುವರಾದರೂ ಅದೃಷ್ಟ ನಿಮ್ಮನ್ನು ಕಾಪಾಡುತ್ತದೆ. ಗೌರಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಪಶ್ಚಿಮ

ತುಲಾ: ಅವಸರದ ನಿರ್ಧಾರ ಬೇಡ

Weekly Horoscope

ನಿಮ್ಮದು ಸದ್ಯ ಪಂಚಮ ಶನಿ ಸ್ವಾಮಿ ಕಾಟದಲ್ಲಿ ಬೇಯುತ್ತಿರುವ ಸಮಯವಾಗಿದೆ. ಬಿರುಗಾಳಿಯ ದಿನಗಳಾದರೂ ಆತ್ಮವಿಶ್ವಾಸ ತ್ಯಜಿಸದಿರಿ. ಯಾವುದೇ ರೀತಿಯ ನಿರ್ಣಯಗಳನ್ನಾದರೂ ಅವಸರದಲ್ಲಿ, ಸರ್ರನೆ ತಳೆದು ಮಾತು ಕೊಟ್ಟು ಪರಿತಪಿಸುವ ವಿಚಾರವನ್ನಾಗಲೀ ಆಹ್ವಾನಿಸಬೇಡಿ. ನಿಮಗೆ ನೀವೇ ಬೆಂಬಲಕ್ಕೆ ಬರುವ, ಸಂಭಾಳಿಸಿಕೊಳ್ಳುವ ಕಾಲಘಟ್ಟ ಇದು. ಪ್ರತಿಭಾ ಸಂಪನ್ನರಾಗಿರುವ ನೀವು ದೊಡ್ಡ ಬಂಡವಾಳ ಹಾಕದೇ ಬುದ್ಧಿ ಬಲದಿಂದ ವಹಿವಾಟು ನಡೆಸಿ ಗೆಲ್ಲಿ. ರಾಮರಕ್ಷಾ ಸ್ತ್ರೋತ್ರ ಪಠಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ನೈಋತ್ಯ

ವೃಶ್ಚಿಕ: ಧನ ಲಾಭದ ಅವಕಾಶವಿದೆ

Weekly Horoscope

ಕಾಲ ಘಟ್ಟದಲ್ಲಿ ನಿಮ್ಮದಾದ ಹಲವು ಕೆಲಸ ಕಾರ್ಯಗಳನ್ನು ಪೂರೈಸಿ ಗುರಿ ತಲುಪುವ ಸಂತೋಷ ಪಡೆಯುತ್ತೀರಾದರೂ, ಕಾಲೆಳೆಯುವವರ ಬಗ್ಗೆ ನಿಮ್ಮ ಲಕ್ಷ್ಯ ಇರಲಿ. ಮೈಮರೆತರೆ ನಿಮ್ಮನ್ನು ನಿಮ್ಮ ಧ್ಯೇಯೋದ್ದೇಶಗಳಿಂದ ವಿಫಲಗೊಳಿಸುವ ಹುನ್ನಾರ ನಡೆಯುತ್ತಿರುತ್ತದೆ. ತೆರೆ ಮರೆಯಲ್ಲಿ ವಿರೋಧಿಗಳು ಸದಾ ಇದ್ದಾರೆ. ಲಕ್ಷ್ಮೀ ರಮಣನಾದ ಗೋವಿಂದನನ್ನು ಸ್ತುತಿಸಿ. ಧನ ಲಾಭದ ಅವಕಾಶವಂತೂ ಇದೆ. ಹಿರಿಯರ ಸಂಬಂಧವಾದ ಆಸ್ತಿಯ ವಿಷಯದಲ್ಲಿ ಸಫಲತೆ ಇದೆ. ಶಿವ ಸ್ತುತಿಯಿಂದ ಕ್ಷೇಮ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪಶ್ಚಿಮ

ಧನಸ್ಸು: ವಿದೇಶ ಪ್ರಯಾಣದ ಯೋಗವಿದೆ

Weekly Horoscope

ಗುರಿ ತಲುಪುವತ್ತ ಮನಸ್ಸನ್ನು ಕೇಂದ್ರೀಕರಿಸಿ. ಇದೀಗ ಗಾಣದಲ್ಲಿ ಎಣ್ಣೆ ಬರುವ ಹೊತ್ತು. ಕಣ್ಣು ಮುಚ್ಚಿ ಕುಳಿತಿರಬೇಡಿ. ವಿದೇಶ ಪ್ರಯಾಣವು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಥವಾ ಕೆಲಸ ಕಾರ್ಯಗಳಿಗಾಗಿ ಕೂಡಿ ಬರುವ ಸಮಯವೂ ಆಗಿದೆ. ಮಕ್ಕಳ ವಿಚಾರದಲ್ಲಿ ನಿಮ್ಮ ಲಕ್ಷ್ಯವು ಇರಲಿ. ಚಿಕ್ಕವರಾದ ಅವರಿಗೆ ನಿಮ್ಮ ಅನುಭವದ ರಕ್ಷೆ ಅವಶ್ಯವಾಗಿದೆ. ಮಂಗಳಕರನಾದ ಸೂರ್ಯನನ್ನು ಸ್ತುತಿಸಿ. ಅನೇಕ ನಿಟ್ಟಿನಲ್ಲಿ ಯಶಸ್ಸು ಲಭಿಸಲು ಸೂರ್ಯನ ಅನುಗ್ರಹ ಸಿಗಲಿದೆ.
ಶುಭ ಸಂಖ್ಯೆ : 1 ಶುಭ ದಿಕ್ಕು: ಆಗ್ನೇಯ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ಹಣ ಕೊಟ್ಟು ಕೋಡಂಗಿಗಳಾಗಬೇಡಿ!

Weekly Horoscope

ಒತ್ತಡದಿಂದ ಕೆಲಸವನ್ನು ಒಪ್ಪಿಕೊಳ್ಳಬೇಡಿ. ಹೊರೆಯಾಗುವ ಸಾಲಕ್ಕೆ ಕೈ ಹಾಕಬೇಡಿ. ಸ್ವಂತ ಅಣ್ಣ ತಮ್ಮಂದಿರೇ ತೊಂದರೆ ತಂದಾರು. ಪರಿಶುದ್ಧನಾದ ಶ್ರೀ ದತ್ತಾತ್ರಯನನ್ನು ಹಾಗೂ ಮಹಾಬಲನೇ ಆದ ಮಾರುತಿಯನ್ನು ಆರಾಧಿಸಿ. ಕತ್ತಲಿನಿಂದ ಬೆಳಕಿನತ್ತ ಸಾಗುವ ದಾರಿ ಗೋಚರವಾಗಲಿದೆ. ಕಪಟತನದಿಂದ ಹಣ ಕೀಳಲೆತ್ನಿಸುವ ಜನರನ್ನು ನಂಬಬೇಡಿ. ಕೊಟ್ಟ ಹಣ ಬರಲಾರದು. ನಿಮ್ಮ ಕೆಲಸದ ಸ್ಥಳದಲ್ಲಿ ವಾದ, ಚರ್ಚೆ, ಯಾರೇ ಕೆಣಕಿದರೂ ಕೆರಳಿ ಜಗಳವಾಡಲು ಹೋಗದಿರಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪೂರ್ವ

ಕುಂಭ: ತಣ್ಣೀರನ್ನು ತಣಿಸಿ ಕುಡಿಯಿರಿ…

Weekly Horoscope

ನಿಮ್ಮನ್ನು ಕರಿಮೋಡೆಗಳು ಸುತ್ತರಿದ ದಿನಗಳಿವು. ಲೋಕೋತ್ತರನಾದ, ರಘುಕುಲ ತಿಲಕ ಶ್ರೀರಾಮನನ್ನು ಸ್ತುತಿಸಿ. ರಾಮರಕ್ಷಾ ಸ್ತೋತ್ರ ಪಠಿಸಿ. ಕಾರ್ಮೋಡಗಳು ದೂರವಾಗಲು ಸುಲಭದ ದಾರಿ ದೊರಕಲು ಇದರಿಂದ ಸಹಾಯ ಸಿಗಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಒಮ್ಮೆಗೇ ಬಂಡವಾಳ ಸಂವರ್ಧಿಸಿ ಲಾಭ ಹೆಚ್ಚಿಸುವ ದಿಢೀರ್‌ ಯೋಚನೆಗೆ ಕೈ ಹಾಕದಿರಿ. ಬಾವಿಯಿಂದ ಎತ್ತಿ ತೆಗೆದ ನೀರೇ ಆದರೂ ತಂಪು ನೀರನ್ನು ಆರಿಸಿ, ತಣಿಸಿ ಕುಡಿಯಿರಿ. ಹನುಮಾನ್‌ ಚಾಲೀಸ್‌ ಓದಿ ಕ್ಷೇಮ.
ಶುಭ ಸಂಖ್ಯೆ : 4 ಶುಭ ದಿಕ್ಕು: ನೈಋತ್ಯ

ಮೀನ: ವಿವೇಕದಿಂದ ವರ್ತಿಸಬೇಕಾದ ಕಾಲ

Weekly Horoscope

ಹೊಸ ರೀತಿಯ ಪ್ರಯೋಗಗಳಿಗೆ ಸರ್ರನೆ ಮನೆ ಕಟ್ಟುವ, ಮನೆಯನ್ನು ಪುನರ್‌ ರೂಪಿಸಿಕಟ್ಟುವ ಕೆಲಸಕ್ಕೆ ಕೈ ಹಾಕದಿರಿ. ಏನೇ ವ್ಯಾಜ್ಯಗಳು ಆಸ್ತಿಯ ಬಗೆಗೆ ತಲೆದೋರಿದರೂ ಸಿಟ್ಟಿಗೆ ಬುದ್ಧಿ ಕೊಡಬೇಡಿ. ನಿಮ್ಮಿಂದ ತಪ್ಪು ಸಂಭವಿಸಲು ವೈರಿ ಕಾದು ಕುಳಿತಿರುತ್ತಾನೆ. ಸಮಯ, ಸಂದರ್ಭಗಳನ್ನು ನೀವೇ ಚರ್ಚಿಸಿ ನಿರ್ಧಾರಕ್ಕೆ ಬನ್ನಿ. ಕಾಲದ ಘಟ್ಟ ಸತ್ಯವನ್ನು ಸುಳ್ಳಾಗಿಸುವ ವಿವಂಚನೆಯ ಕಾಲವಾಗಿದೆ. ಹೀಗಾಗಿ ದಿನಗಳನ್ನು ವಿವೇಕದಿಂದಲೇ ಗೆಲ್ಲಲು ಮುಂದಾಗಿ. ರಾಮರಕ್ಷಾಸ್ತ್ರೋತ್ರ ಪಠಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಉತ್ತರ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್

Video Viral ಮಹಿಳೆಯೊಬ್ಬರು ಜಲ ತರಂಗ್ ನ ಮೂಲಕ ಜನಪ್ರಿಯ ಭಕ್ತಿಗೀತೆ ಐಗಿರಿ ನಂದಿನಿ ಎಂಬ ಮಹಿಷಾಮರ್ದಿನಿ ಸ್ತೋತ್ರವನ್ನು ನುಡಿಸಿ ಸಂಗೀತ ಪ್ರಿಯರಿಗೆ ರಸದೌತಣ ಉಣಬಡಿಸಿದ್ದಾರೆ.

VISTARANEWS.COM


on

Viral Video
Koo

ಬೆಂಗಳೂರು: ಸುಮಧುರವಾದ ಸಂಗೀತದ ಗಾನ ಕಿವಿಯ ಮೇಲೆ ಬಿದ್ದರೆ ಎಷ್ಟೇ ಒತ್ತಡದಲ್ಲಿ ಇದ್ದರೂ ಒಮ್ಮೆ ಹಾಯ್ ಅನಿಸುತ್ತದೆ. ಸಂಗೀತಕ್ಕಿರುವ ಶಕ್ತಿಯೇ ಅಂಥದ್ದು. ಸಂಗೀತಗಾರರು ಸಂಗೀತದ ಉಪಕರಣಗಳನ್ನು ಬಳಸಿ ಸಂಗೀತವನ್ನು ನುಡಿಸುತ್ತಾರೆ. ಇಂತಹ ಸಂಗೀತ ಹೆಚ್ಚಿನ ಜನರ ಮನಸೆಳೆಯುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಜಲ ತರಂಗ್ ನ ಮೂಲಕ ಜನಪ್ರಿಯ ಭಕ್ತಿಗೀತೆ ಐಗಿರಿ ನಂದಿನಿ ಎಂಬ ಮಹಿಷಾಮರ್ದಿನಿ ಸ್ತೋತ್ರವನ್ನು ನುಡಿಸಿ ಸಂಗೀತ ಪ್ರಿಯರಿಗೆ ರಸದೌತಣ ಉಣಬಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ (Video Viral) ಆಗಿದ್ದು ಜನ ಮೆಚ್ಚುಗೆ ಸೂಚಿಸಿದ್ದಾರೆ.

ಮಹಿಳೆ ಜಲ ತರಂಗ್ ಮೂಲಕ ಐಗಿರಿ ನಂದಿನಿ ಸ್ತೋತ್ರ ನುಡಿಸಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ 32 ಲಕ್ಷ ವ್ಯೂಸ್ ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯ ಸಂಗೀತಕ್ಕೆ ಹಾಗೂ ಆಕೆ ಅದಕ್ಕಾಗಿ ಬಳಸಿದ ವಾದ್ಯಕ್ಕೆ ಜನರು ತಮ್ಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊದಲ್ಲಿ ಮಹಿಳೆ ನೀರು ತುಂಬಿದ ಕಪ್ ಗಳನ್ನು ಬಳಸಿಕೊಂಡು ಸಂಗೀತ ನುಡಿಸಿದ್ದಾರೆ. ಈ ಜಲತರಂಗ್ ನೀರು ತುಂಬಿದ ಬಟ್ಟಲುಗಳನ್ನೊಳಗೊಂಡ ವಿಶಿಷ್ಟವಾದ ತಾಳವಾದ್ಯವಾಗಿದೆ. ಈ ವಾದ್ಯ 17ನೇ ಶತಮಾನದಲ್ಲಿ ಭಾರತದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ನೀರಿನಲ್ಲಿ ಶಬ್ದ ಉತ್ಪತ್ತಿಯಾಗುವ ಮೂಲಕ ಉತ್ತಮ ಸ್ವರಗಳನ್ನು ರೂಪಿಸುವುದು ಈ ಉಪಕರಣದ ಸಾಮರ್ಥ್ಯವಾಗಿದೆ.

ಐಗಿರಿ ನಂದಿನಿ ಎನ್ನುವುದು ಬಹಳ ಹಿಂದಿನ ಕಾಲದಿಂದಲೂ ಕೇಳಿ ಬರುತ್ತಿದ್ದ ಭಕ್ತಿಗೀತೆಯಾಗಿದೆ. ಇದು ದುರ್ಗಾದೇವಿಗೆ ಸಮರ್ಪಿತವಾದ ಸ್ತೋತ್ರವಾಗಿದೆ, ದುರ್ಗಾದೇವಿಯ ಸ್ವರೂಪಗಳ ಬಗ್ಗೆ ಗುಣಗಾನ ಮಾಡಿದ ಈ ಕಠಿಣ ಸ್ತೋತ್ರವನ್ನು ಮಹಿಳೆ ಜಲತರಂಗ್ ನ ಮೂಲಕ ನುಡಿಸಿದ್ದು ಜನರ ಮನಸೆಳೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯ ಈ ಪ್ರದರ್ಶನಕ್ಕೆ ವೀಕ್ಷಕರು ವಿಸ್ಮಯಗೊಂಡಿದ್ದಾರೆ. ಅನೇಕರು ಆಕೆಯ ಸಂಗೀತ ಕೌಶಲ್ಯವನ್ನು ಹೊಗಳಿದ್ದಾರೆ. ಹಾಗೇ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಅದರ ವಿಶಿಷ್ಟ ವಾದ್ಯಗಳನ್ನು ಮಹಿಳೆಯು ಈ ವಿಡಿಯೋ ಎತ್ತಿ ತೋರಿಸಿದ್ದಾರೆ. ಹಾಗಾಗಿ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.

ಹಾಗೇ ಇಂತಹ ಸಂಗೀತ ಕಲೆಗಳನ್ನು ಪ್ರತಿ ಸಂಗೀತ ಶಾಲೆಯಲ್ಲಿ ಮಕ್ಕಳಿಗೆ ಕಲಿಸಬೇಕು ಎಂದು ಜನರು ಸಲಹೆ ನೀಡಿದ್ದಾರೆ. ಪರಿಪೂರ್ಣ ಸಿಂಕ್ರೊನೈಸೇಶನ್ ಅನ್ನು ಸಮತೋಲನಗೊಳಿಸುವಾಗ ನಿಮ್ಮ ಮುಖದ ಮೇಲಿನ ನಗು ಒಂದು ಶತಕೋಟಿಗೂ ಹೆಚ್ಚಿನ ಪ್ರಯತ್ನಗಳಿಗೆ ಸಮಾನವಾಗಿದೆ ಎಂದು ಇನ್ನೊಬ್ಬ ವೀಕ್ಷಕರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಅಂಗಡಿಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಕಳ್ಳಿ, ವೈರಲ್ ಆದ ವಿಡಿಯೊ

ಸೋಷಿಯಲ್ ಮೀಡಿಯಾಗಳಲ್ಲಿ ಇದೇ ರೀತಿಯ ಹಲವು ವಿಡಿಯೋಗಳು ಹರಿದಾಡುತ್ತವೆ. ಸೋಷಿಯಲ್ ಮೀಡಿಯಾಗಳು ಒಂದು ಪ್ರಕಾರದಲ್ಲಿ ಜನರಿಗೆ ಕೆಟ್ಟದನ್ನು ಉಂಟುಮಾಡಿದರೆ , ಇನ್ನೊಂದು ಪ್ರಕಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಭೆಗಳನ್ನು ಗುರುತಿಸುವಂತಾಗಿದೆ. ಹಾಗಾಗಿ ಈ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಹಲವಾರು ಪ್ರತಿಭೆಗಳು ಹೊರಬರುವಂತಾಗಲಿ ಮತ್ತು ಜನರು ಅದನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಲಿ ಎಂಬುದು ನಮ್ಮ ಆಶಯ.

Continue Reading

ದೇಶ

Kunwar Sarvesh: ಮತದಾನ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ಹೃದಯಾಘಾತಕ್ಕೆ ಬಲಿ!

ಉತ್ತರ ಪ್ರದೇಶದ ಮೊರಾದಾಬಾದ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುನ್ವರ್‌ ಸರ್ವೇಶ್‌ ಸಿಂಗ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ರಿತೇಶ್‌ ಗುಪ್ತಾ ಅವರು ಮಾಹಿತಿ ನೀಡಿದ್ದಾರೆ. ಶುಕ್ರವಾರವಷ್ಟೇ ಮೊರಾದಾಬಾದ್‌ನಲ್ಲಿ ಮತದಾನ ನಡೆದಿತ್ತು.

VISTARANEWS.COM


on

Kunwar Sarvesh Singh
Koo

ನವದೆಹಲಿ: ಉತ್ತರ ಪ್ರದೇಶ, ತಮಿಳುನಾಡು ಸೇರಿ ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶುಕ್ರವಾರ (ಏಪ್ರಿಲ್‌ 19) ಮತದಾನ ನಡೆದಿದೆ. ಮತದಾನ ನಡೆದ ಕ್ಷೇತ್ರಗಳಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ (Moradabad) ಕೂಡ ಸೇರಿದೆ. ಆದರೆ, ಮತದಾನ ನಡೆದ ಮರುದಿನವೇ ಅಂದರೆ, ಶನಿವಾರ (ಏಪ್ರಿಲ್‌ 20) ಮೊರಾದಾಬಾದ್‌ ಬಿಜೆಪಿ ಅಭ್ಯರ್ಥಿ (BJP Candidate) ಕುನ್ವರ್‌ ಸರ್ವೇಶ್‌ ಸಿಂಗ್‌ (71) (Kunwar Sarvesh Singh) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

“ಕುನ್ವರ್‌ ಸರ್ವೇಶ್‌ ಸಿಂಗ್‌ ಅವರಿಗೆ ಹೃದಯಾಘಾತ ಉಂಟಾಯಿತು. ಕೂಡಲೇ ಅವರನ್ನು ದೆಹಲಿಯಲ್ಲಿರುವ ಏಮ್ಸ್‌ಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಕುನ್ವರ್‌ ಸರ್ವೇಶ್‌ ಸಿಂಗ್‌ ಅವರು ಮೃತಪಟ್ಟಿದ್ದಾರೆ” ಎಂಬುದಾಗಿ ಮೊರಾದಾಬಾದ್‌ ನಗರ ಶಾಸಕ ರಿತೇಶ್‌ ಗುಪ್ತಾ ಅವರು ತಿಳಿಸಿದ್ದಾರೆ. ಕುನ್ವರ್‌ ಸರ್ವೇಶ್‌ ಸಿಂಗ್‌ ಅವರು ಕೆಲ ದಿನಗಳಿಂದ ಪ್ರಚಾರದಲ್ಲಿ ತೊಡಗಿರಲಿಲ್ಲ. ಆದರೂ ಅವರು ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದರು. ಆದರೆ, ಚುನಾವಣೆ ಫಲಿತಾಂಶ ಬರುವ ಮೊದಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುನ್ವರ್‌ ಸರ್ವೇಶ್‌ ಸಿಂಗ್‌ ಅವರ ನಿಧನಕ್ಕೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.

ಕುನ್ವರ್‌ ಸರ್ವೇಶ್‌ ಸಿಂಗ್‌ ಅವರ ನಿಧನಕ್ಕೆ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್‌ ಚೌಧರಿ ಸಂತಾಪ ಸೂಚಿಸಿದ್ದಾರೆ. “ಮಾಜಿ ಸಂಸದ ಕುನ್ವರ್‌ ಸರ್ವೇಶ್‌ ಸಿಂಗ್‌ ಅವರು ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು, ನಾಯಕರಿಗೆ ಸ್ಫೂರ್ತಿಯಾಗಿದ್ದರು. ಅವರು ಪರಿಶ್ರಮದಲ್ಲಿ ಹೆಚ್ಚು ನಂಬಿಕೆ ಹೊಂದಿದ್ದರು. ಇಂತಹ ಮೇರು ನಾಯಕನ ನಿಧನದಿಂದ ಮೊರಾದಾಬಾದ್‌ ಮಾತ್ರವಲ್ಲ, ಉತ್ತರ ಪ್ರದೇಶ ಬಿಜೆಪಿ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಮೊರಾದಾಬಾದ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುನ್ವರ್‌ ಸರ್ವೇಶ್‌ ಸಿಂಗ್‌ ಗೆಲುವು ಸಾಧಿಸಿದ್ದರು. ಆದರೆ, 2019ರಲ್ಲಿ ಸಮಾಜವಾದಿ ಪಕ್ಷದ ಡಾ.ಟಿ.ಎಸ್. ಹಸನ್‌ ಅವರ ವಿರುದ್ಧ ಕುನ್ವರ್‌ ಸರ್ವೇಶ್‌ ಸಿಂಗ್‌ ಸೋಲುಂಡಿದ್ದರು.

ಕೆಲವೆಡೆ ಇವಿಎಂ ದೋಷ

ಮೊದಲ ಹಂತದ ಮತದಾನದ ವೇಳೆ ತಮಿಳುನಾಡು, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಅಸ್ಸಾಂನ ಕೆಲವು ಬೂತ್ ಗಳಲ್ಲಿ ಸಣ್ಣ ಪ್ರಮಾಣದ ಇವಿಎಂ ದೋಷಗಳು ವರದಿಯಾಗಿವೆ. ಪಶ್ಚಿಮ ಬಂಗಾಳದಲ್ಲಿ ಸಂಜೆ 5 ಗಂಟೆಯವರೆಗೆ ಶೇಕಡಾ 77.57, ಅಸ್ಸಾಂನಲ್ಲಿ ಶೇಕಡಾ 70.77 ಮತ್ತು ಮೇಘಾಲಯದಲ್ಲಿ ಶೇಕಡಾ 69.91 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಕ್ಷೇತ್ರದಲ್ಲಿ ಹಿಂಸಾಚಾರ ನಡೆದಿದೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆಸಿದ್ದು, ಮತದಾನ ಹಿಂಸಾಚಾರ, ಮತದಾರರ ಬೆದರಿಕೆ ಮತ್ತು ಚುನಾವಣಾ ಏಜೆಂಟರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಕ್ರಮವಾಗಿ 80 ಮತ್ತು 39 ದೂರುಗಳನ್ನು ದಾಖಲಾಗಿವೆ. ಸಂಘರ್ಷ ಪೀಡಿತ ಮಣಿಪುರದಲ್ಲಿ ಸಂಜೆ 5 ಗಂಟೆಯವರೆಗೆ ಶೇ.67.46ರಷ್ಟು ಮತದಾನವಾಗಿದೆ.

ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಥೊಂಗ್ಜು ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ. ಛತ್ತೀಸ್​ಗಢದ ನಕ್ಸಲ್ ಪೀಡಿತ ಬಸ್ತಾರ್ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 63.41 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಅಲ್ಲಿ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸಿಆರ್​ಪಿಎಫ್​ ಜವಾನ ಗಾಯಗೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಐಇಡಿ ಸ್ಫೋಟ ಸಂಭವಿಸಿದೆ.

ಇದನ್ನೂ ಓದಿ: ಚಾಯ್‌ವಾಲಾ ಮೋದಿ ಐಐಟಿ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದ ಕಾಂಗ್ರೆಸ್ ನಾಯಕ; ಭುಗಿಲೆದ್ದ ವಿವಾದ

Continue Reading

ಕ್ರೀಡೆ

IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

IPL 2024: ಹೈದರಾಬಾದ್​ ತಂಡ ಪವರ್​ ಪ್ಲೇಯಲ್ಲಿ ವಿಕೆಟ್​ ನಷ್ಟವಿಲ್ಲದೆ 125 ರನ್​ ಬಾರಿಸಿತು. ಇದು ಟಿ20 ಕ್ರಿಕೆಟ್​ನಲ್ಲಿ ಪವರ್​ ಪ್ಲೇಯಲ್ಲಿ ದಾಖಲಾದ ಮೊದಲ ಅತ್ಯಧಿಕ ರನ್​ ಗಳಿಕೆಯಾಗಿದೆ.

VISTARANEWS.COM


on

IPL 2024
Koo

ನವದೆಹಲಿ: ಎಡಗೈ ಬ್ಯಾಟರ್​ಗಳಾದ ಟ್ರಾವಿಸ್​ ಹೆಡ್​(Travis Head) ಮತ್ತು ಅಭಿಷೇಕ್​ ಶರ್ಮ(Abhishek Sharma) ಅವರ ವಿಸ್ಫೋಟಕ ಬ್ಯಾಟಿಂಗ್​ನಿಂದ ಸನ್​ರೈರ್ಸ್​ ಹೈದರಾಬಾದ್(Sunrisers Hyderabad)​ ತಂಡ ಐಪಿಎಲ್​(IPL 2024) ಜತೆಗೆ ಟಿ20 ಕ್ರಿಕೆಟ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಬಾರಿಸಿದ ತಂಡವೆಂಬ ಹೆಗ್ಗಳಿಗೆ ಪಾತ್ರವಾಗಿದೆ.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಏರ್ಪಟ್ಟ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಹೈದರಾಬಾದ್​ ತಂಡಕ್ಕೆ ಆರಂಭಿಕರಾದ ಟ್ರಾವಿಸ್​ ಹೆಡ್​ ಮತ್ತು ಅಭಿಷೇಕ್​ ಶರ್ಮ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಅಮೋಘ ಆರಂಭ ಒದಗಿಸಿದರು. ಇವರ ಈ ಬ್ಯಾಟಿಂಗ್​ ಪರಾಕ್ರಮದಿಂದ ಹೈದರಾಬಾದ್​ ತಂಡ ಪವರ್​ ಪ್ಲೇಯಲ್ಲಿ ವಿಕೆಟ್​ ನಷ್ಟವಿಲ್ಲದೆ 125 ರನ್​ ಬಾರಿಸಿತು. ಇದು ಟಿ20 ಕ್ರಿಕೆಟ್​ನಲ್ಲಿ ಪವರ್​ ಪ್ಲೇಯಲ್ಲಿ ದಾಖಲಾದ ಮೊದಲ ಅತ್ಯಧಿಕ ರನ್​ ಗಳಿಕೆಯಾಗಿದೆ.

ಇದಕ್ಕೂ ಮುನ್ನ ದಾಖಲೆ ಕೆಕೆಆರ್​ ತಂಡದ ಪರ ಇತ್ತು. ಕೆಕೆಆರ್​ ತಂಡ ಆರ್​ಸಿಬಿ ವಿರುದ್ಧ 2017ರಲ್ಲಿ ನೋಲಾಸ್​ಗೆ 105 ರನ್​ ಬಾರಿಸಿತ್ತು. ಈ ದಾಖಲೆ ಇದೀಗ ಪತನಗೊಂಡಿದೆ. ಪವರ್​ ಪ್ಲೇಯಲ್ಲಿ ಮೊದಲ ಬಾರಿಗೆ 100ರನ್​ ಗಡಿ ದಾಡಿದ ದಾಖಲೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್​ ವಿರುದ್ಧ 2 ವಿಕೆಟ್​ಗೆ ಭರ್ತಿ 100ರನ್​ ಬಾರಿಸಿತ್ತು.

ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ತಂಡ


ಹೈದರಾಬಾದ್​- 125/0. ಡೆಲ್ಲಿ ವಿರುದ್ಧ(2024)

ಕೆಕೆಆರ್​-105/0. ಆರ್​ಸಿಬಿ ವಿರುದ್ಧ(2017)

ಚೆನ್ನೈ-100/2. ಪಂಜಾಬ್​ ವಿರುದ್ಧ(2014)

ಚೆನ್ನೈ-90/0. ಮುಂಬೈ ವಿರುದ್ಧ(2015)

ಕೆಕೆಆರ್​-88/1. ಡೆಲ್ಲಿ ವಿರುದ್ಧ(2024)

ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ಅಭಿಷೇಕ್​ ಶರ್ಮ ಅವರು ಕೇವಲ 12 ಎಸೆತಗಳಲ್ಲಿ 6 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 46 ರನ್​ ಗಳಿಸಿ ಕುಲ್​ದೀಪ್​ ಯಾದವ್​ಗೆ ವಿಕೆಟ್​ ಒಪ್ಪಿಸಿದರು. ಅಭಿಷೇಕ್​ ಮತ್ತು ಹೆಡ್​ ಸೇರಿಕೊಂಡು ಮೊದಲ ವಿಕೆಟ್​ಗೆ 131 ರನ್​ ಜತೆಯಾಟ ನಡೆಸಿದರು. 16 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಟ್ರಾವಿಸ್​ ಹೆಡ್​ 11 ಬೌಂಡರಿ ಮತ್ತು 6 ಸಿಕ್ಸರ್​ ನೆರವಿನಿಂದ 89 ರನ್​ ಬಾರಿಸಿದರು. ಎದುರಿಸಿದ್ದು ಕೇವಲ 32 ಎಸೆತ. ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಹೈದರಾಬಾದ್​ ನಾಟಕೀಯ ಕುಸಿತ ಕಂಡಿತು. ಐಡೆನ್​ ಮಾರ್ಕ್ರಮ್​(1) ಮತ್ತು ಹೆನ್ರಿಚ್​ ಕ್ಲಾಸೆನ್​(15) ರನ್​ ಗಳಿಸಿ ನಿರಾಸೆ ಮೂಡಿಸಿದರು.

Continue Reading

ಪ್ರಮುಖ ಸುದ್ದಿ

ಚಾಯ್‌ವಾಲಾ ಮೋದಿ ಐಐಟಿ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದ ಕಾಂಗ್ರೆಸ್ ನಾಯಕ; ಭುಗಿಲೆದ್ದ ವಿವಾದ

ರಾಜಸ್ಥಾನದ ಜೋಧ್‌ಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕರಣ್‌ ಸಿಂಗ್‌ ಉಚಿಯಾರ್ದ ಅವರು ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚಹಾ ಮಾರುತ್ತಿದ್ದ ಮೋದಿ ಐಐಟಿ, ಐಐಎಂ ಸಂಸ್ಥೆಗಳ ಬಗ್ಗೆ ಮಾತನಾಡಲು ಹೇಗೆ ಸಾಧ್ಯ ಎಂಬುದಾಗಿ ಪ್ರಶ್ನಿಸಿದ್ದಾರೆ.

VISTARANEWS.COM


on

Narendra Modi
Koo

ಜೈಪುರ: ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ಜಾಸ್ತಯಾಗುತ್ತಿದೆ. ರಾಜಕೀಯ ನಾಯಕರ ಹೇಳಿಕೆಗಳು ಕೂಡ ತೀವ್ರ ಮೊನಚಾಗುತ್ತಿವೆ. ಇನ್ನೂ ಕೆಲ ನಾಯಕರು ಪ್ರತಿಸ್ಪರ್ಧಿಗಳು, ಎದುರಾಳಿ ಪಕ್ಷದ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ, ಆರೋಪ, ಏಕವಚನ ಪ್ರಯೋಗ ಸೇರಿ ಹಲವು ರೀತಿಯಲ್ಲಿ ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಜೋಧ್‌ಪುರ ಕಾಂಗ್ರೆಸ್‌ ಅಭ್ಯರ್ಥಿ ಕರಣ್‌ ಸಿಂಗ್‌ ಉಚಿಯಾರ್ದ ಅವರು ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಚಹಾ ಮಾಡುತ್ತಿದ್ದ ಮೋದಿ ಐಐಟಿ, ಐಐಎಂ ಸಂಸ್ಥೆಗಳ ಬಗ್ಗೆ ಮಾತನಾಡಲು ಹೇಗೆ ಸಾಧ್ಯ” ಎಂದಿದ್ದಾರೆ.

ಮಾಧ್ಯಮವೊಂದರ ಜತೆ ಮಾತನಾಡಿದ ಕರಣ್‌ ಸಿಂಗ್‌ ಉಚಿಯಾರ್ದ, “ನಮ್ಮ ದೇಶದಲ್ಲಿ ಐಐಟಿ, ಐಐಎಂ ಸಂಸ್ಥೆಗಳನ್ನು ಸ್ಥಾಪಿಸಿದ್ದು ಯಾರು? ನರೇಂದ್ರ ಮೋದಿ ಅವರು ಇವುಗಳನ್ನು ದೇಶದಲ್ಲಿ ಸ್ಥಾಪಿಸಿದ್ದಾ? ನೀವು ನಿಮ್ಮ ಮನೆಯಲ್ಲಿ ಚಹಾ ಮಾರುತ್ತಿದ್ದಿರಿ. ಅಷ್ಟಕ್ಕೂ, ಚಹಾ ಮಾರುವವನ ಮಗನೊಬ್ಬ ಐಐಟಿ, ಐಐಎಂ ಸಂಸ್ಥೆಗಳ ಬಗ್ಗೆ, ಅವುಗಳ ವಿಚಾರಗಳ ಬಗ್ಗೆ ಹೇಗೆ ಮಾತನಾಡಲು ಸಾಧ್ಯ? ಹುರುಳಿಲ್ಲದೆ ಹೇಗೆ ಇವುಗಳ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ” ಎಂದು ಹೇಳಿರುವುದು ವಿವಾದಕ್ಕೆ ಗುರಿಯಾಗಿದೆ.

ಕರಣ್‌ ಸಿಂಗ್‌ ಉಚಿಯಾರ್ದ ನೀಡಿದ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. “ದೇಶದಲ್ಲಿ ಸಾಮಾನ್ಯ ಜನರು, ಅದರಲ್ಲೂ ಚಹಾ ಮಾರುವವರ ವಿರುದ್ಧ ಕಾಂಗ್ರೆಸ್‌ ದ್ವೇಷ ಕಾರುತ್ತಿದೆ. ಯಾರು ಬಾಯಿಯಲ್ಲಿ ಚಿನ್ನದ ಚಮಚವನ್ನು ಇಟ್ಟುಕೊಂಡು ಹುಟ್ಟಿರುತ್ತಾರೋ, ಕುಟುಂಬ ರಾಜಕಾರಣವನ್ನು ಮುಂದುವರಿಸುತ್ತಾರೋ, ಅವರ ಬೂಟು ನೆಕ್ಕವುದು ಮಾತ್ರ ಇವರಿಗೆ ಗೊತ್ತಿದೆ. ಇದಕ್ಕೆ ಕರಣ್‌ ಸಿಂಗ್‌ ಉಚಿಯಾರ್ದ ಅವರೇ ದೊಡ್ಡ ಉದಾಹರಣೆಯಾಗಿದ್ದಾರೆ” ಎಂದು ಕಾಂಗ್ರೆಸ್‌ ನಾಯಕಿ ಪ್ರೀತಿ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಣ್‌ ಸಿಂಗ್‌ ಉಚಿಯಾರ್ದ ಅವರು ಜೋಧ್‌ಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಎದುರಿಸುತ್ತಿದ್ದಾರೆ. ಇವರು ಸಚಿನ್‌ ಪೈಲಟ್‌ ಅವರ ಆಪ್ತರಾಗಿದ್ದಾರೆ. ಕಾಂಗ್ರೆಸ್‌ ನಾಯಕರು ಮೊದಲು ನರೇಂದ್ರ ಮೋದಿ ಅವರನ್ನು ಚಾಯ್‌ವಾಲಾ ಎಂಬುದಾಗಿ ಟೀಕಿಸಿದ್ದರು. ಇದನ್ನೇ ಮೋದಿ ಅವರು ಪ್ರಚಾರದ ಭಾಗವನ್ನಾಗಿಸಿಕೊಂಡರು. ನಾನು ಚಾಯ್‌ವಾಲಾ ಆಗಿದ್ದೆ, ಚಾಯ್‌ವಾಲಾನೊಬ್ಬ ಪ್ರಧಾನಿಯಾಗಿರುವುದು ಕಾಂಗ್ರೆಸ್‌ ನಾಯಕರಿಗೆ ಇಷ್ಟವಿಲ್ಲ ಎಂದು ಮೋದಿ ಟೀಕಿಸಿದ್ದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ನಾಯಕ ಸುರ್ಜೇವಾಲಾ ಅವರ ವಿವಾದಾತ್ಮಕ ಹೇಳಿಕೆ ಬಳಿಕ ಟಿಎಂಸಿಗೂ ಸಂಕಷ್ಟ

Continue Reading
Advertisement
Crime Scene
ಶಿವಮೊಗ್ಗ3 mins ago

Murder Case: ಶಿವಮೊಗ್ಗದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ; ಕ್ರಿಕೆಟ್ ಬ್ಯಾಟ್, ವಿಕೆಟ್‌ಗಳಿಂದ ಹೊಡೆದು ಕೊಂದ ದುಷ್ಕರ್ಮಿಗಳು

SRH vs DC
ಕ್ರೀಡೆ22 mins ago

SRH vs DC: ವಿಸ್ಫೋಟಕ ಬ್ಯಾಟಿಂಗ್​ ಮೂಲಕ ದಾಖಲೆ ಬರೆದ ಸನ್​ರೈಸರ್ಸ್ ತಂಡ

Lok Sabha Election
Lok Sabha Election 202424 mins ago

Lok Sabha Election: ಕೇರಳದಲ್ಲಿ 2 ಲಕ್ಷಕ್ಕಿಂತ ಅಧಿಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲು

Viral Video
ವೈರಲ್ ನ್ಯೂಸ್37 mins ago

Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್

ಹರಿಹರಪುರ ಧರ್ಮಸಭೆ
ಚಿಕ್ಕಮಗಳೂರು38 mins ago

ಹರಿಹರಪುರ ಧರ್ಮಸಭೆ; ಸನಾತನ ಹಿಂದು ಸಮಾಜ ಕಟ್ಟುವುದು ನಮ್ಮೆಲ್ಲರ ಧ್ಯೇಯ ಎಂದ ತ್ರಯಾಚಾರ್ಯರು

Kunwar Sarvesh Singh
ದೇಶ51 mins ago

Kunwar Sarvesh: ಮತದಾನ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ಹೃದಯಾಘಾತಕ್ಕೆ ಬಲಿ!

IPL 2024
ಕ್ರೀಡೆ1 hour ago

IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

Prajadhwani 2 Lok Sabha election campaign meeting at KR Nagar
ಮಂಡ್ಯ1 hour ago

Lok Sabha Election 2024: ನನ್ನನ್ನು ಗೆಲ್ಲಿಸಿ, ಕಾಂಗ್ರೆಸ್‌ಗೆ ಶಕ್ತಿ ತುಂಬಿ: ವೆಂಕಟರಮಣೇಗೌಡ ಮನವಿ

Uttara Kannada Lok Sabha Constituency BJP Candidate Vishweshwara Hegde Kageri latest Statement
ಉತ್ತರ ಕನ್ನಡ1 hour ago

Sirsi News: ಕಾಂಗ್ರೆಸ್ ಸರ್ಕಾರದ ಮತಾಂಧರ ಓಲೈಕೆಯೇ ನೇಹಾ ಹತ್ಯೆಗೆ ಕಾರಣ: ಕಾಗೇರಿ ಖಂಡನೆ

Narendra Modi
ಪ್ರಮುಖ ಸುದ್ದಿ1 hour ago

ಚಾಯ್‌ವಾಲಾ ಮೋದಿ ಐಐಟಿ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದ ಕಾಂಗ್ರೆಸ್ ನಾಯಕ; ಭುಗಿಲೆದ್ದ ವಿವಾದ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20246 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20247 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ9 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ10 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ17 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌