Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಜನವರಿ 15 ರಿಂದ 21 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೇಷ: ಮಾನಸಿಕ ಕಿರಿಕಿರಿ ಅನಿವಾರ್ಯ

Weekly Horoscope

ಶನೈಶ್ವರ ಕೊಡಬೇಕಾದ ಲಾಭದ ದಿನಗಳು ನಿಮಗೆ ಪ್ರಾರಂಭವಾಗಿವೆ. ರಾಹುವೇ ಸಮಸ್ಯೆಯ ಮೂಲನಾಗಿದ್ದಾನೆ. ವರ್ಚಸ್ಸು, ಸಿದ್ಧಿಗಳಿಗೆ ತಾಪತ್ರಯ ತಂದಿಡುವ ಕೆಲಸ ರಾಹುವಿನಿಂದಲೇ ಜಾಸ್ತಿ. ಇದರಿಂದಾಗಿ ಮಾನಸಿಕ ಕಿರಿಕಿರಿಯನ್ನು, ಕೆಲಸದ ಸ್ಥಳದಲ್ಲಿ ಎದುರಿಸುವ ಸವಾಲನ್ನು ನೀವೀಗ ಎದುರಿಸುವುದು ಅನಿವಾರ್ಯವೇ ಸರಿ. ಜತೆಗೆ ಬಾಳ ಸಂಗಾತಿಯ ಜತೆಗಿನ ಹೊಂದಾಣಿಕೆಗೆ ಹೆಚ್ಚಿನ ಮಹತ್ವ ನೀಡಿ, ಮದುವೆಯಾಗಲಿರುವ ಸಂಗಾತಿ ದೂರವಾಗಬಹುದು, ಎಚ್ಚರ ಇರಲಿ.
ಶುಭ ಸಂಖ್ಯೆ: 6 ಶುಭ ದಿಕ್ಕು: ದಕ್ಷಿಣ

ವೃಷಭ: ಕೆಲಸದ ಸ್ಥಳದಲ್ಲಿ ನಿರಾಳವಾಗಿರಿ

Weekly Horoscope

ದೋಷಯುಕ್ತವಾದ ಕುಜನು ನಿಮ್ಮ ಮಾತಿನ ಮೊನಚನ್ನು ಕಡಿಮೆ ಮಾಡುತ್ತಾನೆ. ಇದರಿಂದಾಗಿ ಹಣಕಾಸಿನ ವಿಚಾರದಲ್ಲಿ ನಿಮ್ಮ ನಿಯಂತ್ರಣ ತಪ್ಪಿ ನಷ್ಟಕ್ಕೆ ದಾರಿ ಆಗಲು ಸಾಧ್ಯವಿದೆ. ಯಾರಿಗೂ ಸಾಲ ಕೊಡುತ್ತೇನೆಂಬ ಭರವಸೆ ನೀಡಲು ಹೋಗದಿರಿ. ಆದರೆ ಕೆಲಸದ ಸ್ಥಳದಲ್ಲಿ ಉತ್ತಮವಾದ, ನಿರಾಳವಾದ ದಿನಗಳು. ಹೊಸದೇ ಕೆಲಸ ಸಿಗುವ ವಿಚಾರದಲ್ಲಿ ಹಲವು ಅವಕಾಶಗಳು ನಿಮಗೆ ಒದಗಿ ಬರಲು ಸಾಧ್ಯ. ಕೋಪವನ್ನು ನಿಯಂತ್ರಿಸಿ. ಎದುರಾಳಿಯು ನಿಮ್ಮನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಅವಕಾಶ ನಿರ್ಮಿಸಿಕೊಳ್ಳುವ ಸಂದರ್ಭ ಜಾಸ್ತಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ನೈಋತ್ಯ

ಮಿಥುನ: ನಿಮಗಿದೋ ಒಳ್ಳೆಯ ಕಾಲ ಬಂದಿದೆ!

Weekly Horoscope

ಅಷ್ಟಮ ಶನಿ ಕಾಟದ ಉರುಳಿನಿಂದ ಹೊರ ಬರುತ್ತಿರುವ ಸುಸಂದರ್ಭವಾಗಿದೆ ಇದು. ಲಾಭಕರವಾಗಿರುವ ಗುರು ಮತ್ತು ಉತ್ತಮನಾಗಿ ಪರಿವರ್ತನೆ ಹೊಂದಿರುವ ಶನೈಶ್ವರ ಸ್ವಾಮಿಯಿಂದಾಗಿ ಒಳ್ಳೆಯ ಹೊಸ ಕೆಲಸ ಸಿಗುವ ಸಾಧ್ಯತೆ ಅಧಿಕವಾಗಿದೆ. ಕೆಲಸದ ಸ್ಥಳದಲ್ಲೂ ಪ್ರಮೋಷನ್‌ ಸಿಕ್ಕಿ, ಮನಸ್ಸಿನ ಸಂತೋಷ ವೃದ್ಧಿಗೊಳ್ಳಲು ಅವಕಾಶ ಜಾಸ್ತಿ ಇದೆ. ಈ ಮೂವತ್ತು ತಿಂಗಳುಗಳ ಕಾಳಘಟ್ಟದಲ್ಲಿ ಯಾವುದು ಚಿನ್ನ, ಯಾವುದು ಕಬ್ಬಿಣ ಎಂಬುದನ್ನು ಅರಿತಿದ್ದೀರಿ, ಹೀಗಾಗಿ ಬೌದ್ಧಿಕವಾಗಿ ಬಿಕ್ಕಟ್ಟುಗಳನ್ನು ಗೆಲ್ಲ ಬಲ್ಲಿರಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪೂರ್ವ

ಕಟಕ: ಶಾಂತಿ, ಸಮಾಧನಾವೇ ನಿಮ್ಮ ಅಸ್ತ್ರವಾಗಲಿ

Weekly Horoscope

ಅಷ್ಟಮ ಶನಿ ಕಾಟದ ತಾಪತ್ರಯದ ದಿನಗಳು ಪ್ರಾರಂಭವಾಗುತ್ತಿವೆ. ಚಂದ್ರನ ಮೇಲೆ ಶನಿ ಮಹಾರಾಜನ ನೇರ ಆಕ್ರಮಣ ಇರುವ ಕಾರಣದಿಂದ ತಲೆಬಿಸಿ ವೃದ್ಧಿಸಲಿದೆ. ಹತ್ತಿರದವರೇ ನಿಮ್ಮ ವೈರಿಗಳಾಗುವ ಸಾಧ್ಯತೆ ಉಂಟಾಗಬಹುದು. ಒಡ ಹುಟ್ಟಿದವರೇ ಕಿರಕಿರಿಗೆ ಕಾರಣವಾಗಬಹುದು. ಶಾಂತಿ, ಸಮಾಧಾನ ನಿಮ್ಮ ಅಸ್ತ್ರವಾಗಿರಲಿ. ಶಿವನ ಧ್ಯಾನದಿಂದ ಮನಸ್ಸಿನ ಸಮತೋಲನ ಕಾದುಕೊಳ್ಳಬಲ್ಲಿರಿ. ಸಿಟ್ಟಿನ ಆವೇಶಕ್ಕೆ ಅವಕಾಶ ಕೊಡಬೇಡಿ. ಇದರಿಂದಾಗಿ ನಿಮಗೆ ಅಪಾಯಗಳು ದೂರವಾಗುತ್ತವೆ.
ಶುಭ ಸಂಖ್ಯೆ : 2 ಶುಭ ದಿಕ್ಕು: ವಾಯವ್ಯ

ಸಿಂಹ: ಉತ್ಸಾಹವಿದ್ದರೆ ಆದಾಯವೂ ಜಾಸ್ತಿ

Weekly Horoscope

ದಾಂಪತ್ಯದ ವಿಚಾರದಲ್ಲಿ ಉತ್ತಮ ಹೊಂದಾಣಿಕೆಗೆ ಅವಕಾಶವಿರುವ ಉತ್ತಮ ಕಾಲ ಘಟ್ಟವಾಗಿದೆ. ಈ ಹೊಂದಾಣಿಕೆಯ ಫಲವಾಗಿ ಶಾಂತಿ, ಸಮಾಧನವು ಜಾಸ್ತಿ ಆಗಿ ವರಮಾನದ ಸ್ಥಿತಿಗತಿ, ಧನದ ಶೇಖರಣೆಗಾಗಿನ ಉತ್ಕೃಷ್ಟ ಯೋಜನೆಗಳನ್ನು ರೂಪಿಸಬಲ್ಲ ಸುಸಂದರ್ಭ ನಿಮಗೆ ಸುಲಭವಾಗಿ ಒದಗಿ ಬರುತ್ತದೆ. ಶೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭವನ್ನು ತಂದುಕೊಡುವಲ್ಲಿ ಬುಧ ಗ್ರಹವು ಶಕ್ತಿ ಒದಗಿಸಲಿದೆ. ಮಕ್ಕಳೂ ಕೂಡ ನಿಮ್ಮ ಆಜ್ಞೆಗಳಿಗೆ ಎದುರಾಡದೆ ನಿಮ್ಮ ಸಂತೋಷಕ್ಕೆ ಕಾರಣರಾಗುತ್ತಾರೆ. ದುರ್ಗೆಯನ್ನು ಸ್ತುತಿಸಿ.
ಶುಭ ಸಂಖ್ಯೆ :9 ಶುಭ ದಿಕ್ಕು: ಉತ್ತರ

ಕನ್ಯಾ: ಮಾತಿನ ಮೇಲೆ ಹಿಡಿತವಿರಲಿ

Weekly Horoscope

ಪಂಚಮ ಶನಿ ಕಾಟದಲ್ಲಿ ನರಳಿ ದಣಿವಾದ ದಿನಗಳು ಮುಗಿದು ಹೊಸ ಕಾಲಘಟ್ಟಕ್ಕೆ ಈಗ ಪ್ರವೇಶಿಸುತ್ತಿದ್ದೀರಿ. ಮಾತಿನ ಬಗೆಗೆ ಮಾತ್ರ ಎಚ್ಚರದಿಂದಿರಿ. ಒಳಿತಿನ ಸಂದರ್ಭ ಬುಧ ಗ್ರಹದ ಕಾರಣದಿಂದ ನಿಮಗೆ ಒಲಿದು ಬರಲಿದೆ. ಬ್ಯುಸಿನೆಸ್‌ ನಡೆಸುವ ಜನರಿಗೆ, ಎಂಜಿನಿಯರ್‌ಗಳಿಗೆ, ಲೆಕ್ಕಪತ್ರ ಪರಿಶೀಲನಾ ವೃತ್ತಿಯಲ್ಲಿರುವವರಿಗೆ, ಬ್ಯಾಂಕ್‌ ಸಿಬ್ಬಂದಿಗಳಿಗೆ ನೆಮ್ಮದಿಯ ದಿನಗಳಾಗಿವೆ ಇವು. ಉನ್ನತ ವಿದ್ಯಾಭ್ಯಾಸದ ಸಂಬಂಧವಾಗಿ ಉತ್ತಮ ಅವಕಾಶಗಳು, ಅನುಕೂಲಕದ ದಾರಿಗಳು ನಿಮಗೆ ಸಿಗಲಿದೆ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ಆಗ್ನೇಯ

ತುಲಾ: ಹಾಸಿಗೆ ಇದ್ದಷ್ಟೇ ಕಾಲು ಚಾಚಿ

Weekly Horoscope

ಪಂಚಮ ಶನಿಕಾಟ ಪ್ರಾರಂಭವಾಗುತ್ತಿರುವ ದಿನಗಳಾಗಿವೆ. ಅನಾವಶ್ಯಕವಾದ ಆಪಾದನೆಗಳು ನಿಮ್ಮನ್ನು ತಬ್ಬಿಬ್ಬುಗೊಳಿಸಲು ಸಾಧ್ಯ. ಪ್ರಾಮಾಣಿಕತೆಯಿಂದ ಇದ್ದಾಗಲೂ ಅನುಮಾನ ಪಡುವ ಕಿರಾತಕ ವರ್ಗ ನಿಮ್ಮನ್ನು ಸುತ್ತಿಕೊಳ್ಳುತ್ತದೆ. ಇನ್ನು ಅನ್ಯಾಯದ ಮಾರ್ಗಗಳಂತೂ ಬಿಡದೆ ಬೆಂಬತ್ತಿ ನಿಮ್ಮ ವರ್ಚಸ್ಸಿಗೆ ಧಕ್ಕೆ ತಂದೇ ತೀರುತ್ತವೆ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಸಾತ್ವಿಕ ಗುರುವನ್ನು ಅಥವಾ ಭದ್ರವಾದ, ಸುಗಮವಾದ ಜೀವನದ ಮಾರ್ಗವನ್ನು ತೋರಿಸುವ ಶ್ರೀ ದಕ್ಷಿಣಾಮೂರ್ತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪಶ್ಚಿಮ

ವೃಶ್ಚಿಕ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

Weekly Horoscope

ಕೆಲವು ಆರೋಗ್ಯದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿಸಲೇ ಬಾರದು. ಏನೋ ಚಿಕ್ಕದು ದೋಷ, ಹಾಗೇ ಸೂಕ್ತ ಚಿಕಿತ್ಸೆ ಇರದೆ ಮುಂದುವರಿದರಾಯ್ತು ಎಂಬ ಆಲಸ್ಯ ಬೇಡ. ಸುಖದ ವಿಚಾರದಲ್ಲಿ ಶನೈಶ್ವರ ಸ್ವಾಮಿಯು ತೊಂದರೆ ಕೊಡಲಾರ ಎಂಬುದು ಸತ್ಯವಾದರೂ ನಿಮ್ಮ ದೋಷ “ನೋಡೋಣ, ನಾಳೆ ಮಾಡಿದರಾಯ್ತುʼʼ ಎಂಬ ಚಲ್ತಾ ಹೈ ಧೋರಣೆಯಿಂದ ಬಾಧೆಗೊಳಗಾಗುವಿರಿ. ಹಾರ್ಡ್‌ವೇರ್‌, ಸಾಫ್ಟವೇರ್‌ ಉದ್ಯಮವನ್ನು ಲಕ್ಷ್ಯ ಇರಿಸಿ, ಸ್ಥೈರ್ಯದಿಂದ ನಿರ್ವಹಿಸಿ. ಲಾಭವಿದೆ, ಕುಮಾರ ಸ್ವಾಮಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಈಶಾನ್ಯ

ಧನಸ್ಸು: ಧನ ಲಾಭದ ಸಮಯ

Weekly Horoscope

ಸಾಡೇಸಾತಿ ಕಾಟದಿಂದ ಹೊರ ಬಂದಿದ್ದೀರಿ. ನಿರಾಳತೆಗೆ ಬೇಕಾದ ಉತ್ತಲ ಕಾಲಾವಧಿಯನ್ನು ಇದೀಗ ಬಂದು ತಲುಪಿದ್ದೀರಿ. ಕಾಡುತ್ತಿದ್ದ ಶನೈಶ್ವರನೇ ಧೈರ್ಯ ತುಂಬಿ ಅದ್ಭುತವಾದ ಯಶಸ್ಸಿನತ್ತ ನಿಮ್ಮನ್ನು ತಲುಪಿಸುವ ಕರುಣಾಮಯಿಯಾಗುತ್ತಾನೆ. “ಧೈರ್ಯಂ ಸರ್ವತ್ರ ಸಾಧನಂʼʼ ಎಂಬ ಮಾತು ಯಾಕೆ ಮುಖ್ಯ, ಧೈರ್ಯದಿಂದ, ನೈತಿಕ ಮಾರ್ಗದಿಂದ ಏನೆಲ್ಲ ಅದ್ಭುತ ಸಾಧಿಸಬಹುದೆಂಬುದನ್ನು ಚೆನ್ನಾಗಿ ಅರಿಯುತ್ತೀರಿ. ಧನ ಲಾಭವಿದೆ. ಮಕ್ಕಳ ಬಗೆಗೆ ಎಚ್ಚರಿಕೆ ಇರಲಿ. ವೆಂಕಟೇಶನನ್ನು ಸ್ತುತಿಸಿ.
ಶುಭ ಸಂಖ್ಯೆ: 7 ಶುಭ ದಿಕ್ಕು: ಉತ್ತರ

ಮಕರ: ದುಷ್ಟರಿಂದ ದೂರವಿರಿ

Weekly Horoscope

ಸಾಡೇಸಾತಿ ಕಾಟದ ಏಳೂವರೆ ವರ್ಷಗಳ ಪರದಾಟದ ಅವಧಿಯಲ್ಲಿ ಇನ್ನೂ ಎರಡೂವರೆ ವರ್ಷಗಳು ಉಳಿದಿವೆ. ಯಾವ ತಪ್ಪುಗಳನ್ನೂ ಮಾಡದಿರಿ. ದುಷ್ಟರ ಸಂಘದಿಂದ ದೂರವಿರಿ. ಸಾಲ ಕೊಡುವವರಿದ್ದಾರೆ ಎಂಬ ಕಾರಣದಿಂದ ಬಡ್ಡಿಯ ಹೊರೆಯಾಗುವ ಸಾಲಕ್ಕೆ ಕೈ ಹಾಕದಿರಿ. ಅಂತೆಯೇ ಬಡ್ಡಿ ಸಿಗುತ್ತದೆ ಎಂಬ ಕಾರಣಕ್ಕೆ ಯಾರಿಗೂ ಸಾಲ ನೀಡಿ ತೊಂದರೆಗೆ ಸಿಲುಕದಿರಿ. ಶೇರು ಹೂಡಿಕೆ, ಬಿಸನೆಸ್‌, ಯಾವುದೋ ರೀತಿಯ ಆಯಾಚಿತ ಬಡ್ಡಿಯ ಆಸೆಗೆ ಎಲ್ಲೋ ಠೇವಣಿ ಇರಿಸುವ ಆತುರ ಬೇಡ. ಗುರು ರಾಘವೇಂದ್ರರನ್ನು ಆರಾಧಿಸಿ, ಗೆಲ್ಲಿರಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಆಗ್ನೇಯ

ಕುಂಭ: ಶನಿಯಿಂದಲೇ ಒಳಿತಿದೆ…

Weekly Horoscope

ಬಾಕಿ ಉಳಿದ ಐದು ವರ್ಷಗಳು ನಿಮಗೆ ಚಂದ್ರನ ಕಾರಣದಿಂದ (ಸಾಡೇಸಾತಿ ಕಾಟದ ದಿನಗಳು ನಡೆಯುತ್ತಿವೆ ನಿಮಗೆ ಎಂಬುದು ನೆನಪಿಡಿ) ಮನೋ ಮಂಡಲದಲ್ಲಿ ಕಿರಿಕಿರಿಯ ನಿರಂತರವಾದ ಅಲೆಯನ್ನು ಎಬ್ಬಿಸುತ್ತದಲೇ ಇರುತ್ತದೆ. ಕರುಣಾಳುವಾದ ಶನೈಶ್ವರನು ಚಂದ್ರನ ಜತೆಗಿನ ಸಂಘರ್ಷ ಎದುರಿಸುತ್ತಿದ್ದರೂ ಕೆಲವು ಒಳಿತುಗಳಿಗೆ ಕಾರಣ ಮಾಡಿಕೊಡುತ್ತಾನೆ. ಆದರೆ ಪ್ರೇಮ ಪ್ರಕರಣ, ಅತಿಯಾದ ಮಾತು, ಆಫೀಸಿನ ಬಾಸು, ಸಹೋದ್ಯೋಗಿಗಳನ್ನು ಸಾಮಾನ್ಯವಾಗಿ ತಲೆ ತಿನ್ನುತ್ತಾರೆ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ದಕ್ಷಿಣ

ಮೀನ: ಹಗ್ಗವೇ ಹಾವಾಗಬಹುದು!

Weekly Horoscope

ಏಳೂವರೆ ವರ್ಷಗಳ ಸಾಡೇಸಾತಿ ಕಾಟ ತಲೆಯನ್ನು, ದೇಹವನ್ನು ಸುತ್ತುತ್ತಿದೆ. ಸರ್ರನೆ ತೆಗೆದುಕೊಳ್ಳುವ ನಿರ್ಣಯ ಮುಳುವಾಗಬಹುದು. ಕಾರಣವಿರದೆ, ನಡೆಸುವ ವಿಳಂಬ ಧೋರಣೆಯಿಂದಲೂ ನಿಮಗೆ ತೊಂದರೆ ತಲೆದೋರಬಹುದು. ಆದಾರವಾಗಿದ್ದ ಹಗ್ಗವೇ ಹಾವಾಗಬಹುದು. ಸೊಗಸಾದ ಹೂವನ್ನು ಕೀಳಲು ಹೋಗಿ ಜತೆಗಿರುವ ಮುಳ್ಳು ಕೈಯನ್ನು ಚುಚ್ಚಬಹುದು. ಲಕ್ಷಗಟ್ಟಲೆ ಸಂಬಳವಿದ್ದರೂ ಹಣ ಕೈಯಲ್ಲಿ ನಿಲ್ಲದಿರಬಹುದು. “ಸಕಲ ಗ್ರಹ ಬಲ ನೀನೇ ಸರಸಿಜಾಕ್ಷʼʼ ಎಂಬುದನ್ನು ನೆನಪಿಡಿ. ಶ್ರೀರಾಮನನ್ನು ಸ್ತುತಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪಶ್ಚಿಮ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : ಧೋನಿಯನ್ನು ಬೌಲ್ಡ್​ ಮಾಡಿ ಸಂಭ್ರಮಿಸದ ಹರ್ಷಲ್​ ಪಟೇಲ್​; ಕಾರಣ ನೀಡಿದ ಬೌಲರ್​

IPL 2024 : ಇನ್ನಿಂಗ್ಸ್ ಮಧ್ಯದ ವಿರಾಮದ ಸಮಯದಲ್ಲಿ, 33 ವರ್ಷದ ಆಟಗಾರ ವೀಕ್ಷಕವಿವರಣೆಗಾರರು ಈ ಬಗ್ಗೆ ಕೇಳಿದಾಗ ತಮ್ಮ ನಿಧಾನ ಸಂಭ್ರಮಾಚರಣೆಯ ಕುರಿತು ಮಾತನಾಡಿದ್ದಾರೆ. ಭಾರತ ತಂಡದ ಮಾಜಿ ನಾಯಕನ ಬಗ್ಗೆ “ತುಂಬಾ ಗೌರವ” ಇದೆ, ಅದಕ್ಕಾಗಿ ಹೆಚ್ಚು ಸಂಭ್ರಮಿಸಲಿಲ್ಲ ಎಂದು ಹೇಳಿದರು. ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಸಿಎಸ್​ಕೆ ದಂತಕಥೆಯ ಮೇಲಿನ ಅಭಿಮಾನವನ್ನು ಅವರು ಮೃದು ಆಚರಣೆಯ ಮೂಲಕ ಪ್ರಸ್ತುತಪಡಿಸಿದರು.

VISTARANEWS.COM


on

IPL 2024
Koo

ಧರ್ಮಶಾಲಾ: ಇಲ್ಲಿ ನಡೆದ ಐಪಿಎಲ್ 2024ರ (IPL 2024) 53 ನೇ ಪಂದ್ಯದಲ್ಲಿ ಸಿಎಸ್​​ಕೆ ಇನ್ನಿಂಗ್ಸ್​​ನ ಡೆತ್ ಓವರ್​ಗಳಲ್ಲಿ ಹರ್ಷಲ್ ಪಟೇಲ್ ಮಿಂಚಿದ್ದರು. ಅವರು ಸಿಎಸ್​ಕೆ ಮಾಜಿ ನಾಯಕ ಎಂಎಸ್ ಧೋನಿಯನ್ನು ನಿಧಾನಗತಿಯ ಯಾರ್ಕರ್ನಿಂದ ಔಟ್​ ಮಾಡಿದರು. ಅದೇ ರೀತಿ ಪಂಜಾಬ್ ಕಿಂಗ್ಸ್ ತಂಡದ ಡ್ಯಾರಿಲ್ ಮಿಚೆಲ್ ಮತ್ತು ಶಾರ್ದೂಲ್ ಠಾಕೂರ್ ಅವರ ವಿಕೆಟ್ಗಳನ್ನು ಪಡೆದು ‘ಯೆಲ್ಲೋ ಬ್ರಿಗೇಡ್’ ಅನ್ನು 167 ರನ್​ಗಳಿಗೆ ನಿಯಂತ್ರಿಸಲು ನೆರವಾದರು. ಕುತೂಹಲಕಾರಿ ಸಂಗತಿಯೆಂದರೆ, ಡೇಂಜರ್ ಮ್ಯಾನ್ ಎಂಎಸ್ ಧೋನಿಯನ್ನು ಔಟ್ ಮಾಡಿದ ನಂತರವೂ ಪಟೇಲ್ ಹೆಚ್ಚು ಸಂಭ್ರಮಾಚರಣೆ ಮಾಡಲಿಲ್ಲ. ಅದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.

ಇನ್ನಿಂಗ್ಸ್ ಮಧ್ಯದ ವಿರಾಮದ ಸಮಯದಲ್ಲಿ, 33 ವರ್ಷದ ಆಟಗಾರ ವೀಕ್ಷಕವಿವರಣೆಗಾರರು ಈ ಬಗ್ಗೆ ಕೇಳಿದಾಗ ತಮ್ಮ ನಿಧಾನ ಸಂಭ್ರಮಾಚರಣೆಯ ಕುರಿತು ಮಾತನಾಡಿದ್ದಾರೆ. ಭಾರತ ತಂಡದ ಮಾಜಿ ನಾಯಕನ ಬಗ್ಗೆ “ತುಂಬಾ ಗೌರವ” ಇದೆ, ಅದಕ್ಕಾಗಿ ಹೆಚ್ಚು ಸಂಭ್ರಮಿಸಲಿಲ್ಲ ಎಂದು ಹೇಳಿದರು. ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಸಿಎಸ್​ಕೆ ದಂತಕಥೆಯ ಮೇಲಿನ ಅಭಿಮಾನವನ್ನು ಅವರು ಮೃದು ಆಚರಣೆಯ ಮೂಲಕ ಪ್ರಸ್ತುತಪಡಿಸಿದರು.

ಇದಕ್ಕೂ ಮುನ್ನ ಹರ್ಷಲ್ ಪಟೇಲ್ ನ್ಯೂಜಿಲೆಂಡ್ ಮೂಲದ ಸಿಎಸ್​​ಕೆ ತಂಡದ ಮೂರನೇ ಕ್ರಮಾಂಕದ ಬ್ಯಾಟರ್​ ಡ್ಯಾರಿಲ್ ಮಿಚೆಲ್ ಅವರನ್ನು ಲೆಂಗ್ತ್ ಎಸೆತದಲ್ಲಿ ಬಲೆಗೆ ಬೀಳಿಸಿದ್ದರು. ಇದಲ್ಲದೆ, ಪಟೇಲ್ ತಮ್ಮ ಸ್ಪೆಲ್​​ನ ಅಂತಿಮ ಓವರ್ ಮತ್ತು ಸಿಎಸ್​​ಕೆ ಇನ್ನಿಂಗ್ಸ್​​ನ ಕೊನೆಯ ಓವರ್​ನಲ್ಲಿ ಶಾರ್ದೂಲ್ ಠಾಕೂರ್ ಮತ್ತು ಎಂಎಸ್ ಧೋನಿ ಅವರನ್ನು ಸತತ ಎಸೆತಗಳಲ್ಲಿ ಔಟ್​ ಮಾಡಿದರು.

ಪಂದ್ಯದಲ್ಲಿ ಏನಾಯಿತು?

ಧರ್ಮಶಾಲಾ: ಚೆನ್ನೈ ಸೂಪರ್ ಕಿಂಗ್ಸ್​ ತಂಡ ತನ್ನ ಹಿಂದಿನ ಪಂದ್ಯದ ಸೋಲಿಗೆ ಪ್ರತಿಕಾರ ತೀರಿಸಿಕೊಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್​ (IPL 2024) ಪಂದ್ಯದಲ್ಲಿ 28 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಹಿಂದಿನ ಪಂದ್ಯದಲ್ಲಿ ಅದೇ ತಂಡದ ವಿರುದ್ಧ ಅನುಭವಿಸಿದ್ದ 7 ವಿಕೆಟ್ ಸೋಲಿಗೆ ಉತ್ತರ ಹೇಳಿದೆ. ಇದರೊಂದಿಗೆ ಐಪಿಎಲ್‌ 2024ರ ಆವೃತ್ತಿಯಲ್ಲಿ ಪ್ಲೇ ಆಫ್‌ ಆಸೆಯನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಅತ್ತ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್‌ ಹಂತಕ್ಕೇರುವ ಕನಸು ಹೊತ್ತಿದ್ದ ಸ್ಯಾಮ್‌ ಕರನ್‌ ಪಡೆ, ಸಿಎಸ್‌ಕೆ ವಿರುದ್ಧ ಸೋಲಿನೊಂದಿಗೆ ಮತ್ತೆ ಹಿನ್ನಡೆ ಅನುಭವಿಸಿದೆ.

ಇದನ್ನೂ ಓದಿ: IPL 2024 : ಚೆನ್ನೈ ತಂಡದ ಮಾರಕ ಬೌಲರ್ ಮಹೀಶ್​ ಪತಿರಾನಾ​ ಐಪಿಎಲ್​ನಿಂದ ಹೊರಕ್ಕೆ

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯಲ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್‌ ಬೀಸಿದ ರುತುರಾಜ್‌ ಪಡೆಯುವ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌, ಸತತವಾಗಿ ವಿಕೆಟ್‌ ಕಳೆದುಕೊಂಡು ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಲಷ್ಟೇ ಶಕ್ತವಾಯ್ತು.

ಬ್ಯಾಟಿಂಗ್‌ ಆಹ್ವಾನ ಪಡೆದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಲ್ಲ. ಅಜಿಂಕ್ಯ ರಹಾನೆ 9 ರನ್‌ ಗಳಿಸಿ ಔಟಾದರು. ಈ ವೇಳೆ ಒಂದಾದ ನಾಯಕ ಋತುರಾಜ್‌ ಹಾಗೂ ಡ್ಯಾರಿಲ್​ ಮಿಚೆಲ್‌ ಅರ್ಧಶತಕದ ಜೊತೆಯಾಟ ನೀಡಿದರು. 21 ಎಸೆತಗಳಲ್ಲಿ 32 ರನ್‌ ಗಳಿಸಿ ಗಾಯಕ್ವಾಡ್‌ ಔಟಾದರೆ, ಅವರ ಬೆನ್ನಲ್ಲೇ ಶಿವಂ ದುಬೆ ಗೋಲ್ಡನ್‌ ಡಕ್‌ ಆದರು. ಈ ವೇಳೆ ಚೆನ್ನೈ ತಂಡಕ್ಕೆ ಆಘಾತವಾಯಿತು. ಅಲ್ಲದೆ ದುಬೆ ಸತತ ಎರಡು ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ಔಟಾದರು. ಮಿಚೆಲ್‌ ಇನಿಂಗ್ಸ್​​ ರನ್‌ಗೆ ಅಂತ್ಯವಾದರೆ, ಮೊಯೀನ್‌ ಅಲಿ 17 ರನ್ ಗಳಿಸಿದರು.

Continue Reading

ಪ್ರಮುಖ ಸುದ್ದಿ

Al Jazeera: ಹಮಾಸ್‌ ಉಗ್ರರ ಪರ ನಿಲುವು; ಇಸ್ರೇಲ್‌ನಲ್ಲಿ ಅಲ್‌ಜಜೀರಾ ಚಾನೆಲ್‌ ಬಂದ್‌ ಮಾಡಿದ ನೆತನ್ಯಾಹು!

Al Jazeera: ಕತಾರ್‌ ಮೂಲದ ಸುದ್ದಿವಾನಿಯಾದ ಅಲ್‌ಜಜೀರಾ, ಹಮಾಸ್‌ ಪರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಇಸ್ರೇಲ್‌ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂಬುದು ಇಸ್ರೇಲ್‌ ವಾದವಾಗಿದೆ. ಹಾಗಾಗಿ, ಚಾನೆಲ್‌ಅನ್ನು ಸ್ಥಗಿತಗೊಳಿಸಲು ಬೆಂಜಮಿನ್‌ ನೆತನ್ಯಾಹು ಅವರು ಆದೇಶಿಸಿದ್ದಾರೆ. ಪ್ರಧಾನಿಯ ಆದೇಶದ ಬೆನ್ನಲ್ಲೇ, ಚಾನೆಲ್‌ಗೆ ತೆರಳಿದ ಪೊಲೀಸರು ವಾಹಿನಿಯ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದ್ದಾರೆ.

VISTARANEWS.COM


on

Al Jazeera
Koo

ಟೆಲ್‌ ಅವಿವ್:‌ 2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ನಡೆಸಿದ ದಾಳಿಗೆ ತೀವ್ರ ಪ್ರಮಾಣದಲ್ಲಿ ಪ್ರತಿದಾಳಿ (Israel Hamas War) ನಡೆಸುತ್ತಿರುವ ಇಸ್ರೇಲ್‌ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಹಮಾಸ್‌ ಉಗ್ರರ ಅಡಗು ತಾಣವಾಗಿರುವ ಗಾಜಾ ನಗರದ ಮೇಲೆ ಇಸ್ರೇಲ್‌ ಸತತವಾಗಿ ದಾಳಿ ನಡೆಸಿ, ಉಗ್ರರನ್ನು ಸದೆಬಡಿಯುತ್ತಿದೆ. ಇಸ್ರೇಲ್‌ ದಾಳಿಯಲ್ಲಿ ನಾಗರಿಕರೂ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ, ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್‌ಜಜೀರಾ ಸುದ್ದಿವಾಹಿನಿಯನ್ನು ಇಸ್ರೇಲ್‌ ಸ್ಥಗಿತಗೊಳಿಸಿದೆ. ಚಾನೆಲ್‌ ಬಂದ್‌ ಮಾಡುವ ಕುರಿತು ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಘೋಷಣೆ ಮಾಡಿದ್ದಾರೆ.

“ಅಲ್‌ಜಜೀರಾ ಚಾನೆಲ್‌ಅನ್ನು ಇಸ್ರೇಲ್‌ನಲ್ಲಿ ಸ್ಥಗಿತಗೊಳಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹಾಗಾಗಿ, ಚಾನೆಲ್‌ಅನ್ನು ಸ್ಥಗಿತಗೊಳಿಸಲಾಗುತ್ತಿದೆ” ಎಂದು ಬೆಂಜಮಿನ್‌ ನೆತನ್ಯಾಹು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಕುರಿತು ಬೆಂಜಮಿನ್‌ ನೆತನ್ಯಾಹು ವಕ್ತಾರ (ಅರಬ್‌ ವರ್ಲ್ಡ್)‌ ಒಫಿರ್‌ ಜೆಂಡಲ್‌ಮ್ಯಾನ್‌ ಕೂಡ ಮಾಹಿತಿ ನೀಡಿದ್ದಾರೆ. “ಕೂಡಲೇ ಅಲ್‌ಜಜೀರಾ ಚಾನೆಲ್‌ಅನ್ನು ಸ್ಥಗಿತಗೊಳಿಸುತ್ತೇವೆ. ಕೇಬಲ್‌ ಹಾಗೂ ಸ್ಯಾಟಲೈಟ್‌ ಟೆಲಿವಿಷನ್‌ ಕಂಪನಿಗಳಿಂದ ಚಾನೆಲ್‌ಅನ್ನು ತೆಗೆಯಲಾಗುತ್ತದೆ. ವರದಿಗಾರರು ಕೂಡ ಕೆಲಸ ಮಾಡಲು ಬಿಡುವುದಿಲ್ಲ” ಎಂದು ತಿಳಿಸಿದ್ದಾರೆ. ಇದಾದ ಬೆನ್ನಲ್ಲೇ, ಚಾನೆಲ್‌ಗೆ ತೆರಳಿದ ಪೊಲೀಸರು ಸುದ್ದಿವಾಹಿನಿಯನ್ನು ಸ್ಥಗಿತಗೊಳಿಸಿದ್ದಾರೆ. ಇದಕ್ಕೆ ಅಲ್‌ಜಜೀರಾ ಪ್ರತಿಕ್ರಿಯಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದೆ.

ಕತಾರ್‌ ಮೂಲದ ಸುದ್ದಿವಾನಿಯಾದ ಅಲ್‌ಜಜೀರಾ, ಹಮಾಸ್‌ ಪರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಇಸ್ರೇಲ್‌ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂಬುದು ಇಸ್ರೇಲ್‌ ವಾದವಾಗಿದೆ. “ಇಸ್ರೇಲ್‌ ವಿರೋಧಿ ನೀತಿಯನ್ನು ಅಲ್‌ಜಜೀರಾ ಅನುಸರಿಸುತ್ತಿದೆ. ಅದು ಹಮಾಸ್‌ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿದೆ. ಇದು ದೇಶದ ಭದ್ರತೆಗೆ ಧಕ್ಕೆ ತರುವ ವಿಷಯವಾಗಿದೆ. ಹಾಗಾಗಿ, ಚಾನೆಲ್‌ ಸ್ಥಗಿತಗೊಳಿಸಲು ಆದೇಶಿಸಲಾಗಿದೆ” ಎಂದು ಇಸ್ರೇಲ್‌ ಸಚಿವರೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ನಾಗರಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್, ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರರನ್ನು ನಾಶ ಮಾಡುವ ಪಣತೊಟ್ಟು, ಸೇನಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ನಿರಂತರ ದಾಳಿಗಳಿಂದಾಗಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿವೆ. ಇಷ್ಟಾದರೂ ಇಸ್ರೇಲ್‌ ಪ್ರತಿದಾಳಿ ನಿಲ್ಲಿಸುತ್ತಿಲ್ಲ.

ಇದಕ್ಕೂ ಮೊದಲು ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ವಿರುದ್ಧ ಮಂಡಿಸಿದ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿತ್ತು. ಪ್ಯಾಲೆಸ್ತೀನ್‌ನ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲ್‌ ಆಕ್ರಮಣಕಾರಿ ನೀತಿಯನ್ನು ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಈ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿರುವುದು ವಿಶೇಷವಾಗಿತ್ತು. ಇದಾದ ನಂತರ ಇಸ್ರೇಲ್‌ ವಿರುದ್ಧ ಮಂಡಿಸಿದ ನಿರ್ಣಯದ ಮತದಾನದಿಂದ ಭಾರತ ದೂರ ಉಳಿದಿದೆ.

ಇದನ್ನೂ ಓದಿ: War and Love : ಹಮಾಸ್​ ಒತ್ತೆಯಾಳುವಾಗಿರುವ ಪ್ರಿಯತಮನಿಗಾಗಿ 6 ತಿಂಗಳಿಂದ ಕಾಯುತ್ತಿದ್ದಾಳೆ ಇಸ್ರೇಲ್​ ಯುವತಿ!

Continue Reading

Latest

IPL 2024 : ಸಿಎಸ್​ಕೆ ತಂಡದ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಾಯಕ ಋತುರಾಜ್​

IPL 2024 : ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಪಿಚ್ ನಿಧಾನಗತಿಯಲ್ಲಿತ್ತು. ಹೀಗಾಗಿ ನಾವು ಪೇರಿಸಿದ ರನ್​ ಬಗ್ಗೆ ಖುಷಿಯಿದೆ ಎಂದು ಹೇಳಿದರು. ವಿಕೆಟ್ ನಿಧಾನವಾಗಿತ್ತು.ಚೆಂಡು ಕಡಿಮೆ ಬೌನ್ಸ್ ಆಗುತ್ತಿತ್ತು ಇತ್ತು ಎಂದು ಹೇಳಿದರು.

VISTARANEWS.COM


on

IPL 2024
Koo

ಬೆಂಗಳೂರು: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) 53 ನೇ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ಸ್ಯಾಮ್ ಕರ್ರನ್ ನೇತೃತ್ವದ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 28 ರನ್​ಗಳ ಗೆಲವು ಸಾಧಿಸಿದೆ. ಅದರ ಹೊರತಾಗಿಯೂ ಸಿಎಸ್​ಕೆ ತಂಡದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗಿವೆ ಎಂಬುದಾಗಿ ನಾಯಕ ಋತುರಾಜ್ ಗಾಯಕ್ವಾಡ್ ಹೇಳಿದ್ದಾರೆ.

ಗಾಯಕ್ವಾಡ್ ಟಾಸ್ ಸೋತರು. ಸಿಎಸ್​​ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡದ ಕಾರಣ 9 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ರವೀಂದ್ರ ಜಡೇಜಾ (43) ಗರಿಷ್ಠ ರನ್ ಗಳಿಸಿದರೆ, ಋತುರಾಜ್ ಗಾಯಕ್ವಾಡ್ ಮತ್ತು ಡ್ಯಾರಿಲ್ ಮಿಚೆಲ್ 30 ರನ್ ಗಳಿಸಿದರು. ರವೀಂದ್ರ ಜಡೇಜಾ 20 ರನ್ ನೀಡಿ 3 ವಿಕೆಟ್ ಪಡೆದರು. ಸಿಮರ್ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಮತ್ತು ಮಿಚೆಲ್ ಸ್ಯಾಂಟ್ನರ್​ ತಲಾ ಒಂದು ವಿಕೆಟ್ ಪಡೆದರು.

ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಪಿಚ್ ನಿಧಾನಗತಿಯಲ್ಲಿತ್ತು. ಹೀಗಾಗಿ ನಾವು ಪೇರಿಸಿದ ರನ್​ ಬಗ್ಗೆ ಖುಷಿಯಿದೆ ಎಂದು ಹೇಳಿದರು. ವಿಕೆಟ್ ನಿಧಾನವಾಗಿತ್ತು.ಚೆಂಡು ಕಡಿಮೆ ಬೌನ್ಸ್ ಆಗುತ್ತಿತ್ತು ಇತ್ತು ಎಂದು ಹೇಳಿದರು. ಸಿಮರ್ಜೀತ್ ಸಿಂಗ್ ಬಗ್ಗೆ ಮಾತನಾಡಿದ ಋತುರಾಜ್ ಗಾಯಕ್ವಾಡ್, ವೇಗಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅವರನ್ನು ಪರಿಚಯಿಸಲು ತಡ ಮಾಡಿಲ್ಲ ಎಂದ ಹೇಳಿದರ.

ತಂಡದಲ್ಲಿದೆ ಸಮಸ್ಯೆ

ನಮ್ಮ ತಂಡದಲ್ಲಿ ಸಮಸ್ಯೆಯಿದೆ. ಆಟಗಾರರು ಜ್ವರದಿಂದ ಬಳಲುತ್ತಿದ್ದಾರೆ. ಯಾರು ಆಡುತ್ತಿದ್ದಾರೆ ಅಥವಾ ಇಲ್ಲ ಎಂದು ಬೆಳಿಗ್ಗೆಯವರೆಗೆ ಖಚಿತವಾಗಿರಲಿಲ್ಲ. ಹೀಗಾಗಿ ಗೆಲುವು ನಿಜವಾಗಿಯೂ ಸಂತೋಷ ಕೊಟ್ಟಿದೆ ಎಂದು ಹೇಳದಿರು.

ಐದು ಸೋಲುಗಳನ್ನು ಕಂಡಿದ್ದ ಚೆನ್ನೈ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ದಾಖಲೆಯನ್ನು ಹೊಂದಿಲ್ಲ. 2024ರ ಐಪಿಎಲ್ ಟೂರ್ನಿಯಲ್ಲಿ ಮುಖಾಮುಖಿಯಾಗಿರುವ ಸಿಎಸ್​ಕೆ ತಂಡ ಪಿಬಿಕೆಎಸ್ ವಿರುದ್ಧ 15-14 ಗೆಲುವಿನ ಅಂತರದ ಮುನ್ನಡೆ ಹೊಂದಿದೆ. ಆದಾಗ್ಯೂ, ಹಿಂದಿನ ಐದು ಪಂದ್ಯಗಳಲ್ಲಿ, ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಏಕೆಂದರೆ ಅವರು ಆ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ: IPL 2024 : 28 ರನ್​ಗಳಿಂದ ಗೆದ್ದು ಪಂಜಾಬ್ ವಿರುದ್ಧ ಪ್ರತಿಕಾರ ತೀರಿಸಿದ ಚೆನ್ನೈ

ಐಪಿಎಲ್ ಇತಿಹಾಸದಲ್ಲಿ, ಕೇವಲ ಎರಡು ತಂಡಗಳು 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸತತ ಐದು ಪಂದ್ಯಗಳಲ್ಲಿ ಸೋಲಿಸಿವೆ, ಮೊದಲ ತಂಡ ಮುಂಬೈ ಇಂಡಿಯನ್ಸ್ ಮತ್ತು ಇನ್ನೊಂದು ತಂಡ ಪಂಜಾಬ್ ಕಿಂಗ್ಸ್, ಇದು 2021 ರಲ್ಲಿ ತಮ್ಮ ಗೆಲುವಿನ ಸರಣಿಯನ್ನು ಪ್ರಾರಂಭಿಸಿತು ಮತ್ತು ಮೇ 1 ರ ಬುಧವಾರ ಚೆಪಾಕ್​​ನಲ್ಲಿ ಸಿಎಸ್ಕೆ ವಿರುದ್ಧ ಏಳು ವಿಕೆಟ್​​ಗಳಿಂದ ಸೋಲಿಸುವ ಮೂಲಕ ಮುಂಬೈ ದಾಖಲೆ ಸರಿಗಟ್ಟಿತು.

ಅಕ್ಟೋಬರ್ 7, 2021 ರಂದು, ಪಿಬಿಕೆಎಸ್ 42 ಎಸೆತಗಳು ಬಾಕಿ ಇರುವಾಗ 6 ವಿಕೆಟ್​​ಗಳಿಂದ ಗೆದ್ದಿತು ಮತ್ತು ಐಪಿಎಲ್ 2022ರಲ್ಲಿ ಕ್ರಮವಾಗಿ 54 ಮತ್ತು 11 ರನ್​ಗಳಿಂದ ಸತತ ಗೆಲುವುಗಳನ್ನು ದಾಖಲಿಸಿತು. ಐಪಿಎಲ್ 2023 ರಲ್ಲಿ, ಅವರು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದರು ಏಪ್ರಿಲ್ 30 ರಂದು ನಡೆದ ಪಂದ್ಯವನ್ನು ಪಿಬಿಕೆಎಸ್ 4 ವಿಕೆಟ್​​ಗಳಿಂದ ಗೆದ್ದಿತು.

ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಪಂದ್ಯದ ಮುಕ್ತಾಯದ ನಂತರ, ಸಿಎಸ್​ಕೆ ಪರವಾಗಿ 16-14 ಅಂತರದ ದಾಖಲೆ ಹೊಂದಿದೆ.

Continue Reading

Lok Sabha Election 2024

Lok Sabha Election 2024: ಮತ್ತೆ ಮೋದಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲ: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದು ಏಕೆ?

Lok Sabha Election 2024: ಬಿಜೆಪಿ ಜಾತಿ – ಧರ್ಮಗಳನ್ನು ಪರಸ್ಪರ ಎತ್ತಿಕಟ್ಟುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ದ್ವೇಷದ ರಾಜಕಾರಣವನ್ನು ಮಾಡುತ್ತಾ ಜನರ ಒಳಿತನ್ನು ಕಡೆಗಣಿಸಿದ್ದಾರೆ. ಮೋದಿಯವರು, ದಲಿತರ, ಹಿಂದುಳಿದವರ ಮೀಸಲಾತಿಯನ್ನು ಮುಸಲ್ಮಾನರಿಗೆ ಕಾಂಗ್ರೆಸ್ ನೀಡುತ್ತದೆ ಎಂದು ದೊಡ್ಡ ಸುಳ್ಳನ್ನು ಹೇಳಿದ್ದಾರೆ. ಈ ಪ್ರಮಾಣದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ಮುಸಲ್ಮಾನರ ವಿರುದ್ಧ ದಲಿತರನ್ನು, ಹಿಂದುಳಿದವರ ವಿರುದ್ಧ ದಲಿತರು, ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

VISTARANEWS.COM


on

Lok Sabha Election 2024 Narendra Modi cant become PM again says CM Siddaramaiah
Koo

ಹರಿಹರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಜೋರಾಗಿದೆ ಎನ್ನುವುದನ್ನು ಸ್ವತಃ ಬಿಜೆಪಿಯವರೇ ಗುರುತಿಸಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ ಹಾಗೂ ಆ ಪಕ್ಷದ ಸೋಲು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ದಾವಣಗೆರೆ ಲೋಕಸಭಾ ಚುನಾವಣೆಯ ಪ್ರಜಾಧ್ವನಿ-02 ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಪರವಾಗಿ ಮತದಾರರಲ್ಲಿ ಮತಯಾಚಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯ 25 ಸಂಸದರು ರಾಜ್ಯಕ್ಕಾಗಿರುವ ಅನ್ಯಾಯವನ್ನು ಎಂದೂ ಪ್ರಶ್ನಿಸಲಿಲ್ಲ. ಅವರಲ್ಲಿ ಹಲವರನ್ನು ಈ ಬಾರಿ ಬಿಜೆಪಿಯವರೇ ಕೈಬಿಟ್ಟಿದ್ದಾರೆ. ಈ ಹಿಂದೆ ಇದ್ದ ಬಿಜೆಪಿ ಸಂಸದರು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದೇ, ಬಿಜೆಪಿಯವರೇ ಈ ಬಾರಿ ಹಲವರನ್ನು ಕೈಬಿಟ್ಟಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ

ಹರಿಹರ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುವ ಏತ ನೀರಾವರಿ ಯೋಜನೆಗೆ ಚುನಾವಣೆ ನಂತರ ಚಾಲನೆ ನೀಡಲಾಗುವುದು. ನಾನು ನುಡಿದ ಮಾತಿನಂತೆ ನಡೆಯುವವನು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆಂದು ತಿಳಿಸಿದಂತೆ 8 ತಿಂಗಳ ಒಳಗೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಜನರ ಪ್ರಶಂಸೆಯನ್ನು ಗಳಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ರೈತ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ಶಾದಿ ಭಾಗ್ಯಗಳಂತಹ ಜನಪರ ಯೋಜನೆಗಳನ್ನು ಕಾಂಗ್ರೆಸ್ ನೀಡಿದೆ ಎಂದು ಹೇಳಿದರು.

ಯಪ್ಪಾ ಯಪ್ಪಾ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ

ಬಿಜೆಪಿ ಜಾತಿ – ಧರ್ಮಗಳನ್ನು ಪರಸ್ಪರ ಎತ್ತಿಕಟ್ಟುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ದ್ವೇಷದ ರಾಜಕಾರಣವನ್ನು ಮಾಡುತ್ತಾ ಜನರ ಒಳಿತನ್ನು ಕಡೆಗಣಿಸಿದ್ದಾರೆ. ಮೋದಿಯವರು, ದಲಿತರ, ಹಿಂದುಳಿದವರ ಮೀಸಲಾತಿಯನ್ನು ಮುಸಲ್ಮಾನರಿಗೆ ಕಾಂಗ್ರೆಸ್ ನೀಡುತ್ತದೆ ಎಂದು ದೊಡ್ಡ ಸುಳ್ಳನ್ನು ಹೇಳಿದ್ದಾರೆ. ಈ ಪ್ರಮಾಣದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ಮುಸಲ್ಮಾನರ ವಿರುದ್ಧ ದಲಿತರನ್ನು, ಹಿಂದುಳಿದವರ ವಿರುದ್ಧ ದಲಿತರು, ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ. ಸಂವಿಧಾನದ ಮೀಸಲಾತಿ ಪ್ರಮಾಣದಲ್ಲಿ ಶೇ. 10ರಷ್ಟನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಸೃಷ್ಟಿಸಿದರು. ಆದರೆ, ಸಂವಿಧಾನದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿಯನ್ನು ಕೊಡಬಹುದಾಗಿದೆ. ಮೋದಿಯವರು ಸಂವಿಧಾನವನ್ನು ಪೂರ್ಣ ತಿಳಿದಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾವು ಅಧಿಕಾರಕ್ಕೆ ಬಂದರೆ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದೇವೆಯೇ ಹೊರತು. ಒಬ್ಬರ ಮೀಸಲಾತಿಯನ್ನು ಕಿತ್ತು ಮತ್ತೊಬ್ಬರಿಗೆ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೀಸಲಾತಿ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ

ಬಿಜೆಪಿ ಹಾಗೂ ಆರ್‌ಎಸ್ಎಸ್ ಮೀಸಲಾತಿಯನ್ನು ಬೆಂಬಲಿಸಲಿಲ್ಲ. ಆದ್ದರಿಂದ ಮೀಸಲಾತಿ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ. ಮಂಡಲ್ ವರದಿಯಂತೆ ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಮೀಸಲಾತಿ ತರಲು ಬಿಜೆಪಿ ವಿರೋಧಿಸಿದರು. ಮಂಡಲ್ ಪಂಚಾಯಿತಿ, ನಗರ ಸಭೆಗಳಲ್ಲಿ ಮಹಿಳೆಯರು, ದಲಿತರು, ಹಿಂದುಳಿದವರಿಗೆ ಮೀಸಲಾತಿ ನೀಡುವುದನ್ನು ಬಿಜೆಪಿ ವಿರೋಧಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಮೀಸಲಾತಿ ನೀಡಿಕೆಯನ್ನು ಎತ್ತಿಹಿಡಿಯಿತು. ಚುನಾವಣೆ ಬಂದಾಗ ಮಾತ್ರ ಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ ಎಂದು ಟೀಕಿಸಿದರು.

ಮೋದಿಯವರು ನೀಡಿದ ಭರವಸೆ ಈಡೇರಿಸಲಿಲ್ಲ

ಮೋದಿಯವರು ಹತ್ತು ವರ್ಷಗಳ ಕಾಲ ಜನರಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ರೈತರ ಸಾಲ ಮನ್ನಾ ಮಾಡದೇ ಅದಾನಿ ಹಾಗೂ ಅಂಬಾನಿ ಕೈಗಾರಿಕೋದ್ಯಮಿಗಳಿಗೆ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಮೋದಿಯವರು ಶ್ರೀಮಂತರ ಪರವಾಗಿರುವವರು. ಆದರೆ, ಇವರು ಬಡವರ ಪರವಾಗಿ ಇರುವವರು ಎಂದು ಮೋಸ ಹೋಗಿದ್ದಾಯ್ತು. ನಂಬಿಕೆ ದ್ರೋಹ ಎಸಗಿದ ಮೋದಿಯವರಿಗೆ ಮತ ಹಾಕಬೇಕೆ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ

ನಮ್ಮ ಸರ್ಕಾರ ಇರುವವರೆಗೆ ಜನತೆಯ ಆಶೋತ್ತರಗಳನ್ನು ಈಡೇರಿಸಲಾಗುವುದು. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ. ನಮಗೆ ತೊಂದರೆ ಕೊಡಲು ವಿನಯ್ ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದಾರೆ. ಅವರು ಗೆಲ್ಲುವುದಿಲ್ಲ. ಏಕೆಂದರೆ ಬಿಜೆಪಿ ಜತೆಗೆ ಶಾಮೀಲಾಗಿದ್ದಾರೆ. ಕನಕ ಗುರುಪೀಠದ ನಿರಂಜನಾನಂದಾಪುರಿ ಸ್ವಾಮಿಗಳು ಮತ್ತು ನಾನು ವಿನಯ್ ಕುಮಾರ್ ಅವರೊಂದಿಗೆ ಮಾತನಾಡಿ, ನಿಲ್ಲುವುದು ಬೇಡ ಸಲಹೆ ನೀಡಿದಾಗ ಒಪ್ಪಿಕೊಂಡು ಈಗ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಾನು ಬೇಕೋ, ವಿನಯ್ ಕುಮಾರ್ ಬೇಕೋ ನಿರ್ಧರಿಸಿ ಎಂದು ಸಿಎಂ ಸಿದ್ದರಾಮಯ್ಯ ಕೇಳಿದರು.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ವಿಡಿಯೊ ಕೇಸ್‌; ವಿಡಿಯೊದಲ್ಲಿರುವ ಮಹಿಳಾ ಅಧಿಕಾರಿಗಳಿಗೆ SIT ನೋಟಿಸ್‌: ‘ನಾನವಳಲ್ಲ’ ಎಂದು ಹೇಳಿಕೆ!

ನಾನೇ ಚುನಾವಣೆಗೆ ನಿಂತಿದ್ದೇನೆ ಎಂದು ತಿಳಿಯಬೇಕು. ಕಾಂಗ್ರೆಸ್ ಅಭ್ಯರ್ಥಿಗೆ ಕೊಡುವ ಮತ ಸಿದ್ದರಾಮಯ್ಯಗೆ ಕೊಡುವ ಮತ. ನನಗೆ ಶಕ್ತಿ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಮ್ಮ ಅಭ್ಯರ್ಥಿ ವಿದ್ಯಾವಂತೆ. ಸಂಸತ್ತಿನಲ್ಲಿ ನಿಮ್ಮ ಪರವಾಗಿ ಮಾತನಾಡುವ ಶಕ್ತಿ ಇದೆ. ಅದಕ್ಕಾಗಿ ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡಿ. ಅವರು ಗೆದ್ದರೆ, ನಾನೇ ಗೆದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Continue Reading
Advertisement
Fire Accident
ಕರ್ನಾಟಕ6 mins ago

Fire Accident: ಬೆಂಗಳೂರಿನ ಎಂ.ಜಿ. ರಸ್ತೆಯ ಆಪ್ಟಿಕಲ್ಸ್‌ ಮಳಿಗೆಯಲ್ಲಿ ಬೆಂಕಿ ಅವಘಡ

IPL 2024
ಕ್ರೀಡೆ9 mins ago

IPL 2024 : ಧೋನಿಯನ್ನು ಬೌಲ್ಡ್​ ಮಾಡಿ ಸಂಭ್ರಮಿಸದ ಹರ್ಷಲ್​ ಪಟೇಲ್​; ಕಾರಣ ನೀಡಿದ ಬೌಲರ್​

Al Jazeera
ಪ್ರಮುಖ ಸುದ್ದಿ28 mins ago

Al Jazeera: ಹಮಾಸ್‌ ಉಗ್ರರ ಪರ ನಿಲುವು; ಇಸ್ರೇಲ್‌ನಲ್ಲಿ ಅಲ್‌ಜಜೀರಾ ಚಾನೆಲ್‌ ಬಂದ್‌ ಮಾಡಿದ ನೆತನ್ಯಾಹು!

Pralhad Joshi
ಕರ್ನಾಟಕ34 mins ago

Pralhad Joshi: ಕಾಂಗ್ರೆಸ್‌ನಿಂದ ಮೋದಿ ಎಂಬ ಆಕಾಶಕ್ಕೆ ಉಗುಳೋ ಕೃತ್ಯ: ಪ್ರಲ್ಹಾದ್ ಜೋಶಿ

Bernard Hill
Latest45 mins ago

Titanic Movie : ಟೈಟಾನಿಕ್​, ಗಾಂಧಿ ಸಿನಿಮಾದ ನಟ ಬರ್ನಾರ್ಡ್ ಹಿಲ್ ನಿಧನ

IPL 2024
Latest1 hour ago

IPL 2024 : ಸಿಎಸ್​ಕೆ ತಂಡದ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಾಯಕ ಋತುರಾಜ್​

Air India
ದೇಶ1 hour ago

Air India: ವಿಮಾನ ಪ್ರಯಾಣಿಕರೇ ಗಮನಿಸಿ, ಚೆಕ್-ಇನ್ ಬ್ಯಾಗೇಜ್ ಭಾರದ ಮಿತಿ ಇಳಿಕೆ!

Lok Sabha Election 2024 Narendra Modi cant become PM again says CM Siddaramaiah
Lok Sabha Election 20241 hour ago

Lok Sabha Election 2024: ಮತ್ತೆ ಮೋದಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲ: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದು ಏಕೆ?

Radhika Khera
ದೇಶ1 hour ago

Radhika Khera: ಅಯೋಧ್ಯೆಗೆ ಭೇಟಿ ನೀಡಿದ್ದಕ್ಕೆ ಪಕ್ಷದಲ್ಲಿ ವಿರೋಧ; ಕಾಂಗ್ರೆಸ್‌ ತೊರೆದ ನಾಯಕಿ!

Viral News
ಕ್ರೈಂ1 hour ago

Viral News: ವಿಮಾನ ಪ್ರಯಾಣಿಕನ ಜೇಬಿನಲ್ಲಿತ್ತು ಎರಡು ಹಾವು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ4 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ17 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

ಟ್ರೆಂಡಿಂಗ್‌