Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? Vistara News
Connect with us

ಪ್ರಮುಖ ಸುದ್ದಿ

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಜನವರಿ 29 ರಿಂದ ಫೆಬ್ರವರಿ 4 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

weekly horoscope each zodiac signs weekly horoscope for march third week
Koo

ಮೇಷ: ನಿಮ್ಮ ಕುಶಾಗ್ರತೆಗೆ ಮನ್ನಣೆ

Weekly Horoscope

ದುಡಿಯುತ್ತೀರಿ, ಹಣಗಳಿಸುತ್ತೀರಿ. ಏನೋ ಒಂದು ಉತ್ತಮ ಮೊತ್ತ ದೊರಕಿದ ಸಮಾಧಾನವನ್ನೂ ಪಡೆಯುತ್ತೀರಿ. ಆದರೆ ಹಣ ನಿಲ್ಲಲಾರದು ಎಂಬ ಹಳ ಹಳಿಕೆ ದೂರವಾಗದು. ಕೃಷಿ ಹೈನೋದ್ಯಮ, ಕುರಿ ಸಾಕಣಿಕೆ, ಕೋಳಿ ಸಾಕಣಿಕೆ, ವಾಣಿಜ್ಯ ಕೃಷಿ ಉತ್ಪನ್ನಗಳು ಇತ್ಯಾದಿ ಕೈ ಹಿಡಿಯಬಲ್ಲವು. ತಾಂತ್ರಿಕ ಪರಿಣಿತರು, ವಿದ್ಯುನ್ಮಾನ ತಂತ್ರಜ್ಞರು ಬಳಲಿಕೆ ಇದ್ದರೂ ನಿಮ್ಮ ಕುಶಾಗ್ರತೆಗೆ ಮನ್ನಣೆ ಸಿಗುವ ವರ್ತಮಾನ ನಿಮಗೆ ಅನುಕೂಲಕರವಾಗಿ ಒದಗಿ ಬರಬಲ್ಲದು. ಮಹಾಗಣಪತಿಯ್ನು ಸ್ತುತಿಸಿ, ಲಾಭ ಇದೆ.
ಶುಭ ಸಂಖ್ಯೆ: 6 ಶುಭ ದಿಕ್ಕು: ಪಶ್ಚಿಮ

ವೃಷಭ: ಮಾನಸಿಕ ಶಾಂತಿಯೇ ನಿಮಗೆ ವಜ್ರಾಯುಧ!

Weekly Horoscope

ಮೂಗಿನ ತುದಿಗೇ ಕೋಪ ಎಂಬುದನ್ನು ಕೈ ಬಿಡಿ. ಹಲವು ಉನ್ನತ ಸ್ಥಾನಮಾನ, ಪ್ರಮೋಷನ್‌ ಇತ್ಯಾದಿ ಸಂಪಾದಿಸಲು ಕಾಲ ಸರಳವಾಗುತ್ತದೆ. ಮಾತಿನ ಮೇಲೆ ನಿಯಂತ್ರಣ ಇರಲಿ. ವಿನಯ ಪೂರ್ಣವಾದ ನಡೆ ನುಡಿಗಾಗಿ ಪ್ರಯತ್ನಿಸುವಿರಾದರೂ ಅನಾವಶ್ಯಕವಾಗಿ ನಿಮ್ಮನ್ನು ಕೆರಳಿಸುವವರ ಮಾತಿಗೆ ಕಿವಿಕೊಡದಿರಿ. ಹಲವು ವಿರೋಧಿಗಳಿಂದಲೇ ನಿಮಗೆ ಸಹಾಯ ಒದಗಿ ಬರಬಲ್ಲದು. ಮಾನಸಿಕ ಶಾಂತಿಯೇ ನಿಮ್ಮ ವಜ್ರಾಯುಧವಾಗಿದ್ದು ಕಾವೇರಿದ ವಾತಾವರಣ ನಿಗ್ರಹಿಸಿ. ಮಹಾಗಣಪತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಆಗ್ನೇಯ

ಮಿಥುನ: ನಿಮ್ಮ ವರ್ಚಸ್ಸು ಹೆಚ್ಚುವ ಸಮಯ

Weekly Horoscope

ವರ್ಚಸ್ವೀ ವ್ಯಕ್ತಿಯಾಗಿ ಎದ್ದು ನಿಲ್ಲುವಲ್ಲಿ ವರ್ತಮಾನ ನಿಮ್ಮ ಸಹಾಯಕ್ಕೆ ಒದಗಿ ಬರಲಿದೆ. ಹಾಗೆಯೇ ಕೌಟುಂಬಿಕ ವಿಚಾರದಲ್ಲಿ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುವ ವ್ಯವಧಾನ ಕಳಕೊಳ್ಳದಿರಿ. ನಿಮ್ಮ ಪಾಲಿನ ಕೆಲವು ಪ್ರಾಪ್ತಿಯನ್ನು ಪಡೆಯುವಲ್ಲಿ ಕೆಲ ಹಿರಿಯರಿಂದ ನಿಮಗೆ ಉತ್ತಮ ಬೆಂಬಲ ಲಭ್ಯ. ಮಕ್ಕಳ ಬಗೆಗೆ ಗಮನ ಇರಲಿ. ಅನಾವಶ್ಯಕ ಮೊಂಡಾಟಗಳಿಗೆ ಮಕ್ಕಳು ಹೆಜ್ಜೆ ಇರಿಸಲು ಸಾಧ್ಯ. ಮಕ್ಕಳನ್ನು ನಿಯಂತ್ರಿಸಿ. ಆದರೆ ಒತ್ತಡದಿಂದ ನಿಯಂತ್ರಿಸದಿರಿ, ಮಮತೆ ಇರಲಿ. ಶಿವನ ಸ್ತುತಿ ಕ್ಷೇಮ.
ಶುಭ ಸಂಖ್ಯೆ : 1 ಶುಭ ದಿಕ್ಕು: ಈಶಾನ್ಯ

ಕಟಕ: ಅತಿಯಾದ ಆತ್ಮವಿಶ್ವಾಸದಿಂದ ಕೇಡು

Weekly Horoscope

ಬಿರುಗಾಳಿಯ ಹೊಡೆತಕ್ಕೆ ಸಿಕ್ಕುಬಿದ್ದ ಅನುಭವ ಎದುರಾಗಬಹುದು. ಎದೆಗುಂದದೆಯೇ ಮುಂದೆ ಸಾಗುವ ಧೈರ್ಯ ಹೊಂದಿರಿ. ಅನಾವಶ್ಯಕವಾದ ವಿವಾದವನ್ನು ಯಾರ ಜತೆಗೂ ಮಾಡದಿರಿ. ಹಾಗೆಯೇ ಬಾಳ ಸಂಗಾತಿಯ ಜತೆಗೂ ಸಮಾಧಾನ ಮತ್ತು ಹೊಂದಾಣಿಕೆಯ ನಿಲುವಿರಲಿ. ಮನಸ್ಸಿನ ಶಾಂತಿಯ ಮೂಲಕವೇ ಕೆಲವು ಸಕಾರಾತ್ಮಕ ಬೆಳವಣಿಗೆಯ ಬಗೆಗಾಗಿನ ದಾರಿ ಲಭ್ಯವಾಗಲು ಸರಳವಾಗುತ್ತದೆ. ಧ್ಯೋಯೋದ್ದೇಶ ಗಳನ್ನು ನೆನಪಿನಲ್ಲಿಡಿ, ಹೊರತೂ ಅವಮಾನಕ್ಕಾಗಿ ಕುಗ್ಗದಿರಿ. ಭವಾನಿ ಶಂಕರನನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಉತ್ತರ

ಸಿಂಹ: ಧೈರ್ಯದಿಂದ ಮುನ್ನುಗ್ಗಲು ಸೂಕ್ತ ಕಾಲ

Weekly Horoscope

ಉತ್ತಮವಾದ ಕಾಲಘಟ್ಟವಾದರೂ ಕೆಲವು ಕೀಳು ಮನೋಭಾವದ ಜನರ ಒರಟುತನವನ್ನು ನೀವು ಸಹಿಸಿಕೊಳ್ಳಲೇಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ಶುಭ ವಾರ್ತೆ ಇದೆ. ವಿವಾಹಾಪೇಕ್ಷಿಗಳಿಗೆ ಇದು ಸೂಕ್ತ ಕಾಲ. ಕಾಲದ ಕತ್ತಲು ಕತ್ತುಹಿಸುಕದಂತೆ ರಾಹು ಕವಚ ಓದಿ. ನರಸಿಂಹನನ್ನೂ ಸ್ತುತಿಸಿ, ಒಳತಿದೆ. ಧೈರ್ಯದಿಂದ ಮುನ್ನುಗ್ಗಲು ಕೂಡ ಈಗ ಕಾಲ ನಿಮಗೆ ಸ್ನೇಹಶೀಲವಾಗಿದೆ. ಹಣಕಾಸಿನ ಸ್ಥಿತಿಯ ಬಗೆಗೂ ನಿಮಗೆ ಪ್ರತಿಕೂಲ ಸನ್ನಿವೇಶ ಬರಲಾರದು. ವೈದ್ಯರುಗಳಿಗೆ ಸಂತಸದ ವಾರ್ತೆ. ಒಟ್ಟಿನಲ್ಲಿ ಒಳಿತಿನ ಕಾಲ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪಶ್ಚಿಮ

ಕನ್ಯಾ: ಕೆಲಸದ ಸ್ಥಳದಲ್ಲಿ ಎಲ್ಲರಿಂದ ಪ್ರಶಂಸೆ

Weekly Horoscope

ನಿರಾಳವಾಗಿರಲು ಬೇಕಾದ ಉತ್ತಮ ಕಾಲಘಟ್ಟವಾಗಿದೆ ಇದು. ಆದರೂ ಮಹತ್ವದ ಸಂದರ್ಭದಲ್ಲಿ ಕುಹಕಿಗಳ ಅಪಸ್ವರ ನಿಮ್ಮ ಮನಃಶಾಂತಿಯನ್ನು ಕದಡಲು ಸಾಧ್ಯವಿದೆ. ಆದರೆ ನಿಮ್ಮಲ್ಲಿನ ಬೌದ್ಧಿಕ ಸೂಕ್ಷ್ಮ ಹಾಗೂ ಕೆಡುಕು, ಒಳಿತುಗಳ ಬಗೆಗಿನ ಸೂಕ್ತ ವಿವೇಚನೆ, ಕುಹಕಿಗಳನ್ನು ಕಟ್ಟಿ ಹಾಕಲು ಯುಕ್ತಿಯನ್ನು ಒದಗಿಸಲು ಅನುಕೂಲಕರವೇ ಆಗಿರುತ್ತದೆ. ಶನಿ ಕಾಟದಿಂದ ಬೇಸತ್ತು ಖಿನ್ನತೆಗೆ ದೂಡಲ್ಪಟ್ಟ ನೀವೀಗ ವಿರೋಧಿಗಳನ್ನು ಎದುರಿಸಲು ಅವಕಾಶಗಳು ಲಭ್ಯ. ಎದುರಾಳಿಗಳೇ ಲಾಭ ತರಬಲ್ಲರು. ಮಹಾವಿಷ್ಣುವನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಉತ್ತರ

ತುಲಾ: ಒತ್ತಡಗಳಿರುವ ವಾರ

Weekly Horoscope

ನಿಮ್ಮ ನೆಮ್ಮದಿಯ ಕ್ಷಣಗಳು ತಕ್ಕಡಿಯಂತೆ ಮೇಲೆ ಕೆಳಗೆ ಹೊಯ್ದಾಡುತ್ತ ಕಿರಿಕಿರಿ ಸೃಷ್ಟಿಸುತ್ತ ಹೋಗುವ ದಿನಗಳಾಗಿವೆ. ನಿಮ್ಮನ್ನು ಬಿಡಲಾರದ ಒತ್ತಡಗಳ ಬಗ್ಗೆ ತೀರಾ ಆಪ್ತರ ಬಳಿ ಮಾತ್ರ ಚರ್ಚಿಸಿ. ಇಲ್ಲದೇ ಹೋದರೆ ಕುಕೃತ್ಯಗಳಲ್ಲಿ ತೊಡಗಿಕೊಳ್ಳುವ, ತೊಡಗಿ ಕೊಂಡಿರುವ ಜನರು ಬ್ಯುಸಿನೆಸ್‌ ವಿಚಾರದಲ್ಲಿ ಅನೇಕ ಸಮಸ್ಯೆಗಳಿಗೆ ನಿಮ್ಮನ್ನು ದೂಡಿಯಾರು. ಪಾರ್ಟ್‌ನರ್‌ಶಿಪ್‌ ವಹಿವಾಟಿನಲ್ಲಿ ಎಚ್ಚರವಿರಲಿ. ಹಣವನ್ನು ಸಾಲವಾಗಿ ಕೊಡಲೇ ಬೇಡಿ. ಕೊಟ್ಟಿದ್ದು ವಾಪಾಸಾಗಲೂ ಪರದಾಡುವಿರಿ. ಎಚ್ಚರ, ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಈಶಾನ್ಯ

ವೃಶ್ಚಿಕ: ಯಶಸ್ಸಿನ ಮೆಟ್ಟಿಲೇರುವ ಸಮಯ

Weekly Horoscope

ರಾಜಕಾರಣ, ಸ್ಪರ್ಧಾತ್ಮಕ ಪರೀಕ್ಷೆಗಳು ಹೆಚ್ಚಿನ ಅಧಿಕಾರಯುತ ಸ್ಥಾನಕ್ಕಾಗಿನ ಅವಕಾಶಗಳು, ತೀರಾ ಮಹತ್ವದ ಪ್ರಮೋಷನ್‌ ಇತ್ಯಾದಿಗಳಿಗೆ ಕಾಲಘಟ್ಟ ಬಹಳ ಮಟ್ಟಿಗೆ ಸೂಕ್ತವಾಗಿದೆ. ಚುನಾವಣೆಯ ದಿನಗಳಾಗಿರುವ ಸಂದರ್ಭದಲ್ಲಿ ಸ್ಪರ್ಧೆಯ ಕುರಿತಾದ ವಿಚಾರವನ್ನು ನಿಯೋಜಿಸಬಹುದಾಗಿದೆ. ಬಾಸ್‌ಬಳಿ ಹಾರ್ದಿಕವಾದ ಸಂಬಂಧ ಹೊಂದಲು ಕಾಲದ ನೆರವು ನಿಮಗೀಗ ಲಭ್ಯ. ಬೌದ್ಧಿಕವಾಗಿ ಚುರುಕಾಗಿರುವ ಮಂದಿಗೆ ಅವಕಾಶಗಳು ವಾಣಿಜ್ಯ ರಂಗದಲ್ಲಿ ಒದಗಿ ಬರುವುದು ಸುಸ್ಪಷ್ಟ. ಶ್ರೀ ಗುರು ದತ್ತಾತ್ರೇಯನ್ನನು ಆರಾಧಿಸಿ.
ಶುಭ ಸಂಖ್ಯೆ : 9ಶುಭ ದಿಕ್ಕು: ದಕ್ಷಿಣ

ಧನಸ್ಸು: ಧೈರ್ಯವೇ ನಿಮ್ಮ ಗೆಲುವಿನ ಗುಟ್ಟು

Weekly Horoscope

ಧೈರ್ಯವೇ ಇದೀಗ ನಿಮ್ಮ ಬಂಡವಾಳ. ಅಷ್ಟೇ ಅಲ್ಲ ಗೆಲುವಿನ ಗುರಿ ತಲುಪಲು ಇದು ಸಂಜೀವಿನಿ ಕೂಡಾ. ಅಧೈರ್ಯದಿಂದ ಉಂಟಾಗುವ ಹೊಯ್ದಾಟ ಬೇಡ. ಸೂಕ್ತವಾದ ನಿರ್ಣಯಕ್ಕೆ ಬನ್ನಿ. ಚುರುಕಿನ ವಾಕ್‌ ಚಾತುರ್ಯದಿಂದ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ. ವ್ಯವಹಾರಿಕ ವಿಚಾರದಲ್ಲಿ ಉದ್ಯಮಿಗಳು, ಆಡಳಿತಗಾರರು, ಷೇರು ಮಾರ್ಕೆಟ್‌ನ ಧನಪತಿಗಳು ನಿಮ್ಮ ಸಲಹೆ ಸೂಚನೆಗಳಿಗಾಗಿ ನಿಮ್ಮ ಬೆನ್ನು ಹಿಡಿಯುತ್ತಾರೆ. ಸೂಕ್ತವಾದ ಸಂಭಾವನೆ ಸರಿ, ಜಾಸ್ತಿ ಸಂಭಾವನೆಗೂ ಅವಕಾಶ ಜಾಸ್ತಿ. ಮಹಾಲಕ್ಷ್ಮೀಯನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ನೈಋತ್ಯ

ಮಕರ: ತಪ್ಪು ನಿರ್ಧಾರ ಬೇಡವೇ ಬೇಡ

Weekly Horoscope

ಎದುರೇ ಎದ್ದೆದ್ದು ಬರುವ ಶರಧಿಯ ಹುಚ್ಚೆದ್ದ ತೆರೆಗಳು ಜೀವನದ ಸಂದರ್ಭದ ಚಟುವಟಿಕೆಗಳಲ್ಲಿ ರಭಸದಿಂದ ನಿಮ್ಮ ವಿರುದ್ಧ ದಾಳಿ ಎಬ್ಬಿಸಬಹುದಾಗಿದೆ. ನೆಲಕಚ್ಚಿ ನಿಲ್ಲಿ. ಸುಳಿಯ ವಿರುದ್ಧ ಹುಚ್ಚು ಆವೇಶದ ಕಡಲ ಅಲೆಗಳ ಸ್ವರೂಪದ ಸಮಸ್ಯೆಗಳಿರುವಾಗ ಹಗುರಾಗಿ ನಿರ್ಲಕ್ಷದಿಂದ ಈಜಾಡಲು ಹೋಗಬೇಡಿ. ಒಂದೇ ಒಂದು ತಪ್ಪು ನಿರ್ಧಾರ ದೊಡ್ಡದೇ ಬೆಲೆ ತೆರುವ ಪ್ರಮಾದ ಸೃಷ್ಟಿಸಬಹುದು. ಮನೆಯ, ಕುಟುಂಬದ ಜಗಳ ಹೊರ ಜನರ ದೃಷ್ಟಿಗೆ ಬಾರದಂತೆ ನೋಡಿ. ನಗೆಪಾಟಲು ಆಗದಿರಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ನೈಋತ್ಯ

ಕುಂಭ: ಎಚ್ಚರಿಕೆಯಿಂದಿರಬೇಕಾದ ಸಮಯ

Weekly Horoscope

ನಿಮ್ಮ ವಿಶ್ವಾಸದ ವಿಚಾರ ನಿಮಗೆ ಹಲವಾರು ಸಮಸ್ಯೆಗಳನ್ನು ಗೆಲ್ಲಿಸಿಕೊಟ್ಟಿರಬಹುದಾದರೂ ಈಗ “ಅರೆ ಭಾಯ್‌ , ಚಲೇಗಾ ಸಬ್‌ʼʼ ಎಂಬ ಧೋರಣೆ ಹೊಂದದಿರಿ. ಹಿಮಾಲಯವನ್ನು ಹತ್ತಿರಬಹುದು ನೀವು ಆದರೆ ಈಗ ಹುಲ್ಲ ಕಡ್ಡಿ ಎತ್ತುವುದೂ ದುಸ್ತರದ ವಿಷಯವಾಗಿದೆ. ಎಚ್ಚರ ಇರಲಿ. ಕಾಡಲ್ಲಿ ನೀವು ಇರದಿದ್ದರೂ ನಾಡಲ್ಲಿ ಹುಲಿಗಳು, ಚಿರತೆಗಳು ನಡೆದಾಡುವ ಕಾಲ ಘಟ್ಟ ಇದು, ಹುಶಾರಾಗಿರಿ. ಮತಿ ಹೀನರ ದುಡುಕು ನಿರ್ಧಾರ, ಮಾತುಗಳಿಗೆ ನೀವು ಬೆಲೆ ತೆರುವ ಸಮಯ. ಸದಾ ಶಿವ ಸ್ತುತಿ ಮಾಡಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ವಾಯವ್ಯ

ಮೀನ: ಒತ್ತಡ, ಗೊಂದಲಗಳಿರುವ ವಾರ

Weekly Horoscope

ಹೊಯ್ದಾಟ, ಒತ್ತಡ, ಹಾಗೊಂದು ರೀತಿಯ ಸಾಹಸಕ್ಕೆ ಮುನ್ನುಗ್ಗಲು ಏನೋ ಅಧೈರ್ಯ ಇತ್ಯಾದಿ ನಿಮ್ಮನ್ನು ಮುತ್ತಿಕೊಳ್ಳಲಿವೆ. ಲಾಭಕಾರಕನಾಗಿದ್ದ ಶನೈಶ್ವರ ಚಂದ್ರನನ್ನು ಕೈವಶ ಪಡಿಸಿಕೊಂಡು ನಿಮ್ಮ ಮನೋಮಂಡಲವನ್ನು ಸಂದಿಗ್ಧದಲ್ಲಿ ತೂಗುಯ್ಯಾಲೆಯಂತೆ ಗರಗರ ತಿರುಗಿಸಿ ಬಸವಳಿಸಲು ಸರ್ವ ಸನ್ನದ್ಧನಾಗಿದ್ದಾನೆ. ಅವಸರಿಸದೆ ನಿರ್ಣಯಕ್ಕೆ ಬನ್ನಿ. ಬಾಳ ಸಂಗಾತಿಯ ಸಹಾಯದಿಂದ ನಿಮ್ಮ ಮನಸ್ಸಿನ ಮಂಕುತನಕ್ಕೆ ಆಸ್ಪದವಾಗದ ಬಹಳ ತೂಕದ ಗುರುತರ ಬೆಂಬಲ, ಸಲಹೆಗಳು ಸಿಗಬಹುದು. ಶ್ರೀರಾಮ ರಕ್ಷಾ ಸ್ತೋತ್ರ ಓದಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಆಗ್ನೇಯ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಗ್ಯಾಜೆಟ್ಸ್

HP Pavilion Aero 13 ಲ್ಯಾಪ್‌ಟಾಪ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ? ಬೆಲೆ ಎಷ್ಟು?

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಲ್ಯಾಪ್‌ಟಾಪ್ ಲಾಂಚ್ ಆಗಿದೆ. ಸಾಕಷ್ಟು ಹೊಸ ಫೀಚರ್ಸ್‌ಗಳೊಂದಿಗೆ HP Pavilion Aero 13 ಲ್ಯಾಪ್‌ಟ್ಯಾಪ್ ಗಮನ ಸೆಳೆಯುತ್ತಿದೆ.

VISTARANEWS.COM


on

Edited by

HP Pavilion Aero 13 Laptop Launched and Check details
Koo

ಬೆಂಗಳೂರು: ಎಚ್‌ಪಿ ಕಂಪನಿಯು ಭಾರತದಲ್ಲಿ ತನ್ನ ಹೊಸ ಪೆವಿಲಿಯನ್ ಏರೋ 13 (HP Pavilion Aero 13) ಲ್ಯಾಪ್‌ಟ್ಯಾಪ್‌ಗಳನ್ನು ಮಂಗಳಾರ ಬಿಡುಗಡೆ ಮಾಡಿದೆ. ಶಕ್ತಿಯುತ ಕಾರ್ಯಕ್ಷಮತೆಗಾಗಿ AMD Ryzen™ 7 ಪ್ರೊಸೆಸರ್ ಮತ್ತು Radeon™ ಗ್ರಾಫಿಕ್ಸ್‌ ಒಳಗೊಂಡಿದೆ. GenZ ಮತ್ತು ಈ ಸಹಸ್ರಮಾನದ ಆಧುನಿಕ ಗ್ರಾಹಕರಿಗಾಗಿ ಈ ಸಾಧನವನ್ನು ನಿರ್ಮಿಸಲಾಗಿದೆ. ಯಾವುದೇ ಸಮಯ ಅಥವಾ ಸ್ಥಳದಲ್ಲಿ ಉತ್ಪಾದಕವಾಗಿ ಕೆಲಸ ಮಾಡಲು ಮತ್ತು ಕಲಿಯಲು ಅನುವು ಮಾಡಿಕೊಡುತ್ತದೆ.

ಆಧುನಿಕ ಜಗತ್ತಿನಲ್ಲಿ, ಬಹುಮುಖವಾದ ಹಲವು ಕಾರ್ಯಗಳನ್ನು ಮಾಡಬಲ್ಲ, ಕೆಲಸ ಮತ್ತು ಕಲಿಕೆ ಎರಡನ್ನೂ ನಿಭಾಯಿಸಬಲ್ಲ ಸಾಧನಗಳನ್ನು ಗ್ರಾಹಕರು ಅರಸುತ್ತಿರುತ್ತಾರೆ. ಹೈಬ್ರಿಡ್ ಕಾರ್ಯಶೈಲಿಗೆ ಸರಿಹೊಂದುವಂತೆ ಈ ಸಾಧನಗಳು ಹಗುರವಾಗಿರಬೇಕು ಮತ್ತು ಯುವ ಪೀಳಿಗೆಯ ಆದ್ಯತೆಗಳನ್ನು ಪೂರೈಸುವಂತೆ ಆಕರ್ಷಕವಾಗಿರಬೇಕು. ಹೊಚ್ಚ-ಹೊಸ HP ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ Wi-Fi6 ಜತೆಗೆ ವೇಗದ ಮತ್ತು ವಿಶ್ವಾಸಾರ್ಹ ಸಂಪರ್ಕವನ್ನು ಹೊಂದಿದೆ. 10.5 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಇದ್ದು, ಯಾವುದೇ ಸ್ಥಳದಿಂದ ಕೆಲಸ, ಬ್ರೌಸಿಂಗ್ ಮತ್ತು ಸ್ಟ್ರೀಮಿಂಗ್ ಮಾಡಲು ಸೂಕ್ತವಾಗಿದೆ.

400 ನಿಟ್ಸ್ ಪ್ರಕಾಶಮಾನವಾದ ಮತ್ತು 16:10 ಆಕಾರ ಅನುಪಾತದಗ ಸ್ಕ್ರೀನ್ ಬಳಕೆದಾರರಿಗೆ ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ನೀಡುತ್ತದೆ. HP ಪೆವಿಲಿಯನ್ ಏರೋ 13 ಕೇವಲ 970 ಗ್ರಾಂ ಭಾರವಿದ್ದು, GenZ ಗಳು ಮತ್ತು ಈ ಸಹಸ್ರಮಾನದ ಯುವಜನರಿಗೆ ಪೋರ್ಟಬಿಲಿಟಿಯನ್ನು ಸಕ್ರಿಯಗೊಳಿಸುತ್ತದೆ. ಇದು ಅವರ ಶೈಲಿ ಮತ್ತು ಜೀವನಶೈಲಿಗೆ ಹೊಂದಿಕೊಳ್ಳಲು ಮೂರು ವಿಶಿಷ್ಟ ಬಣ್ಣಗಳಲ್ಲಿದೆ – ಪೇಲ್ ರೋಸ್ ಗೋಲ್ಡ್, ವಾರ್ಮ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್.

HP ಇಂಡಿಯಾ ಪರ್ಸನಲ್ ಸಿಸ್ಟಮ್ಸ್ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಮಾತನಾಡಿ, “ಪಿಸಿಗಳು ಹೈಬ್ರಿಡ್ ಪರಿಸರದಲ್ಲಿ ಜನರ ಜೀವನದ ಪ್ರಮುಖ ಅಂಶಗಳಾಗುತ್ತಿವೆ. ಆಧುನಿಕ ಜಗತ್ತಿನಲ್ಲಿ ಬಹುಮುಖ ಮತ್ತು ಶಕ್ತಿಯುತ ಕಂಪ್ಯೂಟಿಂಗ್ ಪರಿಹಾರಗಳಿಗಾಗಿ ವೃದ್ಧಿಸುತ್ತಿರುವ ಬೇಡಿಕೆಯನ್ನು ಪೂರೈಸಲು HP ವಿನ್ಯಾಸಗೊಳಿಸಿದ ಹೊಸ ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. ಇದು ಅಸಾಧಾರಣ ಕಾರ್ಯಕ್ಷಮತೆ ಮತ್ತು ಚಲನಶೀಲತೆಯನ್ನು ನೀಡುತ್ತದೆ, ಬಳಕೆದಾರರು ಪ್ರಯಾಣಿಸುತ್ತಿರುವಾಗಲೂ ಉತ್ಪಾದಕವಾಗಿರಲು ಮತ್ತು ಮನೋರಂಜನೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. HP ಪೆವಿಲಿಯನ್ ಏರೋ 13 ಆಕರ್ಷಕವಾದ ಪ್ರೀಮಿಯಂ ಲ್ಯಾಪ್‌ಟಾಪ್ ಆಗಿದೆ. ಕೆಲಸ ಮತ್ತು ಗೇಮಿಂಗ್ – ಎರಡೂ ವಿಷಯಗಳಲ್ಲಿ ಬಳಕೆದಾರರಿಗೆ ಅಸಾಧಾರಣವಾಗಿ ಆಪ್ತವಾಗುತ್ತದೆ.

ಹೈಬ್ರಿಡ್ ಪರಿಸರಕ್ಕೆ ಅನುಗುಣವಾಗಿ ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ನೀಡುವಂತೆ ಹಗುರವಾದ ಆದರೆ ಶಕ್ತಿಶಾಲಿಯಾದ HP ಪೆವಿಲಿಯನ್ ಏರೋ 13 ರೂಪಿಸಲಾಗದೆ. ಕೆಲಸ ಮಾಡಲು ಅಥವಾ ಸ್ನೇಹಿತರ ಜತೆಗೆ ಸ್ಪಷ್ಟವಾದ ವೀಡಿಯೋ ಕರೆಗಳನ್ನು ಮಾಡಲು ಮತ್ತು ಅನಗತ್ಯವಾದ ಹಿನ್ನೆಲೆಯ ಗದ್ದಲವನ್ನು ನಿವಾರಿಸುವ ಸೌಕರ್ಯವನ್ನು ಹೊಂದಿದೆ. 100% sRGB ಸಹಿತವಾದ ವಿಶಾಲವಾದ ಕಲರ್‌ ಪ್ಯಾಲೆಟ್ ವೆಬ್‌ನಲ್ಲಿ ಸರ್ಫ್ ಮಾಡುವಾಗ ಮತ್ತು ವೀಡಿಯೋಗಳನ್ನು ಸ್ಟ್ರೀಮ್ ಮಾಡುವಾಗ ಹೆಚ್ಚು ರೋಮಾಂಚಕ ಚಿತ್ರಗಳ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಫ್ಲಿಕರ್-ರಹಿತವಾದ ಪರದೆಯು ದಿನವಿಡೀ ಕೆಲಸ ಮಾಡಲು ಮತ್ತು ರಾತ್ರಿಯಿಡೀ ಆಟವಾಡಲು ಸೌಕರ್ಯ ನೀಡುವುದು HP ಪೆವಿಲಿಯನ್ ಏರೋ ವಿಶೇಷತೆಯಾಗಿದೆ. ಹೆಚ್ಚುವರಿಯಾಗಿ, 2.5k ರೆಸಲ್ಯೂಶನ್ ಸ್ಕ್ರೀನ್ ಮೇಲೆ ತೀಕ್ಷ್ಣವಾದ ಚಿತ್ರಗಳು ಮತ್ತು ಪಠ್ಯಗಳನ್ನು ಮೂಡಿಸುತ್ತದೆ. ಇದನ್ನು 4-ಬದಿಗಳ ಕಿರಿದಾದ ಅಂಚಿನ ಸ್ಕ್ರೀನ್ ವೀಕ್ಷಣೆಗೆ ಇರುವ ಎಲ್ಲ ಅಡ್ಡಿಗಳನ್ನೂ ನಿವಾರಿಸುತ್ತದೆ.

ಸುಸ್ಥಿರತೆ ಮತ್ತು ಪರಿಸರ ರಕ್ಷಣೆಗೆ HP ಯ ಬದ್ಧತೆಗೆ ಅನುಗುಣವಾಗಿ HP ಪೆವಿಲಿಯನ್ ಏರೋ 13 ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಬಳಸಿದ ಮರುಬಳಕೆಯ ಮತ್ತು ಸಾಗರದಿಂದ ಸಂಗ್ರಹಿಸಿದ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿದೆ. VOC ಹೊರಸೂಸುವಿಕೆ ತಗ್ಗಿಸಲು ನೀರು-ಆಧಾರಿತ ಬಣ್ಣವನ್ನು ಬಳಸಲಾಗಿದೆ.

HP ಪೆವಿಲಿಯನ್ ಏರೋ 13 ವಿಶೇಷತೆಗಳೇನು?

ಡಿಸ್‌ಪ್ಲೇ ಹೇಗಿದೆ?

• 16:10 ಆಕಾರ ಅನುಪಾತದೊಂದಿಗೆ HP ಯ ಪ್ರಥಮ ಪೆವಿಲಿಯನ್ ಲ್ಯಾಪ್‌ಟಾಪ್
• ತಡೆರಹಿತ ಬ್ರೌಸಿಂಗ್ ಅನುಭವಕ್ಕಾಗಿ 400 ನಿಟ್‌ಗಳಷ್ಟು ಪ್ರಕಾಶಮಾನ ಡಿಸ್‌ಪ್ಲೇ
• ಫ್ಲಿಕರ್-ರಹಿತ ಪರದೆ
• ವೀಕ್ಷಣೆಯ ಅಡ್ಡಿಗಳನ್ನು ನಿವಾರಿಸಲು 4-ಬದಿ ಕಿರಿದಾದ ಅಂಚಿನ ಡಿಸ್‌ಪ್ಲೇ
• ತೀಕ್ಷ್ಣವಾದ ಚಿತ್ರಗಳು ಮತ್ತು ಪಠ್ಯಕ್ಕಾಗಿ 2.5k ರೆಸಲ್ಯೂಶನ್
• ಬಿಸಿಲಿನಲ್ಲೂ ಬ್ರೌಸಿಂಗ್ ಮಾಡುವುದಕ್ಕಾಗಿ 400 ನಿಟ್ಸ್ ಪ್ರಕಾಶ
• 100% sRGB ಯೊಂದಿಗೆ ವಿಶಾಲ ಕಲರ್ ಪ್ಯಾಲೆಟ್

ಕಾರ್ಯಕ್ಷಮತೆ

• ಸುಗಮ ಕಾರ್ಯಕ್ಷಮತೆಗಾಗಿ AMD Ryzen™ 7000 ಸರಣಿಯ ಪ್ರೊಸೆಸರ್, Radeon™ ಗ್ರಾಫಿಕ್ಸ್
• Wi-Fi 6 ಜೊತೆಗೆ ವಿಶ್ವಾಸಾರ್ಹ ಮತ್ತು ವೇಗದ ಸಂಪರ್ಕ
• ತಡೆರಹಿತ ಕಲಿಕೆ ಮತ್ತು ಕೆಲಸಕ್ಕಾಗಿ 10.5 ಗಂಟೆಗಳ ಬ್ಯಾಟರಿ ಬಾಳಿಕೆ
• ಉತ್ತಮ ವೀಡಿಯೊ ಕರೆಗಳಿಗಾಗಿ AI ನಾಯ್ಸ್ ರಿಮೂವಲ್ ಸೌಕರ್ಯ
• ಕಾರ್ಯಗಳ ಬೇಡಿಕೆಯನ್ನು ನಿರ್ವಹಿಸಲು DDR5 RAM

ವಿನ್ಯಾಸ

• ಕೇವಲ 970 ಗ್ರಾಂ ಭಾರವಿದ್ದು, ಪೋರ್ಟಬಿಲಿಟಿಯನ್ನು ಖಚಿತಪಡಿಸುತ್ತದೆ.
• ಮೂರು ಬಣ್ಣಗಳಲ್ಲಿ ಲಭ್ಯವಿದೆ – ರೋಸ್ ಪೇಲ್ ಗೋಲ್ಡ್, ವಾರ್ಮ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್

ಬೆಲೆ ಮತ್ತು ಲಭ್ಯತೆ

• HP Pavilion Aero 13 (Ryzen 5 ಸಹಿತ) 72,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ
• HP Pavilion Aero 13 (Ryzen 7 ಸಹಿತ) 1TB SSD 82,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

Continue Reading

ಕರ್ನಾಟಕ

Karnataka Election: ಸಿಎಂ ಬೊಮ್ಮಾಯಿಗೇ ಟಿಕೆಟ್‌ ಸಿಗುವುದು ಡೌಟು ಎಂದ ಕಾಂಗ್ರೆಸ್‌

ನಿರುದ್ಯೋಗಿ ಯುವಕರಿಗೆ ಮಾಸಿಕೆ ಭತ್ಯೆ ನೀಡುವ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯನ್ನು ಮೊದಲಿಗೆ ರಾಹುಲ್‌ ಗಾಂಧಿಯವರಿಂದಲೇ ಆರಂಭಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದರು.

VISTARANEWS.COM


on

Edited by

congress says cm basavraj bommai will not get chance to contest inkarnataka election
Koo

ಬೆಂಗಳೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಯುವಕರಿಗೆ ಮಾಸಿಕ ನುರುದ್ಯೋಗ ಭತ್ಯೆ ನೀಡುವ ಗ್ಯಾರಂಟಿ ಯೋಜನೆಯನ್ನು ಟೀಕಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇ ಚುನಾವಣೆ ಟಿಕೆಟ್‌ ಸಿಗುವುದು ಅನುಮಾನ ಎಂದು ಕಾಂಗ್ರೆಸ್‌ ಹೇಳಿದೆ.

ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ಮೂರು ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ ಮಾಸಿಕ ಒಂದೂವರೆ ಸಾವಿರ ರೂ. ನೀಡುವುದಾಗಿ ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಘೋಷಣೆ ಮಾಡಿದ್ದರು. ಈ ಕುರಿತು ಬಾಗಲಕೋಟೆಯಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, ಈ ಯೋಜನೆಯನ್ನು ಮೊದಲಿಗೆ ರಾಹುಲ್‌ ಗಾಂಧಿಯವರಿಂದಲೇ ಆರಂಭಿಸಬೇಕು. ನಿರುದ್ಯೋಗಿಗಳಿಗೆ ಭತ್ಯೆ ಬಗ್ಗೆ ರಾಜಸ್ಥಾನ, ಛತ್ತೀಸ್‌ಗಢದಲ್ಲಿಯೂ ಹೇಳಿದ್ದರು. ಆದರೆ ಅನುಷ್ಠಾನವಾಗಿಲ್ಲ. ಅವರು ಹತಾಶರಾಗಿದ್ದಾರೆ. ಅವರಿಗೆ ಆಂತರಿಕ ಸಮೀಕ್ಷೆಯಲ್ಲಿ ಗೆಲ್ಲುವುದಿಲ್ಲ ಎಂದು ತಿಳಿದಿದೆ. ಶೇ 3-4 ರಷ್ಟು ಮತ ಗೆಲ್ಲಲು ಈ ರೀತಿಯ ಆಗಲಾರದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕ ರಾಜಸ್ಥಾನ ಅಥವಾ ಛತ್ತೀಸ್‌ಗಢ ಅಲ್ಲ. ಕರ್ನಾಟಕದ ಜನ ಬಹಳ ಪ್ರಬುದ್ಧರಿದ್ದಾರೆ. ಯಾರು ಯಾಕೆ ಮಾತನಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “ಸ್ವತಃ ತಮಗೇ ಬಿಜೆಪಿಯ ಟಿಕೆಟ್ ಸಿಗುವ ಭರವಸೆ ಇಲ್ಲದ, ಟಿಕೆಟ್ ಸಿಕ್ಕರೂ ಗೆಲ್ಲುವ ಭರವಸೆ ಇಲ್ಲದ, ಗೆದ್ದರೂ ತಾವೇ ಸಿಎಂ ಹುರಿಯಾಳು ಎಂಬ ಭರವಸೆ ಇಲ್ಲದ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನೀಡಿದ ಯುವನಿಧೀ ಯೋಜನೆಯ ಭರವಸೆಯನ್ನು ಟೀಕಿಸುವುದು ಹಾಸ್ಯಾಸ್ಪದ. ಬೊಮ್ಮಾಯಿಯವರೇ, ನೀವು ಕೈಲಾಗದವರಿರಬಹುದು, ಕಾಂಗ್ರೆಸ್‌ಗೆ ಎಲ್ಲವೂ ಸಾಧ್ಯ” ಎಂದಿದೆ.

Continue Reading

ಕರ್ನಾಟಕ

Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!

ಸಿಎಂ ಬೊಮ್ಮಾಯಿ ಅವರನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್‌ ರೂಪಿಸಿರುವ ಪ್ಲ್ಯಾನ್‌ ತಿರುಗುಬಾಣವಾಗುವ ಅಪಾಯವಿದೆ. ಅಜ್ಜಂಪೀರ್‌ ಖಾದ್ರಿ ಅವರೇ ಇಲ್ಲೀಗ ನಿರ್ಣಾಯಕ

VISTARANEWS.COM


on

Edited by

Azam peer Khadri
ರಣದೀಪ್‌ ಸುರ್ಜೇವಾಲ ಅವರ ಜತೆ ಅಜ್ಜಂ ಪೀರ್‌ ಖಾದ್ರಿ
Koo

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಮತ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗಳಿಂದ ಗೆಲ್ಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರಿಗೆ ಚಮಕ್‌ ನೀಡಲು ಮುಂದಾಗಿರುವ ಪ್ಲ್ಯಾನ್‌ ಈಗ ಕಾಂಗ್ರೆಸ್‌ಗೇ ತಿರುಗುಬಾಣವಾಗುವ ಪರಿಸ್ಥಿತಿ ಎದುರಾಗಿದೆ.

ಶಿಗ್ಗಾಂವಿಯಲ್ಲಿ ಖಡಾಖಡಿ ಹೋರಾಟವನ್ನು ನೀಡುವ ಮೂಲಕ ಬೊಮ್ಮಾಯಿ ಅವರನ್ನು ಅವರ ಕ್ಷೇತ್ರದಿಂದ ಹೊರಬರದಂತೆ ಕಟ್ಟಿಹಾಕುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ. ಬೊಮ್ಮಾಯಿಗೆ ಕಠಿಣ ಸ್ಪರ್ಧೆ ನೀಡಲು ಮಾಜಿ ಸಚಿವ ವಿನಯ ಕುಲಕರ್ಣಿ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿರುವ ನಾಯಕರು ಅವರನ್ನು ಹೇಗೋ ಮನವೊಲಿಸಿ ಒಪ್ಪಿಸಿದ್ದಾರೆ. ಆದರೆ, ಈಗ ಶಿಗ್ಗಾಂವಿಯಲ್ಲಿ ಇದುವರೆಗೂ ಕಾಂಗ್ರೆಸ್‌ ಅಭ್ಯರ್ಥಿಯಾಗುತ್ತಿರುವ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಅವರು ತಿರುಗಿಬಿದ್ದಿದ್ದಾರೆ. ತನಗೆ ಟಿಕೆಟ್‌ ನೀಡದೆ ಹೋದರೆ ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಖಾದ್ರಿ ಹೇಳಿರುವುದು ಕಾಂಗ್ರೆಸ್‌ಗೆ ಬಿಸಿ ತುಪ್ಪವಾದಂತಾಗಿದೆ.

ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೇಸ್ ಟಿಕೆಟ್ ಬಯಸಿ 14 ಜನರು ಅರ್ಜಿ ಸಲ್ಲಿಕೆ ಮಾಡಿದ್ದರು. ಅಲ್ಪಸಂಖ್ಯಾತ ಕೋಟಾದಡಿ ಸತತ ಮೂರು ಸಲ ಟಿಕೆಟ್ ಪಡೆದು ಬೊಮ್ಮಾಯಿ ವಿರುದ್ಧ ಸೋತಿದ್ದ ಮಾಜಿ ಶಾಸಕ ಅಜ್ಜಂ ಪೀರ್‌ ಖಾದ್ರಿ ಈ ಸಲವೂ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ.

ಆದರೆ, ಈ ಬಾರಿ ಅಲ್ಪಸಂಖ್ಯಾತ ಅಸ್ತ್ರದ ಬದಲು ಪಂಚಮಸಾಲಿ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಅಲ್ಪಸಂಖ್ಯಾತರು ಹೇಗಿದ್ದರೂ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಅವರ ಜತೆ ಪಂಚಮಸಾಲಿಗಳ ಮತವೂ ಸೇರಿದರೆ ಬೊಮ್ಮಾಯಿ ಅವರನ್ನು ಸೋಲಿಸಬಹುದು ಎನ್ನುವುದು ಕಾಂಗ್ರೆಸ್‌ ಲೆಕ್ಕಾಚಾರ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕ ವಿನಯ ಕುಲಕರ್ಣಿ ಅವರನ್ನು ಶಿಗ್ಗಾಂವಿ ಕ್ಷೇತ್ರದಿಂದ ಕಣಕ್ಕಿಳಿಸಲು ಮನವಿ ಒಲಿಸಿದೆ. ಕೆಲವು ದಿನಗಲ ಹಿಂದೆ ದೆಹಲಿಯಲ್ಲಿ ನಡೆದ ಸಭೆಯಲ್ಲಿಯ ವಿನಯ ಕುಲಕರ್ನಿ ಜೊತೆ ಕೈ ನಾಯಕರು ಮಾತುಕತೆ ನಡೆಸಿದ್ದರು.

ಸಿದ್ದರಾಮಯ್ಯ ವಿನಯ ಕುಲಕರ್ಣಿ ಅವರ ಜತೆ ಅಜ್ಜಂ ಪೀರ್‌ ಖಾದ್ರಿ

ವಿನಯ ಕುಲಕರ್ಣಿ ಅವರ ಹೆಸರು ಮುನ್ನಲೆಗೆ ಬರುತ್ತಿದ್ದಂತೆ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಕೈ ನಾಯಕರಿಗೆ ಶಾಕ್ ನೀಡಿದ್ದಾರೆ. ಶಿಗ್ಗಾಂವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.

ಈ ನಡುವೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ತಡರಾತ್ರಿಯವರೆಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸಭೆ ನಡೆಸಿ ಮನ ಒಲಿಸಲು ಕಸರತ್ತು ನಡೆಸಿದರಾದರೂ ಅದರಲ್ಲಿ ಸಫಲರಾಗಿಲ್ಲ. ಖಾದ್ರಿ ಅವರು ಸಿದ್ದರಾಮಯ್ಯ ಬೆಂಬಲಿಗರಾಗಿರುವುದರಿಂದ ಜಮೀರ್‌ ಅಹ್ಮದ್‌ ಅವರಿಗೆ ಮನವೊಲಿಕೆ ಜವಾಬ್ದಾರಿಯನ್ನು ನೀಡಲಾಗಿದೆ.

ಖಾದ್ರಿ ಅವರು ಕಳೆದ ಮೂರು ಚುನಾವಣೆಗಳಲ್ಲಿ ಬೊಮ್ಮಾಯಿ ವಿರುದ್ಧ ಸೋಲು ಕಾಣುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್‌ ಕೊನೆಯ ಬಾರಿಗೆ ಗೆದ್ದಿದ್ದು 1994ರಲ್ಲಿ. ಮಂಜುನಾಥ ಕೊನ್ನೂರು ಅವರು ಆಗ ಶಾಸಕರಾಗಿದ್ದರು.

ಖಾದ್ರಿ ಅವರು 1998ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಗೆದ್ದಿದ್ದರು. 2004ರಲ್ಲಿ ಸಿಂಧೂರ ರಾಜಶೇಖರ್‌ ಇಲ್ಲಿಗೆ ಪಕ್ಷೇತರರಾಗಿ ಗೆಲುವು ಪಡೆದಿದ್ದರು. ಬಳಿಕ ಗೆದ್ದಿದ್ದೆಲ್ಲ ಬೊಮ್ಮಾಯಿ ಅವರೇ.

ಇಲ್ಲಿನ ಒಟ್ಟಾರೆ ಲೆಕ್ಕಾಚಾರ ಗಮನಿಸಿದರೆ ಕಾಂಗ್ರೆಸ್‌ ಕೇವಲ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡರೆ ಗೆಲ್ಲುವುದು ಕಷ್ಟ. ಹಾಗಾಗಿ ಅದು ಬೇರೆ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ. ಆದರೆ, ಮುಸ್ಲಿಂ ಮತಗಳನ್ನು ಬಿಟ್ಟರೂ ಗೆಲುವು ಸುಲಭವಲ್ಲ. ಹೀಗಾಗಿ ಖಾದ್ರಿ ಅವರು ಪಕ್ಷೇತರರಾಗಿ ನಿಂತರೆ ಮುಸ್ಲಿಂ ಮತಗಳು ಒಡೆಯುವುದು ನಿಶ್ಚಿತ. ಹೀಗಾಗಿ ಅತ್ಯಂತ ಜಾಗರೂಕತೆಯಿಂದ ಪರಿಸ್ಥಿತಿ ನಿಭಾಯಿಸಬೇಕಾದ ಅಗತ್ಯ ಕಾಂಗ್ರೆಸ್‌ಗಿದೆ. ಖಾದ್ರಿ ಅವರು ಕಾಂಗ್ರೆಸ್‌ ಮನವೊಲಿಕೆಗೆ ಒಲಿಯುತ್ತಾರಾ ಎಂದು ಕಾದು ನೋಡಬೇಕು.

ಇದನ್ನೂ ಓದಿ : Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ

Continue Reading

ಕ್ರಿಕೆಟ್

WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್​ಸಿಬಿ

ಮುಂಬೈ ಇಂಡಿಯನ್ಸ್​ ವಿರುದ್ಧದ ಮಂಗಳವಾರದ ಅಂತಿಮ ಲೀಗ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 4 ವಿಕೆಟ್​ಗಳ ಸೋಲಿಗೆ ತುತ್ತಾಗಿದೆ.

VISTARANEWS.COM


on

Edited by

WPL 2023 RCB ends campaign with defeat
Koo

ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಸ್ಮೃತಿ ಮಂಧಾನ ಸಾರಥ್ಯದ ಆರ್​ಸಿಬಿ(Royal Challengers Bangalore) ತಂಡ ಇದೀಗ ಸೋಲಿನೊಂದಿಗೆಯೇ ತನ್ನ ಅಭಿಯಾನವನ್ನು ಮುಗಿಸಿದೆ. ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್​ ವಿರುದ್ಧದ ಅಂತಿಮ ಲೀಗ್​ ಪಂದ್ಯದಲ್ಲಿ 4 ವಿಕೆಟ್​ಗಳ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್​ ಈ ಗೆಲುವಿನೊಂದಿಗೆ ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಮುಂಬಯಿಯ ಡಿ.ವೈ. ಪಾಟೀಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಡಬಲ್ ಹೆಡ್ಡರ್​ ಮುಖಾಮುಖಿಯ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ರಿಚಾ ಘೋಷ್​ ಮತ್ತು ಎಲ್ಲಿಸ್​ ಪೆರ್ರಿ ಅವರ ಸಣ್ಣ ಹೋರಾಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 125 ರನ್​ ಬಾರಿಸಿತು. ಜಬಾಬಿತ್ತ ಮುಂಬೈ ಇಂಡಿಯನ್ಸ್​ 16.3 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 129 ರನ್​ ಬಾರಿಸಿ ಗೆಲುವು ದಾಖಲಿಸಿತು.

ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈಗೆ ಯಾಸ್ತಿಕಾ ಭಾಟಿಯಾ ಮತ್ತು ಹೇಲಿ ಮ್ಯಾಥ್ಯೂಸ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್​ಗೆ 53 ರನ್​ಗಳ ಜತೆಯಾಟ ನಡೆಸಿತು. ಯಾಸ್ತಿಕಾ 30 ರನ್​ ಗಳಿಸಿದರೆ, ಮ್ಯಾಥ್ಯೂಸ್ 24 ರನ್​ ಬಾರಿಸಿದರು. ಉಭಯ ಆಟಗಾರ್ತಿಯ ವಿಕೆಟ್​ ಪತನದ ಬೆನ್ನಲ್ಲೇ ತಂಡ ನಾಯಕೀಯ ಕುಸಿತ ಕಂಡಿತು. ನಾಯಕಿ ಹರ್ಮನ್​ಪ್ರೀತ್​ ಕೌರ್​(2), ನ್ಯಾಟ್​ ಸ್ಕಿವರ್​-ಬ್ರಂಟ್​ (13) ಅಲ್ಪ ಮೊತ್ತಕ್ಕೆ ಔಟಾದರು. ತಂಡದ ಮೊತ್ತ 74 ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡು ಮುಂಬೈ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತು.

ನಾಟಕೀಯ ಕುಸಿತ ಕಂಡ ಮುಂಬೈ ತಂಡಕ್ಕೆ ಬೌಲಿಂಗ್​ನಲ್ಲಿ ಮೂರು ವಿಕೆಟ್​ ಕಿತ್ತು ಪ್ರಮುಖ ಪಾತ್ರ ನಿರ್ವಹಿಸಿದ್ದ ಅಮೇಲಿಯಾ ಕೆರ್​ ಮತ್ತು ಪೂಜಾ ವಸ್ತ್ರಾಕರ್​ ಕೆಳ ಕ್ರಮಾಂಕದಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ತಂಡದ ಗೆಲುವಿಗೆ 6 ರನ್​ ಅಗತ್ಯವಿದ್ದಾಗ ಪೂಜಾ ವಿಕೆಟ್ ಕೈಚೆಲ್ಲಿದರು. ಅವರು 19 ರನ್ ಗಳಿಸಿದರು.​ ಅಮೇಲಿಯಾ ಕೆರ್​ ಅಜೇಯ ​31 ರನ್​ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಈ ಅಜೇಯ ಇನಿಂಗ್ಸ್​ ಆಟದ ವೇಳೆ 4 ಬೌಂಡರಿ ಸಿಡಿಯಿತು.

ಮಂದ ಗತಿಯ ಬ್ಯಾಟಿಂಗ್​ ನಡೆಸಿದ ಮಂಧಾನ ಪಡೆ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ಆರಂಭಿಕ ಆಘಾತ ಕಂಡಿತು. ಗುಜರಾತ್​ ಜೈಂಟ್ಸ್​ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್​ ನಡೆಸಿ ನಡುಕ ಹುಟ್ಟಿಸಿದ್ದ ನ್ಯೂಜಿಲ್ಯಾಂಡ್​ನ ಸ್ಟಾರ್​ ಆಲ್​ ರೌಂಡರ್​ ಸೋಫಿ ಡಿವೈನ್​ ಅವರು ಈ ಪಂದ್ಯದಲ್ಲಿ ರನೌಟ್​ ಸಂಕಟಕ್ಕೆ ಸಿಲುಕಿದರು. ಇಲ್ಲದ ರನ್ ಕದಿಯಲೆತ್ನಿಸಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭಸಿದರು.

ನಾಯಕಿ ಸ್ಮೃತಿ ಮಂಧಾನ ಅವರ ಆಟ ಈ ಪಂದ್ಯದಲ್ಲಿಯೂ ಮಂದ ಗತಿಯಿಂದ ಕೂಡಿತ್ತು. 25 ಎಸೆತ ಎದುರಿಸಿ 24 ರನ್​ ಗಳಿಸಿದರು. ಇದರೊಂದಿಗೆ ಈ ಬಾರಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಮಂಧಾನ ಸಂಪೂರ್ಣ ವೈಫಲ್ಯ ಕಂಡಂತಾಯಿತು. ಈ ಮೂಲಕ ಮುಂದಿನ ಬಾರಿಯ ಆವೃತ್ತಿಯಲ್ಲಿ ಅವರು ಆರ್​ಸಿಬಿ ತಂಡದಲ್ಲಿಯೇ ಉಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಆರಂಭಿಕ ಆಟಗಾರ್ತಿಯರ ವಿಕೆಟ್​ ಪತನದ ಬಳಿಕ ಆಡಲಿಳಿದ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್‌ ಪೆರ್ರಿ ತಂಡಕ್ಕೆ ಆಸರೆಯಾದರು. ಪ್ರತಿ ಓವರ್​ನಲ್ಲಿ ಒಂದು ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಲಾರಂಭಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಯಾರು ಕೂಡ ಉತ್ತಮ ಸಾಥ್​ ನೀಡಲಿಲ್ಲ. ಹೀತರ್​ ನೈಟ್​ ಮತ್ತು ಕನಿಕಾ ಅಹುಜಾ ತಲಾ 12 ರನ್​ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ಎಲ್ಲಿಸ್‌ ಪೆರ್ರಿ ಕೂಡ ನ್ಯಾಟ್‌ ಸ್ಕಿವರ್‌ ಬ್ರಂಟ್‌ ಎಸೆತದಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. 38 ಎಸೆತ ಎದುರಿಸಿದ ಅವರು ಮೂರು ಬೌಂಡರಿ ನೆರವಿನಿಂದ 29 ರನ್​ ಬಾರಿಸಿದರು. ಸ್ಕಿವರ್‌ ಬ್ರಂಟ್‌ 24 ರನ್​ಗೆ 2 ವಿಕೆಟ್​ ಉರುಳಿಸಿದರು.

ಇದನ್ನೂ ಓದಿ WPL 2023 : ಸೇಡು ತೀರಿಸಿಕೊಂಡ ಡೆಲ್ಲಿ ಪಡೆ, ಮುಂಬಯಿ ವಿರುದ್ಧ 9 ವಿಕೆಟ್​ ಸುಲಭ ಜಯ

ಅಂತಿಮ ಹಂತದಲ್ಲಿ ರಿಚಾ ಘೋಷ್​​ ಬಿರುಸಿನ ಬ್ಯಾಟಿಂಗ್​ ನಡೆಸಿದ ಪರಿಣಾಮ ಆರ್​ಸಿಬಿ 100ರ ಗಡಿ ದಾಟಿತು. ಕ್ರೀಸ್​ ಗಿಳಿದ ಆರಂಭದಿಂದಲೇ ಸಿಕ್ಸರ್​, ಬೌಂಡರಿಗಳ ಮೂಲಕ ಮುಂಬೈ ಬೌಲರ್​ಗಳ ಸಣ್ಣ ಮೊತ್ತದ ಯೋಜನೆಯನ್ನು ತಲೆಕೆಳಗಾಗಿಸಿದರು. ಆದರೆ ಅಂತಿಮ ಓವರ್​ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್​ ನೀಡಿದರು. ಅವರ ವಿಕೆಟ್​ ಉರುಳಿದ ಬಳಿಕ ತಂಡದ ಮೊತ್ತವೂ ಕುಸಿಯಿತು. ಒಟ್ಟು 13 ಎಸೆತ ಎದುರಿಸಿದ ಅವರು ಮೂರು ಬೌಂಡರಿ 2 ಸಿಕ್ಸರ್​ ಬಾರಿಸಿ 29 ರನ್​ ಕಲೆಹಾಕಿದರು. ಮುಂಬೈ ಪರ ಅಮೇಲಿಯಾ ಕೆರ್​ 22 ರನ್​ ವೆಚ್ಚದಲ್ಲಿ ಮೂರು ವಿಕೆಟ್​ ಪಡೆದರು. ಸೈಕಾ ಇಶಾಖ್‌ ಒಂದು ವಿಕೆಟ್​ ಪಡೆದರು.

ಸಂಕ್ಷಿಪ್ತ ಸ್ಕೋರ್​: ಆರ್​ಸಿಬಿ; 20 ಓವರ್​ಗಳಲ್ಲಿ 9 ವಿಕೆಟ್​ಗೆ 125( ಎಲ್ಲಿಸ್‌ ಪೆರ್ರಿ 29, ರಿಚಾ ಘೋಷ್​ 29, ಅಮೇಲಿಯಾ ಕೆರ್​ 22ಕ್ಕೆ 3). ಮುಂಬೈ ಇಂಡಿಯನ್ಸ್: 16.3 ಓವರ್​ಗಳಲ್ಲಿ 6 ವಿಕೆಟ್​ಗೆ 129( ಅಕೇಲಿಯಾ ಕೆರ್​ ಅಜೇಯ 31, ಮ್ಯಾಥ್ಯೂಸ್​ 24, ಯಾಸ್ತಿಕಾ ಭಾಟಿಯಾ 30)

Continue Reading
Advertisement
ಸಿನಿಮಾ3 mins ago

Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

inflation
ವಾಣಿಜ್ಯ4 mins ago

Retail inflation : ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಆರ್‌ಬಿಐ ಕಳವಳ

Delhi team won the toss against UP and chose fielding
ಕ್ರಿಕೆಟ್6 mins ago

WPL 2023 : ಯುಪಿ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ತಂಡದಿಂದ ಫೀಲ್ಡಿಂಗ್ ಆಯ್ಕೆ

savadatti accident
ಕರ್ನಾಟಕ10 mins ago

Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್‌ ಫೇಲ್‌ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು

HP Pavilion Aero 13 Laptop Launched and Check details
ಗ್ಯಾಜೆಟ್ಸ್12 mins ago

HP Pavilion Aero 13 ಲ್ಯಾಪ್‌ಟಾಪ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ? ಬೆಲೆ ಎಷ್ಟು?

ಕರ್ನಾಟಕ14 mins ago

Basavaraj Bommai: ವಿಜಯಪುರದಲ್ಲಿ 4.64 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ; ಬೊಮ್ಮಾಯಿ

congress says cm basavraj bommai will not get chance to contest inkarnataka election
ಕರ್ನಾಟಕ25 mins ago

Karnataka Election: ಸಿಎಂ ಬೊಮ್ಮಾಯಿಗೇ ಟಿಕೆಟ್‌ ಸಿಗುವುದು ಡೌಟು ಎಂದ ಕಾಂಗ್ರೆಸ್‌

Azam peer Khadri
ಕರ್ನಾಟಕ37 mins ago

Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!

ಕಿರುತೆರೆ40 mins ago

Kannada Serial: 900 ಸಂಚಿಕೆ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ; ಸಂಭ್ರಮದಲ್ಲಿ ತಂಡ

ಕರ್ನಾಟಕ42 mins ago

Murder Case: ಅವಳದ್ದು ಮೋಹ, ಇವನಿಗೆ ಮಧುಮೇಹ; ಕೊಲೆಯಲ್ಲಿ ಅಂತ್ಯವಾಯ್ತು ಕಾಳಜಿ ಕಲಹ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ15 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ2 hours ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ6 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ7 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!